ಬುಧವಾರ, ಜುಲೈ 9, 2014

ವೈಚಾರಿಕ ಕ್ರಾಂತಿಕಾರಿಣಿ – ‘ಅಕ್ಕ ನಾಗಮ್ಮ’ - ಕೊಟ್ರೇಶ್ ಎಸ್.ಉಪ್ಪಾರ್


      ವಚನ ಸಾಹಿತ್ಯವು ಕನ್ನಡ ವಾಙ್ಞಯದ ದಿವ್ಯ ವಿಸ್ಮಯಗಳಲ್ಲೊಂದು. ಕನ್ನಡ ನಾಡು-ನುಡಿ, ವೈಚಾರಿಕ ಪರಂಪರೆಯ ಮಂಥನಗಳು ಶಿಥಿಲಿಸುತ್ತಿರುವ ಪ್ರಸ್ತುತ ಸಂದರ್ಭದÀಲ್ಲಿಯೂ ಈ ಸಾಹಿತ್ಯ ಬಾಳದೀವಿಗೆಯಾಗಿ ಬೆಳಕಾಗಿ ನಿಲ್ಲುತ್ತದೆ. ಆದ್ದರಿಂದಲೆ ವಚನ ಸಾಹಿತ್ಯ ಕಾಲಾತೀತ ಸ್ವರೂಪವನ್ನು ಸ್ಥಾಪಿಸಿದೆ ಎನ್ನಬಹುದಾಗಿದೆ.
     ವೈಜ್ಞಾನಿಕ ನಾಗಾಲೋಟದ ದಿನಮಾನಗಳಲ್ಲಿಯೂ ಸ್ತ್ರೀ ಸ್ತಾನ ಮಾನದ ಕೂಗು ನಿರಂತರವಾಗಿ ಪ್ರತಿಧ್ವÀ್ವನಿಸುತ್ತಲೇಯಿದೆ. ಸ್ತ್ರೀ ಶಕ್ತಿ ಸಬಲೀಕರಣದ ಕುರಿತು Zರ್ಚೆಗಳು ಮೊಳಗುತ್ತಲೇಯಿವೆ. ಆದರೆ   ಮಸೂದೆ ಮಾತ್ರ ಮಂಡನೆಯಾಗಿ ನಿಖರ ಮೌಲೀಕರಣವಾಗದಿರುವುದು ದುರಂತ.
       ಆದರೆ ಈ ಕ್ರಾಂತಿ ಎಲ್ಲಿಂದ ಶುರುವಾಯಿತು ಎಂಬ ಪ್ರಶ್ನೆ ಎದುರಾದರೆ ಎಲ್ಲರ ದೃಷ್ಠಿ 800 ವರ್ಷಗಳ ಹಿಂದೆ ಸಾಗುತ್ತದೆ. ಅಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸ್ತ್ರೀ ಸಮಾನತೆಯನ್ನು ನೀಡಿದ ಕೀರ್ತಿ ಬಸವ ಯುಗಕ್ಕೆ ಸಲ್ಲುತ್ತದೆ. ಬಸವ ಅಲ್ಲಮರ ಮಾರ್ಗದರ್ಶನದಲ್ಲಿ ಅನೇಕ ಸ್ತ್ರೀಯರು ಬದುಕಿನ ಅರ್ಥವನ್ನು ಕಂಡುಕೊಂಡರು. ಸಮಾಜದ ಮುಖ್ಯ ವಾಹಿನಿಗೆ ಬಂದರು. ದುಗ್ಗಳೆ, ಅಕ್ಕನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ, ಅಕ್ಕಮಹಾದೇವಿ, ಸತ್ಯಕ್ಕ, ಬೊಂತಾದೇವಿ, ಸೂಳೆ ಸಂಕವ್ವೆ, ಗೊಗ್ಗವ್ವೆ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ಅಕ್ಕಮ್ಮ, ಕೊಟ್ಟಣದ ಸೊಮವ್ವೆ ಮುಂತಾದ 30ಕ್ಕೂ ಹೆಚ್ಚು ವಚನಕಾರ್ತಿಯರಲ್ಲಿ ಇವರು ಪ್ರಮುಖರು.
       800ವರ್ಷಗಳ ಹಿಂದೆ ನಡೆದ ಶರಣೆಯರ ಆಂದೋಲನ, ಅದು ಕೇವಲ ಧಾರ್ಮಿಕ ಆಯಾಮಕ್ಕಷ್ಟೆ ಮಿಸಲಾಗಿರದೆ, ಅಂದಿನ ಅನೇಕ ಪ್ರಚಲಿತ ಗಂಭೀರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿತೆನ್ನುವುದು ಕೂಡಾ  ಗಮನಾರ್ಹವಾದುದು. ಇವರು ವರ್ಗ, ವರ್ಣ, ಲಿಂಗ ಭೇದಗಳ ಗೋಡೆಗಳನ್ನು ಬುನಾದಿ ಸಹಿತ ಕಿತ್ತು ಹಾಕಿದರು. ಬಸವ-ಅಲ್ಲಮರ ಮಾರ್ಗದೀವಿಗೆಯಲ್ಲಿ ಸಾಗಿ ಉಚ್ಛ-ನೀಚರೆಂಬ ತಾರತಮ್ಯತೆÀಯನ್ನು ಸುಳಿಯದÀಂತೆ ಮಾಡಿದರು.
      ಈ ಬಸವ ಎಂಬ ಜ್ಯೋತಿಗೆ ತೈಲವಾದವರೇ ಅಕ್ಕನಾಗಮ್ಮ ಎಂದರೆ ಅತಿಯೋಕ್ತಿಯಾಗಲಾರದು. ಈಕೆ ಬಸವಣ್ಣನವರ ಅಕ್ಕ. ಮಾದರಸ ಮತ್ತು ಮಾದಲಾಂಬಕೆಯರ ಹಿರಿಮಗಳು ಈಕೆಯ ಜನನ ಕಿ.್ರಶ ಸುಮಾರು 1116 ಎಂದು ತಿಳಿದು ಬರುತ್ತದೆ. ಅಂದರೆ ಬಸವಣ್ಣನವರಿಗಿಂತ 15 ವರ್ಷ ದೊಡ್ಡವಳು.
        ವಚನ ಯುಗದಲ್ಲಿ ದಾಸಿಮಯ್ಯನ ಸತಿ ದುಗ್ಗಳೆ ಮೊದಲ ವಚನಕಾರ್ತಿಯಾದರೆ ಅಕ್ಕ ನಾಗಮ್ಮ ಎರಡನೆಯವಳು. ಈಕೆಯ 15 ವಚನಗಳು ಮಾತ್ರ ದೊರಕಿವೆ. ಅಕ್ಕ ನಾಗಮ್ಮಳ ಬಹುತೇಕ ವಚನಗಳು ಆತ್ಮಾವಲೋಕನದ ಮೂಸೆಯಲ್ಲಿ ತಿದಿಯೊತ್ತಿ ಬಂದ ವೈಚಾರಿಕ ಪ್ರಭೆಗಳಾಗಿವೆ ಎನ್ನಬಹುದು.                 
    ವಂದನೆಗೆ ನಿಲ್ಲಬೇಡ, ನಿಂದೆಗಂಜಿ ಓಡಬೇಡ
                ಹಿಂದು ಮುಂದು ಆಡಲು ಬೇಡ, ಸಂದೇಹಗೊಳ್ಳಬೇಡ, 
ದ್ವಂಧ್ವ ಬುದ್ದಿಯ ಕಳೆದು ನಿಂದ
ಬಸವ ಪ್ರೀಯ ಕೂಡಲ ಚೆನ್ನಸಂಗಯ್ಯ |
       ಯಾರಾದರೂ ವಂದಿಸಿದರೆ, ನಮಸ್ಕರಿಸಿದರೆ, ಗೌರವಿಸಿದರೆ ಉಬ್ಬಿ, ಅಹಂಕಾರ ಪಡಬೇಡ, ಬೀಗಬೇಡ, ಅಷ್ಟಕ್ಕೆ ಸಾಧಕನೆಂದು ಭ್ರಮಿಸಿ ನಿನ್ನ ಚಿತ್ತವ ಮೊಂಡಾಗಿಸಿಕೊಳ್ಳಬೇಡ.. ಅಥವಾ ಯಾರ್ಯಾದರೂ ನಿಂದಿಸಿದರೆ, ತ್ಯಗಳಿದರೆ ನೊಂದುಕೊಳ್ಳಬೇಡ, ಹೆದರಿ ಬೆನ್ನು ತೋರಬೇಡ, ಹೊಗಳಿಕೆಗೆ ಹಿಗ್ಗಬೇಡ ಅದೇರೀತಿ ತೆಗಳಿಕೆಗೆÉ ಕುಗ್ಗಬೇಡ. ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಅಂತೆಯೇ ಯಾವ ವ್ಯಕ್ತಿಯು, ವಸ್ತುವಿನ ಬಗ್ಗೆಯಾಗಲೀ ನೇರವಾಗಿ ಅನ್ನಿಸಿದ್ದನ್ನು ಹೇಳು, ತಪ್ಪಿದ್ದರೆ ಖಂಡಿಸು, ಉತ್ತಮವಾಗಿದ್ದರೆ ಪ್ರಶಂಸಿಸು. ಆದರೆ ಹಿಂದೊಂದು ಮುಂದೊಂದು ಮಾತನಾಡುವ ಕೀಳು ಮನೋಭಾವ ಸಲ್ಲದು. ಜೀವನದಲ್ಲಿ ನಂಬಿಕೆ ಮುಖ್ಯ. ಅನಾವಶ್ಯಕವಾಗಿ ಇನ್ನೊಬ್ಬರ ಬಗೆಗೆ ಸಂದೇಹಗೊಳ್ಳಬಾರದು. ಇಂತಿಪ್ಪ ದ್ವಿಮುಖ ನೀತಿ ತೊರೆದು ಸಮಚಿತ್ತ, ವಿಶ್ವಾಸ, ಪ್ರೀತಿಯಾಗರಗಳಿಂದ ಬಾಳಿದರೆ ಬಸವ ಪ್ರಿಯ ಕೂಡಲ ಚೆನ್ನ ಸಂಗಯ್ಯನಿಗೆ ಪ್ರೀತಿ ಪಾತ್ರವಾಗುತ್ತೇವೆಂಬುದು ಇಲ್ಲಿಯ ಆಶಯ.
ಇದೇ ಹಾದಿಯಲ್ಲಿ ಬಾಲ ಬಸವನನ್ನು ಅಕ್ಕ ನಾಗಮ್ಮ ಬೆಳೆಸಿದಳು. ಬಸವಣ್ಣನವರು ಕ್ರಾಂತಿಕಾರಿ ವಿಚಾರಧಾರೆಗಳಿಗೆ ನೀರೆರೆದು ಪೋಷಿಸಿ ಬೆಳೆಸಿದ ಧೀರಮಾತೆಯೀಕೆ. ಪ್ರಬುದ್ಧ ಮನಸ್ಸಿನ ನಿಸ್ಸಂಕೋಚ ವಾಂಛಲ್ಯದ ಧೀರ ಮಹಿಳೆ ಈ ಅಕ್ಕನಾಗಮ್ಮ. ಸಹೋದರನ ಶ್ರೇಯೋಭಿವೃದ್ಧಿಗಾಗಿ, ಸಮಾಜದ ಕಲ್ಯಾಣಕ್ಕಾಗಿ, ವೈಚಾರಿಕ ಆಂದೋಲನಕ್ಕಾಗಿ ಹೆತ್ತವರನ್ನು ತೊರೆದು ಕೈ ಹಿಡಿದ ಪತಿ ಇದಕ್ಕೆ ಸ್ಪಂದಿಸದ ಕಾರಣ ಆತನ ಹಂಗನ್ನೂ ಕಿತ್ತೆಸೆದು ಮಗ ಚೆನ್ನ ಬಸವಣ್ಣನ ಜೊತೆ ಬಸವಣ್ಣನ ಹಿಂದೆ ಧಾವಿಸಿ ಬಂದು ಅಖಂಡ ಮನುಕುಲದ ಉದ್ದಾರಕ್ಕೆ ಕಂಕಣ ಕಟ್ಟಿ ನಿಂತು, ಬಸವನಿಗೆ ಬೆಂಗಾವಲಾಗಿ ನಿಂತ ಪರಿ ಸಾಧಾರಣವಾದುದಲ್ಲ.
ಶ್ರೀ ಗುರುವೆ ತಾಯಿ ತಂದೆಯಾಗಿ, ಲಿಂಗವೇ ಪತಿಯಾಗಿ
ಜಂಗಮವೆ ಅತ್ತೆ ಮಾವಂದಿರಾಗಿ, ಶಿವಭಕ್ತರೆ ಬಾಂಧವರಾಗಿ
ಸತ್ಯ ಸದಾಚಾರವೆಂಬ ಮನೆಗೆ ಕಳುಹಿದರಾಗಿ
ಶರಣಸತಿ ಎಂಬ ನಾಮ ನಿಜವಾಯಿತ್ತು
ಆದಂತೆ ಇರುವೆ, ಹಿಂದು ಮುಂದರಿಯದೆ ನಡೆವೆ
ಮನಕ್ಕೆ ಮನಸಾಕ್ಷಿಯಾಗಿ ಮಾಡುವೆ
ಬಸವಣ್ಣಪ್ರಿಯ ಚೆನ್ನಸಂಗಯ್ಯ ನಿಮ್ಮಡಿಗಳಿಗೆ |
ಸರ್ವಸ್ವವನ್ನೂ ತೊರೆದು ಬಂದ ನಾಗಮ್ಮನಿಗೆ ಬಸವಣ್ಣನೇ ಗುರು, ತಂದೆ, ತಾಯಿಯಂತೆ ಕಾಣುತ್ತಾನೆ. ಅಂತೆಯೇ ಬಸವಣ್ಣನನ್ನು ಬೆಳೆಸಿದಳು. ಪೋಷಿಸಿದಳು, ಅನುಸರಿಸಿದಳು, ಕೊನೆವರೆಗೂ ದೈವವೆಂಬಂತೆ ನಂಬಿದಳು.
ತಾನು ದೈವವೆಂದು ಪೂಜಿಸುವ ಲಿಂಗವನ್ನೇ ಪತಿಯಾಗಿ ಪರಿಗಣಿಸಿದವಳು, ಈಕೆಯ ನಂತರ ಬಂದ ಅಕ್ಕಮಹಾದೇವಿಯೂ ಕೂಡ ನಾಗಮ್ಮಳಂತೆ ತಾನು ಪೂಜಿಸುವ ದೈವ ಚನ್ನಮಲ್ಲಿಕಾರ್ಜುನನೇ ಪತಿಯೆಂದು ಕರೆದು ಅಂತೆಯೇ ಬಾಳಿದುದನ್ನು ಕಾಣುತ್ತೇವೆ. 
ಜಂಗಮವೇ ಅಂದರೆ ಆಚಾರ-ವಿಚಾರಗಳ ಅತ್ತೆಯಂತೆ ಶ್ರೇಷ್ಟವಾಗಿ ಕಂಡುಬಂದರೆ, ಮಹಾಮನೆಗೆ ಆಗಮಿಸಿರುವ ಸಕಲ ಶಿವಭಕ್ತರೂ ಬಾಂಧವರಾಗಿ ನಾಗಮ್ಮನಿಗೆ ಕಂಡುಬರುವುದು ಹೃದಯ ವೈಶಾಲ್ಯತೆಯ ಪ್ರತೀಕ ಹಾಗೆಯೇ ಮಾನವೀಯ ಮೌಲ್ಯದ ಆಗರವೆನ್ನಬಹುದು. ಪಂಪನ ‘ಮಾನವ ಕುಲಂ ತಾನೊಂದೇ ವಲಂ’ ಎಂಬ ಉಕ್ತಿ ನಿಜಕ್ಕೂ ಸಾರ್ಥಕತೆ ಪಡೆದದ್ದು ಈ ವಚನ ಯುಗದಲ್ಲಿ ಮಾತ್ರ. ಮನಕ್ಕೆ, ಮನಸಾಕ್ಷಿಗೆ ಎಂದಿಗೂ ವಿರೋಧವಾಗಿ ನಡೆಯಲಾರೆ, ಅರಿತು ಬದುಕು ಸಾಗಿಸುವೆ, ಶರಣರ ಸಾಂಗತ್ಯದಿ ಮಿಂದು ಸದಾಚಾರಿಯಾಗಿ ಸಾಗುವೆನೆಂದು ನಾಗಮ್ಮ ಹೇಳುವ ಪರಿ ಅನುಕರಣೀಯವಾದುದು.
ಮನದೊಡೆಯ ಮಹಾದೇವ ಮನವ ನೋಡಿಹೆನೆಂದು
ಮನುಜರ ಕೈಯಿಂದ ಒಂದೊಂದು ನುಡಿಸುವನು
ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ತನುವೆ
ನಿಜವ ಮರೆಯದಿರು ಕಂಡ್ಯಾ ನಿಶ್ಚಿಂತವಾಗಿರು ಮನವೆ,
ಬಸವಣ್ಣಪ್ರಿಯ ಚನ್ನ ಸಂಗಯ್ಯನು
ಬೆಟ್ಟದನಿತಪಥವನು ಒಂದು ಬೊಟ್ಟಿನಲ್ಲಿ ತಾತೊಡೆವನು |
ಜ್ಞಾನನಿಧಿ ಚನ್ನಬಸವಣ್ಣನ ಮಹಾತಾಯಿಯಿಂದ ನಾಗಮ್ಮ ಈ ವಚನದಲ್ಲಿ ಮನೋ ವಿಕಲ್ಪಗಳ ಬಗ್ಗೆ, ಚಮಚಲತೆಗಳ ಬಗ್ಗೆ ಜಾಗೃತೆ ಮೂಡಿಸಿದ್ದಾಳೆ. ಮನಕ್ಕೆ ಮನವೇ ಸಾಕ್ಷಿಯಾಗಿ ನಿಲ್ಲಬೇಕು. ಮನ ಚಂಚಲತೆಗೊಳ್ಳು ಮಹಾದೇವ ಏನೆಲ್ಲಾ ಆಡಿಸುವನು. ಅವು ನಮಗೆ ನಮ್ಮ ಕರ್ಣಗಳಿಗೆ ಹಿತವಾಗಬಹುದು, ಇಲ್ಲವೇ ಅಹಿತವಾಗಬಹುದು, ಆದರೆ ಓ ಮನವೇ ನೀನು ಕಳವಳಗೊಳ್ಳಬೇಡ, ಕಸಿವಿಸಿಯಾಗಬೇಡ, ಆತರ ಪಡಬೇಡ ಶಾಂತ ಚಿತ್ತಾವಾಗು. ತನುವೆ ನಿನದಕೆ ಸ್ಪಂದಿಸು ಸತ್ಯದ ಪೊರೆಂiÀiನ್ನು ಹರಿಯಬೇಡ. ಅದು ಎಂಥ ಬೆಟ್ಟದಷ್ಟು ಸಮ್ಯೆಯಿದ್ದರೂ ನನ್ನ ಚೆನ್ನ ಸಂಗಯ್ಯ ಒಂದು ಬೆರಳಿನಲ್ಲಿ ದೂರ ಮಾಡುವನು ಎಂಬ ಆತ್ಮವಿಶ್ವಾಸ, ದೃಢ ನಂಬುಗೆಯ ಭಾವನೆ ಇಲ್ಲಿ ಅರಳಿರುವುದು ಗೋಚರಿಸುತ್ತದೆ.
ಅಂತಯೇ ಬಸವಣ್ಣನನ್ನು ಬೆಳೆಸಿದಳು. ಜಗವನ್ನು ಬೆಳಗಿದಳು,ತಾನೂ ಬೆಳೆದಳು. ಕಠಿಣ ಕ್ರಾಂತಿಯ ಸಮಯದಲ್ಲಿ ದೇಹಾಭಿಮಾನಿಯಾಗದೇ ಧ್ಯೇಯಾಭಿಮಾನಿಯಾಗಿ ವಚನ ಸಾಹಿತ್ಯವನ್ನು ಸುಟ್ಟು ಹಾಕುವ ಸಂದರ್ಭದಲ್ಲಿ ಅದರ ರಕ್ಷಣೆಗಾಗಿ ಬಿಜ್ಜಳ ರಾಜನ ಸೈನ್ಯಕ್ಕೆದುರಾಗಿ ಕೈಯಲ್ಲಿ ಕತ್ತಿ ಹಿಡಿದು ಹೊರಾಡಿದಳು. ಸಹೋದರ ಬಸವಣ್ಣನು ತಪ್ಪಿಸಿಕೊಂಡು ಕೂಡಲ ಸಂಗಮಕ್ಕೆ ತೆರಳಲು ಹೇಳಿ ನುಲಿಯ ಚಂದಯ್ಯ, ಚೆನ್ನ ಬಸವಣ್ಣ ಇನ್ನಿತರ ಶರಣರ ಸಹಾಯದಿಂದ ವಚನ ಸಾಹಿತ್ಯದ ಪ್ರತಿ ಮಾಡಿಸಬೆಕೆಂದು ಕಾರ್ಯಪ್ರವೃತ್ತಳಾದಳು. ಆ ಸಂದರ್ಭದಲ್ಲಿ ಸಾಕಷ್ಟು ವಚನ ಸುಟ್ಟು ಭಸ್ಮವಾಗುತ್ತದೆ. ಆದರೆ ನಾವಿಂದು ನೋಡುವ ವಚನ ಸಾಹಿತ್ಯ ಈ ಮಹಾತಾಯಿ ಮತ್ತವರ ಸಂಗಡಿಗ ಶರಣರು ಜೀವ ತೊರೆದು ರಕ್ಷಿಸಿ ಉಳಿಸಲ್ಪಟ್ಟ ವಚನಗಳು ಮಾತ್ರ. ಕೊನೆಗೆ ಬಸವ ಹತನಾದಾಗ ನಾಗಮ್ಮ ಗದ್ಗದಿತಳಾಗುತ್ತಾಳೆ, ನಿಸ್ತೇಜಿತಳಾಗುತ್ತಾಳೆ. ‘ಎನ್ನನೊಯ್ಯದೆ ಹೋದೆಯಲ್ಲ’ ಎಂದು ಪರಿತಪಿಸುತ್ತಾಳೆ.
ಬಸವಣ್ಣಾ ನೀವು ಮತ್ರ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗೆಲ್ಲಾ ಪಸರಿಸಿತಲ್ಲಾ
ಅಯ್ಯಾ, ಸ್ವರ್ಗ, ಮತ್ರ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು?
ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವೂ ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತÀಯ್ಯಾ
ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ
ಮತ್ರ್ಯ ಲೋಕದ ಮಹಾಮನೆ ಶೂನ್ಯವಾಯಿತಲ್ಲಾ ಬಸವಣ್ಣಾ
ಎನ್ನನೊಯ್ಯದೆ ಹೋದೆಯಲ್ಲಾ ಪಂಚ ಪುರುಷ ಮುರ್ತಿ ಬಸವಣ್ಣಾ
ಬಸವಣ್ಣ ಪ್ರಿಯ ಚೆನ್ನಸಂಗಯ್ಯಗೆ
ಪ್ರಾಣಲಿಂಗವಾಗಿ ಹೋದೆಯಲ್ಲಾ ಸಂಗನ ಬಸವಣ್ಣಾ
        ಬಸವಣ್ಣನ ದುರಂತ ಸಾವಿನಿಂದ ವಿಚಲಿತಳಾದ ಅಕ್ಕ ನಾಗಮ್ಮ ಸಹೋದರನಿಲ್ಲದ ಭವಿಯ ರೋದನ ಚಿತ್ರಣವನ್ನು ನೀಡುತ್ತಾಳೆ. ಸದಾ ಸತ್ಯ, ತ್ಯಾಗ, ನ್ಯಾಯ, ನೀತಿ ಧರ್ಮ, ಕಾಯಕ ದಾಸೋಹಗಳ ಖಣಜವಾಗಿದ್ದ ನೀವೇ ಇಲ್ಲದ ಭುವಿ ಅನಾಥವಾಯ್ತು, ನಿತ್ಯ ಕಂಗೊಳಿಸುತಿದ್ದ ಮಹಾಮನೆ ಕಗ್ಗತ್ತಲಾವರಿಸಿ ಶೂನ್ಯವಾಗಿದೆ. ಜಗದ ಬೆಳಗು ಕ್ಷಿಣಿಸಿದೆ. ಅಸಂಖ್ಯಾತ ಮಹಾಗಣಗಳು ನಿನ್ನೊಂದಿಗೆ ಲೀನವಾದರು. ನನ್ನ ಕರೆದೊಯ್ಯದೆ ನೀನೊಬ್ಬನೆ ಹೋದೆಯಲ್ಲ ಎಂದು ಪರಿತಪಿಸುತ್ತಾಳೆ. ಬಸವಣ್ಣನಲ್ಲಿ ಗುರು-ಶಿಷ್ಯ, ತಂದೆ-ತಾಯಿಯನ್ನು ಕಂಡುಕೊಂಡಿದ್ದ ನಾಗಮ್ಮ ಒಬ್ಬಂಟಿಯಾಗುತ್ತಾಳೆ.
ಎನ್ನ ಕುಲ ಸೂತಕವ ಕಳೆದಾತ ಬಸವಣ್ಣ
ಎನ್ನ ಛಲ ಸೂತಕವ ಕಳೆದಾತ ಬಸವಣ್ಣ
ಎನ್ನ ತನು ಸೂತಕವ ಕಳೆದಾತ ಬಸವಣ್ಣ
ಎನ್ನ ಮನ ಸೂತಕವ ಕಳೆದಾತ ಬಸವಣ್ಣ
ಎನ್ನ ನೆನವು ಸೂತಕವ ಕಳೆದಾತ ಬಸವಣ್ಣ
ಎನ್ನ ಭಾವ ಸೂತಕವ ಕಳೆದಾತ ಬಸವಣ್ಣ
ಎನ್ನ ಅರಹು-ಮರೆವಿನ ಸಂದು ಸಂಶಯವ ಬಿಡಿಸಿದಾತ ಬಸವಣ್ಣ
ಎನ್ನ ತನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ
ತನ್ನ ಎನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ
ಬಸವಣ್ಣಪ್ರಿಯ ಚೆನ್ನ ಸಂಗಯ್ಯನ ಹೃದಯ ಕಮಲದಲ್ಲಿ
ನಿಜ ನಿವಾಸಿಯಾಗಿರಿಸಿದ ಎನ್ನ ತಂದೆ ಸಂಗನ ಬಸವಣ್ಣನು
       ನನ್ನೊಳಗಿನ ಕುಲ ಜಂಜಾಟದ , ಅಹಂ, ಮನೋವೈಕಲ್ಯದ, ಕಲ್ಮಷಗಳ ಸೂತಕವ ಕಳೆದು ಮಾನವೀಯ ಮೌಲ್ಯಗಳ ನಿನ್ನೊಳಗೆ ನನ್ನ ತುಂಬಿಕೊಂಡು, ನನ್ನೊಳಗೆ ನಿನ್ನ ತುಂಬಿ, ನನ್ನ ವೈಚಾರಿಕ ಕಣ್ತೆರೆಸಿ ಇವನಾರವ ಇವನಾರವನೆನಿಸದೆ ಇವ ನಮ್ಮವ ಇವ ನಮ್ಮವನೆನ್ನುವ ವೈಶಾಲ್ಯ ಹೃದಯವ ನೀಡಿದಾತನೆ, ಸಕಲವೂ-ಸವ್ರ್ವಸ್ವವೂ ಆದಾತನೆ ನೀ ಸಲ್ಲದ ಜಗದಲ್ಲಿ ನನ್ನ ಪಯಣ ಎತ್ತ? ಎಂದು ಪರಿತಪಿಸುವ ರೀತಿ ಮನ ಕಲಕುತ್ತದೆ. ಗುರುವೂ ಅವನೇ ಗುರಿಯೂ ಅವನೇ ಎಂದರಿತಿದ್ದ ಮಹಾತಾಯಿ ನಾಗಮ್ಮಳ ಶೋಕ ಸಾಗರೋಪಾದಿಯಲ್ಲಿ ಹರಿದಿದೆ. ಈ ವಚನ ಒದುಗನ ಕಣ್ಣಲ್ಲಿ ಮಡುಗಟ್ಟುತ್ತದೆ. ಗುರು ರೇವಣಸಿದ್ದೇಶ್ವರರಿಂದ ಶಿವ ದೀಕ್ಷೆಯನ್ನು ಪಡೆದು ಯೋಗ ಸಿದ್ಧಿಯನ್ನು ಕರಗತ ಮಾಡಿಕೊಂಡಿದ್ದ ಅಕ್ಕ ನಾಗಮ್ಮ ಚಿಕ್ಕ ಮಗಳೂರಿನ ಎಣ್ಣೆಹೊಳೆಯ ಸಮೀಪ ತನ್ನ ಅರವತ್ತನೆಯ ವಯಸ್ಸಿನಲ್ಲಿ ಶಿವಾಧೀನಳಾಗುತ್ತಾಳೆ.
                                                                 
                                                                               ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
                                                                          ತೇಜೂರು ರಸ್ತೆ, ಶಾಂತಿ ನಗರ .
                                                                                ಹಾಸನ 573201
                                                                                       ಮೋ ನಂ-9483470794, 9739878197    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ