ಪ್ರಾಚೀನ ಕಾಲದಲ್ಲಿ ವಿದ್ಯಾನಗರವೆಂಬ ಪುಟ್ಟ ಗ್ರಾಮವಿತ್ತು. ಈ ಗ್ರಾಮ ತುಂಬಾ ಸಂಪದ್ಭರಿತವಾಗಿತ್ತು. ಮಾದೇಗೌಡನೇ ಊರಿನ ಯಜಮಾನ. ಪಂಚಾಯಿತಿ ಮುಖ್ಯಸ್ಥನಾಗಿ ಅದೆಷ್ಟೋ ಜಗಳಗಳನ್ನು ಬಗೆಹರಿಸಿದ್ದ. ನ್ಯಾಯಕೊಡಿಸಿದ್ದ. ಸುತ್ತ ಹದಿನೆಂಟು ಹಳ್ಳಿಗಳಲ್ಲಿ ಮಾದೇಗೌಡರೆಂದರೆ ಜನರಲ್ಲಿ ಭಯ, ಭಕ್ತಿ ತುಂಬಿತ್ತು. ಆದರೆ ಗೌಡನಿಗೆ ಸಂತಾನವಿರಲಿಲ್ಲ. ಹೀಗಾಗಿ ಇವರು ತಮಗೆ ವಂಶೋದ್ಧಾರಕ ಇಲ್ಲವಲ್ಲ ಎಂಬ ಚಿಂತೆಗೊಳಗಾದರು.
ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ಸುತ್ತದ ದೇವರಿರಲಿಲ್ಲ, ಅಲೆಯದ ಜ್ಯೋತಿಷಿಗಳಿರಲಿಲ್ಲ ! ಪÀÅರೋಹಿತರ ಸಲಹೆಯ ಮೇರೆಗೆ ಅದೆಷ್ಟೋ ಹೋಮ ಹವನ, ಪೂಜೆ ಪುನಸ್ಕಾರಗಳನ್ನು ಮಾಡಿಸಿದರೂ ಫಲಿಸಲಿಲ್ಲ. ಧಾನ-ಧರ್ಮಾದಿಗಳನ್ನು ಮಾಡಿದರೂ ಫಲ ದೊರೆಯಲಿಲ್ಲ.
ಅದೇ ಸಮಯಕ್ಕೆ ಹಿಮಾಲಯದಲ್ಲಿ ಹದಿನೈದು ವರ್ಷಗಳ ಕಾಲ ತಪಗೈದು ಶಿವಜ್ಞಾನ ಸಂಪಾದಿಸಿ ಅಪÀÇರ್ವ ಶಕ್ತಿಯೊಂದನ್ನು ಸಂಪಾದಿಸಿಕೊಂಡಿದ್ದ ಕ್ರಿಷ್ಣಮೂರ್ತಿಮುನಿಗಳು ಆ ಹಳ್ಳಿಗೆ ಆಗಮಿಸಿ, ಅವರ ಆರನೆ ಇಂದ್ರಿಯ ನೆರವಿನಿಂದ ಆ ಊರಲ್ಲಿದ್ದ ಸಮಸ್ಯೆ ಅರಿತು ನೇರವಾಗಿ ಗೌಡರ ಮನೆಗೆ ಬಂದರು, ಅಂಗಳದಲ್ಲಿ ಚಿಂತಾಕ್ರಾಂತನಾಗಿ ಕೂತಿದ್ದ, ಗೌಡನು ತಕ್ಷಣ ಎದ್ದು ಮುನಿಗಳನ್ನು ಸ್ವಾಗತಿಸಿ, ಆಧರದಿಂದ ಸತ್ಕರಿಸಿ, ತನ್ನ ಅಳಲನ್ನು ತೋಡಿಕೊಂಡನು.
ಗೌಡನನ್ನು ಉದ್ದೇಶಿಸಿ ಕ್ರಿಷ್ಣಮೂತಿಗಳು ನಿಮ್ಮ ಸಮಸ್ಯೆಯನ್ನು ಅರಿತೇ ನಾವಿಲ್ಲಿಗೆ ಹಿಮಾದ್ರಿಯಿಂದ ಆಗಮಿಸಿದ್ದೇವೆ. ತೆಗೆದುಕೋ ಈ ಗಿಡವನ್ನು ಬರುವ ಅಮವಾಸ್ಯೆ ದಿನದಂದು ಇದಕ್ಕೆ ಶ್ರದ್ದೆಯಿಂದ ಪೂಜೆ ಸಲ್ಲಿಸಿ ಉಗುರು ಬೆಚ್ಚಗಿನ ಮೇಕೆ ಹಾಲಿನಲ್ಲಿ ತೇದು ಈ ಗಿಡವನ್ನು ನಿಮ್ಮ ಶ್ರೀಮತಿಯವರಿಗೆ ಕುಡಿಸಿ ಎಂದು ಮುನಿಗಳು ಅಲ್ಲಿಂದ ನಿರ್ಗಮಿಸಿದರು.
ಗೌಡನ ಸಂತೋಷಕ್ಕೆ ಪಾರವೇಯಿರಲಿಲ್ಲ. ಸ್ವರ್ಗವೇ ಸಿಕ್ಕಷ್ಟು ಸಂತೋಷವಾದ ಗೌಡ ತನ್ನ ಶ್ರೀಮತಿಯೊಂದಿಗೆ ತನ್ನ ಖುಷಿಯನ್ನು ಹಂಚಿಕೊಂಡ, ಕೆಲವೇ ದಿನಗಳಲ್ಲಿ ಗೌಡತಿ ಗರ್ಭವತಿಯಾದಳು. ಈ ಸಿಹಿ ಸುದ್ದಿ ಸುತ್ತಮುತ್ತಲಿನ ಗ್ರಾಮಗಳಿಗೆ ಹರಡಿತು, ಜನರೆÉಲ್ಲರೂ ಸಂತೋಷಗೊಂಡರು. ಗೌಡನು ಊರಿನ ಹಿರಿಯ ಪುರೋಹಿತರಾದ ಕುಬೇಂದ್ರಶರ್ಮರವರನ್ನು ಮನೆಗೆ ಕರೆಸಿದ. ತನ್ನ ಮಗುವಿನ ಜನನದ ಬಗ್ಗೆ ವಿಚಾರಿಸಿದ. ಕುಬೇಂದ್ರಶರ್ಮರವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಿದ್ದಹಸ್ತರು, ಅದೆಷ್ಟೋ ಭೇದಿಸಲಸಾಧ್ಯವಾದ ಮಾಹಿತಿಗಳೆಲ್ಲವನ್ನೂ ತಮ್ಮ ಸ್ಮøತಿ ಪಟಲದಿಂದಲೇ ಗ್ರಹಿಸುತ್ತಿದ್ದರು. ಶರ್ಮರವರು ಕವಡೆ ಹಾಕಿಸಿ ಲೆಕ್ಕಚಾರ ಮಾಡಿ ಹೀಗೆ ಹೇಳಿದ “ಗೌಡ್ರೇ ನಿಮಗೆ ಹೆಣ್ಣು ಮಗು ಜನಿಸಲಿದ್ದು, ಮುಂದೆ ಅವಳು ಅನ್ಯಧರ್ಮಿಯ ಹುಡುಗನನ್ನು ಪ್ರೇಮಿಸಿ, ಮದುವೆಯಾಗುವಳು ಇವರೀರ್ವರ ಪ್ರೇಮಕಥೆ ಜಗತ್ಪ್ರಸಿದ್ಧವಾಗುವುದು”.
ಪುರೋಹಿತರಿಗೆ ಸೂಕ್ತ ಸಂಭಾವನೆಯನ್ನು ನೀಡಿ ಕಳುಹಿಸಿದ ಗೌಡರು, ತಮ್ಮ ಮಗು ಜನಿಸುವುದನ್ನೇ ನಿರೀಕ್ಷಿಸಲಾರಂಭಿಸಿದರು. ಜ್ಯೋತಿಷಿಗಳು ನುಡಿದಂತೆ ಗೌಡರ ದಂಪತಿಗಳಿಗೆ ಹೆಣ್ಣು ಮಗು ಜನಿಸಿತು. ತಮ್ಮ ಮಗಳ ಭವಿಷ್ಯದಿಂದ ಚಿಂತೆಗೀಡಾಗಿದ್ದ ಗೌಡರು ಹೆಂಡತಿಗೆ ಸಮಾಧಾನವಾಗಿ ಮನವರಿಕೆ ಮಾಡಿಸಿ, ಆ ಮಗುವಿಗೆ ಒಂದು ಗಟ್ಟಿ ತಾಯತವನ್ನು ಕಟ್ಟಿಸಿ, ಅದನ್ನು ಸೂರ್ಯ ಹುಟ್ಟುವ ಮುನ್ನವೇ ದೂರದ ಕಾಡಿನಲ್ಲಿ ಒಂದು ಮರದ ಕೆಳಗೆ ಬಿಟ್ಟು ಬಂದನು.
ಪಕ್ಕದೂರಿನ ವಾಸುದೇªನಾಯಕÀ ಸೌದೆ ಕಡಿಯಲೆಂದು ಸೂರ್ಯೋದಯ ವೇಳೆಯಲ್ಲಿ ಆ ಕಾಡಿಗೆ ಬಂದಾಗ ಅಲ್ಲಿ ಅವನಿಗೆ ಒಂದು ಮಗುವಿನ ಆಕ್ರಂದನ ಕೇಳಿಬರುತ್ತದೆ. ಆ ಧ್ವನಿಯ ಜಾಡನ್ನೇ ಹಿಡಿದು, ಆ ಮಗುವಿನ ಹತ್ತಿರ ಬಂದು ಬಹಳ ಸಂತೋಷದಿಂದ ಆ ಮಗುವನ್ನು ಕೈಗೆತ್ತಿಕೊಂಡು ಮನೆ ಕಡೆಗೆ ಹೆಜ್ಜೆ ಹಾಕಿದ.
ವಾಸುದೇವನಾಯಕನೂ ಸಹ ಸಂತಾನಹೀನನಾಗಿದ್ದ. ಆ ಮಗುವನ್ನು ತನ್ನ ಪತ್ನಿಗೆ ತೋರಿಸಿ, ಆ ದೇವರೇ ತಮಗೆ ಈ ಮಗುವನ್ನು ಕರುಣಿಸಿರುವುದಾಗಿ ಹೇಳಿ, ಅದನ್ನು ಅವಳ ಕೈಗೆ ನೀಡಿದ. ಬಂಜೆಯಾದ ಆತನ ಹೆಂಡತಿಗೆ ಆ ಶಿಶುವನ್ನು ನೋಡಿ ಬಹಳ ಆನಂದವಾಯಿತು. ವಾಸುದೇವನಾಯಕ ದಂಪತಿಗಳು ಮಗುವನ್ನು ಬಹಳ ಪ್ರೀತಿ ಆರೈಕೆಯಿಂದ ಬೆಳೆಸಿದರು. ಹೆಣ್ಣು ಮಕ್ಕಳು ಬಹುಬೇಗ ಬೆಳೆಯುತ್ತಾರೆಂಬುದು ಲೋಕಾರೂಢಿಯಲ್ಲವೇ ? ವಸುಂದರೆ ತುಂಬಾ ಸುಂದರಿ, ದೇವತೆಗಳ ಪಡಿಯಚ್ಚಿನಂತೆ ಇವಳ ರೂಪು, ಇವಳ ಸೌಂದರ್ಯದ ಸೊಬಗು ಸುತ್ತಲಿನ ಗ್ರಾಮಗಳವರೆಗೂ ಮೈಸೂಸಿ ಕುಸುಮದ ಸುವಾಸನೆಯಂತೆ ಪಸರಿಸಿತು. ಹತ್ತಾರು ವರಗಳು ಬಂದರೂ ಸರಿಯಾಗಿ ಹೊಂದಾಣಿಕೆಯಾಗಲಿಲ್ಲ. ಆದರೆ ನೋಡಿದವರೆಲ್ಲರೂ ಇವಳ ಸೌಂದರ್ಯಕ್ಕೆ ಮನಸೋಲದವರೇ ಇರಲಿಲ್ಲ.
ಒಂದು ದಿವಸ ಈ ಹಳ್ಳಿಯ ಪಂಚಾಯಿತಿಗೆಂದು ಮಾದೇಗೌಡರು ಆಗಮಿಸಿ ನ್ಯಾಯಕಟ್ಟೆಯಲ್ಲಿ ಸಂಭಾಷಣೆಯಲ್ಲಿ ನಿರತರಾಗಿದ್ದರು. ಊರಿನ ಜನರೆಲ್ಲರೂ ಅಲ್ಲಿ ನೆರೆದಿದ್ದರಿಂದ ಅಲ್ಲಿಗೆ ವಾಸುದೇವ ಕುಟುಂಬದವರೂ ಆಗಮಿಸಿದ್ದರು. ಗೌಡರ ಕಣ್ಣುಗಳೊಮ್ಮೆ ಗ್ರಾಮಸ್ಥರನ್ನೆಲ್ಲಾ ಸುಳಿದಾಡುವಾಗ ಒಂದು ಅಪರೂಪದ ಚೆಲುವು ಅವರನ್ನು ತಲ್ಲಣಗೊಳಿಸಿತು. ಕೂಡಲೇ ಎಚ್ಚೆತ್ತುಕೊಂಡ ಗೌಡರು ಪಂಚಾಯಿತಿ ಮುಗಿದ ಮೇಲೆ ಆ ಹುಡುಗಿಯಾರೆಂದು ವಿಚಾರಿಸಿದ ಮೇಲೆ ಅದು ವಾಸುದೇವನಾಯಕನ ಸಾಕುಮಗಳೆಂದು ತಿಳಿದುಬರುತ್ತದೆ. ಗೌಡ ಆ ಹುಡುಗಿಯ ಸೌಂದರ್ಯಕ್ಕೆ ಮನಸೋಲುತ್ತಾನೆ. ಗೌಡನಿಗೆ ಆಗಿನ್ನೂ ಮೂವತ್ತೆಂಟರ ಹರೆಯ. ತನ್ನ 15ನೇ ವಯಸ್ಸಿನಲ್ಲಿಯೇ ಮದುವೆಯಾಗಿದ್ದರೂ ಸಂತಾನದ ಚಿಂತೆ ಕಾಡುತ್ತಿತ್ತು. ಆದೊಂದು ಮಗುವಿನ ಭವಿಷ್ಯವರಿತು ದೂರಮಾಡಿಕೊಂಡಿದ್ದ ಗೌಡ ಇನ್ನೊಂದು ಮದುವೆಯ ಯೋಚನೆಯಲ್ಲಿ ಮುಳುಗಿದ. ಈ ವಿಷಯ ತನ್ನ ಹೆಂಡತಿಗೂ ತಿಳಿಯಿತು. ಅವಳು ಸಹ ತುಂಬಾ ಯೋಚಿಸಿ, ನನಗಂತೂ ಮತ್ತೆ ಮಕ್ಕಳಾಗಲಿಲ್ಲ, ಗೌಡರ ವಂಶ ಉದ್ಧಾರಕನನ್ನೂ ಹಡೆದುಕೊಡಲಾಗಲಿಲ್ಲ, ಅವಳಿಂದಾರೂ ಮನೆತನ ಬೆಳೆಯಲಿ ಎಂದು ಆಶಿಸಿ, ಗಂಡನಿಗೆ ತನ್ನ ಇಚ್ಚೆಯನ್ನು ತಿಳಿಸಿದಾಗ ಗೌಡನಿಗೆ ಆನಂದಕ್ಕೆ ಪಾರವೇಯಿರಲಿಲ್ಲ ! ತಕ್ಷಣ ವಾಸುದೇವನಾಯಕನನ್ನು ಕರೆಯಿಸಿ ಕೇಳಿದಾಗ, ಸುತ್ತ ಹದಿನೆಂಟು ಹಳ್ಳಿಯ ಯಜಮಾನ ಗೌಡ, ನೂರಾರು ಎಕರೆ ಜಮಿನ್ದಾರ, ಇಲ್ಲವೆನ್ನುವುದುಂಟೆ, ಮಗಳು ಸುಖವಾಗಿರೋದು ಯಾರಿಗೆ ತಾನೇ ಇಷ್ಟವಿರಲ್ಲ ? ಆದರೂ ವಾಸುದೇವನಾಯಕ ನನ್ನ ಮಗಳನ್ನು ಒಮ್ಮೆ ಕೇಳಬೇಕು ಎಂದಾಗ ಗೌಡ ಆಗಲಿ ಅವಳನ್ನು ಕÀರೆಸಿ ಎಂದಾಗ ವಾಸುದೇವ ತನ್ನ ಹೆಂಡತಿ ಮತ್ತು ಮಗಳಿಗೆ ತಿಳಿಸಿ ಗೌಡರನ್ನೇ ತಮ್ಮ ಮನೆಗೆ ಆಹ್ವಾನಿಸಿದನು. ಮರುದಿನ ಬೆಳಿಗ್ಗೆ ಗೌಡರು ತಮ್ಮ ಪರಿವಾರದೊಂದಿಗೆ ಪಕ್ಕದ ಹಳ್ಳಿಯಾದ ಮುತ್ತೂರಿಗೆ ದಾವಿಸಿದನು. ಅಷ್ಟೊತ್ತಿಗೆ ತಮ್ಮ ಮಗಳು ಇಷ್ಟ ತಿಳಿಯಲೆಂದು ವಾಸುದೇವನಾಯಕ ತಮ್ಮ ಮಗಳಿಗೆ ಕೇಳಿದಾಗ ನಿಮ್ಮ ಇಚ್ಛೆಯೇ ನನ್ನಿಚ್ಛೆ ಎಂದಳು.
ಅಷ್ಟೊತ್ತಿಗಾಗಲೇ ಗೌಡರ ಪರಿವಾರ ವಾಸುದೇವರ ಮನೆ ತಲುಪಿ ವಿಶ್ರಮಿಸಿತು. ಮೂಲೆಯೊಂದರಲ್ಲಿ ನಿಂತಿದ್ದ ವಸುಂಧರೆ ಬಳಿಗೆ ತೆರಳಿದ ಗೌಡರು ಅವಳಲ್ಲಿ ಮದುವೆಯ ಪ್ರಸ್ತಾಪವನ್ನು ಮಾಡಿದರು. ಈ ವಿವಾಹ ವಿಷಯದಲ್ಲಿ ನನ್ನ ನಿರ್ಧಾರವೇನೂ ಇಲ್ಲವೆಂದೂ, ತನ್ನ ತಂದೆ-ತಾಯಿಯರ ಇಚ್ಛೆಯಂತೆಯೇ ನಡೆದುಕೊಳ್ಳುವುದಾಗಿಯೂ ವಸುಂಧರೆ ಗೌಡರಿಗೆ ಉತ್ತರಿಸಿದಳು. ಅಲ್ಲದೇ ಅವರು ಒಬ್ಬ ಗೌಡರು ಹಾಗೂ ತಾನು ಒಬ್ಬ ಬೇಡರಳು ಎನ್ನುವುದನ್ನು ಜ್ಞಾಪಿಸಿ, ಅವರಿಬ್ಬರ ನಡುವಿನ ಅಗಾಧ ವ್ಯತ್ಯಾಸವನ್ನು ತಿಳಿಸಿದಳು. ಅವಳು ಹೀಗೆ ಹೇಳುತ್ತಾ ಗೌಡರ ಕಡೆಗೆ ತಿರುಗಿದಾಗ, ಅವಳ ಕುತ್ತಿಗೆಯಲ್ಲಿದ್ದ ತಾಯತವನ್ನು ಕಂಡು ಗೌಡರು ಆಶ್ಚರ್ಯಚಕಿತರಾದರು ! 18 ವರ್ಷಗಳ ಹಿಂದೆ ತಮ್ಮ ಮಗಳಿಗೆ ಕಟ್ಟಿದ್ದ ತಾಯತವೇ ಅದಾಗಿತ್ತು.
ಆಗ ಗೌಡರಿಗೆ ವಸುಂಧರೆ ತಮ್ಮ ಮಗಳೇ ಎನ್ನುವುದು ಮನದಟ್ಟಾಯಿತು. ನಂತರ ಈ ವಿಷಯವನ್ನು ಶ್ರೀಮತಿಗೂ ವಿವರಿಸಿದರು. ಈ ಸುದ್ದಿಯನ್ನು ತಿಳಿದ ಗೌರಮ್ಮನ ಮಾತೃ ಪ್ರೇಮವು ಉಕ್ಕಿಹರಿಯತೊಡಗಿ, ವಸುಂಧರೆ ಹಾಗೂ ಬೇಡರ ದಂಪತಿಗಳಿಗೆ ಆಕೆÉ ತಮ್ಮ ಮಗಳು ಎಂಬುದರ ನಿಜ ವೃತ್ತಾಂತವನ್ನು ವಿವರಿಸಿ ಹೇಳಿದರು. ಜ್ಯೋತಿಷಿಗಳು ಹೇಳಿದ್ದ ಭವಿಷ್ಯವಾಣಿಯನ್ನು ಸುಳ್ಳು ಮಾಡುವುದಕ್ಕಾಗಿ ತಮ್ಮ ಮಗಳನ್ನು ಕಾಡಿಗೆ ಬಿಡಲಾಯಿತೆಂದು ತಿಳಿಸಿದರು. ಅಲ್ಲದೆ, ಇಂದಿನಿಂದ ತಮ್ಮ ಮನೆಯಲ್ಲಿಯೇ ವಾಸಿಸಬೇಕೆಂದು ವಸುಂಧರೆಯನ್ನು ಒತ್ತಾಯಿಸಿದರು. ಆದರೆ ಅವರ ಒತ್ತಾಯವನ್ನು ವಿನಯಪೂರ್ವಕವಾಗಿ ನಿರಾಕರಿಸಿದ ವಸುಂಧರೆ ಬೇಡರ ದಂಪತಿಗಳೊಂದಿಗೆ ಇರಲು ಇಚ್ಛಿಸಿದಳು.
ಗೌಡ ಹತಾಶನಾಗಿ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವೆಂದರಿತು ಹೋದದಾರಿಗೆ ಸುಂಕವಿಲ್ಲವೆಂಬಂತೆ ತನ್ನ ಊರಿಗೆ ಹಿಂತಿರುಗಿದನು.
ಅದೇ ವೇಳಗೆ ಪಕ್ಕದ ತಾಲ್ಲೂಕಿನ ಮಾವಿನಹಳ್ಳಿಯ ಶ್ರೀಮಂತ ಮನೆತನದ ಬುಡೇನ್ಸಾಬ್ನ ಮಗನಾದ ಹುಸೇನಿಯು ವಸುಂಧರೆಯ ಮನಮೋಹಕ ಚೆಲುವಿನ ವರ್ಣನೆಯನ್ನು ಕೇಳಿದ್ದರು. ವಿದ್ಯಾವಂತರಾಗಿದ್ದ ಹÅಸೇನಿ ಜಾತಿ-ಮತ, ಧರ್ಮದಾಚೆಗೆ ಯೋಚಿಸುವ ಒಬ್ಬ ಸಚ್ಚಾರಿತ್ಯ್ರ ಯುವಕನಾಗಿದ್ದ, ಹೇಗಾದರೂ ಮಾಡಿ ಆ ಚೆಲುವೆಯನ್ನು ಬೇಟಿಮಾಡಬೇಕೆಂಬ ಛಲದಿಂದ ಅವರು ವರ್ತಕನ ಮಾರುವೇಷದಲ್ಲಿ ಮುತ್ತೂರಿಗೆ ತೆರಳಿದರು. ವಸುಂಧರೆ ತನ್ನ ಸಂಗಡಿಗರೊಂದಿಗೆ, ವರ್ತಕನ ವೇಷದಲ್ಲಿದ್ದ ಹÅಸೇನಿ ತಂದಿದ್ದ ಹಲವಾರು ಸಾಮಾಗ್ರಿಗಳನ್ನು ಖರೀದಿಸಿದಳು. ಅವರಿಬ್ಬರಿಗೂ ತಮ್ಮ ಪ್ರಪ್ರಥಮ ಭೇಟಿಯಲ್ಲೇ ಮೋಹದಲ್ಲಿ ಸಿಲುಕಿದರು.
ವಸುಂಧರೆಯ ಒಪ್ಪಿಗೆಯನ್ನು ಪಡೆದ ಹÅಸೇನಿ, ಅವಳ ತಂದೆಯನ್ನು ಬೇಟಿ ಮಾಡಿ, ಆಕೆಯನ್ನು ವಿವಾಹವಾಗುವ ತಮ್ಮ ಇಂಗಿತವನ್ನು ವ್ಯಕ್ತ ಪಡಿಸಿದರು. ತಾನೊಬ್ಬ ಬೇಡನಾಗಿರುವುದರಿಂದ ತನ್ನ ಮಗಳ ವಿವಾಹವನ್ನು ಬೇಡನೊಂದಿಗೇ ಮಾಡುವುದಾಗಿ ವಾಸುದೇವನಾಯಕನು ಹೇಳಿದ. ಅದಕ್ಕೆ ಹÅಸೇನಿ ತಾವೂ ಸಹ ಬೇಡನೇ ಹೆÇಟ್ಟೆಪಾಡಿಗಾಗಿ ವರ್ತಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹೆಸರು ಬಸವನಾಯಕನೆಂದು ಪರಿಚಯ ಮಾಡಿಕೊಂಡ. ಅಲ್ಲದೇ ಮೂರನೆಯ ದಿನದಿಂದ ಅವಳ ತಂದೆಯೊಂದಿಗೆ ಕೆಲಸಕ್ಕೆ ಹೋಗಲಾರಂಬಿಸಿದನು. ಇದರಿಂದ ಸಂತುಷ್ಟನಾದ ನಾಯಕನು ವಸುಂಧರಾ ಹಾಗೂ ಬಸವನಾಯಕನ ವಿವಾಹವನ್ನು ಮಾಡಿದ. ವಿವಾಹದ ನಂತರ ಅವರಿಬ್ಬರೂ ಆನಂದಿಂದ ಕಾಲ ಕಳೆಯತೊಡಗಿದರು. ಆದರೆ ಪ್ರೀತಿಗೆ ತನ್ನದೇ ಆದ ಕೆಲವು ಪರೀಕ್ಷೆಗಳಿರುತ್ತವೆ. ದುಃಖ, ಯಾತನೆ, ಅಡ್ಡಿ - ಆತಂಕಗಳೆಂಬ ಅಗ್ನಿ ಪರೀಕ್ಷೆಗಳನ್ನು ದಾಟಿದಾಗಲೇ ಪ್ರೀತಿಯ ಪುಟವಿಟ್ಟ ಚಿನ್ನದಂತೆ ಹೆÇಳೆಯತೊಡಗುತ್ತದೆ.
ಹÅಸೇನಿ ಬೇಡನ ಮಗಳನ್ನು ವಿವಾಹವಾಗಿ ಅವರ ವೃತ್ತಿಯನ್ನೇ ಕೈಗೊಂಡಿರುವ ವಿಷಯವು ಕೊನೆಗೂ ಮಾವಿನಹಳ್ಳಿಯ ಸಾಹೇಬರ ಪರಿವಾರಕ್ಕೆ ತಿಳಿಯಿತು. ಆಗ ಹÅಸೇನಿಯನ್ನು ತಮ್ಮ ಮನೆಗೆ ಕರೆಸಿಕೊಳ್ಳುವುದು ಹೇಗೆಂಬ ಚಿಂತೆ ಬುಡೇನ್ ಸಾಹೇಬರ ಪರಿವಾರವನ್ನು ಕಾಡಲಾರಂಭಿಸಿತು. ಕೊನೆಗೆ ಅವರು ಒಂದು ಉಪಾಯವನ್ನು ಹÇಡಿದರು. ಹÅಸೇನಿಯ ಇಬ್ಬರು ಸಹೋದರರನ್ನು ಬಳೆಗಾರರ ವೇಷವನ್ನು ಧರಿಸಿ ಮುತ್ತೂರಿಗೆ ತೆರಳಿದರು. ಅವರು ಮಾರುವೇಶದಲ್ಲಿ ವಾಸುದೇವನ ಮನೆಗೆ ಹೋದದ್ದರಿಂದ ಹÅಸೇನಿಗೆ ಅರಿವಾಗಲಿಲ್ಲ, ಅಲ್ಲದೇ ತಾಯಿ, ಮಗಳು ಇಬ್ಬರೂ ಬಳೆ ಹಾಕಿಸಿಕೊಳ್ಳಲು ಕರೆದರು. ಅಷ್ಟೊತ್ತಿಗೆ ಮುಸ್ಸಂಜೆ ಸಮೀಪಿಸುತ್ತಿತ್ತು. ಅವರಿಬ್ಬರಿಗೆ ಸಂತೋಷದಿಂದಲೇ ಬಳೆ ತೊಡಿಸಿದ ಬಳೆಗಾರರು ಸಂಜೆಯಾದ್ದರಿಂದ ಯೋಚಿಸತೊಡಗಿದರು. ಅವರನ್ನು ಕುರಿತು ಗೌರಮ್ಮ ನಿಮ್ಮದು ಯಾವ ಊರಪ್ಪ ? ಎಂದು ಕೇಳಿದಳು. ಅವರು ನಮ್ಮದು ಬಹುದೂರ ಮುಂದಿನ ಊರು ಎಷ್ಟು ದೂರವಾಗುತ್ತೆ ಎಂದು ಕೇಳಿದರು. ಅಷ್ಟೊತ್ತಿಗೆ ಮನೆಗೆ ಆಗಮಿಸಿದ ವಾಸುದೇವನಾಯಕ ಕತ್ತಲಾಗುತ್ತಾ ಇದೆ ಸಾಹೇಬ್ರೇ ಇವತ್ತು ಇಲ್ಲೆ ವಸ್ತಿ ಮಾಡಿ, ಬೆಳಿಗ್ಗೆ ಹೋಗಿ ಎಂದರು.
ರಾತ್ರಿ ಎಲ್ಲರೂ ಸಂತೋಷದಿಂದ ಊಟ ಮುಗಿಸಿ ಮಲಗಿದರು. ಎಲ್ಲರಿಗೂ ನಿದ್ರೆ ಹೋದದ್ದನ್ನು ಖಾತರಿಪಡಿಸಿಕೊಂಂಡ ಬಳೆಗಾರರು ಅವರು ತಂದಿದ್ದ ಮೂರ್ಛೆ ಸ್ಪ್ರೆಯನ್ನು ಅವರ ಚೀಲದಿಂದ ತೆಗೆದು ಎಲ್ಲರ ಮೂಗಿಗೂ ಸಿಂಪಡಿಸಿದರು. ಮಲಗಿದವರೆಲ್ಲ ಕ್ಷಣಮಾತ್ರದಲ್ಲಿ ಪ್ರಜ್ಞಾಹೀನರಾದರು. ನಂತರ ಹÅಸೇನಿಯನ್ನು ಎತ್ತಿಕೊಂಡು ಹೋಗಲು ತೀರ್ಮಾನಿಸಿ, ಇಬ್ಬರು ಎತ್ತಿಕೊಂಡು ಹೆÇರಗೆ ಬರುವಾಗ ಒಬ್ಬ ಆಯಾ ತಪ್ಪಿ ಗೋಡೆಗೆ ತಲೆಹೆÇಡೆದು ರಕ್ತಸ್ರಾವವಾಗತೊಡಗಿತು. ಬಟ್ಟೆಯಿಂದ ಗಾಯವಾದ ಸ್ಥಳವನ್ನು ಕಟ್ಟಿಕೊಂಡು ಯಾರಿಗೂ ಕಾಣದಂತೆ ಹÅಸೇನಿಯನ್ನು ತಮ್ಮೂರಿಗೆ ಹೆÇತ್ತೊಯ್ದರು.
ಮರುದಿನ ವಸುಂಧರ ಹಾಗೂ ಬೇಡ ದಂಪತಿಗಳು ಎಚ್ಚೆತ್ತಾಗ, ಬಸವನಾಯಕ ಹಾಗೂ ಆ ಬಳೆಗಾರರಿಬ್ಬರೂ ನಾಪತ್ತೆಯಾಗಿರುವುದು ತಿಳಿಯಿತು. ತಳಮಳಗೊಂಡ ವಸುಂಧರ ರಕ್ತದ ಕಲೆಗಳನ್ನು ನೋಡಿ ದಿಗ್ಮೂಢಳಾದಳು. ಆದರೂ ಎದೆಗುಂದದೇ ರಕ್ತದ ಕಲೆಗಳ ಅನುಸರಿಸಿಕೊಂಡು ಅದರ ಜಾಡನ್ನೇ ಹಿಡಿದು ಓಡತೊಡಗಿದಳು. ಮುತ್ತೂರು ಗಡಿದಾಟಿ ಸುಮಾರು ದೂರ ದಾರಿ ಸವೆಸಿದ ಅವಳಿಗೆ ಎಲ್ಲಿಲ್ಲದ ದಾಹವಾಗತೊಡಗಿತು. ಸೂರ್ಯ ನಡುನೆತ್ತಿಗೆ ಬಂದ ಬಿಸಿಲಿನ ಧಗೆ ವಿಪರೀತವಾಗಿ ಏರತೊಡಗಿತು. ಅದರಲ್ಲಿಯೇ ವಸುಂಧರೆ ಏದುಸಿರು ಬಿಡುತ್ತಾ ಸಾಗಿದಳು. ಅದೇ ವೇಳೆಗೆ ಜೋರಾಗಿ ಬೀಸುತ್ತಾ ಬಂದ ಸುಂಟರಗಾಳಿ, ಅವಳನ್ನು ಧೂಳಿನ ಕಣಗಳಿಂದ ಮುಚ್ಚಿಹಾಕಿತು. ನಂತರ ಮತ್ತು ಸಾವರಿಸಿಕೊಂಡು ಮುಂದುವರೆದ ವಸುಂಧರಾಗೆ ರಕ್ತದ ಕಲೆಗಳು ಧೂಳಿನ ಕಣಗಳಿಂದ ಕಾಣದಾದವು. ಆದರೂ ಅಳುಕದ ಅವಳು, ತನ್ನ ಆರನೇ ಇಂದ್ರಿಯ ತೋರಿಸಿದ ಮಾರ್ಗದಲ್ಲಿ ಮುಂದುವರಿದಳು. ವಿಪರೀತ ಬಾಯಾರಿಕೆಯಿಂದ ಅವಳು ಬಳಲಿದ್ದಳು. ಮುಂದೆ ಹೋಗಲಾರದೇ ಅವಳು ಕುಸಿದು ಬಿದ್ದಳು.
ಅದೇ ದಾರಿಯಲ್ಲಿ ಬೀರ ಎಂಬ ಕುರುಬನೊಬ್ಬ ತನ್ನ ಕುರಿಗಳನ್ನು ಅದೇ ದಾರಿಯಲ್ಲಿ ಹೆÉÇಡೆದುಕೊಂಡು ಬರುತ್ತಿದ್ದಾಗ ಅಕಸ್ಮತ್ತಾಗಿ ಆ ಹೆಂಗಸನ್ನು ನೋಡಿ, ತಕ್ಷಣ ಧಾವಿಸಿ ತನ್ನ ಕೈಯಲ್ಲಿದ್ದ ನೀರನ್ನು ತೆಗೆದುಕೊಂಡು ಅವಳ ಮುಖಕ್ಕೆ ಸಿಂಪಡಿಸಿ, ಎಚ್ಚರವಾದ ಮೇಲೆ ಅವಳಿಗೆ ಕುಡಿಯಲು ಆ ನೀರನ್ನು ನೀಡಿದ ನಂತರ ಯಾರು, ಏಕೆ ಹೀಗೆ ಒಬ್ಬಂಟಿಯಾಗಿ ಅಲೆಯುತ್ತಿರುವುದಾಗಿ ವಿಚಾರಿಸಿದಾಗ, ಅವಳು ನಡೆದ ವೃತ್ತಾಂತವನ್ನೆಲ್ಲಾ ಹೇಳಿದಳು.
ಬೀರ ಅವಳನ್ನು ಸಮೀಪದಲ್ಲಿಯೇ ಇದ್ದ ತನ್ನ ಗುಡಿಸಲು ಮನೆಗೆ ಕರೆದೊಯ್ದು ತನ್ನ ತಾಯಿಗೆ ನೋಡಿಕೊಳ್ಳಲು ತಿಳಿಸಿ, ಕುರಿಗಳನ್ನು ಅಲ್ಲಿಯೆ ಬಿಟ್ಟು ಬಸವನಾಯಕರನ್ನು ಅರಸುತ್ತಾ ಹೆÇರಟ. ಮಾರ್ಗಮಧ್ಯದಲ್ಲಿ ಮುತ್ತೂರಿನತ್ತ ಓಡುತ್ತಾ ಬರುತ್ತಿದ್ದ ಒಬ್ಬ ಮನುಷ್ಯನನ್ನು ಭೇಟಿಯಾದ. ರಾತ್ರಿ ಎಚ್ಚರತಪ್ಪಿ ಮಲಗಿದ್ದ ಹÅಸೇನಿ ಪ್ರಜ್ಞೆ ಬಂದೊಡನೆ ತಮ್ಮ ಸಹೋದರರೊಡನೆ ಜಗಳಮಾಡಿಕೊಂಡು, ಅವರ ಕೈಯಿಂದ ತಪ್ಪಿಸಿಕೊಂಡು ಓಡಿಬರುತ್ತಿದ್ದರು. ಅವನು ಓಡುತ್ತಾ ಬರುತ್ತಿದ್ದಾಗ ಜೋರಾಗಿ ವಸುಂಧರ ಹೆಸರು ಉಚ್ಛರಿಸುತ್ತಿದ್ದನು. ವಸುಂಧರೆ ಹೆಸರನ್ನು ಉಚ್ಛರಿಸುತ್ತಿದ್ದ ಆ ವ್ಯಕ್ತಿಯು, ಬಸವನಾಯಕನೇ ಇರಬೇಕೆಂದು ಊಹಿಸಿದ ಆ ಕುರುಬ, ಅವರನ್ನು ಸಂಧಿಸಿ, ತನ್ನ ಗುಡಿಸಿಲಿನಲ್ಲಿ ವಸುಂಧರೆ ಇರುವುದಾಗಿ ತಿಳಿಸಿದ. ಆನಂತರ ಆತ ಬಸವನಾಯಕನ್ನೂ ತನ್ನ ಗುಡಿಸಿಲಿಗೆ ಕರೆದೊಯ್ದ. ಗಂಡನನ್ನು ಕಾಣದೇ ನಿರಾಶಳಾಗಿದ್ದ ವಸುಂಧರೆ ಸಾವಿನ ಹೆÇಸ್ತಿಲಿನಲ್ಲಿದ್ದಳು. ತನ್ನ ಹೆಸರನ್ನು ಉಚ್ಛರಿಸುತ್ತಿದ್ದ ಬಸವನಾಯಕನನ್ನು ವಸುಂಧರೆ ಒಮ್ಮೆ ಕಣ್ತೆರೆದು ನೋಡಿದಳು. ಆಗ ಹÀÅಸೇನಿ ಅವಳನ್ನು ತನ್ನ ತೋಳುಗಳಲ್ಲಿ ತೆಗೆದುಕೊಂಡು ಚುಂಬಿಸಲಾರಂಭಿಸಿದ. ಗಂಡನನ್ನು ನೋಡಲೇಬೇಕೆಂಬುದು ಅವಳ ಕೊನೆಯ ಆಸೆಯಾಗಿತ್ತು. ತನ್ನ ಆಸೆಯು ಈಡೇರಿದ ವಸುಂಧರೆ ಪತಿಯ ತೋಳುಗಳಲ್ಲೇ ಕೊನೆಯುಸಿರೆಳೆದಳು. ತನ್ನ ಕಣ್ಣ ಮುಂದೆಯೇ ತನ್ನ ಪತ್ನಿಯ ಆತ್ಮವು ಅನಂತದಲ್ಲಿ ಲೀನವಾಗುತ್ತಿರುವುದನ್ನು ಅಸಹಾಯಕನಾಗಿ ವೀಕ್ಷಿಸುತ್ತಿದ್ದ ಹÅಸೇನಿಯ ದುಃಖಕ್ಕೆ ಕೊನೆಯೇ ಇರಲಿಲ್ಲ.
ಇದನ್ನು ಕಂಡು ಆ ಕುರುಬನೂ ಹಾಗೂ ಅವನ ತಾಯಿಯೂ ಸಹ ಅತೀವ ದುಃಖತಪ್ತರಾದರು. ಹೆಂಡತಿಯನ್ನೇ ತದೇಕಚಿತ್ತದಿಂದ ನೋಡುತ್ತಾ ವಸುಂಧರಾ ಎಂದು ಒಮ್ಮೆ ಜೋರಾಗಿ ಚೀರಿ – ಅವಳ ಮೇಲೆ ಹಾಗೆಯೇ ಹÀÅಸೇನಿ ಒಂದಾದನು. ಈ ವಿಷಯ ಸುತ್ತಮುತ್ತಲಿನ ಗ್ರಾಮಗಳಿಗೆ ಬೆಳಕಿನ ವೇಗಕ್ಕಿಂತಲೂ ಮುಗಿಲಾಗಿ ಹಬ್ಬಿ, ಅಲ್ಲಿಗೆ ಮಾವಿನಹಳ್ಳಿಯ ಮುಸ್ಲಿಂ ಬಂಧುಗಳು, ವಿದ್ಯಾನಗರದ ಗೌಡ ದಂಪತಿಗಳು, ಮುತ್ತೂರಿನ ಬೇಡ ದಂಪತಿಗಳು ಹಾಗೂ ನೂರಾರು ಜನಸ್ತೋಮ ಸೇರಿತು. ಎಲ್ಲರ ಸಮ್ಮುಖದಲ್ಲಿಯೇ ಅವರಿಬ್ಬರ ಧರ್ಮ ಬೇರೆಯಾದರೂ ಒಂದೇ ಗೋರಿಯಲ್ಲಿಯೇ ಮತ್ತೆ ಒಂದಾದರು. ಆದರೆ ಅವರೆಲ್ಲರ ಶೋಕ ಮಾತ್ರ ಕತ್ತಲಾವರಿಸಿದಂತೆ ಮಂಜಾಯಿತು.
ಕೊಟ್ರೇಶ್. ಎಸ್. ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ,
ಹಾಸನ-573201
9483470794
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ