ಶಾಲೆ ಸಮಾಜದ ಪ್ರತಿಬಿಂಬ. ಸ್ವಸ್ಥ ಸಮಾಜದ ಭಾಗವಾಗಬಲ್ಲ ಅದರ ಒಲವು ನಿರೀಕ್ಷೆಗಳಿಗೆ ತಕ್ಕಂತಹ, ಅದರ ಮೌಲ್ಯ - ಸಂಸ್ಕøತಿಯನ್ನು ಮೈಗೂಡಿಸಿಕೊಂಡು, ಜವಾಬ್ದಾರಿಯುತ, ಸುಸಂಸ್ಕøತ ವ್ಯಕ್ತಿತ್ವ ನಿರ್ಮಾಣಕ್ಕೆ ಶಾಲೆಯೆಂಬ ವೇದಿಕೆಯಲ್ಲಿ ಶಿಕ್ಷಕ, ಮಗು ಮತ್ತು ಶಿಕ್ಷಣ ಎಂಬ ಮೂರು ಘಟಕಗಳ ನಡುವೆ ನೆಡೆಯುವ ಪರಸ್ಪರ ಸಂವಹನ ಹಾಗೂ ಆಗುಹೋಗುಗಳ ತಿಳುವಳಿಕೆ ನಿರಂತರವಾಗಿ ಬದಲಾಗುವ ಪ್ರಕ್ರಿಯೆಗಳಿಗೆ ತೊಡಗಿಸಿಕೊಳ್ಳುವಿಕೆ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಈ ಹಿನ್ನೆಲೆಯಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿ ತಮ್ಮ ಅನುಭವದ ಆಧಾರದ ಮೇಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾಣೆಗಳು, ಅದರ ಮೂಲಕ ಮಕ್ಕಳ ಕಲಿಕೆ ಮೇಲಾಗುತ್ತಿರುವ ಪ್ರಭಾವದ ಬಗ್ಗೆ ಶೈಕ್ಷಣಿಕ ಲೇಖನಗಳನ್ನೊಳಗೊಂಡ ಕೃತಿಯಾದ ‘ಶಿಕ್ಷಕ, ಮಗು ಮತ್ತು ಶಿಕ್ಷಣ’ದಲ್ಲಿ ಶ್ರೀಯುತ ಕೊಟ್ರೇಶ್ ಎಸ್. ಉಪ್ಪಾರವರು ಮನೋಜ್ಞವಾಗಿ ಬಿಂಬಿಸಿದ್ದಾರೆ.
‘ಶಿಕ್ಷಕ, ಮಗು ಮತ್ತು ಶಿಕ್ಷಣ’ ದ ಅಂಗಳದಲ್ಲಿ ಶಿಕ್ಷಕ ಎಂದರೆ ಹೇಗಿರಬೇಕು ? ಮಗು ಕೇಂದ್ರಿತ ಶಿಕ್ಷಣವನ್ನು ನೀಡುವ ಬಗೆ ಹೇಗೆ ? ಪ್ರತಿ ಮಗುವಿನಲ್ಲಿ ಕಲಿಕೆಯನ್ನು ಅಂತರ್ಗತ ವೂಡಿಸುವ ಕಲೆಯನ್ನು ಶಿಕ್ಷಕ ಹೇಗೆ ಕಲಿಯಬಹುದು ? ಆ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೇಗೆ ತಮ್ಮ ಕೊಡುಗೆಯನ್ನು ಸಲ್ಲಿಸಬಹುದು ಎಂಬುದರ ಬಗ್ಗೆ ಶ್ರೀಯುತ ಲೇಖಕರು ತಮ್ಮ ದೂರಗಾಮಿ ಚಿಂತನೆಯ ಮೂಲಕ ಕಲ್ಪನೆಗೆ ಅವಕಾಶ ನೀಡಿದ್ದಾರೆ.
ಹಿಂದಿನ ಸಾಂಪ್ರದಾಯಿಕ ಬೋಧನೆಯಲ್ಲಿದ್ದಂತೆ ಒಂದು ಪಾಠವನ್ನು ಪಠ್ಯಪುಸ್ತಕವನ್ನೇ ಮೂಲಾಧಾರವಾಗಿಟ್ಟುಕೊಂಡು ಬೋಧಿಸಿದರೆ ಇಂದು ಅದು ಪರಿಪೂರ್ಣ ಬೋಧನೆಯಾಗುವುದಿಲ್ಲ. ಕಾರಣ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ. ಇದಕ್ಕೆ ತಕ್ಕಂಥೆ ಶಿಕ್ಷಕರು ಪಾಠಕ್ಕೆ ಪೂರಕವಾಗಿ ಏನೆಲ್ಲಾ ತಯಾರಿ ಮಾಡಿಕೊಳ್ಳುವುದರೊಂದಿಗೆ ಇಂದಿನ ವರ್ತಮಾನದ ಮಗುವು ಅರ್ಥೈಸಿಕೊಳ್ಳುವ ರೀತಿಯಲ್ಲಿ ಶಿಕ್ಷಕರು ತಮ್ಮ ಬೋಧನೆಯಲ್ಲಿ ಕಲಿಕಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂಬುದನ್ನು ‘ಬೋಧನೆಗೂ ಮುನ್ನ ಕೊಠಡಿ ಹೇಗಿರಬೇಕು’ ? ‘ರಚನಾತ್ಮಕ ಕಲಿಕೆಗೆ ಕೆಲವು ಬೋಧನಾ ವಿಧಾನಗಳು’ ಎಂಬ ಲೇಖನಗಳಲ್ಲಿ ಬಿಂಬಿಸಿದ್ದಾರೆ.
‘ಶಾಲೆಗೆ ಬರುವ ಮಕ್ಕಳು ಎಷ್ಟು ಮುಖ್ಯವೋ ಶಾಲೆಗೆ ಬಾರದ ಒಂದು ಮಗುವು ಕೂಡ ಅಷ್ಟೇ ಮುಖ್ಯ. ಅದೇ ರೀತಿ ಶಾಲೆಗೆ ಬಂದು ಕಲಿಯುವ ಮಕ್ಕಳು ಎಷ್ಟು ಮುಖ್ಯವೋ Pಲಿಯದಿರುವ ಒಂದು ಮಗುವು ಕೂಡ ಅಷ್ಟೇ ಮುಖ್ಯ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕಡ್ಡಾಯ ಶಿಕ್ಷಣದ ಮಸೂದೆಯಂತೆ ಶಿಕ್ಷಕರು ಮಕ್ಕಳನ್ನು ಶಿಕ್ಷಿಸದೆ ಶಿಕ್ಷಣ ನೀಡಬೇಕಾಗಿದೆ. ಈ ವಿಚಾರದಲ್ಲಿ ಪೋಷಕರಿಗಿರುವ ಅಜ್ಞಾನದಂತೆಯೇ, ಮನೋ ವಿಜ್ಞಾನವನ್ನು, ಓದಿದ್ದರೂ ಅದನ್ನು ವೃತ್ತಿಯಲ್ಲಿ ಸಮರ್ಥವಾಗಿ ಅಳವಡಿಸುವಲ್ಲಿ ವಿಫಲವಾಗಿರುವ ಶಿಕ್ಷಕರ ಅಜ್ಞಾನವು ಒಂದು ಕಾರಣ ಎಂಬುದನ್ನು ‘ಮಗು, ಮಾನವೀಯ ಮೌಲ್ಯಗಳು ಮತ್ತು ಶಿಕ್ಷಕ ’, ಮಕ್ಕಳಿಗೆ ಶಿಕ್ಷೆ ಕೊಡುವುದು ಸರಿಯೇ’ ‘ಶಿಸ್ತು ಉತ್ತಮ ಶಾಲೆಯ ಕೈಗನ್ನಡಿ’ ಎಂಬ ಲೇಖನಗಳಲ್ಲಿ ಮೇಲಿನ ಅಂಶಗಳನ್ನು ಲೇಖಕರು ಶಿಕ್ಷಕಬಂಧುಗಳಿಗೆ, ಓದುಗರಿಗೆ ಅರ್ಥೈಸುವಲ್ಲಿ ಸಫಲರಾಗಿದ್ದಾರೆ.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು -2005ರಲ್ಲಿ ಪ್ರಾಥಮಿಕ ತರಗತಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಜ್ಞಾನಿಕ ಆಲೋಚನೆಗಳನ್ನು ಮಕ್ಕಳಲ್ಲಿ ಬೆಳಸುವ ಮೂಲಕ ಮಗುವಿನ ಜೀವನಕ್ಕೆ ಹತ್ತಿರವಿರುವ ಶಿಕ್ಷಣವನ್ನು ನೀಡಬೇಕೆಂಬ ಅಂಶವನ್ನು ಒಳಗೊಂಡಿದೆ. ಈ ಅಂಶಗಳನ್ನೂ ಸಾಧಿಸಲು ವಿವಿಧ ಹಂತಗಳಲ್ಲಿ ಮಗುವಿಗೆ ಕಲಿಸಬೇಕಾದ ಪರಿಕಲ್ಪನೆಗಳು ಉದ್ದೇಶಗಳು ಬೋಧನಾ ವಿಧಾನ, ಮೌಲ್ಯಮಾಪನಗಳ ಬಗ್ಗೆ ಶಿಕ್ಷಕ, ಮಗು ಶಿಕ್ಷಣ ಕೃತಿಯಲ್ಲಿ ಕೆಲವು ಲೇಖನಗಳಲ್ಲಿ ಶಿಕ್ಷಕರಿಗೆ ಒಂದಷ್ಟು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಲೇಖಕರು ಸಂಧರ್ಬೋಚಿತವಾಗಿ ವಿವರಿಸಿದ್ದಾರೆ.
ಮಗುವಿನ ಸರ್ವಾಂಗೀಣ ಪ್ರಗತಿಗೆ ಪಠ್ಯ ಮತ್ತು ಪಠ್ಯೇತರ ವಿಷಯಗಳೆರಡರಲ್ಲಿಯೂ ಅವಕಾಶ ನೀಡಿದಾಗ ಪ್ರತಿ ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಸಹಕಾರಿಯಾಗುತ್ತದೆ. ಇದಕ್ಕೆ ಪೂರಕವಾಗಿ ಇಲಾಖೆಯು ತನ್ನ ಯೋಜನಾ ಕಾರ್ಯಕ್ರಮದಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಉಧಾ - ಪ್ರತಿಭಾಕಾರಂಜಿ, ಚಿಣ್ಣರ ಜಿಲ್ಲಾದರ್ಶನ ಇವುಗಳಿಗೆ ಪೂರಕವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಶಾಲಾಹಂತದಲ್ಲಿ ಸಂಘಗಳನ್ನು ಪ್ರಾರಂಭಿಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಶಿಕ್ಷಕರು ತಮ್ಮ ಶ್ರಮದ ಮೂಲಕ ಮಗುವಿನ ಸರ್ವಾಂಗೀಣ ಪ್ರಗತಿಗೆ ಸಹಕರಿಸಲು ‘ಶಾಲೆಗಳಲ್ಲಿ ವಿಷಯ ಸಂಘಗಳು’ ಲೇಖನ ಸಹಕಾರಿಯಾಗಿದೆ.
ಶಿಕ್ಷÀಕರು ಶೈಕ್ಷಣಿಕ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಾರೆ. ತಮ್ಮ ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳುತ್ತಾರೆ. ಆದರೆ ಬರಹ ರೂಪದಲ್ಲಿ ದಾಖಲಿಸುವುದು ಕಡಿಮೆ. ‘ಮಾತು ಸಾಯುತ್ತದೆ. ಬರಹ ಜೀವ ಕೊಡುತ್ತದೆ’ ಎಂಬ ಮಾತಿನಂತೆ ಶಿಕ್ಷಕರು ತಮ್ಮ ಅನುಭವಗಳಿಗೆ ಜೀವ ಕೊಡುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ತಮ್ಮ ಶೈಕ್ಷಣಿಕ ಅನುಭಗಳನ್ನು ಶ್ರೀಯುತ ಕೊಟ್ರೇಶ್ ಎಸ್. ಉಪ್ಪಾರ್ ರವರು ಹಿಮ್ಮಾಹಿತಿ ನೀಡುವುದರ ಮೂಲಕ ಪ್ರತಿ ಶಿಕ್ಷಕರು ಬೋಧನಾ – ಕಲಿಕಾ -ಪ್ರಕ್ರಿಯೆಯನ್ನು ಬಲಪಡಿಸುವುದರ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಹೇಗೆ ಒತ್ತು ನೀಡಬಹುದು ಎಂಬುದನ್ನು ತಮ್ಮ ‘ಶಿಕ್ಷಕ ಮಗು ಮತ್ತು ಶಿಕ್ಷಣ’ ಈ ಕೃತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಇಂತಹ ಒಂದು ಅತ್ಯುತ್ತಮ ಕೃತಿಯನ್ನು ಶಿಕ್ಷಣ ಇಲಾಖೆಗೆ ಹಾಗೂ ಸಾರ್ವಜನಿಕರಿಗೆ ನೀಡಿದ ಲೇಖಕರಿಗೆ ಧನ್ಯವಾದಗಳು. ಇವರ ಲೇಖನಿಯಿಂದ ಇದೇ ರೀತಿ ಉತ್ತಮೋತ್ತಮ ಕೃತಿಗಳು ಹೊರಬರಲಿ ಎಂದು ಮನಸಾರೆ ಹಾರೈಸುತ್ತೇನೆ.
ಭಾನುಮತಿ ಟಿ.ವಿ.
ವಿಷಯ ಪರಿವೀಕ್ಷಕರು
ಉಪನಿರ್ದೇಶಕರ ಕಛೇರಿ
ಸಾ.ಶಿ. ಇಲಾಖೆ.
ಹಾಸನ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ