ಸೋಮವಾರ, ಜುಲೈ 21, 2014

ಪರಿಶುದ್ಧ ನೈತಿಕತೆಯ ಭೌದ್ಧರ ಕಾಲದ ಶಿಕ್ಷಣ- ಕೊಟ್ರೇಶ್ ಎಸ್.ಉಪ್ಪಾರ್




ಭಾರತವು ಉತ್ಕೃಷ್ಠ ಸಂಸ್ಕೃತಿ, ಉಚ್ಚ ಮೌಲ್ಯಗಳ ಬೇರೆ ಬೇರೆ ಧರ್ಮಗಳ ಬೀಡು, ಕ್ರಿ.ಪೂ 6ನೇ ಶತಮಾನದಲ್ಲಿ ವೈಧಿಕ ಧರ್ಮದ ನಿರೀಕ್ಷೆಯಲ್ಲಿದ್ದರು. ಇಂಥ ಸುಸಂಧರ್ಭದಲ್ಲಿ ಅವತಾರವೆತ್ತಿ ಬಂದ ಸಿದ್ದಾರ್ಥ, ಗೌತಮ ಬುದ್ದನಗಿ ಜನಸಾಮಾನ್ಯರಿಗೂ ಒಗ್ಗಬಹುದಾದದ ಸರಳ ತತ್ವ  ಮತ್ತು ಆಚರಣೆಗಳ ಮೂಲಕ ಮುಕ್ತಿಯನ್ನು ಕಾಣಬಹುದಾದ ಹೊಸ ಧರ್ಮವೊಂದನ್ನು ಹುಟ್ಟಿ ಹಾಕಿದನು. ಅದುವೇ ಬೌದ್ಧ ಧರ್ಮವೆಂದು ಭಾರತದಾದ್ಯಾಂತ ಕಾಲ ಕ್ರಮೇಣವಾಗಿ ಸಮುದ್ರದಾಚೆಯ ನಾಡುಗಳಲ್ಲಿ ಪಸರಿಸಿತು. ಅಂದಿನಿಂದ ಕ್ರಿ.ಶ.7ನೇ ಶತಮಾನದವರೆಗೆ ಭೌದ್ಧ ಸಂಪ್ರದಾಯಗಳನ್ನು ಆಧರಿಸಿ ಮೂಡಿ ಬಂದ ಭಾರತದ ಶಿಕ್ಷಣ ಕ್ರಮವನ್ನು ಭೌದ್ಧ ಕಾಲದ ಶಿಕ್ಷಣವೆಂದು ಹೆಸರಿಸಲಾಗಿದೆ.
ಗೌತಮ ಬುದ್ಧನು ಉಪದೇಶಸಿದ ತತ್ವ ಆಚರಣೆಗಳ ಸರಳತೆ ಪ್ರ್ರಾಮಾಣೆಕ ಗುಣಗಳಿಂದಾಗಿ ಅವನ ಕೀರ್ತಿ, ಬೇಗ ವ್ಯಾಪಿಸಿತಲ್ಲದೇ ಧರ್ಮಾನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಿತು. ‘ಅಷ್ಠಾಂಗ ಮಾರ್ಗ’ಗಳಿಂದಾಗಿ ಮಾನವನ ಜೀವನದ ಪರಿಶುದ್ದತೆಗೆ ಅವಕಾಶ ದೊರೆಯಿತು ದೇವರ ಪೂಜೆಗಳನ್ನಾಗಲೀ, ತಪಸ್ಸನ್ನಾಗಲೀ ಒಂದನ್ನು ಬೆಂಬಲಿಸಲಿಲ್ಲ. ಬದಲಾಗಿ ದಯೆ, ಅಂತ:ಕರಣೆ, ಸನ್ಮಾರ್ಗದ ಸತ್ಯಾಂಶಗಳನ್ನು ಶಿಫಾರಸ್ಸು ಮಾಡಿ ಸನ್ನಡೆತೆಯ ಮೂಲಕ ನಿರ್ವಾಣ ಹೊಂದುವ ಮಾರ್ಗವನ್ನು ಸಾಧರಪಡಿಸಿದನು. ಅಷ್ಟೇ ಏಕೆ? ಇನ್ನೊಬ್ಬರ ಮಾರ್ಗದರ್ಶನಕ್ಕಾಗಿ ಹಂಬಲಿಸುವ, ಕಾಯ್ದುಕುಳಿತುಕೊಳ್ಳುವ ಪ್ರವೃತ್ತಿಯನ್ನು ಅವನು ಒಪ್ಪಲಿಲ್ಲ. ಅಂತೆಯೇ ಬುದ್ಧನು ಒಂದೆಡೆ ಉಪದೇಶಿಸಿದ್ದೇನೆಂದರೆ “ಃe ಥಿouಡಿseಟಜಿ ಥಿouಡಿ ಟighಣ ಠಿiಟಟeಡಿ ಚಿಟಿಜ ಣಚಿಞe ಥಿouಡಿ oತಿಟಿ guiಜeಟಿಛಿe ಚಿs ಟಿo ಠಿಡಿಚಿಛಿಣiಛಿಚಿಟ goಜ ತಿiಟಟ give ಥಿou muಞಣi oಡಿ ಟಿiಡಿvಚಿಟಿಚಿ” ಎಂಬ ಖಚಿತವಾದ ನಿಲುವಿನೊಂಗೆ ಜನರ ಮೌಡ್ಯತೆ ನಿರ್ಮೂಲನಕ್ಕೆ ಪುರೋಹಿತಶಾಹಿಯ ಅಧಿಪತ್ಯಕ್ಕೆ ಅಂತ್ಯ ಹಾಡಲು ಯತ್ನಿಸಿದ ಹಿರಿಮೆ ಬುದ್ಧನದು. ಈ ರೀತಿಯ ಮಹಾನ್ ಪುರುಷನೊಬ್ಬನ ತತ್ಪುಪದೇಶ, ಆಚರಣೆ, ಅಭಿಪ್ರಾಯ, ಸಿದ್ಧಾಂತಗಳನ್ನು ಆಧರಿಸಿ ಬೆಳೆದು ಬಂದಿದ್ದನ್ನೇ ಬೌದ್ಧರ ಶಿಕ್ಷಣವೆಂದು ಕರೆಯಲಾಗಿದೆ. ಬುದ್ಧನ ನಂvರ ಆ ಧರ್ಮದಲ್ಲಿ ಮೂಡಿಬಂದ ಕೆಲ ಮಾರ್ಪಾಡುಗಳನ್ನು ಆ ಶಿಕ್ಷಣವು ಮೈಗೂಡಿಸಿಕೊಂಡು ಬೆಳೆದು ಬಂದಿತು.
ಜೀವನವು ದು:ಖದಿಂದ ಕೂಡಿದೆ; ಆಸೆಯೇ ದು:ಖಕ್ಕೆ ಮೂಲಕಾರಣ; ಪರಿಶುದ್ಧ ಜೀವನದ ಮೂಲಕ ಆಸೆಯನ್ನು ಮೆಟ್ಟಿನಿಂತು ಮುಕ್ತಿ ಅಥವಾ ನಿರ್ವಾಣವನ್ನು ಹೊಂದುವುದರಿಂದ ಜೀವನದ ಸಾರ್ಥಕತೆ, ಯಜ್ಞಯಾಗಗಳಿಗೆ ನೀಡುವ ಪ್ರಾಣಬಲಿ, ಮಾಡುವ ದುಂದುವೆಚ್ಚಗಳ ಪುರುಷಾರ್ಥವನ್ನು ಪ್ರಶ್ನಿಸಿದ್ದಲ್ಲದೇ ಅಲೌಕಿಕ ಭಾವನೆಗಳಿಗಿಂತ ಪಡೆದು ಬಂದಿರುವ ಲೌಕಿಕ ಜೀವನವನ್ನು ಪರಿಶುದ್ದತೆಯಿಂದ ನಿರ್ವಹಿಸಿ ಪಾವನರಾಗಬೇಕಾದ ಅವಶ್ಯಕತೆಯನ್ನು ಇದು ಪ್ರತಿಪಾದಿಸಿತು, ವರ್ಣವ್ಯವಸ್ಥೆಯನ್ನು ಬೌದ್ಧ ಧರ್ಮವು ವಿರೋಧಿಸಿತು. ಹುಟ್ಟಿದ ಮಾತ್ರಕ್ಕೆ ವರ್ಣದ ಹಣೆಪಟ್ಟಿ ಹಚ್ಚಿದ ಪ್ರಯೋಜನವನ್ನು ಪ್ರಶ್ನಿಸಿ ಬದುಕಿನ ಬೆಳವಣಿಗೆಯುದ್ದಕ್ಕೂ ನÀಡೆಸುವ ಸರಳ ಜೀವನವನ್ನು ಬೆಂಬಲಿಸಲಾಯಿತು. ಶಿಕ್ಷಣ ಯಾರೊಬ್ಬರ ಸ್ವತ್ತಲ್ಲ, ಅದು ಸಾರ್ವತ್ರಿಕವೆಂದು ಸಾರಿ, ಅದುವರೆಗೆ ಜ್ಞಾನಾರ್ಜನೆ ಮತ್ತು ಶಿಕ್ಷಣಗಳು ಬ್ರಾಹ್ಮಣರಿಗೆ ಮಾತ್ರ ಮೀಸಲು ಇದ್ದುದನ್ನು ಅಸಮರ್ತಿಸಿತು. ಸನ್ಯಾಸಿಗಳಾಗಬೇಕಾದವರು ಹಿಂದೂ ಧರ್ಮದಲ್ಲಿ ಈ ಮೊದಲಿನಂತೆ ಆಶ್ರಮ  ಧರ್ಮ ಪದ್ದತಿಯನ್ನು ಅನುಸರಿಸದೇ ಬಾಲ್ಯದಿಂದಲೇ ಮನೆ ಮಠ ತೊರೆದು ಇಂದ್ರಿಯ ನಿಗ್ರಹ ಮತ್ತು ಸರಳ ಜೀವನದೊಂದಿಗೆ ಶಿಕ್ಷಣದ ಮೂಲಕ ಜ್ಞಾನಾರ್ಜನೆ ಮಾಡುತ್ತಾ ನಿರ್ವಾಣವನ್ನು ಕಂಡುಕೊಳ್ಳುವ ಪದ್ದತಿಯನ್ನು ಬೌದ್ಧ ಧರ್ಮವು ಪ್ರಸ್ತುತಪಡಿಸಿತು.
ಬೌದ್ಧ ಧರ್ಮಕ್ಕೆ ಸಂಬಂಧಿಸಿದಂತೆ ಪ್ರಮುಖವಾಗಿ ಎರಡು ಸಂಸ್ಥೆಗಳು ಅಸ್ಥಿತ್ವದಲ್ಲಿ ಇದ್ದವು ಅವುಗಳೆಂದರೆ:-
1) ಸಂಘಗಳು
2) ವಿಹಾರಗಳು
ಇವೆರಡು ಮೂಲತಃ  ಧಾರ್ಮಿಕ ಸಂಸ್ಥೆಗಳಾಗಿದ್ದರೂ ಧಾರ್ಮಿಕ ಕಾರ್ಯಗಳ ಜೊತೆಗೆ ಕೆಳಗಿನ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದ್ದಿತು.
1) ಸಂಘ ಮತ್ತು ವಿಹಾರಗಳು ಶಿಕ್ಷಣವನ್ನು ನೀಡಬೇಕಾಗಿದ್ದಿತು.
2) ಸಾಂಸ್ಕøತಿಕ ಕೇಂದ್ರಗಳಾಗಿಯೂ ಕೆಲಸ ನಿರ್ವಹಿಸಬೇಕಾಗಿದ್ದಿತು.
   ವೇದಗಳ ಕಾಲದ ಗುರುಕುಲಗಳ ಕಾರ್ಯಗಳನ್ನೇ ಇವುಗಳು ಕೂಡ ಮಾಡಬೇಕಾಗಿತ್ತೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸಂಘ ಮತ್ತು ವಿಹಾರಗಳಲ್ಲಿ ಕಟ್ಟು ನಿಟ್ಟುಗಳ ಆಧಾರದ ಮೇಲೆ ಬೌದ್ಧರ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಪ್ರವೇಶ ನೀಡಲಾಗುತಿತ್ತು. ಆ ಕರಾರುಗಳು ಹೀಗಿದ್ದವು.
1) ಮಗು ಶಿಕ್ಷಣ ಸಂಸ್ಥೆಯನ್ನು ಸೇರಲು ತನ್ನ ತಂದೆ ಮತ್ತು ತಾಯಿ ಇಲ್ಲದೇ ಪೋಷಕರ ಪರವಾನಿಗೆ ಕಡ್ಡಾಯವಾಗಿತ್ತು.
2) ಉತ್ತಮ ನಡತೆ ಮತ್ತು ಪರಿಶುದ್ದ ನೈತಿಕತೆ.
3) ತೀವ್ರ ಅನಾರೋಗ್ಯ ಹಾಗೂ ಮಾರಕ ರೋಗಗಳು ಇರಕೂಡದು.
4) ಯಾವುದೇ ವಿವಿಧ ಜವಬ್ದಾರಿಯುತ ಹುದ್ದೆಯಲ್ಲಿದ್ದರೆ ಅದರಿಂದ ಮುಕ್ತರಾಗಬೇಕಿತ್ತು.
5) ಮಗು ತುಂಬಾ ವಿಶಾಲ ಮನಸ್ಸನ್ನು ಹೊಂದಿರಬೇಕಾಗಿದ್ದಿತು.


ಪಬ್ಬಜ (Pಚಿbbಚಿರಿಚಿ—ಜಿiಡಿsಣ oಡಿಜiಟಿಚಿಣioಟಿ)
ಮೇಲೆ ನಮೂದಿಸಿರುವ ಅರ್ಹತೆಗಳೊಂದಿಗೆ ಮಗು ಶಿಕ್ಷಣ ಸಂಸ್ಥೆಯನ್ನು ಸೇರುವ ಮುನ್ನ ಒಂದು ಸಮಾರಂಭ ನಡೆಯುತಿತ್ತು. ಅದನ್ನು ಈ ಕಾಲದಲ್ಲಿ ‘ಪಬ್ಬಜ’ ಎಂದು ಕರೆಯುತಿದ್ದರು. ಪಬ್ಬಜ ಎಂದರೆ ಹೊರಹೋಗು ಎಂಬರ್ಥವಿದೆ. ಅಂದರೆ ಶಿಕ್ಷಣದ ಬಯಕೆಯೊಂದಿಗೆ ಯಾವುದಾದರೊಂದು ಸಂಘ/ವಿಹಾರಕ್ಕೆ ತೆರಳಿ  ಓರ್ವ ಸನ್ಯಾಸಿಯ ಬಳಿ ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಭಿನ್ನವಿಸಿಕೊಳ್ಳುತ್ತಿದ್ದನು. ಆತನ ಒಪ್ಪಿಗೆ ದೊರೆತ ನಂತರ ಮನೆಯನ್ನು ತೊರೆದು ಸಂಘವನ್ನು ಸೇರಬಹುದಾಗಿತ್ತು. ಎಂಟು ವರ್ಷ ತುಂಬಿದ ಮಗು ಪಬ್ಬಜ ಆಚರಣೆಯ ಸಂದರ್ಭದಲ್ಲಿ ಮಗು ತಲೆ ಬೋಳಿಸಿಕೊಂಡು ಹಳದಿ ಬಟ್ಟೆಯನ್ನು ಧರಿಸಿ:-
“ಬುದ್ಧಂ ಶರಣಂ ಗಚ್ಚಾಮಿ
ಸಂಘಂ ಶರಣಂ ಗಚ್ಚಾಮಿ
ಧರ್ಮಂ ಶರಣಂ ಗಚ್ಚಾಮಿ” 
“I ಣಚಿಞe ಡಿeಜಿuse ತಿiಣh ಃuಜಜhಚಿ, I ಣಚಿಞe ಡಿeಜಿuse ತಿiಣh sಚಿಟಿghಚಿ ಚಿಟಿಜ I ಣಚಿಞe ಡಿeಜಿuse ತಿiಣh ಡಿeಟigioಟಿ” ಎಂಬ ವಚನವನ್ನು ಉಚ್ಚರಿಸಿ ತನ್ನ ಬದ್ದತೆಯನ್ನು ದೃಢಮನಸ್ಸಿನಿಂದ ಪ್ರಕಟಪಡಿಸುವುದರ ಮೂಲಕ ತಾನು ಬುದ್ಧನಿಗೆ, ಸಂಘಕ್ಕೆ ಹಾಗು ಧರ್ಮಕ್ಕೆ ಬದ್ಧನೆಂದೂ, ವಿಧೇಯನಾಗಿರುತ್ತೇನೆ ಎಂದು ಸ್ಪಷ್ಠಪಡಿಸುತ್ತಿದ್ದನು. ಪ್ರವೇಶದಲ್ಲಿ ಜಾತಿಯ ಪ್ರಶ್ನೆಯೇ ಇದ್ದಿಲ್ಲ. ಬುದ್ದನೇ ಹೇಳುವಂತೆ ಎಲ್ಲ ನದಿಗಳು ಹರಿದು ಕೊನೆಗೆ ಸಮುದ್ರ ಸೇರುವಂತೆ, ಎಲ್ಲಾ ವ್ಯಕ್ತಿಗಳು ಕೊನೆಯಲ್ಲಿ ಹುತಾತ್ಮರಾಗುತ್ತಾರೆಂದು ತೀರ್ಮಾನಿಸಿದ್ದನು.
ಪಬ್ಬಜ ಆಚರಣೆಯೊಂದಿಗೆ ಸಂಘ ಅಥವಾ ವಿಹಾರವನ್ನು ಸೇರಿದ ವಿದ್ಯಾರ್ಥಿಯನ್ನು ‘ಸಿದ್ಧಿ ವಿಹಾರಕ’ ಎಂದು ಕರೆಯಲಾಗುತ್ತಿತ್ತು. ಜೊತೆಗೆ ಕೆಲವು ಕಟ್ಟು ನಿಟ್ಟಿನ ನೇಮಗಳನ್ನು ಪಾಲಿಸಬೇಕಾಗಿತ್ತು. ಅವುಗಳೆಂದರೆ ಹಿಂಸೆಯನ್ನು ಮಾಡದಂತೆ, ಪರರನ್ನು ನಿಂದಿಸದಂತೆ, ಬೇರೆಯವರಿಂದ ಏನನ್ನು ಸ್ವೀಕರಿಸದಂತೆ, ಕೆಟ್ಟ ನಡತೆಯಿಂದ ದೂರವಿರುವಂತೆ, ಸುಳ್ಳು ಹೇಳದಂತೆ, ಮಾದಕ ವಸ್ತುಗಳನ್ನು ಸೇವಿಸದಂತೆ, ವೇಳೆಯಿಲ್ಲದ ವೇಳೆಯಲ್ಲಿ ಆಹಾರ ಸೇವಿಸದಂತೆ, ಅಲ್ಲದೇ ವೈಭವಯುತ ಜೀವನದಿಂದ ದೂರವಿರುವ ಇತ್ಯಾದಿ ಕಟ್ಟಳೆಗಳನ್ನು ಪಾಲಿಸಬೇಕಾಗಿತ್ತು.
ಶೈಕ್ಷಣೆಕ ಗುರಿಗಳು

1 ಮಾನವೀಯ ಗುಣಗಳ ಅಭಿವೃದ್ದಿ:- ವಿದ್ಯಾರ್ಥಿಗಳ ಜೀವನದ ಅಮೂಲ್ಯ ಮೌಲ್ಯಗಳಾದ ಸತ್ಯ,  ಶಾಂತಿ,ಸಹಕಾರ,ಸದ್ವಿವೇಕ, ಸನ್ನಡತೆ ಮುಂತಾದವುಗಳ ಗ್ರಹಿಕೆಯೊಂದಿಗೆ ಅವುಗಳು ಅಳವಡಿಸಲ್ಪಡಬೇಕೆಂಬ ಆಶಯವನ್ನು ಇವರು ಹೊಂದಿದ್ದರು.ಪ್ರಾಣಿ ಹಿಂಸೆಯನ್ನು ಅರಿತು ಪ್ರೀತಿಯಿಂದ ಬಾಳುವಂತ ತರಬೇತಿಸಲಾಗುತಿತ್ತು.
  2 ಉತ್ತಮ ವರ್ತನೆಗಳ ನಿರ್ಮಾಣ:-ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರಗÀು ಬರುವುದು ಅವನ ಪರಿಶುದ್ಧ ವರ್ತನೆಯಿಂದ ಅದಕ್ಕಾಗಿ ಶಿಸ್ತು ಬದ್ಧ ಮಾನಸಿಕ ಮತ್ತು ಶಾರೀರಕ ಬೆಳವಣಿಗೆಯ ಜೊತೆಗೆ ಧೈವಭಕ್ತಿ ಸದಾಚಾರ, ಸಂಪನ್ನ, ಸಚ್ಛಾರಿತ್ರ್ಯ ಹೊಂದಿದ ವ್ಯಕ್ತಿಗಳು ಮಾತ್ರ ಸಂಘದ ಮೂಲಕ ನಾಡಿನ ಶ್ರೇಯೋಭಿವೃದ್ಧಿಗೆ ಶ್ರಮಿಸಬಲ್ಲರು ಎಂಬುದನ್ನು ಮನಗಂಡು ಆ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು.
3 ಧಾರ್ಮಿಕ ವಿಧೇಯತೆ:-ಪ್ರಾಚೀನ ಭಾರತದ ಶಿಕ್ಷಣವು ಧರ್ಮದ ಗಾಢ ಪ್ರಭಾವದಲ್ಲಿ ಬೆಳೆದು ಬಂದಿತ್ತೆಂಬುದನ್ನು ಈಗಾಗಲೇ ಗಮನಿಸಿದ್ದೇವೆ. ಬೌದ್ಧರ ಕಾಲವೇನೂ ಇದಕ್ಕೆ ಹೊರತಲ್ಲ, ಧರ್ಮದ ಸದಾಶಯಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತಿದ್ದರು, ಧರ್ಮ, ಸಂಘ ಮತ್ತು ಬುದ್ದಂ, ಶರಣಂ, ಗಚ್ಚಾಮಿ ಎನ್ನುವಲ್ಲಿ ಧಾರ್ಮಿಕ ವಿಧೇಯತೆಯ ಕಲ್ಪನೆ ಮನದಟ್ಟಾಗುತ್ತದೆ. ಶಿಕ್ಷಣವು ಜೀವನ ಮತ್ತು ಧರ್ಮದೊಂದಿಗಿನ ನಿಕಟತೆಯನ್ನು ಚೀನಿಯಾತ್ರಿಕ ಹುಯನೆತ್ಸಾಂಗ್‍ನು “ಃuಜಜisಣ eಜuಛಿಚಿಣioಟಿ ತಿಚಿs ಜಿಚಿಛಿeಜ oಟಿ ಣhe ಚಿssoಛಿiಚಿಣioಟಿ oಜಿ ಟiಜಿe ಚಿಟಿಜ ಡಿeಟigioಟಿ”ಎಂಬುದನ್ನು ಆಧಾರಸಹಿತ ನಿರೂಪಿಸಿದ್ದಾನೆ.
4 ವಿವೇಚನಾ ಶಕ್ತಿಯ ಬೆಳವಣಿಗೆ :- ವಿದ್ಯಾರ್ಥಿಯು ತನ್ನ ಕಲಿಕೆಯಲ್ಲಿ ಮೂಡಿ ಬಂದ ಸಂಶಯ, ಸಮಸ್ಯೆಗಳಿಗೆ ಉಪ ಪ್ರಶ್ನೆಗಳನ್ನು ಹಾಕುವುದರ ಮೂಲಕ ವೈಚಾರಿಕ ಶಕ್ತಿಯನ್ನು ಬೆಳೆಸಿಕೊಳ್ಳಲು ಅವಕಾಶವಿತ್ತು. ಚರ್ಚೆ, ವಾದ, ಪ್ರತಿವಾದಗಳಿಗೆ ಅವಕಾಶವಿದ್ದುದರಿಂದ ಚಿಂತನೆಗೆ ಮುಕ್ತತೆ ಇದ್ದುದರಿಂದ ವಿವೇಚನಾ ಶಕ್ತಿಯು ಹೊರ ಹೊಮ್ಮುತಿತ್ತು.
5 ಸ್ವ ನಿಯಂತ್ರಣ ಮತ್ತು ಶೀಲ ಸಂವರ್ಧನೆ:-ಈ ಎರಡು ಸಂಗತಿಗಳಿಗೆ ಬೌದ್ಧರ ಶಿಕ್ಷಣದಲ್ಲಿ ಹೆಚ್ಚು ಒತ್ತನ್ನು ನೀಡಲಾಗುತ್ತಿತ್ತು. ವಿದ್ಯಾರ್ಥಿ ಶಿಕ್ಷಕರೀರ್ವರು ಇಂದ್ರಿಯ, ನಿಗ್ರಹ, ಏಕಾಗ್ರತೆ, ಇತ್ಯಾದಿ ಕಟ್ಟು ನಿಟ್ಟಾದ ನಿಯಮಗಳ ಮೂಲಕ ಈ ಗುರಿ ಸಾಧಿಸಲು ಯತ್ನಿಸಲಾಗುತ್ತಿತ್ತು.
6 ಸರ್ವತೋಮುಖ ವಿಕಾಸ:- ಬೌದ್ಧರ ಶಿಕ್ಷಣದಲ್ಲಿ ಕೇವಲ ಮಾನಸಿಕ ವಿಕಾಸಕ್ಕೆ ಅವಕಾಶ ಕಲ್ಪಿಸದೇ ಶರೀರಕ, ಆಧ್ಯಾತ್ಮಿಕ, ನೈತಿಕ ಮತ್ತು ವೃತ್ತಿಯಾಧಾರಿತ ಕೌಶಲ್ಯಗಳನ್ನು ನಿರ್ಮಿಸಲು ಪ್ರೋತ್ಸಾಹ ದೊರೆಯುತ್ತಿತ್ತು. ಇದರಿಂದ ಅದರಲ್ಲಿ ಸಮರ್ಥ ವ್ಯಕ್ತಿತ್ವವು ಅಭಿವೃದ್ಧಿಗೊಂಡು ಜೀವನದ ಅಂತಿಮ ಗುರಿಯನ್ನು ತಲುಪಲು ನೆರವಾಗುತಿತ್ತು.
7 ಶಿಕ್ಷಣವು ಎಲ್ಲರಿಗಾಗಿ:- ಬ್ತಾಹ್ಮಣ ಕಾಲದಲ್ಲಿ ಶಿಕ್ಷಣದ ಅವಕಾಶವು ಸೀಮಿತ ವರ್ಗಗಳಿಗೆ ಮಾತ್ರ ಮೀಸಲಾಗಿರದೇ ಎಲ್ಲರಿಗೂ ಮುಕ್ತತೆಯನ್ನು ಒದಗಿಸಿತು. ಸಮಾಜದಲ್ಲಿ ಹಿಂದುಳಿದವರು ಕೂಡ ನಿರ್ಧಿಷ್ಠ ಬಯಕೆಯೊಂದಿಗೆ ಸಂಘ ಮತ್ತು ವಿಹಾರಗಳನ್ನು ಪ್ರವೇಶಿಸಿ ಶಿಕ್ಷಣ ಪಡೆಯಬಹುದಿತ್ತು.  ಅಂದರೆ ಆಕಾಂಕ್ಷಿಗಳೆಲ್ಲರಲ್ಲಿ ಹಾಗೂ ಸಮಾಜದ ಎಲ್ಲಾ ಸ್ತರದವರನ್ನು ಎತ್ತರಿಸುವ ಆಶೆಯು ಇವರದಾಗಿತ್ತು.
“ಪಠ್ಯ ಕ್ರಮ”
ನಿರ್ವಾಣ ಅಥವಾ ಮುಕ್ತಿಯನ್ನು ಪಡೆಯಲು ಆದರ್ಶ ಗುರಿಯನ್ನು ಅಳವಡಿಸಿಕೊಂಡಿದ್ದ ಬೌದ್ದ ಕಾಲದ ಶಿಕ್ಷಣವು ಸಹಜವಾಗಿಯೇ ಧರ್ಮ ಮತ್ತು ಆಧ್ಯಾತ್ಮಿಕ ತಳಹದಿಯ ಮೇಲೆ ಬೆಳೆದು ಬಂದಿತ್ತು. ಬೌದ್ಧ ಭಿಕ್ಷಗಳು ಕೇವಲ ಧಾರ್ಮಿಕ ಪುಸ್ತಕಗಳನ್ನು ಮಾತ್ರ ಅಧ್ಯಯನ ಮಾಡುತ್ತಿದ್ದರು. ತ್ರಿಪಿಟಕಗಳಿಂದ ಧರ್ಮ ಪೀಠಕ್ಕೆ ಸುತ್ತ ಪೀಟಕ, ವಿನಯ ಪೀಟಕಗಳು ಸಂಪೂರ್ಣವಾಗಿ ಸಮಾಜ ಜೀವನವನ್ನು ನಿರ್ಲಕ್ಷಿಸಿದರೆಂದಲ್ಲ. ಮೌರ್ಯ ಮತ್ತು ಗುಪ್ತರ ರಾಜ್ಯಾವಧಿಯಲ್ಲಿನ ಕಲೆ, ಕೃಷಿ, ವಾಣಿಜ್ಯ ವ್ಯಾಪಾರ, ತತ್ವಶಾಸ್ತ್ರ, ಸಮರ ವಿದ್ಯೆ ಅಲ್ಲದೇ ಆರ್ಥಿಕ ಕ್ಷೇತ್ರದಲ್ಲಿಯೂ ಗಣನೀಯ ಪ್ರಗತಿಯನ್ನು ಸಾಧಿಸಿದ್ದನ್ನು ನೋಡಿದರೆ  ಹಾಗೆನಿಸುವುದಿಲ್ಲ. ಹುಯೆನ್‍ತ್ಸಾಂಗನು ತನ್ನ ಸಿ.ಯು.ಕಿ. ಪ್ರವಾಸ ಕಥನದಲ್ಲಿ ಈ ರೀತಿಯಾಗಿ ನಮೂದಿಸಿದ್ದಾನೆ. 
  “ಇಜuಛಿಚಿಣioಟಿ imಠಿoಡಿಣeಜ bಥಿ uಠಿಚಿಜಥಿಚಿs iಟಿ ಣhe mಚಿsಣoಡಿಥಿ is ಠಿಡಿimಚಿಡಿಥಿ eಜuಛಿಚಿಣioಟಿ ಛಿoಟಿsisಣeಜ oಜಿ eಟemeಟಿಣಚಿಡಿಥಿ ಞಟಿoತಿಟeಜge oಜಿ 3 ಖs ಚಿಟಿಜ  ಠಿಡಿiಟಿಛಿiಠಿಟes oಜಿ ಃuಜಜhism ಞಟಿoತಿಟeಜge oಜಿ gಡಿಚಿmmeಡಿ ತಿಚಿs esseಟಿಣiಚಿಟ’’.

 “ಸಂಘ ಮತ್ತು ವಿಹಾರಗಳಲ್ಲಿ ಶಿಕ್ಷಣವು ನೀಡಲ್ಪಡುತಿತ್ತು. ಪ್ರಾಥಮಿಕ ಶಿಕ್ಷಣದಲ್ಲಿ ‘3 ಖS’ ಬುದ್ಧನ ತತ್ವಗಳು ಮತ್ತು ವ್ಯಾಕರಣ ಜ್ಞಾನವನ್ನು ಕಲಿಸಲಾಗುತಿತ್ತು” ಎಂದು ಹೇಳಿರುವಲ್ಲಿ ಪ್ರಾಥಮಿಕ ಶಿಕ್ಷಣದ ಪಠ್ಯ ಕ್ರಮದ ಸಂಕ್ಷೀಪ ರೂಪ ತಿಳಿದು ಬರುತ್ತದೆ.
  ಉನ್ನತ ಶಿಕ್ಷಣವು ಧರ್ಮ, ತತ್ವಜ್ಞಾನ, ವೈದ್ಯ, ವಿಜ್ಞಾನ, ಸೈನಿಕ ಶಿಕ್ಷಣ ಮುಂತಾದವುಗಳನ್ನು ಒಳಗೊಂಡಿತ್ತು. ವಿಷಯಗಳ ಆಯ್ಕೆಯಲ್ಲಿ ವರ್ಣಗಳಿಗೆ ಮತ್ತು ಅದರ ಹಿನ್ನಲೆಗೆ ಪ್ರಾಶಸ್ತ್ಯವಿದ್ದಿಲ್ಲ. ಅರ್ಹತೆ ಆಸಕ್ತಿ ಇದ್ದಿಲ್ಲ, ಯಾವುದೇ ವಿಷಯವನ್ನು ಅಭ್ಯಸಿಸಬಹುದಿತ್ತು. ತುಲನಾತ್ಮಕ ಅಧ್ಯಾಯನಕ್ಕಾಗಿ ವೇದಗಳೂ ಪಠ್ಯಕ್ರಮದಲ್ಲಿ ಸೇರಿಸಲ್ಪಟ್ಟಿದ್ದವು. ಆದರೆ ಮಾಟ, ಮಂತ್ರಗಳು ಪ್ರಸ್ತಾಪವಿದ್ದ ಅಥರ್ವವೇದವನ್ನು ಹಾತಕ ಅವಧಿಯವರೆಗೂ ನಿಷೇಧಿಸಲಾಗಿತ್ತು. ಬ್ರಾಹ್ಮನಾ ಕಾಲದ ಅನೇಕ ವಿಷಯಗಳು ಇಲ್ಲಿಯೂ ಕಲಿಯಲ್ಪಟ್ಟವು. ಚಾರ್ಣ, ಬತೃಹರಿ, ವಾಕ್ಯ, ಪೈನ ಅದರೊಂದಿಗೆ ಭೂಗೋಳ, ಖಗೋಳ, ಸಂಖ್ಯಾಶಾಸ್ತ್ರ, ಯೋಗ, ನ್ಯಾಯ, ವೈಶಿಷ್ಟ್ಯ ಮುಂತಾದವುಗಳನ್ನು ಅಧ್ಯಾಯನಕ್ಕೆ ಅಳವಡಿಸಿದ್ದರು. ಉನ್ನತ ಶಿಕ್ಷಣದಲ್ಲಿ ಸಂಸ್ಕøತ ಭಾಷೆಯನ್ನು ಕಲಿಸಲಾಗುತ್ತಿತ್ತು. ಪ್ರಾಚೀನ ಹಿಂದೂ ಶಿಕ್ಷಣದ ಉದ್ರ್ಗಂಥಗಳ ತಿರುಳನ್ನು ತಿಳಿಯಲು ಸಂಸ್ಕøತದ ಜ್ಞಾನ ಅಗತ್ಯವಾಗಿತ್ತು. 
`ವೃತ್ತಿ ಶಿಕ್ಷಿಣದ ಅಂಗವಾಗಿ ನೂಲುವುದು, ನೇಯುವುದು, ಶಿಲ್ಪಶಾಸ್ತ್ರ, ವಾಸ್ತು ಶಿಲ್ಪ, ಹೊಲಿಗೆ, ಲೆಕ್ಕಶಾಸ್ತ್ರ, ಬಟ್ಟೆಗೆ ಬಣ್ಣ ಹಾಕುವುದು, ರೇಖಾಶಾಸ್ತ್ರ, ಆಯುರ್ವೇದ ಮುಂತಾದವುಗಳನ್ನು ಕಲಿಸಲಾಗುತಿತ್ತು. ಮಿಳಂದಾ ಉದಾಹರಿಸಿರುವಂತೆ ಹದಿನೆಂಟು ಕರಕುಶಲ ಕಲೆಗಳು ಕಲಿಸಲ್ಪಡುತಿದ್ದವು. ಜೋತಿಷ್ಯ, ಸುಪ್ರವಿದ್ಯೆ (ಹಾವು ಕಡಿತದ ಉಪಚಾರ) ಗಳನ್ನು ಹೇಳಿಕೊಡಲಾಗುತಿತ್ತು. ಶಸ್ತ್ರ ಚಿಕಿತ್ಸೆಗೂ ಅವಕಾಶವಿದ್ದುದನ್ನು ಜೀವಕನು ಉದಾಹರಿಸಿದ್ದಾಗ ಈ ತೆರನಾದ ಕಲೆ, ಮತ್ತು ವಿಜ್ಷಾನಗಳನ್ನು ತಕ್ಷಶಿಲಾ ಕೇಂದ್ರದಲ್ಲಿ ಕಲಿಸಲಾಗುತಿತ್ತು.  ಆದ್ದರಿಂದ ಪಾಳಿ ಮತ್ತು ಇಂತಹ ಪ್ರಾದೇಶಿಕ ಭಾಷೆಗಳ ಮಹತ್ವ ಪಡೆದುಕೊಂಡಿರುವುದು. 
ಇತ್ಸಿಂಗನು ಹೇಳಿರುವಂತೆ ಭಾಷೆಯನ್ನು ಅಧ್ಯಯನ ಮಾಡಿದ ಮೇಲೆ ಗಧ್ಯ, ಪಧ್ಯ ಮತ್ತು ವಾಕ್ಯ ರಚನೆ ಕಲಿಯುತಿದ್ದರಲ್ಲದೆ ಹೇತು (ಐogiಛಿ) ವಿಧ್ಯೆ ಅಭಿದಾಮೇಷ ಮುಂತಾದವುಗಳನ್ನು ಕಲಿಯುತಿದ್ದರು. ಒಂದೆಡೆ ಫಾಹಿಯಾನನು ಬೌದ್ಧರ ಶಿಕ್ಷಣದಲ್ಲಿ ಬುದ್ಧನ ತತ್ವಗಳಿಗಿಂತಲೂ ಸಾಮಾನ್ಯ ಜ್ಞಾನಕ್ಕೆ ಹೆಚ್ಚು ಮಹತ್ವವಿದ್ದಿತೆಂದು ತಿಳಿಸಿದ್ದಾನೆ. ಹುಯನೆತ್ಸಾಂಗನು ನಳಂದವನ್ನು ಹೆಸರಿಸಿ ಅಲ್ಲಿ ಬೌದ್ಧ ತತ್ವಶಾಸ್ತ್ರ, ಸಾಹಿತ್ಯ, ಯೋಗ ಮತ್ತು ಇತರೆ ಆಧ್ಯಾತ್ಮಿಕ ವಿಷಯಗಳು ಬೋಧಿಸಲ್ಪಡುತಿದ್ದವು ಎಂದಿದ್ದಾನೆ. 
“ಬೋಧನಾ ಪದ್ಧತಿ”
ಬರಹ ಕೌಶಲ ಮತ್ತು ಬರವಣಿಗೆ ಸಾಮಗ್ರಿಗಳಲ್ಲಿ ಗಣನೀಯ ಪ್ರಗತಿಯು ಕಂಡು ಬಂದಿದ್ದರೂ ಅದನ್ನು ಜನಸಾಮಾನ್ಯರ ವ್ಯಾಪಕ ಬಳಕೆಗೆ ಅನುಕೂಲವಾಗುವಷ್ಟಿರಲಿಲ್ಲ.  ಹಾಗಾಗಿ ವೇದಕಾಲದಂತೆ ಬೋಧನಾ ಕ್ರಮವು ಮೌಖಿಕವಾಗಿಯೇ ಇತ್ತು. ಸಿದ್ದಿ ವಿಹಾರಕರು ವ್ಯಾಕರಣ ನೇಮಗಳನ್ನೇ ಕಂಠಪಾಠಗಳ ಮೂಲಕ ಕಲಿಯುತ್ತಿದ್ದರು. ಶಿಕ್ಷಕರು ನೇರ ವಿಧ್ಯೆಯನ್ನೇ ಅನುಸರಿಸುತಿದ್ದರು. ಶಿಕ್ಷಕರು ಒಂದು ಪಾಠವನ್ನು ವಿದ್ಯಾರ್ಥಿಗಳಿಗೆ ಸೂಚಿಸುತಿದ್ದರು. ಅದನ್ನು ತಳಿ ಪಾಠಯುಕ್ತವಾಗಿ ವಿಧ್ಯಾರ್ಥಿಗಳು ಕಲಿಯುತಿದ್ದರು. ಒಂದು ಪಾಠ ಮುಗಿದ ನಂತರವೇ ಇನ್ನೊಂದಕ್ಕೆ ಹೋಗಲಾಗುತಿತ್ತು. ಬೌದ್ಧ ಧರ್ಮದ ಬಗ್ಗೆ ಸಾಕಷ್ಟು ಸಹಾನುಭೂತಿ ಹೊಂದಿದ್ದ ಒಂದು ವರ್ಗವು ಒಂದಿತ್ತು. ಅವರನ್ನು ಉಪನ್ಯಾಸಕರು ಎಂದು ಕರೆಯುತಿದ್ದರು. ಇವರು ಬೌದ್ಧ ಭಿಕ್ಷಗಳನ್ನು ಮನೆಗೆ ಆಮಂತ್ರಿಸಿ ಅವರ ಸಂದೇಶಗಳನ್ನು ಆಲಿಸುತ್ತಿದ್ದರು.
ಚರ್ಚೆ, ಚರ್ಚಾಕೂಟ, ಪ್ರಶ್ನೋತ್ತರ ವಿಧಾನ ಮತ್ತು ಉಪನ್ಯಾಸ ಪದ್ದತಿಗಳು ಬೋಧನಾ ವಿಧಾನಗಳಾಗಿದ್ದವು, ಚರ್ಚೆಯಲ್ಲಿ ಯಶಸ್ಸುಗಳಿಸಲು ಸಾರ್ವಜನಿಕರ ಮೇಲೆ ಪ್ರಭಾವ ಬೀರವು, ವಿಮರ್ಶಕರು ಹಾಗೂ ವಿರೋಧಿ ಗುಂಪುಗಳನ್ನೆ ತೃಪ್ತಿ ಪಡಿಸಲು ಚರ್ಚೆಯನ್ನೆ ಏರ್ಪಡಿಸಲಾಗುತಿತ್ತು. ಚರ್ಚಾ ವಿಧಾನದಲ್ಲಿ 8 ಕ್ರಮಗಳು ಇದ್ದವು. 1. ಕಾರಣ  2. ಸಿದ್ದಾಂತ, 3. ಉದಾಹರಣೆ 4. ಸಾಮಾನ್ಯೀಕರಣ 5. ನಿರುದ್ಯೋಕ್ತಿ 6. ದೃಷ್ಠಾಂತ         7. ವಾದಮಂಡನೆ  8. ಅನುಗಮನ.
ಜೀವನದಲ್ಲಿ ಅನೇಕ ಸಮಸ್ಯೆಗಳು ಚರ್ಚೆಯ ಫಲವಾಗಿ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದವು. ಇದರಿಂದ ಅವರ ಜೀವನ ದೃಷ್ಠಿಯೂ ಮಾರ್ಪಡು ಆಗುತಿತ್ತು. ಕಾಲಕ್ರಮದಲ್ಲಿ ಚರ್ಚೆಗಾಗಿ ಚರ್ಚೆಯ ಹಂತಕ್ಕೆ ಬಂದದ್ದು ವಿಷಾದಕರ.
ಬೌದ್ಧರ ಶಿಕ್ಷಣದಲ್ಲಿ ಕಂಡು ಬಂದ ಒಂದು ವಿನೂತನ ಬೋಧನಾ ವಿಧಾನವೆಂದರೆ ಪ್ರವಾಸದ ಮೂಲಕ ಬೋಧನೆ.  ಹಲವಾರು ಭಿಕ್ಷುಗಳು ಪ್ರವಾಸ ಹಾಕಿಕೊಂಡು ಜ್ಞಾನದ ಪ್ರಸಾರಕ್ಕೆ ಹೆಣಗಿದರು. ಸುಪುತ್ರ ಮಹಾಮಗ್ಗಲನ್, ಅನುರುದ್ಧ, ಆನಂದ, ರಾಹುಲ, ಮುಂತಾದವನ್ನು ಈ ದೆಸೆಯಲ್ಲಿ ಹೆಸರಿಸಬಹುದು. ಅಲ್ಲಿದ್ದ ವಿದ್ಯಾರ್ಥಿಗಳು ಕೂಡ ತಮ್ಮ ವಿದ್ಯಾರ್ಥಿ ಜೀವನದ ಕೊನೆಯಲ್ಲಿ ಪ್ರವಾಸವನ್ನೇ ಹಾಕಿಕೊಂಡು ತಾವು ಅಭ್ಯಸಿಸಿದ ವಿಷಯಗಳನ್ನು ಪ್ರಯೋಗಕ್ಕೆ ಅಳವಡಿಸಿ ಅದಕ್ಕೆ ಒಂದು ನಿಶ್ಚಿತ ರೂಪ ಕೊಡುತ್ತಿದ್ದರು. ಧರ್ಮ ಪ್ರಸಾರಕ್ಕೂ ಈ ಪದ್ದತಿ ಬಹಳ ಅನುಕೂಲಕರವಾಗಿತ್ತು.
ಬೋಧನೆ ಮತ್ತು ಕಲಿಕೆಯ ಅಂಗವಾಗಿ ವಿದ್ವಜ್ಜನರ ಸಮ್ಮಿಲನಗಳು ಜರುಗುತಿದ್ದವು. ಈ ಸಂದರ್ಭದಲ್ಲಿ ಬೇರೆ ಬೇರೆ ವಿಹಾರಗಳು ಸನ್ಯಾಸಿಗಳು ಅಥವಾ ಭಿಕ್ಷಗಳು ಒಂದೆಡೆ ಸೇರಿ ಜಿಜ್ಞಾಸೆ ಮತ್ತು ಚರ್ಚೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತಿದ್ದರು. ಇಂತಹ ಸಮ್ಮಿಲನಗಳಲ್ಲಿ ವಿದ್ಯಾರ್ಥಿಗಳೂ ಭಾಗವಹಿಸಿ ತಮ್ಮ ಜ್ಞಾನ ಮಟ್ಟವನ್ನು ವೃದ್ಧಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿತ್ತು.
ವೃತ್ತಿ ಶಿಕ್ಷಣದ ವಿಷಯವಾಗಿ ಆಯಾ ವೃತ್ತಿಗಳಲ್ಲಿ ನುರಿತವರಿಂದ ವಿದ್ಯಾರ್ಥಿಗಳು ನಿರಾತಂಕವಾಗಿ ತರಬೇತಿ ಪಡೆಯುತಿದ್ದರು, ನೂಲುವಿಕೆ, ನೇಯ್ಗೆ, ಶಿಲ್ಪಕಲೆ ಮುಂತಾದವುಗಳಲ್ಲಿ ತರಬೇತಿ ಲಭಿಸಿತ್ತು. ಒಟ್ಟಿನಲ್ಲಿ ಬೌದ್ಧರ ಕಾಲದಲ್ಲಿ ಸೈದ್ದಾಂತಿಕ ಮತ್ತು ಪ್ರ್ರಾಯೋಗಿಕ ಶಿಕ್ಷಣಗಳೆರಡು ವ್ಯವಸ್ಥಿತವಾಗಿ ಲಭಿಸುತ್ತಿದ್ದವು.  ಬೋಧನೆ ಪ್ರಾದೇಶಿಕ ಭಾಷೆಗಳಲ್ಲಿ ಮತ್ತು ಜನ ಸಾಮಾನ್ಯರ ಭಾಷೆಗಳಲ್ಲಿ ನಡೆದಿದ್ದರಿಂದ ಧರ್ಮ ಪ್ರಸಾರ ಮತ್ತು ಜನ ಜಾಗೃತಿ ಶೀಘ್ರಗತಿಯಲ್ಲಿ ಕಂಡು ಬಂದವು.
ಜಾತ್ಯಾತೀತ ಶಿಕ್ಷಣ (seಛಿuಟಚಿಡಿ eಜuಛಿಚಿಣioಟಿ)
ಉಪನಿಷತ್ ಕಾಲದ ವೇಳೆಗಾಗಲೇ ವರ್ಣಾಶ್ರಮ ಧರ್ಮವು ಕಟ್ಟು ನಿಟ್ಟಾಗಿ ಜಾರಿಗೆ ಬಂದಿತು. ವರ್ಣವಾರು ಕಲಿಕೆಯ ವಿಷಯಗಳನ್ನು ಬೇರ್ಪಡಿಸಿದ್ದಲ್ಲದೆ, ಶೂದ್ರರಿಗೆ ಶಿಕ್ಷಣದ ನಿಷೇದವನ್ನು ಕಂಡಿದ್ದೇವೆ. ಆದರೆ ಬೌದ್ಧ ಶಿಕ್ಷಣವನ್ನು ಮುಕ್ತವಾಗಿಸಿದರು. ಸಂಘ ಮತ್ತು ವಿಹಾರಗಳ ಪ್ರವೇಶದಲ್ಲಿ ಎಲ್ಲರನ್ನು ಸೇರಿಸಿಕೊಂಡರು. ಸಂಘವನ್ನು ಸೇರಿದವರೆಲ್ಲಾ ಒಂದೇ ಎಂದು ತಿಳಿದು ನಿರ್ಮಲ ಮನಸ್ಸಿನಿಂದ ಜ್ಞಾನಧಾನ ಮಾಡುತಿದ್ದರು. ಈ ಕುರಿತು ಬುದ್ಧನೇ ಹೇಳುವಂತೆ ಎಲ್ಲಾ ನದಿಗಳು ಸಮುದ್ರ ಸೇರಿ ಒಂದಾಗುವಂತೆ ಸಂಘ ಸೇರಿದವರೆಲ್ಲಾ ಒಂದೇ ಎಂದು ಭಾವಿಸುವ ಪದ್ಧತಿ ಪ್ರಶಂಸಾರ್ಹವಾಗಿತ್ತು.
ಲೌಕಿಕ ಶಿಕ್ಷಣ
ಧಾರ್ಮಿಕ ಪ್ರಭಾವದ ಮಾಧ್ಯಮವೂ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣವನ್ನು ನಿರ್ಲಕ್ಷಿಸಿರಲಿಲ್ಲ. ಸಂಘ ಮತ್ತು ವಿಹಾರಗಳಲ್ಲಿನ ಭಿಕ್ಷುಗಳು ಕೂಡ ವಿವಿಧ ಕರಕುಶಲ ಕಲೆಗಳನ್ನು ಕಲಿಯಲು ಅವಕಾಶವಿತ್ತು. ಆಯುರ್ವೇದ ಮತ್ತು ಶಸ್ತ್ರ ಚಿಕಿತ್ಸಾ ಕ್ರಮಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು ಜೀವನ ಕುಮಾರ ಬಚ್ಚ ಎನ್ನುವ ಹೆಸರಾಂತ ಶರೀರ ತಜ್ಞ (Phಥಿsiಛಿiಚಿಟಿ) ಈ ಕಾಲದಲ್ಲಿ ಆಗಿ ಹೋದದ್ದನ್ನು ನೋಡಿದರೆ ಈ ವೃತ್ತಿಗಳ ಮುನ್ನಡೆಯನ್ನು ಮನಗಾಣಬಹುದು. ವೈದ್ಯ ವಿಜ್ಞಾನವನ್ನು 7 ವರ್ಷಗಳ ಕಾಲ ಅಭ್ಯಾಸಿಸಿ ನಂತರ ಕ್ಷೇತ್ರ ಕಾರ್ಯದ ಮೂಲಕ ಪ್ರಾಯೋಗಿಕ ತಿಳುವಳಿಕೆಯನ್ನು ಪಡೆಯಲಾಗುತ್ತಿತ್ತು. ಅಯುರ್ವೇದದ ಪಿತಾಮಹನೆನಿಸಿದ ಚರಕನು ಕೂಡ ಇದೇ ಕಾಲದವನು. ತಕ್ಷಶಿಲೆ ವೈದ್ಯ ವಿಜ್ಞಾನದ ಕೇಂದ್ರವೆನಿಸಿತ್ತು. ಜೊತೆಗೆ ಹಾವು ಕಡಿತದ ಚಿಕಿತ್ಸೆ (sಟಿಚಿಞe biಣe ಛಿuಡಿe) ಯಂತೂ ಹೆಸರುವಾಸಿ.
ಅದೊಂದು ವಿವಿಧ ಕಲೆ ಕೈಗಾರಿಕೆ ಮತ್ತು ವಾಸ್ತು ಶಿಲ್ಪಗಳ ಅಧ್ಯಾಯನಕ್ಕೂ ಮಹತ್ವವನ್ನು ನೀಡಿದ್ದರು. ನಳಂದ, ವಿಕ್ರಮಶೀಲ, ವಿಶ್ವವಿದ್ಯಾಲಯಗಳ ಕಟ್ಟಡದ ವಿನ್ಯಾಸ, ಬೇರೆ ಬೇರೆ ಚೈತ್ಯಾಲಯ, ವಿಹಾರ ಸಂಘಗಳು, ವಾಸ್ತುಶಿಲ್ಪ ವೈಖರಿಗಳು, ಅವರ ತಾಂತ್ರಿಕ ವಾಸ್ತುಶಿಲ್ಪದ ನೈಪುಣ್ಯತೆಗೆ ಸಾಕ್ಷಿಗಳಾದವು. ಜೊತೆಗೆ ಕೃಷಿ, ಪಶುಸಂಗೋಪನೆ, ವಾಣಿಜ್ಯ, ಗೃಹಕೈಗಾರಿಕೆ ಮೊದಲಾದವುಗಳಲ್ಲಿ ಜನಸಾಮಾನ್ಯರನ್ನು ತರಬೇತಿಸುವ ಏರ್ಪಾಡುಗಳಿದ್ದವು.


ಸ್ತ್ರೀ ಶಿಕ್ಷಣ
ಆರಂಭದಲ್ಲಿ ಬುದ್ಧನೇ ಸ್ವತ: ಸ್ತ್ರೀಯರ ಶಿಕ್ಷಣವನ್ನು ವಿರೋಧಿಸಿದ್ದನು. ಭಿಕ್ಷಗಳು ಜೀವನ ಪರ್ಯಂತ ಬ್ರಹ್ಮಚಾರಿಗಳಾಗಿ ಉಳಿಯುತಿದ್ದರು. ಸ್ತ್ರೀ ಸಂಗಡ ಬೆರೆಯುವುದನ್ನು, ಸಮೀಪ ಹೋಗುವುದನ್ನು ಅವರು ವಿರೋಧಿಸಿದರು.  ಆದರೆ ತಮ್ಮ ನಿತ್ಯದ ಅನ್ನಕ್ಕಾಗಿ ಜನವಸತಿಗಳತ್ತ ಸಾಗಿ ಭಿಕ್ಷೆ ತರಬೇಕಾದ ಭಿಕ್ಷಗಳಿಗೆ ಇದು ಅಸಾಧ್ಯವೆನಿಸಿತು. ತದನಂತರ ಬುದ್ದನೇ ತನ್ನ ಅಭಿಪ್ರಾಯವನ್ನು ಬದಲಿಸಿಕೊಂಡು ಸ್ತ್ರೀ ಶಿಕ್ಷಣವನ್ನು ಒಪ್ಪಿದನು. ಅಲ್ಲಿಂದ ಸಂಘಗಳಲ್ಲಿ ಸ್ತ್ರೀಯರ ಪ್ರವೇಶ ಆರಂಭವಾಯಿತು. ಜೊತೆಗೆ ಅನೇಕ ಸ್ತ್ರೀಯರು ಸನ್ಯಾಸಿಯರೂ ಆಗಹತ್ತಿದರು. ಆರಂಭದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ವಿಹಾರಗಳು ಕಟ್ಟಲ್ಪಟ್ಟವು. ಇದರಿಂದಾಗಿ ಮಹಿಳಾ ಶಿಕ್ಷಣವು ಬೆಳೆದದ್ದಲ್ಲದೇ ಅನೇಕ ಹೆಸರಾಂತ ಪಾಂಡಿತ್ಯ ಪೂರ್ಣ ಮಹಿಳಾ ಮಣಿಯರು ಉದಯಿಸಲು ಸಾಧ್ಯವಾಯಿತು. ಅವರಲ್ಲಿ ಕವಯತ್ರಿಯರು, ದಾರ್ಶನಿಕರು ಹಾಗೂ ಸಮಾಜ ಸುಧಾರಕರೂ ನಿರ್ಮಾಣಗೊಂಡರು.
ಸ್ತ್ರೀ ಶಿಕ್ಷಣದ ಬೆಳವಣಿಗೆಯಿಂದಾಗಿ ಅನೇಕ ಮಹಿಳೆಯರು ಧರ್ಮ ಪ್ರಸಾರದ ನಿಮಿತ್ತ ವಿದೇಶಗಳಿಗೂ ಪ್ರಯಾಣ ಬೆಳಸಿದರು. ಅವರಲ್ಲಿ ಸಾಮ್ರಾಟ ಅಶೋಕನ ಮಗಳಾದ ಸಂಘಮಿತ್ರೆ ಸಿಲೋನ್‍ಗೆ ಹೋಗಿದ್ದುಂಟು, ಅಲ್ಲದೇ ಶುಭ, ಅನುಪಮ, ಸುಮೇಧ, ಮುಂತಾದ ಶ್ರೇಷ್ಠ ಸನ್ಯಾಸಿಯರೂ ಹೊರಹೊಮ್ಮಿದರು. ಪಾಣನಿಯು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಏರ್ಪಾಡು ಇದ್ದುದನ್ನು ಪ್ರಸ್ತಾಪ ಮಾಡಿದ್ದಾನೆ. ಅದರಂತೆ ಮಹಿಳೆಯರಿಗೆ ರಾಜನೀತಿಯನ್ನು ಕಲಿಸಿಕೊಟ್ಟ ಅನೇಕ ಉದಾಹರಣೆಗಳಿವೆ.
ಅನೇಕ ಮಹಿಳೆಯರು ಶಿಕ್ಷಣದ ಅವಕಾಶದಿಂದಾಗಿ ತಮ್ಮ ಪತಿ ಸತ್ತ ನಂತರ ಸಮರ್ಥರಾಗಿ ರಾಜ್ಯಭಾರ ಮಾಡಿದರು. ಒಟ್ಟಿನಲ್ಲಿ ವೇದಾಂತ, ಆಯುರ್ವೇದ, ಸಾಹಿತ್ಯ, ರಾಜನೀತಿ ಮುಂತಾದವುಗಳಲ್ಲೆಲ್ಲಾ ಪುರುಷ ಸಮಾನ ಅವಕಾಶ ಕಲ್ಪಿಸಿದ್ದರು. ಅದೇ ಸಂದರ್ಭದಲ್ಲಿ ಉನ್ನತ ಶಿಕ್ಷಣವು ಸಮಾಜದ ಉನ್ನತ ವರ್ಗದ ಸ್ತ್ರೀಯರಿಗೆ ಮಾತ್ರ ಸೀಮಿತವಾಗಿದ್ದನ್ನು ವಿಷಾದದಿಂದ ಒಪ್ಪಿಕೊಳ್ಳಬೇಕಾಗುತ್ತದೆ. ಜನಸಾಮಾನ್ಯರ ಮನೆ ಬಾಗಿಲನ್ನು ತಲುಪುವಷ್ಠರಲ್ಲಿ, ವ್ಯಾಪಕತೆಯನ್ನು ಶಿಕ್ಷಣವು ಪಡೆದಿಲ್ಲವೆಂದು ಹೇಳಬೇಕಾಗುತ್ತದೆ. ಅಲ್ಲದೇ ಬಾಲ್ಯವಿವಾಹ ಪದ್ದತಿ ಕೂಡ ಸ್ತ್ರೀ ಶಿಕ್ಷಣಕ್ಕೆ ಬಲವಾದ ಪೆಟ್ಟು ಕೊಟ್ಟಿತು.
ಉಪ ಸಂಪದ (ಈiಟಿಚಿಟ oಡಿಜiಟಿಚಿಣioಟಿ)
ಉಪಸಂಪದವು ಬೌದ್ಧ ಅಚರಣೆಗಳಲ್ಲಿ ಕೊನೆಯದು ವಿದ್ಯಾರ್ಥಿಯ 20ನೇ ವಯಸ್ಸಿಗೆ ಅಂದರೆ 12 ವರ್ಷಗಳ ಶಿಕ್ಷಣದ ನಂತರ ನೆರವೇರಿಸಲಾಗುತ್ತದೆ. ವಿದ್ಯಾರ್ಥಿ ತನ್ನ ಮುಂದಿನ ಜೀವನವನ್ನು ಭಿಕ್ಷವಾಗಿ ಮೀಸಲಿಟ್ಟು ಮುಂದುವರೆಯಲು ನಿರ್ವಹಿಸುತ್ತಿತ್ತು. ತನ್ನ ಕೌಟಂಬಿಕ ಸಂಬಂಧವನ್ನು ತೊರೆದು ಗುರುವಿನೊಂದಿಗೆ ಸಂಘದಲ್ಲಿ ಕಾಯಂ ಸದಸ್ಯತ್ವ ಪಡೆಯುತಿದ್ದನು. ‘ಪಬ್ಬಜವು ತಾತ್ಕಾಲಿಕವಾಗಿದ್ದರೆ, ಉಪಸಂಪದವು ಜೀವನ ಪರ್ಯಾಯದ ಅವನ ಬದ್ದತೆಯನ್ನು ಬಿಂಬಿಸುತ್ತಿತ್ತು, ಪಬ್ಬಜದಲ್ಲಿ ಒಬ್ಬ ಗುರುವಿನ ಬಳಿ ಹೋಗಿ ನಿವೇದಿಸಿಕೊಂಡರೆ, ಉಪಸಂಪದವು ಸಂಘದ ಎಲ್ಲಾ ಭಿಕ್ಷುಗಳ ಸಮ್ಮುಖದಲ್ಲಿ ನಡೆಯುತ್ತಿತ್ತು, ಪ್ರಜಾಸತಾ ರೀತಿಯಲ್ಲಿ ಬಹು ಸಂಖ್ಯಾತ ಭಿಕ್ಷುಗಳ ನಿರ್ಣಯದಂತೆ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಣಯಿಸಲಾಗುತ್ತಿತ್ತು. ಭಿಕ್ಷುಗಳ ವೇಷಧರಿಸಿ, ಕೈಯಲ್ಲಿ ಭಿಕ್ಷೆ ಪಾತ್ರೆ, ಹಿಡಿದು ಬಾಗಿ ಎಲ್ಲ ಭಿಕ್ಷುಗಳನ್ನು ನಮಿಸುವುದರ ಮೂಲಕ ಉಪಸಂಪದ ಕಾರ್ಯ ಕ್ರಮವು ಅಂತ್ಯಗೊಳ್ಳುತಿತ್ತು.
ಒಂದು ವೇಳೆ ಸಂಘದಿಂದ ಹಿಂದೆ ಸರಿಯಲು ಇಚ್ಚಿಸಿದರೆ ಭೌತಿಕ ಸುಖದ ಅಪೇಕ್ಷೆಯನ್ನು ವ್ಯಕ್ತಪಡಿಸಿ ತಾನು ಭಿಕ್ಷುವಾಗಿ ಉಳಿಯಲು ಸಾಧ್ಯವಿಲ್ಲವೆಂದು ತಿಳಿಸಿ ಮನೆಗೆ ಹಿಂದಿರುಗಬಹುದಾಗಿತ್ತು.

ಬೌದ್ಧ ಶಿಕ್ಷಣದ ಕೊಡುಗೆಗಳು

ಸುಮಾರು 10 ರಿಂದ 12 ಶತಮಾನಗಳ ಕಾಲ ತನ್ನದೇ ಕೆಲವು ವೈಶಿಷ್ಠ್ಯಗಳೊಂದಿಗೆ ಭಾರತೀಯ ಶಿಕ್ಷಣದ ಮೇಲೆ ಛಾಪು ಒತ್ತಿದ ಬೌದ್ಧ ಶಿಕ್ಷಣವು ಕೆಲವು ಅಮೂಲ್ಯ ಕೊಡುಗೆಗಳನ್ನು ಮುಂಬರುವ ಶೈಕ್ಷಣಿಕ ವ್ಯವಸ್ಥೆಗೆ ಬಿಟ್ಟು ಹೋಗಿದೆ.
1) ಜಾತ್ಯಾತೀತ ಶಿಕ್ಷಣ:- ವೈದಿಕ ಶಿಕ್ಷಣದಲ್ಲಿ ಬಳಕೆಯಲ್ಲಿದ್ದ ಜಾತಿ ಪ್ರಾತಿನಿದÀ್ಯವನ್ನು ತೊಡೆದು ಹಾಕಿ ಸರ್ವರಿಗೂ ಅರ್ಹತೆ, ಅಸಕ್ತಿಗಳ ಮೇಲೆ ಪ್ರವೇಶಾವಕಾಶ ಕಲ್ಪಿಸಿದ್ದು ಮೆಚ್ಚತಕ್ಕ ವಿಷಯ.
2) ಲೌಕಿಕ ಶಿಕ್ಷಣದ ಪ್ರಾದಾನ್ಯತೆ:- ಅಲೌಕಿಕ ಕಲ್ಪನೆಯನ್ನು ಮಿತಿಗೊಳಿಸಿ ಲೌಕಿಕ ತಾತ್ಪಾರ್ಯಗಳನ್ನು ತಿಳಿಸಿ ವ್ಯಕ್ತಿಯನ್ನು ಸಮಾಜ ಜೀವನಕ್ಕೆ ಸಮರ್ಥವನ್ನಾಗಿಸುವಲ್ಲಿ ಬೌದ್ಧ ಶಿಕ್ಷಣವು ಬಹುವಾಗಿ ಶ್ರಮಿಸಿತು. ಉನ್ನತ ಶಿಕ್ಷಣವಂತೂ ಸೈದ್ದಾಂತಿಕ ಮತ್ತು ಪ್ರಾಯೋಗಿಕಗಳೆರಡರ ಸುಂದರ ಸಮನ್ವಯವೆನಿಸಿತ್ತು.
3) ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹ:- ಬೌದ್ಧರ ಕಾಲದಲ್ಲಿ ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹ ಲಭಿಸಿದ್ದರಿಂದ ಹೆಸರಾಂತ ಕವಯತ್ರಿಯರು, ರಾಣಿಯರು ದಾರ್ಶನಿಕರು ಭಿಕ್ಷಗಳು ನಿರ್ಮಾಣಗೊಂಡು ತಮ್ಮದೇ ಕೊಡುಗೆಯ ಮೂಲಕ ಉತ್ತಮ ವ್ಯವಸ್ಥೆಯ ನಿರ್ಮಾಣಕ್ಕೆ ಕಾರಣರಾದರು.
4) ಜನಸಾಮಾನ್ಯರ ಭಾಷೆಗೆ ಮಹತ್ವ:- ಅದುವರೆಗೂ ಶಿಕ್ಷಣವು ಪಂಡಿತ ವರ್ಗದ ಭಾಷೆಯಲ್ಲಿ ಮಾತ್ರ ನಡೆಯುತಿತ್ತು, ಹಾಗಾಗಿ ಜನ ಸಾಮಾನ್ಯರಿಗೆ ಅದರ ತಾತ್ಪಾರ್ಯ ತಿಳಿಯುತ್ತಿರಲಿಲ.್ಲ ಇನ್ನೊಂದು ಭಾಷೆ ಕಲಿತು ಆ ಮೂಲಕ ಜ್ಞಾನಾರ್ಜನೆ ಮಾಡುವ ವ್ಯವದಾನವು ಜನ ಸಮಾನ್ಯರಿಗೆ ಇದ್ದಿಲ್ಲ. ಈ ಅವಂತಾರವನ್ನು ಗಮನಿಸಿದ ಬುದ್ದನು ತನ್ನ ಬೋಧನೆಗಳನ್ನು ಜನರ ಭಾಷೆಯಲ್ಲಿಯೇ ಅರ್ಥಪೂರ್ಣವು ಎನಿಸಿದ ಅರ್ಥಪೂರ್ಣ ಗ್ರಹಿಕೆಗೆ ಮಾತೃ ಭಾಷೆ ಸಂಜೀವಿನಿಯೆಂಬುದನ್ನು ಗುರ್ತಿಸಿ ಅನುಷ್ಠಾನಗೊಳಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ.
5) ಸುಸಜ್ಜಿತ ವಿಶ್ವವಿದ್ಯಾನಿಲಯಗಳ ಸ್ಥಾಪನೆ:- ಬೌದ್ದ ಕಾಲದ ಉನ್ನತ ಶಿಕ್ಷಣವು ಗುಣಾತ್ಮಕವಾಗಿ ಬೆಳೆದು ಬಂದಿತು. ಅದಕ್ಕೆ ಮುಖ್ಯ ಕಾರಣವೆಂದರೆ ಅವರು ಕಟ್ಟಿದ ಸುಸಜ್ಚಿತ ವಿಶ್ವವಿದ್ಯಾ¯ಯಗಳು ವಸತಿ ನಿಲಯಗಳು, ಗ್ರಂಥಾಲಯ, ಪ್ರಾರ್ಥನಾಲಯ, ಸಮ್ಮೇಲನರಾಗಣ ಹೀಗೆ ಸುಸಜ್ಜಿತ ವಿಶ್ವವಿದ್ಯಾ¯ಯಗಳನ್ನು ಈ ಕಾಲದಲ್ಲಿ ಸ್ಥಾಪಿಸಲಾಯಿತು. ಅಂತಯೇ ದೇಶ-ವಿದೇಶಗಳಿಂದ  ವಿದ್ಯಾರ್ಥಿ ಸಮೂಹ ಈ ವಿದ್ಯಾಕೇಂದ್ರಗಳಿಗೆ ಹರಿದು ಬಂತು. ತಕ್ಷ ಶಿಲಾ,ವಿಕ್ರಮ ಶೀಲಾ, ನಳಂದಗಳನ್ನು ಈ ಸಂದರ್ಭಗಳಲ್ಲಿ ಹೆಸರಿಸಬಹುದು. ನಳಂದ ವಿಶ್ವವಿದ್ಯಾಲಯದಲ್ಲಿ 10 ಸಾವಿರ ವಿದ್ಯಾರ್ಥಿಗಳು 1500 ಜನ ಪ್ರಾದ್ಯಾಪಕರು ಇದು, ಪ್ರತಿ ದಿನ ಮೂರು ಉಪನ್ಯಾಸಗಳು ನಡೆಯುತ್ತಿದ್ದವು ಎಂಬುದನ್ನು ನೆನಪಿಸಿಕೊಂಡಾಗ ಅದರ ಅಗಾಧತೆಯ ಅರಿವು ನಮಗಾಗದೆ ಇರದು.
6) ಪ್ರವಾಸವನ್ನು ಶಿಕ್ಷಣದ ಮಾಧ್ಯಮವನ್ನಾಗಿಸಿದ್ದು:- ಪ್ರವಾಸವನ್ನು ಅಧ್ಯಯನ ಮತ್ತು ಅಧ್ಯಾಪನದ ಒಂದು ವಿಧಾನವಾನ್ನಾಗಿ ಒಂದು ನೂತನ ಆಯಾಮಾನವನ್ನು ಕಂಡುಕೊಂಡರೆನ್ನಬಹುದು. ಅಧಿಕ ಜ್ಞಾನದ ವರ್ಧನೆಗಾಗಿ ದೇಶದ ಬೇರೆ ಬೇರೆ ಸಂಘ ವಿಹಾರಗಳನ್ನು ಸಂದರ್ಶಿಸುತ್ತಾ ಅಲ್ಲಿನ ಭಿಕ್ಷುಗಳೊಂದಿಗೆ ಚರ್ಚಿಸುತ್ತಾ ಉದ್ದಕ್ಕೂ ತಮ್ಮ ಜ್ಞಾನಾಧಾರೆಯನ್ನು ಸ್ಮರಿಸುತ್ತಾ ಸಾಗುತ್ತಿದ್ದ ಭಿಕ್ಷುಗಳು. ವಿದ್ಯಾರ್ಥಿಗಳು ಒಂದು ಹೊಸ ಅವಿಷ್ಕಾರಗಳನ್ನು ಮಾಡಿರಬಹುದು. ಪ್ರವಾಸದಿಂದ ಪ್ರಪಂಚದ ಬಗೆಗೆ ಜ್ಞಾನ ವರ್ದಿಸುತ್ತಿತ್ತು.  ಅದರೊಂದಿಗೆ ನೈಜ ಅನುಭವ ದೊರೆಯುತ್ತದೆ.
7) ವೈವಿದ್ಯಮಯ ಪಠ್ಯ ಕ್ರಮ:- ವೇದಗಳ ಕಾಲಕ್ಕಿಂತಲೂ ಬೌದ್ಧರ ಪಠ್ಯ ಕ್ರಮ ವೈವಿದ್ಯತೆ ಪಡೆದಿತ್ತು. ವಸ್ತು ವಿಷಯಗಳ ಮಹತ್ವವನ್ನು ಅರಿತು ಪಠ್ಯ ಕ್ರಮದಲ್ಲಿ ಸಮಾನತೆ ಕಲ್ಪಿಸಲಾಗುತ್ತಿತ್ತು. ವೃತ್ತಿ ಪರ ವಿಷಯಗಳ ವ್ಯಾಪ್ತಿಯಿಂದಾಗಿ ಬೌತಕ ಜೀವನ ಸುಲಭವೆನಿಸುತ್ತದೆ. ಕಲೆ, ವಿಜ್ಞಾನ, ವಾಸ್ತುಶಿಲ್ಪ, ಗುಡಿಕೈಗಾರಿಕೆ, ಸಾಹಿತ್ಯ, ಧರ್ಮ, ತತ್ವಶಾಸ್ತ್ರ ಹೀಗೆ ಏನೆಲ್ಲಾ ವಿಷಯಗಳ ಅಸ್ಥಿತ್ವದಿಂದಾಗಿ ಪಠ್ಯ ಕ್ರಮ ಔಚಿತ್ಯಪೂರ್ಣ ಎನಿಸಿತು.
8) ಚರ್ಚಾಪದ್ಧತಿಯ ನಾವಿನ್ಯತೆ:- ಬೋಧನಾ ಪದ್ದತಿಯ ಅಂಗವಾಗಿ ಚರ್ಚಾ ವಿಧಾನದ ಬಳಕೆ ನಮಗೀಗಾಲೇ
ವಿಧಿತವಾಗಿದೆ. ಅದರೆ ಈ ಮುಂಚೆಗಿಂತ ಬೌದ್ದರ ಕಾಲದಲ್ಲಿ ಚರ್ಚಾವಿಧಾನವು ಹಲವು ವೈವಿದ್ಯತೆಯನ್ನು ಪಡೆದಿದ್ದಲ್ಲದೇ ವ್ಯಾಪಕವಾಗಿಯು ಬಳಸಲ್ಪಟ್ಟಿತು ತಜ್ಞರ ವಾದ ಮಂಡನೆ ವಿಚಾರಗಳೊಂದಿಗೆ ವಿದ್ಯಾರ್ಥಿಗಳಿಗೂ ಅದರಲ್ಲಿ ಅವಕಾಶ ಕಲ್ಪಸಿದ್ದರಿಂದ ಉತ್ತಮ ವಾಕ್ಪಟುಗಳಾಗಿ ಮೊಳಕೆ ಒಡೆಯಲು ಸುಲಭ ಸಾಧ್ಯವಾಗಿತ್ತು.

ವೇದಗಳ ಕಾಲ ಮತ್ತು ಬೌದ್ಧ ಕಾಲದ ಶಿಕ್ಷಣದ ಸಾಮ್ಯಾತೆಗಳು

ವೇದ ಮತ್ತು ಬೌದ್ಧ ಕಾಲದ ಶಿಕ್ಷಣಗಳು ಬೇರೆ ಬೇರೆ ಅವಧಿಯಲ್ಲಿ ಅಸ್ಥಿತ್ವದಲ್ಲಿದ್ದರು ಹಲವಾರು ಸಾಮ್ಯಾತೆಗಳನ್ನು ಉಳಿಸಿಕೊಂಡಿದ್ದನ್ನು ಕಾಣುತ್ತೇವೆ, ಅವುಗಳೆಂದರೆ 
1) ಎರಡು ಕಾಲದ ಶಿಕ್ಷಣಗಳು ಸುವ್ಯವಸ್ಥಿತವಾದ ಧಾರ್ಮಿಕ ತಳಹದಿಯ ಮೇಲೆ ಬೆಳೆದು ಬಂದಿದ್ದಲ್ಲದೆ ಅಯಾ ಧವರ್iಗಳು ತತ್ವ ಸಿದ್ದಾಂತಗಳನ್ನು ಚಿರಸ್ಥಾಯಿಗೊಳಿಸಲು ಯತ್ನಿಸಿದ್ದುಂಟ್ಟು
2) ವೇದ ಮತ್ತು ಬೌದ್ಧ ಕಾಲೀನ ಶಿಕ್ಷಣಗಳೆರಡರಲ್ಲಿ ವಿದ್ಯಾರ್ಥಿಗಳ ಪ್ರವೇಶದ ಸಂದರ್ಭದ ನಿಯಮಗಳು ಅಂದರೆ ಪರಿಶುದ್ಧ ನೈತಿಕತೆ ಬ್ರಹ್ಮಚರ್ಯ  ಇತ್ಯಾದಿಗಳು ಒಂದೇ ಅಗಿದ್ದವು.
3) ಎರಡು ಅವಧಿಗಳು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ಬಹುತೇಕವಾಗಿ ಸನ್ಯಾಸಿಗಳಾಗಿರುತ್ತಿದ್ದರು.
4) ಎರಡು ಅವಧಿಗಳಲ್ಲಿ ಗುರುಗಳಿಗೆ ಪೂಜ್ಯನೀಯಸ್ಥಾನವಿದ್ದಿತು.
5) ಎರಡೂ ಕಾಲದ ಶಿಕ್ಷಣದ ಅಂತಿಮ ಗುರಿ ಮುಕ್ತಿ ಅಥವಾ ಮೋಕ್ಷ ಸಂಪಾದನೆ ಆಗಿತ್ತು ಬೌದ್ಧರು ಇದನ್ನೇ ನಿರ್ವಾಣ ಎಂದು ಕರೆದರು.
6) ವೇಧ & ಬೌದ್ಧ ಶಿಕ್ಷಣಗಳೆರಡರಲ್ಲಿ ವಿದ್ಯಾರ್ಥಿಗಳು ವೈಭವ ಜೀವನದಿಂದ ದೂರವಿದ್ದು ಸರಳ ಬದುಕನ್ನು ಅಳವಡಿಸಿಕೊಳ್ಳತಿದ್ದರು.
7) ‘ಭಿಕ್ಷೆಗೆ ತೆರಳುವ ಪದ್ದತಿಯನ್ನು ಈ ಎರಡೂ ಅವಧಿಗಳಲ್ಲಿ ಕಾಣುತ್ತೇವೆ.
8) ಭೋಧನಾ ಪದ್ದತಿಗನು ಗುಣವಾಗಿ ಎರಡೂ ಅವಧಿಗಳ ಶಿಕ್ಷಣದಲ್ಲಿ ಕಂಠಪಾಠ ವಿಧಾನವನ್ನು ಯಥೇಚ್ಚವಾಗಿ ಬಳಸುತಿದ್ದರೆಂಬುದಕ್ಕೆ ಆಧಾರಗಳಿವೆ.

ವ್ಯತ್ಯಾಸಗಳು (ಆiಜಿಜಿeಡಿeಟಿಛಿes)

           ವೇದಗಳ ಕಾಲದ ಶಿಕ್ಷಣ ಬೌದ್ಧಕಾಲದ ಶಿಕ್ಷಣ 
1) ವೇದಗಳ ಕಾಲದ ಶಿಕ್ಷಣಕ್ಕೆ ವೇದಗಳು ಆಧಾರವಾಗಿದ್ದವು.   1) ಬೌದ್ಧ ಕಾಲದ ಶಿಕ್ಷಣಕ್ಕೆ ಬುದ್ದನ ಸಂದೇಶಗಳಾದ                                               ತ್ರಿಪಿಟಕಗಳು ಆಧಾರವಾಗಿದ್ದವು.
2) ‘ಉಪನಯನ’ ಆಚರಣೆಯೊಂದಿಗೆ ಆರು ವರ್ಷ ತುಂಬಿದ   2) ‘8’ ವರ್ಷ ತುಂಬಿದ ಮಗುವನ್ನು ‘ಪಬ್ಬಜ’ ಕಾರ್ಯ
ಮಗುವನ್ನು ಶಾಲೆಗೆ ಸೇರಿಸಲಾಗುತಿತ್ತು. -ಕ್ರಮದೊಂದಿಗೆ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುತಿದ್ದರು.
3) ಮೋಕ್ಷ ಸಂಪಾದನೆಯೊಂದಿಗೆ ಜೀವನ ನಿರ್ವಹಣೆಯ   3) ‘ನಿರ್ವಾಣ’ ಗುರಿಯೊಂದಿಗೆ ಧರ್ಮ ಪ್ರಸಾರದ 
ಗುರಿ ಹೊಂದಲಾಗಿತ್ತು. ಆಶಯವನ್ನು ಇರಿಸಿಕೊಂಡಿದ್ದರು.
4) ವೇದಗಳ ಕಾಲದಲ್ಲಿ ಯಜ್ಞಯಾಗಗಳು ಧರ್ಮ &   4) ಅಂತಹ ಆಚರಣೆಗಳನ್ನು ನಿಷೇದಿಸಲಾಗಿತ್ತು.
ಶಿಕ್ಷಣದ ಅವಿಭಾಜ್ಯ ಅಂಗಗಳೆನಿಸಿದ್ದವು.
5) ‘ ಗುರುಕುಲ’ಗಳು ಶಿಕ್ಷಣ ಸಂಸ್ಥೆಗಳಾಗಿದ್ದವು   5) ಸಂಘ & ವಿಹಾರಗಳು ಶಿಕ್ಷಣ ಸಂಸ್ಥೆಗಳಾಗಿದ್ದವು
6) ವೈಯಕ್ತಿಕ (Iಟಿಜiviಛಿಟuಚಿಟ) ಶಿಕ್ಷಣಕ್ಕೆ ಆಧ್ಯತೆ   6) ಸಾಮೂಹಿಕ ಶಿಕ್ಷಣಕ್ಕೆ  ಪ್ರಾಶಸ್ರ್ಯವಿತ್ತು.
ನೀಡಲಾಗುತಿತ್ತು. 
7) ವೇದಗಳ ಕಾಲದ ಶಿಕ್ಷಣದಲ್ಲಿ ಗುರುಗಳ ನಿರಂಕುಶ   7) ಬೌದ್ಧರು ಕಾಲೀನ ಶಿಕ್ಷಕರಲ್ಲಿ ಪ್ರಜಾಸತ್ಮಾತ್ಮಾಕ 
ಅಧಿಕಾರಿ ಉಳ್ಳವರಾಗಿದ್ದರು. ಅಭಿವೃತ್ತಿಯನ್ನು ಕಾಣಬಹುದು.
8) ವೇದಗಳ ಕಾಲದ ಶಿಕ್ಷಣದಲ್ಲಿ ಸಂಸ್ಕøತ ಭಾಷೆಗೆ   8) ಬೌದ್ಧರು ಪ್ರಾದೇಶಿಕ ಭಾಷೆಗಳನ್ನು ಬೋಧಿಸಿ 
ಪರಮೋಚ್ಚಸ್ಥಾನ ಜೊತೆಗೆ ಅದುವೇ ಶಿಕ್ಷಣ ಅವುಗಳನ್ನೇ ಶಿಕ್ಷಣ ಮಾಧ್ಯಮವನ್ನಾಗಿ 
ಮಾಧ್ಯಮವಾಗಿತ್ತು. ಮಾಡಿದರು.
9) ವೇದಗಳ ಶಿಕ್ಷಣದಲ್ಲಿ ಹೇಳಿಕೊಳ್ಳುವಂಥ ಸುಸಜ್ಜಿತ   9) ಸುಸಜ್ಜಿತ ವಿಶ್ವವಿದ್ಯಾಲಯಗಳನ್ನು ಕಟ್ಟಿದ ಕೀರ್ತಿ  ಬೌದ್ಧರಿಗೆ ಸಂಸ್ಥೆಗಳು ಬೆಳೆದು ಬರಲಿಲ್ಲ. ಸಲ್ಲುತ್ತದೆ. ಉದಾ-ನಳಂದ, ತಕ್ಷಶಿಲಾ, ವಲ್ಲಭಿ,                                                   ವಿಕ್ರಮಶೀಲ ಮುಂತಾಗಿ.
10) ಅಲೌಕಿಕ ಶಿಕ್ಷಣಕ್ಕೆ ಅಗ್ರ ತಾಂಬೂಲವನ್ನು ವೇದಗಳ   10) ಲೌಕಿಕ & ಅಲೌಕಿಕ ಶಿಕ್ಷಣಗಳೆರಡು ಸುಂದರ 
    ಕಾಲದಲ್ಲಿ ನೀಡಲಾಯಿತು. ಸಮನ್ವಯವನ್ನು ಕಾಣುತ್ತೇವೆ.
11) ಬೋಧನಾ ಪದ್ದತಿಯ ಅಂಗವಾಗಿ ಉಪನ್ಯಾಸ ಪದ್ದತಿಗೆ       11) ಉಪನ್ಯಾಸಕ್ಕಿಂತಲೂ ಚರ್ಚಾವಿಧಾನಕ್ಕೆ ಅಧಿಕ
   ಅಗ್ರ ಪ್ರಾಸಸ್ತ್ಯ. ಮನ್ನಣೆ ನೀಡಿದ್ದರು.
12) ಪ್ರವಾಸವನ್ನು ಶಿಕ್ಷಣದಲ್ಲಿ ಮಹತ್ವದ್ದಾಗಿ ಪರಿಗಣಿಸಲಿಲ್ಲ.   12) ಬೌದ್ಧರ ಶಿಕ್ಷಣದಲ್ಲಿ ಪ್ರವಾಸವನ್ನು ಜ್ಞಾನದ ಪ್ರಸಾರ & ಜ್ಞಾನಾರ್ಜನೆಯ ಒಂದು ಉಪಯುಕ್ತ ವಿಧಾನವೆಂದು ಅಂಗೀಕರಿಸಲಾಗಿತ್ತು.
13) ವೇದಗಳ ಕಾಲದಲ್ಲಿ ವರ್ಣವ್ಯವಸ್ಥೆ ಇನ್ನೂ ಬೆಳೆದಿರಲಿಲ್ಲ.   13) ಶಿಕ್ಷಣವನ್ನು ಜ್ಯಾತ್ಯಾತೀತವಾಗಿ ನೀಡಿದ ಹೆಗ್ಗಳಿಕೆ ಇದೆ.
  ಆದರೂ ಶಿಕ್ಷಣ ಅಷ್ಟೊಂ,ದು ವ್ಯಾಪಾಕವಾಗಿದ್ದಿಲ್ಲ.
14) ವೇದಗಳ ಶಿಕ್ಷಣ ಸಂಸ್ಥೆಗಳು ಹೊರ ದೇಶದ ವಿದ್ಯಾರ್ಥಿ   14) ಭಾರತದ ನೆರೆಹೊರೆಯ ರಾಷ್ಟ್ರಿಗಳಿಂದ ವಿದ್ಯಾರ್ಥಿಗಳು 
-ಗಳನ್ನು ಅಕರ್ಷಿಸಿದ ಉದಾಹರಣೆಗಳಿಲ್ಲ. ಬೌದ್ಧರ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾಭ್ಯಾಸಕ್ಕಾಗಿ ಬಂದಿದ್ದರು.



ಕೊಟ್ರೇಶ್ ಎಸ್ ಉಪ್ಪಾರ್
ಆಲೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ