ಭಾನುವಾರ, ಜುಲೈ 6, 2014

ಆತ್ಮೋದ್ಧಾರಕ್ಕಾಗಿ ಉದಿಸಿದ ಬಸವ ಸಾಹಿತ್ಯ - ಕೊಟ್ರೇಶ್ ಎಸ್.ಉಪ್ಪಾರ್


ವಚನ ಎಂದರೆ ಮಾತು ಎಂದರ್ಥ. ವಚನ ಸಾಹಿತ್ಯ ಹುಟ್ಟಿದ್ದೇ ಜನ ಸಾಮಾನ್ಯರಿಗಾಗಿ. ಇದಕ್ಕೂ ಮುಂಚೆ ಇದ್ದ ಪಂಪ ಪೂರ್ವ ಹಾಗೂ ಪಂಪ ಯುಗದ ಸಾಹಿತ್ಯ ಪಂಡಿತರಿಗೆ ಮಾತ್ರ ಸೀಮಿತವಾಗಿತ್ತು. ಸಂಸ್ಕøತ ಭೂಯಿಸ್ಟವಾದುದಾಗಿದೆ. ಇಲ್ಲಿ ಬಹುತೇಕ ಜೈನ ಸಾಹಿತಿಗಳೇ ಅಧಿಕವಾಗಿದ್ದರು. 
ಈ ಸಾಹಿತ್ಯ ಸಂಸ್ಕøತದ ಅಧೀನವಾಗಿತ್ತು. ಹಾಗೆಯೇ ಹೊಗಳಿಕೆಯ ಕವಚ ಆವರಿಸಿತ್ತು. ಆದರೆ ನಂತರ ಬಂದ ಶರಣ ಸಾಹಿತ್ಯದ ಗುರಿಯೇ ಬೇರೆಯಾಗಿತ್ತು. ಜನಸಾಮಾನ್ಯರ ಆತ್ಮೋದ್ದಾರಕ್ಕೆ ಸ್ಪಂಧಿಸಿ ಸಾಮಾಜಿಕ ಪರಿವರ್ತನೆಗೆ ಕಾರಣವಾಗುವ ಸಾಹಿತ್ಯ ರಚನೆ ಇವರ ಹೆಗ್ಗುರಿಯಾಯಿತು. 
ಬಸವಾದಿ ಶರಣರ ಅನುಭವದ ನುಡಿಮುತ್ತುಗಳು, ಸನ್ನಡತೆಯ ದೀವಿಗೆಯಾಗಿ ಜನ ಸಾಮಾನ್ಯರ ಹೃದಯ ತಟ್ಟಿದವು. ಅವಿದ್ಧಾವಂತರು ಆಶುಕವಿತೆಗಳಂತೆ ವಚನ ರಚನೆಯಲ್ಲಿ ತೊಡಗಿದರು. ಲಿಂಗ ತಾರತಮ್ಯ, ವ್ಯಕ್ತಿ ತಾರತಮ್ಯಯಿಲ್ಲದೇ, ಜಾತಿ-ಧರ್ಮಗಳೆಲ್ಲೆ ಮೀರಿ ಸಾಹಿತ್ಯ ರಚನೆಯಾಯಿತು, ಪ್ರಸಾರವಾಯಿತು.
ನಿರಾಭರಣ ಸುಂದರಿಯಂತೆ ‘ವಚನ ಸಾಹಿತ್ಯ’ ಕನ್ನಡ ಸಾರಸ್ಚತ ಲೋಕದಲ್ಲಿ ಪ್ರಜ್ವಲಿತ ಜೀವಂತ ತಾರೆಯಗಿ ನಿಂತಿದೆ. ಇಲ್ಲಿನ ಆದರ್ಶ,   ತತ್ತ್ವಗಳು, ಗುರಿಗಳನ್ನು, ಭಾರತದ ಮತ್ತ್ಯ್ಯಾವ ಭಾಷೆಯಲ್ಲಿ ಕಾಣಲಾಗುವುದಿಲ್ಲ
ಮಾನವೀಯ ಮೌಲ್ಯಗಳ ಆಗರವಾಗಿರುವ ವಚನ ಸಾಹಿತ್ಯ ಮನುಕುಲದ ಹೊಂಬೆಳಕು
ಹನ್ನೆರಡನೇ ಶತಮಾನದ ಶರಣರು ಯಾವುದೇ ಉನ್ನತ ವ್ಯಾಸಂಗ ಮಾಡದಿದ್ದರೂ ಇವೆಲ್ಲಕ್ಕೂ ಮೀರಿದ ಜ್ಞಾನ ಸಾಗರಿಗಳಾಗಿದ್ದರು. ಅವರಲ್ಲಿದ್ದ ವೈಜ್ಞಾನಿಕ ಹಾಗೂ ವೈಚಾರಿಕ ನಿಲುವುಗಳು ಇಂದಿಗೂ ಮುಂದೆಯೂ ಪ್ರಸ್ತುತವಾಗಿವೆ.
ಅವರು ಕಲ್ಲು, ಮಣ್ಣು, ಲೋಹಗಳಲ್ಲಿ ದೈವವನ್ನು ಕಾಣದೇ ಪ್ರಕೃತಿಯಲ್ಲಿ ಪ್ರೀತಿ, ವಿಶ್ವಾಸ,ನ್ಯಾಯ, ನೀತಿ, ಧರ್ಮಗಳಲ್ಲಿ ಕಂಡವರು.
ಬಸವಣ್ಣನವರು ಶರಣ ಸಂಕುಲದ ಹೊಂಬೆಳಕು. ಜಗಜ್ಯೋತಿಯೆಂದೇ ಕರೆಯಲ್ಪಡುವ ಬಸವಣ್ಣ ಮಾನವ ಕುಲಕೋಟಿಯ ಒಳಿತಿಗಾಗಿ ಬಾಳಿ ಬದುಕಿದವರು. ಮನುಜ ಶ್ರೇಯೋಭಿವೃದ್ದಿಗೆ ಶ್ರಮಿಸಿದ ಕಾಯಕಯೋಗಿ ಎಂದರೆ ಅತಿಶಯೋಕ್ತಿಯಾಗಲಾರದು.
ಬಸವಾದಿ ಶರಣರ ವಚನ ಯುಗದಲ್ಲಿ ವೈಚಾರಿಕತೆ ಝರಿಯಾಗಿ ಹರಿದಂತೆ ಮತ್ತ್ಯಾವ ಕಾಲಘಟ್ಟದಲ್ಲಿಯೂ ಕಾಣಲಾಗುವುದಿಲ್ಲ. ದೆವ್ವ, ಮೌಢ್ಯ, ಅಧರ್ಮ, ಅನೀತಿ, ಮೇಲು ಕೀಳು, ಜಾತಿಯತೆ ಮುಂತಾದ ಸಾಮಾಜಿಕ ಅನಿಷ್ಟಗಳನ್ನು ಖಂಡಿಸಿ ಸಮಸಮಾಜ ನಿರ್ಮಾಣಕ್ಕಾಗಿ ಹಗಲಿರುಳೂ ಶ್ರಮಿಸಿದರು.

        ಎತ್ತ ನೋಡಿದರತ್ತತ್ತ ನೀನೇ ದೇವಾ 
ಸಕಲ ವಿಸ್ತಾರದ ರೂಹು ನೀನೇ ದೇವಾ 
ವಿಶ್ವತೋ ಚಕ್ಷು ನೀನೇ ದೇವಾ 
ವಿಶ್ವತೋ ಮುಖ ನೀನೇ ದೇವಾ
ವಿಶ್ವತೋ ಬಾಹು ನೀನೇ ದೇವಾ 
ವಿಶ್ವತೋ ಪಾದ ನೀನೇ ದೇವಾ 
ಕೂಡಲಸಂಗಮ ದೇವಾ |

       ಬಸವಣ್ಣನವರು ಮೂರ್ತಿ ಪೂಜೆಯನ್ನು ಖಂಡಿಸಿದವರು. ದೇವರು ಯಾವುದೇ ಕಲ್ಲು, ಮಣ್ಣು, ಮೂರ್ತಿಗಳಲಿಲ್ಲ. ಅವನ ವಿಸ್ತಾರ, ಚಕ್ಷು, ಮುಖ, ಬಾಹು, ಪಾದ ದೃಷ್ಠಿಗೆ ನಿಲಕದ್ದು. ಇಡೀ ಬ್ರಹ್ಮಾಂಡವೇ ಅವನು ಆವರಿಸಿದ್ದಾನೆ ಎಂಬ ವೈಶಾಲ್ಯತೆಯನ್ನು ಹೊರಹಾಕಿದ್ದಾರೆ.
ದೇವಲೋಕ, ಮತ್ಸ್ಯಲೋಕ, ಸ್ವರ್ಗ ನರಕಗಳ ಭ್ರಾಂತಿಯಲ್ಲಿ ಪುರಾಣ ಕಥೆಗಳನ್ನು ಹೆಣೆದು ಅವುಗಳಂತೆಯೇ ಮೌಢ್ಯಾಂಧಾಕಾರದಲ್ಲಿ ಬಾಳುತ್ತಿರುವ ಸಮಾಜಕ್ಕೆ ಬಸವಣ್ಣನವರು ತಮ್ಮ ವಚನವೊಂದರಲ್ಲಿ ಹೀಗೆ ಹೇಳಿದ್ದಾರೆ.
ದೇವಲೋಕ ಮತ್ರ್ಯಲೋಕವೆಂಬುವು 
ಬೇರಿಲ್ಲ ಕಾಣಿರೋ |
ಸತ್ಯವನ್ನು ನುಡಿವುದೇ ದೇವಲೋಕ 
ಮಿಥ್ಯವನು ನುಡಿವುದೇ ಮತ್ರ್ಯಲೋಕ
      ಆಚಾರವೇ ಸ್ವರ್ಗ, ಅನಾಚಾರವೇ, ನರಕ 
ಕೂಡಲಸಂಗಮದೇವಾ ನೀವೆ ಪ್ರಮಾಣು |
ಸ್ವರ್ಗ, ನರಕ, ದೇವಲೋಕ , ಮತ್ರ್ಯಲೋಕ ಬೇರೆಲ್ಲಿಯೂ ಇಲ್ಲ, ಭೂಮಿಯಲ್ಲೇ ನಮ್ಮ ನಡೆ ನುಡಿ, ವಿಚಾರ, ಆಚಾರಗಳೊಂದಿಗಿದೆ. ನಮ್ಮ ವರ್ತನೆಯ ಮೇಲೆ ಅವುಗಳು ಅವಲಂಬಿತವಾಗಿವೆ ಎಂದು ಬಸವಣ್ಣ ಹೇಳುತ್ತಾರೆ.
ಉಳ್ಳವರು ಶಿವಾಲಯ ಮಾಡುವರು 
ನಾನೇನ ಮಾಡುವೆ ಬಡವನಯ್ಯಾ?
ಎನ್ನ ಕಾಲೇ ಕಂಬ, ದೇಹವೇ ದೇಗುಲ 
ಶಿರ ಹೊನ್ನ ಕಳಸವಯ್ಯ
ಕೂಡಲಸಂಗಮದೇವಾ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ |
ಈ ವಚನದಲ್ಲಿ ಬಸವಣ್ಣನವರು ಆಡಂಬರ, ಡೊಂಬಚಾರದ ಭಕ್ತಿ, ಪೂಜೆ, ಪುನಸ್ಕಾರಗಳಿಗೆ ಮಾರು ಹೋಗದೇ ಕಲ್ಲು ದೇವರಲ್ಲಿ ದೈವವನ್ನು ಕಾಣದೇ ಬಡಿವಾರದ ಭಕ್ತಿಗಿಂತ ಆತ್ಮೋದ್ಧಾರದ ನಡೆ ನುಡಿಗಳನ್ನು ಅಳವಡಿಸಿಕೊಂಡು ದೇಹವನ್ನೇ ದೇವಾಲಯವಾಗಿಸಿ ಆತ್ಮವನ್ನು ಪರಿಶುದ್ದತೆಯಿಂದ ನಡೆಸುವ ಭಕ್ತ್ತಿಮೇಲು ಎಂಬ ಸಂದೇಶವನ್ನು ಸಾರಿದ್ದಾರೆ. 
ನೀರ ಕಂಡಲ್ಲಿ ಮುಳುಗುವರಯ್ಯ
ಮರವ ಕಂಡಲ್ಲಿ ಸುತ್ತುವರಯ್ಯ 
ಬತ್ತುವ ಜಲವ, ಒಣಗುವ ಮರವ 
ಮೆಚ್ಚಿದವರು ನಿಮ್ಮನ್ನೆತ್ತ ಬಲ್ಲರು?
ಕೂಡಲಸಂಗಮದೇವಾ.|
ಭಕ್ತಿ ಎಂಬ ಡಂಭಾಚಾರದಲ್ಲಿ ಮೌಢ್ಯದ ಬಿಳಿಲುಗಳನ್ನು ದಿಕ್ಕರಿಸಿ ಕ್ಷಣಿಕತೆಯನ್ನು ತೊರೆದು ಶಾಶ್ವ್ವತ ಆನಂದಕ್ಕಾಗಿ ಪರಿತಪಿಸಬೇಕು. ವೈಚಾರಿಕ, ವೈಜ್ಞಾನಿಕ ಮನೋಭಾವನೆಯಿರದ ಭಕ್ತರು ಇದ್ದು ಫಲವೇನು? ಮಾನವೀಯ ಮೌಲ್ಯಗಳು ಇಂಥವರಲ್ಲಿ ಅರಳಲು ಸಾಧ್ಯವಿಲ್ಲವೆಂದು ಇಲ್ಲಿ ಹೇಳುತ್ತಾರೆ.
ವಚನ ಸಾಹಿತ್ಯದ ಚÀಳವಳಿಯಲ್ಲಿ ಬಸವಣ್ಣನವರ ಸಾಧನೆ ಮಹತ್ತರವಾದುದು. ಧಾರ್ಮಿಕವಾಗಿ ಸಾಮಾಜಿಕವಾಗಿ ಜನರ ಮೇಲೆ ಮೂಡಿಸಿದ ಹೊಸ ಕಲ್ಪನೆ, ನವ ಮನ್ವಂತರವನ್ನೇ ರೂಪಿಸಿತೆನ್ನಬಹುದು. ಸಾಹಿತ್ಯವನ್ನು ಜನರ ಜೀವನದ ಜೀವನಾಡಿಯಾಗಿ ಮಾಡಿ, ಅವರ ಮನಸ್ಸನ್ನು ಹಸನುಗೊಳಿಸುವ ಸಾಧನವನ್ನಾಗಿ ಬೆಳೆಸಿದರು.
ಹುತ್ತವ ಬಡಿದೆಡೆ ಹಾವು 
ಸಾಯಬಲ್ಲುದೇ ಅಯ್ಯ?
ಅಘೋರ ತಪವ ಮಾಡಿದರೇನು?
ಅಂತರಂಗ ಆತ್ಮಶುದ್ದಿಯಿಲ್ಲದವರನೆಂತು
ನಂಬುವನಯ್ಯಾ ಕೂಡಲಸಂಗಮದೇವಾ?
ಅಂತರಂಗ ಶುದ್ದಿಯಿಲ್ಲದೇ ಬಹಿರಂಗವಾಗಿ ಏನೆಲ್ಲಾ ತೋರ್ಪಡಿಸಿದರೂ ಅದು ನಿರರ್ಥಕ. ಹುತ್ತ ಬಡಿದೊಡೆ ಅದರೊಳಗಿರುವ ಹಾವು ಸಾಯಬಲ್ಲುದೇ? ಎಂದು ಪ್ರಶ್ನಿಸುವುದರ ಮೂಲಕ ಬಾಹ್ಯ ನೀತಿ ಸಾರಗಳಿಗಿಂತ ಆಂತರಿಕ ಹೊಳಪು ಮುಖ್ಯ ಎಂಬುದಿಲ್ಲಿ ಪ್ರತಿಧ್ವನಿಸುತ್ತದೆ.
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ 
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆ ಮನೆಯ ದುಃಖಕ್ಕೆ ಅಳುವವರ 
ಮೆಚ್ಚ ಕೂಡಲಸಂಗಮದೇವಾ |
ಇಂತಹ ಸರಳವಾದ ವಚನಗಳ ಮೂಲಕ ಮನುಷ್ಯರ ತಪ್ಪುಗಳನ್ನು ಮನುಷ್ಯನೇ ತಿದ್ದಿಕೊಳ್ಳಬೇಕು. ನಮ್ಮಲ್ಲಿಯೇ ತಪ್ಪುಗಳನ್ನು ಇಟ್ಟುಕೊಂಡು, ಬೇರೆಯವರ ತಪ್ಪುಗಳನ್ನು ತಿದ್ದಲು ಸಾಧ್ಯವಿಲ್ಲವೆಂದು, ನಮ್ಮ ನಾವು ಅರಿತು ಬಾಳಬೇಕೆಂದು ಬಸವಣ್ಣನವರು ಹೇಳುತ್ತಾರೆ.
ಕಲ್ಲನಾಗರ ಕಂಡರೆ ಹಾಲನೆರೆಯೆಂಬರು 
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ 
ಉಂಬ ಜಂಗಮ ಬಂದೆಡೆ ನಡೆಯೆಂಬರು 
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ 
ನಾನು ಕೂಡಲ ಸಂಗನ ಶರಣರ ಕಂಡು 
ಉದಾಸೀನವ ಮಾಡಿದೆಡೆ
ಕಲ್ಲತಾಗಿದ ಮಿಟ್ಟಿಯಂತಪ್ಪರಯ್ಯಾ.|
ಭಕ್ತಿಯ ಪರವಶತೆಯಲ್ಲಿ ವಿಮೋಚನಾ ಶಕ್ತಿಯಿಲ್ಲದ ಜನ ಅನೂಚಾನವಾಗಿ ಬಂದ ಆಡಂಬರದ ಅರ್ಚನೆಗಳನ್ನು ಸುಳ್ಳು ಅಸಹ್ಯ ಮುಂತಾದ ಕ್ಲೇಶಗಳನ್ನು ಇಟ್ಟುಕೊಂಡಿರುವುದನ್ನು ತಪ್ಪು ಎಂದು ಖಂಡಿಸುತ್ತಾ, ಜನರಲ್ಲಿನ ಮೌಢ್ಯವನ್ನು ಎತ್ತಿ ತೋರಿಸುತ್ತಾ, ಭ್ರಮೆಯ ಬದುಕು ಬಿಟ್ಟು ವಿಚಾರದ ಜಗತ್ತಿಗೆ ಬರುವ ದಾರಿಯನ್ನು ತೋರಿಸಿದ್ದಾರೆ.
ಬಸವಣ್ಣನವರ ರಚನೆಗಳು ಸ್ವಚ್ಛಂದ, ಸ್ವತಂತ್ರವಾಗಿಯೂ, ಛಂದೋಬದ್ದವಾಗಿ ಕಾಣುತ್ತವೆ. ನಿಧೀಷ್ಟ ಛಂದಸ್ಸನ್ನು ನಾವು ಇಲ್ಲಿ ಕಾಣದಾದರೂ ತಿರುಳಿಗೆ ತಕ್ಕಂತಹ ಲಯ, ವಿನ್ಯಾಸ ಮೇಳೈಸಿರುವುದನ್ನು ಕಾಣುತ್ತೇವೆ. ಇವರ ವಚನಗಳಲ್ಲಿ ಭಾವ ಸಾಂದ್ರತೆ, ಸಂಕ್ಷಿಪ್ತತೆ ಮತ್ತು ಗೇಯತೆಗಳು ಪಡಿಮೂಡಿವೆ.
ನಾನು ಬಸವಣ್ಣನವರು ಸು 1453 ವಚನಗಳ ಪೈಕಿ ಕೆಲವು ಅತ್ಯತ್ತ್ಕøಷ್ಟ ವೈಚಾರಿಕ ಸೆಲೆಯುಕ್ಕಿಸುವ ವಚನಗಳನ್ನು ಮಾತ್ರ ಆರಿಸಿಕೊಂಡು ಯಥಾವತ್ತಾಗಿ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇನೆ.
ಭಕ್ತಿಯ ಹೆಸರಿನಲ್ಲಿ ದೇವರ ಹೆಸರಿನಲ್ಲಿ ಶೋಷಣೆ ನಡೆಯುತ್ತಿರುವುದನ್ನು ಕಾಣುತ್ತೇವೆ. ದುಡಿಮೆಗಾಗಿಯೇ ದೈವಗಳನ್ನು ಸೃಷ್ಟಿಸಿಕೊಂಡು ಶ್ರೀ ಕ್ಷೇತ್ರಗಳೆಂದು ಬೊಬ್ಬಿಟ್ಟು ಹೊಟ್ಟೆ ಪೊರೆಯುವವರು ಹಲವರು. ಇವರ ಮಾಯಾಂಗನೆಗೆ ತುತ್ತಾಗುವ ಭಕ್ತರು ಅಗಣಿತ. ಆದ್ದರಿಂದಲೇ ಬಸವಣ್ಣನವರು ಇಂತಹ ದೈವ ಪ್ರಚಾರಕ ಹಾಗೂ ಭಕ್ತರ ಹೀನಾಯ ಮನೋಸ್ಥಿತಿ ಕಂಡು ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ.
ಅರಗು ತಿಂದು ಕರಗುವ ದೈವವ 
ಉರಿಯ ಕಂಡರೆ ಮುರುಟುವ 
ದೈವವನೆಂತು ಸರಿಯೆಂಬೆನಯ್ಯಾ?
ಅವಸರ ಬಂದರೆ ಮಾರುವ 
ದೈವವನೆಂತು ಸರಿಯೆಂಬೆನಯ್ಯಾ?
ಅಂಜಿಕೆಯಾದರೆ ಹೂಳುವ 
ದೈವವನೆಂತು ಸರಿಯೆಂಬೆನಯ್ಯಾ?
ಸಹಜ ಭಾವ ನಿಜೈಕ್ಯ
ಕೂಡಲಸಂಗಮದೇವಾ |
ಬಸವಣÐಣನವರು ಆತ್ಮ ಕಲ್ಯಾಣ, ಲೋಕಕಲ್ಯಾಣವನ್ನೂ ಒಟ್ಟಿಗೆ ಸಾಧಿಸಿದ ಮಹಾಪುರುಷ. ತಮ್ಮ ಸುತ್ತಮುತ್ತ ಕಂಡ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಸಾಗಿದರು. 
ದಯವಿಲ್ಲದ ಧರ್ಮವೇವುದಯ್ಯಾ
ದಯವು ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ 
ದಯವೇ ಧರ್ಮದ ಮೂಲವಯ್ಯಾ |
ದಯೆಯಿಲ್ಲದ ಮನುಷ್ಯನಿಲ್ಲ, ಹೃದಯವಿಲ್ಲದ ಪ್ರಾಣಿಯಿಲ್ಲ, ವಿನಯ, ಔದಾರ್ಯಗಳಿರಬೇಕೆಂದು ಹಾಗಿದ್ದರೆ ನಾವು ಮಾತ್ರ ವಿನಯವಂತರಾಗಲು ಸಾಧ್ಯವೆಂದು ಬಸವಣ್ಣನವರು ಹೇಳುತ್ತಾರೆ.
ಜ್ಞಾನದ ಬಲದಿಂದ 
ಅಜ್ಞಾನದ ಕೇಡುನೋಡಯ್ಯಾ
ಜ್ಯೋತಿಯ ಬಲದಿಂದ 
ತಮಂಧದ ಕೇಡು ನೋಡಯ್ಯಾ
ಸತ್ಯದ ಬಲದಿಂದ 
ಅಸತ್ಯದ ಕೇಡು ನೋಡಯ್ಯಾ
      ಪುರುಷದ ಬಲದಿಂದ 
ಅವಲೋಹದ ಕೇಡು ನೋಡಯ್ಯಾ
ಕೂಡಲ ಸಂಗನ ಶರಣರ 
ಅನುಭಾವದ ಬಲದಿಂದ 
ಎನ್ನ ಭವದ ಕೇಡು ನೋಡಯ್ಯಾ |
ಅಜ್ಞಾನ, ತಮಂಧ, ಅಸತ್ಯ, ಅವಲೋಹಗಳು ಸಮಾಜಕ್ಕೆ ಕಂಟಕಗಳಿದ್ದಂತೆ ಇವೆಲ್ಲಾ ತೊಡೆಯಬೇಕಾದರೆ ಸಮಾಜ ಬೆಳಗುಗೊಳ್ಳಬೇಕಾದರೆ ಜ್ಞಾನ, ಜ್ಯೋತಿ, ಸತ್ಯ ಪುರುಷ ಮಣಿಗಳ ಅತ್ಯಗತ್ಯವಿದೆ. ಈ ದಿಶೆಯಲ್ಲಿ ಪ್ರತಿಯೊಬ್ಬ ಮಾನವ ಮೌಲ್ಯಗಳರಸುತ್ತಾ ಸಾಗಿದರೆ ಸುಖೀ ಸಾಮ್ರಾಜ್ಯ ಉದಿಸುತ್ತದೆ ಎಂಬ ಸಂದೇಶವನ್ನಿಲ್ಲಿ ಅಣ್ಣ ಸಾರುತ್ತಾರೆ.
ಒಲೆಹುತ್ತಿ ಉರಿದರೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲಲುಬಹುದೆ!
ಏರಿ ನೀರುಂಬಡೆ, ಬೇಲಿ ಕೆಯ್ಯಾ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ 
ತಾಯಿ ಮೊಲೆವಾಲು ನಂಜಾಗಿ
ಕೊಲುವೆಡೆ ಇನ್ನಾರಿಗೆ ದೂರುವೆ?
ತಂದೆ ಕೂಡಲಸಂಗಮದೇವಾ
ನೀ ಹುಟ್ಟಸಿ ಜೀವನ ಭವದುಃಖಿಯ
ಮಾಡಿದ ಬಳಿಕ ಬಿಡಿಸುವರಾರುಂಟು?
ತಾವು ಇಚ್ಚಿಸಿದಂತೆ ದೈವ ಒಲಿಯದಿದಾಗ ಬಸವಣ್ಣನವರಿಗಾದ ಯಾತನೆ ಈ ವಚನದಲ್ಲಿ ಮೈದೋರಿದೆ. ಪ್ರಚಂಡಾನುಭವವೊಂದರ ವಿಶಿಷ್ಟ ಅಭಿವ್ಯಕ್ತಿ ಪಡಿಮೂಡಿದೆ. ಒಲೆ ಹೊತ್ತಿ ಉರಿದರೆ ತೊಂದರೆಯಾಗದು; ಬೆಂಕಿ ತಾಗದಂತೆ ದೂರ ಸರಿಯಬಹುದು. ಒಂದು ವೇಳೆ ಮನೆಗೆ ಬೆಂಕಿ ಹತ್ತಿದರೂ ಯೋಚ£ಯಿಲ್ಲ, ಹೊರಹೋಗಿ ಜೀವಿಸಬಹುದು. ಆದರೆ ಸಕಲ ಜೀವರಾಶಿಗೆ ಅಸ್ಥಿತ್ವದ ಆಧಾರವಾಗಿರುವ ಧರಿತ್ರಿಯೇ ಬೆಂಕಿ ಹೊತ್ತು ಧಗಧಗಿಸಿ ಉರಿಯತೊಡಗಿದರೆ ಯಾರು ಗತಿ? ಆಗ ವಾಸಸ್ಥಾನ, ಆಶ್ರಯ ಸ್ಥಳ ಯಾವುದು? ಮತ್ಯಾವ ಶಕ್ತಿ ಅಂತಹ ಘನಘೋರ ಜ್ವಾಲೆಗಳನ್ನು ನಿಯಂತ್ರಿಸಲು ಸಾಧ್ಯ? ಎಂದು ಪ್ರಶ್ನಿಸುತ್ತಾ ಇಲ್ಲಿನ ವಚನದಲ್ಲಿ ಇಡೀ ಭೂಮಿಯನ್ನು ಕೂಡಲ ಸಂಗಮನಿಗೆ ಹೋಲಿಸಿ ಆಯಾ ಕರ್ತವ್ಯ ಪರತೆಯ ಬಗ್ಗೆ ಬೆಳಕು ಚೆಲ್ಲುತ್ತಾರೆ.
ಬಸವಣ್ಣನವರು ಅಂದಿನಕಾಲದ ಜನರ ಜೀವನದ ಪ್ರತಿಬಿಂಬದಂತೆ ವಚನಗಳನ್ನು ಬರೆದಿದ್ದಾರೆ. ಕಾಯಕವೇ ಕೈಲಾಸ ತತ್ತ್ವದಡಿಯಲ್ಲಿ ಬದುಕಿನ ಅರ್ಥವನ್ನು ಅರಸುತ್ತಾ ಸರ್ವ ಸಮತೆಯ ವೀರಶೈವ ಧರ್ಮವನ್ನೂ ಬೆಳಗಿದವರು. ಶಿವಶರಣರಲ್ಲಿ ಮಹಾಭಕ್ತ, ಪ್ರಸಿದ್ದ ವಚನಕಾರ, ಸಮಾಜ ಸುಧಾರಕ, ಅನುಭವ ಮಂಟಪದ ಮೂಲಾಧಾರ, ಹನ್ನೆರಡನೆಯ ಶತಮಾನದಲ್ಲಿ ನಡೆದ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯ ನೇತಾರರಾಗಿ ನಮ್ಮೆದುರಿಗೆ ನಿಲ್ಲುತ್ತಾರೆ.
ವೀರಶೈವವು ಸರ್ವಸಮತೆಯನ್ನು ಸಾರಿದುದರಿಂದ ಎಲ್ಲ ಜಾತಿ, ಮತ ಪಂಥದವರೂ ತಾವು ಉದ್ಧ್ದಾರವಾಗುವುದಕ್ಕೆ ಮಾತ್ರವಲ್ಲದೆ, ಇತರರನ್ನೂ ಉದ್ಧÀ್ದರಿಸಲು ಶಕ್ತರಾದರು. ಆಧ್ಯಾತ್ಮ ಜ್ಞಾನಕ್ಕೆ ಅನರ್ಹರೆಂದು ಭಾವಿಸಲಾಗಿದ್ದ ಸ್ತ್ರೀ ಶೂದ್ರರೂ ವಚನ ಬರೆದಿದ್ದಾರೆ. ಕುಲಕ್ಕಿಂತ ಶೀಲ ಮುಖ್ಯ, ಕಾಯಕ ಮುಖ್ಯ ‘ಕಾಯಕವೇ ಕೈಲಾಸ’ ಈ ಕಾಯಕದಲ್ಲಿ ತಾರತಮ್ಯಗಳಿಲ್ಲ  ಕಟ್ಟಿಗೆ ಮಾರುವವನು, ಉಪ್ಪು ಮಾರುವವನು, ಚಪ್ಪಲಿ ಹೊಲಿಯುವವನು, ಬೇಡ, ದೇವಾಂಗ, ಮಡಿವಾಳ, ಅಂಬಿಗ, ಒಕ್ಕಲಿಗ ಇತ್ಯಾದಿ ಎಲ್ಲರೂ ವೇದವನನ್ನೋದುವ ಬ್ರಾಹ್ಮಣರಷ್ಟೇ ಮುಖ್ಯ. ಮನುಷ್ಯನ ಜಾತಿಗಿಂತ, ನುಡಿಗಿಂತ ನಡತೆ ಮುಖ್ಯ. ಶುದ್ದತೆಯಿಂದ ಚಾರಿತ್ರ್ಯ ಹೊಂದಿದವರು ಕೀಳು ಜಾತಿಯಾಗಿದ್ದರೂ ವಚನ ರಚನೆಯಿಂದ ಶರಣ ಪಟ್ಟಕ್ಕೆರಿದ್ದಾರೆ.
ಯಾವ ಕುಲ, ಜಾತಿ, ಮತ, ಪಂಥ, ವೃತ್ತಿಯವನೇ ಆಗಲಿ ಬಂದು ವೀರಶೈವ ಧರ್ಮವನ್ನು ಸ್ವೀಕರಿಸಬಹುದಾಗಿತ್ತು. ಅವನು ವೀರಶೈವನಾದ ಮೇಲೆ ಅವನ ಹಿಂದಿನ ಹುಟ್ಟೆಲ್ಲವೂ ಅಳಿಸಿ ಹೋಗಿ ಉಳಿದವರಿಗೆ ಸರಿಸಮಾನವಾಗಿ ಬಿಡುತಿದ್ದನು. ಭಕ್ತಿ ಹಾಗೂ ಶುದ್ದ ಜೀವನ ಮುಖ್ಯ ಎಂದು ಸಾರಿದರು. ಸ್ತ್ರೀಯರಿಗೆ ಆಧ್ಯಾತ್ಮಿಕ ವಿಚಾರದಲ್ಲಿ ಪುರುಷರಿಗೆ ಸರಿಸಮಾನವಾದ ಸ್ಥಾನಮಾನವಿಲ್ಲದಿದ್ದ ಆ ಕಾಲದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಹಕ್ಕಿದೆ ಎಂದು ಹೇಳಿ ಅವರಿಗೂ ಲಿಂಗಧಾರಣೆ, ದೀಕ್ಷಾ ಸಂಸ್ಕಾರಗಳಿಗೆ ಅವಕಾಶ ಕೊಟ್ಟು ಸ್ವತಂತ್ರವಾಗಿ ಪೂಜೆ ಮಾಡಲು ಸಮಾನ ಅವಕಾಶ ಕಲ್ಪಿಸಿಕೊಟ್ಟರು.
ಬಸವಣ್ಣ ಒಬ್ಬ ಶೋಷಣಾ ರಹಿತ ಸಮಾಜದ ಕನಸುಗಾರರಾಗಿದ್ದರು. ಜನಸಾಮಾನ್ಯರ ಆತ್ಮೋದ್ಧ್ದಾರಕರಾಗಿದ್ದರು. ಶ್ರೇಷ್ಟ ದಾರ್ಶನಿಕರೂ, ಸಮಾಜ ಚಿಂತಕರು, ವೈಚಾರಿಕ ಪ್ರ್ರಾಜ್ಞರೂ, ವಿಶ್ವಮಾನವೀಯ ಮೌಲ್ಯಗಳ ಹರಿಕಾರರೂ ಆದ ಬಸವಣ್ಣ ಅಕ್ಷರಶಃ ಜಗಜ್ಯೋತಿಯಾಗಿದ್ದಾರೆ. ಮಾನವ ಕುಲದ ಹೊಂಬೆಳಕಾಗಿದ್ದಾರೆ.

ಕೊಟ್ರೇಶ್ ಎಸ್. ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794
9739878197




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ