ಹನ್ನೇರೆಡನೇ ಶತಮಾನದ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸಾಂಸ್ಕøತಿಕವಾಗಿ ಅಮೂಲಾಗ್ರ ಬದಲಾವಣೆಮಾಡಿ ಬೃಹತ್ ಕ್ರಾಂತಿ ಮೊಳಗಿಸಿದ ಕೀರ್ತಿ ಶರಣರ ಅನುಭವಮಂಟಪದ ಅನುಭಾವದಾತನು, ಮನಗಳಿಗೆ ಸಲ್ಲುತ್ತದೆ. ಈ ಅನುಭವ ಮಂಟಪದ ಅನುಭಾವದತನು. ಮನಗಳಿಗೆ ಸಲ್ಲುತ್ತದೆ. ಈ ಅನುಭವ ಮಂಟಪದ ಶೂನ್ಯ ಸಿಂಹಾಸನದ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭುಗಳು ಎಲ್ಲಾರಿಗೂ ಮಾರ್ಗದರ್ಶಕರಾಗಿದ್ದರು.
ಈ ಜಾತ್ಯಾತೀತ ಅನುಭವ ಮಂಟಪದಲ್ಲಿ ಆಧ್ಯವಚನಕಾರರಾದ ಜೇಡರ ದಾಸಿಮಯ್ಯ ದುಗ್ಗಳೆ, ಬಸವಣ್ಣ, ಚೆನ್ನ ಬಸವಣ್ಣ ನುಲಿದಚಂದಯ್ಯ, ಡೋಹರಕಕ್ಕಯ್ಯ, ಅಂಬಿಗರ ಚೌಡಯ್ಯ, ಮಾದಾರಚೆನ್ನಯ್ಯ, ಸತ್ಯಕ್ಕ ಬೊಂತಾದೇವಿ, ಸೂಳೆ ಸಂತವ್ವೆ, ಆಯ್ದಕ್ಕ ಲಕ್ಕಮ್ಮ, ಆಯ್ದಕ್ಕಿ ಮಾರಯ್ಯ, ಅಕ್ಕಾಮಹಾದೇವಿ ಒಕ್ಕಲಿಗರ ಮುದ್ದಣ್ಣ, ಕಿನ್ನರಿಬೊಮ್ಮಣ್ಣ, ಹಡಪದ ಅಪ್ಪಣ್ಣ ಹೀಗೆ ನೂರಾರು ಶರಣರ ನಕ್ಷತ್ರಪುಂಜವೇ ಅಲ್ಲಿತ್ತು
ಶರಣರ ವಚನಗಳು ಅವರ ಅನುಭಾವದಿಂದ ತಿದಿಯೋತ್ತಿ ಬಂದ ತಿರುಳುಗಳು. ಅಂತರಂಗದ ಶುದ್ದಿಯೇ ಶ್ರೇಷ್ಠ ಎಂದು ಸಾರಿದವರು. ಸರಳ ಜೀವನಕ್ಕೆ ಹೆಚ್ಚು ಒತ್ತು ನೀಡಿದವರು. ಅಲ್ಲಮಪ್ರಭುವಿನ ವ್ಯಕ್ತಿತ್ವ ಮಾಣಿಕ್ಯದಂತೆ. ಅವರ ವಚನಗಳು ಕಬ್ಬಿಣದ ಕಡಲೆಯಂತೆ ಹಲವಿದ್ದರೆ. ಇನ್ನೂ ಕೆಲವು ಮಾಗಿದ ಬಾಳೆಯಂತಿವೆ. ಸಾಸುವೆಯಲ್ಲಿ ಸಾಗರವನ್ನು ಅಡಗಿಸಿ ಸೂತ್ರರೂಪವಾಗಿ ತತ್ವ ಹೇಳುವ ಜಾಣ್ಮೆಗೆ ಯೋಗಿಗಗಳು, ಸಾಹಿತಿಗಳು, ಅನುಭಾವಿಗಳು, ತತ್ವಜ್ಞಾನಿಗಳು ಎಲೈ ತಲೆದೂಗಬೇಕು.
ಶಿಲೆಯೊಳಗಣ ಪಾವಕದಂತೆ
ಉದಕದೊಳಗಣ ಪ್ರತಿಬಿಂಬದಂತೆ
ವೀಜದೊಳಗಣ ವೃಷದಂತೆ
ಗುಹೇಶ್ವರಾ, ನಿಮ್ಮ ಶರಣ ಸಂಬಂಧ !
ಶಿಲೆಯಲ್ಲಿ ಅಗ್ನಿ ಅಡಗಿದೆ, ಗೂಢವಾಗಿ ಹಾಗೆ ಮಹತ್ ಪಿಂಡನಾದ ಚಿದಗ್ನಿರೂಪನಾದ ಪರಮಾತ್ಮನು ಜಡಜಗತ್ತಿನಲ್ಲಿ ಗಾಢವಾಗಿ ನೆಲೆಸಿದ್ದಾನೆ. ಜಲದಲ್ಲಿ ಪ್ರತಿಬಿಂಬವಿದೆ. ಆದರೆ ಆ ಜಲದ ಗುಣದೋಷಗಳು ಆ ಪ್ರತಿಬಿಂಬಕ್ಕೆ ಅಂಟುವುದಿಲ್ಲ. ಏಕೆಂದರೆ ಅದು ನಿರ್ಲಿಪ್ತ ಹಾಗೆಯೇ ಈ ಚಲನಶೀಲವಾದ ಪ್ರಪಂಚದಲ್ಲಿ ಪರಮಾತ್ಮನಿದ್ದಾನೆ. ಪ್ರಪಂಚದ ಯಾವ ಗುಣದೋಷಗಳೂ ಅವನಿಗೆ ಅಂಟವು. ಅವನು ಅಷ್ಟು ನಿರ್ಲಿಪ್ತ, ನಿಷ್ಪ್ರಪಂಚ.
ಚಿಕ್ಕದಾದ ಬೀಜದಲ್ಲಿ ಬೃಹತ್ತಾದ ವೃಕ್ಷ ಅಡಗಿದೆ. ಬೀಜವು ವ್ಯಕ್ತವಾದರೆ ಅದರೊಳಗಿರುವ ವೃಕ್ಷವು ಅವ್ಯಕ್. ಹಾಗೆ ದೇಹದಿ ಸಂಗತನಾದ ವೃಷ್ಟೀಜೀವಾತ್ಮನಲ್ಲಿ ಮಹದ್ರೂಪನಾದಕ ದೇವನು ಅವ್ಯಕ್ರವಾಗಿ ನೆಲೆಸಿದ್ದಾನೆ. ಶ್ರವಣೀಂದ್ರಿಯಗ್ರಾಹ್ಯವಾದ ಶಬ್ದದೊಳಗೆ, ಶಬ್ದದ ಹಿಂದೆ ಅಗ್ರಹ್ಯವಾದಕ ನಿಶ್ಯಬ್ದ ವ್ಯಾಪಿಸಿದೆ. ಅದು ಬಯಲಿನಂತೆ. ಅದು ಮಹಾಮೌನ. ಶಬ್ದದ ತೆರೆಗಳು ಆ ನಿಶ್ಯಬ್ದ ಆಗಸದಿ ಏಳುತ್ತವೆ. ಅಡಗುತ್ತವೆ. ಆದರೆ ಶಬ್ದಗಳಿಂದ ನಿಶ್ಯಬ್ದತೆಗೆ ಯಾವ ಬಾಧೆಯೂ ಇಲ್ಲ. ಎಂತಹ
ಭಯಂಕರ ಶಬ್ದವಾದರೇನು ? ಅದು ನಿಶ್ಯಬ್ದತೆಯನ್ನು ತಿಲಮಾತ್ರವೂ ಬೇದಿಸಲಾರದು. ಹಾಗೆ ಪರಮಾತ್ರಮನು ನಿಶ್ಯಬ್ದ ಬ್ರಹ್ಮ. ಜಗತ್ತಿನಲ್ಲಿ ಕಾಣಬರುವ ಎಲ್ಲಾ ಶಬ್ದಗಳೂ, ಭಾವಗಳೂ, ಆಲೋಚನೆಗಳೂ, ವಿಚಾರಗಳೂ ಕ್ಷಣಕಾಲ ತೋರಿ ಅಡಗುವ ತರಂಗಗಳು. ಅವುಗಳ ಹಿನ್ನೆಲೆಯಲ್ಲೆಲ್ಲ ಪರಮಾತ್ಮನ ಮೌನ ಅಸ್ತಿತ್ವ. ಲಕ್ಷಾಂತರ ನಕ್ಷತ್ರಗಳು ಸೃಷ್ಟಿಯಾದರೇನು ? ವಿಸ್ಫೋಟಿಸಿ ನಷ್ಟವಾದರೇನು ? ಆ ನಿಶ್ಯಬ್ದತೆಯೇ.
ಈ ಶರಣ ಪದವು ಸಕಲ ಜೀವ ಜಂತುಗಳನ್ನು ಸಮಸ್ತ ಸ್ಪಷ್ಟ ಜಗತ್ತನ್ನು ನಿರ್ದೇಶಿಸುತ್ತದೆ. ಪರಶಿವನಲ್ಲಿ ಪ್ರಪ್ರಥಮದಲ್ಲಿ ಕಾಣಬಂದ ‘ಅಸ್ಮಿತಾ’ ಸ್ಫುರಣೆಗೆ ‘ಶರಣ’ ಎಂಬ ಹೆಸರಿದೆ. ಇದುವೆ ಸೃಷ್ಟಿಯ ಪ್ತಥಮತತ್ವ. ಆದ್ದರಿಂದ ಶರಣಪದವು ಸಮಸ್ತ ವಿಶ್ವದರ್ಶಕ.
ಪರಮಾತ್ಮನಿಗೆ ಮಹತ್ಪಿಂಡ ಎಂಬ ನಾಮ. ಆ ಮಹತ್ಪಿಂಡದ ನಾಲ್ಕು ಲಕ್ಷಣಗಳನ್ನು ಪ್ರಭುದೇವರು ಈ ಲೇಲಿನ ವಚನದಲ್ಲಿ ಹೇಳುವುದರ ಮೂಲಕ ಅವು ನಿರ್ಲಿಪ್ತ, ಅದೃಶ್ಯ ಹಾಗೂ ಅಭೇದ್ಯಾ ಎಂದು ಸಾದರಪಡಿಸಿದ್ದಾರೆ.
ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ ?
ಬೀಜದೊಳಗಣ ವೃಕ್ಷ ಉಲಿಯಬಲ್ಲದೆ ?
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು !
ಗುಹೇಶ್ವರನಿಂದ ನಿಲವ ಅನುಭಾವಸುಖಿ ಬಲ್ಲ !
ಕಲ್ಲೊಳಗೆ ಬೆಂಕಿ ಇದೆ ಆದರದು ಉರಿಯದು. ಹಾಗೆ ಜಡವಿಶ್ವವದಲ್ಲಿ ಚಿದಗ್ನಿರೂಪನಾದ ದೇವನಿದ್ದಾನೆ. ಆದರವನು ಕಾಣನು. ಬೀಜದಲ್ಲಿ ವೃಕ್ಷವಿದೆ. ಆದರದು ಕಾಣಿಸುವುದಿಲ್ಲ. ಉಲಿಯುವುದಿಲ್ಲ. ಮುಸುಕುವುದಿಲ್ಲ. ವ್ಯಷ್ಟಿ ಜೀವನದಲ್ಲಿ ಮಹದ್ರೂಪ ದೇವನಿದ್ದಾನೆ. ಆದರವನು ಕಾಣಸಿಗುವುದಿಲ್ಲ. ಹೀಗೆ ಪರಮಾತ್ಮನು ಎಲ್ಲಾ ವಸ್ತುಗಳಲ್ಲಿಯೂ ತುಂಬಿಕೊಂಡಿದ್ದರೂ ಕೂಡ ಲೌಕಿಕ ಮನೋಭಾವದ ಯಾವ ಮನುಷ್ಯನಿಗೂ ಆತನ ಇರುವಿಕೆ ಗೋಚರಿಸದು.
ದೇಹ, ಮನ, ಬುದ್ಧಿಗಳನ್ನೆಲ್ಲ ನೀತಿಗಳೆದು ಆತ್ಮಸ್ಥಾನದವ ತನ್ನಲ್ಲಿ ತಾನು ಆನಂದಿಸುತ್ತಾನೆ. ಅವನು ಅನುಭಾವಸುಖಿ, ಶರಣನಾಗುತ್ತಾನೆ. ಪರಮಾತ್ಮನ ಈ ನಿಗೂಡ ನಿಲುವನ್ನು ಅಂತಹ ಅನುಭಾವಸುಖಿ ಮಾತ್ರ ಗುರುತಿಸಬಲ್ಲ ಹಾಗೆಯೇ ಅರಿತು ಆನಂದಿಸಬಲ್ಲ ಎಂಬ ಮಹಾನ್ ಚಿಂತನೆಯನ್ನು ಅಲ್ಲಮ ಪ್ರಭುಗಳು ನಮಗೆ ನೀಡಿದ್ದಾರೆ.
ಶರಣ ಚಳುವಳಿಯ ಸಂದರ್ಭದಲ್ಲಿ ಮಹಾಜ್ಞಾನಿಯೂ, ಶಿವಯೋಗಿಯೂ, ಮಹಾನ್ ಸಾಧಕರೂ ಆದ ಅಲ್ಲಮಪ್ರಭುಗಳು ಎಲ್ಲರಿಂತ ಎತ್ತರದಲ್ಲಿ ಬೆಳೆದು ನಿಲ್ಲುತ್ತಾರೆ. ಅವರ ವಚನಗಳಲ್ಲಿ ಕಂಡುಬರುವ ರೂಪಕಗಳು, ಅನುಭವಗಳು, ಪ್ರತಿಮೆಗಳು ಬೇರೆಯವರ ವಚನಕಾರರಿಗಿಂತ ವಿಶಿಷ್ಟವಾದವು. ಆತನ ವಚನಗಳಲ್ಲಿ ಕಂಡು ಬರುವ ಕಲ್ಪನೆಯ ಹೊಳವುಗಳು ಇಂದಿಗೂ ಬೆರಗುಗೊಳಿಸುತ್ತವೆ. ಇವರು ಬರೆದಿರುವ ಪ್ರತಿಯೊಂದು ವಚನವೂ ಕೂಡ ಉಪನಿಷತ್ತುಗಳಂತೆ ಅರ್ಥಗರ್ಭಿತವಾಗಿವೆ ಹಾಗೆಯೇ ಜಗದ್ಬೆಳಕಿನ ಆಕರಗಳಾಗಿವೆ.
ಕೊಟ್ರೇಶ್ ಎಸ್. ಉಪ್ಪಾರ್
ಲೇಖಕರು
ಹಲಸಿನಮರದ ಹತ್ತಿರ,
ತೇಜೂರು ರಸ್ತೆ, ಶಾಂತಿನಗರ
ಹಾಸನ – 573 201
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ