ಮಂಗಳವಾರ, ಜುಲೈ 1, 2014

ಜಾಗತಿಕ ತಾಪಮಾನ ಹೆಚ್ಚಾದಂತೆ ಭೂಮಿ ಕ್ಷೀಣಿಸುತ್ತ್ತಿದೆ . ! - . ಕೊಟ್ರೇಶ್ ಎಸ್ ಉಪ್ಪಾರ್

 
ಪ್ರಕೃತಿಯಲ್ಲಿ ಇರುವ ಸಂಪತ್ತೆಲ್ಲಾ ತನ್ನ ಸುಖಕ್ಕೆ, ಭೋಗಕ್ಕಾಗಿಯೇ ಎಂದು ಸ್ವಇಚ್ಚೆಯಿಂದ ಭಾವಿಸಿಕೊಂಡ ಮಾನವ ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತಿಮೀರಿ ಬಳಸಿಕೊಳ್ಳುತ್ತಿದ್ದಾನೆ.
ಒಂದೆಡೆ ದಿನದಿಂದ ದಿನಕ್ಕೆ ನಾಗಲೋಟದಂತೆ ಹೆಚ್ಚುತ್ತಿರುವ ಜನಸಂಖ್ಯೆ, ಮತ್ತೊಂದೆಡೆ ಮಾನವನ ಅವಶ್ಯಕತೆಯ ದುರಾಸೆಯೂ ಸಹ ಮಿತಿಮೀರಿ ಹೋಗಿದೆ. ಈ ಎರಡು ಕಾರಣಗಳಿಂದಾಗಿ ಶಕ್ತಿಯ ಬಿಕ್ಕಟ್ಟು ಬಹಳ ಜಟಿಲವಾದ ಸಮಸ್ಯೆಯಾಗಿ ರೂಪುಗೊಂಡಿದೆ. ಆಧುನಿಕತೆ ಬೆಳೆದಂತೆ ಹೆಚ್ಚೆಚ್ಚು ಸೌಕರ್ಯಗಳನ್ನು ಬಳಸಲು ನಾವಿಂದು ಹಂಬಲಿಸುತ್ತಿದ್ದೇವೆ. ಹೀಗಾಗಿ ಐಶಾರಾಮಿ ಜೀವನಕ್ಕೆ ನಮ್ಮ ಮನಸ್ಸುಗಳಂತೂ ಹಾತೊರೆಯುತ್ತಿವೆ. ನವೀನ ಮಾದರಿಯ ವಾಹನಗಳು, ಸುಸಜ್ಜಿತ ಬಂಗಲೆಗಳ ನಿರ್ಮಾಣ, ಇವುಗಳಿಗೆ ಪೂರಕವಾದ ಬೃಹತ್ ಕೈಗಾರಿಕೆಗಳು, ಇವೆಲ್ಲಾ ಪರಿಸರನಾಶಕ್ಕೆ ಮೂಲಕಾರಣವಾಗಿವೆ.
ಇಡೀ ಭೂಮಿಯನ್ನು ಒಂದು ನಿರ್ಧಿಷ್ಟ ತಾಪಮಾನದಲ್ಲಿ ಹಿಡಿದಿಟ್ಟಿರುವುದು ಬೃಹತ್ ಹಿಮಶಿಖರಗಳೆಂದರೆ  ಅತಿಶಯೋಕ್ತಿಯಾಗಲಾರದು, ನಿಗದಿತ ಸಮಯಕ್ಕೆ ಮಳೆಗಾಲ ಬರುವುದು ಹಿಮಶಿಖರಗಳ ತಂಪಾದ ವಾತವರಣದಿಂದ ಆದರಿಂದು ನಾವು ಇಡೀ ವಾತಾವರಣವನ್ನು  ಇಂಗಾಲಮಯವಾಗಿ ಮಾಡಿದ್ದೇವೆ. ಅದು ವಾತಾವರಣದ ತಾಪವನ್ನು  ಹೆಚ್ಚಸಿ ಹಿಮಶಿಖರಗಳು ದಿನೇ ದಿನೇ ಕರಗಲು ಕಾರಣವಾಗುತ್ತಿದೆ.
ಪ್ರಪಂಚದ ಸರ್ವ ಮಾಧ್ಯಮಗಳು ಒಂದೇ ಸಮನೇ ಅನಾಹುತವೊಂದರ ಮುನ್ನೇಚ್ಚರಿಕೆಯ ಕರಗಂಟೆಯನ್ನು ಬಾರಿಸುತ್ತಿವೆ.. ಪ್ರಪಂಚದ ಸಾಗರತೀರದ ಪ್ರದೇಶಗಳ ಎಲ್ಲಾ ದ್ವೀಪಗಳ  ಜನರಿಗೊಂದು ಅಂತಿಮ ಕರೆ, ಅಪಾಯ ಸನ್ನಿಹಿತವಾಗುತ್ತಿದೆ., ಅಲ್ಲಿವಾಸಿಸುವರು ಸುರಕ್ಷಿತ   ಜಾಗಕ್ಕೆ  ತೆರಳಿರಿ, ಶತ್ರು ಮುತ್ತಿಕ್ಕು ತ್ತಿದ್ದಾನೆ. ಎಚ್ಚರಿಕೆ !
ಮುಂದೆ ಈ ಎಚ್ಚರಿಕೆ ನಿಜವಾಗುತ್ತದೆ.. ವಿಜ್ಞಾನ ಎಷ್ಟೇ ಸಮರ್ಥವಾಗಿದ್ದರೂ ಜಗತ್ತಿನ ಸಾವಿರಾರು ಕಿಲೋಮೀಟರ್ ಕರಾವಳಿ ಪ್ರದೇಶವನ್ನು ರಕ್ಷಿಸಲು ವಿಫಲವಾಗುತ್ತದೆ. ಒಂದೊಮ್ಮೆ ವಿಶ್ವದಲ್ಲಿ ಮೆರೆದಾಡಿದ ಬಹÅದೊಡ್ಡ ನಗರಗಳು, ನಗರಗಳಿಗೆ ಆಹಾರ ನೀಡಿದ ಫಲವತ್ತಾದ ಭೂಮಿ, ಅಲ್ಲಿದ್ದ ಚರಾಚರ ವಸ್ತುಗಳು, ಜೀವಿಗಳು, ಮಂದಿರ, ಮಸೀದಿ, ಚರ್ಚುಗಳೆಲ್ಲವೂ ಯಾರ ಮಾತನ್ನು ಕೇಳದೆ ಹೂತುಹೋಗುತ್ತವೆ, ಯಾಕೆಂದರೆ ಉಕ್ಕೇರಿದ ಸಮುದ್ರ ರಾಜನ ಅನಿಯಂತ್ರಿತ ಹಸಿವಿನ ಅಬ್ಬರ ಅಷ್ಟೂಂದು ಭೀಕರವಾಗಿರುತ್ತದೆ.
ಉಕ್ಕುವ ಸಮುದ್ರದ ಪರಿಣಾಮ!
ಅಮೆರಿಕದಂತಹ ಸಂಪದ್ಬರಿತ ರಾಷ್ಟ್ರಗಳು ಈ ಅನಾಹುತವನ್ನು  ಎದುರಿಸಲು ಒಂದಷ್ಟು ಯಶಸ್ವೀ. ಬಡ, ಪುಟ್ಟ    ರಾಷ್ಟ್ರಗಳದದಂತೂ ನಾಯಿಪಾಡು. ಕ್ಷಾಮ, ಹಸಿವು, ಅನಾರೋಗ್ಯಗಳಿಂದ ಬದುಕು ದುಸ್ತರವಾಗುತ್ತದೆ. ಗಜಗಾತ್ರದ ಜನಸಂಖ್ಯೆಯ ದುಷ್ಟ್ರಭಾವವನ್ನೇ ತಾಳಲಾರದ ರಾಷ್ಟ್ರಗಳು ಈಗ ಸಫಲ ಪ್ರದೇಶಗಳನ್ನು ಸಮುದ್ರರಾಜನ ಉದರಕ್ಕೆ ಸೇರಿಸಿದ ಬಳಿಕ ಉಸಿರಾಡುವುದನ್ನೇ ಮರೆಯುತ್ತವೆ ; ಜನಸಂಖ್ಯೆಯ ಕಾರಣದಿಂದ ಉಂಟಾಗಿದ್ದ ನೂರು ಸಮಸ್ಯಗಳೀಗÀ ಸಾವಿರವನ್ನು ತಲುಪುತ್ತವೆ. ಕೊಲೆ, ಸುಲಿಗೆ, ಅನಾಚಾÀರ ರಕ್ತಪಾತಗಳು ಮಾಮೂಲಾಗಿ ಜಗತ್ತೇ ದಿಗ್ಭ್ರಮೆ ಸ್ಥಿತಿಗೆ ತಲುಪುತ್ತದೆ. ಬಲವುಳ್ಳವರು ಮಾತ್ರ ಬದುಕಿ, ದುರ್ಭಲರು ಸಾವಿಗೆ ಮೊರೆ ಹೋಗುವ ವಿನಾಶಕಾಲಕ್ಕೆ ಜಗತ್ತು ಸಿಲುಕಿರುತ್ತದೆ.
ಹೀಗೆ  ಮುಂದುವರೆದರೆ ಇನ್ನೂ 60 ವರ್ಷಗಳ ನಂತರ ಜಗತ್ತು ಹೀಗಾಗಬಹುದು. ಯೋಚಿಸಲಸಾಧ್ಯವಾದ ವಿಚಿತ್ರ. ವಿಕ್ಷಿಪ್ತ ಪರಿಸ್ಥಿತಿಯಿದು. ಅಂದು ಫಲವತ್ತೆನಿಸಿದ್ದ ಸ್ಥಳಗಳೆಲ್ಲಾ ಬಂಜರಾಗಿ ಬಿಟ್ಟಿವೆ. ಅಂದು ಪ್ರಯೋಜನಕ್ಕೆ ಬಾರದ ಪ್ರದೇಶಗಳೀಗ ಯೋಗ್ಯವೆನಿಸಿವೆ. ಅದ್ಯಾವ ಮಾಯೆಯಲ್ಲೋ ಬರಪೀಡಿತವೆನಿಸಿದ್ದ ಪ್ರದೇಶಗಳು ನೆರೆಪೀಡಿತವಾಗುವಷ್ಟು ಮಳೆ. ಅಲ್ಲೆಲ್ಲಾ ಹೊಸ ನದಿಗಳ ಉಗಮ. ಮಳೆ ಕಾಣದೇ  ಅಂದು  ಫಲವತ್ತಾಗಿದ್ದ ಕಾಡು, ಮಣು,್ಣ ನದಿಗಳು ಬಿರುಸಕುಬಿಟ್ಟಿವೆ. ಬರದಿಂದ ಜನ, ದನಗಳೆಲ್ಲವೂ ತತ್ತರಿಸಿವೆ. ಶೀತ ಪ್ರದೇಶಗಳು ಬಿಸಿಯಾಗಿ  ಕರಗಿಹೋಗುತ್ತಿವೆ. ಉಷ್ಣ ಪ್ರದೇಶಗಳು ತಂಪುಹವೆಯಿಂದ ನಲುಗಿ ಹೋಗುತ್ತಿವೆ. ಹೀಗೇಕಾಯ್ತೆಂದು ಜನ ಯೋಚಿಸುತ್ತಿದ್ದಾರೆ. ಉತ್ತರ ಸರಳ. ಇದು ವಾತಾವರಣದಲ್ಲಿನ ವೈಪರೀತ್ಯಗಳ ದುಷ್ಪರಿಣಾಮ !
ಇದರಿಂದ ಹೀಗಾಗಬಹುದಲ್ಲವೇ ?
ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತದೆ. ಒಮ್ಮಿಂದೊಮ್ಮೆಲೇ ಉಂಟಾದ ಈ ವೈಪರೀತ್ಯಕ್ಕೆ ಒಗ್ಗಿಕೊಳ್ಳಲಾರದೇ ಹಲವಾರು ಪಶುಪಕ್ಷಿಗಳು ಸಂತತಿಗಳು ನಿರ್ಮೂಲನವಾಗುತ್ತವೆ. ಜನಸಮುದಾಯ ಭಯದಿಂದ ಗಲಿಬಿಲಿಗೊಳಗಾಗುತ್ತದೆ. ಈ ಬದಲಾವಣೆಯ ಬಿರುಗಾಳಿಗೆ  ವಿಶ್ವವೇ ತತ್ತರಿಸುತ್ತದೆ. ಆಗಲೇ ಬೆಳೆದಿದ್ದ ಬೆಳೆಯನ್ನು ಕೈಗೆ ತೆಗೆದುಕೊಳ್ಳುವುದರಲ್ಲಿ ಜನ ವಿಫಲರಾಗುತ್ತಾರೆ. ಭೀಕರ ಕ್ಷಾಮ, ಹಸಿರುಕಾಡುಗಳ ನಿರ್ನಾಮ, ಹೊಸ ಹಸಿರು ಬೆಳೆಯಲು ಸಮಯವಕಾಶವಿಲ್ಲ. ಇಡೀ ಭೌಗೋಳಿಕ ಚಿತ್ರಣವೇ ಬದಲಾಗುತ್ತದೆ. ಬರಪೀಡಿತ ನಗರಗಳು, ಹಳ್ಳಿಗಳನ್ನು  ಬಿಟ್ಟು ಹೊರಟ ಜನ, ಪಶು ಸಂತತಿಗೆ ಉಳಿವಿಗಾಗಿ ಹೋರಾಟ ಮಡುವುದು ಶತಸಿದ್ಧ. ಪ್ರಕೃತಿಯ ಮುನುಸನ್ನೆದುರಿಸಲು ಶಕ್ತನಾಗುವನೇ ಮಾನವ ?
ಜಾಗತಿಕ ಉಷ್ಣತೆಯಲ್ಲಿ ಈಗಿನಂತೆಯೇ ಬದಲಾವಣೆ ಮುಂದುವರಿದಲ್ಲಿ ಈ ಮೇಲಿನ ಎರಡೂ ಘಟನೆಗಳೂ ನಿಜವಾಗುವ ದಿನಗಳು ದೂರವಿಲ್ಲ. ಹೆಚ್ಚೇಕೆ. ಸದ್ಯದ ಪರಿಸ್ಥಿತಿ ಮುಂದುವರಿದರೂ ಇದೇ ಶತಮಾನದ ಅಂತ್ಯದ ವೇಳೆಗೆ ವಿಶ್ವ ಇಂತಹ ಭೀಕರ ದುರ್ಘಟನೆಗಳನ್ನು ಎದುರಿಸಬೇಕಾಗಬಹುದು ಎನ್ನುತ್ತಾರೆ ವಿಜ್ಞಾನಿಗಳು.
ತಾಪಮಾನ ಹೆಚ್ಚಾಗಲು ಕಾರಣವೇನು ?
ಇಡೀ ವಿಶ್ವವನ್ನು ನಾವು ಉಷ್ಣ, ಸಮಶೀತೋಷ್ಣ ಹಾಗೂ ಶೀತವಲಯವೆಂದು ಕೆರೆದಿದ್ದು ವಾತಾವರಣದ ಸಹಜ ತಾಪಮಾನದ ಆಧಾರದ ಮೇಲೆ. ಆದರೆ ಆ ಬುನಾದಿಯೇ ಸಡಿಲವಾದರೆ ಒಂದು ವಲಯದಲ್ಲಿದ್ದ ಹವಾಮಾನವನ್ನು ಇನ್ನೊಂದು ವಲಯದಲ್ಲಿ ಕಾಣತೊಡಗಿ ಬೆಳೆಗಳ, ಪ್ರಾಣಿಗಳ, ಪಕ್ಷಿಗಳ, ಕೀಟಗಳ ಹಾÀಗೂ ಹವಾಮಾನವನ್ನು ಸಂಪತ್ತುಗಳ ಜೀವನಗತಿ ಅನೇಕ ರೀತಿಯಲ್ಲಿ ಬದಲಾವಣೆಗೊಳಗಾಗುವ ಸಂಭವವಿದೆ.
ಔದ್ಯೋಗಿಕ ಪ್ರಗತಿಯಿಂದಾಗಿ 150 ಮಿಲಿಯ ಟನ್‍ಗಳಿಗಿಂತಲೂ ಅಧಿಕ ಪ್ರಮಾಣದ ಸಲ್ಫರ್‍ಡೈಆಕ್ಸೈಡ್, 40 ಮಿಲಿಯ ಟನ್‍ಗಳಿಗೂ ಅಧಿಕ ಪ್ರಮಾಣದ ನೈಟ್ರೋಜನ್ ಡೈಆಕ್ಸೈಡ್‍ಗಳು ವಾತಾವರಣವನ್ನು ಸೇರುತ್ತಿವೆ. ಇದರಿಂದ ಮುಂದಿನ ಎಂಟ್ಹತ್ತು ವರ್ಷಗಳಲ್ಲಿ ಒಂದು ಮಿಲಿಯನ್  ಜೀವರಾಶಿಗಳು ಪೃಥ್ವಿಯಿಂದ ಕಣ್ಮರೆಯಾಗುವ ಸಾಧ್ಯತೆಯಿದೆ. ಇದೇ ರೀತಿ ಪ್ರಕೃತಿ ನಾಶವಾಗುತ್ತಿದ್ದರೆ ಇನ್ನು ಕೇವಲ ಐವತ್ತು ವರ್ಷಗಳಲ್ಲಿ ಎಲ್ಲೆಂದರಲ್ಲಿ ಆಹಾಕಾರ ತಲೆದೋರಿ ಹಾಗೂ ಭೂಮಿಯ ತಾಪದ ಹೆಚ್ಚಳಕ್ಕೆ ಭೂಮಿಯ ಮೇಲಿನ ಅರ್ಧದಷ್ಟು ಜೀವರಾಶಿಗಳು ನಾಶವಾಗಬಹದು.
ವಾತಾವರಣದಲ್ಲಿ ಅo2 ಪ್ರಮಾಣ ಹೆಚ್ಚಾಗುವುದರಿಂದ ಪ್ರಾಯೋಗಿಕವಾಗಿ ಕೆಲವು ಬೆಳೆಗಳಲ್ಲಿ ಇಳುವರಿ ಹೆಚ್ಚಾಗಿದ್ದು ಕಂಡುಬಂದಿದ್ದರೂ, ಇನ್ನೂ ಪ್ರಯೋಗವನ್ನು ತೆರೆದ ವಾತಾವರಣದಲ್ಲಿ ಮಾಡಬೇಕಿದೆ. ವಾತಾವರಣದಲ್ಲಿನ ತಾಪಮಾನ ಹೆಚ್ಚಾದಾಗ ಭೂಮಿಯಿಂದ ಉಂಟಾಗುವ ಭಾಷ್ಪೀಕರಣ ಹೆಚ್ಚಾಗಿ ಭೂಮಿಯ ಬಾವಿಗಳು ಅತೀ ಶೀಘ್ರವಾಗಿ ಬತ್ತಿಹೋಗುವವು. ಈಗ ನಮ್ಮ ದೇಶದಲ್ಲಿನ ಸರಾಸರಿ ಭಾಷ್ಪವಿಸರ್ಜನೆ ಬೇಸಿಗೆಯಲ್ಲಿ 7 ಮಿ.ಮೀ ಹಾಗೂ ಚಳಿಗಾಲದಲ್ಲಿ 4.5 ಮಿ.ಮೀ. ಇವು ಪ್ರತಿ ಒಂದು ಡಿಗ್ರಿ ತಾಪಮಾನ ಹೆಚ್ಚಳದಿಂದ ಶೇ. 10 ರಷ್ಟು ಹೆಚ್ಚುವ ಸಾಧ್ಯತೆಯಿದೆ. ಈ ಪರಿಣಾಮಗಳಿಂದ ಕುಡಿಯುವ ನೀರಿನ ತೀವ್ರ ಅಭಾವವುಂಟಾಗಿ ಭೂಜೀವಿಗಳು ಪರಿತಪಿಸಬಹುದು. ಈಗ ನಾವು ನಿರ್ಮಿಸುತ್ತಿರುವ ಅನೇಕ ಅಣೆಕಟ್ಟುಗಳಲ್ಲಿನ ನೀರು ಬೇಗನೆ ಒಣಗಿ ಹೋಗಲು ಭೂ ತಾಪಮಾನವೇ ಕಾರಣ.
ಓಝೋನ್ ಮತ್ತು ಹಸಿರುಮನೆ
ಓಝೋನ್ ನಾಶಕ್ಕೆ ಮುಖ್ಯಕಾರಣ ಕೆಲವು ಕೈಗಾರಿಕಾ ಮಾಲಿನ್ಯಗಳು, ಉದಾ : ರೆಫ್ರಿಜಿರೇಟರುಗಳಲ್ಲಿ, ಏರ್ ಕಂಡಿಷನರ್‍ಗಳಲ್ಲಿ ಬಳಸಲಾಗುವ ಅಈಅ ಗಾಳಿಗೆ ಸೇರಿ ಓಝೋನ್ ಪದರವನ್ನು ಹಾನಿಗೀಡುಮಾಡಬಲ್ಲದು.  ಇತ್ತೀಚೆಗೆ ಹವಾಮಾನದಲ್ಲಿ ತೀವ್ರ ಏರುಪೇರು ಉಂಟಾಗುತ್ತಿರುವುದು ಮತ್ತಷ್ಟು ದುಗುಡಕ್ಕೆ ಕಾರಣವಾಗಿದ್ದು, 2035ರ ವೇಳೆಗೆ ಈ ಹವಾಮಾನ ವೈಪರೀತ್ಯಗಳು ಓಝೋನಿನ ಮೇಲೆ ಎಲ್ಲದಕ್ಕಿಂತ ಹೆಚ್ಚು ದುಷ್ಪರಿಣಾಮ ಬೀರಬಲ್ಲವು ಎಂದು ‘ನಾಸಾ’ದ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.  ಹಸಿರುಮನೆ ಅನಿಲದ ಪ್ರಮಾಣದಲ್ಲಿ ಏರಿಕೆ ಉಂಟಾಗಿ, ಅವು ಓಝೋನ್ ಕಣಗಳನ್ನು ವಿಭಜಿಸಿ ಹಾಳುಗೆಡವುತ್ತವೆ.
ಈ ಹಿಂದೆ ಕೆನಡಾದ ಮಾಂಟ್ರಿಯಾಲ್ ನಲ್ಲಿ ನಡೆದ ಅಧಿವೇಶನವು ಓಝೋನ್ ಪದರವನ್ನು ಹಾನಿ ಮಾಡುವಂತಹ ಉತ್ಪನ್ನಗಳ ಮೇಲೆ ನಿರ್ಬಂಧ ವಿಧಿಸಿತ್ತು.  ಹಾಗಾಗಿ ವಿಜ್ಞಾನಿಗಳು ಕೊಂಚ ನಿಟ್ಟುಸಿರು ಬಿಟ್ಟರು.  ಆದರೆ, ಈ ಹವಾಮಾನದ ಏರುಪೇರುಗಳ ಮೇಲೆ ನಿರ್ಬಂಧ ತರಲು ಸಾಧ್ಯವಿಲ್ಲದಿರುವುದು ಕಳವಳಕಾರಿ ಸಂಗತಿ.  ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿ ಡ್ರ್ಯೂ ಷಿಂಡೆಲ್ ಅವರ ಪ್ರಕಾರ ‘ಓಝೋನಿನ ಪ್ರಮುಖ ಶತ್ರು ಸಿ.ಎಫ್.ಸಿಯಲ್ಲ, ಬದಲಾಗುತ್ತಿರುವ ಹವಾಮಾನ ಲಕ್ಷಣಗಳು.  ಇದರ ಜೊತೆಗೆ ವಾತಾವರಣದಲ್ಲಿ ಇಂಗಾಲ ಮತ್ತು ಮೀಥೇನ್ ನಂತಹ ಅನಿಲಗಳು ತಾಪಮಾನವನ್ನು ಹೆಚ್ಚಿಸಿ ವಾಯುಮಂಡಲದ ಕೆಳಸ್ತರವನ್ನು ಮತ್ತಷ್ಟು ಉಷ್ಣಮಯಗೊಳಿಸುತ್ತಿರುವುದು.  ಇದರಿಂದ ಸೌರಶಕ್ತಿಯು ಭೂಮಿಯಿಂದ ದೂರವಾಗದೇ ಅವುಗಳಲ್ಲಿ ಅಧಿಕ ನೀರಾವಿ ಸಂಗ್ರಹಗೊಂಡು ಓಝೋನ್ ವಿಘಟನೆಯನ್ನು ಮತ್ತಷ್ಟು ಚುರುಕುಗೊಳಿಸುತ್ತದೆ.
ಹಾಗಾದರೆ ಏನು ಮಾಡಬಹುದು?
ಕಳೆದ ಹತ್ತು ವರ್ಷಗಳಿಂದೀಚೆಗೆ ಬದಲಾಗುತ್ತಿರುವ ವಾತಾವರಣದ ವೈಪರೀತ್ಯಗಳು ಇನ್ನಷ್ಟು ಗೊಂದಲಗಳನ್ನು ಹುಟ್ಟುಹಾಕುತ್ತವೆ.  ಈ ಪರಿಸ್ಥಿತಿಯಲ್ಲಿ ನಾವು ಮಾಡಬೇಕಾದ ಕೆಲಸ ಅಸಹಾಯಕರಾಗಿ ನಿಂತು ನೋಡುವುದಲ್ಲ.  ಅಸಡ್ಡೆ ಮಾಡುವುದೂ ಅಲ್ಲ.  ವಾತಾವರಣಕ್ಕೆ ನಾವು ಬಿಡುತ್ತಿರುವ ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣದ ಇಂದಿನ ಮಟ್ಟಕ್ಕಿಂತ 20 ರಿಂದ 30 ಶೇಕಡಾದಷ್ಟನ್ನಾದರೂ ಕಡಿಮೆ ಮಾಡಬೇಕು.  ಪಳೆಯುಳಿಕೆ ಇಂಧನಗಳ ಅನಗತ್ಯ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಬೇಕು.  ಪರಿಸರ, ಜಾಗತಿಕ ಉಷ್ಣತೆಯ ಕುರಿತಂತೆ ಈಗಲೇ ಕಾಳಜಿಯನ್ನು ವಹಿಸದಿದ್ದಲ್ಲಿ ನಮ್ಮ ನಂತರದ ತಲೆಮಾರಿನವರು ನಾವೀಗ ಊಹಿಸುವ ಭಯಾನಕ ಪರಿಸ್ಥಿತಿಗೆ ಬೆಲೆ ತೆರಬೇಕಾದೀತು.  ಆಗ ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಎಂದು ಚಿಂತಿಸುವುದಕ್ಕಿಂತಲೂ, ಈಗ ಕಾರ್ಯತತ್ಪರರಾಗುವುದು ಬುದ್ಧಿವಂತಿಕೆಯ ಲಕ್ಷಣವಾದ್ದರಿಂದ ನಾವೆಲ್ಲರೂ ಇಂದೇ ಜಾಗೃತಗೊಂಡು ಪರಿಸರದ ಉಳಿವಿಗಾಗಿ ಪಣತೊಟ್ಟು ನಿಲ್ಲುವ ಅನಿವಾರ್ಯತೆಯಿದೆ.
. ಕೊಟ್ರೇಶ್ ಎಸ್ ಉಪ್ಪಾರ್
ಲೇಖಕರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794

1 ಕಾಮೆಂಟ್‌: