ತಮ್ಮ ಮಾತು ಮತ್ತು ಜ್ಞಾನವನ್ನು ಭೌದ್ಧಿಕ ವ್ಯಭಿಚಾರಕ್ಕೆ ಬಳಸದೆ ನೈತಿಕ ಕೇಂದ್ರಕ್ಕಾಗಿ ಬಳಸಿ, ಸಾಹಿತ್ಯವನ್ನು ಒಂದು ‘ಗರಡಿಮನೆ’ ಎಂದು ಭಾವಿಸಿ, ವಿಮರ್ಶಾ ಕ್ಷೇತ್ರವನ್ನು ತಪೋವನದಂತೆ ಮಾರ್ಪಡಿಸಿದ ಕೀರ್ತಿ ನಾಡು ಕಂಡ ಸರ್ವ ಶ್ರೇಷ್ಠವಿಮರ್ಶಕ ಕಿ.ರಂ.ನಾಗರಾಜ್ರವರಿಗೆ ಸಲ್ಲುತ್ತದೆ.
ಕನ್ನಡ ಸಾಹಿತ್ಯ ಮತ್ತು ವಿಮರ್ಶೆಗಳು ಮಠ ಪರಂಪರೆಗಳಂತೆ ತಮ್ಮದೇ ಸಾಂಸ್ಕøತಿಕ ಚೌಕಟ್ಟುಗಳನ್ನು ನಿರ್ಮಿಸಿಕೊಂಡು ಭ್ರಾಂತಿಯಲ್ಲಿ ತೇಲಾಡುವ ಸಂದರ್ಭದಲ್ಲಿ ಕಟ್ಟಳೆಗಳನ್ನು ಕಿತ್ತೊಗೆದು ಸಾರ್ವತ್ರಿಕ, ನೇರ, ದಿಟ್ಟತನದಿಂದ ವಿಮರ್ಶಿಸಿ ಸಾಹಿತ್ಯಕ್ಕೆ ನಿಜವಾದ ನ್ಯಾಯ ದೊರಕಿದ್ದು ಕಿ.ರಂ.ನಾಗರಾಜ್ರವರಿಂದ ಮಾತ್ರ ಎಂದರೆ ಅತಿಶಯೋಕ್ತಿಯಾಗಲಾರದು.
ಯಾರೊಂದಿಗೂ ವೈಯಕ್ತಿಕ ಕಾರಣಗಳಿಗೆ ಮನಸ್ತಾಪ ಮಾಡಿಕೊಳ್ಳದೆ ಸಾಹಿತ್ಯದ ಪ್ರಗತಿ, ಉತ್ಕøಷ್ಠತೆ, ಶ್ರೇಷ್ಠತೆ, ಗಟ್ಟಿತನದ ವಿಚಾರಗಳಿಗಾಗಿ ವಾದಿಸಿದ್ದಾರೆ, ತರ್ಕಿಸಿದ್ದಾರೆ, ವಿಶ್ಲೇಷಿಸಿದ್ದಾರೆ, ವಿಮರ್ಶಿಸಿದ್ದಾರೆ.
ನಾಡಿನಾದ್ಯಾಂತ ಸಹಸ್ರಾರು ವಿದ್ಯಾರ್ಥಿ, ಶಿಷ್ಯ ವೃಂದವನ್ನು ಹೊಂದಿದ್ದ ಕಿ.ರಂ.ನಾಗರಾಜ್ರವರು 1943 ಡಿಸೆಂಬರ್ 5 ರಂದು ಹಾಸನ ಜಿಲ್ಲೆಯ ‘ಕಿತ್ತಾನೆ’ ಗ್ರಾಮದಲ್ಲಿ ಜನಿಸಿದರು.
ಬಿ.ಎ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದ ಕಿ.ರಂ ಎಂ.ಎ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿದರು.
ಮುಂದೆ ಬೆಂಗಳೂರು ವಿ.ವಿಯಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಕಿ.ರಂ.ದ್ರುವತಾರೆಯಾಗಿ ಮಿನುಗಿದ್ದು ಮಾತ್ರ ವಿಮರ್ಶಾ ಕ್ಷೇತ್ರದಲ್ಲಿ. ಅದರಲ್ಲೂ ಇತ್ತೀಚೆಗೆ ಕಾವ್ಯಗಳ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕಾವ್ಯವೇ ಜ್ಞಾನವೆಂದರಿತು ವಿಶೇಷ ಮನ್ನಣೆ ನೀಡಿ ಕಾವ್ಯಕ್ಕೆ ಹೊಸ ಹೊಳಪನ್ನು ನೀಡಿದ ಕೀರ್ತಿ ಕಿ.ರಂ ಅವರಿಗೆ ಸಲ್ಲುತ್ತದೆ.
ಕನ್ನಡ ಸಾಹಿತ್ಯದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾಗಿದ್ದ ಕಿ.ರಂ ಅಪಾರ ಸಾಹಿತ್ಯ ಶಿಷ್ಯ ವೃಂದ ಹೊಂದಿದ್ದರು, ಹಲವಾರು ಸಾಹಿತಿಗಳನ್ನು ಮೂರ್ತಿಯಂತೆ ಕಟೆದು ಮೂರ್ತ ರೂಪಕ್ಕಿಳಿಸಿದ್ದಾರೆ.
ಕಿ.ರಂ ಕಾವ್ಯ ಪ್ರೀತಿಯ ಬಗ್ಗೆ, ಮಾತಿನಲ್ಲೇ ರನ್ನ, ಪಂಪ, ಬೇಂದ್ರೆಯವರನ್ನು ಪುನಃ ಸೃಷ್ಠಿಸುತ್ತಿದ್ದ ಅವರ ವೈಖರಿಯ ಬಗ್ಗೆ ತನ್ಮಯರಾಗಿ ನೆನೆಸುವ, ಹೇಳುವ, ಬರೆಯುವಂತಹ ಸಾವಿರಾರು ಸಾಹಿತಿಗಳನ್ನು ನಾಡಿಗೆ ಕೊಟ್ಟು ಹೋಗಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪರಸ್ಕøತ ಡಾ.ಯು.ಆರ್ ಅನಂತಮೂರ್ತಿ ಒಂದು ಕಡೆ ಕಿ.ರಂ ರವರನ್ನು ಕುರಿತು ಹೀಗೆ ಹೇಳಿದ್ದಾರೆ. “ರಾಜ್ಯದಲ್ಲಿ ಕನ್ನಡ ಇನ್ನೂ ಕಡ್ಡಾಯ ಮಾಧ್ಯಮವಾಗಿಲ್ಲ. ಜೊತೆಗೆ ಸರಕಾರಿ ಭಾಷೆಯೂ ಅಲ್ಲ. ಈ ರೀತಿ ಏನೂ ಇಲ್ಲದ ಸ್ಥಿತಿಯಲ್ಲಿ ಕನ್ನಡವೇ ಎಲ್ಲ ಎನ್ನುವಂತೆ ಮಾಡಿದವರು ಕಿ.ರಂ.ನಾಗರಾಜ್. ಅಂಥವರನ್ನು ಜೀವಂತವಾಗಿಟ್ಟುಕೊಳ್ಳವುದು ಎಂದರೆ ಕನ್ನಡವನ್ನು ಜೀವಂತವಾಗಿಟ್ಟುಕೊಂಡಂತೆ.”
ಹೌದು ಕಿ.ರಂ ಎಂದರೆ ಕನ್ನಡ, ಕನ್ನಡ ಎಂದರೆ ಕಿ.ರಂ ಎನ್ನುವಷ್ಟು ನಾಡಿನ ಜನಮಾನಸದಲ್ಲಿ ಬೆರೆತು ಹೋಗಿದ್ದರು. ಕನ್ನಡ ಸಾಹಿತ್ಯವನ್ನೇ ಉಸಿರಾಗಿಸಿಕೊಂಡಿದ್ದ ಕಿ.ರಂ ಸಾಹಿತ್ಯದ ಶ್ರೇಷ್ಠತೆಗಾಗಿ ಹಗಲಿರುಳೂ ಶ್ರಮಿಸಿದ ಉತ್ಸಾಹಿಗಳು.
ನಾಡು ಕಂಡ ಸರ್ವಶ್ರೇಷ್ಠ ವಿಮರ್ಶಕ, ಕವಿ ಕಿ.ರಂ ನಾಗರಾಜ್. ಇವರ ಅನುಪಮ ಸೇವೆ ಮನಗಂಡ ಸರ್ಕಾರ ಹಾಗೂ ಹಲವಾರು ಸಾಮಾಜಿಕ ಸಾಹಿತ್ಯಿಕ ಸಂಘ ಸಂಸ್ಥೆಗಳು ಸಾಕಷ್ಟು ಗೌರವ ಪುರಸ್ಕಾರಗಳನ್ನು ನೀಡಿ ಅಭಿನಂದಿಸಿವೆ. ಅವುಗಳಲ್ಲಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಎಸ್.ವಿ ಪರಮೇಶ್ವರಭಟ್ಟ ಪ್ರಶಸ್ತಿ, ಡಾ.ಜಿ.ಎಸ್ ಶಿವರುದ್ರಪ್ಪ ಪ್ರಶಸ್ತಿ, ಡಾ.ಎಲ್ ಬಸವರಾಜು ಪ್ರಶಸ್ತಿ, ಕರ್ನಾಟಕ ಅಕಾಡೆಮಿಯ ಪೆಲೋಶಿಪ್; ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಪ್ರಮುಖವಾದವುಗಳಾಗಿವೆ.
ಇಂತಹ ಮಹಾನ್ ಕೀರ್ತಿಕಲಶ 2010 ಆಗಸ್ಟ್ 7 ರಂದು ಹೃದಯಾಘಾತದಿಂದ ಇನ್ನಿಲ್ಲವಾಯಿತು. ಆದರೆ ಇವರು ಹಾಕಿ ಕೊಟ್ಟ ಸಾಹಿತ್ಯ ಮತ್ತು ಸಾಂಸ್ಕøತಿಕ ನೆಲೆಗಟ್ಟುಗಳು ನಮ್ಮೆಲ್ಲರಿಗೂ ದೀವಿಗೆಯಾಗಿ ಸದಾ ಜೀವಂತವಾಗಿವೆ.
ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ