ಬುಧವಾರ, ಜುಲೈ 30, 2014

ಪ್ರಶ್ನೆ ಮಾಡ ಬೇಡ ?



ಬಹು ದಿನಗಳ ಹಿಂದೆ ಓಬಳಾಪುರ ಎಂಬ ಚಿಕ್ಕ ಗ್ರಾಮದಲ್ಲಿ ಚಿಕ್ಕಜ್ಜಿ ಎಂಬ ಜೀವ ಬದುಕಿ ಬಾಳಿತ್ತು. ಆ ಅಜ್ಜಿಗೆ ಮೂರು ತದ್ವಿರುದ್ದ ಲಿಂಗವುಳ್ಳ ಮಕ್ಕಳಾಗಿದ್ದವು. ಅವ್ರು ಬೆಳೆ ಬೆಳೆಯುತ್ತಾ ತಮ್ಮ ಜನನಕ್ಕೆ ಕಾರಣಕರ್ತ ಜೀವಗಳನ್ನು ದೂರಮಾಡಿಕೊಂಡಿದ್ದರು. ಗೂಳಿ, ದಿಗಂತ ಹಾಗೂ ಮಾರುತ ಅನುಕ್ರಮವಾಗಿ ಚಿಕ್ಕಜ್ಜಿ ಉದರದಿಂದ ಜಗತ್ ನೋಡಿದ್ದರು. ಅದು ನಾಮಕ್ಕೆ ಚಿಕ್ಕ ಹಳ್ಳಿಯಾದರೂ ಈ ತ್ರಿಮೂರ್ತಿಗಳಿಂದ ಸುತ್ತ ಹತ್ತಾರು ಹಳ್ಳಿಗಳಲ್ಲಿ ಹೆಸರು ಮಾಡಿಕೊಂಡಿತ್ತು.
ಹತ್ತಾರು ವರ್ಷಗಳ ಉರುಳಿಕೆಯು ಇವರಲ್ಲಿ ಹದಿಹರೆಯ ವಯಸ್ಸನ್ನು ತಂದುಕೊಟ್ಟಿತ್ತು. ಯಾವ ಕಾರ್ಯ ಕಲಾಪಗಳೇ ಆಗಲಿ ಇವರ ಕರಗಳಿಂದ ಕಾದು ಸುಸ್ತಾಗುತ್ತಿರಲಿಲ್ಲ. ಇಡೀ ವರ್ಷದ ಕಾರ್ಯಗಳು ಅರೆಕ್ಷಣದಲ್ಲಿ ಪರದೆ ಎಳೆದುಕೊಳ್ಳುತ್ತಿದ್ದವು. ಇವರಲ್ಲಿ ಹಿರಿಯ “ಗೂಳಿ” ವ್ಯವಸಾಯದ ಭಾರವನ್ನು ಹೊತ್ತರೆ, “ದಿಗಂತ” ಜಾನುವಾರುಗಳ ಮಲ, ಮೂತ್ರ ಸ್ಥಳದ ಸ್ವಚ್ಛಗೊಳಿಸುವಿಕೆ ಹಾಗೂ ಅವುಗಳಿಗೆ ಊಟ, ಉಪಹಾರ ನೀರಿನ ಸೌಕರ್ಯ ಒದಗಿಸುವುದು, ಕೊನೆಯ ಹಾಗೂ ಪ್ರೀತಿಯ ಮುದ್ದು ಕೂಸೆಂದೇ ಕರೆಸಿಕೊಂಡ “ಮಾರುತನು” ತಿನ್ನುವುದರಲ್ಲಿ ನಿಪುಣ ಹಾಗೂ ಸರ್ವ ವ್ಯಾಪಿಯಾಗಿದ್ದನು. ಮಾರುತನು ಒಂದು ಸಮಯದ ಉಪಹಾರಕ್ಕಾಗಿ ಕೇವಲ ಐದು ಕ್ವಿಂಟಾಲ್ ಅಷ್ಟೇ ಸೇವಿಸುತ್ತಿದ್ದನು. ಊಟವಾದರೆ ಒಂದ್ಹತ್ತು ಕ್ವಿಂಟಾಲ್ ಸೇವಿಸುತ್ತಿದ್ದನಷ್ಟೇ. ಆದರೆ ಇವನು ಕೇವಲ ಉರುಳಿಯಿಂದ ತಯಾರಿಸಿದ ಅಡುಗೆಯನ್ನಷ್ಠೇ ಸೇವಿಸುತ್ತಿದ್ದ. ಒಂದು ದಿವಸ ಒವರ್ ಲೋಡ್ ಆಗಿ ಊರಿನ ಆಚೆಯ ಬದಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೋಗಿ ಬೃಹಾದಾಕಾರದ ಮರದಡಿಗೆ ತಂದಿದ ಗಂಟಲತನಕದ ಬಂದ ಉರುಳಿ ಉಣ್ಣ ಮಾರುತನಲ್ಲಿ ಆಯಾಸ ಉಂಟುಮಾಡಿತ್ತು. ಉದರದೊತ್ತಡ ಅಧಿಕವಾಗಿ ಊಸು ಒತ್ತರಿಸಿ ಬಂದಿತು. ಊರ ಕಡೆ ತೊಡೆ ಎತ್ತಿ ಶಕ್ತಿ ಮೀರಿ ಬಿಟ್ಟು ಹೊಟ್ಟೆ ಹಗುರ ಮಾಡಿಕೊಂಡ, ಆರೇಳು ಹೆಲಿಕ್ಯಾಪ್ಟರ್ ಶಬ್ದ ಮೀರಿಸುತ್ತಾ . . .  ! ಆದರೆ ಆ ಊಸಿನ ಗಾಳಿಗೆ ಕೆಂಗಲು ಮಣ್ಣಾದ್ದರಿಂದ ಸುಂಟರಗಾಳಿ ದೂಳೆದ್ದು ಊರಲ್ಲಿ ನುಗ್ಗಿ ಚಪ್ಪರ ಹಂಚುಗಳೆಲ್ಲಾ ಆಚೆಯ ಹೊಲ ಗದ್ದೆಗಳಿಗೆ ವಲಸೆ ಹೋದರೆ, ಕೆಲವೊಂದು ಮನೆಗಳ ಬುನಾದಿ ಸಡಿಲಗೊಂಡಿದ್ದವು. ಇನ್ನು ಕೆಲವೆಡೆ ಹೊಲಗದ್ದೆಗಳ ಬೆಳೆಗಳಿಗೆ ಅಂಟಿಕೊಂಡ ಕ್ರಿಮಿಗಳು ಈ ವಾಸನೆಗೆ ಉಸಿರುಕಟ್ಟಿ ನೇರವಾಗಿ ನೆಲಕ್ಕುರುಳಿ ಜೀವ ಕಳೆದುಕೊಂಡವು.
ಇನ್ನು ಗೂಳಿಯ ವಿಷಯಕ್ಕೆ ಬಂದರೆ, ಇವನೇ ಮನೆಯೊಡೆಯ ಕೃಷಿಕ ಬಿತ್ತನೆ ಕಾಲದಲ್ಲಿ ಸಾವಿರಾರು ಎಕರೆ ಹೊಲವನ್ನು ಒಂದೇ ದಿನದಲ್ಲಿ ಬಿತ್ತಿ ಮುಗಿಸುತ್ತಿದ್ದ. ಇರುವೆಗಳನ್ನು ಕೂರಿಗೆ ಹೂಡಿಕೊಂಡು ಹದಿನಾರು ಖಂಡ್ಗ ಉರುಳಿ ಬೀಜವ ಹುಡಿಯಲ್ಲಿ ಕಟ್ಟಿಕೊಂಡು ( ಒಂದು ಖಂಡ್ಗ  ಅಂದರೆ 16 ಚೀಲ) ಐದಾರು  ತಾಸಿನಲ್ಲಿ ಬಿತ್ತನೆ ಕಾರ್ಯಕ್ಕೆ ತೆರೆ ಎಳೆಯುತ್ತಿದ್ದ.
ಎರಡನೆಯ ಸುಕುಮಾರ ದಿಗಂತನು 500 ಜಾನುವಾರುಗಳಿಗೆ ಕಣದಿಂದ ಒಂದು ಹೊರೆ ಮೇವು ಹೊತ್ತು ತಂದು ಕತ್ತರಿಸಿದರೆ, ಆ ಮೇವು ವರ್ಷದ ತನಕ ತಿಂದು ಉಳಿಯುತ್ತಿತ್ತು. ಹಾಗೂ ಪಕ್ಕದ ಕೆರೆಯಿಂದ ಒಂದು ಕೊಡ ನೀರು ತಂದರೆ ವರ್ಷದುದ್ದಕ್ಕೂ ಆ ಎಲ್ಲಾ ಜಾನುವಾರುಗಳಿಗೆ ಕುಡಿದು, ಸ್ನಾನಮಾಡಿ ಉಳಿಯುತ್ತಿದ್ದವು.
ಒಂದು ಸಲ ಪಕ್ಕದ ‘ಮುತ್ತೂರು’ ರಾಜ್ಯದ ರಾಜನಾದ ‘ಸಕ್ರೇಶ್ವರ ಮಹಾರಾಜ ತನ್ನ ನೂರು ಎಕರೆಯ ಕಾಂಸಪೌಂಡಿನಲ್ಲಿ ಒಂದೇ ಒಂದು ಕುಂಬಳ ಕಾಯಿಯನ್ನು ಬೃಹದಾಕಾರವಾಗಿ ಹಲವಾರು ವರ್ಷಗಳ ಪರಿಶ್ರಮದಿಂದ  ಬೆಳೆಸಿದ್ದನು. ರಾಜನು ಯಾರು ಈ ಕುಂಬಳ ಕಾಯಿಯನ್ನು ನಿರರ್ಗಳವಾಗಿ ಎತ್ತುತ್ತಾರೆಯೋ ಅವನಿಗೆ ನನ್ನ ಮಗಳನ್ನು ಹಾಗೂ ಅರ್ಧರಾಜ್ಯದ ಸಿರಿ ಸಂಪತ್ತನ್ನು ಧಾರೆಯೆರೆಯುತ್ತೇನೆ ಎಂದು ಸುತ್ತ ಸುತ್ತ ರಾಜ್ಯಗಳಲ್ಲಿ ಡಂಗೂರ ಸಾರಿಸಿದ.
ಈ ವಿಷಯ ಓಬಳಾಪುರದ ತ್ರಿಮೂರ್ತಿಗಳ ಕಿವಿಯ ಪದರಿನ ಮೇಲೆಯೂ ಸಹ ಊಂಕರಿಸಿತು. ಮೂವರೂ ಸೇರಿ ಪರಸ್ಪರ ಚರ್ಚಿಸಿ ಇದರಲ್ಲಿ ಭಾಗವಹಿಸಲು ಸನ್ನದ್ಧರಾದರು.
ಆ ದಿವಸ ಬಂದೇ ಬಿಟ್ಟಿತು. ಯಾವುದೇ ಆವಾಂತರವಿಲ್ಲದೆ ಅಸಾಮಾನ್ಯ ಸಹೋದರರ ದಾರಿ ಓಬಳಪುರ ಮತ್ತು ಮುತ್ತೂರು ರಾಜ್ಯದ ನಡುವೆ ಹಾದು ಹೋಗುವ ‘ವನ್ನಾಂಬಿಕೆ’ ಹೊಳೆಯನ್ನು ಮೀರಿ ಸಾಗಿತ್ತು. ವನ್ನಾಂಬಿಕೆಯು ಇವರ ಮೊಣಕಾಲನ್ನು ಸಹ ತೋಯಿಸಿರಲಿಲ್ಲ. ಮುತ್ತೂರು ರಾಜ್ಯ ಸಮೀಪಿಸುತ್ತಿದಂತೆಯೇ ರಾಜ ಒಡ್ಡೋಲಗದಲ್ಲಿ ವಿಜೃಂಬಣೆಯ ಕೇಕೆ ಮೊಳೆಯುತ್ತಿತ್ತು. ದೇಶ, ವಿದೇಶದಿಂದ ರಾಜಕುಮಾರಿ ‘ದುರ್ಗಾದೇವಿ’ಯನ್ನು ವರಿಸಲು ನೂರಾರು ಯುವರಾಜರು ದಾವಿಸಿದ್ದರು. ತ್ರಿಮೂರ್ತಿಗಳ ಪಾದಗಳೂ ಸಹ ಸಮಾರಂಭಕ್ಕೆ ಬಂದು ನೆಲೆನಿಂತವು. ಕುಂಬಳಕಾಯಿ ರಾಜಮರ್ಯಾದೆಯಿಂದ ಪೂಜೆಗೊಂಡು ಪಂದ್ಯ ಸಜ್ಜಾಯಿತು. ಮೊದಲು ರಾಜಕುಮಾರ ಸರದಿ, ಒಬ್ಬೊಬ್ಬರಾಗಿ ಬಂದು ಪ್ರಯತ್ನಿಸಿದರೂ, ಎಲ್ಲರ ಕರಗಳು ಊನವಾದರೂ ಕಂಬಳಕಾಯಿಯ ರೋಮ ಮಾತ್ರ ಛದುರಲಿಲ್ಲ. ಕೊನೆ ಸರದಿ ಇವರದಾಗಿತ್ತು. ಗೂಳಿಯನ್ನು ತಮ್ಮಂದಿರು ಬೆನ್ನು ಚಪ್ಪರಿಸಿ ಕಳುಹಿಸಿದರು. ಗೂಳಿ ಉಡುಪು ಕಳಚಿ ಕಾಚಾದೊಂದಿಗೆ ಕುಂಬಳ ಕಾಯಿಯೆಡೆಗೆ ಧಾವಿಸುತ್ತಿದ್ದರೆ ಭೂಮಿಯು ಮೇಲೆ ಕೆಳಗಿಳಿದಂತಾಗುತ್ತಿತ್ತು. ಕುಂಬಳಕಾಯಿ ಬೆವೆತು ನೀರಿಳಿಯುತ್ತಿತ್ತು. ನೆಲ ಗುಡುಗಿದಂತೆ ಅಲ್ಲಿನ  ನೆರೆದ ಜನರಿಗೆ ಬಾಸವಾಗುತ್ತಿತ್ತು. ‘ಗೂಳಿ’ ಕೈಮುಗಿದು ಮನೆದೇವ್ರು ಆದೋನಿ ಎಲ್ಲಮ್ಮಾಳನ್ನು ನೆನೆದು ಕೈ ಹಾಕಿದೆಡೆ ಕುಂಬಳ ಕಾಯಿ ಮಂಡಕ್ಕಿ ಚೀಲದಂತೆ ಮಸ್ತಕದ ಮೇಲೆ ಎದ್ದು ನಿಂತಿತು. ಸಭಿಕರ ಚಪ್ಪಾಳೆಯ ಶಬ್ದ ಮುಗಿಲ ಮುಟ್ಟಿ, ಕಿವಿಯಲ್ಲಿ ಹಿಂಡಾನೆ ಒದರಿದಂತಾಗಿತ್ತು. ವಚನಬದ್ಧನಾದ ‘ಸಕ್ರೇಶ್ವರ’ ಮಹಾರಾಜನು ಮಾತಿನ ಪ್ರಕಾರ ತನ್ನ ಮಗಳಾದ ‘ದುರ್ಗಾದೇವಿ’ಯನ್ನು ‘ಗೂಳಿ’ಗೆ ರಾಜ ಮರ್ಯಾದೆಯೊಂದಿಗೆ ವಿಜೃಂಬಣೆಯಿಂದ ಮದುವೆ ಮಾಡಿಸಿ, ಗಜದಳ, ಅಶ್ವದಳ, ಕಾಲ್ದಳ ಹಾಗೂ ರಾಜಕುಮಾರಿಗೆ ಸಾಕಾಗುವಷ್ಟು ಸಖಿಯರನ್ನು ಹಿಂದೆ ಕಳುಹಿಸಿ ಆನಂದಭಾಷ್ಪದೊಂದಿಗೆ ಬೀಳ್ಕೊಟ್ಟನು.
ಇತ್ತ ತ್ರಿಮೂರ್ತಿಗಳ ಪರಿವಾರ, ಕುಂಬಳಕಾಯಿ ಸಮೇತವಾಗಿ ರಾಜ ವೈಭವಗಳೊಂದಿಗೆ ಓಬಳಾಪುರದ ಕಡೆಗೆ ಹೆಜ್ಜೆ ಹಾಕಿತು. ರಾಜ, ಸೈನ್ಯ ಹಾಗೂ ರಾಜಕುಮಾರಿಯರನ್ನು ‘ವನ್ನಂಬಿಕ’ ಹೊಳೆಯು ತಡೆಯಿಡಿಯಿತು. ತ್ರಿಮೂರ್ತಿಗಳೇನೋ ಸಲೀಸಾಗಿ ದಾಟುವರು. ಆದರೆ ಅವರು ಚಿಂತಿಸತೊಡಗಿದರು ತಟ್ಟನೇ ಮಾರುತನ ಮಸ್ತಕದಲ್ಲಿ ಒಂದು ಸಲಹೆ ಸುಳಿದಾಡಿತು, ತಡಮಾಡದೇಭಿತ್ತರಿಸಿದ ಕುಂಬಳ ಕಾಯಿಯ ತುತೂ ಮಾಡಿ ಒಳ ತಿರುಳನ್ನು ತೆಗೆದು ಅದರಲ್ಲಿ ಇವರನ್ನೆಲ್ಲಾ ಹಾಕಿ, ಆಚೆಯ ದಡಕ್ಕೆ ಹೋದ ಮ್ಯಾಲೆ ತೆಗೆದರಾಯಿತು ಎಂದನು. ಒಳ್ಳೆಯ ಉಪಾಯವೆಂದು ‘ದಿಗಂತ’ ಸಣ್ಣತೂತು ಮಾಡಿ ಒಳಗಿನ ತಿರುಳನ್ನೆಲ್ಲಾ ಹೊರತೆಗೆದ, ‘ಗೂಳಿ’ ಯು ಅದರೊಳಕ್ಕೆ ರಾಣಿ, ಸಖಿಯರು, ಗಜದಳ, ಅಶ್ವದಳ, ಕಾಲ್ದಳ ಹೀಗೆ ಒಬ್ಬೊಬ್ಬರನ್ನಾಗಿ ಕಳಿಸಿ ಬಾಯಿ ಮುಚ್ಚಿದ. ನಂತರ ಆ ಕುಂಬಳಕಾಯಿಯನ್ನು ಆಚೆಯ ದಡದಲ್ಲಿದ್ದ ಮಾರುತನ ಕೈಗೆ ಎಸೆದ, ಅದು ಹೊಳೆ ದಂಡೆಗೆ ಬಿದ್ದು, ಮಾರುತ ಬಂದು ಇನ್ನೇನು ತಗೋಬೇಕು ಎನ್ನುವಷ್ಟರಲ್ಲಿ ನದಿಯಲ್ಲಿ ವಾಸವಾಗಿದ್ದ ಏಡಿಯೊಂದು ನೋಡಿ ತಕ್ಷಣವೇ ಹಿಡಿದು ನುಂಗಿ ನದಿಯ ಕಡೆಗೆ ತಿರುಗಿತು. ಇದ ನೋಡಿ ‘ಗೂಳಿ’ ಭರದಿಂದ ಏಡಿಯತ್ತ ಮುನ್ನಗ್ಗಿದ, ಮಾರುತ ದಿಗ್ಬ್ರಮೆಗೊಂಡು ಚಕಿತನಾದ. ಏಡಿ ನೀರೊಳಗೆ ಇನ್ನೇನು ಇಳಯುವಷ್ಟರಲ್ಲಿ ಕಾದು ಕುಳಿತ ಗುಳ್ಳೆ ನರಿಯೊಂದು ಓಡಿಬಂದು ಆ ಏಡಿಯ ಗಬಕ್ಕನೇ ನುಂಗಿ ನೆಗೆಯಲಾರಂಭಿಸಿತು.
ತ್ರಿಮೂರ್ತಿಗಳಿಗೆ ದಿಡೀರನೇ ಸಿಡಿಲೊಡೆದಂತಾಗಿ ನರಿಯ ಹಿಡಿಯಲು ಹಿಂದೆಯೇ ಬಾಲವಾದರು. ನರಿಯ ನೂರಾರು ಮೈಲುಗಳ ಓಟ ಇವರನ್ನು ಸುಸ್ತು ಮಾಡಿತ್ತು. ಅಡವಿಯಲ್ಲಿ ದಿಕ್ಕಿಗೊಬ್ಬರಂತೆ ಹುಡುಕಿ ನರಿಯ ಕಾಣದಂತಾದರು. ಕೆಲ ಕ್ಷಣದಲ್ಲಿಯೇ ಗೂಳಿಯ ನೇತ್ರ ಪರದೆಯ ಮೇಲೆ ಆ ಗುಳ್ಳೆ ನರಿಯ ಪ್ರತಿಬಿಂಬ ಸುಳಿದಾಡಿತು. ನರಿಯನ್ನು ಕಂಡು ಮತ್ತೆ ಹಿಂಬಾಲಿಸಿದ, ಸ್ವಲ್ಪದರಲ್ಲಿಯೇ ನರಿಯು ಸುಸ್ತಾಗಿ ಬೀಳುವ ಹಂತದಲ್ಲಿರುವಾಗಲೇ ಅಲ್ಲೊಬ್ಬ 500 ಅಡಿ ಪರ್ವತವನ್ನು ನೆಲ ಸಮ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದನು ಕೊಡಲಿಯನ್ನು ಬದಿಗಿರಿಸಿ. ಸಮಯ ಸದುಪಯೋಗದ ನರಿಯು ಮಲಗಿದವನ ಹಿಂಬದಿಯ ಕಾಲುಗಳು ದೊಡ್ಡ ದೊಡ್ಡ ಗುಹೆಗಳಂತೆ ಬಿರುಕು ಬಿಟ್ಟದ್ದರಲ್ಲಿ ಹೋಗಿ ಅವಿತುಕೊಂಡಿತು. ಗೂಳಿ ಅವನನ್ನು ನೋಡಿ ದಿಗ್ಬ್ರಮೆಗೊಂಡು ಕಾಲ ಬಿರುಕುಗಳಲ್ಲಿ ಇಣುಕಿಹಾಕಿದ. ನರಿಯ ಕಣ್ಣುಗಳು 1000 ವ್ಯಾಟ್ ಬಲ್ಬು ಹೊಳೆವಂತೆ ಬಾಸವಾಗುತ್ತಿತ್ತು. ಅಷ್ಟೊತ್ತಿಗಾಗಲೇ ಗೂಳಿ ಕೋಪದ ತುತ್ತ ತುದಿ ತಲುಪಿದ  ಏನೂ ತೋಚದೇ  ಬದಿಗಿದ್ದ ದೊಡ್ಡ ಬಂಡೆಯನ್ನು ಎತ್ತಿ ಹಿಂಬದಿಯ ಮೇಲೆ ದಭಾರನೆ ಹೇರಿದ. ಆದರೆ ಕಾಲು ಸ್ವಲ್ಪವೂ ಮಿಸುಗಲಿಲ್ಲ ಮಲಗಿಕೊಂಡವನಿಗೆ ಎಲ್ಲೋ ಇರುವೆ ಕಾಲತ್ತಿದಂತಾಗಿ ತೋರಿತ್ತು. ಗೂಳಿ ಇನ್ನೊಮ್ಮೆ ಆ ಬಂಡಿಯನ್ನು ಎತ್ತಿ ಜೋರಾಗಿ ಹಾಕಿದ ಅವನಿಗೆ ಎಚ್ಚರವಾಯಿತು.  ಎದ್ದವನೇ ಗೂಳಿಯನ್ನು ಕಂಡು ಕಣ್ಣ ಕೆಂಪು ವiಡಿದವನೇ ಕೊಲ್ಲಲು ಮುಂದಾದ. ಇವನು ಆ ಮುಗಿಲತನಕ ದೈತ್ಯ ದೇಹ ಕಂಡು ಗೂಳಿ ಓಡಲಾರಂಭಿಸಿದ ಆ ವ್ಯಕ್ತಿ ಹಿಂದೆಯೇ ಬೆನ್ನಟ್ಟಿದರೆ, ಬಿರುಕಿನಲ್ಲಿಯ ನರಿ ಬೆಚ್ಚಗೆ ಜೀವಹಿಡಿದಿತ್ತು.
ಮುಂದೆ ಒಬ್ಬ ಅಜ್ಜಿ ಹದಿನೈದು ಮದ್ದಾನೆಗಳನ್ನು ಮೇಯಿಸಿಕೊಂತ ಕೂತಿತ್ತು. ದೂರದಲ್ಲಿ ಬರುವ ಇವರನ್ನು ಕಂಡು ಕಳ್ಳರಿರಬೇಕೆಂದು ಭಾವಿಸಿ ಕ್ಷಣದಲ್ಲೇ ಆ ಆನೆಗಳನ್ನೆಲ್ಲಾ ತಗೊಂಡು ಹುಡಿಯಲ್ಲಿ  ಕಟ್ಟಿಕೊಂಡು ಸುಮ್ಮನೇ ಕುಳಿತಳು. ಗೂಳಿ ತೇಕುತ್ತಾ ಅಜ್ಜಿಯ ಬಳಿಗೆ ಬಂದು ಅಜ್ಜಿ ನಾನೀಗ ಸಾವಿನಂಚಿನಲ್ಲಿದ್ದೇನೆ ದಯವಿಟ್ಟು ರಕ್ಷಿಸು ನಡೆದದ್ದೆಲ್ಲಾ ಅನಂತರ ಹೇಳುತ್ತೇನೆ ಎಂದು ಅಂಗಲಾಚುತ್ತಾನೆ. ಅಜ್ಜಿ ಕರುಣೆ ತೋರಿಸಿ ಬಾ ಎಂದು ಸೀರೆಯಲ್ಲಿ ಮುಚ್ಚಿಟ್ಟುಕೊಂಡಳು.
ಧೈತ್ಯ ವ್ಯಕ್ತಿ ಅಜ್ಜಿಯ ಕಡೆಗೆ  ಧಾವಿಸಿ ಬೇ ಅಜ್ಜೀ ಇಲ್ಲೊಬ್ಬ ಓಡಿಬಂದಲ್ಲಾ ಎಲ್ಲೋದನವನು ? ಯಾರು ಬಂದಿಲ್ಲ. ನಾನು ನೋಡಿಲ್ಲವೆಂದು ಅಜ್ಜಿಯಿಂದ ಉತ್ತರ. ಅವನು ಸಿಟ್ಟಿನಿಂದ ಪುನಃ “ಬೇ ಹೇಳುತ್ತೀಯಾ  ಅಥವಾ ಇಲ್ವಾ ? ನೆಟ್ಟಗಿರಕಿಲ್ಲ ನೋಡು ಎಂದು ಗುಡುಗಿದ. ಅಜ್ಜಿಯ ಸಹನೆಯ ಎಲ್ಲೆ  ಮೀರಿ ಹುರಿಗನ್ಣಿನಿಂದ ನೋಡಿ ಮೂಗಿನಿಂದ ಜೋರಾಗಿ ಸೀಂತು ಹಸಿರು ಗೊಣ್ಣೆಯ ರಾಶಿ-ರಾಶಿಯಾಗಿ ಆ ದೈತ್ಯ ಮಾನವನ ಮೇಲೆ ಎಸೆದಳು . ಅವನು ಉಸಿರಾಡಲು ಸಹ ಸಾಧ್ಯವಾಗದೆ ಲಿಬಿ ಲಿಬಿ ಒದ್ದಾಡಿ ಕೊನೆಯುಸಿರೆಳೆದ. ನಂತರ ಅಜ್ಜಿ ಗೂಳಿಯನ್ನು ಹೊರಬರುವಂತೆ ಹೇಳಿದಾಗ ಗೂಳಿಯು ಹೊರಬಂದು ಅಲ್ಲಿಯವರೆಗೂ ನಡೆದ ಕಥೆಯನ್ನೆಲ್ಲಾ ಅಜ್ಜಿಯ ಬಳಿ ವಿವರವಾಗಿ ನಿವೇಧಿಸಿದ. ನಂತರ ಅಜ್ಜಿಯು ಜೋರಾಗಿ  ಆ ಗೊಣ್ಣೆ ರಾಶಿಯ ಊದಿ ಅವನನ್ನು ಹೊರಗೆಡವಿ,  ಅವನ ಹಿಂಬದಿ ಸೀಳಿ ನರಿಯನ್ನು ಹೊರಗೆಳೆದು, ಹೊಟ್ಟೆ ಸೀಳಿ ಏಡಿಯನ್ನು ಹೊರ ತೆಗೆದು, ಏಡಿ ದೇಹ ಸೀಳಿ ಕುಂಬಳ ಕಾಯಿಯ ಹೊರತೆಗೆಯುತ್ತಿದ್ದಂತೆ ! ತಮ್ಮಂದಿರಾದ “ದಿಗಂತ” ಹಾಗೂ “ಮಾರುತ” ಕಾಡೆಲ್ಲಾ ಅಲೆ ಅಲೆದು ಸುಸ್ತಾಗಿ ಅಲ್ಲಿಗೆ ಬಂದು ಸೇರಿದರು. ಕುಂಬಳ ಕಾಯಿಯ ಮುಚ್ಚಳ ತೆಗೆದು ರಾಣಿ, ಸಖಿಯರು, ಸೈನಿಕರನ್ನು ಹೊರತೆಗೆದು ಗೂಳಿ ನಡೆದ ವಿಷಯವನ್ನೆಲ್ಲಾ ಹೇಳುತ್ತಿದ್ದರೆ ... ಅವರೆಲ್ಲಾ ನಂಬದವರಂತೆ ಆಲಿಸುತ್ತಿದ್ದರು. ನಂತರ ಅಜ್ಜಿ ಹುಡಿ ಬಿಚ್ಚಿ ಹದಿನೈದು ಆನೆಗಳನ್ನು ಹೊರ ಬಿಡುತ್ತಿದ್ದಂತೆಯೇ ಘರ್ಜಿಸುತ್ತಾ ಆ ಆನೆಗಳೆಲ್ಲ ಬೆರೆತು ಆಡಿದವು. 
ತ್ರಿಮೂರ್ತಿಗಳು ಅಜ್ಜಿಯನ್ನು ಜೊತೆಗೆ ಕರೆದುಕೊಂಡು ತಮ್ಮ ಪರಿವಾರದೊಂದಿಗೆ ಓಬಳಾಪುರದತ್ತ ಹೆಜ್ಜೆ ಹಾಕಿದರು.



ಲೇಖಕರ ವಿಳಾಸ: ಕೊಟ್ರೇಶ್ ಎಸ್.ಉಪ್ಪಾರ್,ಆಲೂರು
ಲೇಖಕರು, ಶಿಕ್ಷಕರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794

‘ ವಸುಂಧರೆ ’


ಪ್ರಾಚೀನ ಕಾಲದಲ್ಲಿ ವಿದ್ಯಾನಗರವೆಂಬ ಪುಟ್ಟ ಗ್ರಾಮವಿತ್ತು. ಈ ಗ್ರಾಮ ತುಂಬಾ ಸಂಪದ್ಭರಿತವಾಗಿತ್ತು. ಮಾದೇಗೌಡನೇ ಊರಿನ  ಯಜಮಾನ. ಪಂಚಾಯಿತಿ ಮುಖ್ಯಸ್ಥನಾಗಿ ಅದೆಷ್ಟೋ ಜಗಳಗಳನ್ನು ಬಗೆಹರಿಸಿದ್ದ. ನ್ಯಾಯಕೊಡಿಸಿದ್ದ. ಸುತ್ತ ಹದಿನೆಂಟು ಹಳ್ಳಿಗಳಲ್ಲಿ ಮಾದೇಗೌಡರೆಂದರೆ ಜನರಲ್ಲಿ ಭಯ, ಭಕ್ತಿ ತುಂಬಿತ್ತು. ಆದರೆ ಗೌಡನಿಗೆ ಸಂತಾನವಿರಲಿಲ್ಲ. ಹೀಗಾಗಿ ಇವರು ತಮಗೆ ವಂಶೋದ್ಧಾರಕ ಇಲ್ಲವಲ್ಲ ಎಂಬ ಚಿಂತೆಗೊಳಗಾದರು.
ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ಸುತ್ತದ ದೇವರಿರಲಿಲ್ಲ, ಅಲೆಯದ ಜ್ಯೋತಿಷಿಗಳಿರಲಿಲ್ಲ ! ಪÀÅರೋಹಿತರ ಸಲಹೆಯ ಮೇರೆಗೆ ಅದೆಷ್ಟೋ ಹೋಮ ಹವನ, ಪೂಜೆ ಪುನಸ್ಕಾರಗಳನ್ನು ಮಾಡಿಸಿದರೂ ಫಲಿಸಲಿಲ್ಲ. ಧಾನ-ಧರ್ಮಾದಿಗಳನ್ನು ಮಾಡಿದರೂ ಫಲ ದೊರೆಯಲಿಲ್ಲ.
ಅದೇ ಸಮಯಕ್ಕೆ ಹಿಮಾಲಯದಲ್ಲಿ ಹದಿನೈದು ವರ್ಷಗಳ ಕಾಲ ತಪಗೈದು ಶಿವಜ್ಞಾನ ಸಂಪಾದಿಸಿ ಅಪÀÇರ್ವ ಶಕ್ತಿಯೊಂದನ್ನು ಸಂಪಾದಿಸಿಕೊಂಡಿದ್ದ ಕ್ರಿಷ್ಣಮೂರ್ತಿಮುನಿಗಳು ಆ ಹಳ್ಳಿಗೆ ಆಗಮಿಸಿ, ಅವರ ಆರನೆ ಇಂದ್ರಿಯ ನೆರವಿನಿಂದ ಆ ಊರಲ್ಲಿದ್ದ ಸಮಸ್ಯೆ ಅರಿತು ನೇರವಾಗಿ ಗೌಡರ ಮನೆಗೆ ಬಂದರು, ಅಂಗಳದಲ್ಲಿ ಚಿಂತಾಕ್ರಾಂತನಾಗಿ ಕೂತಿದ್ದ, ಗೌಡನು ತಕ್ಷಣ ಎದ್ದು ಮುನಿಗಳನ್ನು ಸ್ವಾಗತಿಸಿ, ಆಧರದಿಂದ ಸತ್ಕರಿಸಿ, ತನ್ನ ಅಳಲನ್ನು ತೋಡಿಕೊಂಡನು. 
ಗೌಡನನ್ನು ಉದ್ದೇಶಿಸಿ ಕ್ರಿಷ್ಣಮೂತಿಗಳು ನಿಮ್ಮ ಸಮಸ್ಯೆಯನ್ನು ಅರಿತೇ ನಾವಿಲ್ಲಿಗೆ ಹಿಮಾದ್ರಿಯಿಂದ ಆಗಮಿಸಿದ್ದೇವೆ. ತೆಗೆದುಕೋ ಈ ಗಿಡವನ್ನು ಬರುವ ಅಮವಾಸ್ಯೆ ದಿನದಂದು  ಇದಕ್ಕೆ ಶ್ರದ್ದೆಯಿಂದ ಪೂಜೆ ಸಲ್ಲಿಸಿ ಉಗುರು ಬೆಚ್ಚಗಿನ ಮೇಕೆ ಹಾಲಿನಲ್ಲಿ ತೇದು  ಈ ಗಿಡವನ್ನು ನಿಮ್ಮ  ಶ್ರೀಮತಿಯವರಿಗೆ ಕುಡಿಸಿ ಎಂದು  ಮುನಿಗಳು ಅಲ್ಲಿಂದ ನಿರ್ಗಮಿಸಿದರು.
ಗೌಡನ ಸಂತೋಷಕ್ಕೆ ಪಾರವೇಯಿರಲಿಲ್ಲ. ಸ್ವರ್ಗವೇ ಸಿಕ್ಕಷ್ಟು ಸಂತೋಷವಾದ ಗೌಡ ತನ್ನ ಶ್ರೀಮತಿಯೊಂದಿಗೆ ತನ್ನ ಖುಷಿಯನ್ನು ಹಂಚಿಕೊಂಡ, ಕೆಲವೇ ದಿನಗಳಲ್ಲಿ ಗೌಡತಿ ಗರ್ಭವತಿಯಾದಳು. ಈ ಸಿಹಿ ಸುದ್ದಿ ಸುತ್ತಮುತ್ತಲಿನ ಗ್ರಾಮಗಳಿಗೆ ಹರಡಿತು, ಜನರೆÉಲ್ಲರೂ ಸಂತೋಷಗೊಂಡರು. ಗೌಡನು ಊರಿನ ಹಿರಿಯ ಪುರೋಹಿತರಾದ ಕುಬೇಂದ್ರಶರ್ಮರವರನ್ನು ಮನೆಗೆ ಕರೆಸಿದ. ತನ್ನ ಮಗುವಿನ  ಜನನದ ಬಗ್ಗೆ ವಿಚಾರಿಸಿದ. ಕುಬೇಂದ್ರಶರ್ಮರವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಿದ್ದಹಸ್ತರು, ಅದೆಷ್ಟೋ ಭೇದಿಸಲಸಾಧ್ಯವಾದ ಮಾಹಿತಿಗಳೆಲ್ಲವನ್ನೂ ತಮ್ಮ ಸ್ಮøತಿ ಪಟಲದಿಂದಲೇ ಗ್ರಹಿಸುತ್ತಿದ್ದರು. ಶರ್ಮರವರು ಕವಡೆ ಹಾಕಿಸಿ ಲೆಕ್ಕಚಾರ ಮಾಡಿ ಹೀಗೆ ಹೇಳಿದ “ಗೌಡ್ರೇ ನಿಮಗೆ ಹೆಣ್ಣು ಮಗು ಜನಿಸಲಿದ್ದು, ಮುಂದೆ ಅವಳು ಅನ್ಯಧರ್ಮಿಯ ಹುಡುಗನನ್ನು ಪ್ರೇಮಿಸಿ, ಮದುವೆಯಾಗುವಳು ಇವರೀರ್ವರ ಪ್ರೇಮಕಥೆ ಜಗತ್ಪ್ರಸಿದ್ಧವಾಗುವುದು”.
ಪುರೋಹಿತರಿಗೆ ಸೂಕ್ತ ಸಂಭಾವನೆಯನ್ನು ನೀಡಿ ಕಳುಹಿಸಿದ ಗೌಡರು, ತಮ್ಮ ಮಗು ಜನಿಸುವುದನ್ನೇ ನಿರೀಕ್ಷಿಸಲಾರಂಭಿಸಿದರು. ಜ್ಯೋತಿಷಿಗಳು ನುಡಿದಂತೆ ಗೌಡರ ದಂಪತಿಗಳಿಗೆ ಹೆಣ್ಣು ಮಗು ಜನಿಸಿತು. ತಮ್ಮ ಮಗಳ ಭವಿಷ್ಯದಿಂದ ಚಿಂತೆಗೀಡಾಗಿದ್ದ ಗೌಡರು ಹೆಂಡತಿಗೆ ಸಮಾಧಾನವಾಗಿ ಮನವರಿಕೆ ಮಾಡಿಸಿ, ಆ ಮಗುವಿಗೆ ಒಂದು ಗಟ್ಟಿ  ತಾಯತವನ್ನು ಕಟ್ಟಿಸಿ, ಅದನ್ನು ಸೂರ್ಯ ಹುಟ್ಟುವ ಮುನ್ನವೇ ದೂರದ ಕಾಡಿನಲ್ಲಿ ಒಂದು ಮರದ ಕೆಳಗೆ ಬಿಟ್ಟು ಬಂದನು.
ಪಕ್ಕದೂರಿನ ವಾಸುದೇªನಾಯಕÀ ಸೌದೆ ಕಡಿಯಲೆಂದು ಸೂರ್ಯೋದಯ ವೇಳೆಯಲ್ಲಿ ಆ ಕಾಡಿಗೆ ಬಂದಾಗ ಅಲ್ಲಿ ಅವನಿಗೆ ಒಂದು ಮಗುವಿನ ಆಕ್ರಂದನ ಕೇಳಿಬರುತ್ತದೆ. ಆ ಧ್ವನಿಯ ಜಾಡನ್ನೇ ಹಿಡಿದು, ಆ ಮಗುವಿನ ಹತ್ತಿರ ಬಂದು ಬಹಳ  ಸಂತೋಷದಿಂದ ಆ ಮಗುವನ್ನು ಕೈಗೆತ್ತಿಕೊಂಡು ಮನೆ ಕಡೆಗೆ ಹೆಜ್ಜೆ ಹಾಕಿದ.
ವಾಸುದೇವನಾಯಕನೂ ಸಹ ಸಂತಾನಹೀನನಾಗಿದ್ದ. ಆ ಮಗುವನ್ನು ತನ್ನ ಪತ್ನಿಗೆ ತೋರಿಸಿ, ಆ ದೇವರೇ ತಮಗೆ ಈ ಮಗುವನ್ನು ಕರುಣಿಸಿರುವುದಾಗಿ ಹೇಳಿ, ಅದನ್ನು ಅವಳ ಕೈಗೆ ನೀಡಿದ.  ಬಂಜೆಯಾದ ಆತನ ಹೆಂಡತಿಗೆ ಆ ಶಿಶುವನ್ನು ನೋಡಿ ಬಹಳ ಆನಂದವಾಯಿತು. ವಾಸುದೇವನಾಯಕ ದಂಪತಿಗಳು ಮಗುವನ್ನು ಬಹಳ ಪ್ರೀತಿ ಆರೈಕೆಯಿಂದ ಬೆಳೆಸಿದರು. ಹೆಣ್ಣು ಮಕ್ಕಳು ಬಹುಬೇಗ ಬೆಳೆಯುತ್ತಾರೆಂಬುದು ಲೋಕಾರೂಢಿಯಲ್ಲವೇ ? ವಸುಂದರೆ ತುಂಬಾ ಸುಂದರಿ, ದೇವತೆಗಳ  ಪಡಿಯಚ್ಚಿನಂತೆ ಇವಳ ರೂಪು, ಇವಳ ಸೌಂದರ್ಯದ ಸೊಬಗು ಸುತ್ತಲಿನ ಗ್ರಾಮಗಳವರೆಗೂ ಮೈಸೂಸಿ ಕುಸುಮದ  ಸುವಾಸನೆಯಂತೆ ಪಸರಿಸಿತು. ಹತ್ತಾರು ವರಗಳು ಬಂದರೂ ಸರಿಯಾಗಿ ಹೊಂದಾಣಿಕೆಯಾಗಲಿಲ್ಲ. ಆದರೆ ನೋಡಿದವರೆಲ್ಲರೂ ಇವಳ ಸೌಂದರ್ಯಕ್ಕೆ ಮನಸೋಲದವರೇ ಇರಲಿಲ್ಲ.
ಒಂದು ದಿವಸ ಈ ಹಳ್ಳಿಯ ಪಂಚಾಯಿತಿಗೆಂದು ಮಾದೇಗೌಡರು ಆಗಮಿಸಿ ನ್ಯಾಯಕಟ್ಟೆಯಲ್ಲಿ ಸಂಭಾಷಣೆಯಲ್ಲಿ ನಿರತರಾಗಿದ್ದರು. ಊರಿನ  ಜನರೆಲ್ಲರೂ ಅಲ್ಲಿ ನೆರೆದಿದ್ದರಿಂದ ಅಲ್ಲಿಗೆ ವಾಸುದೇವ ಕುಟುಂಬದವರೂ  ಆಗಮಿಸಿದ್ದರು. ಗೌಡರ ಕಣ್ಣುಗಳೊಮ್ಮೆ  ಗ್ರಾಮಸ್ಥರನ್ನೆಲ್ಲಾ ಸುಳಿದಾಡುವಾಗ ಒಂದು ಅಪರೂಪದ ಚೆಲುವು ಅವರನ್ನು ತಲ್ಲಣಗೊಳಿಸಿತು. ಕೂಡಲೇ ಎಚ್ಚೆತ್ತುಕೊಂಡ ಗೌಡರು ಪಂಚಾಯಿತಿ ಮುಗಿದ ಮೇಲೆ ಆ ಹುಡುಗಿಯಾರೆಂದು ವಿಚಾರಿಸಿದ ಮೇಲೆ ಅದು ವಾಸುದೇವನಾಯಕನ ಸಾಕುಮಗಳೆಂದು ತಿಳಿದುಬರುತ್ತದೆ. ಗೌಡ ಆ ಹುಡುಗಿಯ ಸೌಂದರ್ಯಕ್ಕೆ ಮನಸೋಲುತ್ತಾನೆ. ಗೌಡನಿಗೆ ಆಗಿನ್ನೂ ಮೂವತ್ತೆಂಟರ ಹರೆಯ. ತನ್ನ 15ನೇ ವಯಸ್ಸಿನಲ್ಲಿಯೇ ಮದುವೆಯಾಗಿದ್ದರೂ ಸಂತಾನದ ಚಿಂತೆ ಕಾಡುತ್ತಿತ್ತು. ಆದೊಂದು ಮಗುವಿನ  ಭವಿಷ್ಯವರಿತು ದೂರಮಾಡಿಕೊಂಡಿದ್ದ ಗೌಡ  ಇನ್ನೊಂದು  ಮದುವೆಯ ಯೋಚನೆಯಲ್ಲಿ ಮುಳುಗಿದ. ಈ ವಿಷಯ ತನ್ನ ಹೆಂಡತಿಗೂ ತಿಳಿಯಿತು. ಅವಳು ಸಹ ತುಂಬಾ  ಯೋಚಿಸಿ, ನನಗಂತೂ ಮತ್ತೆ ಮಕ್ಕಳಾಗಲಿಲ್ಲ, ಗೌಡರ ವಂಶ ಉದ್ಧಾರಕನನ್ನೂ ಹಡೆದುಕೊಡಲಾಗಲಿಲ್ಲ, ಅವಳಿಂದಾರೂ ಮನೆತನ  ಬೆಳೆಯಲಿ ಎಂದು ಆಶಿಸಿ, ಗಂಡನಿಗೆ ತನ್ನ ಇಚ್ಚೆಯನ್ನು ತಿಳಿಸಿದಾಗ ಗೌಡನಿಗೆ ಆನಂದಕ್ಕೆ ಪಾರವೇಯಿರಲಿಲ್ಲ ! ತಕ್ಷಣ ವಾಸುದೇವನಾಯಕನನ್ನು ಕರೆಯಿಸಿ ಕೇಳಿದಾಗ, ಸುತ್ತ ಹದಿನೆಂಟು ಹಳ್ಳಿಯ ಯಜಮಾನ ಗೌಡ, ನೂರಾರು ಎಕರೆ ಜಮಿನ್ದಾರ, ಇಲ್ಲವೆನ್ನುವುದುಂಟೆ, ಮಗಳು ಸುಖವಾಗಿರೋದು ಯಾರಿಗೆ ತಾನೇ ಇಷ್ಟವಿರಲ್ಲ ? ಆದರೂ ವಾಸುದೇವನಾಯಕ ನನ್ನ ಮಗಳನ್ನು ಒಮ್ಮೆ ಕೇಳಬೇಕು ಎಂದಾಗ ಗೌಡ ಆಗಲಿ ಅವಳನ್ನು ಕÀರೆಸಿ ಎಂದಾಗ ವಾಸುದೇವ ತನ್ನ ಹೆಂಡತಿ ಮತ್ತು ಮಗಳಿಗೆ ತಿಳಿಸಿ ಗೌಡರನ್ನೇ ತಮ್ಮ ಮನೆಗೆ ಆಹ್ವಾನಿಸಿದನು. ಮರುದಿನ ಬೆಳಿಗ್ಗೆ ಗೌಡರು ತಮ್ಮ ಪರಿವಾರದೊಂದಿಗೆ ಪಕ್ಕದ ಹಳ್ಳಿಯಾದ ಮುತ್ತೂರಿಗೆ ದಾವಿಸಿದನು. ಅಷ್ಟೊತ್ತಿಗೆ ತಮ್ಮ ಮಗಳು ಇಷ್ಟ ತಿಳಿಯಲೆಂದು ವಾಸುದೇವನಾಯಕ ತಮ್ಮ ಮಗಳಿಗೆ ಕೇಳಿದಾಗ  ನಿಮ್ಮ ಇಚ್ಛೆಯೇ ನನ್ನಿಚ್ಛೆ ಎಂದಳು.
ಅಷ್ಟೊತ್ತಿಗಾಗಲೇ ಗೌಡರ ಪರಿವಾರ ವಾಸುದೇವರ ಮನೆ ತಲುಪಿ ವಿಶ್ರಮಿಸಿತು. ಮೂಲೆಯೊಂದರಲ್ಲಿ ನಿಂತಿದ್ದ ವಸುಂಧರೆ ಬಳಿಗೆ ತೆರಳಿದ ಗೌಡರು ಅವಳಲ್ಲಿ ಮದುವೆಯ ಪ್ರಸ್ತಾಪವನ್ನು ಮಾಡಿದರು. ಈ ವಿವಾಹ ವಿಷಯದಲ್ಲಿ ನನ್ನ ನಿರ್ಧಾರವೇನೂ ಇಲ್ಲವೆಂದೂ, ತನ್ನ ತಂದೆ-ತಾಯಿಯರ ಇಚ್ಛೆಯಂತೆಯೇ ನಡೆದುಕೊಳ್ಳುವುದಾಗಿಯೂ ವಸುಂಧರೆ ಗೌಡರಿಗೆ ಉತ್ತರಿಸಿದಳು. ಅಲ್ಲದೇ ಅವರು ಒಬ್ಬ ಗೌಡರು ಹಾಗೂ ತಾನು ಒಬ್ಬ ಬೇಡರಳು ಎನ್ನುವುದನ್ನು ಜ್ಞಾಪಿಸಿ, ಅವರಿಬ್ಬರ  ನಡುವಿನ  ಅಗಾಧ ವ್ಯತ್ಯಾಸವನ್ನು ತಿಳಿಸಿದಳು. ಅವಳು ಹೀಗೆ ಹೇಳುತ್ತಾ ಗೌಡರ ಕಡೆಗೆ ತಿರುಗಿದಾಗ, ಅವಳ ಕುತ್ತಿಗೆಯಲ್ಲಿದ್ದ ತಾಯತವನ್ನು ಕಂಡು ಗೌಡರು ಆಶ್ಚರ್ಯಚಕಿತರಾದರು ! 18 ವರ್ಷಗಳ ಹಿಂದೆ ತಮ್ಮ ಮಗಳಿಗೆ ಕಟ್ಟಿದ್ದ ತಾಯತವೇ ಅದಾಗಿತ್ತು.
ಆಗ ಗೌಡರಿಗೆ ವಸುಂಧರೆ ತಮ್ಮ ಮಗಳೇ ಎನ್ನುವುದು ಮನದಟ್ಟಾಯಿತು. ನಂತರ ಈ ವಿಷಯವನ್ನು ಶ್ರೀಮತಿಗೂ ವಿವರಿಸಿದರು. ಈ ಸುದ್ದಿಯನ್ನು ತಿಳಿದ ಗೌರಮ್ಮನ ಮಾತೃ ಪ್ರೇಮವು ಉಕ್ಕಿಹರಿಯತೊಡಗಿ, ವಸುಂಧರೆ ಹಾಗೂ ಬೇಡರ ದಂಪತಿಗಳಿಗೆ ಆಕೆÉ ತಮ್ಮ ಮಗಳು ಎಂಬುದರ ನಿಜ ವೃತ್ತಾಂತವನ್ನು ವಿವರಿಸಿ ಹೇಳಿದರು. ಜ್ಯೋತಿಷಿಗಳು ಹೇಳಿದ್ದ ಭವಿಷ್ಯವಾಣಿಯನ್ನು ಸುಳ್ಳು ಮಾಡುವುದಕ್ಕಾಗಿ ತಮ್ಮ ಮಗಳನ್ನು ಕಾಡಿಗೆ ಬಿಡಲಾಯಿತೆಂದು ತಿಳಿಸಿದರು. ಅಲ್ಲದೆ, ಇಂದಿನಿಂದ ತಮ್ಮ ಮನೆಯಲ್ಲಿಯೇ ವಾಸಿಸಬೇಕೆಂದು ವಸುಂಧರೆಯನ್ನು ಒತ್ತಾಯಿಸಿದರು. ಆದರೆ ಅವರ ಒತ್ತಾಯವನ್ನು  ವಿನಯಪೂರ್ವಕವಾಗಿ  ನಿರಾಕರಿಸಿದ ವಸುಂಧರೆ ಬೇಡರ  ದಂಪತಿಗಳೊಂದಿಗೆ ಇರಲು ಇಚ್ಛಿಸಿದಳು. 
ಗೌಡ ಹತಾಶನಾಗಿ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವೆಂದರಿತು ಹೋದದಾರಿಗೆ ಸುಂಕವಿಲ್ಲವೆಂಬಂತೆ ತನ್ನ ಊರಿಗೆ ಹಿಂತಿರುಗಿದನು.
ಅದೇ ವೇಳಗೆ ಪಕ್ಕದ ತಾಲ್ಲೂಕಿನ ಮಾವಿನಹಳ್ಳಿಯ ಶ್ರೀಮಂತ ಮನೆತನದ ಬುಡೇನ್‍ಸಾಬ್‍ನ ಮಗನಾದ ಹುಸೇನಿಯು ವಸುಂಧರೆಯ ಮನಮೋಹಕ ಚೆಲುವಿನ ವರ್ಣನೆಯನ್ನು ಕೇಳಿದ್ದರು. ವಿದ್ಯಾವಂತರಾಗಿದ್ದ ಹÅಸೇನಿ ಜಾತಿ-ಮತ, ಧರ್ಮದಾಚೆಗೆ ಯೋಚಿಸುವ  ಒಬ್ಬ ಸಚ್ಚಾರಿತ್ಯ್ರ ಯುವಕನಾಗಿದ್ದ, ಹೇಗಾದರೂ ಮಾಡಿ ಆ ಚೆಲುವೆಯನ್ನು ಬೇಟಿಮಾಡಬೇಕೆಂಬ ಛಲದಿಂದ ಅವರು ವರ್ತಕನ ಮಾರುವೇಷದಲ್ಲಿ ಮುತ್ತೂರಿಗೆ ತೆರಳಿದರು. ವಸುಂಧರೆ ತನ್ನ ಸಂಗಡಿಗರೊಂದಿಗೆ, ವರ್ತಕನ ವೇಷದಲ್ಲಿದ್ದ ಹÅಸೇನಿ ತಂದಿದ್ದ ಹಲವಾರು ಸಾಮಾಗ್ರಿಗಳನ್ನು ಖರೀದಿಸಿದಳು. ಅವರಿಬ್ಬರಿಗೂ ತಮ್ಮ ಪ್ರಪ್ರಥಮ ಭೇಟಿಯಲ್ಲೇ ಮೋಹದಲ್ಲಿ ಸಿಲುಕಿದರು.
ವಸುಂಧರೆಯ ಒಪ್ಪಿಗೆಯನ್ನು ಪಡೆದ ಹÅಸೇನಿ, ಅವಳ ತಂದೆಯನ್ನು ಬೇಟಿ ಮಾಡಿ, ಆಕೆಯನ್ನು ವಿವಾಹವಾಗುವ ತಮ್ಮ ಇಂಗಿತವನ್ನು  ವ್ಯಕ್ತ ಪಡಿಸಿದರು. ತಾನೊಬ್ಬ  ಬೇಡನಾಗಿರುವುದರಿಂದ ತನ್ನ ಮಗಳ ವಿವಾಹವನ್ನು ಬೇಡನೊಂದಿಗೇ ಮಾಡುವುದಾಗಿ ವಾಸುದೇವನಾಯಕನು ಹೇಳಿದ. ಅದಕ್ಕೆ ಹÅಸೇನಿ ತಾವೂ ಸಹ ಬೇಡನೇ ಹೆÇಟ್ಟೆಪಾಡಿಗಾಗಿ ವರ್ತಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹೆಸರು ಬಸವನಾಯಕನೆಂದು ಪರಿಚಯ ಮಾಡಿಕೊಂಡ. ಅಲ್ಲದೇ ಮೂರನೆಯ ದಿನದಿಂದ ಅವಳ ತಂದೆಯೊಂದಿಗೆ ಕೆಲಸಕ್ಕೆ ಹೋಗಲಾರಂಬಿಸಿದನು. ಇದರಿಂದ  ಸಂತುಷ್ಟನಾದ ನಾಯಕನು ವಸುಂಧರಾ ಹಾಗೂ ಬಸವನಾಯಕನ ವಿವಾಹವನ್ನು ಮಾಡಿದ. ವಿವಾಹದ ನಂತರ  ಅವರಿಬ್ಬರೂ ಆನಂದಿಂದ ಕಾಲ  ಕಳೆಯತೊಡಗಿದರು. ಆದರೆ ಪ್ರೀತಿಗೆ ತನ್ನದೇ ಆದ ಕೆಲವು ಪರೀಕ್ಷೆಗಳಿರುತ್ತವೆ. ದುಃಖ, ಯಾತನೆ, ಅಡ್ಡಿ - ಆತಂಕಗಳೆಂಬ ಅಗ್ನಿ ಪರೀಕ್ಷೆಗಳನ್ನು ದಾಟಿದಾಗಲೇ ಪ್ರೀತಿಯ ಪುಟವಿಟ್ಟ ಚಿನ್ನದಂತೆ ಹೆÇಳೆಯತೊಡಗುತ್ತದೆ.
ಹÅಸೇನಿ ಬೇಡನ ಮಗಳನ್ನು ವಿವಾಹವಾಗಿ ಅವರ ವೃತ್ತಿಯನ್ನೇ ಕೈಗೊಂಡಿರುವ ವಿಷಯವು ಕೊನೆಗೂ ಮಾವಿನಹಳ್ಳಿಯ ಸಾಹೇಬರ ಪರಿವಾರಕ್ಕೆ ತಿಳಿಯಿತು. ಆಗ ಹÅಸೇನಿಯನ್ನು ತಮ್ಮ ಮನೆಗೆ ಕರೆಸಿಕೊಳ್ಳುವುದು ಹೇಗೆಂಬ ಚಿಂತೆ ಬುಡೇನ್  ಸಾಹೇಬರ ಪರಿವಾರವನ್ನು ಕಾಡಲಾರಂಭಿಸಿತು. ಕೊನೆಗೆ ಅವರು ಒಂದು ಉಪಾಯವನ್ನು ಹÇಡಿದರು. ಹÅಸೇನಿಯ ಇಬ್ಬರು ಸಹೋದರರನ್ನು ಬಳೆಗಾರರ ವೇಷವನ್ನು ಧರಿಸಿ ಮುತ್ತೂರಿಗೆ ತೆರಳಿದರು. ಅವರು ಮಾರುವೇಶದಲ್ಲಿ ವಾಸುದೇವನ ಮನೆಗೆ ಹೋದದ್ದರಿಂದ ಹÅಸೇನಿಗೆ ಅರಿವಾಗಲಿಲ್ಲ, ಅಲ್ಲದೇ ತಾಯಿ, ಮಗಳು ಇಬ್ಬರೂ ಬಳೆ ಹಾಕಿಸಿಕೊಳ್ಳಲು ಕರೆದರು. ಅಷ್ಟೊತ್ತಿಗೆ ಮುಸ್ಸಂಜೆ ಸಮೀಪಿಸುತ್ತಿತ್ತು. ಅವರಿಬ್ಬರಿಗೆ ಸಂತೋಷದಿಂದಲೇ ಬಳೆ ತೊಡಿಸಿದ ಬಳೆಗಾರರು ಸಂಜೆಯಾದ್ದರಿಂದ ಯೋಚಿಸತೊಡಗಿದರು. ಅವರನ್ನು ಕುರಿತು ಗೌರಮ್ಮ ನಿಮ್ಮದು ಯಾವ ಊರಪ್ಪ ? ಎಂದು ಕೇಳಿದಳು. ಅವರು ನಮ್ಮದು ಬಹುದೂರ ಮುಂದಿನ ಊರು ಎಷ್ಟು ದೂರವಾಗುತ್ತೆ ಎಂದು ಕೇಳಿದರು. ಅಷ್ಟೊತ್ತಿಗೆ ಮನೆಗೆ ಆಗಮಿಸಿದ ವಾಸುದೇವನಾಯಕ ಕತ್ತಲಾಗುತ್ತಾ ಇದೆ ಸಾಹೇಬ್ರೇ ಇವತ್ತು ಇಲ್ಲೆ ವಸ್ತಿ ಮಾಡಿ, ಬೆಳಿಗ್ಗೆ ಹೋಗಿ ಎಂದರು.
ರಾತ್ರಿ ಎಲ್ಲರೂ ಸಂತೋಷದಿಂದ ಊಟ ಮುಗಿಸಿ ಮಲಗಿದರು. ಎಲ್ಲರಿಗೂ ನಿದ್ರೆ ಹೋದದ್ದನ್ನು ಖಾತರಿಪಡಿಸಿಕೊಂಂಡ ಬಳೆಗಾರರು ಅವರು ತಂದಿದ್ದ ಮೂರ್ಛೆ ಸ್ಪ್ರೆಯನ್ನು ಅವರ ಚೀಲದಿಂದ ತೆಗೆದು ಎಲ್ಲರ ಮೂಗಿಗೂ ಸಿಂಪಡಿಸಿದರು. ಮಲಗಿದವರೆಲ್ಲ ಕ್ಷಣಮಾತ್ರದಲ್ಲಿ ಪ್ರಜ್ಞಾಹೀನರಾದರು. ನಂತರ ಹÅಸೇನಿಯನ್ನು ಎತ್ತಿಕೊಂಡು ಹೋಗಲು ತೀರ್ಮಾನಿಸಿ, ಇಬ್ಬರು ಎತ್ತಿಕೊಂಡು ಹೆÇರಗೆ ಬರುವಾಗ ಒಬ್ಬ ಆಯಾ ತಪ್ಪಿ ಗೋಡೆಗೆ ತಲೆಹೆÇಡೆದು ರಕ್ತಸ್ರಾವವಾಗತೊಡಗಿತು. ಬಟ್ಟೆಯಿಂದ  ಗಾಯವಾದ ಸ್ಥಳವನ್ನು ಕಟ್ಟಿಕೊಂಡು ಯಾರಿಗೂ ಕಾಣದಂತೆ ಹÅಸೇನಿಯನ್ನು ತಮ್ಮೂರಿಗೆ ಹೆÇತ್ತೊಯ್ದರು.
ಮರುದಿನ ವಸುಂಧರ ಹಾಗೂ ಬೇಡ ದಂಪತಿಗಳು ಎಚ್ಚೆತ್ತಾಗ, ಬಸವನಾಯಕ ಹಾಗೂ ಆ ಬಳೆಗಾರರಿಬ್ಬರೂ ನಾಪತ್ತೆಯಾಗಿರುವುದು ತಿಳಿಯಿತು. ತಳಮಳಗೊಂಡ ವಸುಂಧರ ರಕ್ತದ ಕಲೆಗಳನ್ನು ನೋಡಿ ದಿಗ್ಮೂಢಳಾದಳು. ಆದರೂ ಎದೆಗುಂದದೇ ರಕ್ತದ ಕಲೆಗಳ ಅನುಸರಿಸಿಕೊಂಡು ಅದರ ಜಾಡನ್ನೇ ಹಿಡಿದು ಓಡತೊಡಗಿದಳು. ಮುತ್ತೂರು ಗಡಿದಾಟಿ ಸುಮಾರು ದೂರ ದಾರಿ ಸವೆಸಿದ ಅವಳಿಗೆ ಎಲ್ಲಿಲ್ಲದ ದಾಹವಾಗತೊಡಗಿತು. ಸೂರ್ಯ ನಡುನೆತ್ತಿಗೆ ಬಂದ ಬಿಸಿಲಿನ ಧಗೆ ವಿಪರೀತವಾಗಿ ಏರತೊಡಗಿತು. ಅದರಲ್ಲಿಯೇ ವಸುಂಧರೆ ಏದುಸಿರು ಬಿಡುತ್ತಾ ಸಾಗಿದಳು. ಅದೇ ವೇಳೆಗೆ ಜೋರಾಗಿ ಬೀಸುತ್ತಾ ಬಂದ ಸುಂಟರಗಾಳಿ, ಅವಳನ್ನು ಧೂಳಿನ ಕಣಗಳಿಂದ ಮುಚ್ಚಿಹಾಕಿತು. ನಂತರ ಮತ್ತು ಸಾವರಿಸಿಕೊಂಡು ಮುಂದುವರೆದ ವಸುಂಧರಾಗೆ ರಕ್ತದ ಕಲೆಗಳು ಧೂಳಿನ ಕಣಗಳಿಂದ ಕಾಣದಾದವು. ಆದರೂ ಅಳುಕದ ಅವಳು, ತನ್ನ  ಆರನೇ ಇಂದ್ರಿಯ ತೋರಿಸಿದ ಮಾರ್ಗದಲ್ಲಿ ಮುಂದುವರಿದಳು. ವಿಪರೀತ  ಬಾಯಾರಿಕೆಯಿಂದ ಅವಳು ಬಳಲಿದ್ದಳು. ಮುಂದೆ ಹೋಗಲಾರದೇ ಅವಳು ಕುಸಿದು ಬಿದ್ದಳು.
ಅದೇ ದಾರಿಯಲ್ಲಿ ಬೀರ ಎಂಬ ಕುರುಬನೊಬ್ಬ ತನ್ನ ಕುರಿಗಳನ್ನು ಅದೇ ದಾರಿಯಲ್ಲಿ ಹೆÉÇಡೆದುಕೊಂಡು ಬರುತ್ತಿದ್ದಾಗ ಅಕಸ್ಮತ್ತಾಗಿ ಆ ಹೆಂಗಸನ್ನು ನೋಡಿ, ತಕ್ಷಣ ಧಾವಿಸಿ ತನ್ನ  ಕೈಯಲ್ಲಿದ್ದ ನೀರನ್ನು ತೆಗೆದುಕೊಂಡು ಅವಳ ಮುಖಕ್ಕೆ ಸಿಂಪಡಿಸಿ, ಎಚ್ಚರವಾದ ಮೇಲೆ ಅವಳಿಗೆ ಕುಡಿಯಲು ಆ ನೀರನ್ನು ನೀಡಿದ ನಂತರ ಯಾರು, ಏಕೆ ಹೀಗೆ ಒಬ್ಬಂಟಿಯಾಗಿ ಅಲೆಯುತ್ತಿರುವುದಾಗಿ ವಿಚಾರಿಸಿದಾಗ, ಅವಳು ನಡೆದ ವೃತ್ತಾಂತವನ್ನೆಲ್ಲಾ ಹೇಳಿದಳು.
ಬೀರ ಅವಳನ್ನು ಸಮೀಪದಲ್ಲಿಯೇ ಇದ್ದ ತನ್ನ ಗುಡಿಸಲು ಮನೆಗೆ ಕರೆದೊಯ್ದು ತನ್ನ ತಾಯಿಗೆ ನೋಡಿಕೊಳ್ಳಲು ತಿಳಿಸಿ, ಕುರಿಗಳನ್ನು ಅಲ್ಲಿಯೆ ಬಿಟ್ಟು ಬಸವನಾಯಕರನ್ನು ಅರಸುತ್ತಾ ಹೆÇರಟ. ಮಾರ್ಗಮಧ್ಯದಲ್ಲಿ ಮುತ್ತೂರಿನತ್ತ ಓಡುತ್ತಾ ಬರುತ್ತಿದ್ದ  ಒಬ್ಬ ಮನುಷ್ಯನನ್ನು ಭೇಟಿಯಾದ. ರಾತ್ರಿ ಎಚ್ಚರತಪ್ಪಿ ಮಲಗಿದ್ದ ಹÅಸೇನಿ ಪ್ರಜ್ಞೆ ಬಂದೊಡನೆ ತಮ್ಮ ಸಹೋದರರೊಡನೆ  ಜಗಳಮಾಡಿಕೊಂಡು, ಅವರ ಕೈಯಿಂದ ತಪ್ಪಿಸಿಕೊಂಡು ಓಡಿಬರುತ್ತಿದ್ದರು. ಅವನು ಓಡುತ್ತಾ ಬರುತ್ತಿದ್ದಾಗ ಜೋರಾಗಿ ವಸುಂಧರ ಹೆಸರು ಉಚ್ಛರಿಸುತ್ತಿದ್ದನು. ವಸುಂಧರೆ ಹೆಸರನ್ನು ಉಚ್ಛರಿಸುತ್ತಿದ್ದ ಆ ವ್ಯಕ್ತಿಯು, ಬಸವನಾಯಕನೇ ಇರಬೇಕೆಂದು ಊಹಿಸಿದ ಆ ಕುರುಬ, ಅವರನ್ನು ಸಂಧಿಸಿ, ತನ್ನ ಗುಡಿಸಿಲಿನಲ್ಲಿ ವಸುಂಧರೆ ಇರುವುದಾಗಿ ತಿಳಿಸಿದ. ಆನಂತರ ಆತ ಬಸವನಾಯಕನ್ನೂ ತನ್ನ ಗುಡಿಸಿಲಿಗೆ ಕರೆದೊಯ್ದ. ಗಂಡನನ್ನು ಕಾಣದೇ ನಿರಾಶಳಾಗಿದ್ದ ವಸುಂಧರೆ ಸಾವಿನ ಹೆÇಸ್ತಿಲಿನಲ್ಲಿದ್ದಳು. ತನ್ನ ಹೆಸರನ್ನು ಉಚ್ಛರಿಸುತ್ತಿದ್ದ ಬಸವನಾಯಕನನ್ನು ವಸುಂಧರೆ ಒಮ್ಮೆ ಕಣ್ತೆರೆದು ನೋಡಿದಳು. ಆಗ ಹÀÅಸೇನಿ ಅವಳನ್ನು ತನ್ನ ತೋಳುಗಳಲ್ಲಿ ತೆಗೆದುಕೊಂಡು ಚುಂಬಿಸಲಾರಂಭಿಸಿದ. ಗಂಡನನ್ನು ನೋಡಲೇಬೇಕೆಂಬುದು ಅವಳ ಕೊನೆಯ ಆಸೆಯಾಗಿತ್ತು. ತನ್ನ ಆಸೆಯು ಈಡೇರಿದ ವಸುಂಧರೆ ಪತಿಯ ತೋಳುಗಳಲ್ಲೇ ಕೊನೆಯುಸಿರೆಳೆದಳು. ತನ್ನ ಕಣ್ಣ ಮುಂದೆಯೇ ತನ್ನ ಪತ್ನಿಯ ಆತ್ಮವು ಅನಂತದಲ್ಲಿ ಲೀನವಾಗುತ್ತಿರುವುದನ್ನು ಅಸಹಾಯಕನಾಗಿ ವೀಕ್ಷಿಸುತ್ತಿದ್ದ ಹÅಸೇನಿಯ ದುಃಖಕ್ಕೆ ಕೊನೆಯೇ ಇರಲಿಲ್ಲ.
ಇದನ್ನು ಕಂಡು ಆ ಕುರುಬನೂ ಹಾಗೂ ಅವನ ತಾಯಿಯೂ ಸಹ ಅತೀವ ದುಃಖತಪ್ತರಾದರು. ಹೆಂಡತಿಯನ್ನೇ ತದೇಕಚಿತ್ತದಿಂದ ನೋಡುತ್ತಾ ವಸುಂಧರಾ ಎಂದು ಒಮ್ಮೆ ಜೋರಾಗಿ ಚೀರಿ – ಅವಳ ಮೇಲೆ ಹಾಗೆಯೇ ಹÀÅಸೇನಿ ಒಂದಾದನು.  ಈ ವಿಷಯ ಸುತ್ತಮುತ್ತಲಿನ ಗ್ರಾಮಗಳಿಗೆ ಬೆಳಕಿನ ವೇಗಕ್ಕಿಂತಲೂ ಮುಗಿಲಾಗಿ ಹಬ್ಬಿ, ಅಲ್ಲಿಗೆ ಮಾವಿನಹಳ್ಳಿಯ ಮುಸ್ಲಿಂ ಬಂಧುಗಳು, ವಿದ್ಯಾನಗರದ ಗೌಡ ದಂಪತಿಗಳು, ಮುತ್ತೂರಿನ ಬೇಡ ದಂಪತಿಗಳು ಹಾಗೂ ನೂರಾರು  ಜನಸ್ತೋಮ ಸೇರಿತು. ಎಲ್ಲರ ಸಮ್ಮುಖದಲ್ಲಿಯೇ ಅವರಿಬ್ಬರ ಧರ್ಮ ಬೇರೆಯಾದರೂ ಒಂದೇ ಗೋರಿಯಲ್ಲಿಯೇ ಮತ್ತೆ ಒಂದಾದರು. ಆದರೆ ಅವರೆಲ್ಲರ ಶೋಕ ಮಾತ್ರ ಕತ್ತಲಾವರಿಸಿದಂತೆ ಮಂಜಾಯಿತು.





ಕೊಟ್ರೇಶ್. ಎಸ್. ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ,
 ಹಾಸನ-573201
9483470794


ಕಲ್ಪವೃಕ್ಷ



ಅವ್ವ-ಈಟು ಹೊಟ್ತುಂಬಕಿಲ್ಲ ಇನ್ನರ್ಧ ಕೊಡವ್ವಾ, “ಇರೋ ಮೂರಲ್ಲಿ ಆರ್ಜನ ಉಣ್ಬೇಕು ಮಗಾ, ನನ್ನರ್ಧ ರೊಟ್ಟಿ ನಿನಗೆ ಕೊಟ್ಟು ಹೋಗವಂದ್ರೆ ಒತ್ತಾರೆಯಿಂದ ಹಿಡ್ಡು ಆ ಪಣ್ಯಾತ್ಮ ಅರವ್ವನ ಮಡಿಲ್ಗೆ ಹೋಗುಮಟಾ ಕೆಲ್ಸ ಮಾಡ್ಬೇಕು. ಆಗ್ಲಿ ನೀನಾ ಉಣ್ಣು ಮಗಾ ಹೊಲ್ದಾಗ ಯಾವದಾದ್ರು ಕಾಯೋ, ಸಪ್ಪೋ ತಿಂತೀನಿ, ದೇವ್ರು ಪರಪಂಚ್ದಾಗ ಯಾರ್ಗೂ ಕೊಡಬಾರ್ದ ಕಷ್ಟ ನಮ್ಗೆ ಕೊಡಬೇಕಂತ.. ಅವ್ನ ಕಣ್ಣಾಕಮಣ್ಣ ಹೊಯ್ಯಾ...!!” ಎಂದು ಚೆಲುವಕ್ಕ ಪಾರಂಪರಿಕವಾಗಿ ಬಂದಂತ ಮರದ ಕೊಣೆಗೆಯಲ್ಲಿ ಮೂರು ರೊಟ್ಟಿ ಸುಟ್ಟು ನಾಕು ಮಕ್ಕಳಿಗೆ ಪಾಲು ಮಾಡಿ ತನ್ನ ದೇವ್ರುಗೆ ಅರ್ಧ ತೆಗಿದಿಟ್ಟು, ಮಕ ತೊಕ್ಕಂಡು, ನಿನ್ನೆ ದಿನ ತಂದ ಅಕ್ಕರ್ಕಿ ಸೊಪ್ಪು ತಿಂದು ನೀರು ಕುಡ್ದು, ಹಿಡಿ ಒಡಂಕಂದ ಕುರ್ಜಿಗಿ ತಗೊಂಡು ಗೌಡ್ರು ಹೊಲ್ಕ ಕಳೆ ತಗ್ಯಾಕ ಹೋದ್ಲು.
ಇತ್ತ ಚೆನ್ನನ ಹಿರಿಮಗ ‘ಪೊಕ್ರ’ ಹಳ್ಳದ ದಂಡೀಲಿಂದ ಒಂದು ತೆಂಗಿನ ಸಸಿ ಹೊತ್ಕೊಂಡು ಬಂದು ಅವರ ಗುಡಸಲ್ಮುಂದೆ ಕುಣಿತೆಗೆದು ನೆಟ್ಟ. ಅದು ಯಾವುದೋ ಮನೆಯ ಅಂತ್ರಕಾಯಿ ಇರ್ಬೇಕು ಬಹುಶಃ ಮ್ಯಾಗಿನೂರ್ನಾರು  ಗಂಗೇಲಿ ತೇಲಿಬಿಟ್ಟರ್ಬೇಕು, ಅದು ಬಂದು ದಂಡೇ  ಮರಳಲ್ಲಿ ಹೂತು ಜಗತ್ತ ನೋಡಿರ್ಬೇಕು. ಅಣ್ಣ ನೆಟ್ಟ ಸಸಿಗೆ ‘ಪರ್ಲ’ ಒಡ್ಕು ಚಿಪ್ಪಿನಿಂದ ತಿಪ್ಪಿಗುಂಡ್ಯಾನ ನೀರ ತಂದು ಹಣಿಸುತ್ತಾ ಇದ್ದ. ಇನ್ನೊಂದೆಡೆ ಮಾಲಿ ಮರಿಯನಿಗೆ ಚಪಾತಿ, ಕೋಳಿ ಮಾಂಸದ ತುಂಡುಗಳನ್ನು ಉಣಬಡಿಸಿದಳು ! ಮರಿಯ ಚಪಾತಿ ಮುರಿದು, ತುಂಡು ಸಿಗಿದು ತಿಂದು, ಕೊನೆಗೆ ಎಲುಬುಗಳನ್ನು ಕಟಾರನೇ ಕಡಿದು ಚೀಪುವಂತೆ ನಟಿಸುತ್ತಾ ಊಟದ ಆಟದಲ್ಲಿ ಮಗ್ನರಾಗಿದ್ದರು.
ಲೇಚೆನ್ನಾ., ‘ಏನೂದೇವ್ರು...’, ‘ಆಮ್ಯಾಕ ಸೀಳ್ಯಾಂತೆ ಕೊಡ್ಲಿ ಅಲ್ಲೇ ಹಾಕಿ ಬಾ, ಸಕ್ರಿ ಚೀಲ ನಿಟ್ಟು ಮಾಡದೈತಿ ...’ ಚೆನ್ನ ಮಾದಪ್ಪ ಗೌಡ್ರ ಮನ್ಯಾಗ 20 ವರ್ಷದಿಂದ ದುಡುದ್ರು ಅವರಪ್ಪ ‘ತಿರುಕ’ ಮಾಡಿದ ಸಾಲ ಇನ್ನೂ ತೀರಿಸಿಲ್ಲ ! ಇದು ಗೌಡ್ರ ಲೆಕ್ಕ. ಗೌಡ್ರ ಹೆಂಡ್ತಿ ಮಾಲತಿ “ಚೆನ್ನಾ. ಕೆಲ್ಸ ಮುಗಿದ್ಮೇಲೆ ಉಣ್ಯಾಂತ, ಈ ಬಟ್ಟೆಗಂಟ ಹಳ್ಕ ಒಯ್ಯಿ, ಅಲ್ಲಿ ಪಾರವ್ವ ಸೆಳ್ಯಾಕ ಹೋಗ್ಯಾಳ” ಎಂದು ಅಣತಿ ಮಾಡಿದ್ಲು.
ಪರ್ಲನಿಗೆ ಅರ್ಧ ರೊಟ್ಟಿ ಸಾಕಾಗಿರಲಿಲ್ಲ. ಒಮ್ಮೆಲೇ ನೆನೆಸ್ಕೊಂಡು ಹಳ್ಳ ಬೀಳಾಮಟ ಒಂದೇ ಸವ್ನೆ ಜಿಗಿದ. ನೀರಲ್ಲಿ ದಬಾರನೆ ಬಿದ್ದ, ಹೊಟ್ಟೆ ಒಳಗೊಳಗೆ ಸುಡುತ್ತಿದ್ದರೂ ಮೇಲೆ ಗಂಗೆ ತಣ್ಣಗೆ ಮಾಡಿದ್ದಳು. ಈಸಿಕೊಂತ ಆಚೆ ದಡಕ್ಕೆ ಬಂದು... ದಿಡೀರನೆ ಸ್ವರ್ಗವೇ ಸಿಕ್ಕಷ್ಟು ಸಂತಸಪಟ್ಟ. ಕಾರಣ ಎದುರಿಗಿದ್ದ ಏಡಿಕನ್ನವ ನೋಡಿ! ತುಂತುರು ಮಣ್ಣನ್ನು ತೆಗೆದು ಕೈ ನುಗ್ಗಿಸಿದ. ತುದಿ ಬೆರಳಿಗೆ ತಗುಲುತಿದೆ, ಆದ್ರೆ ಕೈ ಇನ್ನು ಸಣ್ಣವು! ಹೊರತೆಗೆದು ದೂರದಲ್ಲಿದ್ದ ಚೂಪಾದ ಕಲ್ಲಿನ ಸಹಾಯದಿಂದ ಸುತ್ತಲೂ ಕಟೆದು ಅಗಲ ಮಾಡಿ, ಏಡಿಯ ಹೊರತೆಗೆದು ನಿಂಗೆ ಏಟೈತೆ ಸೊಕ್ಕು, ನನ್ನ ಕೈಗೆ ಸಿಗಾಕಿಲ್ಲ...? ಎಂದು ಕಾಲುಗಳನ್ನು ಕಿತ್ತೆಸೆದು, ದೊಡ್ಡ ಕಾಲುಗಳನ್ನು ಚಪ್ಪರಿಸಿದ, ಹೀಗೆ ನಾಲ್ಕೈದು ಬೇಟೆಯಾಡಿ ಹಸಿವ ನೀಗಿಸಿಕೊಂಡ.
ಇತ್ತ ಹೊಲ್ದಾಗ ಮಟ ಮಟ ಮಧ್ಯಾಹ್ನ ಧರೆಯೊಡೆÀಯನ ಸುಡಾ ಬಿಸಿಲು ಕೆಲಸಿಗರ ಬೆವರಿಳಿಸಿತ್ತು. ಆದ್ರೆ ಚಲುವಕ್ಕ ಮಾತ್ರ ಒಂದನಿ ಬೆವಯುತಿದ್ದಿಲ್ಲ ! ತಂಬಾಕ ಕಳೆ ಬೇರೆ, ಇದರ ಘಾಟ ಹಾಗೂ ಬಿಸಿಲು. ಚಲುವಕ್ಕನ ದೃಷ್ಟಿ ಮಂಜು ಕವಿದು, ತಲೆ ಸುತ್ತಿ ನೆಲಕ್ಕುರುಳಿದಳು, ಅಲ್ಲಿರೋ ಜನ ನೀರು ಚಿಮಿಸಿ, ಎಬ್ಬಿಸಿ ‘ಹುಷಾರಿದ್ದಾಂಗಿಲ್ಲ ಮನಿಗೆ ಹೋಗು ಚಲುವಿ’ ಅಂದ್ರೆ, ಚಲುವಕ್ಕ ‘ಯಾಕೋ ಒಸಿ ತಲೆ ಸುತ್ತಿದಂಗಾಯ್ತು, ನಾನು ಮನಿಗೋದ್ರೆ ನಾಳೆ ತಿನ್ನಾದ್ ಹೆಂಗೆ?’ ಎಂದು ಅದರಲ್ಲೇ ಎದ್ದು ಬಿದ್ದು ಕೆಲಸ ಮಾಡಿದ್ಲು, ಸೆರಗಿನಿಂದ ಮುಖ ಒರೆಸ್ತಾ. ಸೆರಗ ಅಂದ್ರೆ ಆ ಸೀರೆ ಕತೆ ನೆನಪಿಗೆ ಬರುತ್ತೆ, ಚಲುವಕ್ಕಾಗ ಬಿಟ್ಟು ಉಟ್ಕಾಳ್ಳಾಕ ಅದು ಒಂದೇ...  ಒಕ್ಕಲಿಗರ ಮನ್ಯಾಗ ಏಳ್ದಿಸ ಕೆಲ್ಸ ಮಾಡಿದ್ಕ ಗೌಡ ಸ್ಯಾನಿ ಕೊಟ್ಟ ಅವರ ಹಳೇ ಸೀರೆ! ಮಗ ‘ಪರ್ಲ’ ಹಾಗೂ ‘ಮರಿಯ’ ಅವರು ಬಟ್ಟೆ ಧರಿಸ್ಕೊಂಡು ಒಡಾಡಿದ್ದ ಊರಲ್ಲಿ ಯಾರ ಕಂಗಳು ಕಂಡಿರಲಿಲ್ಲ.
ಹೀಗೆ ಆರೇಳು ವರ್ಷಗಳು ಉರುಳಿದವು. ಮನೆಯ ಮುಂದಿನ ಕಲ್ಪವೃಕ್ಷ ದಿನೇ ದಿನೇ ಬೆಳೆದು ಪಸಲಿಗೆ ಬಂತು. ‘ಪೊಕ್ರು’ ಓದಬೇಕೆಂಬ ಬಲು ಆಸೆ, ತಂದೆ ತಾಯಿ ಹೇಗಾದರೂ ಓದಿಸ್ಯಾರು ಪಾಪ! ಉಣ್ಣೋಕೆ ಕೂಳಿಲ್ಲದ ಪರಿಸ್ಥಿತಿ ! ತಾನು ನೆಟ್ಟು ಬೆಳೆಸಿದ ತೆಂಗಿನ ಕಾಯಿಯ ಗುದಿಗಳ ಮೇಲೆ ಹಲವಾರು ಕನಸಿನ ಗೋಪುರ ನಿರ್ಮಿಸಿದ್ದ. ಅವುಗಳ ಮಾರಿ ಶಾಲೆಗೆ ಸೇರ್ಕೋಬೇಕು. ನಾನು ಶಾಲೆ ಓದಿ ನೌಕರಿ ತಗೊಂಡು  ಗೌಡ್ರತರ ಆಗ್ಬೇಕು ಅಂತ, ಆದ್ರೆ ಚಲುವೆಯ ದಾರಿ ಬೇರೆಯಾಗಿತ್ತು. ಅವ ಮಾರಿ ಕಾಳು - ಕಡಿ ತಂದ್ರೆ ಹೊಟ್ತುಂಬ ಉಣ್ಬೋದು. ಚೆನ್ನನ ವಿಚಾರಧಾರೆಯೇ ಬೇರೆ. “ನನ್ನೇಂತಿಗೆ ಒಂದೇ ಸೀರೆಯಿದೆ, ಆ ಕಾಯಿ ಮಾರಿ ಇನ್ನೊಂದು ತರ್ಬೇಕು” ಎಂಬ ಭಾವನೆ ಯಾಕಂದ್ರೆ ಹೊಟ್ಟೆ ಹಸಿವಾದ್ರೆ ಯಾರ್ಗೂ ಗೊತ್ತಾಗಲ್ಲ. ಆದ್ರೆ ಬಟ್ಟೆ ಹರಿದ್ರೆ ? ಅದು ಒತ್ತಟ್ಟಿಗಿರಲಿ ಮಾಲಿ, “ಯಪ್ಪಾ ಕಾಯಿ ಮಾರಿಂದ ನನ್ಗೆ ಒಂದು ಜೋಗ್ಯಾರ ಸರ ಕೊಡ್ಸು, ಎಲ್ರೂ ಸರ ಹಾಕೋತಾರೆ.”  ‘ಪರ್ಲ’ “ಯವ್ವಾ, ಅದ್ರಾಕ ಇನ್ನೂ ದೇವ್ರೂ ಹಾಲಾಕಿ ಹೋಗಿಲ್ವೇನವ್ವಾ ? ಇನ್ನೂ ಯಾವಾಗ ಹಾಕಿ ಹೊಕ್ಕಾನ... !? ನಾವಂದ್ರೆ ಅವನ್ಗೆ ಸಿಟ್ಟೇನೋ?” ಮರಿಯ....... “ಅಪ್ಪ ಅದ್ರಾಗಿನಮೊದ್ಲ ಕಾಯಿ ನನ್ಗೆ ಕೊಡ್ಬೇಕು ಕುಡಿಯಾಕೆ.......” ಅಂತ ಕೇಳಿದ್ರೆ ಚಲುವಿ ಮತ್ತು ಚೆನ್ನ ನೆರ್ಕೆಗೆ ಹಾತು ತಮ್ಮ ಪರಿಸ್ಥಿತಿ ಕಂಡು ದುಃಖಿಸುತ್ತಿದ್ದಾರೆ. ಚೆಲುವೆಯ ಕಣ್ಣೀರಿನ ಹೊಳೆ ಸದಾ ಹರಿಯುತ್ತಾ ಇದ್ದುದ್ದೇ.. ಒಂದು ದಿನ ಗೌಡರ ಪಾದ ಚೆನ್ನನ ಮನೆ ಹಾದಿ ಬೆಳಸಿ ಗುಡಸಲ್ಮುಂದೆ ನಿಲುಗಡೆಯಾಯ್ತು! ‘ಒಮ್ಮೆಲೇ ಏನ್ ದ್ಯಾವ್ರು?’ ಎಂದ ಚೆನ್ನ.
ಹೇಳಿಕಳ್ಸಿದ್ರೆ ನಾನೇ ಬರ್ತಿದ್ದೆ... “ಏನೂ ಇಲ್ಲ ಹಾಂಗ ತೋಟದ ದಿಕ್ಕ ಕಣ್ಹಾಕಿ ಬರಾವ ಅಂತೊಂಟೀನಿ” ಮಾತು ಮುಂದ್ವರಿಸುತ್ತಾ ಈ ತೆಂಗು ನಿನ್ನದೇನ್ಲಾ ಈಸ್ದಿನ ಹೇಳೇ ಇಲ್ಲಾ ? ಬಹು ಪಸಂದಾಗಿ ಬೆಳಸಿ ಕಂಡ್ಲ, ಬಾ ಇಲ್ಲೇ ಹೋಗಿ ಬರುವಾ,” ಚನ್ನ ಗೌಡರ ಕರಿನೆರಳ ತುಳಿತ ಬಾಲವಾದ, ‘ಚೆನ್ನಾ ಬಹಳ ಬಿಸಿಲು, ಒಸಿ ಎಳ್ನೀರು ಕೆಡವ್ತೀಯಾ?’ ನೀವ್ ಕೇಳಿದ್ರೆ...ಇಲ್ಲ ಅನ್ನಾಕ ಆಗ್ತದಾ ...  ಒಸಿ ತಡ್ರಿ ಐದನ್ನಾದ್ರಾಗ  ಕೆಡವಿಬಿಡ್ತೀನಿ”, ಒಸಿ ಹುಷಾರ್ಲಾ ಚೆನ್ನಾ ಗಮ್ಮಾ ಜಾಸ್ತಿ ಹಾಗೈತಿ.
ಚನ್ನ ಓತಿಕ್ಯಾತದಾಗೆ ಸರಸರ ಏರಿ ನಾಲ್ಕಾಯಿ ಉದುರಿಸ್ದ. ಆದ್ರೆ... ಇಳಿಬೇಕಾದ್ರೆ ಹಣ್ಣರ್ತ ಗರಿ ಹಿಡಿದು ಅದ್ರಮ್ಯಾಗ ಭಾರಬಿಡೋದೊಂದ ಸವ್ನ, ಸುಮಾರು ಮೂವತ್ತಡಿ ಎತ್ತರದಿಂದ ದಬಾರನೆ ಬಿದ್ದ, ಕ್ಷಣದಲ್ಲೇ ಪ್ರಜ್ಞಾಹೀನನಾದ. ಗೌಡ್ರು ಬಾಯಿಬಾಯಿ ಬಡುಕೊಂಡ ಮೇಲೆ ಸುತ್ತಲಿನ ಜನ ಬಂದು ಸೋರುತ್ತಿದ್ದ ರಕ್ತಕ್ಕೆ ಅರಿಬಿಸುತ್ತಿ ಊರಾಕ ತಂದ್ರು, ಆ ಸುದ್ದಿ ಕೇಳಿ ಚಲುವಕ್ಕಾಗ ಎದೆ ದಡಾರನೆ ಒಡೆದಂಗಾಯ್ತ ಮಾತೇ  ಹೊರಡುತ್ತಿಲ್ಲ. ನಾಲಿಗೆ ಪಸೆ ಹಾರಿದೆ, ಕಣ್ಣಲ್ಲಿ ಮಾತ್ರ ಕಂಬನಿ ಕೋಡಿಯಾಗಿದೆ. ಮಕ್ಕಳು ಲೋಬೋ ಎಂದು ಘೀಳಿಟ್ಟಿವೆ. ಊರಲ್ಲಿ ಯಾವ ದವಖಾನೆನೂ ಇಲ್ಲ ! ಪಕ್ಕದೂರಲ್ಲಿ ಇರೋದು ಐದು ಪರ್ಲಾಂಗ ಹೋಗ್ಬೇಕು. ಅದೆಂತ ಕೆಟ್ಟ ಘಳಿಗೆ. ಅದ್ರಾಗ ಬ್ಯಾರೆ ಗೌಡ್ರ ಚಕಡಿನೂ ಊರಾಗಿಲ್ಲ. ಚಲುವಿ ಹುಯ್ಯೋ... ಅಂತ ಗೋಳಿಡುತ್ತಾ ಯಾರಾದ್ರೂ ಕಾಪಾಡ್ರಿ, ನನ್ನ ತಾಳೀ ಉಳ್ಸಿಕೊಡಿ ಎಂದು ಸುತ್ತಲೂ ಅಂಗಲಾಚುತ್ತಾಳೆ. ಆದರೆ ಅಲ್ಲಿರೊರೆಲ್ಲ ಅಸಾಯಕರೇ ... ಆದ್ರೆ ಮೂಲಿ ಮನೆ ಸಂಗಣ್ಣ ಬೇಗ ಚಕ್ಕಡಿ ಕಟ್ಕೊಂಡು ಬಂದು ಚನ್ನನ ದೇಹವನ್ನ ಅದ್ರಲ್ಲಿ ಹಾಕ್ತಿದ್ದಂಗೆ ಅಲ್ಲಿ ಕೆಲ ಬಾಯಿಗಳು ದೊಡ್ಡದಾಗ್ಲೆ ಹೋದಂಗೈತಿ ಸುಮ್ನೆ ಯಾಕೆ ಒಯ್ತಿರಾ ? ಎಂದಾಗ ಚೆಲುವಿಗೆ ಆಕಾಶವೇ ತಲೆಮ್ಯಾಗ ಬಿದ್ದಂಗಾಯ್ತು. ಆದ್ರೂ ... ಗೌಡ್ರ ಪರವಾನಗಿ ಪಡೆದು ಚಕ್ಕಡಿ ಜೋರಾಗಿ ಓಡಿಸಿದ ಮರಿಗಳು ಹಿಂದೇನೇ... ಅಪ್ಪಾ... ಅಪ್ಪಾ ಎಂದು ಹಿಂಬಾಲಿಸಿದ್ವು.
ದವಖಾನೆ ತಲುಪಿ ಸಂಗಣ್ಣ ವೈದ್ಯರನ್ನ ಕರೆಯತ್ತಿದ್ದಂಗೆ, ಇದ್ದೊಂದು ಸಣ್ಣ ಜೀವ ಚೆಲುವಿಯ ತೊಡೆಮ್ಯಾಲೆ ಅಗಲಿಹೋಯ್ತು. ನಂತರ ಶವಸಂಸ್ಕಾರ ಸಂಪ್ರದಾಯಗಳೆಲ್ಲಾ ಮುಗಿದ್ಯ್ಮಾಲೆ ಬಿಳಿದಿರೇಸು ಚಲುವಿಯ ಆವರಿಸ್ತು. ಚೆಲುವೆ ಹಾಸಿಗೆ ಹಿಡಿದ್ಲು, ಮಕ್ಕಳು ಸಹ ಗೋಳೋ ಎಂತಿದ್ವು. ಮೂರ್ದಿನಾದ್ರು ಚೆಲುವಿ ಕರುಳು ನೀರ ಕಂಡಿರಲಿಲ್ಲ. ಅವ್ರು, ಇವ್ರು ತಂದು ಕೊಟ್ಟ ರೊಟ್ಟಿ, ಇಂಡಿ ಮಕ್ಕಳು ತಿಂದು ಜೀವ ಹಿಡ್ಕಂಡಿದ್ವು, ಊರಾಗ ಬಲ್ಲಂತರು ಬಂದು “ಚೆಲುವಕ್ಕ ನೀನೇ ಹಿಂಗೆ ಅತ್ಕೋಂತ ಕುಂತ್ರೆ ಮಕ್ಕಳ ಗತಿ ಏನಾಗ್ ಬೇಕು ಅಂತೀದಿ ? ನಿನ್ನೆಜಮಾನ್ರ ಸಾವಿಗೆ ಆ ಗೌಡನೇ ಕಾರಣ ಏನಾದ್ರು ಪರಿಹಾರ ಕೊಡಿ ಅಂತ ಒಸಿ ಕೇಳ್ಬಾರ್ದ ? ಅದನ್ನೇನ್ ನೀನು ಪುಕ್ಕಟೆ ಕೇಳ್ತಿಯಾ ? ಇಲ್ಲ.. ! ನಿನ್ನ ಗಂಡ ಈಸು ದಿನ ಅವರ್ಮನೇಲಿ ಜೀತಾಗಿರಲಿಲ್ಲ . . . .” ಎಂದು ಇದ್ದ ಪರಿಸ್ಥಿತಿ ತಿಳಿಸಿದ್ರೇ ಹೊರತು ಯಾರೂ ಮುಂದೆ ನಿಂತು ನ್ಯಾಯ ಒದಗಿಸಲಿಲ್ಲ.
ಮರುದಿನವೇ “ಚೆಲುವಕ್ಕ”, ಪೊಕ್ರನ್ನ ಕರ್ಕೊಂಡು ಗೌಡ್ರ ಮನೆ ಕಡೆ ಹೆಜ್ಜೆ ಹಾಕಿದಳು. ಜನ ಎಷ್ಟು ದಿವಸ ಅಂತಾ ಉಣ್ಣಾಕ ಕೊಡ್ತಾರ, ಅತ್ತ ಕಡೆ, ಅವ್ವ, ಅಣ್ಣ, ಗೌಡ್ರ ಮನೆ ಹಾದಿ ಹಿಡಿದ್ರ, ಇತ್ತ ಮರಿಯ ಹೊಟ್ಟೆ ತಾಳ ಹಾಕೋದನ್ನ ಸಹಿಸ್ಕೋನಾಕಾಗ್ತಾಯಿಲ್ಲ.. . . .  ಹಾಗೆ ಓಣಿ ದಾರಿ ಹಿಡಿದ. ಶಾನಭೋಗರ ಮನೆ ಮುಂದೆ ರುದ್ರಮ್ಮ ತಮ್ಮ “ಪಿಂಕಿ”ಗೆ ಅನ್ನ ಹಾಕ್ತಾಯಿದ್ದದ್ದು ಕಂಡು ಬಾಯಲ್ಲಿ ನೀರೂರಿತು. ಹತ್ತಿರ ಬಂದು ನಿಂತ, ಪಿಂಕಿ ಕೆಂಗಣ್ಣಿನಿಂದ ನೋಡುತ್ತಾ ಗುರ್ರ್ . . ಗುರ್ರ್. . . ಎಂದು ಗದರಿಸಿತು. ಧ್ವನಿ ಕೇಳಿ ರುದ್ರಮ್ಮ  ಹೊರಬಂದು ನೋಡಿದರೆ ಮರಿಯ. . . . ! ‘ಏ ಪರದೇಶಿ ನೀನ್ಯಾಕೋ ಇಲ್ಲಿಬಂದೆ ? ಎಲ್ಯಾದ್ರೂ ಹಾಳಾಗಿ ಹೋಗೋ’, “ಅಮ್ಮಾ ತುಂಬಾ ಹಸಿವಾಗ್ತಿದೆ, ಅದಕ್ಕಾಕಿದಿರಲ್ಲಾ ಅದು ಇನ್ನೂ ಸ್ವಲ್ಪ ಇದ್ರೆ ಕೊಡಮ್ಮಾ. ಹೊಟ್ಟೆ ಬಹಳ ಕಡಿತಾಯಿದೆ.”  ಎಂದ ಮರಿಯ. “ನಾನು ಹೇಳ್ಯೋದ್ ಕೇಳಿಸ್ತಾ ಐತಾ, ಇಲ್ಲ. . ? ನಮ್ಮ ಪಿಂಕಿಗೆ ಸಂಪೂರ್ಣ ಸಿಗಲ್ಲಾ ನಿಂದ್ ಬ್ಯಾರೆ ಕೇಡು” ಎಂದು ಕದ ಹಾಕಿದ್ಲು ರುದ್ರಮ್ಮ.
ಇತ್ತ ಗೌಡ್ರ ನಿವೇಶನ್ದಾಗ . . “ ದೇವ್ರೂ ಇಲ್ಲಾನ್ಬ್ಯಾಡಿ, ನಿಮ್ಮ ಕಾಲಿಗೆ ಬೀಳ್ತೀವಿ ದಮ್ಮಯ್ಯಾ ಅಂತೀನಿ . .  ಒಸೀ ಹಣನೋ . . ಕಾಳೋ . . ಕಡಿನೋ ಕೊಟ್ರೇ ಬದಿಕೊಂತೀನಿ, ನಾಕೂ ಮಕ್ಕಳ್ನ ಸಾಕ್ಬೇಕು, ಬಾಳ ಕಷ್ಟಾಗೈತಿ.    “ನೋಡು ಚೆಲ್ವಿ ನಿಮ್ಮ ಮಾವ ಮಾಡಿದ ಸಾಲವನ್ನೇ ನಿನ್ನೆಜಮಾನ ತೀರಿಸಿಲ್ಲ ? ನೀವೇ ಇನ್ನೂ ಜೀವನ ಪೂರ್ತಿ ನಮ್ಮೇನೇಲಿ ದುಡಿದರೂ ತೀರ್ಸಾಕ್ಕಾಗಲ್ಲ . . . .  ! ಅಂತದ್ರಾಗ . . . . ಹಣ. ಕಾಳು, ಕಡಿ ಅಂದ್ರೆ ಹೆಂಗಾಗ್ತೈತಿ, ಕೊಡಕ್ಕಾಗಲ್ಲ, ಪೊಕ್ರುನ್ನ ಮತ್ತು ಮರಿಯನ್ನ ನಮ್ಮನೇಲಿ ಕೆಲ್ಸಕ್ಕೆ ಇಟ್ಟುಬಿಡು ಸಗಣಿ, ಕಸ, ಮೇವು ಅಂದ್ಕಂತ ಇಲ್ಲೇ ಇದ್ದು ಉಣ್ಕಂತ ಇರ್ಲಿ, ಇದ್ರಮ್ಯಾಲೆ ನಿನ್ನಿಷ್ಟ, ಏನೋ ನಿನ್ಗಂಡ ನಮ್ಮನೇಲಿ ಬಹು ದಿಸದಿಂದ ದುಡಿದವ್ನೇ ಎಂದು ಅವಕಾಶ ಕೊಟ್ಟೀನಿ” ಎಂದು ಒಳ ನಡೆದ.
ಅಂದು ರಾತ್ರಿ ಚೆಲ್ವಿಗೆ ನಿದ್ರೆ ನೊರಡಿ ದೂರ! ತನ್ನ ಜೀವನದ ಬಗ್ಗೆಯೇ ಚಿಂತಿಸುತ್ತಿದ್ದಳು, ತನಗೆ ಉಣ್ಣಾಕ ಇರ್ದಿದ್ರು, ಮಕ್ಕಳ್ಗೆ ಎಲ್ಲಾದ್ರು ತಂದು ಉಣಿಸಿ ಮಲಗಿಸಿದ್ಲು. ಹೊರಗೆ ಬೋರ್ ಎಂದು ಜಡಿ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಗುಡಿಸಲು ನೀರು ತುಂಬಿದ್ದರೂ ಮಕ್ಕಳು ಮಕ್ಕೊಂಡ ಜಗುಲಿಯ ಹತ್ತಿರಲಿಲ್ಲ. ಚೆಲುವಕ್ಕ ಬೊಗಸೆಯಿಂದ ನೀರನ್ನು ಹೊರ ಹಾಕುತ್ತಿದ್ದರೆ, ಇನ್ನೊಂದೆಡೆ ಗುಡುಗು, ಸಿಡಿಲುಗಳು ಬೆಚ್ಚಿ ಬೀಳಿಸುವಂತ್ತಿದ್ದವು. ಅಷ್ಟರಲ್ಲಿ ಬೋರ್ ಎಂದು ಶಬ್ದ ಮಾಡುತ್ತಾ ಬಂದ ಭೀಕರ ಬಿರುಗಾಳಿ ಮನೆಯನ್ನು ನೆಲಸಮ ಮಾಡಿತು. ಚೆಲುವಕ್ಕ ಬಾಗಿಲಲ್ಲಿ ಇದ್ದುದರಿಂದ ಏನೂ ಅಪಾಯವಾಗಲಿಲ್ಲ. ಆದರೆ ಇಡೀ ಗುಡಿಸಲೇ ಕಳಚಿ ಮಕ್ಕಳ ಮೇಲೆ ಬಿದ್ದಿತ್ತು.  ಅಂತದರಲ್ಲೇ ಒದ್ದೆಯಾಗಿದ್ದರೂ ಕರಳು ಮಕ್ಕಳಿಗೋಸ್ಕರ ಕಾತರಿಸುತ್ತಿತ್ತು. ಕೂಗಿಕೊಂಡರೂ ಧ್ವನಿ ಹೊರಡುತ್ತಿಲ್ಲ. ಎದೆ ಬಡಿದುಕೊಳ್ಳುತ್ತಿದ್ದಾಳೆ ಏನೂ ಪ್ರಯೋಜನ ? ಮಕ್ಕಳ ಮೇಲೆ ಬಿದ್ದ ಮೂರ್ನಾಲ್ಕು ಬೆಲುಗುಗಳನ್ನು ಎತ್ತಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಷ್ಟೊತ್ತಿಗೆ ಜನ ಸೇರಿ ಅವುಗಳನ್ನು ತೆಗೆಯುವಷ್ಟರಲ್ಲಿ ಅವರಾಗಲೇ ತಂದೆಯ ದಾರಿ ಹಿಡಿದಿದ್ದರು. ಇದನ್ನೆಲ್ಲಾ ಸಹಿಸಿಕೊಂಡು ಹೃದಯ ತಳಮಳ ಗೊಳ್ಳುತ್ತಾ ಕಣ್ಣಲ್ಲಿ ಹರಿಯುವ ಶೋಕ ಕಂಬನಿ ನಿಧಾನವಾಗಿ ಧಾರಾಕಾರವಾಗಿ ಹರಿಯುವ ಮಳೆನೀರಲ್ಲಿ ಬೆರೆತು ಲೀನವಾಯಿತು. 
ಏಳಲಾರದ ಸ್ಥಿತಿ ಆದರೂ ಮಕ್ಕಳ ಮಾರೆಯ ನೋಡುವಾಸೆ, ಭಾರವಾದ ದುಃಖ ತ್ರಪ್ತ ಹೃದಯವನ್ನು ಹೊತ್ತು ಮಕ್ಕಳ ಬದಿಗೆ ಬಂದು ಕೊಡುವ ಘಳಿಗೆಯಲ್ಲಿ ಮನೆಯ ಮುಂದಿದ್ದ ಕಲ್ಪವೃಕ್ಷ ದಢಾರನೇ ಚೆಲ್ವೆಯ ಮಸ್ತಕದ ಮೇಲೆ !


ಕೊಟ್ರೇಶ್. ಎಸ್. ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ,
 ಹಾಸನ-573201
 ಮೊ-9483470794

ಜೀವ ಜಂಜಾಟ”


ಓಬಳಾಪುರ ಎಂಬ ಪುರಾತನ ಗ್ರಾಮ. ಅಲ್ಲಿ ಬಡ್ಡಿ ಬಸಣ್ಣ ಎಂಬುವನು ಹೇರಳವಾಗಿ ಹಣ ಸಂಪಾದನೆ ಮಾಡಿದ್ದನು. ಅವನು ಗಳಿಸಿದ ಸಂಪತ್ತಿನಲ್ಲಿ ಅವನಿಂದ ಬೆವರು ಹರಿದು ಬಂದ ಒಂದು ನಯಾ ಪೈಸೆನೂ ಕೂಡ ಅದರಲ್ಲಿರಲಿಲ್ಲ. ಧೀನ ಧಲಿತರ ವಡವೆ-ವಸ್ತುಗಳನ್ನು ಒತ್ತೆ ಇರಿಸಿಕೊಂಡು ದುಬಾರಿ ಬಡ್ಡಿಗೆ ಹಣವನ್ನು ಸಾಲದ ರೂಪದಲ್ಲಿ ನೀಡುತ್ತಿದ್ದ. ಒಂದು ಪಕ್ಷ ಗೊತ್ತು ಮಾಡಿದ  ಸಮಯ ಮೀರಿದರೆ ಸಾಲಗಾರರೊಡನೆ ಕಟುಕನಂತೆ ವರ್ತನೆ ಮಾಡುತ್ತಿದ್ದ. ಬಿಕ್ಷಕರಿಗೂ ಕೂಡ ಒಂದಾಣಿನೂ ಸಹ ದಾನಮಾಡುವ ಕೈ ಅವನದಲ್ಲ. ಆದರೆ  ಸುತ್ತೂರಿನಲ್ಲಿಯೇ ಹೆಸರು ಮಾಡಿಕೊಂಡಿದ್ದ. ಅವನ ತಂದೆ-ತಾಯಿ ಗಳಿಸಿಕೊಟ್ಟ ಆಸ್ತಿ-ಸಂಪತ್ತನ್ನು ಸಹ ಜವಾಬ್ಧಾರಿಯುತವಾಗಿ ನೋಡಿಕೊಳ್ಳದೇ ಹೊಲಗಳನ್ನೆಲ್ಲಾ ಬೀಳುಕೆಡವಿ ಸಂಗ್ರಹ ಸಂಪತ್ತನ್ನು ಹೇರಳ ಬಡ್ಡಿಯ ರೂಪದಲ್ಲಿ ನೀಡಿ ಬಡವರ ಹೊಟ್ಟೆ ಒಡೆದು ತಾನು ಬದುಕುವ ಶೈಲಿಯನ್ನು ಮಾತ್ರ ಮನಮೋಹಕವಾಗಿ ಅರಿತಿದ್ದ.
ಒಂದು ದಿನ ಬೆಳಗಿನ ಜಾವ ಕಾಡುಸಿದ್ದನೊಬ್ಬ ಭಿಕ್ಷೆಗೆ ಬರುತ್ತಾ ಬಸವಣ್ಣನ ಬಾಗಿಲಿಗೆ ಬಂದು ‘ಶಂಖ’ ಊದಿದ. ಬೆಳಬೆಳಗ್ಗೆ ಏನು ಮುಂದಕ್ಕೆ ಹೋಗಿ ಬಾರಯ್ಯ ಎಂದ ಬಸಣ್ಣ. ಸ್ವಾಮಿ ನಿಮ್ಮದು ಮೊದಲನೇ ಮನೆ ಹೀಗೆನ್ನಬೇಡಿ ನಾನು ಧರ್ಮಸ್ಥಳದ ಶ್ರೀ ಕ್ಷೇತ್ರಕ್ಕೆ ಪಾದಯಾತ್ರೆ ಮಾಡುತ್ತಿದ್ದೇನೆ. ಅದು ಹಲವಾರು ದಿನಗಳಾಗಬಹುದು. ಸ್ವಲ್ಪ ಉದಾರ ಮನಸ್ಸು ಮಾಡಿ ಧನಸಹಾಯ ಮಾಡಿ ನಿಮಗೆ ದೇವರೊಳ್ಳೆಯದು ಮಾಡುತ್ತಾನೆ.
ಬಸಣ್ಣ ಕಣ್ಣು ಕೆಂಪಗೆ ಮಾಡಿ “ಹೋಗು-- ಹೋಗು-- ಪುಕ್ಕಟೆ ಧರ್ಮದ ರೂಪದಲ್ಲಿ ಕೊಡುವವರಾದರೆ ತಿಪ್ಪೆಯ ನಾಯಿಗೂ ಹಣ ಬೇಕಾದೀತು” ಬಂದು ಬಿಟ್ಟ ದೊಡ್ಡದಾಗಿ ಇದನ್ನು ಸಂಪಾದನೆ ಮಾಡಿ ನಾನು ಈ ಸ್ಥಿತಿಯಲ್ಲಿರಬೇಕಾದರೆ ಎಷ್ಟು ಬೆವರು ಸುರುಸಿ ಗಳಿಸಿದ್ದೇನೆ ಎಂದು ತಿಳಿದಿದ್ದೀಯಾ ? ನಿನ್ನ ಹಾಗೆ ಕಾಡಿ  ಬೇಡಿ ದಯ್ಯ  ದಪ್ಪಾ ಎಂದು ಸಂಗ್ರಹಿಸಿದ್ದರೆ ನೀರಿನಂತೆ ಬಾಚಿ ಬಾಚಿ ದಾನ ಮಾಡುತ್ತಿದ್ದೆ ಎಂದು ಹೇಳಿದ.
ಸಿದ್ದಯ್ಯ ಜೋರಾಗಿ ಗಹ-ಗಹಿಸಿ ನಗತೊಡಗಿದ. ಬಸಣ್ಣ “ಏ ಮೂರ್ಖ ಏಕೆ ಹಾಗೆ ಹುಚ್ಚನಂತೆ ನಗುತ್ತೀಯಾ ?”
ಸಿದ್ದಯ್ಯ ನಾನಲ್ಲಯ್ಯ ಹುಚ್ಚ ಇನ್ನು ಕೆಲವೇ ಕ್ಷಣದಲ್ಲಿ ನೀನಾಗುತ್ತೀ ಇಂದು ರಾತ್ರಿ 12.00 ಕ್ಕೆ  ನಿನ್ನ ಹಣೆ ಬರಹ ಮುಗೀತು. ನಂತರ ನೀನು ಗಳಿಸಿದ ಸಂಪತ್ತನ್ನು ನಿನ್ನ ಹಿಂದೇನೆ ಒಯ್ಯುವೆಯಾ ? ಇಲ್ಲವೇ ಪಾಪ, ಪುಣ್ಯ ಬಡ್ಡಿ ಒಯ್ಯುತ್ತೀಯಾ ಎಂದು ಪ್ರಶ್ನೆ ಮಾಡಿದ.
ಸಾವಿನ ಹೆಸರು ಕೇಳುತ್ತಿದ್ದಂತೆಯೇ ಬಸಣ್ಣ ಸಿಡಿಲೊಡೆದ ಮರದಂತಾದ ! ಅವನ ಎದೆ ಒಳಗೊಳಗೆ ಬೆವೆಯತೊಡಗಿತು. ಎರಡು ಸಾಗರಗಳಂತೆ ಕಣ್ಣುಗಳಲ್ಲಿ ನೀರು ಭಿತ್ತರಿಸಿ ಬಂದವು. ಕೂಡಲೇ ಸಿದ್ದಯ್ಯನ ಕಾಲು ಹಿಡಿದು “ಮಹಾತ್ಮನೇ ನನ್ನನ್ನು ಕ್ಷಮಿಸಿ ಬಿಡಿ. ಈಗ ನನ್ನ ಪಾಲಿನ ದೇವರು ನೀವೇ. ಹಣ, ಸಂಪತ್ತೆಲ್ಲ ಧಾರೆ ಎರೆಯುತ್ತೇನೆ. ನನ್ನ ಪ್ರಾಣ ಉಳಿಯುವ ಬಗೆ ಇದ್ದರೆ ತಿಳಿಸಿ” “ನನ್ನನ್ನು ಪ್ರಾಣ ಭೀತಿಯಿಂದ ಕಾಪಾಡುವಿರೆನ್ನುವ ತನಕ ನಿಮ್ಮ ಪಾದಗಳಿಂದ ಎನ್ನಯ ಕರಗಳನ್ನು ಮೇಲೆತ್ತಲಾರೆ” ಎಂದು ಗೊಗೆರೆಯ ತೊಡಗಿದ.
ಸಿದ್ದಯ್ಯನ ಬೆಂಕಿಯಂತಾದ ಮನಸ್ಸು ಕರಗಿ ತಣ್ಣಗಾಯಿತು. ನೋಡು ಇಷ್ಟೊಂದು ಬೇಡಿಕೊಳ್ಳುತ್ತೀ ಎಂದು ಪ್ರಾಣ ಭಿಕ್ಷೆಯ ಒಂದು ಸಲಹೆ ನೀಡುವೆ, ಹೊತ್ತು ಮುಳುಗುವುದರೊಳಗಾಗಿ ನೀನು ಸಾಕಿದ ಪ್ರಾಣಿ, ಪಕ್ಷಿಯೋ,  ಬಂಧುಗಳೋ ಯಾರಾದರೂ ಸಿಕ್ಕರೆ ಊರಾಚೆ ಇರುವ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಬಂದು ಬಿಡು. ಇದಲ್ಲದೇ ಬೇರೆ ಮಾರ್ಗ ನನ್ನಲ್ಲಿಲ್ಲ. ಎಂದು ಹೇಳಿ ಹೆಜ್ಜೆ  ಕಿತ್ತÀ.
ಇತ್ತ ಬಸಣ್ಣನು ತನಗಾಗಿ ಯಾರಾದರೂ ಜೀವ ತ್ಯಾಗ ಮಾಡುವವರಿದ್ದಾರೆಯೇ ಎಂದು ತಿಳಿಯಲು ಅಣಿಯಾದ. ತಕ್ಷಣ ತಾನು ಪ್ರೀತಿಯಿಂದ ಸಾಕಿದ ಹುಂಜವನ್ನು ಕೇಳಿದ. ಹುಂಜವೇ ಇಷ್ಟು ದಿನ ನಿನಗೆ ಕಾಳು- ನೀರು ಹಾಕಿ ವಿನಯದಿಂದ ಸಾಕಿ ಬೆಳಸಿದ್ದೇನೆ. ಆದರೆ ನನಗೀಗ ಮರಣ ಕಾಲ ಸಮೀಪಿಸಿದೆ. ನಾನು ಇಲ್ಲಿ ಬದುಕಿ ಸಾಧಿಸುವ ಮಾರ್ಗಗಳು ಹಲವಾರಿವೆ. ಆದಕಾರಣ ನೀನು ನನ್ನ ಬದಲಿ ಜೀವ ತೆತ್ತು ಸಹಾಯ ಮಾಡಿವೆಯಾ ? ಅದಕ್ಕೇನೆಂತೆ ಒಡೆಯಾ ನನ್ನನ್ನು ಸಾಕಿ ಸಲಹಿದವರೇ ನೀವು. ಇಂದಲ್ಲ ನಾಳೆ ಯಾರಿಗಾದರೂ ಮಾರಿದರೆ ನನ್ನನ್ನು ಅವರು ಕತ್ತರಿಸಿ ತಿನ್ನುವುದಿಲ್ಲವೇ ? ಮರಣ ನನ್ನ ಪಾಲಿಗೆ ಎಂದಿಗೂ ಹೇಳಿ ಬರುವುದಿಲ್ಲ. ಆದರೆ ಇಂದೇ ಸಾಯಲು ಅಡ್ಡಿಯೇನು? ನನಗೀಗ ನಿಮಗೆ ಮರು ಜನ್ಮ ನೀಡಿದ ಪುಣ್ಯವಾದರೂ ನನಗೆ ಸಿಗಲಿ ಎಂದು ಹುಂಜು ಹೇಳಿತು.
ಅಷ್ಟರಲ್ಲಿ ಬಾನಿಂದ ಅಶರೀರ ವಾಣಿ ಕೇಳಿ ಬಂತು ? “ಹುಂಜವೇ ಆ ನರ ಮಾನವನಿಗೋಸ್ಕರ ನೀನು ಪ್ರಾಣ ಕಳೆದು ಕೊಳ್ಳಲು ಹೊರಟೆಯಾ ? ನನ್ನ ಗತಿ ಏನು ? ನೀನು ನನಗೆ ಅವಶ್ಯಕವಾಗಿ ಬೇಕೇ ಬೇಕು. ನೀನಿಲ್ಲದಿದ್ದರೆ ಬೆಳಗಾಗಿದೇ ಎದ್ದೇಳು ‘ದಿನಕರ’ ಎಂದು ಯಾರು ನನ್ನನ್ನು ಕೂಗಿ ಎಬ್ಬಿಸುತ್ತಾರೆ ? ಊರಿನಲ್ಲಿನ ಹುಳ-ಉಪ್ಪಟೆಗಳನ್ನು ಯಾರು ತಿಂದು ಶುಚಿ ಮಾಡುತ್ತಾರೆ ? ನಿನ್ನ ಸಂತತಿಯನ್ನು ಯಾರು ಬೆಳೆಸುತ್ತಾರೆ. ನಿನ್ನ ಸತಿ-ಮಕ್ಕಳ ಕಷ್ಟಕ್ಕೆ ಪಾರವೇ ಇಲ್ಲವೇ. ಆದಕಾರಣ ನೀನು ಸಾಯಬೇಡ” ಎಂದು “ಎಲವೋ ನರ ಮಾನವ ನಿನ್ನ ಸ್ವಾರ್ಥಕ್ಕೆ ಮೂಕ ಪ್ರಾಣಿಗಳನ್ನು ಬಲಿಪಶುಗಳನ್ನಾಗಿ ಮಾಡುವೆಯಾ ?” ಎಂದು ಬಸಣ್ಣನಿಗೆ ಕೇಳಿತು.
ಇದರಿಂದ ಕುಪಿತಗೊಂಡ ಬಸಣ್ಣ ಮನೆಯೊಳಗೆ ಹೋಗುತ್ತಲೇ ತಾನು ಸಾಕಿದ ‘ಮನೆಚಿರತೆ’ ರಾಜನಂತೆ ಬಾಲ ಅಲ್ಲಾಡಿಸುತ್ತಾ ಒಡೆಯನ ಕಾಲುಗಳನ್ನು ನೇವರಿಸಹತ್ತಿತ್ತು. ಅದನ್ನು ಕುರಿತು ಬಸಣ್ಣ ಅಲ್ಲಿಯೂ ಸಹ ತನ್ನ ವಿಚಾರ ಧಾರೆಯನ್ನು ಸ್ಪಷ್ಟ ಪಡಿಸಿದ ಅವನಿಂದಲೇ ಬೀದಿಯಲ್ಲಿರಬೇಕಾದುದು ಮನೆಯಲ್ಲಿ ತೋಳವಾಗಿ ಬೆಳೆದ ಬೆಕ್ಕು ಚಿಂತಿಸಿ ತನ್ನ ಒಡೆಯನಿಗೋಸ್ಕರ ತನ್ನ ಪ್ರಾಣವನ್ನು ತ್ಯಜಿಸುವುದಾಗಿ ಹೇಳಿತು.
ಕೂಡಲೇ ‘ಧರಿತ್ರಿ’  ಬೇಡ ಮಾರ್ಜಾಲ ನೀನು ಸಾಯಲು ಮುಂದಾಗಬೇಡ ? ನೀನೇನಾದರೂ ಸತ್ತರೆ ನಮ್ಮ ಗತಿ ಏನು ? ಆ ಇಲಿಗಳು ನನ್ನ ಮೈಯನ್ನೆಲ್ಲಾ ತೂತು ಮಾಡಿ ನನಗೆ ಚಿತ್ರ ಹಿಂಸೆ ಕೊಟ್ಟಾವು ? ನೀನಿಲ್ಲವಾದರೆ ನನ್ನ ಮಡಿಲಲ್ಲಿ ವಿಷ ಜಂತುಗಳೇ ಅಧಿಕವಾಗಿಹವು. ಈ ಸ್ವಾರ್ಥಿ ನರಮಾನವನ ಮಾತಿನ್ನು ನಂಬಬೇಡ? ಎಂದಿತು. 
            ಹಾಗೆಯೆ ಆಲೋಚನಾ ಗ್ರಸ್ತನಾಗಿ ಬಸಣ್ಣ ಚಿಂತಿಸÀತೊಡಗಿದ. ದನಕೊಟ್ಟಿಗೆಯಿಂದ ಅಂಬಾ--- ಎಂದು ಅವನ ಅಚ್ಚು ಮೆಚ್ಚಿನ ಮೋಬಳಿ ಆಕÀಳು ಒದರಿತ್ತು. ತಕ್ಷಣವೇ ಎದ್ದು ಗೌರಿ ಬಳಿಗೆ ಬಂದು “ಗೌರಿ ನಿನಗೆ ದಿನಾಲು ಸಾಕಾಗುವಷ್ಡು ಇಂಡಿ, ಮೇವನ್ನು ಹಾಕಿ ತೋಳವಾಗಿ ಬೆಳೆಸಿದ್ದೇನೆ. ಆದರೆ ನನಗೀಗ ಯಮಧರ್ಮನಿಂದ ಕರೆಯೋಲೆ ಬಂದಿದೆ. ನಾನು ಇನ್ನು ನಿಮ್ಮಂತ ಹಲವಾರು ಹಸುಗಳನ್ನು ಸಾಕಿ ಸಲಹಬೇಕೆಂದುಕೊಂಡಿದ್ದೇನೆ. ಆದಕಾರಣ ನನ್ನ ಬದಲೀ ನೀನು ಹೋಗಿ ನನಗೆ ಪ್ರಾಣ ಭಿಕ್ಷೆ ನೀಡುವೆಯಾ ?” ಎಂದು ದೀನಸ್ಥನಾಗಿ ಭಿನ್ನವಿಸಿಕೊಂಡ. ತಕ್ಷಣವೇ ಗೌರಿ ಸೂಕ್ಷ್ಮವಾಗಿ ಯೋಚಿಸಿ ಒಡೆಯಾ. ನಾನು ಹೀಗೆ ಬೆಳೆಯಲು ಸುಖವಾಗಿರಲು ನೀವೇ ಕಾರಣ ನಿಮಗೋಸ್ಕರ ನನ್ನ ಕೈಯಿಂದ ಅಷ್ಟು ಮಾಡಲಾಗದೇ  ಇದರಿಂದಾದರೂ  ಸಂತೋಷವಾಗಿ ಪ್ರಾಣ ತೆತ್ತು ಕಿಂಚಿತ್ತಾದರೂ ನಿಮ್ಮ ಖುಣ ತೀರಿಸುವ ಭಾಗ್ಯ ಒದಗಿ ಬಂತಲ್ಲಾ ! ತುಂಬಾ ಆನಂದವಾಗ್ತಾ ಇದೆ.
ತಾಳು – ತಾಳು – ಜನನಿ ಆ ನರ ಮಾನವನಿಗೆ ಭಾಷೆ ಕೊಡಬೇಡ ನೀನಿಲ್ಲದಿದ್ದರೆ ನಮ್ಮ ಗತಿ ಏನು ? ಹೈನ ಊಟ ಮಾಡುವವರ ಪಾಡೇನು ? ನಮ್ಮಲ್ಲಿರುವ ಪೌಷ್ಠಿಕಾಂಶವನ್ನೆಲ್ಲಾ ಈ ನರರು ಹೀರಿ ಬಿಟ್ಟಿದ್ದಾರೆ. ಆಹಾರ ರೂಪದಲ್ಲಿ ನಿನ್ನಯ ಕಾಯಕ ಅಪಾರ. ನೀನಿದ್ದರೆ ನಮಗೆ ಆಹಾರ, ನಮ್ಮ ಚೈತನ್ಯಕ್ಕೆ ಮುಂದಾರು ಗತಿ ? ಎಂದು ಪಕ್ಕದ ಹೊಲ ಮತ್ತು ಸಸ್ಯ ಸಂಕುಲ ಕೂಗಿ ಕೇಳಿದವು. “ಈ ನರ ಮಾನವ ತನ್ನ  ಬೇಳೆ ಬೇಯಿಸಿಕೊಳ್ಳುವುದಕ್ಕೆ ಅನ್ಯರ ಜೀವ ತಿನ್ನುವುದು ತನ್ನ ಕಸುಬು ಮಾಡಿಕೊಂಡಿದ್ದಾನೆ’ ಎಂದು ಬಸಣ್ಣನನ್ನು ಕುರಿತು ಹಂಗಿಸಿದವು.  ನಂತರ ಬಸಣ್ಣ  ತಾನು ಸಾಕಿ ಸಲುಹಿದ  ಮುದ್ದು ಗಿಳಿಯ ಪಂಜರದ ಬಳಿ ಬಂದು “ಮುದ್ದು ಗಿಳಿಯೆ ನಿನ್ನನ್ನು ಸುಂದರವಾಗಿ ಈ ಪಂಜರದಲ್ಲಿ ಸಾಕಿ ಬೆಳಸಿದ್ದೇನೆ. ಆದರೆ ನನಗೀಗ ಕೊನೆಗಾಲ ಬಂದಿದೆ. ನಿನಗೆ ದುಃಖವೆನಿಸುವುದಿಲ್ಲವೇ ? ನಿನ್ನ ಜೀವ ಕೊಟ್ಟು ನನ್ನನ್ನು ಕಾಪಾಡುವೆಯಾ ?” ಎಂದು ಪರಿಪರಿಯಾಗಿ ಬೇಡಿಕೊಂಡನು. ಗಿಳಿಯ ನೀನೆಲ್ಲ್ಲಿ ಸುಂದರವಾಗಿ ಸಾಕಿರುವೆ ? ನನ್ನ ತಂದೆ, ತಾಯಿ, ಅಕ್ಕ, ತಂಗಿಯರನ್ನು ಅಗಲಿಸಿದ ಮಹಾಪಾಪಿ ನೀನು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಯೋಚಿಸಿ “ಒಡೆಯಾ ನನ್ನ ಚೆಲುವಾದ ಸೌಂದರ್ಯಕ್ಕೆ ನೀವೇ ಕಾರಣ ನಿಮಗೋಸ್ಕರ ಅದನ್ನಾದರೂ ಮಾಡಿ ತೃಣ ಹಂಗನ್ನು ಇಳಿಸಿಕೊಳ್ಳುವೆ ನಾನು ಸಾಯಲು ಸಿದ್ದನಿದ್ದೇನೆ” ಎನ್ನುತ್ತಿದ್ದಂತೆಯೇ ನಿಲ್ಲು ನಿಲ್ಲು ಗಿಳಿಯೇ ಎಲ್ಲಿಯೋ ಗುಡುಗಿದಂತಾಯ್ತು! “ನಮ್ಮ ದೇಹದಲ್ಲಿ ಪಾಪದ ಹಣವನ್ನು ತುಂಬಿಕೊಂಡು ಅದರ ರಕ್ತದ ಮಡುವಿನಲ್ಲಿ ಜೀವಿಸಿ ಸಾಕಗಿದೆ. ಇಷ್ಟು ದಿವಸ ನಿನ್ನ ಚಿಲಿ ಪಿಲಿ ಧ್ವನಿಯ ಕೇಳಿ ಸ್ವಲ್ಪ ನೆಮ್ಮದಿಯಿಂದಿದ್ದೆವು. ನೋಡುಗರಿಗೆ ಆಕರ್ಷಸಿ ಮತ್ತು ಸುಂದರವಾಗಿ ಕಾಣುತ್ತಿದ್ದ್ದೆವು. ನೀನಿಲ್ಲದಿದ್ದರೆ ನಾನು ಮಸಣದಂತಾಗಿಬಿಡುವೆನು ದಯವಿಟ್ಟು ನನ್ನನ್ನು ತೊರೆಯಬೇಡ”À ಎಂದು ಬಸಣ್ಣನ ಜೀವಿತ ಮನೆಯ ಹೇಳಿತು.
ಬಸಣ್ಣ ಬಸವಳಿದು ಮೂಲೆ ಹಿಡಿದು ಊಟ, ನೀರು ದೂರಮಾಡಿ ಚಿಂತನಾಲೋಕದ ಡೊಳ್ಳುರಿಯಲ್ಲಿ ಮನವ ಬೇಗುದಿಯಾಗಿಸಿಕೊಂಡ ಬಸಣ್ಣಾ ಎಂಬ  ಮುಗಿಲ ಮಧುರ ಧ್ವನಿಯು ಅವನ ಕಿವಿಯಲ್ಲಿ ಊಂಕರಿಸಿತು. ಒಮ್ಮಲೇ ಬೆಚ್ಚು ಬಿದ್ದು ದಿಗ್ಬ್ರಮೆಗೊಂಡು ಯಾರು  ನೀನು ? ನನಗಿನ್ನು ರಾತ್ರಿ 12ರ ತನಕ ಸಮಯವಿದೆ ಹತ್ತಿರ ಬರಬೇಡ ? ಎಂದು ಹಿಂದೆ ಸರಿಯ ತೊಡಗಿದ. ಹೆದರಬೇಡ ನಾನೇನು ಮೃತ್ಯುವಲ್ಲ. ನೀನು ಸಂಗ್ರಹಿಸಿದ ನಿಧಿದೇವತೆ ಮಾತನಾಡುತ್ತಿದ್ದೇನೆ. ನೀನು ಒಪ್ಪಿಗೆ ನೀಡುವುದಾದರೆ ನಾನು ನಿನಗೋಸ್ಕರ ಸಾಯಲು ಸಿದ್ಧ. ಈ ರಕ್ತ ಪಿತಾಪಿ ವಾಸನೆಯಿಂದ ಮುಕ್ತಿ ಹೊಂದಬೇಕೆಂದು ನಿರ್ಧರಿಸಿ ಬಿಟ್ಟಿದ್ದೇನೆ. ಇಲ್ಲಿಂದ ಜೀವ ತೆತ್ತು ಸ್ವತಂತ್ರವಾಗಲು ನಿಶ್ಚಯಿಸಿದ್ದೇನೆ. ಧನ್ಯನಾದೆ ತಾಯೆ, ನೀನಾದರೂ ನನ್ನ ಪ್ರಾಣ ಕಾಪಾಡಲು ಮುಂದೆ ಬಂದೆಯಲ್ಲ. ಇಷ್ಟು ದಿನ ನಿನ್ನ ಸಾಕಿ ಸಲುಹಿದ್ದಕ್ಕೆ ಸಾರ್ಥಕವಾಯಿತು. ಎಂದ ಬಸಣ್ಣ. ಇನ್ನೊಂದು ತುದಿಯಿಂದ ಕರ್ಕಶವಾಗಿ ಎಲವೋ ಮೂಢ ಅಷ್ಟು ಸುಲಭವಾಗಿ ನೀನು ಬದುಕಲು ಸಾಧ್ಯವಿಲ್ಲ. ಅವಳನ್ನು ನಾನು ಬಿಟ್ಟು ಕೊಡುವುದಿಲ್ಲ. ಅವಳು ನನ್ನ ಜೀವ ಸಂಗಾತಿ ಎಂದಿತು. ಸಿಟ್ಟಿನಿಂದ ಬಸಣ್ಣ ಯಾರು ನೀನು ? ನಾನು ನಿನ್ನ ಪಾಪದೇವತೆ. ನಿನ್ನ ಪಾಪದ ಕೊಡ ತುಂಬಿದೆ. ಆದಕಾರಣ ಅವಳನ್ನು ಈ ಮನೆಯಿಂದ ಬೀಳ್ಕೊಡಲು ನಾನು ಸಿದ್ದವಿಲ್ಲ. ಎಲೇ ಭಾಗ್ಯ ಲಕ್ಷ್ಮಿಯೇ ದಯವಿಟ್ಟು ನನ್ನನ್ನು ಬಿಟ್ಟು ತೊಲಗಬೇಡ. ಈ ರಕ್ತ ದಾಹಿ ನರ ಮಾನವ ಬಾಳದಿರಲಿ ಎಂದು ಗುಡುಗಿತು ಪಾಪದೇವತೆ. ಇದÀರಿಂದ ಬಸಣ್ಣ ನಿರಾಸೆಗೊಂಡ.
ಅಷ್ಟೊತ್ತಿಗಾಗಲೇ ಸೂರ್ಯ ತನ್ನ ಮಾತೆಯ ಮಡಿಲ ಸೇರಿ ಸಮಯ ಕಳೆದಿದ್ದ. ಬಸಣ್ಣ ಕಂಡ ಆಸೆಗಳೆÀಲ್ಲವೂ ಮೇಣದಂತೆ ಕರಗಿಹೋದವು. ಬಸಣ್ಣ ನಿರಾಸೆಯಿಂದ ಅಳತೊಡಗಿದ. ಎಲ್ಲಾ ಯೋಚಿಸಿ ವಿಧಿ ಇಲ್ಲದೇ ಊರಾಚೆಯಿರುವ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿಗೆ ಧಾವಿಸಿದ. ಅವನನ್ನು ಬರುವಿಕೆಯ ನೋಡುತ್ತಿದ್ದಂತೆಯೇ ಸಿದ್ದಯ್ಯ ಎಲ್ಲ ಅರಿತುಕೊಂಡ. ಬಸಣ್ಣ ಬಂದವನೆ ಸಿದ್ಧಯ್ಯ ನ ಕಾಲಿಡಿದ. ನನಗೆ ಜೀವ ದಾನ ಮಾಡುವವರು  ನನ್ನವರೆಂದು ಯಾರು ಉಳಿಯಲಿಲ್ಲ ಸ್ವಾಮಿ. ನೀವೇ ನನ್ನನ್ನು ಕಾಪಾಡಬೇಕೆಂದು ಬೇಡಿಕೊಂಡನು. ಮುಗುಳ್ನಗುತ್ತಾ ಸಿದ್ಧಯ್ಯ “ನೋಡಿದೆಯಾ ಬಸಣ್ಣ, ನಾನು ಸ್ವಲ್ಪ ಹಣ ಸಹಾಯ ಮಾಡು ಎಂದರೆ ನೀನು ಎಷ್ಟೊಂದು ಮಾತಾಡಿಬಿಟ್ಟೆ ? ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವ ಸಂಗತಿಗಳು ಒಂದಿಲ್ಲೊಂದು ರೀತಿಯಲ್ಲಿ ಅವಶ್ಯಕವಾಗಿವೆÉ. ಅವುಗಳ ಸಹಾಯ ಸಿಗುತ್ತದೆ. ಆದರೆ ಈ ನರ ಮಾನವನಿಂದ ಏನು ಸಿಗುತ್ತದೆ ? ನಿನ್ನನ್ನು ನೀನೇ ಮನವರಿತು ಆತ್ಮ ವಿಮರ್ಶೆ ಮಾಡಿಕೋ, ನಿನ್ನಿಂದ ಉಪಕಾರವಾಗಿದೆ. ನೀನು ಬೇಕು ಎಂದು ನಿನ್ನ ಯಾವ ಜೀವ ಸಂಗತಿಗಳಿಗೂ ಕೂಡ ಮನಸ್ಸು ಬರಲಿಲ್ಲ. ದೀನ ದಲಿತರ ರಕ್ತ ಹೀರಿ ಇಷ್ಟು ದಿವಸ ಬದುಕಿ ಜೀವನ ಸಾಗಿಸಿದೆಯಲ್ಲಾ ಯಾರಿಗಾಗಿ ? ಏತಕ್ಕಾಗಿ ? ಈಗ ನಿನಗೆ ಮರಣ ಬಂದಾಗ ಉಪಯೋಗಕ್ಕಾಗಿ ಬಾರದಿದುದು ಎಷ್ಟು ಗಳಿಸಿದರೇನು? ಎಂದು ಪ್ರಶ್ನಿಸಿದ.
             “ಹೌದು ಸ್ವಾಮಿಗಳೆ ಗಳಿಕೆ ನಶ್ವರ,  ನಿಮ್ಮಿಂದ ಜ್ಞಾನೋದಯವಾಯಿತು. ನೀವು ಮಹಾತ್ಮರೇ ನಾನು ನನ್ನ ಜೀವನದಲ್ಲಿ ಹಣ ಗಳಿಸುವ ನಿಟ್ಟಿನಲ್ಲಿಯೇ ತಲ್ಲೀನನಾದೆ. ಅದರ ಬದಲು ಕಿಂಚಿತ್ತಾದÀರೂ ಪುಣ್ಯ  ಎಂಬುದನ್ನು ಪಡೆದು ಕೊಂಡಿದ್ದರೆ ಈಗ ಅದಾದರೂ ನನಗೆ ಜೀವ ಸಂಕಟದಿಂದ ಪರಾಗಲೂ ಸಹಾಯವಾಗುತ್ತಿತ್ತೇನೋ ?” ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟು   “ನಾನು ಇನ್ನು ಬದುಕಿದ್ದು ಸಾರ್ಥಕವಿಲ್ಲ ಬದುಕಿರಬಾರದು, ಏತಕ್ಕಾಗಿ ಬದುಕಬೇಕು? ಯಾರಿಗಾಗಿ ಬದುಕಬೇಕು ? ಈ ಪಾಪ ದುರಾಸೆಗಾಗಿ ಬದುಕಲೇ ?” ಎಂಬಿತ್ಯಾದಿಯಾಗಿ ನೊಂದುಕೊಳ್ಳುತ್ತಾ ಕುಸಿದು ಬಿದ್ದ. ಸಿದ್ಧಯ್ಯ “ಅದಕ್ಕೆ ಇನ್ನು ಕಾಲ ಮಿಂಚಿಲ್ಲ ಬಸಣ್ಣ! ನಿನಗೆ ಇನ್ನು ಅವಕಾಶವುಂಟು. ನೀನು ಸಾಕಿದ ಆ ನಶ್ವರವಾದ ಸಂಪತ್ತನ್ನು ಈಗಲಾದರೂ ಜಗದ ಪುಣ್ಯಕಾರ್ಯಗಳಿಗೆ, ಕಷ್ಠದಲ್ಲಿರುವವರಿಗೆ, ಭಿಕ್ಷುಕರಿಗೆ ವಿನಿಯೋಗಿಸಲು ಅರೆಘಳಿಗೆ ಕಾಲಾವಕಾಶವಿದೆ. ಅಷ್ಟು ಮಾಡಿದರೆ ಈ ಘಳಿಗೆಯಲ್ಲಿ ಗಳಿಸಿದ ಪುಣ್ಯವಾದರೂ ಸಾಕು ನಿನ್ನನ್ನು ರಕ್ಷಿಸಲು” ಎಂದನು ಸಿದ್ಧಯ್ಯ.
ಇದ ಕೇಳುತ್ತಿದ್ದಂತೆಯೇ   ಕುರುಡನಿಗೆ ಕಣ್ಣುಗಳು ಬಂದಂತಾದವು. ತನ್ನ ಜಿಪುಣತನದಿಂದ ಸಂಗ್ರಹಿಸಿದ  ಎಲ್ಲಾ ಸಂಪತ್ತನ್ನು ಸಮಾಜದ ಸತ್ಕಾರ್ಯಗಳಿಗೆ ವಿನಿಯೋಗ ಮಾಡಿ, ನೀರಿನಂತೆ ದಾನಮಾಡಿ ಸಾವಿನ ದಡದಿಂದ ತಪ್ಪಿಸಿಕೊಂಡು ಕೊನೆಗೆ ತನ್ನದೆಂಬ ಯಾವ ಸ್ವಾರ್ಥವನ್ನು ಉಳಿಸಿಕೊಳ್ಳದೇ ವಿರಾಗಿಯಾಗಿ ಬಾಳಿದ.

ಲೇಖಕರ ವಿಳಾಸ: ಕೊಟ್ರೇಶ್ ಎಸ್.ಉಪ್ಪಾರ್,ಆಲೂರು
ಲೇಖಕರು, ಶಿಕ್ಷಕರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794

‘ಆಕಸ್ಮಿಕ’


“ರೇಣು, ಶೇವಿಂಗ್ ಮಾಡ್ಕೋಳೋ ಹೀಗಿದ್ರೆ ನೀನು ನಿಜಕ್ಕೂ ಚೆನ್ನಾಗಿ ಕಾಣೋಲ್ಲ” ಎಂದು ಪುಚ್ಚಂಗಪ್ಪ ಕೇಳಿದ. ಪುಚ್ಚಂಗಪ್ಪ್ಪನಂತೆ ನಾನು, ತ್ರಿಶಾಂತ್ ಅನೇಕ ಬಾರಿ ಕೇಳಿ ಪ್ರತಿಫಲಸಿಗದೇ ಸುಮ್ಮನಾಗಿದ್ದೆವು. ಆದ್ರೆ ರೇಣುನಿಂದ ಯಾವುದೇ ಉತ್ತರ ಬರಲಿಲ್ಲ. ದೇವದಾಸನಂತೆ ಗಡ್ಡಬಿಟ್ಟು. ಮೀಸೆ ಬಿಟ್ಟು, ಹುಚ್ಚನಂತೆ ವರ್ತಿಸುತ್ತಿದ್ದ. ಆದ್ರೆ  ಅವನ ಮನಸ್ಸಿನ ಗಾಯಬಲ್ಲವರಂದ್ರೆ ಇಡೀ ಕಾಲೇಜಿನಲ್ಲಿ ನಾನು ಮತ್ತು ತ್ರಿಶಾಂತ್ ಇಬ್ರೆ! ಅಷ್ಟೊತ್ತಿಗೆ ರೇಣು ಕೈ ಬೆರಳುಗಳ ಮಧ್ಯೆ ಕಿಂಗ್ ಬಂದು ಕೂತಾಗಿತ್ತು. ಅವನು ಸಿಗರೇಟ್ ಹೊಗೆ ಬಿಡುವುದೇ ಸೊಗಸು, ಚಿತ್ತ ಚಿತ್ತಾರದ ಸುರುಳಿಗಳು, ವಿವಿಧ ಭಂಗಿಗಳಲ್ಲಿ ಸೇದುವ ರೀತಿ ನಿಜಕ್ಕೂ ಸೊಗಸು, ಆದ್ರೆ ಸದ್ಯ ಅವನ ಸೇದುವಿಕೆ ಸಾದವಾಗಿತ್ತು. ಆದ್ದರಿಂದಲೇ ಪುಚ್ಚಂಗಪ್ಪ, ಮಹೇಶ್ ನೀನಾದ್ರೂ ಹೇಳು ಇವನಿಗೆ ಏನಾಯ್ತು ಎಂದ. ಈಗಬೇಡ ಇನ್ನೊಮ್ಮೆ ಫ್ರೀಯಾಗಿ ಹೇಳ್ತೀನಿ ಟೈಮ್ ಆಯ್ತು. ಇಲ್ಲಾಂದ್ರೆ ಪೈಯದ್ ಸರ್ ಹತ್ರ ಸರಿಯಾಗಿ ಉಗಿಸ್ಕೋಬೇಕಾಗುತ್ತೆ ಬೇಗ ಹೋಗೋಣ” ಎಂದು  ಎಬ್ಬಿಸ್ಕೊಂಡು ಕಾಲೇಜ್ ಕಡೆ ಹೆಜ್ಜೆ ಹಾಕಿದ್ವಿ. ಆದ್ರೆ ಮೂರ್ನಾಲ್ಕು ತಿಂಗಳ ಹಿಂದಿನ ಘಟನೆ ನನ್ನನ್ನು ಕಾಡುತ್ತಲೇಯಿತ್ತು.
ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಕಾಲವದು. ಜನವರಿ ಮಾಹೆಯ ಧಗೆಯುಕ್ಕಿಸುವ ರಾತ್ರಿ ! ಎಕ್ಸಾಮ್ ಬ್ಯಾರೆ ಸಮೀಪಿಸುತ್ತಿದ್ದವು. ಕಾಲೇಜಿನಲ್ಲಿ ಸಿಲ್ಲಾಬಸ್ ಪÀÇರ್ತಿ ಮಾಡಿರಲಿಲ್ಲ. ಅರ್ಥವಾಗದ ಪಾಠಗಳು, ಚಿಂತೆಗೆ ನಿದ್ರೇನೇ ಬರ್ತಾಯಿರ್ಲಿಲ್ಲ. ನಮ್ಮ ಮಾತೃಭಾಷೆಯಾಗಿದ್ರೆ ಯಾರ ಹೆಲ್ಪು ಬೇಕಿರಲಿಲ್ಲ. ಆದರೆ ನಮ್ಮದು ರಾಷ್ಟ್ರ ಭಾಷೆಯಾಗಿತ್ತು. ! ಅಂದು ಮಧ್ಯರಾತ್ರಿ ಒಂದು ಗಂಟೆ ಸುಮಾರಿರಬಹುದು. ಹತ್ತು ಹಲವು ಯೋಚನೆಗಳಿಂದ ನಿದ್ರೆ ಹತ್ತಿರವೇ ಸುಳಿಯಲಿಲ್ಲ, ಪುಸ್ತಕ ಕೈಲಿಡಿದರೂ ಮಸ್ತಕಕ್ಕೆ ಹೋಗ್ತಾಯಿಲ್ಲ, ಟಾಯ್ಲೆಟ್ ಬಂದಂಗಾಯ್ತು, ನಾನು ಎದ್ದು  ಹಿಂದಿನ ಬಾಗಿಲು ತೆಗೆದು  ಟಾಯ್ಲೆಟ್ ರೂಮಿನೊಳಗೆ ಹೋಗುವ ಘಳಿಗೆಯಲ್ಲಿ ಇದ್ದಕ್ಕಿದ್ದಂತೆ ಹುಡುಗಿಯ ಚೀರಾಟ ಕೇಳಿಸಿತು. ನಾವಿರುವ ಮೂರನೇ ಮಹಡಿಯಿಂದಲೇ ಸುತ್ತಲೂ ಇಣುಕಿದೆ ಎಲ್ಲೂ ಕಾಣುತ್ತಿಲ್ಲ, ಧ್ವನಿ ಮಾತ್ರ ಕಾಪಾಡಿ.. ಕಾಪಾಡಿ . . ಎಂದು ಕೇಳ್ತಾಯಿದೆ. ತಕ್ಷಣ ಒಳಗಡೆ ಬಂದು ನಿದ್ರಾಸ್ವರ್ಗದಲ್ಲಿದ್ದ ನನ್ನ ಸ್ನೇಹಿತನಾದ ರೇಣು ಮತ್ತು ತ್ರಿಶಾಂತನನ್ನು ಎಬ್ಬಿಸಿದೆ. ರೇಣು ಅಪರೂಪಕ್ಕೊಮ್ಮೆ ನಮ್ಮ ರೂಮಿಗೆ ಬರುತ್ತಿದ್ದ. ಒಳ್ಳೆಯ ಸ್ನೇಹಿತ. ಅವನ ವಾಸ್ತವ್ಯ ಒಂಟಿಕೊಪ್ಪಲಲ್ಲಿ. ಅವನು ನಿದ್ರೆಯಲ್ಲಿ ಮಾತ್ರ ಕುಂಭಕರ್ಣ ! ಅದರಲ್ಲೂ ರೇಣು ಮಲಗಿದರೆ ಎಬ್ಬಿಸುವುದೇ ಕಷ್ಟಸಾಧ್ಯವಾಗುತ್ತಿತ್ತು. ತಕ್ಷಣಕ್ಕೆ ಎದ್ದ ತ್ರಿಶಾಂತನ ಮುಂದೆ ಎಲ್ಲಾ ವಿವರಿಸಿದೆ. ಅವನು ಕಷ್ಟಕ್ಕೆ ಮಿಡಿವ ಹೃದಯ. ಎಲ್ಲೀ “ಬಾ. . ನೋಡೋಣ” ಎಂದು ಇಬ್ಬರೂ ತಕ್ಷಣ ಹೊರಗಡೆ ಬಂದೆವು. ಅವನೂ ಗಾಬರಿಯಾದ. ಆ ಧ್ವನಿ ಗಣೇಶ ದೇವಸ್ಥಾನದ ಆಸುಪಾಸಿರಬಹುದು ಎಂದೆ. ಕೂಡಲೆ ರೇಣುನನ್ನು ಹರಸಾಹಸದಿಂದ ಎಬ್ಬಿಸಿಕೊಂಡು ಬರಬರನೆ  ಮೆಟ್ಟಿಲುಗಳನ್ನು ಇಳಿಯುತ್ತಾ ಕೆಳಗೆ ಶೆಟರ್ ತೆಗೆದು ಹೊರಬಂದೆವು, ಕೂಡಲೇ ಆ ಧ್ವನಿಯ ಹಿಂಬಾಲಿಸುತ್ತಾ ಸಾಗಿದೆವು. ಅಲ್ಲಿ ಒಂದಿಬ್ಬರು ಮಧ್ಯಮವಯಸ್ಕರು ಕುಡಿದ ಅಮಲಿನಲ್ಲಿ ಆ ಹುಡುಗಿಯನ್ನು ಎಳೆದಾಡುತ್ತಿದ್ದರು. ಕೂಡಲೇ ಅವರೀರ್ವರನ್ನು ಎಳೆದು ಬಡಿದೆವು. ಮೈಸೂರಿನಲ್ಲಿ ನಾವಿರೋ ಬೆಂಕಿ ನವಾಬ್ ರಸ್ತೆ ಒಂದು ರೀತಿಯ ರೆಡ್ ಲೈಟ್ ಏರಿಯಾ ಇದ್ದಂಗೆ, ಆದ್ದರಿಂದಲೇ ದಿನಾ ವಿರಾಮ ನೀಡದೇ ಗಸ್ತು ಹೊಡಿತ್ತಿದ್ದ ಪೋಲಿಸ್ನೋರು ಅವತ್ತು ಸುಳಿಯದಿದ್ದದ್ದು ದುರದೃಷ್ಟ. ಈ ರಸ್ತೆ ಮಹಿಮೆಯ ಬಗ್ಗೆ ನಿಮಗೆ ಹೇಳಲೇಬೇಕು. ಸಯ್ಯಾಜಿರಾವ್ ರಸ್ತೆಯ ಪಕ್ಕದಲ್ಲಿರುವುದೇ ಈ ರಸ್ತೆ, ಹೆಜ್ಜೆ-ಹೆಜ್ಜೆಗೂ ಬಾರ್ ಅಂಡ್ ರೆಸ್ಟೋರೆಂಟ್ಸ್, ಮಿಲ್ಟ್ರಿ ಹೋಟೆಲ್‍ಗಳ ಅಟ್ಟಹಾಸ, ಇಲ್ಲಿನ ಗಣೇಶ ವೈನ್ಸ್ ಇಡೀ  ಮೈಸೂರಲ್ಲಿ ಫೇಮಸ್ಸು. ಸಂಜೆ ಏಳು ಗಂಟೆಯಾಯಿತೆಂದರೆ ಇಲ್ಲಿ ಹೆಂಗಸರು ತಿರುಗಾಡುವುದು  ಅಪರೂಪ. ಸುಳಿದಾಡಿದರೂ ಅವರು ಚರ್ಮದಂಧೆಯಲ್ಲಿ ಸಿಲುಕಿದವರೇ ಎಂದು ಭಾವಿಸುವವರೇ ಅನೇಕ ! ಈ ಏರಿಯಾದಲ್ಲಿ ನಪÀÅಂಸಕಲಿಂಗದವರೂ ಬಹಳ ಹೆಚ್ಚು, ಆದ್ದರಿಂದಲೇ ಇದು ಮೈಸೂರಲ್ಲೇ ಡೇಂಜರ್ ಏರಿಯಾ ಎಂದು ಗುರ್ತಿಸಿಕೊಂಡಿದೆ. ಬೆಳ-ಬೆಳಿಗ್ಗೆ ಕಾಫಿ ಹೀರಲು ಕೆಳಗಿಳಿದು ಬಂದರೆ ಅದಾಗಲೇ ಐದಾರು ವಿಕೆಟ್‍ಗಳು ಬೀದಿಯ ಗಲ್ಲಿ-ಗಲ್ಲಿಯಲ್ಲಿ ಉರುಳಿರುತ್ತಿದ್ದವು. ಎಲ್ಲೆಮೀರಿ ಕುಡಿದು ಗಟಾರದಲ್ಲಿ ಬಿದ್ದ ಆ ದೇಹಗಳನ್ನು ನೋಡಿದರೆ ಶವಗಳಂತೆಯೇ ತಿಳಿಯಬೇಕಿತ್ತು. ಆದರೆ ಬಿಸಿಲು ಹತ್ತುತ್ತಿದ್ದಂಗೆ ಎದ್ದು ಮಾಯವಾಗುತ್ತಿದ್ದವು. ದಿನಾ ಸಾಯೋರಿಗೆ ಅಳೋರ್ಯಾರು ಎಂಬ ಗಾಧೆಯಂತೆ ಇಂತಹ ದೃಶ್ಯಗಳಿಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ಇತ್ತ ಆ ಹುಡುಗಿ ಅಳುತ್ತಲೇಯಿತ್ತು. ನಾವೆಲ್ಲಾ ಅನುಮಾನದಿಂದಲೇ ಆ ಹುಡುಗಿಯತ್ತ ನೋಡಿದೆವು. ಯಾಕೆಂದ್ರೆ ಅಷ್ಟೊತ್ನಲ್ಲಿ ಆ ಏರಿಯಾದಲ್ಲಿ ತಿರುಗಾಡುವವರೇ ಅಂತಹವರು ! ಆದ್ದರಿಂದ ಸಹಜವಾಗಿಯೇ ನಮ್ಮಗಳ ಮನಸ್ಸು ಅಂತೆಯೇ ಯೋಚಿಸಿತು. ಹತ್ತಿರದಿಂದ ನೋಡಿದಾಗ ನಮ್ಮ ನಿರ್ಧಾರಬೇರೆಯಾಗಿರಬಹುದೆಂದೆನಿಸಿತು. ಸುಂದರವಾದ, ವಿದ್ಯಾವಂತೆಯಂತೆ ಕಾಣುತಿದ್ಲು. ಹಳದಿ ಚೂಡಿದಾರ ಧರಿಸಿದ, ಅವಳು ಮುಸು ಮುಸು ಎಂದು ಅಳುತ್ತಲೇ ಇದ್ಲು, ನಿಮ್ಮ ಹೆಸರೇನೆಂದು ಎಲ್ರೂ ಒಮ್ಮೆಲೇ ಕೇಳಿದೆವು. ಮಾತನಾಡದೇ ಬರೀ ದುಃಖಿಸುತ್ತಿದ್ದಳು.
ಸ್ವಲ್ಪ ಸಾವಾರಿಸಿಕೊಳ್ಳಲಿ ಎಂದು ತುಸು ಸಮಯದ ನಂತರ ನಾನೇ ಮುಂದುವರೆದು ನಿಮ್ಮ ಮನೆ ಯಾವ ಕಡೆ ಬರತ್ತಮ್ಮಾ ಎಂದೆ. ಅಳುತ್ತಲೇ ಒಂಟಿಕೊಪ್ಪಲು ಎಂದಳು. ತಕ್ಷಣಕ್ಕೆ ತ್ರಿಶಾಂತ “ರೇಣು ಹೇಗೂ ನಿನ್ನ ಗಾಡಿಯಿದೆ. ನಮ್ಮ ರೂಮಲ್ಲಿ ಉಳಿಸಿಕೊಳ್ಳೋದು ಸೂಕ್ತ ಎನಿಸಲ್ಲ. ನಿನ್ನ ರೂಮು ಅಲ್ಲೇ ಇರೋದು. ಈ ಹುಡುಗಿ ಮನೆಗೆ ಡ್ರಾಪ್ ಮಾಡಿಬಿಡು. ಇಷ್ಟೊತ್ನಲ್ಲಿ ಅವರ ಮನೆಗೆ ಸೇರಿಸುವುದೇ ಒಳ್ಳೆಯದು” ಎಂದ, ನಂಗೂ ಅದೇ ಸರಿ ಅನ್ನಿಸ್ತು. “ಇಲ್ಲೇ ನಮ್ಮ ರೂಮಿದೆ ಬಾರಮ್ಮ. ಅಲ್ಲಿಂದ ನಿಮ್ಮನಿಗೆ ಹೋಗುವಂತೆ” ಎಂದು ಹೇಳಿದೆ. ಅವಳು ಹಿಂದೇನೇ ಬಂದಳು.  ಎಲ್ರೂ ರೂಮತ್ರ ಬಂದ್ವಿ, “ ರೇಣು ನೀನು ಗಾಡಿ ಕೀ ತಗೊಂಡು ರೆಡಿಯಾಗಿ ಬಾ” ಎಂದು ತ್ರಿಶಾಂತ ಹೇಳಿದ, ನಮ್ಮ ರೂಮು ಮೂರನೇ ಮಹಡಿಯಲ್ಲಿದ್ದರಿಂದ ರೇಣು ಬೇಗ ಬೇಗನೇ ಮೇಲೇರಿದ. ಇತ್ತ ಬಹುಶಃ ಆ ಹುಡುಗಿಗೆ ನಮ್ಮ ಮೇಲೆ ನಂಬಿಕೆ  ಮತ್ತು ವಿಶ್ವಾಸ ಬಂದಿತ್ತು ಅನ್ನಿಸುತ್ತೆ. ಅಣ್ಣ ನಿಮ್ಮೆಸರೇನು ? ಎಂದು ಮೌನ ಮುರಿದ್ಲು, ಆಗ ನಾನೇ ಪರಿಚಯಿಸಿಕೊಂಡೆ ನಾನು ಮಹೇಶ್, ಇವನು ನನ್ನ ಸ್ನೇಹಿತ ತ್ರಿಶಾಂತ್, ನಾವೆಲ್ಲ ಬಿ.ಎಡ್ ಮಾಡ್ತಾ ಇದಿವಿ. ನಮ್ಮದು ಹಾಸನ, ಇವನ್ದು ದಾವಣಗೆರೆ ಎಂದೆ. ಮತ್ತೆ ಅವರು ಎಂದು ಪ್ರಶ್ನಿಸಿದಳು. ಅಷ್ಟೊತ್ತಿಗೆ ತ್ರಿಶಾಂತ “ಅವ್ನ ಪರಿಚಯಾನೇ ಮಡ್ಲಿಲ್ಲ. ಅವ್ನ ಹೆಸರು. . . . ಅನ್ನುವಷ್ಟರಲ್ಲಿ ಅವಳೇ ‘ರೇಣು’ ಎಂದಳು.  ಯಾಕಂದ್ರೆ ಅವನ ಹೆಸರನ್ನ ನಾವಾಗ್ಲೇ ಅವಳ ಮುಂದೇನೇ ಬಳಸಿದ್ದನ್ನ ಗ್ರಹಿಸಿದೆ. ತ್ರಿಶಾಂತ ಮುಂದುವರೆದು “ಅವನ ಊರು ಬಂದು ಭದ್ರಾವತಿ, ನಿನ್ನ ಪರಿಚಯವನ್ನು ಮಾಡ್ಕೊಳಿಲ್ವಲ್ಲಮ್ಮ” ಎಂದ. ಅವಳೇ ಮುಂದುವರಿದು ನನ್ನ ಹೆಸರು ಸುಮ. ಬೆಂಗಳೂರಲ್ಲಿ ಫೋರ್ತ್ ಸೆಮ್ ಇಂಜಿನಿಯರಿಂಗ್ ಮಾಡ್ತಾಯಿದೀನಿ. ರಾಜಾಜಿನಗರದಲ್ಲಿ ಪೀಜೀಲಿ ಇದೀನಿ. ಒಂದು ತಿಂಗಳು ರಜೆಯಿದೆ ಎಂದು ಊರಿಗೆ ಬಂದೆ. ನನ್ನ ದುರಾದೃಷ್ಟ ಎಂಬಂತೆ ಆಟೋಗಳು ಸಿಗ್ಲಿಲ್ಲ. ಇಷ್ಟೋತ್ನಲ್ಲಿ ಸಿಟಿ ಬಸ್ಸಂತೂ ಇಲ್ಲ. ರೈಲ್ವೇ ಸ್ಟೇಷನ್‍ಗೆ ಹೋದ್ರೆ ಅಲ್ಲಿ ಯಾವಾಗ್ಲೂ ಆಟೋಗಳುಯಿರ್ತವೆ. ಅಲ್ಲಿಂದ ಹೋದ್ರಾಯ್ತು ಎಂದು ಅಲ್ಲಿಗೆ ಹೊರಟಿದ್ದೆ.  ಅಷ್ಟೊತ್ತಿಗೆ ಅವರು ನನ್ನ ಹಿಂಬಾಲಿಸಿದರು. ನಾನು ಹೆದರಿ ಓಡಲಾರಂಭಿಸಿದೆ.  ಅವರಿಂದ ತಪ್ಪಿಸಿಕೊಳ್ಳಲು ಮೈನ್ ರೋಡ್ ಬಿಟ್ಟು ಈಕಡೆ ಬಂದೆ.  ಆದ್ರೂ ಅವರ ಕೈಗೆ ಸಿಕ್ಕಿಬಿಟ್ಟೆ.  ದೇವರು ದೊಡ್ಡವನು, ನೀವುಗಳು  ದೇವ್ರು ಬಂದಂಗ ಬಂದು ಕಾಪಾಡಿದ್ರಿ. ಒಂದು ವೇಳೆ ನೀವು ಬರ್ಲಿಲ್ಲ ಅಂದಿದ್ದರೆ ನೆನಸ್ಕ್ಕೊಳ್ಳೋಕೆ ಆಗ್ತಾಯಿಲ್ಲ!  ತುಂಬಾ ಥ್ಯಾಂಕ್ಸ್ ಅಂದ್ಲು.  ಅಷ್ಟೊತ್ತಿಗೆ ರೇಣು ಕೆಳಗಿಳಿದು ಬಂದ.  ಗಾಡಿ ಮೇಲೆ ಕೂತು ಸ್ಟಾರ್ಟ್ ಮಾಡಿದ.  ಅವಳು ಹಿಂಬದಿ ಸೀಟಿನಲ್ಲಿ ಕುಳಿತ್ಲು, ರೇಣು ಹುಷಾರಾಗಿ ಕರ್ಕೊಂಡು ಹೋಗಿ ಮನೆ ತಲುಪಿಸು ಎಂದು ಬೀಳ್ಕೊಟ್ಟೆವು.

ಹೀಗೆ ಮೂರ್ನಾಲ್ಕು ತಿಂಗಳು ಕಳೆದವು.  ಬರ ಬರುತ್ತಾ ರೇಣುವಿನ ವರ್ತನೆ ವಿಚಿತ್ರವಾಯಿತು.  ಒಂಟಿಯಾಗಿ ಕಾಲಕಳೆಯುತ್ತಿದ್ದ, ಅವನ ನಗು ಮೊಗದ ಕಳೆ ಮಾಯವಾಗಿತ್ತು.  ಮುಂಚಿನ ಉತ್ಸಾಹ ಕುಂದಿಹೋಗಿತ್ತು.  ನಾನು, ತ್ರಿಶಾಂತ ಅವನÀ ಬಗ್ಗೆ ಬಹಳ ತಲೆ ಕೆಡಿಸಿಕೊಂಡೆವು.  ಏಪ್ರಿಲ್‍ನಲ್ಲಿ ಅವನ ಮದುವೆ ನಿಶ್ಚಯವಾಗಿತ್ತು.  ಒಂದು ದಿನ ನಾನು ತ್ರಿಶಾಂತ ಒಂಟಿಕೊಪ್ಪಲಿಗೆ ಹೋದೆವು.  ಅವನದು ಬಹಳ ಚಿಕ್ಕ ರೂಮು.  ಅಂದು ಭಾನುವಾರ.  ಒಬ್ಬನೇ ಪಿಳಿ, ಪಿಳಿ ಕಣ್ ಬಿಟ್ಕೊಂಡ್ ಮಲಗಿದ್ದ. ಯಾವಾಗ್ಲೂ ಲ್ಯಾಪ್‍ಟಾಪ್‍ನಲ್ಲಿ ಟೈಮ್‍ಪಾಸ್ ಮಾಡ್ತಾಯಿದ್ದ, ಆದ್ರೆ ಅಂದು  ಲ್ಯಾಪ್‍ಟಾಪ್ ಅನಾಥವಾಗಿತ್ತು.  ಅವನನ್ನು ಹೇಗೋ ಪುಸಲಾಯಿಸಿ ಒಬ್ಬನೇ ಇರೋದು ಸರಿಯಲ್ಲ ಎಂದು ಲಗೇಜು ಸಮೇತ ರೂಂ ಖಾಲಿ ಮಾಡಿಸಿ ನಮ್ಮ ರೂಮಿಗೆ ಕರೆತಂದೆವು.  ಅಂದು ರಾತ್ರಿ ಅವನೇ ಅಣ್ಣಾ, ಏನೋ  ಬೇಜಾರು, ಅಭ್ಯಂತರಯಿಲ್ಲಾಂದ್ರೆ ಎಣ್ಣೆ ತರೋಣ್ವೇ ಎಂದು ಮೌನ ಮುರಿದ.  ನಾವಿಬ್ಬರೂ ಇಷ್ಟ ಇಲ್ದೆ ಇದ್ರೂನೂ ಅವನಿಗೋಸ್ಕರ ಒಪ್ಪಿಕೊಂಡೆವು. ಪಕ್ಕದಲ್ಲೇ ಇದ್ದ ಗಣೇಶ ವೈನ್ಸ್‍ಗೆ ಹೋಗಿ ಆಫ್ ಬಾಟಲ್ ಎಂಸೀಬಿ, ಸೈಡ್ಸ್, ಎರಡು ಲೀ. ಸೆವೆನಪ್‍ನ್ನು ತಂದೆವು. ಹಾಗೆಯೇ ಪಕ್ಕದಲ್ಲಿದ್ದ ಕೇರಳಾಪುರ ಮಿಲ್ಟ್ರಿ ಹೋಟಲಲ್ಲಿ ಮೂರು ಊಟ ಆರ್ಡರ್ ಮಾಡಿದ್ವಿ. ಎಣ್ಣೆ ಹೀರುವಷ್ಟರಲ್ಲಿ ಊಟವೂ ಬಂದಿತು. ಊಟ ಸವಿಯುತ್ತ ತ್ರಿಶಾಂತ ‘ರೇಣು’ ಏನಾಯ್ತು ಅಂತ ಹೇಳು, ಯಾಕೆ ಇತ್ತೀಚೆಗೆ ಡಲ್ ಆಗಿದೀಯಾ ಎಂದು ಕೇಳಿದ. ಬಹುಶಃ ಅಷ್ಟು ದಿನದ ದುಃಖದ ಉನ್ಮಾದವನ್ನು ಹೊರಸೂಸಲೆಂದೇ ಆ ದಿನ ಕಾದಿತ್ತೋ ಎನ್ನುವಂತೆ ರೇಣುನೇ ತನ್ನ ಕಥೆಯನ್ನು ಹೇಳಲಾರಂಭಿಸಿದ.
ನಾನು ಆವತ್ತು ನಿಮ್ಮ ರೂಮಿನಿಂದ ಆ ಹುಡುಗಿಯನ್ನು ಒಂಟಿಕೊಪ್ಪಲಿಗೆ ಕರ್ಕೊಂಡ್ ಹೋದ್ನಲ್ಲಾ, ಅವತ್ತು ಅವರ ಮನೇಲಿ ಯಾರೂ ಇರ್ಲಿಲ್ಲ.  ಆದ್ದರಿಂದ ನಮ್ಮ ರೂಮಿಗೆ ಬನ್ನಿ, ಇವತ್ತು ಉಳ್ಕೊಂಡು ಬೆಳಿಗ್ಗೆ ಹೋಗುವಿರಂತೆ ಎಂದು ರೂಮಿಗೆ ಕರೆದೆ.  ಅವಳು ಊಂ ಎಂದ್ಲು.  ರೂಮಲ್ಲಿ ಅವಳನ್ನು ದಿವಾನ್ ಮೇಲೆ ಮಲಗಿಸಿ, ನಾನು ಕೆಳಗೆ ಚಾಪೆ ಹಾಸಿಕೊಂಡು ಮಲಗಿದೆ. ಅರ್ಧಗಂಟೆ ಕಳೆದಿರಬಹುದು, ನನಗೆ ನಿಧಾನವಾಗಿ ನಿದ್ರೆ ಆವರಿಸ್ತಾಯಿತ್ತು.  ಅಷ್ಟೊತ್ತಿಗೆ ಡಭ ಡಭ ಬಾಗಿಲು ಬಡಿದ ಶಬ್ದ,  ತಕ್ಷಣ ಎದ್ದು ಬಾಗಿಲು ತೆರೆದೆ.  ನನ್ನ ಮಾವ ಬಾಗಿಲಲ್ಲಿ ಪ್ರತ್ಯಕ್ಷ!  ಏನೂ ಮಾತನಾಡಲೂ ಹೊಳೆಯಲಿಲ್ಲ, ಒಳಗಡೆ ಕರೆದು ಛೇರಲ್ಲಿ ಕೂರಿಸಿದೆ.  ಏನ್ ಮಾವ ಇದ್ದಕಿದ್ದಂಗೆ ಇಷ್ಟೊತ್ತಲ್ಲಿ ಎಂದೆ.  “ಚಾಮರಾಜನಗರಕ್ಕೆ ಹೋಗಿದ್ದೆ, ಕೆಲ್ಸ ಇತ್ತು, ಬರುವಾಗ ಲೇಟಾಯ್ತು, ಹೇಗೂ ಬೆಳಿಗ್ಗೆ ಆರು ಗಂಟೆ ಶಿವಮೊಗ್ಗ ಟ್ರೇನ್‍ಗೆ ಹೋದ್ರಾಯ್ತು ಎಂದು ಬಂದೆ” ಎಂದರು.  ಆಗ ಒಂದು ಫೋನ್ ಮಾಡೋದ್ ಅಲ್ವ, ನಾನೇ ಕರ್ಕೊಂಡು ಬರ್ತಿದ್ದೆ ಎಂದೆ.  ಫೋನ್ ಮಾಡ್ದೆ, ನಿಮ್ಮ ಸ್ನೇಹಿತರು ಎತ್ತಿದ್ರು! ಅವರ ರೂಮಲ್ಲೇ ಬಿಟ್ಟಿದಿಯಂತಲ್ಲಾ ಎಂದಾಗಲೇ ನಿಮ್ಮ ರೂಮಲ್ಲಿ ಚಾರ್ಜಿಗೆ ಹಾಕಿದ್ದು ನೆನಪಿಗೆ ಬಂತು.
ಮಾವನೇ ಮಾತು ಮುಂದುವರಿಸ್ತಾ ಹೌದು ರೂಂ ನಲ್ಲಿ ಒಬ್ಬನೇ ಇರೋದು ಎಂದಿದ್ದೆ.  ಇವರ್ಯಾರು ಎಂದು ತುಂಬು ಬೆಡ್‍ಶೀಟ್ ಹೊದ್ದು ಮಲಗಿದ್ದ ಆ ಹುಡುಗಿ ಕಡೆ ಕೈಮಾಡಿ ತೋರಿಸಿದ.  ಇವನು ನನ್ ಫ್ರೆಂಡ್, ನನ್ನ ಕ್ಲಾಸ್ ಮೆಟ್, ಇವನೂ ನಮ್ಮ ಕಾಲೇಜಲ್ಲೇ ಬಿ.ಎಡ್. ಮಾಡ್ತಾ ಇರೋದು.  ಕಂಬೈನ್ಡ್ ಸ್ಟಡಿಗೋಸ್ಕರ ಬಂದಿದ್ದಾನೆ ಎಂದು, ಅವರಿಗೂ ಚಾಪೆ ಹಾಸಿ ಮಲಗಿಸಿದೆ.  ಇನ್ನೇನು ಲೈಟ್ ಆಫ್ ಮಾಡಬೇಕೆನ್ನುವಷ್ಟರಲ್ಲಿ ಬಹುಶಃ ಸೊಳ್ಳೆ ಕಡಿದಿರಬಹುದೇನೋ. . ಆ ಹುಡುಗಿ ಕಾಲುಗಳನ್ನು ಒಂದಕ್ಕೊಂದು ಉಜ್ಜಿದಳೆನಿಸುತ್ತೆ.  ಕಾಲ್ಗೆಜ್ಜೆಯ ಸಪ್ಪಳ ಮಾವನ ಕಿವಿಗೆ ಕೇಳಿಸುವುದೊಂದೇ ತಡ, ಸಡನ್ನಾಗಿ ಎದ್ದು ಬೆಡ್ ಶೀಟ್ ತೆಗೆದು, ಯಾರು ಈ ಹುಡುಗಿ?  ನನ್ನ ಮುಂದೆ ಡ್ರಾಮಾ ಮಾಡ್ತೀಯಾ, ನನ್ಮಗಳು ಹುಟ್ಟಿದಾಗ್ಲೆ ನಿಮ್ಮವ್ವ, ನನ್ನ ತಂಗಿ. . . ಹೆಸರು ಜೋಡಿಸಿದ್ದರಿಂದ ನಿಂಗೆ  ಕೊಟ್ಟು ಮದುವೆ ಮಾಡ್ಬೇಕಂತ ಮಾಡಿದ್ದೆ.  ಆದ್ರೆ ಇಲ್ಲಿ ನೀನು ಈ ರೀತಿಯಾಡ್ತಿಯಂತ ನಾನು ಕನಸೂ ಕಂಡಿರಲಿಲ್ಲ.  ಯಾರೇನೂ  ಮಾಡಕ್ಕಾಗುತ್ತೆ.  ಅವಳು ಅಲ್ಲಿ ನಿನ್ನ ಮ್ಯಾಲೆ ಜೀವ ಇಟ್ಕೊಂಡು ಶಬರಿ ಕಾದಂಗ ಕಾಯ್ತಾಯಿದಾಳಾ, ಇತ್ತ ನೀನು ಸಿಕ್ಕ ಸಿಕ್ಕೋರ ಜೊತೆಗೆ ಚಕ್ಕಂದ ಆಡು” ಎಂದು ಸಿಟ್ಟಿಗೆದ್ದು ತನ್ನ ಬ್ಯಾಗ್‍ನೆಲ್ಲಾ ತಗೊಂಡ್ ಹೊರಟೇಬಿಟ್ಟ.  ಎಷ್ಟು ಪರಿಪರಿಯಾಗಿ ಹೇಳಿದರೂ ನನ್ನ ಮಾವ ಕೇಳುವ ಸ್ಥಿತಿಯಲ್ಲಿರಲಿಲ್ಲ.  ಏನು ಮಾಡೋದ್ ಎಂದು ತೋಚದೇ ಸುಮ್ಮನಾಗಿಬಿಟ್ಟೆ.  ಡೋರ್ ಹಾಕಿ ಮಲಗಿದೆ, ನನ್ನ ಮಾವ ತರ್ಲೆ ಮನುಷ್ಯ, ಊರಿಗೆ ಹೋಗಿ ಏನೇನು ರಾದ್ಧಾಂತ ಮಾಡ್ತಾನೋ ಅಂತ ಚಿಂತೇಲಿ ಬೇಗ ನಿದ್ರೇನೆ ಬರ್ತಾಯಿಲ್ಲ.  ತಡವಾಗಾದರೂ ಹೇಗೋ ನಿದ್ರೆಗೆ ಜಾರಿದೆ.
ಬೆಳಿಗ್ಗೆ ಎಚ್ಚರವಾದಾಗ ಎಂಟು ಗಂಟೆಯಾಗಿತ್ತು.  ತಕ್ಷಣ ದಿವಾನ್ ಕಡೆ ನೋಡಿದೆ.  ಅವಳು ಕಾಣಿಸಲಿಲ್ಲ, ಡೋರ್ ತೆಗೆದೇಯಿತ್ತು, ಗಾಬರಿಯಾದೆ.  ಇನ್ನೇನು ಅವಳ ಮನೆಗೆ ಹೋಗಿರ್ತಾಳೆ ಅಂತ ತಿಳಿದು ಹೊರಗಡೆ ಬಂದು ಟಾಯ್ಲೆಟ್‍ಗೆ ಹೋಗೋಣ ಎಂದು ಮುಚ್ಚಿದ ಡೋರನ್ನು ತೆಗೆಯಲು ಚಿಲಕಕ್ಕೆ ಕೈ ಹಾಕಿದೆ, ಅಷ್ಟರಲ್ಲಿ ಒಳಗಡೆ ನಾನಿದಿನಿ ಎಂದು ಆ ಹುಡುಗಿಯ ದನಿ ಕೇಳಿಸಿತು. ಓಹೋ ನೀವು ಇಲ್ಲಿದೀರ ಎಂದು ಪುನಃ ರೂಮಿನೊಳಗೆ ಬಂದೆ, ಆದರೂ ರಾತ್ರಿಯಾದ ಯಡವಟ್ಟು ಇನ್ನೂ ನನ್ನ ಕಾಡುತ್ತಲೇಯಿತ್ತು.  ಅಷ್ಟೊತ್ತಿಗೆ ಆ ಹುಡುಗಿ ಬಂದಳು.  ಒಳಗೆ ಬರುತ್ತಲೇ, “ಸಾರಿ ಕಣ್ರಿ, ನಿಮಗೆ ನಾನು ಬಹಳ ತೊಂದ್ರೆ ಕೊಟ್ಟೆ, ಬಹಳ ಪಜೀತಿ ಪಟ್ರಿ” ಅಂದ್ಲು.  ನಾನು ಹಾಗೇನಿಲ್ಲ ಬಿಡಿ ಎಂದೆ.  ಅವಳೇ ಮಾತು ಮುಂದುವರಿಸ್ತಾ ನಿಮ್ಮ ಮಾವ ರಾತ್ರಿ  ರೂಂ ಗೆ ಬಂದಾಗ ನಾನು ಎಚ್ಚರವಾಗಿದ್ದೆ.  ನಿಮ್ಮಾವ ಸಿಟ್ಟು ಮಾಡ್ಕೊಂಡು ಹೋದಾಗ ನಿಮಗೆ ನಾನು ಎಂತಹ ತೊಂದ್ರೆ ಕೊಟ್ನೆಲ್ಲಾ ಎಂದು ನೊಂದುಕೊಂಡೆ ಗೊತ್ತಾ? ಎಂದು ತಲೆ ತಗ್ಗಿಸಿದಾಗ ಆ ಹುಡುಗಿಯ ಮೇಲೆ ಮತ್ತಷ್ಟು ಕರುಣೆ ಬಂತು. ಅಲ್ಲಿವರೆಗೆ ಅವಳೆಸರನ್ನೂ ಸಹ ಕೇಳಿರಲಿಲ್ಲ.  ಆವಾಗ ಹೌದು ನಿನ್ನೆಸರೇನು? ಏನ್ ಮಾಡ್ತಾ ಇದೀರಿ ಎಂದು ಕೇಳಿದೆ. ಆಗ ಅವಳ ಪುರಾಣ ಹೇಳಿದ್ಲು.  ನಂತರ ಬ್ರಷ್ ಮಾಡಿ ಸ್ನಾನ ಮಾಡಿಕೊಂಡು ರೆಡಿಯಾದೆ. ಅವಳೂ ಲ್ಯಾಪ್‍ಟ್ಯಾಪಲ್ಲಿ ಗೇಮ್ ಆಡ್ತಾಯಿದ್ಲು, ನಂತರ ನಾವಿಬ್ಬರೂ ಹೊರಟೆವು. ಟೈಮಾಗಿದೆ, ನೀವಿನ್ನು ಹೊರಡಿ.  ನಾನು ಕಾಲೇಜಿಗೆ ಹೋಗ್ಬೇಕು, ಅಲ್ಲಿ ನಮ್ಮ ಸ್ನೇಹಿತರು ಕಾಯ್ತಾಯಿರ್ತಾರೆ ಎಂದೆ. ಆದ್ರೆ ಅವಳು ಇಲ್ಲ ನಮ್ಮನಿಗೆ ಬಂದೇ ಹೋಗ್ಬೇಕು, ಇಲ್ಲೇ ತಾನೆ . . ಬನ್ನಿ ಎಂದು ಬಲವಂತ ಮಾಡಿದ್ಲು.  ನಾನು ಊಂ . . ಅನ್ಕೊಂಡು ಹೋದೆ.
ಮನೆ ಹತ್ತಿರ ಬಂತು, ಹೊರಗಡೆ ಪೊಟ್ಯಾಕಲ್ಲಿ ಒಬ್ರು ಛೇರ್ ಹಾಕ್ಕೊಂಡು ಪೇಪರ್ ಓದ್ತಾಯಿದ್ರು, ಬಹುಶಃ ಅವರೇ ಇವಳ ತಂದೆ ಇರಬಹುದು ಎಂದು ಮನದಲ್ಲಿಯೇ ಅಂದುಕೊಂಡೆ.  ಇಬ್ಬರೂ ಗಾಡಿ ಇಳಿದು ಕಾಂಪೌಂಡ್ ಒಳಹೋಗುತ್ತಿದ್ದಂತೆ. .  ಸುಮ ಏನ್ ದಿಢೀರನೆ ಬಂದುಬಿಟ್ಟಿಯಲ್ಲ, ಒಂದು ಫೋನ್ ಮಾಡಾಕಾಗ್ತಾಯಿರ್ಲಿಲ್ವ ಎಂದರು.  ಇಲ್ಲ ಮಾವ ಮೊನ್ನೆ ಸೆಟ್ ಕಳೆದೋಯ್ತು, ಆದ್ರಿಂದ ಯಾರ್ಗೂ ಫೋನ್ ಮಾಡೋಕೆ ಆಗ್ತಿಲ್ಲ ಎಂದ್ಲು.  ಬೆಂಗಳೂರು ಎಷ್ಟು ಗಂಟೆಗೆ ಬಿಟ್ಟೆ, ಇವರು ನಿನ್ನ ಫ್ರೆಂಡಾ . . . ಬಾರಪ್ಪಾ ಕೂರು ಎಂದು ನನ್ನ ಪ್ರೀತಿಯಿಂದ ಕರೆದು ಕೂರಿಸಿದರು.  ಅಷ್ಟೊತ್ತಿಗೆ ಅವರಮ್ಮ . . ಹೊರ ಬರುತ್ತಲೇ ಓ . . ಸುಮ ಈಗ ಬಂದೆಯಾ ಬಾ ಅಂತ ಸ್ವಾಗತಿಸಿದರು.
ನಂತರ ಆ ಹುಡುಗಿ ಇವರು ಚನ್ನಕೇಶವ ಅಂತ ನನ್ನ ಮಾವ . . , ಇವರು ಲಲಿತಾಂಬ ನಮ್ಮ ತಾಯಿ . ., ಇನ್ನೂ ನಮ್ಮನೇಲಿ ಇರೋದು ಸೌಜನ್ಯ ನನ್ನ ತಂಗಿ, ಟ್ಯೂಷನ್‍ಗೆ ಹೋಗಿರ್ಬೇಕು ಎಂದು ತನ್ನ ಫ್ಯಾಮಿಲಿಯನ್ನು ಸುಮ ಪರಿಚಯಿಸಿದಳು.  ತಕ್ಷಣಕ್ಕೆ ಅವಳ ತಂದೆಯ ಬಗ್ಗೆ ಕೇಳಬೇಕೆನಿಸಿತು.  ಅಷ್ಟೊತ್ತಿಗೆ ಎಲ್ರೂ ಒಳಗೆ ಹೋದೆವು.  ಸುಮನೇ ಮಾತು ಮುಂದುವರಿಸ್ತಾ . . ಒಂದು ಫೋಟೋಕ್ಕೆ ಹಾರ ಹಾಕಿದ್ದನ್ನು ತೋರಿಸಿ ಇವರೇ ನನ್ನ ತಂದೆ, ಮಾನಸ ಗಂಗೋತ್ರೀಲಿ ಕನ್ನಡ ಪ್ರೊಫೆಸರ್ ಆಗಿದ್ರು, ಅವರ ಹೆಸರು ರಾಮಮೂರ್ತಿ ಅಂತ ದಿವಂಗತ ತಂದೆಯನ್ನು ಪರಿಚಯಿಸಿದಳು.  ಆ ಕ್ಷಣ ನಿಜಕ್ಕೂ ನನಗೆ ಬೇಜಾರಾಯಿತು.
ಅವರ ಮಾವ ಇವರು ಯಾರೂ ಅಂತ ಪರಿಚಯವನ್ನೇ ಮಾಡ್ಲಿಲ್ವಲ್ಲ ಸುಮ ಎಂದಾಗ ರಾತ್ರಿಯ ಘಟನೆಯನ್ನೆಲ್ಲಾ ವಿವರಿಸಿ ಹೇಳಿದಳು.  ನನ್ನ ರೂಮಿನ ವಿಷಯವನ್ನೊಂದು ಬಿಟ್ಟು!  ಅವರು ದಿಗ್ಭ್ರಾಂತರಾಗಿ ಕೇಳಿದರು.  ಕೊನೆಗೆ ಇವರ ಹೆಸರು ‘ರೇಣು’ ಅಂತ ಪಕ್ಕದ ಬೀದೀಲಿ ರೂಂ ಮಾಡ್ಕೊಂಡಿದ್ದಾರೆ.  ಬಿ.ಎಡ್. ಮಾಡ್ತಾಯಿದ್ದಾರೆ ಎಂದು ಪರಿಚಯಿಸಿದಳು.  ಅವರ ಮಾವ ಹಾಗೂ ಅಮ್ಮನ ಕಣ್ಣುಗಳು ತೇವಗೊಂಡವು.  ಇಬ್ಬರೂ ಒಮ್ಮೆಲೇ ನಿಮ್ಮಿಂದ ಬಹಳ ಉಪಕಾರವಾಯಿತಪ್ಪಾ, ದೇವರು ನಿನ್ನ ರೂಪದಲ್ಲಿ . .  ನಮಗೆ ಸಹಾಯ ಮಾಡ್ದ . . ಒಸಿ ಇರು ಕಾಫಿ ಮಾಡ್ಕೊಂಡು ಬರ್ತೀನಿ . .ಎಂದು ಅವರಮ್ಮ ಒಳನಡೆದ್ರು.  ಇಲ್ಲ ತುಂಬಾ ಲೇಟಾಗಿದೆ ನಾನು ಬರ್ತೀನಿ ಎಂದು ಎದ್ದು ನಿಂತೆ.  ಇಲ್ಲ ಕಾಫಿ ಕುಡ್ಕೊಂಡು ಹೋಗಿ ಪ್ಲೀಜ್ ಎಂದು ಗೆರೆ ಹಾಕಿದ್ಲು.  ಚನ್ನಕೇಶವ ಮಾತು ಮುಂದುವರಿಸ್ತಾ ಈಗಿನ ಕಾಲದಲ್ಲಿ ನಿಮ್ಮಂತಹ ಹುಡುಗರು ಸಾವಿರಕ್ಕೆ ಒಬ್ಬರು ಸಿಗೋದು ಅಪರೂಪ, ನೀವು ನಮ್ಮ ಸುಮನ ಕಾಪಾಡ್ದೆ ಇದ್ದಿದ್ರೆ ಏನು ಅನಾಹುತವಾಗ್ತಿತ್ತೋ  ಏನೋ? ಎನ್ನುವÀಷ್ಟರಲ್ಲಿ ಅವಳ ತಾಯಿ ಕಾಫಿ ಸಮೇತ ಆಗಮಿಸಿದರು.  ಎಲ್ರೂ ಕಾಫಿ ಸವಿದೆವು.  ನಾನು ಹೊರಡಲು ಸಿದ್ಧವಾಗುತ್ತಿದ್ದಂತೆ ಅವರ ತಾಯಿ ನಿಮ್ಮ ಸಹಾಯ ಏಳೇಳು ಜನ್ಮದಲ್ಲಿ ಮರೆಯಲ್ಲ ಕಣಪ್ಪಾ ಎಂದು ಕಣ್ತುಂಬಿ ಕಳಿಸುವಾಗ ನಾನು ನಿಜಕ್ಕೂ ಧನ್ಯ ಎಂದುಕೊಂಡೆ.  ಇಂತಹ ಫ್ಯಾಮಿಲಿ ಒಂದು ಕಡೆ, ನನ್ನ ಮನೆಯ  ಅನುಮಾನ ಪಿಶಾಚಿ ಮಾವ ಇನ್ನೊಂದು ಕಡೆ, ಮನುಷ್ಯನ ಮನಸ್ಸುಗಳಲ್ಲಿ ಇಷ್ಟೊಂದು ಅಗಾಧ ವ್ಯತ್ಯಾಸಗಳು ಇರ್ತಾವಾ?  ಎಂದು ಪ್ರಶ್ನೆ ಮೂಡಿತು.
ಸುಮ ಬಹಳ ಸುಂದರವಾದ ಹುಡುಗಿ, ತುಂಬಾ ಚಲುವೆಯಾಗಿದ್ದಳು.  ಇಂತಹ ನಂದನವನ ಮನೆಗೆ ಇವಳನ್ನು ಕೈ ಹಿಡಿದು ಬರುವ ಅದೃಷ್ಟ ಯಾವ ಪುಣ್ಯಾತ್ಮನಿಗೆ ಇದೆಯೋ ಎಂದು ಅಲ್ಲಿಂದ ಹೊರಟು ಬಂದೆ.  ನೇರವಾಗಿ ನಿಮ್ಮ ರೂಮಿಗೆ ಬಂದಾಗ ನೀವಾಗಲೇ ಹೊರಟು ಹೋಗಿದ್ರಿ.  ಕಾಲೇಜಿಗೆ ಬಂದಾಗ ಅಷ್ಟೊತ್ತಿಗೆ ಪ್ರಾಕ್ಟಿಕಲ್ ಪ್ರಾಕ್ಟೀಸ್ ಟೀಚಿಂಗ್ ಹಾಕಿದ್ರು, ಆ ಟೆನ್ಷನಲ್ಲಿ ನೀವೂ ಕೇಳಲಿಲ್ಲ, ನಾನೂ ಈ ಘಟನೆ ಹೇಳೋದನ್ನ ಮರೆತುಬಿಟ್ಟೆ.
ಅಂದು ಸಂಜೆ ರೂಂಗೆ ಹೋದ ಮೇಲೆ ಅವಳ ನೆನಪೇ ಕಾಡ್ತಾಯಿತ್ತು.  ಸುಂದರವಾದ ಮನೆ, ಮನೆಯಲ್ಲಿ ಅಮ್ಮಾ, ಇಬ್ಬರು ಮಕ್ಕಳು, ಆವಾಗೀವಾಗ ಬಂದು ಹೋಗುವ ಮಾವ, ಎಲ್ಲಕ್ಕಿಂತ ಹೆಚ್ಚಾಗಿ ಅವರ ಕುಟುಂಬದಲ್ಲಿದ್ದ ಸೌಜನ್ಯ, ಪ್ರೀತಿ, ಸ್ನೇಹ, ನಂಬಿಕೆ, ಅವಳು ಇಂಜಿನಿಯರ್ ಪದವೀಧರೆಯಾಗ್ತಾಯಿದ್ರೂ ಸ್ವಲ್ಪ ಅಹಂಕಾರವೂ ಇರಲಿಲ್ಲ.  ಅವಳ ಅಂದವಾದ ಮೊಗ ನನ್ನ ಹೃನ್ಮನದಲ್ಲಿ ಹಾಗೆಯೇ ಮೂಡಿತು.  ತಕ್ಷಣ ನನ್ನ ಫೋನ್ ರಿಂಗಣಿಸಿತು.  ಕೂಡಲೇ ಕೈ ತೆಗೆದಾಗ ನನ್ನ ತಂದೆ, ರಿಸೀವ್ ಮಾಡಿ ಮಾತನಾಡಿದೆ.  ಚೆನ್ನಾಗಿದೀರಾ . . ಅಮ್ಮಾ ಹೇಗಿದಾರೆ ಎಂದೆ.  ಆ ಕಡೆಯಿಂದ ಎಲ್ರೂ ಬದುಕಿದ್ವಿ, ನೀನು ಅರ್ಜೆಂಟ್ ಊರಿಗೆ ಬಾ . . ಎಂದು ಕಟ್ ಮಾಡಿದ್ರು.  ಆಗ್ಲೇ ನನ್ನ ಮಾವನ ತರ್ಲೆ ಅಲ್ಲೂ ಹರಡಿದೆ ಎಂದು ಅರ್ಥವಾಯ್ತು.
ಊರಿಗೆ ಹೋಗಿ ಎಲ್ಲಾ ಹೇಳಿದರಾಯ್ತು ಅಂತ ಊರಿಗೆ ಹೋದೆ.  ಮನೆಯಲ್ಲಿ ಶೃಂಗಸಭೆ ಸೇರಿಯಾಗಿತ್ತು.  ನಾನು ಎಂಟ್ರಿ ಕೊಡುತ್ತಲೇ ಮಾವ ಮಂಗಳಾರತಿ ಶುರು ಮಾಡಿದ.  ಪಡಸಾಲೆ ಕಂಬ ತಬ್ಬಿಕೊಂಡು ರತ್ನ ಕಂಬನಿ ಇಳಿಸುತ್ತಲೇ ಮುಸು ಮುಸು ಅಂತ ಅಳ್ತಿದ್ಲು  ಅಪ್ಪನೂ ಸಹ ಅವರಂತೆಯೇ ಎಗರಾಡಿದರು. ಅಮ್ಮನೂ ಫುಲ್‍ಸ್ಟಾಪ್ ನೀಡದೇ ಬೈಯ್ದರು. ನಾನು ನಿಜ ಹೇಳಿದರೂ ಯಾರೂ ನಂಬಲಿಲ್ಲ.  ಎಲ್ರೂ ಉಗಿತಾನೇ ಇದ್ರು, ನಂಗೂ ತಡಕೊಳ್ಳಕಾಗ್ಲಿಲ್ಲ. . ! ಸಹನೆ ಮೀರಿ ಹೌದು ಅದೇ ನಿಜ ಅಂದ್ಕೊಳ್ಳಿ ಏನ್ ಈವಾಗ? ಎಂದೆ.  ತಕ್ಷಣ ನಮ್ಮಾವ ಎದ್ದೋನೆ ರತ್ನಳನ್ನು ಕೈ ಹಿಡ್ಕೊಂಡು” ಬಾ ಮಗಳೇ ಯಾವಾಳ್ನಾದ್ರೂ ಕಟ್ಕೊಳ್ಳಿ. . ಈ ಮಾನನ್ ಗೇಡಿ ಮನಿಗೆ ಸೊಸೆಯಾಗಿ ಬರೋದ್ಕಿಂತ ಹಾಗೇ ಇರೋದ್ ನೂರು ಪಾಲು ಉತ್ತಮ” ಎಂದು ಹೊರಟೇ ಬಿಟ್ಟ.  ಮುಂಚಿನಿಂದಲೂ ನಮ್ಮ ಮಾವಂಗೆ ನನ್ನ ಕಂಡ್ರೆ ಅಷ್ಟಕ್ಕಷ್ಟೇ!  ಈ ಒಂದು ಘಟನೆ ನಮ್ಮ ಮಾವಂಗೆ ಹಾಸಿಗೆ ಹಾಸಿ ಕೊಟ್ಟಂಗಾಯ್ತು”, ನಮ್ಮ ತಂದೆ-ತಾಯಿಯು ಈ ವಿಷಯದಲ್ಲಿ ಮಾವನಿಗೆ ಬಲವಂತ ಮಾಡಲಿಲ್ಲ ಅದುವೇ ನಂಗೆ ದಿಗ್ಭ್ರಮೆಯಾಯ್ತು, ಎರಡು ದಿವಸದಲ್ಲಿ ನನ್ನ ಫ್ಯಾಮಿಲಿಗೆ ಅಂತಹ ಮಂಕುಬೂದಿ ಎರಚಿದ್ದ ನಮ್ಮಾವ.  ತುಂಬಾ ಬೇಜಾರಾಗಿ ಅಲ್ಲಿಂದ ತಕ್ಷಣ ಮೈಸೂರಿಗೆ ಹೊರಟು ಬಂದೆ.
ನಮ್ಮ ಮಾವನ ಮಗಳು ರತ್ನ ಬಹಳ ಒಳ್ಳೆಯ ಹುಡುಗಿ, ಅಷ್ಟೇ ಸುಂದರಿ, ನಾನೆಂದರೆ ಅವಳಿಗೆ  ಪಂಚಪ್ರಾಣ, ನನ್ನನ್ನೇ ನಿತ್ಯ ಆರಾಧಿಸುವ ಆ ಹುಡುಗಿಯ ಬಾಳ ಸಂಗಾತಿಯಾಗುವ ಪುಣ್ಯ ನನ್ನ ಹಣೆಬರಹದಲ್ಲಿಲ್ಲ ಅನ್ನಿಸುತ್ತೆ. ಮಾವನ ಮೇಲಿನ ಸಿಟ್ಟಿಗಾಗಿ, ಅವನು ಮಾಡಿದ ರಾದ್ಧಾಂತಕ್ಕಾಗಿ ಅವರ ಸಂಬಂಧವೇ ಬೇಡವೆಂದು ನಿರ್ಧರಿಸಿ ಚೆನ್ನಾಗಿ ಓದಲು ಪ್ರಯತ್ನಪಟ್ಟೆ.
ಒಂದು ದಿನ ಇದ್ದಕ್ಕಿದ್ದಂತೆ ಸುಮಳ ಮೆಸೇಜ್ ಬಂತು. ಹೀಗೆ ಮುಂದುವರಿದು ಚಾಟಿÉಂಗ್, ಫೇಸ್ ಬುಕ್‍ನಲ್ಲಿ ಹರಟೆಹೊಡೆಯಲಾರಂಬಿಸಿದೆವು. ಸುಮಳ ಸ್ನೇಹ, ಮತ್ತವಳ ಕುಟುಂಬದ ಪ್ರೀತಿ ನÀನ್ನಲ್ಲಿನ ದುಃಖವನ್ನೆಲ್ಲಾ ಮರೆಸಿತು. ಆಗಾಗ ಸುಮಾಳ ಮನೆಗೆ ಹೋಗಿ ಬರುತ್ತಿದ್ದೆ. ಇಬ್ಬರೂ ಕೂಡ ಬಹಳ ಹತ್ತಿರವಾದೆವು. ಕ್ಯಾಂಟೀನ್, ಸಿನೆಮಾ, ಪಾರ್ಕು ಅಂತ ಸುತ್ತಾಡಿದೆವು. ಭಾನುವಾರ ನಿಮ್ಮ ಬಳಿ ಊರಿಗೆ ಹೋಗ್ತೀನಿ ಅಂತ ಹೇಳಿ ನಾವಿಬ್ಬರೂ ಪಿಕ್‍ನಿಕ್‍ನಂತೆ ಸುತ್ತುತ್ತಿದ್ದೆವು. ನನಗೆ ತಿಳಿಯದಂತೆ ನಾನು ಸುಮಾಳನ್ನು ಪ್ರೀತಿಸಲು ಶುರುಮಾಡಿದೆ.
ಅಂದಿನಿಂದ ಕುಳಿತರು, ನಿಂತರೂ ಅವಳದೇ ನೆನಪು, ಮಿರಿಮಿರಿ ಮಿಂಚುವ ಕೆಂಪು ವರ್ಣದ ತುಂಬು ಕೆನ್ನೆಗಳು, ದಾಳಿಂಬೆ ಬೀಜದಂತೆ ಹಲ್ಲುಗಳು ಅವಳ ಸೌಂದರ್ಯಕ್ಕೆ ಒಂದು ಮೆರಗು, ಹರಿತವಾದ ಕುಡಿನೋಟ, ಕಾಮನ ಬಿಲ್ಲಿನಂತೆ ಹುಬ್ಬು, ತೇಜಸ್ಸು ತುಂಬಿದ ನಯನಗಳು ನನ್ನನ್ನು  ಮಾಯಾ ಲೋಕಕ್ಕೆ ಕರೆದೋಯ್ದವು ಎಂದು ಹೇಳುತ್ತಿದ್ದಂತೆ, ಇತ್ತ ತ್ರಿಶಾಂತ್ ನೀನು ಕವಿಯಾಗಿ ಬಿಟ್ಟೆಯಲ್ಲೋ ಅಂದ. ಅಷ್ಟೊತ್ತಿಗೆ ನಾನು ಇದನ್ನೆಲ್ಲಾ ಸುರೇಶನ ಮುಂದೆ ಹೇಳಿದ್ರೆ ಒಳ್ಳೆ ಕಥೆ ಬರಿಯೋನು ಅಂದೆ. ಇನ್ನೊಮ್ಮೆ ಕವಿಗಳಿಗೆ ಫ್ರೀಯಗಿ ಹೇಳಿದ್ರಾಯ್ತು ನಿನ್ನ ಕಥೆ ಮುಂದುವರಿಸು ರೇಣು ಅಂತ ತ್ರಿಶಾಂತ್ ಹೇಳಿದ.
‘ರೇಣು’ ಮಾತು ಮುಂದುವರಿಸ್ತಾ ಮೆಸೇಜ್, ಫೇಸ್‍ಬುಕ್‍ನಲ್ಲಿ  ತಿಳಿಸುವುದು ಬೇಡ ಹಳೇ ಲವ್ ಸ್ಟೋರಿಗಳಂತೆ ಕಷ್ಟ ಪಟ್ಟು ಹತ್ತಾರು ಪೇಪರ್ ಹರಿದ್ಹಾಕಿ ಕೊನೆಗೆ ಹರಸಾಹಸ ಮಾಡಿ ಲವ್ ಲೆಟರ್ ಬರೆದೆ. ಅಷ್ಟೊತ್ತಿಗೆ ಫೋನ್ ರಿಂಗಣಿಸಿತು. ಅದೂ ಸುಮಾಳ ಕಾಲೇ..! ಹಲೋ ಎನ್ನುತ್ತಿದ್ದಂತೆ. . . “ರೇಣು ಸಂಜೆ ಐದು ಗಂಟೆಗೆ ಇಲ್ಲೊ ಒಂಟಿಕೊಪ್ಪಲ್ ಪಾರ್ಕ್ ಬಳಿ ಬರ್ತೀರಾ ಅಂದ್ಲು, ನಾನು ಸಂತಸದಿಂದಲೇ ಊಂ ಗುಟ್ಟಿದೆ.
ಕಾಲೇಜಿಗೆ ಬಂದೆ. . . ಅವತ್ತೆ ಪ್ರಿನ್ಸಿ ಮೇಡಂ ಹನ್ನೆರಡು ಪುಟದ ಟೈಪಿಂಗ್ ಮಾಡುವಂತೆ ಸೂಚಿಸಿದ್ರು, ಮೇಡಂ ನಾಳೆ ಮಾಡ್ತೀನಿ ಅಂದೆ, ಇಲ್ಲ ರೇಣು ಅರ್ಜೆಂಟ್‍ಯಿದೆ. ಇವತ್ತೆ ಆಗ್ಬೇಕು ಅಂದ್ರು. ಆದಷ್ಟು ವೇಗವಾಗಿ ಮಾಡಿ ಜೊತೆ ಜೊತೆಗೆ ಕ್ಲಾಸನ್ನೂ ಕೇಳಿ ಬೇಗ ಹೊರಟೆ. ಲೆಟರನ್ನು ಜೋಪಾನವಾಗಿ ಎದೆ ಜೇಬಿನಲ್ಲಿಯೇ ಇಟ್ಟಿದ್ದೆ. ಗಾಡಿ ಏರಿ ಸೀದಾ ಒಂಟಿಕೊಪ್ಪಲು ಪಾರ್ಕ್‍ಗೆ ಹೋದೆ. ಅಂದು ಏನೋ ಸಂತಸ, ಸಡಗರ, ಉನ್ಮಾದ ಮನೆಮಾಡಿತ್ತು. ಅಷ್ಟೊತ್ತಿಗಾಗಲೇ ಸುಮ ಒಂಟಿಯಾಗಿ ಗಸ್ತು ಹೊಡೀತಾಯಿದ್ಲು. ನಾನು ಹೋಗ್ತಿದ್ದಂಗೆ ಹಾಯ್ ಅಂದ್ಲು. ಅವಳೇ ಮಾತು ಮುಂದುವರಿಸ್ತಾ ಏನು ಸಾಹೇಬರು ಬಹಳ ಮಿಂಚ್ತಾಯಿದಿರಲ್ಲಾ ಅಂದು,್ಲ ನನ್ನ ಮನಸ್ಸು ಇನ್ನೂ ಪುಳಕಗೊಂಡಿತು. ಅಲ್ಲೆ ಪಾರ್ಕ್ ಬೆಂಚಮೇಲೆ  ಕೂತಿದ್ದ ಒಬ್ಬ ಹ್ಯಾಂಡ್‍ಸಮ್ ಬಾಯ್‍ನನ್ನು ಕರೆದು. ’ರೇಣು’ ಇವರು ಸುನೀಲ್ ಅಂತ ನನ್ನ ಬಾವಿ ಸಂಗಾತಿ, ಗೌವರ್ನಮೆಂಟ್  ಪಾಲಿಟೆಕ್ನಿಕ್ ಕಾಲೇಜಿನಲ್ಲಿ  ಪ್ರೊಫೆಸರ್ ಆಗಿ ಎರಡು ತಿಂಗಳ ಹಿಂದೆ ಅಪಾಯಿಂಟ್ ಆಗಿದೆ, ಸುನೀಲ್ ಇವರು ‘ರೇಣು’ ಅಂತ ನನ್ನ ಬೆಸ್ಟ್ ಫ್ರೆಂಡ್ ಅಂದಾಗ ಇಡೀ ಆಕಾಶವೇ ಕಳಚಿ ನನ್ನ ಮೇಲೆ ಕುಸಿದುಬಿದ್ದಂಗಾಯ್ತು, ಹೃದಯ ನುಚ್ಚುನೂರಾಯಿತು. ಮನಸ್ಸಿಲ್ಲದ ಮನಸ್ಸಿನಿಂದ ಸುನೀಲ್ ಕೈಕುಲಿಕಿದೆ.
“ರೇಣು ನಾಳೆ ನಿಶ್ಚಿತಾರ್ಥಯಿದೆ ಮಹೇಶಣ್ಣ ಮತ್ತು ತ್ರಿಶಾಂತಣ್ಣನ್ನೂ ಕರ್ಕೊಂಡು ಬನ್ನಿ, ಖಂಡಿತಾ ಬರ್ಬೇಕು ನಿಮಗಾಗಿ ಕಾಯ್ತಾ ಇರ್ತೀವಿ” ಅಂತ ಹೇಳಿ ಸುನೀಲನೊಂದಿಗೆ ಹೊರಟು ಹೋದ್ಲು. ನಾನು ನಿಂತಲ್ಲೇ ಕುಸಿದು ಬಿಟ್ಟೆ, “ಆ ಕಡೆ ನನ್ನನ್ನೇ ಆರಾಧಿಸುವ ರತ್ನ ನನಗೆ ಸಿಗಲಿಲ್ಲ, ಈ ಕಡೆ ನಾನು ಪ್ರೀತಿಸಿದ ಸುಮ ಎಟಕಲಿಲ್ಲ” ಎಂದು ರೇಣು ಮೂಕವಿಸ್ಮಿತನಾದ!.
ಲೇಖಕರ ವಿಳಾಸ: ಕೊಟ್ರೇಶ್ ಎಸ್.ಉಪ್ಪಾರ್,ಆಲೂರು
ಲೇಖಕರು, ಶಿಕ್ಷಕರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794

ನವನವೀನ ವಿಚಾರಗಳ ಹೂರಣ- ‘ಸಿಹಿ ಮುತ್ತು’


      ಚುಟುಕು ಸಹಿತ್ಯ ಪ್ರಕಾರವಾಗಿ ಕಂಡದ್ದು  ಅಥವಾ ಗುರುತಿಸಿಕೊಂಡಿದ್ದು ಇತ್ತೀಚಿನ ದಿನಗಳಲ್ಲಿ, ಹಾಗೆ ನೋಡಿದರೆ ಚುಟುಕುಗಳ ಹೊಳಹು ಪ್ರಾಚೀನ ಸಾಹಿತ್ಯದಿಂದಲೂ ಕಾಣುತ್ತದೆ. ವಚನ ಸಾಹಿತ್ಯ, ಜಾನಪದ ತ್ರಿಪದಿ, ಸರ್ವಜ್ಞನ ವಚನ, ನವೋದಯ ಕಾಲದ ಕವಿಗಳ ಚೌಪದಿ ,ತ್ರಿಪದಿ, ತೀರ ಇತ್ತೀಚಿನ ಹನಿಗವನ-ಮಿನಿಗವನಗಳೆಲ್ಲ ಚುಟುಕಿನ ರೂಪವೆನ್ನಬಹುದೇನೋ ? ಕುವೆಂಪುರವರ ಪಕ್ಷಿ ಕಾಶಿಯಲ್ಲಿಯ ‘ಗುಲಾಭಿ’ ಯಂಥ ಕವನವೂ ನಿಶ್ಚಿತವಾಗಿ ಒಂದು ಉತ್ತಮ ಚುಟುಕಾಗಿದೆ. 
ಕಳೆದ ಶತಮಾನದ ಆದಿಯಲ್ಲಿ ತೀ.ನಂ ಶ್ರೀಯವರು ಗಥಾಶಸಪ್ತಸತಿಯಿಂದ ಮತ್ತು ಪ್ರಾಕೃತ ಮೂಲಗಳಿಂದ ಮುಕ್ತಕಗಳನ್ನು ಬಿಡಿಮುತ್ತುಗಳೆಂದು ಕನ್ನಡಕ್ಕೆ ತಂದರು. ಪಂಜೆಯವರಿಂದ ಸ್ಪೂರ್ತಿಪಡೆದ ಜಿ.ಪಿ.ರಾಜರತ್ನಂ ಕೂಡ ಹಾಸ್ಯ ಚುಟುಕುಗಳನ್ನು ರಚಿಸಿದರು. ಸಿ.ಪಿ.ಕೆಯವರು ಕೂಡ ಹಲವು ಮೂಲಗಳಿಂದ ಮುಕ್ತಕಗಳನ್ನು ಅನುವಾದಿಸಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾ ಇದ್ದಾರೆ. ಆಗಿನ ಹಾಸ್ಯ ಲೇಖಕರು ಹಲವಾರು ಕಿರುಗವನಗಳನ್ನು ಚುಟುಕುಗಳನ್ನು ವ್ರತವೆಂಬಂತೆ ಬರೆದರು. 
ದಿನಕರ ದೇಸಾಯಿ, ಎಂ,ಅಕ್ಬರ್ ಆಲಿ, ಪರಮೇಶ್ವರ ಭಟ್ಟ, ವಿಡಂಬಾರಿ ಅರಾಸೆ, ಹಾರಾ, ಮೊದಲಾದ ಹಿರಿಯರು ಚುಟುಕು ಪ್ರಕಾರವನ್ನು ಗಟ್ಟಿಗೊಳಿಸಿದರು. ಮುಕ್ತಕ, ರುಬಾಯಿ, ಶಾಯಿರಿ, ಗಜಲ್, ಹಾಯಿಕು, ಲಿಮರಿಕ್, ರೈಮ್ಸ್ ಇಂದು ಚುಟುಕುಗಳಲ್ಲಿ ಬೆರೆತು ಹೋಗಿವೆ. 
ಬದುಕಿನ ಬದಲಾವಣೆ ಸಾಹಿತ್ಯದಲ್ಲಿಯೂ ಕಾಣುತ್ತದೆ. ಇಂದಿನ ಬದುಕು ತುಂಬ ವೇಗದ್ದು ಬದುಕಿನ ಯಾವುದೇ ಕ್ಷೇತ್ರಗಳಲ್ಲಿ ನಿಧಾನ, ದೀರ್ಘ ಎಂಬುದಿಲ್ಲ. ಅದರ ಪರಿಣಾಮವಾಗಿಯೇ ಸಾಹಿತ್ಯದಲ್ಲಿಯೂ ಚುಟುಕುಗಳು ಅನಿವಾರ್ಯವಾಗಿವೆ ಎನ್ನಬಹುದು. ಡಾ.ಎಲ್.¨ಸವರಾಜರಂತಹ ಗಂಭೀರ ಸಾಹಿತಿಗಳೂ, ಸಂಶೋಧಕರು ಇಂದು ಚುಟುಕುಗಳನ್ನು ಬರೆದಿದ್ದಾರೆನ್ನುವುದು ಚುಟುಕು ಸಾಹಿತ್ಯದ ಮನ್ನಣೆಯೇ ಆಗಿದೆ. ಚದುರಂಗ, ಎಚ್.ಎಸ್.ಬಿಳಿಗಿರಿ ದೇವನಾಂಪ್ರಿಯ (ಷ.ಶೆಟ್ಟರ)ಯಂಥವರನ್ನೂ ಇಲ್ಲಿ ಹೆಸರಿಸಬಹುದು.
ಸುಗಮ ಸಂಗೀತ, ಲಘು ಸಂಗೀತವೆಂದು ಸಂಗೀತವನ್ನು ಒಪ್ಪಿಕೊಂಡಂತೆ ಚುಟುಕುಗಳನ್ನು ಸಾಹಿತ್ಯವಾಗಿ ಒಪ್ಪಿಕೊಳ್ಳಬೇಕಿದೆ. ಸಂಗೀತಶಾಸ್ತ್ರದ ಆಳವಿಲ್ಲದವನೂ ಸುಗಮ ಸಂಗೀತ ಸವಿಯುವಂತೆ ಸಾಹಿತ್ಯಾಸಕ್ತನಾದವನು ಚುಟುಕುಗಳನ್ನು  ಸವಿಯುತ್ತಾನೆ. ಸ್ವಲ್ಪದರಲ್ಲಿ ಏನೆಲ್ಲಾ ಹಿಡಿದಿರುವ ಚುಟುಕುಗಳನ್ನು ಒಂದು ರೀತಿಯಲ್ಲಿ ‘ನ್ಯೂಕ್ಲಿಯಸ್’ದಂತೆ ಕಾಣುತ್ತೇವೆ. ಒಂದು ಶಬ್ದದಲ್ಲಿ, ಒಂದು ಸಾಲಿನಲ್ಲಿ ಎಷ್ಟೆಲ್ಲಾ ಕಸುವು ತುಂಬಿದ ಕವಿಗಳಿದ್ದಾರೆ. ವರ್ತಮಾನದ ರಾಜಕೀಯ, ಸಾಮಾಜಿಕ ಚಿಂತನೆಗಳನ್ನು ಕೆಲವು ಸಾಲಿನಲ್ಲಿಯೇ ಹಿಡಿದಿರುವುದು ತುಂಬ ಕಷ್ಟಕರವಾದ ಕಾರ್ಯವೆನ್ನಬಹುದು. ಮುಗಿಲ ಮಡಿಲಲ್ಲಿ ಮೂಡುವ ಕಾಮನ ಬಿಲ್ಲಿನಂತೆ ವರ್ಣರಂಜಿತ ಚುಟುಕುಗಳನ್ನು ಇಂದಿನ ಅನೇಕ ಕನ್ನಡ ಕವಿಗಳು ರಚಿಸುತ್ತಿದ್ದಾರೆ. 
ಚೆನ್ನವೀರ ಕಣವಿಯವರಂಥವರು ಒಂದು ಚುಟುಕಿನಲ್ಲಿ ಲಂಚ್ ಎನ್ನುವ ಶಬ್ದವನ್ನು ಎಷ್ಟೊಂದು ಚಮತ್ಕಾರಿಕವಾಗಿ ಉಪಯೋಗಿಸುತ್ತಾರೆ. ಹಳ್ಳಿಗನೊಬ್ಬ ಆಫೀಸಿಗೆ ಬಂದಾಗ ಆಫೀಸ್ ಜವಾನ ‘ಸಾಹೇಬರು ಲಂಚ್‍ಗೆ’ ಹೋಗಿದ್ದಾರೆ ಎಂದಾಗ- ‘ಲಂಚ್‍ಗೂ ಸಮಯ ಬೇರೆ ಇದೆಯೋ! ಎಂದು ಉದ್ಘರಿಸುತ್ತಾನೆ.
ದುಂಡಿರಾಜರಂತೂ ಚುಟುಕು ಬ್ರಹ್ಮರೆಂದೇ ಜನಪ್ರಿಯರಾದಂತಾಗಿದೆ. ಅವರ ಚುಟುಕುಗಳಲ್ಲಿ ಶಬ್ದಗಳು ಮೇಣದಂತಾಗಿವೆ. ಒಂದು ಶಬ್ದ ಸಂದರ್ಭಕ್ಕೆ ತಿರುಚಿ ಒಂದು ಅರ್ಥದಿಂದ ಇನ್ನೊಂದಕ್ಕೆ, ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಒಯ್ಯುತ್ತವೆ. ‘ಹೊಸದರಲ್ಲಿ ಆಯಸ್ಕಾಂತದಂತಿದ್ದ ನಲ್ಲ ಬರುಬರುತ್ತ ಐಸ್‍ಕಾಂತನಾಗುತ್ತಾನೆ. ಪತಿಯ ವೈಪಲ್ಯಕ್ಕೆ ಕಾರಣ ವೈಫಲ್ಯವೇ? ಇಲ್ಲಿ ಆಯಸ್ಕಾಂತ, ವೈಪಲ್ಯ ಶಬ್ದಗಳು ಏನೆಲ್ಲಾ ಮೋಜಿನ ರೂಪಗಳಾಗುತ್ತವೆ.
ಇಂದು ಚುಟುಕು ಬರೆಯುವ ಅನೇಕ ಕವಿಗಳಲ್ಲಿ ಈ ಶಬ್ದ ಚಮತ್ಕಾರ ಕಾಣುತ್ತೇವೆ. ಇಂಥವರಲ್ಲಿ ಎಸ್.ಕೆ.ವಾಸುರವರೂ ಒಬ್ಬರು. ತಮ್ಮ ಪ್ರಥಮ ಸಾಹಿತ್ಯ ಕೃತಿಯಾದ ಈ ಚುಟುಕು ಸಂಕಲನಕ್ಕೆ ಅನಿಸಿಕೆ ರೂಪದಲ್ಲಿ ನಾಲ್ಕು ಮಾತುಗಳನ್ನು ನನ್ನಿಂದ ಅಪೇಕ್ಷಿಸಿದ್ದಾರೆ. ವಾಸುರವರು ತರುಣ ಕವಿಗಳು ರಾಜ್ಯದ ಅನೇಕ ಚುಟುಕು ಕವಿಗಳ ಪ್ರಭಾವದಿಂದ ಈಗಾಗಲೇ ನೂರಾರು ಚುಟುಕುಗಳನ್ನು ನಿರಾಯಾಸವಾಗಿ ಬರೆದಿರುವ ಅವರ ಹಲವಾರು ಚುಟುಕುಗಳು ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರಿಂದ ಮೆಚ್ಚುಗೆ ಪಡೆದಿವೆ. 
ಓರ್ವ ವ್ಯಕ್ತಿಯಾಗಿ ವಾಸು ಅವರಲ್ಲಿರುವ ಸೌಜನ್ಯ, ವಿಧೇಯತೆ ಮತ್ತು ನಯವಿನಯಗಳು ನನ್ನನ್ನು ಸಂತೋಷಪಡಿಸಿವೆ. ಈ ದಿನಗಳಲ್ಲಿ ಅಪರೂಪವಾಗಿರುವ ಇಂತಹ ಗುಣಗಳು ವ್ಯಕ್ತಿಯನ್ನು ವಿಕಾಸ ಮಾರ್ಗದತ್ತ ಕೊಂಡುಯ್ಯುವುದರಲ್ಲಿ ಎರಡು ಮಾತಿಲ್ಲ. ನಿತ್ಯ ನೂತನವ ಸಂದರ್ಭಕ್ಕನುಸಾರವಾಗಿ ನವನವೀನ ವಿಚಾರಗಳನ್ನು ತಿಳಿಯುತ್ತಾ, ಕಲಿಯುತ್ತಾ, ಸಾಗುತ್ತಿರುವ ಜ್ಞಾನ ಹಂಬಲದ ವ್ಯಕ್ತಿ ವಾಸು ಎಂದರೆ ಅತಿಶಯೋಕ್ತಿಯಲ್ಲ. ಮೂಲತಃ ವಿದ್ಯುತ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಮಾತೃ ಕಾಯಕದ ಛಾಪು ಇವರ ಚುಟುಕುಗಳ ಮೇಲೆ ಪ್ರಭಾವ ಬೀರಿವೆ. ವಿದ್ಯುತ್ ಇಲಾಖೆಯಲ್ಲಿನ ಜನರ ಮತ್ತು ಇವರ ನಡುವೆ ನಡೆಯುವ ನಿರಂತರ ಸಂಪರ್ಕ, ಸನ್ನಿವೇಶಗಳು ಹಾಸ್ಯ ಪ್ರಸಂಗಗಳಾಗಿ ಸೊಗಸಾಗಿ ಮೂಡಿ ಬಂದಿವೆ. ಅಷ್ಟಕ್ಕೆ ಮಾತ್ರ ಸೀಮಿತವಾಗದೇ ರಾಜಕೀಯ, ಸಾಮಾಜಿಕ ತಲ್ಲಣಗಳು, ಪ್ರಚಲಿತ ವಿದ್ಯಾಮಾನಗಳ ಮೇಲೆಯೂ ಇವರ ಚುಟುಕು ಕವಿತೆಗಳು ಬೆಳಕು ಚೆಲ್ಲುತ್ತವೆ. 
ವೃತ್ತಿಯನ್ನೇ ಒಂದು ಕಡೆ ವಾಸುರವರು ಸೊಗಸಾಗಿ ಹಾಸ್ಯಕ್ಕೆ ವಿಡಂಬಿಸುತ್ತಾರೆ. 
ನಾನು ಒಬ್ಬ ಮಾರ್ಗದಾಳು 
ಕೆಲಸ ಮಾಡದೇ ಬಿಡುತ್ತಿದ್ದೆ ಬರೀ ಹೋಳು,
ನಾ ಕೇಳುತ್ತಿರಲಿಲ್ಲ ಗ್ರಾಹಕರ ಗೋಳು
ಕೊನೆಗೆ ಎಲ್ಲಾ ಸೇರಿ ಮಾಡಿದರು
ನನ್ನ ತಲೆ ಓಳು! [ಮಾರ್ಗದಾಳು]
ಇಲಾಖೆಯಲ್ಲಿ ನಿರಂತರವಾಗಿ ನಡೆಯುವ ಕೆಲವು ಕಂದಕಗಳನ್ನು ಸೂಕ್ಷ್ಮವಾಗಿ ಹಾಸ್ಯ ಲೇಪನಗೈದು ಚಿತ್ರಿಸಿರುವುದು ಮನೋಜ್ಞನವಾಗಿದೆ. 
ನಾನು ಒಬ್ಬ
ವಿದ್ಯುತ್ ಅಭಿಯಂತರ
ಮೊಬೈಲ್ ಕರೆಗಳು 
ಬರುತ್ತವೆ ನಿರಂತರ
ಕರೆಮಾಡಿದ ಗ್ರಾಹಕರಿಗೆ 
ನಾ ನೀಡುತ್ತಿದ್ದೆ ಉಡಾಫೆ ಉತ್ತರ 
ಹಿರಿಯ ಅಧಿಕಾರಿಗಳಿಗೂ 
ನೀಡುತ್ತಿರಲಿಲ್ಲ ಸಮಂಜಸ ಉತ್ತರ 
ಕೊನೆಗೆ ಎಲ್ಲರೂ ಸೇರಿ ತಂದಿಟ್ಟರು 
ನನ್ನ ಹುದ್ದೆಗೆ ಗಂಡಾಂತರ! [ಅಭಿಯಂತರ]
*******
ಭಾಗಿದ ಕಂಬಕ್ಕೆ 
ಬೇಕಿತ್ತು ಒಂದು ಗೈ
ಗೈ ಹಾಕದೆ ಕೆಲಸ ಮಾಡಲು ಹೋಗಿ
ಮುರಿದಿದೆ ನನ್ನ ಕೈ!
ಹೀಗೆ ವಿದ್ಯುತ್ ಇಲಾಖೆಗೆ ಸಂಬಂದಿಸಿದ ನಿತ್ಯ ಒಡನಾಟದ ಹಲವು ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ಕಿರಿದರಲ್ಲಿ ಹಿರಿದರ್ಥ ಬರುವ ರೀತಿಯಲ್ಲಿ ಹಿಡಿದಿಟ್ಟಿದ್ದಾರೆ . ಆದರೆ ಪದಗಳ ಬಳಕೆಯಲ್ಲಿ ಅಲ್ಲಲ್ಲಿ ಸೋತಿರುವ ದೃಶ್ಯ ಓದುಗನಿಗೆ ಕಾಣಿಸದಿರದು. ಇಲ್ಲಿನ ನೂರಾರು ಚುಟುಕುಗಳಲ್ಲಿ ವಸ್ತು ವೈವಿದ್ಯವಿದೆ, ವಿಚಾರ ಮಂಡನೆಯಲ್ಲಿ ಹೊಸತನವಿದೆ. ಆದರೆ ಭಾವವನ್ನು ವಿಸ್ತರಿಸಬಹುದಿತ್ತು. ಅನುಭವದ ಸಾಂದ್ರವೂ, ಅಡಕವೂ ಆದ ನುಡಿಗಳಿಂದ ರಚನೆಯನ್ನು ಬಿಗಿಗೊಳಿಸಬಹುದಾಗಿತ್ತು ಎಂಬ ಕೊರಗು ಅಲ್ಲಲ್ಲಿ ಉಳಿದು ಬಿಡುತ್ತದೆ. 
ಸಾಹಿತ್ಯ ಅಧ್ಯಯನದ ಮಹತ್ವವನ್ನು ವಾಸುರವರು ತಮ್ಮ ಪ್ರತಿಫಲ ಚುಟುಕುಗಳಲ್ಲಿ ಸೊಗಸಾಗಿ ಮನದಟ್ಟು ಮಾಡಿ ಕೊಟ್ಟಿದ್ದಾರೆ. 
ಸಮಯ ಸಿಕ್ಕಾಗಲೆಲ್ಲಾ 
ನಾ ಓದುತ್ತಿದ್ದೇನೆ ಸಾಹಿತ್ಯ
ಅದಕ್ಕೆ ವೈದ್ಯರು ಹೇಳಿದರು 
ನೀವು ಇರುವುದ ಬೇಡ ಪಥ್ಯ 
ಮಾತು ಆಡಿದರೆ ಹೋಯಿತು, ಮುತ್ತು ಒಡದರೆ ಹೋಯಿತು ಎನ್ನುವಂತೆ ನಾಲಿಗೆ ಶುದ್ದವಾಗಿದ್ದರೆ ನಾಡೆಲ್ಲಾ ಶುದ್ದ, ಮಾತು ಮಾಣಿಕ್ಯ ಎನ್ನುತ್ತಾರೆ ಹಲವರು, ಆದರೆ ಮಾತು ವಕ್ರವಾದರೆ ಸಮಾಜದಲ್ಲಿ ಏನೆಲ್ಲಾ ಪಜೀತಿ ಅನುಭವಿಸಬೇಕಾಗುತ್ತದೆ ಎಂಬುದನ್ನು ತಮ್ಮ ‘ನಿಂದನೆ’ ಹನಿಗವಿತೆಯಲ್ಲಿ ಸೊಗಸಾಗಿ ವಿಡಂಭಿಸಿದ್ದಾರೆ.
ಭಾಷಣ ಬಿಗಿಯವಾಗ 
ತಪ್ಪಾಗಿ ನಿಂದಿಸಿದೆ 
ಒಂದು ಜಾತಿ 
ಈಗ ಬೆಪ್ಪಾಗಿ ಹೊರಬರಲು 
ನಾ ಪಡುತ್ತಿದ್ದೇನೆ ಪಜೀತಿ!
ಪ್ರಸ್ತುತ ಸಂದರ್ಭದಲ್ಲಿ ನಿತ್ಯ ದಿನ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ಬಸ್ ಅಪಘಾತಗಳು, ದುರ್ಮರಣಗಳ ಸರಮಾಲೆಯನ್ನೆ ಓದುತ್ತೇವೆ, ನೋಡುತ್ತೇವೆ, ಕೇಳುತ್ತಿದ್ದೇವೆ. ಇಂತಹ ಪ್ರಚಲಿತ ಘಟನೆಗಳು ಸಾಮಾನ್ಯವಾಗಿ ಹಾಗೇ ಬಿಟ್ಟರೆ, ಕವಿಗಳನ್ನು ಸುಮ್ಮನೆ ಬಿಡುವುದಿಲ್ಲ ಚಿಂತನೆಗೆ ಹಚ್ಚುತ್ತೇವೆ. ಅದು ವಾಸುವನ್ನು ಹೊರತುಪಡಿಸುವಂತಿಲ್ಲ ಇಂತಹ ದುರಂತಗಳಿಗೆ ಸಾಕ್ಷಿ ಎಂಬಂತೆ ಇವರ ಈ ಹನಿಗವಿತೆಯನ್ನು ಲಕ್ಷಿಸಬಹುದು.
ಬಸ್ಸು ದುರಂತಗಳು ಸಂಭವಿಸಿ 
ಆಗಿ ಹೋಗುತ್ತಿವೆ ಜನರ ಮರಣ 
ಡಿಪೋ ಮೇನೇಜರ್‍ಗಳು ಹೇಳುತ್ತಿರೆ
‘ಉತ್ತಮ ಸ್ಥಿತಿಯಲ್ಲಿತ್ತು ಬಸ್ಸು’ ಎಂಬ ಕಾರಣ 
ಕೆಲವರಿಗೆ ಅನಿಸುತ್ತಿದೆ 
ತಿರುವು ರಸ್ತೆಗಳಲ್ಲಿ ಆಗಿಲ್ಲ ತಡೆಗೋಡೆಗಳ ನಿರ್ಮಾಣ 
ಇನ್ನೂ ಆಗಲೇಬೇಕಿದೆ ರಾಜ್ಯ ಹೆದ್ದಾರಿಗಳಲ್ಲೇ 
ರಸ್ತೆ ಅಗಲೀಕರಣ 
ಈ ಹನಿಗವಿತೆ ಅಷ್ಟೊಂದು ಹಿತವೆನಿಸದಿದ್ದರೂ ಸಾಮಾಜಿಕ ಕಳಕಳಿ ಇಲ್ಲಿದೆ. ಮಾರ್ಮಿಕ ಸತ್ಯದ ಹೊನಲಿದೆ.
ಇಷ್ಟೆಲ್ಲಾ ಹೇಳಿಯೂ ಕಾವ್ಯ ಕುಸುರಿನ ಒಂದೆರಡು ತಿಳುವಳಿಕೆಯನ್ನು ಗೆಳೆಯ ವಾಸುರವರಿಗೆ ಕೊಡದೆ ಹೋದರೆ ಆತ್ಮವಂಚನೆಯಾದೀತು. ಅವರ ಭಾಷೆ ಇನ್ನೂ ಹುರಿಗೊಳ್ಳಬೇಕಿದೆ. ಇದಿನ್ನೂ ಅವರ ಪ್ರಥಮ ಹಂತವಾದ್ದರಿಂದ ಗಂಭೀರವಾಗಿ ಚಿಂತಿಸುವ ಅಗತ್ಯವಿಲ್ಲ. ನಡೆಯುವವನು ಎಡುವುವನಲ್ಲವೇ ನಡೆಯದವನು ಎಡವುವವನೇ ಎನ್ನುವ ಹಾಗೆ ಚಿಕ್ಕ ಪುಟ್ಟ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಭಾವ ಹದವಾಗಿಸಿಕೊಳ್ಳುತ್ತಾ ಸಾಗಬೇಕಿದೆ. ಆಳವಾದ ಅಧ್ಯಯನ ಅಗತ್ಯವಿದೆ. ನಿಮ್ಮ ಸಾಹಿತ್ಯ ಕೃಷಿ ನಿರಂತರವಾಗಿ ಎಡರು ತೊಡರಿಲ್ಲದೆ ಸಾಗಲಿ, ಪಕ್ವವಾಗಲೀ, ಕನ್ನಡ ಸಾಹಿತ್ಯಕ್ಕೆ ಉತ್ತಮೋತ್ತಮ ಕೃತಿಗಳು ನಿಮ್ಮಿಂದ ಸಮರ್ಪಣೆಯಾಗಲೀ ಎಂದು ಹಾರೈಸುತ್ತೇನೆ.
ಕೊಟ್ರೇಶ್ ಎಸ್ ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ
 ಹಾಸನ -573201
ಮೊ-9483470794

ವೈವಿಧ್ಯಪೂರ್ಣ ವಿಷಯಗಳ ಹೂರಣ- ‘ವಚನ ದುಂದುಭಿ’



        ಶತಮಾನದ ವಚನಕಾರರ ವಚನಗಳನ್ನು ಓದಿ ಅವುಗಳಿಂದ ಪ್ರಚೋದನೆಗೊಂಡು ಅವುಗಳಂತಹ ಸಾಲುಗಳನ್ನು ಕಟ್ಟಿ ಬರೆಯಲು ಪ್ರಾರಂಭಿಸಿದರು. ಹೀಗೆ ಕೊಟ್ರೇಶ್‍ರವರು ತಮ್ಮವಚನಗಳ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶವನ್ನು ಪಡೆದರು. “ಗುರು ಕೊಟ್ಟೂರೇಶ” ಎಂಬ ಅಂಕಿತ ನಾಮದಿಂದ ತಮ್ಮ ವಚನಗಳನ್ನು ಪ್ರಾರಂಬಿಸಿದರು. ಇವರು “ವಚನ ದುಂದುಭಿ” ಎಂಬ ಕೃತಿಯು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಟಣೆಯಾಯಿತು. 
“ವಚನ ದುಂದುಭಿ”  ವಚನ ಸಂಕಲನ ಹಸ್ತ ಪ್ರತಿ ರೂಪದಲ್ಲಿರುವಾಗಲೇ ರಾಜ್ಯಮಟ್ಟದ “ಸಿದ್ಧಯ್ಯ ಪುರಾಣಿಕ” ಪ್ರಶಸ್ತಿ ಲಭಿಸಿತ್ತು. ವಚನೋಲ್ಲಾಸದಲ್ಲಿ ಮಿಂದು ಸೃಜನಶೀಲ ಸಾಹಿತ್ಯದಲ್ಲಿ ಸಾಕ್ಷಾತ್ಕಾರಗೊಂಡು ಆಧುನಿಕ ವಚನಕಾರರಾಗಿ ‘ವಚನ ದುಂದುಭಿ’ ಎಂಬ ಕೃತಿಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶವನ್ನು ಮಾಡಿದ ಶ್ರೀಯುತರ ವಚನಗಳು ಪ್ರಸ್ತುತÀ ಸಾಮಾಜಿಕ ಮೇಲಿನ ಭಕ್ತಿ,ಜಾತಿಮತದ ಖಂಡನೆ, ಪರಿಸರ ಪ್ರಜ್ಞೆ ಹೀಗೆ ವೈವಿಧ್ಯಪೂರ್ಣ ವಿಷಯಗಳ ಸುತ್ತ ಹೆಣೆದವುಗಳಾಗಿವೆ. 
“ಮುದವ ನೀಡುವ ಹೆಣ್ಣು ಬೇಕೆನ್ನುವರಯ್ಯ 
ಸದನದೀ ವದನ ತೋರೋ    ಸ್ತ್ರೀ ಬೇಕೆನ್ನುವರಯ್ಯ 
ಉದರದಿರೋ ಅದೇ ಜೀವನ ಚಿವುಟುವರು ಕಾಣಯ್ಯ
ಪ್ರಧಾನ ಭ್ರೂಣ ತನ್ನದೇ ಬೇಕೆನ್ನುವರಯ್ಯ 
ಆದರದಿ ಪೇಳ ನಿನ್ನ ಪೊರೆದವಳು ಹೆಣ್ಣು”
ಈ ಒಂದು ವಚನದಲ್ಲಿ ಪ್ರಸ್ತುತವಾದ ಈ ದಿನದಲ್ಲಿ ನೆಡೆಯುತ್ತಿರುವ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂದಿನ ಸಮಾಜದ ಮನಸ್ಥಿತಿಯನ್ನು ತಮ್ಮ ವಚನದಲ್ಲಿ ಚಿತ್ರಿಸಿದ್ದಾರೆ. ಶ್ರೀಯುತರು ಆಧ್ಯಾತ್ಮದ ಕಡೆಗೆ ಬಾಗಿ ತಮ್ಮಲ್ಲಿನ ಒಳಸತ್ವ ಒಳಿತನ್ನು ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ.
“ಮೇಘದಲ್ಲಿರೋ ಮಿಂಚಿನಂತೆ 
ಸಮಯದಲ್ಲಿರೋ ಕಂಪಿನಂತೆ 
ಹೊಂಗೆಯಲ್ಲಿರೋ ತಂಪಿನಂತೆ
ನೀ ತುಂಬಿ ತುಳುಕೋ ಆತ್ಮದೊಡಲ 
ಶಾಂತಿರಸ ಮೀಯುವೆ ಜಗದೊಡಲ
ಚೆನ್ನಾಗಿ ನಿಲ್ಲು ಚನ್ನ ಸತ್ವ ಸೂಸೋವರೆಗೆ
ಪೊರೆ ಎನ್ನ ಗುರು ಕೊಟ್ಟೂರೇಶ”
ಹುಟ್ಟು ಉಚಿತ ಸಾವು ಖಚಿತವಾದ ಈ ಜೀವನÀದಲ್ಲಿ ಹುಟ್ಟುವ ಪ್ರತಿಯೊಬ್ಬರು ಎನಾದರೂ ಸಾಧಿಸಿ ಹೋಗಬೇಕು. ಇಲ್ಲದಿದ್ದರೆ ಹುಟ್ಟಿಗೆ ಯಾವುದೇ ರೀತಿಯ ಅರ್ಥವಿರುವುದಿಲ್ಲ. ಎಂಬ ವಿಷಯವನ್ನು ಕೊಟ್ರೇಶ್‍ರವರು ತಮ್ಮ ವಚನದಲ್ಲಿ ಹೀಗೆ ಹೇಳೀದ್ದಾರೆ.
“ಹುಟ್ಟಿಗೆ ತಾಯ ಉದರ ತೋರಿದೆ ನೀನು
ಸಾವಿಗೆ ಭೂಮಿಯ ಒಡಲ ಸಾರಿದೆ ನೀನು
ಹಸಿರ ಜೀವಕ್ಕೆ ಉಸಿರ £ೀಡಿದೆ ನೀನು
ಭೂಮಿಯ ಸೊಂಡರ ತೊಡರಲು ನಾನು
ಉಸಿರಿಗೆ ಊರುಗೋಲಾಗಿ ನಿಲ್ಲು ನೀನು”
ಯಾವುದೇ ಕೆಲಸವನ್ನು ಮಾಡುವುದಕ್ಕೆ ಮುಂದೆ ಗುರಿ ಹಾಗೂ ಹಿಂದೆ ಗುರುವಿನ ಶಕ್ತಿ ಅತೀ ಮುಖ್ಯವಾಗಿದೆ ಅಂತಹÀ ಗುರುವಿನ ಸ್ಥಾನದಲ್ಲಿ ನೀನು ನಿಲ್ಲು ಎಂದು ಕೇಳಿಕೊಳ್ಳುತ್ತಿದ್ದಾರೆ. ನಮ್ಮ ಸ್ನೇಹದ ಬಳಗ ಹೇಗಿರಬೇಕು ಎಂಬ ವಿಷಯವನ್ನು ಒಂದು ವಚನದಲ್ಲಿ ಹೀಗೆ ಚಿತ್ರಿಸಿದ್ದಾರೆ.
“ದುರ್ಜನನೊಡನೆ ಕಾದಾಡು 
ಸಜ್ಜನನೊಡನೆ ಮೋದಾಡು 
ಹೆಜ್ಜೇನು ಹುಳದಂತೆ ಹಾರಾಡು 
ಬಿಜ್ಜೆಯ ಸೂಸುತ ತೇಲಾಡು 
ಮಜ್ಜಿಗೆ ತುಪ್ಪದಿ ಮಿಂದಾಡು 
ಹೀಗೆ ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಚಿಂತೆನೆಯ ದೃಷ್ಠಿ ಹರಿಸಿ ವಾಸ್ತವ ಅಂಶವನ್ನು ಚಿತ್ರಿಸಿದ್ದಾರೆ. 12ನೆಯ ಶತಮಾನದ ಶರಣರ ವಚನಗಳಿಗೆ ಮಾರು ಹೋಗಿ ಆಧ್ಯಾತ್ಮದ ಕಡೆ ಚಿಂತಿಸುವ ಪ್ರಯತ್ನ ಮಾಡಿದ್ದಾರೆ. ಇವರ ಒಂದು ವಚನದಲ್ಲಿ ಭಕ್ತನಿಗೆ ಇರಬೇಕಾದ ಗುಣಗಳ ಬಗ್ಗೆ ಅವರ ವೈಚಾರಿಕತೆ ಹರಿದಪರಿಯನ್ನು ಚಿತ್ರಿಸಿದ್ದಾರೆ.
“ಹಸಿದ ಹೊಟ್ಟಿಯ ಮೇಲೆ ಅಮೃತ 
ಸೂಸಿದರೆ ಹಸಿವು ತಣಿಸುವುದೇ 
ರಾಶಿ ರುದ್ರಾಕ್ಷಿಯ ಮೈ ತುಂಬ 
ಬೆಸದೆಡೆ ಕಡು ಭಕ್ತನಾಗಬಲ್ಲನೆ?
ಆಸೆಯ ದೂರಿರಿಸಿ ತನುಮನ ಧನವನರ್ಪಿಸಿ
ಅಂತರದೀ ನಿನ್ನ ಕಾಣುವನು 
ಭಕ್ತನಲ್ಲವೇ ಶ್ರೀ ಗುರು ಕೊಟ್ಟೂರೇಶ”
ಹಗರಣಗಳು ಯುಗ ಯುಗದಿಂದ ನಡೆಯುತ್ತ ಬಂದಿದೆ
“ತ್ರೇತದಿ ತೋರಿದ ಸೀತಾಪಹರಣ 
ದ್ವಾಪರದಿ ತೋರಿದ ವಸ್ತ್ರಾಪಹರಣ 
ಕಲಿಯುಗದಿ ತೋರಿದ ನೀಚ ಹಗರಣ
ಮುಂದೆನಿತು ತೋರೋ ಕೊಟ್ಟೂರೇಶ”
ಆಸೆ ಅಟ್ಟಕ್ಕೆ ಏರಿಸಿದ್ದಾರೆ ದುರಾಸೆ ಅಲ್ಲಿಂದ ದಬ್ಬುತ್ತದೆ. ಎಂಬ ಕವಿವಾಣಿಯಂತೆ. ಮನುಷ್ಯನಿಗೆ ಆಸೆ ಇರಬೇಕು ಅಂದರೆ ಅತೀ ಆಸೆ ಇರಬಾರದು. ಹೆಣ್ಣು, ಹೊನ್ನು, ಮಣ್ಣು ಇವುಗಳ ಬಗ್ಗೆ ಅತಿ ಆಸೆ ಪಡಬಾರದು. ಅತಿ ಆಸೆ ಪಟ್ಟರೆ ಮಹಾಪಾಪ ಬರುತ್ತದೆ ಎಂಬ ವಿಷಯವನ್ನು ಕೊಟ್ರೇಶ್ ಹೀಗೆ ಹೇಳುತ್ತಾರೆ.
ಅನ್ಯ ಧನಕೆ ಆಸೆಗೈಯುವುದು ಪಾಪ 
ಅನ್ಯ ಸ್ತ್ರೀಗೆ ಆಸೆಪಡುವುದು ಪಾಪ
ಅನ್ಯ ನೆಲಕೆ ಆಸೆಪಡುವುದು ಪಾಪ
ಅನ್ಯರ ನಿಂದೆ ಮಾಡುವುದು ಪಾಪ 
ಅನ್ಯ ಜಾತಿಯೆಂದು ಜರಿಯುವನು ಮಹಾಪಾಪಿ
ಎಂದನಯ್ಯ ನಮ್ಮ ಶ್ರೀ ಗುರು ಕೊಟ್ಟೂರೇಶ.
ಹೀಗೆ ಕೊಟ್ರೇಶ್‍ರವರು ಸಮಾಜದ ಆಗು ಹೋಗುಗಳ ಬಗ್ಗೆ ಸೂಕ್ಷ್ಮವಾಗಿ ಚಿಂತಿಸಿ ತಮ್ಮ ಅನುಭವಗಳ ಪಕ್ವತೆಯಿಂದ ಸರಳ ಭಾಷೆಯಿಂದ ತಮ್ಮ ವಚನಗಳನ್ನು ಬರೆದಿದ್ದಾರೆ. ಹಾಸನ ಜಿಲ್ಲೆಯ ಸಾಲಗಾಮೆಯಿಂದ ಎಸ್.ವಿ.ರಂಗಣ್ಣನವರು ಆಧುನಿಕ ವಚನಗಾರರಲ್ಲಿ ಪ್ರಮುಖರು. ಇವರ ನಂತgದÀ ಸ್ಥಾನದಲ್ಲಿರುವ ಹಾಸನದವರೆಂದರೆ ಕೊಟ್ರೇಶ್ ಎಸ್ ಉಪ್ಪಾರ್‍ರವರು.

-ದ್ಯಾವನೂರು ಮಂಜುನಾಥ್
ಹಾಸನ

ಗುರುವಾರ, ಜುಲೈ 24, 2014

ಕಲ್ಪವೃಕ್ಷ

ಅವ್ವ-ಈಟು ಹೊಟ್ತುಂಬಕಿಲ್ಲ ಇನ್ನರ್ಧ ಕೊಡವ್ವಾ, “ಇರೋ ಮೂರಲ್ಲಿ ಆರ್ಜನ ಉಣ್ಬೇಕು ಮಗಾ, ನನ್ನರ್ಧ ರೊಟ್ಟಿ ನಿನಗೆ ಕೊಟ್ಟು ಹೋಗವಂದ್ರೆ ಒತ್ತಾರೆಯಿಂದ ಹಿಡ್ಡು ಆ ಪಣ್ಯಾತ್ಮ ಅರವ್ವನ ಮಡಿಲ್ಗೆ ಹೋಗುಮಟಾ ಕೆಲ್ಸ ಮಾಡ್ಬೇಕು. ಆಗ್ಲಿ ನೀನಾ ಉಣ್ಣು ಮಗಾ ಹೊಲ್ದಾಗ ಯಾವದಾದ್ರು ಕಾಯೋ, ಸಪ್ಪೋ ತಿಂತೀನಿ, ದೇವ್ರು ಪರಪಂಚ್ದಾಗ ಯಾರ್ಗೂ ಕೊಡಬಾರ್ದ ಕಷ್ಟ ನಮ್ಗೆ ಕೊಡಬೇಕಂತ.. ಅವ್ನ ಕಣ್ಣಾಕಮಣ್ಣ ಹೊಯ್ಯಾ...!!” ಎಂದು ಚೆಲುವಕ್ಕ ಪಾರಂಪರಿಕವಾಗಿ ಬಂದಂತ ಮರದ ಕೊಣೆಗೆಯಲ್ಲಿ ಮೂರು ರೊಟ್ಟಿ ಸುಟ್ಟು ನಾಕು ಮಕ್ಕಳಿಗೆ ಪಾಲು ಮಾಡಿ ತನ್ನ ದೇವ್ರುಗೆ ಅರ್ಧ ತೆಗಿದಿಟ್ಟು, ಮಕ ತೊಕ್ಕಂಡು, ನಿನ್ನೆ ದಿನ ತಂದ ಅಕ್ಕರ್ಕಿ ಸೊಪ್ಪು ತಿಂದು ನೀರು ಕುಡ್ದು, ಹಿಡಿ ಒಡಂಕಂದ ಕುರ್ಜಿಗಿ ತಗೊಂಡು ಗೌಡ್ರು ಹೊಲ್ಕ ಕಳೆ ತಗ್ಯಾಕ ಹೋದ್ಲು.
ಇತ್ತ ಚೆನ್ನನ ಹಿರಿಮಗ ‘ಪೊಕ್ರ’ ಹಳ್ಳದ ದಂಡೀಲಿಂದ ಒಂದು ತೆಂಗಿನ ಸಸಿ ಹೊತ್ಕೊಂಡು ಬಂದು ಅವರ ಗುಡಸಲ್ಮುಂದೆ ಕುಣಿತೆಗೆದು ನೆಟ್ಟ. ಅದು ಯಾವುದೋ ಮನೆಯ ಅಂತ್ರಕಾಯಿ ಇರ್ಬೇಕು ಬಹುಶಃ ಮ್ಯಾಗಿನೂರ್ನಾರು  ಗಂಗೇಲಿ ತೇಲಿಬಿಟ್ಟರ್ಬೇಕು, ಅದು ಬಂದು ದಂಡೇ  ಮರಳಲ್ಲಿ ಹೂತು ಜಗತ್ತ ನೋಡಿರ್ಬೇಕು. ಅಣ್ಣ ನೆಟ್ಟ ಸಸಿಗೆ ‘ಪರ್ಲ’ ಒಡ್ಕು ಚಿಪ್ಪಿನಿಂದ ತಿಪ್ಪಿಗುಂಡ್ಯಾನ ನೀರ ತಂದು ಹಣಿಸುತ್ತಾ ಇದ್ದ. ಇನ್ನೊಂದೆಡೆ ಮಾಲಿ ಮರಿಯನಿಗೆ ಚಪಾತಿ, ಕೋಳಿ ಮಾಂಸದ ತುಂಡುಗಳನ್ನು ಉಣಬಡಿಸಿದಳು ! ಮರಿಯ ಚಪಾತಿ ಮುರಿದು, ತುಂಡು ಸಿಗಿದು ತಿಂದು, ಕೊನೆಗೆ ಎಲುಬುಗಳನ್ನು ಕಟಾರನೇ ಕಡಿದು ಚೀಪುವಂತೆ ನಟಿಸುತ್ತಾ ಊಟದ ಆಟದಲ್ಲಿ ಮಗ್ನರಾಗಿದ್ದರು.
ಲೇಚೆನ್ನಾ., ‘ಏನೂದೇವ್ರು...’, ‘ಆಮ್ಯಾಕ ಸೀಳ್ಯಾಂತೆ ಕೊಡ್ಲಿ ಅಲ್ಲೇ ಹಾಕಿ ಬಾ, ಸಕ್ರಿ ಚೀಲ ನಿಟ್ಟು ಮಾಡದೈತಿ ...’ ಚೆನ್ನ ಮಾದಪ್ಪ ಗೌಡ್ರ ಮನ್ಯಾಗ 20 ವರ್ಷದಿಂದ ದುಡುದ್ರು ಅವರಪ್ಪ ‘ತಿರುಕ’ ಮಾಡಿದ ಸಾಲ ಇನ್ನೂ ತೀರಿಸಿಲ್ಲ ! ಇದು ಗೌಡ್ರ ಲೆಕ್ಕ. ಗೌಡ್ರ ಹೆಂಡ್ತಿ ಮಾಲತಿ “ಚೆನ್ನಾ. ಕೆಲ್ಸ ಮುಗಿದ್ಮೇಲೆ ಉಣ್ಯಾಂತ, ಈ ಬಟ್ಟೆಗಂಟ ಹಳ್ಕ ಒಯ್ಯಿ, ಅಲ್ಲಿ ಪಾರವ್ವ ಸೆಳ್ಯಾಕ ಹೋಗ್ಯಾಳ” ಎಂದು ಅಣತಿ ಮಾಡಿದ್ಲು.
ಪರ್ಲನಿಗೆ ಅರ್ಧ ರೊಟ್ಟಿ ಸಾಕಾಗಿರಲಿಲ್ಲ. ಒಮ್ಮೆಲೇ ನೆನೆಸ್ಕೊಂಡು ಹಳ್ಳ ಬೀಳಾಮಟ ಒಂದೇ ಸವ್ನೆ ಜಿಗಿದ. ನೀರಲ್ಲಿ ದಬಾರನೆ ಬಿದ್ದ, ಹೊಟ್ಟೆ ಒಳಗೊಳಗೆ ಸುಡುತ್ತಿದ್ದರೂ ಮೇಲೆ ಗಂಗೆ ತಣ್ಣಗೆ ಮಾಡಿದ್ದಳು. ಈಸಿಕೊಂತ ಆಚೆ ದಡಕ್ಕೆ ಬಂದು... ದಿಡೀರನೆ ಸ್ವರ್ಗವೇ ಸಿಕ್ಕಷ್ಟು ಸಂತಸಪಟ್ಟ. ಕಾರಣ ಎದುರಿಗಿದ್ದ ಏಡಿಕನ್ನವ ನೋಡಿ! ತುಂತುರು ಮಣ್ಣನ್ನು ತೆಗೆದು ಕೈ ನುಗ್ಗಿಸಿದ. ತುದಿ ಬೆರಳಿಗೆ ತಗುಲುತಿದೆ, ಆದ್ರೆ ಕೈ ಇನ್ನು ಸಣ್ಣವು! ಹೊರತೆಗೆದು ದೂರದಲ್ಲಿದ್ದ ಚೂಪಾದ ಕಲ್ಲಿನ ಸಹಾಯದಿಂದ ಸುತ್ತಲೂ ಕಟೆದು ಅಗಲ ಮಾಡಿ, ಏಡಿಯ ಹೊರತೆಗೆದು ನಿಂಗೆ ಏಟೈತೆ ಸೊಕ್ಕು, ನನ್ನ ಕೈಗೆ ಸಿಗಾಕಿಲ್ಲ...? ಎಂದು ಕಾಲುಗಳನ್ನು ಕಿತ್ತೆಸೆದು, ದೊಡ್ಡ ಕಾಲುಗಳನ್ನು ಚಪ್ಪರಿಸಿದ, ಹೀಗೆ ನಾಲ್ಕೈದು ಬೇಟೆಯಾಡಿ ಹಸಿವ ನೀಗಿಸಿಕೊಂಡ.
ಇತ್ತ ಹೊಲ್ದಾಗ ಮಟ ಮಟ ಮಧ್ಯಾಹ್ನ ಧರೆಯೊಡೆÀಯನ ಸುಡಾ ಬಿಸಿಲು ಕೆಲಸಿಗರ ಬೆವರಿಳಿಸಿತ್ತು. ಆದ್ರೆ ಚಲುವಕ್ಕ ಮಾತ್ರ ಒಂದನಿ ಬೆವಯುತಿದ್ದಿಲ್ಲ ! ತಂಬಾಕ ಕಳೆ ಬೇರೆ, ಇದರ ಘಾಟ ಹಾಗೂ ಬಿಸಿಲು. ಚಲುವಕ್ಕನ ದೃಷ್ಟಿ ಮಂಜು ಕವಿದು, ತಲೆ ಸುತ್ತಿ ನೆಲಕ್ಕುರುಳಿದಳು, ಅಲ್ಲಿರೋ ಜನ ನೀರು ಚಿಮಿಸಿ, ಎಬ್ಬಿಸಿ ‘ಹುಷಾರಿದ್ದಾಂಗಿಲ್ಲ ಮನಿಗೆ ಹೋಗು ಚಲುವಿ’ ಅಂದ್ರೆ, ಚಲುವಕ್ಕ ‘ಯಾಕೋ ಒಸಿ ತಲೆ ಸುತ್ತಿದಂಗಾಯ್ತು, ನಾನು ಮನಿಗೋದ್ರೆ ನಾಳೆ ತಿನ್ನಾದ್ ಹೆಂಗೆ?’ ಎಂದು ಅದರಲ್ಲೇ ಎದ್ದು ಬಿದ್ದು ಕೆಲಸ ಮಾಡಿದ್ಲು, ಸೆರಗಿನಿಂದ ಮುಖ ಒರೆಸ್ತಾ. ಸೆರಗ ಅಂದ್ರೆ ಆ ಸೀರೆ ಕತೆ ನೆನಪಿಗೆ ಬರುತ್ತೆ, ಚಲುವಕ್ಕಾಗ ಬಿಟ್ಟು ಉಟ್ಕಾಳ್ಳಾಕ ಅದು ಒಂದೇ...  ಒಕ್ಕಲಿಗರ ಮನ್ಯಾಗ ಏಳ್ದಿಸ ಕೆಲ್ಸ ಮಾಡಿದ್ಕ ಗೌಡ ಸ್ಯಾನಿ ಕೊಟ್ಟ ಅವರ ಹಳೇ ಸೀರೆ! ಮಗ ‘ಪರ್ಲ’ ಹಾಗೂ ‘ಮರಿಯ’ ಅವರು ಬಟ್ಟೆ ಧರಿಸ್ಕೊಂಡು ಒಡಾಡಿದ್ದ ಊರಲ್ಲಿ ಯಾರ ಕಂಗಳು ಕಂಡಿರಲಿಲ್ಲ.
ಹೀಗೆ ಆರೇಳು ವರ್ಷಗಳು ಉರುಳಿದವು. ಮನೆಯ ಮುಂದಿನ ಕಲ್ಪವೃಕ್ಷ ದಿನೇ ದಿನೇ ಬೆಳೆದು ಪಸಲಿಗೆ ಬಂತು. ‘ಪೊಕ್ರು’ ಓದಬೇಕೆಂಬ ಬಲು ಆಸೆ, ತಂದೆ ತಾಯಿ ಹೇಗಾದರೂ ಓದಿಸ್ಯಾರು ಪಾಪ! ಉಣ್ಣೋಕೆ ಕೂಳಿಲ್ಲದ ಪರಿಸ್ಥಿತಿ ! ತಾನು ನೆಟ್ಟು ಬೆಳೆಸಿದ ತೆಂಗಿನ ಕಾಯಿಯ ಗುದಿಗಳ ಮೇಲೆ ಹಲವಾರು ಕನಸಿನ ಗೋಪುರ ನಿರ್ಮಿಸಿದ್ದ. ಅವುಗಳ ಮಾರಿ ಶಾಲೆಗೆ ಸೇರ್ಕೋಬೇಕು. ನಾನು ಶಾಲೆ ಓದಿ ನೌಕರಿ ತಗೊಂಡು  ಗೌಡ್ರತರ ಆಗ್ಬೇಕು ಅಂತ, ಆದ್ರೆ ಚಲುವೆಯ ದಾರಿ ಬೇರೆಯಾಗಿತ್ತು. ಅವ ಮಾರಿ ಕಾಳು - ಕಡಿ ತಂದ್ರೆ ಹೊಟ್ತುಂಬ ಉಣ್ಬೋದು. ಚೆನ್ನನ ವಿಚಾರಧಾರೆಯೇ ಬೇರೆ. “ನನ್ನೇಂತಿಗೆ ಒಂದೇ ಸೀರೆಯಿದೆ, ಆ ಕಾಯಿ ಮಾರಿ ಇನ್ನೊಂದು ತರ್ಬೇಕು” ಎಂಬ ಭಾವನೆ ಯಾಕಂದ್ರೆ ಹೊಟ್ಟೆ ಹಸಿವಾದ್ರೆ ಯಾರ್ಗೂ ಗೊತ್ತಾಗಲ್ಲ. ಆದ್ರೆ ಬಟ್ಟೆ ಹರಿದ್ರೆ ? ಅದು ಒತ್ತಟ್ಟಿಗಿರಲಿ ಮಾಲಿ, “ಯಪ್ಪಾ ಕಾಯಿ ಮಾರಿಂದ ನನ್ಗೆ ಒಂದು ಜೋಗ್ಯಾರ ಸರ ಕೊಡ್ಸು, ಎಲ್ರೂ ಸರ ಹಾಕೋತಾರೆ.”  ‘ಪರ್ಲ’ “ಯವ್ವಾ, ಅದ್ರಾಕ ಇನ್ನೂ ದೇವ್ರೂ ಹಾಲಾಕಿ ಹೋಗಿಲ್ವೇನವ್ವಾ ? ಇನ್ನೂ ಯಾವಾಗ ಹಾಕಿ ಹೊಕ್ಕಾನ... !? ನಾವಂದ್ರೆ ಅವನ್ಗೆ ಸಿಟ್ಟೇನೋ?” ಮರಿಯ....... “ಅಪ್ಪ ಅದ್ರಾಗಿನಮೊದ್ಲ ಕಾಯಿ ನನ್ಗೆ ಕೊಡ್ಬೇಕು ಕುಡಿಯಾಕೆ.......” ಅಂತ ಕೇಳಿದ್ರೆ ಚಲುವಿ ಮತ್ತು ಚೆನ್ನ ನೆರ್ಕೆಗೆ ಹಾತು ತಮ್ಮ ಪರಿಸ್ಥಿತಿ ಕಂಡು ದುಃಖಿಸುತ್ತಿದ್ದಾರೆ. ಚೆಲುವೆಯ ಕಣ್ಣೀರಿನ ಹೊಳೆ ಸದಾ ಹರಿಯುತ್ತಾ ಇದ್ದುದ್ದೇ.. ಒಂದು ದಿನ ಗೌಡರ ಪಾದ ಚೆನ್ನನ ಮನೆ ಹಾದಿ ಬೆಳಸಿ ಗುಡಸಲ್ಮುಂದೆ ನಿಲುಗಡೆಯಾಯ್ತು! ‘ಒಮ್ಮೆಲೇ ಏನ್ ದ್ಯಾವ್ರು?’ ಎಂದ ಚೆನ್ನ.
ಹೇಳಿಕಳ್ಸಿದ್ರೆ ನಾನೇ ಬರ್ತಿದ್ದೆ... “ಏನೂ ಇಲ್ಲ ಹಾಂಗ ತೋಟದ ದಿಕ್ಕ ಕಣ್ಹಾಕಿ ಬರಾವ ಅಂತೊಂಟೀನಿ” ಮಾತು ಮುಂದ್ವರಿಸುತ್ತಾ ಈ ತೆಂಗು ನಿನ್ನದೇನ್ಲಾ ಈಸ್ದಿನ ಹೇಳೇ ಇಲ್ಲಾ ? ಬಹು ಪಸಂದಾಗಿ ಬೆಳಸಿ ಕಂಡ್ಲ, ಬಾ ಇಲ್ಲೇ ಹೋಗಿ ಬರುವಾ,” ಚನ್ನ ಗೌಡರ ಕರಿನೆರಳ ತುಳಿತ ಬಾಲವಾದ, ‘ಚೆನ್ನಾ ಬಹಳ ಬಿಸಿಲು, ಒಸಿ ಎಳ್ನೀರು ಕೆಡವ್ತೀಯಾ?’ ನೀವ್ ಕೇಳಿದ್ರೆ...ಇಲ್ಲ ಅನ್ನಾಕ ಆಗ್ತದಾ ...  ಒಸಿ ತಡ್ರಿ ಐದನ್ನಾದ್ರಾಗ  ಕೆಡವಿಬಿಡ್ತೀನಿ”, ಒಸಿ ಹುಷಾರ್ಲಾ ಚೆನ್ನಾ ಗಮ್ಮಾ ಜಾಸ್ತಿ ಹಾಗೈತಿ.
ಚನ್ನ ಓತಿಕ್ಯಾತದಾಗೆ ಸರಸರ ಏರಿ ನಾಲ್ಕಾಯಿ ಉದುರಿಸ್ದ. ಆದ್ರೆ... ಇಳಿಬೇಕಾದ್ರೆ ಹಣ್ಣರ್ತ ಗರಿ ಹಿಡಿದು ಅದ್ರಮ್ಯಾಗ ಭಾರಬಿಡೋದೊಂದ ಸವ್ನ, ಸುಮಾರು ಮೂವತ್ತಡಿ ಎತ್ತರದಿಂದ ದಬಾರನೆ ಬಿದ್ದ, ಕ್ಷಣದಲ್ಲೇ ಪ್ರಜ್ಞಾಹೀನನಾದ. ಗೌಡ್ರು ಬಾಯಿಬಾಯಿ ಬಡುಕೊಂಡ ಮೇಲೆ ಸುತ್ತಲಿನ ಜನ ಬಂದು ಸೋರುತ್ತಿದ್ದ ರಕ್ತಕ್ಕೆ ಅರಿಬಿಸುತ್ತಿ ಊರಾಕ ತಂದ್ರು, ಆ ಸುದ್ದಿ ಕೇಳಿ ಚಲುವಕ್ಕಾಗ ಎದೆ ದಡಾರನೆ ಒಡೆದಂಗಾಯ್ತ ಮಾತೇ  ಹೊರಡುತ್ತಿಲ್ಲ. ನಾಲಿಗೆ ಪಸೆ ಹಾರಿದೆ, ಕಣ್ಣಲ್ಲಿ ಮಾತ್ರ ಕಂಬನಿ ಕೋಡಿಯಾಗಿದೆ. ಮಕ್ಕಳು ಲೋಬೋ ಎಂದು ಘೀಳಿಟ್ಟಿವೆ. ಊರಲ್ಲಿ ಯಾವ ದವಖಾನೆನೂ ಇಲ್ಲ ! ಪಕ್ಕದೂರಲ್ಲಿ ಇರೋದು ಐದು ಪರ್ಲಾಂಗ ಹೋಗ್ಬೇಕು. ಅದೆಂತ ಕೆಟ್ಟ ಘಳಿಗೆ. ಅದ್ರಾಗ ಬ್ಯಾರೆ ಗೌಡ್ರ ಚಕಡಿನೂ ಊರಾಗಿಲ್ಲ. ಚಲುವಿ ಹುಯ್ಯೋ... ಅಂತ ಗೋಳಿಡುತ್ತಾ ಯಾರಾದ್ರೂ ಕಾಪಾಡ್ರಿ, ನನ್ನ ತಾಳೀ ಉಳ್ಸಿಕೊಡಿ ಎಂದು ಸುತ್ತಲೂ ಅಂಗಲಾಚುತ್ತಾಳೆ. ಆದರೆ ಅಲ್ಲಿರೊರೆಲ್ಲ ಅಸಾಯಕರೇ ... ಆದ್ರೆ ಮೂಲಿ ಮನೆ ಸಂಗಣ್ಣ ಬೇಗ ಚಕ್ಕಡಿ ಕಟ್ಕೊಂಡು ಬಂದು ಚನ್ನನ ದೇಹವನ್ನ ಅದ್ರಲ್ಲಿ ಹಾಕ್ತಿದ್ದಂಗೆ ಅಲ್ಲಿ ಕೆಲ ಬಾಯಿಗಳು ದೊಡ್ಡದಾಗ್ಲೆ ಹೋದಂಗೈತಿ ಸುಮ್ನೆ ಯಾಕೆ ಒಯ್ತಿರಾ ? ಎಂದಾಗ ಚೆಲುವಿಗೆ ಆಕಾಶವೇ ತಲೆಮ್ಯಾಗ ಬಿದ್ದಂಗಾಯ್ತು. ಆದ್ರೂ ... ಗೌಡ್ರ ಪರವಾನಗಿ ಪಡೆದು ಚಕ್ಕಡಿ ಜೋರಾಗಿ ಓಡಿಸಿದ ಮರಿಗಳು ಹಿಂದೇನೇ... ಅಪ್ಪಾ... ಅಪ್ಪಾ ಎಂದು ಹಿಂಬಾಲಿಸಿದ್ವು.
ದವಖಾನೆ ತಲುಪಿ ಸಂಗಣ್ಣ ವೈದ್ಯರನ್ನ ಕರೆಯತ್ತಿದ್ದಂಗೆ, ಇದ್ದೊಂದು ಸಣ್ಣ ಜೀವ ಚೆಲುವಿಯ ತೊಡೆಮ್ಯಾಲೆ ಅಗಲಿಹೋಯ್ತು. ನಂತರ ಶವಸಂಸ್ಕಾರ ಸಂಪ್ರದಾಯಗಳೆಲ್ಲಾ ಮುಗಿದ್ಯ್ಮಾಲೆ ಬಿಳಿದಿರೇಸು ಚಲುವಿಯ ಆವರಿಸ್ತು. ಚೆಲುವೆ ಹಾಸಿಗೆ ಹಿಡಿದ್ಲು, ಮಕ್ಕಳು ಸಹ ಗೋಳೋ ಎಂತಿದ್ವು. ಮೂರ್ದಿನಾದ್ರು ಚೆಲುವಿ ಕರುಳು ನೀರ ಕಂಡಿರಲಿಲ್ಲ. ಅವ್ರು, ಇವ್ರು ತಂದು ಕೊಟ್ಟ ರೊಟ್ಟಿ, ಇಂಡಿ ಮಕ್ಕಳು ತಿಂದು ಜೀವ ಹಿಡ್ಕಂಡಿದ್ವು, ಊರಾಗ ಬಲ್ಲಂತರು ಬಂದು “ಚೆಲುವಕ್ಕ ನೀನೇ ಹಿಂಗೆ ಅತ್ಕೋಂತ ಕುಂತ್ರೆ ಮಕ್ಕಳ ಗತಿ ಏನಾಗ್ ಬೇಕು ಅಂತೀದಿ ? ನಿನ್ನೆಜಮಾನ್ರ ಸಾವಿಗೆ ಆ ಗೌಡನೇ ಕಾರಣ ಏನಾದ್ರು ಪರಿಹಾರ ಕೊಡಿ ಅಂತ ಒಸಿ ಕೇಳ್ಬಾರ್ದ ? ಅದನ್ನೇನ್ ನೀನು ಪುಕ್ಕಟೆ ಕೇಳ್ತಿಯಾ ? ಇಲ್ಲ.. ! ನಿನ್ನ ಗಂಡ ಈಸು ದಿನ ಅವರ್ಮನೇಲಿ ಜೀತಾಗಿರಲಿಲ್ಲ . . . .” ಎಂದು ಇದ್ದ ಪರಿಸ್ಥಿತಿ ತಿಳಿಸಿದ್ರೇ ಹೊರತು ಯಾರೂ ಮುಂದೆ ನಿಂತು ನ್ಯಾಯ ಒದಗಿಸಲಿಲ್ಲ.
ಮರುದಿನವೇ “ಚೆಲುವಕ್ಕ”, ಪೊಕ್ರನ್ನ ಕರ್ಕೊಂಡು ಗೌಡ್ರ ಮನೆ ಕಡೆ ಹೆಜ್ಜೆ ಹಾಕಿದಳು. ಜನ ಎಷ್ಟು ದಿವಸ ಅಂತಾ ಉಣ್ಣಾಕ ಕೊಡ್ತಾರ, ಅತ್ತ ಕಡೆ, ಅವ್ವ, ಅಣ್ಣ, ಗೌಡ್ರ ಮನೆ ಹಾದಿ ಹಿಡಿದ್ರ, ಇತ್ತ ಮರಿಯ ಹೊಟ್ಟೆ ತಾಳ ಹಾಕೋದನ್ನ ಸಹಿಸ್ಕೋನಾಕಾಗ್ತಾಯಿಲ್ಲ.. . . .  ಹಾಗೆ ಓಣಿ ದಾರಿ ಹಿಡಿದ. ಶಾನಭೋಗರ ಮನೆ ಮುಂದೆ ರುದ್ರಮ್ಮ ತಮ್ಮ “ಪಿಂಕಿ”ಗೆ ಅನ್ನ ಹಾಕ್ತಾಯಿದ್ದದ್ದು ಕಂಡು ಬಾಯಲ್ಲಿ ನೀರೂರಿತು. ಹತ್ತಿರ ಬಂದು ನಿಂತ, ಪಿಂಕಿ ಕೆಂಗಣ್ಣಿನಿಂದ ನೋಡುತ್ತಾ ಗುರ್ರ್ . . ಗುರ್ರ್. . . ಎಂದು ಗದರಿಸಿತು. ಧ್ವನಿ ಕೇಳಿ ರುದ್ರಮ್ಮ  ಹೊರಬಂದು ನೋಡಿದರೆ ಮರಿಯ. . . . ! ‘ಏ ಪರದೇಶಿ ನೀನ್ಯಾಕೋ ಇಲ್ಲಿಬಂದೆ ? ಎಲ್ಯಾದ್ರೂ ಹಾಳಾಗಿ ಹೋಗೋ’, “ಅಮ್ಮಾ ತುಂಬಾ ಹಸಿವಾಗ್ತಿದೆ, ಅದಕ್ಕಾಕಿದಿರಲ್ಲಾ ಅದು ಇನ್ನೂ ಸ್ವಲ್ಪ ಇದ್ರೆ ಕೊಡಮ್ಮಾ. ಹೊಟ್ಟೆ ಬಹಳ ಕಡಿತಾಯಿದೆ.”  ಎಂದ ಮರಿಯ. “ನಾನು ಹೇಳ್ಯೋದ್ ಕೇಳಿಸ್ತಾ ಐತಾ, ಇಲ್ಲ. . ? ನಮ್ಮ ಪಿಂಕಿಗೆ ಸಂಪೂರ್ಣ ಸಿಗಲ್ಲಾ ನಿಂದ್ ಬ್ಯಾರೆ ಕೇಡು” ಎಂದು ಕದ ಹಾಕಿದ್ಲು ರುದ್ರಮ್ಮ.
ಇತ್ತ ಗೌಡ್ರ ನಿವೇಶನ್ದಾಗ . . “ ದೇವ್ರೂ ಇಲ್ಲಾನ್ಬ್ಯಾಡಿ, ನಿಮ್ಮ ಕಾಲಿಗೆ ಬೀಳ್ತೀವಿ ದಮ್ಮಯ್ಯಾ ಅಂತೀನಿ . .  ಒಸೀ ಹಣನೋ . . ಕಾಳೋ . . ಕಡಿನೋ ಕೊಟ್ರೇ ಬದಿಕೊಂತೀನಿ, ನಾಕೂ ಮಕ್ಕಳ್ನ ಸಾಕ್ಬೇಕು, ಬಾಳ ಕಷ್ಟಾಗೈತಿ.    “ನೋಡು ಚೆಲ್ವಿ ನಿಮ್ಮ ಮಾವ ಮಾಡಿದ ಸಾಲವನ್ನೇ ನಿನ್ನೆಜಮಾನ ತೀರಿಸಿಲ್ಲ ? ನೀವೇ ಇನ್ನೂ ಜೀವನ ಪೂರ್ತಿ ನಮ್ಮೇನೇಲಿ ದುಡಿದರೂ ತೀರ್ಸಾಕ್ಕಾಗಲ್ಲ . . . .  ! ಅಂತದ್ರಾಗ . . . . ಹಣ. ಕಾಳು, ಕಡಿ ಅಂದ್ರೆ ಹೆಂಗಾಗ್ತೈತಿ, ಕೊಡಕ್ಕಾಗಲ್ಲ, ಪೊಕ್ರುನ್ನ ಮತ್ತು ಮರಿಯನ್ನ ನಮ್ಮನೇಲಿ ಕೆಲ್ಸಕ್ಕೆ ಇಟ್ಟುಬಿಡು ಸಗಣಿ, ಕಸ, ಮೇವು ಅಂದ್ಕಂತ ಇಲ್ಲೇ ಇದ್ದು ಉಣ್ಕಂತ ಇರ್ಲಿ, ಇದ್ರಮ್ಯಾಲೆ ನಿನ್ನಿಷ್ಟ, ಏನೋ ನಿನ್ಗಂಡ ನಮ್ಮನೇಲಿ ಬಹು ದಿಸದಿಂದ ದುಡಿದವ್ನೇ ಎಂದು ಅವಕಾಶ ಕೊಟ್ಟೀನಿ” ಎಂದು ಒಳ ನಡೆದ.
ಅಂದು ರಾತ್ರಿ ಚೆಲ್ವಿಗೆ ನಿದ್ರೆ ನೊರಡಿ ದೂರ! ತನ್ನ ಜೀವನದ ಬಗ್ಗೆಯೇ ಚಿಂತಿಸುತ್ತಿದ್ದಳು, ತನಗೆ ಉಣ್ಣಾಕ ಇರ್ದಿದ್ರು, ಮಕ್ಕಳ್ಗೆ ಎಲ್ಲಾದ್ರು ತಂದು ಉಣಿಸಿ ಮಲಗಿಸಿದ್ಲು. ಹೊರಗೆ ಬೋರ್ ಎಂದು ಜಡಿ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಗುಡಿಸಲು ನೀರು ತುಂಬಿದ್ದರೂ ಮಕ್ಕಳು ಮಕ್ಕೊಂಡ ಜಗುಲಿಯ ಹತ್ತಿರಲಿಲ್ಲ. ಚೆಲುವಕ್ಕ ಬೊಗಸೆಯಿಂದ ನೀರನ್ನು ಹೊರ ಹಾಕುತ್ತಿದ್ದರೆ, ಇನ್ನೊಂದೆಡೆ ಗುಡುಗು, ಸಿಡಿಲುಗಳು ಬೆಚ್ಚಿ ಬೀಳಿಸುವಂತ್ತಿದ್ದವು. ಅಷ್ಟರಲ್ಲಿ ಬೋರ್ ಎಂದು ಶಬ್ದ ಮಾಡುತ್ತಾ ಬಂದ ಭೀಕರ ಬಿರುಗಾಳಿ ಮನೆಯನ್ನು ನೆಲಸಮ ಮಾಡಿತು. ಚೆಲುವಕ್ಕ ಬಾಗಿಲಲ್ಲಿ ಇದ್ದುದರಿಂದ ಏನೂ ಅಪಾಯವಾಗಲಿಲ್ಲ. ಆದರೆ ಇಡೀ ಗುಡಿಸಲೇ ಕಳಚಿ ಮಕ್ಕಳ ಮೇಲೆ ಬಿದ್ದಿತ್ತು.  ಅಂತದರಲ್ಲೇ ಒದ್ದೆಯಾಗಿದ್ದರೂ ಕರಳು ಮಕ್ಕಳಿಗೋಸ್ಕರ ಕಾತರಿಸುತ್ತಿತ್ತು. ಕೂಗಿಕೊಂಡರೂ ಧ್ವನಿ ಹೊರಡುತ್ತಿಲ್ಲ. ಎದೆ ಬಡಿದುಕೊಳ್ಳುತ್ತಿದ್ದಾಳೆ ಏನೂ ಪ್ರಯೋಜನ ? ಮಕ್ಕಳ ಮೇಲೆ ಬಿದ್ದ ಮೂರ್ನಾಲ್ಕು ಬೆಲುಗುಗಳನ್ನು ಎತ್ತಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಷ್ಟೊತ್ತಿಗೆ ಜನ ಸೇರಿ ಅವುಗಳನ್ನು ತೆಗೆಯುವಷ್ಟರಲ್ಲಿ ಅವರಾಗಲೇ ತಂದೆಯ ದಾರಿ ಹಿಡಿದಿದ್ದರು. ಇದನ್ನೆಲ್ಲಾ ಸಹಿಸಿಕೊಂಡು ಹೃದಯ ತಳಮಳ ಗೊಳ್ಳುತ್ತಾ ಕಣ್ಣಲ್ಲಿ ಹರಿಯುವ ಶೋಕ ಕಂಬನಿ ನಿಧಾನವಾಗಿ ಧಾರಾಕಾರವಾಗಿ ಹರಿಯುವ ಮಳೆನೀರಲ್ಲಿ ಬೆರೆತು ಲೀನವಾಯಿತು.


ಏಳಲಾರದ ಸ್ಥಿತಿ ಆದರೂ ಮಕ್ಕಳ ಮಾರೆಯ ನೋಡುವಾಸೆ, ಭಾರವಾದ ದುಃಖ ತ್ರಪ್ತ ಹೃದಯವನ್ನು ಹೊತ್ತು ಮಕ್ಕಳ ಬದಿಗೆ ಬಂದು ಕೊಡುವ ಘಳಿಗೆಯಲ್ಲಿ ಮನೆಯ ಮುಂದಿದ್ದ ಕಲ್ಪವೃಕ್ಷ ದಢಾರನೇ ಚೆಲ್ವೆಯ ಮಸ್ತಕದ ಮೇಲೆ !

ಬುಧವಾರ, ಜುಲೈ 23, 2014

ಸಾಮಾಜಿಕ ಕೈಗನ್ನಡಿ- ‘ಶಿಕ್ಷಕ, ಮಗು ಮತ್ತು ಶಿಕ್ಷಣ’- ವಾಸುಸಮುದ್ರವಳ್ಳಿ

ಕೃತಿ ವಿಮರ್ಶೆ

ಕೃತಿ ಲೇಖಕರು : ಕೊಟ್ರೇಶ್ ಎಸ್ ಉಪ್ಪಾರ್

ನಿಜ ಹೇಳಬೇಕೆಂದರೆ ಈ ಪುಸ್ತಕವನ್ನು ಓದಲು ಕುಳಿತಾಗ ಈ ಪುಸ್ತಕದಲ್ಲಿ ಅಂತಹದ್ದೇನು ಇರುತ್ತೆ? ಅದೇ ಶಿಕ್ಷಕ, ಅದೇ ಮಗು, ಅದೇ ಶಿಕ್ಷಣವೆಂದು ವಿಲಾಸಿತನದಿಂದಲೇ ಒಂದೆರಡು ಪುಟ ತಿರುವಿದೆ. ನಂತರವೇ ನನ್ನ ತಲೆಗೆ ಸ್ವಲ್ಪ ಕೆಲಸಕೊಟ್ಟತು. ಯಾವ  ಪುಸ್ತಕವೂ ಓದುಗನಿಗೆ ಚಿಂತನೆ ಮಾಡಲು ಕೆಲಸ ಕೊಡುತ್ತದೋ ಅಂತಹ ಪುಸ್ತಕಗಳನ್ನು ಕೊಂಡು ಓದುವುದರಲ್ಲಿ ತಪ್ಪಿಲ್ಲ. ನಿಮಗೂ ಈ ಪುಸ್ತಕದಲ್ಲಿ ತಲೆಗೆ ಕೆಲಸ ಕೊಡುವ ವಿಷಯಗಳಾದರೂ ಏನು? ಎಂದು ತಿಳಿದುಕೊಳ್ಳುವ ಕುತೂಹಲವಿರುತ್ತದೆಂದು ಭಾವಿಸಿದ್ದೇನೆ.
ಶಿಕ್ಷಕ : ದೇಶದ ಸತ್ಪ್ರಜೆಯನ್ನು ರೂಪಿಸುವಲ್ಲಿ ಶಿಕ್ಷಕನ ಪಾತ್ರ ಬಹುಮುಖ್ಯ. ಇಂತಹ ಶಿಕ್ಷಕ ಹೇಗಿರಬೇಕು? ಭೋಧನೆಗೂ ಮುನ್ನ ಶಾಲಾ ಕೊಠಡಿ ಹೇಗಿರಬೇಕು? ಮಕ್ಕಳಿಗೆ ಶಿಕ್ಷೆ ಕೊಡುವುದು ಸರಿಯೆ? ಮಕ್ಕಳಲ್ಲಿ ಅನಪೇಕ್ಷಿತ ವರ್ತನೆಗಳು ಕಂಡುಬರುವುದಕ್ಕೆ ಕಾರಣವೇನು? ಎಂಬೆಲ್ಲಾ ಪ್ರಶ್ನೆಗಳಿಗೆ ಗೊಂದಲವಿಲ್ಲದಂತೆ ಸರಳ ರೂಪದಲ್ಲಿ ಉತ್ತಮ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಸಾಹಿತಿಗಳಾದ ಕೊಟ್ರೇಶ್ ಎಸ್ ಉಪ್ಪಾರರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ ಕೆಲವು ಸರ್ಕಾರದ ಯೋಜನೆಗಳನ್ನು ನಿರ್ವಹಿಸುವಲ್ಲಿ ಶಿಕ್ಷಕನಿಗೆ ತೊಂದರೆ ಆಗುತ್ತಿದೆಯೇ? ಅಥವಾ ಇಲ್ಲವೆ? ಎಂದು ತಿಳಿಸುವ ಗೋಜಿಗೆ ಹೋಗಿಲ್ಲ. ಆದರೂ ಮಕ್ಕಳಿಗೆ ಶಿಕ್ಷೆ ಕೊಡುವುದು ಸರಿಯೆ? ಎಂಬ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಾಡುವ ಭೋಧನೆ ‘ಭೋರ್ಗಲ್ಲ ಮೇಲೆ ನೀರು ಸುರಿದಂತೆ’ ಎಂದು ತಿಳಿಸಿರುವುದು ಅಕ್ಷರಸಹ ಸತ್ಯ. ಶಿಕ್ಷಕನಾದವನು ಎಲ್ಲವನ್ನೂ ಕಲಿಸಲಾರ ಎಂಬುದನ್ನು ಸಹ ನಮ್ರವಾಗಿ ಒಪ್ಪಿಕೊಂಡಿದ್ದಾರೆ.
ವಿದ್ಯಾರ್ಥಿ:- ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎಂದರೆ ಭಯ ಸಹಜ. ಅದನ್ನು ಸ್ವೀಕರಿಸುವುದು ಹೇಗೆ? ಕಲಿಕಾ ನ್ಯೂನ್ಯತೆ ಇರುವ ಮಕ್ಕಳನ್ನು ಗುರುತಿಸುವುದು ಹೇಗೆ? ಹಾಗೂ ಮಕ್ಕಳು ಕಲಿಕೆಯಲ್ಲಿ ಹಿನ್ನಡೆ ಅನುಭವಿಸಲು ಕಾರಣವೇನು? ಎಂಬಂತಹ ಪ್ರಶ್ನೆಗಳಿಗೆ ಉತ್ತರ ದೊರಕಿಸುವಲ್ಲಿ ಸಫಲರಾಗಿದ್ದಾರೆ. ವಾಯುವಿಹಾರ, ವ್ಯಾಯಾಮ, ಯೋಗ, ಕ್ರೀಡೆ ಮುಂತಾದ ಚಟುವಟಿಕೆಗಳು ಮಾನಸಿಕ ಒತ್ತಡವನ್ನು ದೂರವಿಡುತ್ತದೆಂಬುದು ಸರ್ವಸಮ್ಮತವಾದುದು. ಮನೆಯಲ್ಲಿ ಪೋಷಕರ ಕಲಹವು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಂಬ ಸೂಕ್ಷ್ಮ ಸಂದೇಶದ ಎಚ್ಚರಿಕೆಯನ್ನು ನೀಡಿದ್ದಾರೆ.
ಪೋಷಕರು:- ಮಗು ಚೆನ್ನಾಗಿ ಓದುತ್ತಿಲ್ಲವೆಂಬ ಅಭಿಪ್ರಾಯಗಳು ಕೆಲವು ಪೋಷಕರಲ್ಲಿ ಖಂಡಿತವಾಗಿಯೂ ಮೂಡುತ್ತವೆ. ಇನ್ನೂ ಕೆಲವು ಪೋಷಕರು ನಮ್ಮ ಮಗುವನ್ನು ಒಳ್ಳೆಯ ಶಾಲೆಗೆ ಸೇರಿಸಲಿಲ್ಲ ಎಂಬ ಹಿಂಜರಿಕೆಯೂ ಇರುತ್ತದೆ. ಆದರೆ ಮಕ್ಕಳ ಓದಿನಲ್ಲಿ ನಮ್ಮ ಪಾತ್ರವೇನು? ಎಂಬುದರ ಬಗ್ಗೆಯೇ ಯೋಚಿಸುವುದಿಲ್ಲ. ಎಂಬುದೆಲ್ಲವನ್ನು ಪೋಷಕ ಮತ್ತು ಓದುಗರಿಗೆ ಮನಮುಟ್ಟುವಂತೆ ತಿಳಿಸಿದ್ದಾರೆ. 
ಇದೇನು! ಇವ್ನು ಕೇವಲ ಪುಸ್ತಕದಿಂದ ಏನೇನು ತಿಳಿದುಕೊಳ್ಳಬಹುದನ್ನಷ್ಟೆ ಹೇಳುತ್ತಿದ್ದಾನಲ್ಲ ಎಂದುಕೊಳ್ಳಬೇಡಿ. ಚರ್ಚೆ ಮಾಡುವ ಅನೇಕ ವಿಷಯಗಳಿವೆ.
ಶಿಕ್ಷಣ :- ಶಿಕ್ಷಣದಿಂದ ಸಮಾಜದಲ್ಲಿ ಮಕ್ಕಳನ್ನು ಸತ್ಪ್ರಜೆಗಳಾಗಿ ನಿರ್ಮಿಸಲು ಸಾಧ್ಯವೆಂಬುದನ್ನು ನಾನೂ ಸಹ ನಮ್ರವಾಗಿ ಒಪ್ಪಿಕೊಳ್ಳುತ್ತೇನೆ. ಇತ್ತೀಚಿನ ದಿನಗಳಲ್ಲಂತೂ ನನ್ನನ್ನು ಸೇರಿದಂತೆ ಕೆಲವು ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ರೂಪಿಸುವುದನ್ನು ಗುರಿಯಾಗಿಟ್ಟುಕೊಂಡಿದ್ದಾರೆ. ಎಂದರೆ ಅತಿಶಯೋಕ್ತಿಯಾಗಲಾರದು. ಉತ್ತಮ ಶಿಕ್ಷಣ ಖಾಸಗಿ ಶಾಲೆಗಳಲ್ಲಿ ದೊರೆಯುತ್ತದಾ? ಅಥವಾ ಸರ್ಕಾರಿ ಶಾಲೆಗಳಲ್ಲಾ? ಎಂಬ ಚರ್ಚೆಗೆ ನಮ್ಮ ಲೇಖಕರು ಹೋಗಿಲ್ಲವಾದರೂ ಶಿಕ್ಷಕ ಮತ್ತು ಮಗುವಿನ ಸಂಬಂಧ, ಗುಣಾತ್ಮಕ ಶಿಕ್ಷಣ ನೀಡುವುದರಿಂದ ಮಕ್ಕಳನ್ನು ಸತ್ಪ್ರಜೆಗಳಾಗಿ ನಿರ್ಮಿಸಬಬಹುದು ಎಂಬಂತಹ ಉಪಯುಕ್ತ ವಿಷಯಗಳನ್ನು ಚರ್ಚಿಸಿದ್ದಾರೆ. ಶಿಕ್ಷಣಕ್ಕೆ ಪೂರಕವಾಗಿರುವಂತಹ ಚಲನಚಿತ್ರಗಳ ವೀಕ್ಷಣೆಗೆ ಅನುಕೂಲ ಮಾಡಿಕೊಡಬೇಕೆಂದು ಹೇಳುವುದನ್ನು ಮರೆತಿಲ್ಲ. ನಾಟಕಗಳು ಮರೆಯಾಗುತ್ತಿರುವ ಕಾಲದಲ್ಲಿಯೂ ವೈಚಾರಿಕ ನಾಟಕಗಳು ಮಕ್ಕಳ ವ್ಯಕ್ತಿತ್ವ ರೂಪಿಸಬಲ್ಲವು ಉದಾ:- ಗಾಂಧೀಜಿಯವರು ಸತ್ಯಹರಿಶ್ಚಂದ್ರ ನಾಟಕದಿಂದ ಪ್ರಭಾವಿತರಾದಂತೆ ಎಂಬೆಲ್ಲ ವಿಷಯಗಳನ್ನು ತಿಳಿಸಿರುವುದು ಓದುಗನಿಗಾಗಲಿ, ವಿದ್ಯಾರ್ಥಿಗಳಿಗಾಗಲಿ ಪುಸ್ತಕವನ್ನು ಮತ್ತೊಮ್ಮೆ ಓದಬೇಕೆನಿಸುತ್ತದೆ. ಇದೇನು! ಈ ಪುಸ್ತಕ ಶಿಕ್ಷಕ-ಮಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿರುವುದರಿಂದ ಅವರಷ್ಟೆ ಓದಿದರಾಯ್ತು, ಓದುಗರಿಗೇನು ಅನುಕೂಲವಿಲ್ಲವೆಂದುಕೊಳ್ಳಬೇಡಿ.
ಓದುಗನಿಗೂ ನೆರವು:- ಓದುಗರಿಗೆ ನೆರವಾಗುವಂತೆ ಓದುವುದು ಹೇಗೆ? ಓದುವುದು ಮನಸಲ್ಲ ಮೆದುಳು! ಎಂದರೆ ನಂಬುತ್ತೀರಾ? ನಾನು ಕೂಡ ಮೊದಲಿಗೆ ಆಶ್ಚರ್ಯಪಟ್ಟೆ. ಈ ಪುಸ್ತಕವನ್ನು ಓದಿದ ಮೇಲೆ ಸುಮ್ಮನೆ ಒಪ್ಪಿಕೊಂಡೆ. ಕೆಲವರು ನಿಧಾನವಾಗಿ ಓದುತ್ತಾರೆ, ಕೆಲವರು ರಭಸವಾಗಿ ಓದುತ್ತಾರೆ. ಹಾಗಾದರೆ ಯಾವ ಓದು ಒಳ್ಳೆಯದು? ವೇಗವಾಗಿ ಓದುವುದು ಹೇಗೆ? ವೇಗವಾಗಿ ಓದುವವರ ಗುಣಲಕ್ಷಣಗಳೇನು? ಎಂಬುದನ್ನು ವೈಜ್ಞಾನಿಕವಾಗಿ ಚರ್ಚಿಸಿದ್ದಾರೆ. ಅಷ್ಟೇ ಅಲ್ಲದೆ ಜಾನ್ ಎಪ್ ಕೆನಡಿ, ಜಾರ್ಜ್ ಬರ್ನಾಡ್ ಷಾ, ಮ್ಯಾಗ್ಲಿಯ ಬೆಕಿ ಅತಿ ವೇಗದ ಓದುಗಾರರೆಂದು ಈ ಪುಸ್ತಕದ ಮೂಲಕ ತಿಳಿದುಕೊಂಡಿದ್ದೇನೆ.
ಮಗು ಸುಳ್ಳು ಹೇಳುವುದು ಯಾಕೆ?:- ನಾನು ಮೊದಲಿಗೆ ಮಗು ಹೋಂ ವರ್ಕ್ ಮಾಡದಿದ್ದಾಗ ಸುಳ್ಳುಹೇಳುತ್ತದೆ ಅಂದುಕೊಂಡಿದ್ದೆ. ಆದರೆ ವಿಚಾರವಂತರಾದ ನಮ್ಮ ಸಾಹಿತಿಮಿತ್ರರು ಆ ರೀತಿ ಹೇಳಿಲ್ಲ. ‘ಮಗುವನ್ನು ಅತಿಯಾದ ದಂಡನೆಗೆ ಒಳಪಡಿಸಿದಾಗ’ ಆ ಮಗು ಸುಳ್ಳು ಹೇಳುತ್ತದೆ. ‘ಶಿಕ್ಷಕರು ಶಿಕ್ಷೆಯನ್ನು ಮಗುವು ತೋರ್ಪಡಿಸುವ ಅನಪೇಕ್ಷಿತ ವರ್ತನೆ ಅಥವಾ ಕೃತ್ಯಕ್ಕೆ ಹೊರತು ಮಗುವಿಗಲ್ಲ’ ಎಂದು ಹೇಳಿರುವ ವಿಚಾರವನ್ನೊಮ್ಮೆ ನಿಧಾನವಾಗಿ ಆತ್ಮಾವಲೋಕನ ಮಾಡಿಕೊಂಡರೆ ಅವರು ಹೇಳಿರುವ ವಿಚಾರ ಉತ್ತಮ ಸಮಾಜದ ನಿರ್ಮಾಣಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ ಎಂದರೆ ತಪ್ಪಾಗಲಾರದು.
ಚರ್ಚಿಸಬೇಕಿದ್ದುದು :- ಅಕ್ಷರದಾಸೋಹ, ಕ್ಷೀರಭಾಗ್ಯ ಯೋಜನೆಗಳು ಸರ್ಕಾರಿ ಶಾಲೆಗಳಲ್ಲಿ ಉಪಯುಕ್ತವಾಗುತ್ತಿದೆಯೇ? ಗುಣಾತ್ಮಕ ಶಿಕ್ಷಣವನ್ನು ನೀಡುವುದಕ್ಕೆ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳೇನು? ಕೆಲವರು ಸರ್ಕಾರಿ ಶಾಲೆಯ ಶಿಕ್ಷಕರ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದಕ್ಕೆ ಕಾರಣಗಳೇನು? ಎಂಬೆಲ್ಲಾ ವಿಷಯಗಳನ್ನು ಚರ್ಚಿಸಬಹುದಿತ್ತೇನೊ ಅಂತ ಅನಿಸುತ್ತದೆ. ಆದರೂ ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಹಾಗೂ ಓದುಗರಿಗೆ ಬೇಕಾದ ಉಪಯುಕ್ತ ವಿಷಯಗಳನ್ನು ಮಾತ್ರ ತಿಳಿಸಿದ್ದಾರೆ. ಇಂತಹ ಪುಸ್ತಕಗಳು ಕೊಟ್ರೇಶ್ ಎಸ್. ಉಪ್ಪಾರ್ ಸಾರ್‍ರಿಂದ ಇನ್ನು ಹೆಚ್ಚಾಗಿ ಬರಲೆಂಬುದು ನಮ್ಮೆಲ್ಲರ ಆಶಯ .


ವಾಸುಸಮುದ್ರವಳ್ಳಿ, ಆಲೂರು
ಮೊ : 9449311298


‘ರಸಋಷಿ’ಯ ಎರಡು ಕವಿತೆಗಳು- ಕೊಟ್ರೇಶ್ ಎಸ್. ಉಪ್ಪಾರ್



 ಕುವೆಂಪು ಎಂಬ ಹೆಸರಿನಲ್ಲೇನೋ ಅತ್ಯದ್ಭುತ ಐಂದ್ರಜಾಲಿಕ ಶಕ್ತಿಯಿದೆ. ಪುಂಗಿಯ ನಿನಾದಕ್ಕೆ ಮೈದೂಗುವ ಹಾವಿನಂತೆ, ಮುಂಗಾರು ಮಳೆಯ ಎಳೆಮಿಂಚನ್ನು ಆಸ್ವಾದಿಸಿ ಕುಣಿಯುವ ನವಿಲಿನಂತೆ ಆ ಹೆಸರು ಕೇಳಿದಾಕ್ಷಣ ಕೋಟಿ ಕೋಟಿ ಕನ್ನಡಿಗರು ರೋಮಾಂಚಕರಾಗಿ ಕುಣಿಯುತ್ತಾರೆ, ಮೈಮರೆಯುತ್ತಾರೆ. ಕೋಟಿ ಹೃದಯಗಳನ್ನು ಮೀಟಿದ ಎಲ್ಲ ಭಾವದ ಹೊತೋಟವೇ  ಕುವೆಂಪು.
      ಕವಿಗಳು ಹುಟ್ಟಬಹುದು, ಸಾಯಬಹುದು ಇದು ನಿಸರ್ಗನಿಯಮ, ಆದರೆ ಅಮರರಾಗುವುದು ಅಮೂಲ್ಯಕರ ಕನ್ನಡದಲ್ಲಿ ಕುವೆಂಪುರವರಂಥ ಕೋಟಿ, ಕೋಟಿ ಹೃದಯಗಳನ್ನಾಳಿದ ಲಕ್ಷೋಪಲಕ್ಷ ನರನಾಡಿಗಳನ್ನು ವಿದ್ಯುತ್ ಚೈತನ್ಯದ ಪ್ರವಾಹವನ್ನುಂಟು ಮಾಡಿದ ವೈಚಾರಿಕ ಕ್ರಾಂತಿಕಾರರು ಅಪರೂಪ.
      ಇಪ್ಪತ್ತನೇ ಶತಮಾನ ಕರ್ನಾಟಕದ ಪಾಲಿಗೊಂದು ಪುಣ್ಯಮಂಗಳ ಮನ್ವಂತರವಾಗಿ ಪರಿಣಮಿಸಿತು. ರೋಮಾಂಚನಕಾರಿಯಾದ ಸರ್ವೋದಯ ಸಂಕ್ರಾಂತಿಯೊಂದನ್ನು ದರ್ಶಿಸುವ ಭಾಗ್ಯ ಈ ಶತಮಾನದ್ದು. ಮಾನವೀಯ ಧರ್ಮದ ನೆಲೆಯಲ್ಲಿ ಆಧ್ಯಾತ್ಮಿಕ ಪ್ರಜಾಪ್ರಭುತ್ವ ಹಾಗೂ ಸಾಹಿತ್ಯಿಕ ಪ್ರಜಾಪ್ರಭುತ್ವವೆರಡನ್ನು ಭದ್ರವಾಗಿ ನೆಲೆಯೂರಿಸಿದವರು ಕುವೆಂಪು.
ಇವರು ಆಧು£ಕ ಕನ್ನಡ ಸಾಹಿತ್ಯದ ಅಥ್ವರ್ಯವೂ ಹೌದು, ಪ್ರತಿನಿಧಿಯೂ ಹೌದು.
     ಮಲೆನಾಡಿನ ನಿಸರ್ಗ ರಮ್ಯ ಪರಿಸರದಲ್ಲಿ ಬೆಳೆದವರು ಕುವೆಂಪು. ಅವರು ನಿಸರ್ಗದ ಆರಾಧಕರು. ನಿಸರ್ಗದ ರಮಣೀಯ ಭಾಗವನ್ನು ಭಯಾನಕ ಭಾಗವನ್ನು ಅನುಭವಿಸಿದವರು. ರಮಣೀಯತೆಯಲ್ಲಿ ರಸಾವೇಶದಿಂದ ದೇವರನ್ನು ಕಂಡರೆ ರುದ್ರಭಯಾನಕ ಸೌಂದರ್ಯದಲ್ಲಿ ನಿಸರ್ಗದ ಪ್ರಳಯಾಂತಕವನ್ನು ಕಾಣುತ್ತಾರೆ.
    ನಾನು ಇತ್ತೀಚೆಗೆ ರಸಋಷಿಯ ‘ದೇವರು ರುಜುಮಾಡಿದನು’ ಹಾಗೂ ‘ವರ್ಷಭೈರವ’ ಎಂಬ ಎರಡು ಕವಿತೆಗಳನ್ನು ಓದುವಾಗ ಮಲೆನಾಡಿನ ಸೆರಗಲ್ಲಿ ಮಿಂದೆದ್ದ ಅನುಭವ ಸ್ಮರಣೀಯ.

ಸಿಬ್ಬಲು ಗುಡ್ಡೆಯ ಹೊಳೆಯಲ್ಲಿ ಮೀಯುತ
ಕವಿ ಮನ ನಾಕದಿ ನೆಲಸಿತ್ತು
ಬೆಳ್ಳಕ್ಕಿಯ ಹಂತಿಯ ಆನೆವದಿ 
ದೇವರು ರುಜು ಮಾಡಿದನು
                      ರಸವಶನಾಗುತ ಕವಿ ಅದ ನೋಡಿದನು  
                                                                       (ದೇವರು ರುಜುಮಾಡಿದನು)

     ಮಲೆನಾಡಿನ ಗರ್ಭದಲ್ಲಿ ಹುಟ್ಟಿ ಬೆಳೆದ ಕುವೆಂಪು ದೇವರನ್ನು ಕಲ್ಲು, ಮಣ್ಣುಗಳ ಮೂರ್ತಿಗಳಲ್ಲಿ ಕಾಣದೇ ನಿಸರ್ಗದಲ್ಲಿ ಕಂಡವರು. ಪ್ರಕೃತಿಯ ಚೇತನಾಚೇತನಗಳಲ್ಲಿ ಕಂಡವರು. ಪ್ರಕೃತಿಯೇ ಅವರಿಗೆ ದೇವರು, ಗುರು, ತಾಯಿ ಹೀಗಾಗಿಯೇ ಎತ್ತನೋಡಿದರತ್ತತ್ತ ಅವರಿಗೆ ಹೊಸತನ ಕಾಣುತ್ತಿತ್ತು.
     ಕುವೆಂಪು ಪ್ರಕೃತಿಯನ್ನು ನೋಡುತ್ತ ಹರ್ಷ ತುಂದಿಲರಾದಾಗ ಹಕ್ಕಿಗಳ ಹಿಂಡು ಸಾಲು-ಸಾಲಾಗಿ ಹಾರುವುದನ್ನು ಕಂಡು ದೇವರು ನಿಸರ್ಗದ ಸೌಂದರ್ಯಕ್ಕೆ ಮಾರುಹೋಗಿ ತನ್ನ ರುಜು ಹಾಕಿದ್ದಾನೆ ಎಂದು ಹಾಡುತ್ತಾರೆ.
      ಅದನ್ನು ಕವಿ ರಸವಶನಾಗುತ್ತಾ ನೋಡುತ್ತ ನಿಲ್ಲುತ್ತಾರೆ. ವಿಸ್ತಾರವಾದ ಆಗಸ ಹಿನ್ನಲೆಯಾಗಿದೆ. ಪರ್ವತದ ಎತ್ತರಗಳು ಸಾಲಾಗಿ ಬೆಳೆದಿವೆ. ಕಿಕ್ಕಿರಿದ ಅಡವಿಯ ಮಧ್ಯ ತುಂಗಾನದಿ ಭಯಭಕ್ತಿ ಹುಟ್ಟಿಸುತ್ತ ಹರಿಯುತ್ತದೆ. ಅದೆಲ್ಲಾ ನೋಡುತ್ತಾ ನಿಂತ ಕುವೆಂಪು ಪರವಶರಾಗುತ್ತಾರೆ. ಆಗ ಸೃಷ್ಠಿಯೇ ಸ್ತಬ್ದವಾದ ಅನುಭವ. ನದಿ ಹರಿಯುತ್ತ್ತಿತ್ತು ಜನ ಅದನ್ನು ನೋಡುತ್ತನಿಂತಿದ್ದಾರೆ.
       ನಿರ್ಜನ ದೇಶದ ನೀರವ ಕಾಲಕ್ಕೆ ಪಕ್ಷಿಗಳ ಕಲರವ ಪುಳಕಗೊಳಿಸುತ್ತದೆ. ಹೂ ಬಿಸಿಲಿನಲ್ಲಿ ಸಿರಿವೊನಲು ಮಿಂಚುತ್ತಿದೆ. ಬಂಡೆಗಳ ನಡುವೆ ಮಂಜುಳ ಕಲರವ ಮಾಡುತ್ತ ಪ್ರವಾಹಗಳು ಹರಿಯುತ್ತಿವೆ. ಪ್ರವಾಹದ ಎರಡು ದಂಡೆಗಳಲ್ಲಿ ಹೊಮ್ಮಳಲು ರಾಜಾಜಿಸುತ್ತಿವೆ. ಸಿಬ್ಬಿಲು ಗುಡ್ಡೆಯ ಹೊಳೆಯಲ್ಲಿ ಮೀಯುತ್ತ ಕವಿಯ ಮನಸ್ಸು ಸ್ವರ್ಗದಲ್ಲಿ ನೆಲೆಸಿದೆ. ಮಧು ಸೌಂದರ್ಯದ ಮಧುರ ಜಗತ್ತು ಹೃದಯ ನಾಲಗೆಗೆ ಜೇನಾಗಿದೆ. ಇಂಥ ಸಮಯದಲ್ಲಿ ದೃಶ್ಯ ದಿಗಂತದಿಂದ ಒಮ್ಮಿಂದೊಮ್ಮ್ಮೆಲೇ ಗಿರಿ ವನ ಪಟದಾಕಾಶದಲ್ಲಿ ಬಲಾಕ ಪಂಕ್ತಿ ತೇಲುತ್ತಾ ಬರುವುದನ್ನು ಕಂಡು ಮೈಮರೆಯುವುದನ್ನು ಕಾಣುತ್ತೇವೆ.

ಹಾವ್ನಾಲಗೆ ಮಿಂಚು
ನೆಕ್ಕುತಲಿದೆ ಕತ್ತಲೆಯನು
ಮೈದೋರಲು ಮರೆಯಾಗಿವೆ
ಭಯದಲಿ ಶಶಿ, ತಾರೆ,
ಮಳೆ ಎಂಬುದು ಬರಿ ಸುಳ್ಳಿದು
ಮಳೆಯಲ್ಲಿದು | ಮಳೆಯಲ್ಲಿದು
ಪ್ರಲಯದ ಆವೇಶ.  (ವರ್ಷ ಭೈರವ)

         ಕವಿ ಇಲ್ಲಿ ಮುಸಲಧಾರೆ ಮಳೆಯ ವರ್ಣನೆ ಮಾಡಿದ್ದಾರೆ. ಕದ್ದಿಂಗಳು, ಕಗ್ಗತ್ತಲು, ಕಾರ್ಗಾಲದ ರಾತ್ರಿಯನ್ನು  ಕುವೆಂಪುರವರು ಭಿನ್ನವಾಗಿಯೇ ಕಂಡಿದ್ದಾರೆ. ಪರ್ವತ ವನಧಾತ್ರಿ ಸಿಡಿಲು ಮಿಂಚಿಗೆ ನಡುಗುವ ಭಾವ ಲಹರಿ ಹರಿದಿರುವುದನ್ನು ಕಾಣುತ್ತೇವೆ. ಮೋಡಗಳ ರಾಶಿ ತುದಿ- ಮೊದಲಿಲ್ಲದಂತೆ ಆಕಾಶವನ್ನು ಹಿಡಿದು ಕೊಂಡು ತಬ್ಬಿದೆಯೆಂದು ಪ್ರಕೃತಿಯನ್ನು ವರ್ಣಿಸುವಾಗ ಕವಿಯ ತನ್ಮಯತೆಯ ಉನ್ಮಾದತೆ ಅರಿವಾಗದಿರದು. ನಿರ್ದಿಯಾ ಕಠಿನ ಘಾತವನ್ನುಂಟು ಮಾಡುವ ಫೀಳಿಡುತ್ತ ಭೋರೆನ್ನುತ್ತ ಬಿರುಗಾಳಿ ಬೀಸುತ್ತ ಭೂಮಿಗೆ ಅಪ್ಪಳಿಸುವ ಸನ್ನಿವೇಶವನ್ನು ಹಾಗೆ ಥಳ್ಳನೆಯ ಮುಗಿಲು ಮಿಂಚು ಕತ್ತಲೆಯನ್ನು ನೆಕ್ಕುತ್ತಲಿದೆ, ಮಿಂಚು ಭುಮಿಯ ಕಣ್ಣನ್ನು ಕುಕ್ಕುತ್ತಲಿದೆ, ಇದರಿಂದ ಆಕಾಶ ನೀರಾಗಿ ಬೋಭೋರನೇ ಧಾರಾಕಾರವಾಗಿ ಸುರಿಯುತ್ತಿದೆ ಎನ್ನುವಲ್ಲಿ ಕುವೆಂಪುರವರ ಆಂತರಿಕ ಸೌಂದರ್ಯದ ಚಲವು ಹರಿಯುತ್ತದೆ.
         ಎಲ್ಲೆಲ್ಲೂ ಲಯರುದ್ರನ ಜಯ ಡಿಂಡಿಮ ಘನ ವಜ್ರದ ಧ್ವನಿ ಮೊಳಗುತ್ತಿದೆ. ಭವ ವಿಪ್ಲವಕರ ಭೈರವ ವರತಾಂಡವ ಭಾವ ಎಲ್ಲೆಲ್ಲೂ ಕಾಣುತ್ತಿದೆ. ದಿಕ್ಕು-ದಿಕ್ಕಿಗೂ ಕಾರ್ಮುಗಿಲಿನ ಕೇಶಗಳು ಪಸರಿಸಿವೆ. ಸಿಡಿಲು ಮಿಂಚಿನ ರೂಪದಲ್ಲಿ ಮಳೆ ಭೈರವನ ರೋಷ ವ್ಯಕ್ತವಾಗುವುದನ್ನು ಕವಿ ಮನೋಜ್ಞವಾಗಿ ಬಿಂಬಿಸಿದ್ದಾರೆ.
        ಅದರಲ್ಲೂ ಕನ್ನಡ ಕಾವ್ಯಕಾಶಿಯ ಪ್ರಕೃತಿಯಲ್ಲಿ ಕುವೆಂಪು ಕಂಡ ಸೊಬಗನ್ನು ಮತ್ಯಾವ ಕವಿಯೂ ಕಾಣಲಾಗಲಿಲ್ಲ. ಕುವೆಂಪು ಎಲ್ಲವನ್ನು ದರ್ಶಿಸಿದ್ದು ನಿಸರ್ಗದಲ್ಲೇ, ಎಲ್ಲವನ್ನು ಕಂಡದ್ದು ನಿಸರ್ಗದಲ್ಲೇ, ಆದ್ದರಿಂದಲೇ ಹಸಿರಿನಂತೆ ಕನ್ನಡ ಸಾಹಿತ್ಯ ಲೋಕದಲ್ಲಿ ಹಸಿರಾಗಿ ಸರ್ವ ಹೃನ್ಮನಗಳಲ್ಲಿಯೂ ಉಸಿರಾಡುತ್ತಿದ್ದಾರೆ.

- ಕೊಟ್ರೇಶ್ ಎಸ್. ಉಪ್ಪಾರ್, ಆಲೂರು.
 ಮೊ-9483470794