ಕವಿ, ವಿಮರ್ಶಕ, ಸಂಶೋಧಕ, ಜಾನಪದ ವಿದ್ವಾಂಸ – ಕುಮಾರಚಲ್ಯ
ಕನ್ನಡ ಕಾವ್ಯ, ವಿಮರ್ಶೆ, ಜಾ
ನಪದ ಸಂಗ್ರಹ ಹಾಗೂ ಸಂಪಾದನಾ ಕ್ಷೇತ್ರದಲ್ಲಿ ಕಳೆದ ಮೂರುವರೆ ದಶಕಗಳಿಂದ ದುಡಿಯುತ್ತಿರುವ ಕುಮಾರ ಚಲ್ಯರವರು ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡುವುದರ ಮೂಲಕ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ.
ಜನನ ಃ ಕುಮಾರಚಲ್ಯ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧಿ ಪಡೆದ ಡಾ.ಸಿ.ಎಸ್.ಶಿವಕುಮಾರಸ್ವಾಮಿಯವರು ಕ್ರಿ.ಶ.1954 ರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಚಲ್ಯ ಗ್ರಾಮದ ಸಿ.ಎನ್.ಶಿವಬಸಯ್ಯ ಮತ್ತು ಶ್ರೀಮತಿ ಮಹದೇವಮ್ಮ ದಂಪತಿಗಳ ಉದರದಲ್ಲಿ ಜನಿಸಿದರು.
ಶಿಕ್ಷಣ ಃ ಶಿವಕುಮಾರಸ್ವಾಮಿಯವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಚಲ್ಯದಲ್ಲಿಯೇ ಪಡೆಯುತ್ತಾರೆ. ಪ್ರೌಢ ಶಾಲಾ ಶಿಕ್ಷಣವನ್ನು ಮೈಸೂರಿನ ಮರಿಮಲ್ಲಪ್ಪ ಹಾಗೂ ಜೆ.ಎಸ್.ಎಸ್ ಪ್ರೌಢ ಶಾಲೆಯಲ್ಲಿ ಪಡೆದು ನಂತರ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಡೆಯುತ್ತಾರೆ.
ಮಾನಸ ಗಂಗೋತ್ರಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಶ್ರೀ ತಿ.ನಂ.ಶ್ರೀಕಂಠಯ್ಯ ಚಿನ್ನದ ಪದಕ, ಪ್ರೊ.ಟಿ.ಎಸ್.ವೆಂಕಣ್ಣಯ್ಯ ಚಿನ್ನದ ಪದಕ, ಡಾ.ಮಾಸ್ತಿ ವೆಂಕಟೇಶ್ ಅಯ್ಯಾಂಗರ್ ಚಿನ್ನದ ಪದಕ, ಶ್ರೀ ಬಿ.ಎಸ್.ತಮ್ಮಯ್ಯ ಚಿನ್ನದ ಪದಕ, ಶ್ರೀ ಕೇ.ನೀ.ಸಿದ್ದಪ್ಪ ಚಿನ್ನದ ಪದಕ, ಶ್ರೀಮತಿ ನರಸಮ್ಮ ನಾರಾಯಣಶಾಸ್ತ್ರಿ ಚಿನ್ನದ ಪದಕ ಹೀಗೆ ಆರು ಚಿನ್ನದ ಪದಕ ಹಾಗೂ ಮಹಾವಿದ್ವಾನ್ ಅಂಬಳಿ ರಾಮಕೃಷ್ಣಶಾಸ್ತ್ರಿ ಪಾರಿತೋಷಕ, ಪಂಡಿತ ತಿರುಮಲ್ಲೂರು ಶ್ರೀನಿವಾಸರಾವ್ಚಾರ್ ಪಾರಿತೋಷಕ ಹೀಗೆ ಎರಡು ಪಾರಿತೋಷಕ ಪಡೆಯುವುದರೊಂದಿಗೆ ಪ್ರಥಮ ರ್ಯಾಂಕಿನಲ್ಲಿ ತೇರ್ಗಡೆ ಹೊಂದಿದರು.
1994 ರಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಸಲ್ಲಿಸಿದ ‘ದೇವುಡು ಅವರ ಸೃಜನಶೀಲ ಸಾಹಿತ್ಯ’ ಎಂಬ ವಿಷಯದಡಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ದೊರೆತಿದೆ.
ವೃತ್ತಿ ಃ 1978 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಡಿಯಲ್ಲಿದ್ದ ಮಂಗಳೂರು ಸ್ನಾತಕೋತ್ತರ ಕೇಂದ್ರಕ್ಕೆ ಉಪನ್ಯಾಸಕರಾಗಿ ನಿಯುಕ್ತಿಗೊಳ್ಳುವುದರ ಮೂಲಕ ವೃತ್ತಿ ಜೀವನಕ್ಕೆ ಕಾಲಿಟ್ಟರು. 1978 ರಿಂದ 1980 ರ ವರೆಗೆ ಇಲ್ಲಿ ಕರ್ತವ್ಯ ನಿರ್ವಹಿಸಿದ ಕುಮಾರಚಲ್ಯರವರು 1980ರಲ್ಲಿ ಮೈಸೂರು ವಿವಿ ಅಡಿಯಲ್ಲಿಯೇ ನಡೆಯುತ್ತಿದ್ದ ಶಿವಮೊಗ್ಗ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗವಾದರು.
ಕುವೆಂಪು ವಿಶ್ವ ವಿದ್ಯಾನಿಲಯ ಪ್ರತ್ಯೇಕಾದ ನಂತರ ಕನ್ನಡ ಭಾರತಿ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಪ್ರಾದ್ಯಾಪಕರಾಗಿ, ನಿರ್ದೇಶಕರಾಗಿ ಕಾರ್ಯ ಮಾಡಿದ್ದಾರೆ.
1996 ರಿಂದ 1999 ರ ವರೆಗೆ ಪ್ರಸಾರಾಂಗದ ಸಹ ನಿರ್ದೇಶಕರಾಗಿ, 1997 ರಿಂದ 1998 ರ ವರೆಗೆ ಕುವೆಂಪು ವಿಶ್ವ ವಿದ್ಯಾನಿಲಯದ ಪ್ರಥಮ ಸಂಪರ್ಕಾಧಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 1999 ರಲ್ಲಿ ವಾತಾ ಪತ್ರ ಸಲಹಾ ಮಂಡಳಿಯ ಸದಸ್ಯರಾಗಿ, 2001 ರಿಂದ 2002 ಹಾಗೂ 2008 ರಿಂದ ಪ್ರಸ್ತುತದವರೆಗೂ ಕನ್ನಡ ಭಾರತಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2006 ರಿಂದ 2009 ಪ್ರಸಾರಂಗದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2002 ರಿಂದ 2004 ಹಾಗೂ 2008 ರಿಂದ ಪ್ರಸ್ತುತದವರೆಗೂ ಕನ್ನಡ ಕಂಪ್ಯೂಟರ್ ಕೇಂದ್ರದ ಸಂಚಾಲಕರಾಗಿ ಕರ್ತವ್ಯ ಮಾಡುತ್ತಿದ್ದಾರೆ.
ಮಾರ್ಗದರ್ಶಕರಾಗಿ ಕುಮಾರಚಲ್ಯ ಃ ಇವರು ಉತ್ತಮ ಬೋಧನೆಯ ಜೊತೆಗೆ ವಿದ್ಯಾರ್ಥಿಗಳ ಅಚ್ಚು-ಮೆಚ್ಚಿನ ಮಾರ್ಗದರ್ಶಕರೂ ಹೌದು. ಇವರ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೆ 10 ಮಂದಿ ಡಾಕ್ಟರೇಟ್ ಪಡೆದಿದ್ದು, 4 ಮಂದಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಪ್ರಸ್ತುತ 07 ಅಭ್ಯಾರ್ಥಿಗಳು ಪಿ.ಎಚ್.ಡಿ ಗಾಗಿ ಸಂಶೋಧನೆ ಮಾಡುತ್ತಿದ್ದಾರೆ.
ಸಾಹಿತ್ಯ ಕ್ಷೇತ್ರ ಃ ಆಧುನಿಕ ಕನ್ನಡ ಸಾಹಿತ್ಯ, ಭಾಷಾ ವಿಜ್ಞಾನ, ಛಂದಸ್ಸು, ಜಾನಪದ, ಸಂಶೋಧನೆ, ಸಂಫಾದನೆ ಇವರ ಕಾರ್ಯ ಸಾಧನೆಯ ಸಾಹಿತ್ಯ ಪ್ರಕಾರಗಳು.
ಜೀವನ ಚರಿತ್ರೆ ಃ ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿ- 1979, ದೇವುಡು-2001.
ವಿಮರ್ಶೆ ಃ ಸಂಗತ-1984, ಕುವೆಂಪು ಸಾಹಿತ್ಯಲ್ಲಿ ವೈಚಾರಿಕ ನೆಲೆಗಳು-1998, ವಚನಕಾರರ ಜೀವನ ದೃಷ್ಠಿ-2001, ಅಭಿಜ್ಞಾನ-2009, ಕಾಲಮಾನ-2004.
ಕಾವ್ಯ ಃ ನವಾಬ-1995.
ಸಂಪಾದನೆ ಃ ದೇವುಡು-1994, ಬಸವಪ್ಪ ಶಾಸ್ತ್ರಿ-1994.
ಇತರರೊಡನೆ ಸಂಪಾದನೆ ಃ ಬಂಡಾಯ ಸಾಹಿತ್ಯ ಃ ಹತ್ತು ವರ್ಷ-1990.
ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತರು-2001.
ಜಾನಪದ ಕ್ಷೇತ್ರ ಃ ಕಾವ್ಯ, ವೈಚಾರಿಕ ಬರಹ, ಸಂಪಾದನೆಗಳಲ್ಲದೆ ಕುಮಾರಚಲ್ಯರವರು ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಸಂಪಾದನೆ ಃ ಕರ್ನಾಟಕ ಜಾತ್ರೆಗಳು-1998, ಜನಪದ ಸಾಹಿತ್ಯ-2003, ಪ್ರಾದೇಶಿಕ ಜಾನಪದ-2004.
ಸ್ವತಂತ್ರ್ಯ ಕೃತಿಗಳು ಃ ಕಿನ್ನರಿ ಜೋಗಿಗಳು-1990, ದೇವುಡು-1997, ಬೇರು ತೋರಿದ ಹಾದಿ-2003, ಹಿಂದಣ ಹೆಜ್ಜೆಯನರಿಯದೆ(ಸಂಶೋಧನಾ ಕೃತಿ)
ಅಚ್ಚಿನಲ್ಲಿ ಃ ಗುಲಾಭಿ ಮತ್ತು ಪಾರಿವಾಳ(ಕವನ ಸಂಕಲನ), ನಿಚ್ಛಂ ಪೊಸತು(ವಿಮರ್ಶೆ)
ಸಾಹಿತ್ಯ ಸಮಾರಂಭಗಳಲ್ಲಿ ಃ ದಸರಾ ಕವಿಗೋಷ್ಠಿ-1995, 65 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-1996 ಹಾಸನ, 2ನೆಯ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು-2001 ಭದ್ರಾವತಿ, 71 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-2003 ಮೂಡಬಿದರೆ, 73 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-2006 ಶಿವಮೊಗ್ಗ ಇವುಗಳಲ್ಲದೆ ಕರ್ನಾಟಕ ವಿಶ್ವ ವಿದ್ಯಾನಿಲಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸಭೆ, ಸಮಾರಂಭಗಳಲ್ಲಿ ಕಾವ್ಯ ವಾಚನ, ವಿಚಾರ ಮಂಡನೆ, ಉಪನ್ಯಾಸ, ಪ್ರಬಂಧ ಮಂಡನೆಗಳನ್ನು ಮಾಡಿದ್ದಾರೆ.
ನಿರ್ದೇಶಕರಾಗಿ ಹಾಗೂ ಸದಸ್ಯರಾಗಿ ಃ ಕರಪಾಲಮೇಳ, ವೀರಗಾಸೆ, ಕೋಲಾಟ ಮುಂತಾದ ಜಾನಪದ ಪ್ರಕಾರಳನ್ನು ನೃತ್ಯ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಡಿ.ಎಸ್.ಇ.ಆರ್.ಟಿ ಯ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರು, ಬೆಂಗಳೂರು, ಮಂಗಳೂರು, ಗುಲ್ಬರ್ಗಾ, ಕರ್ನಾಟಕ, ಮದ್ರಾಸ್, ಕೇರಳ ಮುಂತಾದ ವಿಶ್ವ ವಿದ್ಯಾನಿಲಯಗಳ ಪರೀಕ್ಷಾ ಮಂಡಳಿ ಹಾಗೂ ಅಧ್ಯಯನ ಮಂಡಳಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕುವೆಂಪು ವಿಶ್ವ ವಿದ್ಯಾನಿಲಯದ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ವಿಶ್ವ ವಿದ್ಯಾಲಯ ಮಟ್ಟಗಳಲ್ಲಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ 500 ಕ್ಕೂ ಹೆಚ್ಚು ಉಪನ್ಯಾಸ ಹಾಗೂ ಪ್ರಬಂಧ ಮಂಡನೆ ಮಾಡಿದ್ದಾರೆ.
ಸಾಹಿತ್ಯ ವಿಶ್ಲೇಷಣೆ ಃ ಇವರ ಸಾಹಿತ್ಯ ಕುರಿತು ನಾಡಿನ ಅನೇಕ ವಿದ್ವಾಂಸರು, ಪತ್ರಿಕೆಗಳು ಮೆಚ್ಚುಗೆ ವ್ಯಕ್ತ ಪಡಿಸಿವೆ.
1980, ಜುಲೈ-27 ರಲ್ಲಿ ಕನ್ನಡ ಪ್ರಭ ಪತ್ರಿಕೆಯು ಇವರ ಅಭಿನವ ಕಾಳೀದಾಸ ಬಸವಪ್ಪ ಶಾಸ್ತ್ರಿ ಕೃತಿ ಕುರಿತು ಈ ರೀತಿ ಉಲ್ಲೇಖಿಸಿದೆ “ ಸಿ.ಎಸ್.ಶಿವಕುಮಾರ ಸ್ವಾಮಿಯವರು ಬರೆದ ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿಗಳ ಜೀವನ ಸರ್ವಾಂಗ ಸುಂದರವಾಗಿದೆ. ಜೀವನ ಚರಿತ್ರೆಯಲ್ಲಿ ಇರಬೇಕಾದ ಎಲ್ಲಾ ಅಂಶಗಳು ಇಲ್ಲಿ ಸೇರಿವೆ”.
1996 ರಲ್ಲಿ ಲಂಕೇಶ ಪತ್ರಿಕೆಯು ಇವರ ನವಾಬ ಕವನ ಸಂಕಲನ ಕುರಿತು ಈ ರೀತಿ ಉಲ್ಲೇಖಿಸಿದೆ “ ಪರ್ಯಟನ, ಶ್ವಾನ ಸಂಹಿತೆ, ನಿದ್ರೆಗೂ ಬೇಕು ಸ್ಫೂರ್ತಿ ಮೊದಲಾದ ಹೆಚ್ಚು ಫೋಸ್ ಇಲ್ಲದ ಕವಿತೆಗಳೇ ಚಲ್ಯರ ಮುಖ್ಯ ಕವಿತೆಗಳೆನ್ನಬಹುದು”.
1996 ರಲ್ಲಿಯೇ ಇದೇ ಕವನ ಸಂಕಲನ ಕುರಿತು ಪ್ರಜಾವಾಣಿ ಪತ್ರಿಕೆಯು ಈ ರೀತಿ ಉಲ್ಲೇಖಿಸಿದೆ “ ಅನ್ಯೋಕ್ತಿಯಲ್ಲಿ ಮನತಟ್ಟುವ ಶ್ವಾನ ಸಂಹಿತೆ ಇಂದಿನ ವ್ಯಕ್ತಿಹೀನ ಬದುಕಿಗೆ ಕನ್ನಡಿ ಹಿಡಿದಿದೆ. ಗಾಢವಾಗಿ ತಟ್ಟುವ ನಾವು ಮತ್ತು ಹೃದಯ, ಪರಿಸರ, ಸಲಹೆ, ನವಾಬ ಮುಂತಾದ ಕವನಗಳು ಮತ್ತೆ ಮತ್ತೆ ಓದಲು ಹಚ್ಚುತ್ತವೆ. ಕುಮಾರಚಲ್ಯರು ಸಂವೇದನಾಶೀಲ ಪ್ರಬುದ್ಧ ಕವಿ ಎಂಬುದನ್ನು ಮೊದಲ ಸಂಕಲನದಲ್ಲೇ ಸಾಬೀತುಪಡಿಸಿ ಭರವಸೆ ಮೂಡಿಸಿದ್ದಾರೆ”.
2006 ಆಗಸ್ಟ್-8 ರಲ್ಲಿ ಆಂದೋಲನ ಪತ್ರಿಕೆಯು ಲೇಖನ ಸಂಗ್ರಹ ಕುರಿತು ಈ ರೀತಿ ಉಲ್ಲೇಖಿಸಿದೆ “ ಕುಮಾರಚಲ್ಯ ತಮ್ಮ ತಾತ್ವಿಕ ಜಿಜ್ಞಾಸೆಗೆ ಭಂಗ ತಂದುಕೊಳ್ಳುವುದಿಲ್ಲ. ಯಾವುದೇ ಅಧ್ಯಯನ ಕ್ರಮದ ಅನಿವಾರ್ಯತೆ ತಾತ್ವಿಕತೆ ಎಂಬುದನ್ನು ಅವರು ಗಂಭೀರವಾಗಿ ಸ್ವೀಕರಿಸಿದ್ದಾರೆ. ಸಂಕಲನದ ಪ್ರತಿ ಲೇಖನ ಈ ತಾತ್ವಿಕ ಜಿಜ್ಞಾಸೆಯ ಮೂಲಕವೇ ಆರಂಭವಾಗುತ್ತದೆ”.
2202 ನವಂಬರ್ 17 ರಂದು ಕನ್ನಡ ಪ್ರಭ ದಿನಪತ್ರಿಕಯು ಇವರ ದೇವುಡು ಕೃತಿ ಕುರಿತು ಈ ಕೆಳಗಿನಂತೆ ಉಲ್ಲೇಖಿಸಿದೆ “ ದೇವುಡು ಅವರ ಸಮಗ್ರ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿವೆ ಎಂಬುದಕ್ಕೂ ಪುರಾವೆಗಳಿವೆ. ವೈಯಕ್ತಿಕವಾದ ಜೀವನ ಸಂದರ್ಭಗಲ್ಲಿ ದೇವುಡು ತಳೆದ ವಿಭಿನ್ನ ದೃಷ್ಠಿಕೋನಗಳು ಕೃತಿಗಳಲ್ಲಿ ಪರೋಕ್ಷವಾಗಿ ಪ್ರತಿಫಲಿಸಿರುವುದನ್ನು ಕುಮಾರಚಲ್ಯ ಗಣನೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಹೊರನೋಟದಲ್ಲಿ ದೇವುಡು ಕೃತಿಗಳು ಪರಂಪರಾಗತ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ ಎನಿಸಿದರೂ ಸನಾತನ ಸಂಸ್ಕøತಿಯೊಳಗಿದ್ದ ಸಮಾನತೆಯ ತತ್ವಗಳನ್ನು ನೆನಪು ಮಾಡಿಕೊಡುವ ಸಂಗತಿಗಳನ್ನು ಚಲ್ಯ ತಮ್ಮ ವಿಮರ್ಶೆಯಲ್ಲಿ ಅನಾವರಣಗೊಳಿಸಿದ್ದಾರೆ”.
ಹೀಗೆ ಕುಮಾರಚಲ್ಯರವರು ಕನ್ನಡ ನಾಡು ನುಡಿಗೆ ತಮ್ಮದೇಯಾದ ಸಾಹಿತ್ಯಿಕ ಕೊಡುಗೆಗಳನ್ನು ನೀಡಿದ್ದಾರೆ. ಇವರ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ ಸಂದಿದೆ. ಅಲ್ಲದೆ 2013 ಜೂನ್ 14 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಕನ್ನಡ ಕಾವ್ಯ, ವಿಮರ್ಶೆ, ಜಾ
ನಪದ ಸಂಗ್ರಹ ಹಾಗೂ ಸಂಪಾದನಾ ಕ್ಷೇತ್ರದಲ್ಲಿ ಕಳೆದ ಮೂರುವರೆ ದಶಕಗಳಿಂದ ದುಡಿಯುತ್ತಿರುವ ಕುಮಾರ ಚಲ್ಯರವರು ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡುವುದರ ಮೂಲಕ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ.
ಜನನ ಃ ಕುಮಾರಚಲ್ಯ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧಿ ಪಡೆದ ಡಾ.ಸಿ.ಎಸ್.ಶಿವಕುಮಾರಸ್ವಾಮಿಯವರು ಕ್ರಿ.ಶ.1954 ರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಚಲ್ಯ ಗ್ರಾಮದ ಸಿ.ಎನ್.ಶಿವಬಸಯ್ಯ ಮತ್ತು ಶ್ರೀಮತಿ ಮಹದೇವಮ್ಮ ದಂಪತಿಗಳ ಉದರದಲ್ಲಿ ಜನಿಸಿದರು.
ಶಿಕ್ಷಣ ಃ ಶಿವಕುಮಾರಸ್ವಾಮಿಯವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಚಲ್ಯದಲ್ಲಿಯೇ ಪಡೆಯುತ್ತಾರೆ. ಪ್ರೌಢ ಶಾಲಾ ಶಿಕ್ಷಣವನ್ನು ಮೈಸೂರಿನ ಮರಿಮಲ್ಲಪ್ಪ ಹಾಗೂ ಜೆ.ಎಸ್.ಎಸ್ ಪ್ರೌಢ ಶಾಲೆಯಲ್ಲಿ ಪಡೆದು ನಂತರ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಡೆಯುತ್ತಾರೆ.
ಮಾನಸ ಗಂಗೋತ್ರಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಶ್ರೀ ತಿ.ನಂ.ಶ್ರೀಕಂಠಯ್ಯ ಚಿನ್ನದ ಪದಕ, ಪ್ರೊ.ಟಿ.ಎಸ್.ವೆಂಕಣ್ಣಯ್ಯ ಚಿನ್ನದ ಪದಕ, ಡಾ.ಮಾಸ್ತಿ ವೆಂಕಟೇಶ್ ಅಯ್ಯಾಂಗರ್ ಚಿನ್ನದ ಪದಕ, ಶ್ರೀ ಬಿ.ಎಸ್.ತಮ್ಮಯ್ಯ ಚಿನ್ನದ ಪದಕ, ಶ್ರೀ ಕೇ.ನೀ.ಸಿದ್ದಪ್ಪ ಚಿನ್ನದ ಪದಕ, ಶ್ರೀಮತಿ ನರಸಮ್ಮ ನಾರಾಯಣಶಾಸ್ತ್ರಿ ಚಿನ್ನದ ಪದಕ ಹೀಗೆ ಆರು ಚಿನ್ನದ ಪದಕ ಹಾಗೂ ಮಹಾವಿದ್ವಾನ್ ಅಂಬಳಿ ರಾಮಕೃಷ್ಣಶಾಸ್ತ್ರಿ ಪಾರಿತೋಷಕ, ಪಂಡಿತ ತಿರುಮಲ್ಲೂರು ಶ್ರೀನಿವಾಸರಾವ್ಚಾರ್ ಪಾರಿತೋಷಕ ಹೀಗೆ ಎರಡು ಪಾರಿತೋಷಕ ಪಡೆಯುವುದರೊಂದಿಗೆ ಪ್ರಥಮ ರ್ಯಾಂಕಿನಲ್ಲಿ ತೇರ್ಗಡೆ ಹೊಂದಿದರು.
1994 ರಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಸಲ್ಲಿಸಿದ ‘ದೇವುಡು ಅವರ ಸೃಜನಶೀಲ ಸಾಹಿತ್ಯ’ ಎಂಬ ವಿಷಯದಡಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ದೊರೆತಿದೆ.
ವೃತ್ತಿ ಃ 1978 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಡಿಯಲ್ಲಿದ್ದ ಮಂಗಳೂರು ಸ್ನಾತಕೋತ್ತರ ಕೇಂದ್ರಕ್ಕೆ ಉಪನ್ಯಾಸಕರಾಗಿ ನಿಯುಕ್ತಿಗೊಳ್ಳುವುದರ ಮೂಲಕ ವೃತ್ತಿ ಜೀವನಕ್ಕೆ ಕಾಲಿಟ್ಟರು. 1978 ರಿಂದ 1980 ರ ವರೆಗೆ ಇಲ್ಲಿ ಕರ್ತವ್ಯ ನಿರ್ವಹಿಸಿದ ಕುಮಾರಚಲ್ಯರವರು 1980ರಲ್ಲಿ ಮೈಸೂರು ವಿವಿ ಅಡಿಯಲ್ಲಿಯೇ ನಡೆಯುತ್ತಿದ್ದ ಶಿವಮೊಗ್ಗ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗವಾದರು.
ಕುವೆಂಪು ವಿಶ್ವ ವಿದ್ಯಾನಿಲಯ ಪ್ರತ್ಯೇಕಾದ ನಂತರ ಕನ್ನಡ ಭಾರತಿ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಪ್ರಾದ್ಯಾಪಕರಾಗಿ, ನಿರ್ದೇಶಕರಾಗಿ ಕಾರ್ಯ ಮಾಡಿದ್ದಾರೆ.
1996 ರಿಂದ 1999 ರ ವರೆಗೆ ಪ್ರಸಾರಾಂಗದ ಸಹ ನಿರ್ದೇಶಕರಾಗಿ, 1997 ರಿಂದ 1998 ರ ವರೆಗೆ ಕುವೆಂಪು ವಿಶ್ವ ವಿದ್ಯಾನಿಲಯದ ಪ್ರಥಮ ಸಂಪರ್ಕಾಧಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 1999 ರಲ್ಲಿ ವಾತಾ ಪತ್ರ ಸಲಹಾ ಮಂಡಳಿಯ ಸದಸ್ಯರಾಗಿ, 2001 ರಿಂದ 2002 ಹಾಗೂ 2008 ರಿಂದ ಪ್ರಸ್ತುತದವರೆಗೂ ಕನ್ನಡ ಭಾರತಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2006 ರಿಂದ 2009 ಪ್ರಸಾರಂಗದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2002 ರಿಂದ 2004 ಹಾಗೂ 2008 ರಿಂದ ಪ್ರಸ್ತುತದವರೆಗೂ ಕನ್ನಡ ಕಂಪ್ಯೂಟರ್ ಕೇಂದ್ರದ ಸಂಚಾಲಕರಾಗಿ ಕರ್ತವ್ಯ ಮಾಡುತ್ತಿದ್ದಾರೆ.
ಮಾರ್ಗದರ್ಶಕರಾಗಿ ಕುಮಾರಚಲ್ಯ ಃ ಇವರು ಉತ್ತಮ ಬೋಧನೆಯ ಜೊತೆಗೆ ವಿದ್ಯಾರ್ಥಿಗಳ ಅಚ್ಚು-ಮೆಚ್ಚಿನ ಮಾರ್ಗದರ್ಶಕರೂ ಹೌದು. ಇವರ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೆ 10 ಮಂದಿ ಡಾಕ್ಟರೇಟ್ ಪಡೆದಿದ್ದು, 4 ಮಂದಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಪ್ರಸ್ತುತ 07 ಅಭ್ಯಾರ್ಥಿಗಳು ಪಿ.ಎಚ್.ಡಿ ಗಾಗಿ ಸಂಶೋಧನೆ ಮಾಡುತ್ತಿದ್ದಾರೆ.
ಸಾಹಿತ್ಯ ಕ್ಷೇತ್ರ ಃ ಆಧುನಿಕ ಕನ್ನಡ ಸಾಹಿತ್ಯ, ಭಾಷಾ ವಿಜ್ಞಾನ, ಛಂದಸ್ಸು, ಜಾನಪದ, ಸಂಶೋಧನೆ, ಸಂಫಾದನೆ ಇವರ ಕಾರ್ಯ ಸಾಧನೆಯ ಸಾಹಿತ್ಯ ಪ್ರಕಾರಗಳು.
ಜೀವನ ಚರಿತ್ರೆ ಃ ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿ- 1979, ದೇವುಡು-2001.
ವಿಮರ್ಶೆ ಃ ಸಂಗತ-1984, ಕುವೆಂಪು ಸಾಹಿತ್ಯಲ್ಲಿ ವೈಚಾರಿಕ ನೆಲೆಗಳು-1998, ವಚನಕಾರರ ಜೀವನ ದೃಷ್ಠಿ-2001, ಅಭಿಜ್ಞಾನ-2009, ಕಾಲಮಾನ-2004.
ಕಾವ್ಯ ಃ ನವಾಬ-1995.
ಸಂಪಾದನೆ ಃ ದೇವುಡು-1994, ಬಸವಪ್ಪ ಶಾಸ್ತ್ರಿ-1994.
ಇತರರೊಡನೆ ಸಂಪಾದನೆ ಃ ಬಂಡಾಯ ಸಾಹಿತ್ಯ ಃ ಹತ್ತು ವರ್ಷ-1990.
ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತರು-2001.
ಜಾನಪದ ಕ್ಷೇತ್ರ ಃ ಕಾವ್ಯ, ವೈಚಾರಿಕ ಬರಹ, ಸಂಪಾದನೆಗಳಲ್ಲದೆ ಕುಮಾರಚಲ್ಯರವರು ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಸಂಪಾದನೆ ಃ ಕರ್ನಾಟಕ ಜಾತ್ರೆಗಳು-1998, ಜನಪದ ಸಾಹಿತ್ಯ-2003, ಪ್ರಾದೇಶಿಕ ಜಾನಪದ-2004.
ಸ್ವತಂತ್ರ್ಯ ಕೃತಿಗಳು ಃ ಕಿನ್ನರಿ ಜೋಗಿಗಳು-1990, ದೇವುಡು-1997, ಬೇರು ತೋರಿದ ಹಾದಿ-2003, ಹಿಂದಣ ಹೆಜ್ಜೆಯನರಿಯದೆ(ಸಂಶೋಧನಾ ಕೃತಿ)
ಅಚ್ಚಿನಲ್ಲಿ ಃ ಗುಲಾಭಿ ಮತ್ತು ಪಾರಿವಾಳ(ಕವನ ಸಂಕಲನ), ನಿಚ್ಛಂ ಪೊಸತು(ವಿಮರ್ಶೆ)
ಸಾಹಿತ್ಯ ಸಮಾರಂಭಗಳಲ್ಲಿ ಃ ದಸರಾ ಕವಿಗೋಷ್ಠಿ-1995, 65 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-1996 ಹಾಸನ, 2ನೆಯ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು-2001 ಭದ್ರಾವತಿ, 71 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-2003 ಮೂಡಬಿದರೆ, 73 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-2006 ಶಿವಮೊಗ್ಗ ಇವುಗಳಲ್ಲದೆ ಕರ್ನಾಟಕ ವಿಶ್ವ ವಿದ್ಯಾನಿಲಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸಭೆ, ಸಮಾರಂಭಗಳಲ್ಲಿ ಕಾವ್ಯ ವಾಚನ, ವಿಚಾರ ಮಂಡನೆ, ಉಪನ್ಯಾಸ, ಪ್ರಬಂಧ ಮಂಡನೆಗಳನ್ನು ಮಾಡಿದ್ದಾರೆ.
ನಿರ್ದೇಶಕರಾಗಿ ಹಾಗೂ ಸದಸ್ಯರಾಗಿ ಃ ಕರಪಾಲಮೇಳ, ವೀರಗಾಸೆ, ಕೋಲಾಟ ಮುಂತಾದ ಜಾನಪದ ಪ್ರಕಾರಳನ್ನು ನೃತ್ಯ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಡಿ.ಎಸ್.ಇ.ಆರ್.ಟಿ ಯ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರು, ಬೆಂಗಳೂರು, ಮಂಗಳೂರು, ಗುಲ್ಬರ್ಗಾ, ಕರ್ನಾಟಕ, ಮದ್ರಾಸ್, ಕೇರಳ ಮುಂತಾದ ವಿಶ್ವ ವಿದ್ಯಾನಿಲಯಗಳ ಪರೀಕ್ಷಾ ಮಂಡಳಿ ಹಾಗೂ ಅಧ್ಯಯನ ಮಂಡಳಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕುವೆಂಪು ವಿಶ್ವ ವಿದ್ಯಾನಿಲಯದ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ವಿಶ್ವ ವಿದ್ಯಾಲಯ ಮಟ್ಟಗಳಲ್ಲಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ 500 ಕ್ಕೂ ಹೆಚ್ಚು ಉಪನ್ಯಾಸ ಹಾಗೂ ಪ್ರಬಂಧ ಮಂಡನೆ ಮಾಡಿದ್ದಾರೆ.
ಸಾಹಿತ್ಯ ವಿಶ್ಲೇಷಣೆ ಃ ಇವರ ಸಾಹಿತ್ಯ ಕುರಿತು ನಾಡಿನ ಅನೇಕ ವಿದ್ವಾಂಸರು, ಪತ್ರಿಕೆಗಳು ಮೆಚ್ಚುಗೆ ವ್ಯಕ್ತ ಪಡಿಸಿವೆ.
1980, ಜುಲೈ-27 ರಲ್ಲಿ ಕನ್ನಡ ಪ್ರಭ ಪತ್ರಿಕೆಯು ಇವರ ಅಭಿನವ ಕಾಳೀದಾಸ ಬಸವಪ್ಪ ಶಾಸ್ತ್ರಿ ಕೃತಿ ಕುರಿತು ಈ ರೀತಿ ಉಲ್ಲೇಖಿಸಿದೆ “ ಸಿ.ಎಸ್.ಶಿವಕುಮಾರ ಸ್ವಾಮಿಯವರು ಬರೆದ ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿಗಳ ಜೀವನ ಸರ್ವಾಂಗ ಸುಂದರವಾಗಿದೆ. ಜೀವನ ಚರಿತ್ರೆಯಲ್ಲಿ ಇರಬೇಕಾದ ಎಲ್ಲಾ ಅಂಶಗಳು ಇಲ್ಲಿ ಸೇರಿವೆ”.
1996 ರಲ್ಲಿ ಲಂಕೇಶ ಪತ್ರಿಕೆಯು ಇವರ ನವಾಬ ಕವನ ಸಂಕಲನ ಕುರಿತು ಈ ರೀತಿ ಉಲ್ಲೇಖಿಸಿದೆ “ ಪರ್ಯಟನ, ಶ್ವಾನ ಸಂಹಿತೆ, ನಿದ್ರೆಗೂ ಬೇಕು ಸ್ಫೂರ್ತಿ ಮೊದಲಾದ ಹೆಚ್ಚು ಫೋಸ್ ಇಲ್ಲದ ಕವಿತೆಗಳೇ ಚಲ್ಯರ ಮುಖ್ಯ ಕವಿತೆಗಳೆನ್ನಬಹುದು”.
1996 ರಲ್ಲಿಯೇ ಇದೇ ಕವನ ಸಂಕಲನ ಕುರಿತು ಪ್ರಜಾವಾಣಿ ಪತ್ರಿಕೆಯು ಈ ರೀತಿ ಉಲ್ಲೇಖಿಸಿದೆ “ ಅನ್ಯೋಕ್ತಿಯಲ್ಲಿ ಮನತಟ್ಟುವ ಶ್ವಾನ ಸಂಹಿತೆ ಇಂದಿನ ವ್ಯಕ್ತಿಹೀನ ಬದುಕಿಗೆ ಕನ್ನಡಿ ಹಿಡಿದಿದೆ. ಗಾಢವಾಗಿ ತಟ್ಟುವ ನಾವು ಮತ್ತು ಹೃದಯ, ಪರಿಸರ, ಸಲಹೆ, ನವಾಬ ಮುಂತಾದ ಕವನಗಳು ಮತ್ತೆ ಮತ್ತೆ ಓದಲು ಹಚ್ಚುತ್ತವೆ. ಕುಮಾರಚಲ್ಯರು ಸಂವೇದನಾಶೀಲ ಪ್ರಬುದ್ಧ ಕವಿ ಎಂಬುದನ್ನು ಮೊದಲ ಸಂಕಲನದಲ್ಲೇ ಸಾಬೀತುಪಡಿಸಿ ಭರವಸೆ ಮೂಡಿಸಿದ್ದಾರೆ”.
2006 ಆಗಸ್ಟ್-8 ರಲ್ಲಿ ಆಂದೋಲನ ಪತ್ರಿಕೆಯು ಲೇಖನ ಸಂಗ್ರಹ ಕುರಿತು ಈ ರೀತಿ ಉಲ್ಲೇಖಿಸಿದೆ “ ಕುಮಾರಚಲ್ಯ ತಮ್ಮ ತಾತ್ವಿಕ ಜಿಜ್ಞಾಸೆಗೆ ಭಂಗ ತಂದುಕೊಳ್ಳುವುದಿಲ್ಲ. ಯಾವುದೇ ಅಧ್ಯಯನ ಕ್ರಮದ ಅನಿವಾರ್ಯತೆ ತಾತ್ವಿಕತೆ ಎಂಬುದನ್ನು ಅವರು ಗಂಭೀರವಾಗಿ ಸ್ವೀಕರಿಸಿದ್ದಾರೆ. ಸಂಕಲನದ ಪ್ರತಿ ಲೇಖನ ಈ ತಾತ್ವಿಕ ಜಿಜ್ಞಾಸೆಯ ಮೂಲಕವೇ ಆರಂಭವಾಗುತ್ತದೆ”.
2202 ನವಂಬರ್ 17 ರಂದು ಕನ್ನಡ ಪ್ರಭ ದಿನಪತ್ರಿಕಯು ಇವರ ದೇವುಡು ಕೃತಿ ಕುರಿತು ಈ ಕೆಳಗಿನಂತೆ ಉಲ್ಲೇಖಿಸಿದೆ “ ದೇವುಡು ಅವರ ಸಮಗ್ರ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿವೆ ಎಂಬುದಕ್ಕೂ ಪುರಾವೆಗಳಿವೆ. ವೈಯಕ್ತಿಕವಾದ ಜೀವನ ಸಂದರ್ಭಗಲ್ಲಿ ದೇವುಡು ತಳೆದ ವಿಭಿನ್ನ ದೃಷ್ಠಿಕೋನಗಳು ಕೃತಿಗಳಲ್ಲಿ ಪರೋಕ್ಷವಾಗಿ ಪ್ರತಿಫಲಿಸಿರುವುದನ್ನು ಕುಮಾರಚಲ್ಯ ಗಣನೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಹೊರನೋಟದಲ್ಲಿ ದೇವುಡು ಕೃತಿಗಳು ಪರಂಪರಾಗತ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ ಎನಿಸಿದರೂ ಸನಾತನ ಸಂಸ್ಕøತಿಯೊಳಗಿದ್ದ ಸಮಾನತೆಯ ತತ್ವಗಳನ್ನು ನೆನಪು ಮಾಡಿಕೊಡುವ ಸಂಗತಿಗಳನ್ನು ಚಲ್ಯ ತಮ್ಮ ವಿಮರ್ಶೆಯಲ್ಲಿ ಅನಾವರಣಗೊಳಿಸಿದ್ದಾರೆ”.
ಹೀಗೆ ಕುಮಾರಚಲ್ಯರವರು ಕನ್ನಡ ನಾಡು ನುಡಿಗೆ ತಮ್ಮದೇಯಾದ ಸಾಹಿತ್ಯಿಕ ಕೊಡುಗೆಗಳನ್ನು ನೀಡಿದ್ದಾರೆ. ಇವರ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ ಸಂದಿದೆ. ಅಲ್ಲದೆ 2013 ಜೂನ್ 14 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ