ಕನ್ನಡ ಮತ್ತು ಉರ್ದು ಸಾಹಿತ್ಯದ ಸೇತುಬಂಧ - ಪ್ರೊ.ಸೈಯದ್ ಶಹಬುದ್ದೀನ್
ಸಾಹಿತ್ಯದ ಬೆಳವಣಿಗೆಯಲ್ಲಿ ರಚನಾತ್ಮ
ಕತೆ ಎಷ್ಟು ಮುಖ್ಯವೋ ಭಾಷಾನುವಾದವೂ ಅಷ್ಟೇ ಮುಖ್ಯವಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಕನ್ನಡದಿಂದ ಆಂಗ್ಲಭಾಷೆಗೆ, ಆಂಗ್ಲಭಾಷೆಯಿಂದ ಇತರೆ ಭಾಷೆಗೆ ಭಾಷಾಂತರವಾಗುದು ಅಧಿಕ, ಆದರೆ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳು ಉರ್ದು ಅಥವಾ ಹಿಂದಿ ಭಾಷೆಗೆ ಭಾಷಾಂತರವಾಗಿರುವುದು ವಿರಳ. ಈ ನಿಟಿನಲ್ಲಿ ಪ್ರೊ.ಸೈಯದ್ ಶಹಬುದ್ದೀನ್ ಅವರು ಕನ್ನಡದ ಶ್ರೇಷ್ಠ ಕೃತಿಗಳನ್ನು ಉರ್ದು ಭಾಷೆಗೆ ಅನುವಾದಿಸಿ ಮುಸ್ಲಿಂ ಓದುಗರನ್ನೂ ಕನ್ನಡದ ಕೃತಿಗಳನ್ನು ಓದುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಶ್ರೀಯುತ ಸೈಹದ್ ಶಹಬುದ್ದೀನ್ ಅವರು 1951 ಏಪ್ರಿಲ್ 16 ರಂದು ಹಾಸನ ಜಿಲ್ಲೆಯ ಆಲೂರು ಪಟ್ಟಣದ ಶ್ರೀ ಸೈಹದ್ ಮಹಮೂದ್ ಹಾಗೂ ಶ್ರೀಮತಿಸೈದಾನಬೀ ದಂಪತಿಗಳ ದ್ವಿತೀಯ ಪುತ್ರರಾಗಿ ಜನಿಸಿದರು.
ಇವರ ತಂದೆ 1956 ರಲ್ಲಿ ಆಲೂರು ಮುನಿಸಿಪಾಲಿಟಿಯಉಪಾಧ್ಯಕ್ಷರಾಗಿದ್ದರು. ಶ್ರೀಯುತ ಶಹಬುದ್ದೀನ್ ಅವರು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಆಲೂರಿನಲ್ಲೇ ಮುಗಿಸಿದರು. ಮುಂದಿನ ವಿದ್ಯಾಭ್ಯಾಸವನ್ನು ಹಾಸನದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದರು. ನಂತರ 1979 ರಲ್ಲಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಉರ್ದುವಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ತರುವಾಯ ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ಉರ್ದು ಉಪನ್ಯಾಸಕರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು.
ಆದರೆ ಇವರು ಶಕ್ಷಣದ ಯಾವ ಹಂತದಲ್ಲಿಯೂ ಕನ್ನಡವನ್ನು ಕಲಿತವರಲ್ಲ ! ಏಕೆಂದರೆ ಅವರ ಮಾತೃ ಭಾಷೆ ಉರ್ದು. ಕನ್ನಡದ ಕಟ್ಟಾಳು ಡಾ|| ಹಾ. ಮಾ. ನಾಯಕ ಮುಂತಾದವರ ಮಾರ್ಗದರ್ಶನದಲ್ಲಿ ಸ್ವಯಂ ಪ್ರೇರಿತರಾಗಿ ಉಪನ್ಯಾಸಕರಾದ ಮೇಲೆ ಕನ್ನಡ ವರ್ಣಮಾಲೆಯಿಂದ ಅಕ್ಷರ ಕಲಿತು ಇಂದು ಯಾವ ಕನ್ನಡ ಸಾಹಿತಿಗಿಂತಲೂ ಕಡಿಮೆ ಇಲ್ಲದಂತೆ ಪ್ರಬುದ್ಧರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಹುಟ್ಟಿನಿಂದ ಕನ್ನಡ ಮಾತನಾಡುತ್ತಿದ್ದರಾದರೂ ಓದಲು, ಬರೆಯಲು ಕಲಿತದ್ದು ಮಾತ್ರ ಹರೆಯದಲ್ಲಿ !
ಮೊದಮೊದಲು ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಾಂಗರ್, ಗೊರೂರು ರಾಮಸ್ವಾಮಿ ಅಯ್ಯಾಂಗರ್, ಎಸ್.ಎಲ್.ಭೈರಪ್ಪ, ಅ.ನ.ಕೃ, ತ.ರಾ.ಸು ಮುಂತಾದ ಕನ್ನಡದ ಶ್ರೇಷ್ಠ ಸಾಹಿತ್ಯ ದಿಗ್ಗಜರ ಕೃತಿಗಳನ್ನು ಅಧ್ಯಯನ ಮಾಡಿದ ಇವರು ನಂತರ ಇಂತಹ ಅಮೂಲ್ಯ ಸಾಹಿತ್ಯವನ್ನು ಏಕೆ ಉರ್ದು ಭಾಷೆಗೆ ಭಾಷಾಂತರ ಮಾಡಿ ಉರ್ದು ಓದುಗರಿಗೂ ಈ ಸವಿಪಾಕವನ್ನು ಉಣಬಡಿಸಬಾರದು ಎಂಬ ಆಲೋಚನೆ ಮನೆ ಮಾಡಿತು. ಅದರ ಫಲವಾಗಿ ಡಾ|| ಎಸ್.ಎಲ್.ಭೈರಪ್ಪನವರ ‘ವಂಶ ವೃಕ್ಷ’ ಕಾದಂಬರಿಯನ್ನು ‘ಶಜರ-ಎ-ನಸಬ್’ ಎಂಬ ಹೆಸರಿನಲ್ಲಿ ಉರ್ದು ಭಾಷೆಗೆ ಭಾಷಾಂತರಿಸಿದರು. ಈ ಕೃತಿಯು ಗುಲ್ಬರ್ಗಾ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಉರ್ದು ವಿಭಾಗದ ಪಠ್ಯವಾಗಯಿತು. ಬಹುಶಃ ಈ ಕೃತಿಯು ಶಹಬುದ್ದೀನ್ ಅವರಿಗೆ ಉತ್ತಮ ಹೆಸರನ್ನು ತಂದು ಕೊಟ್ಟಿತೆನ್ನಬಹುದು.
ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ವಿಚಾರಗಳಿಗೆ ಮಾರು ಹೋಗಿದ್ದ ಇವರು ಹಲವಾರು ಬಾರಿ ಕುವೆಂಪು ಅವರನ್ನು ಸಂದರ್ಶಿಸಿ, ಸಾಹಿತ್ಯಿಕವಾಗಿ ಚರ್ಚಿಸಿ ವೈಶಾಲ್ಯತೆಯನ್ನು ಪಡೆದವರು. ಅವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ಬರವಣಿಗೆಯ ಮೂಲಕ ಹಾಗೂ ಭಾಷಣಗಳ ಮೂಲಕ ಪಲ್ಲವಿಸಿದ್ದಾರೆ. ಮುಂದೆ ‘ಶಾಯಿರ್-ಎ-ಅಜಮ್ ಕುವೆಂಪು’ ಎಂಬ ಕುವೆಂಪುರವರ ಜೀವನ ಚರಿತ್ರೆಯನ್ನು ಉರ್ದುವಿನಲ್ಲಿ ಬರೆದಿದ್ದಾರೆ. ಆ ಮೂಲಕ ಎಲ್ಲಾ ಇಸ್ಲಾಂ ಬಂಧುಗಳಿಗೆ ಅವರ ಮಾತೃಭಾಷೆಯಲ್ಲಿ ಕುವೆಂಪು ಬಗ್ಗೆ ಅರಿಯಲು ದಾರಿಯಾಗಿದ್ದಾರೆ.
ಅಲ್ಲದೆ ಶರಣರ ಮುನ್ನೂರು ವಚನಗಳನ್ನು ಕನ್ನಡದಿಂದ ಉರ್ದುವಿಗೆ ಅನುವಾದಿಸಿ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸಂಸ್ಕøತಿಕವಾಗಿ ವಿಶ್ವಮಾನವ ಸಂದೇಶ ಬೀರಿ ಆ ಮೂಲಕ ಸಮಸಮಾಜದ ಕನಸು ಕಂಡ ಅಮೂಲ್ಯ ಸಾಹಿತ್ಯವನ್ನು ಅನ್ಯ ಭಾಷಿಗರಿಗೂ ಉಣಬಡಿಸಿದ ಕೀರ್ತಿ ಶಹಬುದ್ದೀನ್ ಅವರದು ಎಂದರೆ ಅತಿಶಯೋಕ್ತಿಯಾಗಲಾರದು.
‘ಇಸ್ಲಾಂ ಅಂಡ್ ಸೊಸೈಟಿ’ ಎಂಬ ಆಂಗ್ಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಉರ್ದುವಿನ ನೂರು ವಚನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅಲ್ಲದೆ ಕುವೆಂಪುರವರ ‘ನನ್ನ ದೇವರು ಮತ್ತು ಇತರ ಕಥೆಗಳು’ ಕೃತಿಯನ್ನು ಉರ್ದುವಿಗೆ ಅನುವಾದಿಸಿದ್ದಾರೆ. ಹೀಗೆ ಕನ್ನಡದಿಂದ ಉರ್ದುವಿಗೆ, ಉರ್ದುವಿನಿಂದ ಕನ್ನಡಕ್ಕೆ, ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡುದರ ಮೂಲಕ ಬಹುಭಾಷಾ ಪಂಡಿತರಾಗಿಯೂ ನಮ್ಮ ಮುಂದೆ ನಿಂತಿದ್ದಾರೆ.
ಆಗಾಗ ಕನ್ನಡದ ಶ್ರೇಷ್ಠ ಲೇಖಕರ ಕಥೆಗಳನ್ನು ಓದಿದ ಇವರು ಅಷ್ಟಕ್ಕೆ ಸುಮ್ಮನಾಗದೆ ಅವುಗಳನ್ನು ಉರ್ದುವಿಗೆ ಭಾಷಾಂತರಿಸಿದ್ದಾರೆ. ಅವುಗಳಲ್ಲಿ ಬಿ.ಟಿ.ಲಲಿತ ನಾಯಕ್, ಅಬ್ದುಲ್ ಮಜೀದ್ ಖಾನ್, ಪೂರ್ಣಚಂದ್ರ ತೇಜಸ್ವಿ ಮತ್ತು ಬಾನುಮುಸ್ತಾಕ್ ಕಥೆಗಳು ಪ್ರಮುಖವಾಗಿವೆ.
ಉರ್ದು ಹಾಗೂ ಕನ್ನಡ ಭಾಷಾಭಿಮಾನಿಗಳಿಗಾಗಿ ಈ ಎರಡೂ ಭಾಷೆಗೂ ಸಾಮರಸ್ಯ ಬೆಳೆಸುವ ನಿಟ್ಟಿನಲ್ಲಿ ಒಂದು ಸಾವಿರಕ್ಕೂ ಉರ್ದು ಹಾಗೂ ಕನ್ನಡ ಗಾದೆ ಮತ್ತು ನುಡಿಗಟ್ಟುಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಹೆಸರಾಂತ ವೈಚಾರಿಕ ಹಾಗೂ ಪ್ರಗತಿಪರ ಚಿಂತಕರಾದ ಜ.ಹೊ.ನಾ ರವರ ‘ಅದಮ್ಯ’ ಕೃತಿಯನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಡಾ|| ರಾಜೇಗೌಡ ಹೊಸಳ್ಳಿಯವರ ‘ಮಹಾರಾಯನ ದುರ್ಗ’ ಎಂಬ ಆಲೂರು ತಾಲ್ಲೂಕಿನ ಖ್ಯಾತ ಜಾನಪದ ಕೃತಿಯ ಕಥೆಯನ್ನಾಧರಿಸಿದ ನಾಟಕವನ್ನು ರಚಿಸಿದ್ದಾರೆ.
ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ಹೊರತರುವ ‘ಅಧ್ಯಯನ’ ಸಂಚಿಕೆಯಲ್ಲಿ ‘ಅನುವಾದ ನನ್ನ ಅನುಭವ’ ಮತ್ತು ‘ಉರ್ದುವಿನಲ್ಲಿ ಕನ್ನಡ ಸಾಹಿತ್ಯ’ ಎಂಬ ಎರಡು ಅಮೂಲ್ಯ ಲೇಖನಗಳು ಪ್ರಕಟವಾಗಿವೆ.
ಇವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿದ ಆಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತಲ್ಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವುದರ ಮೂಲಕ ಪ್ರೊ.ಸೈಯದ್ ಶಹಾಬುದ್ದೀನ್ ಅವರಿಗೆ ಗೌರವ ಸಲ್ಲಿಸಿತು. ಪ್ರಸ್ತುತ ನಿವೃತ್ತಿ ಜೀವನ ನಡೆಸುತ್ತಿದ್ದರೂ ಪೂರ್ನ ಸಮಯವನ್ನು ಸಾಹಿತ್ಯಕ್ಕಾಗಿಯೇ ಮುಡಿಪಾಗಿಟ್ಟಿದ್ದಾರೆ. ಹಾಸನದ ಷರೀಫ್ ಕಾಲೋನಿಯಲ್ಲಿ ನೆಲೆಯಾಗಿರುವ ಇವರು ಸಾಹಿತ್ಯಿಕವಾಗಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ನಮ್ಮೆಲ್ಲರಿಗೂ ಮಾದರಿಯಾಗಿದೆ. ಸರಳ ನಡೆ-ನುಡಿಯ ಇವರು ಸದಾ ಹಸನ್ಮುಖಿ. ಸದಾ ಸಾಮಾಜಿಕ ಭಾಂಧವ್ಯ ಚೆನ್ನಾಗಿರಬೇಕು, ಎಲ್ಲರಲ್ಲೂ ವಿಶ್ವ ಮಾನವೀಯ ಮೌಲ್ಯಗಳು ಮನೆ ಮಾಡಬೇಕು ಎಂಬ ಮನೋತುಡಿತವನ್ನು ಹೊಂದಿದ ಶಹಾಬುದ್ದೀನ್ ಸಮಾಜಕ್ಕೆ ಒಡ್ಡಿಕೊಂಡ ಧೀಮಂತ ಚಿಂತಕರೆಂದರೆ ಅತಿಶಯೋಕ್ತಿಯಾಗಲಾರದು.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಸಾಹಿತ್ಯದ ಬೆಳವಣಿಗೆಯಲ್ಲಿ ರಚನಾತ್ಮ
ಕತೆ ಎಷ್ಟು ಮುಖ್ಯವೋ ಭಾಷಾನುವಾದವೂ ಅಷ್ಟೇ ಮುಖ್ಯವಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಕನ್ನಡದಿಂದ ಆಂಗ್ಲಭಾಷೆಗೆ, ಆಂಗ್ಲಭಾಷೆಯಿಂದ ಇತರೆ ಭಾಷೆಗೆ ಭಾಷಾಂತರವಾಗುದು ಅಧಿಕ, ಆದರೆ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳು ಉರ್ದು ಅಥವಾ ಹಿಂದಿ ಭಾಷೆಗೆ ಭಾಷಾಂತರವಾಗಿರುವುದು ವಿರಳ. ಈ ನಿಟಿನಲ್ಲಿ ಪ್ರೊ.ಸೈಯದ್ ಶಹಬುದ್ದೀನ್ ಅವರು ಕನ್ನಡದ ಶ್ರೇಷ್ಠ ಕೃತಿಗಳನ್ನು ಉರ್ದು ಭಾಷೆಗೆ ಅನುವಾದಿಸಿ ಮುಸ್ಲಿಂ ಓದುಗರನ್ನೂ ಕನ್ನಡದ ಕೃತಿಗಳನ್ನು ಓದುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಶ್ರೀಯುತ ಸೈಹದ್ ಶಹಬುದ್ದೀನ್ ಅವರು 1951 ಏಪ್ರಿಲ್ 16 ರಂದು ಹಾಸನ ಜಿಲ್ಲೆಯ ಆಲೂರು ಪಟ್ಟಣದ ಶ್ರೀ ಸೈಹದ್ ಮಹಮೂದ್ ಹಾಗೂ ಶ್ರೀಮತಿಸೈದಾನಬೀ ದಂಪತಿಗಳ ದ್ವಿತೀಯ ಪುತ್ರರಾಗಿ ಜನಿಸಿದರು.
ಇವರ ತಂದೆ 1956 ರಲ್ಲಿ ಆಲೂರು ಮುನಿಸಿಪಾಲಿಟಿಯಉಪಾಧ್ಯಕ್ಷರಾಗಿದ್ದರು. ಶ್ರೀಯುತ ಶಹಬುದ್ದೀನ್ ಅವರು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಆಲೂರಿನಲ್ಲೇ ಮುಗಿಸಿದರು. ಮುಂದಿನ ವಿದ್ಯಾಭ್ಯಾಸವನ್ನು ಹಾಸನದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದರು. ನಂತರ 1979 ರಲ್ಲಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಉರ್ದುವಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ತರುವಾಯ ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ಉರ್ದು ಉಪನ್ಯಾಸಕರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು.
ಆದರೆ ಇವರು ಶಕ್ಷಣದ ಯಾವ ಹಂತದಲ್ಲಿಯೂ ಕನ್ನಡವನ್ನು ಕಲಿತವರಲ್ಲ ! ಏಕೆಂದರೆ ಅವರ ಮಾತೃ ಭಾಷೆ ಉರ್ದು. ಕನ್ನಡದ ಕಟ್ಟಾಳು ಡಾ|| ಹಾ. ಮಾ. ನಾಯಕ ಮುಂತಾದವರ ಮಾರ್ಗದರ್ಶನದಲ್ಲಿ ಸ್ವಯಂ ಪ್ರೇರಿತರಾಗಿ ಉಪನ್ಯಾಸಕರಾದ ಮೇಲೆ ಕನ್ನಡ ವರ್ಣಮಾಲೆಯಿಂದ ಅಕ್ಷರ ಕಲಿತು ಇಂದು ಯಾವ ಕನ್ನಡ ಸಾಹಿತಿಗಿಂತಲೂ ಕಡಿಮೆ ಇಲ್ಲದಂತೆ ಪ್ರಬುದ್ಧರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಹುಟ್ಟಿನಿಂದ ಕನ್ನಡ ಮಾತನಾಡುತ್ತಿದ್ದರಾದರೂ ಓದಲು, ಬರೆಯಲು ಕಲಿತದ್ದು ಮಾತ್ರ ಹರೆಯದಲ್ಲಿ !
ಮೊದಮೊದಲು ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಾಂಗರ್, ಗೊರೂರು ರಾಮಸ್ವಾಮಿ ಅಯ್ಯಾಂಗರ್, ಎಸ್.ಎಲ್.ಭೈರಪ್ಪ, ಅ.ನ.ಕೃ, ತ.ರಾ.ಸು ಮುಂತಾದ ಕನ್ನಡದ ಶ್ರೇಷ್ಠ ಸಾಹಿತ್ಯ ದಿಗ್ಗಜರ ಕೃತಿಗಳನ್ನು ಅಧ್ಯಯನ ಮಾಡಿದ ಇವರು ನಂತರ ಇಂತಹ ಅಮೂಲ್ಯ ಸಾಹಿತ್ಯವನ್ನು ಏಕೆ ಉರ್ದು ಭಾಷೆಗೆ ಭಾಷಾಂತರ ಮಾಡಿ ಉರ್ದು ಓದುಗರಿಗೂ ಈ ಸವಿಪಾಕವನ್ನು ಉಣಬಡಿಸಬಾರದು ಎಂಬ ಆಲೋಚನೆ ಮನೆ ಮಾಡಿತು. ಅದರ ಫಲವಾಗಿ ಡಾ|| ಎಸ್.ಎಲ್.ಭೈರಪ್ಪನವರ ‘ವಂಶ ವೃಕ್ಷ’ ಕಾದಂಬರಿಯನ್ನು ‘ಶಜರ-ಎ-ನಸಬ್’ ಎಂಬ ಹೆಸರಿನಲ್ಲಿ ಉರ್ದು ಭಾಷೆಗೆ ಭಾಷಾಂತರಿಸಿದರು. ಈ ಕೃತಿಯು ಗುಲ್ಬರ್ಗಾ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಉರ್ದು ವಿಭಾಗದ ಪಠ್ಯವಾಗಯಿತು. ಬಹುಶಃ ಈ ಕೃತಿಯು ಶಹಬುದ್ದೀನ್ ಅವರಿಗೆ ಉತ್ತಮ ಹೆಸರನ್ನು ತಂದು ಕೊಟ್ಟಿತೆನ್ನಬಹುದು.
ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ವಿಚಾರಗಳಿಗೆ ಮಾರು ಹೋಗಿದ್ದ ಇವರು ಹಲವಾರು ಬಾರಿ ಕುವೆಂಪು ಅವರನ್ನು ಸಂದರ್ಶಿಸಿ, ಸಾಹಿತ್ಯಿಕವಾಗಿ ಚರ್ಚಿಸಿ ವೈಶಾಲ್ಯತೆಯನ್ನು ಪಡೆದವರು. ಅವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ಬರವಣಿಗೆಯ ಮೂಲಕ ಹಾಗೂ ಭಾಷಣಗಳ ಮೂಲಕ ಪಲ್ಲವಿಸಿದ್ದಾರೆ. ಮುಂದೆ ‘ಶಾಯಿರ್-ಎ-ಅಜಮ್ ಕುವೆಂಪು’ ಎಂಬ ಕುವೆಂಪುರವರ ಜೀವನ ಚರಿತ್ರೆಯನ್ನು ಉರ್ದುವಿನಲ್ಲಿ ಬರೆದಿದ್ದಾರೆ. ಆ ಮೂಲಕ ಎಲ್ಲಾ ಇಸ್ಲಾಂ ಬಂಧುಗಳಿಗೆ ಅವರ ಮಾತೃಭಾಷೆಯಲ್ಲಿ ಕುವೆಂಪು ಬಗ್ಗೆ ಅರಿಯಲು ದಾರಿಯಾಗಿದ್ದಾರೆ.
ಅಲ್ಲದೆ ಶರಣರ ಮುನ್ನೂರು ವಚನಗಳನ್ನು ಕನ್ನಡದಿಂದ ಉರ್ದುವಿಗೆ ಅನುವಾದಿಸಿ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸಂಸ್ಕøತಿಕವಾಗಿ ವಿಶ್ವಮಾನವ ಸಂದೇಶ ಬೀರಿ ಆ ಮೂಲಕ ಸಮಸಮಾಜದ ಕನಸು ಕಂಡ ಅಮೂಲ್ಯ ಸಾಹಿತ್ಯವನ್ನು ಅನ್ಯ ಭಾಷಿಗರಿಗೂ ಉಣಬಡಿಸಿದ ಕೀರ್ತಿ ಶಹಬುದ್ದೀನ್ ಅವರದು ಎಂದರೆ ಅತಿಶಯೋಕ್ತಿಯಾಗಲಾರದು.
‘ಇಸ್ಲಾಂ ಅಂಡ್ ಸೊಸೈಟಿ’ ಎಂಬ ಆಂಗ್ಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಉರ್ದುವಿನ ನೂರು ವಚನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅಲ್ಲದೆ ಕುವೆಂಪುರವರ ‘ನನ್ನ ದೇವರು ಮತ್ತು ಇತರ ಕಥೆಗಳು’ ಕೃತಿಯನ್ನು ಉರ್ದುವಿಗೆ ಅನುವಾದಿಸಿದ್ದಾರೆ. ಹೀಗೆ ಕನ್ನಡದಿಂದ ಉರ್ದುವಿಗೆ, ಉರ್ದುವಿನಿಂದ ಕನ್ನಡಕ್ಕೆ, ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡುದರ ಮೂಲಕ ಬಹುಭಾಷಾ ಪಂಡಿತರಾಗಿಯೂ ನಮ್ಮ ಮುಂದೆ ನಿಂತಿದ್ದಾರೆ.
ಆಗಾಗ ಕನ್ನಡದ ಶ್ರೇಷ್ಠ ಲೇಖಕರ ಕಥೆಗಳನ್ನು ಓದಿದ ಇವರು ಅಷ್ಟಕ್ಕೆ ಸುಮ್ಮನಾಗದೆ ಅವುಗಳನ್ನು ಉರ್ದುವಿಗೆ ಭಾಷಾಂತರಿಸಿದ್ದಾರೆ. ಅವುಗಳಲ್ಲಿ ಬಿ.ಟಿ.ಲಲಿತ ನಾಯಕ್, ಅಬ್ದುಲ್ ಮಜೀದ್ ಖಾನ್, ಪೂರ್ಣಚಂದ್ರ ತೇಜಸ್ವಿ ಮತ್ತು ಬಾನುಮುಸ್ತಾಕ್ ಕಥೆಗಳು ಪ್ರಮುಖವಾಗಿವೆ.
ಉರ್ದು ಹಾಗೂ ಕನ್ನಡ ಭಾಷಾಭಿಮಾನಿಗಳಿಗಾಗಿ ಈ ಎರಡೂ ಭಾಷೆಗೂ ಸಾಮರಸ್ಯ ಬೆಳೆಸುವ ನಿಟ್ಟಿನಲ್ಲಿ ಒಂದು ಸಾವಿರಕ್ಕೂ ಉರ್ದು ಹಾಗೂ ಕನ್ನಡ ಗಾದೆ ಮತ್ತು ನುಡಿಗಟ್ಟುಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಹೆಸರಾಂತ ವೈಚಾರಿಕ ಹಾಗೂ ಪ್ರಗತಿಪರ ಚಿಂತಕರಾದ ಜ.ಹೊ.ನಾ ರವರ ‘ಅದಮ್ಯ’ ಕೃತಿಯನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಡಾ|| ರಾಜೇಗೌಡ ಹೊಸಳ್ಳಿಯವರ ‘ಮಹಾರಾಯನ ದುರ್ಗ’ ಎಂಬ ಆಲೂರು ತಾಲ್ಲೂಕಿನ ಖ್ಯಾತ ಜಾನಪದ ಕೃತಿಯ ಕಥೆಯನ್ನಾಧರಿಸಿದ ನಾಟಕವನ್ನು ರಚಿಸಿದ್ದಾರೆ.
ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ಹೊರತರುವ ‘ಅಧ್ಯಯನ’ ಸಂಚಿಕೆಯಲ್ಲಿ ‘ಅನುವಾದ ನನ್ನ ಅನುಭವ’ ಮತ್ತು ‘ಉರ್ದುವಿನಲ್ಲಿ ಕನ್ನಡ ಸಾಹಿತ್ಯ’ ಎಂಬ ಎರಡು ಅಮೂಲ್ಯ ಲೇಖನಗಳು ಪ್ರಕಟವಾಗಿವೆ.
ಇವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿದ ಆಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತಲ್ಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವುದರ ಮೂಲಕ ಪ್ರೊ.ಸೈಯದ್ ಶಹಾಬುದ್ದೀನ್ ಅವರಿಗೆ ಗೌರವ ಸಲ್ಲಿಸಿತು. ಪ್ರಸ್ತುತ ನಿವೃತ್ತಿ ಜೀವನ ನಡೆಸುತ್ತಿದ್ದರೂ ಪೂರ್ನ ಸಮಯವನ್ನು ಸಾಹಿತ್ಯಕ್ಕಾಗಿಯೇ ಮುಡಿಪಾಗಿಟ್ಟಿದ್ದಾರೆ. ಹಾಸನದ ಷರೀಫ್ ಕಾಲೋನಿಯಲ್ಲಿ ನೆಲೆಯಾಗಿರುವ ಇವರು ಸಾಹಿತ್ಯಿಕವಾಗಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ನಮ್ಮೆಲ್ಲರಿಗೂ ಮಾದರಿಯಾಗಿದೆ. ಸರಳ ನಡೆ-ನುಡಿಯ ಇವರು ಸದಾ ಹಸನ್ಮುಖಿ. ಸದಾ ಸಾಮಾಜಿಕ ಭಾಂಧವ್ಯ ಚೆನ್ನಾಗಿರಬೇಕು, ಎಲ್ಲರಲ್ಲೂ ವಿಶ್ವ ಮಾನವೀಯ ಮೌಲ್ಯಗಳು ಮನೆ ಮಾಡಬೇಕು ಎಂಬ ಮನೋತುಡಿತವನ್ನು ಹೊಂದಿದ ಶಹಾಬುದ್ದೀನ್ ಸಮಾಜಕ್ಕೆ ಒಡ್ಡಿಕೊಂಡ ಧೀಮಂತ ಚಿಂತಕರೆಂದರೆ ಅತಿಶಯೋಕ್ತಿಯಾಗಲಾರದು.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ