ಮಂಗಳವಾರ, ಮೇ 5, 2015

ಮೇ 7 ಮತ್ತು 8 ರಂದು ನಾಟಕ ಪ್ರದರ್ಶನ, ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮ

ಹಾಸನ : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಹಾಗೂ ಅರಸೀ ಸಾಂಸ್ಕøತಿಕ ವೇದಿಕೆ(ರಿ), ಅರಸೀಕೆರೆ ಇವರ ಸಹಯೋಗದಲ್ಲಿ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮೇ 7 ಮತ್ತು 8 ರಂದು  ನಾಟಕ ಪ್ರದರ್ಶನ, ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೇ 7 ರ ಸಂಜೆ 05.30 ಕ್ಕೆ ಬೆಂಗಳೂರಿನ ನಂದನ ಕಲಾ ತಂಡವು ದೇವ್ ನಾಗೇಶ್ ಹಾಗೂ ರತ್ನಾ ನಾಗೇಶ್ ರವರ ನಿರ್ದೇಶನದಲ್ಲಿ ಡಾ||ಚಂದ್ರಶೇಖರ್ ಕಂಬಾರ್ ವಿರಚಿತ ‘ಬೆಪ್ಪು ತಕ್ಕಡಿ ಬೋಳೆ ಶಂಕರ’ ನಾಟಕವನ್ನು ಪ್ರದರ್ಶಿಸಲಿದೆ.
ಹಾಸನ ಕ್ಷೇತ್ರದ ಶಾಸಕರಾದ ಮಾನ್ಯ ಎಚ್.ಎಸ್.ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ರವಿ ನಾಕಲಗೂಡು ಉದ್ಘಾಟಿಸುವರು. ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಗಂಗಾಧರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹನಿರ್ದೇಶಕರಾದ ಶ್ರೀ ಟಿ.ಮೂತ್ರ್ಯಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಚ್.ಎಲ್.ಜನಾರ್ಧನ, ಅರಸೀ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷರಾದ ಎಸ್.ಎನ್.ಮಮತಾ ರಾಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮೇ 8 ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಹಾಸನದ ಮನೆ ಮನೆ ಕವಿಗೋಷ್ಠಿ ಸಂಘಟನೆಯ ಸಹಕಾರದಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಲಿದೆ. ಕವಿ ಎನ್.ಎಲ್.ಚನ್ನೇಗೌಡ ಅಧ್ಯಕ್ಷತೆ ವಹಿಸುವರು. ವಿಚಾರ ಸಾಹಿತಿ ಚಂದ್ರಕಾಂತ ಪಡೆಸೂರ ಉದ್ಘಾಟಿಸುವರು. ತ್ರಿಮೂರ್ತಿ ಹುಣಸೀಕಟ್ಟೆ, ಸುಶೀಲಾ ಸೋಮಶೇಖರ್, ಕುಸುಮಬಾಲೆ, ಶೈಲಜಾ ಹಾಸನ, ಡಾ||ಪ್ರಕಾಶ್ ಖಾಡೆ, ಡಾ||ಕೆ.ಕೆ.ಜಯಚಂದ್ರಗುಪ್ತ, ಕೆ.ನಲ್ಲತಂಬಿ, ಕೊಟ್ರೇಶ್ ಎಸ್.ಉಪ್ಪಾರ್, ಶಮ್ಮೀ ಸಂಜೀವ್, ನವಾಬ್ ಬೇಲೂರ್, ಭಾಸ್ಕರ್ ಪ್ರಸಾದ್, ನಾಗರಾಜ್ ಹೆತ್ತೂರ್, ಅಪ್ಪಗೆರೆ ಟಿ.ಡಿ.ಲಂಕೇಶ್, ಕೆ.ಟಿ.ಜಯಶ್ರೀ, ರಾಜಶೇಖರ್ ಬಂಡೆ, ಚಿನ್ನೇನಹಳ್ಳಿ ಸ್ವಾಮಿ, ಶಂಕರ ಸಿಹಿಮೊಗೆ, ದಿವಾಕರ್ ಅಜಾದ್, ಭಾರತಿ ಹಾದಿಗೆ, ಶಿವಕುಮಾರ್ ಮಾಳಿಗೆ, ಶ್ರೀವಿಜಯ ಹಾಸನ, ನಿಶಾ ಗೋಪಿನಾಥ್, ಕಲಾವತಿ ಮಧುಸೂದನ್, ಶೈಲಜಾ ಮೈಸೂರ್, ಗೊರೂರು ಅನಂತರಾಜು, ಹರೀಶ್ ಕಟ್ಟೆ ಬೆಳಗುಲಿ, ಶರತ್ ಚಕ್ರವರ್ತಿ, ಶಶಾಂಖ್ ಜೋಯಿಸ್, ಎಚ್.ಕೆ.ಶರತ್, ಬೇಲೂರು ರಘುನಂದನ್, ಚಲಂ ಹಾಡ್ಲಹಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ 60 ಕ್ಕೂ ಹೆಚ್ಚು ಕವಿಗಳು ಕವಿತೆ ವಾಚನ ಮಾಡಲಿದ್ದಾರೆ.
ಮೇ 8 ಸಂಜೆ 04.30 ಕ್ಕೆ ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮ ಶತಮಾನೋತ್ಸವ ಅಂಗವಾಗಿ ‘ಕೆ.ಎಸ್.ನ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನ’ ವನ್ನು ಆಯೋಜಿಸಲಾಗಿದೆ. ಖ್ಯಾತ ರಂಗಕರ್ಮಿಗಳಾದಶ್ರೀನಿವಾಸ ಜಿ.ಕಪ್ಪಣ್ಣ ಅಧ್ಯಕ್ಷತೆ ವಹಿಸುವರು. ಖ್ಯಾತ ಕವಿಗಳಾದ ಡಾ||ಎಚ್.ಎಸ್.ವೆಂಕಟೇಶ ಮೂರ್ತಿಯವರು ಉದ್ಘಾಟಿಸುವರು. ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಕಾಂತರಾಜು, ಎಂ.ಆರ್.ಸತೀಶ್, ಕೆ.ಆರ್.ಪ್ರವೀಣ್, ಮಮತಾ ಅರಸೀಕೆರೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮೇ 8 ಸಂಜೆ 05.30 ಕ್ಕೆ ಕನ್ನಡದ ಖ್ಯಾತ ಗಾಯಕರು ಹಾಗೂ ಸಂಗೀತ ನಿರ್ದೇಶಕರಾದ ಶ್ರೀ ರಾಮಚಂದ್ರ ಹಡಪದ್ ಮತ್ತು ತಂಡದಿಂದ ‘ಕೆ.ಎಸ್.ನ ಕವನ ಹಡಪದ್ ಗಾಯನ’ ಎಂಬ ಕಾರ್ಯಕ್ರಮವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ