ಮಹಿಳಾ ಸಂವೇದನೆಯ ಮೇರು ಚಿಂತಕಿ - ಬಾನು ಮುಷ್ತಾಕ್
ಆಧುನಿಕ ಭಾರತದ ಸಾಮಾಜಿಕ ವ್ಯವಸ್ಥೆಗೆ ಚಲನಶೀಲವಾದ ಗುಣ ಬಂದದ್ದೇ ಆಂಗ್ಲರ ಆಡಳಿತದಿಂದಾಗಿ. ಈ ಕಾರಣಕ್ಕಾಗಿಯೇ ಮಹಿಳೆಯರು, ದಲಿತರು ಅಕ್ಷರ ಸಂಸ್ಕøತಿಗೆ ಒಂದು ಪ್ರವಾಹ ರೂಪದಲ್ಲಿ ನುಗ್ಗಿ ಬರುವಂತಾಯಿತು. ಈ ನೆಲೆಗೆ ಜೀವ ತುಂಬಿದವರು ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಮುಂದುವರೆದು ಸಾಹೂ ಮಹಾರಾಜ, ಡಾ||ಬಾಬಾಸಾಹೇಬ ಅಂಬೇಡ್ಕರ್ ಇವರೆಲ್ಲರ ನಿರಂತರ ಹೋರಾಟದಿಂದ ಸಮಾಜಮುಖಿ ಚಿಂತನೆಗೆ ಜೀವ ಪಡೆಯಿತು. ಹೀಗಾಗಿ ದಲಿತರು , ಮಹಿಳೆಯರು ತಮ್ಮ ಸ್ವಾಭಿಮಾನದ ಬದುಕಿನ ಎಲ್ಲ ಮಗ್ಗಲುಗಳನ್ನು ಅಕ್ಷರ ಲೋಕಕ್ಕೆ ಪರಿಚಯಿಸಿದರು. ಆ ಮೂಲಕ ಹೊಸದೊಂದು ಅನುಭವ ಕಟ್ಟಿಕೊಟ್ಟ ಕೀರ್ತಿ ಆ ವರ್ಗಗಳಿಗೆ ಸೇರಬೇಕು. ಅನೇಕ ಬರಹಗಾರರು, ಬರಹಗಾರ್ತಿಯರು ನೂರಾರು ನದಿಗಳಂತೆ ರೂಪುಗೊಂಡಿದ್ದಾರೆ.
70-80ರ ದಶಕದಲ್ಲಿ ದಲಿತ ಮತ್ತು ಬಂಡಾಯದ ಕಾವು ತೀವ್ರತರವಾಗಿತ್ತೆಂದು ಹೇಳಬಹುದು. ಸಾ.ರ.ಅಬುಬಕ್ಕರ್, ಬಾನುಮುಸ್ತಾಕ್ ಈ ಹಂತದಲ್ಲಿ ದಿಟ್ಟಬರವಣಿಗೆಯ ಮೂಲಕ ಗುರುತಿಸಿಕೊಂಡ ಅಪರೂಪದ ಮುಸ್ಲಿಂ ಲೇಖಕಿಯರು. ಸಾಮಾಜಿಕ, ಸಾಂಸ್ಕøತಿಕ ಕಾಳಜಿ, ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ಬಾನುಮುಸ್ತಾಕರ ಬಂಡಾಯ ಧ್ವನಿ ಗಮನಾರ್ಹವಾದುದು.
ಪುರುಷ ಪಾರಮ್ಯವಿರುವ ಸಮಾಜದಲ್ಲಿ ಗಂಡು ಹೆಣ್ಣುಗಳ ನಡುವಿನ ಅಸಮಾನತೆಯ ಮೇಲುಕೀಳು ಎಂಬ ಕೇವಲ ಸಾಂಕೇತಿಕ ಮಾದರಿಗಳಲ್ಲಿ ಮಾತ್ರ ಉಳಿಯದೆ ಸಂಸ್ಕøತಿಯ ಬೇರುಗಳಿಗೂ ಇಳಿದಿರುತ್ತದೆ ಎಂಬುದನ್ನು ಸನಾತನ ಕಾಲದಿಂದಲೂ ಕಾಣುತ್ತಾ ಬಂದಿದ್ದೇವೆ. ಬಾನು ಮುಷ್ತಾಕ್ರವರು ತಾವು ಕಂಡಿದ್ದನ್ನು, ಅನುಭವಿಸಿದ್ದನ್ನು ಪ್ರಕಟಿಸುವುದು, ಹೊರಗೆಡುವುದು, ವ್ಯಕ್ತಪಡಿಸುವುದು, ಆತ್ಮ ಸಾಕ್ಷಿಗೆ ವಿರುದ್ದವಾಗಿ ರಾಜಿಯಾಗದ ಸೈದ್ಧಾಂತಿಕ ಧೋರಣೆ ಇವರದು.
ಈ ಹೊತ್ತು ನವ ವಸಶಹತುಶಾಹಿ ಸೃಷ್ಠಿಸಿರುವ ಜಾಗತೀಕರಣ, ಉದಾರಿಕರಣ ಮತ್ತು ಖಾಸಗಿಕರಣಗಳಂತಹ ಸೂಕ್ಷ್ಮ ಪರಿಣಾಮಗಳು ಇಡೀ ಮನುಷ್ಯನನ್ನೇ ನೊಣಚಿ ನುಂಗಿದೆ. ಮನುಷ್ಯ ಸಂಬಂಧಗಳು, ಮಾನವತೆ, ಪ್ರೀತಿ ಈ ಎಲ್ಲವೂ ಕೂಡ ವ್ಯಾಪಾರಿ ವಸ್ತುಗಳಾಗಿವೆ. ಈ ನವ ವಸಾಹತುಶಾಹಿ ಸೃಷ್ಠಿಸಿರುವ ಸೂಕ್ಷ್ಮ ಪರಿಣಾಮಗಳು ನಮ್ಮ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಚರ್ಚೆಯ ಕೇಂದ್ರಗಳಾಗಿವೆ ಎಂಬುದನ್ನು ಅಲ್ಲಗಳೆಯಲಾಗದು. ಇಂತಹ ಹಲವು ಮಹಿಳಾ ಬದುಕಿನ ದಾವಂತಗಳನ್ನು ತಮ್ಮ ಪ್ರಖರ ಬರವಣಿಗೆಯ ಮೂಲಕ ನಾಡಿನ ಜನತೆಯ ಮುಂದೆ ಅನಾವರಣಗೊಳಿಸುತ್ತಾ ಬಂದಿರುವವರು ಬಾನು ಮುಷ್ತಾಕ್ಅವರೆಂದರೆ ಅತಿಶಯೋಕ್ತಿಯಾಗಲಾರದು.
ಜನನ ಃ ಶ್ರೀಮತಿ ಬಾನು ಮುಷ್ತಾಕ್ ಅವರು ಕ್ರಿ.ಶ.1948 ಏಪ್ರಿಲ್ 03 ರಂದು ಹಾಸನ ನಗರದ ಎಸ್.ಎ.ರೆಹಮಾನ್ ಹಾಗೂ ಅಖ್ತರ್ ಬಾನು ದಂಪತಿಗಳ ಪುತ್ರಿಯಾಗಿ ಜನಿಸಿದರು. ಇವರ ತಂದೆ ಸರಕಾರಿ ನೌಕರಿಯಲ್ಲಿದ್ದುದರಿಂದ ಅವರು ವರ್ಗವಾದೆÀಡೆಗೆಲ್ಲಾ ಹೋಗಬೇಕಾದುದ್ದರಿಂದ ಇವರ ಶಿಕ್ಷಣವು ಒಂದು ಕಡೆ ನೆಲೆಗೊಳ್ಳದೆ ಹಾಸನ, ಶಿವಮೊಗ್ಗ, ಕೃಷ್ಣರಾಜ ಸಾಗರ, ಚಾಮರಾಜನಗರ ಮುಂತಾದೆಡೆಗಳಲ್ಲಿ ನಡೆಯಿತು. ಪದವಿಯನ್ನು ಹಾಸನದ ಸರ್ಕಾರಿ ಕಾಲೇಜಿನಲ್ಲಿ ಮುಗಿಸಿದ ಇವರು ನಂತರ ಆಯ್ಕೆ ಮಾಡಿಕೊಂಡದ್ದು ವಕೀಲಿ ಓದನ್ನು. ಬಿ.ಎಸ್ಸಿ, ಎಲ್.ಎಲ್.ಬಿ ಪದವಿಧರೆಯಾದ ಇವರು ಯಾವುದೇ ಮೌಢ್ಯಕ್ಕೆ ಒಳಗಾಗದೇ ಬದುಕನ್ನು, ಸಮಾಜವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತಿಸಿ, ಮಂಥಿಸಿ ಸಮಭಾವದಿಂದ ನೋಡುವ ಬರಹಗಾರ್ತಿ. ಸದಾ ಸಮಸಮಾಜದ ಕನಸುಗಾರರಾದ ಇವರು ಮಾನವೀಯತೆಯ ನೆಲೆಯಲ್ಲಿ ಮುನ್ನಡೆಯುತ್ತಾ ಬಂದಿದ್ದಾರೆ.
ವೃತ್ತಿ : 1981-1990ರವರೆಗೆ ಲಂಕೇಶ್ ಪತ್ರಿಕೆಯ ಜಿಲ್ಲಾ ವರದಿಗಾರ್ತಿಯಾಗುವುದರ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ತಮ್ಮ ಬರಹದ ಹಾಗೂ ದಿಟ್ಟ ವರದಿಗಳ ಮೂಲಕ ಕನ್ನಡಿಗರ ಜನ ಮಾನಸದಲ್ಲಿ ನೆಲೆಯೂರಿದರೆನ್ನಬಹುದು. ಈ ಒಂದು ತಿರುವು ಇವರು ಗಟ್ಟಿ ಬರಹಗಾರ್ತಿಯಾಗಲು ಕಾರಣವಾಯಿತು. ಬದುಕು ಮತ್ತು ಮಾತು ಎರಡನ್ನೂ ಬರಹಗಳ ಕ್ಯಾನ್ವಾಸ್ಸಿನ ಮೇಲೆ ವಿಶಿಷ್ಟ ರೂಪುಗಳನ್ನು ನೀಡುವ ನಿಟ್ಟಿನಲ್ಲಿ ರಚನಾ ಕೌಶಲ್ಯ, ಅನನ್ಯ ಶ್ರದ್ಧೆ, ವೈಚಾರಿಕ ಪ್ರಕರತೆಗಳ ಬಳಸುವ ಇವರ ಶೈಲಿ ಅದ್ಭುತವಾದದ್ದು. ನಂತರ 1990 ರಿಂದ ಪ್ರಸ್ತುತದವರೆಗೂ ನ್ಯಾಯವಾದಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನೊಂದ, ಶೋಷಣೆಗೆ ಒಳಗಾದ, ಕಷ್ಟದಲ್ಲಿರುವ ಅನೇಕ ಮಹಿಳೆಯರಿಗೆ ತನ್ಮೂಲಕ ನ್ಯಾಯ ಒದಗಿಸಿ ಕೊಟ್ಟಿದ್ದಾರೆ.
ಸಾಹಿತ್ಯ ಕ್ಷೇತ್ರ :
1) ಕಥಾ ಸಂಕಲನಗಳು : ಹೆಜ್ಜೆ ಮೂಡಿದ ಹಾದಿ (1990), ಬೆಂಕಿ ಮಳೆ (1999), ಎದೆಯ ಹಣತೆ (2004), ಸಫೀರಾ(2006), ಬಡವರ ಮಗಳು ಹೆಣ್ಣಲ್ಲ (2012),
2) ಕಾದಂಬರಿ : ಕುಬ್ರ
3) ಲೇಖನ ಸಂಗ್ರಹ : ಇಬ್ಬನಿಯ ಕಾವು
4) ಕಾನೂನು ಗ್ರಂಥ : ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ
5) ಇತರರ ಸಂಪಾದಕತ್ವದಲ್ಲಿ ಬಾನು ಮುಷ್ತಾಕರ ಸಾಹಿತ್ಯ ಃ
1) ಕನ್ನಡ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಗಳಲ್ಲಿ ಇವರ ಅನೇಕ ಕಥೆಗಳನ್ನು ಪ್ರಕಟಿಸಿದೆ.
ಅ) ಕಾಳೇಗೌಡ ನಾಗವಾರರವರ ಸಂಪಾದಕತ್ವದಲ್ಲಿ ‘ರಾಹಿಲ ಎಂಬ ಕನ್ಯೆಯ ಕಥೆ’(1984).
ಆ) ನಾ.ಡಿಸೋಜಾರವರ ಸಂಪಾದಕತ್ವದಲ್ಲಿ ‘ಸರಿದ ಕಾರ್ಮೋಡ’ ಎಂಬ ಕಥೆ(1987).
ಇ) ಅಮರೇಶ ನುಡಗೋಣಿ ಸಂಪಾದಕತ್ವದಲ್ಲಿ ‘ಒಮ್ಮೆ ಹೆಣ್ಣಾಗು ಪ್ರಭುವೆ’.
ಈ) ಪಾರಿವಾಳದ ರೆಕ್ಕೆಗಳು (2005)
2) 1999ರಲ್ಲಿ ಪ್ರಿಸಮ್ ಪ್ರಕಾಶನದವರು ಡಾ|| ಅಮೂರರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ಶತಮಾನದ ಮಾಲಿಕೆಯ ‘ಅವಳ ಕೃತಿಗಳು’ ಸಂಕಲನದಲ್ಲಿ ‘ಸರಿದ ಕಾರ್ಮೋಡ’ ಎಂಬ ಕಥೆ ಪ್ರಕಟವಾಗಿದೆ.
3) ಡಾ|| ಅಮೂರರ ಸಂಪಾದಕತ್ವದಲ್ಲಿ ಅಂಕಿತ ಪ್ರಕಾಶನದ “ಸ್ವಾತಂತ್ರೋತ್ತರ ಕನ್ನಡ ಕಥಾಲೋಕ”ದಲ್ಲಿ ಸೇರ್ಪಡೆ “ದೇವರು ಮತ್ತು ಅಪಘಾತ”(2004)
7) ಕಾವ್ಯ : ಅನೇಕ ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರ ಕವನ ಸಂಕಲನ ಅಚ್ಚಿನಲ್ಲಿದೆ.
8) ಅನುವಾದ : 1) ‘ಪರಕೀಯ’ ಕಥೆ ಹಿಂದಿ ಭಾಷೆಯಲ್ಲಿ ಅನುವಾದಗೊಂಡಿದ್ದು, ಉತ್ತರ ಪ್ರದೇಶದ ಹಿಂದಿ ಅಕಾಡೆಮಿಯ ಪ್ರಕಟಣೆಯಾದ ಇಂದ್ರ ಪ್ರಸ್ಥ ಭಾರತಿಯಲ್ಲಿ ಪ್ರಕಟವಾಗಿದೆ.
2) ‘ಬೆಂಕಿ ಮಳೆ’ ಕಥಾ ಸಂಕಲನದ ಕಥೆಗಳು ಮಲಯಾಳಂ ಭಾಷೆಗೆ ಅನುವಾದಗೊಂಡಿದ್ದು, ದೇಶಭಿಮಾನಿ ಹಾಗೂಸ್ತ್ರೀ ಸಬ್ದಮ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಹಾಗೂ ಕಥಾ ಸಂಕಲನ ಮಲಯಾಳಂನಲ್ಲಿ ಪ್ರಕಟವಾಗಿವೆ.
3) ಉರ್ದು, ಪಂಜಾಬಿ , ಇಂಗ್ಲೀಷ್ ಭಾಷೆಗೆ ಕಥೆಗಳು ಅನುವಾದಗೊಂಡು ಪ್ರಕಟವಾಗಿವೆ.
4) ಫ.ಗು.ಹಳಕಟ್ಟಿಸಂಶೋಧನ ಕೇಂದ್ರದವರು ಆದಿಲ್ಶಾಹಿ ಚರಿತ್ರೆಯಾದ ತಾರೀಕ್-ಎ-ಫರಿಷ್ತಾ ಗ್ರಂಥವನ್ನು ಕನ್ನಡಕ್ಕೆ
ಭಾಷಾಂತರಿಸುವ ಕಾರ್ಯವನ್ನು ಕೈಗೊಂಡ ಸಂದರ್ಭದಲ್ಲಿ 250 ಪುಟಗಳ ಚರಿತ್ರೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಚಲನ ಚಿತ್ರ : ‘ಕರಿ ನಾಗರಗಳು ಎಂಬ ಇವರ ಸಣ್ಣ ಕಥೆ “ಹಸೀನಾ” ಎಂಬ ಹೆಸರಿನ ಚಲನಚಿತ್ರವಾಗಿದ್ದು, ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿರುವ ಈ ಚಲನ ಚಿತ್ರಕ್ಕೆ ತಾರಾರವರು ನಿರ್ಮಾಪಕಿಯಾಗುವುದರ ಜೊತೆಗೆ ನಟನೆಯ ಮೂಲಕ ಜೀವ ತುಂಬಿರುವುದು ಮಹತ್ವಪೂರ್ಣವಾದದ್ದು. ಈ ಚಿತ್ರಕ್ಕೆ ಮೂರು ರಾಷ್ಟ್ರ ಪ್ರಶಸ್ತಿ ಬಂದಿರುವುದು ಬಾನು ಮುಷ್ತಾಕರ ಗೌರವವು ರಾಷ್ಟ್ರ ಮಟ್ಟದಲ್ಲಿ ಪ್ರಜ್ವಲಿಸಲು ಕಾರಣವಾಯಿತು.
ಸಾರ್ವಜನಿಕ ಸೇವೆ : ಇವರು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತ ವಾಗಿರದೆ ಸ್ಥಳೀಯ ರಾಜಕೀಯಕ್ಕೂ ಧುಮುಕುವ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿಯೂ ಸೇವೆ ಮಾಡಿದ್ದಾರೆ. ಹಾಸನ ನಗರ ಸಭೆಗೆ 1983ರಿಂದ ಎರಡು ಅವಧಿಗೆ ನಗರ ಸಭಾ ಸದಸ್ಯೆಯಾಗಿ ಆಯ್ಕೆಯಾಗಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಹಾಸನದ ಜಿಲ್ಲಾ ಶ್ರೀ ಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ ಸಂದರ್ಶಕರ ಮಂಡಳಿಯ ಅಧ್ಯಕ್ಷೆಯಾಗಿ ಉತ್ತಮ ಕೆಲಸ ಮಾಡುವುದರ ಮೂಲಕ ಜನರ ಮನ ಗೆದ್ದಿದ್ದಾರೆ. ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆಯಾಗಿ. ಹಾಸನ ನಗರ ಗ್ರಂಥಾಲಯದ ಸಮಿತಿ ಸದಸ್ಯೆಯಾಗಿ, ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಸನದ ಜಿಲ್ಲಾ ಸಮತಾ ವೇದಿಕೆಯ ಅಧ್ಯಕ್ಷೆಯಾಗಿ ಮತ್ತು ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದಾರೆ.
ಸಂಘ ಸಂಸ್ಥೆಗಳಲ್ಲಿ ಸೇವೆ : 1995ರಿಂದ 98ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯ ಸದಸ್ಯೆಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿಯ ಕಾರ್ಯಕಾರಿ ಸಮಿತಿಯ ಮಾಜಿ ಸದಸ್ಯೆಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಸಮಿತಿಯ ಮಾಜಿ ಸದಸ್ಯೆಯಾಗಿ, ಕನ್ನಡ ಚಲನ ಚಿತ್ರಗಳ ಸಬ್ಸಿಡಿ ಸಮಿತಿಗೆ ಸದಸ್ಯೆಯಾಗಿ, 2008 ರಲ್ಲಿ ನಡೆದ ಹಾಸನ ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪಠ್ಯ ಪುಸ್ತಕಗಳಾಗಿ : ನಾವು ಗುಲ್ಬರ್ಗಾ ವಿವಿಯಲ್ಲಿ ನಾನು ಪದವಿ ಓದುತ್ತಿರುವಾಗ ಇವರ ‘ಒಮ್ಮೆ ಹೆಣ್ಣಾಗು ಪ್ರಭುವೆ’ ಕಥೆಯನ್ನು ಪಠ್ಯದಲ್ಲಿ ಓದಿದ್ದೇನೆ. ನಮ್ಮ ಉತ್ತರ ಕರ್ನಾಟಕದಲ್ಲಿ ಬಾನು ಮೇಡಂಗೆ ಒಳ್ಳೆಯ ಹೆಸರಿದೆ. ಇಂದಿಗೂ ಸಾವಿರಾರು ವಿದ್ಯಾರ್ಥಿಗಳಿಗೆ ಇವರ ಬರಹಗಳು ಅಚ್ಚು-ಮೆಚ್ಚು. ನಾನು 2004 ರಲ್ಲಿ ಹಾಸನ ಜಿಲ್ಲೆಗೆ ಶಿಕ್ಷಕನಾಗಿ ನೇಮಕವಾಗಿ ಬಂದಾಗ ನಾನು ಮೊದಲು ಬೇಟಿಯಾದದ್ದು ಬಾನು ಮೇಡಂರವರನ್ನು ಆಗ ಅವರೊಂದಿಗೆ ಪದವಿ ಪಠ್ಯದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೆ. ಇವರ ಮೌಲ್ಯಯುತ ಕಥೆಗಳು, ಬರಹಗಳು ಹಲವಾರು ಕಡೆ ಪಠ್ಯ ಸೇರಿ ವಿಧ್ಯಾರ್ಥಿಗಳನ್ನು ಚಿಂತನೆಗೆಹಚ್ಚಿವೆ. ಅಲ್ಲದೆ ಮಂಗಳೂರು ವಿಶ್ವ ವಿದ್ಯಾಲಯದ 2006ರ ಪದವಿ ತರಗತಿಯ ಪಠ್ಯಪುಸ್ತಕವಾದ ‘ಕೊಡಚಾದ್ರಿಯಲ್ಲಿ ’ಇವರ ಕಥೆ ‘ನಮ್ಮೊಳಗಿನ ಜರೀನಾ’ ಸೇರ್ಪಡೆಯಾಗಿದೆ . ‘ಒಮ್ಮೆ ಹೆಣ್ಣಾಗು ಪ್ರಭುವೆ’ ಕಥೆಯು ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ವರ್ಷದ ಕನ್ನಡ ಪಠ್ಯಪುಸ್ತಕ ‘ಕಥಾ ಸಂಗಮದಲ್ಲಿ ’ ಮತ್ತು ತುಮಕೂರು ವಿಶ್ವವಿದ್ಯಾಲಯಗಳ ಪದವಿ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಿದೆ.
ಮಹಾ ಪ್ರಬಂಧಗಳಲ್ಲಿ ಬಾನು ಮುಷ್ತಾಕ್ಃ ಇವರ ಸಾಹಿತ್ಯದ ಮೇಲೆ ಹಲವಾರು ಸಂಶೋಧನೆಗಳು ಸಹ ನಡೆದಿವೆ. ಮಂಗಳೂರು ವಿಶ್ವ ವಿದ್ಯಾನಿಲಯದ ಸುಜಾತ ಕೆ. ಎಂಬ ವಿದ್ಯಾರ್ಥಿನಿ ನಡೆಸಿದ “ಇಪ್ಪತ್ತನೆ ಶತಮಾನದ ಕೊನೆಯ 25 ವರ್ಷಗಳ ಕಥನ ಸಾಹಿತ್ಯದಲ್ಲಿ ಯಜಮಾನ್ಯ ಮತ್ತು ಸಾಂಸ್ಕøತಿಕ ಅನನ್ಯತೆಯ ನೆಲೆಗಳು” ಎಂಬ ವಿಷಯಗಳ ಬಗ್ಗೆ ಲಂಕೇಶ್-ಕುಂ ವಿರಭದ್ರಪ್ಪ, ದೇವನೂರು ಮಹಾದೇವ-ಮೊಗಳ್ಳಿ ಗಣೇಶ್ ಹಾಗೂ ವೈದೇಹಿ-ಬಾನು ಮುಷ್ತಾಕ್ ತೌಲನಿಕ ಅಧ್ಯಯನಕ್ಕಾಗಿ ಮಂಗಳೂರು ವಿವಿಯು ಪಿ.ಎಚ್.ಡಿ. ಪದವಿ ನೀಡಿದೆ. ಕರ್ನಾಟಕ ವಿಶ್ವ ವಿದ್ಯಾನಿಲಯವು ಶ್ರೀದೇವಿ ಪಾಟೀಲ್ ಎಂಬ ವಿದ್ಯಾರ್ಥಿನಿಯು “ಬಾನು ಮುಷ್ತಾಕ್ರವರ ಸಣ್ಣ ಕಥೆಗಳು” ಎಂಬ ವಿಷಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಎಂ.ಫಿಲ್ ಪದವಿ ನೀಡಿದೆ.
ಪ್ರಶಸ್ತಿ-ಪುರಸ್ಕಾರಗಳು : 1) ದಿನಾಂಕ: 30-11-97ರಂದು ಪ್ರಕಟವಾದ ಪ್ರಜಾವಾಣಿಯಲ್ಲಿ ಪ್ರಕಟವಾದ ಇವರ ‘ಒಮ್ಮೆ ಹೆಣ್ಣಾಗು ಪ್ರಭುವೆ’ ಸಣ್ಣಕಥೆಯು ಬೆಂಗಳೂರಿನ ಆಕಾಶವಾಣಿ ಬೆಂಗಳೂರು ವಾಣಿಜ್ಯ ಕೇಂದ್ರದವರ ಸಹಯೋಗದಿಂದ ನಿರ್ಮಿಸಿದ ಸದರಿ ರೇಡಿಯೋ ನಾಟಕಕ್ಕೆ 1999ರ ಇಂಟರ್ ನ್ಯಾಷನಲ್ ವಿಮೆನ್ ಫಾರ್ ರೇಡಿಯೋ ಅಂಡ್ ಟೆಲಿವಿಷನ್ ಬಹುಮಾನ ದೊರಕಿದೆ.
2) ಪ್ರಜಾವಾಣಿಯಲ್ಲಿ ಪ್ರಕಟವಾದ ಇವರ ಕವನ ‘ಅಮ್ಮನ ಸೀರೆ’ ಕವನಕ್ಕೆ, 1999ರಲ್ಲಿ ಕರ್ನಾಟಕ ಲೇಖಕಿಯರ ಸಂಘದ ಗುಡಿ ಬಂಡೆ ಪೂರ್ಣಿಮಾ ಉದಯೋನ್ಮುಖ ಕವಯತ್ರಿ ಬಹುಮಾನ ಸಂದಿದೆ.
3) ನೆಲಮನೆ ಪ್ರಕಾಶನದಿಂದ ಎರಡನೆ ಕಥಾ ಸಂಕಲನ ‘ಬೆಂಕಿ ಮಳೆ’ ಕೃತಿಗೆ, 2000ರಲ್ಲಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಎಚ್.ವಿ.ಸಾವಿತ್ರಮ್ಮ ದತ್ತಿ ನಿಧಿ ಬಹುಮಾನ ದೊರಕಿದೆ.
4) ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ 1999ನೇ ಸಾಲಿನ ಸಣ್ಣಕಥೆ ಪ್ರಕಾರದ ಪುಸ್ತಕ ಬಹುಮಾನಕ್ಕೆ ಇವರ ‘ಬೆಂಕಿ ಮಳೆ’ ಉತ್ತಮ ಕೃತಿಯೆಂದು ಪುರಸ್ಕರಿಸಲ್ಪಟ್ಟಿದೆ.
5) 2002ನೆಯ ಸಾಲಿನಲ್ಲಿ ಇವರ ಸಮಗ್ರ ಸಾಹಿತ್ಯ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.
6) ಬೆಂಕಿ ಮಳೆ ಕಥಾ ಸಂಕಲನಕ್ಕೆ 2002ನೇ ಸಾಲಿನ ಕಥಾ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಯೆಂದು ಸುಧಾಮೂರ್ತಿ ಪ್ರಶಸ್ತಿ ದೊರಕಿದೆ.
7) 2004 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿದೆ.
8) ‘ಶಾಶ್ವತಿ’ಸಂಸ್ಥೆಯ ವತಿಯಿಂದ 2004ನೆಯ ಸಾಲಿನ ‘ಕರ್ನಾಟಕ ಕಲ್ಪವಲ್ಲಿ’ ಪ್ರಶಸ್ತಿ ದೊರಕಿದೆ.
9) 2006 ಸಾಲಿನಲ್ಲಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ನಡೆದ ಅಖಿಲ ಭಾರತೀಯ ಜೈನ ಮಹಿಳಾ ಸಮ್ಮೇಳನದ ಪ್ರಶಸ್ತಿ ದೊರಕಿದೆ .
10) 2010ನೆಯ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪದ್ಮ ಭೂಷಣ ಬಿ. ಸರೋಜಾದೇವಿ ಪ್ರಶಸ್ತಿಯನ್ನು ನೀಡಲಾಗಿದೆ.
11) 2013 ರಲ್ಲಿ ದಾವಣೆಗೆರೆಯ ಬಸವ ಕೇಂದ್ರದಿಂದÀ ಶೂನ್ಯ ಪೀಠ ಅಕ್ಕನಾಗಮ್ಮ ಪ್ರಶಸ್ತಿ ದೊರಕಿದೆ.
12) 2014ರಲ್ಲಿ ಮುಂಬೈ ಕರ್ನಾಟಕ ಸಂಘದ ವತಿಯಿಂದ ಡಾ|| ಸುನೀತ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಸಂದಿದೆ.
13) ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ರವರ ಕಛೇರಿಯಿಂದ 2014ರ ಜೀವ ಮಾನದ ಸಾಧನೆ ಪ್ರಶಸ್ತಿ
14) ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೊಯ್ಸಳ ಮಹೋತ್ಸವದ ಸಂದರ್ಭದಲ್ಲಿ ಶತಮಾನೋತ್ಸವ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇವುಗಳಲ್ಲದೆ ನೂರಾರು ಆತ್ಮೀಯ ಸನ್ಮಾನಗಳು ಈ ಧೀಮಂತ ಬರಹಗಾರ್ತಿಯನ್ನು ಅಲಂಕರಿಸಿವೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794, 9739878197
ಆಧುನಿಕ ಭಾರತದ ಸಾಮಾಜಿಕ ವ್ಯವಸ್ಥೆಗೆ ಚಲನಶೀಲವಾದ ಗುಣ ಬಂದದ್ದೇ ಆಂಗ್ಲರ ಆಡಳಿತದಿಂದಾಗಿ. ಈ ಕಾರಣಕ್ಕಾಗಿಯೇ ಮಹಿಳೆಯರು, ದಲಿತರು ಅಕ್ಷರ ಸಂಸ್ಕøತಿಗೆ ಒಂದು ಪ್ರವಾಹ ರೂಪದಲ್ಲಿ ನುಗ್ಗಿ ಬರುವಂತಾಯಿತು. ಈ ನೆಲೆಗೆ ಜೀವ ತುಂಬಿದವರು ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಮುಂದುವರೆದು ಸಾಹೂ ಮಹಾರಾಜ, ಡಾ||ಬಾಬಾಸಾಹೇಬ ಅಂಬೇಡ್ಕರ್ ಇವರೆಲ್ಲರ ನಿರಂತರ ಹೋರಾಟದಿಂದ ಸಮಾಜಮುಖಿ ಚಿಂತನೆಗೆ ಜೀವ ಪಡೆಯಿತು. ಹೀಗಾಗಿ ದಲಿತರು , ಮಹಿಳೆಯರು ತಮ್ಮ ಸ್ವಾಭಿಮಾನದ ಬದುಕಿನ ಎಲ್ಲ ಮಗ್ಗಲುಗಳನ್ನು ಅಕ್ಷರ ಲೋಕಕ್ಕೆ ಪರಿಚಯಿಸಿದರು. ಆ ಮೂಲಕ ಹೊಸದೊಂದು ಅನುಭವ ಕಟ್ಟಿಕೊಟ್ಟ ಕೀರ್ತಿ ಆ ವರ್ಗಗಳಿಗೆ ಸೇರಬೇಕು. ಅನೇಕ ಬರಹಗಾರರು, ಬರಹಗಾರ್ತಿಯರು ನೂರಾರು ನದಿಗಳಂತೆ ರೂಪುಗೊಂಡಿದ್ದಾರೆ.
70-80ರ ದಶಕದಲ್ಲಿ ದಲಿತ ಮತ್ತು ಬಂಡಾಯದ ಕಾವು ತೀವ್ರತರವಾಗಿತ್ತೆಂದು ಹೇಳಬಹುದು. ಸಾ.ರ.ಅಬುಬಕ್ಕರ್, ಬಾನುಮುಸ್ತಾಕ್ ಈ ಹಂತದಲ್ಲಿ ದಿಟ್ಟಬರವಣಿಗೆಯ ಮೂಲಕ ಗುರುತಿಸಿಕೊಂಡ ಅಪರೂಪದ ಮುಸ್ಲಿಂ ಲೇಖಕಿಯರು. ಸಾಮಾಜಿಕ, ಸಾಂಸ್ಕøತಿಕ ಕಾಳಜಿ, ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ಬಾನುಮುಸ್ತಾಕರ ಬಂಡಾಯ ಧ್ವನಿ ಗಮನಾರ್ಹವಾದುದು.
ಪುರುಷ ಪಾರಮ್ಯವಿರುವ ಸಮಾಜದಲ್ಲಿ ಗಂಡು ಹೆಣ್ಣುಗಳ ನಡುವಿನ ಅಸಮಾನತೆಯ ಮೇಲುಕೀಳು ಎಂಬ ಕೇವಲ ಸಾಂಕೇತಿಕ ಮಾದರಿಗಳಲ್ಲಿ ಮಾತ್ರ ಉಳಿಯದೆ ಸಂಸ್ಕøತಿಯ ಬೇರುಗಳಿಗೂ ಇಳಿದಿರುತ್ತದೆ ಎಂಬುದನ್ನು ಸನಾತನ ಕಾಲದಿಂದಲೂ ಕಾಣುತ್ತಾ ಬಂದಿದ್ದೇವೆ. ಬಾನು ಮುಷ್ತಾಕ್ರವರು ತಾವು ಕಂಡಿದ್ದನ್ನು, ಅನುಭವಿಸಿದ್ದನ್ನು ಪ್ರಕಟಿಸುವುದು, ಹೊರಗೆಡುವುದು, ವ್ಯಕ್ತಪಡಿಸುವುದು, ಆತ್ಮ ಸಾಕ್ಷಿಗೆ ವಿರುದ್ದವಾಗಿ ರಾಜಿಯಾಗದ ಸೈದ್ಧಾಂತಿಕ ಧೋರಣೆ ಇವರದು.
ಈ ಹೊತ್ತು ನವ ವಸಶಹತುಶಾಹಿ ಸೃಷ್ಠಿಸಿರುವ ಜಾಗತೀಕರಣ, ಉದಾರಿಕರಣ ಮತ್ತು ಖಾಸಗಿಕರಣಗಳಂತಹ ಸೂಕ್ಷ್ಮ ಪರಿಣಾಮಗಳು ಇಡೀ ಮನುಷ್ಯನನ್ನೇ ನೊಣಚಿ ನುಂಗಿದೆ. ಮನುಷ್ಯ ಸಂಬಂಧಗಳು, ಮಾನವತೆ, ಪ್ರೀತಿ ಈ ಎಲ್ಲವೂ ಕೂಡ ವ್ಯಾಪಾರಿ ವಸ್ತುಗಳಾಗಿವೆ. ಈ ನವ ವಸಾಹತುಶಾಹಿ ಸೃಷ್ಠಿಸಿರುವ ಸೂಕ್ಷ್ಮ ಪರಿಣಾಮಗಳು ನಮ್ಮ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಚರ್ಚೆಯ ಕೇಂದ್ರಗಳಾಗಿವೆ ಎಂಬುದನ್ನು ಅಲ್ಲಗಳೆಯಲಾಗದು. ಇಂತಹ ಹಲವು ಮಹಿಳಾ ಬದುಕಿನ ದಾವಂತಗಳನ್ನು ತಮ್ಮ ಪ್ರಖರ ಬರವಣಿಗೆಯ ಮೂಲಕ ನಾಡಿನ ಜನತೆಯ ಮುಂದೆ ಅನಾವರಣಗೊಳಿಸುತ್ತಾ ಬಂದಿರುವವರು ಬಾನು ಮುಷ್ತಾಕ್ಅವರೆಂದರೆ ಅತಿಶಯೋಕ್ತಿಯಾಗಲಾರದು.
ಜನನ ಃ ಶ್ರೀಮತಿ ಬಾನು ಮುಷ್ತಾಕ್ ಅವರು ಕ್ರಿ.ಶ.1948 ಏಪ್ರಿಲ್ 03 ರಂದು ಹಾಸನ ನಗರದ ಎಸ್.ಎ.ರೆಹಮಾನ್ ಹಾಗೂ ಅಖ್ತರ್ ಬಾನು ದಂಪತಿಗಳ ಪುತ್ರಿಯಾಗಿ ಜನಿಸಿದರು. ಇವರ ತಂದೆ ಸರಕಾರಿ ನೌಕರಿಯಲ್ಲಿದ್ದುದರಿಂದ ಅವರು ವರ್ಗವಾದೆÀಡೆಗೆಲ್ಲಾ ಹೋಗಬೇಕಾದುದ್ದರಿಂದ ಇವರ ಶಿಕ್ಷಣವು ಒಂದು ಕಡೆ ನೆಲೆಗೊಳ್ಳದೆ ಹಾಸನ, ಶಿವಮೊಗ್ಗ, ಕೃಷ್ಣರಾಜ ಸಾಗರ, ಚಾಮರಾಜನಗರ ಮುಂತಾದೆಡೆಗಳಲ್ಲಿ ನಡೆಯಿತು. ಪದವಿಯನ್ನು ಹಾಸನದ ಸರ್ಕಾರಿ ಕಾಲೇಜಿನಲ್ಲಿ ಮುಗಿಸಿದ ಇವರು ನಂತರ ಆಯ್ಕೆ ಮಾಡಿಕೊಂಡದ್ದು ವಕೀಲಿ ಓದನ್ನು. ಬಿ.ಎಸ್ಸಿ, ಎಲ್.ಎಲ್.ಬಿ ಪದವಿಧರೆಯಾದ ಇವರು ಯಾವುದೇ ಮೌಢ್ಯಕ್ಕೆ ಒಳಗಾಗದೇ ಬದುಕನ್ನು, ಸಮಾಜವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತಿಸಿ, ಮಂಥಿಸಿ ಸಮಭಾವದಿಂದ ನೋಡುವ ಬರಹಗಾರ್ತಿ. ಸದಾ ಸಮಸಮಾಜದ ಕನಸುಗಾರರಾದ ಇವರು ಮಾನವೀಯತೆಯ ನೆಲೆಯಲ್ಲಿ ಮುನ್ನಡೆಯುತ್ತಾ ಬಂದಿದ್ದಾರೆ.
ವೃತ್ತಿ : 1981-1990ರವರೆಗೆ ಲಂಕೇಶ್ ಪತ್ರಿಕೆಯ ಜಿಲ್ಲಾ ವರದಿಗಾರ್ತಿಯಾಗುವುದರ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ತಮ್ಮ ಬರಹದ ಹಾಗೂ ದಿಟ್ಟ ವರದಿಗಳ ಮೂಲಕ ಕನ್ನಡಿಗರ ಜನ ಮಾನಸದಲ್ಲಿ ನೆಲೆಯೂರಿದರೆನ್ನಬಹುದು. ಈ ಒಂದು ತಿರುವು ಇವರು ಗಟ್ಟಿ ಬರಹಗಾರ್ತಿಯಾಗಲು ಕಾರಣವಾಯಿತು. ಬದುಕು ಮತ್ತು ಮಾತು ಎರಡನ್ನೂ ಬರಹಗಳ ಕ್ಯಾನ್ವಾಸ್ಸಿನ ಮೇಲೆ ವಿಶಿಷ್ಟ ರೂಪುಗಳನ್ನು ನೀಡುವ ನಿಟ್ಟಿನಲ್ಲಿ ರಚನಾ ಕೌಶಲ್ಯ, ಅನನ್ಯ ಶ್ರದ್ಧೆ, ವೈಚಾರಿಕ ಪ್ರಕರತೆಗಳ ಬಳಸುವ ಇವರ ಶೈಲಿ ಅದ್ಭುತವಾದದ್ದು. ನಂತರ 1990 ರಿಂದ ಪ್ರಸ್ತುತದವರೆಗೂ ನ್ಯಾಯವಾದಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನೊಂದ, ಶೋಷಣೆಗೆ ಒಳಗಾದ, ಕಷ್ಟದಲ್ಲಿರುವ ಅನೇಕ ಮಹಿಳೆಯರಿಗೆ ತನ್ಮೂಲಕ ನ್ಯಾಯ ಒದಗಿಸಿ ಕೊಟ್ಟಿದ್ದಾರೆ.
ಸಾಹಿತ್ಯ ಕ್ಷೇತ್ರ :
1) ಕಥಾ ಸಂಕಲನಗಳು : ಹೆಜ್ಜೆ ಮೂಡಿದ ಹಾದಿ (1990), ಬೆಂಕಿ ಮಳೆ (1999), ಎದೆಯ ಹಣತೆ (2004), ಸಫೀರಾ(2006), ಬಡವರ ಮಗಳು ಹೆಣ್ಣಲ್ಲ (2012),
2) ಕಾದಂಬರಿ : ಕುಬ್ರ
3) ಲೇಖನ ಸಂಗ್ರಹ : ಇಬ್ಬನಿಯ ಕಾವು
4) ಕಾನೂನು ಗ್ರಂಥ : ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ
5) ಇತರರ ಸಂಪಾದಕತ್ವದಲ್ಲಿ ಬಾನು ಮುಷ್ತಾಕರ ಸಾಹಿತ್ಯ ಃ
1) ಕನ್ನಡ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಗಳಲ್ಲಿ ಇವರ ಅನೇಕ ಕಥೆಗಳನ್ನು ಪ್ರಕಟಿಸಿದೆ.
ಅ) ಕಾಳೇಗೌಡ ನಾಗವಾರರವರ ಸಂಪಾದಕತ್ವದಲ್ಲಿ ‘ರಾಹಿಲ ಎಂಬ ಕನ್ಯೆಯ ಕಥೆ’(1984).
ಆ) ನಾ.ಡಿಸೋಜಾರವರ ಸಂಪಾದಕತ್ವದಲ್ಲಿ ‘ಸರಿದ ಕಾರ್ಮೋಡ’ ಎಂಬ ಕಥೆ(1987).
ಇ) ಅಮರೇಶ ನುಡಗೋಣಿ ಸಂಪಾದಕತ್ವದಲ್ಲಿ ‘ಒಮ್ಮೆ ಹೆಣ್ಣಾಗು ಪ್ರಭುವೆ’.
ಈ) ಪಾರಿವಾಳದ ರೆಕ್ಕೆಗಳು (2005)
2) 1999ರಲ್ಲಿ ಪ್ರಿಸಮ್ ಪ್ರಕಾಶನದವರು ಡಾ|| ಅಮೂರರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ಶತಮಾನದ ಮಾಲಿಕೆಯ ‘ಅವಳ ಕೃತಿಗಳು’ ಸಂಕಲನದಲ್ಲಿ ‘ಸರಿದ ಕಾರ್ಮೋಡ’ ಎಂಬ ಕಥೆ ಪ್ರಕಟವಾಗಿದೆ.
3) ಡಾ|| ಅಮೂರರ ಸಂಪಾದಕತ್ವದಲ್ಲಿ ಅಂಕಿತ ಪ್ರಕಾಶನದ “ಸ್ವಾತಂತ್ರೋತ್ತರ ಕನ್ನಡ ಕಥಾಲೋಕ”ದಲ್ಲಿ ಸೇರ್ಪಡೆ “ದೇವರು ಮತ್ತು ಅಪಘಾತ”(2004)
7) ಕಾವ್ಯ : ಅನೇಕ ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರ ಕವನ ಸಂಕಲನ ಅಚ್ಚಿನಲ್ಲಿದೆ.
8) ಅನುವಾದ : 1) ‘ಪರಕೀಯ’ ಕಥೆ ಹಿಂದಿ ಭಾಷೆಯಲ್ಲಿ ಅನುವಾದಗೊಂಡಿದ್ದು, ಉತ್ತರ ಪ್ರದೇಶದ ಹಿಂದಿ ಅಕಾಡೆಮಿಯ ಪ್ರಕಟಣೆಯಾದ ಇಂದ್ರ ಪ್ರಸ್ಥ ಭಾರತಿಯಲ್ಲಿ ಪ್ರಕಟವಾಗಿದೆ.
2) ‘ಬೆಂಕಿ ಮಳೆ’ ಕಥಾ ಸಂಕಲನದ ಕಥೆಗಳು ಮಲಯಾಳಂ ಭಾಷೆಗೆ ಅನುವಾದಗೊಂಡಿದ್ದು, ದೇಶಭಿಮಾನಿ ಹಾಗೂಸ್ತ್ರೀ ಸಬ್ದಮ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಹಾಗೂ ಕಥಾ ಸಂಕಲನ ಮಲಯಾಳಂನಲ್ಲಿ ಪ್ರಕಟವಾಗಿವೆ.
3) ಉರ್ದು, ಪಂಜಾಬಿ , ಇಂಗ್ಲೀಷ್ ಭಾಷೆಗೆ ಕಥೆಗಳು ಅನುವಾದಗೊಂಡು ಪ್ರಕಟವಾಗಿವೆ.
4) ಫ.ಗು.ಹಳಕಟ್ಟಿಸಂಶೋಧನ ಕೇಂದ್ರದವರು ಆದಿಲ್ಶಾಹಿ ಚರಿತ್ರೆಯಾದ ತಾರೀಕ್-ಎ-ಫರಿಷ್ತಾ ಗ್ರಂಥವನ್ನು ಕನ್ನಡಕ್ಕೆ
ಭಾಷಾಂತರಿಸುವ ಕಾರ್ಯವನ್ನು ಕೈಗೊಂಡ ಸಂದರ್ಭದಲ್ಲಿ 250 ಪುಟಗಳ ಚರಿತ್ರೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಚಲನ ಚಿತ್ರ : ‘ಕರಿ ನಾಗರಗಳು ಎಂಬ ಇವರ ಸಣ್ಣ ಕಥೆ “ಹಸೀನಾ” ಎಂಬ ಹೆಸರಿನ ಚಲನಚಿತ್ರವಾಗಿದ್ದು, ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿರುವ ಈ ಚಲನ ಚಿತ್ರಕ್ಕೆ ತಾರಾರವರು ನಿರ್ಮಾಪಕಿಯಾಗುವುದರ ಜೊತೆಗೆ ನಟನೆಯ ಮೂಲಕ ಜೀವ ತುಂಬಿರುವುದು ಮಹತ್ವಪೂರ್ಣವಾದದ್ದು. ಈ ಚಿತ್ರಕ್ಕೆ ಮೂರು ರಾಷ್ಟ್ರ ಪ್ರಶಸ್ತಿ ಬಂದಿರುವುದು ಬಾನು ಮುಷ್ತಾಕರ ಗೌರವವು ರಾಷ್ಟ್ರ ಮಟ್ಟದಲ್ಲಿ ಪ್ರಜ್ವಲಿಸಲು ಕಾರಣವಾಯಿತು.
ಸಾರ್ವಜನಿಕ ಸೇವೆ : ಇವರು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತ ವಾಗಿರದೆ ಸ್ಥಳೀಯ ರಾಜಕೀಯಕ್ಕೂ ಧುಮುಕುವ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿಯೂ ಸೇವೆ ಮಾಡಿದ್ದಾರೆ. ಹಾಸನ ನಗರ ಸಭೆಗೆ 1983ರಿಂದ ಎರಡು ಅವಧಿಗೆ ನಗರ ಸಭಾ ಸದಸ್ಯೆಯಾಗಿ ಆಯ್ಕೆಯಾಗಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಹಾಸನದ ಜಿಲ್ಲಾ ಶ್ರೀ ಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ ಸಂದರ್ಶಕರ ಮಂಡಳಿಯ ಅಧ್ಯಕ್ಷೆಯಾಗಿ ಉತ್ತಮ ಕೆಲಸ ಮಾಡುವುದರ ಮೂಲಕ ಜನರ ಮನ ಗೆದ್ದಿದ್ದಾರೆ. ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆಯಾಗಿ. ಹಾಸನ ನಗರ ಗ್ರಂಥಾಲಯದ ಸಮಿತಿ ಸದಸ್ಯೆಯಾಗಿ, ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಸನದ ಜಿಲ್ಲಾ ಸಮತಾ ವೇದಿಕೆಯ ಅಧ್ಯಕ್ಷೆಯಾಗಿ ಮತ್ತು ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದಾರೆ.
ಸಂಘ ಸಂಸ್ಥೆಗಳಲ್ಲಿ ಸೇವೆ : 1995ರಿಂದ 98ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯ ಸದಸ್ಯೆಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿಯ ಕಾರ್ಯಕಾರಿ ಸಮಿತಿಯ ಮಾಜಿ ಸದಸ್ಯೆಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಸಮಿತಿಯ ಮಾಜಿ ಸದಸ್ಯೆಯಾಗಿ, ಕನ್ನಡ ಚಲನ ಚಿತ್ರಗಳ ಸಬ್ಸಿಡಿ ಸಮಿತಿಗೆ ಸದಸ್ಯೆಯಾಗಿ, 2008 ರಲ್ಲಿ ನಡೆದ ಹಾಸನ ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪಠ್ಯ ಪುಸ್ತಕಗಳಾಗಿ : ನಾವು ಗುಲ್ಬರ್ಗಾ ವಿವಿಯಲ್ಲಿ ನಾನು ಪದವಿ ಓದುತ್ತಿರುವಾಗ ಇವರ ‘ಒಮ್ಮೆ ಹೆಣ್ಣಾಗು ಪ್ರಭುವೆ’ ಕಥೆಯನ್ನು ಪಠ್ಯದಲ್ಲಿ ಓದಿದ್ದೇನೆ. ನಮ್ಮ ಉತ್ತರ ಕರ್ನಾಟಕದಲ್ಲಿ ಬಾನು ಮೇಡಂಗೆ ಒಳ್ಳೆಯ ಹೆಸರಿದೆ. ಇಂದಿಗೂ ಸಾವಿರಾರು ವಿದ್ಯಾರ್ಥಿಗಳಿಗೆ ಇವರ ಬರಹಗಳು ಅಚ್ಚು-ಮೆಚ್ಚು. ನಾನು 2004 ರಲ್ಲಿ ಹಾಸನ ಜಿಲ್ಲೆಗೆ ಶಿಕ್ಷಕನಾಗಿ ನೇಮಕವಾಗಿ ಬಂದಾಗ ನಾನು ಮೊದಲು ಬೇಟಿಯಾದದ್ದು ಬಾನು ಮೇಡಂರವರನ್ನು ಆಗ ಅವರೊಂದಿಗೆ ಪದವಿ ಪಠ್ಯದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೆ. ಇವರ ಮೌಲ್ಯಯುತ ಕಥೆಗಳು, ಬರಹಗಳು ಹಲವಾರು ಕಡೆ ಪಠ್ಯ ಸೇರಿ ವಿಧ್ಯಾರ್ಥಿಗಳನ್ನು ಚಿಂತನೆಗೆಹಚ್ಚಿವೆ. ಅಲ್ಲದೆ ಮಂಗಳೂರು ವಿಶ್ವ ವಿದ್ಯಾಲಯದ 2006ರ ಪದವಿ ತರಗತಿಯ ಪಠ್ಯಪುಸ್ತಕವಾದ ‘ಕೊಡಚಾದ್ರಿಯಲ್ಲಿ ’ಇವರ ಕಥೆ ‘ನಮ್ಮೊಳಗಿನ ಜರೀನಾ’ ಸೇರ್ಪಡೆಯಾಗಿದೆ . ‘ಒಮ್ಮೆ ಹೆಣ್ಣಾಗು ಪ್ರಭುವೆ’ ಕಥೆಯು ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ವರ್ಷದ ಕನ್ನಡ ಪಠ್ಯಪುಸ್ತಕ ‘ಕಥಾ ಸಂಗಮದಲ್ಲಿ ’ ಮತ್ತು ತುಮಕೂರು ವಿಶ್ವವಿದ್ಯಾಲಯಗಳ ಪದವಿ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಿದೆ.
ಮಹಾ ಪ್ರಬಂಧಗಳಲ್ಲಿ ಬಾನು ಮುಷ್ತಾಕ್ಃ ಇವರ ಸಾಹಿತ್ಯದ ಮೇಲೆ ಹಲವಾರು ಸಂಶೋಧನೆಗಳು ಸಹ ನಡೆದಿವೆ. ಮಂಗಳೂರು ವಿಶ್ವ ವಿದ್ಯಾನಿಲಯದ ಸುಜಾತ ಕೆ. ಎಂಬ ವಿದ್ಯಾರ್ಥಿನಿ ನಡೆಸಿದ “ಇಪ್ಪತ್ತನೆ ಶತಮಾನದ ಕೊನೆಯ 25 ವರ್ಷಗಳ ಕಥನ ಸಾಹಿತ್ಯದಲ್ಲಿ ಯಜಮಾನ್ಯ ಮತ್ತು ಸಾಂಸ್ಕøತಿಕ ಅನನ್ಯತೆಯ ನೆಲೆಗಳು” ಎಂಬ ವಿಷಯಗಳ ಬಗ್ಗೆ ಲಂಕೇಶ್-ಕುಂ ವಿರಭದ್ರಪ್ಪ, ದೇವನೂರು ಮಹಾದೇವ-ಮೊಗಳ್ಳಿ ಗಣೇಶ್ ಹಾಗೂ ವೈದೇಹಿ-ಬಾನು ಮುಷ್ತಾಕ್ ತೌಲನಿಕ ಅಧ್ಯಯನಕ್ಕಾಗಿ ಮಂಗಳೂರು ವಿವಿಯು ಪಿ.ಎಚ್.ಡಿ. ಪದವಿ ನೀಡಿದೆ. ಕರ್ನಾಟಕ ವಿಶ್ವ ವಿದ್ಯಾನಿಲಯವು ಶ್ರೀದೇವಿ ಪಾಟೀಲ್ ಎಂಬ ವಿದ್ಯಾರ್ಥಿನಿಯು “ಬಾನು ಮುಷ್ತಾಕ್ರವರ ಸಣ್ಣ ಕಥೆಗಳು” ಎಂಬ ವಿಷಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಎಂ.ಫಿಲ್ ಪದವಿ ನೀಡಿದೆ.
ಪ್ರಶಸ್ತಿ-ಪುರಸ್ಕಾರಗಳು : 1) ದಿನಾಂಕ: 30-11-97ರಂದು ಪ್ರಕಟವಾದ ಪ್ರಜಾವಾಣಿಯಲ್ಲಿ ಪ್ರಕಟವಾದ ಇವರ ‘ಒಮ್ಮೆ ಹೆಣ್ಣಾಗು ಪ್ರಭುವೆ’ ಸಣ್ಣಕಥೆಯು ಬೆಂಗಳೂರಿನ ಆಕಾಶವಾಣಿ ಬೆಂಗಳೂರು ವಾಣಿಜ್ಯ ಕೇಂದ್ರದವರ ಸಹಯೋಗದಿಂದ ನಿರ್ಮಿಸಿದ ಸದರಿ ರೇಡಿಯೋ ನಾಟಕಕ್ಕೆ 1999ರ ಇಂಟರ್ ನ್ಯಾಷನಲ್ ವಿಮೆನ್ ಫಾರ್ ರೇಡಿಯೋ ಅಂಡ್ ಟೆಲಿವಿಷನ್ ಬಹುಮಾನ ದೊರಕಿದೆ.
2) ಪ್ರಜಾವಾಣಿಯಲ್ಲಿ ಪ್ರಕಟವಾದ ಇವರ ಕವನ ‘ಅಮ್ಮನ ಸೀರೆ’ ಕವನಕ್ಕೆ, 1999ರಲ್ಲಿ ಕರ್ನಾಟಕ ಲೇಖಕಿಯರ ಸಂಘದ ಗುಡಿ ಬಂಡೆ ಪೂರ್ಣಿಮಾ ಉದಯೋನ್ಮುಖ ಕವಯತ್ರಿ ಬಹುಮಾನ ಸಂದಿದೆ.
3) ನೆಲಮನೆ ಪ್ರಕಾಶನದಿಂದ ಎರಡನೆ ಕಥಾ ಸಂಕಲನ ‘ಬೆಂಕಿ ಮಳೆ’ ಕೃತಿಗೆ, 2000ರಲ್ಲಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಎಚ್.ವಿ.ಸಾವಿತ್ರಮ್ಮ ದತ್ತಿ ನಿಧಿ ಬಹುಮಾನ ದೊರಕಿದೆ.
4) ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ 1999ನೇ ಸಾಲಿನ ಸಣ್ಣಕಥೆ ಪ್ರಕಾರದ ಪುಸ್ತಕ ಬಹುಮಾನಕ್ಕೆ ಇವರ ‘ಬೆಂಕಿ ಮಳೆ’ ಉತ್ತಮ ಕೃತಿಯೆಂದು ಪುರಸ್ಕರಿಸಲ್ಪಟ್ಟಿದೆ.
5) 2002ನೆಯ ಸಾಲಿನಲ್ಲಿ ಇವರ ಸಮಗ್ರ ಸಾಹಿತ್ಯ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.
6) ಬೆಂಕಿ ಮಳೆ ಕಥಾ ಸಂಕಲನಕ್ಕೆ 2002ನೇ ಸಾಲಿನ ಕಥಾ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಯೆಂದು ಸುಧಾಮೂರ್ತಿ ಪ್ರಶಸ್ತಿ ದೊರಕಿದೆ.
7) 2004 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿದೆ.
8) ‘ಶಾಶ್ವತಿ’ಸಂಸ್ಥೆಯ ವತಿಯಿಂದ 2004ನೆಯ ಸಾಲಿನ ‘ಕರ್ನಾಟಕ ಕಲ್ಪವಲ್ಲಿ’ ಪ್ರಶಸ್ತಿ ದೊರಕಿದೆ.
9) 2006 ಸಾಲಿನಲ್ಲಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ನಡೆದ ಅಖಿಲ ಭಾರತೀಯ ಜೈನ ಮಹಿಳಾ ಸಮ್ಮೇಳನದ ಪ್ರಶಸ್ತಿ ದೊರಕಿದೆ .
10) 2010ನೆಯ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪದ್ಮ ಭೂಷಣ ಬಿ. ಸರೋಜಾದೇವಿ ಪ್ರಶಸ್ತಿಯನ್ನು ನೀಡಲಾಗಿದೆ.
11) 2013 ರಲ್ಲಿ ದಾವಣೆಗೆರೆಯ ಬಸವ ಕೇಂದ್ರದಿಂದÀ ಶೂನ್ಯ ಪೀಠ ಅಕ್ಕನಾಗಮ್ಮ ಪ್ರಶಸ್ತಿ ದೊರಕಿದೆ.
12) 2014ರಲ್ಲಿ ಮುಂಬೈ ಕರ್ನಾಟಕ ಸಂಘದ ವತಿಯಿಂದ ಡಾ|| ಸುನೀತ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಸಂದಿದೆ.
13) ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ರವರ ಕಛೇರಿಯಿಂದ 2014ರ ಜೀವ ಮಾನದ ಸಾಧನೆ ಪ್ರಶಸ್ತಿ
14) ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೊಯ್ಸಳ ಮಹೋತ್ಸವದ ಸಂದರ್ಭದಲ್ಲಿ ಶತಮಾನೋತ್ಸವ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇವುಗಳಲ್ಲದೆ ನೂರಾರು ಆತ್ಮೀಯ ಸನ್ಮಾನಗಳು ಈ ಧೀಮಂತ ಬರಹಗಾರ್ತಿಯನ್ನು ಅಲಂಕರಿಸಿವೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ