ಸಾಹಿತ್ಯ ಮತ್ತು ಸಾಂಸ್ಕøತಿಕ ಪರಿವ್ರಾಜಕ – ಡಾ|| ನಲ್ಲೂರು ಪ್ರಸಾದ್
ರಂಗಭೂಮಿ, ಜಾನಪದ, ಸಾಹಿತ್ಯ, ಸಂಘಟನೆ ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಬಹುಮುಖವಾಗಿ ತೊಡಗಿಸಿಕೊಂಡು ಸಾಧನೆಯ ಶಿಖರವೇರಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದವರು ಡಾ|| ಆರ್.ಕೆ.ನಲ್ಲೂರ್ ಪ್ರಸಾದ್ರವರು.
ಕನ್ನಡ ಸಾಂಸ್ಕøತಿಕ ಲೋಕದಲ್ಲಿ ಚಿರಪರಿಚಿಯವಾದ ಹೆಸರಿವರದು ಎಂದರೆ ಅತಿಶಯೋಕ್ತಿಯಾಗಲಾರದು. ಎಚ್.ಬಿ.ಜ್ವಾಲನಯ್ಯರವರನ್ನು ಬಿಟ್ಟರೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಕ್ಷತೆಯಿಂದ ಕೆಲಸ ಮಾಡಿ ಹಾಸನ ಜಿಲ್ಲೆಗೆ ಕೀರ್ತಿ ತಂದವರು ಡಾ|| ನಲ್ಲೂರ್ರವರು. ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದಾದ್ಯಂತ ಕನ್ನಡ ಡಿಂಡಿಮ ಬಾರಿಸಿ ಜಾಗೃತೆ ಮೂಡಿಸಿದರು. ಜಿಲ್ಲಾ ಹಾಗೂ ಅಖಿಲ ಭಾರತ ಸಮ್ಮೇಳನಗಳನ್ನು ಯಶಸ್ವೀಯಾಗಿ ನಡೆಸಿ ಕನ್ನಡದ ಹರ್ಷದೊನಲನ್ನು ಹರಿಸಿದವರು ಇವರು.
ಶ್ರೀಯುತ ನಲ್ಲೂರು ಪ್ರಸಾದ್ ಅವರು 1947 ನವಂಬರ್ 26 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು ಗ್ರಾಮದ ಎನ್.ಕೆ.ಸಂಜೀವಯ್ಯ ಹಾಗೂ ಶಾಂತಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಇವರು ಪಕ್ಕಾ ಜನಪದೀಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡು ಬೆಳೆದವರು. ತಂದೆ ಸಂಜೀವಯ್ಯನವರು ಸ್ವಾತಂತ್ರ್ಯ ಹೋರಾಟಗಾರರು ಆದ್ದರಿಂದ ರಕ್ತಗತವೆಂಬಂತೆ ನಲ್ಲೂರರಿಗೆ ಹೋರಾಟವೆಂಬುದು ಬಾಲ್ಯದಿಂದಲೇ ಹಾಸುಹೊಕ್ಕಾಯಿತು. ನಲ್ಲೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಆನೆಕೆರೆಯಲ್ಲಿ ಮಾಧ್ಯಮಿಕ ಶಿಕ್ಷಣ, ಚನ್ನರಾಯಪಟ್ಟಣದಲ್ಲಿ ಪ್ರೌಢ ಶಿಕ್ಷಣ, ಶ್ರವಣಬೆಳಗೊಳದಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಮುಗಿಸಿದ ಇವರು ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು.
ಸ್ನಾತಕೋತ್ತರ ಅಧ್ಯಯನ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ದೇ.ಜ.ಗೌ, ಹಾಮಾನಾ, ಜೀಶಂಪ, ಸಿಪಿಕೆ, ರಾಗೌ, ಎಲ್.ಬಸವರಾಜ್ ಮುಂತಾದವರ ಸಂಪರ್ಕವಾಗಿ ಸಾಹಿತ್ಯದ ಕಡೆ ಪ್ರಬಲವಾಗಿ ಇವರನ್ನು ಸೆಳೆಯಿತು.
ನಯ, ವಿನಯ, ಸಜ್ಜನಿಕೆಗಳಂತಹ ಸದ್ಗುಣಗಳ ಚೇತನವಾದ ಡಾ|| ನಲ್ಲೂರವರು ಕ್ರಿಯಾಶೀಲ ವ್ಯಕ್ತಿ. ನೇರ ನಡೆ-ನುಡಿಯ ದಿಟ್ಟತನ ಸ್ವಭಾವದ ಇವರು ಸತ್ಕಾರ್ಯಗಳಿಗಾಗಿ ಸದಾ ಆತೊರೆಯುತ್ತಾರೆ.
ವೃತ್ತಿ ಃ ಬೆಂಗಳೂರಿನ ವಿ.ವಿ.ಪುರಂನ ನ್ಯಾಷನಲ್ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಗೆ ಪಾದಾರ್ಪಣೆ ಮಾಡಿದರು. ಹಿರಿಯ ಸಂಶೋಧಕರಾದ ಡಾ|| ಹಂಪ ನಾಗರಾಜಯ್ಯರವರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದ “ಕರ್ನಾಟಕದ ಒಕ್ಕಲಿಗರಲ್ಲಿ ಗಂಗಡಿಕಾರರು ಃ ಒಂದು ಅಧ್ಯಯನ” ಎಂಬ ಮಹಾಪ್ರಬಂಧಕ್ಕೆ ಬೆಂಗಳುರು ವಿಶ್ವ ವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ. ಮುಂದೆ ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ರಂಗಭೂಮಿ ನಂಟು ಃ ಮೂಲತಃ ಗ್ರಾಮೀಣ ಪ್ರತಿಭೆಯಾಗಿದ್ದ ನಲ್ಲೂರರಿಗೆ ನಾಟಕ, ರಂಗಕಲೆ ಎಂದರೆ ಎಲ್ಲಿಲ್ಲದ ಇಷ್ಟ. ಬಾಲ್ಯದಿಂದಲೇ ತನ್ನೊಳಗೊಬ್ಬ ನಟನನ್ನು ಕಂಡುಕೊಂಡಿದ್ದ ಇವರು ಮುಂದೆ ಕನ್ನಡ ರಂಗಭೂಮಿಯನ್ನು ತಮ್ಮ ಪ್ರಮುಖ ಕ್ಷೇತ್ರವಾಗಿಸಿಕೊಂಡರು. ಪದವಿ ಹಂತದಲ್ಲಿದ್ದಾಗಲೇ ಸ್ನೇಹಿತರ ತಂಡವೊಂದನ್ನು ಕಟ್ಟಿಕೊಂಡು ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳನ್ನು ರಂಗಸಜ್ಜಿಕೆ ಮೇಲೆ ಪ್ರಯೋಗ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸಂಪೂರ್ಣ ರಾಮಾಯಣ, ದಾನಶೂರ ಕರ್ಣ, ಸ್ಮಶಾನ ಕುರುಕ್ಷೇತ, ಭರತ ಬಾಹುಬಲಿ ಮುಂತಾದ ಪೌರಾಣಿಕ ನಾಟಕಗಳಲ್ಲಿ ರಾಮ, ಅರ್ಜುನ, ಭರತನ ಪಾತ್ರಕ್ಕೆ ಜೀವ ತುಂಬುವುದರೊಂದಿಗೆ ತಮ್ಮ ಮನೋಜ್ಞ ಅಭಿನಯದೊಂದಿಗೆ ಪ್ರೇಕ್ಷಕರ ಮನಗೆದ್ದಿರುವ ಇವರು ಕೇವಲ ನಟನೆಯಲ್ಲದೆ ನಿರ್ದೇಶನ, ಗಾಯನದಲ್ಲೂ ತಮ್ಮ ಛಾಪನ್ನು ಮೂಡಿಸಿದವರು.
ದೀಪಾವಳಿ, ಅಕ್ಕತಂಗಿ, ದೇವದಾಸಿ ಮುಂತಾದ ಸಾಮಾಜಿಕ ನಾಟಕಗಳಲ್ಲಿ ಸೊಗಸಾದ ಅಭಿನಯದೊಂದಿಗೆ ಜನಮಾನಸದಲ್ಲಿ ನೆಲೆಕಂಡವರು ಡಾ|| ನಲ್ಲೂರರು. ‘ದೇವದಾಸಿ’ ನಾಟಕದ ನಾಜೂಕಯ್ಯನ ಪಾತ್ರವು ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು.
ಸಾಹಿತ್ಯ ಕ್ಷೇತ್ರ ಃ ಡಾ|| ನಲ್ಲೂರರು ಬಹುಮುಖ ವ್ಯಕ್ತಿತ್ವವುಳ್ಳವರು. ಕಲೆ, ರಂಗಭೂಮಿಗಷ್ಟೇ ಸೀಮಿತವಾಗದೇ ಸಾಹಿತ್ಯ ಕ್ಷೇತ್ರದಲ್ಲೂ ಅವಿರತವಾಗಿ ದುಡಿದಿದ್ದಾರೆ.
ಕಾವ್ಯ - ‘ನೀನೆಂಬ ನಾನು’, ‘ದಗ್ಧ’, ‘ಸೋನೆ ಮುಗಿಲು’, ‘ರೆಕ್ಕೆ ಬಡಿಯುವ ಮುನ್ನ’, ‘ನಿವೃತ್ತೋಪನಿಷತ್ತು’, ‘ನವಿಲ ಜಾಗರ’ ಮುಂತಾದ ಕವನ ಸಂಕಲನಗಳು;
ಜಾನಪದ – ‘ನಲ್ಲೂರ ದೊರೆಕಾಳಿ’, ‘ನವೋದಯ ಮತ್ತು ಜಾನಪದ’, ‘ರಂಗನ ಕುಣಿತ’ ಮುಂತಾದ ಜಾನಪದ ಕೃತಿಗಳು.
ಸಂಪಾದನೆ – ‘ಜಾನಪದ ಕರ್ನಾಟಕ’, ‘ಜಾನಪದ ಸಂಸ್ಕøತಿ’, ‘ಹೆಜ್ಜೆ ಗುರುತು’, ‘ಜಾನಪದ ಭಾರತಿ’ ಮೊದಲಾದ ಪ್ರಮುಖ ಸಂಪಾದನಾ ಕೃತಿಗಳು.
“ಕನ್ನಡ ಜಾನಪದ ಹೊಸ ಹೊಸ ಜ್ಞಾನ ಶಾಖೆಗಳ ಹಿನ್ನೆಲೆಯಲ್ಲಿ ತನ್ನ ಅಧ್ಯಯನ ವಲಯವನ್ನು ವಿಸ್ತರಿಸಿಕೊಳ್ಳುತ್ತ ಸಾಗಿದೆ. ಅದು ಸಮೀಕ್ಷೆ, ರಸವಿಮರ್ಶೆ, ಪಾಶ್ಚಾತ್ಯ ತತ್ತ್ವಗಳ ಅನುಕರಣೆಯ ಸ್ತರಗಳನ್ನು ದಾಟಿ ದೇಸೀವಾದದತ್ತ ಹೊರಳಿರುವುದು ಜಾನಪದ ಕ್ಷೇತ್ರದ ಬೆಳವಣಿಗೆಗೆ ಪೂರಕ” ಎನ್ನುವ ಡಾ|| ವೈ.ಸಿ.ಭಾನುಮತಿಯವರ ಮಾತು ಈ ಸಂದಂರ್ಭದಲ್ಲಿ ಪ್ರಸ್ತುತವೆನಿಸುತ್ತದೆ. ಡಾ|| ನಲ್ಲೂರು ಪ್ರಸಾದ್ ಅವರಂತಹ ಜಾನಪದ ವಿಧ್ವಾಂಸರು ಈ ಕ್ಷೇತ್ರದ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವುದು ಸ್ತುತ್ಯಾರ್ಹವಾದುದು.
ಜಾನಪದ ಹಾಡುಗಳ ಮೂಲಕ, ಕಥೆಗಳ ಮೂಲಕ, ಲಾವಣಿಗಳ ಮೂಲಕ, ಗಾದೆ, ಒಗಟುಗಳ ಮೂಲಕ ನಮ್ಮ ಪಾರಂಪರಿಕ ಸಂಸ್ಕøತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಆದ್ದರಿಂದಲೇ ಜಾನಪದ ಅಧ್ಯಯನ ಹಾಗೂ ಸಂಗ್ರಹ ಕಾರ್ಯ ಅಗತ್ಯವಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಡಾ|| ನಲ್ಲೂರರು ಒಂದು ಶಿಷ್ಯ ಪಡೆಯನ್ನೇ ಕಟ್ಟಿ ಕಾಯಕ ಮಾಡುತ್ತಿದ್ದಾರೆ.
ಸಂಘಟನೆ ಃ ಇವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಂತರ ಮೊದಲು ಒತ್ತು ಕೊಟ್ಟಿದ್ದೇ ಬಲವಾದ ಸಂಘಟನೆಗೆ. ರಾಜ್ಯದಾದ್ಯಂತ ಸಂಚರಿಸಿ ಕನ್ನಡ ಸಂಘಟನೆಯನ್ನು ಬಲಪಡಿಸುತ್ತ ಹೊಸ ಆಯಾಮವನ್ನು ನೀಡಿದರು.
ಇವರ ಅವಧಿಯಲ್ಲಿ ಅಖಿಲ ಭಾರತ, ವಿಭಾಗೀಯ, ಜಿಲ್ಲಾ ಹಾಗೂ ತಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಮತ್ತು ಮಕ್ಕಳ ಸಾಹಿತ್ಯ ಸಮ್ಮೇಳನ ಹೀಗೆ ನೂರಾರು ಸಮ್ಮೇಳನಗಳನ್ನು ಯಶಸ್ವೀಯಾಗಿ ಮಾಡಿ ಉತ್ಸವಗಳಂತೆ, ಪರಿಷೆಗಳಂತೆ ಜನಪ್ರಿಯಗೊಳಿಸಿದರು. ಅಷ್ಟೇ ಅಲ್ಲದೆ ಘೋಷಣೆಗೊಂಡ ನಿರ್ಣಯಗಳನ್ನು ಸಾಕಾರಗೊಳಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಬೆಂಗಳೂರು ವಿಶ್ವ ವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಡದ ಪ್ರಧಾನ ಕಾರ್ಯದರ್ಶಿಯಾಗಿ, ಶೈಕ್ಷಣೀಕ ಪರಿಷತ್ತಿನ ಸದಸ್ಯರಾಗಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ನುಡಿ’ ಹಾಗೂ ಜಾನಪದ ಅಕಾಡೆಮಿಯ ‘ಜಾನಪದ ಸಮಾಚಾರ’ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ ‘ಅನಿಕೇತನ’ ಪತ್ರಿಕೆಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
2013 ರಲ್ಲಿ ಮೈಸೂರಿನ ಅರಮನೆ ಸಭಾಂಗಣದಲ್ಲಿ ನಡೆದ ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸಂದಂರ್ಭ ನನ್ನದಾಗಿತ್ತು. ಅಂದು ಸಾಹಿತ್ಯಿಕವಾಗಿ ಸಾಕಷ್ಟು ಚರ್ಚೆಯನ್ನೂ ಅವರೊಂದಿಗೆ ಮಾಡಿದ್ದೆ. ಸದಾ ಹಸನ್ಮುಖಿಯಾಗಿರುವ ಇವರು ಹೊಸಬರು ಅಥವಾ ಅಪರಿಚಿತರೆನ್ನದೆ ಪ್ರೀತಿಯಿಂದ ಮಾತನಾಡಿಸುವ ಹಾಗೂ ಮಾರ್ಗದರ್ಶನ ನೀಡುವ ಪರಿ ಶ್ಲಾಘನೀಯವಾದುದು.
ಪ್ರಶಸ್ತಿ-ಪುರಸ್ಕಾರಗಳು ಃ ಸಾಹಿತ್ಯ, ಸಂಘಟನೆ, ಜಾನಪದ, ರಂಗಭೂಮಿ ಹೀಗೆ ನಾನಾ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಕೊಡುಗೆ ನೀಡಿದ ಡಾ|| ನಲ್ಲೂರು ಪ್ರಸಾದ್ ಅವರಿಗೆ ಸಾಕಷ್ಟು ಗೌರವ ಸನ್ಮಾನಗಳು ಸಂದಿವೆ. ಅವುಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಶಿರೋಮಣಿ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಕನ್ನಡ ಕುಲ ತಿಲಕ ಪ್ರಶಸ್ತಿ, ಗೊಮ್ಮಟ ವಿದ್ಯಾಪೀಠ ಪ್ರಶಸ್ತಿ, ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ಜೀಶಂಪ ಜಾನಪದ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಪ್ರಮುಖವಾದವುಗಳು.
2005 ರಲ್ಲಿ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದ ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, 2014 ರಲ್ಲಿ ನಡೆದ ಹಾಸನ ಜಿಲ್ಲಾ ಹದಿನಾಲ್ಕನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನಿವೃತ್ತಿಯ ಜೀವನ ನಡೆಸುತ್ತಾ ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ರಂಗಭೂಮಿ, ಜಾನಪದ, ಸಾಹಿತ್ಯ, ಸಂಘಟನೆ ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಬಹುಮುಖವಾಗಿ ತೊಡಗಿಸಿಕೊಂಡು ಸಾಧನೆಯ ಶಿಖರವೇರಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದವರು ಡಾ|| ಆರ್.ಕೆ.ನಲ್ಲೂರ್ ಪ್ರಸಾದ್ರವರು.
ಕನ್ನಡ ಸಾಂಸ್ಕøತಿಕ ಲೋಕದಲ್ಲಿ ಚಿರಪರಿಚಿಯವಾದ ಹೆಸರಿವರದು ಎಂದರೆ ಅತಿಶಯೋಕ್ತಿಯಾಗಲಾರದು. ಎಚ್.ಬಿ.ಜ್ವಾಲನಯ್ಯರವರನ್ನು ಬಿಟ್ಟರೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಕ್ಷತೆಯಿಂದ ಕೆಲಸ ಮಾಡಿ ಹಾಸನ ಜಿಲ್ಲೆಗೆ ಕೀರ್ತಿ ತಂದವರು ಡಾ|| ನಲ್ಲೂರ್ರವರು. ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದಾದ್ಯಂತ ಕನ್ನಡ ಡಿಂಡಿಮ ಬಾರಿಸಿ ಜಾಗೃತೆ ಮೂಡಿಸಿದರು. ಜಿಲ್ಲಾ ಹಾಗೂ ಅಖಿಲ ಭಾರತ ಸಮ್ಮೇಳನಗಳನ್ನು ಯಶಸ್ವೀಯಾಗಿ ನಡೆಸಿ ಕನ್ನಡದ ಹರ್ಷದೊನಲನ್ನು ಹರಿಸಿದವರು ಇವರು.
ಶ್ರೀಯುತ ನಲ್ಲೂರು ಪ್ರಸಾದ್ ಅವರು 1947 ನವಂಬರ್ 26 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು ಗ್ರಾಮದ ಎನ್.ಕೆ.ಸಂಜೀವಯ್ಯ ಹಾಗೂ ಶಾಂತಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಇವರು ಪಕ್ಕಾ ಜನಪದೀಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡು ಬೆಳೆದವರು. ತಂದೆ ಸಂಜೀವಯ್ಯನವರು ಸ್ವಾತಂತ್ರ್ಯ ಹೋರಾಟಗಾರರು ಆದ್ದರಿಂದ ರಕ್ತಗತವೆಂಬಂತೆ ನಲ್ಲೂರರಿಗೆ ಹೋರಾಟವೆಂಬುದು ಬಾಲ್ಯದಿಂದಲೇ ಹಾಸುಹೊಕ್ಕಾಯಿತು. ನಲ್ಲೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಆನೆಕೆರೆಯಲ್ಲಿ ಮಾಧ್ಯಮಿಕ ಶಿಕ್ಷಣ, ಚನ್ನರಾಯಪಟ್ಟಣದಲ್ಲಿ ಪ್ರೌಢ ಶಿಕ್ಷಣ, ಶ್ರವಣಬೆಳಗೊಳದಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಮುಗಿಸಿದ ಇವರು ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು.
ಸ್ನಾತಕೋತ್ತರ ಅಧ್ಯಯನ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ದೇ.ಜ.ಗೌ, ಹಾಮಾನಾ, ಜೀಶಂಪ, ಸಿಪಿಕೆ, ರಾಗೌ, ಎಲ್.ಬಸವರಾಜ್ ಮುಂತಾದವರ ಸಂಪರ್ಕವಾಗಿ ಸಾಹಿತ್ಯದ ಕಡೆ ಪ್ರಬಲವಾಗಿ ಇವರನ್ನು ಸೆಳೆಯಿತು.
ನಯ, ವಿನಯ, ಸಜ್ಜನಿಕೆಗಳಂತಹ ಸದ್ಗುಣಗಳ ಚೇತನವಾದ ಡಾ|| ನಲ್ಲೂರವರು ಕ್ರಿಯಾಶೀಲ ವ್ಯಕ್ತಿ. ನೇರ ನಡೆ-ನುಡಿಯ ದಿಟ್ಟತನ ಸ್ವಭಾವದ ಇವರು ಸತ್ಕಾರ್ಯಗಳಿಗಾಗಿ ಸದಾ ಆತೊರೆಯುತ್ತಾರೆ.
ವೃತ್ತಿ ಃ ಬೆಂಗಳೂರಿನ ವಿ.ವಿ.ಪುರಂನ ನ್ಯಾಷನಲ್ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಗೆ ಪಾದಾರ್ಪಣೆ ಮಾಡಿದರು. ಹಿರಿಯ ಸಂಶೋಧಕರಾದ ಡಾ|| ಹಂಪ ನಾಗರಾಜಯ್ಯರವರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದ “ಕರ್ನಾಟಕದ ಒಕ್ಕಲಿಗರಲ್ಲಿ ಗಂಗಡಿಕಾರರು ಃ ಒಂದು ಅಧ್ಯಯನ” ಎಂಬ ಮಹಾಪ್ರಬಂಧಕ್ಕೆ ಬೆಂಗಳುರು ವಿಶ್ವ ವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ. ಮುಂದೆ ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ರಂಗಭೂಮಿ ನಂಟು ಃ ಮೂಲತಃ ಗ್ರಾಮೀಣ ಪ್ರತಿಭೆಯಾಗಿದ್ದ ನಲ್ಲೂರರಿಗೆ ನಾಟಕ, ರಂಗಕಲೆ ಎಂದರೆ ಎಲ್ಲಿಲ್ಲದ ಇಷ್ಟ. ಬಾಲ್ಯದಿಂದಲೇ ತನ್ನೊಳಗೊಬ್ಬ ನಟನನ್ನು ಕಂಡುಕೊಂಡಿದ್ದ ಇವರು ಮುಂದೆ ಕನ್ನಡ ರಂಗಭೂಮಿಯನ್ನು ತಮ್ಮ ಪ್ರಮುಖ ಕ್ಷೇತ್ರವಾಗಿಸಿಕೊಂಡರು. ಪದವಿ ಹಂತದಲ್ಲಿದ್ದಾಗಲೇ ಸ್ನೇಹಿತರ ತಂಡವೊಂದನ್ನು ಕಟ್ಟಿಕೊಂಡು ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳನ್ನು ರಂಗಸಜ್ಜಿಕೆ ಮೇಲೆ ಪ್ರಯೋಗ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸಂಪೂರ್ಣ ರಾಮಾಯಣ, ದಾನಶೂರ ಕರ್ಣ, ಸ್ಮಶಾನ ಕುರುಕ್ಷೇತ, ಭರತ ಬಾಹುಬಲಿ ಮುಂತಾದ ಪೌರಾಣಿಕ ನಾಟಕಗಳಲ್ಲಿ ರಾಮ, ಅರ್ಜುನ, ಭರತನ ಪಾತ್ರಕ್ಕೆ ಜೀವ ತುಂಬುವುದರೊಂದಿಗೆ ತಮ್ಮ ಮನೋಜ್ಞ ಅಭಿನಯದೊಂದಿಗೆ ಪ್ರೇಕ್ಷಕರ ಮನಗೆದ್ದಿರುವ ಇವರು ಕೇವಲ ನಟನೆಯಲ್ಲದೆ ನಿರ್ದೇಶನ, ಗಾಯನದಲ್ಲೂ ತಮ್ಮ ಛಾಪನ್ನು ಮೂಡಿಸಿದವರು.
ದೀಪಾವಳಿ, ಅಕ್ಕತಂಗಿ, ದೇವದಾಸಿ ಮುಂತಾದ ಸಾಮಾಜಿಕ ನಾಟಕಗಳಲ್ಲಿ ಸೊಗಸಾದ ಅಭಿನಯದೊಂದಿಗೆ ಜನಮಾನಸದಲ್ಲಿ ನೆಲೆಕಂಡವರು ಡಾ|| ನಲ್ಲೂರರು. ‘ದೇವದಾಸಿ’ ನಾಟಕದ ನಾಜೂಕಯ್ಯನ ಪಾತ್ರವು ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು.
ಸಾಹಿತ್ಯ ಕ್ಷೇತ್ರ ಃ ಡಾ|| ನಲ್ಲೂರರು ಬಹುಮುಖ ವ್ಯಕ್ತಿತ್ವವುಳ್ಳವರು. ಕಲೆ, ರಂಗಭೂಮಿಗಷ್ಟೇ ಸೀಮಿತವಾಗದೇ ಸಾಹಿತ್ಯ ಕ್ಷೇತ್ರದಲ್ಲೂ ಅವಿರತವಾಗಿ ದುಡಿದಿದ್ದಾರೆ.
ಕಾವ್ಯ - ‘ನೀನೆಂಬ ನಾನು’, ‘ದಗ್ಧ’, ‘ಸೋನೆ ಮುಗಿಲು’, ‘ರೆಕ್ಕೆ ಬಡಿಯುವ ಮುನ್ನ’, ‘ನಿವೃತ್ತೋಪನಿಷತ್ತು’, ‘ನವಿಲ ಜಾಗರ’ ಮುಂತಾದ ಕವನ ಸಂಕಲನಗಳು;
ಜಾನಪದ – ‘ನಲ್ಲೂರ ದೊರೆಕಾಳಿ’, ‘ನವೋದಯ ಮತ್ತು ಜಾನಪದ’, ‘ರಂಗನ ಕುಣಿತ’ ಮುಂತಾದ ಜಾನಪದ ಕೃತಿಗಳು.
ಸಂಪಾದನೆ – ‘ಜಾನಪದ ಕರ್ನಾಟಕ’, ‘ಜಾನಪದ ಸಂಸ್ಕøತಿ’, ‘ಹೆಜ್ಜೆ ಗುರುತು’, ‘ಜಾನಪದ ಭಾರತಿ’ ಮೊದಲಾದ ಪ್ರಮುಖ ಸಂಪಾದನಾ ಕೃತಿಗಳು.
“ಕನ್ನಡ ಜಾನಪದ ಹೊಸ ಹೊಸ ಜ್ಞಾನ ಶಾಖೆಗಳ ಹಿನ್ನೆಲೆಯಲ್ಲಿ ತನ್ನ ಅಧ್ಯಯನ ವಲಯವನ್ನು ವಿಸ್ತರಿಸಿಕೊಳ್ಳುತ್ತ ಸಾಗಿದೆ. ಅದು ಸಮೀಕ್ಷೆ, ರಸವಿಮರ್ಶೆ, ಪಾಶ್ಚಾತ್ಯ ತತ್ತ್ವಗಳ ಅನುಕರಣೆಯ ಸ್ತರಗಳನ್ನು ದಾಟಿ ದೇಸೀವಾದದತ್ತ ಹೊರಳಿರುವುದು ಜಾನಪದ ಕ್ಷೇತ್ರದ ಬೆಳವಣಿಗೆಗೆ ಪೂರಕ” ಎನ್ನುವ ಡಾ|| ವೈ.ಸಿ.ಭಾನುಮತಿಯವರ ಮಾತು ಈ ಸಂದಂರ್ಭದಲ್ಲಿ ಪ್ರಸ್ತುತವೆನಿಸುತ್ತದೆ. ಡಾ|| ನಲ್ಲೂರು ಪ್ರಸಾದ್ ಅವರಂತಹ ಜಾನಪದ ವಿಧ್ವಾಂಸರು ಈ ಕ್ಷೇತ್ರದ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವುದು ಸ್ತುತ್ಯಾರ್ಹವಾದುದು.
ಜಾನಪದ ಹಾಡುಗಳ ಮೂಲಕ, ಕಥೆಗಳ ಮೂಲಕ, ಲಾವಣಿಗಳ ಮೂಲಕ, ಗಾದೆ, ಒಗಟುಗಳ ಮೂಲಕ ನಮ್ಮ ಪಾರಂಪರಿಕ ಸಂಸ್ಕøತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಆದ್ದರಿಂದಲೇ ಜಾನಪದ ಅಧ್ಯಯನ ಹಾಗೂ ಸಂಗ್ರಹ ಕಾರ್ಯ ಅಗತ್ಯವಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಡಾ|| ನಲ್ಲೂರರು ಒಂದು ಶಿಷ್ಯ ಪಡೆಯನ್ನೇ ಕಟ್ಟಿ ಕಾಯಕ ಮಾಡುತ್ತಿದ್ದಾರೆ.
ಸಂಘಟನೆ ಃ ಇವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಂತರ ಮೊದಲು ಒತ್ತು ಕೊಟ್ಟಿದ್ದೇ ಬಲವಾದ ಸಂಘಟನೆಗೆ. ರಾಜ್ಯದಾದ್ಯಂತ ಸಂಚರಿಸಿ ಕನ್ನಡ ಸಂಘಟನೆಯನ್ನು ಬಲಪಡಿಸುತ್ತ ಹೊಸ ಆಯಾಮವನ್ನು ನೀಡಿದರು.
ಇವರ ಅವಧಿಯಲ್ಲಿ ಅಖಿಲ ಭಾರತ, ವಿಭಾಗೀಯ, ಜಿಲ್ಲಾ ಹಾಗೂ ತಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಮತ್ತು ಮಕ್ಕಳ ಸಾಹಿತ್ಯ ಸಮ್ಮೇಳನ ಹೀಗೆ ನೂರಾರು ಸಮ್ಮೇಳನಗಳನ್ನು ಯಶಸ್ವೀಯಾಗಿ ಮಾಡಿ ಉತ್ಸವಗಳಂತೆ, ಪರಿಷೆಗಳಂತೆ ಜನಪ್ರಿಯಗೊಳಿಸಿದರು. ಅಷ್ಟೇ ಅಲ್ಲದೆ ಘೋಷಣೆಗೊಂಡ ನಿರ್ಣಯಗಳನ್ನು ಸಾಕಾರಗೊಳಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಬೆಂಗಳೂರು ವಿಶ್ವ ವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಡದ ಪ್ರಧಾನ ಕಾರ್ಯದರ್ಶಿಯಾಗಿ, ಶೈಕ್ಷಣೀಕ ಪರಿಷತ್ತಿನ ಸದಸ್ಯರಾಗಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ನುಡಿ’ ಹಾಗೂ ಜಾನಪದ ಅಕಾಡೆಮಿಯ ‘ಜಾನಪದ ಸಮಾಚಾರ’ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ ‘ಅನಿಕೇತನ’ ಪತ್ರಿಕೆಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
2013 ರಲ್ಲಿ ಮೈಸೂರಿನ ಅರಮನೆ ಸಭಾಂಗಣದಲ್ಲಿ ನಡೆದ ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸಂದಂರ್ಭ ನನ್ನದಾಗಿತ್ತು. ಅಂದು ಸಾಹಿತ್ಯಿಕವಾಗಿ ಸಾಕಷ್ಟು ಚರ್ಚೆಯನ್ನೂ ಅವರೊಂದಿಗೆ ಮಾಡಿದ್ದೆ. ಸದಾ ಹಸನ್ಮುಖಿಯಾಗಿರುವ ಇವರು ಹೊಸಬರು ಅಥವಾ ಅಪರಿಚಿತರೆನ್ನದೆ ಪ್ರೀತಿಯಿಂದ ಮಾತನಾಡಿಸುವ ಹಾಗೂ ಮಾರ್ಗದರ್ಶನ ನೀಡುವ ಪರಿ ಶ್ಲಾಘನೀಯವಾದುದು.
ಪ್ರಶಸ್ತಿ-ಪುರಸ್ಕಾರಗಳು ಃ ಸಾಹಿತ್ಯ, ಸಂಘಟನೆ, ಜಾನಪದ, ರಂಗಭೂಮಿ ಹೀಗೆ ನಾನಾ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಕೊಡುಗೆ ನೀಡಿದ ಡಾ|| ನಲ್ಲೂರು ಪ್ರಸಾದ್ ಅವರಿಗೆ ಸಾಕಷ್ಟು ಗೌರವ ಸನ್ಮಾನಗಳು ಸಂದಿವೆ. ಅವುಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಶಿರೋಮಣಿ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಕನ್ನಡ ಕುಲ ತಿಲಕ ಪ್ರಶಸ್ತಿ, ಗೊಮ್ಮಟ ವಿದ್ಯಾಪೀಠ ಪ್ರಶಸ್ತಿ, ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ಜೀಶಂಪ ಜಾನಪದ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಪ್ರಮುಖವಾದವುಗಳು.
2005 ರಲ್ಲಿ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದ ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, 2014 ರಲ್ಲಿ ನಡೆದ ಹಾಸನ ಜಿಲ್ಲಾ ಹದಿನಾಲ್ಕನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನಿವೃತ್ತಿಯ ಜೀವನ ನಡೆಸುತ್ತಾ ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ