ವಿಚಾರಪೂರಿತ ವಾಗ್ಮಿ, ಕವಯತ್ರಿ,ಲೇಖಕಿ - ಸುಶೀಲಾ ಸೋಮಶೇಖರ್
ಪ್ರತಿಭೆ, ಅಭ್ಯಾಸ, ವ್ಯುತ್ಪತ್ತಿಗಳನ್ನು ನಮ್ಮ ಭಾರತೀಯ ಕಾವ್ಯ ಮೀಮಾಂಸಕರು ಈ ಮೂರನ್ನಷ್ಟೆ ಕಾವ್ಯ ಹೇತು ಎಂದು ಸಾರಿದರು. ಅವುಗಳ ಜೊತೆಗೆ ಪಾಶ್ಚಾತ್ಯರು ಹೇಳುವ ಸ್ಪೂರ್ತಿ ಕೂಡ ಸೇರಬೇಕು. ಸ್ಪೂರ್ತಿ ಇಲ್ಲದಿದ್ದರೆ ಕಾವ್ಯವಲ್ಲ, ಏನನ್ನು ರಚಿಸಲು ಬರುವುದಿಲ್ಲ, ಚಿಂತಿಸಲೂ ಬರುವುದಿಲ್ಲ. ಅದೂ ಮುಖ್ಯ ಕಾವ್ಯ ನಿರ್ಮಿತಿಯಲ್ಲಿ ಈ ನಾಲ್ಕು ತತ್ತ್ವಗಳು ಜೊತೆಗೂಡುವುದು ಪ್ರಶಾಂತ ಪರಿಸರದಲ್ಲಿ ಮಾತ್ರ.
ಶ್ರೀ ಕುವೆಂಪು ಅವರನ್ನು ಸೃಷ್ಠಿಮಾಡಿದ್ದು ಮಲೆನಾಡು. ಮಲೆನಾಡಿನ ನಿಸರ್ಗ ರಮಣೀಯ ಪ್ರಶಾಂತ ಪರಿಸರ; ಶ್ರೀ ರಾಮಕೃಷ್ಣಾಶ್ರಮದ ವಾತಾವರಣ, ಕಾವ್ಯ ಸೃಷ್ಠಿ ಸಂದರ್ಭದಲ್ಲಿ ಪರಿಸರದ್ದು ಗಮನೀಯ ಪಾತ್ರ ಎಂಬುದನ್ನು ಮರೆಯುವಂತಿಲ್ಲ.
ಇಷ್ಟೆಲ್ಲ ಪ್ರವರದ ಹಿನ್ನೆಲೆಯ ಉದ್ದೇಶ ಕವಯತ್ರಿ ಸುಶೀಲಾ ಸೋಮಶೇಖರ ಅವರನ್ನು ಪರಿಚಯಿಸುವುದು. ನನ್ನ ಮೊದಲ ‘ವಚನ ದುಂದುಭಿ’ ಕೃತಿಯಿಂದಲೂ ಇಲ್ಲಿಯವರೆಗೆ ನನ್ನ ಸಾಹಿತ್ಯಕ್ಕೆ ಒತ್ತಾಸೆಯಾಗಿ ನಿಂತಿರುವ ಸಹೋದರಿ ಸುಶೀಲಾ ಸೋಮಶೇಖರ್ ನಾಡಿನ ಕೆಲವೇ ಜನ ವಿಚಾರ ಪೂರಿತ ವಾಗ್ಮಿಗಳಲ್ಲಿ ಒಬ್ಬರು, ಸಾವಿರಾರು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಅಧ್ಯಾಪಕಿ. ಒಳ್ಳೆಯ ಗದ್ಯ ರಚನಕಾರರು. ಅದರಲ್ಲೂ ಮಕ್ಕಳ ಕವಿತೆಗಳ ಬರವಣಿಗೆಯಲ್ಲಿ ಇವರದು ಎತ್ತಿದ ಕೈ ಎಂದರೆ ಅತಿಶಯೋಕ್ತಿಯಾಗಲಾರದು. ಸದಾ ಚಿಂತನ ಶೀಲರಾಗಿರುವ ಇವರಿಂದ ನೂರಾರು ಸಾಮಾಜಿಕ ಕಳಕಳಿಯ ಚಿಂತನಗಳು ಬಾನುಲಿ, ದೂರದರ್ಶನ, ವೃತ್ತ ಪತ್ರಿಕೆ, ವಾರ ಪತ್ರಿಕೆಗಳಲ್ಲಿ, ರಾಜ್ಯದಾದ್ಯಂತ ಪ್ರಕಟಗೊಂಡಿವೆ.
ಇವರು 1956ರ ಜೂನ್ 10 ರಂದು ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ಸಾಲಗಾಮೆ ಹೋಬಳಿ ಯಲಗುಂದ ಗ್ರಾಮದ ಶ್ರೀ ತಮ್ಮಣ್ಣ ಗೌಡ ಮತ್ತು ಶ್ರೀಮತಿ ನಂಜಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದರು.
ಕವಯಿತ್ರಿ ಸುಶೀಲಾ ಸೋಮಶೇಖರ್ ಅವರು ಸುಚಿರ್ಭೂತ ಹೃನ್ಮನಗಳನ್ನು ಹೊಂದುವುದೇ ಬಾಳು-ಬದುಕಿನ ಪರಮಗುರಿ, ಜೀವನ ಸಾರ್ಥಕ್ಕೆ ಎಂದು ನಂಬಿ ನಡೆಯುತ್ತಾ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಗದ್ಯ, ಪದ್ಯಗಳೆರಡರಲ್ಲೂ ಸಮಚಿತ್ತವಾಗಿ ಉತ್ಕøಷ್ಟ ಸಾಹಿತ್ಯ ಸೇವೆಗೈದ ಇವರು ಕನ್ನಡ ಕಣ್ಮಣಿಯಾಗಿದ್ದಾರೆ. ಹಾಸನ ಜಿಲ್ಲೆಯ ಒಳಗೂ, ಹೊರಗೂ ಸುವಿಖ್ಯಾತವಾಗಿರುವ ಇವರು ಇಲ್ಲಿಯವರೆಗೆ ಅನೇಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
‘ನಕ್ಕು ಬಿಡೆ ಗೆಳತಿ’ - 1998, ‘ಅಂಗಳ ಅನಾಥವಲ್ಲ’ -2005, ‘ಮಳೆ ಪುರುಷ’ – 2008, ಸದ್ದಿಲ್ಲದ ನಗು-2015 ಕವನ ಸಂಕಲನಗಳು; ‘ವಚನ ಸಂವಹನ’ - 2006 ಶರಣ ವಚನ ವಿಶ್ಲೇಷÀಣೆ; ‘ಚಿಗುರು’ -2009, ‘ನಗುವ ನಕ್ಷತ್ರಗಳು’ - 2011 ಮಕ್ಕಳ ಕವನ ಸಂಕಲನಗಳು; ‘ನುಡಿ ಜ್ಯೋತಿರ್ಲಿಂಗ’ - 2010 ಚಿಂತನ ಕೃತಿಗಳು ಪ್ರಕಟವಾಗಿವೆ.
‘ಸದ್ದಿಲ್ಲದ ನಗು’ - ಕವನ ಸಂಕಲನ, ‘ನೂರಾರು ಹನಿಗವನಗಳು’ - ಚುಟುಕು ಸಂಕಲನ ಮುದ್ರಣಗೊಂಡು ಬಿಡುಗಡೆಗೆ ಸಿದ್ಧವಾಗಿವೆ.
ಎಂ.ಎ., ಬಿ.ಇ.ಡಿ. ಪದವಿಧರೆಯಾದ ಇವರು ಕಳೆದ ಮೂರ್ನಾಲ್ಕು ದಶಕಗಳಿಂದ, ಸಕಲೇಶಪುರದ ಶ್ರೀ ಚೇತನ ಪ್ರೌಢ ಶಾಲೆಯಲ್ಲಿ ಭಾಷಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆ-ಜೊತೆಗೆ ಅಲ್ಲಿಯ ಸಾಹಿತ್ಯ ದ್ರವ್ಯ ಪಸರಿಸಿ ಜಾಗೃತಿ ಮೂಡಿಸಿದ್ದಾರೆ. ಶಿಕ್ಷಣ, ಸಾಹಿತ್ಯ, ಸಂಘಟನೆಗಳಲ್ಲಿ ಸಮಚಿತ್ತ ಭಾವದಿಂದ ಕಾಯಕಗೈಯುತ್ತ ಬಂದ ಇವರು ಹಾಸನದಲ್ಲಷ್ಟೆ ಅಲ್ಲದೆ ರಾಜ್ಯ ಮಹಿಳಾ ಸಾಹಿತ್ಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ ಕವಯತ್ರಿ.
ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು, ಸಕಲೇಶಪುರದ ಅಕ್ಕನ ಬಳಗ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಮುಂತಾದ ಸಂಘಟನೆಗಳಲ್ಲಿ ಅವಿರತವಾಗಿ ಸ್ವಯಂ ಸೇವಕರಂತೆ ದುಡಿದಿದ್ದಾರೆ. 2007 ರಿಂದ ಹಾಸನ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಪತಿ ಸೋಮಶೇಖರ ರವರು ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಪ್ರೋತ್ಸಾಹದ ನಿರಂತರತೆಯಿಂದ ಸಾಹಿತ್ಯ ದೀವಿಗೆ ಬೆಳಗುತ್ತಿದೆ.
ವಚನ ಸಾಹಿತ್ಯ ಎಂದಾಕ್ಷಣ ತತ್ಕ್ಷಣ ನೆನಪಾಗುವುದು ಸುಶೀಲಾಸೋಮಶೇಖರ ಅವರು. ವಚನಗಳ ವಿಶ್ಲೇಷಣೆ, ಅವುಗಳ ಆಳ-ನಿರಾಳಗಳನ್ನು ಸಮರ್ಥವಾಗಿ, ಸೊಗಸಾಗಿ, ಪ್ರತಿಧ್ವನಿಸುವ ಕಂಚಿನ ಕಂಠ ಇವರದು. ರಾಜ್ಯ, ಅಂತರಾಜ್ಯ ಮಟ್ಟದಲ್ಲಿ ನೂರಾರು ಉಪನ್ಯಾಸಗಳನ್ನು, ಶರಣ ಚಿಂತನೆಗಳನ್ನು ಜನರಿಗೆ ಅರ್ಥಗರ್ಭಿತವಾಗಿ ಉಣಬಡಿಸಿದ ಕೀರ್ತಿ ಇವರದು.
ಹೊಯ್ಸಳ ಮಹೋತ್ಸವ, ಕುವೆಂಪು ಶತಮಾನೋತ್ಸವ, ತಾಲ್ಲೂಕು-ಜಿಲ್ಲಾ ಹಾಗೂ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನಗಳು, ವಿಚಾರಗೋಷ್ಠಿಗಳು, ಕವಿಗೋಷ್ಠಿಗಳು, ಮಾಧ್ಯಮಗೋಷ್ಠಿಗಳು, ದಸರಾ ಕವಿಗೋಷ್ಠಿ ಮುಂತಾದ ಕಡೆಗಳಲ್ಲಿ ತಮ್ಮ ವಿಚಾರ ಪೂರಿತ ವಿಧ್ವತ್ತನ್ನು ಹರಿಯಬಿಟ್ಟಿದ್ದಾರೆ.
ಇವರ ಮಕ್ಕಳ ಕವಿತೆಗಳು, ಚಿಂತನಗಳು, ಲೇಖನಗಳು, ಕಥೆಗಳು ರಾಜ್ಯ ಮಟ್ಟದ ಪತ್ರಿಕೆಗಳಾದ ‘ಸುಧಾ, ಮಯೂರ, ಪ್ರಿಯಾಂಕ, ಶೈನ್, ಮಂಗಳ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಮಹಾಮನೆ, ಸಿದ್ಧಗಂಗಾ ಶ್ರೀ, ಬಸವ ಮಾರ್ಗ, ಮಾನಸ ಹಾಗೂ ಸ್ಥಳೀಯ ಪತ್ರಿಕೆಗಳಾದ ಜನತಾ ಮಾಧ್ಯಮ, ಜನ ಮಿತ್ರ, ಜನ ಹಿತ, ಬಂಡಾಯ, ಜ್ಞಾನ ದೀಪ, ನಾಡ ಸಹ್ಯಾದ್ರಿ, ಹಾಸನ ಮಿತ್ರ, ಕಲ್ಯಾಣ ಕೋಟೆ’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದಿವೆ.
ಇವರ ‘ಅಂಗಳ ಅನಾಥವಲ್ಲ’ ಕವನ ಸಂಕಲನಕ್ಕೆ, 2005 ರಲ್ಲಿ ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ, 2006ರಲ್ಲಿ ನೀಲಗಂಗಾ ದತ್ತಿ ಪ್ರಶಸ್ತಿ, 2006ರಲ್ಲಿ ಪಂಡಿತ ಪುಟ್ಟರಾಜ ಸಾಹಿತ್ಯ ಪ್ರಶಸ್ತಿಗಳು ದೊರಕಿವೆ.
ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗಾಗಿ 2002ರಲ್ಲಿ ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ, 2008ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, 2011ರಲ್ಲಿ ಜಿಲ್ಲಾ ಶಿಕ್ಷಕ ರತ್ನ ಪ್ರಶಸ್ತಿಗಳು ಸಂದಿವೆ. ಇವರ ‘ಮಳೆ ಪುರುಷ’ ಕವನ ಸಂಕಲನಕ್ಕೆ 2010ರಲ್ಲಿ ಕಾವ್ಯ ಶ್ರೀ ಪ್ರಶಸ್ತಿ; ‘ನುಡಿ ಜ್ಯೋತಿರ್ಲಿಂಗ’ ಕೃತಿಗೆ 2010ರ ಅಡ್ವೈಸರ್ ಪ್ರಶಸ್ತಿ ಸಂದಿದೆ. ಇಂತಹ ಘನ ವ್ಯಕ್ತಿತ್ವ ಹೊಂದಿದ ಇವರನ್ನು 26-07-2014ರಂದು ಸಕಲೇಶಪುರದಲ್ಲಿ ನಡೆದ 2ನೆಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಔಚಿತ್ಯಪೂರ್ಣವಾಗಿದೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿ ನಗರ,
ಹಾಸನ-573201
ಮೊ-9483470794, 9439878197

ಶ್ರೀ ಕುವೆಂಪು ಅವರನ್ನು ಸೃಷ್ಠಿಮಾಡಿದ್ದು ಮಲೆನಾಡು. ಮಲೆನಾಡಿನ ನಿಸರ್ಗ ರಮಣೀಯ ಪ್ರಶಾಂತ ಪರಿಸರ; ಶ್ರೀ ರಾಮಕೃಷ್ಣಾಶ್ರಮದ ವಾತಾವರಣ, ಕಾವ್ಯ ಸೃಷ್ಠಿ ಸಂದರ್ಭದಲ್ಲಿ ಪರಿಸರದ್ದು ಗಮನೀಯ ಪಾತ್ರ ಎಂಬುದನ್ನು ಮರೆಯುವಂತಿಲ್ಲ.
ಇಷ್ಟೆಲ್ಲ ಪ್ರವರದ ಹಿನ್ನೆಲೆಯ ಉದ್ದೇಶ ಕವಯತ್ರಿ ಸುಶೀಲಾ ಸೋಮಶೇಖರ ಅವರನ್ನು ಪರಿಚಯಿಸುವುದು. ನನ್ನ ಮೊದಲ ‘ವಚನ ದುಂದುಭಿ’ ಕೃತಿಯಿಂದಲೂ ಇಲ್ಲಿಯವರೆಗೆ ನನ್ನ ಸಾಹಿತ್ಯಕ್ಕೆ ಒತ್ತಾಸೆಯಾಗಿ ನಿಂತಿರುವ ಸಹೋದರಿ ಸುಶೀಲಾ ಸೋಮಶೇಖರ್ ನಾಡಿನ ಕೆಲವೇ ಜನ ವಿಚಾರ ಪೂರಿತ ವಾಗ್ಮಿಗಳಲ್ಲಿ ಒಬ್ಬರು, ಸಾವಿರಾರು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಅಧ್ಯಾಪಕಿ. ಒಳ್ಳೆಯ ಗದ್ಯ ರಚನಕಾರರು. ಅದರಲ್ಲೂ ಮಕ್ಕಳ ಕವಿತೆಗಳ ಬರವಣಿಗೆಯಲ್ಲಿ ಇವರದು ಎತ್ತಿದ ಕೈ ಎಂದರೆ ಅತಿಶಯೋಕ್ತಿಯಾಗಲಾರದು. ಸದಾ ಚಿಂತನ ಶೀಲರಾಗಿರುವ ಇವರಿಂದ ನೂರಾರು ಸಾಮಾಜಿಕ ಕಳಕಳಿಯ ಚಿಂತನಗಳು ಬಾನುಲಿ, ದೂರದರ್ಶನ, ವೃತ್ತ ಪತ್ರಿಕೆ, ವಾರ ಪತ್ರಿಕೆಗಳಲ್ಲಿ, ರಾಜ್ಯದಾದ್ಯಂತ ಪ್ರಕಟಗೊಂಡಿವೆ.
ಇವರು 1956ರ ಜೂನ್ 10 ರಂದು ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ಸಾಲಗಾಮೆ ಹೋಬಳಿ ಯಲಗುಂದ ಗ್ರಾಮದ ಶ್ರೀ ತಮ್ಮಣ್ಣ ಗೌಡ ಮತ್ತು ಶ್ರೀಮತಿ ನಂಜಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದರು.
ಕವಯಿತ್ರಿ ಸುಶೀಲಾ ಸೋಮಶೇಖರ್ ಅವರು ಸುಚಿರ್ಭೂತ ಹೃನ್ಮನಗಳನ್ನು ಹೊಂದುವುದೇ ಬಾಳು-ಬದುಕಿನ ಪರಮಗುರಿ, ಜೀವನ ಸಾರ್ಥಕ್ಕೆ ಎಂದು ನಂಬಿ ನಡೆಯುತ್ತಾ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಗದ್ಯ, ಪದ್ಯಗಳೆರಡರಲ್ಲೂ ಸಮಚಿತ್ತವಾಗಿ ಉತ್ಕøಷ್ಟ ಸಾಹಿತ್ಯ ಸೇವೆಗೈದ ಇವರು ಕನ್ನಡ ಕಣ್ಮಣಿಯಾಗಿದ್ದಾರೆ. ಹಾಸನ ಜಿಲ್ಲೆಯ ಒಳಗೂ, ಹೊರಗೂ ಸುವಿಖ್ಯಾತವಾಗಿರುವ ಇವರು ಇಲ್ಲಿಯವರೆಗೆ ಅನೇಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
‘ನಕ್ಕು ಬಿಡೆ ಗೆಳತಿ’ - 1998, ‘ಅಂಗಳ ಅನಾಥವಲ್ಲ’ -2005, ‘ಮಳೆ ಪುರುಷ’ – 2008, ಸದ್ದಿಲ್ಲದ ನಗು-2015 ಕವನ ಸಂಕಲನಗಳು; ‘ವಚನ ಸಂವಹನ’ - 2006 ಶರಣ ವಚನ ವಿಶ್ಲೇಷÀಣೆ; ‘ಚಿಗುರು’ -2009, ‘ನಗುವ ನಕ್ಷತ್ರಗಳು’ - 2011 ಮಕ್ಕಳ ಕವನ ಸಂಕಲನಗಳು; ‘ನುಡಿ ಜ್ಯೋತಿರ್ಲಿಂಗ’ - 2010 ಚಿಂತನ ಕೃತಿಗಳು ಪ್ರಕಟವಾಗಿವೆ.
‘ಸದ್ದಿಲ್ಲದ ನಗು’ - ಕವನ ಸಂಕಲನ, ‘ನೂರಾರು ಹನಿಗವನಗಳು’ - ಚುಟುಕು ಸಂಕಲನ ಮುದ್ರಣಗೊಂಡು ಬಿಡುಗಡೆಗೆ ಸಿದ್ಧವಾಗಿವೆ.
ಎಂ.ಎ., ಬಿ.ಇ.ಡಿ. ಪದವಿಧರೆಯಾದ ಇವರು ಕಳೆದ ಮೂರ್ನಾಲ್ಕು ದಶಕಗಳಿಂದ, ಸಕಲೇಶಪುರದ ಶ್ರೀ ಚೇತನ ಪ್ರೌಢ ಶಾಲೆಯಲ್ಲಿ ಭಾಷಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆ-ಜೊತೆಗೆ ಅಲ್ಲಿಯ ಸಾಹಿತ್ಯ ದ್ರವ್ಯ ಪಸರಿಸಿ ಜಾಗೃತಿ ಮೂಡಿಸಿದ್ದಾರೆ. ಶಿಕ್ಷಣ, ಸಾಹಿತ್ಯ, ಸಂಘಟನೆಗಳಲ್ಲಿ ಸಮಚಿತ್ತ ಭಾವದಿಂದ ಕಾಯಕಗೈಯುತ್ತ ಬಂದ ಇವರು ಹಾಸನದಲ್ಲಷ್ಟೆ ಅಲ್ಲದೆ ರಾಜ್ಯ ಮಹಿಳಾ ಸಾಹಿತ್ಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ ಕವಯತ್ರಿ.
ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು, ಸಕಲೇಶಪುರದ ಅಕ್ಕನ ಬಳಗ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಮುಂತಾದ ಸಂಘಟನೆಗಳಲ್ಲಿ ಅವಿರತವಾಗಿ ಸ್ವಯಂ ಸೇವಕರಂತೆ ದುಡಿದಿದ್ದಾರೆ. 2007 ರಿಂದ ಹಾಸನ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಪತಿ ಸೋಮಶೇಖರ ರವರು ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಪ್ರೋತ್ಸಾಹದ ನಿರಂತರತೆಯಿಂದ ಸಾಹಿತ್ಯ ದೀವಿಗೆ ಬೆಳಗುತ್ತಿದೆ.
ವಚನ ಸಾಹಿತ್ಯ ಎಂದಾಕ್ಷಣ ತತ್ಕ್ಷಣ ನೆನಪಾಗುವುದು ಸುಶೀಲಾಸೋಮಶೇಖರ ಅವರು. ವಚನಗಳ ವಿಶ್ಲೇಷಣೆ, ಅವುಗಳ ಆಳ-ನಿರಾಳಗಳನ್ನು ಸಮರ್ಥವಾಗಿ, ಸೊಗಸಾಗಿ, ಪ್ರತಿಧ್ವನಿಸುವ ಕಂಚಿನ ಕಂಠ ಇವರದು. ರಾಜ್ಯ, ಅಂತರಾಜ್ಯ ಮಟ್ಟದಲ್ಲಿ ನೂರಾರು ಉಪನ್ಯಾಸಗಳನ್ನು, ಶರಣ ಚಿಂತನೆಗಳನ್ನು ಜನರಿಗೆ ಅರ್ಥಗರ್ಭಿತವಾಗಿ ಉಣಬಡಿಸಿದ ಕೀರ್ತಿ ಇವರದು.
ಹೊಯ್ಸಳ ಮಹೋತ್ಸವ, ಕುವೆಂಪು ಶತಮಾನೋತ್ಸವ, ತಾಲ್ಲೂಕು-ಜಿಲ್ಲಾ ಹಾಗೂ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನಗಳು, ವಿಚಾರಗೋಷ್ಠಿಗಳು, ಕವಿಗೋಷ್ಠಿಗಳು, ಮಾಧ್ಯಮಗೋಷ್ಠಿಗಳು, ದಸರಾ ಕವಿಗೋಷ್ಠಿ ಮುಂತಾದ ಕಡೆಗಳಲ್ಲಿ ತಮ್ಮ ವಿಚಾರ ಪೂರಿತ ವಿಧ್ವತ್ತನ್ನು ಹರಿಯಬಿಟ್ಟಿದ್ದಾರೆ.
ಇವರ ಮಕ್ಕಳ ಕವಿತೆಗಳು, ಚಿಂತನಗಳು, ಲೇಖನಗಳು, ಕಥೆಗಳು ರಾಜ್ಯ ಮಟ್ಟದ ಪತ್ರಿಕೆಗಳಾದ ‘ಸುಧಾ, ಮಯೂರ, ಪ್ರಿಯಾಂಕ, ಶೈನ್, ಮಂಗಳ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಮಹಾಮನೆ, ಸಿದ್ಧಗಂಗಾ ಶ್ರೀ, ಬಸವ ಮಾರ್ಗ, ಮಾನಸ ಹಾಗೂ ಸ್ಥಳೀಯ ಪತ್ರಿಕೆಗಳಾದ ಜನತಾ ಮಾಧ್ಯಮ, ಜನ ಮಿತ್ರ, ಜನ ಹಿತ, ಬಂಡಾಯ, ಜ್ಞಾನ ದೀಪ, ನಾಡ ಸಹ್ಯಾದ್ರಿ, ಹಾಸನ ಮಿತ್ರ, ಕಲ್ಯಾಣ ಕೋಟೆ’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದಿವೆ.
ಇವರ ‘ಅಂಗಳ ಅನಾಥವಲ್ಲ’ ಕವನ ಸಂಕಲನಕ್ಕೆ, 2005 ರಲ್ಲಿ ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ, 2006ರಲ್ಲಿ ನೀಲಗಂಗಾ ದತ್ತಿ ಪ್ರಶಸ್ತಿ, 2006ರಲ್ಲಿ ಪಂಡಿತ ಪುಟ್ಟರಾಜ ಸಾಹಿತ್ಯ ಪ್ರಶಸ್ತಿಗಳು ದೊರಕಿವೆ.
ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗಾಗಿ 2002ರಲ್ಲಿ ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ, 2008ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, 2011ರಲ್ಲಿ ಜಿಲ್ಲಾ ಶಿಕ್ಷಕ ರತ್ನ ಪ್ರಶಸ್ತಿಗಳು ಸಂದಿವೆ. ಇವರ ‘ಮಳೆ ಪುರುಷ’ ಕವನ ಸಂಕಲನಕ್ಕೆ 2010ರಲ್ಲಿ ಕಾವ್ಯ ಶ್ರೀ ಪ್ರಶಸ್ತಿ; ‘ನುಡಿ ಜ್ಯೋತಿರ್ಲಿಂಗ’ ಕೃತಿಗೆ 2010ರ ಅಡ್ವೈಸರ್ ಪ್ರಶಸ್ತಿ ಸಂದಿದೆ. ಇಂತಹ ಘನ ವ್ಯಕ್ತಿತ್ವ ಹೊಂದಿದ ಇವರನ್ನು 26-07-2014ರಂದು ಸಕಲೇಶಪುರದಲ್ಲಿ ನಡೆದ 2ನೆಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಔಚಿತ್ಯಪೂರ್ಣವಾಗಿದೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿ ನಗರ,
ಹಾಸನ-573201
ಮೊ-9483470794, 9439878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ