ಕನ್ನಡ ಸಾಹಿತ್ಯಕ್ಕೆ ಹಾಸನ ಜಿಲ್ಲೆಯ ಕೊಡುಗೆ
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ಶಾಂತಿನಗರ, ಹಾಸನ-573201
ಮೊ-9483470794, 9739878197
ಹಾಸನ ಜಿಲ್ಲೆ ವೈಶಿಷ್ಟ್ಯ ಹತ್ತು ಹಲವು. ಸಾಂಸ್ಕøತಿಕವಾಗಿ, ಸಾಹಿತ್ಯಿಕವಾಗಿ, ರಾಜಕೀಯವಾಗಿ ಪುರಾತನ ಕಾಲದಿಂದಲೂ ನಾಡಿನ ಮೇಲೆ ತನ್ನದೇ ಪ್ರಭಾವ ಬೀರುತ್ತಾ ಬಂದಿದೆ. ಕನ್ನಡ ಸಾಹಿತ್ಯಕ್ಕೆ ಮೊದಲ ಪಲ್ಲವಿ ಹಾಡಿದ ಕೀರ್ತಿ ನಮ್ಮ ಹಲ್ಮಿಡಿ ಶಾಸನಕ್ಕೆ ಸಲ್ಲುತ್ತದೆ.
ಹೊಯ್ಸಳರ ಕಾಲದಿಂದಲೂ ಇಲ್ಲಿ ಸಾಹಿತ್ಯ ಉತ್ಕøಷ್ಟ ರೀತಿಯಲ್ಲಿ ಪಲ್ಲವಿಸಿದೆ. ಅನೇಕ ಅನಘ್ರ್ಯ ಸಾಹಿತ್ಯ ರತ್ನಗಳಿಲ್ಲಿ ಬದುಕಿ ಬಾಳಿದ್ದಾರೆ. ಕನ್ನಡದ ಬಹುತೇಕ ಸಾಹಿತಿ, ಲೇಖಕರ ನಾಡಿದು. ಅಕ್ಕಿ ನಾಡೆಂದು, ಮಲೆನಾಡೆಂದು, ಹೇಮೆಯ ಒಡಲೆಂದು ಕರೆಸಿಕೊಳ್ಳುವ ಸಿಂಹಾಸನ ಪುರಿ ಜೈನ, ವೀರಶೈವ, ಬ್ರಾಹ್ಮಣ ಹಾಗೂ ಇತರೆ ಕವಿಪರಂಪರೆಯನ್ನೇ ರಾಜಾಡಳಿತ ಸಂದರ್ಭದಲ್ಲಿ ನೀಡಿದೆ.
ಕಂದ, ಷಟ್ಪದಿ, ಛಂದೋ ವೈವಿಧ್ಯ ಹುಟ್ಟಿದ್ದೆ ಇಲ್ಲಿ ಎನ್ನಬಹುದು. ಒಂದನೆಯ ಬಲ್ಲಾಳನ ಕಾಲದಿಂದ ಕೊನೆಯ ಪ್ರಮುಖ ದೊರೆ ಎರಡನೆಯ ನರಸಿಂಹನ ಕಾಲದವರೆಗೂ ಹತ್ತು ಹಲವು ಶ್ರೇಷ್ಠ ಕವಿಗಳಿಲ್ಲಿ ಕಾವ್ಯಧಾರೆ ಹರಿಸಿದ್ದಾರೆ.
ಇವುಗಳಲ್ಲಿ ಎಲ್ಲಾ ಸಾಹಿತಿಗಳನ್ನು ಒಂದೇ ರೇಖೆಯಲ್ಲಿ ಸೇರಿಸಲಾಗದು. ಹಳಗನ್ನಡ ಕವಿಗಳು, ಮತ್ತು ಆಧುನಿಕ ಕನ್ನಡ ಸಾಹಿತಿಗಳು ಎಂದು ಬೇರೆ ಬೇರೆ ದೃಷ್ಠಿಕೋನದಲ್ಲಿಯೇ ನೋಡಬೇಕಾಗುತ್ತದೆ.
ನಾಗಚಂದ್ರ ಃ ನಾಗಚಂದ್ರ ಒಂದನೆಯ ಬಲ್ಲಾಳ ಕಾಲಾವಧಿಯಲ್ಲಿ ಅಂದರೆ ಕ್ರಿ.ಶ.1102 ರಿಂದ1108 ರವರೆಗೆ ಆಸ್ಥಾನ ಕವಿಯಾಗಿದ್ದನೆಂದು ತಿಳಿದುಬರುತ್ತದೆ. ಇವನಿಗೆ ಅಭಿನವ ಪಂಪನೆಂಬ ಬಿರುದಿತ್ತು. ಇವನು ರಾಮಚಂದ್ರಚರಿತ ಪುರಾಣ, ಮಲ್ಲಿನಾಥ ಪುರಾಣ ಎಂಬ ಎರಡು ಪ್ರಮುಖ ಕೃತಿಗಳನ್ನು ಬರೆದಿದ್ದಾನೆ. ಇವನಿಗೆ ಭಾರತೀ ಕರ್ಣಪೂರ, ಅಭಿನವ ಪಂಪ, ಕವಿತಾ ಮನೋಹರ, ಸಾಹಿತ್ಯ ವಿದ್ಯಾಧರ, ಸಾಹಿತ್ಯ ಸರ್ವಜ್ಞ ಎಂಬ ಬಿರುದುಗಳಿದ್ದವು.
ಕಂತಿ ಃ ನಾಗಚಂದ್ರನ ಸಮಕಾಲೀನಳಾಗಿದ್ದ ಕಂತಿ ಕನ್ನಡ ಸಾಹಿತ್ಯ ಮೊದಲ ಕವಯತ್ರಿಯೆನಿಸಿದ್ದಾಳೆ. ಕಂತಿ ಹಂಪನ ಸಮಸ್ಯೆಗಳು ಎಂಬ ಈಕೆಯ ಕೃತಿ ಅವಳ ತೀಕ್ಷ್ಣ ಬುದ್ಧಿ, ಕುಶಾಗ್ರಮತಿಯನ್ನು ತೋರಿಸುತ್ತದೆ. ಈಕೆಗೆ ಅಭಿನವ ವಾಗ್ದೇವಿ ಎಂಬ ಬಿರುದಿತ್ತು.
ರಾಜಾದಿತ್ಯ ಃ ಕ್ರಿ.ಶ.1120-1190 ರ ಅವಧಿಯಲ್ಲಿ ರಾಜ ವಿಷ್ಣುವರ್ಧನ ರಾಜಾಶ್ರಯದಲ್ಲಿ ಕಾರ್ಯಮಾಡಿದ ಈತ ಕ್ಷೇತ್ರ ಗಣಿತ, ವ್ಯವಹಾರ ಗಣಿತ, ಲೀಲಾವತಿ, ವ್ಯವಹಾರ ರತ್ನ ಮತ್ತು ಚಿತ್ರ ಹಸುಗೆ ಇವನ ಪ್ರಮುಖ ಕೃತಿಗಳಾಗಿವೆ. ಇವನಿಗೆ ರಾಜವರ್ಮ, ಭಾಸ್ಕರ, ಬಾಚ, ಬಾಚಯ ಎಂಬ ಹೆಸರುಗಳಿದ್ದವು. ಹಾಗೆಯೇ ಗಣಿತ ವಿಳಾಸ, ಓಜೆವೆಡಂಗ, ಪದ್ಯ ವಿದ್ಯಾಧರ, ಗಣಿತ ವಿದಂಚ, ಲೆಕ್ಕಿಗ ಮುಂತಾದ ಬಿರುದುಗಳಿದ್ದವು.
ನಯಸೇನ ಃ ಕ್ರಿ.ಶ.1113 ರಲ್ಲಿ ಬದುಕಿ ಬಾಳಿದ ನಯಸೇನ ಶ್ರೇಷ್ಠ ಜೈನ ಕವಿ. ಇವನೂ ಸಹ ವಿಷ್ಣುವರ್ಧನನ ಆಸ್ಥಾನದಲ್ಲಿ ಕೆಲಕಾಲ ಇದ್ದನೆಂದು ತಿಳಿದುಬರುತ್ತದೆ. ಧರ್ಮಾಮೃತ ಇವನು ಬರೆದ ಸುಪ್ರಸಿದ್ಧ ಕೃತಿಯಾಗಿದೆ. ಇವನಿಗೆ ವಾತ್ಸಲ್ಯ ರತ್ನಾಕರ, ದಿಗಂಬರದಾಸ, ಕವಿತಾ ವಿಲಾಸ ಎಂಬ ಬಿರುದುಗಳಿದ್ದವು ಎಂಬುದು ತಿಳಿದು ಬರುತ್ತದೆ.
ಜಗದಳ ಸೋಮನಾಥ ಃ ಇವನು ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದ ಕವಿ. ಕನ್ನಡದ ಮೊದಲ ವೈದ್ಯ ಗ್ರಂಥವಾದ ಕರ್ನಾಟಕ ಕಲ್ಯಾಣಕಾರಕ ಎಂಬ ಶ್ರೇಷ್ಠ ಕೃತಿಯನ್ನು ರಚಿಸಿದ ಕೀರ್ತಿ ಇವನದು. ಆಧುನಿಕ ವೈದ್ಯ ಪರಂಪರೆಗೆ ಈ ಕೃತಿ ದಾರಿದೀಪವಾಗಿದೆ.
ರಾಘವಾಂಕ ಃ ಕ್ರಿ.ಶ.1195 ರ ಕಾಲಾವಧಿಯಲ್ಲಿ ಏಳನೆಯ ನರಸಿಂಹನ ಆಸ್ಥಾನದಲ್ಲಿದ್ದ ಪ್ರಮುಖ ಶೈವ ಕವಿ ರಾಘವಾಂಕ. ಇವನನ್ನು ಷಟ್ಪದಿ ಬ್ರಹ್ಮನೆಂದೇ ಕರೆಯುತ್ತೇವೆ. ಕನ್ನಡ ಸಾಹಿತ್ಯಕ್ಕೆ ಷಟ್ಪದಿ ಎಂಬ ಹೊಸದೊಂದು ಕಾವ್ಯ ಪ್ರಕಾರವನ್ನು ಕೊಟ್ಟ ಕೀರ್ತಿ ಇವನದು. ಹರಿಶ್ಚಂದ್ರ ಕಾವ್ಯ, ಸೋಮನಾಥ ಚರಿತೆ, ಶರಭ ಚರಿತೆ, ಹರಿಹರೇಶ್ವರ ಮಹತ್ವ ಮುಂತಾದ ಮಹತ್ವದ ಕೃತಿಗಳನ್ನು ರಾಘವಾಂಕ ರಚಿಸಿದ್ದಾನೆ. ಇವನಿಗೆಉಭಯ ಕವಿ ಕಮಲ ರವಿ, ಶರಭ ಬೇರುಂಡ ಎಂಬ ಬಿರುದುಗಳಿದ್ದವು.
ಕೆರೆಯ ಪದ್ಮರಸ ಃ ಇವನು ಕ್ರಿ.ಶ.1160 ರಲ್ಲಿ ಒಂದನೆಯ ನರಸಿಂಹ ಬಲ್ಲಾಳನ ಆಸ್ಥಾನ ಕವಿಯಾಗಿದ್ದನೆಂದು ತಿಳಿದು ಬರುತ್ತದೆ. ಕನ್ನಡದ ಧೀಕ್ಷಾ ಬೋಧೆ ಮತ್ತು ಸಂಸ್ಕøತದ ಸಾನಂದ ಚರಿತ್ರೆ ಎಂಬ ಎರಡು ಶ್ರೇಷ್ಠ ಕೃತಿಗಳನ್ನು ನೀಡಿದ್ದಾರೆ. ಇವನಿಗೆ ಸಕಲ ಶಾಬ್ದಿಕ ಸಾರ್ವಭೌಮ, ಕಾರ್ಕಿಕ ಚಕ್ರವರ್ತಿ, ಶರಣ ಕವಿ, ಶಿವದ್ವೈತ ಸಕಾರ ಸಿದ್ಧಾಂತ ಪ್ರತಿಷ್ಠಾಪನಾಚಾರ್ಯ ಎಂಬ ಬಿರಿದುಗಳಿದ್ದವು.
ಹರಿಹರ ಃ ಕ್ರಿ.ಶ 1141 ರಂದ 1137 ರ ಕಾಲಾವಧಿಯಲ್ಲಿ ನರಸಿಂಹ ಬಲ್ಲಾಳನ ಆಸ್ಥಾನ ಕವಿಯಾಗಿದ್ದ ಹರಿಹರನು ರಗಳೆಯ ಕವಿಯೆಂದೇ ಪ್ರಸಿದ್ಧಿ ಪಡೆದವನು.
ಗಿರಿಜಾ ಕಲ್ಯಾಣ, ಪಂಪಾ ಶತಕ, ಶಿಹಣದ ರಗಳೆ, ಮುಡಿಗೆ ಅಷ್ಟಕ, ರಷಾ ಶತಕ, ಶಿವಾಕ್ಷ ಮಾಲೆ ಮುಂತಾದ ಕೃತಿಗಳನ್ನು ರಚಿಸಿದ್ದಾನೆ. ರಾಘವಾಂಕನ ಸೋದರಳಿಯನಾದ ಹರಿಹರನಿಗೆ ಹರದೇವ, ಹರಗ, ಹರನಾಮ ಪಂಡಿತ ಮುಂತಾದ ಬಿರುಗಳಿದ್ದವು.
ರುದ್ರಭಟ್ಟ ಃ ಈತನೂ ಸಹ ಎರಡನೆಯ ಬಲ್ಲಾಳನ ಆಸ್ಥಾನದಲ್ಲಿದ್ದ ಕವಿ. ಜಗನ್ನಾಥ ವಿಜಯ ಈತನು ರಚಿಸಿದ ಕೃತಿಯಾಗಿದೆ.
ನೇಮಿಚಂದ್ರ ಃ ಈತನೂ ಸಹ ಎರಡನೆಯ ಬಲ್ಲಾಳನ ಕಾಲಾವಧಿಯಲ್ಲಿ ಇದ್ದಂತಹ ಕವಿ. ಈತನ ಕಾಲ ಕ್ರಿ.ಶ.1170 ಎಂದು ತಿಳಿದು ಬರುತ್ತದೆ. ನೇಮಿನಾಥ ಪುರಾಣ, ಲೀಲಾವತಿ ಈತನ ಪ್ರಮುಖ ಕೃತಿಗಳಾಗಿವೆ. ಈತನಿಗೆ ಭಾರತಿ ಚಿತ್ತಚೋರ ಮತ್ತು ಚತುರ್ಭಾಸ ಕವಿಚಕ್ರವರ್ತಿ ಎಂಬ ಬಿರುದುಗಳಿದ್ದವು.
ಆಚಣ್ಣ ಕವಿ ಃ ಈತನು ಕ್ರಿ.ಶ 1195 ರ ಕಾಲಾವಧಿಯಲ್ಲಿ ಮೂರನೆಯ ಬಲ್ಲಾಳನ ಆಸ್ಥಾನದಲ್ಲಿದ್ದ ಜೈನ ಕವಿ. ವರ್ಧಮಾನ ಪುರಾಣ, ಶ್ರೀಪಾದ ನೀತಿ ಈತನ ಪ್ರಮುಖ ಕೃತಿಗಳಾಗಿವೆ.
ಜನ್ನ ಃ 1209 ಕಾಲಾವಧಿಯಲ್ಲಿ ಮೂರನೆಯ ಬಲ್ಲಾಳನ ಆಸ್ಥಾನ ಕವಿಯಾಗಿದ್ದ ಜನ್ನನು ಯಶೋಧರ ಚರಿತೆ, ಅನಂತನಾಥ ಪುರಾಣ, ಕೃತಿಗಳನ್ನು ರಚಿದ್ದಾನೆ. ರತ್ನತ್ರಯರಲ್ಲಿ ಒಬ್ಬನಾದ ಈತನಿಗೆ ಕವಿಚಕ್ರವರ್ತಿ ಎಂಬ ಬಿರುದಿತ್ತು.
ಪೋಲಳದ ದಂಡನಾಥ ಃ ಈತನು ನರಸಿಂಹ ಬಲ್ಲಾಳನ ಕಾಲಾವಧಿಯಲ್ಲಿ ಆಸ್ಥಾನ ಕವಿಯಾಗಿದ್ದನೆಂದು ತಿಳಿದುಬರುತ್ತದೆ. ಹರಿಚರಿತವು ಈತನು ಷಟ್ಪದಿ ಛಂದಸ್ಸಿನಲ್ಲಿ ಬರೆದ ಶ್ರೇಷ್ಠ ಕೃತಿಯಾಗಿದೆ.
ಮಲ್ಲಿಕಾರ್ಜುನ ಃ ಕ್ರಿ.ಶ 1245 ರ ಕಾಲಾವಧಿಯಲ್ಲಿ ಮೂರನೆಯ ನರಸಿಂಹನ ಆಸ್ಥಾನದಲ್ಲಿದ್ದ ಪ್ರಮುಖ ಜೈನಕವಿ ಮಲ್ಲಿಕಾರ್ಜುನ. ಸೂಕ್ತ ಸುದಾರ್ಣವ ಈತನ ಶ್ರೇಷ್ಠ ಕೃತಿಯಾಗಿದೆ.
ಕೇಶಿರಾಜ ಃ ಕ್ರಿ.ಶ 1260 ರ ಕಾಲಾವಧಿಯಲ್ಲಿ ಮೂರನೆಯ ನರಸಿಂಹನ ಆಸ್ಥಾನ ಕವಿಯಾಗಿದ್ದ ಕೇಶಿರಾಜನು ಕನ್ನಡದ ಪ್ರಸಿದ್ಧ ವ್ಯಾಕರಣಕಾರ. ಜನ್ನನ ಅಳಿಯನಾದ ಈತನು ಶಬ್ದಮಣಿ ದರ್ಪಣಂ ಎಂಬ ಸರ್ವ ಶ್ರೇಷ್ಠ ಗ್ರಂಥವನ್ನು ನೀಡಿದ್ದಾನೆ. ಜೊತೆಗೆ ಚೋಳಪಾಲಕ ಚರಿತೆ, ಚಿತ್ರಮಾಲೆ, ಸುಭದ್ರಾ, ಹರಣಕಿರಾತ ಎಂಬ ಕಾವ್ಯಗಳನ್ನು ಬರೆದಿದ್ದಾನೆ.
ನಾನಿಲ್ಲಿ ಹಳಗನ್ನಡ ಸಾಹಿತಿಗಳನ್ನು ವಿಸ್ತ್ರುತವಾಗಿ ಪರಿಚಯಿಸಲು ಹೋಗಿಲ್ಲ ಕಾರಣ ಅವರೆಲ್ಲಾ ನಾಡಿಗೆ ಚಿರಪರಿಚಿತರೆನ್ನುವುದು. ಆದರೆ 19 ನೆಯ ಶತಮಾನದ ನಂತರ ಬರುವ ಸಾಹಿತಿಗಳ ಬಗ್ಗೆ ಹೆಚ್ಚು ಗಮನ ಹರಿಸಿದ್ದೇನೆ.
ಕನ್ನಡ ಕೀರ್ತನಾಚಾರ್ಯ- ‘ಬೇಲೂರು ಕೇಶವದಾಸರು’
ದಾಸ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಒಂದು ಪ್ರಮುಖ ಘಟ್ಟ. ತಾವು ಹರಿದಾಸರೆಂದು ಕರೆದುಕೊಂಡವರು, ದೇವರ ಸೆÉೀವಕರೆಂದು ಭಾವಿಸಿದವರು ರಚಿಸಿದ ಸಾಹಿತ್ಯವೇ ದಾಸ ಸಾಹಿತ್ಯ.
ಇದನ್ನು 13ನೆಯ ಶತಮಾನದಲ್ಲಿ ನರಹರಿ ತೀರ್ಥರು ಪ್ರಾರಂಭಿಸಿದರೆಂದು ಕಲ್ಪಿಸಿಕೊಳ್ಳಲಾಗಿದೆ. ತದನಂತರ ಶ್ರೀಪಾದರಾಜರು, ವ್ಯಾಸರಾಯರು ಇದರ ಘನತೆಯನ್ನು ಹೆಚ್ಚಿಸಿದರು. ದಾಸ ಶೇಷ್ಠರೆ£ಸಿಕೊಂಡ ಪುರಂದರ ದಾಸ ಮತ್ತು ಕನಕ ದಾಸರು ಗುರುಗಳಾದ ವ್ಯಾಸರಾಯರ ಮಾರ್ಗದರ್ಶನದಲ್ಲಿ ಈ ಸಾಹಿತ್ಯ ಪ್ರಕಾರವನ್ನು ಉನ್ನತ ಶಿಖರಕ್ಕೇರಿಸಿದರು.
ವಾದಿರಾಜ, ವೈಕುಂಟದಾಸ, ಪ್ರಸನ್ನ ವೆಂಕಟದಾಸ, ವಿಜಯದಾಸ, ಗೋಪಾಲದಾಸ, ಜಗನ್ನಾಥ ದಾಸ ಮೊದಲಾಗಿ ಅನೇಕರು ದಾಸ ಸಾಹಿತ್ಯವನ್ನು ರಚಿಸಿದರು ಹಾಗೂ ಬೆಳೆಸಿದರು. ಅಂತಹವರ ಸಾಲಿನಲ್ಲಿ ಬೇಲೂರು ಕೇಶವದಾಸರು ಪ್ರಮುಖವಾಗಿ ನಮ್ಮೆದುರಿಗೆ ನಿಲ್ಲುತ್ತಾರೆ.
ಶ್ರೀಯುತರು ಸು 1807 ರಲ್ಲಿ ಬೇಲೂರಿನ ಶ್ರೀ ವೆಂಕಟಸುಬ್ಬುದಾಸÀರ ಸುಪುತ್ರರಾಗಿ ಜನಿಸಿದರು. ಚಿಕ್ಕಂದಿನಿಂದಲೆ ಉತ್ತಮ ಸಂಸ್ಕಾರದೊಂದಿಗೆ ಬೆಳೆದ ಕೇಶವದಾಸರು ಕೀರ್ತನ ಕ್ಷೇತ್ರದತ್ತ ಮನಹೊರಳಿಸಿ ಶ್ರದ್ಧಾಸಕ್ತಿಯಿಂದ ಕಾಯಕಗೈದವರು. ಕನ್ನಡ ಕೀರ್ತನ ಕ್ಷೇತ್ರಕ್ಕೆ ತಮ್ಮದೇ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಕನ್ನಡ ನಾಡಿನಾದ್ಯಾಂತ ಕಾಲು ನಡಿಗೆಯಲ್ಲಿಯೇ ಸಂಚರಿಸಿ, ಕೀರ್ತನೆಗಳ ಹಾಡುತ್ತಾ ಜನ ಸಾಮಾನ್ಯರಿಗೆ ಜ್ಞಾನದ ತಿರುಳ ಉಣಬಡಿಸುತ್ತಾ ನಡೆದಾಡುವ ಜ್ಞಾನಕೋಶದಂತೆ ಪಸರಿಸಿದರು.
ಆದ್ದರಿಂದಲೇ ‘ಕೀರ್ತನಾಚಾರ್ಯ’ ಎಂಬ ಪ್ರಶಸ್ತಿಗೆ ಭಾಜನರಾದರು. ‘ಕರ್ನಾಟಕ ಭಕ್ತ ವಿಜಯ’ ಎರಡು ಭಾಗಗಳಲ್ಲಿ ಬಂದ ಕೇಶವ ದಾಸರ ಅತ್ಯಮೂಲ್ಯವಾದ ಕೃತಿ. ಕರ್ನಾಟಕದಲ್ಲಿ ಬಾಳಿ ಬದುಕಿದ ದಾಸರು, ಅವರ ಸಾಹಿತ್ಯ, ಆಚಾರ ವಿಚಾರಗಳ ಕುರಿತು ಬೆಳಕು ಚೆಲ್ಲುತ್ತದೆ. ಇದು ಸುಮಾರು 680 ಪುಟಗಳ ಬೃಹತ್ ಕೃತಿಯಾಗಿದೆ. ಇವರ ಮರಣಾನಂತರ ಈ ಕೃತಿಯು 1937ರಲ್ಲಿ ಪ್ರಥಮ ಮುದ್ರಣವಾಗಿ ಬಂದಿದ್ದು. ನಂತರ 1967ರಲ್ಲಿ ಪುನರ್ಮುದ್ರಣಗೊಂಡಿದೆ.
ಕೀರ್ತನ ಸಾಹಿತ್ಯರೆಂದೇ ಖ್ಯಾತಿ ಪಡೆದಿದ್ದ ಬೇಲೂರಿನ ಹರಿಕಥಾ ವಿದ್ವಾನ್ ಉಪಾಧ್ಯಕೃಷ್ಣಮೂರ್ತಿಗಳು ಕೇಶವದಾಸರನ್ನು ಕುರಿತು ಈ ರಿತಿ ಹೆಳಿದ್ದಾರೆ. “ಶ್ರೀ ಬೇಲೂರು ಕೇಶವದಾಸರು ಬೇಲೂರಿನ ಒಂದು ಅಮೋಘ ‘ಕೀರ್ತನ ರತ್ನ’ ಎಂದರೆ ಅತಿಶಯೋಕ್ತಿಯಲ್ಲ; ಇವರು ಕೀರ್ತನೆಗೆ ನಿಲ್ಲುವ ಠೀವಿ, ಕಥಾ ನಿರೂಪಣೆ ಮಾಡುವಾಗ, ಭಕ್ತಿಯ ಆವೇಶ ಮುನ್ನುಗ್ಗಿ ಬಂದಾಗ ಹನಿಹನಿಯಾಗಿ ಮೈಮರೆಸುವಂತ ವಾಚಾಳತ್ವ, ಜನಾಕರ್ಷಣೆ ಮುಂತಾದವು ಇಂದಿಗೂ ಮರೆಯದಂತಿವೆ”.
ಕೃಷ್ಣಮೂರ್ತಿಯವರ ಮಾತುಗಳಲ್ಲಿ ಕೇಶವದಾಸರ ವ್ಯಕ್ತಿತ್ವವೇ ರೂಪು ಪಡೆದುಕೊಂಡಿದೆ ಎನ್ನಬಹುದು. ಕೇಶವದಾಸರು ‘ಹರಿದಾಸ ಸಾಹಿತ್ಯ’, ‘ಕ£್ನಕಾ ಪುರಾಣ’, ‘ರಾಘವೇಂದ್ರ ವಿಜಯ’ ಮುಂತಾದ ಗ್ರಂಥಗಳನ್ನು ರಚಿಸಿ ಕನ್ನಡಿಗರಿಗೆ ದಾಸ ಸಾಹಿತ್ಯದ ರಸ ಸ್ವಾದಗಳನ್ನು ಉಣಬಡಿಸಿದ್ದಾರೆ.
ಇವರನ್ನು ಒಳಗೊಂಡಂತೆ ಹರಿದಾಸರೆಲ್ಲ ದ್ವೈತ ಮತಸ್ಥಾಪನಾಚಾರ್ಯರಾದ ಮಧ್ವಾಚಾರ್ಯರ ಅನುಯಾಯಿಗಳು. ಹರಿಯೇ ಸರ್ವೋತ್ತಮ ಎಂದು ನಂಬಿದವರು. ಭಕ್ತಿ ಮಾರ್ಗವನ್ನು ಬೋಧಿಸಿದವರು. “ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವು” ಎಂದು ದಾಸರು ಹಾಡಿದರು. ತರ್ಕ ತಿಳಿಯದ ತಪಸ್ಸು ಮಾಡಲಾರೆ, ಜ್ಞಾನ ಮಾರ್ಗ ತಿಳಿಯದು ಎಂದೆಲ್ಲ ಚಿಂತಿಸಬೇಕಾಗಿಲ್ಲ ಶ್ರೀಹರಿಯಲ್ಲಿ ಮನಸ್ಸನ್ನು ನಿಲ್ಲಿಸಿದರೆ, ಭಕ್ತಿಯಿಂದ ಧ್ಯಾನ ಮಾಡಿದರೆ ಮುಕ್ತಿ ಲಭ್ಯವಾಗುವುದು ಎಂದು ಬೋಧಿಸಿದರು.
ಬೇಲೂರಿನ ಕೇಶವದಾಸರು ಸಹ ಅಂತೆಯೇ ಬದುಕಿ ಬಾಳಿದವರು. ಇವರು ಕೀರ್ತನಾ ಸಾಹಿತ್ಯಕ್ಕಷ್ಟೆ ಮೀಸಲಾಗಿರದೇ ಸ್ವತ: ತಬಲ ನುಡಿಸುವುದರಲ್ಲಿ ಪ್ರಾವಿಣ್ಯಹೊಂದಿದ್ದರು. ಆದ್ದರಿಂಧಲೇ ಇವರಿಗೆ ‘ತಾಳಬ್ರಹ್ಮ’ ಎಂಬ ಬಿರುದು ಸಹ ಅನ್ವರ್ಥವಾಗಿ ಬಂದಿತ್ತು.
ಕೀರ್ತನಾಕಾರರು ಸಹಜವಾಗಿಯೇ ಬಹುಭಾಷಾ ಪಾಂಡಿತ್ಯ ಹೊಂದಿದ್ದರೆನ್ನಬಹುದು. ಏಕೆಂದರೆ ಸಂಸ್ಕøತದಲ್ಲಿದ್ದ ಅನೇಕ ಅಂಶಗಳನ್ನು ಸರಳವಾಗಿ ಕನ್ನಡಿಕರಿಸಿದ್ದಾರೆ. ದಾಸರೆಲ್ಲರೂ ಮಹಾವಿದ್ವಾಂಸರಾಗಿದ್ದರು. ಹಿಂದೂಗಳ ಧರ್ಮಗ್ರಂಥಗಳೆಲ್ಲ ಸಂಸ್ಕøತದಲ್ಲಿದ್ದವು. ವೇದಗಳು, ಉಪ£ಷತ್ತುಗಳು, ಭಗವದ್ಗೀತೆ ಎಲ್ಲ ಸಂಸ್ಕøತ ಗ್ರಂಥಗಳು. ಸಂಸ್ಕøತ ಬಾರದ ಜನ ತಮ್ಮ ಧರ್ಮದ ಮೂಲಗಳಿಂದ ದೂರ ಉಳಿಯುವ ಸ್ಥಿತಿಯಲ್ಲಿದ್ದಾಗ ಶರಣರು ‘ವಚನ ಸಾಹಿತ್ಯ’ದ ಮೂಲಕ ಜೀವ ತುಂಬಿದಂತೆ ಮುಂದೆ ದಾಸರು ಕೀರ್ತನೆಗಳ ಮೂಲಕ ಸರಳವಾದ ಕನ್ನಡದಲ್ಲಿ £ರೂಪಿಸಿದರು.
ಸಂಸ್ಕøತ ಹಾಗೂ ಕನ್ನಡ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವನ್ನು ಸಾಧಿಸಿದ್ದ ಕೇಶವದಾಸರು ಕೀರ್ತನೆ ಮಾಡುವಾಗ ನಾನಾ ಭಾಷೆಗಳ ಪ್ರಯೋಗದಿಂದ ಎಲ್ಲಾ ವರ್ಗದವರನ್ನು ಆಕರ್ಷಿಸುವಲ್ಲಿ ಸಫಲರಗುತ್ತಿದ್ದರೆಂದು ಒಂದು ಕಡೆ ಪಂಡಿತ ಸ್ವಾಮಿಗೌಡ ಹೇಳುತ್ತಾರೆ.
ಇನ್ನೊಂದು ಕಡೆ ಪ್ರೊ. ಎಲ್.ಎಸ್. ಶೇಷಗಿರಿರಾವ್ ಹೀಗೆ ಹೇಳಿದ್ದಾರೆ-”ದಾಸ ಸಾಹಿತ್ಯದಲ್ಲಿ ಈ ಜಗತ್ತಿನ ಬದುಕನ್ನು ಕಾಣುವ ರೀತಿ ಆಧುನಿಕ ಮನಸ್ಸಿಗೆ ಹಿಡಿಸದೇ ಹೋಗಬಹುದು. ಆದರೆ ಅವರು ಡಂಭಾಚಾರವನ್ನು, ಕಪಟತನವನ್ನು ಖಂಡಿಸಿದ್ದು, ಮನುಷ್ಯನ ಬದುಕು ಶುಭ್ರವಾಗಿರಬೇಕು ಎಂದದ್ದು ಎಂದಿಗೂ ಸಲ್ಲುವ ಉಪದೇಶ. ಜೊತೆಗೆ ಅವರು ಕೃಷ್ಣನನ್ನು ವರ್ಣಿಸುವ ರೀತಿ, ಅವನೊಡನೆ ಅವರ ಸಲಿಗೆ-ಹಾಸ್ಯ-ಆಕ್ಷೇಪಣೆ ಇವೆಲ್ಲ ಅವರ ಕೀರ್ತನೆಗಳಿಗೆ ಮಾನವೀಯ ಲೇಪನವನ್ನು ಕೊಡುತ್ತವೆ.”
ಅಂತೆಯೇ ಕೇಶವದಾಸರು ಸುಸಮಾಜದ ನಿರ್ಮಾಣಕ್ಕಾಗಿ ತಮ್ಮ ಕೀರ್ತನ ಸಾಹಿತ್ಯದ ಮೂಲಕ ಶ್ರಮಿಸಿದ್ದಾರೆ. ತಮ್ಮ ಅತ್ಯುಪಯುಕ್ತ ಗ್ರಂಥಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ವಿಮರ್ಶೆಯ `ವಚನ’ ಪಾಲಿಸಿದವರು ಎಸ್ ವಿ ರಂಗಣ್ಣ
`ರವಿ ಕಾಣದ್ದನ್ನು ಕವಿ ಕಂಡ’ ಎಂಬ ನಾಣ್ಣುಡಿಯನ್ನೇ ಮುಂದುವರೆಸಿ, `....ಕವಿ ಕಾಣದ್ದನ್ನು ವಿಮರ್ಶಕ ಕಂಡ’ ಎಂಬ ಕೊಂಕು ನುಡಿ ಇಂದಿನ ವಿಮರ್ಶಾ ಪ್ರಕಾರಕ್ಕೆ ಅಂಟಿಕೊಂಡಿದೆ. ವಿಮಶರ್Àಕರಿಗೂ ಸಾಹಿತಿಗಳಿಗೂ ಅಷ್ಟಕ್ಕಷ್ಟೆ! ಮೇಲ್ನೋಟಕ್ಕೆ ಸದ್ಭಾವನೆ, ಗೌರವ ತೋರಿದಂತೆ ಕಂಡರೂ ಸಾಹಿತಿಗಳ ಒಳ ಮನಸ್ಸಿನಲ್ಲಿ ಮಾತ್ರ ವಿಮಶರ್Àಕರ ಕುರಿತು `ಒಂಥರಾ’ ಭಾವನೆ ಇದ್ದದ್ದೇ!! ಆದರೆ ಎಸ್.ವಿ. ರಂಗಣ್ಣ ಅವರಂಥ ಹಳೆ ತಲೆಮಾರಿನ ಹಿರಿಯ ವಿಮರ್ಶಕರಿಗೆ ಇದೆಲ್ಲಾ ಅನ್ವಯಿಸುವುದಿಲ್ಲ ಬಿಡಿ.
`ಆಧುನಿಕ ವಚನಕಾರ’ ಹಾಗೂ ಹೊಸಗನ್ನಡ ಸಾಹಿತ್ಯದಲ್ಲಿ `ವಿಮರ್ಶೆಗೆ ಹೊಸ ದೃಷ್ಟಿಕೋನ’ ನೀಡಿದ ಎಸ್.ವಿ. ರಂಗಣ್ಣ ಅವರು ನಮ್ಮ ಹಾಸನ ಜಿಲ್ಲೆಯವರೇ ಎಂಬುದು ಹೆಮ್ಮೆಯ ಸಂಗತಿ. 49ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು ಎಂದು ಪ್ರಶ್ನಿಸಿದರೆ ಹಾಸನದ ಅಂಧ ಯುವಕ ಲೋಕೇಶ್ ಥಟ್ಟನೆ ಎಸ್.ವಿ. ರಂಗಣ್ಣ ಎಂದು ಉತ್ತರಿಸುತ್ತಾನೆ! ಮೂಲತಃ ಸಾಲಗಾಮೆಯವರಾಗಿದ್ದ ಅವರ ಜೀವಿತಾವಧಿ ಕಳೆದ ಶತಮಾನಕ್ಕೆ ಸೇರಿದ್ದರೂ ಸಹ ಕೆಲವು ಸಾಹಿತ್ಯಾತ್ಮಕ ವಿಚಾರಗಳಲ್ಲಿ ಇಂದಿಗೂ ಪ್ರಸ್ತುತರಾಗಿ ನಿಲ್ಲುತ್ತಾರೆ!
ಕನ್ನಡ ಸಾಹಿತ್ಯದ ಕಾವ್ಯ ಪರಂಪರೆಯ ವಿಶಿಷ್ಟ ಪ್ರಕಾರಗಳಲ್ಲಿ `ವಚನ’ವೂ ಒಂದು. ಅದು ಅನುಭಾವ ಗಮ್ಯ ಕಾವ್ಯ ವಾಹಿನಿ. ನಮ್ಮ ಸಂಸ್ಕøತಿಯಲ್ಲಿ ಸಾಮಾಜಿಕ, ಸಾಹಿತ್ಯಿಕ ಹಾಗೂ ಭಾಷಿಕ ಕ್ರಾಂತಿಯನ್ನುಂಟು ಮಾಡಿದ ಯಶಸ್ಸು ಈ ಪ್ರಕಾರಕ್ಕೆ ಸಲ್ಲುತ್ತದೆ. 12ನೇ ಶತಮಾನದಲ್ಲಿ ಅಸಂಖ್ಯಾತ ವಚನಕಾರರು ತಮ್ಮ ಅನುಭವಗಳನ್ನು ಸಾಹಿತ್ಯಾತ್ಮಕ ರೀತಿಯಲ್ಲಿ ಪ್ರಮಾಣೀಕರಿಸಿ ವಚನಗಳ ಮೂಲಕ ದಾಖಲಿಸಿದ್ದಾರೆ. ಕಾಲಾ ನಂತರ 20ನೇ ಶತಮಾನದಲ್ಲಿಯೂ ಕೆಲವರು ಈ ಪ್ರಕಾರವನ್ನು ಮುಂದುವರೆಸಿ `ಆಧುನಿಕ ವಚನಗಳು’ ಹೆಸರಿನಿಂದ ಬರೆದಿದ್ದಾರೆ. ವಿಭಿನ್ನ ತೆರನಾದ ಭಾವ, ವಿಡಂಬನೆ ಮತ್ತು ನೀತಿಯನ್ನು ವಚನಗಳಲ್ಲಿ ಒಡಮೂಡಿಸಿದ್ದಾರೆ. ಅಂತಹವರ ಸಾಲಿನಲ್ಲಿ ಹಾಸನದ ಎಸ್.ವಿ. ರಂಗಣ್ಣ ಅವರು ಪ್ರಮುಖರಾಗಿ ನಿಲ್ಲುತ್ತಾರೆ.
ಎಸ್.ವಿ. ರಂಗಣ್ಣನವರು 1898ರ ಡಿಸೆಂಬರ್ 24 ರಂದು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ಜನಿಸಿದರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ನಾಡಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಾ ಆಧುನಿಕ ವಚನಗಳು ಹಾಗೂ ವಿಮರ್ಶಾ ಕ್ಷೇತ್ರದಲ್ಲಿ ಅಗಾಧವಾದ ಸೇವೆಗೈದಿದ್ದಾರೆ. ಇವರ `ರಂಗಭಿನ್ನಪ’ ಎಂಬ ಆಧುನಿಕ ವಚನ ಕೃತಿಯಲ್ಲಿನ ಒಂದು ವಚನ ಹೀಗಿದೆ:
`ಹಣ್ಣು ಬಿಡುವ ಹಣ್ಣು ಕೊಡುವ
ಮರ ಗಿಡಗಳಿಂದ ಪಾಠ ಕಲಿತರೆ
ಮನುಷ್ಯನಿಗೆ ಒಳ್ಳೆಯದಯ್ಯಾ
ದಿಟವಾಗಿ ಒಳ್ಳೆಯದು....’
ನಿತ್ಯ ಕಚ್ಚಾಟ, ಜಗಳ, ಅಸೂಯೆಗಳ ಮಧ್ಯೆ ಬದುಕುತ್ತಿರುವ ಮನುಷ್ಯ ಮರ ಗಿಡಗಳ ಸಾಮರಸ್ಯದಿಂದ ಬದುಕನ್ನು ಕಂಡು ಬದಲಾಗಬೇಕೆಂದು ಕರೆ ಕೊಡುತ್ತಾ ಮುಂದುವರೆದು...
`ಒಂದನ್ನು ಕಂಡು ಇನ್ನೊಂದು
ಕರುಬುವುದಿಲ್ಲ ಖಾರ ನುಡಿ ಆಡುವುದಿಲ್ಲ
ಸಣ್ಣದೋ ದೊಡ್ಡದೋ ಅಂತೂ
ತಮ್ಮ ತಮ್ಮ ಕೊಡುಗೆಯ ಕೊಟ್ಟು
ತಣಿಸುತ್ತವೆ ಪ್ರಾಣಿ ಪಕ್ಷಿಗಳನ್ನು
ಅದೇ ರೀತಿ ಸಣ್ಣದೋ ದೊಡ್ಡದೋ ಅಂತೂ
ಪರೋಪಕಾರ ಮನುಜರಿಂದ ಆದರೆ
ಲೇಸಲ್ಲವೇ ರಂಗನಾಥ?
ಎಂದು ಹಲಸಿನ ಮರ, ತೆಂಗಿನ ಮರ, ದ್ರಾಕ್ಷಿ ಬಳ್ಳಿ, ಕವಳಿ ಗಿಡ, ಚದುರಂಗ ಮುಂತಾದವು ಹೇಗೆ ತಮ್ಮ ಕೈಲಾದಷ್ಟು ಹಣ್ಣು ಹಂಪಲುಗಳನ್ನು ನೀಡಿ ಬೇರೆಯವರ ತಣಿಸುತ್ತವೆ; ಆದರೆ ಮಾನವ ಕೂಡಿಡುವ ದುರಾಸೆಯಲ್ಲಿ ಮುಳುಗಿದ್ದಾನೆ. ಈಗಲಾದರೂ ಗಿಡ ಮರಗಳಂತೆ ಪರೋಪಕಾರ ಬುದ್ದಿ ಕಲಿಯಲಿ ಎಂದು ತಮ್ಮ ಆರಾಧ್ಯ ದೈವ ಶ್ರೀ ರಂಗನಾಥನಲ್ಲಿ ಭಿನ್ನವಿಸುತ್ತಾರೆ.
ಅಷ್ಟಕ್ಕೇ ಸೀಮಿತವಾಗದ ರಂಗಣ್ಣನವರು, ಕನ್ನಡ ವಿಮರ್ಶಾ ಕ್ಷೇತ್ರಕ್ಕೆ ಆವರೆಗೂ ಇಲ್ಲದಿದ್ದ ಒಂದು ಹೊಸ ಆಯಾಮ ತಂದುಕೊಟ್ಟರು. ಇವರು ಶೈಲಿಯ ಸ್ವರೂಪದೊಂದಿಗೆ ಮಾಧ್ಯಮ ಶೈಲಿ, ಸಾಧಾರಣ ಶೈಲಿ ಮುಂತಾದ ಪರಿಕಲ್ಪನೆಗಳನ್ನು ಪರಿಚಯಿಸಿ ಕನ್ನಡದ ಪಂಪನಾದಿಯಾಗಿ ಎಲ್ಲಾ ಮುಖ್ಯ ಪ್ರಾಚೀನ ಕವಿಗಳ ಶೈಲಿಯ ಸ್ವರೂಪವನ್ನು ತಮ್ಮ ಕೃತಿಗಳಲ್ಲಿ ಚರ್ಚಿಸಿದರು. 1944, 1968 ಹಾಗೂ 1971 ರಲ್ಲಿ ಈ ಕುರಿತು ಮೂರು ಸಂಪುಟಗಳು ಬಂದವು.
`ಕಾಳಿದಾಸನ ನಾಟಕ ವಿಮರ್ಶೆ’, `ಪಾಶ್ಚಾತ್ಯ ಗಂಭೀರ ನಾಟಕಗಳು,’ `ಕವಿ ಕಥಾಮೃತ’, ರಂಗ ಭಿನ್ನಪ’, `ನಾಟುನುಡಿ’, `ಪಾಶ್ಚಾತ್ಯ ಸಾಹಿತ್ಯ ವಿಮರ್ಶೆ’ ಇವು ಇವರ ಪ್ರಮುಖ ಗ್ರಂಥಗಳಾಗಿವೆ. ಅಲ್ಲದೆ ಆಂಗ್ಲ ಭಾಷೆಯಲ್ಲಿಯೂ ಹಲವು ಕೃತಿಗಳನ್ನು ರಚಿಸಿದ್ದಾರೆ.
ವಿಮರ್ಶೆಯ ಮೇಲಿನ ಹಿಡಿತ, ಇವರ ಬರವಣಿಗೆಯ ಶೈಲಿ ಮೆಚ್ಚುವಂಥವು. 1956 ರಲ್ಲಿ ಬಂದ ಇವರ `ಹೊನ್ನ ಶೂಲ’ ಅಗಾಧ ಪ್ರಶಂಸೆಗೆ ಪಾತ್ರವಾಯಿತು. 1960 ರಲ್ಲಿ ಬಂದ `ವಿಕ್ರಮೋರ್ವಶೀಯ ನಾಟಕದ ವಿಮರ್ಶೆ’ ಅವರಿಗೆ ಹೆಚ್ಚಿನ ಮೌಲ್ಯ ತಂದುಕೊಟ್ಟಿತು.
ರಂಗಣ್ಣನವರು `ಉತ್ತರ ಕುಮಾರ’ ಹಾಗೂ `ಮಹಿಳೆ ಮತ್ತು ಉಂಗುರ’ ಎಂಬ ನಾಟಕಗಳನ್ನೂ ಬರೆದಿದ್ದಾರೆ. ಇವರ `ರಂಗ ಭಿನ್ನಪ’ ಕೃತಿಗೆ 1965 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದ್ದು, ಸ್ಕೌಟ್ ಸೇವೆಗಾಗಿ `ರಜತಗಜ’ ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವ ವಿದ್ಯಾಲಯವು ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ. 1976 ರಲ್ಲಿ ಶಿವಮೊಗ್ಗದಲ್ಲಿ ನಡೆದ 49ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಂಗಣ್ಣನವರು ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದಾಗ ಇವರ ಗೆಳೆಯರು, ಶಿಷ್ಯರೆಲ್ಲ ಸೇರಿ ಅವರಿಗೆ `ಬಾಗಿನ’ ಎಂಬ ಅಭಿನಂದನಾ ಗ್ರಂಥ ಅರ್ಪಿಸಿದ್ದಾರೆ.
ಮನುಷ್ಯ ಸಂಬಂಧಗಳನ್ನು ಭಾವನೆಗಳನ್ನು ಬೆಸೆದು, ಅರಳಿಸುವ ಕೆಲಸ ಮಾಡದೇ ಕೆರಳಿಸುವ ಕೆಲಸದಲ್ಲಿ ನಿರಂತರ ತೊಡಗಿ ಯುವ ಜನಾಂಗವನ್ನು ದಿಕ್ಕು ತಪ್ಪಿಸುತ್ತಿರುವ ಪ್ರಸ್ತುತ ಸಂದರ್ಭ ನೆನೆದರೆ ದಿಗಿಲಾಗದಿರದು. ಸ್ವಸ್ಥ ಸಮಾಜದ ಅಗತ್ಯತೆಯ ಜರೂರು ಇದೆ. ಇದಕ್ಕೆಲ್ಲ ಪೂರಕವಾಗಿ ಅಂದು, ಇಂದು, ಮುಂದೂ ಗುರುವಾಗಿ ಸನ್ಮಾರ್ಗಕ್ಕೆ ತರುವಂತಹ ಗುರುತರ ಹೊಣೆ ವಚನ ಸಾಹಿತ್ಯದ ಮೇಲಿದೆ.
1987 ಫೆಬ್ರವರಿ 17 ರಂದು ಅಜರಾಮರವಾದ ಎಸ್.ವಿ. ರಂಗಣ್ಣ ಎಂಬ ಸಾಹಿತ್ಯ ಚೇತನ ಇಂದು, ಮುಂದು, ಎಂದೆಂದೂ ತನ್ನ ವಿವೇಕಯುತ ಸಾಹಿತ್ಯದಿಂದಾಗಿ ಪ್ರಜ್ಞಲಿಸುತ್ತಲೇ ಇರುತ್ತದೆ.
ಹಿಂದೂ-ಮುಸ್ಲಿಂ ಸಾಹಿತ್ಯ ಸಂಸ್ಕøತಿಯ ಪ್ರತೀಕ-ಡಾ||ಎಸ್.ಕೆ ಕರೀಂಖಾನ್
ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ನಾಡಿನ ಅನೇಕ ವಿದ್ವಾಂಸರು, ಕೀತಿಶೇಷರು ಶತ-ಶತಮಾನಗಳುದ್ದಕ್ಕೂ ಬದುಕಿ ಬೆಳಕ ಸೂಸಿದ್ದಾರೆ. ಕನ್ನಡ ಮೂಲತ: ದೇಶೀ ಸೊಗಡಿನ ಜನಿತವಾಗಿದ್ದು, ನಮ್ಮ ಪೂರ್ವಜರ ಬದುಕಿನ ಚಿತ್ರಣವನ್ನು, ಮಾನವೀಯ ಮೌಲ್ಯಗಳನ್ನು, ಸಾಂಸ್ಕøತಿಕ ನಿಲುವುಗಳನ್ನು ಜನಪದವಾಗಿ ಅನಾವರಣಗೊಳಿಸುತ್ತ ಬಂದಿರುವುದನ್ನು ಕಾಣುತ್ತೇವೆ.
ಜಾನಪದರ ಒಡಲಿನಿಂದ ಬಂದ ಸಂಸ್ಕøತಿ ಕಡಲನ್ನು ಒಂದೆಡೆ ಹಿಡಿದಿಟ್ಟು, ಸತ್ವಯುತವಾಗಿ ನಿರೂಪಿಸಿ ಸುಲಿದ ಬಾಳೆ ತೆರದಿ ಕನ್ನಡಿಗರಿಗೆ ಉಣಬಡಿಸಿದ ಕೀರ್ತಿ ಜಾನಪದ ಜಂಗಮ ಡಾ|| ಎಸ್.ಕೆ ಕರೀಂ ಖಾನ್ ರಿಗೆ ಸಲ್ಲುತ್ತದೆ.
ಜಾನಪದ ವಿಧ್ವಾಂಸರಾಗಿಯೂ, ಪ್ರಸಿದ್ಧ ಗೀತರಚನಕಾರರಾಗಿಯೂ ಜನಪ್ರಿಯರಾಗಿರುವ ಖಾನ್ ಸಾಹೇಬರು 1901 ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಅಬ್ದುಲ್ ರೆಹಮಾನ್ ಹಾಗೂ ಜಹನಾಬಿ ಅವರ ಎಂಟು ಜನ ಮಕ್ಕಳಲ್ಲಿ ನಾಲ್ಕನೆಯವರಾಗಿ ಜನಿಸಿದರು.
ಡಾ|| ಕರೀಂ ಖಾನ್ ಅವರ ಮೂಲ ವಂಶಸ್ತರು ಅಫ್ಘಾನಿಸ್ಥಾನದವರು ಇವರ ತಂದೆಯವರಾದ ರೆಹಮನ್ ಖಾನ್ ರವರು ಸೇನಾನಿ ಹಾಗೂ ಯುನಾನಿ ವೈಧ್ಯರಾಗಿದ್ದರು. ಅವರು ಬೇರೆ ಬೇರೆ ಕಾರಣಗಳಿಂದ ಭಾರತಕ್ಕೆ ವಲಸೆ ಬಂದು ಹಾಸನದ ಸಕಲೇಶಪುರದಲ್ಲಿ ನೆಲೆನಿಂತರು. ಇವರ ಮಡದಿ ಅರಬ್ ಮೂಲದವರಾದರೂ ವಿರಾಜಪೇಟೆಯ ವಾಸಿಗಳಾಗಿದ್ದರು. ಈ ದಂಪತಿಗಳಿಗೆ ಖಾದರ್ ಖಾನ್, ರಹೀಂ ಖಾನ್, ಅಹಮ್ಮದ್ ಖಾನ್, ಕರೀಂ ಖಾನ್, ಜಬ್ಬರ್ ಖಾನ್, ಹನೀಫಾ ಬೇಗಂ, ರಫೀಕ್ ಖಾನ್ ಹಾಗೂ ಖಲಂದರ್ ಖಾನ್ ಹೀಗೆ ಎಂಟು ಮಕ್ಕಳಾದರು.
ಚಿಕ್ಕ ವಯಸ್ಸಿನಲ್ಲೆ ಪಿತೃವಿಯೋಗ ಹೊಂದಿದ ಕರೀಂ ಖಾನ್ ಹಾಸನದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಅಣ್ಣನ ಆಶ್ರಯದಲ್ಲಿ ಪೂರೈಸಿದರು. ಆಚಂಗಿ ನಾರಾಯಣ ಶಾಸ್ತ್ರಿಗಳು ಇವರ ಗುರುಗಳಾಗಿದ್ದರು.
ಕರೀಂ ಖಾನ್ ಬಾಲಕನಾಗಿದ್ದ ಸಂದರ್ಭ ಹೇಮಾವತಿ ನದಿಯಲ್ಲಿ ಸ್ನಾನ ಮಾಡಿ ಹೊಳೆ ದಾಟಿ ಈಚೆ ಬರುವಾಗ ನಾರಾಯಣ ಶಾಸ್ತ್ರಿಗಳ ತೋಟ ಕಾಣಿಸುತಿತ್ತು. ಅಂದಿನ ದಿನಗಳಲ್ಲಿ ಬ್ರಾಹ್ಮಣರೆಂದರೆ ಸರಸ್ವತಿಯ ಭಂಢಾರದ ಬೀಗಮುದ್ರೆಗಳೇ ಎಂದು ಬಗೆದಿದ್ದ ಕರೀಂ ಖಾನ್ ರು ಕ್ರಮೇಣ ನಾರಾಯಣ ಶಾಸ್ತ್ರಿಗಳ ಸ್ನೇಹ ಸಂಪಾದಿಸಿಕೊಂಡರು. ಒಂದು ದಿನ ಶಾಸ್ತ್ರಿಗಳು “ಏನೋ ಕರೀಂ ನಿತ್ಯ ನಮ್ಮ ತೋಟಕ್ಕೆ ಬರ್ತೀಯಲ್ಲ ಏನ್ ಸಮಾಚಾರ?” ಎಂದು ಕೇಳಿದರಂತೆ ! ಅದಕ್ಕೆ ಕರೀಂ ಖಾನರು ಅಳುಕುತ್ತಲೇ ಧೀನಭಾವದಿಂದ ಕರಮುಗಿದು “ಶಾಸ್ತ್ರಿಗಳೇ ನಾನು ನಿಮ್ಮ ತೋಟಕ್ಕೆ ಬರ್ತಿರೋದು ನಿಮ್ಮ ದರ್ಶನ ಪಡೆಯಲು ಹಾಗೆಯೇ ನಿಮ್ಮಲ್ಲಿನ ಪಾಂಡಿತ್ಯ ಕದಿಯಲು ಅಷ್ಟೇ” ಎಂದರಂತೆ! ಶಾಸ್ತ್ರಿಗಳು ದಿಗಿಲಾಗಿ “ಅಲೆಲೆಲೆ ಹಿಂದುಗಳಿಗೆ ಬೇಕಿರದ ನನ್ನ ಪಾಂಡಿತ್ಯ ನಿನ್ನಂತಹ ಮುಸ್ಲಿಂ ಫೋರ ಕೊಳ್ಳೆಹೊಡೆಯೋದು ಅಂದರೆ ಆಶ್ಚಯ್ದ ಸಂಗತಿ! ಭಾಷೆ, ಧರ್ಮದ ಸಂಯೋಗದ ಸಂದರ್ಭ ಬಂದೊದಗಿರಬೇಕು, ಆಯ್ತು ನೀನು ಕೊಳ್ಲೆಹೊಡೆಯೋದು ಬೇಡ. ನಿನ್ನಲ್ಲಿರೋ ಜ್ಞಾನದಾಹ ಪಾಂಡಿತ್ಯವನ್ನು ತಾನೇ ಗಳಿಸಿಕೊಡುತ್ತದೆ. ನಿನ್ನಂತಹ ಸಹೃದಯಿ, ಕಲಿಯುವ ಹಂಬಲ, ಮನೋ ಚೈತನ್ಯವನ್ನು ಕಂಡು ನನ್ನ ಪಾಂಡಿತ್ಯ ಬಚ್ಚಿಡೋದು ತರವಲ್ಲ . ಬಾ ಎಂದು ಆಲಂಗಿಸಿ ಮಡಿವಂತಿಕೆ ಮೀರಿ ನಾರಾಯಣ ಶಾಸ್ತ್ರಿಗಳು ಸಂಸ್ಕøತ ಸಾಹಿತ್ಯ, ಶಾಸ್ತ್ರ, ಪುರಾಣಗಳನ್ನು ಕಲಿಸುತ್ತಾ ಬಂದರು. ಶಿಶ್ಯನೂ ಕೂಡ ಬೆರಳ ತೀರಿದರೆ ಹಸ್ತ ನುಂಗುವ ಪರಿಯಲ್ಲಿ ಸಾಗಿದನು.
ಉರ್ದು ಭಾಷಿಗರಾದರೂ ಕರೀಂಖಾನ್ ರವರಿಗೆ ಕನ್ನಡದಲ್ಲಿ ಎಲ್ಲಿಲ್ಲದ ಆಸಕ್ತಿ. ಅಲ್ಪ ಸ್ವಲ್ಪ ಸಂಸ್ಕøತ ಬಲ್ಲವರಾಗಿದ್ದ ಇವರು ಇತಿಹಾಸ, ಜಾನಪದ, ಪುರಾಣ, ಮಹಾಕಾವ್ಯಗಳ ಬಗ್ಗೆ ಅಪಾರವಾದ ಪಾಂಡಿತ್ಯ ಗಳಿಸಿದ್ದರು. ಅದರಲ್ಲೂ ಚಾರಿತ್ರಿಕ ವಿಷಯಗಳಲ್ಲಿ ಸಿದ್ಧಹಸ್ತರಾಗಿದ್ದರು. ಪ್ರತಿಭಾವಂತ ಚಿಂತಕರಾದ ಇವರು ಮೂಲತಹ ಇಸ್ಲಾಂ ಧರ್ಮದವರಾದರೂ ಭಗವದ್ಗೀತೆ, ಭಾಗವತ, ಶಿವಪುರಾಣ, ವಿಷ್ಣುಪುರಾಣಗಳನ್ನು ಓದಿ ಕರಗತ ಮಾಡಿಕೊಂಡಿದ್ದರು. ಉರ್ದು ಸಾಹಿತ್ಯದಲ್ಲಿ ಪಾಡಿತ್ಯವನ್ನು ಹೊಂದಿದ್ದ ಖಾನ್ ರವರು ಹಿಂದೂ –ಮುಸ್ಲಿಂ ಐಕ್ಯತೆಯ ಸಂಕೇತವಾಗಿದ್ದಾರೆ. ಇದಕ್ಕೆ ಮೂಲ ನಾರಾಯಣ ಶಾಸ್ತ್ರಿಗಳೇ ಎನ್ನಬಹುದು.
ಮುಂದೆ ಕನ್ನಡ ನಾಡಿನ ಮಹಾನ್ ವಿದ್ವಾಂಸರೆನಿಸಿಕೊಂಡರು. ತೆಲುಗಿನ ಪೋತನನ ಭಾಗವತವನ್ನು ನಾಟಕ ರೂಪಕ್ಕೆ ತರುವಲ್ಲಿ ಪ್ರಯತ್ನಿಸಿದರು. ಉರ್ದು ಸಾಹಿತ್ಯದ ಗಾಲಿಬ್ ಇಕ್ಫಾಲ್ರಂತಹ ಕವಿಗಳ ಪ್ರಭಾವಕ್ಕೂ ಒಳಗಾಗಿದ್ದ ಕರೀಂ ಖಾನ್ ಹಿಂದೂ ಮುಸ್ಲಿಂ ಐಕ್ಯತೆಗೆ ಸಾಕಷ್ಟು ಕಥೆಗಳನ್ನು ರಚಿಸಿದ್ದುಂಟು. ಉರ್ದುವಿನಿಂದ ಕನ್ನಡಕ್ಕೆ ಅನುವಾದಗೊಂಡ ‘ನಿವಾg’À ಕಥಾ ಸಂಕಲನ, ‘ನೀಹಾರ’ ಚಾರಿತ್ರಿಕ ಕಥಾ ಸಂಕಲನ, ‘ಸಮೀರ’, ‘ಬಲಿಗಾನಿ ಹುಸೇನಿ’ ಚಾರಿತ್ರಿಕ ಕಾದಂಬರಿ. ‘ಮಾತೃ ಶಾಪ’ ಪೌರಾಣಿಕ ಕಾದಂಬರಿ. ‘ನಿರ್ದೋಷಿ’, ‘ಮಧುಮೋಹನ್’, ‘ಹಣವೋ ಗುಣವೋ’, ‘ಶ್ರೀ ಕೃಣ್ಣಲೀ¯’É ನಾಟಕಗಳು. ‘ಹುಮಾಯಾನ್’, ‘ಅಂಬರನಾಥ’, ‘ಬೆಂಗಳೂರು ಕೆಂಪೇಗೌಡ’, ‘ಮಹಾಪ್ರಭು ಮಾಗಡಿ ಕೆಂಪೇಗೌಡ’, ‘ಲೈಲಾ ಮಜ್ನು’- ಚಾರಿತ್ರಿಕ ನಾಟಕಗಳು ಮುಂತಾದವು ಕರೀಂ ಖಾನ್ರ ಪ್ರಮುಖ ಕೃತಿಗಳಾಗಿವೆ. ಅಲ್ಲದೇ ಅಸಂಖ್ಯಾತ ಗೀಗಿ ಪದಗಳು, ಸೊಬಾನೆ, ಲಾವಣಿಗಳು, ರಾಗಿ ಬೀಸೋ ಹಾಡುಗಳು, ನಾಟಿ ಮಾಡುವಾಗಿನ ಹಾಡುಗಳು ಹೀಗೆ ಹಲವಾರು ಬಗೆಯ ಜಾನಪದ ಕಾವ್ಯಗಳ ಸಂಗ್ರಹವನ್ನು ಮಾಡುತ್ತಾ ತಮ್ಮ ಜ್ಞಾನ ಜೋಳಿಗೆಯನ್ನು ತುಂಬಿಸಿಕೊಂಡು ಪುಸ್ತಕ ರೂಪದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ, ಕನ್ನಡಿಗರಿಗೆ ಉಣಬಡಿಸಿದ್ದಾರೆ.
ಪಕ್ಕ ಗಾಂಧಿವಾದಿಗಳಾಗಿದ್ದ ಕರೀಂ ಖಾನ್ ರು ಗಾಂಧಿ ತತ್ವಗಳನ್ನು ಅಕ್ಷರಶ: ಅಳವಡಿಸಿಕೊಂಡು ಆದರ್ಶಮಯವಾಗಿ ಬದುಕಿದವರು. ಚಲೇಜಾವ್ ಚಳುವಳಿ, ದುಂಡುಮೇಜಿನ ಪರಿಷತ್ತು, ಉಪ್ಪಿನ ಸತ್ಯಾಗ್ರಹ sssssssssಸಮಯದಲ್ಲಿ ಗಾಂಧೀಜಿ ತೋರಿದ ಸಹನಾ ಚಳುವಳಿಗೆ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಗಿಯಾದರು.
ಕರೀಂ ಖಾನ್ 1947 ರ ಸ್ವಾತಂತ್ರ್ಯವನ್ನು ಒಂದು ಕಡೆ ಹೀಗೆ ಬಣ್ಣಿಸಿದ್ದಾರೆ “ಬ್ರಿಟೀಷರು ಭಾರತ ಬಿಟ್ಟು ತೊಲಗಿದ ದಿನ ಆದಂತಹ ಸಂತೋಷ ತಾಯಿಯ ಎದೆಹಾಲನ್ನು ಮತೊಮ್ಮೆ ಕುಡಿದಷ್ಟೇ ಸಂತೋಷವಾಯಿತು”. ಸ್ವಾತಂತ್ರ್ಯೋತ್ತರದ ಸಂದರ್ಭದಲ್ಲಿ ಒಬ್ಬ ಸಂದರ್ಶಕ ಭೇಟಿಯಿತ್ತಾಗ “ಇಂದು ಸ್ವಾತಂತ್ರ್ಯ ಹೆಸರಿನಲ್ಲಿ ಸ್ವಾಚ್ಛಾಚಾರ , ಸ್ವಾರ್ಥ, ವಂಚನೆ, ಜಾತಿ ಸಂಘರ್ಷಗಳಿಂದ ಪುನ: ನಾವು ನಮ್ಮವರಿಂದಲೇ ಕ್ರೂರವಾಗಿ ಪರತಂತ್ರರಾಗುತಿದ್ದೇವೆ” ಎಂದಿದ್ದಾರೆ.
ಕಂಚಿನ ಕಂಠ ಹೊಂದಿದ್ದ ಖಾನ್ ಸಾಹೇಬರಿಗೆ ನಾಡಿನ ಜನ “ಸಾವಿರಾರು ಹಾಡುಗಳ ಸರದಾರ” ನೆಂಬ ಬಿರಿದಾಂಕಿತ ಮಾಡಿದ್ದರು. ಸ್ವಾಭಿಮಾನಿಯಾದ ಯಾವುದೇ ಕನ್ನಡಿಗನಿಗೆ ದೇಶ ಮತ್ತು ಭಾಷಾಭಿಮಾನ ಉತ್ಕಟವಾಗಿದ್ದೇಯಿರುತ್ತದೆ. ಅಂತೆಯೇ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿಯೂ ಕರೀಂ ಖಾನ್ ರು ಮುಂಚೂಣಿ ನಾಯಕರಾದರು. ಕಾವೇರಿಯಿಂದಮಾಗೋದಾವರಿ ವರಮಿರ್ದ ಕನ್ನಡ ನಾಡು ಎಂಬುದನ್ನು ಕವಿರಾಜ ಮಾರ್ಗ, ಶಾಸನಗಳಿಂದ ಅರಿತಿದ್ದ ಖಾನರು ಕನ್ನಡ ನಾಡನ್ನು, ಕನ್ನಡ ಭಾಷೆಯನ್ನು ಮಾತನಾಡುವ , ಕನ್ನಡಿಗರು ವಾಸಿಸುವ ಊರುಗಳನ್ನು ಒಂದಾಗಿಸುವ ನಿಟ್ಟಿನಲ್ಲಿ ಶ್ರಮಿಸಿದರು. ಸೆರೆಮನೆವಾಸವನ್ನು ಅನುಭವಿಸಿದರು. ಇಷ್ಟೇಯಲ್ಲದೇ ಉಡುಪಿಯ ‘ಅಂತರಂಗ’ ಎಂಬ ಪತ್ರಿಕೆಯ ಮೂಲಕ ಪತ್ರಿಕಾ ರಂಗಕ್ಕೆ ಕಾಲಿಟ್ಟ ಖಾನರು ಪತ್ರಿಕೆಯಲ್ಲಿ ಜಾನಪದ, ಸಾಹಿತ್ಯ, ದೇಶಾಭಿಮಾನ ಮೂಡಿಸುವಂತಹ ಲೇಖನಗಳನ್ನು ಪ್ರಕಟಿಸಿದರು.
1940-41 ರಲ್ಲಿ ಧಾರವಾಡದ “ಲೋಕಮಿತ್ರ” ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದರು. ನಂತರ ಬಾಂಬೆಗೆ ಹೋದ ಖಾನರು ಬಾಂಬೆಯ ‘ರಾಯಲ್ ಇಂಡಿಯನ್ ದೇವಿ’ ಕಂಪನಿಯಲ್ಲಿ ‘ವೈರ್ಲೆಸ್ ಟೆಲಿಗ್ರಾಫರ್’ ಆಗಿ ಕೆಲಸ ಮಾಡಿದ್ದಾರೆ. ತದನಂತರ ಡಾ||ಹರ್ಡೇಕರ ಸ್ಥಾಪಿತ ಭಾರತ ಸೇವಾದಲ ಬಲಪಡಿಸುವ ನಿಟ್ಟನಲ್ಲಿ ಶ್ರಮ ವಹಿಸಿದರು. ಇವರ ಕಂಠ ಸಿರಿಯಿಂದ ರಾಘವೇಂದ್ರ ಸ್ವಾಮಿ ಭಕ್ತಿಗೀತೆಗಳು, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತಿಗೀತೆಗಳೆಂಬ ಧ್ವನಿಸುರುಳಿಗಳು ಬಿಡುಗಡೆಯಾಗಿವೆ.
ಅಷ್ಟೊತ್ತಿಗಾಗಲೇ ಪ್ರಸಾದ್ ಮೂವೀಸ್ ನ ದಿವಂಗತ ಆರ್ ನಾಯ್ಡು ಕರೀಂ ಖಾನ್ ರನ್ನು ಮದರಾಸಿಗೆ ಕೈ ಬೀಸಿ ಕರೆದರು. ಅವರಿಗೆ ಸಿನಿಮಾ ರಂಗದ ಅದೃಷ್ಟದ ಬಾಗಿಲು ತೆರೆದುಕೊಂಡಿತು. ಅಲ್ಲಿ ಸುಮಾರು ಹತ್ತು ವರ್ಷ ಹಲವಾರು ಚಿತ್ರಗಳಿಗೆ ಕಥೆ, ಸಂಭಾಷಣೆ, ಹಾಡುಗಳನ್ನು ಬರೆದು, ಸುಮಾರು 300 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದರು. ಸ್ವರ್ಣಗೌರಿ, ಜೀವನ ತರಂಗ, ಬೇವುಬೆಲ್ಲ, ಚಂದ್ರಕುಮಾರ, ದೇವಮಾನವ, ದೊಂಬರ ಕೃಣ್ಣ, ರಾಜೇಶ್ವರಿ, ಪತೀತ ಪಾವನಿ, ಸೂಪರ್ ನೋವ-455 ಮೊದಲಾದ ಹದಿನೈದು ಚಿತ್ರಗಳಿಗೆ ಉತ್ತಮ ಸಾಹಿತ್ಯ ನೀಡಿದ್ದಾರೆ.
ಹೀಗೆ ಬಹುಮುಖ ಪ್ರತಿಭೆಯಾದ ಇವರನ್ನು 1987 ಜುಲೈ 30 ರಂದು ಕರ್ನಾಟಕ ಸರ್ಕಾರ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಆದರೆ ಅನೇಕ ಜನ ಮೂಗು ಮುರಿದಿದ್ದರಿಂದ ಇದನ್ನು ಗ್ರಹಿಸಿದ ಕರೀಂ ಖಾನ್ರು ನೇಮಾಕಾದೇಶ ಕೈ ಸೇರುವ ಮೊದಲೆ ರಾಜೆನಾಮೆ ಪ್ರಕಟಿಸಿಬಿಟ್ಟರು. ಆದರೂ ಸರ್ಕಾರ ಇವರನ್ನು ಒಪ್ಪಿಸಿ ಅಧಿಕಾರ ಸ್ವೀಕರಿಸುವಂತೆ ಒತ್ತಾಯ ಮಾಡಿದ್ದರಿಂದ ಕಾರ್ಯನಿರ್ವಹಿಸಿದರು.
ಈ ಎಲ್ಲಾ ಜೀವಮಾನವ ಸಾಧನೆಗಾಗಿ 1989 ರಲ್ಲಿ ಗುಲಬರ್ಗಾ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ, 1995 ರಲ್ಲಿ ಕರ್ನಾಟಕ ಸರ್ಕಾರ ಜಾನಪದಶ್ರೀ ಪ್ರಶಸ್ತಿ, , 1995 ರಲ್ಲಿ ಜಿ.ಶಂ. ಪ ಪ್ರಶಸ್ತಿ, 1997 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ `ನಾಡೋಜ ಪ್ರಶಸ್ತಿ’, 1998 ರಲ್ಲಿ ಹಂಸರತ್ನ ಪ್ರಶಸ್ತಿ, 1999 ರಲ್ಲಿ ದೇಶಪ್ರೇಮಿಗಳ ಜನಜಾಗೃತಿ ಸಭೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಗೌರವವಾದರೆ, 2000 ರಲ್ಲಿ ಚಿ| ಉದಯಶಂಕರ್ ಪ್ರಶಸ್ತಿ, 2004 ರಲ್ಲಿ ಜಾನಪದ ಜಂಗಮ ಪ್ರಶಸ್ತಿ, 2004 ರಲ್ಲಿ ಚಿತ್ರರಂಗದ ಜೀವಮಾನ ಪ್ರಶಸ್ತಿ, 2004 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಮುಂತಾದ ಗೌರವಗಳಿಗೆ ಕರೀಂ ಖಾನ್ರು ಪಾತ್ರರಾಗಿದ್ದಾರೆ. ಇಂತಹ ಅಭೂತಪೂರ್ವ ಸಾಧಕ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು, ತತ್ತ್ವಗಳು ಸದಾ ಜೀವಂತವಾಗಿವೆ.
ನವೋದಯ ಕಾಲದ ಶ್ರೇಷ್ಠ ಅನುವಾದಕ – ಎಲ್. ಗುಂಡಪ್ಪ
ಹೊಸಗನ್ನಡ ಸಾಹಿತ್ಯದ ಆರಂಭವನ್ನು ನವೋದಯ ಸಾಹಿತ್ಯವೆಂತಲೂ ಕರೆಯುತ್ತೇವೆ. ವಸಾಹತು ಶಾಹಿಯ ಪ್ರಭಾವದಿಂದ ಪಡೆದ ಪಾಶ್ಚಾತ್ಯ ಶಿಕ್ಷಣದ ಹೊಸ ಪ್ರೇರಣೆಗಳು ಹಾಗೂ ಆ ಮೂಲಕ ಜಾಗೃತಗೊಂಡ ಪಾರಂಪರಿಕ ಮೌಲ್ಯಗಳ ಬಗೆಗಿನ ಹೊಸ ದೃಷ್ಠಿಕೋನದ ಫಲವಾಗಿ ಈ ಸಾಹಿತ್ಯ ಬೆಳೆಯಿತು. ಈ ನವೋದಯ ಸಾಹಿತ್ಯ ತನ್ನ ಪೂರ್ವದ ಸಾಹಿತ್ಯ ರೂಪಕ್ಕಿಂತ ವಿಭಿನ್ನ ರೀತಿಯಲ್ಲಿ ಅಂದರೆ ಮಾನವ ಬದುಕಿನ ಸಮಕಾಲೀನ ಸಾಮಾಜಿಕ, ರಾಜಕೀಯ, ಆರ್ಥಿಕ ಈ ಎಲ್ಲಾ ಸ್ತರಗಳನ್ನು ಕುರಿತು ಚಿಂತಿಸುವ ಪರಿಸರದಲ್ಲಿ ಬೆಳೆಯಲು ಇದು ತನ್ನ ಹಿಂದಿನ ಸಾಹಿತ್ಯದಂತೆ ಧರ್ಮ ಹಾಗೂ ಪಂಡಿತ ಕೇಂದ್ರಿತ ನೆಲೆಯಲ್ಲಿರದೆ, ಸಮಾಜ ಕೇಂದ್ರಿತ ದೃಷ್ಠಿಕೋನದೊಂದಿಗೆ ಭಿನ್ನ ಭಿನ್ನ ಆಯಾಮಗಳಲ್ಲಿ ಬೆಳೆದು ಬಂದಿತು.
ಬಿ.ಎಂ. ಶ್ರೀ, ಪಂಜೆ ಮಂಗೇಶರಾಯ, ಗೋವಿಂದ ಪೈ, ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿಯಾದಿಯಾಗಿ ಎಲ್. ಗುಂಡಪ್ಪ, ಕುವೆಂಪು, ಕಾರಂತರು, ರಂ ಶ್ರೀ ಮುಗುಳಿ, ರಂಗಣ್ಣ ಮುಂತಾದವರನ್ನೊಳಗೊಂಡ ಬೃಹತ್ ಸಾಹಿತ್ಯ ಪರಂಪರೆ ಈ ನವೋದಯ ಕಾಲದಲ್ಲಿ ಮೈತಳೆದು ಹೊಸ ತಿರುವನ್ನು ಪಡೆಯಿತೆನ್ನಬಹುದು.
ನವೋದಯ ಕಾಲಘಟ್ಟದ ಪ್ರಮುಖ ಅನುವಾದಕರೆಂದೇ ಗುರುತಿಸಿಕೊಂಡ ಎಲ್.ಗುಂಡಪ್ಪನವರು ಹಾಸನದ ಹಸಿರು ಹೊದಿಕೆಯಿಂದ ಚಿಮ್ಮಿ ಬಂದವರು. ಹಾಸನ ಜಿಲ್ಲೆಯ ಗೊರೂರು, ರಂಗಣ್ಣನವರ ಸಮಕಾಲೀನರಾಗಿದ್ದ ಗುಂಡಪ್ಪನವರು ಅನುವಾದ ಹಾಗೂ ನಿಘಂಟು ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.
ಎಲ್. ಗುಂಡಪ್ಪನವರು ಹಾಸನ ಜಿಲ್ಲೆಯ ಮಲೆನಾಡು ಸೆರಗಿನ ಬೇಲೂರು ತಾಲ್ಲೂಕು ಮತಿಘಟ್ಟ ಗ್ರಾಮದ ಶ್ರೀ ಲಿಂಗಣ್ಣಯ್ಯ ಹಾಗೂ ಶ್ರೀಮತಿ ಚೆನ್ನಮ್ಮ ದಂಪತಿಗಳ ಮಗನಾಗಿ 1903 ರಲ್ಲಿ ಜನಿಸಿದರು.
ಮತಿಘಟ್ಟ ಕೃಷ್ಣಮೂರ್ತಿ ಗುಂಡಪ್ಪನವರ ಕಿರಿಯ ಸಹೋದರರು. ಕೃಷ್ಣಮೂರ್ತಿಯವರು ಊರಿನ ಹೆಸರನ್ನು ಪ್ರಜ್ವಲಿಸುವಂತಹ ಸಾಧನೆ ಮಾಡಿದರೆ ಗುಂಡಪ್ಪನವರು ತಂದೆಯ ಹೆಸರು ಪ್ರಕಾಶಿಸುವಂತೆ ಮಾಡಿದರು. ಕನ್ನಡ ಸಾಹಿತ್ಯ ಲೋಕಕ್ಕೆ ಮತಿಘಟ್ಟ ಲಿಂಗಣ್ಣಯ್ಯರ ಬ್ರಾಹ್ಮಣ ಕುಟುಂಬ ಎರಡು ದೃವ ನಕ್ಷತ್ರಗಳನ್ನು ನೀಡಿದೆ ಎನ್ನಬಹುದು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಗುಂಡಪ್ಪನವರು ಅತ್ಯುತ್ತಮ ವಾಗ್ಮಿಗಳಾಗಿದ್ದರು. ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರುಗಳಾಗಿದ್ದರು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದನೆಯಲ್ಲಿ ಹಾಗೆಯೇ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್-ಕನ್ನಡ ನಿಘಂಟು ಸಂಪಾದನೆಯಲ್ಲಿ ಅವಿರತವಾಗಿ ದುಡಿದಿದ್ದಾರೆ. ಇವರ ‘ಪತ್ರಿಕಾ ನಿಘಂಟು’ ಕನ್ನಡ ಸಾಹಿತ್ಯದ ಒಂದು ಅತ್ಯುಪಯುಕ್ತ ಗ್ರಂಥವಾಗಿದೆ.
ಅನುವಾದ ಸಾಹಿತ್ಯ
ಮೊದಲೇ ಹೇಳಿದಂತೆ ಅನುವಾದ ಸಾಹಿತ್ಯದಲ್ಲಿ ಗುಂಡಪ್ಪನವರು ಸಿದ್ಧ ಹಸ್ತರು. ಈ ಕ್ಷೇತ್ರದಲ್ಲಿ ತಮ್ಮದೇಯಾದ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಕುಮಾರ ವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯ ಗದ್ಯಾನುವಾದ ಮಾಡಿದ್ದಾರೆ. ರಾಜಾಜಿಯವರ ‘ವ್ಯಾಸರ್ ವಿರುಂದು’ ಎನ್ನುವ ಹೆಸರಿನ ಮಹಾಭಾರತವನ್ನು ಕನ್ನಡಕ್ಕೆ ಅನುವಾದ ಗೊಳಿಸಿದ್ದಾರೆ É. ತಮಿಳಿನ ತಿರುಕ್ಕುರುಳ್, ಶಿಲಪ್ಪದಿಗಾರಂ ಕೃತಿಗಳನ್ನು ಸಹ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಬಹುಭಾಷಾ ಪಾರಂಗತರಾಗಿದ್ದ ಎಲ್. ಗುಂಡಪ್ಪನವರು ಕನ್ನಡಕ್ಕೆ ಅನುವಾದ ಸಾಹಿತ್ಯದ ಮೂಲಕ ಅಮೋಘ ಸೇವೆ ಸಲ್ಲಿಸಿದ್ದಾರೆ. ಇತರೆ ಭಾಷೆಗಳಲ್ಲಿನ ಶ್ರೇಷ್ಠ ಕೃತಿಗಳನ್ನು ಕನ್ನಡಿಗರೂ ಓದಿ ರಸಾನುಭವ ಹೊಂದಲು ಕಾರಣೀಭೂತರಾಗಿದ್ದಾರೆ.
‘ಮಕ್ಕಳ ಸಾಹಿತ್ಯ’
ಗುಂಡಪ್ಪನವರದು ಬಹುಮುಖ ವ್ಯಕ್ತಿತ್ತ್ವ. ನಿಘಂಟು, ಅನುವಾದ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯಷ್ಟೇ ಮಕ್ಕಳ ಸಾಹಿತ್ಯಕ್ಕೂ ನೀಡಿದ್ದಾರೆ. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ, ಆದರ್ಶಮಯ ನಡವಳಿಕೆಗಳನ್ನು ಬಿಂಬಿಸುವ ದೃಷ್ಠಿಕೋನದಲ್ಲಿ ಮಕ್ಕಳ ಸಾಹಿತ್ಯ ರಚಿಸಿದರು.
ಗುಂಡಪ್ಪನವರು ಪ್ರಮುಖ ಮಕ್ಕಳ ಸಾಹಿತ್ಯ ಕೃತಿಗಳೆಂದರೆ ‘ಕಳ್ಳಮರಿ’ ‘ಮಕ್ಕಳ ರವೀಂದ್ರ’, ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ತ್ವ ಪರಿಚಯ. ರವೀಂದ್ರರ ತತ್ತ್ವಾದರ್ಶಗಳಿಗೆ ಮಾರುಹೋಗಿ ಅಂತೆಯೇ ಬದುಕಬೇಕೆಂದು ಜೀವನ ನಡೆಸಿದ ಗುಂಡಪ್ಪನವರು, ಮುಂದೆ ತಮ್ಮ ಕೃತಿಗಳಲ್ಲಿ ಒಡ ಮೂಡಿಸಿದ್ದಾರೆ.
ಇಷ್ಟಲ್ಲದೇ ಗುಂಡಪ್ಪನವರು ‘ನಾಡಪದಗಳು’-ಜನಪದ, ‘ಮುಕುಂದ ಮಾಲಾ’, ‘ಬಾಸನಾಟಕ’, ‘ಕನ್ನಡ ವ್ಯಾಕರಣ ಪಾಠಗಳು’ ಎಂಬ ವೈವಿಧ್ಯಮಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಒಟ್ಟಾರೆ ಹೇಳುವುದಾದರೆ ನಿಘಂಟು, ಅನುವಾದ , ಮಕ್ಕಳ ಸಾಹಿತ್ಯ, ಜಾನಪದ, ನಾಟಕ, ವ್ಯಾಕರಣ, ಕಾವ್ಯ ಹೀಗೆ ಹಲವು ಪ್ರಕಾರಗಳಲ್ಲಿ ಗುಂಡಪ್ಪನವರು ಅದ್ವಿತೀಯ ಕೃತಿಗಳನ್ನು ನಮಗೆ ನೀಡಿದ್ದಾರೆ.
ಗುಂಡಪ್ಪನವರ ಅನುಪಮ ಸಾಹಿತ್ಯ ಸೇವೆಗೆ ಮೈಸೂರು ವಿಶವಿದ್ಯಾನಿಲಯದ ಸಿಲ್ವರ್ ಜ್ಯುಬಿಲಿ ಕನ್ನಡ ಸ್ವರ್ಣ ಪದಕ ಪ್ರಶಸ್ತಿ, ತಮಿಳು, ಕನ್ನಡ ಬಾಂಧವ್ಯಕ್ಕಾಗಿ ಶ್ರಮಿಸಿದ್ದಕ್ಕಾಗಿ ನಾಗರ್ ಕೊಯಿಲಿನಲ್ಲಿ ಬಂಗಾರದ ಪದಕ, ದೇವರಾಜು ಬಹಾದ್ದೂರ್ ಬಹುಮಾನ ಹಾಗೂ 1975 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿವೆ. ಇಂತಹ ಮಹೋನ್ನತ ಸಾಹಿತಿ ನಮ್ಮ ಹಾಸನ ಜಿಲ್ಲೆಯವರೆನ್ನುವುದೇ ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ.
ಗದ್ಯ ಸಾಹಿತ್ಯದ ಸಿದ್ಧಹಸ್ತರು ಡಾ. ಗೊರೂರು
ಭೂತಯ್ಯನ ಮಗ ಅಯ್ಯು ಕನ್ನಡ ಚಲನ ಚಿತ್ರವನ್ನು ಬಹುಷಃ ನೋಡದವರೇ ಇಲ್ಲ! ಸ್ಯಾಂಡಲ್ವುಡ್ನಲ್ಲಿ ಅತ್ಯದ್ಭುತ ಮೈಲುಗಲ್ಲನ್ನು ಸ್ಥಾಪಿಸಿ, ನೇರ ಜನರ ಮನಸಿನೊಳಗೆ ನಾಟಿದ ಕಥೆ. ಅಭಿನವ ಭಾರ್ಗವ ಡಾ. ವಿಷ್ಣು ಅವರಿಗೆ ಬ್ರೇಕ್ ಕೊಟ್ಟ ಚಿತ್ರ. ಇದನ್ನು ಯಾರು ತಾನೇ ಮರೆಯಲು ಸಾಧ್ಯ? ಇಂತಹ ಶ್ರೇಷ್ಠ ಕಥೆ ಬರೆದವರು ಹಾಸನ ಸಮೀಪದ ಗೊರೂರಿನವರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್. ಇವರು ನಮ್ಮ `ಮಲೆನಾಡಿನ ಸೆರಗಿಗೆ' ಸೇರಿದವರು ಎಂಬುದೇ ನಮಗೆ ಹೆಮ್ಮೆ.
ಕೆಲವರು ಕಾವ್ಯದಲ್ಲಿ, ಹಲವರು ವಿಮರ್ಶೆಯಲ್ಲಿ, ಇನ್ನೂ ಕೆಲವರು ರಂಗಭೂಮಿಯಲ್ಲಿ ಶ್ರೇಷ್ಠರೆನಿಸಿದಂತೆಯೇ ನಮ್ಮ ಗೊರೂರರು ಅವರದೇ ಆದ ಪ್ರಕಾರದಲ್ಲಿ ಸೈ ಎನಿಸಿಕೊಂಡವರು; ಕನ್ನಡ ಸಾರಸ್ವತ ಲೋಕದಲ್ಲಿ ಮೈಲುಗಲ್ಲೊಂದನ್ನು ಸ್ಥಾಪಿಸಿದವರು. ಆಧುನಿಕ ಕನ್ನಡ ಗದ್ಯ ಸಾಹಿತ್ಯದ ಆಳ, ವಿಸ್ತಾರ, ವೈವಿದ್ಯ, ವೈಶಿಷ್ಟ್ಯಗಳನ್ನು, ಬದುಕಿನ ಸಮಸ್ಯೆಗಳ ಚಿತ್ರಣವನ್ನು ಹಾಸ್ಯದ ಮೂಲಕ ತೆರೆದು ಶಬ್ದ ಚಿತ್ರಗಳನ್ನಾಗಿ ರೂಪಿಸಿದ ಗೊರೂರರು ಕನ್ನಡದ ಪ್ರಸಿದ್ಧ ಲಲಿತ ಪ್ರಬಂಧಕಾರರಲ್ಲದೆ ಗಾಂಧಿವಾದಿಗಳೂ ಆಗಿದ್ದರು. ತಮ್ಮ ಕೃತಿಗಳಲ್ಲಿ ಬದುಕಿನ ಜಟಿಲ ಸಮಸ್ಯೆಗಳನ್ನೂ ಮಾನವೀಯತೆಯ ನೆಲೆಗಟ್ಟಿನ ಮೇಲೆ ನಿಲ್ಲಿಸಿ ಅದಕ್ಕೆ ಹಾಸ್ಯದ ಸ್ಪರ್ಶ ನೀಡಿ ಗಮನ ಸೆಳೆದವರು. ವೈವಿದ್ಯತೆಯಲ್ಲಿ ಏಕತೆ ಸ್ಥಾಪಿಸಿದ ಕೀರ್ತಿ ಇವರದಾಗಿದೆ.
ಡಾ. ಗೊರೂರರ ತಂದೆ ಅದೇ ಗ್ರಾಮದ ಶ್ರೀನಿವಾಸ ಅಯ್ಯಂಗಾರ್ ಹಾಗೂ ತಾಯಿ ಲಕ್ಷ್ಮಮ್ಮ. ಜನನ-1904 ಜುಲೈ 4. ಡಾ. ಗೊರೂರರು ಗ್ರಾಮೀಣ ಪರಿಸರದಲ್ಲಿ ಆಡಿ ಬೆಳೆದವರು. ಮಣ್ಣಿನೊಂದಿಗೆ ಬೆಸೆದವರು. ಆದ್ದರಿಂದಲೇ ಇವರ ಕೃತಿಗಳಲ್ಲಿ ಗ್ರಾಮೀಣ ಸೊಗಡು ದಟ್ಟವಾಗಿದೆ. ಗೊರೂರರು ನಕ್ಕು ನಗಿಸಿದರು. ತಮ್ಮ ಬರವಣಿಗೆಯ ಮೂಲಕ ಹಾಸ್ಯದ ಹೊನಲನ್ನೇ ಹರಿಯಬಿಟ್ಟರು. `ಹಳ್ಳಿಯ ಚಿತ್ರಗಳು', `ನಮ್ಮ ಊರಿನ ರಸಿಕರು' ಇವೆರಡೂ ಓದುಗರನ್ನು ರಸಾಸ್ವಾದದಲ್ಲಿ ಮುಳುಗಿಸಿ ತೇಲಿಸುತ್ತವೆ. `ಶಾಲು ಸಾಬಿ', `ಶೀನಪ್ಪ ನುಂಗಿದ ಇಡ್ಲಿ' ಇಂಥವುಗಳನ್ನೆಲ್ಲಾ ಓದಿಯೇ ಅವುಗಳ ರುಚಿ ಸವಿಯಬೇಕು!
ಜನಪದೀಯ ಹಿನ್ನೆಲೆಯಲ್ಲಿ ಬೆಳೆದ ಗೊರೂರರು ತಮ್ಮ ಒಂದು ಲಲಿತ ಪ್ರಬಂಧದಲ್ಲಿ ತವರೂರಿನ ಬಗ್ಗೆ ಹೀಗೆ ಹೇಳುತ್ತಾರೆ:
`ಅಂದರ್ಕಲಗೂಡು ಚಂದಕೆ ನರಸೀಪುರ
ಚಿತ್ತರದ ಗೊಂಬೆ ಗೊರವೂರು| ಬೀದಿಯ
ಹದಿನಾರು ತೇರು ಹರಿದಾವೆ||
ಈ ತ್ರಿಪದಿಯಲ್ಲಿ ಗ್ರಾಮದ ಸಾಂಸ್ಕøತಿಕ ಸಿರಿವಂತಿಕೆಯನ್ನು ತೆರೆದಿಟ್ಟಿದ್ದಾರೆ.
1930 ರಲ್ಲಿ ಪ್ರಕಟವಾದ `ಭಾರತ ಸ್ವಾತಂತ್ರ್ಯ' ಇವರ ಮೊದಲ ಕೃತಿ. 1948 ರಲ್ಲಿ ಬಂದ `ಹೇಮಾವತಿ' ಮೊದಲ ಕಾದಂಬರಿ. `ಮೆರವಣಿಗೆ', `ಭೂತಯ್ಯನ ಮಗ ಅಯ್ಯು', `ಪುನರ್ಜನ್ಮ' ಇವರ ಶ್ರೇಷ್ಠ ಕಾದಂಬರಿಗಳು. `ರಾಜನರ್ತಕಿ', `ಕ್ರೌಂಚ ವಧೆ', `ಭಗವಾನ್ ಕೌಟಿಲ್ಯ', `ಮಲೆನಾಡಿನವರು' ಇವು ಪ್ರಮುಖ ಅನುವಾದಿತ ಕಾದಂಬರಿಗಳು. `ಗರುಡಗಂಬದ ದಾಸಯ್ಯ', `ಬೆಟ್ಟದ ಮನೆಯಲ್ಲಿ', `ಬೈಲಹಳ್ಳಿ ಸರ್ವೆ', `ಹಳೆಪಳೆಯ ಮುಖಗಳು', `ಹಳ್ಳಿಯ ಬಾಳು' ಮುಂತಾದವು ಸ್ಮರಣೀಯ ಲಲಿತ ಪ್ರಬಂಧ ಸಂಕಲನಗಳಾಗಿವೆ. ವಯ್ಯಾರಿ, ಉಸುಬು, ಕಮ್ಮಾರವೀರ, ಭದ್ರಾಚಾರಿ, ಗೋಪುರದ ಬಾಗಿಲು, ಬೆಸ್ತರ ಕರಿಯ, ಶಿವರಾತ್ರಿ, ಕನ್ಯಾಕುಮಾರಿ ಮತ್ತು ಇತರ ಕಥೆಗಳು- ಇವು ಉಲ್ಲೇಖಾರ್ಹ ಕಥಾ ಸಂಕಲನಗಳಾಗಿವೆ. `ಸಾಹಿತ್ಯ ರಶ್ಮಿ' ಎಂಬ ವಿಮರ್ಶಾ ಕೃತಿಯಲ್ಲಿ ಸಾಹಿತ್ಯದ ಅನೇಕ ಮಗ್ಗಲು ಮಜಲುಗಳನ್ನು ವಿವರಿಸಿದ್ದಾರೆ. `ಅಮೆರಿಕದಲ್ಲಿ ಗೊರೂರು' ಇವರ ಸುಪ್ರಸಿದ್ಧ ಪ್ರವಾಸ ಕಥನವಾಗಿದೆ. ಇಡೀ ವಿಶ್ವವೇ ಗೊರೂರಿನ ಕಡೆ ಮುಖ ಮಾಡುವಂತೆ ಮಾಡಿದ ಕೀರ್ತಿ ಈ ಲೇಖಕರದು. ಈ ಕೃತಿಗೆ 1980ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರಿಂದ ಪ್ರಶಸ್ತಿಗೇ ಒಂದು ಗೌರವ ಸಿಕ್ಕಂತಾಯಿತು.
ಇವರ `ಹಳ್ಳಿಯ ಹಾಡುಗಳು' ಹಾಸನ ಜಿಲ್ಲೆಯ ಜನಪದೀಯ ಪ್ರಕಾರವಾದ ತ್ರಿಪದಿಗಳ ಸಂಗ್ರಹವಾಗಿದೆ. ಜನಪದರ ನಿಜವಾದ ನಾಡಿ ಮಿಡಿತಗಳು ಇದರಲ್ಲಿ ಸೊಗಸಾಗಿ ಮಿಳಿತಗೊಂಡಿವೆ ಎನ್ನಬಹುದು.
ಧೀಮಂತ ಸ್ವಾತಂತ್ರ್ಯ ಹೋರಾಟಗಾರರೂ, ಬರಹಗಾರರೂ, ಮಾನವೀಯತೆಯ ಅದಮ್ಯ ಚೇತನವಾಗಿದ್ದ ಗೊರೂರರು ಗಾಂಧಿ ತತ್ವಾದರ್ಶಗಳಿಗೆ ಮಾರು ಹೋಗಿದ್ದರು. ಸತ್ಯ, ನ್ಯಾಯ, ಅಹಿಂಸಾ ಧರ್ಮದಲ್ಲಿ ಅಚಲವಾದ ನಂಬಿಕೆಯಿಟ್ಟಿದ್ದರು. ಪ್ರೌಢಶಾಲಾ ಹಂತದಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ಗಾಂಧೀಜಿ ಸಂಪರ್ಕದಿಂದ ಅವರ ಶಿಷ್ಯರಾದರು. ಸೆರೆ ಮನೆ ವಾಸ ಅನುಭವಿಸಿದರು. ಸಾಮಾಜಿಕ ಬದ್ಧತೆಯ ನೆಲೆಗಟ್ಟಿನಲ್ಲಿ ಬದುಕಿ ಬಾಳಿದ ಗೊರೂರರು ಸಾಹಿತ್ಯ, ಸಮಾಜ, ಜನಪದವನ್ನು ಒಟ್ಟೊಟ್ಟಿಗೇ ಕೊಂಡೊಯ್ದ ಮೇರು ಸಾಧಕ ಎಂದೇ ಹೇಳಬಹುದು.
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಒಂದು ಕಡೆ ಹೀಗೆ ಹೇಳುತ್ತಾರೆ: `ಗೊರೂರರು ತಮ್ಮ ಸತ್ವಯುತವಾದ ಕೃತಿಗಳ ಮೂಲಕ ಶಾಶ್ವತವಾದ ಒಂದು ಚಿನ್ನದ ಪಕ್ಷಿಯಾಗಿದ್ದಾರೆ. ನಮ್ಮ ವಿವೇಕ ತೂಕಡಿಸುವಾಗ ಕೂಗಿ ಎಚ್ಚರಿಸುವ ಶಕ್ತಿಯಾಗಿದ್ದಾರೆ'!
ಗೊರೂರರು ಮೂಲತಃ ವೈಚಾರಿಕ ಪ್ರಜ್ಞೆಯ ಮೂಸೆಯಲ್ಲಿ ಬೆಳೆದವರು. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸಿದವರು. ಜ್ಯೋತಿಷವನ್ನು ಕುರಿತು ಒಂದು ಕಡೆ, ``ನನಗೆ ಯಾವತ್ತೂ ಜ್ಯೋತಿಷ ಶಾಸ್ತ್ರದಲ್ಲಿ ನಂಬಿಕೆಯಿಲ್ಲ; ಭಾರತೀಯರು ಅನೇಕ ಶತಮಾನಗಳಿಂದ ಈ ಶಾಸ್ತ್ರವನ್ನು ರಚಿಸಿ, ರೂಪಿಸಿ, ಪ್ರಯೋಗಿಸಿ, ಅನುಭವಿಸಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಆದರೆ ಗ್ರಹಗಳು ತಮ್ಮ ಕೆಲಸ ಬಿಟ್ಟು ಈ ಜಗತ್ತಿನ ಜನರ ಹಿಂದೆ ತಿರುಗುತ್ತಾ ಅವರ ಕಾರ್ಯಗಳಲ್ಲಿ ತೊಡಗುತ್ತಿವೆ ಎಂಬುದು ನನಗೆ ಅಸಂಬದ್ಧವಾಗಿ ತೋರಿದೆ!''
ಅವರ ಬಗ್ಗೆ ಅವರೇ ಒಂದು ಕಡೆ ಹೀಗೆ ಹೇಳುತ್ತಾರೆ: `ನನ್ನ ಬಾಳನ್ನು ನಾನು ಹಿಂತಿರುಗಿ ನೋಡಿದಾಗ ನಾನು ಸಾಹಿತಿಗಿಂತ ಹೆಚ್ಚಾಗಿ ಜನ ಸಾಮಾನ್ಯರ ಮನುಷ್ಯ. ರಾಜಕೀಯದಲ್ಲಿ ಗಾಂಧೀಜಿಯವರ ಅದಮ್ಯ ಚೇತನ ಶಕ್ತಿ, ತ್ಯಾಗ, ಆದರ್ಶಗಳಿಂದ ಪ್ರೇರಿತನಾಗಿ ಈ ಕ್ಷೇತ್ರದಲ್ಲಿ ನನ್ನಿಂದಾದ ಸೇವೆ ಸಲ್ಲಿಸಲು ಹೊರಟವ. ನಮ್ಮ ದೇಶದ ಜನ ಸಾಮಾನ್ಯರ ಜಾನಪದವೆಂದರೆ ನನಗೆ ಅತ್ಯಂತ ಪ್ರೇಮ. ಭಾರತವನ್ನು ಆಧುನಿಕ ನಾಗರಿಕತೆಯ ಸರ್ವನಾಶದಿಂದ ತಪ್ಪಿಸಬಲ್ಲದು ಅದೊಂದೇ ಎಂಬುದು ನನ್ನ ನಂಬಿಕೆ'.
ಹೀಗೆ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ಬೆಳೆದ ಗೊರೂರರಿಗೆ 1974 ರಲ್ಲಿ ಮೈಸೂರು ವಿ.ವಿ. ಗೌರವ ಡಾಕ್ಟರೇಟ್ ನೀಡಿತು. ಶಿಷ್ಯರು, ಸ್ನೇಹಿತರೆಲ್ಲ ಸೇರಿ 1973 ರಲ್ಲಿ `ಗೊರೂರು ಗೌರವ ಗ್ರಂಥ' ಎಂಬ ಅಭಿನಂದನಾ ಗ್ರಂಥ ಸಮರ್ಪಿಸಿದ್ದಾರೆ. 1967ರಲ್ಲಿ ತರೀಕೆರೆಯಲ್ಲಿ ನಡೆದ ಪ್ರಪ್ರಥಮ ಅಖಲಿ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1982ರಲ್ಲಿ ಶಿರಸಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಇಂತಹ ಸಾಹಿತ್ಯ ವಲ್ಲಭ 1991ರ ಸೆಪ್ಟೆಂಬರ್ 28 ರಂದು ಅಜರಾಮರವಾದರು. ಆದರೆ ತ್ರಿಕಾಲಗಳಲ್ಲೂ ಕನ್ನಡ ಸಾರಸ್ವತ ಲೋಕದಲ್ಲಿ, ಕರುನಾಡ ಜನ ಮಾನಸದಲ್ಲಿ ಅಚ್ಚಳಿಯದೆ ನೆಲೆಯೂರಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಕಾದಂಬರಿ ಸಾರ್ವಭೌಮ-ಡಾ.ಅ.ನ.ಕೃಷ್ಣರಾಯರು
ವಿಶ್ವ ಸಿಡಿಯುವುದನ್ನು ತಡೆಯುವುದೊಂದೆ ಮಾನವೀಯತೆ ಎಂಬ ಮಾನವೀಯ ಮೌಲ್ಯಗಳನ್ನು ಸಾರಿದ ಧೀಮಂತ ವ್ಯಕ್ತಿ ಅ.ನ.ಕೃರವರು. ‘ಕಾದಂಬರಿ ಲೋಕದ ಸಾರ್ವಭೌಮ’ ಎಂದೇ ಬಿಂಬಿತವಾದ ಇವರು ಕನ್ನಡವನ್ನೇ ಉಸಿರಾಗಿಸಿಕೊಂಡು ಬದುಕಿ ಬಾಳಿದ ಉತ್ಕøಷ್ಟ ಚೇತನ. ಕನ್ನಡ ಭಾಷಿಗರಲ್ಲಿ ಓದುವ ಸದಭಿರುಚಿಯನ್ನು ಬೆಳೆಸಿ ಕನ್ನಡ ಸಾಹಿತ್ಯಕ್ಕೆ ಮೌಲ್ಯವರ್ಧಿಸಿದ ಕೀರ್ತಿ ಅನಕೃರವರಿಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.
ಅ.ನ.ಕೃ ರವರ ಪೂರ್ಣ ಹೆಸರು ಅರಕಲಗೂಡು ನರಸಿಂಗರಾಯ ಕೃಷ್ಣರಾಯರು. ಇವರು 1908 ಮೇ9ರಂದು ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಶ್ರೀನರಸಿಂಹರಾವ್ ಮತ್ತು ಶ್ರೀ ಮತಿ ಅನ್ನಪೂರ್ಣಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು.
ಕನ್ನಡ ಸಾಹಿತ್ಯ ಕಾದಂಬರಿ ಲೋಕದಲ್ಲಿ ಹೊಸ ಸಂಚಲನವನ್ನು ಮೂಡಿಸಿದ ಅನಕೃ ಕನ್ನಡ ಚಲನ ಚಿತ್ರ ರಂಗಕ್ಕೂ ಅದ್ವಿತೀಯ ಕೊಡುಗೆ ನೀಡಿದ್ದಾರೆ.
1934ರಲ್ಲಿ ಬಂದ ‘ಜೀವನ ಯಾತ್ರೆ’ ಇವರ ಮೊದಲ ಕಾದಂಬರಿ. ನಂತರ ಬಂದ ಅಗ್ರ ತಾಂಬೂಲ, ಅಪರಾಜಿತೆ, ಅಭಿಮಾನ, ಅಣ್ಣ ತಂಗಿ, ಈಚಲು ಮರದವ್ವ, ನಟಸಾರ್ವಭೌಮ, ಉದಯರಾಗ, ಕಲಾವಿದ, ಗಾಜಿನ ಮನೆ, ಕನ್ನಡಮ್ಮನ ಗುಡಿಯಲ್ಲಿ, ಸಂಗ್ರಾಮ, ಚಿತ್ರ ವಿಚಿತ್ರ, ಕಂಕಣ ಬಲ, ಕಾಂಚನ ಗಂಗಾ, ತಾಯಿಯ ಕರಳು, ಕೀರ್ತಿ ಕಳಸ, ಸಂಧ್ಯಾರಾಗ, ಮುಯ್ಯಿಗೆ ಮುಯ್ಯಿ, ಗೃಹಲಕ್ಷ್ಮಿ, ಹೃದಯ ಸಾಮ್ರಾಜ್ಯ, ಹೊಸಲು ದಾಟಿದ ಹೆಣ್ಣು, ನರಬಲಿ, ಮಣ್ಣಿನ ದೋಣಿ, ಅಮೃತ ಮಂಥನ, ಭೂಮಿಗಿಳಿದು ಬಂದ ಭಗವಂತ ಪ್ರಮುಖ ಕಾದಂಬರಿಗಳಾಗಿವೆ. ಇಲ್ಲಿನ ಕಾದಂಬರಿಗಳು ಸಾಮಾಜಿಕ ವ್ಯವಸ್ಥೆ, ಧರ್ಮ, ಸಂಪ್ರದಾಯ, ಪ್ರೀತಿ, ಪ್ರೇಮ ರಾಜಕೀಯ ಮುಂತಾದವುಗಳ ಮೇಲೆ ಬೆಳಕು ಚೆಲ್ಲುತ್ತವೆ.
ನಗ್ನ ಸತ್ಯ, ಸತಿ ಸಂತಾನ, ಸಂಜೆಗತ್ತಲು, ಕಳಂಕಿನಿ, ಅಪರಂಜಿ, ‘ಕಬ್ಬಿಣದ ಕಾಗೆ’, ಮುಂತಾದ ಕಾದಂಬರಿಗಳು ವೇಶ್ಯೆಯರ ಬದುಕಿನ ಒಳ ತುಮುಲಗಳನ್ನು ಅನಾವರಣಗೊಳಿಸುತ್ತವೆ. ಬಹುಷಃ ಕನ್ನಡದಲ್ಲಿ ಮೊಟ್ಟ ಮೊದಲ ಪ್ರಯತ್ನ ಇದಾಗಿದೆ ಎನ್ನಬಹುದಾಗಿದೆ.
ಗರಡು ಮಚ್ಚೆ, ಯಲಹಂಕ ಭೂಪಾಲ, ರಣವಿಕ್ರಮ, ಸಂಗ್ರಾಮ ಧುರೀಣ, ವಿಜಯ ವಿದ್ಯಾರಣ್ಯ, ತಪೋಬಲ, ಪ್ರೌಢ ಪ್ರತಾಪಿ, ಅಳಿಯ ರಾಮರಾಯ, ಭುವನ ಮೋಹಿನಿ, ಮೋಹನ ಮುರಾರಿ ಮುಂತಾದ ಕಾದಂಬರಿಗಳು ಐತಿಹಾಸಿಕವಾಗಿ ಮುಖಾಮುಖಿಯಾಗಿ ನಿಲ್ಲುತ್ತವೆ.
ಒಂದು ಇಡೀ ರಾತ್ರಿ ಕುಳಿತು ಒಂದು ಸಾಮಾಜಿಕ ನಾಟಕನ್ನು ಬರೆದು ವರದಾಚಾರ್ ಅವರಂತಹ ರಂಗಭೂಮಿಯ ದಿಗ್ಗಜರು ತಬ್ಬಿಬ್ಬಾಗುವಂತೆ ಮಾಡಿದ ಕೀರ್ತಿ ಅನಕೃರವರದು. ‘ಮದುವೆಯೋ ಮನೆ ಹಾಳೋ’ ಎಂಬ ಈ ನಾಟಕವನ್ನು ಬರೆದದ್ದು ಇವರ ಹದಿನಾರನೇ ವಯಸ್ಸಿನಲ್ಲೆಂಬುದು ವಿಶೇಷ.
ಮುಂದೆ ‘ಕಥಾಂಜಲಿ’ ಮಾಸ ಪತ್ರಿಕೆಯನ್ನು ಆರಂಭಿಸಿದ ಇವರು. ನಂತರ ದಿನಗಳಲ್ಲಿ ‘ಬಾಂಬೆ ಕ್ರಾನಿಕಲ್ನಲ್ಲಿ’ ಕೆಲ ದಿನ ಕೆಲಸ ಮಾಡಿ ತದನಂತರ ‘ವಿಶ್ವವಾಣಿ’ ಎಂಬ ಪತ್ರಿಕೆಗೆ ಸಂಪಾದಕರಾಗಿ ದುಡಿದರು. ಪತ್ರಿಕಾ ರಂಗದಲ್ಲಿದ್ದುಕೊಂಡೇ ಸಾಹಿತ್ಯ ಕ್ಷೇತ್ರದಲ್ಲೂ ಅಪರಿಮಿತವಾಗಿ ಶ್ರಮಿಸಿದರು. ನಂತರದ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಪರ್ಕ ಬೆಳೆಸಿಕೊಂಡ ಅನಕೃ ‘ಕನ್ನಡ ನುಡಿ’ ಮಾಸ ಪತ್ರಿಕೆಗೆ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇವರು ಕಾದಂಬರಿ, ನಾಟಕ, ಪ್ರಬಂಧ, ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದ, ಸಂಶೋಧನಾ ಗ್ರಂಥಗಳು, ವ್ಯಕ್ತಿ ಚಿತ್ರಣ ಮುಂತಾದವುಗಳ ಪ್ರಕಾರಗಳಲ್ಲಿ ಕೃತಿಗೈದಿದ್ದಾರೆ. ಅಸಂಖ್ಯಾತ ಗ್ರಂಥಗಳನ್ನು ರಚಿಸಿರುವ ಇವರು ತಮ್ಮ ಲೇಖನಿಯಿಂದ ವೈವಿಧ್ಯಮಯವಾದ ರಸಾತ್ಮಕ ಸಾಹಿತ್ಯವನ್ನೇ ಸೃಜಿಸಿದ್ದಾರೆ.
1943-44ರಲ್ಲಿ ಆರಂಭವಾದ ಪ್ರಗತಿಶೀಲ ಸಾಹಿತ್ಯ ಚಳವಳಿಯ ನೇತಾರರಾಗಿದ್ದರು. ಅದೇ ಸಂದರ್ಭದಲ್ಲಿ ಚಿತ್ರೋದ್ಯಮ ಪ್ರವೇಶಿಸಿದರಾದರೂ ಹೆಚ್ಚು ದಿನ ನೆಲೆ ನಿಲ್ಲಿಲಿಲ್ಲ. ಕಾದಂಬರಿ ಕ್ಷೇತ್ರಗಳಲ್ಲಿ ಬಹಳವಾಗಿಯೇ ನಿಷ್ಣಾತರಾದರು. ಅಲ್ಲದೇ ಅಗ್ನಿಕನ್ಯೆ, ಕಣ್ಣಾ ಮುಚ್ಚಾಲೆ, ಕಾಮನ ಸೋಲು, ಕಿಡಿ, ಪಾಪಪುಣ್ಯ, ಮಿಂಚು, ಶಿಲ್ಪಿ ಸಮರ ಸುಂದರಿ, ‘ತೋರಣ’ ಮುಂತಾದ ಕಥಾ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಹಾಗೆಯೇ ಆದದ್ದೇನು, ಆಹುತಿ, ಜೀವದಾಸೆಯ ಸಮಸ್ಯೆ, ಧರ್ಮ ಸಂಕಟ, ರಾಜ ನರ್ತಕಿ, ಸೂತಪುತ್ರ ಕರ್ಣ, ಜಗಜ್ಯೋತಿ ಬಸವೇಶ್ವರ, ರಾಷ್ಟ್ರ ಧುರೀಣ ಬೆಂಗಳೂರು ಕೆಂಪೇಗೌಡ, ‘ಮಾಗಡಿ ಕೆಂಪೇಗೌಡ’ ಮುಂತಾದ ನಾಟಕಗಳನ್ನು ನೀಡಿದ್ದಾರೆ.
“ಪಂಡಿತ್ ಸ್ವಾಮಿಗೌಡರು ಉಲ್ಲೇಖಿಸುವಂತೆ..............
“ನಟಸಾರ್ವಭೌಮ: ಶೃಂಗಾರ ತುಚ್ಛ-ಉಚ್ಛ ಸ್ವರೂಪದ ಎರಡು ಮುಖಗಳು ನಟಸಾರ್ವಭೌಮ ಕಾದಂಬರಿಯಲ್ಲಿ ಚಿತ್ರಿಸಲ್ಪಟ್ಟಿವೆ. ‘ಸಾಹಿತ್ಯದಲ್ಲಿ ಸತ್ಯಪ್ರೀಯತೆ ಇರಬೇಕೆಂದು ವಾದಿಸುವವರಿಗೆ ಈ ಬಗೆಯ ನಿರೂಪಣೆ ಅಹಿತವಾಗಲಾರದು ಎಂದಿದ್ದಾರೆ ಅ.ನ.ಕೃ
ಮಿಯಾಮಲ್ಹಾರ್: ಈ ಕಾದಂಬರಿಯಲ್ಲಿ ಒಬ್ಬ ನಾದೋಪಾಸಕನ ಜೀವನದ ಏರುಪೇರುಗಳು ಮನಸ್ಸಿನ ಹೊಯ್ದಾಟವನ್ನು ಅ.ನ.ಕೃರವರು ಚಿತ್ರಿಸಿದ್ದಾರೆ.
ಹುಲಿಯುಗುರು: ಮನೋವೈಜ್ಞಾನಿಕ ಕಾದಂಬರಿ ಶ್ರೇಣಿಯಲ್ಲಿ ಗೌರಿಶಂಕರರಂತೆ ನಿಲ್ಲುವ ಕೃತಿ ’ಹುಲಿಯುಗುರು’. ಜೀವನ ಸುಲಭವಾಗಲು ವ್ಯಕ್ತಿಯ ಮನಸ್ಸು ಪರಿಶುದ್ದವೂ, ವಿಶಾಲವೂ ಆಗಬೇಕಂಬ ತತ್ವದ ಸಮರ್ಥ ಚಿತ್ತಾಕರ್ಷಕ ಪ್ರತಿಪಾದನೆ ಈ ಕಾದಂಬರಿಯ ಜೀವನಾಡಿ.
ಅಮರ್ ಆಗಷ್ಟ್: ಈ ಕಾದಂಬರಿಯಲ್ಲಿ ಒಂದು ಕುಗ್ರಾಮವನ್ನು ಕೇಂದ್ರವಾಗಿಟ್ಟುಕೊಂಡು ಆಗಷ್ಟ್ ಕ್ರಾಂತೀಯ ಕಥೆಯನ್ನು ಹೆಣೆದಿದ್ದಾರೆ.
ಅರಳು ಮರಳು: ಇದೊಂದು ಸಾಮಾಜಿಕ ಕಾದಂಬರಿ,ಇದರಲ್ಲಿ ಕಾದಂಬರಿಯ ಕಲೆಯ ವ್ಯಕ್ತಿಯ ವಿವರಣೆ ಇದೆ. ಅನಕೃರವರ ಕಾದಂಬರಿ ಕಲೆ, ಕಾದಂಬರಿ ‘ರಸ ಜ್ಞಾನಂ ಆಹಾರೋಪಿನ ರೋಚತೆ’ ಎಂಬ ಮಾತನ್ನು ನಿತ್ಯ ಸತ್ಯಗೊಳಿಸಿದೆ.
‘ಕನ್ನಡ ಕುಲರಸಿಕರು’: 1951ರಲ್ಲಿ ಬಂದ ಈ ಕಾದಂಬರಿಯಲ್ಲಿ ಮೂವತ್ತೆರಡು ಜನ ಕನ್ನಡ ಸಾಹಿತಿಗಳ ಜೀವನ ಪರಿಚಯವಿದೆ. ಇದನ್ನು ಕನ್ನಡ ಸಾಹಿತಿಗಳ ಹಿರಿಯ ಆಚಾರ್ಯರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರಿಗೆ ವಿಶ್ವಾಸ ಪೂರ್ವಕವಾಗಿ ಅರ್ಪಿಸಿದ್ದಾರೆ.”
ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ, ಸಂಸ್ಕøತಿಯ ವಿಶ್ವರೂಪ, ಸಾಹಿತ್ಯ ಮತ್ತು ಕಾಮ ಪ್ರಚೋದನೆ, ಸಾಹಿತ್ಯ ಸಮಾರಾಧನೆ ಮುಂತಾದ ವಿಮರ್ಶಾ ಕೃತಿಗಳನ್ನು ಅ.ನ.ಕೃ ನಮ್ಮ ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.
‘ಪೊರಕೆ’ ಎಂಬುದು ಇವರ ಹರಟೆ ಸಂಕಲನವಾಗಿದೆ. ಅಲ್ಲಮ ಪ್ರಭು, ಕನ್ನಡ ಕುಲರಸಿಕರು, ‘ಕೈಲಾಸಂ’ ಮುಂತಾದ ಜೀವನ ಚರಿತ್ರೆಗಳನ್ನು ನೀಡಿದ್ದಾರೆ.
‘ಬರಹಗಾರನ ಬದುಕು’, ‘ನನ್ನನ್ನು ನಾನೇ ಕಂಡೆ’ ಇವೆರಡು ಆತ್ಮ ಚರಿತ್ರೆಗಳು. 1970ರಲ್ಲಿ ಗೋವಾ ಕನ್ನಡ ಸಂಘದವರು ಇವರಿಗೆ ‘ರಸ ಚೇತನ’ ಎಂಬ ಗೌರವ ಗ್ರಂಥ ಅರ್ಪಿಸಿದೆ. 1970 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
1960ರಲ್ಲಿ ಮಣಿಪಾಲದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಅ.ನ.ಕೃ ರವರು 190ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದಾರೆ. ಕಾದಂಬರಿ ಎಂದರೆ ಅನಕೃ ಎನ್ನುವುದನ್ನು ಪ್ರಸಿದ್ಧವಾದ ಧೀಮಂತ ವ್ಯಕ್ತಿ ಅವರು.
ಅನಕೃ ಪ್ರತಿಷ್ಠಾನ ಕಳೆದ ಒಂದುವರೆ ದಶಕದಿಂದಲೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದೆ. ಪ್ರತಿ ವರ್ಷ ಒಂದು ಲಕ್ಷ ರೂಪಾಯಿ ಮೌಲ್ಯದ ಅನಕೃ ಪ್ರಶಸ್ತಿ ನೀಡುತ್ತಿದೆ.
1971 ರಲ್ಲಿ ನಮ್ಮನ್ನಗಲಿದ ಈ ಮಹಾ ಚೇತನದ ಸ್ಥೂಲ ದೇಹ ನಮ್ಮೊಂದಿಗಿಲ್ಲದಿದ್ದರೂ ಅವರು ಅಗಾಧವಾಗಿ ಬಿಟ್ಟುಹೋದ ಸೂಕ್ಷ ಸಾಹಿತ್ಯಿಕ ದೇಹ ಸದಾ ನಮ್ಮೊಂದಿಗೆ ಸಂವಾದಿಸುತ್ತಲೇಯಿರುತ್ತದೆ.
ಬಹು ಭಾಷಾ ಸಾಹಿತ್ಯ ವಲ್ಲಭ – ರಾಜಾರಾಯರು
ಕನ್ನಡಿಗರು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ಅದರಾಚೆಗೂ ತಮ್ಮ ಅಂತರ್ಶಕ್ತಿಯನ್ನು ಹರಿಯ ಬಿಟ್ಟವರು. ಪ್ರಾಜ್ಞತೆಯ ದೃಷ್ಠಿ ನೆಟ್ಟು ಜಗ ಬೆಳಗಿದವರು. ಸಾಹಿತ್ಯ, ಕಲೆ, ವಾಸ್ತುಶಿಲ್ಪಕತೆಗೆ ಕರುನಾಡು ಇಡೀ ವಿಶ್ವವನ್ನೇ ತನ್ನೆಡೆಗೆ ಸೆಳೆದಿದ್ದು ನಮಗೆಲ್ಲರಿಗೂ ಗೊತ್ತೇಯಿದೆ. ಅಂತಹ ಒಂದು ಅಭೂತಪೂರ್ವ ಸಾಧನೆ ಮಾಡಿ ಜಾಗತಿಕ ಸಾಹಿತ್ಯದ ‘ಕಾದಂಬರಿ’ (ನಾವೆಲ್) ಪ್ರಕಾರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೀರ್ತಿ ರಾಜಾರಾಯರಿಗೆ ಸಲ್ಲುತ್ತದೆ. ಇಂಗ್ಲೀಷ್ ಮತ್ತು ಫ್ರೆಂಚ್ ಸಾಹಿತ್ಯದಲ್ಲಿ ಬಿರುಗಾಳಿ ಎಬ್ಬಿಸಿ ಅಲ್ಲಿನ ಓದುಗರ ಮನದಲ್ಲಿ ನೆಲೆನಿಂತ ಇವರು ಕನ್ನಡಿಗರೆನ್ನುವುದರ ಜೊತೆಗೆ ಹಾಸನದವರೆಂಬ ವಿಷಯ ನಮ್ಮನ್ನೆಲ್ಲಾ ಬಿಗುಮಾನದಲ್ಲಿ ತೇಲಿಸುತ್ತದೆ.
1909 ನವಂಬರ್ 21 ರಂದು ಹಾಸನದಲ್ಲಿ ಜನಿಸಿದ ಇವರು ಹಾಸನದ ರಾಜಾರಾವ್ ಎಂದೇ ಪ್ರಸಿದ್ದರು. ಇವರು ಜನಿಸಿದ ದಿನದಂದೇ ಹಾಸನಕ್ಕೆ ಮೈಸೂರಿನ ಮಹಾರಾಜರು ಬೇಟಿಯಿತ್ತದ್ದರಿಂದ ಇವರಿಗೆ ‘ರಾಜಾ’ ಎಂಬುದು ಸೇರ್ಪಡೆಯಾಯಿತಂತೆ. ಬಾಲ್ಯದಲ್ಲಿಯೇ ಇವರ ಮಾತಾ ಪಿತೃಗಳು ರಾಮಾಯಾಣ, ಮಹಾಭಾರತ, ಪುರಾಣ ಪುಣ್ಯಕಥೆಗಳನ್ನು ಹೇಳುತ್ತಾ ಅದರಲ್ಲಿ ಭಾರತೀಯ ಸಂಸ್ಕøತಿ ಹೇಗೆ ಮೇಳೈಸಿಕೊಂಡಿದೆ ಎಂಬುದನ್ನು ತಿಳಿಸುತ್ತಾ ಆದರ್ಶ, ಶ್ರದ್ಧೆ, ಹೃದಯ ವೈಶಾಲ್ಯತೆಗಳನ್ನು ಭಿತ್ತಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ವಯೋಮಾನದಲ್ಲಿಯೇ ರಾಜಾರಾಯರ ಮನಸ್ಸಿನ ಮೇಲೆ ಭಾರತೀಯ ಸಾಂಸ್ಕøತಿಕ ಪರಂಪರೆ ಬಹಳವೇ ಪ್ರಭಾವ ಬೀರಿದ್ದರಿಂದ ಮುಂದೆ ಅವರ ಸಾಹಿತ್ಯ ರಚನೆಯಲ್ಲಿ ಸಹಜವಾಗಿಯೇ ಪ್ರಜ್ವಲಿತಗೊಂಡವು. 1938 ರಲ್ಲಿ ಬಂದ ಇವರ ‘ಕಾಂತಾಪುರ’ ಎಂಬ ಕಾದಂಬರಿಯು ಇವರಿಗೆ ಜಾಗತಿಕ ಮನ್ನಣೆ ತಂದು ಕೊಟ್ಟಿತೆನ್ನಬಹುದು. ಭಾರತದ ಆರ್ಷೇಯ ಸಂಸ್ಕøತಿ ಪರಂಪರೆಗಳಲ್ಲಿ ಅಗಾಧವಾದ ಶ್ರದ್ಧೆ, ನಂಬಿಕೆಯಿಟ್ಟುಕೊಂಡಿದ್ದ ಇವರ ಬರವಣಿಗೆಯ ಬದುಕನ್ನು ಒಳಹೊಕ್ಕು ನೋಡುವ ಶೈಲಿ ಅಮೋಘವಾದುದು. ಅವರ ಸಾಹಿತ್ಯದಲ್ಲಿ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾ ಜಾಗತಿಕವಾಗಿ ಬೆಳಗಿಸಿದವರು. ದೀನ –ದಲಿತರಲ್ಲಿ ತಾವು ಕಂಡಂತಹ ಅತ್ಯಂತ ಉತ್ಕøಷ್ಟ ಮಾನವೀಯ ಅಂಶಗಳನ್ನು, ಶ್ರದ್ಧಾಗುಣಗಳನ್ನು ತಮ್ಮ ಬರವಣಿಗೆಯಲ್ಲಿ ಪರಮೋಚ್ಛ ಸ್ಥಾನ ನೀಡಿ ಆದರ್ಶ ಮಯವಾಗಿಸಿಕೊಂಡಿದ್ದಾರೆ.
ಇಂಗ್ಲೀಷ್ ಮತ್ತು ಇತಿಹಾಸಗಳಲ್ಲಿ ವಿಶೇಷ ಆಸಕ್ತಿಯಿದ್ದ ಇವರು ಇವುಗಳಲ್ಲಿಯೇ ಸ್ನಾತಕೋತ್ತರ ಉನ್ನತ ಶಿಕ್ಷಣ ಪಡೆದು ಸಂಶೋಧನೆಗಾಗಿ ಫ್ರಾನ್ಸ್ಗೆ ತೆರಳುತ್ತಾರೆ. ಅಲ್ಲಿ ವಿದ್ಯಾಭ್ಯಾಸಕ್ಕಿಂತ ಸಾಹಿತ್ಯ ಕ್ಷೇತ್ರವೇ ಇವರನ್ನು ಹೆಚ್ಚು ಆಕರ್ಷಣೆ ಮಾಡುತ್ತದೆ. ಇದೇ ಸಂದರ್ಭದಲ್ಲಿ 1931 ರಲ್ಲಿ ಕೆಮಿಲ್ಲೆ ಮೌಲಿ ಎಂಬ ಫ್ರೆಂಚ್ ಮಹಿಳೆಯನ್ನು ವಿವಾಹವಾದರು. ರಾಜಾರಾಯರ ಜೀವನದ ಬಹುಭಾಗ ಪಾಶ್ಚಾತ್ಯ ದೇಶಗಳಲ್ಲಿಯೇ ಕಳೆದು ಹೋಗಿದೆ. ಕನ್ನಡ, ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಪಾರಂಗತರಾದ ರಾಜಾರಾಯರು ಸಾಹಿತ್ಯ ರಚನೆಗೆ ಆಯ್ದುಕೊಂಡದ್ದು ಇಂಗ್ಲೀಷ್ ಮತ್ತು ಫ್ರೆಂಚನ್ನು ಮಾತ್ರ! ಆದರೂ ಇವರ ಸಾಹಿತ್ಯ ಚೇತನ ನಿರಂತರವಾಗಿ ಸ್ಫೂರ್ತಿ ಪಡೆದದ್ದು ಭಾರತೀಯ ಪರಂಪರೆಯಿಂದ. ಭಾರತೀಯ ಪರಂಪರೆಯ ಸಂಪ್ರದಾಯದ ಗರ್ಭದಲ್ಲಿ ಶಾಶ್ವತ ಮಾನವೀಯ ಮೌಲ್ಯಗಳು ಅಡಗಿವೆ ಎಂಬುದು ರಾಜಾರಾಯರ ನಿಲುವು. ಈ ನಿಲುವಿನ ಮುಂಬೆಳಕಲ್ಲಿ ತಮ್ಮ ಸಾಹಿತ್ಯ ತೇರನ್ನು ಎಳೆತಂದರು. ಬರವಣಿಗೆಯನ್ನೇ ಜೀವಿತದ ಅತ್ಯಮೂಲ್ಯ ಕಾಯಕವೆಂದು ಪರಿಗಣಿಸಿದ್ದ ಇವರಿಗೆ ಭಾರತೀಯ ಮೂಲ ಪರಂಪರೆಗಳಲ್ಲೊಂದಾದ ವೇದಾಂತ ತತ್ವಶಾಸ್ತ್ರಗಳೇ ಉಸಿರಾಗಿ ಬೆಸೆದುಕೊಂಡಿದ್ದವೆಂಬುದು ಗಮನಾರ್ಹ. 1965 ರಲ್ಲಿ ಆಸ್ಟಿನ್ನ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿಯೇ ಜೋನ್ಸ್ ಎಂಬುವವರನ್ನು ವಿವಾಹವಾಗುತ್ತಾರೆ. 1960 ರಲ್ಲಿ ಬಂದ ‘ದಿಕ್ಯಾಟ್ ಅಂಡ್ ಷೇಕ್ಸ್ಪಿಯರ್’ ಹಾಗೂ 1965ರಲ್ಲಿ ಬಂದ ‘ಎ ಟೇಲ್ ಆಫ್ ಇಂಡಿಯಾ’ ಎಂಬ ಕಾದಂಬರಿಗಳು ದಾಖಲೆಯ ಮಾರಾಟವಾದವು. ಅಂತೆಯೇ ಉನ್ನತ ಕೀರ್ತಿಯನ್ನು ತಂದುಕೊಟ್ಟವು. ಇಂಗ್ಲೀಷ್ ಸಾಹಿತ್ಯದಲ್ಲಿ ಅದ್ವಿತೀಯ ಸಾಧನೆಗೈದ ಬೆರಳೆಣಿಕೆಯ ಭಾರತೀಯ ಬರಹಗಾರರಲ್ಲಿ ಹಾಸನದ ರಾಜಾರಾಯರು ಒಬ್ಬರೆಂಬುದು ಹೆಮ್ಮೆಯ ಸಂಗತಿ. ಕೇವಲ ಕಾದಂಬರಿಗೆ ಮಾತ್ರ ಸೀಮಿತವಾಗದ ರಾಜಾರಾಯರು ಭಾರತ ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ಅಂದರೆ 1947ರಲ್ಲಿಯೇ ದಿ ಕೌ ಆಫ್ ದಿ ಬ್ಯಾರಿಕೇಡ್ ಅಂಡ್ ಅದರ್ ಸ್ಟೋರಿಸ್ ಎಂಬ ಸಣ್ಣ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಜಾಗತಿಕ ಪ್ರತಿಷ್ಠಿತ ಇಂಗ್ಲೀಷ್ ಪತ್ರಿಕೆಗಳಲ್ಲಿ ಇವರ ಬರಹ ಹಾಗೂ ಕಥೆಗಳು ಪ್ರಕಟಕೊಂಡಿವೆ. 1948ರಲ್ಲಿ ಖ್ಯಾತ ಬರಹಗಾರರಾದ ಇಕ್ಬಾಲ್ ಸಿಂಗ್ರೊಡನೆ ‘ವಿದರ್ ಇಂಡಿಯಾ’ ಎಂಬ ಗ್ರಂಥವನ್ನು ಪ್ರಕಟಿಸಿದ ಕೀರ್ತಿ ರಾಜಾರಾಯರದು.
ರಾಜಾರಾಯರಿಗೆ ಜಾಗತಿಕ ಮಟ್ಟದಲ್ಲಿ ಉತ್ಕøಷ್ಟ ಮನ್ನಣೆ ತಂದುಕೊಟ್ಟದ್ದು ಅವರ ಕಾದಂಬರಿಗಳು. ಅದರಲ್ಲೂ ‘ಕಾಂತಾಪುರ’ ಎಂದರೆ ಅತಿಶಯೋಕ್ತಿಯಾಗಲಾರದು. ಈ ಕಾದಂಬರಿಯು ಜನ್ಮ ತಾಳಲು ಪರೋಕ್ಷವಾಗಿ ಗಾಂಧಿ ಕಾರಣವೆನ್ನಬಹುದು. ಕಾಂತಾಪುರ ಎಂಬುದು ಒಂದು ಚಿಕ್ಕ ಹಳ್ಳಿ. ಗಾಂಧಿಯ ಅಹಿಂಸಾತ್ಮಕ ಚಳುವಳಿ ಹಾಗೂ ಸರ್ವ ಸಮಾನತೆಯ ಘೋಷಣಾ ವಾಕ್ಯವು ಬಹುಶಃ ಈ ಹಳ್ಳಿಯನ್ನು ಶತಮಾನದ ನಿದ್ರೆಯಿಂದ ಎಚ್ಚರಿಸಿ ಸಾಮಾಜಿಕ ಶೋಷಣೆಯಿಂದ ಮೈಕೊಡವಿ ಏಳುವಂತೆ ಮಾಡಿತೆನ್ನಬಹುದು. ಗಾಂಧೀ ತಾತ್ವಿಕತೆಯ ಪ್ರಭಾವದಿಂದ ಇಡೀ ಹಳ್ಳಿಯೇ ಒಗ್ಗಟ್ಟಿನ ರೂಪ ತಾಳುತ್ತದೆ. ಪ್ರಸ್ತುತ ಕಾದಂಬರಿಯಲ್ಲಿ ಮೂರ್ತಿ, ಪಟೇಲ ರಂಗೇಗೌಡ, ಭಟ್ಟ ಮೊದಲಾದ ಪಾತ್ರಗಳು ತಮ್ಮದೇ ನಿಟ್ಟಿನಲ್ಲಿ ಗಮನ ಸೆಳೆಯುತ್ತವೆ. ಇಲ್ಲಿ ಬಹುಮುಖ್ಯವಾಗಿ ನಾವು ಗಮನಿಸಬೇಕಾದುದ್ದು ಹಾಸನದ ಗ್ರಾಮ್ಯ ಸೊಗಡು. ಇಲ್ಲಿನ ಸಂಸ್ಕøತಿ, ಸಂಪ್ರದಾಯ, ಹೋರಾಟಗಳಿಗೆ ಜಾಗತಿಕ ಮೌಲ್ಯ ತಂದು ಕೊಟ್ಟ ಕೀರ್ತಿ ರಾಜಾರಾಯರಿಗೆ ಸಲ್ಲುತ್ತದೆ. ಕಾಂತಾಪುರದಲ್ಲಿ ಬರುವ ಪ್ರಮುಖ ಆದರ್ಶಮಯವಾದ ಪಾತ್ರ ಮೂರ್ತಿ. ಅದರಲ್ಲಿ ಲೇಖಕರೇ ತನ್ಮಯರಾಗಿರುವುದನ್ನು ಕಾಣಬಹುದಾಗಿದೆ. ಜೊತೆ ಜೊತೆಗೆ ಪಾತ್ರಕ್ಕೂ ಮತ್ತು ಪರಿಸರದ ನಡುವಿನ ಕಂದರವನ್ನು ಗುರುತಿಸಿರುವ ಲೇಖಕರ ಪ್ರಾಮಾಣಿಕತೆಗೆ ಒಂದು ಸಲಾಂ. ಪಾತ್ರಗಳ ಅಂತರಂಗಿಕ ವಿಶ್ಲೇಷಣೆ ಸಂದರ್ಭದಲ್ಲಿ ಲೇಖಕರು ತಮ್ಮ ಭಾವನ ತುಮುಲಗಳನ್ನು ಹೊರಗೆಡವಿದ ರೀತಿ ಅಮೋಘವಾಗಿದೆ. ಇಲ್ಲಿ ನಿರ್ವಿಕಾರವಾಗಿ ಪಾತ್ರಗಳನ್ನು ಕಟ್ಟಿ ಕೊಟ್ಟಿದ್ದಾರೆ. ಮಾನವೀಯ ನೆಲೆಗಳನ್ನು ಎಲ್ಲೆಲ್ಲಿಯೂ ಒಡಮೂಡಿಸಿದ್ದಾರೆ.
‘ಕಾಂತಾಪುರ’ ಕಾದಂಬರಿಯು ಸರಳವಾಗಿ ಕಂಡರೂ ಓದುಗರನ್ನು ಆತ್ಯಾಕರ್ಷಕವಾಗಿ ಸೆಳೆಯುತ್ತಾ ಕೌತುಕತೆಯನ್ನು ಕಾಯ್ದುಕೊಂಡು ಸಾಗುತ್ತದೆ. ಇಲ್ಲಿ ಕಥೆಗಿಂತಲೂ ರಾಜಾರಾಯರ ಬೌದ್ಧಿಕ ಶಕ್ತಿಯ ಚಮತ್ಕಾರ ಅನಾವರಣಗೊಂಡಿರುವುದು ವಿಶೇಷ. ಭಾರತೀಯ ಪರಂಪರೆಯ ಧೀ ಶಕ್ತಿಯಂತೆ ತೋರುವ ಈ ಕಾದಂಬರಿಯು ಸಂವೇದನಾ ಹಾಗೂ ಸೃಜನಾತ್ಮಾಕ ಬರವಣಿಗೆಯಿಂದ ಕೂಡ್ಡಿದ್ದು, ಜಗತ್ತಿಗೆ ಭಿನ್ನವಾದ ಸಂಸ್ಕøತಿಯನ್ನು ಪರಿಚಯಿಸುವಲ್ಲಿ ಸಫಲವಾಗಿದೆ. ಹಾಗೇ ನೋಡಿದರೆ ಇಂತಹ ಸಾಧನೆಗೈದ ಮೊದಲ ಭಾರತೀಯ ರಾಜಾರಾಯರೆನ್ನಬಹುದು.
ಕನ್ನಡ ನುಡಿಯ ಗತ್ತು, ಗಮ್ಮತ್ತು, ಜಾಯಮಾನ, ಏರಿಳಿತಗಳನ್ನು, ತಲ್ಲಣಗಳನ್ನು ಆಶ್ಚರ್ಯವೆನಿಸುವಷ್ಟು ಸಹಜವಾಗಿ ಆಂಗ್ಲ ಭಾಷೆಯಲ್ಲಿ ಪಡಿ ಮೂಡಿಸಿದ್ದಾರೆ. ಆದ್ದರಿಂದಲೇ ಪ್ರಸಿದ್ಧ ಇಂಗ್ಲೀಷ್ ಲೇಖಕರಾದ ಇ.ಎಂ. ಫಾರಸ್ಟರ್ ‘ಕಾಂತಾಪುರ’ ಕಾದಂಬರಿ ಓದಿ ಒಂದು ಕಡೆ ಹೀಗೆ ಹೇಳಿದ್ದಾರೆ. “ಕಾಂತಾಪುರ ಒಂದು ಉತ್ತಮ ಕಾದಂಬರಿ, ಭಾರತೀಯ ಲೇಖಕನೊಬ್ಬನಿಂದ ಇಂಗ್ಲೀಷ್ ಭಾಷೆಯಲ್ಲಿ ಇದುವರೆವಿಗೂ ಇಂಥ ಕೃತಿ ಬಂದೇ ಇಲ್ಲ”.
ದಿ ಸರ್ಪೆಂಟ್ ಅಂಡ್ ದಿ ರೋಪ್ ರಾಜಾರಾಯರ ಕಾಂತಾಪುರದ ನಂತರ ಬಂದ ಮಹತ್ವದ ಕಾದಂಬರಿಯೆನ್ನಬಹುದು. ಕಾಂತಾಪುರದಲ್ಲಿನ ಪ್ರಯೋಗಶೀಲತೆ, ವಿಚಾರ ಹೂರಣ, ಒಲವು ನಿಲುವುಗಳನ್ನು ಈ ಕಾದಂಬರಿಯಲ್ಲಿ ಹೆಚ್ಚಿನ ವೈಶಾಲ್ಯತೆಯನ್ನು ಪಡೆದುಕೊಂಡಿವೆ ಎನ್ನಬಹುದು. ಈ ಕಾದಂಬರಿಯು ಭಾರತ ಹಾಗೂ ಫ್ರೆಂಚ್ ಸಂಸ್ಕøತಿಯನ್ನು ಮೇಳೈಸಿದೆ. ಭಾರತೀಯನಾದ ರಾಮಸ್ವಾಮಿ ಹಾಗೂ ಫ್ರೆಂಚ್ ಮಹಿಳೆಯಾದ ಮ್ಯಾಡಲೀನರ ನಡುವಣ ಕಥಾ ಹಂದರವನ್ನೊಳಗೊಂಡು ಈ ಕಾದಂಬರಿಯು ಪೂರ್ವ ಪಶ್ಚಿಮಗಳ ಮಿಲನವೆನ್ನುವಂತೆ ಮೂಡಿಬಂದಿದೆ. ಹೀಗೆ ರಾಜಾರಾಯರು ಭಾರತೀಯ ಸಂಸ್ಕøತಿ ಪರಂಪರೆಯ ಜೊತೆ ಜೊತೆಗೆ ಪಾಶ್ಚಾತ್ಯ ಸಂಸ್ಕøತಿಯನ್ನು ಮಿಳಿತಗೊಳಿಸಿ ಪ್ರಾಂಜಲತೆ ಕಂಡವರು.
ರಾಜಾರಾಯರನ್ನು ಕುರಿತಂತೆ, ಇವರ ಸಾಹಿತ್ಯ ಕುರಿತಂತೆ 1972 ರಲ್ಲಿ ಸಿ.ಡಿ. ನರಸಿಂಹಯ್ಯನವರು “ರಾಜಾರಾವ್ ಎ ಕ್ರಿಟಿಕಲ್ ಸ್ಟಡಿ ಆಫ್ ಹಿಸ್ ವಕ್ರ್ಸ” ಎಂಬ ಪುಸ್ತಕದಲ್ಲಿ ಅದ್ಭುತವಾಗಿ ವಿಮರ್ಶಿಸಿ, ವಿಶ್ಲೇಷಿಸಿದ್ದಾರೆ. ಹಾಗೆಯೇ ಅದೇ ವರ್ಷದಲ್ಲಿ ಬಂದ ಎಂ.ಎಸ್. ನಾಯಕ್ರವರ ‘ರಾಜಾರಾವ್’ ಎಂಬ ಪುಸ್ತಕದಲ್ಲಿ ರಾಜಾರಾಯರ ಧೀಮಂತ ವ್ಯಕ್ತಿತ್ವವನ್ನು ಕಾಣುತ್ತೇವೆ.
1964ರಲ್ಲಿ ರಾಜಾರಾಯರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1969ರಲ್ಲಿ ಭಾರತ ಸರ್ಕಾರ ಇವರ ಸೇವೇಗಾಗಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಹರಿಜನಾಭ್ಯುದಯ ಚೇತನ ಡಿ. ಗೋವಿಂದಾಸ್
ದಲಿತ ಸಾಹಿತ್ಯ ಇಂದು ಭಾರತದ ಹಲವಾರು ಭಾಷೆಗಳಲ್ಲಿ ಪ್ರಖ್ಯಾತಿ ಪಡೆದಿದೆ. ಅವುಗಳಲ್ಲಿ ಕನ್ನಡ ದಲಿತ ಸಾಹಿತ್ಯ ಬಹಳ ಮುಖ್ಯವಾದುದು. ಕನ್ನಡ ದಲಿತ ಸಾಹಿತ್ಯದ ಅಲೆ ಎದ್ದಿದ್ದು ಕಾವ್ಯಗಳ ಮೂಲಕ ಎನ್ನಬಹುದು. ಅವ್ಯಾಹತವಾಗಿ ಹರಿದು ಬಂದ ಕನ್ನಡ ಕಾವ್ಯ ಪರಂಪರೆಯಲ್ಲಿ ಪರಿವರ್ತನೆಯ ಅಲೆಯಾಗಿ ಕಾಣಿಸಿಕೊಂಡಿದ್ದೇ ದಲಿತ ಸಾಹಿತ್ಯ. ಅದರಲ್ಲೂ 20 ನೆಯ ಶತಮಾನದ 60 ರಿಂದ 70 ರ ದಶಕಗಳಲ್ಲಿ ಪರಿಸ್ಥಿತಿಯ ಒತ್ತಡದ ಕಾರಣದಿಂದ ಉದಯಿಸಿದ ಈ ಸಾಹಿತ್ಯ ಜನಪರ ದೃಷ್ಟಿಕೋನವನ್ನು ಹೊಂದಿದೆ. ಬದುಕಿನ ಶೋಧನೆಗೆ ನಿರಂತರವಾಗಿ ಹಂಬಲಿಸುವ, ಯಾವಾಗಲೂ ಶೋಷಿತರ ಪರ ನಿಲ್ಲುವ ದಲಿತ ಸಾಹಿತ್ಯದ ಅಧ್ಯಯನ ಸಾಂಸ್ಕøತಿಕವಾಗಿ ಮಹತ್ತರವಾದುದೆಂದರೆ ತಪ್ಪಾಗದಿರದು.
ಇದು ಇಂದು ನಿನ್ನೆಯದಲ್ಲ, ಕನ್ನಡ ಸಾಹಿತ್ಯ ಉದಿಸಿದಂದಿನಿಂದ ಅಲ್ಲಲ್ಲಿ ದಲಿತ ಸಾಹಿತ್ಯ ಮೊಳಕೆಯೊಡೆಯುತ್ತಲೇ ಬಂದರೂ ಪಟ್ಟಬದ್ದ ಹಿತಾಸಕ್ತಿಗಳಿಂದ ದಮನಕ್ಕೊಳಗಾಗಿ ಮುಖ್ಯವಾಹಿನಿಗೆ ಬರದೇ ಹೋಯಿತು. ಆದರೆ ಕ್ರಾಂತಿರೂಪ ಪಡೆದುಕೊಂಡದ್ದು ಹನ್ನೇರಡನೆಯ ಶತಮಾನದ ಬಸವಾದಿ ಶರಣರ ಜಾತ್ಯಾತೀತ ಭಾವನೆಗಳಿಂದ ಹೊಮ್ಮಿಬಂದ ವಚನ ಸಾಹಿತ್ಯದಿಂದ ಎನ್ನಬಹುದು.
ಇವುಗಳ ಹೊರತಾಗಿಯೂ 20 ನೆಯ ಶತಮಾನದ ಆದಿಯಲ್ಲಿ ಗೊರೊರು ಸಮಕಾಲೀನರಾಗದ್ದ ಗೋವಿಂದ ದಾಸ್ ಆಧುನಿಕ ಕನ್ನಡ ದಲಿತ ಸಾಹಿತ್ಯದ ಮೊದಲಿಗರಾಗಿ ನಮ್ಮೆದುರಿಗೆ ನಿಲ್ಲುತ್ತಾರೆ. ಕಾವ್ಯ ಹಾಗೂ ಅತ್ಯುತ್ತಮ ನಾಟಕಕಾರರಾಗಿದ್ದ ಇವರು ಅಪ್ಪಟ ಗಾಂಧಿವಾದಿ. ದೇಸೀ ಸೊಗಡಿನ ಗರ್ಭದಲ್ಲಿ ಉದಿಸಿದ ಇವರ ಸಾಹಿತ್ಯ ಶೋಷಿತರ ಧನಿಯಾಗಿ ನೆಲೆನಿಂತಿತು ಎಂದರೆ ಅತಿಶಯೋಕ್ತಿಯಾಗಲಾರದು.
ಹೋರಾಟ ಮನೋಭಾವ ಮೈಗೂಡಿಸಿಕೊಂಡು ಸಾಹಿತ್ಯ ಕ್ರಾಂತಿ ಮಾಡಿದ ಈ ಮಹನ್ ಮೇದಾವಿ ಹಾಸನದವರೆಂಬುದೇ ನಮ್ಮೆಲ್ಲರರಿಗೆ ಹೆಮ್ಮೆ.
ಡಿ. ಗೋವಿಂದದಾಸ್ ಅವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ‘ದಮ್ಮನಿಂಗಳ’ ದ ಶ್ರೀ ದಾಸಪ್ಪ ಮತ್ತು ಶ್ರೀಮತಿ ಕೆಂಪÀಮ್ಮ ದಂಪತಿಗಳ ಮಗನಾಗಿ 1910 ರಲ್ಲಿ ಜನಿಸಿದರು. ಇವರ ತಂದೆ ಚರ್ಮದ ವ್ಯಾಪಾರಿಯಾಗಿದ್ದರು. ಇವರದು ದಾನ, ಧರ್ಮ, ನ್ಯಾಯ ನಿಷ್ಟೆಗೆ ಹೆಸರಾದ ಸಂಪ್ರದಾಯಸ್ಥ ಮನೆತನವಾಗಿತ್ತು, ಆದ್ದರಿಂದಲೇ ಬಾಲ ಗೋವಿಂದನ ವ್ಯಕ್ತಿತ್ತ್ವವೂ ಅಂತೆಯೇ ರೂಪುಗೊಂಡಿತು. ಮುಂದೆ ಇವರು ತಮ್ಮ ಸಾಹಿತ್ಯದಲ್ಲಿ ಬದುಕಿನ ವಸ್ತು ಸ್ಥಿತಿಯನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದರು.
ಸಾಹಿತ್ಯ ಸಮಾಜದ ಕೊರತೆಗಳಿಗೆ ಕನ್ನಡಿ ಹಿಡಿಯಬೇಕು, ಜನರ ಆಶೋತ್ತರಗÀಳಿಗೆ ಸಂ್ಪದಿಸಬೇಕೆಂಬುದೇ ಗೋವಿಂದದಾಸರ ಪ್ರಮುಖ ನಿಲುವಾಗಿತ್ತು. ಕವಿಯಾದವನಿಗೆ ಸಾಮಾಜಿಕ ಪ್ರಜ್ಞೆ ಇರಬೇಕು. ಅದು ಇದ್ದಾಗ ಮಾತ್ರ ಆತÀನೊಬ್ಬ ಪ್ರಜ್ಞಾವಂತನಾಗಿ ಬೆಳೆಯಲು ಸಾಧ್ಯ. ನೈಜ ಬದುಕಿನ ಕುರಿತು ಕಾಳಜಿ ಬಂದದ್ದೇ ದಲಿತ ಪಂಥದ ಸಂದರ್ಭದಲ್ಲಿ. ಆಧುನಿಕವಾಗಿ ಇಂಥದ್ದೊಂದು ಮಹತ್ಸಾಧನೆಗೆ ಅಡಿಯಿಟ್ಟವರೇ ಗೋವಿಂದದಾಸ್.
ಶತಶತಮಾನಗಳಿಂದ ಶೋಷಣೆಯ ಬೆನ್ನಲ್ಲೇ ಹುಟ್ಟಿ ಬದುಕಿ ಸಾಯುವ ದಲಿತರು ಬದುಕಿನ ಚಿತ್ರಣಗಳ ವಿರುದ್ದ ಹೋರಾಡಲು ಜನ್ಮತಾಳಿದ್ದು ದಲಿತ ಸಾಹಿತ್ಯ. ಇದು ಪ್ರಮುಖವಾಗಿ ಸಾಮಾಜಿಕ ನೋವುಗಳನ್ನೇ ತನ್ನ ಮೂಲಕ ವಸ್ತುವನ್ನಾಗಿಸಿಕೊಂಡು ಅನೈತಿಕ ಮೌಲ್ಯಗಳ ವಿರುದ್ದ ಪ್ರತಿಭಟನೆ ವ್ಯಕ್ತ ಪಡಿಸುತ್ತಲೇ ಬಂದಿದೆ.
ದೇಶದಲ್ಲಿ ಅಸಮಾನತೆ, ಶೋಷಣೆಗಳಂತಹ ಅವೈಚಾರಿಕ ನೆಲೆಗಳು ಭದ್ರವಾಗುತ್ತಿರುವ ಸಂದರ್ಭದಲ್ಲಿ ಗೋವಿಂದದಾಸರು ತಮ್ಮ ದಿಟ್ಟತನ ಸ್ಥಿತ ಪ್ರಜ್ಞೆಯಿಂದ ಸಮಾಜಪರ ಸಾಹಿತ್ಯದಲ್ಲಿ ತೊಡಗಿದರು. ಆದರೆ ಈ ಹಾಳು ಸಮಾಜ ಅವರನ್ನು ಮುಖ್ಯವಾಹಿನಿಗೆ ತರಲೇಯಿಲ್ಲ. ಇವರು ಕೂಡ ಸಾಹಿತ್ಯ ಶೋಷಣೆಗೆ ತುತ್ತಾದರು. ಬೇರ್ಯಾವುದೇ ಮೇಲ್ವರ್ಗದ ವ್ಯಕ್ತಿ ಗೋವಿಂದಾಸgಷ್ಟು ಸಾಹಿತ್ಯ ಕೈಂಕರ್ಯ ಮಾಡಿದ್ದಿದ್ದರೆ ಹೊಗಳಿ ಅಟ್ಟಕ್ಕೇರಿಸಿ ಕುಣಿದಾಡುತಿತ್ತೇನೋ?
ಗೋವಿಂದಾಸರು ಕೇವಲ ಕವಿ, ನಾಟಕಕಾರ, ಹೋರಾಟಗಾರರಷ್ಟೇ ಅಲ್ಲ, ಅವರೊಬ್ಬ ಸ್ವತಃ ಕೋಲಾಟದ ಕಲಾವಿದರು, ಸೊಗಸಾದ ಹಾಡುಗಾರರೂ ಆಗಿದ್ದರು. ದೇಸೀ ಸಂಸ್ಕøತಿಯ ಪ್ರತೀಕÀದÀಂತಿದ್ದ ಗೋವಿಂದಾಸರು ತನುವಿನ ಪ್ರತಿ ಅಣು ಅಣುವಿನಲ್ಲೂ ಜನಪದ ಸೊಗಡು ಆವರಿಸಿತ್ತು. ಮಾಸ್ತಿ ಹಾಗೂ ಬಿ.ಎಂ ಶ್ರೀ ರವರ ಸಲಹೆ, ಪ್ರೋತ್ಸಾಹಗಳಿಂದ 1937 ರಲ್ಲಿ ಹೊರಬಂದ ‘ಹರಿಜನಾಭ್ಯುದಯ’ ಕವನ ಸಂಕಲನ ಗೋವಿಂದದಾಸರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮೂಲ ನೆಲೆಯನ್ನು ಒದಗಿಸುತ್ತದೆ
ಹರಿಜನರ ಶೋಷಣೆ ದಮನಕ್ಕೊಳಗಾದ ಪ್ರಸಂಗಗಳು, ಅಭ್ಯುದಯದ ಮಾರ್ಗಗಳನ್ನು ಸೊಗಸಾಗಿ ಬಿಂಬಿಸಿದ್ದಾರೆ. ಈ ಕವನ ಸಂಕಲನದಲ್ಲಿನ ಕವಿತೆಗಳನ್ನು ಪ್ರಮುಖವಾಗಿ ಏಳು ರೀತಿಯಾಗಿ ವರ್ಗೀಕರಿಸಬಹುದು. ಜಾತಿಯತೆ ಅಸ್ಪøಶ್ಯತೆಗೆ ಸಂಬಂಧಿಸಿದ ಕವಿತೆಗಳು, ನಿಸರ್ಗ ಪರಿಸರಕ್ಕೆ ಸಂಬಂಧಿಸಿದ ಕವಿತೆಗಳು, ವೈಚಾರಿಕತೆಗೆ ಸಂಬಂಧಿಸಿದ ಕವಿತೆಗಳು, ವ್ಯಕ್ತಿ ಚಿತ್ರಣಕ್ಕೆ ಸಂಬಂಧಿಸಿದ ಕವಿತೆಗಳು, ಪ್ರಾದೇಶಿಕ ಹಾಗೂ ಕೌಟುಂಬಿಕ ಹಿನ್ನೆಲೆಗೆ ಸಂಬಂಧಿಸಿದ ಕವಿತೆಗಳಿವೆ. ಇವರ ಸಮಗ್ರ ಕಾವ್ಯವನ್ನು ಅವಲೋಕಿಸಿದರೆ ಸಾಕು ಇವರ ವೈಶಾಲ್ಯ ಮನೋಧೋರಣೆ, ಸಮಾಜಪರ ಕಾಳಜಿಗಳು ಗೋಚರಿಸದೆ ಇರದು. ತಮ್ಮ ಹತ್ತನೆಯ ವಯಸ್ಸಿನಿಂದಲೇ ಕಾವ್ಯ ಬರೆಯಲು ಪ್ರಾರಂಭಿಸಿದ ಗೋಂವಿಂದದಾಸರು 100 ಕ್ಕೂ ಅಧಿಕ ಸಾತ್ತ್ವಿಕ ಚಿಂತನೆಗಳ ಗಟ್ಟಿತನದ ಕಾವ್ಯಗೊಂಚಲನ್ನು ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ.
ಎನ್ನುವ ಮೂಲಕ ಹರಿಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಶ್ರಮಿಸಿದ್ದಾರೆ. 1952 ರಲ್ಲಿ ರಚನೆಯಾದ ಇವರ ‘ನಡುನೀರ ಹಡಗು’ ಆರು ಅಂಕಗಳನ್ನೊಳಗೊಂಡ ನಾಟಕ ಅಂಬೇಡ್ಕರರ ವ್ಯಕ್ತಿತ್ತ್ವದ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಹರಿಜನರ ನ್ಯಾಯ, ತ್ಯಾಗ, ದೇಶಸೇವೆಯ ಪ್ರಾಮಾಣಿಕ ಪ್ರಯತ್ನವನ್ನು ಪರಿಚಯಿಸುತ್ತದೆ.
ಗೋವಿಂದ ದಾಸರು ‘ನನ್ನ ಆತ್ಮ್ಮಚರಿತೆ’ ಎಂಬುದರಲ್ಲಿ ಅವರ ಬಾಲ್ಯ, ಬೆಳವಣಿಗೆ ಸಾಗಿಬಂದ ರಹದಾರಿಯನ್ನು ಮನಮುಟ್ಟುವಂತೆ ಚಿತ್ರಸಿದ್ದಾರೆ. ಅಲ್ಲದೇ ‘ಕಲಿಯುಗ ಮನು –ಡಾ. ಅಂಬೇಡ್ಕರ್’ ಎಂಬ ಅಂಬೇಡ್ಕರ್ ಕುರಿತ ಜೀವನ ಚರಿತ್ರೆ ಬರೆದಿದ್ದಾರೆ.
ಸ್ವಾತಂತ್ರ ಪೂರ್ವದಲ್ಲಿಯೆ ದಮನಿತ ಸಾಹಿತ್ಯಕ್ಕೆ ಒಂದು ನೆಲೆ ತಂದುಕೊಟ್ಟವರೆಂದರೆ ಗೋವಿಂದ ದಾಸ್ರವರು, ಆದ್ದರಿಂದಲೇ ಇವರನ್ನು ಆಧುನಿಕ ಕನ್ನಡ ಸಾಹಿತ್ಯದ ಮೊದಲ ತಲೆಮಾರಿನ ದಲಿತ ಕವಿ ಎಂದು ಕರೆಯುತ್ತೇವೆ. ಕಾವ್ಯ, ನಾಟಕ, ಜೀವನ ಚರಿತ್ರೆ, ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಮರ್ಥ ಸಾಹಿತ್ಯ ಕೊಡುವುದರ ಜೊತೆಗೆ ಮೂಲ ಜಾನಪದ ಸಂರಕ್ಷಣೆಯ ಕಾರ್ಯದಲ್ಲೂ ತೊಡಗಿದ್ದ ಮಹಾನ್ ಚೇತನ ಗೋವಿಂದ ದಾಸ್.
ಡಿ. ಗೋವಿಂದ ದಾಸ್ ರವರ ಸಮಗ್ರ ಸಾಹಿತ್ಯದ ಬದುಕನ್ನು ಅರಿಯ ಬೇಕಾದರೆ ಕನ್ನಡ ವಿವಿ ಹಂಪಿಯ ಪ್ರಸಾರಂಗ ಹೊರತಂದಿರುವ ಡಾ.ಎಂ.ಎಸ್ ಶೇಖರ್ ಸಂಪಾದಕತ್ವದÀ ‘ಡಿ. ಗೋವಿಂದಾಸ್ ಸಮಗ್ರ ಸಾಹಿತ್ಯ’ ಎಂಬ ಗ್ರಂಥ ಅತ್ಯುಪಯುಕ್ತವಾಗಬಲ್ಲದು.
ಜಾನಪದ ಗಾರುಡಿಗ ಮತಿಘಟ್ಟ ಕೃಷ್ಣಮೂರ್ತಿ
ಹಾಸನ ಜಿಲ್ಲೆ ಬೇಲೂರು ತಾಲೂಕಿಗೆ ಸೇರಿದ್ದು ಮತಿಘಟ್ಟ. 6ಕಿಲೋಮೀಟರ್ ದೂರದಲ್ಲಿರುವ ಹಳೆಬೀಡು ಹಾಗೆಯೇ ಅದಕ್ಕೆ ಹೊಂದಿಕೊಂಡಂತ್ತಿರುವ ಬೇಲೂರು ವಿಶ್ವ ಪ್ರಸಿದ್ಧಿ ಪಡೆದಂತೆ ಈ ಹಳ್ಳಿಯೂ ಸಹ ಕನ್ನಡ ಜಾನಪದ ಕ್ಷೇತ್ರದಲ್ಲಿ ತನ್ನದೇ ಮುದ್ರೆಯೊತ್ತಿದೆ. ಅದರ ರುವಾರಿಗಳೇ ನಮ್ಮ ಕೃಷ್ಣಮೂರ್ತಿಯವರು. ಈ ಹಳ್ಳಿಯಲ್ಲಿ ಕ್ರಿ.ಶ.1912ರ ಜುಲೈ 12ರಂದು ಜನಿಸಿದರು. ತಂದೆ ಲಿಂಗಣಯ್ಯ ತಾಯಿ ಚೆನ್ನಮ್ಮ.
ಬಾಲ್ಯದಿಂದಲೇ ವಿಭಿನ್ನ ವ್ಯಕ್ತಿತ್ವ ರೂಪಿಸಿಕೊಂಡ ಕೃಷ್ಣಮೂರ್ತಿಯವರದು ದೇಶ-ಭಾಷೆ, ನಾಡು-ನುಡಿಗಾಗಿ ಹಾತೊರೆದ ಜೀವ. ಪ್ರಾಥಮಿಕ ಹಂತದಲ್ಲಿದ್ದಾಗಲೇ ಆಗ ಭಾರತದಾದ್ಯಂತ ಸ್ವಾತಂತ್ರ್ಯ ಚಳುವಳಿಗಳ ತೀವ್ರತೆ ಎಲ್ಲೆಂದರಲ್ಲಿ ಹಬ್ಬಿ ಶಾಲಾ-ಕಾಲೇಜು ಮಕ್ಕಳನ್ನು ತನ್ನಡೆಗೆ ಸೆಳೆದಿತ್ತು.
ಕೃಷ್ಣಮೂರ್ತಿಯವರ ಮನಸ್ಸು ಅದರೆಡೆ ಆತೊರೆದಿತ್ತು. ಕೂಲಿಮಠದಲ್ಲಿ ಮರಳಿನ ಮೆಲೆ ಅಕ್ಷರಾಭ್ಯಾಸ ಮಾಡಿ ಶಿಕ್ಷಣ ಪಡೆದರು. ಮತಿಘಟ್ಟ ಓಚೋ ದೊಡ್ಡಯ್ಯನವರು ಕೃಷ್ಣಮೂರ್ತಿಗಳ ಗುರುಗಳು. ಬೆಳವಾಡಿ, ಬೇಲೂರು, ಚಿಕ್ಕಮಗಳೂರಿನಲ್ಲಿ ಹಂತ ಹಂತವಾಗಿ ಶಿಕ್ಷಣ ಪಡೆದರು.
ಬೇಲೂರಿನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆಯುವ ಹಂತದಲ್ಲಿ ಮಹಾತ್ಮಗಾಂಧೀಜಿ ಸ್ವಾತಂತ್ರ್ಯ ಹೋರಾಟ ಚಳವಳಿ ನಿಮಿತ್ತ ಬಂದಾಗ ಅವರನ್ನು ಖುದ್ದಾಗಿ ಭೇಟಿ ಮಾಡಿದರು. ನಂತರ ಅವರ ತತ್ತ್ವಗಳಿಗೆ ಮಾರು ಹೋಗಿ, ಸಾಂಪ್ರದಾಯಿಕ ಶಿಕ್ಷಣದಿಂದ ವಿಮುಖಗೊಂಡು ಹೋರಾಟ ಚಳವಳಿಗಳತ್ತ ಮುಖ ಮಾಡಿದರು. ಖಾದಿ ಧರಿಸಿ ದೇಶಭಕ್ತಿಯ ಬಗ್ಗೆ ಎಲ್ಲರಲ್ಲೂ ಬೀಜ ಬಿತ್ತನೆ ತೊಡಗಿದರು. ಹಳ್ಳಿಗೆ ಹಿಂದಿರುಗಿ ಮರಳಿ ಮೂಲಕಾಯಕವಾದ ವ್ಯವಸಾಯ ಮಾಡುತ್ತಾ ಖಾದಿ ಪ್ರಚಾರ ಮಾಡುತ್ತಾ ಅನಕ್ಷರಸ್ತರಿಗೆ ವಯಸ್ಕರ ಶಿಕ್ಷಣ ನೀಡ ತೊಡಗಿದರು.
1926 ರಲ್ಲಿ ಚಿಕ್ಕಮಗಳೂರಿನಲ್ಲಿ ಇವರು ಪ್ರೌಢಾಶಿಕ್ಷಣ ಪಡೆಯುವ ಸಂಬರ್ಧದಲ್ಲಿ ಅಲ್ಲಿಗೆ ಮಾಸ್ತಿ ಮತ್ತು ಬೇಂದ್ರೆಯವರು ಆಗಮಿಸಿದ್ದರು.
ಅವರೀರ್ವ ಕವಿ ದಿಗ್ಗಜರು ಭಾರತೀಯ ಮೂಲ ಸಂಸ್ಕøತಿಯ ಪಡಿನೆಳಲಾದ ಗರತಿಯ ಹಾಡು, ಜನಪದ ಹಾಡುಗಳ ಬಗ್ಗೆ ನೀಡಿದ ಜಾಗೃತಿ ಉಪನ್ಯಾಸ ಕೃಷ್ಣಮೂರ್ತಿಯವರ ಮೇಲೆ ತೀವ್ರ ಪ್ರಭಾವ ಬೀರಿತೆನ್ನಬಹುದು.
ಬಾಲ್ಯದಿಂದಲೇ ತನ್ನ ತಾಯಿ ಹೇಳುತ್ತಿದ್ದ ಸಂಪ್ರದಾಯದ ಹಾಡುಗಳನ್ನು ಆಸಕ್ತಿಯಿಂದ ಆಲಿಸುತ್ತಾ ಹಲವಾರು ಪದಗಳನ್ನು ಕಂಠಪಾಠ ಮಾಡಿದ್ದರು ಕೃಷ್ಣಮೂರ್ತಿ ಮಾಸ್ತಿ-ಬೇಂದ್ರೆಯವರ ಮಾತಿನಂತೆ ಒಸಗೆ, ಸೋಬಾನ, ಬೀಸುವ ಕಲ್ಲಿನ ಪದ ಮುಂತಾದ ಪದಗಳನ್ನು ಹಳ್ಳಿ ಮಹಿಳೆಯರಿಂದ ಹಾಡಿಸಿ, ಬರೆದು ದಾಖಲಿಸುತ್ತಾ ಸಂಗ್ರಹ ಮಾಡ ತೊಡಗಿದರು.
ಬೀಸುವ ಕಲ್ಲಿಗೆ ದೇಶಾವ ತಿರುಗ್ಯಾರೇ
ಸಕಲ ಸಂಪನರಾ ಮಗಳಿಗೇ-ರಾಜ ಬಣ್ಣದ ಹಕ್ಕಿ
ಸಕಲ ಸಂಪನರಾ ಮಗಳು ನೀಲವ್ವಾಗೇ
ದೇಶ ತಿರುಗ್ಯಾರೇ ಬಸವಯ್ಯ ರಾಜ ಬಣ್ಣದ ಹಕ್ಕಿ
* * *
ಶಿವನೇ ಗುರುವೆಂದು ಹಿಡಿದೇವು ರಾಗೀಕಲ್ಲಾ
ಶಿವನೇ ಕೊಡು ನಮಗೆ ಮತಿಯ ಸಂಗನ ಬಸವಾ
ಗುರುವೇ ಕೊಡು ನಮಗೆ ಸುಖಗಳ.
* * *
ಬಾಲವ್ವ ಮೈ ನೆರೆತು ಬಾಗಿಲಾದಗೈದಾಳೆ
ದೂರ ಎದ್ದಾವೆ ಮಳಿಮಾಡ-ಅವರಣ್ಣ
ಮುತ್ತಿನ ಡೇರ್ಯಾವ ಹೊಡಿಸ್ಸಾನೆ.
ಹೀಗೆ ಕೃಷ್ಣಮೂರ್ತಿಯವರು ಕನ್ನಡ ನಾಡಿನ ಜನಪದ ಸಂಸ್ಕøತಿ ಕ್ಷೀಣಿಸುವ ಸಂದರ್ಭದಲ್ಲಿ ನೂರಾರು ಕಿಲೋಮೀಟರ್ಗಳ ಕಾಲುದಾರಿ ಸವೆಸಿ, ಹಳ್ಳಿಗಳನ್ನು ಸುತ್ತಿ.ಹಾಡುಗಾರರನ್ನು ಹುಡುಕಿ ಅವರಿಂದ ಹಾಡಿಸಿ ಬರೆದು ಸಂಗ್ರಹಿಸಿ ನಮಗಿಂದು ಜನಪದ ರಾಶಿಯನ್ನು ನೀಡಿ ಹೋಗಿದ್ದಾರೆ.
1929 ರಿಂದ 31 ರ ವರೆಗೆ ಅಣ್ಣ ಎಲ್. ಗುಂಡಪ್ಪನವರು ಬೆಂಗಳೂರಿನಲ್ಲಿ ಅಧ್ಯಾಪಕರಾಗಿದ್ದ ಸಂದರ್ಭದಲ್ಲಿ ಅಣ್ಣನ ಮನೆಯಲ್ಲೇ ಉಳಿದು ಇಂಟರ್ಮೀಡಿಯೇಟ್ ಮುಗಿಸಿದ ಕೃಷ್ಣಮೂರ್ತಿಯವರಿಗೆ ಪ್ರೊ. ಎಸ್.ವಿ. ಪರಮೇಶ್ವರಭಟ್ಟರು ಸಹಪಾಠಿಯಾಗಿದ್ದರು. ಅವರು ಕಾಲೇಜು ಹಂತದಲ್ಲೇ ಹಲವಾರು ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದರು. ಅಂದೇ ಇವರಿಗೂ ಸಾಹಿತ್ಯದ ಘೀಳು ಅಂಟಿತೆನ್ನಬಹುದು.
ಸೃಜನಾತ್ಮಕ ಮತ್ತು ಸೃಜನೇತರ ಸಾಹಿತ್ಯ ಪ್ರಕಾರಗಳೆರಡರಲ್ಲೂ ತೊಡಗಿಸಿಕೊಂಡು ಕೃಷ್ಣಮೂರ್ತಿಯವರು ಪತ್ರಿಕಾ ರಂಗದಲ್ಲಿಯೂ ಸ್ಮರಣೀಯ ಕಾಯಕ ಮಾಡಿದ್ದಾರೆ. ಎಲ್. ಗುಂಡಪ್ಪನವರ ಮಾರ್ಗದರ್ಶನದಲ್ಲಿ ಮಾಸ್ತಿ, ಬಿ.ಎಂ.ಶ್ರೀ, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮರ ಪ್ರಭಾವಕ್ಕೊಳಗಾದ ಕೃಷ್ಣಾಮೂರ್ತಿ ಜನಪದ ಸಾಹಿತ್ಯದಲ್ಲಿ ಸಕ್ರಿಯರಾಗಿ ಸಂಗ್ರಹ ಕಾರ್ಯದಲ್ಲಿ ಕ್ರಿಯಾಶೀಲರಾದರು. ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಪ್ರಾದೇಶಿಕ ಭಿನ್ನತೆಗನುಗುಣವಾಗಿ ಸಂಗ್ರಹಿಸ ತೊಡಗಿದರು. ಬೆಂಗಳೂರಿನ ತಿರುಮಲೆ ತಾತಾಚಾರ್ಯರ ವಿಶ್ವಕರ್ನಾಟಕ ವಾರಪತ್ರಿಕೆಯಲ್ಲಿ ಕೆಲಸ ಮಾಡಿದರು. ನಂತರ ಜಿ.ವಿ.ದೊಡ್ಡವೀರಪ್ಪನವರ ಮೈಸೂರು ಇನ್ಷೂರೆನ್ಸ್ ಕಂಪನಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದ ಕೃಷ್ಣಮೂರ್ತಿಯವರು 1940ರಲ್ಲಿ ಮಯೂರ ಮಾಸಪತ್ರಿಕೆ ಪ್ರಾರಂಭಿಸಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು.
ಇಷ್ಟಕ್ಕೆ ಸುಮ್ಮನಾಗದ ಇವರು ತಾಯಿನಾಡು, ಕೈಲಾಸ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಜೊತೆಗೆ ತಾವು ಸಂಗ್ರಹಿಸಿದ ಸಂಪ್ರದಾಯದ ಹಾಡುಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದರು.
1944ರಲ್ಲಿ ಪ್ರಕಟಿಸಿದ ‘ನಾಡಪದಗಳು’ ಕೃತಿ ಜನಮನ್ನಣೆಗಳಿಸಿದ್ದಲ್ಲದೆ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಮೆಚ್ಚುಗೆಯ ಬಹುಮಾನ ಗಳಿಸಿತು. 1948ರಲ್ಲಿ ಪ್ರಕಟವಾದ “ಕಳಸಪುರದ ಹುಡುಗರು” ಎಂಬ ಮಕ್ಕಳ ಕಾದಂಬರಿಯು ಇವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಭಧ್ರವಾಗಿ ನೆಲೆನಿಲ್ಲುವಂತೆ ಮಾಡಿತೆನ್ನಬಹುದು. ಆದ್ದರಿಂದ ಆಕ್ರತಿಯ ಸುಮಾರು ಒಂಬತ್ತು ಮುದ್ರಣ ಕಂಡಿದೆ.ಹಾಗೆಯೇ ಚಲನ ಚಿತ್ರವಾಗಿದೆ.
“ಮರಗಿ”,”ಸರ್ವೂದಯ” ಇತರ ಕಾದಂಬರಿಗಳು; ‘ಪಚ್ಚೇತೆನೆ’-ಕಥಾಸಂಕಲನ; ‘ಭರತೆಪ್ಪ ಸೊಂಟಕ್ಕೆ ಘಂಟೆ’-ಪೌರಾಣಿಕ ನಾಟಕ; ಗಂಡನ ಪೂಜೆ, ಹೊಂಬಾಳೆ, ಕಲ್ಯಾಣಿ, ಹೊಸಹಳ್ಳಿ-ನಾಟಕಗಳು; 1958ರಲ್ಲಿ ಬಂದ ‘ನಮ್ಮ ಹಳ್ಳಿಯ ಹಾಡುಗಳು’, 1975ರಲ್ಲಿ ಬಂದ ಸಾವಿರ ಪುಟದ ಜನಪದ, 1981 ರಲ್ಲಿ ಬಂದ ‘ಗೃಹಿಣಿ ಗೀತೆಗಳು’: 1991ರಲ್ಲಿ ಪ್ರಕಟಿಸಿದ ‘ಹೊನ್ನ ಹೊತ್ತಿಗೆ’- ಜನಪದ ಸಂಗ್ರಹಗಳು; 2002ರಲ್ಲಿ ಬಂದ ಹಾಸನ ಜಿಲ್ಲೆಯ ಕೋಲಾಟ ಪದಗಳು ಎಂಬ ಪುಸ್ತಕ ಇಡೀ ಹಾಸನ ಜಿಲ್ಲೆಯ ಸಾಂಸ್ಕøತಿಕ ಬದುಕನ್ನು ಕಟ್ಟಿಕೊಡುತ್ತದೆ. ‘ಏಳುಕೊಳ್ಳದ ಎಲ್ಲಮ್ಮ’, ‘ಶಕುನದಹಕ್ಕಿ ಮತ್ತು ಇತರ ಜನಪದ ಕಥೆಗಳು’, ‘ಕೆಲವು ಕಿರುಲಾವಣಿಗಳು’, ‘ಪಂಚತಂತ್ರದ ಕಥೆಗಳು’, ‘ನಾಲ್ಕು ಪತ್ರಗಳು’, ‘ದೇಶಾಂತರದ ನೀತಿ ಕಥೆಗಳು’ ಇವು ಕೃಷ್ಣಮೂರ್ತಿಯವರ ಇತರ ಕೃತಿಗಳು.
ಬೇಲೂರು ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೃಷ್ಣಮೂರ್ತಿಯವರಿಗೆ 2002ರಲ್ಲಿ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಅಲ್ಲದೇ ‘ಜನಪದ ಭೀಷ್ಮ’ ‘ಜನಪದ ರತ್ನ’ ಬಿರುದುಗಳೂ ಸಹ ಸಂದಿವೆ. ಇವರ ‘ಹೊಸಹಳ್ಳಿ’ ನಾಟಕಕ್ಕೆ ಕೇಂದ್ರ ಸರ್ಕಾರದ ಬಹುಮಾನವೂ ದೊರೆತಿದೆ.
ಇಡೀ ತಮ್ಮ ಬದುಕನ್ನು ಜನಪದ ಸಾಹಿತ್ಯಕ್ಕಾಗಿ ಮೀಸಲಿಟ್ಟು ಅದಕ್ಕಾಗಿಯೇ ಸಮರ್ಪಿಸಿಕೊಂಡಿದ್ದ ಜನಪದ ಭೀಷ್ಮ ಮತಿಘಟ್ಟ ಕೃಷ್ಣಮೂರ್ತಿಯವರು 2006 ಜುಲೈ 27 ರಂದು ಇನ್ನಿಲ್ಲವಾದರು. ಆದರೆ ಅವರು ಸಂಗ್ರಹಿಸಿ ಕೊಟ್ಟ ರಾಶಿ ರಾಶಿ ಜನಪದ ನಮ್ಮ ಕಣ್ಣೆದುರಿಗೆ ಅರಗಿಸಿಕೊಳ್ಳಲಾಗದಷ್ಟಿದೆ. ಅವರ ತತ್ತ್ವಾದರ್ಶಗಳು ನಮ್ಮೊಟ್ಟಿಗೆ ಸದಾ ಜೀವಂತವಾಗಿರುತ್ತದೆ.
ಕನ್ನಡದ ಪಾಂಡಿತ್ಯ ಸಾಹಿತಿ- ‘ಶ್ರೀನಿವಾಸ ಅಯ್ಯಾಂಗಾರ್’
ಕನ್ನಡ ಸಾಹಿತ್ಯ ಎರಡು ಸಾವಿರಕ್ಕಿಂತಲೂ ಅಧಿಕ ವರ್ಷಗಳ ಚರಿತೆಯಿರುವಂತದ್ದು. ವಿವಿಧ ಕಾಲಘಟ್ಟಗಳಲ್ಲಿ ಅರಳಿ, ಹೊರಳಿ, ಪ್ರಜ್ವಲಿಸಿ ಬಂದ ಸಾಹಿತ್ಯ ಇಲ್ಲಿ ಸಹಸ್ರಾರು ಕವಿ ಪುಂಗವರು, ಪಂಡಿತರು, ಸಾಹಿತ್ಯ ರತ್ನರು ತಮ್ಮ ಪಾಂಡಿತ್ಯ ಧೀಶಕ್ತಿಯನ್ನು ಧಾರೆಯೆರೆದಿದ್ದಾರೆ.
ಪಂಪಪೂರ್ವಯುಗ, ಪಂಪಯುಗ, ಬಸವಯುಗ, ಹಾಗೂ ದಾಸಯುಗಗಳು ಪ್ರಮುಖವಾಗಿ ನೆಲೆನಿಂತರೆ. ಇನ್ನು ಆಧುನಿಕ ಸಾಹಿತ್ಯದಲ್ಲಿ ಹಲವಾರು ಪ್ರಭೇದಗಳೇ ಜನ್ಮಾತಾಳಿದವು. 19 ನೆಯ ಶತಮಾನದ ಅಂತ್ಯ ಹಾಗೂ 20ನೇ ಶತಮಾನದ ಆದಿಭಾಗದಲ್ಲಿ ಸಾಹಿತ್ಯ ಪ್ರಖರತೆಯನ್ನು ಕಂಡಿತೆನ್ನಬಹುದು. ಮಾಸ್ತಿ ಬೇಂದ್ರೆ, ಕುವೆಂಪುರಾದಿಯಾಗಿ ಸಾಹಿತ್ಯಕವಾಗಿ ಒಂದು ಸೈನ್ಯವೇ ನಮ್ಮೆದುರಿಗೆ ನಿಲ್ಲುತ್ತದೆ. ಇವರಲ್ಲಿ ಸಿ.ಆರ್. ಶ್ರೀನಿವಾಸ ಅಯ್ಯಂಗಾರ್ ರವರೂ ಒಬ್ಬರೂ.
ಶ್ರೀಯುತ ಸಿ.ಆರ್. ಶ್ರೀನಿವಾಸರು ಕ್ರಿ.ಶ 1914 ರ ಸೆಪ್ಟ್ಷಂಬರ್ 02 ರಂದು ಹಾಸನ ಜಿಲ್ಲಾ ಚನ್ನರಾಯಪಟ್ಟಣದಲ್ಲಿ ಜನಿಸಿದರು.
1934 ರಿಂದ 1944 ರ ಸಂದರ್ಭದಲ್ಲಿ ಕರ್ನಾಟಕ ಸಂಘ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಸ್ವಾತಂತ್ರ್ಯ ಚಳವಳಿಯಲ್ಲಿಯೂ ಭಾಗವಹಿಸಿದರು. ನಂತರ 1944 ರಿಂದ ತನ್ನ ಹುಟ್ಟೂರಾದ ಚನ್ನರಾಯಪಟ್ಟಣಕ್ಕೆ ಋಣ ತೀರಿಸುವ ಸದುದ್ದೇಶದಿಂದ ಸಮಾಜ ತಿಳಿಗೊಳ್ಳಲು ಅಗತ್ಯವಾಗಿದ್ದ ಶಿಕ್ಷಣವನ್ನು ಪಸರಿಸುವ ಹಿನ್ನೆಯಲ್ಲಿ ಸ್ವತಃ ನವೋದಯ ಪ್ರೌಢ ಶಾಲೆ ಆರಂಭಿಸಿ ತಮ್ಮ ಸಂಸ್ಥೆಯಲ್ಲಿಯೇ ಕನ್ನಡ ಪಂಡಿತರಾಗಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿದರು. ಹೀಗೆ ವಿದ್ಯಾಭಿವೃದ್ಧಿಯಲ್ಲಿ ಹಗಲಿರುಳು ಪರಿಶ್ರಮವಹಿಸಿ ಶಿಕ್ಷಣ ಜ್ಞಾನ ಪಸರಿಸಿದ ಕೀರ್ತಿ ಶ್ರೀನಿವಾಸ ಅಯ್ಯಂಗಾರ್ರದು ಎಂದರೆ ಅತಿಶಯೋಕ್ತಿಯಾಗಲಾರದು.
ಉತ್ತಮ ವಾಗ್ಮಿಗಳೂ, ಪಂಡಿತರೂ, ಭಾಷಕಾರರು ಆಗಿದ್ದ ಶ್ರೀನಿವಾಸ ಅಯ್ಯಂಗಾರರು ಸಾಹಿತ್ಯ ಕ್ಷೇತ್ರದಲ್ಲಿಯೂ ಸಹ ಸಾಕಷ್ಟು ಕೆಲಸ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇಯಾದ ಕೊಡುಗೆ ನೀಡಿ ಶ್ರೀಮಂತಗೊಳಿಸಿದ್ದಾರೆ.
‘ಶ್ರವಣ ಬೆಳಗುಳದ ಕೈಪಿಡಿ’ ‘ಮಿರ್ಜಾ ಇಸ್ಮಾಯಿಲ್’ ‘ಚಿಕ್ಕ ದೇವರಾಜ ಒಡೆಯರು’ ‘ಮಹಾಭಾರತದ ಸೂತ್ರಧಾರ’ ‘ಸಾರ್ಥಕ ಜೀವಿಗಳು’ ‘ಸಣ್ಣ ಕಥೆಗಳು’ ಮುಂತಾದ ಕೃತಿ ರತ್ನಗಳನ್ನು ನೀಡುವುದರ ಮೂಲಕ ಶ್ರೀನಿವಾಸ ಅಯ್ಯಂಗರರು ಶ್ರೇಷ್ಠ ಸಾಹಿತಿಯಾಗಿಯೂ ನೆಲೆ ನಿಲ್ಲುತ್ತಾರೆ.
ಇವರ ‘ಶ್ರವಣ ಬೆಳಗೊಳದ ಕೈಪಿಡಿ’ ಕೃತಿಯನ್ನು 1940 ರಲ್ಲಿ ಶ್ರವಣ ಬೆಳಗೊಳದಲ್ಲಿ ನಡೆದ ಮಹಾಮಸ್ತಕಭಿಷೇಕ ಸಂದರ್ಭದಲ್ಲಿ ಸಮಿತಿಯವರು ಪ್ರಕಟಿಸಿದ್ದಾರೆ. ಹಾಗೆಯೇ ಇವರು ಬರೆದ ಹಾಗೂ ಸಂಗ್ರಹಿಸಿದ ಕಿರುಕಥೆಗಳನ್ನೆಲ್ಲಾ ಸೇರಿಸಿ ‘ಸಣ್ಣ ಕಥೆಗಳು’ ಎಂಬ ಹೆಸರಿನ ನಡಿ ಕರ್ನಾಟಕ ಸಂಘವು ಪ್ರಕಟಿಸಿದೆ. ಇದು ಐದಾರು ಜನರು ಬರೆದ ಸಂಯುಕ್ತ ಕಥಾ ಸಂಕಲನವಾಗಿದೆ.
1954 ರಲ್ಲಿ ಮೊದಲ ಮುದ್ರಣವಾಗಿ ಬಂದ ಇವರು ನೀಡಿದ ಉಪನ್ಯಾಸಗಳ ಸಂಕಲನ ‘ಮಹಾಭಾರತದ ಸೂತ್ರಧಾರ’ ಬಹಳವೇ ಹೆಸರು ಮಾಡಿದ ಕೃತಿಯಾಗಿದೆ. ತಳುಕಿನ ವೆಂಕಣ್ಣಯ್ಯ ನವರ ಸ್ಮಾರಕ ಗ್ರಂಥಮಾಲೆಯ ಪ್ರಕಾಶಕರಾಗಿದ್ದ ತ.ಸು. ಶಾಮರಾಯರು ಹೊರ ತಂದ ಈ ಕೃತಿಯು 1955 ರಲ್ಲಿ ಎರಡನೇ ಮುದ್ರಣ ಕಂಡು ಹೆಚ್ಚು ಜನ ಪ್ರಿಯವಾಯಿತು.
‘ಚಿಕ್ಕದೇವರಾಜ ಒಡೆಯರ್’ ಕೃತಿಯ ಅಂದಿನ ಸಾಮಾಜಿಕ ಹಾಗೂ ಸಾಂಸ್ಕøತಿಕ ನೆಲೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಹಾಗೆಯೇ ಚಿಕ್ಕದೇವರಾಜ ಒಡೆಯರ ವ್ಯಕ್ತತ್ವಕ್ಕಿಡಿದ ಕನ್ನಡಿಯಾಗಿದೆ ಎನ್ನಬಹುದು.
‘ಮಿರ್ಜಾ ಇಸ್ಮಾಯಿಲ್’ ಕೃತಿ ಅವರು ಮೈಸೂರು ಸಾಮ್ರಾಜ್ಯದಲ್ಲಿ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಮಾಡಿದ ಜನಕಲ್ಯಾಣ ಕಾರ್ಯಕ್ರಮಗಳು, ಹಾಗೂ ಇಸ್ಮಾಯಿಲ್ ರ ಸರಳ ಘನಪೂರ್ಣ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆ.
ಒಟ್ಟಾರೆ ಹೇಳುವುದಾದರೆ ಶ್ರೀನಿವಾಸ ಅಯ್ಯಂಗಾರರು ಶಿಕ್ಷಣ ಹರಿಕಾರರಾಗಿ, ಪ್ರಖ್ಯಾತ ವಾಗ್ಮಿಗಳಾಗಿ, ಉದ್ಧಾಮ ಪಂಡಿತರಾಗಿ ಮೌಲಿತ ಸಾಹಿತಿಯಾಗಿ ಕನ್ನಡ ನಾಡು ನುಡಿಗೆ ಸಾಕಷ್ಟು ಉತ್ತಮೋತ್ತಮ ಕಾರ್ಯಗಳನ್ನು ಮಾಡುತ್ತ ಸುಂದರ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಹೋರಾಟ ನಡೆಸಿದ್ದಾರೆ. ಮೇರು ವ್ಯಕ್ತಿತ್ವಗಳನ್ನು ಸಾಮಾನ್ಯರಿಗೆ ಪರಿಚಯಿಸಿದ್ದಾರೆ.
ಶ್ರೀನಿವಾಸ ಅಯ್ಯಂಗಾರರು ಹಾಸನ ಜಿಲ್ಲೆ ಕಂಡಂತಹ ಉತ್ತಮ ಪ್ರತಿಭಾನ್ವಿತ ವ್ಯಕ್ತಿತ್ವದ ಖಣಿಯಾಗಿದ್ದರು. ಅವರು ಬಿಟ್ಟು ಹೋದ ತತ್ವದರ್ಶಗಳು ನಮ್ಮೊಡನೆ ಜೀವಾಂತವಾಗಿದೆ.
ಸಾಹಿತ್ಯ ವಿಶಾರದ- ಎಲ್.ಡಿ. ನಾಗೇಂದ್ರ ಶಾಸ್ತ್ರಿ
ಇವರು ಕ್ರಿ.ಶ 1917 ಜನವರಿ 15 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಗೊಳದಲ್ಲಿ ಜನಿಸಿದರು. ಜೈನ ಧರ್ಮದ ಮೌಲ್ಯಗಳನ್ನು ಅಕ್ಷರಶಃ ದೈನಂದಿನ ಜೀವನದಲ್ಲಿ ರೂಢಿಸಿಕೊಂಡು ಅಂತೆಯೇ ಅಮೂಲ್ಯ ಸಾಹಿತ್ಯ ನೀಡಿದ ಕೀರ್ತಿ ಎಲ್.ಡಿ. ನಾಗೇಂದ್ರ ಶಾಸ್ತ್ರಿ ಯವರಿಗೆ ಸಲ್ಲುತ್ತದೆ.
ಕನ್ನಡ, ಸಂಸ್ಕøತ ಹಾಗೂ ಹಿಂದಿ ವಿಷಯಗಳಲ್ಲಿ ಮೈಸೂರು, ಶ್ರವಣಬೆಳಗುಳ, ಕಾಶಿ ಮುಂತಾದ ಸ್ಥಳಗಳಲ್ಲಿ ವಿದ್ಯಾಭ್ಯಾಸ ಪಡೆದು ಪಾಂಡಿತ್ಯಾಗಳಿಸಿ ತ್ರೈಭಾಷಿಕ ಪಂಡಿತರೆನಿಸಿದರು.
ಕಾವ್ಯ, ಧರ್ಮ,ನ್ಯಾಯ, ವ್ಯಾಕರಣ, ಛಂದಸ್ಸು ಮುಂತಾದ ವಿಷಯಗಳನ್ನು ಕೇಂದ್ರವಾಗಿ ಟ್ಟುಕೊಂಡು ಸಾಹಿತ್ಯ ರಚನೆ ಮಾಡಿದ ನಾಗೇಂದ್ರ ಶಾಸ್ತ್ರಿ ಯವರು ಕನ್ನಡ ಸಾರಸ್ವರ ಲೋಕಕ್ಕೆ ತಮ್ಮದೇ ಆದ ಹಲವಾರು ಅಮೂಲ್ಯವಾದ ಕೃತಿಗಳನ್ನು ನೀಡಿದ್ದಾರೆ.
ಹಾಸನದ ಉತ್ತರ ಬಡಾವಣೆಯ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿರುವ ಇವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಿಗೆ ಸತ್ ಶಿಕ್ಷಣ ನೀಡುವುದರ ಜೊತೆಗೆ ಮೌಲ್ಯ, ಧರ್ಮ, ನ್ಯಾಯಗಳನ್ನು ಬೋಧಿಸುವುದರೊಂದಿಗೆ ಸಾಹಿತ್ಯದ ಮಜಲುಗಳನ್ನು ಪರಿಚಯಿಸಿದರು.
‘ಮಹಾರಾಣಿ ಚೇಳಿಸಿ’, ‘ಸಾದ್ವಿ ಚಂದನಾದೇವಿ’, ‘ಭಗವಾನ್ ಮಹಾವೀರ’, ‘ಶ್ರೀ ಪಾಶ್ರ್ವನಾಥ’, ‘ಜೈನ ಧರ್ಮ ದಿಗ್ದರ್ಶನ’ ಮುಂತಾದ ಕೃತಿ ರತ್ನಗಳನ್ನು ನೀಡಿರುವ ನಾಗೇಂದ್ರ ಶಾಸ್ತ್ರೀಗಳು ತಮ್ಮ ವಿದ್ವತ್ತೆಗೆ ಹೆಸರಾಗಿ ಸಂಸ್ಕøತ ಪಂಡಿತ, ಸಾಹಿತ್ಯಾ ವಿಶಾರದ, ಸಾಹಿತ್ಯ ರತ್ನ, ಸಂಸ್ಕøತ-ಹಿಂದಿ ಸಾಹಿತ್ಯ ಮಣಿ’ ಎಂಬ ಹಲವಾರು ಬಿರುದಾಂಕಿತಗಳಿಂದ ಪ್ರಸಿದ್ಧಾರಾಗಿದ್ದರು.
1958 ರಲ್ಲಿ ಬಂದ ‘ಆತ್ಮಾಬೋಧನ ಹಾಗೂ ಮಹಾರಾಣಿ ಚೇಲನಾದೇವಿ’ ಕೃತಿಯ ಕೀರ್ತಿ ಶೇಷರಾದ ಎಚ್.ಎ. ಪಾಯಣ್ಣ ನವರ ವ್ಯಕ್ತಿತ್ವದ ಬಗ್ಗೆ ಬೆಳಕು ಚಲ್ಲುತ್ತದೆ.
ಈ ಕೃತಿಯನ್ನು ಪಾಯಣ್ಣನವರು ಮಕ್ಕಳಾದ ಎಚ್.ವಿ. ಪಾಶ್ರ್ವನಾಥ್ ಹಾಗೂ ಎಚ್.ವಿ. ಅನಂತ ಪದ್ಮನಾಭ್ ರವರು ಪ್ರಕಾಶನ ಮಾಡಿದ್ದಾರೆ.
1960ರಲ್ಲಿ ಬಂದ ‘ಜೈನ ಧರ್ಮ ದಿಗ್ದರ್ಶನ’ ಕೃತಿಯು ಜೈನ ಧರ್ಮದ ಆದಿಯಿಂದ ಅಂದಿನವರೆಗೂ ಧರ್ಮ ಬೆಳೆದು ಬಂದ ಹಾದಿಯ ಮೇಲೆ ಬೆಳಕು ಚಲ್ಲುತ್ತದೆ. ಈ ಕೃತಿಗೆ ಶ್ರೀ ಪಾಯಣ್ಣ ನವರ ಧರ್ಮಪತ್ನಿಯಾದ ಶ್ರೀಮತಿ ಪದ್ಮಾವತಮ್ಮ ಗ್ರಂಥದಾಸೋಹ ಮಾಡಿದ್ದಾರೆ. ಹೀಗೆ ಕನ್ನಡ ಸಾಹಿತ್ಯದಲ್ಲಿನ ಜೈನ ಧರ್ಮಕುರಿತು, ಮಹಾಪುರುಷರನ್ನು ಕುರಿತು, ಕೀರ್ತಿಶೇಷರನ್ನು ಕುರಿತು ಬೋಧನೆಯ ಜೊತೆ ಜೊತೆಗೆ ನಾಗೇಂದ್ರ ಶಾಸ್ತ್ರಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇಯಾದ ಕೊಡುಗೆಗಳನ್ನು ನೀಡುವುದರ ಮೂಲಕ ಹಾಸನದ ಪ್ರತಿಭಾನ್ವಿತ ಸಾಹಿತಿಯಾಗಿಯೂ ಹೊರ ಹೊಮ್ಮಿದ್ದರು. ಆದರೆÀ ಅವರ ಸ್ಥೂಲ ದೇಹ ನಮ್ಮಿಂದ ದೂರವಾಗಿದ್ದರೂ ಅವರ ಸೂಕ್ಷ್ಮಕಾಯ ಸಾಹಿತ್ಯದ ಮೂಲಕ ಸದಾ ನಮ್ಮೊಂದಿಗಿದೆ.
ಹಾಸನದ ಮಿರ್ಜಾ- ಎಚ್.ಬಿ.ಜ್ವಾಲನಯ್ಯ
ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳ ಭವ್ಯ ಪರಂಪರೆಯನ್ನು ಒಳಗೊಂಡು ವಿಶಿಷ್ಟ, ವಿಭಿನ್ನ, ವಿನೂತನ, ವೈವಿಧ್ಯ, ಆಳ-ವಿಸ್ತಾರಗಳನ್ನು ಸದಾಕಾಲವೂ ಪ್ರತಿಬಿಂಬಿಸುತ್ತಾ, ಮೌಲಿಕ ಸಾಹಿತ್ಯ, ಸಾಹಿತಿ, ಪೋಷಕರಿಂದ ಪ್ರಜ್ವಲಿಸುತ್ತಾ ಮುನ್ನುಗ್ಗುತ್ತಿದೆ.
ಹಾಸನ ಮಾದರಿಯಾಗಬೇಕೆಂದು, ನನ್ನ ಉಸಿರಿರುವ ತನಕ ಈ ನಗರದ ಬದಲಾವಣೆಗೆ, ಇಲ್ಲಿನ ಕಲೆ, ಸಾಹಿತ್ಯ ಪರಂಪರೆಯ ಉಳಿವಿಗೆ ಹೋರಾಡುತ್ತೇನೆಂದು ನುಡಿದಂತೆ, ನಡೆಯುತ್ತಾ ಸಾಧಿಸಿದ ವ್ಯಕ್ತಿ ಎಚ್.ಬಿ ಜ್ವಾಲಯ್ಯನವರೆಂದರೆ ಅತಿಶಯೋಕ್ತಿಯಾಗಲಾರದು.
1920 ಜುಲೈ 15 ರ ಗುರುವಾರ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಮೂಲದ ಎಚ್.ಪಿ ಬ್ರಹ್ಮದೇವಯ್ಯ ಮತ್ತು ಪದ್ಮಾವತಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದ ಎಚ್.ಬಿ ಜ್ವಾಲನಯ್ಯರವರು ಸರಳ, ಸಜ್ಜನ, ಆದರ್ಶವ್ಯಕ್ತಿಯಾಗಿ ಬದುಕಿ ಬಾಳಿದವರು. ಇವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಿಕ್ಕಾಗಿ ಇವರ ಆತ್ಮೀಯರಾಗಿದ್ದ ಯೋಗ ಗುರುಗಳಾದ ಎಚ್.ಬಿ.ರಮೇಶ್ ಅವರಿಗೆ ಫೋನಾಯಿಸಿ ಅನುಮತಿ ಪಡೆದು ಮನೆಗೆ ತೆರಳಿದಾಗ ಜ್ವಾಲಯ್ಯನವರ ಬದುಕಿನ ಚಿತ್ರಣವನ್ನು, ನಡೆದು ಬಂದ ಹಾದಿಯನ್ನು ಅವರೊಂದಿಗೆ ಕಳೆದ ಸುವರ್ಣ ಘಳಿಗೆಗಳನ್ನು ಅನುಭವ-ಆನಂದಗಳನ್ನು ಸುಮಾರು ಎರಡು ಗಂಟೆಗೂ ಅಧಿಕವಾಗಿ ಹಂಚಿಕೊಳ್ಳತ್ತಾ ರೋಮಾಂಚನಗೊಂಡರು. ಆ ಎಲ್ಲಾ ಚಿತ್ರಣ ಹಾಗೂ ಪ.ನಾಗರಾಜಯ್ಯ ಬರೆದ ಎಚ್.ಬಿ ಜ್ವಾಲನಯ್ಯ ಜೀವನ ಮತ್ತು ಸಾಧನೆ ಎಂಬ ಲೇಖನ, ‘ಹೇಮಸಿರಿ’ ಕಸಾಪ ಸ್ಮರಣ ಸಂಚಿಕೆ, ಮತ್ತು ಜ್ವಾಲನಯ್ಯರವರೊಂದಿಗೆ ಚಂದ್ರಕಾಂತ ಪಡೆಸೂರರ ಅನುಭವಗಳು, ರಂಗಕರ್ಮಿ ಎಚ್.ರಾಮಣ್ಣರ ಜ್ವಾಲನಯ್ಯರವರೊಂದಿಗಿನ ರಂಗಭೂಮಿ ಅನುಭವಗಳು ನನಗೆ ಹೆಚ್ಚಿನ ಮಾಹಿತಿಗಳನ್ನು ಒದಗಿಸಿದವು.
1942ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಇವರು ತಮ್ಮ ಮಿತ್ರರೊಡಗೂಡಿ ‘ಭಗತ್ ಪಾರ್ಟಿ’ ಎಂಬ ಯುವ ಸೈನ್ಯ ಕಟ್ಟಿ ಅವಿರತವಾಗಿ ಹೋರಾಡಿದರು.
ಹಿಡಿದ ಕಾರ್ಯವ ಸಾದಿಸದ ಹೊರತು ಮುಂದೆ ಸಾಗದ ಹಠವಾದಿ ವ್ಯಕ್ತಿತ್ತ್ವ ಜ್ವಾಲಯ್ಯನವರದು. ಜ್ಯಾತ್ಯಾತೀತವಾದಿಯಾಗಿ, ಉತ್ತಮ ರೈತಾಪಿ ಜೀವನದ ಮೂಸೆಯಲ್ಲಿ ತಿದಿಯೊತ್ತಿ ಬಂದಿದ್ದ ಜ್ವಾಲಯ್ಯನವರು ಎಲ್.ಟಿ ಕಾರ್ಲೆಯವರೊಂದಿಗೆ ಹಾಸನದಲ್ಲಿ ದನಗಳ ಜಾತ್ರೆ, ಕೈಗಾರಿಕೆ ಮತ್ತು ವ್ಯವಸಾಯಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನದ ಆರಂಭಕ್ಕೆ ದುಡಿದರು. ಆದ್ದರಿಂದಲೇ ಮುಂದೆ ಹಾಸನದ ಪಾಲಿಗೆ ಕೈಗಾರಿಕಾ ಕ್ರಾಂತಿಕಾರರಾದರು.
ಪ. ನಾಗರಾಜಯ್ಯನವರು ಒಂದು ಕಡೆ ಹೀಗೆ ಹೇಳಿದ್ದಾರೆ, “ಜ್ವಾಲಯ್ಯನವರು ಮಿತಭಾಷಿ, ಕಾರ್ಯತತ್ಪರ, ಕಾರ್ಯ ಸಾಧಕ, ಸದಾ ಉತ್ಸಾಹದ ಚಿಲುಮೆ, ಸಜ್ಜನ, ನಿರುಪದ್ರವಿ, ಸ್ನೇಹ ಜೀವಿ, ಜನಪ್ರಿಯ ವ್ಯಕ್ತಿ, ಪರೋಪಕಾರಿ, ಒಳ್ಳೆಯ ವಾಗ್ಮಿ, ಗುಣಗ್ರಾಹಿ, ಬಡವರ ಬಂಧು, ದಕ್ಷ ಆಡಳಿತಗಾರ, ಯಾವುದನ್ನೂ ಯೋಜನಾಬದ್ಧವಾಗಿಯೇ ನಿರ್ವಹಿಸುವ ಧ್ಯೇಯವುಳ್ಳವ, ಸೃಜನಶೀಲ ಪ್ರತಿಭೆ, ಇತಿಹಾಸ ಪ್ರಜ್ಞೆಗಳನ್ನುಳ್ಳವ, ಜೀವನದಲ್ಲಿ ಒಂದು ಶಿಸ್ತನ್ನು ರೂಢಿಸಿಕೊಂಡವರು, ತನಗಾಗಿ ತನ್ನವರಿಗಾಗಿ ಎಂದೂ ಏನೂ ಮಾಡಿಕೊಂಡವರಲ್ಲ”.
ಜ್ವಾಲಣ್ಣನವರೆಂದೇ ಪ್ರಸಿದ್ಧರಾದ ಇವರು ಮನೆಗೆ ಮಾತ್ರ ಹಿರಿಮಗನಾಗದೆ ಹಾಸನಕ್ಕೆ ಅಗ್ರಜ ಸ್ಥಾನವನ್ನು ತುಂಬಿದವರಾಗಿದ್ದರು. ಕುಸ್ತಿಪಟುವಾಗಿ, ಈಜುಗಾರನಾಗಿ, ಬ್ಯಾಡ್ಮಿಂಟನ್ ಆಟಗಾರನಾಗಿ ಖ್ಯಾತಿವೆತ್ತಿದ್ದರು. ಪೋಷಕರ ಸಂಸ್ಕಾರದಿಂದ, ಜೈನ ಪುರಾಣ ಪುಣ್ಯ ಕಥೆಗಳಿಂದ ಉತ್ತಮ ಜೈನಾಚಾರರಾಗಿ ರೂಪಗೊಂಡು, ಸಮಾಜದಲ್ಲಿನ ಮಾನವೀಯ ನೆಲೆಗಳೊಟ್ಟಿಗೆ ಜೀವಿಸಿ, ಅನುಭವಿಸಿ, ಒಡಗೂಡಿ ಉದಾತ್ತ ಚಿಂತನಕಾರರಾಗಿ, ಜ್ಯಾತ್ಯಾತೀತ ಖಣಜವಾಗಿ ರೂಪುಗೊಂಡರು.
ರಾಜಕೀಯ ಪ್ರವೇಶ
ಸಾಮಾಜಿಕವಾಗಿ ಸದಾ ಮುಂಚೂಣಿಯಲ್ಲಿದ್ದ ಜ್ವಾಲಯ್ಯನವರು ಜನರ ಒತ್ತಾಯಕ್ಕೆ ಮಣಿದು 1952-53ರಲ್ಲಿ ಮೊದಲ ಸಲ ಪುರಸಭಾ ಅಧ್ಯಕ್ಷರಾಗಿ ಆಯ್ಕೆಗೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಉತ್ತಮ ಕಾರ್ಯಗಳನ್ನು ಮಾಡಿದರು. ಇವರ ಕರ್ತವ್ಯ ನಿಷ್ಠೆ, ಸಮಾಜ ಪರ ಚಿಂತನೆಗಳು, ನಿಸ್ವಾರ್ಥ ರಾಜಕಾರಣ 1974-75ರಲ್ಲಿ ಪುನಃ ಪುರಸಭಾ ಅಧ್ಯಕ್ಷರಾಗಲು ಕಾರಣವಾಯಿತು.
ಇವರ ಅಧಿಕಾರವಧಿಯಲ್ಲಿ ಬೀರನಹಳ್ಳಿ ಕೆರೆಯ ಜೀರ್ಣೋದ್ಧಾರ. ದೇವಿಗೆರೆಗೆ ಮೂರ್ತರೂಪ ಕೊಟ್ಟು ಸುಂದರಮಯವಾಗುವಂತೆ ಮಾಡಿದ್ದು, ಜೈಲು ಎದುರಿನ ಬಾರಿ ಅಗಗಳನ್ನು ಮುಚ್ಚಿಸಿ ಉತ್ತಮ ರಸ್ತೆ ನಿರ್ಮಿಸಿ, ಬಸವ ಮೂರ್ತಿ ನಿರ್ಮಾಣ ಮಾಡಿಸಿ ಅದು ‘ಬಸವ ಸರ್ಕಲ್’ ಎಂದೇ ಪ್ರಸಿದ್ದವಾಗಲು ಕಾರಣವಾಗಿದ್ದು ಜ್ವಾಲನಯ್ಯನವರೇ.... ಆದರೆ ಅದು ಈಗಿಲ್ಲ! ನಗರದಲ್ಲಿ ಕುಡಿಯುವ ನೀರಿನ ತೊಂದರೆಯಿದ್ದುದರಿಂದ ಹೇಮಾವತಿ ನದಿಯಿಂದ ಹಾಸನಕ್ಕೆ ನೀರು ಸರಬರಾಜು ಮಾಡುವ ಬೃಹತ್ ಯೋಜನೆಯನ್ನು ಕೈಗೊಂಡರು. ಆಗಿನ ಕೇಂದ್ರ ಸರಕಾರದ ಗಮನ ಸೆಳೆದು ಅನುದಾನ ತರುವಲ್ಲಿ ಯಶಸ್ವಿಯಾದರು.
ತಮ್ಮ ಆಪ್ತರಾಗಿದ್ದ ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಸಹಕಾರದಿಂದ ನಗರಕ್ಕೆ ಒಳಚರಂಡಿ ವ್ಯವಸ್ಥೆ, ಸಿಮೆಂಟ್ ರಸ್ತೆಗಳು, ವಿಶಾಲ ರಸ್ತೆಗಳು, ಪುರಸಭಾ ಕಟ್ಟಡಗಳು, ಮಹಾರಾಜ ಉದ್ಯಾನವನದ ಸೌಂದರ್ಯ, ಈಜುಕೊಳದ ನಿರ್ಮಾಣ ಯೋಜನೆ, ಸುಭಾಷ್ ಚೌಕ, ಪಾಳುಬಿದ್ದ ಕಟ್ಟಿನ ಕೆರೆಯನ್ನು ಅಗತ್ಯವಿದ್ದ ಸಾರಿಗೆ ಬಸ್ ನಿಲ್ದಾಣವಾಗಿ (ಈಗಿನ ಹಳೇಬಸ್ ನಿಲ್ದಾಣ) ರೂಪಿಸಿದ್ದು, ಮಾರುಕಟ್ಟೆ ಸಂಕೀರ್ಣಗಳನ್ನು ನಿರ್ಮಿಸಿದ್ದು, ಇವರ ಆಡಳಿತದ ಮಹತ್ತರ ಅಂಶಗಳಾಗಿವೆ. ಇವೆಲ್ಲವುಗಳ ಪರಿಣಾಮದಿಂದಲೇ ಕೆಂಗಲ್ ಹನುಮಂತಯ್ಯರವರಿಂದ ‘ಹಾಸನದ ಮಿರ್ಜಾ’ ಎಂದು ಬಿರುತಾಂಕಿತಗೊಂಡ ಖ್ಯಾತಿ ಜ್ವಾಲನಯ್ಯನವರದು.
ಮುಸ್ಲಿಂ-ಕ್ರೈಸ್ತರ ಸ್ಮಶಾನಗಳಿಗೆ ಜಾಗ ಕಲ್ಪಿಸಿದ್ದು, ಬೀದಿ ಕಸಗುಡಿಸುವವರಿಗೆ ನೆಲೆ ಒದಗಿಸಿದ ಕೀರ್ತಿ ಜ್ವಾಲಯ್ಯನವರಿಗೆ ಸಲ್ಲುತ್ತದೆ.
1962ರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಶ್ರೀಮತಿ ಯಶೋದಮ್ಮ ಅವರ ವಿರುದ್ದ ಸೋಲುತ್ತಾರೆ. ಆದರೆ ತಮ್ಮ ಸಾಮಾಜಿಕ ಕಳಕಳಿಯಿಂದ ವಿಮುಖರಾಗದ ಇವರು 1966 ರಲ್ಲಿ ರಾಜಗೋಪಾಲಚಾರಿಯವರ ಸ್ವತಂತ್ರ ಪಕ್ಷವನ್ನು ಸೇರಿ ಪುನ: ಸ್ಪರ್ಧಿಸಿ ಬಹುಸಂಖ್ಯಾತ ಜನಾಂಗದ ಅಂದಿನ ಪ್ರಭಾವಿ ರಾಜಕಾರಣಿಯಾಗಿದ್ದ ಎಲ್.ಟಿ. ಕಾರ್ಲೆ ಅವರನ್ನು ಸೋಲಿಸಿ ನಾಲ್ಕನೆಯ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು.
ಸಾಹಿತ್ಯ ಪರಿಷತ್ತು
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ. ನಾರಾಯಣರವರ ಅವಧಿಯಲ್ಲಿ ಇಲ್ಲಿ ರೂಪುಗೊಂಡ ನವ ಸಮಿತಿ 1969 ಜೂನ್ 15 ರಂದು ಜ್ವಾಲಯ್ಯನವರನ್ನು ಹಾಸನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರನ್ನಾಗಿ ನೇಮಿಸಿತು.
ಕನ್ನಡ ಭಾಷಾಭಿಮಾನಿಯೂ, ಸಾಹಿತಿಯೂ, ನಾಟಕಕಾರರು, ಆಗಿದ್ದ ಜ್ವಾಲಯ್ಯನವರು ಸುಮಾರು ಎರಡು ದಶಕಗಳ ಕಾಲ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದರು.
1971ರ ನವಂಬರ್ 8 ಮತ್ತು 9 ರಂದು ಚನ್ನರಾಯಪಟ್ಟಣದಲ್ಲಿ ಹೆಸರಾಂತ ಗದ್ಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅಧ್ಯಕ್ಷತೆಯಲ್ಲಿ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸಿದರು. 1981ರಲ್ಲಿ ಹಾಸನದಲ್ಲಿ ನಡೆದ 2 ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಡಾ.ಎಸ್.ಎಲ್.ಬೈರಪ್ಪನವರ ಅಧ್ಯಕ್ಷತೆಯಲ್ಲಿ, 1985ರಲ್ಲಿ ಅರಸೀಕೆರೆ ತಾಲ್ಲೂಕಿನ ಮಾಲೆಕಲ್ಲು ತಿರುಪತಿಯಲ್ಲಿ ನಡೆದ ಮೂರನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಡಾ.ಎಸ್.ಕೆ.ಕರೀಂಖಾನ್ ಅಧ್ಯಕ್ಷತೆಯಲ್ಲಿ ನಡೆಸಿದ ಕೀರ್ತಿ ಇವರದು.
1976ರ ಜನವರಿ 17 ರಂದು ಜಿಲ್ಲಾ ಮಟ್ಟದ ಬೃಹತ್ ಜಾನಪದ ಕಲಾಮೇಳವನ್ನು ನಡೆಸಿದರು. ಇವರ ಅವಿರತ ಪ್ರಗತಿಪರ ಹೋರಾಟದ ಫಲವಾಗಿ 1986ರವರೆಗೂ ಹಾಸನ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾಗಿ ನಾಡು-ನುಡಿ ಶ್ರೇಯೋಭಿವೃದ್ಧಿಗಾಗಿ ದುಡಿದರು.
ಬಹುಮುಖ್ಯವಾಗಿ ಕ.ಸಾ.ಪ ಭವನಕ್ಕೆ 1981 ಆಗಸ್ಟ್ 4 ರಂದು ನಿವೇಶನ ದೊರಕಿಸಿಕೊಟ್ಟರು. ಇವರ ಕಾರ್ಯತತ್ಪರತೆಯಿಂದ ರಾಜ್ಯ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಇವರು 1989 ಫೆ 16 ರಂದು ಅಧ್ಯಕ್ಷರ ಚುಣಾವಣೆಯಲ್ಲಿ ಆರಿಸಿಬಂದು ರಾಜ್ಯ ಕ.ಸಾ.ಪ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇವರ ಕಾಲದಲ್ಲಿಯೇ 1987 ಅಕ್ಟೋಬರ್ 29, 30, 31 ರಂದು ಕಲ್ಬುರ್ಗಿಯಲ್ಲಿ ಡಾ.ಸಿದ್ಧಯ್ಯ ಪುರಾಣಿಕರ ಅಧ್ಯಕ್ಷತೆಯಲ್ಲಿ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಹಾಗೆಯೇ ಹಲವಾರು ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ನಡೆದವು.
ಸಾಹಿತ್ಯ ಕ್ಷೇತ್ರ
ಬಹುಮುಖ ಪ್ರತಿಭೆಯ ಚಿಂತನಾಶೀಲರಾದ ಜ್ವಾಲನಯ್ಯನವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಹಾಶಿಲ್ಪಿ, ರಾಜಲಾ, ಅಮಿತಾ, ಮಹಾಪರಿವರ್ತನೆ, ರಾಣಿ ರತ್ನಾಜಿ, ಪುರಸ್ಕಾರ, ನಯನ ಬಂಧನ, ಆರ್ಯ ಚಾಣಕ್ಯ ಮುಂತಾದ ಸುಮಾರು 17 ನಾಟಕಗಳನ್ನು ರಚಿಸಿದ ಕೀರ್ತಿ ಇವರದು. ಸಂಕೇತ, ಇವರ ಕವನ ಸಂಕಲನ. ಇವರ ‘ಮಹಾಶಿಲ್ಪಿ’ ನಾಟಕ ಮುಂದೆ ಇವರ ನಿರ್ದೇಶನದಲ್ಲಿಯೇ ಚಲನಚಿತ್ರವಾಗಿ ಮೂಡಿಬರುವುದರ ಜೊತೆಗೆ ಬೆಳ್ಳಿತೆರೆಯಲ್ಲಿ ತಾವೇ ಅಭಿನಯಿಸಿದರು. ಆಕಾಶವಾಣಿಯಲ್ಲಿ ಇವರ ಹಲವಾರು ನಾಟಕಗಳು ಪ್ರಸಾರವಾಗಿವೆ.ಕನ್ನಡದ ಜೊತೆಗೆ ಉತ್ತಮ ಹಿಂದಿ ಪಾಂಡಿತ್ಯ ಹೊಂದಿದ್ದ ಇವರು ಸ್ವತಃ ತಮ್ಮ ನಾಟಕಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ಇವರ ಬಹುಪಾಲು ನಾಟಕಗಳು ಐತಿಹಾಸಿಕವಾದವುಗಳೇ. ಅವುಗಳಲ್ಲಿ ಅಮಿತ, ಸಾಮ್ರಾಟ ಅಶೋಕ ಪ್ರಮುಖವಾದವುಗಳು. ‘ದಿವ್ಯಧ್ವನಿ’ ಇವರ ಸಂಪಾದಿತ ಕೃತಿ. ‘ಜೈನ ಸಾಹಿತ್ಯದಲ್ಲಿ ನಾಟಕಗಳು’ ಇವರ ಪ್ರಬಂಧ ಲೇಖನ. ಇಷ್ಟೇ ಅಲ್ಲದೆ ನೂರಾರು ಚಿಂತನ, ಭಾಷಣ ಕಾರ್ಯಕ್ರಮಗಳನ್ನು ಆಕಾಶವಾಣಿಯಲ್ಲಿ ಪ್ರಸ್ತುತಪಡಿಸಿದ್ದಾರೆ.
ಇವರು ನಾಟಕಾರರಷ್ಟೇ ಅಲ್ಲದೇ ಉತ್ತಮ ಅಭಿನಯ ಚತುರರಾಗಿದ್ದರು. ಆದ್ದರಿಂದಲೇ ಇವರಿಗೆ ಬರವಣಿಗೆಯ ಜೊತೆಗೆ, ಅಭಿನಯ, ನಿರ್ದೇಶನಗಳು ಸಿದ್ಧಿಸಿದ್ದವು. ಧುರ್ಯೋಧನ, ಶಕುನಿ ಪಾತ್ರಗಳು ಇವರಿಗೆ ಖ್ಯಾತಿ ತರುವುದರ ಜೊತೆಗೆ ಅಭಿನಯದಾಳಕ್ಕೆ ಇಳಿಯುವಂತೆ ಮಾಡಿದವು.
ಶಿಕ್ಷಣ ಕ್ಷೇತ್ರ
ಸಮುದಾಯದ ಪ್ರಗತಿ ಶಿಕ್ಷಣ ಕ್ಷೇತ್ರದಿಂದಲೇ ಎಂದು ಅರಿತಿದ್ದ ಜ್ವಾಲನಯ್ಯನವರು ಜನರಿಗೆ ಶಿಕ್ಷಣ ಮೂಲಭೂತ ಹಕ್ಕಾಗಬೇಕೆಂದು ಅಂದಿನ ಕಾಲದಲ್ಲಿಯೇ ಅರಿತು ಹೋರಾಡಿದರು. ಅಲ್ಲದೆ ಅನೇಕ ಶಿಕ್ಷಣ ಸಂಸ್ಥೆಗಳ ಉದಯಕ್ಕೆ ಕಾರಣರಾದರು. ಈಗಿನ ‘ಭಾರತಿ ವಿದ್ಯಾಮಂದಿರ’ ಜ್ವಾಲನಯ್ಯನವರ ಕನಸಿನ ಕೂಸು. ಅದೀಗ ಚಂದ್ರಕಾಂತ ಪಡೆಸೂರು ಅವರ ವಿವೇಕಯುಕ್ತ ಆಡಳಿತದಿಂದ ಹೆಮ್ಮರವಾಗಿ ಬೆಳೆಯುತ್ತಿದೆ.
ಅದರಲ್ಲೂ ಹಿಂದಿ ಪ್ರಚಾರ ಮಿತ್ರವೃಂದಗಳ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು. ಹಾಸನಕ್ಕೆ ನೂತನ ಬಾಲಿಕಾ ಪ್ರೌಢಶಾಲೆ, ಶಿಕ್ಷಕರ ತರಬೇತಿಯ ಸಂಜೆ ಕಾಲೇಜು, ಹಿಂದಿ ಬಿ.ಇಡಿ ಕಾಲೇಜು ಮುಂತಾದವುಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿದರು.
ಜ್ವಾಲನಯ್ಯನವರು ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳಾ ಕಾಲೇಜು ಹಾಗೂ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾಗಿ ಇವುಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
ಎಚ್.ಬಿ.ಜ್ವಾಲನಯ್ಯನವರೆಂದರೆ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ. ಸಾಮಾಜಿಕ, ರಾಜಕೀಯ, ಶಿಕ್ಷಣ, ಸಾಹಿತ್ಯ, ಸಂಘಟನೆ, ರಂಗಭೂಮಿ ಹೀಗೆ ಹಲವಾರು ಮೈಲಿಗಲ್ಲುಗಳ ಸಾಧಕ, ಛಲಗಾರ, ಹೋರಾಟಗಾರ. ಇವುಗಳೆಲ್ಲವುಗಳ ಫಲವಾಗಿಯೇ 1993ರಲ್ಲಿ ಹಾಸನದಲ್ಲಿ ನಡೆದ ನಾಲ್ಕನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟ ಇವರನ್ನಲಂಕರಿಸಿತ್ತು.
ಸಂಶೋಧನಾ ಸಾಹಿತಿ- ‘ಪಂಡಿತ್ ಸ್ವಾಮಿಗೌಡ”
ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಭವ್ಯಾವಾದ ಶಿಲ್ಪಕಲೆಗೆ ಎಷ್ಟು ಖ್ಯಾತಿವೆತ್ತಿದೆಯೋ ಅಷ್ಟÉ್ಟೀ ಇನ್ನೂ ಹೆಚ್ಚಾಗಿ ಕನ್ನಡ ಸಾರಸ್ವತ ಲೋಕಕ್ಕೆ ಬಹುಮುಖವಾಗಿ ಸಲ್ಲಿಸಿರುವ ಖ್ಯಾತಿ ಸಂಪಾದನೆಯಿಂದ ಘನತೆ ಹೆಚ್ಚಿಸಿಕೊಂಡಿದೆ. ಇದಕ್ಕೆ ಪುಂಖಾನುಪುಂಖವಾದ ಆಧಾರಗಳು ನಮಗೆ ದೊರಕುವುದರಲ್ಲಿ ಎರಡು ಮಾತಿಲ್ಲ.
ಕನ್ನಡ ಸಾಹಿತ್ಯಾಕ್ಕೆ ಹಾಸನ ಜಿಲ್ಲೆಯ ಕೊಡುಗೆಯನ್ನು ಸಂಶೋಧನಾತ್ಮಕವಾಗಿ, ವಿವರಣಾತ್ಮಾಕವಾಗಿ ಇಲ್ಲಿನ ಸಾಹಿತ್ಯ ದಿಗ್ಗಜರನ್ನು, ಅವರ ಸಾಹಿತ್ಯ ಸಿರಿಯನ್ನು ಒಂದೆಡೆ ಕಟ್ಟಿ ಕೊಟ್ಟವರೆಂದರೆ ಆಲೂರಿನ ಪಂಡಿತ್ ಸ್ವಾಮಿಗೌಡರು.
ಸ್ವಾಮಿಗೌಡರು ಆಲೂರು ತಾಲ್ಲೂಕಿನ ಕುಂದೂರು ಹೋಬಳಿಯ ದಾಸೇಗೌಡನಕೊಪ್ಪಲಿನಲ್ಲಿ 1926 ಮೇ3 ರಂದು ಜನಿಸಿದರು. ವಿದ್ಯಾರ್ಥಿದೇಸೆಯಿಂದಲೇ ಜನಪದ ಗೀತೆಗಳ ಸ್ವಾರಸ್ಯವÀರಿತ ಸ್ವಾಮಿಗೌಡರ ಮನಸ್ಸು ಸಾಹಿತ್ಯ ಹಾಗೂ ಸಂಸ್ಕøತಿಯತ್ತ ಆಕರ್ಷಣೆಗೊಂಡಿತು, ಕನ್ನಡ ಸಾಹಿತ್ಯ ಸೇವೆ ಮಾಡಬೇಕೆಂಬ ಹಿರಿದಾಸೆ ಹೊಂದಿದ್ದ ಸ್ವಾಮಿಗೌಡರು ಮಾಧ್ಯಮಿಕ ಶಾಲಾ ಉಪಧ್ಯಾಯರಾಗಿ ವೃತ್ತಿ ಆರಂಭಿಸಿದರು. ಶಿಕ್ಷಕ ವೃತ್ತಿಯ ಜೊತೆ ಜೊತೆಗೆ 1949 ರಿಂದ 1952 ರ ವರೆಗೆ ಜನಪದ ಗೀತೆಗಳನ್ನು ಸಂಗ್ರಹಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡು ಅಗಾಧ ಜನಪದ ಸಂಪತ್ತನ್ನು ಕ್ರೂಢೀಕರಿಸಿದರು.
ಆಗ ‘ಬೆಳಕು' ಪತ್ರಿಕೆ, ಒಕ್ಕಲಿಗರ ಪತ್ರಿಕೆ ಮತ್ತು ಶಾಲಾ ಕಾಲೇಜು ವಾರ್ಷಿಕ ಸಂಚಿಕೆಗಳಲ್ಲಿ ಪ್ರಕಟವಾದವು. 'ಮೈದುನ ರಾಮಯ್ಯನ ಸುಟ್ಟಿ' ಮತ್ತು 'ಶಂಕರ ಲಿಂಗನ ಸೋದರ ಪ್ರೇಮ' ಎಂಬೆರಡು ಜಾನಪದ ಲೇಖನಗಳು ಪ್ರಸಿದ್ಧಿ ಪಡೆದವು. ಅಲ್ಲದೇ ‘ತರೀಕೆರೆ ರಂಗಪ್ಪ ನಾಯಕ' ಹಾಗೂ ‘ಕುಣಿಗಲು ಕೆರೆ' ಎಂಬೆರಡು ಜಾನಪದ ಕಥನ ಗೀತೆಗಳು ಅನೇಕ ವಿದ್ವಾಂಸರ ಪ್ರಶಂಸೆಗೆ ಪಾತ್ರವಾದವು.
ಶ್ರೀಯುತ ಸ್ವಾಮಿಗೌಡರು ಶಾಂತಿಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುವಾಗಲೇ ಸಾಹಿತ್ಯ ಸಂಶೋಧನೆಯಲ್ಲಿ ಆಸ್ಥೆ ತಾಳಿ ಕಾರ್ಯೋನ್ನುಖರಾದರು.
ಶ್ರೀಯುತ ಸ್ವಾಮಿಗೌಡರು ‘ಕತ್ತರಿಘಟ್ಟ ಮತ್ತು ಹರಿಸೇವೆ', ‘ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಕೊಡುಗೆ', ಜನಪದ ಸಾಹಿತ್ಯ ಸುಧೆ, ‘ವೈಷ್ಣವ ಶಿರೋಮಣಿ ಚಂದ್ರಹಾಸ' ಕೃತಿಗಳು ಸೇರಿದಂತೆ ಅನೇಕ ಕವಿತೆಗಳು ಹಾಗೂ ಸಣ್ಣ ಕಥೆಗಳನ್ನು ಬರೆಯುವುದರ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇಯಾದ ಅಮೂಲ್ಯ ಕೊಡುಗೆ ನೀಡಿದ್ದಾರೆ.
1960 ರಲ್ಲಿ ಬಂದ ‘28 ಹಳ್ಳಿಯ ಕತ್ತರಿಘಟ್ಟ ಮತ್ತು ಹರಿಸೇವೆ' ಕೃತಿ ಸ್ವಾಮಿ ಗೌಡರಿಗೆ ಬಹಳವೇ ಹೆಸರು ತಂದುಕೊಟ್ಟಿತೆನ್ನಬಹುದು. ಇದು ಆಲೂರು ತಾಲ್ಲೂಕಿನ ಸಾಂಸ್ಕøತಿಕ ಬದುಕಿನ ಮೇಲೆ, ಪುರಾತನ ಸಾಂಸ್ಕøತಿಕ ಮಜಲುಗಳ ಮೇಲೆ ಬೆಳಕು ಚಲ್ಲುತ್ತದೆ. ಈ ಕೃತಿಯ ಬಗ್ಗೆ ಹಾಸನದ ಹೆಸರಾಂತ ಪತ್ರಿಕೆಯಾಗಿದ್ದ ‘ಪ್ರತಿನಿಧಿ' ಪತ್ರಿಕೆಯಲ್ಲಿ 1966 ಜನವರಿ 29 ರಂದು ಸಂಪಾದಕರಾಗಿದ್ದ ಎಸ್.ಎಸ್. ಅಯ್ಯಂಗಾರ್ ರವರು ಹೀಗೆ ಬರೆದಿದ್ದಾರೆ...
‘ಈ ಕಿರು ಹೊತ್ತಿಗೆಯಲ್ಲಿ ಶ್ರೀಯುತರು ಆಲೂರು ತಾಲ್ಲೂಕಿನ ಇಪ್ಪತ್ತೆಂಟು ಹಳ್ಳಿಗಳ ಜನರು ತಿರುಪತಿ ವೆಂಕಟರಮಣ ಸ್ವಾಮಿಯ ನಾಮಾಂಕಿತದಲ್ಲಿ ನಡೆಸುವ ಪೂಜೆ, ಸಲ್ಲಿಸುವ ಸೇವೆ, ಮಾಡುವ ಪ್ರಾರ್ಥನೆ ಇವುಗಳನ್ನು ಹೃದಯಂಗಮವಾಗಿ ಉಲ್ಲೇಖಿಸಿ ಗ್ರಾಮಾಂತರಗಳ ನಾಡಿಯಲ್ಲಡಗಿರುವ ಧರ್ಮಶ್ರದ್ಧೆ ಮತ್ತು ದೈವಭಕ್ತಿಗಳನ್ನು ತೋರಿಸಿದ್ದಾರೆ'.
1969 ರಲ್ಲಿ ಹೊರಬಂದ ‘ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಕೊಡುಗೆ' ಎಂಬ ಗ್ರಂಥವು ಸಂಶೋಧನಾತ್ಮಾಕದಿಂದ ಕೂಡಿದ ಒಂದು ಅತ್ಯಮೂಲ್ಯ ಕೃತಿ ಎಂದರೆ ಅತಿಶಯೋಕ್ತಿಯಾಗಲಾರದು, 190 ಪುಟಗಳಿರುವ ಈ ಕೃತಿಯು ಹಾಸನ ಜಿಲ್ಲೆಯ ಪಾಲಿಗೆ ಒಂದು ರೀತಿಯ ಸಾಹಿತ್ಯ ಚರಿತ್ರೆಯೆಂದೇ ಹೇಳಬಹುದು.
ಐದು ಪ್ರಮುಖ ಅಧ್ಯಾಯಗಳನ್ನು ಒಳಗೊಂಡ ಈ ಕೃತಿಯು ಮೊದಲನೇ ಅಧ್ಯಾಯದಲ್ಲಿ ‘ಶಾಸನಾಧಾರ' ಎಂಬ ಶೀರ್ಷಿಕೆಯಡಿಯಲ್ಲಿ ಹಲ್ಮಿಡಿ ಶಾಸನ, ಬೇಲೂರಿನ 202 ನೆಯ ಶಾಸನ, ಶ್ರವಣ ಬೆಳಗೊಳದ 344 ನೆಯ ಶಾಸನ, ಭರತೂರು ಶಾಸನ, ಶಾಂತಿ ಗ್ರಾಮದ ಶಾಸನ, ಹಾಸನದ 58 ನೆಯ ಶಾಸನ, ಬೇಲೂರಿನ 72 ನೆಯ ಶಾಸನ, ಚನ್ನರಾಯಪಟ್ಟಣದ 205 ನೆಯ ವೀರಗಲ್ಲು ಮುಂತಾದವುಗಳ ವಿವರಣೆ, ಪ್ರಾಮುಖ್ಯತೆ ಹಾಗೂ ಐತಿಹಾಸಗಳ ಬಗ್ಗೆ ಕೂಲಂಕುಷವಾಗಿ ವಿಶ್ಲೇಷಿಸಿದ್ದಾರೆ.
ಅಧ್ಯಾಯ-2 ರಲ್ಲಿ ಕೆಲವು ಶಾಸನ ಕವಿಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಇದು ಸಾಹಿತ್ಯ ಚರಿತ್ರೆ ಅಧ್ಯಯನಕಾರರಿಗೆ ಮಾರ್ಗದೀವಿಗೆಯಾಗಿದೆ. ದೇವ ಪಾರ್ಯ, ಬಾಚಣ್ಣ, ಬೊಪ್ಪಣ್ಣ ಪಂಡಿತ, ತ್ರಿವಿಕ್ರಮ ಪಂಡಿತ, ಸೋಮರಾಜ, ಪೋಲಾಳ್ವ-ದಂಡನಾಥ ರವರುಗಳ ಸಾಹಿತ್ಯ, ಕೊಡುಗೆಗಳ ಬಗ್ಗೆ ವಿಶ್ಲೇಷಿಸಿದ್ದಾರೆ.
ಮೂರನೆಯ ಅಧ್ಯಾಯದಲ್ಲಿ ರಾಜಾಶ್ರಯಗಳಲ್ಲಿ ಬೆಳೆದ ಸಾಹಿತ್ಯದ ಬಗ್ಗೆ ತಿಳಿಸುತ್ತಾ ಗಂಗರ ಆಶ್ರಯದಲ್ಲಿ- ಚಾವುಂಡರಾಯ, ಮೊದಲನೆಯ ನಾಗವರ್ಮ; ಹೊಯ್ಸಳರ ಆಶ್ರಯದಲ್ಲಿ ಅಭಿನವ ಪಂಪ, ಕಂತಿ, ರಾಜಾದಿತ್ಯಾ, ಸುಮನೋಬಾಣ, ಕವಿ ಚಕ್ರವರ್ತಿ ಜನ್ನ, ಮಲ್ಲಿಕಾರ್ಜುನ, ದರ್ಪಣಕಾರ ಕೇಶಿರಾಜ; ವೀರಶೈವ ಕವಿಗಳಾದ- ಕ್ರಾಂತಿಕಾರ ಹರಿಹರ, ಷಟ್ಟದಿಯ ಜನಕ ರಾಘವಾಂಕ, ಕೆರೆಯ ಪದ್ಮರಸ, ಕುಮಾರ ಪದ್ಮರಸ; ಹಾಗೆಯೇ ಇತರ ಕವಿಗಳ ವರ್ಗದಲ್ಲಿ ಎರಡನೆಯ ನಾಗವರ್ಮ, ನೇಮಿಚಂದ್ರ, ರುದ್ರಭಟ್ಟ, ಪದ್ಮಣಾಂಕ, ನರಹರಿ ಮುಂತಾದ ಕವಿವರ್ಯರ ಸಾಹಿತ್ಯ ಕೊಡುಗೆಗಳನ್ನು ಉಲ್ಲೇಖಿಸಿದ್ದಾರೆ, ವ್ಯಕ್ತಿತ್ವಗಳನ್ನು ಪರಿಚಯಿಸಿದ್ದಾರೆ.
ಅಧ್ಯಾಯ ನಾಲ್ಕರಲ್ಲಿ ಹತ್ತೊಂಬತ್ತನೆಯ ಶತಮಾನದ ಕೊಡುಗೆ ಎಂಬ ಶೀರ್ಷಿಕೆಯಡಿಯಲ್ಲಿ ಶ್ರೀನಿವಾಸ, ಗೊರೂರು ನರಸಿಂಹಾಚಾರ್ಯ, ನಂಜುಂಡಾಚಾರ್ಯ, ಶಿವನಂಜೇಗೌಡ, ಯಜಮಾನ ಸಿದ್ದಲಿಂಗಪ್ಪ ಅವರ ಸಾಹಿತ್ಯ ಹಾಗೂ ಸಾಂಸ್ಕøತಿಕ ಕೊಡುಗೆಗಳ ಮೇಲೆ ಲೇಖಕರು ಬೆಳಕು ಚೆಲ್ಲಿದ್ದಾರೆ.
ಇದರಲ್ಲಿ ಕೊನೆಯ ಅಧ್ಯಾಯ ಇಪ್ಪತ್ತನೆಯ ಶತಮಾನದ ಕೊಡುಗೆ ಎಂಬ ಶೀರ್ಷಿಕೆಯಡಿಯಲ್ಲಿ ಬೇಲೂರು ಕೇಶವದಾಸರಿಂದ ಶ್ರೀ ಎಚ್.ಆರ್. ಷಣ್ಮುಖಯ್ಯ ನವರವರೆಗೆ ಸುಮಾರು 63 ವಿವಿಧ ಸಾಹಿತ್ಯ ದಿಗ್ಗಜರನ್ನು, ಅವರ ಸಾಹಿತ್ಯಿಕ ಮೌಲ್ಯಗಳನ್ನು ಪರಿಚಯಿಸಿದ್ದಾರೆ.
ಹೀಗೆ ಪಂಡಿತ್ ಸ್ವಾಮಿಗೌಡರು ಕನ್ನಡ ಸಾಹಿತ್ಯಕ್ಕೆ ಮರೆಯಲಾಗದ ಕೊಡುಗೆ ನೀಡಿದ್ದಾರೆ. ಇವರು ಆಲೂರು ತಾಲ್ಲೂಕಿನ ಹಿರಿಯ ತಲೆಮಾರಿನ ಕವಿಗಳೂ ಹೌದು. ಸಂಶೋಧಕರು ಹೌದು. ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಉತ್ತಮ ಸಾಹಿತಿಯಾಗಿ ಬದುಕಿ ಬಾಳಿದ್ದ ಧೀಮಂತ ವ್ಯಕ್ತಿ ಸ್ವಾಮಿಗೌಡರು.
ವಿಶಿಷ್ಟ ವ್ಯಕ್ತಿತ್ವದ ಬಹುಮುಖ ಪ್ರತಿಭೆ-ಪ್ರೊ.ಎಸ್.ಕೆ. ರಾಮಚಂದ್ರರಾವ್
ಕಲಾ ತಜ್ಞರು, ಲೇಖಕರು, ವಿಮರ್ಶಕರು, ಸಂಗೀತಜ್ಞರು, ಮೀಮಾಂಸಕರು, ದಾರ್ಶನಿಕರು ಎಲ್ಲಕ್ಕಿಂತ ಹೆಚ್ಚಾಗಿ ಬಹುಭಾಷಾ ಪಂಡಿತರಾಗಿದ್ದ, ಅಪರೂಪಗಳಲ್ಲಿನ ಅಪರೂಪ ವ್ಯಕ್ತಿ ಪ್ರೊ.ಎಸ್.ಕೆ. ರಾಮಚಂದ್ರರಾವ್.
ಇವರು ಕ್ರಿ.ಶ. 1928 ಫೆಬ್ರವರಿ 09 ರಂದು ಹಾಸನದ ಶ್ರೀಕೃಷ್ಣರಾವ್ ಮತ್ತು ಶ್ರೀಮತಿ ಕಮಲಾಬಾಯಿಯವರ ಪುಣ್ಯ ಗರ್ಭಾಂಬುಧಿಯಲ್ಲಿ ಜನಿಸಿದರು. ಹುಟ್ಟಿದ್ದು ಹಾಸನದಲ್ಲಾದರೂ ಪ್ರಾರಂಭಿಕ ಶಿಕ್ಷಣ ಪಡೆದದ್ದು ಬೆಂಗಳೂರಿನಲ್ಲಾದರೆ, ಪ್ರೌಡಶಿಕ್ಷಣವನ್ನು ನಂಜನಗೂಡಿನಲ್ಲಿ ಪಡೆಯುತ್ತಾರೆ. ಬಾಲ್ಯದಿಂದಲೇ ವಿಶಿಷ್ಟ ಆಲೋಚನಾ ಶಕ್ತಿ, ತಾರ್ಕಿಕ ಚಿಂತನೆ, ಜ್ಞಾನದ ಹಂಬಲ ಇವರನ್ನು ಬಹು ಎತ್ತರದ ಮಟ್ಟಕ್ಕೆ ಕೊಂಡೊಯ್ದಿತೆನ್ನಬಹುದು. ವೈದಿಕ ಮೂಲದವರಾದ ರಾಮಚಂದ್ರರಾಯರು ತಮ್ಮ ತಂದೆ ಕೃಷ್ಣರಾವ್ರಿಂದಲೇ ಸಂಸ್ಕøತ ಕಲಿತರು. ಮೈಸೂರಿನ ಯವರಾಜ ಕಾಲೇಜು ಹಾಗೂ ಮಹಾರಾಜ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪೂರೈಸಿದ ಇವರು ಮೈಸೂರು ವಿ.ವಿ ಯಲ್ಲಿ 1947 ರಲ್ಲಿ ಮನಃಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.
ಕನ್ನಡ, ಸಂಸ್ಕøತ, ಪಾಳಿ, ತೆಲಗು,ತಮಿಳು, ಬಂಗಾಳಿ, ಪ್ರಾಕೃತ, ಗ್ರೀಕ್, ಪ್ರೆಂಚ್, ಇಂಗ್ಲೀಷ್ ಹೀಗೆ ಹತ್ತಾರು ಭಾಷಾ ಪ್ರೌಢಿಮೆ ಹೊಂದಿದ್ದ ರಾಮಚಂದ್ರರಾಯರು ಸಹಜವಾಗಿಯೇ ಜ್ಞಾನ ಖಣಜವಾಗಿದ್ದರು.
ಕ್ರಿ.ಶ 1949 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಶೋಧನ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿದ ರಾಮಚಂದ್ರರಾಯರು ನಂತರದ ದಿನಗಳಲ್ಲಿ 1954 ರಲ್ಲಿ ಬೆಂಗಳೂರಿನ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ (ಪ್ರಸ್ತುತದಲ್ಲಿನ ನಿಮ್ಹಾನ್ಸ್) ಕ್ಲಿನಿಕಲ್ ಸೈಕಾಲಜಿ ಮುಖ್ಯಸ್ಥರಾಗಿ ಕೆಲ ಕಾಲ ಕಾರ್ಯ ನಿರ್ವಹಿಸಿದರು. ಕಾರಣಾಂತರಗಳಿಂದ ಈ ಹುದ್ದೆಗೆ ರಾಜಿನಾಮೆ ನೀಡಿ 1965 ರಲ್ಲಿ ಆರ್.ವಿ ಟೀಚರ್ ಕಾಲೇಜು ಮತ್ತು ನ್ಯಾಷನಲ್ ಇನ್ಸ್ಟಿಟೂಟ್ ಆಫ್ ಸೈನ್ಸ್ಗಳಲ್ಲಿ ಮನಃಶಾಸ್ತ್ರ ವಿಭಾಗದ ಬೋಧಕರಾಗಿಯೂ ಕಾರ್ಯನಿರ್ವಹಿಸಿದರು. ಇದೇ ಅವಧಿಯಲ್ಲಿ ಕಾಲೇಜು ಆಫ್ ಓರಿಯಂಟಲ್ ಸ್ಟಡೀಸ್ ಮುಖ್ಯಸ್ಥರಾಗಿ ಹಾಗೂ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದರು.
ಇವರ ಅಗಾಧ ಜ್ಞಾನ ಭಂಡಾರಕ್ಕೆ ಆಗಿನ ಎಲ್ಲಾ ಶೈಕ್ಷಣಿಕ ಹಾಗೂ ತಂತ್ರಜ್ಞಾನದ ಸಂಸ್ಥೆಗಳು ಕೈ ಬೀಸಿ ಕರೆಯುತ್ತಿದ್ದರೂ ಇವರು ಮಾತ್ರ ತಮ್ಮ ಬದ್ದತೆಯನ್ನು ಬಿಟ್ಟುಕೊಟ್ಟವರಲ್ಲ, ಹಣ ಮತ್ತು ಸಂಪತ್ತಿನ ಹಿಂದೆ ಹೋಗದೆ ಉತ್ತಮ ಸಾಮಾಜಿಕ ಕಾರ್ಯದತ್ತ ಗಮನಹರಿಸಿದರು.
ಸಾಹಿತ್ಯ ಕ್ಷೇತ್ರ
ಬಹುಭಾಷಾ ಪಂಡಿತರಾಗಿದ್ದ ರಾಮಚಂದ್ರರಾಯರು ಹಲವಾರು ಭಾಷೆಗಳಲ್ಲಿಯೂ ತಮ್ಮ ಪ್ರಬುದ್ಧವಾದ ಚಿಂತನೆಗಳನ್ನು ಕೃತಿ ರೂಪದಲ್ಲಿ ಓದುಗರಿಗೆ ನೀಡಿದ್ದಾರೆ.
‘ಪೌರವ ದಿಗ್ವಿಜಯಂ’ ಎಂಬುದು ಇವರ ಸಂಸ್ಕøತ ನಾಟಕ. ಇದು ಗ್ರೀಕ್ವೀರ ಅಲೆಕ್ಸಾಂಡರ್ ಹಾಗೂ ಕೆಚ್ಚೆದೆಯ ವೀರ ಪೌರವನ ಕುರಿತಾದ ಕಥೆಯನ್ನೊಳಗೊಂಡಿದೆ. ‘ಸುಮಂಗಲ ಗಾಥಾ’ ಹಾಗೂ ‘ವಿಸುದ್ಧ ಮಗ್ಗ ವಿಭಾವನೀ’ ಇವೆರಡೂ ಗ್ರಂಥಗಳು ಪಾಳಿ ಭಾಷೆಯ ಠೀಕಾ ಗ್ರಂಥÀಗಳಾಗಿವೆ.
ರಾಮಚಂದ್ರ ರಾಯರು ಯಾವುದೇ ಒಂದು ಕ್ಷೇತ್ರಕ್ಕೆ ಮೀಸಲಾಗಿರದೆ ಸಣ್ಣಕಥೆ, ಕಾದಂಬರಿ, ಜೀವನ ಚರಿತ್ರೆ, ಮನಃಶಾಸ್ತ್ರ, ಸಮಾಜಶಾಸ್ತ್ರ, ದೇವಾಲಯಗಳ ಇತಿಹಾಸ, ಲಲಿತ ಕಲೆ, ವೇದಾಂತ ಆಗಮ ಕೋಶಗಳು, ಶಿಲ್ಪಶಾಸ್ತ್ರ, ವೇದಾಂಗಳು, ಆಯುರ್ವೇದ, ತತ್ತ್ವ ಮೀಮಾಂಸೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸಾಹಿತ್ಯ ಲಹರಿ ಹರಿಸಿದವರು.
‘ತ್ಯಾಗರಾಜರು’, ‘ಕನಕದಾಸರು’, ‘ಪುರಂದರ ದಾಸರು’ ಮುಂತಾದ ಹನ್ನೆರಡು ಮಕ್ಕಳ ಕೃತಿಗಳನ್ನು ನೀಡಿದ್ದಾರೆ. ಆಂಗ್ಲ ವಿದ್ವಾಂಸರಾಗಿದ್ದ ಇವರು ಕೆ. ವೆಂಕಟಪ್ಪನವರನ್ನು ಕುರಿತಾದ ‘ಣhe mಚಿಟಿ ಚಿಟಿಜ his ಚಿಡಿಣ’, ‘ರಿeಟಿ ಚಿಟಿಜ ಜhಥಿಚಿಟಿಚಿ’ ಸೇರಿದಂತೆ 77 ಕೃತಿಗಳನ್ನು ಆಂಗ್ಲಭಾಷೆಯಲ್ಲಿಯೇ ರಚಿಸಿದ್ದಾರೆ.
ತಿರುಪತಿ ತಿಮ್ಮಪ್ಪನನ್ನು ಕುರಿತಂತೆ ‘ತಿರುಪತಿ ತಿಮ್ಮಪ್ಪ’ ಹಾಗೂ ‘he hiಟಟ shಡಿiಟಿe oಜಿ veಟಿgಚಿಜum’ ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ಬರೆದಿದ್ದಾರೆ. ಶ್ರೀ ಚಂದ್ರಶೇಖರ್ ಭಾರತೀ ಸ್ವಾಮಿಗಳ ಬದುಕಿನ ಕುರಿತಾಗಿ ‘ಶಾರದ ಪೀಠದ ಮಾಣಿಕ್ಯ’, ತಂದೆ ಕೃಷ್ಣರಾವ್ ರಿಂದ ವೈದ್ಯಾಶಾಸ್ತ್ರ ಕುರಿತು ರಚಿಸಿದ ಆಯುರ್ವೇದ ಕೃತಿ ‘ಆಯುರ್ವೇದದಲ್ಲಿ ನಾಡಿ ವಿಜ್ಞಾನ’, ಭಗವದ್ಗೀತೆಯನ್ನು ಕುರಿತಾದ ‘ಗೀತೆಗೊಂದು ಕೈಪಿಡಿ’. ಮನಶಾಸ್ತ್ರದ ಕುರಿತಾದ ‘ನಗೆಯ ನೆಲೆ’, ಮಧ್ವಾಚಾರ್ಯರನ್ನು ಕುರಿತಾದ ‘ಪೂರ್ಣ ಪ್ರಜ್ಞಾ ಪ್ರಶಸ್ತಿ’ ಇವರ ಸಂಗೀತ ಗುರುಗಳಾದ ಅನಂತ ಕೃಷ್ಣ ಕುರಿತಾದ ‘ಪುರುಷ ಸರಸ್ವತಿ’, ಸುಧಾ ಪತ್ರಿಕೆಗೆ ‘ದಾಸಯ್ಯ’ ಎಂಬ ಕಾವ್ಯನಾಮದಿಂದ ಬರೆದ ಲೇಖನಗಳ ಸಂಗ್ರಹ ‘ವಿಚಾರ ಲಹರಿ’ ಕೃತಿ, ಪ್ರಜಾವಣಿ ಪತ್ರಿಕೆಗೆ ಬರೆದ ಅಂಕಣ ಸಂಗ್ರಹ ‘ಹಣ ಪ್ರಪಂಚ’, ಕರ್ನಾಟಕದಲ್ಲಿ ಹಿರಿಯ ಸಂಗೀತ ಕರ್ಮಿಗಳ ಪರಿಚಯ ಕುರಿತು ಬರೆದ ‘ಹಿರಿಯ ಹೆಜ್ಜೆಗಳು’, ಪುರಂದರ ದಾಸರ ಐದನೆಯ ಶತಮಾನೋತ್ಸವ ಸಂದರ್ಭದಲ್ಲಿ ಕ್ನನಡ ಮತ್ತು ಸಂಸ್ಕøತಿ ಇಲಾಖೆಗಾಗಿ ಸಂಪಾದಿಸಿಕೊಟ್ಟ ‘ಪುರಂದರ ಸಾಹಿತ್ಯದರ್ಶನ’ ನಾಲ್ಕು ಸಂಪುಟಗಳಲ್ಲಿ ಬಂದಿರುವುದು ಇವರ ವ್ಯಕ್ತಿತ್ವದ ಘನತೆಗೆ ಹಿಡಿದ ಕನ್ನಡಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಕನ್ನಡ, ಆಂಗ್ಲ, ಗ್ರೀಕ್, ಸಂಸ್ಕøತ ಇತರೆ ಭಾಷೆಗಳಲ್ಲಿ ಇವರು ಸುಮಾರು 170 ಕೃತಿಗಳನ್ನು ನೀಡಿ ಸಾಹಿತ್ಯ ಲೋಕಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಒಂದು ಕಡೆ ವೈ.ಎನ್. ಗಂಡೂರಾವ್ ಉಲ್ಲೇಖಿಸುವಂತೆ-‘ಪ್ರೊ. ಎಸ್.ಕೆ ರಾಮಚಂದ್ರರಾಯರು ನಂಜನಗೂಡಿನ ಕನ್ನಂಬಾಡಿ ಶಾಸ್ತ್ರಿಗಳಿಂದ ಸಂಸ್ಕøತ ಕಾವ್ಯ ನಾಟಕಗಳು, ಉತ್ತರಾಧಿಮಠದ ದಿವಾನರಾಗಿದ್ದ ಅಗ್ನಿಹೋತ್ರಿ ಯಜ್ಞ, ವಿಠಲಾಚಾರ್ಯರಿಂದ ತರ್ಕಶಾಸ್ತ್ರ, ಬೆಂಗಳೂರಿನ ಕೇಶವ ಶಿವಘನ ಪಾಠಿಗಳಲ್ಲಿ ಯಜುರ್ವೇದ, ನಂಜನಗೂಡಿನ ವೆಂಕಟೇಶ ಸೋಮಾಯಾಜಿಗಳಿಂದ ಪೂರ್ವ ಮೀಮಾಂಸೆ, ತಲಕಾಡು ಕೃಷ್ಣ ದೀಕ್ಷಿತರ ಮೂಲಕ ಶೈವ-ಶಾಕ್ತ-ಆಗಮಗಳ ಪಾಠ, ಶ್ರೀನಿವಾಸ ಭಟ್ಟಾಚಾರ್ಯರಿಂದ ವೈಖಾನಸ ಆಗಮ-ಹೀಗೆ ಕಲಿತದ್ದು ಹಲವಾರು ಶಾಸ್ತ್ರಾಭ್ಯಾಸಗಳು’.
ಗುಂಡುರಾಯರ ಹೇಳಿಕೆಯನ್ನೇ ಗಮನಿಸುವುದಾದರೆ ರಾಮಚಂದ್ರರಾಯರಿಗಿದ್ದ ಜ್ಞಾನದ ಹಸಿವು ಓದುಗರಿಗೆ ಅರಿವಾಗದೇಯಿರದು. ಹತ್ತಾರು ಉತ್ತಮೋತ್ತಮ ಗುರುದಿಗ್ಗಜರಿಂದ ಹತ್ತಾರು ವಿಷಯಗಳಲ್ಲಿ ಪಾಂಡಿತ್ಯ ಸಂಪಾದಿಸಿದ ಇವರು ಸಾವಿರಾರು ಮೌಲಿಕ ಚಿಂತನೆಗಳನ್ನು ನಾಡಿಗೆ ನೀಡುವಲ್ಲಿ ಯಶಸ್ವೀಯಾದರು.
ಕನ್ನಡದ ಪ್ರಬುದ್ಧ ಸಾಹಿತಿ ಜಿ.ಪಿ. ರಾಜರತ್ನಂ ಅವರ ಆತ್ಮೀಯ ಶಿಷ್ಯರೂ ಆಗಿದ್ದ ರಾಮಚಂದ್ರರಾಯರು ಅವರಿಂದ ಬೌದ್ಧ ಧರ್ಮದ ಬಗ್ಗೆ ತಿಳಿದು ಕೊಂಡರು. ಆಗ ಹಿಂದೂ ಧರ್ಮಕ್ಕಷ್ಟೇ ಮೀಸಲಾಗದೇ ಬೌದ್ಧ, ಜೈನ, ಪಾರ್ಸಿ ಮುಂತಾದ ಧರ್ಮಗಳ ಬಗ್ಗೆ ಅಧ್ಯಯನ ನಡೆಸಿದರು.
ಸಂಗೀತ ಶಿಲ್ಪಿ ಮತ್ತು ಚಿತ್ರಕಲೆ
ಮೈಸೂರಿನ ಮಹಾರಾಜ ಕಾಲೇಜಿನ ಅಧ್ಯಾಪಕರಾದ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮ ರವರಲ್ಲಿ ಸಂಗೀತ ಅಬ್ಯಾಸ ಮಾಡಿದ ರಾಮಚಂದ್ರರಾಯರು ಮುಂದೆ ಖ್ಯಾತ ಕಲಾವಿದ ಕೆ. ವೆಂಕಟಪ್ಪನವರಿಂದ ಚಿತ್ರಕಲೆ ಕಲಿತುಕೊಂಡರು.
ಸಂಗೀತ, ನೃತ್ಯ, ಚಿತ್ರಕಲೆ ಹೀಗೆ ಸಮಸಮ ಚಿತ್ತಹರಿಸಿ ಅಭ್ಯಾಸ ನಡೆಸಿದ ರಾಮಚಂದ್ರರಾಯರು ಆಳವಾದ ಜ್ಞಾನವನ್ನು ತಮ್ಮದಾಗಿಸಿಕೊಂಡರು. ಸ್ವತಃ ವೀಣಾವಾದಕರಾಗಿದ್ದ ಇವರು ಹಲವಾರು ಪ್ರಯೋಗಾತ್ಮಕ ಕಾರ್ಯಕ್ರಮಗಳನ್ನು ನೀಡಿ ಯಶಸ್ವೀಯಾದವರು.
ಪ್ರತಿಷ್ಠಿತ ಕಲಾನಿಧಿಗಳಾದ ಮುಸುರಿ ಸುಬ್ರಹ್ಮಣ್ಯ ಅಯ್ಯರ್, ರವೀಂದ್ರನಾಥ ಠ್ಯಾಗೋರ್, ಚೆಂಬೈವೈದ್ಯನಾಥ ಭಾಗವತರ್, ವೀಣೆ ಶೇಷಣ್ಣ, ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ಮುಂತಾದವರ ಆಳೆತ್ತರ ಶಿಲ್ಪಗಳನ್ನು ಕಲಾಕಾರ ಪ್ರವೀಣರಾಗಿದ್ದ ರಾಮಚಂದ್ರರಾಯರು ಜೇನುಮೇಣ, ಪಲ್ಪ್, ಟೆರಾಕೋಟಾ, ಪ್ಲಾಸ್ಟರ್ ಆಫ್ ಪ್ಯಾರಿಸ್ ಮುಂತಾದವುಗಳನ್ನು ಉಪಯೋಗಿಸಿ ರಚಿಸಿದ ಕಲಾಕೃತಿಗಳು ಜನಮನ್ನಣೆಗಳಿಸಿದ್ದವು.
ಚಿತ್ರಕಲೆಯಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದ ರಾಮಚಂದ್ರ ರಾಯರು ರಾಜ್ಯದ ವಿವಿದೆಡೆ ಏಕವ್ಯಕ್ತಿ ಪ್ರದರ್ಶನ ನಡೆಸಿ ಜನಪ್ರ್ರಿಯವಾದ ವ್ಯಕ್ತಿ ಇವರು ಬಹುಮುಖ್ಯವಾಗಿ ಜಲವರ್ಣ, ಬಾಟಿಕ್, ತೈಲವರ್ಣ, ರೇಖಾಚಿತ್ರ ಪ್ರಕಾರಗಳಲ್ಲಿ ಅದ್ವಿತೀಯ ಪಾಂಡಿತ್ಯ ಪಡೆದಿದ್ದರು.
ಓಟ್ಟಾರೆ ಹೇಳುವುದಾದರೆ ವೈವಿಧ್ಯ ಭಾಷಾ ಪ್ರೌಢಿಮೆ, ಅದ್ಭುತ ಚಿತ್ರ ಕೈ ಚಳಕ, ಅದ್ವಿತೀಯ ಶಿಲ್ಪ ಕಲತ್ವ, ಸಾಹಿತ್ಯ ಚೈತನ್ಯ, ವಾಕ್ಝರಿ, ಸಂಗೀತ ಪ್ರಜ್ಞೆ ಇವೆಲ್ಲವೂ ಮೇಳೈಸಿರುವ ಜ್ಞಾನ ಸಾಗರ ರಾಮಚಂದ್ರರಾಯರು ಎಂದರೆ ಅತಿಶಯೋಕ್ತಿಯಾಗಲಾರದು.
ಗೌರವ ಪುರಸ್ಕಾರಗಳು
ಸಾಧನಾ ಶಿಖರದ ಉತ್ತುಂಗದಲ್ಲಿ ಪ್ರಜ್ಚಲಿಸಿದ ಪ್ರೋ. ಎಸ್.ಕೆ ರಾಮಚಂದ್ರ ರಾಯರಿಗೆ ಅವರ ಪಾಂಡಿತ್ಯ ಪ್ರತಿಭೆಗೆ ಹಲವಾರು ಗೌರವ ಪುರಸ್ಕಾರಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ. ಸಂಗೀತ ಕಲಾ ರತ್ನ ಪ್ರಶಸ್ತಿ, ಶಾಸ್ತ್ರ ಚೂಡಾಮಣಿ ಪ್ರಶಸ್ತಿ, ಸೇಡಿಯಾವು ಪ್ರಶಸ್ತಿ, ಡಿ.ವಿ.ಜಿ ಪ್ರಶಸ್ತಿ, ಅ.ನ.ಕೃ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಇವರನ್ನು ಅಲಂಕರಿಸಿವೆ.
ಇವರ ಸರ್ವಾಂಗೀಣ ಸಾಧನೆ ಪರಿಗಣಿಸಿ ತಿರುಪತಿ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಸತ್ಕರಿಸಿವೆ.
ಇಷ್ಟೆಲ್ಲ ಅತ್ಯುನ್ನತ ಸಾಧನೆಗೈದ ರಾಮಚಂದ್ರರಾಯರು ಆರಕ್ಕೇರದ ಮೂರಕ್ಕಿಳಿಯದ ವ್ಯಕ್ತಿ. ಈ ಸುಸಂಸ್ಕøತ ಹಿರಿಯ ಜೀವ 2006 ಫೆಬ್ರವರಿ 2 ರಂದು ಇಹಲೋಕ ತ್ಯಜಿಸಿದÀರೂ ಅವರು ನಮಗೆ ಬಿಟ್ಟು ಹೋದ ಜ್ಞಾನ ಸಾಗರ ಅಪಾರವಾದುದು.
ಸೃಜನಶೀಲ ಜಾನಪದ ತಜ್ಞ ಃ ಹಿ. ಶಿ. ರಾಮಚಂದ್ರೇಗೌಡ
ಜಾನಪದ ಸಾಹಿತ್ಯ ಮತ್ತು ಸಂಗ್ರಹದ ಕಾರ್ಯ ಕೇವಲ ಒಂದು ಸಾಹಿತ್ಯ ಪ್ರಕಾರದ ವ್ಯಾಮೋಹವಲ್ಲ. ಪ್ರಸ್ತುತ ಆಧುನಿಕವೆಂಬ ಜಾಗತಿಕ ಸಂಸ್ಕøತಿಯ ಸಂದರ್ಭದಲ್ಲಿ ಸ್ಥಳೀಯ ಸಾಹಿತ್ಯ ಮತ್ತು ಸಂಸ್ಕøತಿಯನ್ನು ಸಂಘಟಿಸುವ ನಿಟ್ಟಿನಲ್ಲಿ ಅತಿ ಮಹತ್ವಪೂರ್ಣವಾಗುತ್ತದೆ. ಗ್ರಾಮೀಣ ಸಮುದಾಯಗಳನ್ನು ಚೇತರಿಸುವ ಮೂಲಕ ಅಖಂಡ ಭಾರತವನ್ನು ಪುನರ್ ಸಂಘಟನೆ ಮಾಡಬೇಕಿದೆ. ಇದು ಯಾರ ಹೊಣೆ? ಎಂಬ ಪ್ರಶ್ನೆಗೆ ಅನೇಕ ವಿದ್ವಾಂಸರು ಈ ನಿಟ್ಟಿನಲ್ಲಿ ಜಾನಪದ ಸಂಶೋಧನೆ, ಸಂಗ್ರಹ ಕಾರ್ಯ, ಅಧ್ಯಯನ ಮುಂತಾದ ಕಾರ್ಯಗಳಲ್ಲಿ ತೊಡಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅವರಲ್ಲಿ ಎಸ್.ಕೆ.ಖರೀಂಖಾನ್, ಮತಿಘಟ್ಟ ಕೃಷ್ಣಮೂರ್ತಿ, ಎಚ್.ಎಲ್ ನಾಗೇಗೌಡ, ಹಿ.ಶಿ.ರಾಮಚಂದ್ರೇಗೌಡ, ಡಾ|| ಚಂದ್ರಶೇಖರ ಕಂಬಾರ, ಡಾ|| ದೇ.ಜ.ಗೌ, ಎಚ್.ಜೆ.ಲಕ್ಕಪ್ಪಗೌಡ, ಕೃಷ್ಣಮೂರ್ತಿ ಹನೂರ, ಡಿ.ಬಿ.ನಾಯಕ, ಚಕ್ಕೆರೆ ಶಿವಶಂಕರ್, ಮೈಲಹಳ್ಳಿ ರೇವಣ್ಣ ಮುಂತಾದವರು ಪ್ರಮುಖರಾಗಿದ್ದಾರೆ.
ದಕ್ಷಿಣ ಕರ್ನಾಟಕದಲ್ಲಿ ಹಿ.ಶಿ.ರಾ ಎಂದೆ ಖ್ಯಾತರಾದ ಹಿರಿಸಾವೆ ಶಿವನಂಜಪ್ಪ ರಾಮಚಂದ್ರೇಗೌಡರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆಯಲ್ಲಿ ಕ್ರಿ.ಶ.1947 ನವಂಬರ್ 15 ರಂದು ಜನಿಸಿದರು.
ಭಾರತೀಯ ಮನೋಧರ್ಮವನ್ನು ಪಾಶ್ಚಾತ್ಯ ಸಿದ್ಧಾಂತಗಳ ನೆಲೆಗಟ್ಟಿನಲ್ಲಿ ಇಂದಿನ ಜಾನಪದವನ್ನು ಅಭ್ಯಾಸಿಸುವ ಸಂದರ್ಭದಲ್ಲಿ ಅದಕ್ಕಿಂತಲೂ ಭಿನ್ನವಾದ ರೂಪದಲ್ಲಿ ಅಧ್ಯಯನ ಮಾಡಬಹುದೆಂಬುದನ್ನು ತೋರಿಸಿಕೊಟ್ಟವರಿ ಹಿ.ಶಿ.ರಾ ರವರು. ಬಹುತೇಕ ಅಧ್ಯಯನ ಮರದ ಬೇರು ಬಿಟ್ಟು ಕೇವಲ ಕೊಂಬೆಯನ್ನು ಮಾತ್ರ ಆವರಿಸಿಕೊಂಡ ಸಂದರ್ಭದಲ್ಲಿ ಇದಕ್ಕೆಇಡಿ ಜನಪದವನ್ನು ಬೌದ್ಧಿಕ ನೆಲೆಗಟ್ಟಿನಲ್ಲಿ ಸಮೀಕರಿಸಿಕೊಂಡು ಗಟ್ಟಿ ವಿಮರ್ಶೆಯೊಂದಿಗೆ ವೈಚಾರಿಕವಾಗಿ ಅವಲೋಕಿಸಿದವರೆ ಹಿ.ಶಿ.ರಾಮಚಂದ್ರೇಗೌಡರೆಂದರೆ ಅತಿಶಯೋಕ್ತಿಯಾಗಲಾರದು.
ಒಂದು ಡಾ|| ಜಿ.ಆರ್.ತಿಪ್ಪೇಸ್ವಾಮಿಯವರು ಹೇಳುವಂತೆ “ಜನಪದ-ಜಾನಪದದ ಬಗೆಗೆ ತಮ್ಮದೇಯಾದ ನಿಲುವುಗಳಿಂದ ಪಾಳೆಯಪಟ್ಟುಗಳನ್ನು ಕಟ್ಟಿಕೊಂಡಿದ್ದರಿಂದಾಗಿ ನಮ್ಮ ಜಾನಪದವನ್ನು ಮತ್ತೊಬ್ಬರಿಗೆ ಸರಿಯಾಗಿ ಅರ್ಥೈಸಬೇಕೆಂಬ ಯೋಚನೆಗಳೇ ಬರಲಿಲ್ಲ. ಅಧ್ಯಯನ ಚಿಂತನೆಯಲ್ಲಿ ವಿಧ್ವಾಂಸರಲ್ಲಿ ಭಿನ್ನತೆ ಬೆಳೆದಂತೆ ಕರ್ನಾಟಕ ಜಾನಪದ ಹೇಗೆ ಚಲಿಸಬೇಕು? ಕೆಲಸ ಮಾಡೆಬೇಕು ಎಂಬುದು ಗೊತ್ತಾಗದ ಸಂದರ್ಭದಲ್ಲಿಜಾನಪದ ವಿದ್ವಾಂಸರ ಕೆಲಸ ದೃಷ್ಠಿ ಧೋರಣೆಗಳನ್ನು ತಿಳಿಸಿಕೊಡಬೇಕೆಂಬ ಉದ್ದೇಶದಿಂದ ಹಿ.ಶಿ.ರಾಮಚಂದ್ರೇಗೌಡರು ತಮ್ಮ ಅಧ್ಯಕ್ಷತೆಯಲ್ಲಿ ಜಾನಪದ ಅಕಾಡೆಮಿವತಿಯಿಂದ ‘ಜಾನಪದ ತಲೆಮಾರು’ ಶೀರ್ಷಿಕೆಯಲ್ಲಿ ಮೂರು ಕೃತಿಗಳನ್ನು ಹೊರತಂದರು. ನಮ್ಮ ಸಂಸ್ಕøತಿ ಚಿಂತನೆ ಮತ್ತು ಬೆಳವಣಿಗೆ ಹೇಗೆ ನಡೆಯುತ್ತಿದೆ ಹೊಸ ವ್ಯಕ್ತಿತ್ವಗಳು ಹೇಗೆ ಬೆಳೆಯುತ್ತಿವೆ ಎಂಬುದನ್ನು ಅತ್ಯಂತ ಸಮರ್ಥವಾಗಿ ಭಿನ್ನ ಲೇಖಕರು ಈ ಕೃತಿಗಳಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ”.
ಸಾಹಿತ್ಯ ಕೃತಿಗಳು ಃ ಭೂಮಿ ಮತ್ತು ಹಿಂಸೆ(1979), ಜಾನಪದ ವ್ಯಕ್ತಿ ವಿಚಾರ(1982), ಜಾನಪದ ಅಂತರಂಗ(1987), ಜಾನಪದ ತಡಕಾಟ(1988), ಜಾನಪದರು ನಾವು(1993), ಜಾನಪದ ಪ್ರಕೃತಿ(2001), ಕನ್ನಡ ಜನಪದ ಕತೆಗಳ ನೆಲೆ(2002), ರಾಮ ಅಳುತ್ತಿದ್ದಾನೆ(2005), ಶೈಕ್ಷಣಿಕ ಪ್ರತಿಭೆ ಮತ್ತು ಜಾತಿ(2005), ಜನಪದ ಜೀವನ ನ್ಯಾಯ(2008) ಮುಂತಾದ ಕೃತಿಗಳು ಮಹತ್ವದ್ದಾಗಿವೆ.
1982 ರಲ್ಲಿ ರೈತ ಹೋರಾಟದ ಹಿನ್ನಲೆಯಲ್ಲಿ ಹೊರತಂದ ಹಿ.ಶಿ.ರಾಮಚಂದ್ರೇಗೌಡ, ರಂಜಾನ್ ದರ್ಗಾ, ಡಾ||ಸಿದ್ದಲಿಂಗಯ್ಯನವರು ಬರೆದ ಹಾಡುಗಳು ‘ಹಾವುಗಳು’, ‘ಹೊಂಬಾಳೆ’, ‘ಡಂಗೂರ’ ಹಾಗೂ ‘ನಮ್ಮ ನಾಯಕರು’ ಎಂಬ ನಾಲ್ಕು ಕ್ರಾಂತಿ ಗೀತೆಗಳ ಸಂಗ್ರಹ ಧ್ವನಿ ಸುರುಳಿಗಳು ಇಡಿ ರಾಜ್ಯದಲ್ಲಿಯೇ ಸಂಚಲನವನ್ನುಂಟು ಮಾಡಿತೆನ್ನಬಹುದು.
ಭೂಮಿ ಮತ್ತು ಹಿಂಸೆ ಃ 1979 ರಲ್ಲಿ ಹೊರಬಂದ ಈ ಕೃತಿಯಲ್ಲಿ ರೈತ ಸಂಸ್ಕøತಿಯು ಪುನರುಜ್ಜೀವನಗೊಂಡಿದೆ. ಇಲ್ಲಿ ಆಳುವ ಸಮಾಜ ರೈತರನ್ನು ಶೋಷಣೆ ಮಾಡುವುದನ್ನು ಉಗ್ರವಾಗಿ ಖಂಡಿಸಿದ್ದಾರೆ.
ಜನಪದರು ನಾವು ಃ 1993 ರಲ್ಲಿ ಹೊರಬಂದ 168 ಪುಟಗಳ ಈ ಕೃತಿಯನ್ನು ಮಾನಸ ಗಂಗೋತ್ರಿ ಮೈಸೂರು ಪ್ರಕಟಿಸಿದೆ. ಇದರಲ್ಲಿ ಜನಪದರು ನಾವು, ಜನಪದರ ಸಂಪತ್ತು ಜಾನಪದ ಹಾಗೂ ಜಾನಪದದಿಂದ ಜನಜೀವನಕ್ಕೆ ಎಂಬ ಮೂರು ಮುಖ್ಯ ಭಾಗಗಳಿವೆ. ಮೊದಲನೆಯ ಅಧ್ಯಾಯದಲ್ಲಿ ಜನಪದದ ಅರ್ಥ, ಜನಪದಗಳ ವರ್ಗೀಕರಣಗಳ ಕುರಿತು ಆಳವಾಗಿ ಚರ್ಚೆಯಾಗಿದೆ. ಎರಡನೆಯ ಅಧ್ಯಾಯದಲ್ಲಿ ಜಾನಪದವನ್ನು ವಿವಿಧ ಕಾಲಘಟ್ಟಗಳಲ್ಲಿ ಭಾರತೀಯ ಪರಂಪರೆ ಹಾಗೂ ಪಾಶ್ಚಿಮಾತ್ಯ ಪರಂಪರೆಯೊಂದಿಗೆ ಚರ್ಚಿಸಿದ್ದಾರೆ. ಮೂರನೆಯ ಅಧ್ಯಾಯದಲ್ಲಿ ಮೌಖಿಕತೆ, ಅಲಿಖಿತತೆ ಹಾಗೂ ಉಳಿಕೆ-ಪಳೆಯುಳಿಕೆಗಳ ಆಧಾರದಲ್ಲಿ ಜಾನಪದದ ಇರುವಿಕೆ, ಕೇಳುವಿಕೆ, ಅನುಭವಿಸುವಿಕೆ, ಬಳಸುವಿಕೆಗಳ ಬಗ್ಗೆ ಚರ್ಚಿಸಲಾಗಿದೆ.
ಜನಪದ ಪ್ರಕೃತಿ ಃ 2001 ರಲ್ಲಿ ಬಂದ ಜನಪದ ಪ್ರಕೃತಿ ಕೃತಿಯನ್ನು ಕುರಿತು ಖ್ಯಾತ ಜನಪದ ಸಂಶೋಧಕರಾದ ಚಕ್ಕೆರೆ ಶಿವಶಂಕರ್ರವರು ಈ ರೀತಿ ಹೇಳಿದ್ದಾರೆ “ ಅನುಭವ ಹಾಗೂ ಅಭಿವ್ಯಕ್ತಿಗಳೆರಡರಲ್ಲೂ ಗಾಢವಾದ ಸಂವೇದನೆಯುಳ್ಳ ಹಿ.ಶಿ.ರಾಮಚಂದ್ರೇಗೌಡರು ಕನ್ನಡ ನಾಡಿನ ಪ್ರಗತಿಪರ ಚಿಂತಕರಲ್ಲಿ ಒಬ್ಬರು. ಸದಾ ಚಲನಶೀಲತೆಯ ಕನಸು ಕಾಣುವ ಗೌಡರ ಬರಹಗಳ ಹಿಂದಿನ ಆಶಯ ಶೋಧನೆ ಮತ್ತು ಅನ್ವಯಗೊಳಿಸುವುಕೆ. ಕೃಷೀವಲಯ ಸಂಸ್ಕøತಿಯಿಂದ ಉತ್ಪತ್ತಿಯಾದ ಜಾನಪದವನ್ನು, ಈವತ್ತಿನ ಆರ್ಥಿಕ, ಸಾಮಾಜಿಕ, ರಾಜಕೀಯ ಚಿಂತನೆಗಳ ಮುಖಾಂತರವೇ ಪ್ರಸ್ತುತಗೊಳಿಸಲು ಯತ್ನಿಸುವ ಅವರ ಈ ಸಂಕಲನದ ಲೇಖನಗಳಲ್ಲಿ ಆಳವಾದ ವಿದ್ವತ್ತಿನ ಜೊತೆಗೆ ಅಸಾಧಾರಣವಾದ ಗ್ರಹಿಕೆಯೂ ಇದೆ. ಕನ್ನಡ ಜಾನಪದವನ್ನು ವೈಜ್ಞಾನಿಕವಾಗಿ ನಿರ್ಣಯಿಸಿಕೊಳ್ಳುವುದರೊಂದಿಗೆ ವರ್ತಮಾನಕ್ಕೆ ಹೊಂದಿಸಿಕೊಳ್ಳುವ ಗೌಡರ ಬಗೆ ವಿಶಿಷ್ಟವಾದುದು. ಬದಲಾಗುತ್ತಿರುವ ಅಧ್ಯಯನ ವಿಧಾನಗಳಿಗೆ ಕನ್ನಡ ಜಾನಪದವು ತನ್ನನ್ನು ಒಡ್ಡಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಗೌಡರ ಪ್ರಸತುತ ಕೃತಿಯು ಜಾನಪದ ಕ್ಷೇತ್ರಕ್ಕೆ ಅತ್ಯಂತ ಮೌಲಿಕ ಕೊಡುಗೆಯಾಗಿದೆ”.
ಕನ್ನಡ ಜನಪದ ಕತೆಗಳ ನೆಲೆ ಃ 2002 ರಲ್ಲಿ ಹೊರಬಂದ 255 ಪುಟಗಳ ‘ಕನ್ನಡ ಜನಪದ ಕತೆಗಳ ನೆಲೆ’ ಈ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಇದರಲ್ಲಿ ಕನ್ನಡ ಜನಪದರ ಕತೆಗಳು, ಜನಪದ ಕತೆಗಳ ಅಧ್ಯಯನ ಇತಿಹಾಸ, ಜನಪದ ಕತೆಗಳ ಸ್ವರೂಪ, ಜನಪದ ಕತೆಗಳ ಸಿದ್ಧಾಂತಗಳು, ಜನಪದ ಅಧ್ಯಯನದಲ್ಲಿ ಮಾನಗಳ ಕಲ್ಪನೆ, ಕನ್ನಡ ಜನಪದ ಕಥಾವರ್ಗಗಳು ಮುಂತಾದ ಇಡಿ ಜಾನಪದ ಕ್ಷೇತ್ರದ ಮೇಲೆ ಬೆಳಕು ಚಲ್ಲುವಂತಹ ಅಮೂಲ್ಯ ಹತ್ತು ಲೇಖನಗಳಿವೆ.
ಜನಪದ ಜೀವನ ನ್ಯಾಯ ಃ 2008 ರಲ್ಲಿ ಹೊರಬಂದ ‘ಜನಪದ ಜೀವನ ನ್ಯಾಯ’ ಕೃತಿಯು 196 ಪುಟಗಳನ್ನೊಳಗೊಂಡಿದೆ. ಜನಪದ ಪ್ರದರ್ಶನ ಕಲೆಗಳು ಃ ಪ್ರಚಲಿತ ಕನ್ನಡ ಮನಸ್ಸು, ಹೆಣ್ಣಿನ ಅಧಿಕಾರ, ಪೂರ್ವಾಪರ, ಜನಪದ ಸಾಹಿತ್ಯದ ನ್ಯಾಯ, ಸೋಮ ಃ ಪ್ರದರ್ಶನದ ಆಯಾಮಗಳು, ಏಕತಾರಿ ಎಂಬ ಆಧುನಿಕ ನಾಯಕ, ಜಾನಪದ ವಿಮರ್ಶೆ, ಜನಪದ ಸಾಹಿತ್ಯದಲ್ಲಿ ಲಿಂಗಧಾರಿತ ಸಂವೇದನೆಗಳು, ನಾಡಗೌಡನ ನೆನಪು, ಅಲೆಮಾರಿಗಳ ಇರುವು ಮತ್ತು ಅರಿವು, ಜನಪದ ಕಲಾವಿದ ಎಂಬ ಅಳು ಬುರುಕ, ಜಾನಪದ ಸಂಶೋಧನೆ ಮುಂತಾದ 23 ಲೇಖನಗಳಿವೆ.
ಈ ಕೃತಿಯ ಬಗ್ಗೆ ಡಾ|| ಬಂಜಗೆರೆ ಜಯಪ್ರಕಾಶ್ ಅವರು ಬೆನ್ನುಡಿಯಲ್ಲಿ ಈ ರೀತಿ ಹೇಳಿದ್ದಾರೆ. “ಹಿ.ಶಿ.ರಾಮಚಂದ್ರೇಗೌಡರು ಸದಾ ಚಟುವಟಿಕೆಯಿಂದಿರುತ್ತಾ, ಆ ಚಟುವಟಿಕೆಗಳಿಗೆ ಸಾಮಾಜಿಕ ಅರ್ಥವಿರಬೇಕೆಂದು ಬಯಸುತ್ತಾ, ಜಾತಿ ಸೀಮಿತತೆಗಳ ನಿರÀರ್ಥಕತೆಯನ್ನು ಅರಿತವರಾಗಿ ಅದನ್ನು ಮೀರುವ ಮಾನವೀಯತೆಯನ್ನು ಅರಳಿಸುತ್ತಾ ನಮ್ಮ ನಡುವೆ ಮನುಷ್ಯ ಕಾಳಜಿಗಳ ವ್ಯಕ್ತಿಯಾಗಿ, ಹೊಸತನ್ನು ಅರಿಯಬೇಕೆಂಬ ಹಂಬಲಗಳ ಅಧ್ಯಯನಶೀಲರಾಗಿ, ಅರ್ಥಪೂರ್ಣ ಚಿಂತನೆಗಳ ವಿದ್ವಾಂಸರಾಗಿ ನಮ್ಮ ಕಾಲಘಟ್ಟದ ಸಂವೇದನೆಗಳ ಜೀವಪರ ಪ್ರತಿಪಾದಕರಲ್ಲೊಬ್ಬರಾಗಿದ್ದಾರೆ”.
ವಚನ ಸಾಹಿತ್ಯ, ದಾಸ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಹಿನ್ನೆಲೆಯಲ್ಲಿ ತತ್ತ್ವಪದಗಳನ್ನು ಓರೆಹಚ್ಚುತ್ತಾ ಬಂದ ಹಿ.ಶಿ.ರಾರವರು ಸೋಲು ಅಥವಾ ಸಾವಿನ ಅಭಿನಯವೇ ತತ್ತ್ವ ಪದದ ಮೂಲ ನೆಲೆ ಎಂದು ಭಾವಿಸಿ ನೀತಿ ಮತ್ತು ಮೌಲ್ಯದ ಪರಿಕಲ್ಪನೆಯ ಜೊತೆಗೆ ತತ್ತ್ವದ ನೆಲೆಯನ್ನು ಪರಿಶೀಲಿಸಿರುವ ರೀತಿ ಅನನ್ಯ ಎಂದು ತಿಪ್ಪೆಸ್ವಾಮಿಯವರು ಒಂದು ಕಡೆ ಹೇಳಿದ್ದಾರೆ.
ಒಟ್ಟಾರೆ ಹೇಳುವುದಾದರೆ ಡಾ|| ಹಿ.ಶಿ.ರಾಮಚಂದ್ರೇಗೌಡರು ಇಡಿ ಜಾನಪದವನ್ನು ವೈಜ್ಞಾನಿಕ ಹಾಗೂ ವೈಚಾರಿಕ ದೃಷ್ಠಿಕೋನದಲ್ಲಿ ಚಿಂತಿಸಿದ ಮೊದಲಿಗರೆನ್ನಬಹುದು. ಗತದ ಸಂಸ್ಕøತಿಗಳನ್ನು ವರ್ತಮಾನದೊಂದಿಗೆ ಸಮೀಕರಿಸುವ ಇವರ ವಿದ್ವತ್ತು ಅದ್ವಿತೀಯವಾದುದು ಎಂದರೆ ಅತಿಶಯೋಕ್ತಿಯಾಗಲಾರದು.
ಬಹುಮುಖ ಬರಹಗಾರ್ತಿ ಶ್ರೀಮತಿ ಬಿ.ಕೆ.ಸುಬ್ಬಲಕ್ಷ್ಮಿ
ಹಾಸನ ಜಿಲ್ಲೆ ಮಾನವನ ಬದುಕು, ಬರಹ ಮತ್ತು ಸಂಸ್ಕøತಿಗೆ ಅಗಾದ ಕೊಡುಗೆ ನೀಡಿದೆ. ಇಲ್ಲಿ ಪುರುಷರೆಷ್ಟು ಸಾಧನೆ ಮಾಡಿರುವರೋ ಅಷ್ಟೇ ಸಾಧನೆಯನ್ನು ಮಹಿಳೆಯರೂ ಮಾಡಿರುವುದು ವಿಶೇಷವಾಗಿದೆ.
ಅಂತಹ ಅಪರೂಪದ ವ್ಯಕ್ತಿತ್ವದ ಕಣಜ ಸುವರ್ಣ ಎಂಬ ಕಾವ್ಯನಾಮದಿಂದಲೇ ರಾಜ್ಯದಾದ್ಯಾಂತ ಖ್ಯಾತಿ ಪಡೆದ ಶ್ರೀಮತಿ ಸುಬ್ಬಲಕ್ಷ್ಮಿಯವರು. ಇವರು ಕ್ರಿ.ಶ.1929 ನವೆಂಬರ್ 29 ರಂದು ಹಾಸನದಲ್ಲಿ ಜನಿಸಿದರು. ವೃತ್ತಿಯಲ್ಲಿ ಪ್ರೌಢಶಾಲಾ ಹಿಂದಿ ಶಿಕ್ಷಕಿಯಾದ ಇವರು ಪ್ರವೃತ್ತಿಯಲ್ಲಿ ಸಾಹಿತ್ಯ ಹಾಗೂ ಸಾಂಸ್ಕøತಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.
ಕಥೆ, ಏಕಾಂತ ನಾಟಕಗಳು, ಗೀತೆಗಳು, ಬರಹಗಳು ಹಾಗೂ ಕಾದಂಬರಿ ವಿಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಜ್ಯದ ಪ್ರಮುಖ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಜನಪ್ರಗತಿ ಮುಂತಾದ ದಿನಪತ್ರಿಕೆಗಳಲ್ಲಿ ಹಾಗೂ ಕಥಾವಳಿ, ಕಸ್ತೂರಿ ಮುಂತಾದ ಮಾಸಿಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ.
ಪ್ರಕಾಶದೆಡೆಗಡ ಡೆಡ್ಲೆಟರ್, ಸಮುದ್ರ ತಟದಲ್ಲಿ, ಅವಳ ಸೋಲು ಮುಂತಾದ ಕಥೆಗಳು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಜನ ಮನ್ನಣೆ ಗಳಿಸಿವೆ. ಇವರ ‘ಕರಿ ಬೆಕ್ಕು’ ಕಥೆ ಅಂದಿನ ದಿನಮಾನದ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಯಶೋಧರ, ಸೂರ್ದಾಸ್, ಭ್ರಮರ ಗೀತೆ, ಮೈಥಿಲಿ ಶರಣಗುಪ್ತ, ತುಳಸೀ, ಪ್ರೇಮ್ಚಂದ್ ಮುಂತಾದವುಗಳು ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗಿ ಜನಪ್ರಿಯವಾಗಿವೆ.
ಹಿಂದಿಮಹಾಗೂ ಕನ್ನಡದಲ್ಲಿ ಸಮಾನ ಪಾಂಡಿತ್ಯ ಪಡೆದಿದ್ದ ಸುಬ್ಬಲಕ್ಷ್ಮಿಯವರು ಹಿಂದಿಯ ಅನೇಕ ಮೌಲ್ಯಯುತ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವುಗಳಲ್ಲಿ ‘ಪ್ರತಿಜ್ಞೆ’, ‘ಬರಡು ಬಾಳು’, ‘ಎಂಬತ್ತು ದಿನಗಳಲ್ಲಿ ಪ್ರಪಂಚ ಪ್ರವಾಸ’ ಪ್ರಮುಖವಾದ ಅನುವಾದ ಕೃತಿಗಳಾಗಿವೆ.
ಹಾಗೆಯೇ ಕನ್ನಡದ ಖ್ಯಾತ ಕಾದಂಬರಿಕಾರರಾದ ಶ್ರೀ ನಿರಂಜನ ಅವರ ‘ಬನಶಂಕರಿ’ ಕಾದಂಬರಿಯನ್ನು ಹಿಂದಿಗೂ ಅನುವಾದ ಮಾಡಿದ ಕೀರ್ತಿ ಸುಬ್ಬಲಕ್ಷಮಿಯವರದ್ದಾಗಿದೆ.
ಸುವರ್ಣ ಎಂಬ ಕಾವ್ಯನಾಮದಿಂದಲೇ ರಾಜ್ಯದಾದ್ಯಾಂತ ಮನೆ ಮಾತಾಗಿದ್ದ ಸುಬ್ಬಲಕ್ಷ್ಮಿಯವರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡುವುದರ ಮೂಲಕ ಹಾಸನ ಜಿಲ್ಲೆಗೂ ಕೀರ್ತಿ ತಂದ ಬಹುಮುಖ ಬರಹಗಾರ್ತಿ.
ನಾಟಕ ಸಾರ್ವಭೌಮ - ಬೇಲೂರು ಕೃಷ್ಣಮೂರ್ತಿ
ನಾಟಕವು ಪ್ರಪಂಚದ ಯಾವ ಭಾಗದಲ್ಲಿ, ಯಾವಾಗ ಪ್ರಾರಂಭವಾಯಿತು ಎಂದು ಹೇಳುವುದು ಸಾಧ್ಯವಿಲ್ಲ. ಅನುಕರಣೆ ಮನುಷ್ಯ£ಗೆ ಸಹಜ. ಕಥೆ ಕಟ್ಟುವುದು, ಕಥೆ ಹೇಳುವುದು ಮನುಷ್ಯನಿಗೆ ಪ್ರಿಯವಾದದ್ದು. ಆದುದರಿಂದ ಬಹುಹಿಂದೆಯೇ ಬೇರೆ ಬೇರೆ ಪ್ರದೇಶಗಳಲ್ಲಿ ನಾಟಕ ಕಾಣಿಸಿಕೊಂಡಿರಬೇಕು. ಧಾರ್ಮಿಕ ಆಚರಣೆಗಳಿಗೂ ನಾಟಕಕ್ಕೂ ನಂಟು. ರಾಮಾಯಣವು ರಚಿತವಾದ ಕಾಲದಲ್ಲಿಯೇ ಭಾರತದಲ್ಲಿ ನಾಟಕ ಇದ್ದಿರಬೇಕು. ಪ್ರಾಚೀನ ಗ್ರೀಸ್ನಲ್ಲಿ ಡಯೋಸೀಸ್ ಎನ್ನುವ ದೇವತೆಯ ಉತ್ಸವವು ನಾಟಕಕ್ಕೆ ಜನ್ಮ ಕೊಟ್ಟಿತೆನ್ನಬಹುದು. (ಕ್ರಿ.ಪೂ ಐದನೆಯ ಶತಮಾನ). ಕ್ರಿ.ಶ. ಆರನೆಯ ಶತಮಾನದ ಹೊತ್ತಿಗೆ ಹಾಡು – ಕುಣಿತಗಳೊಂದಿಗೆ ಕಥೆಯ ಅಂಶವೂ ಸೇರಿ ನಾಟಕದ ರೂಪ ಬಂದಿತೆಂದು ಹಿರಿಯ ಸಂಶೋಧಕರಾದ ಪ್ರೋ. ಎಲ್.ಎಸ್.ಶೇಷಗಿರಿರಾವ್ ಹೇಳುತ್ತಾರೆ.
ನಾಟಕ ಎಂದಾಕ್ಷಣ ನಮ್ಮ ಮುಂದೆ ಅನೇಕ ಪ್ರಕಾರಗಳು ಸುಳಿದು ಹೋಗುತ್ತವೆ. ಅವುಗಳಲ್ಲಿ ಪೌರಾಣಿಕ ನಾಟಕ, ಐತಿಹಾಸಿಕ ನಾಟಕ, ವಾಸ್ತವಿಕ ನಾಟಕ, ಸುಸಂಘಟಿತವಾದ ನಾಟಕ, ಅಸಂಗತ ನಾಟಕಗಳು ಪ್ರಮುಖವಾಗಿವೆ. ಹೀಗೆ ನಾಟಕ ಎಂದಾಕ್ಷಣ ನಮಗೆ ದುತ್ತನೇ ನೆನಪಿಗೆ ಬರುವುದು ಬೇಲೂರು ಕೃಷ್ಣಮೂರ್ತಿಯವರು.
ಕನ್ನಡ ಸಾರಸ್ವತ ಲೋಕದಲ್ಲಿ ‘ನಾಟಕ’ ಪ್ರಕಾರಕ್ಕೆ ಭದ್ರ ಅಡಿಪಾಯ ಹಾಕಿದವರಲ್ಲಿ ಇನ್ನರಿದ್ದೆಡೆಗೆ ಕೊಂಟೋಯ್ದವರಲ್ಲಿ ಕೃಷ್ಣಮೂರ್ತಿಯವರು ಮುಂಚೋಣಿಯಲ್ಲಿ £ಲ್ಲುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ಇವರು 1931 ಆಗಸ್ಟ್ 08 ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಾದನಹಳ್ಳಿ ಗ್ರಾಮದ ಅನಂತರಾಮಯ್ಯ ಮತ್ತು ಲಕ್ಷ್ಮೀದೇವಮ್ಮ ಬ್ರಾಹ್ಮಣ ದಂಪತಿಗಳ ಪುತ್ರರಾಗಿ ಜನಿಸಿದರು.
110 ನಾಟಕಗಳು, 30 ಇತರ ಕೃತಿಗಳನ್ನು ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ಕೃತಿರತ್ನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೃಷ್ಣಮೂರ್ತಿಯವರ ವ್ಯ್ಕತಿತ್ವ ಅಸಮಾನ್ಯವಾದುದು. ಹಾಸನ ಜಿಲ್ಲೇಗಷ್ಟೇ ಸೀಮಿತವಾಗದೆ ಕನ್ನಡ ಮನಸ್ಸುಗಳೆಲ್ಲೆಲ್ಲಿವೆಯೋ ರಾಜ್ಯ, ಅಂತರರಾಜ್ಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಇವರ ನಾಟಕಗಳು ಪ್ರದರ್ಶನ ಕಂಡಿವೆ.
1952 ರಿಂದ ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಇವರು ಸಹಸ್ರಾರು ಶಿಷ್ಯವೃಂದವನ್ನು ಹೊಂದಿದ್ದಾರೆ. ಒಳ್ಳೆಯ ನಟರೂ ಆಗಿದ್ದ ಇವರು ನಿರ್ದೇಶಕರಾಗಿಯೂ ಕಾರ್ಯಪ್ರವೃತ್ತಗೊಂಡು ಯಶಕಂಡಿದ್ದಾರೆ.
ದಿ. ಮುಸುರಿಕೃಷ್ಣಮುರ್ತಿಯವರು ಸ್ಥಾಪಿಸಿದ್ದ ದತ್ತಾತ್ರೇಯ ನಾಟಕ ಮಂಡಳಿಯಲ್ಲಿ ಸಹ ನಟರಾಗಿ ಅಭಿನಯಿಸುತ್ತಾ ರಂಗಭೂಮಿ ಹೊರ-ಒಳವುಗಳನ್ನು ಅರಿತು ತನ್ಮತೆಯಿಂದ ಮೈಗೂಡಿಸಿಕೊಂಡರು. ನಂತರ ‘ನಾಟಕ’ ರಚನೆಕಡೆಗೆ ವಾಲಿದ ಇವರ ಮನಸ್ಸು ಉತ್ಕøಷ್ಟ ಸಾಹಿತ್ಯ ಸೃಷ್ಠಿಸುವಲ್ಲಿ ಹಿಂದೆ ಬೀಳಲಿಲ್ಲ. ತತ್ಪರಿಣಾಮವಾಗಿಯೇ 1962 ರಲ್ಲಿ ‘ಬಲಿದಾನ’ ಎಂಬ ನಾಟಕ ಪ್ರಕಟವಾಯಿತು. ಅಂದಿ£ಂದ ಇಂದಿನವರೆಗೆ ಸುಮಾರು 110 ನಾಟಕಗಳನ್ನು ಕಟ್ಟಿಕೊಟ್ಟಿ ಹೃದಯ ಶ್ರೀಮಂತಿಕೆ ಕೃಷ್ಣಮೂರ್ತಿಯವರದು.
‘ತ್ಯಾಗಿ’ ಲಚ್ಚಿ, ಕಂಬನಿ, ಆಹುತಿ ಎಂಬ ನಾಟಕಗಳು ಬೇಲೂರು ಕೃಷ್ಣಮೂರ್ತಿಯವರಿಗೆ ಭದ್ರವಾದ ನೆಲೆ ತಂದುಕೊಟ್ಟವು. ಸಮಾಜದಲ್ಲಿ ನಡೆಯುತ್ತಿರುವ ಅ£ೀತಿ, ಅನ್ಯಾಯ, ಅತ್ಯಾಚಾರ, ಅಟ್ಟಹಾಸ, ಭ್ರಷ್ಟಚಾರ, ಕಂದಾಚಾರಗಳೇ ಇವರ ನಾಟಕದ ವಿಷಯ ವಸ್ತುಗಳಾಗಿವೆ. ಇವುಗಳಿಂದ ಸಮಾಜ ಯಾವ ರೀತಿ ಅಧೋಗತಿಗೆ ಈಡಾಗುತ್ತಿದೆ ಂದು ನವಿರಾಗಿ ಬಿಡಿಸಿಟ್ಟಿದ್ದಾರೆ.
ಇವರ ಹಲವಾರು ನಾಟಕಗಳು ನೂರಾರು ಪ್ರದರ್ಶನ ಕಂಡಿವೆ. ಕೃತಿಗಳು ಸಹ ಸಾಕಷ್ಟು ಪುನರ್ಮುದ್ರಣ ಕಂಡಿವೆ. ಕೇವಲ ನಾಟಕಕ್ಕೆ ಮಾತ್ರ ಸೀಮಿತವಾಗದೆ ಕಾದಂಬರಿ, ಬರಹಗಳನ್ನೊಳಗೊಂಡಂತೆ ಸುಮಾರು 30 ಕೃತಿಗಳನ್ನು £ೀಡಿದ್ದಾರೆ.
2010 ಮಾರ್ಚ್ 9 ಮತ್ತು 10 ರಂದು ಬೇಲೂರಿನಲ್ಲಿ ಹಾಸನ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಬೇಲೂರು ಕೃಷ್ಣಮೂರ್ತಿಯವರ ವ್ಯಕ್ತಿತ್ವ ಪ್ರಬುದ್ದಮಾನವಾದುದು. ಯಾವುದೇ ಆಡಂಬರ, ಅಹಂಕಾರಗಳಿಲ್ಲದ ಸಹೃದಯಿ, ಸರಳ ಜೀವನ ಉದಾತ್ತ ಚಿಂತನೆಯ ಮುರ್ತಿ ಎದರೆ ಅತಿಶಯೋಕ್ತಿಯಾಗಲಾರದು. 83ರ ಇಳಿವಯಸ್ಸಿನಲ್ಲಿಯೂ ಇವರ ಉತ್ಸಾಹದ ಸಾಹಿತ್ಯ ಚಿಲುಮೆ ಇನ್ನೂ ಪ್ರಜ್ವಲಿಸುತ್ತಲೇ ಇದೆ.
ರಂಗಭೂಮಿಗೆ ಮಾತ್ರ ಸೀಮಿತವಾಗದೆ ಇವರ ಸಾಹಿತ್ಯ ಕನ್ನಡ ಚಲನಚಿತ್ರರಂಗದತ್ತಲೂ ಮುಖಮಾಡಿ ನೋವು ನಲಿವುಗಳನ್ನು ಅನುಭವಿಸಿದೆ. ಬೇಲೂರು ಫಿಲಂಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ ಕೃಷ್ಣಮೂರ್ತಿಯವರು ಅವರದೇಯಾದ ‘ಕಂಬ£’ ಎಂಬ ನಾಟಕವನ್ನು ‘ತೀರದ ಬಯಕೆ’ ಎಂಬ ಚಲನಚಿತ್ರ £ರ್ಮಿಸಿ ಹೊರತಂದಿದ್ದಾರೆ. ಜುಗ್ಗಾಸ್ವಾಮಿ ಜುಗ್ಗಾ, ಬಾಡಿಗೆ ಬಿಡಾರ, ಪೊದಕುಲಡಾಯಿ, ಜ್ವಾಲೆ ಹೀಗೆ ಹತ್ತಾರು ಕಥೆಗಳನ್ನು ಕಿರುತೆರೆಗೆ ತಂದಿದ್ದಾರೆ.
1972ರಲ್ಲಿ ‘ತೀರದ ಬಯಕೆ’ ಚಲನಚಿತ್ರ ನಿರ್ಮಿಸಲು ಪ್ರಾರಂಭಿಸಿ 1982 ರಲ್ಲಿ ಚಿತ್ರ ಬಿಡುಗಡೆಮಾಡಿದರು. ಆಗಿನ ಕಾಲದಲ್ಲಿಯೇ 15 ಲಕ್ಷ ರೂ ಸಾಲ ಮಾಡಿ ಸಿನಿಮಾ ಮಾಡಿ ಕೈ ಸುಟ್ಟುಕೊಂಡರು. ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕರಾಗಿದ್ದ ಇವರ ವರಮಾನ ಅಷ್ಟಕ್ಕಷ್ಟೇ. ಮಾಡಿದ ಸಾಲ ತೀರಿಸಲು ಸುಮಾರು ದಶಕಗಳೇ ಬೇಕಾಯಿತಂತೆ. ಆದರೆ ಸಾಲ ಕೊಟ್ಟವರಿಗೆ ಯಾರಿಗೂ ಒಂದು ಪೈಸೆ ಮೋಸ ಮಾಡಲಿಲ್ಲವೆಂದು ಸಂತಸದಿಂದಲೇ ಹೇಳುತ್ತಾರೆ.
ಇವರೊಬ್ಬ ಅಪ್ಪಟ ನಾಸ್ತಿಕವಾದಿ. ಮೂಡನಂಬಿಕೆ, ಮಾಟ-ಮಂತ್ರ ತಂತ್ರದ ವಿರುದ್ದ ಧ್ವ£ ಎತ್ತಿದ್ದಾರೆ. ವಿಜ್ಞಾನ ಮಾತ್ರ ಸತ್ಯ ಉಳಿದದ್ದು ಮಿಥ್ಯ ಎಂಬ ಸಿದ್ದಾಂತವನ್ನು ಬಲವಾಗಿ ನಂಬಿದವರು. ಇವರ ಸಾಹಿತ್ಯ, ಶಿಕ್ಷಣ, ರಂಗಭೂಮಿ, ಸಾಮಾಜಿಕ ಸಂಘಟನೆ ಸೇವೆಗಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ.
1993 ರಲ್ಲಿ ಕರ್ನಾಟಕ ಅಕಾಡೆಮಿಯ ಪ್ರಶಸ್ತಿ, 2005ರಲ್ಲಿ ದೆಹಲಿಯಲ್ಲಿ ನಡೆದ 22ನೇಯ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಸನ್ಮಾನ, ತುಮಕೂರಿನ ಅಭಿಮಾ£ಗಳು ರಜತ ಕಿರೀಟದೊಂದಿಗೆ ‘ನಾಟಕ ಸಾರ್ವಭೌಮ’ ಎಂಬ ಕೃತಿ ಅರ್ಪಿಸಿ ಸನ್ಮಾ£ಸಿದ್ದಾರೆ. 1993ರಲ್ಲಿ ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಆಲೂರಿನ ಮಿತ್ರರು ‘ನಾಟಕಶ್ರೀ’ ಎಂಬ ಸಂಭಾವನಾ ಗ್ರಂಥ ಅರ್ಪಿಸಿದ್ದಾರೆ. ಕಲಾತಪಸ್ವಿ, ರಸಿಕ ಶಿಖಾಮಣಿ, ಸಾಹಸ ವೀರ, ಕಲಿಯುಗ ಪಾರ್ಥ, ಸಮಾಜ ಸೇವಾ ರತ್ನ, ಸಾಹಿತ್ಯ ಸಾರ್ವಭೌಮ, ಕಲಾಚತುರ ಮುಂತಾದ ಬಿರುದು ಸನ್ಮಾನಗಳು ಸಂದಿವೆ
ನಾಟಕಕಾರ, ಸಂಘಟಕ, ದೈಹಿಕ ಶಿಕ್ಷಕ – ಮಾದನಹಳ್ಳಿ ಕೃಷ್ಣಮೂರ್ತಿ
ಸಾಹಿತ್ಯ ಕ್ಷೇತ್ರಕ್ಕೆ ಬಹುಪಾಲು ಕೊಡುಗೆಯನ್ನು ಶಿಕ್ಷಣ ಕ್ಷೇತ್ರವೇ ನೀಡಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ಯಾವುದೇ ಲೇಖಕ, ಕಾದಂಬರಿಕಾರ, ನಾಟಕಕಾರ, ಕಥೆಗಾರ, ಕವಿ ತೆಗೆದುಕೊಳ್ಳಿ ಬಹುಪಾಲು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಇಲ್ಲವೆ ಕಾಲೇಜು ಬೋಧಕ ವರ್ಗದವರೇಯಾಗಿರುತ್ತಾರೆ. ಅಂದರೆ ಬೇರೆ ಇಲಾಖೆಯವರು ಇಲ್ಲವೆಂದಲ್ಲ ಇದ್ದಾರೆ ಆದರೆ ಶಿಕ್ಷಣ ಇಲಾಖೆಯಷ್ಟಿಲ್ಲ.
ಪ್ರೌಢಶಾಲಾ ದೈಹಿಕ ಶಿಕ್ಷಕರಾಗಿ, ಜಿಲ್ಲಾ ಸೇವಾದಳದ ಸಂಘಟಕರಾಗಿ ಅನುಪಮ ಸೇವೆ ಸಲ್ಲಿಸಿದ ಮಾದನಹಳ್ಳಿ ಕೃಷ್ಣಮೂರ್ತಿಯವರು ಸಾಕಷ್ಟು ಹೆಸರು ಮಾಡಿದವರು. ಅಷ್ಟೆ ಅಲ್ಲದೆ ಹುಟ್ಟು ಹಾಸ್ಯ ಪ್ರವೃತ್ತಿ ಸ್ವಭಾವದವರಾದ ಕೃಷ್ಣೇಗೌಡರು ನಾಟಕ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ.
ಶ್ರೀಯುತ ಮಾದನಹಳ್ಳಿ ಕೃಷ್ಣಮೂರ್ತಿಯವರು ಕ್ರಿ.ಶ. 1932 ಆಗಸ್ಟ್ 8 ರಂದು ಹಾಸನ ಜಿಲ್ಲೆಯ ಜಾವಗಲ್ ಹೋಬಳಿಯ ಮಾದನಹಳ್ಳಿಯಲ್ಲಿ ಜನಿಸಿದರು. ಸಮಾಜಿಕ ಸೇವಾ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಇವರು ಏನಾದರು ಜನತೆಯ ಒಳಿತಿಗಾಗಿ ಕಾಯಕಗೈಯಬೇಕೆಂಬ ಹಂಬಲದಿಂದ ಭಾರತ ಸೇವಾದಳದಲ್ಲಿ ಜಿಲ್ಲಾ ಸಂಘಟಕರಾಗಿ ಕಾರ್ಯನಿರ್ವಹಿಸಿ, ನಂತರ ಬೇಲೂರು ಸಂಘ (ರಿ) ಸ್ಥಾಪಿಸಿ ಸಮುದಾಯದ ಸೇವೆ ಮಾಡಿದರು. 1950-51 ರಲ್ಲಿ ಹಾಸನ ಜಿಲ್ಲಾ ಸೇವಾದಳದ ಸಂಘಟಕರಾಗಿದ್ದ ಅವಧಿಯಲ್ಲಿ ಅತ್ಯುತ್ತಮ ಕಾರ್ಯಗಳನ್ನು ಮಾಡಿ ಜನ ಮನ್ನಣೆಗಳಿಸಿದ್ದಾರೆ.
1952 ಫೆಬ್ರವರಿ 13 ರಂದು ಬೇಲೂರು ಪುರ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಕೃಷ್ಣಮೂರ್ತಿಯವರು ಮಕ್ಕಳಲ್ಲಿ ಬಹುಮುಖ್ಯವಾಗಿ ಶಿಸ್ತಿಗೆ ಒತ್ತು ನೀಡಿ ಜೊತೆಜೊತೆಗೆ ಸಂಯಮ, ದೇಶಪ್ರೇಮ, ಭಾವೈಕ್ಯತೆ, ಸಹಕಾರ ಮನೋಭಾವನೆ, ಪರೋಪಕಾರ ಹೀಗೆ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿದರು. ತರಗತಿಯ ವಿದ್ಯಾರ್ಥಿಗಳಂತೆಯೆ ಇತರ ಸಮಾಜವು ಶಿಸ್ತಿನ ಸಿಪಾಯಿಯಾಗಬೇಕೆಂಬ ಹಂಬಲದಿಂದ ಸೆವಾದಳವನ್ನು ಸಮಾಜದ ನಡುವೆ ಕೊಂಡೋಯ್ದು ಜನರನ್ನು ಭಾಗಿಯನ್ನಾಗಿಸಿದರು. ಜೊತೆಗೆ ಸಮಾಜವನ್ನು ತನ್ನತ್ತ ಸೆಳೆಯಲು ಕೃಷ್ಣಮೂರ್ತಿಯವರು ಬಳಸಿದ ಅಸ್ತ್ರ ನಾಟಕ ಕ್ಷೇತ್ರ. ಹಾಸ್ಯ ನಾಟಕಗಳ ಮೂಲಕ ಸಾಮಾಜಿಕ ಹೊಂದಾಣಿಕೆ ಮೂಡಿಸುವ ನಿಟ್ಟಿನಲ್ಲಿ ತಾವೇ ಸಮಾಜದೊಂದಿಗೆ ಕಂಡುಂಡ ಹಲವಾರು ಸ್ವಾರಸ್ಯಕರ ಘಟನೆಗಳನ್ನೆ ನಾಟಕವಾಗಿಸಿ ತಾವೂ ಅಭಿನಯಿಸಿ ಇತರರನ್ನು ಪಾಲ್ಗೊಳ್ಳುವಂತೆ ಮಾಡಿದರು. ಆ ಮೂಲಕ ಜನ ಜಾಗೃತೆಯನ್ನು ಮೂಡಿಸಿದರು.
ಸಾಹಿತ್ಯಿಕ ಕೊಡುಗೆ ಃ ಬಲಿದಾನ, ಫಜೀತಿ, ಕಲೆಯ ಕೊಲೆ, ಭಂಡ ಬಾಳು, ಅಡ್ಡಾದಿಡ್ಡಿ, ಇಂದ್ರಜಾಲ ಇವು ಕೃಷ್ಣಮೂರ್ತಿಯವರ ಪ್ರಮುಖ ಹಾಸ್ಯ ನಾಟಕಗಳು. ‘ಬಿಚ್ಚುಗತ್ತಿ’ ಇದು ಐತಿಹಾಸಿಕ ನಾಟಕ. ಪಿಳ್ಳನಗಿರಿ ಮಹಾತ್ಮೆ, ವ್ಯಾಯಾಮ ಶಿಕ್ಷಕ, ಅಗ್ರಹಾರ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾತ್ಮೆ ಇವು ಕೃಷ್ಣಮೂರ್ತಿಯವರ ಇತರ ಕೃತಿಗಳು.
ಇವರು ನಾಟಕ ಹಾಗೂ ಕ್ಷೇತ್ರ ದರ್ಶನ, ದೇವರ ಮಹಾತ್ಮೆಗಳ ಜೊತೆಗೆ ಬೇಲೂರು ಮಾರ್ಗದರ್ಶಿ ಎಂಬ ಕೈಪಿಡಿಯನ್ನು ಕನ್ನಡದಲ್ಲೂ, ಮತ್ತು ಬೇಲೂರು, ಹಳೇಬೀಡು ಗೈಡ್ ಎಂಬ ಇಂಗ್ಲೀಷ್ನಲ್ಲೂ ರಚಿಸಿ ಪ್ರವಾಸಿಗರಿಗೆ ಮಹದೋಪಕಾರ ಮಾಡಿದ್ದಾರೆ.
ಹೀಗೆ ಮಾ.ಕೃಷ್ಣಮೂರ್ತಿಯವರು ರಂಗಭೂಮಿ, ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿ ಅವಿರತವಾಗಿ ದುಡಿಯುವುದರ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಯೋಗ ಕಲಾವಲ್ಲಭ –ಎಚ್.ಬಿ.ರಮೇಶ್
ನಾಡು ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ನಾಡಿಗಾಗಿ ಏನು ಕೊಟ್ಟಿದ್ದೇನೆ? ಎಂಬ ತಾತ್ವ್ತಿಕ ನೆಲೆಗಟ್ಟಿನಲ್ಲಿಯೇ ಸದಾ ಚಿಂತಿಸಿ, ಕಾರ್ಯೋನ್ಮುಖರಾಗಿ ಕಾಯಕಯೋಗಿಯಂತೆ ಕರ್ಮ ಎಸಗುತ್ತಾ ಆರಕ್ಕೇರದೇ ಮೂರಕ್ಕಿಳಿಯದೇ ಪ್ರಾಂಜಲಿ ಮನಸ್ಸಿನಿಂದ, ಸದಾ ಹಸನ್ಮುಖಿಯಾಗಿರುವ ಎಚ್.ಬಿ. ರಮೇಶ್ ಅವರದು ಬಹುಮುಖ ವ್ಯಕ್ತಿತ್ತ್ವ.
1933 ಜುಲೈ ಒಂದರಂದು ಹಾಸನದ ಪ್ರಖ್ಯಾತ ನೀರುವಾಗಿಲು ಆಂಜನೇಯ ದೇವಸ್ಥಾನದ ಪೂಜಾರಿ ವಂಶಸ್ಥರಾದ ಎಚ್. ಎಸ್. ಬೀಮಯ್ಯ ಹಾಗೂ ಶ್ರೀಮತಿ ಎಚ್. ಎನ್. ಪುಟ್ಟಮ್ಮ ದಂಪತಿಗಳ ಮಗನಾಗಿ ಜನಿಸಿದವರೇ ರಮೇಶ್.
ತಂದೆ ಭೀಮಯ್ಯ ಪ್ರಸಿದ್ಧ ರಂಗಭೂಮಿ ಕಲಾವಿದರು. ಹಾಗಾಗಿಯೇ ಕಲೆ ಎಂಬುದು ರಮೇಶ್ರವರಿಗೆ ರಕ್ತಗತವಾಗಿಯೇ ಬಂದಿದೆ ಎನ್ನಬಹುದು.
ಎಲ್ಲದಕ್ಕಿಂತ ಮುಖ್ಯವಾಗಿ ಅತ್ಯುತ್ತಮ ಶಿಕ್ಷಕರು ಹಾಗೆಯೇ ಪ್ರತಿಭಾನ್ವಿತ ಯೋಗಪಟು. ಆಲೂರು, ಸಕಲೇಶಪುರ ಮುಂತಾದ ಸ್ಥಳಗಳಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಇವರಿಗೆ ಸಾವಿರಾರು ಆಪ್ತ ಶಿಷ್ಯರಿದ್ದಾರೆ. ಆದ್ದರಿಂದ ಇವರು ಯೋಗ ಶಿಕ್ಷಕರೆಂದೇ ಪ್ರಸಿದ್ಧಿ. ಸ್ವ ಆಸಕ್ತಿಯಿಂದ ನೂರಾರು ಉಚಿತ ಯೋಗ ತರಬೇತಿಗಳನ್ನು ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟ
ಇವರು ಪ್ರೌಢಶಾಲಾ ಹಂತದಲ್ಲಿದ್ದಾಗ ದೇಶದಾದ್ಯಾಂತ ಸ್ವಾತಂತ್ರ್ಯ ಚಳುವಳಿಯ ಕಾವು ಗಾಂಧಿ ನೇತೃತ್ತ್ವದಲ್ಲಿ ತೀವ್ರ ಸ್ವರೂಪ ಪಡೆದಿತ್ತು. ಅದೆ ಸಮಯಕ್ಕೆ ಮೈಸೂರು ಚಲೋಜಾವ್ ಚಳುವಳಿ ಪ್ರಾರಂಭವಾಗಿತ್ತು. ರಮೇಶ್ರವರ ಆಂತರ್ಯದಲ್ಲಿ ಸುಪ್ತವಾಗಿದ್ದ ದೇಶಭಕ್ತಿ ಸುಮ್ಮನೆ ಕೂರಲು ಬಿಡಲಿಲ್ಲ. ಪರಿಣಾಮ ಚಳುವಳಿಯಲ್ಲಿ ಪಾಲ್ಗೊಂಡ ಹಾಸನ ಜೈಲಿನಲ್ಲಿ ಏಳು ದಿವಸಗಳ ಕಾಲ ಸೆರೆವಾಸ ಅನುಭವಿಸಿದರು.
ರಾಷ್ಟ್ರಪತಿ ಗಾಂಧಿ ಹಾಗೂ ಜಾಗತಿಕ ಕ್ರಾಂತಿಕಾರಿ ವಿಚಾರವಾದಿ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಅಕ್ಷರಶಃ ಅಳವಡಿಸಿಕೊಂಡು ಇಂದಿಗೂ ಆದರ್ಶಮಯ ಜೀವನ ಸಾಗಿಸುತ್ತಿದ್ದಾರೆ.
ರಂಗಭೂಮಿ ಪ್ರವೇಶ
ಆಲೂರು, ಸಕಲೇಶಪುರದಲ್ಲಿ ದೈಹಿಕ ಶಿಕ್ಷಕರಾಗಿದ್ದ ಸಂದರ್ಭದಲ್ಲಿಯೇ ಹವ್ಯಾಸ ತಂಡವೊಂದನ್ನು ಕಟ್ಟಿ ‘ಉಂಡಾಡಿ ಗುಂಡ’ ದಲ್ಲಿನ ‘ಗುಂಡನ’ ಪಾತ್ರ, ‘ದೇವದಾಸಿ’ ನಾಟಕದಲ್ಲಿನ ನಾಜೂಕಯ್ಯನ ಪಾತ್ರದಲ್ಲಿ ಖ್ಯಾತಿಗಳಿಸಿದರು. ಹಾಸನದ ಜಾತ್ರೆಗೆ ನಾಟಕ ಮಂಡಳಿಗಳೊಂದಿಗೆ ಬರುತ್ತಿದ್ದ ಡಾ|| ರಾಜ್ಕುಮಾರ್, ನರಸಿಂಹರಾಜು, ಬಾಲಕೃಷ್ಣರವರೊಂದಿಗೆ ಓಡಾಡಿದ ಕ್ಷಣಗಳನ್ನು, ಹಾಗೆಯೇ ಎಚ್ಚಮ್ಮನಾಯಕದಲ್ಲಿನ ಶಾಸ್ತ್ರಿ ಪಾತ್ರ ನೀಡಿ ಸ್ವತಃ ಡಾ|| ರಾಜ್ರವರೇ ಇವರಿಗೆ ಮೇಕಪ್ ಮಾಡಿದ ಘಳಿಗೆಗಳನ್ನು ನೆನೆಯುತ್ತಾ ರಮೇಶ್ರವರ ಉನ್ಮಾದಗೊಳ್ಳುತ್ತಾರೆ.
ನಟನೆಯ ಜೊತೆಗೆ ನಾಟಕ ರಚನೆಯನ್ನು ಮಾಡಿದ ರಮೇಶ್ರವರು ‘ಬಾಡ್ಗೆ ಮನೆ’ ‘ಚಿರೋಟಿ ದೆವ್ವ’, ‘ಅಭಿನಯದ ಅಧ್ವಾನ’, ಕಲಾತಪಸ್ವಿ, ವರಶಾಪ, ಮಹಾಪರಿವರ್ತನೆ ನಾಟಕಗಳನ್ನು ರಚಿಸಿದ್ದಾರೆ.
ಅಲ್ಲದೆ ಶ್ರೀ ಹಾಸನಾಂಬ ಚರಿತ್ರೆ, ಬೇಲೂರು ಬೆಡಗಿಯರು, ಅರಸೀಕೆರೆ ಬೆಡಗು, ಹಾಸನ ಜಿಲ್ಲಾ ವಾಸ್ತು ಶಿಲ್ಪ, ಭಗವಾನ್ ಬಾಹುಬಲಿ, ದಾಸರೆಂದರೆ ಪುರಂದರ ದಾಸರಯ್ಯ, ಮುತ್ತು ರತ್ನ, ಜೇನುಕಲ್ಲು ಸಿದ್ದೇಶ್ವರ, ಯೋಗಾಸನ ಮನೋಲ್ಲಾಸ, ಗೊಮ್ಮಟ ವೈಭವ, ಬೇಲೂರು ತಾಲ್ಲೂಕು ದರ್ಶನ, ಉಪಯುಕ್ತ ಯೋಗಾಸನಗಳು, ಕುವೆಂಪು ಕಂಡ ಮಂಥರೆ ಮತ್ತು ಇತರ ನಾಟಕಗಳು, ಹಣತೆ ಹೀಗೆ ಸ್ಥಳ ಪುರಾಣ, ವ್ಯಕ್ತಿ ಚರಿತ್ರೆ, ವಿಮರ್ಶೆ, ಶಿಕ್ಷಣ ಮುಂತಾದ ರೀತಿಯ ಸಾಹಿತ್ಯಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಇವರ ಗುರುತರ ಸೇವೆ ಗುರುತಿಸಿ 1987ರಲ್ಲಿ ಜಿಲ್ಲಾಡಳಿತ ಮತ್ತು ನಗರ ಸಭೆ ಸನ್ಮಾನ ಮಾಡಲು ನಿರ್ಧರಿಸಿದಾಗ ಅದನ್ನು ನಿರಾಕರಿಸಿ, ಬದಲಿಗೆ ಯೋಗ ತರಬೇತಿ ನೀಡಲು ಶಾಶ್ವತ ನೆಲೆಯೊಂದನ್ನು ಕೇಳಿದರು. ಇಲ್ಲಿ ಅವರ ನಿಶ್ವಾರ್ಥ ಸೇವೆ ನಮಗೆ ಅರಿವಾಗದಿರದು. ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಉಪೇಂದ್ರ ತ್ರಿಪಾಠಿ ಹಾಗೂ ನಗರ ಸಭಾಧ್ಯಕ್ಷರಾಗಿದ್ದ ಎಚ್.ಎಸ್.ಕೃಷ್ಣಮೂರ್ತಿಯವರು ಇವರ ಸಾಮಾಜಿಕ ಕಳಕಳಿ ಅರಿತು ಮಹಾರಾಜ ಪಾರ್ಕನಲ್ಲಿ ಯೋಗ ಶಿಕ್ಷಣ ಶಾಲೆ ಪ್ರಾರಂಬಿಸಲು ಅನುಮತಿ ನೀಡಿದರು. ಆಗ ರಮೇಶ್ ರವರು ಅವರ ಆಪ್ತ ಗೆಳೆಯರ ಸಹಕಾರದಿಂದ ಈಗಿನ ವಿವೇಕಾನಂದ ಯೋಗ ಶಾಲೆ ನಿರ್ಮಿಸಿದರು.
ಸಾಹಿತ್ಯ ಪರಿಷತ್ತಿಗೆ ಪಾದಾರ್ಪಣೆ
ಹಿಂದಿನಿಂದಲೂ ಇವರನ್ನೂ ಸಾಹಿತ್ಯ ಆವೃತ್ತಗೊಂಡಿತ್ತು. ಹೀಗೆ ಮಾತನಾಡುತ್ತಾ ಅವರನ್ನು ಸಾಹಿತ್ಯ ಕ್ಷೇತ್ರದತ್ತ ಎಳೆದೆ ಕುವೆಂಪು, ತ.ರಾಸು, ಡಿ.ವಿ.ಜಿ, ರಾಜರತ್ನಂ, ಗೊರೂರು, ಎಸ್.ಕೆ. ಕರೀಂಖಾನ್, ಜ್ವಾಲನಯ್ಯ, ಅನಕೃ ಮುಂತಾದವರ ಮಾರ್ಗದರ್ಶನ ಅವರಿಗಿತ್ತು. ಈಗಲೂ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನೆಯುತ್ತ ಆನಂದ ಭಾಷ್ಪದೊಂದಿಗೆ ನಾನೆಂತಹ ಪುಣ್ಯ ವ್ಯಕ್ತಿ ಎಂದು ಉದ್ಗಾರ ತೆಗೆಯುತ್ತಾರೆ. ಖಂಡಿತಾ ಅವರ ಭಾವುಕತೆ ನನ್ನನ್ನೂ ಒಂದು ಕ್ಷಣ ಉನ್ಮಾದಗೊಳಿಸಿತು.
ಇವರ ಸಾಮಾಜಿಕ ಹಾಗೂ ಸಾಹಿತ್ಯಿಕ ತುಡಿತ ಯೋಗ ಶಾಲೆಯಿಂದ ಭುವನೇಶ್ವರಿ ಗೂಡಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಕರೆತಂದಿತು. ಕ್ರಿಯಾಶೀಲರಾದ ರಮೇಶ್ರವರಿಗೆ ಯೋಗ ಶಿಕ್ಷಕರಾಗಿ ಸಿಕ್ಕಾ ಜನ ಪ್ರಿಯತೆ ಇಲ್ಲಿಯೂ ಮುಂದುವರೆಯಿತು.
ಇವರ ಅವಧಿಯಲ್ಲಿ ಹೆಸರಾಂತ ಸಾಹಿತಿಗಳಾದ ಕಿ.ರಂ. ನಾಗರಾಜ, ಬಾನುಮುಷ್ತಾಕ್, ಪ್ರತಿಭಾನ್ವಿತ ವಾಗ್ಮಿಗಳಾದ ಎ.ಎಸ್. ಕಾಳೇಗೌಡ ಮುಂತಾದ ಮಹನೀಯರನ್ನು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ತಾಯಿಯ ರಥವನ್ನು ಎಳೆದರು.
ಅತ್ಯುತ್ತಮ ಸಂಘಟನಾ ಚಾತುರ್ಯ ಹೊಂದಿದ ರಮೇಶ್ ಈಗಿರುವ ಹೊಯ್ಸಳ ಹೆಬ್ಬಾಗಿಲು, ಹೊಯ್ಸಳ ಲಾಂಛನ, ಬಯಲು ರಂಗಮಂದಿರ, ಧ್ವನಿವರ್ಧಕ ವ್ಯವಸ್ಥೆ ಮುಂತಾದ ಮೂಲ ಸೌಕರ್ಯಗಳನ್ನು ಆರು ಲಕ್ಷಕ್ಕೂ ಅಧಿಕ ಮೌಲ್ಯವುಳ್ಳ ಆಸ್ತಿ ಮಾಡಿ ಪರಿಷತ್ತನ್ನು ಸಿರಿವಂತಗೊಳಿಸಿದ್ದಾರೆ.
ಪ್ರಸ್ತುತ 80 ವರ್ಷದ ನವ ಯುವಕನಂತೆ ಪ್ರತಿನಿತ್ಯ ಮಹಾರಾಜ ಪಾರ್ಕಿನ ವಿವೇಕಾನಂದ ಯೋಗ ಶಾಲೆಯಲ್ಲಿ ಉಚಿತ ಯೋಗ ತರಬೇತಿ ನೀಡುತ್ತಿರುವ ಈ ಹಿರಿಯ ಜೀವ ಸದಾ ಕ್ರಿಯಾಶೀಲ. ಸುಂದರ ಸಮಾಜದ ನಿರ್ಮಾಣ, ನಿಷ್ಕಲ್ಮಷ ಭಾವ ವಿಚಾರಗಳು ಇವರ ಪ್ರಮುಖ ಗುರಿ. ಗಂಭೀರ ವಿಷಯಗಳ ಚರ್ಚೆಗಳಲ್ಲಿಯೂ ಹಾಸ್ಯದ ಹೊನಲನ್ನು ಹರಿಸುವ ಇವರು ಸದಾ ಹಸನ್ಮಖಿಗಳು. ಇವರ ಸೇವೆ ನಾಡಿಗೆ ಇನ್ನಷ್ಟು ಸಿಗಲಿ ಎಂದು ಆಶಿಸುತ್ತೇನೆ.
ಬಹುಮುಖ ಬರಹಗಾರ್ತಿ ಪಾರ್ವತಿ ಕೃ.ನ.ಮೂರ್ತಿ
ಹಾಸನ ಪರಿಸರ ಹಸಿರು ಸಿರಿಯೊಂದಿಗೆ ಸಾಂಸ್ಕøತಿಕ ಹಾಗೂ ಸಾಹಿತ್ಯಕ್ಕೆ ಹೆಸರಾದುದು. ಸಾಹಿತ್ಯ ಎಂದಾಕ್ಷಣ ಕಥೆ, ಕವನ, ನಾಟಕ, ಲಲಿತ ಪ್ರಬಂಧ, ಕಾದಂಬರಿ ಮುಂತಾದ ಪ್ರಕಾರಗಳು ಪ್ರಮುಖವೆ£ಸುತ್ತವೆ. ಅದರಲ್ಲೂ ಕಾದಂಬರಿ ಪ್ರಕಾರಕ್ಕೆ ಹಾಸನ ಕೊಡುಗೆ ಅಪಾರವಾದುದು. ಕಥೆ, ಕಾದಂಬರಿ ಅನುವಾದ ಶಿಶು ಸಾಹಿತ್ಯ ಹೀಗೆ ಅನೇಕ ಪ್ರಕಾರದಲ್ಲಿ ಅಸಮಾನ್ಯ ಸಾಧನೆ ಮಾಡುತ್ತಿರುವ ಹಿರಿಯ ಜೀವ ಪಾರ್ವತಿ ಕೃ.ನ.ಮೂರ್ತಿಯವರು ಎಂದರೆ ಅತಿಶಯೋಕ್ತಿ ಯಾಗಲಾರದು.
ಕೆ.ಎನ್.ನಂಜಪ್ಪ ಮತ್ತು ಸಾವಿತ್ರಮ್ಮ ಬ್ರಾಹ್ಮಣ ದಂಪತಿಗಳ ಸುಪುತ್ರಿಯಾಗಿ ತುಮಕೂರಿನಲ್ಲಿ 1934 ಜನವರಿ 20 ರಂದು ಜ£ಸಿದರು. ಇಂಟರ್ ಮೀಡಿಯಟ್ ಉತ್ತೀರ್ಣಗೊಂಡು ರಾಷ್ಟ್ರಭಾಷಾ ವಿಚಾರದಲ್ಲಿ ಪದವಿ ಪಡೆದ ಇವರು ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಪ್ರಬುದ್ದತೆ ಬೆಳೆಸಿಕೊಂಡರು.
ಮುಂದೆ ಹಾಸನದ ಹೆಸರಾಂತ ಪತ್ರಿಕೆಯಾದ ‘ಜನಮಿತ್ರ’ ಸಂಸ್ಥಾಪಕರಾದ ಕೃ.ನ. ಮೂರ್ತಿಯವರೊಂದಿಗೆ ಬಾಳಿನ ದೀವಿಗೆ ಹಂಚಿಕೊಂಡ ಇವರು ಪತಿಯ ಪ್ರೋತ್ಸಾಹದಿಂದ ಸಾಹಿತ್ಯದ ವಿವಿಧ ಮಜಲುಗಳಲ್ಲಿ ಕಾರ್ಯಪ್ರವೃತ್ತವಾಗುತ್ತಾ ಸಾಗಿದರು. ಖ್ಯಾತ ಕಾದಂಬರಿಕಾರ ಸಂ.ಲಿಂ.ಭೈರಪ್ಪನವರ ಮೊದಲ ಕೃತಿ ‘ಬೆಳಕು ಮೂಡಿತು’
ಕೃ.ನ. ಮೂರ್ತಿಯವರ ಪ್ರಕಾಶನ ದಿಂದ ಬೆಳಕು ಕಂಡಿತು.
ಈ ಸಮಯದಲ್ಲಿ ಮುದ್ರಣ ದೋಷಗಳನ್ನು ಸರಿಪಡಿಸುವ ಹೊಣೆಗಾರಿಕೆ ಪಾರ್ವತಿ ಯವರದು. ಆದ್ದರಿಂದಲೇ ಸಾಹಿತ್ಯ ದಿಗ್ಗಜರ £ಕಟ ಸಂಪರ್ಕ, ಮಾರ್ಗದರ್ಶನ ದೊರೆತದ್ದರಿಂದ ಇವರಲ್ಲಿದ್ದ ಸಾಹಿತ್ಯ ಚಿಗುರೊಡೆದು ಪಕ್ವಗೊಂಡಿತು.. ಪತಿಯ ಸಹಕಾರ, ಪ್ರೋತ್ಸಾಹದಿಂದ ಅವರದೇ ಪ್ರಕಾಶನವಾದ್ದರಿಂದ ಕೃತಿ ಹೊರಬರಲು ಕಷ್ಟವೆ£ಸಲಿಲ್ಲ.
‘ಸೆಳವಿನ ಸುಳಿ’ ‘ಬಿಡುಗಡೆಯ ಬಂಧನ’, ‘ಭಾವನ’ ಮುಂತಾದ ಕಾದಂಬರಿಗಳು, ‘ಮೂವರ ಕಥೆಗಳು-ಕಥಾಸಂಕಲನ’ ‘ಹ್ಯಾಮ್ಲೆಟ್’-ಶಿಶು ಸಾಹಿತ್ಯ, ‘ಗೃಹದೇವಿ’-ಅನುವಾದಿತ ಕೃತಿ ಹೀಗೆ ಹಲವಾರು ಕೃತಿಗಳ ಕರ್ತೃ ಪಾರ್ವತಿಯವರು.
ಕೇವಲ ಸಾಹಿತ್ಯಕ್ಕಷ್ಟೇ ಮೀಸಲಾಗಿರದ ಇವರು ಪೂರ್ಣಿಮಾ ಸಾಹಿತ್ಯ ಮಂದಿರ, ಕಲಾವಾರ ಪತ್ರಿಕೆ, ನಗೆಹೊಗೆ, ಹಾಸ್ಯಪತ್ರಿಕೆ, ಜನಮಿತ್ರ ಪ್ರಕಾಶನ ಹೀಗೆ ಸಂಘಟನೆ, ಪತ್ರಿಕಾರಂಗ, ಪ್ರಕಾಶನ, ಸಮಾಜಪರ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿದಿದ್ದಾರೆ, ದುಡಿಯುತ್ತಿದ್ದಾರೆ.
ಹಾಸನ ಹಾಗೂ ಬೆಂಗಳೂರು ಆಕಾಶವಾಣಿಯಲ್ಲಿ ಇವರ ಹಲವಾರು ಚಿಂತನ, ನಾಟಕ, ರೂಪಕ, ಲೇಖನ, ಕಥೆಗಳು ಭಿತ್ತರಗೊಂಡು ಜನಮನ್ನಣೆ ಗಳಿಸಿವೆ.
ಇವರಿಗೆ ನಾಗೇಶ್ ಹಾಗೂ ಆನಂದ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಸ್ತ್ರೀಯರಿಗೆ ಸ್ಥಾನಮಾನ ಸಿಗದ ಸಂದರ್ಭದಲ್ಲಿ ಕೆಚ್ಚೆದೆಯಿಂದ ಸಾಧಿಸಿ ತೋರಿಸಿದವರು ಪಾರ್ವತಿಯವರು. ಇವರ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದ ಅನುಪಮ ಸೇವೆಗಾಗಿ ಶ್ರೀ ಶರತ್ಚಂದ್ರ ಶತಮಾನೋತ್ಸವ ಸಮಾರಂಭದ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿ, ಇನ್ನೂ ಹಲವು ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. 1998ರಲ್ಲಿ ರಾಮನಾಥಪುರದಲ್ಲಿ ನಡೆದ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ತವರಿನ ಕಾಣಿಕೆ ಎಂದು ಈಗಲೂ ನೆನೆಯುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಇಂದಿಗೂ ಸಹ ಸೃಜನಶೀಲರಾಗಿ ಕಾರ್ಯೋನ್ಮುಖ ರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಾಸನದ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಪಸರಿಸುವಂತೆ ಮಾಡಿದವರಲ್ಲಿ ಪಾರ್ವತಿ ಕೃ.ನ.ಮೂರ್ತಿಯವರ ಪಾತ್ರವೂ ಹಿರಿದು.
ಹಾಸನ ಜಿಲ್ಲೆಯ ಅಮೂಲ್ಯ ಕೊಡುಗೆ – ಡಾ. ಡಿ.ಬಿ.ಬಸವೇಗೌಡ
ಹಾಸನ ಸಾಹಿತ್ಯ, ಸಾಂಸ್ಕøತಿಕ, ರಂಗಭೂಮಿ, ಕ್ರೀಡೆ, ರಾಜಕಾರಣ ಹೀಗೆ ಹಲವಾರು ವಿಷಯಗಳಲ್ಲಿ ಉತ್ಕøಷ್ಟತೆ ಮೆರೆದ ಜಲ್ಲೆ. ಇವೆಲ್ಲವುಗಳಂತೆ ಕನ್ನಡ ಚಲನಚಿತ್ರ ರಂಗದಲ್ಲೂ ತನ್ನದೆಯಾದ ದಾಪುಗಾಲಿರಿಸಿದೆ. ಗೊರೂರು, ಕರೀಂಖಾನ್, ಜ್ವಾಲನಯ್ಯ ಮುಂತಾದವರ ಸಾಹಿತ್ಯ ಚಿತ್ರಕಥೆಗಳಾದರೆ, ನಿರ್ಮಾಣದ ಜವಾಬ್ದಾರಿ ಹೊತ್ತು, ಕಥೆ, ನಿರ್ದೇಶನ ಇತ್ಯಾದಿ ವಿಭಾಗಗಳಲ್ಲಿಯೂ ಪ್ರಭಾವ ಬೀರಿ ಕನ್ನಡ ಚಲನಚಿತ್ರ ಕ್ಷೇತ್ರವನ್ನು ನಿತ್ಯ ಚಲನಶೀಲವಾಗಿಟ್ಟ ಕೀರ್ತಿ ಡಿ.ವಿ.ಬಸವೇಗೌಡರಿಗೆ ಸಲ್ಲುತ್ತದೆ.
ಇವರು ಹಾಸನ ಜಿಲ್ಲೆಯ ದೊಡ್ಡಕರಡೆ ಗ್ರಾಮದಲ್ಲಿ 1934 ರಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಅಂತಮುರ್ಖಿಯಾಗಿದ್ದ ‘ದೇಶಭಕ್ತಿ’ ಎಂಬ ಕಿಡಿ ಮುಂದೆ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕುವಂತೆ ಮಾಡಿತು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿದರು. ತದನಂತರ ಹಾಸನಕ್ಕೆ ಬಂದು 1960 ರಲ್ಲಿ ಹಾಸನ ಜಿಲ್ಲೆಯ ಖ್ಯಾತ ರಾಜಕಾರಣಿ ಹಾಗೂ ನ್ಯಾಯವಾದಿಗಳಾಗಿದ್ದ ಹಾರನಹಳ್ಳಿ ರಾಮಸ್ವಾಮಿಯವರಲ್ಲಿ ಕಿರಿಯ ವಕೀಲರಾಗಿ ತಮ್ಮ ತಮ್ಮ ವೃತತಿ ಜೀವನ ಆರಂಭಿಸಿದರು.
ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರ
ಹಾಸನ ಜಿಲ್ಲಾ ಗ್ರಾಮೋದ್ಯೋಗ ಸಂಘದ ಅಧ್ಯಕ್ಷರಾಗಿ, ರೈತ ಮತ್ತು ಕಾರ್ಮಿಕ ಸಂಘದ ಅಧ್ಯಕ್ಷರಾಗಿ, ಯುವ ಜನ ಸೇವಾ ಮಂಡಳಿಯ ಸದಸ್ಯರಾಗಿ, ಸ್ಕೌಟ್ಸ್ ಕಮಿಷನರ್ ಆಗಿ, ಯಗಚಿ ವಿದ್ಯಾಪೀಠ ಉಪಾಧ್ಯಕ್ಷರಾಗಿ, ವಕೀಲರ ಸಂಘದ ಕಾರ್ಯದರ್ಶಿಯಾಗಿ, ಅಂಧ ಸಂಸ್ಥೆಯ ಸದಸ್ಯರಾಗಿ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿ, ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾಗಿ, ಮೈಸೂರು ವಿಭಾಗೀಯ ಮಾರುಕಟ್ಟೆ ಸಲಹಾ ಸಮಿತಿಯ ಸದಸ್ಯರಾಗಿ ತಮ್ಮ ತನು, ಮನ, ಧನವನರ್ಪಿಸಿ ಸಮಾಜದ ಏಳ್ಗೆಗಾಗಿ ಶ್ರಮಿಸಿದ್ದಾರೆ.
ನಂತರ ಇವರನ್ನು ಕೈಬೀಸಿ ಕರೆದದ್ದು ಕನ್ನಡ ಚಲನಚಿತ್ರರಂಗ. ಬೆಂಗಳೂರಿಗೆ ಹೋದನಂತರ ಅಲ್ಲಿಯೂ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕಾಯಕಗೈಯುತ್ತಾ ಸಾಗಿದರು.
ಬೆಂಗಳೂರಿನ ಸ್ವರ್ಣಭಾರತಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸದಸ್ಯರಾಗಿ, ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಸದಸ್ಯರಾಗಿ, ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳದ ಸದಸ್ಯರಾಗಿ, ರಾಜ್ಯ ಕಾರ್ಮಿಕ ವಿಮೋಚನಾ ಜಾಗೃತಿ ಸಮಿತಿಯ ಸದಸ್ಯರಾಗಿ, ರಾಜ್ಯ ಕಿಸಾನ್ ಸೆಲ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ರಾಜ್ಯ ಪ್ಲೇಯಿಂಗ್ ಶಿಕ್ಷಣ ಶಾಲೆ ಜಕ್ಕೂರು ಏರೋಡ್ರೊಮ್ಮಿನ ನೇಮಕಾತಿ ಸಮಿತಿಯ ಸದಸ್ಯರಾಗಿ, ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿಯ ಛೇರ್ಮನ್ರಾಗಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ, ರಾಜ್ಯ ಆಶಕ್ತ ಕಲಾವಿದರ ಕಲ್ಯಾಣ ಸಂಘದ ಕಾರ್ಯಾಧ್ಯಕ್ಷರಾಗಿ, ರಾಜ್ಯ ಕೇಂದ್ರ ಸಹಕಾರಿ ತೆಂಗಿನ ನಾರಿನ ಉತ್ಪಾದನಾ ಮಾರಾಟ ಅಭಿವೃದ್ಧಿ ನಿಗಮದ ಛೇರ್ಮನ್ರಾಗಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಮಾಪಕ ವಲಯದ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಹರಿಜನ ಸೇವಾ ಸಂಘದ ಬೆಂಗಳೂರು ಪ್ರದೇಶ ಸಮಿತಿಯ ಸದಸ್ಯರಾಗಿ, ಕೇರಳ ರಾಜ್ಯದ ಕೊಚ್ಚಿನ್ನಲ್ಲಿರುವ ತೆಂಗಿನ ನಾರಿನ ಮಂಡಳಿಯ ಸದಸ್ಯರಾಗಿ, ಕೇಂದ್ರ ಸೆನ್ಸಾರ್ ಬೋರ್ಡ್ನ ಅಂಗಸಂಸ್ಥೆಯಾದ ಬೆಂಗಳೂರಿನ ಪ್ರಾದೇಶಿಕ ಸೆನ್ಸಾರ್ ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಚಲನಚಿತ್ರ ರಂಗ
ಇವರು ಹುಟ್ಟು ಕಲಾವಿದರಾಗಿದ್ದು ಬಾಲ್ಯದಿಂದಲೇ ರಂಗಭೂಮಿ, ನಟನೆ, ನಿರ್ದೇಶನ ಎಂದರೆ ಎಲ್ಲಿಲ್ಲದ ಆಸಕ್ತಿ. ಹಾಗೆಯೇ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಹಲವು ಕನ್ನಡದಿಂದ ತಮಿಳು, ತೆಲುಗು, ಹಿಂದಿ ಮುಂತಾದ ಭಾಷೆಗಳಿಗೆ ಭಾಷಾಂತರಗೊಂಡಿವೆ. ಹಾಗೆಯೇ ಹಲವಾರು ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವುದಲ್ಲದೇ, ಕೆಲವು ಸಾಕ್ಷ್ಯ ಚಿತ್ರಗಳಿಗೆ ನಿರೂಪಣೆ ನೀಡಿದ ಕೀರ್ತಿ ಇವರದು.
ಸಾಹಿತ್ಯ ಕ್ಷೇತ್ರ
ಬಸವೇಗೌಡರು ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ, ಚಲನಚಿತ್ರ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗದೇ ಸಾಹಿತ್ಯ ಕ್ಷೇತ್ರದಲ್ಲೂ ದುಡಿದಿದ್ದಾರೆ.
1985 ರಲ್ಲಿ ‘ನಾ ಕಂಡ ಪುಟ್ಟಣ್ಣ ಕಣಗಾಲ್’ ಎಂಬ ಬೃಹತ್ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದರು. ಈ ಕೃತಿಯು ಮುಂದೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಪರಿಷತ್ ಪ್ರಶಸ್ತಿಗೆ ಭಾಜನವಾಯಿತು.
ನಂತರ ‘ನೀವೇಕೆ ನಗಬಾರದು?’ ಎಂಬ ಹಾಸ್ಯ ನಾಟಕವನ್ನೂ ಬರೆದು ರಂಗ ಪ್ರಯೋಗ ಮಾಡಿದರು. ನಂತರ ಈ ಕನ್ನಡ ನಾಟಕವನ್ನು ಸ್ವತಃ ಬಸವೇಗೌಡರೇ Whಥಿ ಅಚಿಟಿ’ಣ ಙou ಐಚಿugh? ಎಂಬ ಇಂಗ್ಲೀಷ್ ನಾಟಕವಾಗಿ ಭಾಷಾಂತರಗೊಳಿಸಿದ್ದು ವಿಶೇಷ.
2001 ರಲ್ಲಿ ಬಂದ ಇವರ ‘ಬೆಳ್ಳಿತೆರೆಯ ಭಾವಶಿಲ್ಪಿ’ ಎಂಬ ಸಂಶೋಧನಾ ಗ್ರಂಥ ಕನ್ನಡ ಚಲನಚಿತ್ರರಂಗದ ನಿರ್ದೇಶನದ ದಿಗ್ಗಜರೆಂದೇ ಗುರ್ತಿಸಿಕೊಂಡ ಪುಟ್ಟಣ್ಣ ಕಣಗಾಲ್ ಅವರನ್ನು ಕುರಿತದ್ದಾಗಿದ್ದು ಮುಂದೆ ಇದು ಗೊರೂರು ಪ್ರತಿಷ್ಠಾನ ಪ್ರಶಸ್ತಿಯನ್ನು ಪಡೆಯಿತು.
2008ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಮಂಡಿಸಿದ “ಕನ್ನಡ ಚಲನಚಿತ್ರಗಳಲ್ಲಿ ಹಲವು ನಿರೂಪಣಾ ಮಾದರಿಗಳು” ಎಂಬ ಮಹಾಪ್ರಬಂಧ ಇವರಿಗೆ ಡಾಕ್ಟರೇಟ್ ಪದವಿಯನ್ನು ತಂದುಕೊಟ್ಟಿತು. ಇದು ಇವರ 74ನೆಯ ವಯಸ್ಸಿನಲ್ಲಿ ಸಿಕ್ಕ ಗೌರವ.
ಇದಲ್ಲದೇ ಪುಟ್ಟಣ್ಣ ಕಣಗಾಲರು 1968ರಲ್ಲಿ ನಿರ್ದೇಶಿಸಲು ಪ್ರಾರಂಭಿಸಿ ಅರ್ಧಕ್ಕೆ ನಿಂತು ಹೋಗಿದ್ದ ‘ಸಾವಿರ ಮೆಟ್ಟಿಲು’ ಕನ್ನಡ ಚಲನಚಿತ್ರವನ್ನು 38 ವರ್ಷಗಳ ಮೇಲೆ 2006ನೆಯ ಸಾಲಿನಲ್ಲಿ ನಿರ್ಮಿಸಿ, ನಿರ್ದೇಶಿಸಿ, ಪೂರ್ಣಗೊಳಿಸಿ ಬಿಡುಗಡೆ ಮಾಡಿ ವಿಶ್ವದಾಖಲೆ ಸ್ಥಾಪಿಸಿದ ಕೀರ್ತಿ ಡಾ. ಡಿ.ಬಿ.ಬಸವೇಗೌಡರಿಗೆ ಸಲ್ಲುತ್ತದೆ.
ಹಲವಾರು ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಬಹುಮುಖ ಪ್ರತಿಭೆ ಡಿ.ಬಿ.ಬಸವೇಗೌಡರೆಂದರೆ ಅತಿಶಯೋಕ್ತಿಯಾಗಲಾರದು. ಕಲೆ, ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಸಾಮಾಜಿಕ. ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಅಧಿಪಥ್ಯ ಸ್ಥಾಪಿಸುವುದು ಸುಲಭದ ಮಾತೇನಲ್ಲ. ಇಂಥ ವ್ಯಕ್ತಿಗಳ ಹುಟ್ಟಿಗೆ ಕಾರಣವಾದ ಹಾಸನ ಮಣ್ಣಿನ ಗುಣ ಸರ್ವಶ್ರೇಷ್ಠವಾದುದು. 80ರ ಗಡಿ ದಾಟಿದರೂ ಯುವಕರಂತೆ ಕಾರ್ಯನಿರ್ವಹಿಸುವ ಇವರ ಮನೋವಾಂಛಲ್ಯ ಅಮೋಘವಾದುದು.
‘ಗೊರೂರರ’ ನಂತರ ಗೊರೂರನ್ನು ಪ್ರತಿನಿಧಿಸಿದ ಸೋಮಶೇಖರ್
ಗೊರೂರು ಎಂದಾಕ್ಷಣ ನಮ್ಮೆದುರಿಗೆ ಧಟ್ಟಂತ ಬಂದೆದುರಿಗೆ ನಿಲ್ಲುವವರು ಗೊರೂರು ರಾಮಸ್ವಮಿ ಅಯ್ಯಂಗಾರ್. ಅವರಿಂದಲೇ ಬಹುಶಃ ಹಾಸನದ ಈ ಗೊರೂರು ಊರು ಜಗತ್ಪ್ರಸಿದ್ಧಿ ಪಡೆದಿದ್ದು. ಅಂದಿನಿಂದಲೂ ಇಂದಿಗೂ ಅಲ್ಲಿಂದ ಅನೇಕ ಸಾಹಿತಿಗಳ ಹೊರಹೊಮ್ಮಿದ್ದಾರೆ. ಅಂಥವರಲ್ಲಿ ಶ್ರೀ ಗೋರೂರು ಸೋಮ ಶೇಖರ್ ರವಸದರೂ ಒಬ್ಬರು.
ರಾಮಸ್ವಾಮಿ ಅಯ್ಯಂಗಾರರಿಗೆ ಗೊರೂರು, ಹೇಮಾವತಿ ನದಿ, ತೀರ ಮುಂತಾದ ಗ್ರಾವೀಣ ಬದುಕು, ಬವಣೆಗಳೇ ಸಾಹಿತ್ಯಾದ ಪ್ರತೀಕವಾಗಿದ್ದವು. ಅಂತೆಯೇ ಗೊರೂರು ಸೋಮಶೇಖರ್ ರವಸದರೂ ಸಹ ಗೊರೂರಿನ ಅನೇಕ ಘಟನೆಗಳನ್ನು ರಾಮಸ್ವಾಮಿ ಅಯ್ಯಂಗಾರ್, ಮುಂತಾದ ವಿಷಯಗಳ ಸುತ್ತಲೇ ಸಾಕಷ್ಟು ಬರೆದಿದ್ದಾರೆ.
ಶ್ರೀಯುತ ಗೊರೂರು ಸೋಮಶೇಖರ್ ರವರು 1934 ರ ಜೂನ್ 05 ರಂದು ಗೊರೂರಿನ ಶ್ರೀ ಅಪ್ಪಯ್ಯ ಶೆಟ್ಟಿ ಮತ್ತು ಶ್ರೀಮತಿ ಶಂಕರಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು.
ಚಿಕ್ಕಂದಿನಿಂದಲೇ ರಮಸ್ವಾಮಿ ಅಯ್ಯಂಗರರಂಥ ಮರು ಸಾಹಿತಿಗಳ ಒಡನಾಡಿಯಾಗಿ, ಶಿಷ್ಯರಾಗಿ, ಆತ್ಮೀಯರಾಗಿ ಬೆಳೆದ ಸೋಮಶೇಖರ್ ರವರು, ಅವರ ಹಲವಾರು ಅನುಭವದ ರಸವತ್ತಾದ ಪ್ರಸಂಗಗಳನ್ನು ‘ಗೊರೂರು..........ನೆನಪುಗಳು’ ಪುಸ್ತಕದಲ್ಲಿ ಬರೆದಿದ್ದಾರೆ. ಗೊರೂರುರಂತೆ ಇವರೂ ತನ್ನೂರಿನ ಜನರು ಊರಿನ ಬಗೆಗೆ, ಬದುಕಿನ ವಿವಿಧ ಮೂಲಗಳನ್ನು ಹಾಸ್ಯಮಯವಾಗಿ ವಿಡಂಬಿಸಿದ್ದಾರೆ. ಈ ಕೃತಿಯಲ್ಲಿ ರಾಮಸ್ವಾಮಿ ಅಯ್ಯಂಗಾರ್ ಚಿತ್ರಣ, ಗೊರೂರು ಶಾಸನಗಳೂ, ಗೊರೂರಿನಲ್ಲಿನ ಅವರ ಬಾಲ್ಯ, ಅಲ್ಲಿ ನಡೆಯುತ್ತಿದ್ದ ಬಯಲಾಟಗಳು, ಜಾತ್ರೆ ಉತ್ಸವಗಳು, ದೇವರುಗಳು,ಮದುವೆ-ಆಚಾರ ವಿಚಾರಗಳು, ಹೇಮಾವತಿ ನದಿ ತೀರದ ಪ್ರಸಂಗಗಳು ಹೀಗೆ ಹಲವಾರು ವಿಷಯಗಳನ್ನೊಳಗೊಂಡತೆ ಇಡೀ ಗೊರೂರಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಗೊರೂರು ಸೋಮಶೇಖರ್ ರವರು ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಅಮೂಲ್ಯ ಕೃತಿರತ್ನಗಳನ್ನು ನೀಡಿದ್ದಾರೆ. ಸಂಪಾದಿತವೂ ಒಂದು ಸಾಹಿತ್ಯದ ಶ್ರೇಷ್ಠ ಪ್ರಕಾರವೆಂದೇ ಹೇಳಬಹುದು. ‘ಹೇಮಾವತಿ ಜಲಾಶಯ’ ‘ಹೇಮಕೂಟ’ ಜಾಗೃತಿ-ಸಂಪಾದಿತ ಕೃತಿಗಳು; ‘ರಂಗ.....ಹುಷಾರ್(ನಾಟಕ): ‘ಗೊರೂರು......ನೆನಪುಗಳು’ ಇದು 2003 ಹಾಗೂ 2006 ರಲ್ಲಿ ದ್ವಿಮುದ್ರಣ ಕಂಡಿದೆ. ‘ಬಸವಣ್ಣನ ಪುರಾತದಾಸಿಮಯ್ಯ’-2014(ವೈಚಾರಿಕ ಲೇಖನಗಳು).
ಚಿಕ್ಕವಯಸ್ಸಿನಿಂದಲೇ ಬಯಲಾಟ, ರಂಗಭೂಮಿಯನ್ನು ಹವ್ಯಾಸಮಾಡಿಕೊಂಡ ಸೋಮಶೆಖರ್ ರವರು ಹಲವರು ನಾಟಕಗಳಲ್ಲಿ ಅಭಿನಯಿಸಿದ್ದಾರೆ, ನಿರ್ದೇಶನ ಮಾಡಿದ್ದಾರೆ. ಪತ್ರಿಕಾ ವರದಿಗಾರರಾಗಿಯೂಆ ಕೆಲ ದಿನಗಳು ದುಡಿದ ಇವರು , ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಮ್ಮಿಕೊಂಡಿದ್ದ ‘ಆಡಳಿತದಲ್ಲಿ ಕನ್ನಡ’ ಎಂಬ ವಿಷಯದಡಿಯಲ್ಲಿ ಹಲವಾರು ಇಂಜಿನಿಯರ್ಗಳಿಗೆ, ಲೆಕ್ಕಿಗರಿಗೆ ತರಬೇತಿ ನೀಡಿದ ಕೀರ್ತಿ ಇವರದು.
ಸಾಹಿತ್ಯ, ರಂಗಭೂಮಿ, ಸಾಮಾಜಿಕವಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಇವರು ನೇಕಾರ ರಾಷ್ಟ್ರೀಯ ವಿಶ್ವಸಂಸ್ಥೆ ಮಂಡಳಿಯ ಸಂಸ್ಥಾಪಕ ಗೌರವಾಧ್ಯಕ್ಷರಾಗಿ, ನಾಗರೀಕ ಸೇವಾ ಸಮಿತಿ, ಜೆ.ಪಿ. ನಗರದ ಹಾಲಿ ಗೌರವಾಧ್ಯಕ್ಷರಾಗಿ, ದೇವಾಂಗ ಮಹಾ ಮಂಡಲದ ಸಂಸ್ಥಾಪಕರಾಗಿ, ದೇವಾಂಗ ಸೇವಾ ಸಮಾಜದ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಗೊರೂರು ಸೋಮಶೇಖರ್ ರವರು ವೃತ್ತಿಯಲ್ಲಿ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸುಚಿತ್ತದಿಂದ ದುಡಿಯುತ್ತಿರುವ ಬಹುಮುಖ ಕಲಾ ಪ್ರತಿಭೆ ಎಂದರೆ ಅತಿಶಯೋಕ್ತಿಯಾಗಲಾರದು. ವಸ್ತವತೆಯ ನೆಲೆಗಟ್ಟಿನಲ್ಲಿ ಬರೆದ ಇವರ ಸಾಹಿತ್ಯ ಓದುಗರನ್ನು ಬಹುಬೇಗ ಆಕರ್ಷಿಸುವಂಥದ್ದು. ಹಲವು ಬದುಕುಗಳು ಇವರ ಬರವಣೆಗೆಯಲ್ಲಿ ಜೀವ ಪಡೆದು ಕೊಂಡಿದೆ. ಹಾಸನ ಜಿಲ್ಲೆ ಕಂಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಸೋಮಶೇಖರ್ ರವರು ಪರಿಷತ್ತಿನ ಹಲವಾರು ಕಾರ್ಯಕ್ರಮಗಳ್ನು ಸುಸಂಘಟಿತವಗಿ ನಿರ್ವಹಿಸಿ ಯಶಸ್ವಿಗೊಳಿಸಿದ್ದಾರೆ.
ಇಳಿ ವಯಸ್ಸಿನಲ್ಲಿಯೂ ಬಹುಮುಖಿ, ಜನಪರ ಚಟುವಟಿಗಳ ಜೊತೆಗೆ ಬರಹಗಳ ಮೂಲಕ ಬಡವರ್ಗಗಳ ದನಿಯಾಗುವ ಆಶಯ ಹೊಂದಿರುವ ಇವರು ಸದಾ ಕ್ರಿಯಾಶೀಲವಾದ ವ್ಯಕ್ತಿ.ಪ್ರಸ್ತುತ ಬೆಂಗಳೂರಿನ ಜೆ.ಪಿ.ನಗರದ 8ನೇ ಮೇನ್, 3ನೇ ಕ್ರಾಸ್ ಮ.ನಂ. 885 ರಲ್ಲಿ ವಾಸವಾಗಿರುವ ಇವರು ವೃತ್ತಿಯಿಂದ ವಿಶ್ರಾಂತ ಜೀವನ ನಡೆಸುತ್ತಿದ್ದರೂ, ಪ್ರವೃತ್ತಿಯಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ.
ಕನ್ನಡ ಕಾದಂಬರಿ ಲೋಕದ ಹಸಿ ನೆಳಲು : ಸಂ.ಲಿಂ. ಭೈರಪ್ಪ
ಕಾದಂಬರಿ ಎಂದರೆ ಅರ್ಥಗೊತ್ತೇ? ಕಾದಂಬರಿ ಎಂದರೆ ಹೆಂಡ, ಮದ್ಯ ! ನಿಮಗೆ ದಿಗಿಲಾಗಬಹುದಲ್ಲವೇ, ಆದರೂ ಸತ್ಯ ಕಣ್ರೀ. ಅದರ ಕುಡಿತವು ಹೇಗೆ ಮೈಮರೆಸುತ್ತದೆಯೋ ಹಾಗೆಯೇ ಕಾದಂಬರಿಯೂ ಮೈ ಮರೆಸುವುದರಿಂದ ಈ ಪ್ರಕಾರಕ್ಕೆ ಬಹುಶಃ ಆ ಹೆಸರಿಟ್ಟಿರಬಹುದೇನೋ ಅಲ್ಲವೇ? ಸಂಸ್ಕøತದಲ್ಲಿರುವ ಬಾಣಭಟ್ಟನ ‘ಕಾದಂಬರಿ’ ಇದಕ್ಕೊಂದು ತಾಜಾ ಉದಾಹರಣೆ. ಬಹುಶಃ ಈ ಹೆಸರು ಕೇಳದವರಿಲ್ಲವೆನಿಸುತ್ತೆ. ಈ ಕಾದಂಬರಿಯನ್ನು 19ನೆಯ ಶತಮಾನದಲ್ಲಿ ತುರುಮುರಿಯವರು ಕನ್ನಡಕ್ಕೆ ‘ಕಾದಂಬರಿ ಕಾವ್ಯದ ಹೊಸಗನ್ನಡ ಗದ್ಯ ರೂಪ’ ಎಂಬ ಹೆಸರಿನಲ್ಲಿ ತಂದರು. ಕಥೆ, ನಿರೂಪಣೆ, ವರ್ಣನಾ ಕೌಶಲ್ಯ, ಶೈಲಿ ಮತ್ತು ರಸಾನುಭವದ ದೃಷ್ಠಿಯಿಂದ ಕಾದಂಬರಿ ಪ್ರಕಾರ ಜನಪ್ರಿಯವಾಯಿತು.
ಹೊಸಗನ್ನಡ ಇತಿಹಾಸದಲ್ಲೇ ಅತ್ಯಾಧಿಕ ಶ್ರೇಷ್ಠ ಕಾದಂಬರಿಗಳನ್ನು ನಾಡಿಗೆ ನೀಡಿ ಜಗತ್ತಿನಾದ್ಯಾಂತ ಅಭಿಮಾನಿಗಳ ಮಹಾಸೈನ್ಯವನ್ನು ಕಟ್ಟಿಕೊಂಡವರಾರು ಗೊತ್ತೇ? ಅವರೇ 1999 ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು! ಇನ್ನೂ ಹೊಳೆಯಲಿಲ್ಲವೇ? ಅವರೇ ಕಣ್ರೀ ಆಧುನಿಕ ನವ್ಯ ಕಾದಂಬರಿಯ ಸಾರ್ವಭೌಮ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇ ಶಿವರದ ಭೈರಪ್ಪನವರು.
ಕಾದಂಬರಿ ಜಗತ್ತಿನಲ್ಲಿ ಎಸ್.ಎಲ್. ಭೈರಪ್ಪನೆಂದೇ ಖ್ಯಾತಿವೆತ್ತ ಇವರು 1934ರ ಜುಲೈ 26 ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ.
ಕನ್ನಡ ಕಾದಂಬರಿ ಸಾಹಿತ್ಯ ಲೋಕದಲ್ಲಿ ಹೆಚ್ಚು ಓದುಗರನ್ನು ಸೆಳೆದಿರುವ ಭೈರಪ್ಪನವರು ತಮ್ಮ ಅಪೂರ್ವ ಕೃತಿಗಳ ಮೂಲಕ ಆಳವಾದ ಚಿಂತನೆಯಲ್ಲಿ ಹಳೆಯ ಮತ್ತು ಹೊಸ ಮೌಲ್ಯಗಳ ಸಂಘರ್ಷವನ್ನು ವೈಚಾರಿಕತೆಯ ನೆಲೆಯಲ್ಲಿ ಸೃಜನಾತ್ಮಾಕ ಸಹಜ ಪಾತ್ರಗಳ ವ್ಯಕ್ತಿತ್ವದೊಂದಿಗೆ ಬಿಚ್ಚಿಡುವ ಕೆಲಸವನ್ನು ಇವರ ಕಾದಂಬರಿಗಳಲ್ಲಿ ಕಾಣಬಹುದು. ಪ್ರತಿಯೊಂದು ಕಾದಂಬರಿಯಲ್ಲಿಯೂ ಹಳೆ, ಹೊಸ ಸಂಘರ್ಷದ ಕಥೆ ಹೇರಳವಾಗಿ ಮೂಡಿರುವುದರಿಂದ ವೈವಿಧ್ಯತೆಗಳ ನೆಲೆ ಅಷ್ಟೇನೂ ಇಲ್ಲವೇನೋ ಅನ್ನಿಸಿ ಬಿಡುತ್ತದೆ. ಆಳಕ್ಕಿಳಿದು ಮಾತನಾಡುವಲ್ಲಿ, ಕೃತಿಗಳು ವಿಸ್ತಾರಗೊಳ್ಳುವಲ್ಲಿ ಎಲ್ಲೋ ಮುಗ್ಗರಿಸುತ್ತವೆ ಅನ್ನಿಸದಿರದು. ಆದ್ದರಿಂದಲೇ ಇವರ ಕೃತಿಗಳು ವಿಮರ್ಶಕ ವಲಯದಲ್ಲಿ ವಾದ-ವಿವಾದಗಳಿಗೆ ಕಾರಣವಾಗಿವೆ. ಭಾರತೀಯ ತತ್ತ್ವ ಶಾಸ್ತ್ರದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಭೈರಪ್ಪನವರು ಕನ್ನಡಕ್ಕೆ ಹಲವಾರು ಮೌಲಿಕ ಕಾದಂಬರಿಗಳನ್ನು ನೀಡಿದ್ದಾರೆ. ಹಾಗೆಯೇ ಅವರದೇಯಾದ ಓದುಗ ವಲಯವನ್ನು ಸೃಷ್ಠಿಸಿಕೊಂಡಿದ್ದಾರೆ.
ನವ್ಯ ಮಾರ್ಗದ ಹೊರಗುಳಿದ ಜನಪ್ರಿಯ ಕಾದಂಬರಿಕಾರ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. 1965ರಲ್ಲಿ ‘ವಂಶವೃಕ್ಷ’ ವೆಂಬ ಕಾದಂಬರಿಯನ್ನು ಪ್ರಕಟಿಸಿ ಅಪಾರ ಕೀರ್ತಿಗಳಿಸಿದರು. ಸಜೀವ ಪಾತ್ರಗಳ ನಿರ್ಮಾಣ, ಕಲಾವಂತಿಕೆ, ಭಾಷೆಯ ವೈವಿಧ್ಯ ಪೂರ್ಣ ಬಳಕೆ ಇಂತಹ ಗುಣಗಳಿಗೆ ಹೆಸರಾದ ಭೈರಪ್ಪನವರು ದಾಟು, ಪರ್ವ, ಸಾಕ್ಷಿ, ಗೃಹಭಂಗ, ಧರ್ಮಶ್ರೀ, ದೂರ ಸರಿದವರು, ಮಂದ್ರ, ವಂಶವೃಕ್ಷ, ಜಲಪಾತ, ತಬ್ಬಲಿ ನೀನಾದೆ ಮಗನೆ, ನಾಯಿನೆರಳು, ಮತದಾನ, ನಿರಾಕರಣ, ಅನ್ವೇಷಣೆ, ಕವಲು, ನೆಲೆ, ಅಂಚು, ತಂತು, ಸಾರ್ಥ, ಆವರಣ ಮೊದಲಾದ ಹಲವು ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಹಲವಾರು ಕಾದಂಬರಿಗಳಲ್ಲಿ ವೈಚಾರಿಕತೆಯ ನೆಳಲನ್ನು ಕಾಣಬಹುದಾಗಿದೆ. ಅವರ ಪ್ರಮುಖ ಪಾತ್ರಗಳು ನಿಖರತೆ ಹೊಂದಿದ್ದು, ಸ್ಪಷ್ಟ ರೀತಿಯ ಜೀವನ ಸಿದ್ಧಾಂತ ಸಾರುತ್ತವೆ. ಉಳ್ಳವರ, ಇಲ್ಲದವರ ನಡುವಿನ, ಮೇಲ್ವರ್ಗದ-ಕೆಳವರ್ಗದ ಸನ್ನಿವೇಶಗಳೇ ಪ್ರಮುಖ. ಹಲವು ಕಾದಂಬರಿಗಳಲ್ಲಿ ದೈಹಿಕ ಸುಖ, ಮಹಿಳಾ ಶೋಷಣೆಯ ನೇರ ಸನ್ನಿವೇಶಗಳು, ಹಳ್ಳಿ ನೈಜ ಘಟನೆಗಳು ಮೇಳೈಸಿರುವುದನ್ನು ಕಾಣಬಹುದು. ಆದರೆ ಭೈರಪ್ಪನವರ ಸೃಜನಶೀಲತೆ ಅವರ ವೈಚಾರಿಕತೆಯೊಂದಿಗೆ ಹೊಂದಾಣಿಕೆಯಾಗದ ಕಾರಣ ಕೆಲವು ಸನ್ನಿವೇಶಗಳಲ್ಲಿ ಹಾಗೆಯೇ ಕೃತಿಗಳಲ್ಲಿಯೂ ಕೂಡ ಸೋಲನ್ನು ಕಾಣಬಹುದು.
ಮತದಾನ, ತಬ್ಬಲಿಯು ನೀನಾದೆ ಮಗುವೆ, ವಂಶವೃಕ್ಷ, ನಾಯಿನೆರಳು ಇವು ಚಲನಚಿತ್ರಗಳಾಗಿ ಯಶ ಕಂಡಿವೆ. ‘ಭಿತ್ತಿ’ ಆತ್ಮ ವೃತ್ತಾಂತವನ್ನೊಳಗೊಂಡ ಕೃತಿಯಾಗಿದೆ. ‘ಸತ್ಯ ಮತ್ತು ಸೌಂದರ್ಯ’ ಇವರ ಸಂಶೋಧನಾ ಮಹಾಪ್ರಬಂಧವಾಗಿದೆ. ‘ಸಾಹಿತ್ಯ ಮತ್ತು ಪ್ರತೀಕ’, ‘ಕಥೆ ಮತ್ತು ಕಥಾ ವಸ್ತು’, ‘ನಾನೇಕೆ ಬರೆಯುತ್ತೇನೆ’ ಮೊದಲಾದವುಗಳು ಸಾಹಿತ್ಯ ಚಿಂತನದ ಕೃತಿಗಳಾಗಿದ್ದು ವೈವಿಧ್ಯತೆಯಿಂದ ಕೂಡಿವೆ.
‘ಪರ್ವ’ ಮಹಾಭಾರತ ಕುರಿತಾದ ಕಥಾವಸ್ತು. ‘ಮತದಾನ’ ಸಮಕಾಲೀನ ರಾಜಕೀಯ ವ್ಯವಸ್ಥೆ, ಸಮಸ್ಯೆ, ಡೋಂಗಿತನಗಳ ಮೇಲೆ ಬೆಳಕು ಚೆಲ್ಲುತ್ತದೆ. ‘ದಾಟು’ ಜಾತಿ ಸಮಸ್ಯೆ ಕುರಿತು ವಿಶ್ಲೇಷಣೆ ನೀಡುವ ಕಾದಂಬರಿ, ‘ಆವರಣ’ ಒಂದು ಐತಿಹಾಸಿಕ ಕಥಾವಸ್ತುವನ್ನು ಹೊಂದಿದ ಕಾದಂಬರಿಯಾದ ಇದು ಸಾಹಿತ್ಯ ವಲಯದಲ್ಲಿ ವಿವಾದಕ್ಕೂ ಕಾರಣವಾಗಿತ್ತು. ‘ಸಾರ್ಥ’ ಎಂಟನೇ ಶತಮಾನದಲ್ಲಿ ನೆಡದ ವಿದ್ಯಮಾನಗಳನ್ನು ಭಿತ್ತರಿಸುತ್ತದೆ. ಇವರ ಕಾದಂಬರಿಗಳು ಹೆಚ್ಚಾಗಿ ಮರಾಠಿಗೆ ಅನುವಾದಗೊಂಡಿವೆ. ಅಲ್ಲಿನ ಓದುಗರು ಕಂಡಂತೆ ಇವರೊಬ್ಬ ಮಹಾರಾಷ್ಟ್ರದ ಕಾದಂಬರಿಕಾರರೇ ಆಗಿ ಹೋಗಿದ್ದಾರೆ. ಮರಾಠಿಯಲ್ಲದೇ ಹಿಂದಿ, ಇಂಗ್ಲೀಷ್, ಸಂಸ್ಕøತ, ತೆಲುಗು ಮುಂತಾದ ಭಾಷೆಗಳಿಗೆ ಅನುವಾದ ಕಂಡ ಇವರ ಕಾದಂಬರಿಗಳು ಸಹಜವಾಗಿಯೇ ದೇಶದಾದ್ಯಾಂತ ಜನಪ್ರಿಯತೆ ಗಳಿಸಿವೆ. ಇವರ ‘ಗೃಹಭಂಗ’ ದೂರದರ್ಶನ ಧಾರಾವಾಹಿಯಾಗಿ ಪ್ರಸಾರವಾಗಿದೆ.
ಭೈರಪ್ಪನವರ ಮೊದಲ ಕಾದಂಬರಿ ‘ಧರ್ಮಶ್ರೀ’ 1961 ರಲ್ಲಿ ಬಂದಿತು. ಹಿಂದೂ ಧರ್ಮ ಮತ್ತು ಸಂಸ್ಕøತಿಯ ಚರ್ಚೆಯನ್ನು ವೈಚಾರಿಕತೆಯ ಹಿನ್ನಲೆಯೊಂದಿಗೆ ಹೇಳುವ ರೀತಿ ವಿಭಿನ್ನವಾಗಿ ಮೂಡಿ ಬಂದಿದೆ. ಕಾದಂಬರಿಯ ಬೆನ್ನುಡಿಯಲ್ಲಿ ಭಾರತೀಯ ಪರಂಪರೆಯಲ್ಲಿ ಧರ್ಮ ಮತ್ತು ಸಂಸ್ಕøತಿ ಎರಡೂ ಭಿನ್ನವಾದ ರೂಪಗಳು, ಮತಾಂತರದಿಂದ ಸಂಭವಿಸುವ ಸಾಂಸ್ಕøತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ ‘ಧರ್ಮಶ್ರೀ’ಯ ವಸ್ತುವಾಗಿದೆ ಎಬುದನ್ನು ಕಾಣಬಹುದಾಗಿದೆ. ನಾಯಕ ಸತ್ಯನಾರಾಯಣ ಹಿಂದೂ ಸಂಸ್ಕøತಿಯ ಪ್ರತಿಬಿಂಬದಂತೆ ಮೂಡಿ ಬಂದು, ಕ್ರೈಸ್ತ ಹುಡುಗಿ ಅಲ್ಲಿಯ ಮೋಹಪಾಶಕ್ಕೆ ಸಿಕ್ಕು ಕ್ರೈಸ್ತನಾಗಿ ಮತ್ತೆ ಹಳೆಯ ವಾಸನೆಯೇ ವಾಸಿ ಎಂದು ಮರಳಿ ಮಣ್ಣಿಗೆ ವಾಪಾಸ್ಸಾಗುತ್ತಾನೆ. ಇಂತಹ ಸನ್ನಿವೇಶ ಭೈರಪ್ಪನವರ ಕಾದಂಬರಿಗಳಲ್ಲಿ ಹಲವಾರು ಕಡೆ ಸಂಭವಿಸುತ್ತದೆ. ಪ್ರಸುತ್ತ ಕೃತಿಯಲ್ಲಿ ಗೊಂದಲದಿಂದ ಕೂಡಿರುವ ಸಾಂಸ್ಕøತಿಕತೆ ಸತ್ಯಭಾಮೆಯ ಮೂಲಕ ಸಾಗುವ ಪಾತ್ರಗಳು ಕಾದಂಬರಿಯ ವಸ್ತು ಇತಿಹಾಸ ಗೊತ್ತಿಲ್ಲದೆ ಸಮಕಾಲೀನ ಜೀವನದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬ ಸತ್ಯಭಾಮಳ ಮಾತಿಗೆ ಬದ್ಧವಾಗಿರುವಂತೆ ಕಾಣುತ್ತದೆ.
‘ದೂರ ಸರಿದವರು’ ಕಾದಂಬರಿಯಲ್ಲಿ ಶುದ್ಧ ಪ್ರೇಮದ ಆಲೋಚನಾ ಜಗತ್ತನ್ನು ಆನಂದ ಮತ್ತು ವಿನತೆ, ವಸಂತ ಮತ್ತು ಉಮಾ ಇವರ ಪ್ರೇಮ ಸಂಬಂಧಗಳ ಮೂಲಕ ತೆರೆದು ತೋರಿಸುವ ಭೈರಪ್ಪನವರು ನಮ್ಮನ್ನು ವೈಚಾರಿಕಾ ಜಗತ್ತಿಗೆ ತಳ್ಳಿ ಬಿಡುತ್ತಾರೆ.
ಹೀಗೆ ಒಂದೊಂದು ಕಾದಂಬರಿಯಲ್ಲಿ ಒಂದೊಂದು ರೀತಿಯ ಶೈಲಿಯಲ್ಲಿ ಪಾತ್ರ ಕಥಾವಸ್ತುಗಳನ್ನು ಹೆಣೆಯುತ್ತಾ ವಿಭಿನ್ನ ಬರವಣಿಗೆಯಲ್ಲಿ ತೊಡಗಿದ್ದಾರೆ.
1975ರಲ್ಲಿ ಇವರ ‘ದಾಟು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ದಾಟು, ವಂಶವೃಕ್ಷ, ಸಾಕ್ಷಿ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ‘ಭಿತ್ತಿ’ ಇವರ ಆತ್ಮಕಥೆ. ಭೈರಪ್ಪನವರಿಗೆ ಮಾಸ್ತಿ ಪ್ರಶಸ್ತಿ, ಕೋಲ್ಕತ್ತಾದ ಭಾರತೀಯ ಭಾಷಾ ಪ್ರಶಸ್ತಿ, ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಕಾವ್ಯಾನುಭೂತಿಯ ರಂಗಭೂಮಿ ಸಾಧಕ ಸತ್ಯನಾರಾಯಣರಾವ್ ಅಣತಿ
ಕನ್ನಡ ನಾಡಿನ ಬಗ್ಗೆ ಮಹಾಕವಿಯೊಬ್ಬ ಹೇಳಿರುವಂತೆ ಫಲಪುಷ್ಪಯುತವಾದ ಇಲ್ಲಿನ ಅಡವಿ ಸೊಕ್ಕಿದಾನೆಯನ್ನು ಬೆಳಸುತ್ತದೆ, ದೇಮಾತೃಕವೆನಿಸಿದ ಹೊಲ ಗಂಧಶಾಳಿ (ಭತ್ತ)ಯನ್ನು ಬೆಳೆಯುತ್ತದೆ. ಮಾವು, ಮಲ್ಲಿಗೆಗಿದು ತೌರು. ಮುಡಿಯಲು ಮಲ್ಲಿಗೆ, ಮೆಲ್ಲಲು ಮಾವಿನ ಹಣ್ಣು ಇದ್ದ ಮೇಲೆ ‘ಸಂಸಾರ ಸಾರಸರ್ವಸ್ವ’ ವೆಂಬ ಫಲ ಮತ್ತಾವುದು ಬೇಕು? ಎಂದು ಕೇಳುವಂತಹ ರಸಿಕರು ಕನ್ನಡಿಗರು ಈ ಮನೋಭಾವದಲ್ಲಿ ಬಾಳಿಕೊಂಡು ಬಂದ ಕನ್ನಡಿಗರು ಇಹವನ್ನು ದೂರದೆ ಪರಕ್ಕೆ ದೂರರಾಗದೆ ತುಂಬು ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ.
ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳ ಭವ್ಯ ಪರಂಪರೆಯನ್ನು ಒಳಗೊಂಡು ವಿಶಿಷ್ಟ, ವಿಭಿನ್ನ, ವಿನೂತನ, ವೈವಿಧ್ಯ, ಆಳ-ವಿಸ್ತಾರಗಳನ್ನು ಸದಾಕಾಲವೂ ಪ್ರತಿಬಿಂಬಿಸುತ್ತಾ, ಮೌಲಿಕ ಸಾಹಿತ್ಯ ಕೃತಿಗಳಿಂದ ಪ್ರಜ್ವಲಿಸುತ್ತಾ ಮುನ್ನುಗ್ಗುತ್ತಿದೆ.
ಪಂಪ ಪೂರ್ವ ಹಾಗೂ ಉತ್ತರಾಧಿಯಾಗಿ ಸಹಸ್ರಾರು ಮಹನೀಯರು ಕನ್ನಡ ಧೀಶಕ್ತಿ ಕಹಳೆ ಮೊಳಗಿಸಿ, ಚಂದನದ ಲೇಪನ ಮಾಡಿ ಸಾಹಿತ್ಯಾಸಕ್ತರಿಗೆ ಉಣಬಡಿಸಿದ್ದರೆ ನಾಡು,ನುಡಿ, ಸಂಸ್ಕøತಿ ಹೊಳವ್ಹರಿಸಿದ್ದಾರೆ. ಜಾಗತಿಕ ಭಾಷೆಗಳು ನಮ್ಮತ್ತ ಮುಖ ಮಾಡುವಂತೆ ಮಾಡಿದ್ದಾರೆ.
ಇಂತಹ ಮಹನೀಯರ ಸಾಲಿನಲ್ಲಿ ಅಣತಿಯವರು ಒಬ್ಬರು. ಇವರು ಕ್ರಿ,ಶ.1935 ಡಿಸೆಂಬರ್ 12 ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದ ಎ.ಎನ್. ಮೂರ್ತಿರಾವ್ ಮತ್ತು ಶ್ರೀಮತಿ ರತ್ನಮ್ಮ ದಂಪತಿಗಳ ಜೇಷ್ಠ ಪುತ್ರರಾಗಿ ಜನಿಸಿದರು. ಇವರ ಪೂರ್ಣ ಹೆಸರು ಸತ್ಯನಾರಾಯಣರಾವ್ ಅಣತಿ. ಆದರೆ ಸಾಹಿತ್ಯ ಲೋಕದಲ್ಲಿ ಅಣತಿಯೆಂದೇ ಪ್ರಸಿದ್ಧಿ ಪಡೆದು ತಮ್ಮ ಹುಟ್ಟೂರನ್ನು ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚಳಿಯದಂತೆ ನೆಲೆಯೂರಿಸಿದ್ದಾರೆ.
ಹುಟ್ಟೂರಾದ ಅಣತಿ, ತಿಪಟೂರು, ಹಾಸನದಲ್ಲಿ ಶಿಕ್ಷಣ ಪಡೆದ ಅಣತಿಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸರ್ಕಾರಿ ಸೇವೆಗೆ ಸೇರಿದರು. ನಂತರ ಧಾರವಾಡ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಇವರು ಶಿವಮೊಗ್ಗ ಡಿ.ವಿ.ಎಸ್. ಕಾಲೇಜ್ನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು. ಹೊನ್ನಾವರ ಮತ್ತು ಶಿವಮೊಗ್ಗದಂತಹ ಹಸಿರ ಸೆರಗಿನ ಚುಮು ಚುಮು ವಾತಾವರಣ ಅಣತಿಯವರಲ್ಲಿ ಕಾವ್ಯದ ಬೀಜ ಮೊಳೆಯುವಂತೆ ಮಾಡಿತು. ಕವಿ ಪುಂಗವರ ಬೀಡೆಂದೇ ಕರೆಯಲ್ಪಡುವ ಶಿವಮೊಗ್ಗ ಅಣತಿಯವರ ಸಾಹಿತ್ಯ ಕಾರ್ಯಕ್ಷೇತ್ರವಾಯಿತು. ಇವರು ಕಾವ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ.
ರಮ್ಮಿಯಾಟ-1966, ಹಿಪ್ಪೇಮರ-1974, ಭೂಮಿ ಮತ್ತು ಬದುಕಿನ ಗಂಧ-1989, ಕೃಷ್ಣಾ ಕಣ್ಣಿನ ನೋಟ-1995, ಭೂಮಿ ಹುಣ್ಣಿಮೆ-1996, ತೆರಕೊಂಡ ಆಕಾಶ-2003, ಪಾತ್ರಗಳು ಇರಲಿ ಗೆಳೆಯ-2007, ನೀಲಕುರುಂಜಿ-2009 ಮುಂತಾದ ಕಾವ್ಯ ಕೃತಿಗಳನ್ನು ನೀಡಿದ್ದಾರೆ.
ಕಾವ್ಯದಷ್ಟೇ ಅಣತಿಯವರನ್ನು ರಂಗಭೂಮಿಯೂ ಸೆಳೆದಿತ್ತು. ಶಿವಮೊಗ್ಗವು ರಂಗ ಕರ್ಮÀಭೂಮಿಯೆಂದೇ ಪ್ರಸಿದ್ಧಿ. ಅಲ್ಲಿನ ‘ಯುಗಾಂತರ ರಂಗ’ ವೇದಿಕೆಯಿಂದ 1979 ರಲ್ಲಿ ಬರೆದ ‘ಚಾರ್ವಾದ’ ನಾಟಕದ ಮೂಲಕ ಪ್ರಾರಂಭವಾಗಿ ‘ಜೈಸಿದ್ಧ ನಾಯಕ’, ತ್ರಿಶಂಕು, ಒಂದು ಆಕೃತಿಯ ಹತ್ಯೆ, ಕತ್ತಲೆ ಬೆಳಕು ಮುಂತಾದ ನಾಟಕಗಳನ್ನು ರಚಿಸಿ ರಂಗ ಪ್ರಯೋಗ ಮಾಡಿದ್ದಾರೆ. ಅದರಲ್ಲೂ ಕಾವ್ಯ ನಾಟಕಗಳಿಗೆ ಅಣತಿಯವರು ಸುಪ್ರಸಿದ್ಧರು. ಇವರÀನ್ನು ಗೀತ ನಾಟಕಕಾರರೆಂದೆ ಕರೆಯಲಾಗುತ್ತಿದೆ.
ಹಿಂದಿ ಭಾಷೆಗೆ ಅನುವಾದ
ಕನ್ನಡ ಸಾಹಿತಿಗಳ ಕೃತಿಗಳ ಬೇರೆ ಭಾಷೆಗೆ ಭಾಷಾಂತರಗೊಂಡ ಕೆಲವೇ ಕೆಲವರಲ್ಲಿ ಅಣತಿಯವರೂ ಒಬ್ಬರು. ಇವರ ಹಲವು ಉತ್ತಮ ಕವಿತೆಗಳು ಹಾಗೆಯೇ ‘ಜೇತವನ’ ಎಂಬ ನಾಟಕ ಹಿಂದಿ ಭಾಷೆಗೆ ಭಾಷಾಂತರಗೊಂಡು ಅಲ್ಲಿನ ಓದುಗರ ಮೆಚ್ಚುಗೆ ಗಳಿಸಿವೆ.
‘ಸಂಪನ್ಮೂಲ ವ್ಯಕ್ತಿಯಾಗಿ’
ವೃತ್ತಿಯಲ್ಲಿ ಆದರ್ಶ ಅಧ್ಯಾಪಕರಾಗಿದ್ದ ಅಣತಿಯವರು ಉತ್ತಮ ವಾಗ್ಮಿಗಳು. ಕಾವ್ಯ ಹಾಗೂ ರಂಗಭೂಮಿಯ ಬಗ್ಗೆ ಆಳವಾದ ಅಧ್ಯಯನ ಮಾಡಿ ವಿಶೇಷ ಪಾಂಡಿತ್ಯ ಸಂಪಾದಿಸಿದ್ದರು. ಹಲವಾರು ಗೋಷ್ಠಿಗಳಲ್ಲಿ ಉಪನ್ಯಾಸ ನೀಡಿದ್ದಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾವ್ಯ ನಾಟಕ ರಚನಾ ಶಿಬಿರದ ಸಂನ್ಮೂಲ ವ್ಯಕ್ತಿಯಾಗಿ ಹಾಗೆಯೇ ಮೈಸೂರಿನ ನೀನಾಸಂ ಸಾಹಿತ್ಯ ಅಧ್ಯಯನ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮಾನವೀಯ ಮೌಲ್ಯ ಸಂವೇದನೆಯ ಕವಿಯಾಗಿ, ಮೂಲ ರಂಗಭೂಮಿ ಕಲಾ ಪೋಷಕರಾಗಿ ಅವಿಸ್ಮರಣೀಯ ಸೇವೆಗೈದ ಅಣತಿಯವರು ಅನೇಕ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಠಿ, ಚರ್ಚಾಗೋಷ್ಠಿ, ಸಾಹಿತ್ಯಿಕ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಸಾಹಿತ್ಯ ಸಂಸ್ಕøತಿ ಸಂಪುಟ ಪರಂಪರೆ’ ಎಂಬ ಬೃಹತ್ ಗ್ರಂಥದ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಇವರದು. ಇವರ ಬದುಕಿನ ಬಹುಭಾಗ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದುದರಿಂದ ಹೆಚ್ಚಾಗಿ ಹಾಸನ ಜನರಿಗೆ ಪರಿಚಯ ಇಲ್ಲದಿದ್ದರೂ ನಾಡಿನಾದ್ಯಾಂತ ಮನೆ ಮಾತಾಗಿದ್ದಾರೆ.
2011 ರಲ್ಲಿ ತವರು ಜಿಲ್ಲೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದ ಪ್ರಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಅಣತಿಯವರು ನಾಡಿನ ಗಣ್ಯ ಸಾಹಿತಿಯೂ ಹೌದು. ಸದ್ಯ ಪತ್ನಿ ‘ಪ್ರಭಾ’ ರವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿರುವ ಅಣತಿಯವರು ಸದಾ ಕನ್ನಡ ಸಾಹಿತ್ಯದ ಕ್ರಿಯಾಶೀಲ ಹಣತೆ.
ಮಹಿಳಾ ಸಂವೇದನೆÉಯ ಮೇರು ಚಿಂತಕಿ - ಬಾನು ಮುಷ್ತಾಕ್
ಆಧುನಿಕ ಭಾರತದ ಸಾಮಾಜಿಕ ವ್ಯವಸ್ಥೆಗೆ ಚಲನಶೀಲವಾದ ಗುಣ ಬಂದದ್ದೇ ಆಂಗ್ಲರ ಆಡಳಿತದಿಂದಾಗಿ. ಈ ಕಾರಣಕ್ಕಾಗಿಯೇ ಮಹಿಳೆಯರು, ದಲಿತರು ಅಕ್ಷರ ಸಂಸ್ಕøತಿಗೆ ಒಂದು ಪ್ರವಾಹ ರೂಪದಲ್ಲಿ ನುಗ್ಗಿ ಬರುವಂತಾಯಿತು. ಈ ನೆಲೆಗೆ ಜೀವ ತುಂಬಿದವರು ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಮುಂದುವರೆದು ಸಾಹೂ ಮಹಾರಾಜ, ಡಾ||ಬಾಬಾಸಾಹೇಬ ಅಂಬೇಡ್ಕರ್ ಇವರೆಲ್ಲರ ನಿರಂತರ ಹೋರಾಟದಿಂದ ಸಮಾಜಮುಖಿ ಚಿಂತನೆಗೆ ಜೀವ ಪಡೆಯಿತು. ಹೀಗಾಗಿ ದಲಿತರು , ಮಹಿಳೆಯರು ತಮ್ಮ ಸ್ವಾಭಿಮಾನದ ಬದುಕಿನ ಎಲ್ಲ ಮಗ್ಗಲುಗಳನ್ನು ಅಕ್ಷರ ಲೋಕಕ್ಕೆ ಪರಿಚಯಿಸಿದರು. ಆ ಮೂಲಕ ಹೊಸದೊಂದು ಅನುಭವ ಕಟ್ಟಿಕೊಟ್ಟ ಕೀರ್ತಿ ಆ ವರ್ಗಗಳಿಗೆ ಸೇರಬೇಕು. ಅನೇಕ ಬರಹಗಾರರು, ಬರಹಗಾರ್ತಿಯರು ನೂರಾರು ನದಿಗಳಂತೆ ರೂಪುಗೊಂಡಿದ್ದಾರೆ.
70-80ರ ದಶಕದಲ್ಲಿ ದಲಿತ ಮತ್ತು ಬಂಡಾಯದ ಕಾವು ತೀವ್ರತರವಾಗಿತ್ತೆಂದು ಹೇಳಬಹುದು. ಸಾ.ರ.ಅಬುಬಕ್ಕರ್, ಬಾನುಮುಸ್ತಾಕ್ ಈ ಹಂತದಲ್ಲಿ ದಿಟ್ಟಬರವಣಿಗೆಯ ಮೂಲಕ ಗುರುತಿಸಿಕೊಂಡ ಅಪರೂಪದ ಮುಸ್ಲಿಂ ಲೇಖಕಿಯರು. ಸಾಮಾಜಿಕ, ಸಾಂಸ್ಕøತಿಕ ಕಾಳಜಿ, ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ಬಾನುಮುಸ್ತಾಕರ ಬಂಡಾಯ ಧ್ವನಿ ಗಮನಾರ್ಹವಾದುದು.
ಪುರುಷ ಪಾರಮ್ಯವಿರುವ ಸಮಾಜದಲ್ಲಿ ಗಂಡು ಹೆಣ್ಣುಗಳ ನಡುವಿನ ಅಸಮಾನತೆಯ ಮೇಲುಕೀಳು ಎಂಬ ಕೇವಲ ಸಾಂಕೇತಿಕ ಮಾದರಿಗಳಲ್ಲಿ ಮಾತ್ರ ಉಳಿಯದೆ ಸಂಸ್ಕøತಿಯ ಬೇರುಗಳಿಗೂ ಇಳಿದಿರುತ್ತದೆ ಎಂಬುದನ್ನು ಸನಾತನ ಕಾಲದಿಂದಲೂ ಕಾಣುತ್ತಾ ಬಂದಿದ್ದೇವೆ. ಬಾನು ಮುಷ್ತಾಕ್ರವರು ತಾವು ಕಂಡಿದ್ದನ್ನು, ಅನುಭವಿಸಿದ್ದನ್ನು ಪ್ರಕಟಿಸುವುದು, ಹೊರಗೆಡುವುದು, ವ್ಯಕ್ತಪಡಿಸುವುದು, ಆತ್ಮ ಸಾಕ್ಷಿಗೆ ವಿರುದ್ದವಾಗಿ ರಾಜಿಯಾಗದ ಸೈದ್ಧಾಂತಿಕ ಧೋರಣೆ ಇವರದು.
ಈ ಹೊತ್ತು ನವ ವಸಶಹತುಶಾಹಿ ಸೃಷ್ಠಿಸಿರುವ ಜಾಗತೀಕರಣ, ಉದಾರಿಕರಣ ಮತ್ತು ಖಾಸಗಿಕರಣಗಳಂತಹ ಸೂಕ್ಷ್ಮ ಪರಿಣಾಮಗಳು ಇಡೀ ಮನುಷ್ಯನನ್ನೇ ನೊಣಚಿ ನುಂಗಿದೆ. ಮನುಷ್ಯ ಸಂಬಂಧಗಳು, ಮಾನವತೆ, ಪ್ರೀತಿ ಈ ಎಲ್ಲವೂ ಕೂಡ ವ್ಯಾಪಾರಿ ವಸ್ತುಗಳಾಗಿವೆ. ಈ ನವ ವಸಾಹತುಶಾಹಿ ಸೃಷ್ಠಿಸಿರುವ ಸೂಕ್ಷ್ಮ ಪರಿಣಾಮಗಳು ನಮ್ಮ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಚರ್ಚೆಯ ಕೇಂದ್ರಗಳಾಗಿವೆ ಎಂಬುದನ್ನು ಅಲ್ಲಗಳೆಯಲಾಗದು. ಇಂತಹ ಹಲವು ಮಹಿಳಾ ಬದುಕಿನ ದಾವಂತಗಳನ್ನು ತಮ್ಮ ಪ್ರಖರ ಬರವಣಿಗೆಯ ಮೂಲಕ ನಾಡಿನ ಜನತೆಯ ಮುಂದೆ ಅನಾವರಣಗೊಳಿಸುತ್ತಾ ಬಂದಿರುವವರು ಬಾನು ಮುಷ್ತಾಕ್ಅವರೆಂದರೆ ಅತಿಶಯೋಕ್ತಿಯಾಗಲಾರದು.
ಜನನ ಃ ಶ್ರೀಮತಿ ಬಾನು ಮುಷ್ತಾಕ್ ಅವರು ಕ್ರಿ.ಶ.1948 ಏಪ್ರಿಲ್ 03 ರಂದು ಹಾಸನ ನಗರದ ಎಸ್.ಎ.ರೆಹಮಾನ್ ಹಾಗೂ ಅಖ್ತರ್ ಬಾನು ದಂಪತಿಗಳ ಪುತ್ರಿಯಾಗಿ ಜನಿಸಿದರು. ಇವರ ತಂದೆ ಸರಕಾರಿ ನೌಕರಿಯಲ್ಲಿದ್ದುದರಿಂದ ಅವರು ವರ್ಗವಾದೆÀಡೆಗೆಲ್ಲಾ ಹೋಗಬೇಕಾದುದ್ದರಿಂದ ಇವರ ಶಿಕ್ಷಣವು ಒಂದು ಕಡೆ ನೆಲೆಗೊಳ್ಳದೆ ಹಾಸನ, ಶಿವಮೊಗ್ಗ, ಕೃಷ್ಣರಾಜ ಸಾಗರ, ಚಾಮರಾಜನಗರ ಮುಂತಾದೆಡೆಗಳಲ್ಲಿ ನಡೆಯಿತು. ಪದವಿಯನ್ನು ಹಾಸನದ ಸರ್ಕಾರಿ ಕಾಲೇಜಿನಲ್ಲಿ ಮುಗಿಸಿದ ಇವರು ನಂತರ ಆಯ್ಕೆ ಮಾಡಿಕೊಂಡದ್ದು ವಕೀಲಿ ಓದನ್ನು. ಬಿ.ಎಸ್ಸಿ, ಎಲ್.ಎಲ್.ಬಿ ಪದವಿಧರೆಯಾದ ಇವರು ಯಾವುದೇ ಮೌಢ್ಯಕ್ಕೆ ಒಳಗಾಗದೇ ಬದುಕನ್ನು, ಸಮಾಜವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತಿಸಿ, ಮಂಥಿಸಿ ಸಮಭಾವದಿಂದ ನೋಡುವ ಬರಹಗಾರ್ತಿ. ಸದಾ ಸಮಸಮಾಜದ ಕನಸುಗಾರರಾದ ಇವರು ಮಾನವೀಯತೆಯ ನೆಲೆಯಲ್ಲಿ ಮುನ್ನಡೆಯುತ್ತಾ ಬಂದಿದ್ದಾರೆ.
ವೃತ್ತಿ : 1981-1990ರವರೆಗೆ ಲಂಕೇಶ್ ಪತ್ರಿಕೆಯ ಜಿಲ್ಲಾ ವರದಿಗಾರ್ತಿಯಾಗುವುದರ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ತಮ್ಮ ಬರಹದ ಹಾಗೂ ದಿಟ್ಟ ವರದಿಗಳ ಮೂಲಕ ಕನ್ನಡಿಗರ ಜನ ಮಾನಸದಲ್ಲಿ ನೆಲೆಯೂರಿದರೆನ್ನಬಹುದು. ಈ ಒಂದು ತಿರುವು ಇವರು ಗಟ್ಟಿ ಬರಹಗಾರ್ತಿಯಾಗಲು ಕಾರಣವಾಯಿತು. ಬದುಕು ಮತ್ತು ಮಾತು ಎರಡನ್ನೂ ಬರಹಗಳ ಕ್ಯಾನ್ವಾಸ್ಸಿನ ಮೇಲೆ ವಿಶಿಷ್ಟ ರೂಪುಗಳನ್ನು ನೀಡುವ ನಿಟ್ಟಿನಲ್ಲಿ ರಚನಾ ಕೌಶಲ್ಯ, ಅನನ್ಯ ಶ್ರದ್ಧೆ, ವೈಚಾರಿಕ ಪ್ರಕರತೆಗಳ ಬಳಸುವ ಇವರ ಶೈಲಿ ಅದ್ಭುತವಾದದ್ದು. ನಂತರ 1990 ರಿಂದ ಪ್ರಸ್ತುತದವರೆಗೂ ನ್ಯಾಯವಾದಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನೊಂದ, ಶೋಷಣೆಗೆ ಒಳಗಾದ, ಕಷ್ಟದಲ್ಲಿರುವ ಅನೇಕ ಮಹಿಳೆಯರಿಗೆ ತನ್ಮೂಲಕ ನ್ಯಾಯ ಒದಗಿಸಿ ಕೊಟ್ಟಿದ್ದಾರೆ.
ಸಾಹಿತ್ಯ ಕ್ಷೇತ್ರ :
1) ಕಥಾ ಸಂಕಲನಗಳು : ಹೆಜ್ಜೆ ಮೂಡಿದ ಹಾದಿ (1990), ಬೆಂಕಿ ಮಳೆ (1999), ಎದೆಯ ಹಣತೆ (2004), ಸಫೀರಾ(2006), ಬಡವರ ಮಗಳು ಹೆಣ್ಣಲ್ಲ (2012),
2) ಕಾದಂಬರಿ : ಕುಬ್ರ
3) ಲೇಖನ ಸಂಗ್ರಹ : ಇಬ್ಬನಿಯ ಕಾವು
4) ಕಾನೂನು ಗ್ರಂಥ : ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ
5) ಇತರರ ಸಂಪಾದಕತ್ವದಲ್ಲಿ ಬಾನು ಮುಷ್ತಾಕರ ಸಾಹಿತ್ಯ ಃ
1) ಕನ್ನಡ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಗಳಲ್ಲಿ ಇವರ ಅನೇಕ ಕಥೆಗಳನ್ನು ಪ್ರಕಟಿಸಿದೆ.
ಅ) ಕಾಳೇಗೌಡ ನಾಗವಾರರವರ ಸಂಪಾದಕತ್ವದಲ್ಲಿ ‘ರಾಹಿಲ ಎಂಬ ಕನ್ಯೆಯ ಕಥೆ’(1984).
ಆ) ನಾ.ಡಿಸೋಜಾರವರ ಸಂಪಾದಕತ್ವದಲ್ಲಿ ‘ಸರಿದ ಕಾರ್ಮೋಡ’ ಎಂಬ ಕಥೆ(1987).
ಇ) ಅಮರೇಶ ನುಡಗೋಣಿ ಸಂಪಾದಕತ್ವದಲ್ಲಿ ‘ಒಮ್ಮೆ ಹೆಣ್ಣಾಗು ಪ್ರಭುವೆ’.
ಈ) ಪಾರಿವಾಳದ ರೆಕ್ಕೆಗಳು (2005)
2) 1999ರಲ್ಲಿ ಪ್ರಿಸಮ್ ಪ್ರಕಾಶನದವರು ಡಾ|| ಅಮೂರರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ಶತಮಾನದ ಮಾಲಿಕೆಯ ‘ಅವಳ ಕೃತಿಗಳು’ ಸಂಕಲನದಲ್ಲಿ ‘ಸರಿದ ಕಾರ್ಮೋಡ’ ಎಂಬ ಕಥೆ ಪ್ರಕಟವಾಗಿದೆ.
3) ಡಾ|| ಅಮೂರರ ಸಂಪಾದಕತ್ವದಲ್ಲಿ ಅಂಕಿತ ಪ್ರಕಾಶನದ “ಸ್ವಾತಂತ್ರೋತ್ತರ ಕನ್ನಡ ಕಥಾಲೋಕ”ದಲ್ಲಿ ಸೇರ್ಪಡೆ “ದೇವರು ಮತ್ತು ಅಪಘಾತ”(2004)
7) ಕಾವ್ಯ : ಅನೇಕ ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರ ಕವನ ಸಂಕಲನ ಅಚ್ಚಿನಲ್ಲಿದೆ.
8) ಅನುವಾದ : 1) ‘ಪರಕೀಯ’ ಕಥೆ ಹಿಂದಿ ಭಾಷೆಯಲ್ಲಿ ಅನುವಾದಗೊಂಡಿದ್ದು, ಉತ್ತರ ಪ್ರದೇಶದ ಹಿಂದಿ ಅಕಾಡೆಮಿಯ ಪ್ರಕಟಣೆಯಾದ ಇಂದ್ರ ಪ್ರಸ್ಥ ಭಾರತಿಯಲ್ಲಿ ಪ್ರಕಟವಾಗಿದೆ.
2) ‘ಬೆಂಕಿ ಮಳೆ’ ಕಥಾ ಸಂಕಲನದ ಕಥೆಗಳು ಮಲಯಾಳಂ ಭಾಷೆಗೆ ಅನುವಾದಗೊಂಡಿದ್ದು, ದೇಶಭಿಮಾನಿ ಹಾಗೂಸ್ತ್ರೀ ಸಬ್ದಮ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಹಾಗೂ ಕಥಾ ಸಂಕಲನ ಮಲಯಾಳಂನಲ್ಲಿ ಪ್ರಕಟವಾಗಿವೆ.
3) ಉರ್ದು, ಪಂಜಾಬಿ , ಇಂಗ್ಲೀಷ್ ಭಾಷೆಗೆ ಕಥೆಗಳು ಅನುವಾದಗೊಂಡು ಪ್ರಕಟವಾಗಿವೆ.
4) ಫ.ಗು.ಹಳಕಟ್ಟಿಸಂಶೋಧನ ಕೇಂದ್ರದವರು ಆದಿಲ್ಶಾಹಿ ಚರಿತ್ರೆಯಾದ ತಾರೀಕ್-ಎ-ಫರಿಷ್ತಾ ಗ್ರಂಥವನ್ನು ಕನ್ನಡಕ್ಕೆ
ಭಾಷಾಂತರಿಸುವ ಕಾರ್ಯವನ್ನು ಕೈಗೊಂಡ ಸಂದರ್ಭದಲ್ಲಿ 250 ಪುಟಗಳ ಚರಿತ್ರೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಚಲನ ಚಿತ್ರ : ‘ಕರಿ ನಾಗರಗಳು ಎಂಬ ಇವರ ಸಣ್ಣ ಕಥೆ “ಹಸೀನಾ” ಎಂಬ ಹೆಸರಿನ ಚಲನಚಿತ್ರವಾಗಿದ್ದು, ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿರುವ ಈ ಚಲನ ಚಿತ್ರಕ್ಕೆ ತಾರಾರವರು ನಿರ್ಮಾಪಕಿಯಾಗುವುದರ ಜೊತೆಗೆ ನಟನೆಯ ಮೂಲಕ ಜೀವ ತುಂಬಿರುವುದು ಮಹತ್ವಪೂರ್ಣವಾದದ್ದು. ಈ ಚಿತ್ರಕ್ಕೆ ಮೂರು ರಾಷ್ಟ್ರ ಪ್ರಶಸ್ತಿ ಬಂದಿರುವುದು ಬಾನು ಮುಷ್ತಾಕರ ಗೌರವವು ರಾಷ್ಟ್ರ ಮಟ್ಟದಲ್ಲಿ ಪ್ರಜ್ವಲಿಸಲು ಕಾರಣವಾಯಿತು.
ಸಾರ್ವಜನಿಕ ಸೇವೆ : ಇವರು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತ ವಾಗಿರದೆ ಸ್ಥಳೀಯ ರಾಜಕೀಯಕ್ಕೂ ಧುಮುಕುವ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿಯೂ ಸೇವೆ ಮಾಡಿದ್ದಾರೆ. ಹಾಸನ ನಗರ ಸಭೆಗೆ 1983ರಿಂದ ಎರಡು ಅವಧಿಗೆ ನಗರ ಸಭಾ ಸದಸ್ಯೆಯಾಗಿ ಆಯ್ಕೆಯಾಗಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಹಾಸನದ ಜಿಲ್ಲಾ ಶ್ರೀ ಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ ಸಂದರ್ಶಕರ ಮಂಡಳಿಯ ಅಧ್ಯಕ್ಷೆಯಾಗಿ ಉತ್ತಮ ಕೆಲಸ ಮಾಡುವುದರ ಮೂಲಕ ಜನರ ಮನ ಗೆದ್ದಿದ್ದಾರೆ. ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆಯಾಗಿ. ಹಾಸನ ನಗರ ಗ್ರಂಥಾಲಯದ ಸಮಿತಿ ಸದಸ್ಯೆಯಾಗಿ, ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಸನದ ಜಿಲ್ಲಾ ಸಮತಾ ವೇದಿಕೆಯ ಅಧ್ಯಕ್ಷೆಯಾಗಿ ಮತ್ತು ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದಾರೆ.
ಸಂಘ ಸಂಸ್ಥೆಗಳಲ್ಲಿ ಸೇವೆ : 1995ರಿಂದ 98ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯ ಸದಸ್ಯೆಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿಯ ಕಾರ್ಯಕಾರಿ ಸಮಿತಿಯ ಮಾಜಿ ಸದಸ್ಯೆಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಸಮಿತಿಯ ಮಾಜಿ ಸದಸ್ಯೆಯಾಗಿ, ಕನ್ನಡ ಚಲನ ಚಿತ್ರಗಳ ಸಬ್ಸಿಡಿ ಸಮಿತಿಗೆ ಸದಸ್ಯೆಯಾಗಿ, 2008 ರಲ್ಲಿ ನಡೆದ ಹಾಸನ ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪಠ್ಯ ಪುಸ್ತಕಗಳಾಗಿ : ನಾವು ಗುಲ್ಬರ್ಗಾ ವಿವಿಯಲ್ಲಿ ನಾನು ಪದವಿ ಓದುತ್ತಿರುವಾಗ ಇವರ ‘ಒಮ್ಮೆ ಹೆಣ್ಣಾಗು ಪ್ರಭುವೆ’ ಕಥೆಯನ್ನು ಪಠ್ಯದಲ್ಲಿ ಓದಿದ್ದೇನೆ. ನಮ್ಮ ಉತ್ತರ ಕರ್ನಾಟಕದಲ್ಲಿ ಬಾನು ಮೇಡಂಗೆ ಒಳ್ಳೆಯ ಹೆಸರಿದೆ. ಇಂದಿಗೂ ಸಾವಿರಾರು ವಿದ್ಯಾರ್ಥಿಗಳಿಗೆ ಇವರ ಬರಹಗಳು ಅಚ್ಚು-ಮೆಚ್ಚು. ನಾನು 2004 ರಲ್ಲಿ ಹಾಸನ ಜಿಲ್ಲೆಗೆ ಶಿಕ್ಷಕನಾಗಿ ನೇಮಕವಾಗಿ ಬಂದಾಗ ನಾನು ಮೊದಲು ಬೇಟಿಯಾದದ್ದು ಬಾನು ಮೇಡಂರವರನ್ನು ಆಗ ಅವರೊಂದಿಗೆ ಪದವಿ ಪಠ್ಯದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೆ. ಇವರ ಮೌಲ್ಯಯುತ ಕಥೆಗಳು, ಬರಹಗಳು ಹಲವಾರು ಕಡೆ ಪಠ್ಯ ಸೇರಿ ವಿಧ್ಯಾರ್ಥಿಗಳನ್ನು ಚಿಂತನೆಗೆಹಚ್ಚಿವೆ. ಅಲ್ಲದೆ ಮಂಗಳೂರು ವಿಶ್ವ ವಿದ್ಯಾಲಯದ 2006ರ ಪದವಿ ತರಗತಿಯ ಪಠ್ಯಪುಸ್ತಕವಾದ ‘ಕೊಡಚಾದ್ರಿಯಲ್ಲಿ ’ಇವರ ಕಥೆ ‘ನಮ್ಮೊಳಗಿನ ಜರೀನಾ’ ಸೇರ್ಪಡೆಯಾಗಿದೆ . ‘ಒಮ್ಮೆ ಹೆಣ್ಣಾಗು ಪ್ರಭುವೆ’ ಕಥೆಯು ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ವರ್ಷದ ಕನ್ನಡ ಪಠ್ಯಪುಸ್ತಕ ‘ಕಥಾ ಸಂಗಮದಲ್ಲಿ ’ ಮತ್ತು ತುಮಕೂರು ವಿಶ್ವವಿದ್ಯಾಲಯಗಳ ಪದವಿ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಿದೆ.
ಮಹಾ ಪ್ರಬಂಧಗಳಲ್ಲಿ ಬಾನು ಮುಷ್ತಾಕ್ಃ ಇವರ ಸಾಹಿತ್ಯದ ಮೇಲೆ ಹಲವಾರು ಸಂಶೋಧನೆಗಳು ಸಹ ನಡೆದಿವೆ. ಮಂಗಳೂರು ವಿಶ್ವ ವಿದ್ಯಾನಿಲಯದ ಸುಜಾತ ಕೆ. ಎಂಬ ವಿದ್ಯಾರ್ಥಿನಿ ನಡೆಸಿದ “ಇಪ್ಪತ್ತನೆ ಶತಮಾನದ ಕೊನೆಯ 25 ವರ್ಷಗಳ ಕಥನ ಸಾಹಿತ್ಯದಲ್ಲಿ ಯಜಮಾನ್ಯ ಮತ್ತು ಸಾಂಸ್ಕøತಿಕ ಅನನ್ಯತೆಯ ನೆಲೆಗಳು” ಎಂಬ ವಿಷಯಗಳ ಬಗ್ಗೆ ಲಂಕೇಶ್-ಕುಂ ವಿರಭದ್ರಪ್ಪ, ದೇವನೂರು ಮಹಾದೇವ-ಮೊಗಳ್ಳಿ ಗಣೇಶ್ ಹಾಗೂ ವೈದೇಹಿ-ಬಾನು ಮುಷ್ತಾಕ್ ತೌಲನಿಕ ಅಧ್ಯಯನಕ್ಕಾಗಿ ಮಂಗಳೂರು ವಿವಿಯು ಪಿ.ಎಚ್.ಡಿ. ಪದವಿ ನೀಡಿದೆ. ಕರ್ನಾಟಕ ವಿಶ್ವ ವಿದ್ಯಾನಿಲಯವು ಶ್ರೀದೇವಿ ಪಾಟೀಲ್ ಎಂಬ ವಿದ್ಯಾರ್ಥಿನಿಯು “ಬಾನು ಮುಷ್ತಾಕ್ರವರ ಸಣ್ಣ ಕಥೆಗಳು” ಎಂಬ ವಿಷಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಎಂ.ಫಿಲ್ ಪದವಿ ನೀಡಿದೆ.
ಪ್ರಶಸ್ತಿ-ಪುರಸ್ಕಾರಗಳು : 1) ದಿನಾಂಕ: 30-11-97ರಂದು ಪ್ರಕಟವಾದ ಪ್ರಜಾವಾಣಿಯಲ್ಲಿ ಪ್ರಕಟವಾದ ಇವರ ‘ಒಮ್ಮೆ ಹೆಣ್ಣಾಗು ಪ್ರಭುವೆ’ ಸಣ್ಣಕಥೆಯು ಬೆಂಗಳೂರಿನ ಆಕಾಶವಾಣಿ ಬೆಂಗಳೂರು ವಾಣಿಜ್ಯ ಕೇಂದ್ರದವರ ಸಹಯೋಗದಿಂದ ನಿರ್ಮಿಸಿದ ಸದರಿ ರೇಡಿಯೋ ನಾಟಕಕ್ಕೆ 1999ರ ಇಂಟರ್ ನ್ಯಾಷನಲ್ ವಿಮೆನ್ ಫಾರ್ ರೇಡಿಯೋ ಅಂಡ್ ಟೆಲಿವಿಷನ್ ಬಹುಮಾನ ದೊರಕಿದೆ.
2) ಪ್ರಜಾವಾಣಿಯಲ್ಲಿ ಪ್ರಕಟವಾದ ಇವರ ಕವನ ‘ಅಮ್ಮನ ಸೀರೆ’ ಕವನಕ್ಕೆ, 1999ರಲ್ಲಿ ಕರ್ನಾಟಕ ಲೇಖಕಿಯರ ಸಂಘದ ಗುಡಿ ಬಂಡೆ ಪೂರ್ಣಿಮಾ ಉದಯೋನ್ಮುಖ ಕವಯತ್ರಿ ಬಹುಮಾನ ಸಂದಿದೆ.
3) ನೆಲಮನೆ ಪ್ರಕಾಶನದಿಂದ ಎರಡನೆ ಕಥಾ ಸಂಕಲನ ‘ಬೆಂಕಿ ಮಳೆ’ ಕೃತಿಗೆ, 2000ರಲ್ಲಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಎಚ್.ವಿ.ಸಾವಿತ್ರಮ್ಮ ದತ್ತಿ ನಿಧಿ ಬಹುಮಾನ ದೊರಕಿದೆ.
4) ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ 1999ನೇ ಸಾಲಿನ ಸಣ್ಣಕಥೆ ಪ್ರಕಾರದ ಪುಸ್ತಕ ಬಹುಮಾನಕ್ಕೆ ಇವರ ‘ಬೆಂಕಿ ಮಳೆ’ ಉತ್ತಮ ಕೃತಿಯೆಂದು ಪುರಸ್ಕರಿಸಲ್ಪಟ್ಟಿದೆ.
5) 2002ನೆಯ ಸಾಲಿನಲ್ಲಿ ಇವರ ಸಮಗ್ರ ಸಾಹಿತ್ಯ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.
6) ಬೆಂಕಿ ಮಳೆ ಕಥಾ ಸಂಕಲನಕ್ಕೆ 2002ನೇ ಸಾಲಿನ ಕಥಾ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಯೆಂದು ಸುಧಾಮೂರ್ತಿ ಪ್ರಶಸ್ತಿ ದೊರಕಿದೆ.
7) 2004 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿದೆ.
8) ‘ಶಾಶ್ವತಿ’ಸಂಸ್ಥೆಯ ವತಿಯಿಂದ 2004ನೆಯ ಸಾಲಿನ ‘ಕರ್ನಾಟಕ ಕಲ್ಪವಲ್ಲಿ’ ಪ್ರಶಸ್ತಿ ದೊರಕಿದೆ.
9) 2006 ಸಾಲಿನಲ್ಲಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ನಡೆದ ಅಖಿಲ ಭಾರತೀಯ ಜೈನ ಮಹಿಳಾ ಸಮ್ಮೇಳನದ ಪ್ರಶಸ್ತಿ ದೊರಕಿದೆ .
10) 2010ನೆಯ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪದ್ಮ ಭೂಷಣ ಬಿ. ಸರೋಜಾದೇವಿ ಪ್ರಶಸ್ತಿಯನ್ನು ನೀಡಲಾಗಿದೆ.
11) 2013 ರಲ್ಲಿ ದಾವಣೆಗೆರೆಯ ಬಸವ ಕೇಂದ್ರದಿಂದÀ ಶೂನ್ಯ ಪೀಠ ಅಕ್ಕನಾಗಮ್ಮ ಪ್ರಶಸ್ತಿ ದೊರಕಿದೆ.
12) 2014ರಲ್ಲಿ ಮುಂಬೈ ಕರ್ನಾಟಕ ಸಂಘದ ವತಿಯಿಂದ ಡಾ|| ಸುನೀತ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಸಂದಿದೆ.
13) ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ರವರ ಕಛೇರಿಯಿಂದ 2014ರ ಜೀವ ಮಾನದ ಸಾಧನೆ ಪ್ರಶಸ್ತಿ
14) ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೊಯ್ಸಳ ಮಹೋತ್ಸವದ ಸಂದರ್ಭದಲ್ಲಿ ಶತಮಾನೋತ್ಸವ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇವುಗಳಲ್ಲದೆ ನೂರಾರು ಆತ್ಮೀಯ ಸನ್ಮಾನಗಳು ಈ ಧೀಮಂತ ಬರಹಗಾರ್ತಿಯನ್ನು ಅಲಂಕರಿಸಿವೆ.
ಹಾಸ್ಯ ಸಾಹಿತಿ ಆಲೂರು ನಾಗರಾಜ್
ಸಾಹಿತ್ಯ ಹೀಗೆ ಇರಬೇಕೆಂಬುದಿಲ್ಲ. ಹಲವರು ಅವರವರ ಅಭಿರುಚಿಗಳಿಗೆ ತಕ್ಕಂತೆ ಸಾಹಿತ್ಯ ಮಾರ್ಗಗಳನ್ನು ಆಯ್ದುಕೊಂಡು ಕೃಷಿ ಮಾಡುತ್ತಿದ್ದಾರೆ. ಗಂಭೀರ, ವೈಚಾರಿಕ, ಹಾಸ್ಯ, ವಿಡಂಬನೆ, ಚುಟುಕು, ದಲಿತ, ಬಂಡಾಯ ಹೀಗೆ ಅನೇಕ ರೀತಿಯ ಸಾಹಿತ್ಯದ ಪ್ರಕಾರಗಳನ್ನು ಕಾಣುತ್ತಿದ್ದೇವೆ. ಇದೇ ಹಾದಿಯಲ್ಲಿ ನಮ್ಮ ಆಲೂರು ನಾಗರಾಜ್ರವರು ಕಳೆದ ನಾಲ್ಕೈದು ದಶಕಗಳಿಂದ ಹಾಸ್ಯ ಕಾವ್ಯ ಕೃಷಿಯಲ್ಲಿ ತೊಡಗಿ ಅಗಾಧ ಸೇವೆ ಮಾಡಿದವರು.
1936 ಜನವರಿ 4 ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾನುಬಾಳು ಗ್ರಾಮದ ನಾರಾಯಣಪ್ಪ ಹಾಗೂ ನಂಜಮ್ಮ ಬ್ರಾಹ್ಮಣ ದಂಪತಿಗಳ ಗರ್ಭದಲ್ಲಿ ಜನಿಸಿದರು.
ಚಿಕ್ಕಂದಿನಿಂದಲೇ ಶಿಶುಗೀತೆ, ಹಾಸ್ಯ ಕವಿತೆಗಳು, ವಿಡಂಬನಾ ಕವಿತೆಗಳು, ಅಣುಕು ಗೀತೆಗಳು ಹೀಗೆ ಸಾಹಿತ್ಯ ರಚೆನಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರರನ್ನು ನಗೆಗಡಲಲ್ಲಿ ತೇಲಿಸುತ್ತಾ ಹಾಸ್ಯ ಸಾಹಿತ್ಯ ಪ್ರಸಾರ ಮಾಡುತ್ತಿದ್ದಾರೆ.
78 ವರ್ಷ ಮಯೋಮಾನದ ನಾಗರಾಜ್ ಈಗಲೂ ಸದಾ ಹಸನ್ಮುಖಿಯಾಗಿಯೇ ಎಲ್ಲರೊಂದಿಗೆ ಬೆರೆಯುವ ರೀತಿ ಅಮೋಘವಾದುದು. ಜನ ಸಾಮಾನ್ಯ ಭಾಷೆಯಲ್ಲಿ ಸರಳ ರೀತಿಯಲ್ಲಿ ಕವಿತೆಗಳನ್ನು ರಚಿಸಿ ಹಾಡುವ ನಾಗರಾಜ್ರವರು ಸಮಾಜದ ಒಳಿತಿಗಾಗಿ ಸದಾ ತುಡಿಯುವ ವ್ಯಕ್ತಿ.
ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮುಂತಾದವುಗಳ ಅಡಿಯಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ನೂರಾರು ಉಪನ್ಯಾಸಗಳನ್ನು ಕೊಟ್ಟಿದ್ದಾರೆ.
1982 ರಲ್ಲಿ ಬಂದ ‘ಒಳ್ನುಡಿ’ ಎಂಬ ಶಿಶುಗೀತೆ ಕವನ ಸಂಕಲನ ಇವರ ಪ್ರಥಮ ಸಾಹಿತ್ಯಕ ಕೃತಿಯಾಗಿದೆ. ಶಿಕ್ಷಣ, ಕೃಷಿ, ರಸ್ತೆ ಅಪಘಾತ, ಪರಿಸರ, ಆರೋಗ್ಯ, ಕೈಗಾರಿಕೆ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಇಲ್ಲಿನ ಕವಿತೆಗಳು ಸಮಾಜಕ್ಕೆ ವರದಾನವಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಇದೇ ಕೃತಿ 19-06-2013 ರಂದು ಎರಡನೇ ಮುದ್ರಣ ಕಂಡು ಬಿಡುಗಡೆಯಾಗಿ ಜನಮನ್ನಣೆ ಪಡೆದಿದೆ.
ಕಳೆದ ಹಲವು ದಶಕಗಳಿಂದಲೂ ಹಳೆ ಆಲೂರಿನಲ್ಲಿ ನೆಲೆಯೂರಿರುವ ಇವರು ತಾಲ್ಲೂಕಿನ ಹಿರಿಯ ತಲೆಮಾರಿನ ಸಾಹಿತಿಗಳಲ್ಲಿ ಪ್ರಮುಖರಾಗಿದ್ದಾರೆ. ಜಾನಪದ ಸಾಹಿತ್ಯವನ್ನು ಬದುಕಿನ ಭಾಗವಾಗಿಸಿಕೊಂಡ ನಾಗರಾಜ್ ಅಂತೆಯೇ ಬದುಕಿ ಬಾಳುತ್ತಿರುವವರು. ಹಾಸ್ಯ ಹೊನಲಿನಲ್ಲಿ ನಿತ್ಯ ಸಮಾಜಕ್ಕೆ ನೈತಿಕ ಶಿಕ್ಷಣ ನೀಡುವ ಇವರು ಸುಂದರ ಸಮಾಜದ ಕನಸುಗಾರರಾಗಿದ್ದಾರೆ. ಅದರಲ್ಲೂ ಶಾಲಾ ಮಕ್ಕಳಿಗೆ ಇವರು ನೀಡಿದ ನೈತಿಕ ಶಿಕ್ಷಣ ಅತ್ಯಮೂಲ್ಯವಾದುದು.
ಇವರ ಕವಿತೆಗಳಲ್ಲಿ ಪ್ರೀತಿ, ಪ್ರೇಮ, ಸಹನೆ, ಭಕ್ತಿ, ಕರುಣೆ ಮುಂತಾದ ಮೌಲ್ಯಗಳು ಆವಿರ್ಭವಿಸಿವೆ. ವಿಭಿನ್ನ ರೂಪದ ನಿರೂಪಣೆ ಹೊಂದಿದ ನಾಗರಾಜ್ ಸಾಹಿತ್ಯ ಜನ ಸಾಮಾನ್ಯರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
ರಸ್ತೆಲಿ ನಡೆದಡುವಾಗ ನಿನಗಿರಬೇಕು
ಮೈಯೆಲ್ಲಾ ಕಣ್ಣಿನ ಎಚ್ಚರ
ಎತ್ತಲೋ ನೋಡುತ ಮೈ ಮರೆತು ಹೋದರೆ
ಕಾದಿಹ ಅಪಾಯ ಭೀಕರ (ಎಚ್ಚರಿಕೆ)
ರಸ್ತೆ ಸುರಕ್ಷತೆ ಬಗ್ಗೆ ಹಾಸ್ಯಮಯವಾಗಿಯೇ ನಾಗರಾಜ್ರವರು ಮೈಮೇಲೆ ಎಚ್ಚರ ತಪ್ಪಿ ಚಾಲನೆ ಮಾಡಿದರೆ ಆಗಬಹುದಾದ ದುರಂತವನ್ನು ಬಹಳ ನೇರ ಹಾಗೂ ಸೂಕ್ಷ್ಮವಾಗಿಯೇ ಹೇಳಿದ್ದಾರೆ.
ಎಲ್ಲ ಭಾಗ್ಯಗಳೊಳಗೆ
ಆರೋಗ್ಯವೇ ಮೇಲು
ಇಲ್ಲದಿರೆ ಮನುಜನಿಗೆ
ಜೀವನವೆ ಹಾಳು (ನಿಜ ಭಾಗ್ಯ)
ಈ ಕವನದಲ್ಲಿ ನಾಗರಾಜ್ರವರು ಆರೋಗ್ಯದ ಬಗ್ಗೆ ವಹಿಸಿರುವ ಕಾಳಜಿ ಅಪಾರ. ಜೀವನ ಸುಂದರಮಯವಾಗಿರಬೇಕಾದರೆ ಆರೋಗ್ಯವೇ ಪ್ರಮುಖ ಎಂದಿದ್ದಾರೆ.
ಹೆಚ್ಚಲಿ, ಹೆಚ್ಚಲಿ, ಹೆಚ್ಚಲಿ ನಿನ್ನಲಿ
ಓದನು ಕಲಿಯುವ ಹಂಬಲ
ಇಲ್ಲದೆ ಇದ್ದರೆ ಸಿಕ್ಕದು ನಿನಗೆ
ಜಗದಲಿ ಯಾವ ಬೆಂಬಲ (ಹಂಬಲ)
ಇಲ್ಲಿ ವಿದ್ಯಾರ್ಥಿಯಲ್ಲಿ ಓದಿನ ಹಂಬಲವಿಲ್ಲದಿದ್ದರೆ ಜ್ಞಾನ ಕಣಜನಾಗಲಾರ. ಜ್ಞಾನ ಸಂಪಾದಿಸದ ಹೊರತು ಜಗದಲ್ಲಿ ಬೆಲೆ ಸಿಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರಿಗೂ ಓದು ಬೇಕೆ ಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಶತಮಾನ ಕಳೆದರು ಕೂಡಾ
ಪ್ಲಾಸ್ಟಿಕ್ ಭೂಮೀಲಿ ಕರಗದು ನೋಡಾ |
ದನಕರು ತಿಂದರೆ ಉಳಿಯದು ಪ್ರಾಣ
ಪ್ಲಾಸ್ಟಿಕ್ ಬಳಕೆಯ ಬಿಟ್ಟವ ಜಾಣ
[ಪ್ಲಾಸ್ಟಿಕ್ ಪಾಶ ಪರಿಸರ ನಾಶ]
ಈ ಪದ್ಯದಲ್ಲಿ ಕವಿ ಪ್ಲಾಸ್ಟಿಕ್ನಿಂದ ಆಗಬಹುದಾದ ಕೆಡುಕು ಹಾಗೂ ಬಳಕೆಯ ವಿಧಾನವನ್ನು ಸೊಗಸಾಗಿ ಚಿತ್ರಿಸಿದ್ದಾರೆ.
ಆಡಬೇಕು ಮಗುವೆ ನೀನು
ಸಭ್ಯರೀತಿ ಆಟ
ಅದು ಮುಗಿದ ಮೇಲೆ ಓದಬೇಕು
ತಪ್ಪದೆ ಪಾಠ [ಮರೆಯದಿರು]
ನಾಗರಾಜ್ರವರು ಪ್ರಸ್ತುತ ಕವಿತೆಯಲ್ಲಿ ಮಗುವಿಗೆ ಎಂತಹ ಆಟಗಳನ್ನು ಆಡಬೇಕು, ಜೊತೆಗೆ ಪಾಠಗಳನ್ನು ಹೇಗೆ ಅಭ್ಯಾಸ ಮಾಡಿಕೊಂಡು ಹೋಗಬೇಕೆಂದು ನೈತಿಕ ಮೌಲ್ಯಗಳನ್ನು ತುಂಬಿದ್ದಾರೆ.
ಹೀಗೆ ಇಲ್ಲಿನ ಎಲ್ಲಾ ಕವಿತೆಗಳಲ್ಲಿಯೂ ಸಾಮಾಜಿಕ ಕಳಕಳಿ ಎದ್ದು ಕಾಣಿತ್ತಿದೆ. ಹೀಗೆ ನಾಗರಾಜ್ರವರ ಸಾಹಿತ್ಯ ಚಿರಂತನವಾಗಿ ಉಳಿಯುತ್ತದೆ.
ಇವರ ಸಾಹಿತ್ಯ ಹಾಗೂ ಸಾಮಾಜಿಕ ಸೇವೆ ಪರಿಗಣಿಸಿ 1996ರಲ್ಲಿ ಹಾಸನ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಅನುಪಮ ಸೇವೆಯನ್ನು ಗುರುತಿಸಿ ವಾರ್ತಾ ಇಲಾಖೆ, ಆರೋಗ್ಯ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ ಮುಂತಾದ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.
ಅಲ್ಲದೆ 19-06-2013 ರಂದು ನಡೆದ ಆಲೂರು ತಾಲ್ಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಮುಕುಟವೂ ಇವರನ್ನು ಅಲಂಕರಿಸಿತ್ತು. ಈ ಇಳಿ ವಯಸ್ಸಿನಲ್ಲಿಯೂ ಇವರ ಹಸನ್ಮುಖಿ ಸಾಹಿತ್ಯ ಸಿಂಚನಗೈಯುವ ಪರಿ ಶ್ಲಾಘನೀಯವಾಗಿದೆ.
ದಲಿತ ಚಿಂತನೆಯ ‘ಕಾಡು ಕವಿ’- ದುದ್ದಶ್ರೀ
ಕನ್ನಡ ಸಾಹಿತ್ಯದಲ್ಲಿ ಅನೇಕ ಕಾಲಘಟ್ಟಗಳು ಆವಿರ್ಭವಿಸಿವೆ. ತಂತಮ್ಮ ನಿಲುವುಗಳನ್ನು ಹರಿಯಬಿಟ್ಟಿವೆ. ಕಾವ್ಯ ಎಂಬುದು ಮೋಜು ಮಸ್ತಿಯಿಂದಾಗಿ ಹುಟ್ಟಿದುದಲ್ಲ ಅಂತರಾಳದ ಭಾವನಾ ತರಂಗಗಳು ಅರಳಿ ನಿಂತ ಕುಸುಮಗಳು. ಮಾನಸಿಕ ತುಮುಲಗಳು ತೀವ್ರತೆ ಪಡೆದು ಅಕ್ಷರ ರೂಪ ಹೊಂದಿ ಭಾವಲಹರಿಗಳಾಗಿ ಒಡಮೂಡಿರುವುದನ್ನು ಕಾಣುತ್ತೇವೆ.
ಕಾವ್ಯ ಎಂದಾಕ್ಷಣ ರಾಗ, ತಾಳ, ಲಯ, ಛಂದಸ್ಸು, ಅಲಂಕಾರವಿರಬೇಕೇಂದಿಲ್ಲ. ಇರಲೂಬಹುದು, ಹೊರತಾಗಿಯೂ ಇರಬಹುದು. ಅದರಲ್ಲೂ 1970ರ ಸುಮಾರಿನಲ್ಲಿ ಉದಿಸಿದ ಬಂಡಾಯ ಹಾಗೂ ದಲಿತ ಕಾವ್ಯ ಈ ಎಲ್ಲಾ ಕಟ್ಟಳೆಗಳನ್ನು ಮೀರಿದ ಕ್ರೌರ್ಯ, ಶೋಷಣೆ, ಅಳಲು, ದುಃಖ, ದುಗುಡ-ದುಮ್ಮಾನ ಅವತರಣಿಕೆಯ ನೇರ ಗಧ್ಯ ರೂಪದ ಕಾವ್ಯೋದಯಕ್ಕೆ ಕಾರಣವಾಯಿತು.
ಇದು ಶೋಷಿತರ, ದಲಿತ zಮನಿತರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ಅವಕಾಶಗಳ ಪ್ರಶ್ನಿಸುವ ಸಂಧರ್ಭಗಳನ್ನು ಈ ಕಾವ್ಯ ಸೃಷ್ಠಿ ಮಾಡಿತು.
ಮಾನವೀಯತೆ ಮನುಷ್ಯತ್ವ ಹೀನವಾಗಿ ತಳ ಸಮುದಾಯವನ್ನು ಬರ್ಬರ ರೀತಿಯಲ್ಲಿ ಕಂಡ ರೀತಿ ಘನಘೋರ. ಶತಮಾನಗಳಿಂದ ಅವಿತುಕೊಂಡಿದ್ದ ಆಕ್ರೋಶ, ಪ್ರತಿಭಟನೆಯ ಧ್ವನಿ ಪ್ರತಿಧ್ವನಿಸಿ ದಲಿತ ಸಾಹಿತ್ಯದ ಮೂಲಕ ಕಹಳೆ ಮೊಳಗಿಸಿದುದನ್ನು ಕಾಣುತ್ತೇವೆ.
ದನಿಯಿಲ್ಲದವರಿಗೆ ದನಿಯಾಗುವುದು ಚಳವಳಿ ಮತ್ತು ಸಾಹಿತ್ಯದಿಂದ ಮಾತ್ರ ಎಂದು ತಿಳಿದು ಸಾಮಾಜಿಕ, ಸಾಹಿತ್ಯಿಕ ಕೈಂಕರ್ಯ ಮಾಡಿದವರು ಹಲವರು.
ಇವರಲ್ಲಿ ದುದ್ದಶ್ರೀ ಪ್ರಮುಖರು. ‘ದುದ್ದಶ್ರೀ’ ಎಂದೇ ಹಾಸನ ಜಿಲ್ಲೆಯಾದ್ಯಾಂತ ಮನೆ ಮಾತಾಗಿರುವ ಶ್ರೀನಿವಾಸರು 1938 ಜೂನ್ 02 ರಂದು ಹಾಸನ ತಾಲ್ಲೂಕಿನ ದುದ್ದ ಗ್ರಾಮದ ಸಣ್ಣಕರಿಯಪ್ಪ ಮತ್ತು ಕಾಳಮ್ಮ ದಂಪತಿಗಳ ಜೇಷ್ಠ ಪುತ್ರರಾಗಿ ಜನಿಸಿದರು.
ಬಾಲ್ಯದಿಂದÀ ಸಾಮಾಜಿಕ ಪ್ರಜ್ಞೆ ಹೊಂದಿದ ದುದ್ದಶ್ರೀ ಸಾಮಾಜಿಕ ಜಾಡ್ಯವಾದ ಜಾತಿ ಕುಲುಮೆಯಲ್ಲಿ ಬಳಲಿದವರು. ಶೋಷಣೆ ಅನುಭವಿಸಿದವರು. ಸಮಾಜ ಹೀಗೇಕೆ ಎಂದು ಚಿಂತಿಸಿದವರು.
ಕಡುಬಡತನದಲ್ಲಿಯೂ ಶಿಕ್ಷಣ ಪಡೆದು ನಂತರ ಕಿತ್ತು ತಿನ್ನುವ ಬಡತನದ ಕಾರಣ ಮುಂದೆ ಓದದೆ ಅರಣ್ಯ ಇಲಾಖೆಯ ಗುಮಾಸ್ತ ಹುದ್ದೆಗೆ ಸೇರಿ ಕುಟುಂಬ ಜವಾಬ್ದಾರಿ ಹೊತ್ತರು.
1966 ರಲ್ಲಿ ಹಾಲಮ್ಮ ಎಂಬ ಶಿಕ್ಷಕಿಯನ್ನು ವರಿಸಿದ ಶ್ರೀನಿವಾಸರು ಮೂವರು ಪುತ್ರರನ್ನು ಹೊಂದಿದ್ದಾರೆ. ಕಾಯಕ ಮಾಡುತ್ತಲೇ ಜನಾಂಗದ ಏಳಿಗೆಗಾಗಿ ಸದಾ ದುಡಿಯುತ್ತಿದ್ದ ದುದ್ದಶ್ರೀ ಸದಾ ಚಳುವಳಿ, ಜಾಗೃತ ಕಾರ್ಯಕ್ರಮಗಳನ್ನು ಮಾಡುತ್ತ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರ, ಅವಮಾನಕ್ಕೀಡಾದ ಮನಸ್ಸುಗಳಿಗೆ ನೈತಿಕ ಶಿಕ್ಷಣ ನೀಡಿ ಮಾನವೀಯ ಮೌಲ್ಯಗಳನ್ನು ತುಂಬುತ್ತಿದ್ದರು.
ಪ್ರಗತಿಪರ ಆಲೋಚನೆಯ ದುದ್ದಶ್ರೀ ಒಬ್ಬ ಪ್ರಮುಖ ದಲಿತ ಚಿಂತಕರಾಗಿದ್ದಾರೆ. ವೈಚಾರಿಕ ಹಾಗೂ ವೈಜ್ಞಾನಿಕ ತಳಹದಿಯಲ್ಲಿ ಚಿಂತಿಸುವ ಇವರು ಹಲವಾರು ಸಾಹಿತ್ಯಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಹಕ್ಕುಳ್ಳವರ ಮಕ್ಕಳ ಹಾಡು (1970), ತಮಟೆ ತಿಮ್ಮನ ತಿರುಳು (2003), ಋಷಿ ಸಂಗಮ (2007), ಭಾವಬಿಂದು (2009), ಭಾವ ಬನದಲ್ಲಿ ಅರಳಿದ ಕುಸುಮಗಳು (2011) ಮುಂತಾದ ಕವನಗಳು; ದಲಿತ ಬಂಧು ಅಂಬೇಡ್ಕರ್ (1972) ವೈಚಾರಿಕ ಕೃತಿ; ತೌರಿಲ್ಲದ ಗೌರಿ (1985) ಕಾದಂಬರಿ; ಜಿಲ್ಲಾ ಒಕ್ಕೂಟ (2004) ಚಿಂತನ ಕೃತಿ ಹೀಗೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ ದುದ್ದಶ್ರೀ ‘ಕಾಡು’ ಕವಿ ಎಂದೇ ಪ್ರಸಿದ್ದರು.
ಸಾಮಾಜಿಕ ಚಳವಳಿ, ಸಾಹಿತ್ಯ, ಸಂಘಟನೆ ಜೊತೆಜೊತೆಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಅವಿರತವಾಗಿ ದುದ್ದಶ್ರೀ ಕಾಯಕ ಮಾಡಿದ್ದಾರೆ.
ಹಾಸ£ದÀ ಜೀವಂತ ರಂಗಕರ್ಮಿ ದಿ.ಸಣ್ಣೇಗೌಡರ ನಿರ್ದೇಶನದಲ್ಲಿ ಮಾಯಾಲೋಕ, ಸಂಕ್ರಾಂತಿ, ಗಾಂಧಿ v/s ಗಾಂಧಿ, ಕಿರಗೂರಿನ ಗಯ್ಯಾಳಿಗಳು ಮುಂತಾದ ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರಶಂಸೆಗೆ ಪಾತ್ರರಾಗಿದ್ದಾರೆ.
75 ವಸಂತಗಳನ್ನು ಪೂರೈಸಿರುವ ದುದ್ದಶ್ರೀ ಸದಾ ನ್ಯಾಯ, ಸಮಾನತೆಗಾಗಿ ತುಡಿಯುತ್ತಾ ಶೊಷಣೆಯ ವಿರುದ್ದ, ಭ್ರಷ್ಟಚಾರದ ವಿರುದ್ದ ಧ್ವನಿಯೆತ್ತುವ ಈ ಹಿರಿಯ ಸಾಹಿತಿ ನಮ್ಮೆಲ್ಲರಿಗೂ ಆದರ್ಶಮಯವಾಗಿದ್ದಾರೆ.
ನಿಸರ್ಗ, ಪ್ರೀತಿ, ಪ್ರೇಮಗಳಂತೆಯೇ ನ್ಯಾಯ, ನೀತಿಗಳು ಇವರ ಕವಿತೆಗಳಲ್ಲಿ ಪ್ರತಿಧ್ವನಿಸಿದರೆ, ಧಮನಿತರ, ಶೋಷಿತರ, ತುಳಿತಕ್ಕೊಳಗಾದವರ ಬದುಕಿನ ಬವಣೆಗಳು, ತಲ್ಲಣಗಳು, ಜೀವ ತಳೆದು ಸ್ಥಾನಮಾನ, ಸಮಾನತೆ, ಸ್ವಾತಂತ್ರ್ಯಕ್ಕಾಗಿ ಆತೊರೆಯುವ ಭಾವಗಳು ಪಲ್ಲವಿಸಿವೆ.
15-12-2013ರಂದು ಹಾಸನದ ಅಂಬೇಡ್ಕರ್ ಭವನದಲ್ಲಿ ನಡೆದ ಹಾಸನ ಜಿಲ್ಲಾ ಪ್ರಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ದುದ್ದಶ್ರೀ ದಲಿತ ಹಾಗೂ ಬಂಡಾಯ ಸಾಹಿತ್ಯಕ್ಕೆ ಜೀವ ತುಂಬಿದವರೆಂದರೆ ಅತಿಶಯೋಕ್ತಿಯಾಗಲಾರದು.
ಸದಾ ಚೈತನ್ಯಶೀಲರಾದ ಶ್ರೀನಿವಾಸರು ಇಂದಿಗೂ ಯುವಕರಂತೆಯೇ ಉತ್ಸಾಹದಿಂದ ಪ್ರತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ, ಮಾರ್ಗದರ್ಶಿಸುವ ಪರಿ ಶ್ಲಾಘನೀಯವಾಗಿದೆ.
ಜಾನಪದ ಮನೋಧರ್ಮಿ ಹಂಪಾಪುರದ ಲಕ್ಕಪ್ಪಗೌಡರು.
ನೆಲಮೂಲ ಸಂಸ್ಕøತಿಯ ಬೇರುಗಳನ್ನು ,ಅದರ ರೆಂಬೆ ಕೊಂಬೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಗ್ರಾಮೀಣ ಸಂಸ್ಕøತಿಯು ಪಸರಿಸುವ ಕಾಯಕದಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಜಾನಪದ ಅಧ್ಯಯನ, ಸಂಗ್ರಹ, ವಿಮರ್ಶೆ, ಜನ ಜೀವನದ ಸ್ಥಿತ್ಯಂತರಗಳು, ಬದುಕಿನ ತಲ್ಲಣಗಳನ್ನು ಆಳವಾಗಿ ಚಿಂತಿಸಿ, ಮಂಥಿಸುತ್ತಾ ಬಂದಿರುವ ಜಾನಪದ ಪರಿಚಾರಕ ಯಾರು ಗೊತ್ತೇ? ಅವರೇ ಜಾನಪದ ಮನೋಧರ್ಮಿ ಹಂಪಾಪುರದ ಲಕ್ಕಪ್ಪಗೌಡರು.
ಎಚ್.ಜೆ. ಲಕ್ಕಪ್ಪಗೌಡರು 1939ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹಂಪಾಪುರದಲ್ಲಿ ಜನಿಸಿದ ಇವರು ಗ್ರಾಮೀಣ ಬದುಕಿನ ಚಿತ್ರಣಗಳ ಜೊತೆಗೆ ಪರೋಪಕಾರ ಬದುಕಿನ ಸಾರ್ಥಕ್ಯವನ್ನು ಕಟ್ಟಿ ಕೊಟ್ಟಿದ್ದಾರೆ. ಕನ್ನಡ ನಾಡು ಕಂಡಂತಹ ಪ್ರತಿಭಾನ್ವಿತ ಧೀಮಂತ ವ್ಯಕ್ತಿತ್ವ ಲಕ್ಕಪ್ಪಗೌಡರು. ಕನ್ನಡ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ತಮ್ಮ ಕಾಯಕದ ಮೂಲಕ ಸ್ಮರಣೀಯ ಹೆಜ್ಜೆ ಗುರುತುಗಳನ್ನು ಮೂಡಿಸಿದರು. ಗ್ರಾಮೀಣ ಬದುಕಿನ ಸೊಗಡನ್ನೇ ಸಾಹಿತ್ಯದ ಆಂತರ್ಯವಾಗಿಸಿಕೊಂಡು ಸೃಜನಾತ್ಮಾಕವಾಗಿ ಲೇಖನಿ ಹರಿಯಬಿಟ್ಟು ದಿಟ್ಟ ಬರಹಗಾರರಾಗಿ ಹೊರಹೊಮ್ಮಿದ ಅಧಮ್ಯ ಚೇತನ ಲಕ್ಕಪ್ಪಗೌಡರು. ಹಳ್ಳಿಯ ಸಂಸ್ಕøತಿ, ಆಚಾರ-ವಿಚಾರ, ಬದುಕು -ಬವಣೆಗಳೇ ಅವರ ಅಂತಸ್ಸತ್ತ್ವಗಳಾಗಿ ರೂಪು ಕಂಡವು. ಇವರ ಬರಹಗಳಲ್ಲಿ ಸಾಕು ಪ್ರಾಣಿಗಳು, ಪಕ್ಷಿಗಳು, ಗಿಡ-ಮರಗಳು, ಗುಡ್ಡ- ಬೆಟ್ಟಗಳು ಸಂದರ್ಭೋಚಿತವಾಗಿ ಪಾತ್ರಗಳಾಗಿ ಕಣ್ತೆರೆದುಕೊಂಡಿವೆ. ಶೂದ್ರ ಜಗತ್ತಿನ ಬದುಕಿನ ಪಾತ್ರ, ಘಟನೆಗಳನ್ನು ಹೆಣೆದ ಇವರ ಕಥೆಗಳು ಕನ್ನಡ ಕಥಾ ಸಾಹಿತ್ಯ ಕ್ಷೇತ್ರಕ್ಕೆ ಮೈಲುಗಲ್ಲಾಗಿ ನವೀನ ರೀತಿಯಲ್ಲಿ ಸೇರ್ಪಡೆಗೊಂಡವೆಂದು ಹೇಳಬಹುದು.
ಜಾನಪದ ಎಂದರೆ ಮೂಗು ಮುರಿಯುವ ಅನೇಕ ಸಾಹಿತಿಗಳು ನಮ್ನಿಮ್ಮ ಮಧ್ಯೆ ಹಲವರು ಇದ್ದಾರೆ. ಆದರೆ ಕಳೆಗುಂದುತ್ತಿರುವ ಸಮಯದಲ್ಲಿ ಜಾನಪದ ಸಂಗ್ರಹ ಮತ್ತು ಸಂಪಾದನೆಯ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಅದರಂತೆ ಕಾರ್ಯೋನ್ಮುಖರಾಗಿ ಕನ್ನಡ ಜಾನಪದ ಸಾಹಿತ್ಯ ಕಣಜಕ್ಕೆ ಹಸಿವ ನೀಗಿಸಿದರು ಲಕ್ಕಪ್ಪಗೌಡರೆಂದರೆ ಅತಿಶಯೋಕ್ತಿಯಾಗಲಾರದು.
ಗೌಡರು 1971 ರಲ್ಲಿ ಹೊರತಂದ ‘ಜನಪದ ಕಥಾವಳಿ’ ಹಾಗೂ 1973 ರಲ್ಲಿ ಪ್ರಕಟಿಸಿದ ಒಗಟುಗಳು ಮುಂತಾದ ಕೃತಿಗಳು ಜಾನಪದ ಲೋಕದಲ್ಲಿ ಅದ್ಭುತ ಸಂಚಲನ ಮೂಡಿಸಿದವು. ಆ ಕಾಲ ಘಟ್ಟದಲ್ಲಿ ಬಂದ ಅತ್ಯಾಮೂಲ್ಯ ಜಾನಪದ ಕಥಾ ಸಂಕಲನಗಳಲ್ಲಿ ‘ಜನಪದ ಕಥಾವಳಿ’ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಜನಪದ ಮಾತುಗಾರಿಕೆ, ನುಡಿಗಟ್ಟುಗಳು, ಕಾಲಕ್ರಮಣಿಕೆಯ ಘಟನೆಗಳು ಆಕರ್ಷಕವಾಗಿ ಮೂಡಿ ಬಂದಿದೆ. ಪ್ರಸ್ತುತ ಕೃತಿಯು ಓದುಗರಿಗೂ , ವಿದ್ವಾಂಸರಿಗೂ, ವಿಮರ್ಶಕರಿಗೂ, ಅಗತ್ಯವಾಗಿ ಬೇಕಾದ ಕೃತಿಯಾಗಿದ್ದು ಓದುಗನಿಗೆ ಸಂತಸ ನೀಡಿದರೆ, ವಿದ್ವಾಂಸನಿಗೆ ಜ್ಞಾನ ಭಂಡಾರವಾಗಿ ಪರಿಣಮಿಸುತ್ತದೆ. ಸಾಂಸ್ಕøತಿಕ ಜೀವನದ ಮೇಲೂ ಬೆಳಕು ಬೀರುವುದರಿಂದ ಇದು ಜಾನಪದ ಸಾಹಿತ್ಯಕ್ಕೊಂದು ಆಶಾಕಿರಣವೆನ್ನಬಹುದು.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಇವರು ‘ಶ್ರೀ ರಾಮಾಯಣ ದರ್ಶನಂ – ಒಂದು ವಿಮರ್ಶನಾರ್ತಕ ಅಧ್ಯಯನ’ ಎಂಬ ಬೃಹತ್ ಗ್ರಂಥವನ್ನು ರಚಿಸಿ ಪಿ. ಎಚ್.ಡಿ ಪದವಿ ಪಡೆದಿದ್ದಾರೆ.
ಲಕ್ಕಪ್ಪಗೌಡರು ಸಾಹಿತ್ಯದ ಕೇವಲ ಒಂದು ಮಗ್ಗುಲಿಗೆ ಅಂಟಿಕೊಳ್ಳದೇ ಕಥೆ, ಕಾವ್ಯ, ನಿಬಂಧ, ವಿಮರ್ಶೆ, ಜಾನಪದ ,ಸಂಗ್ರಹ, ಜೀವನ ಚರಿತ್ರೆ ಹೀಗೆ ಹಲವಾರು ಕವಲುಗಳಲ್ಲಿ ಸಾಗಿ ಗುರಿ ಸಾಧಿಸಿದ ಬಹುಮುಖ ಪ್ರತಿಭೆಯ ಸೃಜನಾತ್ಮಕ ಲೇಖಕರಾಗಿದ್ದಾರೆ. ವಸಂತಗೀತ, ಊರ ಮುಂದಿನ ಬಾವಿ- ಕವನ ಸಂಕಲನಗಳು; ದಲಿತಸೂರ್ಯ, ಸಿದ್ಧರಾಮ- ಜೀವನ ಚರಿತ್ರೆಗಳು; ಸಂಗಮ , ಅಂತರಂಗ- ವಿಮರ್ಶಾ ಕೃತಿಗಳು; ಜಾನಪದ ಕಥಾವಳಿ, ಇಬ್ಬನಿ, ಒಗಟು –ಜಾನಪದ ಕೃತಿಗಳು ; ಪದ್ದು-ಹದ್ದು, ಧೀನ ಬಂದು-ಮಕ್ಕಳ ಕೃತಿಗಳು.
ಹೀಗೆ ಲಕ್ಕಪ್ಪಗೌಡರು ಕನ್ನಡ ಸಾಹಿತ್ಯದ ಅತ್ಯಾಮೂಲ್ಯ ಕವಿ, ವಿಮರ್ಶಕ, ಕಥೆಗಾರ, ಸಂಪಾದನಕಾರರಾಗಿ ನಮ್ಮೆದುರಿಗೆ ನಿಲ್ಲುತ್ತಾರೆ. ವಿಶೇಷವಾಗಿ ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಗೌಡರು ಪ್ರಮುಖರಾಗಿದ್ದಾರೆ.
‘ನಾಡು-ನುಡಿಯ’ ಹಲವಾರು ಸಂಘಟನೆಗಳಲ್ಲಿ ಸದಸ್ಯರಾಗಿ , ಪದಾಧಿಕಾರಿಯಾಗಿ ಹಗಲಿರುಳೆನ್ನದೇ ದಣಿವರಿಯದೇ ದುಡಿದವರು. ನಾಡಿಗೆ, ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸಂಸ್ಕøತಿ ಸೇವೆ ಅನನ್ಯವಾದದು. ಹಾಗೆಯೇ ಹಲವಾರು ವಿದ್ಯಾಸಂಸ್ಥೆ , ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತಾತ್ಮಕವಾಗಿ ಸಲ್ಲಿಸಿದ ಇವರ ಸೇವೆ ಅನುಕರಣೀಯ ಹಾಗೂ ಅನುಪಮವಾದುದು. ನಾಡಿನಾದ್ಯಾಂತ ಸುತ್ತಿ ಅನೇಕ ಜಾನಪದ ಪ್ರತಿಭೆಗಳನ್ನು ಅನ್ವೇಷಿಸಿ, ಅವರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿ , ಮುಖ್ಯ ವಾಹಿನಿಗೆ ತಂದ ಕೀರ್ತಿ ಗೌಡರಿಗೆ ಸಲ್ಲುತ್ತದೆ. ಅವರಿಗೆ ಅವರದೇ ಬೃಹತ್ ಶಿಷ್ಯ ವೃಂದ ಬಳಗ, ಅಭಿಮಾನಿಗಳ ಬಳಗ, ಸ್ನೇಹ ಬಳಗವಿದ್ದು ಜಾನಪದ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿವೆ.
ಗೌಡರ ಸಂಪಾದಕತ್ವದಲ್ಲಿ ‘ಜಾನಪದ ಗಂಗೋತ್ರಿ’ ಹಾಗೂ ‘ಜಾನಪದ ಸಮಾಚಾರ’ ಎಂಬ ನಿಯತಕಾಲಿಕೆಗಳು ಅದ್ಭುತವಾಗಿ ಮೂಡಿ ಬಂದವು. ವಿದ್ವಾಂಸರಲ್ಲಿ ಬಹುಮುಖ ವ್ಯಕ್ತಿತ್ವ ಗುರ್ತಿಸಿ ಅಂತಹವರ ಪತ್ರಿಕೆಗಾಗಿ ಸಕಾರಾತ್ಮಕವಾಗಿ ದುಡಿಸಿಕೊಂಡರು. ಅಷ್ಟೇ ಗೌರವಯುತವಾಗಿ ನಡೆಸಿಕೊಂಡರು. ಬದಲಾಗುತ್ತಿರುವ ಸಂದರ್ಭಕ್ಕೆ ಹೇಗೆ ಸಾಗಬೇಕೆಂಬುದನ್ನು ಚೆನ್ನಾಗಿ ಅರಿತಿದ್ದ ಲಕ್ಕಪ್ಪಗೌಡರು ಆಧುನಿಕತೆಗೂ ದಕ್ಕೆ ಬಾರದಂತೆ ಪುರಾತನ ಸಂಸ್ಕøತಿಯ ಪ್ರತೀಕವಾದ ಜಾನಪದವನ್ನು ಸೊಗಸಾಗಿ ಕಟ್ಟಿ ಬೆಳೆಸಿದರು. ಸುಜ್ಞಾನದ ಬೀಜವನ್ನು ಬಿತ್ತಿ ಬೆಳೆದರು.
ಕನ್ನಡ ನಾಡು ನುಡಿಗೆ ತಮ್ಮದೇ ಆದ ಅವಿಸ್ಮರಣೀಯ ಕೊಡುಗೆ ನೀಡಿದ ಲಕ್ಕಪ್ಪಗೌಡರಿಗೆ ದೇವರಾಜ ಬಹದ್ದೂರ್ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾದವುಗಳು ಸಂದಿವೆ ಸದ್ಯ ಮೈಸೂರಿನಲ್ಲಿ ತಮ್ಮ ವಿಶ್ರಾಂತಿ ಜೀವನ ನಡೆಸುತ್ತಿರುವ ಇವರ ಉಸಿರು ಜನಪದವೇ ಆಗಿದೆ.
ಕನ್ನಡ ಸಾಹಿತ್ಯದ ಶ್ರೇಷ್ಠ ಕಾದಂಬರಿಗಾರ್ತಿ- ಮಂಗಳಾಸತ್ಯನ್
ಮಹಿಳಾ ಸಾಹಿತ್ಯ ಕನ್ನಡದಲ್ಲಿ ಕಂತಿಯಿಂದ ಮೊದಲ್ಗೊಂಡು ದುಗ್ಗಳೆ, ಅಕ್ಕಮಹಾದೇವಿ, ಅಕ್ಕನಾಗಮ್ಮ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ, ನೀಲಲೋಚನೆ, ಸೂಳೆ ಸಂಕವ್ವ, ಬೊಂತಾದೇವಿ, ಮಹಾದೇವಿ ಮುಂತಾದ ಹಲವು ವಚನಗಾರ್ತಿಯರು ಇದ್ದಾರೆ. ನಂತರ ಬಂದ ಸಂಚಿ ಹೊನ್ನಮ್ಮ, ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀüಮವ್ವ, ಶೃಂಗಾರಮ್ಮ, ಚೆಲುವಾಂಬೆ ಹೀಗೆ ಹಲವಾರು ತಾಯಂದಿರು ಕನ್ನಡದ ದೀವಿಗೆಯನ್ನು ಬೆಳಗುತ್ತ ಬಂದಿದ್ದಾರೆ.
ಅದರಲ್ಲೂ 20 ನೇ ಶತಮಾನದಲ್ಲಿ ಲೇಖಕಿಯರ ದಂಡೆ ಪ್ರಭೆಯಾಗಿ ಹರಿದುದನ್ನು ಕಾಣುತ್ತೇವೆ. ತನ್ನ ನೋವು ನಲಿವುಗಳನ್ನು, ಶೋಷಣೆ, ಮೌಢ್ಯಗಳನ್ನೆಲ್ಲಾ ಲೇಖನಿಯ ಮೂಲಕ ಹರಿಬಿಟ್ಟಿದ್ದಾಳೆ.
ಇದರಲ್ಲಿ ಪ್ರಮುಖ ಲೇಖಕಿ ಎಂದರೆ ಮಂಗಳಾಸತ್ಯನ್. ಕಥೆ ಹಾಗೂ ಕಾದಂಬರಿ ಲೋಕದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಮಂಗಳಾಸತ್ಯನ್ ಕನ್ನಡ ಸಾಹಿತ್ಯದ ಅಮೂಲ್ಯ ಮಹಿಳಾ ಬರಹಗಾರ್ತಿ.
ಇವರು 1940 ಏಪ್ರಿಲ್ 10ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು. ತಂದೆ ಸಾಲಗಾಮೆ ಸುಬ್ಬರಾಯರು. ತಾಯಿ ಗುಂಡಮ್ಮ. ಮಾಧ್ಯಮಿಕ ಶಿಕ್ಷಣ ಪಡೆಯುವ ಸಂದರ್ಭದಲ್ಲಿಯೇ ಕಥೆ ಹೇಳುವ, ಕಥೆ ಕೇಳುವ ಹವ್ಯಾಸ. ಪ್ರತಿನಿತ್ಯದ ನೀತಿ ಕಥೆಗಳು, ಚಂದಮಾಮ, ಬಾಲಮಿತ್ರ ಮುಂತಾದ ಮಕ್ಕಳ ಪತ್ರಿಕೆಗಳಲ್ಲಿ ಪ್ರಕಟವಾಗುವ ಕಥೆಗಳನ್ನು ಓದುತ್ತಾ ಜೊತೆಗೆ ಮನೆಯಲ್ಲಿ ಹಿರಿಯರಿಂದ ಕಥೆ ಹೇಳಿಸಿಕೊಂಡು ತರಗತಿಯಲ್ಲಿ ರಂಜನೀಯವಾಗಿ ಹೇಳುವ ಪರಿಪಾಠ ಇವರದು. ಇವರಲ್ಲಿದ್ದ ಸುಪ್ತಕಥಾ ಪ್ರತಿಭೆಯನ್ನು ಪತ್ತೆ ಹಚ್ಚಿದ ಶಿಕ್ಷಕಿ ಲಕ್ಷ್ಮೀದೇವಮ್ಮ ಹೊಸ ಹೊಸ ಕಥೆಗಳನ್ನು ಬರೆಯಲು ಪ್ರೇರೇಪಿಸಿದರು. ಅಂದಿನಿಂದ ಬರವಣಿಗೆ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ಮಂಗಳಾಸತ್ಯನ್ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.
ಕನ್ನಡ ಕಾದಂಬರಿ ಲೋಕದಲ್ಲಿ ಅ.ನ.ಕೃ, ಎಸ್.ಎಲ್.ಬೈರಪ್ಪರಂತಹ ಶ್ರೇಷ್ಠ ಲೇಖಕರನ್ನು ನೀಡಿದ ಹಾಸನ ಮಂಗಳಾಸತ್ಯನ್ ಎಂಬ ಅದ್ಭುತ ಮಹಿಳಾ ಕಾದಂಬರಿಗಾರ್ತಿಯನ್ನು ನೀಡಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.
ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರಕ್ಕೆ ಹೊಸ ಆಯಾಮವನ್ನು ಒದಗಿಸಿಕೊಟ್ಟ ಹಾಗೂ ಆಧುನಿಕ ವಚನ ಸಾಹಿತ್ಯದ ದಿಗ್ಗಜರಾದ ಎಸ್.ವಿ.ರಂಗಣ್ಣನವರು ಮಂಗಳಾಸತ್ಯನ್ ಅವರ ಚಿಕ್ಕಪ್ಪ ಎಂಬುದು ವಿಶೇಷ. ವಂಶ ಪರಂಪರಿಕವಾಗಿ ಸಾಹಿತ್ಯ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ಇವರಿಗೆ ವಕೀಲರಾದ ತನ್ನ ತಂದೆಯ ಕಛೇರಿಗೆ ಬರುತ್ತಿದ್ದ ಕಕ್ಷಿದಾರರ ವ್ಯಾಜ್ಯದ ಘಟನೆಗಳು, ತಂದೆಯೊಡನೆ ಕೋರ್ಟಿಗೆ ಹೋಗಿ ವೀಕ್ಷಿಸುತ್ತಿದ್ದ ವಾದ ವಿವಾದಗಳು ಸಾಮಾಜಿಕ ಕಥೆ ಬರೆಯಲು ಪ್ರೇರಣೆ ನೀಡಿದವು.
ಚಿಕ್ಕಂದಿನಿಂದಲೆ ಚಂದಮಾಮ, ತಾಯಿನಾಡು, ಪ್ರಜಾಮತ ಹಾಗೂ ಮಂಡ್ಯದಿಂದ ಪ್ರಕಾಶಿತವಾಗುತ್ತಿದ್ದ ‘ಜನಮನ’ ಎಂಬ ವಾರಪತ್ರಿಕೆಯಲ್ಲಿ ಇವರು ಕಥೆಗಳನ್ನು ಬರೆದು ಓದುಗರೆದುರಿಗೆ ಕಥಾ ಪ್ರಪಂಚವನ್ನು ತೆರೆದಿಟ್ಟರು. ಹೀಗೆ ಮೊದಮೊದಲು ಬರೆದ ಇವರ ಸಣ್ಣಕಥೆಗಳೆಲ್ಲ ‘ಸೋತುಗೆದ್ದವಳು’ ಎಂಬ ಕಥಾಸಂಕಲನದಲ್ಲಿ ಪ್ರಕಟಗೊಂಡಿವೆ.
ಮಂಗಳಾ ಸತ್ಯನ್ ಬೆಳೆದಂತೆಲ್ಲಾ ಕಥಾಪ್ರಪಂಚದಿಂದ ಕಾದಂಬರಿ ಲೋಕದ ಕಡೆಗೆ ವಾಲಿದರೆನ್ನಬಹುದು. ಪರಿಣಾಮವಾಗಿ 1968ರಲ್ಲಿ ‘ಹಣದ ಮಗಳು’ ಎಂಬ ಪ್ರಥಮ ಕಾದಂಬರಿ ಪ್ರಕಟಗೊಂಡಿತು. ನಂತರ ಅರಸಿ ಬಂದವಳು, ವಂಚಿತೆ, ನಿನಗಾಗಿ, ಆದರ್ಶಪುರುಷ, ಭಾಗ್ಯಜ್ಯೋತಿ, ಸ್ವರ್ಗಸನ್ನಿಧಿ, ಅಮೃತಮಯಿ , ಪ್ರೇಮದುಂಬಿ, ವಿಷದೊಡಲು, ಆ ಮುಖ, ಮುಗ್ಧಮಾನವ , ಬಂಗಾರ ಭೂಷಿತೆ, ಉದಾರಶೀಲ, ಅತಿಮಧುರ ಅನುರಾಗ, ನವವಸಂತ, ಮುರುಳಿಗಾನ ಅಮೃತಪಾನ, ಕುಲದೀಪಿಕ ಮುಂತಾದ 40ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಶ್ರೀಮಂತಗೊಳಿಸಿದ್ದಾರೆ. ಇದರಲ್ಲಿ ಹಲವು ಕಾದಂಬರಿಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಧಾರವಾಹಿಗಳಾಗಿ ಪ್ರಕಟಗೊಂಡಿವೆ.
ಇವುಗಳಲ್ಲಿ ಭಾಗ್ಯಜ್ಯೋತಿ, ಮುಗ್ಧಮಾನವ, ಆ ಮುಖ(ಬಿಸಿಲು ಬೆಳದಿಂಗಳು), ಮುರುಳಿಗಾನ ಮೊದಲಾದ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರಖ್ಯಾತಿ ಪಡೆದಿವೆ. ಇದಲ್ಲದೆ ಫಣಿರಾಮ ಚಂದ್ರರವರ ನಿರ್ದೇಶನದ ‘ಹೂವೊಂದು ಬೇಕು ಬಳ್ಳಿಗೆ’ ಮತ್ತು ಶಿವಮಣಿ ನಿರ್ದೇಶನದ ‘ಸ್ವಾತಿ’ ಚಲನಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ. ಇವರ ದೇವಮಂದಿರ ಪ್ರೇಮಸಾಗರ, ಅತಿಮಧುರ ಅನುರಾಗ ಕಾದಂಬರಿಗಳು ಮೈಸೂರು ಆಕಾಶವಾಣಿಯಲ್ಲಿ ಧಾರವಾಹಿಗಳಾಗಿ ಭಿತ್ತರಗೊಂಡಿವೆ.
ಜೊತೆಗೆ ನೂರಾರು ಸಣ್ಣಕಥೆಗಳನ್ನು ಬರೆದ ಮಗಳಾ ಸತ್ಯಾನ್ ಕನ್ನಡ ನಾಡಿನಾದ್ಯಂತ ಅಪಾರ ಓದುಗ ವೃಂದವನ್ನು ಹೊಂದಿದ್ದಾರೆ.
ಕಾದಂಬರಿ, ಕಥೆಗಳ ಜೊತೆಗೆ ನಾಟಕ ರಚನೆಯಲ್ಲಿಯೂ ಸಿದ್ದ ಹಸ್ತರಾಗಿದ್ದ ಮಂಗಳಾರವರು ಅಮೂಲ್ಯ ನಾಟಕಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಮದ್ವೆಮಸಲತ್, ಧೀರೊದ್ಧಾತ ಕಂಸ, ಭೊಜ ಕಾಳಿದಾಸ, ಸಂಬಂಧ, ದೇವರ ಕೂಗು, ಸಹಚರ್ಯ, ಪಾಲಿಗೆ ಬಂದ ಪಂಚಾಮೃತ ಮುಂತಾದ ನಾಟಕಗಳು ಪ್ರಮುಖವಾದವುಗಳು. ಇವುಗಳಲ್ಲಿ ಹಲವಾರು ಮೈಸೂರು ಆಕಾಶವಾಣಿಯಿಂದ ಪ್ರಸಾರಗೊಂಡಿರುವುದು. ಮಂಗಳಾಸತ್ಯನ್ ಅವರ ಸಾಹಿತ್ಯ ದೀವಿಗೆಯ ಪ್ರಬುದ್ಧತೆಯನ್ನು ಸಾರುತ್ತದೆ. ಇವರ ‘ಸಂಬಂಧ’ ನಾಟಕ ಹಿಂದಿ ಭಾಷೆಗೆ ಅನುವಾದಗೊಂಡು ದೆಹಲಿಯ ರಾಷ್ಟ್ರೀಯ ಜಾಲದಲ್ಲಿಯೂ ಪ್ರಸಾರವಾಗಿ ದೇಶದಾದ್ಯಂತ ಕನ್ನಡಿಗರ ಮನಸೂರೆಗೊಂಡಿದೆ.
ಸಾಹಿತ್ಯಕ್ಕಷ್ಟೇ ಸೀಮಿತಗೊಳ್ಳದ ಮಂಗಳಾರವರು ಬಹುಮುಖ ವ್ಯಕ್ತಿತ್ವದವರು. ಸಂಘಟನೆ, ಚಳವಳಿ, ಜಾಗೃತ ಶಿಬಿರಗಳ ಮೂಲಕ ಸಮಾಜವನ್ನು ಎಚ್ಚರಿಸುವಂತಹ ಕೈಂಕರ್ಯ ಮಾಡಿದ ಇವರು ಸಮಾಜದಲ್ಲಿನ ಜಾತಿ ಪದ್ದತಿ ಮತ್ತು ಸ್ತ್ರೀ ಸಮಸ್ಯೆಗಳು, ಶೋಷಣೆ, ಭ್ರಷ್ಟಾಚಾರ ವಿರುದ್ದ ತಮ್ಮ ಬರವಣಿಗೆಯಲ್ಲಷ್ಟೇ ಅಲ್ಲದೇ ಸ್ತ್ರೀಶಕ್ತಿ ಸಂಘಟನೆಗಳು ‘ಸಮಾಜಕಲ್ಯಾಣ’ ಕಾರ್ಯಕ್ರಮಗಳನ್ನು ಮಾಡುತ್ತಾ ಸ್ತ್ರೀ ಜಾಗೃತಾ ಆಂದೋಲಗೈದಿದ್ದಾರೆ.
ಶ್ರೀ ಗಣೇಶ ಡ್ರಮ್ಯಾಟಿಕ್ಸ್, ರಂಜನಾ ಕಲಾರಂಗ, ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನ ಮುಂತಾದ ಸಾಮಾಜಿಕ ಸಂಘಟನೆಗಳನ್ನು ಹುಟ್ಟುಹಾಕಿ, ಸ್ಥಾಪಕರಾಗಿ, ನಿರ್ದೇಶಕಿಯಾಗಿ, ಅಧ್ಯಕ್ಷೆಯಾಗಿ ಕಾಯಕಮಾಡಿ, ಬಾಲ ಪ್ರತಿಭೆಗಳಿಗೆ ಮಾರ್ಗದೀವಿಗೆಯಾಗಿ, ಹಲವಾರು ಸ್ತ್ರೀಯರ ಸಮಸ್ಯೆಗಳನ್ನು ಸಾಂಘಿಕ ಹಾಗೂ ವೈಯಕ್ತಿಕ ಶ್ರಮದಿಂದ ಪರಿಹಾರ ದೊರಕಿಸಿಕೊಟ್ಟ ಕೀರ್ತಿ ಮಂಗಳಾಸತ್ಯನ್ ಅವರದು.
ಕರ್ನಾಟಕ ಸರಕಾರದ ದಾನ ಚಿಂತಾಮಣಿ ಅತತಿಮಬ್ಬೆ ಪ್ರಶಸ್ತಿ ಆಯ್ಕೆ ಸಮಿತಿ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಕೇಂದ್ರ ಗ್ರಂಥಾಲಯ ಪ್ರಾಧಿಕಾರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂತಾದವುಗಳ ಸದಸ್ಯೆಯಾಗಿ ಗೌರವ ಪೂರ್ಣವಾಗಿ ದುಡಿದಿದ್ದಾರೆ.
ಹಾಸನ ಇವರ ಮಾತೃಜಿಲ್ಲೆಯಾದರೂ ಇವರು ಸಾಹಿತ್ಯದ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬಂದದ್ದು ಮೈಸೂರು ಜಿಲ್ಲೆಯಿಂದ ಎಂದರೆ ಅತಿಶಯೋಕ್ತಿಯಾಗಲಾರದು. ಮೈಸೂರು ಇವರ ಕರ್ಮ ಭೂಮಿಯಾಯಿತು. ಮುಂದೆ ಮೈಸೂರು ದಸರಾ ಸ್ಮಾರಕ ಸಂಚಿಕೆ, ಇಳಾ, ಯಶಸ್ವಿನಿ, ಸ್ತ್ರೀಶಕ್ತಿ, ಸಾಹಿತ್ಯ ಪರಿಷತ್ತು, ಜಿಲ್ಲಾ ಲೇಖಕಿಯ ಸಂಘ, ಮಹಿಳಾ ಸಂಘಟನೆ ಹೀಗೆ ಹಲವು ಸಂಘ ಸಂಸ್ಥೆಗಳ ಸ್ಮರಣ ಸಂಚಿಕೆಗಳನ್ನು ಸಂಪಾದಿಸಿಕೊಟ್ಟ ಪಾಂಡಿತ್ಯ ಮಂಗಳಾ ಅವರದು.
ಕನ್ನಡ ನಾಡು ಕಂಡ ಅತ್ಯದ್ಭುತ ಪ್ರತಿಭಾನ್ವಿತೆ ಮಂಗಳಾ ಸತ್ಯನ್ ಅವರು. ಕನ್ನಡ ಸಾಹಿತ್ಯ ಕ್ಷೇತ್ರದ ಶ್ರೇಷ್ಟ ಬರಹಗಾರ್ತಿಯರಿಗೆ ಸಲ್ಲುವ ಅತ್ಯುನ್ನತ ಪ್ರಶಸ್ತಿಯಾದ ದಾನಚಿಂತಾಮಣಿ ಅತತಿಮಬ್ಬೆ ಪ್ರತಿಷ್ಠಾನದ ಪುರಸ್ಕಾರ, ಸಾಹಿತ್ಯ ರತ್ನ, ಕಾದಂಬರಿ ರತ್ನ, ಮೈಸೂರು ರತ್ನ, ಸಾಹಿತ್ಯ ಕಲಾ ಪ್ರಪೂರ್ಣಿ, ಹೊಯ್ಸಳ ಪ್ರಶಸ್ತಿ, ಸಾಹಿತ್ಯ ಕಲಾ ಶಾರದೆ ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅಲ್ಲದೇ ಅನೇಕಾನೇಕ ಸಾಹಿತ್ಯ ಸಮ್ಮೇಳನ, ಸಮಾವೇಶಗಳ ಅಧ್ಯಕ್ಷತೆ ವಹಿಸಿದ ಹಿರಿಮೆ ಮಂಗಳ ಸತ್ಯನ್ ಅವರದು.
ಆದ್ದರಿಂದಲೇ ನಾಡಿನಾದ್ಯಾಂತ ಮಂಗಳ ಸತ್ಯನ್ ಅವರಿಗಿರುವ ಅಭಿಮಾನಿಗಳು 2003ರಲ್ಲಿ ‘ಸತ್ಯ ಮಂಗಳಾ’ ಎಂಬ ಅಭಿನಂದನ ಗ್ರಂಥ ಸಮರ್ಪಿಸಿದ್ದಾರೆ.
ವೈಚಾರಿಕ ಮನೋಧರ್ಮಿ ಜ.ಹೊ.ನಾರಾಯಣಸ್ವಾಮಿ
ಮಹಾಕವಿ ಕುವೆಂಪುರವರ ಬೆರಳೆಣಿಕೆಯ ಆಪ್ತ ಶಿಷ್ಯ ವೃಂದದಲ್ಲಿ ಜ.ಹೊ.ನಾ ಪ್ರಮುಖರು ಸಾಹಿತ್ಯ ವಲಯದಲ್ಲಿ ಆಲೋಚನೆಯ ದಾರಿದ್ರ್ಯ ಹಿಡಿದು ಸಂಪ್ರದಾಯ ನೇಣುಗಂಬಕ್ಕೆ ತುತ್ತಾದ ಸಂದರ್ಭದಲ್ಲಿ ಜ.ಹೊ.ನಾ ಅದಾರಾಚೆಯ ವೈಚಾರಿಕ ಲೋಕ ದರ್ಶನ ಮಾಡಿಸಿದವರು.
ಅಕ್ಷರಶಃ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಅಂತರ್ಗತಗೊಳಿಸಿಕೊಂಡು, ಕುವೆಂಪುರವರ ಸನ್ಮಾರ್ಗದಲ್ಲಿ ಸಾಗಿ ಸಮಾಜದ ಸಂಪ್ರದಾಯ ಮನಸ್ಸುಗಳನ್ನು ಬಡಿದೆಬ್ಬಿಸಿ ವೈಜ್ಞಾನಿಕ ತಳಹದಿಯಲ್ಲಿ ಚಿಂತಿಸುವಂತೆ ಪ್ರೇರೇಪಿಸಿದವರು.
ಕಾಲ ನಿಂತ ನೀರಲ್ಲ, ಸದಾ ಚಲನಶೀಲ. ಅಂತೆಯೇ ಸಾಹಿತ್ಯಿಕ ಆಲೋಚನೆಗಳು ಆಧುನಿಕತೆಗೆ ತಕ್ಕಂತೆ ವಿಚಾರಕ್ಕೆ ನಿಲುಕುವಂತೆ ತೆರೆದುಕೊಳ್ಳುತ್ತಾ ಸಾಗಬೇಕು. ಸಾಮಾಜಿಕ ಮೌಢ್ಯ ಸಂಪ್ರದಾಯಗಳ ಘೋರಿಯ ಮೇಲೆ ವೈಚಾರಿಕ ಹೂ ಗಿಡಗಳನ್ನು ಬೆಳೆಸುವ ದಿಸೆಯಲ್ಲಿ ಕಳೆದ ಐದಾರು ದಶಕಗಳಿಂದ ಮೂರ್ಖ ಸಂಪ್ರದಾಯಿಗಳ, ಕೋಮುವಾದಿಗಳ, ಜಾತಿವಾದಿಗಳ ವಿರೋಧಗಳ ನಡುವೆಯೂ ಎದೆಗುಂದದೆ ಮುನ್ನುಗ್ಗಿ ಬಂದ ಧೀಶಕ್ತಿ ಸಾಹಿತ್ಯ ಜ.ಹೊ.ನಾ ಅವರದ್ದು ಎಂದರೆ ಅತಿಶಯೋಕ್ತಿಯಾಗಲಾರದು.
‘ಮಾನವ ಕುಲಂ ತಾನೋಂದೇ’ ವಲಂ ಎನ್ನುವಂತೆ ವೇದ, ಕುರಾನ್ ಆಚೆಗೆ ನಮ್ಮನ್ನೆಲ್ಲಾ ಕೊಂಡೋಯ್ದು ಮಠ, ಮಂದಿರ, ಚರ್ಚ್, ಮಸೀದಿಗಳ ತೊರೆದು ಹೊರಬಂದು ಮಾನವೀಯ ಮೌಲ್ಯಗಳ ಆವಿರ್ಭವಿಸಿಕೊಳ್ಳುವಂತೆ ಕರೆನೀಡಿದ ಮಾನವತಾವಾದಿ ಜ.ಹೊ.ನಾ.
ಜ.ಹೊ.ನಾ ಎಂದೇ ಪ್ರಸಿದ್ಧಿ ಪಡೆದ ನಾರಾಯಣ ಸ್ವಾಮಿಯವರು 1941 ಜುಲೈ 13 ರಂದು ಹಾಸನ ತಾಲ್ಲೂಕಿನ ಜನಿವಾರ ಗ್ರಾಮದ ಶ್ರೀ ಹೊನ್ನಯ್ಯ ಮತ್ತು ಶ್ರೀಮತಿ ತಿಮ್ಮಮ್ಮ ದಂಪತಿಗಳ ಗರ್ಭಾಂಬುದಿಯಲ್ಲಿ ಜನಿಸಿದರು.
ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣವನ್ನು ಹಾಸನದಲ್ಲಿಯೇ ಪಡೆದ ಇವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋದರು. ಅಲ್ಲಿನ ಸಿಟಿ ಕೋ ಆಪರೇಟೀವ್ ಬ್ಯಾಂಕ್ ಲಿ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ, ಹಾಗೂ ಅರ್ಥಮೂವರ್ಸ್ ಲಿಮಿಟೆಡ್ಗಳಲ್ಲಿ ಸೇವೆ ಮಡುತ್ತÀಲೇ ಬಿ.ಕಾಂ; ಬಿ.ಎಲ್; ಎಂ.ಎ; ಡಿಪ್ಲಾಮೋ ಇನ್ ಡ್ರಾಮಾ ಪದವಿಗಳನ್ನು ಮುಗಿಸಿದರು. ಅನಂತರ ಪುನಃ ತವರಿಗೆ ಹಿಂದಿರುಗಿ 1977 ರಿಂದ ವಕೀಲಿ ವೃತ್ತಿ ನಡೆಸಿ ನಂತರ ಎರಡು ಅವಧಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ ಕೀರ್ತಿ ಜ.ಹೊ.ನಾ ಅವರದ್ದು. ಹಾಗೆಯೇ ಇತಿಹಾಸ ಪುಟಗಳನ್ನು ಅವಲೋಕಿಸಿ ಕೊಂಕು, ಅಸಂಬದ್ಧವಾಗಿ ಕಂಡು ಬಂದ ವಿಷಯಗಳನ್ನು ಜಾಲಾಡಿ ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಬುದ್ಧ ಪ್ರಬಂಧಗಳ ರೂಪದಲ್ಲಿ ಸಾಹಿತ್ಯ ನೀಡಿದ್ದಾರೆ. ಎಲ್ಲೋ ಹುದುಗಿದ್ದ ಅಂತರ್ಚಕ್ಷನ್ನು ತೆರೆಸಿದ್ದಾರೆ. ಸಾಮಾಜಿಕ, ಪ್ರಗತಿಪರ ಚಿಂತನೆಗಳೆಡೆಗೆ ಮನ ತೆರೆದುಕೊಳ್ಳುವಂತೆ ಹುರಿದುಂಬಿಸಿದ್ದಾರೆ.
ಹಲವರು ಜ.ಹೊ.ನಾ ಎಡ ಪಂಥೀಯ ಎಂದು ಅಭಿಪ್ರಾಯ ಪಡುವುದುಂಟು, ಆದರೆ ನಾನು ಬಹು ಹತ್ತಿರವಾಗಿ ಗಮನಿಸಿರುವಂತೆ ಅವರು ಯಾವ ಪಂಥಕ್ಕೂ ಮೀಸಲಾಗದೆ ಮಾನವೀಯ ಮೌಲ್ಯಗಳಿಗೆ ಬದ್ಧರಾದರು. ವಿಚಾರವಾದಿಗಳು ಅಂತೆಯೇ ನಿಷ್ಠುರವಾದಿಗಳು. ಜ.ಹೊ.ನಾ ಅವರು ವಿವೇಕಾನಂದರ ಆಚಾರ, ಕುವೆಂಪುರವರ ವಿಚಾರಗಳ ಸಮ್ಮಿಲನವಾಗಿದ್ದಾರೆ.
ಒಂದು ಕಡೆ ವಿಚಾರವಾದಿ ಪೆರಿಯಾರ್ ರಾಮಸ್ವಾಮಿ ‘ಬ್ರಾಹ್ಮಣರು ಸಾಮಾಜಿಕವಾಗಿ ಜಾತಿವಾದಿಗಳಾದರೆ, ಶೂದ್ರರು ವೈಯಕ್ತಿಕವಾಗಿ ಜಾತಿವಾದಿಗಳು’ ಎಂದಿದ್ದಾರೆ. ಅದು ಅಕ್ಷರ ಸಹ ಸತ್ಯ . ತಮ್ಮ ಕೋಮಿನ ಹಿತಕ್ಕಾಗಿ ಬ್ರಾಹ್ಮಣರು ತ್ಯಾಗ ಮಾಡಿದರೆ, ಸ್ವಂತ ಪ್ರತಿಷ್ಠೆಗಾಗಿ ಶೂದ್ರರು ತಮ್ಮ ಜನಾಂಗವನ್ನು ಬಲಿಕೊಡುತ್ತಾರೆ. ಅಧಿಕಾರದ ಆಸೆ ಆಮಿಷಗಳಿಗೆ ಒಳಗಾದ ಜನರು ಎಂಥ ಪ್ರತಿಗಾಮಿ ಕಾರ್ಯಕ್ಕೂ ಇಳಿಯುತ್ತಾರೆ. ಇದನ್ನೇಕೆ ಇಲ್ಲಿ ಪ್ರಸ್ತಾಪಿಸಿದೆನೆಂದರೆ ಈ ಮೇಲಿನ ಎರಡೂ ಅಂಶಗಳನ್ನು ಹೊರತು ಪಡಿಸಿ ಜ.ಹೊ.ನಾ ಸಾಹಿತ್ಯ ನಮ್ಮೆದುರಿಗೆ ನಿಲ್ಲುತ್ತದೆ.
‘ಹರಿಯುವ ನದಿಗಳು ಹೇಗೆ ತಮ್ಮ ಹೆಸರು, ಆಕಾರಗಳನ್ನು ಬಿಟ್ಟು ಸಮುದ್ರದಲ್ಲಿ ಸೇರಿ ಹೋಗುತ್ತವೆಯೋ ಹಾಗೆಯೇ ಜ್ಞಾನಿ ನಾಮ ರೂಪಗಳಿಂದ ಬಿಡುಗಡೆ ಪಡೆದು ಪರಾತ್ಪರನಾದ ದಿವ್ಯ ಪುರುಷನನ್ನು ಹೊಂದುತ್ತಾನೆ’ ಎಂದು ಉಪನಿಷತ್ತಿನಲ್ಲಿ ಬರುತ್ತದೆ. ಅಂತೆಯೇ ಮಾನವ ವೈಶಾಲ್ಯತೆಯಡೆಗೆ ಸಾಗಬೇಕು, ವೈಚಾರಿಕ ಪ್ರಗತಿ ಹೊಂದಬೇಕೆಂಬ ಮಹದಾಶಯ ಜ.ಹೊ.ನಾ ಅವರದ್ದು.
ಇವರು ಈಗಾಗಲೇ 25ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವುಗಳಲ್ಲಿ ನನ್ನ ಅತ್ಯಾಕರ್ಷಣೆ ಮಾಡಿದ ಕೃತಿಗಳು ಮೊದಲನೆಯದು ‘ಅಧಮ್ಯ’ವಾದರೆ ಎರಡನೆಯದಾಗಿ ‘ವಿವೇಕಾನಂದರು ಮತ್ತು ಕ್ರಾಂತಿಕಾರಕ ವಿಚಾರಗಳು’.
ಪ್ರಕೃತಿಯಿಂದಲೇ ಬರುವ ಇಂಥ ಅಪರೂಪದ ಹೃದಯ ವೈಶಾಲ್ಯತೆಯನ್ನು ಕಳೆದುಕೊಳ್ಳದೆ ಉಳಿಸಿಕೊಂಡು ಬೆಳೆಸಿಕೊಳ್ಳುವುದೇ ಜೀವನದ ಪರಮಗಂತವ್ಯ. ಮನೋಹೃದಯ ವೈಶಲ್ಯತೆಯ ಇಂಥ ಅದ್ಭುತ ಚಿತ್ರಣ ಜಗತ್ತಿನ ಬೇರಾವ ಸಾಹಿತ್ಯದಲ್ಲೂ ಲಭ್ಯವಾಗಿಲ್ಲ ಎನ್ನಬಹುದು. ನಾನು ಓದಿದಂತೆ ಅದಮ್ಯ ಕನ್ನಡ ಸಾಹಿತ್ಯದ ಸರ್ವಶ್ರೇಷ್ಠ ಕೃತಿಯಾಗಿದೆ. ಇದು ಪ್ರತಿಯೊಬ್ಬ ವ್ಯಕ್ತಿಯೂ ಓದಲೇ ಬೇಕಾದ ಪುಸ್ತಕ. ಇಲ್ಲಿ ಜ.ಹೊ.ನಾ ಕುವೆಂಪುರವರ ಶಿಷ್ಯರಾದರೂ ಇವರೀರ್ವರಲ್ಲಿನ ಅಜ್ಞಾತ ಶಕ್ತಿ ವಿಶಿಷ್ಠ ಹಾಗೂ ವಿಭಿನ್ನವಾದುದೆನ್ನಿಸಿತು. ಏಕಲವ್ಯನನ್ನು ಕುವೆಂಪು ತಮ್ಮ ‘ಬೆರಳ್ಗೆ ಕೊರಳ್À’ ಕೃತಿಯಲ್ಲಿ ನೋಡಿದ್ದು ಅದ್ಭುತವೆನಿಸಿದ್ದು ನಿಜ. ಅಂತಿಮವಾಗಿ ಏಕಲವ್ಯನ ಉಂಗುಲಿಯ ಬಲಿದಾನ ನಡೆಯುತ್ತದೆ. ಆದರೆ ಜ.ಹೊ.ನಾ ಕುವೆಂಪುರವರಾಚೆಗೂ ಹೋಗಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಪ್ರಾಕೃತಿಕ ಶಾಂತಿ ಬಯಸಿದ್ದು, ಮನಪರಿವರ್ತಿಸಿದ ಬಗೆ ಅತ್ಯದ್ಭುತ ಹಾಗೂ ಅಮೋಘವಾದುದೆಂದರೆ ಅತಿಶಯೋಕ್ತಿಯಾಗಲಾರದು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಜ.ಹೊ.ನಾ ನೀಡಿದ ಅಪೂರ್ವ ಕೊಡುಗೆ ಎನಿಸುತ್ತದೆ. ಇಲ್ಲಿ ವೈಚಾರಿಕ ಪ್ರವಾಹವೇ ಹರಿದಿದೆ ಎನ್ನಬಹುದು. ಈ ರಚನಾ ಸಂದರ್ಭದಲ್ಲಿ ಸಂಯಮ, ವಿವೇಕಗಳು ಜ.ಹೊ.ನಾ ರನ್ನು ಆವಿರ್ಭವಿಸಿಕೊಂಡು ಅಂತರ್ಮುಖಿ ಚಿಂತನೆ ಹರಿಯಬಿಟ್ಟಿವೆ. ಆದ್ದರಿಂದ ಈ ಕೃತಿ ಓದುಗನ ಹೃದಯದಂತರಾಳಕ್ಕಿಳಿದು ಹೊಸ ಜಗತ್ತಿನ ಚಿತ್ರಣವನ್ನು, ಮಾನವೀಯ ಸಂವೇದನೆಯನ್ನು ಪ್ರಜ್ವಲಿಸುತ್ತದೆ.
ಜಾತಿ, ಧರ್ಮ, ದೇವರುಗಳೆಂಬ ಮೌಢ್ಯದಲ್ಲಿ ಸಿಕ್ಕು ಭಾರತ ನಲುಗುತ್ತಿರುವುದನ್ನು ಜ.ಹೊ.ನಾ ತಮ್ಮ ಅನೇಕ ಕೃತಿಗಳಲ್ಲಿ ವೈಚಾರಿಕವಾಗಿ ಮಂಡಿಸಿದ್ದಾರೆ. ಇವರ ಕೃತಿಗಳನ್ನು ಓದುವಾಗಲೆಲ್ಲಾ ಥಟ್ಟನೇ ನಮ್ಮೆದುರಿಗೆ ಬುದ್ಧ, ವಿವೇಕಾನಂದ, ಮಹಾತ್ಮಾ ಪುಲೆ, ಓಶೋ, ಕುವೆಂಪು, ಪೆರಿಯಾರ್, ಲೋಹಿಯ ಮುಂತಾದವರು ಒಂದು ಕ್ಷಣ ಸುಳಿದು ಹೋಗುತ್ತಾರೆ. ಇವರೆಲ್ಲರಾದಿಯಾಗಿ ಭಾರತದಲ್ಲಿ ವೈಚಾರಿಕ ಕ್ರಾಂತಿಯೇ ಹರಿದಿದೆ. ಆದರೂ ಸಮಾಜ ಸಂಪ್ರದಾಯದ ಹೊಲಸಿನಿಂದ ಮುಕ್ತವಾಗುತ್ತಿಲ್ಲ. ಆದ್ದರಿಂದಲೇ ವಿವೇಕಾನಂದರು ಒಂದು ಕಡೆ “...... ಎಲ್ಲಾ ಮೂಢ ನಂಬಿಕೆಗಳನ್ನು ಧ್ವಂಸ ಮಾಡಿ, ಧರ್ಮಗುರುಗಳು, ಧರ್ಮಗ್ರಂಥಗಳು, ದೇವತೆಗಳು ಯಾರು ಇಲ್ಲ. ದೇವಸ್ಥಾನಗಳನ್ನು, ಪೂಜಾರಿಗಳನ್ನು, ದೇವತೆಗಳನ್ನು, ಅವತಾರಗಳನ್ನು ಕೊನೆಗೆ ದೇವರನ್ನೇ ಧ್ವಂಸ ಮಾಡಿ, ನಾನೇ ದೇವರು. ಬೇರೇನೂ ಇಲ್ಲ ತತ್ತ್ವಜ್ಞಾನಿಗಳೇ ಎದ್ದು ನಿಲ್ಲಿ ಭಯಬೇಡ. ದೇವರ ಬಗ್ಗೆ, ಪ್ರಪಂಚದ ಮೌಢ್ಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಸತ್ಯವೇ ಗೆಲ್ಲುವುದು. ಎಲ್ಲಾ ಮೌಢ್ಯಗಳು ಪೊಳ್ಳು ಕಲ್ಪನೆಗಳು... ದೇವರು ಹುಟ್ಟಿದ್ದು ನನ್ನ ಮನಸ್ಸಿನಲ್ಲಿ.... ನಾನೇ ಅವನನ್ನು ನನ್ನ ಮನಸ್ಸಿನಲ್ಲಿ ಸೃಷ್ಠಿಸಿದೆ. ಎಲ್ಲಾ ಮೂಢನಂಬಿಕೆಗಳನ್ನು ತ್ಯಜಿಸಿ...” ಎಂದು ಕರೆ ಕೊಟ್ಟಿದ್ದಾರೆ
ಈ ಕರೆಗೆ ಕಿವಿಕೊಟ್ಟು ಕಾರ್ಯತತ್ಪರರಾದವರು ಮಾತ್ರ ಕೇಲವೆ ಕೆಲವರು. ಕುವೆಂಪುರಾದಿಯಾಗಿ ಲೋಹಿಯಾ, ಲಂಕೇಶ್, ಪೆರಿಯಾರ್, ದೇ. ಜ. ಗೌ, ಜ.ಹೊ. ನಾ, ಸಿ.ಪಿ.ಕೆ, ಭಗವಾನ್ ಮುಂತಾದವರು ನಮ್ಮೆದುರಿಗೆ ನಿಲ್ಲುತ್ತಾರೆ.
ಅದರಲ್ಲು ಜ.ಹೊ.ನಾ ತಮ್ಮ ಬದುಕಿನ ಬಹುಭಾಗವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಟ್ಟು ವೈಚಾರಿಕ ಮನೋಧರ್ಮಿಯಾಗಿ ಬಾಳಿದ್ದಾರೆ. ಇವರ ವಿಚಾರ ಲಹರಿಗಳನ್ನು ಅರಿಯಬೇಕಾದರೆ ಇವರ ಕೃತಿಗಳ ಅಧ್ಯಯನ ಮಾಡಲೇಬೇಕು.
ಒಬ್ಬ ವ್ಯಕ್ತಿಯು ಒಂದು ಮಹಾನ್ ಶಕ್ತಿಯಾಗಿ ರೂಪುಗೊಳ್ಳುವುದಕ್ಕೆ ಅನೇಕ ಚೇತನಗಳ ಸ್ಫೂರ್ತಿ ಆದರ್ಶಗಳು ಸಹಕಾರಿಯಾಗಿರುತ್ತದೆ. ಅಂತಹ ಒಂದು ಸ್ಫೂರ್ತಿ ಕುವೆಂಪುರಾದಿಯಾಗಿ ಅನೇಕರ ಸಹಕಾರ ಜ.ಹೊ.ನಾ ರವರಿಗೆ ಸಿಕ್ಕಿದೆ. ಆದ್ದರಿಂದಲೇ ನಮ್ಮೆದುರಿಗೆ ವೈಚಾರಿಕ ಕ್ರಾಂತಿಯ ಮಹಾನ್ ಶಕ್ತಿಯಾಗಿ ಇವರು ಗೋಚರಿಸುತ್ತಾರೆ. ಗುಲಾಮಗಿರಿ, ದೌರ್ಜನ್ಯ, ದಬ್ಬಾಳಿಕೆ, ಬಡತನ, ದಾರಿದ್ರ್ಯ, ಹಿಂಸೆ. ಶೋಷಣೆ, ಹಸಿವು, ಭ್ರಷ್ಟಾಚಾರ ಹೀಗೆ ಹಲವಾರು ಸಾಮಾಜಿಕ ಕಂಟಕಗಳ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಹರಿತವಾದ ಭಾವಲಹರಿ ಮಿಳಿತಗೊಳಿಸಿದ್ದಾರೆ. ಮಾರ್ಗೋಪಾಯಗಳನ್ನು ಸೂಸಿದ್ದಾರೆ. ಮಾನವತ್ತ್ವದ ನೆಲೆ ಕಂಡುಕೊಳ್ಳುವ ಬಗೆಯನ್ನು ತೆರೆದಿಟ್ಟಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಹಾಸನ ಜಿಲ್ಲಾ ಬಿ.ಜಿ.ವಿ.ಎಸ್. ಸಂಸ್ಥಾಪಕ ಅಧ್ಯಕ್ಷರಾಗಿ, ಸಾಕ್ಷರತಾ ಆಂದೋಲನದ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ‘ಸಂವೇದನಾ ಕಲಾವಿದರು’ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಬರಹಗಾರರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಜ.ಹೊ.ನಾ ನಾಡಿನಾದ್ಯಾಂತ ಪ್ರಖ್ಯಾತರಾದವರು, ಇವರ ಅನೇಕ ಕೃತಿಗಳು ವಿವಿಧ ವಿಶ್ವವಿದ್ಯಾನಿಲಯಗಳಿಂದ, ಕನ್ನಡ ಪ್ರಾಧಿಕಾರಗಳಿಂದ ಪ್ರಕಟಗೊಂಡಿವೆ, ರೈತ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಇವರು ಅನೇಕ ಸಮಾಜ ಪರ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸಾಹಿತ್ಯಗೋಷ್ಠಿ, ಕವಿಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕವಿತೆ ವಾಚಿಸಿದ್ದಾರೆ. ಅದ್ಭುತ ನಟ ಹಾಗೂ ನಾಟಕಕಾರರೂ ಆದ ಇವರು ಸಂಕ್ರಾತಿ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೆಯೇ ‘ಜೇನುಗೂಡು’ ಧಾರವಾಹಿಯಲ್ಲಿ ಅಭಿನಯಿಸಿದ್ದಾರೆ.
ಜಗದ ತೊಟ್ಟಿಲು-ಕವನ ಸಂಕಲನ ; ಬೆಳಕಿನ ದಾರಿ, ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು, ವೇದ ಕುರಾನ್ ಆಚೆಗೆ, ವಿವೇಕಾನಂದ ಮಾನವತೆಗಾಗಿ ಕಾವಿಯೊಳಗೆ ಕುದಿದ ಕೆಂಡ, ಆವರಣ-ಅನಾವರಣ, ಬ್ರಾಹ್ಮಣ್ಯದ ತಂತ್ರಗಳು, ಸಂಪ್ರದಾಯದ ನೇಣುಗಂಬ, ಚೈತನ್ಯದ ಪೂಜೆ ಮುಂತಾದ ವೈಚಾರಿಕ ಕೃತಿಗಳು ; ನರಬಲಿ,-ನಾಟಕ, ; ಅದಮ್ಯ, ಸಿದ್ಧಾರ್ಥ-ಕಾದಂಬರಿಗಳು ; ಸ್ವಾಮಿ ವಿವೇಕಾನಂದ, ಜಯಪ್ರಕಾಶ ನಾರಾಯಣ, ಭಗತ್ ಸಿಂಗ್, ನಿಷ್ಠನ್ಯಾಯವಾದಿ ಹೆಚ್.ಎಸ್.ಎಂ. ; ಕಾರುಗೋಡಿನ ತೊಟ್ಟಿಮನೆ ಕೆ.ಎಂ. ಚಂದ್ರಶೇಖರ್ ಮುಂತಾದ ಜೀವನ ಚರಿತ್ರೆಗಳು ; ಹರ್ಮನ್ಸೇನ್-ವಾಚಿಕೆ; ಶ್ರೀಕುವೆಂಪು-ಸಂಕೀರ್ಣ; ಭಾರತದ ರೈತ-ಅನುವಾದ; ಬೇಲೂರು ಹಳೆಬೀಡು-ನವಸಾಕ್ಷರಿಗಾಗಿ ಬರೆದ ಬರಹಗಳು ಹೀಗೆ ಅನೇಕ ಬಗೆಯ ಕೃತಿಗಳನ್ನು ಜ.ಹೊ.ನಾ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಇವರ ‘ವೇದ ಕುರಾನ್ ಆಚೆಗೆ’ ಕೃತಿಗೆ ಡಾ|| ಹೆಚ್. ನರಸಿಂಹಯ್ಯ ದತ್ತಿನಿಧಿ ಪ್ರಶಸ್ತಿ, ಬಂದಿದೆ. ಅಲ್ಲದೇ ಅನಿಕೇತನ ಪ್ರಶಸ್ತಿ, ಹಾಸನ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಹಾಗೂ ಹಲವು ಸಂಘಗಳಿಂದ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ. ಇವರ ಸಾಹಿತ್ಯಿಕ ಅಹರ್ನಿಶಿ ಸೇವೆಗಾಗಿ ಹಾಸನ ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಇವರನ್ನಲಂಕರಿಸಿತ್ತು.
ಮೌಢ್ಯದ ಕಂದಾಚಾರದಲ್ಲಿ ಮುಳುಗಿದ್ದ ಅನೇಕ ಮನಸ್ಸುಗಳನ್ನು ಪರಿವರ್ತನೆ ಮಾಡುತ್ತಾ ಯುವ ಬರಗಾರರಿಗೆ ವೈಚಾರಿಕ ತಳಹದಿ ಹಾಕಿಕೊಟ್ಟು ಮಾರ್ಗದರ್ಶನ ನೀಡುತ್ತಿರುವ ಜ.ಹೊ.ನಾ ಕನ್ನಡದ ಪ್ರತಿಭಾನ್ವಿತ ದಿಗ್ಗಜ ಸಾಹಿತ್ಯ ವಲಯದ ಪ್ರಮುಖರು. ನೂರಾರು ಕವಲು ದಾರಿಗಳು ಜ.ಹೊ. ನಾ. ಎಂಬ ಹೆದ್ದಾರಿಯಲ್ಲಿ ಸೇರಬೇಕಿದೆ.
ಕನ್ನಡ ಸಾಹಿತ್ಯದ ಪಾಂಡಿತ್ಯ ಪ್ರತಿಭೆ- ಡಾ|| ಮಳಲಿ ವಸಂತ್ ಕುಮಾರ್
ವಿಶ್ವ ಕವಿ ಕುವೆಂಪು ಪರಂಪರೆಯಲ್ಲಿ ಸಾಗಿ ಬಂದಿರುವ ಮಳಲಿಯವರು ಮೌಢ್ಯ ವಿರೋದಿಯೂ ಹೌದು, ವಿಚಾರಪರ ಸಾಧಕರೂ ಹೌದು.- ನಾಡೋಜ ಡಾ|| ದೇ.ಜ.ಗೌ
ಅಕ್ಷರಶ: ದೇ.ಜ.ಗೌ ಅವರ ಮನದಾಳದ ನಲ್ನುಡಿ ಡಾ|| ಮಳಲಿಯವರ ವ್ಯಕ್ತಿತ್ವಕ್ಕಿಡಿದ ಕನ್ನಡಿಯಾಗಿದೆ.ಆಧುನಿಕ ಕನ್ನಡ ಸಾಹಿತ್ಯದ ಆಳ ಪರಂಪರೆ, ಅಧ್ಯಾಯನ ಶೀಲತೆ ಜೊತೆ ಜೊತೆಗೆ ವಾಗ್ಪ್ರೌಢಿಮೆಯನ್ನು, ಪಾಂಡಿತ್ಯ ಸಂಪನ್ನತೆ ಗಳಿಸಿದ, ನಿರ್ಭಿಡತೆಯಿಂದ ಒಳ ಹೊರವುಗಳನ್ನು ಪಠಿಸಬಲ್ಲ ಬೆರಳೆಣಿಕೆಯ ಕಂಚಿನ ಕಂಠಗಳಲ್ಲಿ ಡಾ|| ಮಳಲಿಯವರೂ ಒಬ್ಬರೆಂದರೆ ಅತಿಶಯೋಕ್ತಿಯಾಗಲಾರದು.
1983 ರಲ್ಲಿ ಪ್ರಕಟವಾದ ಮಳಲಿಯವರ ಈಡು ಕಥಾ ಸಂಕಲನ ಓದಿದ ರಾಷ್ಟ್ರಕವಿ ಕುವೆಂಪುರವರು ಈ ರೀತಿ ಹೇಳಿದ್ದಾರೆ “ಅಪಥ್ಯ, ಸ್ಥಿತ್ಯಂತರ, ರಿಕ್ತ ಮತ್ತು ಈಡು ಕಥೆಗಳು ನನ್ನ ಮೇಲೆ ತೀವ್ರ ಪರಿಣಾಮ ಉಂಟುಮಾಡಿದವು. ಅದು ಎಷ್ಟರ ಮಟ್ಟಿಗೆಂದರೆ ನಾನೂ ಸಹ ಎರಡು ದಿನ ನಿದ್ರೆ ಮಾಡಲಾಗಲಿಲ್ಲ.”
ಕನ್ನಡ ಸಾಹಿತ್ಯದ ಭವ್ಯೋಜ್ವಲ ಇತಿಹಾಸದಲ್ಲಿ ಡಾ|| ಮಳಲಿಯವರಿಗೆ ವಿಶಿಷ್ಟ ಸ್ಥಾನವಿದೆ, ಅವರ ಭಾಷಾ ಪ್ರೌಢಿಮೆ ಅನನ್ಯ ಹಾಗೂ ಅದ್ವಿತೀಯವಾದದ್ದು.
20.04.2013 ರ ಶನಿವಾರ ಹಾಸನದ ಹಾಸನಾಂಭ ಕಲಾಕ್ಷೇತ್ರದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ರತ್ನ ಮುಕುಟ ಡಾ|| ಮಳಲಿಯವರ ವ್ಯಕ್ತಿತ್ವದ ಹೊಳಪನ್ನು ಇಮ್ಮಡಿಗೊಳಿಸಿದೆ.
ಹಾಸನ ಜಿಲ್ಲೆಯ ಮಳಲಿ ಗ್ರಾಮದ ಶ್ರೀಮತಿ ದೇವಮ್ಮ ಮತ್ತು ಶ್ರೀ ಪಟೇಲ್ ಚಿಕ್ಕೇಗೌಡ ದಂಪತಿಗಳ ಸುಪುತ್ರರಾಗಿ 1945 ಆಗಸ್ಟ್ 6 ರಂದು ಜನಿಸಿದ ವಸಂತ್ ಕುಮಾರ್ರವರು ಹುಟ್ಟೂರಲ್ಲೇ ಪ್ರಾಥಮಿಕ ಹಾಗೂ ಪೌಡ ಶಿಕ್ಷಣವನ್ನು ಮುಗಿಸಿದ ನಂತರ ಇವರ ಮುಂದಿನ ವಿಧ್ಯಭ್ಯಾಸ [ಕುವೆಂಪುರವರು ಕುಪ್ಪಳ್ಳಿಯಿಂದ ಮೈಸೂರಿಗೆ ಬಂದಂತೆ] ಮೈಸೂರಿನಲ್ಲಾಯಿತು. ಬಲ್ಯದಿಂದಲೂ ಕುವೆಂಪುರವರ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮಳಲಿಯವರು ಡಾ|| ಹೆಚ್.ತಿಪ್ಪೆರುದ್ರಸ್ವಾಮಿಯವರ ಮಾರ್ಗದರ್ಶನದಲ್ಲಿ ಕುವೆಂಪುರವರ ನಾಟಕ ಸಾಹಿತ್ಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದರು. ನಂತರ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿ, ಮೈಸೂರು ವಿ ವಿ ನಿಲಯದ ಸ್ನಾತಕೋತ್ತರ ಕೇಂದ್ರಗಳಾದ ಮಂಡ್ಯ ಹಾಗೂ ಹಾಸನದಲ್ಲಿ ಪ್ರಾಧ್ಯಪಕರಾಗಿ ಸೇವೆಸಲ್ಲಿಸಿದ್ದಾರೆ.
ಡಾ||ಮಳಲಿಯವರು ಪ್ರಾಧ್ಯಪಕರಾಗಿ, ಮುಖ್ಯ ಸಂಯೋಜಕರಾಗಿ, ಸಂಘಟಕರಾಗಿ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರವನ್ನು ಪ್ರಜ್ವಲಗೊಳಿಸಿದ್ದಾರೆ. ಈಗಾಗಲೇ ಮುವತ್ತೈದಕ್ಕೂ ಹೆಚ್ಚು ಕೃತಿಗಳನ್ನು ನೀಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಕಾವ್ಯ, ಕಥೆ, ನಾಟಕ, ವಿಮರ್ಶೆ, ಜಾನಪದ, ಪ್ರಬಂಧ, ಸಂಗ್ರಹ, ವಚನ ಸಾಹಿತ್ಯ ಹೀಗೆ ಹತ್ತಾರು ಪ್ರಕಾರಗಳಲ್ಲಿ ಆಳ-ನಿರಾಳತೆಯನ್ನು ಕಂಡುಂಡವರು, ಯಶಕಂಡವರು. ಕನ್ನಡ ಸಾಹಿತ್ಯದ ಅಪ್ರತಿಮ ವಾಗ್ಮಿಗಳು.
ಅಖಿಲ ಕರ್ನಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ತಿ.ರಾ.ಕೃ ರವರ ಪತ್ರಿಕಾ ಹೇಳಿಕೆ ನೋಡಿ , ತಟ್ಟನೇ ಫೋನಾಯಿಸಿ ಡಾ|| ಮಳಲಿಯವರಿಗೆ ಅಭಿನಂದನೆ ಸಲ್ಲಿಸಿದೆ. ಒಂದೆರಡು ದಿನಗಳ ನಂತರ ಶ್ರೀಯುತರ ಸಂದರ್ಶನ ಮಾಡಲೆಂದು ಕರೆಮಾಡಿದಾಗ ನಾಡೋಜ ಡಾ|| ದೇ.ಜ.ಗೌರವರ ಮನೆಯಲ್ಲಿರುವುದಾಗಿ ಅಲ್ಲಿಗೆ ಬರುವಂತೆ ಹೇಳಿದಾಗ ನಿಜಕ್ಕೂ ಹರ್ಷಗೊಂಡು ತೆರಳಿದೆ. ದೇ.ಜ.ಗೌ ವೃತ್ತದಲ್ಲಿಳಿದು ನೇರವಾಗಿ ಅವರ ಕುಟೀರಕ್ಕೆ ಪ್ರವೇಶಿಸಿದೆ. ಅಷ್ಟೊತ್ತಿಗೆ ಯಾವುದೋ ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದ ಅವರನ್ನು ನನ್ನ ಪ್ರವೇಶ ಮೊಟುಕುಗೊಳಿಸಿರಬೇಕು ! 97ರ ಹರೆಯದಲ್ಲೂ ಹಸನ್ಮುಖಿಯಾಗಿ ದೇ.ಜ.ಗೌ ಸ್ವಾಗತಿಸಿದುದ ಕಂಡು ಉಲ್ಲಾಸಗೊಂಡೆ ಹಾಗೆಯೇ ಕನ್ನಡ ಸಾಹಿತ್ಯದ ಈರ್ವ ದಿಗ್ಗಜರ ದರ್ಶನ ಮಾಡಿ ಪಾವನಗೊಂಡೆ, ನಂತರ ಆಧುನಿಕ ಸಾಹಿತ್ಯದ ಒಳ-ಹೊರಗಳ ಸ್ಥಿತ್ಯಂತರದ ಬಗ್ಗೆ ಸುಮಾರು ಒಂದು ಗಂಟೆಗಳ ಕಾಲ ಚರ್ಚಿಸಿದೆವು. ಅವರು ಹೆಚ್ಚಾಗಿ ವೈಚಾರಿಕತೆಯನ್ನೇ ಅಪ್ಪಿಕೊಂಡು ವಿಶ್ಲೇಷಿಸುತ್ತಾ ಸಾಗಿದರು.
ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಅವರ ವಚನ ವಿಭೂತಿ ಆಧುನಿಕ ವಚನ ಸಂಕಲನದ ಬಗ್ಗೆ ಓದುಗರು, ವಿಮರ್ಷಕರು ತೋರಿದ ಅನನ್ಯ ಪ್ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆರಂಭದಲ್ಲಿ ಪಂಪ, ಕುಮಾರವ್ಯಾಸ ಹಾಗೆಯೇ ಪ್ರಾಚೀನ ಸಾಹಿತ್ಯದ ಆಳವಾದ ಅಧ್ಯಯನ, ನಂತರ ಜನಸಾಮಾನ್ಯರ ದನಿಯಾದ ವಚನ ಸಾಹಿತ್ಯ ಹಾಗೆಯೇ ಆಧುನಿಕವಾಗಿ ಕುವೆಂಪುರವರ ವಿಶ್ವಮಾನವ ಸಾಹಿತ್ಯ ಇವರ ಪ್ರೇರಕ ಶಕ್ತಿಗಳು .
ಅವರೇ ಹೇಳುವಂತೆ “ವಚನ ಸಾಹಿತ್ಯ ಕೇವಲ ಭಕ್ತಿಗೆ ಸೀಮಿತವಾಗದೇ ಅದೊಂದು ಜಾತ್ಯಾತೀತ ಆಂದೋಲನವಾಯಿತು. ಅದು ಸಮಾಜದ ಎಲ್ಲಾ ವರ್ಗದ , ಎಲ್ಲಾ ಜನಾಂಗದ ಮಿಡಿತವಾಗಿತ್ತು. ಬಸವ, ಅಲ್ಲಮ, ಅಕ್ಕ ಮಹದೇವಿಯವರಂತಹ ಶರಣ ಬಂಧುಗಳು ಈ ಉತ್ಕ್ರಾಂತಿಗೆ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿದರು.
ವಚನ ಸಾಹಿತ್ಯ ನಿಜವಾದ ದೇಶೀಯ ಸಾಹಿತ್ಯ, ತಮಿಳು ನಾಡಿನ ಸಂಗಂ ಸಾಹಿತ್ಯವನ್ನು ಮೀರಿಸುವಂತದ್ದು, ಇದು ಕಾಯಕದಿಂದಲೇ ಬದುಕಿ ಬಾಳಿದ ಸ್ವಾಭಿಮಾನದ ಪ್ರತೀಕ. ಸರ್ವ ಸಮಾನತೆಯ ಸಾಮಾಜಿಕ ಆಂದೋಲನದ ಪ್ರತಿರೂಪ ”À.
ಬಹುಮಟ್ಟಿಗೆ ಸಾಂಸ್ಕøತಿಕತೆ ಮತ್ತು ವೈಚಾರಿಕತೆ ಸಂಲಗ್ನಗೊಂಡ ಸಾಹಿತ್ಯ, ಮೌಢ್ಯ ವಿರೋಧ ಭಾವನೆ, ಸ್ಪಷ್ಟವಾದ ಜಾತ್ಯಾತೀತ ನಿಲುವು ಇವರ ಪ್ರಮುಖ ಧೋರಣೆಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು.
ಪ್ರಾಚೀನ ವಚನ ಸಾಹಿತ್ಯ ಭಕ್ತಿ ಪ್ರಧಾನವಾದದ್ದು ಮತ್ತು ಆಧ್ಯಾತ್ಮಕತೆ ಸಂಯೋಗ, ಹಾಗೆಯೇ ಸಂಸ್ಕøತಿಯ ಜೊತೆಗೆ ವೈಚಾರಿಕ ನಿಲುವಾದರೆ, ಆಧುನಿಕ ವಚನ ಸಾಹಿತ್ಯ ವರ್ತಮಾನಗಳ ಆಗು ಹೋಗುಗಳ ಕುರಿತಾದದ್ದು, ಸಾಮಾಜಿಕ ಬದಲಾವಣೆಗೆ ಪ್ರಮುಖ ಅಂಶವಗಿದೆ ಎಂಬುದು ಇವರ ದೃಡ ನಿಲುವಾಗಿದೆ.
ಶ್ರೀಯುತರ ದೃಢ ಸಂಕಲ್ಪದ ನಿಲುವು, ಧೋರಣೆಗಳೇ ಅವರ ಮೌಲ್ಯಭರಿತ ಸಾಹಿತ್ಯಕ್ಕೆ ಹೊಳವುಗಳಾಗಿವೆ. ಮಳಲಿ ಗಿಡ್ಡಮ್ಮ, ಕೋಲು ಪದಗಳು, ಜಾನಪದ ವೈಧ್ಯ, ಜಾನಪದ ನಂಬಿಕೆಗಳು-ಜಾನಪದ ಕೃತಿಗಳು; ಕಡಲಕವಿತೆಗಳು, ಹೃದಯ ಗಂಗೆ, ಕರಾವು-ಕವನ ಸಂಕಲನಗಳು; ಯಮಧರ್ಮ, ಲಂಕೇಶ್ವರ-ನಾಟಕಗಳು; ಈಡು-ಕಥಾಸಂಕಲನ; ಕದಂಬ, ವಿಪಕ್ಷೆ-ವಿಮರ್ಶಾ ಕೃತಿಗಳು; ಕವಿಗಳು ಕಂಡ ಕುವೆಂಪು, ವಜ್ರದೀಪ್ತಿ-ಸಂಪಾದಿತ ಕೃತಿಗಳು; ಕುವೆಂಪುರವರ ನಾಟಕ ಸಮೀಕ್ಷೆ, ಚಿತ್ರಾಂಗದಾ ಸಮೀಕ್ಷೆ, ಚಂದ್ರಹಾಸ ನಾಟಕ ಸಮೀಕ್ಷೆ-ಸಂಶೋಧನಾ ಕೃತಿಗಳು; ಹಾಗೆಯೇ ವಚನ ವಿಭೂತಿ, ವಚನ ವರ್ತಮಾನ-ಆಧುನಿಕ ವಚನ ಸಂಕಲನಗಳು ಹೀಗೆ ಹಲವಾರು ಕೃತಿಗಳನ್ನು ಭುವನೇಶ್ವರಿ ಮಡಿಲಿಗೆ ಸಮರ್ಪಿಸಿದ್ದಾರೆ.
ಚೀನಾದ ಹಾಂಕಾಂಗ್ ನಲ್ಲಿ ನಡೆದ ಮೂರನೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,ಅಖಿಲ ಕರ್ನಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಕುಟ ಇವರನ್ನಲಂಕರಿಸಿರುವುದು ಔಚಿತ್ಯಪೂರ್ಣವಾದುದಾಗಿದೆ , ಹಾಗೂ ಇತ್ತೀಚೆಗೆ ಗಲ್ಫ್ ಕಂಟ್ರೀಸ್ನ ಅಬುದಾಭಿಯಲ್ಲಿ ನಡೆದ ವಿಶ್ವ ಸಾಹಿತ್ಯ ಸಮ್ಮೇಳನದ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ್ದು ಇವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ತಮ್ಮ ಪಾಂಡಿತ್ಯ ಪ್ರತಿಭೆಗಳಿಂದ ಸಮನ್ವಿತವಾದ ವಾಕ್ಪ್ರವಾಹದಿಂದ ನಾಡಿನ ಜನಮಾನಸದಲ್ಲಿ ನೆಲೆಯೂರಿದ್ದಾರೆ.
ಡಾ|| ಮಳಲಿಯವರ ಸಾಹಿತ್ಯಿಕ ಧೀಮಂತಿಕೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಹೊಯ್ಸಳ ರತ್ನ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಇವರ ಸಾಹಿತ್ಯ ಚಿಲುಮೆ ಇನ್ನೂ ಹೆಚ್ಚಿನ ಉದ್ಗ್ರಂಥಗಳಿಂದ ನಾಡಿನಾದ್ಯಾಂತ, ದೇಶದಾದ್ಯಂತ ವ್ಯಾಪಿಸಿ ಸಕಾರಾತ್ಮಕ ನೆಗಟ್ಟಿನಲ್ಲಿ ಪಸರಿಸಲೆಂದು ಆಶಿಸುತ್ತೇನೆ.
ವಿಮರ್ಶಾ ಕ್ಷೇತ್ರದ ಗಾರುಡಿಗ- ಕಿ.ರಂ.ನಾಗರಾಜ್
ತಮ್ಮ ಮಾತು ಮತ್ತು ಜ್ಞಾನವನ್ನು ಭೌದ್ಧಿಕ ವ್ಯಭಿಚಾರಕ್ಕೆ ಬಳಸದೆ ನೈತಿಕ ಕೇಂದ್ರಕ್ಕಾಗಿ ಬಳಸಿ, ಸಾಹಿತ್ಯವನ್ನು ಒಂದು ‘ಗರಡಿಮನೆ’ ಎಂದು ಭಾವಿಸಿ, ವಿಮರ್ಶಾ ಕ್ಷೇತ್ರವನ್ನು ತಪೋವನದಂತೆ ಮಾರ್ಪಡಿಸಿದ ಕೀರ್ತಿ ನಾಡು ಕಂಡ ಸರ್ವ ಶ್ರೇಷ್ಠವಿಮರ್ಶಕ ಕಿ.ರಂ.ನಾಗರಾಜ್ರವರಿಗೆ ಸಲ್ಲುತ್ತದೆ.
ಕನ್ನಡ ಸಾಹಿತ್ಯ ಮತ್ತು ವಿಮರ್ಶೆಗಳು ಮಠ ಪರಂಪರೆಗಳಂತೆ ತಮ್ಮದೇ ಸಾಂಸ್ಕøತಿಕ ಚೌಕಟ್ಟುಗಳನ್ನು ನಿರ್ಮಿಸಿಕೊಂಡು ಭ್ರಾಂತಿಯಲ್ಲಿ ತೇಲಾಡುವ ಸಂದರ್ಭದಲ್ಲಿ ಕಟ್ಟಳೆಗಳನ್ನು ಕಿತ್ತೊಗೆದು ಸಾರ್ವತ್ರಿಕ, ನೇರ, ದಿಟ್ಟತನದಿಂದ ವಿಮರ್ಶಿಸಿ ಸಾಹಿತ್ಯಕ್ಕೆ ನಿಜವಾದ ನ್ಯಾಯ ದೊರಕಿದ್ದು ಕಿ.ರಂ.ನಾಗರಾಜ್ರವರಿಂದ ಮಾತ್ರ ಎಂದರೆ ಅತಿಶಯೋಕ್ತಿಯಾಗಲಾರದು.
ಯಾರೊಂದಿಗೂ ವೈಯಕ್ತಿಕ ಕಾರಣಗಳಿಗೆ ಮನಸ್ತಾಪ ಮಾಡಿಕೊಳ್ಳದೆ ಸಾಹಿತ್ಯದ ಪ್ರಗತಿ, ಉತ್ಕøಷ್ಠತೆ, ಶ್ರೇಷ್ಠತೆ, ಗಟ್ಟಿತನದ ವಿಚಾರಗಳಿಗಾಗಿ ವಾದಿಸಿದ್ದಾರೆ, ತರ್ಕಿಸಿದ್ದಾರೆ, ವಿಶ್ಲೇಷಿಸಿದ್ದಾರೆ, ವಿಮರ್ಶಿಸಿದ್ದಾರೆ.
ನಾಡಿನಾದ್ಯಾಂತ ಸಹಸ್ರಾರು ವಿದ್ಯಾರ್ಥಿ, ಶಿಷ್ಯ ವೃಂದವನ್ನು ಹೊಂದಿದ್ದ ಕಿ.ರಂ.ನಾಗರಾಜ್ರವರು 1943 ಡಿಸೆಂಬರ್ 5 ರಂದು ಹಾಸನ ಜಿಲ್ಲೆಯ ‘ಕಿತ್ತಾನೆ’ ಗ್ರಾಮದಲ್ಲಿ ಜನಿಸಿದರು.
ಬಿ.ಎ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದ ಕಿ.ರಂ ಎಂ.ಎ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿದರು.
ಮುಂದೆ ಬೆಂಗಳೂರು ವಿ.ವಿಯಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಕಿ.ರಂ.ದ್ರುವತಾರೆಯಾಗಿ ಮಿನುಗಿದ್ದು ಮಾತ್ರ ವಿಮರ್ಶಾ ಕ್ಷೇತ್ರದಲ್ಲಿ. ಅದರಲ್ಲೂ ಇತ್ತೀಚೆಗೆ ಕಾವ್ಯಗಳ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕಾವ್ಯವೇ ಜ್ಞಾನವೆಂದರಿತು ವಿಶೇಷ ಮನ್ನಣೆ ನೀಡಿ ಕಾವ್ಯಕ್ಕೆ ಹೊಸ ಹೊಳಪನ್ನು ನೀಡಿದ ಕೀರ್ತಿ ಕಿ.ರಂ ಅವರಿಗೆ ಸಲ್ಲುತ್ತದೆ.
ಕನ್ನಡ ಸಾಹಿತ್ಯದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾಗಿದ್ದ ಕಿ.ರಂ ಅಪಾರ ಸಾಹಿತ್ಯ ಶಿಷ್ಯ ವೃಂದ ಹೊಂದಿದ್ದರು, ಹಲವಾರು ಸಾಹಿತಿಗಳನ್ನು ಮೂರ್ತಿಯಂತೆ ಕಟೆದು ಮೂರ್ತ ರೂಪಕ್ಕಿಳಿಸಿದ್ದಾರೆ.
ಕಿ.ರಂ ಕಾವ್ಯ ಪ್ರೀತಿಯ ಬಗ್ಗೆ, ಮಾತಿನಲ್ಲೇ ರನ್ನ, ಪಂಪ, ಬೇಂದ್ರೆಯವರನ್ನು ಪುನಃ ಸೃಷ್ಠಿಸುತ್ತಿದ್ದ ಅವರ ವೈಖರಿಯ ಬಗ್ಗೆ ತನ್ಮಯರಾಗಿ ನೆನೆಸುವ, ಹೇಳುವ, ಬರೆಯುವಂತಹ ಸಾವಿರಾರು ಸಾಹಿತಿಗಳನ್ನು ನಾಡಿಗೆ ಕೊಟ್ಟು ಹೋಗಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪರಸ್ಕøತ ಡಾ.ಯು.ಆರ್ ಅನಂತಮೂರ್ತಿ ಒಂದು ಕಡೆ ಕಿ.ರಂ ರವರನ್ನು ಕುರಿತು ಹೀಗೆ ಹೇಳಿದ್ದಾರೆ. “ರಾಜ್ಯದಲ್ಲಿ ಕನ್ನಡ ಇನ್ನೂ ಕಡ್ಡಾಯ ಮಾಧ್ಯಮವಾಗಿಲ್ಲ. ಜೊತೆಗೆ ಸರಕಾರಿ ಭಾಷೆಯೂ ಅಲ್ಲ. ಈ ರೀತಿ ಏನೂ ಇಲ್ಲದ ಸ್ಥಿತಿಯಲ್ಲಿ ಕನ್ನಡವೇ ಎಲ್ಲ ಎನ್ನುವಂತೆ ಮಾಡಿದವರು ಕಿ.ರಂ.ನಾಗರಾಜ್. ಅಂಥವರನ್ನು ಜೀವಂತವಾಗಿಟ್ಟುಕೊಳ್ಳವುದು ಎಂದರೆ ಕನ್ನಡವನ್ನು ಜೀವಂತವಾಗಿಟ್ಟುಕೊಂಡಂತೆ.”
ಹೌದು ಕಿ.ರಂ ಎಂದರೆ ಕನ್ನಡ, ಕನ್ನಡ ಎಂದರೆ ಕಿ.ರಂ ಎನ್ನುವಷ್ಟು ನಾಡಿನ ಜನಮಾನಸದಲ್ಲಿ ಬೆರೆತು ಹೋಗಿದ್ದರು. ಕನ್ನಡ ಸಾಹಿತ್ಯವನ್ನೇ ಉಸಿರಾಗಿಸಿಕೊಂಡಿದ್ದ ಕಿ.ರಂ ಸಾಹಿತ್ಯದ ಶ್ರೇಷ್ಠತೆಗಾಗಿ ಹಗಲಿರುಳೂ ಶ್ರಮಿಸಿದ ಉತ್ಸಾಹಿಗಳು.
ನಾಡು ಕಂಡ ಸರ್ವಶ್ರೇಷ್ಠ ವಿಮರ್ಶಕ, ಕವಿ ಕಿ.ರಂ ನಾಗರಾಜ್. ಇವರ ಅನುಪಮ ಸೇವೆ ಮನಗಂಡ ಸರ್ಕಾರ ಹಾಗೂ ಹಲವಾರು ಸಾಮಾಜಿಕ ಸಾಹಿತ್ಯಿಕ ಸಂಘ ಸಂಸ್ಥೆಗಳು ಸಾಕಷ್ಟು ಗೌರವ ಪುರಸ್ಕಾರಗಳನ್ನು ನೀಡಿ ಅಭಿನಂದಿಸಿವೆ. ಅವುಗಳಲ್ಲಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಎಸ್.ವಿ ಪರಮೇಶ್ವರಭಟ್ಟ ಪ್ರಶಸ್ತಿ, ಡಾ.ಜಿ.ಎಸ್ ಶಿವರುದ್ರಪ್ಪ ಪ್ರಶಸ್ತಿ, ಡಾ.ಎಲ್ ಬಸವರಾಜು ಪ್ರಶಸ್ತಿ, ಕರ್ನಾಟಕ ಅಕಾಡೆಮಿಯ ಪೆಲೋಶಿಪ್; ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಪ್ರಮುಖವಾದವುಗಳಾಗಿವೆ.
ಇಂತಹ ಮಹಾನ್ ಕೀರ್ತಿಕಲಶ 2010 ಆಗಸ್ಟ್ 7 ರಂದು ಹೃದಯಾಘಾತದಿಂದ ಇನ್ನಿಲ್ಲವಾಯಿತು. ಆದರೆ ಇವರು ಹಾಕಿ ಕೊಟ್ಟ ಸಾಹಿತ್ಯ ಮತ್ತು ಸಾಂಸ್ಕøತಿಕ ನೆಲೆಗಟ್ಟುಗಳು ನಮ್ಮೆಲ್ಲರಿಗೂ ದೀವಿಗೆಯಾಗಿ ಸದಾ ಜೀವಂತವಾಗಿವೆ.
ಕನ್ನಡ ಮತ್ತು ಉರ್ದು ಸಾಹಿತ್ಯದ ಸೇತುಬಂಧ - ಪ್ರೊ.ಸೈಯದ್ ಶಹಬುದ್ದೀನ್
ಸಾಹಿತ್ಯದ ಬೆಳವಣಿಗೆಯಲ್ಲಿ ರಚನಾತ್ಮಕತೆ ಎಷ್ಟು ಮುಖ್ಯವೋ ಭಾಷಾನುವಾದವೂ ಅಷ್ಟೇ ಮುಖ್ಯವಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಕನ್ನಡದಿಂದ ಆಂಗ್ಲಭಾಷೆಗೆ, ಆಂಗ್ಲಭಾಷೆಯಿಂದ ಇತರೆ ಭಾಷೆಗೆ ಭಾಷಾಂತರವಾಗುದು ಅಧಿಕ, ಆದರೆ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳು ಉರ್ದು ಅಥವಾ ಹಿಂದಿ ಭಾಷೆಗೆ ಭಾಷಾಂತರವಾಗಿರುವುದು ವಿರಳ. ಈ ನಿಟಿನಲ್ಲಿ ಪ್ರೊ.ಸೈಯದ್ ಶಹಬುದ್ದೀನ್ ಅವರು ಕನ್ನಡದ ಶ್ರೇಷ್ಠ ಕೃತಿಗಳನ್ನು ಉರ್ದು ಭಾಷೆಗೆ ಅನುವಾದಿಸಿ ಮುಸ್ಲಿಂ ಓದುಗರನ್ನೂ ಕನ್ನಡದ ಕೃತಿಗಳನ್ನು ಓದುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಶ್ರೀಯುತ ಸೈಹದ್ ಶಹಬುದ್ದೀನ್ ಅವರು 1951 ಏಪ್ರಿಲ್ 16 ರಂದು ಹಾಸನ ಜಿಲ್ಲೆಯ ಆಲೂರು ಪಟ್ಟಣದ ಶ್ರೀ ಸೈಹದ್ ಮಹಮೂದ್ ಹಾಗೂ ಶ್ರೀಮತಿಸೈದಾನಬೀ ದಂಪತಿಗಳ ದ್ವಿತೀಯ ಪುತ್ರರಾಗಿ ಜನಿಸಿದರು.
ಇವರ ತಂದೆ 1956 ರಲ್ಲಿ ಆಲೂರು ಮುನಿಸಿಪಾಲಿಟಿಯಉಪಾಧ್ಯಕ್ಷರಾಗಿದ್ದರು. ಶ್ರೀಯುತ ಶಹಬುದ್ದೀನ್ ಅವರು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಆಲೂರಿನಲ್ಲೇ ಮುಗಿಸಿದರು. ಮುಂದಿನ ವಿದ್ಯಾಭ್ಯಾಸವನ್ನು ಹಾಸನದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದರು. ನಂತರ 1979 ರಲ್ಲಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಉರ್ದುವಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ತರುವಾಯ ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ಉರ್ದು ಉಪನ್ಯಾಸಕರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು.
ಆದರೆ ಇವರು ಶಕ್ಷಣದ ಯಾವ ಹಂತದಲ್ಲಿಯೂ ಕನ್ನಡವನ್ನು ಕಲಿತವರಲ್ಲ ! ಏಕೆಂದರೆ ಅವರ ಮಾತೃ ಭಾಷೆ ಉರ್ದು. ಕನ್ನಡದ ಕಟ್ಟಾಳು ಡಾ|| ಹಾ. ಮಾ. ನಾಯಕ ಮುಂತಾದವರ ಮಾರ್ಗದರ್ಶನದಲ್ಲಿ ಸ್ವಯಂ ಪ್ರೇರಿತರಾಗಿ ಉಪನ್ಯಾಸಕರಾದ ಮೇಲೆ ಕನ್ನಡ ವರ್ಣಮಾಲೆಯಿಂದ ಅಕ್ಷರ ಕಲಿತು ಇಂದು ಯಾವ ಕನ್ನಡ ಸಾಹಿತಿಗಿಂತಲೂ ಕಡಿಮೆ ಇಲ್ಲದಂತೆ ಪ್ರಬುದ್ಧರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಹುಟ್ಟಿನಿಂದ ಕನ್ನಡ ಮಾತನಾಡುತ್ತಿದ್ದರಾದರೂ ಓದಲು, ಬರೆಯಲು ಕಲಿತದ್ದು ಮಾತ್ರ ಹರೆಯದಲ್ಲಿ !
ಮೊದಮೊದಲು ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಾಂಗರ್, ಗೊರೂರು ರಾಮಸ್ವಾಮಿ ಅಯ್ಯಾಂಗರ್, ಎಸ್.ಎಲ್.ಭೈರಪ್ಪ, ಅ.ನ.ಕೃ, ತ.ರಾ.ಸು ಮುಂತಾದ ಕನ್ನಡದ ಶ್ರೇಷ್ಠ ಸಾಹಿತ್ಯ ದಿಗ್ಗಜರ ಕೃತಿಗಳನ್ನು ಅಧ್ಯಯನ ಮಾಡಿದ ಇವರು ನಂತರ ಇಂತಹ ಅಮೂಲ್ಯ ಸಾಹಿತ್ಯವನ್ನು ಏಕೆ ಉರ್ದು ಭಾಷೆಗೆ ಭಾಷಾಂತರ ಮಾಡಿ ಉರ್ದು ಓದುಗರಿಗೂ ಈ ಸವಿಪಾಕವನ್ನು ಉಣಬಡಿಸಬಾರದು ಎಂಬ ಆಲೋಚನೆ ಮನೆ ಮಾಡಿತು. ಅದರ ಫಲವಾಗಿ ಡಾ|| ಎಸ್.ಎಲ್.ಭೈರಪ್ಪನವರ ‘ವಂಶ ವೃಕ್ಷ’ ಕಾದಂಬರಿಯನ್ನು ‘ಶಜರ-ಎ-ನಸಬ್’ ಎಂಬ ಹೆಸರಿನಲ್ಲಿ ಉರ್ದು ಭಾಷೆಗೆ ಭಾಷಾಂತರಿಸಿದರು. ಈ ಕೃತಿಯು ಗುಲ್ಬರ್ಗಾ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಉರ್ದು ವಿಭಾಗದ ಪಠ್ಯವಾಗಯಿತು. ಬಹುಶಃ ಈ ಕೃತಿಯು ಶಹಬುದ್ದೀನ್ ಅವರಿಗೆ ಉತ್ತಮ ಹೆಸರನ್ನು ತಂದು ಕೊಟ್ಟಿತೆನ್ನಬಹುದು.
ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ವಿಚಾರಗಳಿಗೆ ಮಾರು ಹೋಗಿದ್ದ ಇವರು ಹಲವಾರು ಬಾರಿ ಕುವೆಂಪು ಅವರನ್ನು ಸಂದರ್ಶಿಸಿ, ಸಾಹಿತ್ಯಿಕವಾಗಿ ಚರ್ಚಿಸಿ ವೈಶಾಲ್ಯತೆಯನ್ನು ಪಡೆದವರು. ಅವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ಬರವಣಿಗೆಯ ಮೂಲಕ ಹಾಗೂ ಭಾಷಣಗಳ ಮೂಲಕ ಪಲ್ಲವಿಸಿದ್ದಾರೆ. ಮುಂದೆ ‘ಶಾಯಿರ್-ಎ-ಅಜಮ್ ಕುವೆಂಪು’ ಎಂಬ ಕುವೆಂಪುರವರ ಜೀವನ ಚರಿತ್ರೆಯನ್ನು ಉರ್ದುವಿನಲ್ಲಿ ಬರೆದಿದ್ದಾರೆ. ಆ ಮೂಲಕ ಎಲ್ಲಾ ಇಸ್ಲಾಂ ಬಂಧುಗಳಿಗೆ ಅವರ ಮಾತೃಭಾಷೆಯಲ್ಲಿ ಕುವೆಂಪು ಬಗ್ಗೆ ಅರಿಯಲು ದಾರಿಯಾಗಿದ್ದಾರೆ.
ಅಲ್ಲದೆ ಶರಣರ ಮುನ್ನೂರು ವಚನಗಳನ್ನು ಕನ್ನಡದಿಂದ ಉರ್ದುವಿಗೆ ಅನುವಾದಿಸಿ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸಂಸ್ಕøತಿಕವಾಗಿ ವಿಶ್ವಮಾನವ ಸಂದೇಶ ಬೀರಿ ಆ ಮೂಲಕ ಸಮಸಮಾಜದ ಕನಸು ಕಂಡ ಅಮೂಲ್ಯ ಸಾಹಿತ್ಯವನ್ನು ಅನ್ಯ ಭಾಷಿಗರಿಗೂ ಉಣಬಡಿಸಿದ ಕೀರ್ತಿ ಶಹಬುದ್ದೀನ್ ಅವರದು ಎಂದರೆ ಅತಿಶಯೋಕ್ತಿಯಾಗಲಾರದು.
‘ಇಸ್ಲಾಂ ಅಂಡ್ ಸೊಸೈಟಿ’ ಎಂಬ ಆಂಗ್ಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಉರ್ದುವಿನ ನೂರು ವಚನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅಲ್ಲದೆ ಕುವೆಂಪುರವರ ‘ನನ್ನ ದೇವರು ಮತ್ತು ಇತರ ಕಥೆಗಳು’ ಕೃತಿಯನ್ನು ಉರ್ದುವಿಗೆ ಅನುವಾದಿಸಿದ್ದಾರೆ. ಹೀಗೆ ಕನ್ನಡದಿಂದ ಉರ್ದುವಿಗೆ, ಉರ್ದುವಿನಿಂದ ಕನ್ನಡಕ್ಕೆ, ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡುದರ ಮೂಲಕ ಬಹುಭಾಷಾ ಪಂಡಿತರಾಗಿಯೂ ನಮ್ಮ ಮುಂದೆ ನಿಂತಿದ್ದಾರೆ.
ಆಗಾಗ ಕನ್ನಡದ ಶ್ರೇಷ್ಠ ಲೇಖಕರ ಕಥೆಗಳನ್ನು ಓದಿದ ಇವರು ಅಷ್ಟಕ್ಕೆ ಸುಮ್ಮನಾಗದೆ ಅವುಗಳನ್ನು ಉರ್ದುವಿಗೆ ಭಾಷಾಂತರಿಸಿದ್ದಾರೆ. ಅವುಗಳಲ್ಲಿ ಬಿ.ಟಿ.ಲಲಿತ ನಾಯಕ್, ಅಬ್ದುಲ್ ಮಜೀದ್ ಖಾನ್, ಪೂರ್ಣಚಂದ್ರ ತೇಜಸ್ವಿ ಮತ್ತು ಬಾನುಮುಸ್ತಾಕ್ ಕಥೆಗಳು ಪ್ರಮುಖವಾಗಿವೆ.
ಉರ್ದು ಹಾಗೂ ಕನ್ನಡ ಭಾಷಾಭಿಮಾನಿಗಳಿಗಾಗಿ ಈ ಎರಡೂ ಭಾಷೆಗೂ ಸಾಮರಸ್ಯ ಬೆಳೆಸುವ ನಿಟ್ಟಿನಲ್ಲಿ ಒಂದು ಸಾವಿರಕ್ಕೂ ಉರ್ದು ಹಾಗೂ ಕನ್ನಡ ಗಾದೆ ಮತ್ತು ನುಡಿಗಟ್ಟುಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಹೆಸರಾಂತ ವೈಚಾರಿಕ ಹಾಗೂ ಪ್ರಗತಿಪರ ಚಿಂತಕರಾದ ಜ.ಹೊ.ನಾ ರವರ ‘ಅದಮ್ಯ’ ಕೃತಿಯನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಡಾ|| ರಾಜೇಗೌಡ ಹೊಸಳ್ಳಿಯವರ ‘ಮಹಾರಾಯನ ದುರ್ಗ’ ಎಂಬ ಆಲೂರು ತಾಲ್ಲೂಕಿನ ಖ್ಯಾತ ಜಾನಪದ ಕೃತಿಯ ಕಥೆಯನ್ನಾಧರಿಸಿದ ನಾಟಕವನ್ನು ರಚಿಸಿದ್ದಾರೆ.
ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ಹೊರತರುವ ‘ಅಧ್ಯಯನ’ ಸಂಚಿಕೆಯಲ್ಲಿ ‘ಅನುವಾದ ನನ್ನ ಅನುಭವ’ ಮತ್ತು ‘ಉರ್ದುವಿನಲ್ಲಿ ಕನ್ನಡ ಸಾಹಿತ್ಯ’ ಎಂಬ ಎರಡು ಅಮೂಲ್ಯ ಲೇಖನಗಳು ಪ್ರಕಟವಾಗಿವೆ.
ಇವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿದ ಆಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತಲ್ಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವುದರ ಮೂಲಕ ಪ್ರೊ.ಸೈಯದ್ ಶಹಾಬುದ್ದೀನ್ ಅವರಿಗೆ ಗೌರವ ಸಲ್ಲಿಸಿತು. ಪ್ರಸ್ತುತ ನಿವೃತ್ತಿ ಜೀವನ ನಡೆಸುತ್ತಿದ್ದರೂ ಪೂರ್ನ ಸಮಯವನ್ನು ಸಾಹಿತ್ಯಕ್ಕಾಗಿಯೇ ಮುಡಿಪಾಗಿಟ್ಟಿದ್ದಾರೆ. ಹಾಸನದ ಷರೀಫ್ ಕಾಲೋನಿಯಲ್ಲಿ ನೆಲೆಯಾಗಿರುವ ಇವರು ಸಾಹಿತ್ಯಿಕವಾಗಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ನಮ್ಮೆಲ್ಲರಿಗೂ ಮಾದರಿಯಾಗಿದೆ. ಸರಳ ನಡೆ-ನುಡಿಯ ಇವರು ಸದಾ ಹಸನ್ಮುಖಿ. ಸದಾ ಸಾಮಾಜಿಕ ಭಾಂಧವ್ಯ ಚೆನ್ನಾಗಿರಬೇಕು, ಎಲ್ಲರಲ್ಲೂ ವಿಶ್ವ ಮಾನವೀಯ ಮೌಲ್ಯಗಳು ಮನೆ ಮಾಡಬೇಕು ಎಂಬ ಮನೋತುಡಿತವನ್ನು ಹೊಂದಿದ ಶಹಾಬುದ್ದೀನ್ ಸಮಾಜಕ್ಕೆ ಒಡ್ಡಿಕೊಂಡ ಧೀಮಂತ ಚಿಂತಕರೆಂದರೆ ಅತಿಶಯೋಕ್ತಿಯಾಗಲಾರದು.
ಕವಿ, ವಿಮರ್ಶಕ, ಸಂಶೋಧಕ, ಜಾನಪದ ವಿದ್ವಾಂಸ – ಕುಮಾರಚಲ್ಯ
ಕನ್ನಡ ಕಾವ್ಯ, ವಿಮರ್ಶೆ, ಜಾನಪದ ಸಂಗ್ರಹ ಹಾಗೂ ಸಂಪಾದನಾ ಕ್ಷೇತ್ರದಲ್ಲಿ ಕಳೆದ ಮೂರುವರೆ ದಶಕಗಳಿಂದ ದುಡಿಯುತ್ತಿರುವ ಕುಮಾರ ಚಲ್ಯರವರು ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡುವುದರ ಮೂಲಕ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ.
ಜನನ ಃ ಕುಮಾರಚಲ್ಯ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧಿ ಪಡೆದ ಡಾ.ಸಿ.ಎಸ್.ಶಿವಕುಮಾರಸ್ವಾಮಿಯವರು ಕ್ರಿ.ಶ.1954 ರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಚಲ್ಯ ಗ್ರಾಮದ ಸಿ.ಎನ್.ಶಿವಬಸಯ್ಯ ಮತ್ತು ಶ್ರೀಮತಿ ಮಹದೇವಮ್ಮ ದಂಪತಿಗಳ ಉದರದಲ್ಲಿ ಜನಿಸಿದರು.
ಶಿಕ್ಷಣ ಃ ಶಿವಕುಮಾರಸ್ವಾಮಿಯವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಚಲ್ಯದಲ್ಲಿಯೇ ಪಡೆಯುತ್ತಾರೆ. ಪ್ರೌಢ ಶಾಲಾ ಶಿಕ್ಷಣವನ್ನು ಮೈಸೂರಿನ ಮರಿಮಲ್ಲಪ್ಪ ಹಾಗೂ ಜೆ.ಎಸ್.ಎಸ್ ಪ್ರೌಢ ಶಾಲೆಯಲ್ಲಿ ಪಡೆದು ನಂತರ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಡೆಯುತ್ತಾರೆ.
ಮಾನಸ ಗಂಗೋತ್ರಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಶ್ರೀ ತಿ.ನಂ.ಶ್ರೀಕಂಠಯ್ಯ ಚಿನ್ನದ ಪದಕ, ಪ್ರೊ.ಟಿ.ಎಸ್.ವೆಂಕಣ್ಣಯ್ಯ ಚಿನ್ನದ ಪದಕ, ಡಾ.ಮಾಸ್ತಿ ವೆಂಕಟೇಶ್ ಅಯ್ಯಾಂಗರ್ ಚಿನ್ನದ ಪದಕ, ಶ್ರೀ ಬಿ.ಎಸ್.ತಮ್ಮಯ್ಯ ಚಿನ್ನದ ಪದಕ, ಶ್ರೀ ಕೇ.ನೀ.ಸಿದ್ದಪ್ಪ ಚಿನ್ನದ ಪದಕ, ಶ್ರೀಮತಿ ನರಸಮ್ಮ ನಾರಾಯಣಶಾಸ್ತ್ರಿ ಚಿನ್ನದ ಪದಕ ಹೀಗೆ ಆರು ಚಿನ್ನದ ಪದಕ ಹಾಗೂ ಮಹಾವಿದ್ವಾನ್ ಅಂಬಳಿ ರಾಮಕೃಷ್ಣಶಾಸ್ತ್ರಿ ಪಾರಿತೋಷಕ, ಪಂಡಿತ ತಿರುಮಲ್ಲೂರು ಶ್ರೀನಿವಾಸರಾವ್ಚಾರ್ ಪಾರಿತೋಷಕ ಹೀಗೆ ಎರಡು ಪಾರಿತೋಷಕ ಪಡೆಯುವುದರೊಂದಿಗೆ ಪ್ರಥಮ ರ್ಯಾಂಕಿನಲ್ಲಿ ತೇರ್ಗಡೆ ಹೊಂದಿದರು.
1994 ರಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಸಲ್ಲಿಸಿದ ‘ದೇವುಡು ಅವರ ಸೃಜನಶೀಲ ಸಾಹಿತ್ಯ’ ಎಂಬ ವಿಷಯದಡಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ದೊರೆತಿದೆ.
ವೃತ್ತಿ ಃ 1978 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಡಿಯಲ್ಲಿದ್ದ ಮಂಗಳೂರು ಸ್ನಾತಕೋತ್ತರ ಕೇಂದ್ರಕ್ಕೆ ಉಪನ್ಯಾಸಕರಾಗಿ ನಿಯುಕ್ತಿಗೊಳ್ಳುವುದರ ಮೂಲಕ ವೃತ್ತಿ ಜೀವನಕ್ಕೆ ಕಾಲಿಟ್ಟರು. 1978 ರಿಂದ 1980 ರ ವರೆಗೆ ಇಲ್ಲಿ ಕರ್ತವ್ಯ ನಿರ್ವಹಿಸಿದ ಕುಮಾರಚಲ್ಯರವರು 1980ರಲ್ಲಿ ಮೈಸೂರು ವಿವಿ ಅಡಿಯಲ್ಲಿಯೇ ನಡೆಯುತ್ತಿದ್ದ ಶಿವಮೊಗ್ಗ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗವಾದರು.
ಕುವೆಂಪು ವಿಶ್ವ ವಿದ್ಯಾನಿಲಯ ಪ್ರತ್ಯೇಕಾದ ನಂತರ ಕನ್ನಡ ಭಾರತಿ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಪ್ರಾದ್ಯಾಪಕರಾಗಿ, ನಿರ್ದೇಶಕರಾಗಿ ಕಾರ್ಯ ಮಾಡಿದ್ದಾರೆ.
1996 ರಿಂದ 1999 ರ ವರೆಗೆ ಪ್ರಸಾರಾಂಗದ ಸಹ ನಿರ್ದೇಶಕರಾಗಿ, 1997 ರಿಂದ 1998 ರ ವರೆಗೆ ಕುವೆಂಪು ವಿಶ್ವ ವಿದ್ಯಾನಿಲಯದ ಪ್ರಥಮ ಸಂಪರ್ಕಾಧಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 1999 ರಲ್ಲಿ ವಾತಾ ಪತ್ರ ಸಲಹಾ ಮಂಡಳಿಯ ಸದಸ್ಯರಾಗಿ, 2001 ರಿಂದ 2002 ಹಾಗೂ 2008 ರಿಂದ ಪ್ರಸ್ತುತದವರೆಗೂ ಕನ್ನಡ ಭಾರತಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2006 ರಿಂದ 2009 ಪ್ರಸಾರಂಗದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2002 ರಿಂದ 2004 ಹಾಗೂ 2008 ರಿಂದ ಪ್ರಸ್ತುತದವರೆಗೂ ಕನ್ನಡ ಕಂಪ್ಯೂಟರ್ ಕೇಂದ್ರದ ಸಂಚಾಲಕರಾಗಿ ಕರ್ತವ್ಯ ಮಾಡುತ್ತಿದ್ದಾರೆ.
ಮಾರ್ಗದರ್ಶಕರಾಗಿ ಕುಮಾರಚಲ್ಯ ಃ ಇವರು ಉತ್ತಮ ಬೋಧನೆಯ ಜೊತೆಗೆ ವಿದ್ಯಾರ್ಥಿಗಳ ಅಚ್ಚು-ಮೆಚ್ಚಿನ ಮಾರ್ಗದರ್ಶಕರೂ ಹೌದು. ಇವರ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೆ 10 ಮಂದಿ ಡಾಕ್ಟರೇಟ್ ಪಡೆದಿದ್ದು, 4 ಮಂದಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಪ್ರಸ್ತುತ 07 ಅಭ್ಯಾರ್ಥಿಗಳು ಪಿ.ಎಚ್.ಡಿ ಗಾಗಿ ಸಂಶೋಧನೆ ಮಾಡುತ್ತಿದ್ದಾರೆ.
ಸಾಹಿತ್ಯ ಕ್ಷೇತ್ರ ಃ ಆಧುನಿಕ ಕನ್ನಡ ಸಾಹಿತ್ಯ, ಭಾಷಾ ವಿಜ್ಞಾನ, ಛಂದಸ್ಸು, ಜಾನಪದ, ಸಂಶೋಧನೆ, ಸಂಫಾದನೆ ಇವರ ಕಾರ್ಯ ಸಾಧನೆಯ ಸಾಹಿತ್ಯ ಪ್ರಕಾರಗಳು.
ಜೀವನ ಚರಿತ್ರೆ ಃ ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿ- 1979, ದೇವುಡು-2001.
ವಿಮರ್ಶೆ ಃ ಸಂಗತ-1984, ಕುವೆಂಪು ಸಾಹಿತ್ಯಲ್ಲಿ ವೈಚಾರಿಕ ನೆಲೆಗಳು-1998, ವಚನಕಾರರ ಜೀವನ ದೃಷ್ಠಿ-2001, ಅಭಿಜ್ಞಾನ-2009, ಕಾಲಮಾನ-2004.
ಕಾವ್ಯ ಃ ನವಾಬ-1995.
ಸಂಪಾದನೆ ಃ ದೇವುಡು-1994, ಬಸವಪ್ಪ ಶಾಸ್ತ್ರಿ-1994.
ಇತರರೊಡನೆ ಸಂಪಾದನೆ ಃ ಬಂಡಾಯ ಸಾಹಿತ್ಯ ಃ ಹತ್ತು ವರ್ಷ-1990.
ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತರು-2001.
ಜಾನಪದ ಕ್ಷೇತ್ರ ಃ ಕಾವ್ಯ, ವೈಚಾರಿಕ ಬರಹ, ಸಂಪಾದನೆಗಳಲ್ಲದೆ ಕುಮಾರಚಲ್ಯರವರು ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಸಂಪಾದನೆ ಃ ಕರ್ನಾಟಕ ಜಾತ್ರೆಗಳು-1998, ಜನಪದ ಸಾಹಿತ್ಯ-2003, ಪ್ರಾದೇಶಿಕ ಜಾನಪದ-2004.
ಸ್ವತಂತ್ರ್ಯ ಕೃತಿಗಳು ಃ ಕಿನ್ನರಿ ಜೋಗಿಗಳು-1990, ದೇವುಡು-1997, ಬೇರು ತೋರಿದ ಹಾದಿ-2003, ಹಿಂದಣ ಹೆಜ್ಜೆಯನರಿಯದೆ(ಸಂಶೋಧನಾ ಕೃತಿ)
ಅಚ್ಚಿನಲ್ಲಿ ಃ ಗುಲಾಭಿ ಮತ್ತು ಪಾರಿವಾಳ(ಕವನ ಸಂಕಲನ), ನಿಚ್ಛಂ ಪೊಸತು(ವಿಮರ್ಶೆ)
ಸಾಹಿತ್ಯ ಸಮಾರಂಭಗಳಲ್ಲಿ ಃ ದಸರಾ ಕವಿಗೋಷ್ಠಿ-1995, 65 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-1996 ಹಾಸನ, 2ನೆಯ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು-2001 ಭದ್ರಾವತಿ, 71 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-2003 ಮೂಡಬಿದರೆ, 73 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-2006 ಶಿವಮೊಗ್ಗ ಇವುಗಳಲ್ಲದೆ ಕರ್ನಾಟಕ ವಿಶ್ವ ವಿದ್ಯಾನಿಲಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸಭೆ, ಸಮಾರಂಭಗಳಲ್ಲಿ ಕಾವ್ಯ ವಾಚನ, ವಿಚಾರ ಮಂಡನೆ, ಉಪನ್ಯಾಸ, ಪ್ರಬಂಧ ಮಂಡನೆಗಳನ್ನು ಮಾಡಿದ್ದಾರೆ.
ನಿರ್ದೇಶಕರಾಗಿ ಹಾಗೂ ಸದಸ್ಯರಾಗಿ ಃ ಕರಪಾಲಮೇಳ, ವೀರಗಾಸೆ, ಕೋಲಾಟ ಮುಂತಾದ ಜಾನಪದ ಪ್ರಕಾರಳನ್ನು ನೃತ್ಯ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಡಿ.ಎಸ್.ಇ.ಆರ್.ಟಿ ಯ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರು, ಬೆಂಗಳೂರು, ಮಂಗಳೂರು, ಗುಲ್ಬರ್ಗಾ, ಕರ್ನಾಟಕ, ಮದ್ರಾಸ್, ಕೇರಳ ಮುಂತಾದ ವಿಶ್ವ ವಿದ್ಯಾನಿಲಯಗಳ ಪರೀಕ್ಷಾ ಮಂಡಳಿ ಹಾಗೂ ಅಧ್ಯಯನ ಮಂಡಳಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕುವೆಂಪು ವಿಶ್ವ ವಿದ್ಯಾನಿಲಯದ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ವಿಶ್ವ ವಿದ್ಯಾಲಯ ಮಟ್ಟಗಳಲ್ಲಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ 500 ಕ್ಕೂ ಹೆಚ್ಚು ಉಪನ್ಯಾಸ ಹಾಗೂ ಪ್ರಬಂಧ ಮಂಡನೆ ಮಾಡಿದ್ದಾರೆ.
ಸಾಹಿತ್ಯ ವಿಶ್ಲೇಷಣೆ ಃ ಇವರ ಸಾಹಿತ್ಯ ಕುರಿತು ನಾಡಿನ ಅನೇಕ ವಿದ್ವಾಂಸರು, ಪತ್ರಿಕೆಗಳು ಮೆಚ್ಚುಗೆ ವ್ಯಕ್ತ ಪಡಿಸಿವೆ.
1980, ಜುಲೈ-27 ರಲ್ಲಿ ಕನ್ನಡ ಪ್ರಭ ಪತ್ರಿಕೆಯು ಇವರ ಅಭಿನವ ಕಾಳೀದಾಸ ಬಸವಪ್ಪ ಶಾಸ್ತ್ರಿ ಕೃತಿ ಕುರಿತು ಈ ರೀತಿ ಉಲ್ಲೇಖಿಸಿದೆ “ ಸಿ.ಎಸ್.ಶಿವಕುಮಾರ ಸ್ವಾಮಿಯವರು ಬರೆದ ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿಗಳ ಜೀವನ ಸರ್ವಾಂಗ ಸುಂದರವಾಗಿದೆ. ಜೀವನ ಚರಿತ್ರೆಯಲ್ಲಿ ಇರಬೇಕಾದ ಎಲ್ಲಾ ಅಂಶಗಳು ಇಲ್ಲಿ ಸೇರಿವೆ”.
1996 ರಲ್ಲಿ ಲಂಕೇಶ ಪತ್ರಿಕೆಯು ಇವರ ನವಾಬ ಕವನ ಸಂಕಲನ ಕುರಿತು ಈ ರೀತಿ ಉಲ್ಲೇಖಿಸಿದೆ “ ಪರ್ಯಟನ, ಶ್ವಾನ ಸಂಹಿತೆ, ನಿದ್ರೆಗೂ ಬೇಕು ಸ್ಫೂರ್ತಿ ಮೊದಲಾದ ಹೆಚ್ಚು ಫೋಸ್ ಇಲ್ಲದ ಕವಿತೆಗಳೇ ಚಲ್ಯರ ಮುಖ್ಯ ಕವಿತೆಗಳೆನ್ನಬಹುದು”.
1996 ರಲ್ಲಿಯೇ ಇದೇ ಕವನ ಸಂಕಲನ ಕುರಿತು ಪ್ರಜಾವಾಣಿ ಪತ್ರಿಕೆಯು ಈ ರೀತಿ ಉಲ್ಲೇಖಿಸಿದೆ “ ಅನ್ಯೋಕ್ತಿಯಲ್ಲಿ ಮನತಟ್ಟುವ ಶ್ವಾನ ಸಂಹಿತೆ ಇಂದಿನ ವ್ಯಕ್ತಿಹೀನ ಬದುಕಿಗೆ ಕನ್ನಡಿ ಹಿಡಿದಿದೆ. ಗಾಢವಾಗಿ ತಟ್ಟುವ ನಾವು ಮತ್ತು ಹೃದಯ, ಪರಿಸರ, ಸಲಹೆ, ನವಾಬ ಮುಂತಾದ ಕವನಗಳು ಮತ್ತೆ ಮತ್ತೆ ಓದಲು ಹಚ್ಚುತ್ತವೆ. ಕುಮಾರಚಲ್ಯರು ಸಂವೇದನಾಶೀಲ ಪ್ರಬುದ್ಧ ಕವಿ ಎಂಬುದನ್ನು ಮೊದಲ ಸಂಕಲನದಲ್ಲೇ ಸಾಬೀತುಪಡಿಸಿ ಭರವಸೆ ಮೂಡಿಸಿದ್ದಾರೆ”.
2006 ಆಗಸ್ಟ್-8 ರಲ್ಲಿ ಆಂದೋಲನ ಪತ್ರಿಕೆಯು ಲೇಖನ ಸಂಗ್ರಹ ಕುರಿತು ಈ ರೀತಿ ಉಲ್ಲೇಖಿಸಿದೆ “ ಕುಮಾರಚಲ್ಯ ತಮ್ಮ ತಾತ್ವಿಕ ಜಿಜ್ಞಾಸೆಗೆ ಭಂಗ ತಂದುಕೊಳ್ಳುವುದಿಲ್ಲ. ಯಾವುದೇ ಅಧ್ಯಯನ ಕ್ರಮದ ಅನಿವಾರ್ಯತೆ ತಾತ್ವಿಕತೆ ಎಂಬುದನ್ನು ಅವರು ಗಂಭೀರವಾಗಿ ಸ್ವೀಕರಿಸಿದ್ದಾರೆ. ಸಂಕಲನದ ಪ್ರತಿ ಲೇಖನ ಈ ತಾತ್ವಿಕ ಜಿಜ್ಞಾಸೆಯ ಮೂಲಕವೇ ಆರಂಭವಾಗುತ್ತದೆ”.
2202 ನವಂಬರ್ 17 ರಂದು ಕನ್ನಡ ಪ್ರಭ ದಿನಪತ್ರಿಕಯು ಇವರ ದೇವುಡು ಕೃತಿ ಕುರಿತು ಈ ಕೆಳಗಿನಂತೆ ಉಲ್ಲೇಖಿಸಿದೆ “ ದೇವುಡು ಅವರ ಸಮಗ್ರ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿವೆ ಎಂಬುದಕ್ಕೂ ಪುರಾವೆಗಳಿವೆ. ವೈಯಕ್ತಿಕವಾದ ಜೀವನ ಸಂದರ್ಭಗಲ್ಲಿ ದೇವುಡು ತಳೆದ ವಿಭಿನ್ನ ದೃಷ್ಠಿಕೋನಗಳು ಕೃತಿಗಳಲ್ಲಿ ಪರೋಕ್ಷವಾಗಿ ಪ್ರತಿಫಲಿಸಿರುವುದನ್ನು ಕುಮಾರಚಲ್ಯ ಗಣನೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಹೊರನೋಟದಲ್ಲಿ ದೇವುಡು ಕೃತಿಗಳು ಪರಂಪರಾಗತ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ ಎನಿಸಿದರೂ ಸನಾತನ ಸಂಸ್ಕøತಿಯೊಳಗಿದ್ದ ಸಮಾನತೆಯ ತತ್ವಗಳನ್ನು ನೆನಪು ಮಾಡಿಕೊಡುವ ಸಂಗತಿಗಳನ್ನು ಚಲ್ಯ ತಮ್ಮ ವಿಮರ್ಶೆಯಲ್ಲಿ ಅನಾವರಣಗೊಳಿಸಿದ್ದಾರೆ”.
ಹೀಗೆ ಕುಮಾರಚಲ್ಯರವರು ಕನ್ನಡ ನಾಡು ನುಡಿಗೆ ತಮ್ಮದೇಯಾದ ಸಾಹಿತ್ಯಿಕ ಕೊಡುಗೆಗಳನ್ನು ನೀಡಿದ್ದಾರೆ. ಇವರ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ ಸಂದಿದೆ. ಅಲ್ಲದೆ 2013 ಜೂನ್ 14 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಜಾನಪದ ಖಣಜ ಡಾ|| ಹಂಪನಹಳ್ಳಿ ತಿಮ್ಮೇಗೌಡರು
ಒಂದು ಕಡೆ ಇಂಗ್ಲೀಷ್, ಒಂದು ಕಡೆ ಕನ್ನಡ ಹಾಗೇ ಇನ್ನಿತರ ಭಾಷೆಗಳ ರಮ್ಯ ಸಾಹಿತಿಗಳು ಕಲಾವಿದರು ಒಪ್ಪುವಂತೆ, ಕಲೆ ಜನಸಾಮಾನ್ಯನ ಬಗ್ಗೆ ಇರಬೇಕು. ಮತ್ತೆ ಕಲೆ ಜನ ಸಾಮಾನ್ಯನಿಗೆ ತಿಳಿಯಬೇಕು. ನಿಜ ಅದಕ್ಕೆ ತಕ್ಕಂತೆ ಜನ ಸಾಮಾನ್ಯರೂ ಸಹ ಸ್ಪಂದಿಸಬೇಕು. ಇದು ಕೇವಲ ಆಸ್ಥಾನ ಪಂಡಿತರಿಗೆ ಎನ್ನುವಂತೆ ಮಾತ್ರ ಆಗಬಾರದು. ಆದರೆ ಇನ್ನೊಂದು ಕಡೆ ಕಲೆಯಲ್ಲಿ ನಾವಿನ್ಯತೆ ಇರಬೇಕು. ಈ ನಾವಿನ್ಯತೆ ಕಾರಣವಾಗಿ ಕಲೆ ಕೇವಲ ಪ್ರತಿಷ್ಠಿತರ ಸೊತ್ತಾದರೆ ಅದನ್ನು ಜನ ಸಾಮಾನ್ಯರ ಬಳಿಗೆ ಒಯ್ಯತಕ್ಕಂತ ಆ ಒಂದು ಉದ್ದೇಶ ಎಲ್ಲಿ ಸಾರ್ಥಕವಾಗುತ್ತೆ ? ಇದೇ ಪ್ರಶ್ನೆ ಕಾಡಿದ್ದು ಹಾಸನ ಜಿಲ್ಲೆಯ ಅತ್ಯಂತ ವಿಶಿಷ್ಟವಾದ ಹಾಗೂ ಅತ್ಯಂತ ಶ್ರೇಷ್ಠ ಕೆಲಸ ಮಾಡುತ್ತಿರುವ ಡಾ|| ಹಂಪನಹಳ್ಳಿ ತಿಮ್ಮೇಗೌಡರಿಗೆ.
ನಮ್ಮ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪಾರಂಪರಗತವಾದ ಜ್ಞಾನಿ-ಅಜ್ಞಾನಿಗಳು, ಅಕ್ಷರಸ್ಥರು-ನಿರಕ್ಷರಕುಕ್ಷಿಗಳೂ ಕೂಡ ಸ್ಪಂದಿಸತಕ್ಕಂತಹ ಜಾನಪದ ಕಲೆಯನ್ನು ಸುಧಾರಿಸಿ, ಅದರ ಬಗ್ಗೆ ಒಂದು ಅದ್ಭುತ ಕಲ್ಪನೆ ಮಾಡಿಸಿದ್ದು ತಿಮ್ಮೇಗೌಡರು. ಪ್ರಾಯಶಃ ನನಗೆ ತಿಳಿದ ಹಾಗೆ ಜಿಲ್ಲೆಯಲ್ಲಿ ಮೊಟ್ಟ ಮೊದಲು ಜನಪದ ಕ್ಷೇತ್ರದಲ್ಲಿ ಗ್ರಂಥ ರಚಿಸಿದವರೆಂದರೆ ಜಾನಪದ ಜಂಗಮ ಡಾ|| ಎಸ್.ಕೆ ಕರೀಂಖಾನ್ ಹಾಗೂ ಡಾ|| ರಾಜೇಗೌಡ ಹೊಸಳ್ಳಿ ಇವರ ನಂತರ ಈ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಾ ಜೊತೆ ಜೊತೆಗೆ ಜಾನಪದದ ಸೊಗಡನ್ನ ಉಣಬಡಿಸುವಂತ ಕೃತಿಗಳನ್ನು ರಚಿಸಿದವರೆಂದರೆ ತಿಮ್ಮೇಗೌಡರು. ಇವರು ಜನಿಸಿದ್ದು ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ಹಂಪನಹಳ್ಳಿಯಲ್ಲಿ, 1957 ಮೇ-18 ರಂದು. ಇವರ ತಂದೆ ಮೂಡಲಗಿರಿಗೌಡ, ತಾಯಿ ಶ್ರೀಮತಿ ಚನ್ನಮ್ಮ. ನಿರಕ್ಷರ ಕುಟುಂಬದಲ್ಲಿ ಜನಿಸಿದ ಇವರು ಚಿಕ್ಕಂದಿನಿಂದಲೇ ಹೋರಾಟದ ಬದುಕಿನೊಂದಿಗೆ ಬೆಳೆದು ಬಂದವರು. ಹುಟ್ಟೂರಾದ ಹಂಪನಹಳ್ಳಿಯಲ್ಲಿ ಕಿರಿಯ ಪ್ರಾಥಮಿಕ, ಹೆರಗುನಲ್ಲಿ ಹಿರಿಯ ಪ್ರಾಥಮಿಕ ಹಾಗೂ 12 ಕಿ.ಮೀ ದೂರದಲ್ಲಿದ್ದ ಶಾಂತಿಗ್ರಾಮಕ್ಕೆ ದಿನಾಲೂ ಕಾಲುನಡಿಗೆಯಲ್ಲೇ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ಹಾಸನದ ಕಲಾ ಕಾಲೇಜಿನಲ್ಲಿ ಪಿ.ಯು.ಸಿ ಯಿಂದ ಬಿ.ಎ ಪದವಿ ಪಡೆದು ಮೈಸೂರು ಮಾನಸ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಪಿ.ಹೆಚ್.ಡಿ ಪದವಿ ಪಡೆದರು. ನಂತರ ತಾವು ಓದಿದ ಕಾಲೇಜಿನಲ್ಲೇ ಉಪನ್ಯಾಸಕರಾಗಿ ಸೇವೆ ಆರಂಭಿಸಿದರು. ಇಷ್ಟೇ ಅಲ್ಲದೇ ಜಾನಪದ ಸಾಹಿತ್ಯ, ಸಾಹಿತ್ಯ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.
ಹಾಸನ ಜಿಲ್ಲಾ ಸಾಂಸ್ಕøತಿಕ ವೇದಿಕೆ ಪ್ರಾರಂಭ ಮಾಡಿದವರಲ್ಲಿ ಅಗ್ರಮಾನ್ಯರಾಗಿದ್ದಾರೆ. ಜೊತೆಗೆ ಈ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಎರಡು ವರ್ಷ ಕಾರ್ಯೋನ್ಮುಖಗೊಂಡು ಸುಮಾರು 36 ಅದ್ದೂರಿ ಹಾಗೂ ಅರ್ಥಗರ್ಭಿತ ಸಮಾರಂಭಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ, ಜಾನಪದ ಅಕಾಡೆಮಿಯಿದೆಯೆಂದು ಇಡೀ ಜಿಲ್ಲೆಗೆ ತೋರಿಸಿ ಕೊಟ್ಟವರೆಂದರೆ ತಿಮ್ಮೇಗೌಡರು. ಮೂಲ ಜಾನಪದ ಸೊಗಡನ್ನು ಬಿಂಬಿಸುವಂತಹ ತಂಬೂರಿ ಕಲಾವಿದರಾದ ಲಕ್ಷ್ಮಯ್ಯ, ಕೀಲು ಕುದುರೆ ಬಂಗಾರಿ, ಅರಸೀಕೆರೆ ಕೊಮಾರಯ್ಯ, ಇಬ್ಬೀಡು ಚನ್ನಪ್ಪ ಇವರುಗಳಿಗೆ ಅಕಾಡೆಮಿಯ ಬೆಳ್ಳಿಹಬ್ಬ ಸಂದರ್ಭದಲ್ಲಿ ಅಕಾಡೆಮಿ ರಾಜ್ಯ ಪ್ರಶಸ್ತಿ ಬರುವಲ್ಲಿ ಶ್ರಮಿಸಿದರು. ಇದೇ ಸಂದರ್ಭದಲ್ಲಿ ಪ್ರತಿ ಜಿಲ್ಲೆಗೆ ಒಬ್ಬ ಕಲಾವಿದ ಮತ್ತು ಒಬ್ಬ ವಿದ್ವಾಂಸರನ್ನು ಗೌರವಿಸುವ ಅವಕಾಶವಿದ್ದಾಗ ಹಾಸನ ಜಿಲ್ಲೆಗೆ ಬೆಳ್ಳಿಹಬ್ಬದ ಪ್ರಶಸ್ತಿಯನ್ನು ಹೆಚ್.ಜೆ. ಲಕ್ಕಪ್ಪಗೌಡ, ಹಿ.ಶಿ ರಾಮಚಂದ್ರೇಗೌಡ, ಡಾ|| ರಾಜೇಗೌಡ ಹೊಸಹಳ್ಳಿ, ಮೇಟಿಕೆರೆ ಹಿರಿಯಣ್ಣ, ಕಬ್ಬಳಿ ವೆಂಕಟರಾಮು ಹಾಗೂ ಶಿವನಗೌಡ ಪಾಟೀಲ್ ಹೀಗೆ ಆರು ಜನರಿಗೆ ಸಂದಲು ಇವರೇ ಕಾರಣಕರ್ತರೆನ್ನುವುದು ಹೆಮ್ಮೆಯ ಸಂಗತಿ.
ದೇಶದಾದ್ಯಂತ ಹಲವಾರು ಸಭೆ, ಸಮ್ಮೇಳನ, ಕಮ್ಮಟಗಳಲ್ಲಿ ಭಾಗವಹಿಸಿ ಅನುಭವಗಳಿಸಿಕೊಂಡ ಇವರು ಹಲವಾರು ಕಮ್ಮಟಗಳಿಗೆ ಸ್ವತಃ ನಿರ್ದೇಶಕರಾಗಿ ದುಡಿದಿದ್ದಾರೆ. ಜಾನಪದ ಸಾಹಿತ್ಯ ಅಕಾಡೆಮಿಯ ಸಹ ಯೋಗದಲ್ಲಿ ಜಾನಪದ ಶಿಬಿರ ಏರ್ಪಡಿಸಿ, ಅದರ ನಿರ್ದೇಶಕರಾಗಿಯೂ ಕೆಲಸ ಮಾಡಿದರು. ನಿಜಕ್ಕೂ ವಿವಿಧ ಅನ್ನಿಸುವ ವಿಷಯಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ, ಭಿನ್ನ ಮಗ್ಗಲುಗಳಿಂದ ವಿವೇಚಿಸಿ, ವಿಶ್ಲೇಷಿಸಿ, ವಿಮರ್ಶಿಸಿ ಸಾರಭೂತವಾಗಿ ಅಡಕಗೊಳಿಸಿ ಬರೆದ ಜಾನಪದ ಸೊಗಡಿನ ಬರಹಗಳು ಸಂಕ್ಷೇಪ ಅನ್ನಿಸಿದರೂ ನಿಕ್ಷೇಪದಂಥವು. ಅದರಲ್ಲಿಯೂ ಅವರ ಗದ್ಯ ಬರವಣಿಗೆ ಶೈಲಿ ಅದ್ಭುತ. ನಿಷ್ಠ್ಟುರ ವ್ಯಕ್ತಿತ್ವ ಹೊಂದಿದ ತಿಮ್ಮೇಗೌಡರು ಒಬ್ಬ ನೇರವಾದಿ. ತಮ್ಮದೇ ಸಿದ್ಧಾಂತ, ತತ್ವಗಳಿಗೆ ಬದ್ಧರಾಗಿ ಬಾಳಿದವರು, ಹಾಗೆಯೇ ಬಾಳುವವರೂ ಸಹ. ಜಾತಿ ವ್ಯವಸ್ಥೆಯ ಬಗ್ಗೆ ಸಿಡಿದೆದ್ದವರು. ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹಗಲಿರುಳು ದುಡಿದವರೆಂದರೆ ಅತಿಶಯೋಕ್ತಿಯಾಗಲಾರದು.
ಸದಾ ವೈಚಾರಿಕ ಚಿಂತನೆ ನಡೆಸುವ ಇವರು ಅದೆಷ್ಟೋ ಎಲೆ-ಮರೆ ಕಾಯಿಗಳನ್ನು ಮುಖ್ಯವಾಹಿನಿಗೆ ತಂದಿದ್ದಾರೆ. ಸಹಸ್ರಾರು ಶಿಷ್ಯ ವೃಂದವನ್ನು ಹೊಂದಿರುವ ಇವರು ಸಾಂಸ್ಕøತಿಕ ಪರವಾದ ಚಿಂತಕರು. ನೂರಾರು ಕಲಾವಿದರನ್ನು ಮುಂಬೈ, ದೆಹಲಿ ಮುಂತಾದ ಅನೇಕ ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲಿ ಅವಕಾಶಗಳನ್ನು ಕೊಡಿಸುವುದರ ಮೂಲಕ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಜೊತೆ ಜೊತೆಗೆ ನನ್ನಂತಹ ಅನೇಕ ಯುವ ಸಾಹಿತಿಗಳಿಗೂ ಮಾರ್ಗದರ್ಶನ ಕೊಟ್ಟು ಮುನ್ನಡೆಸಿದ್ದಾರೆ. ದೇಶದ ವಿವಿಧೆÉಡೆಯಲ್ಲಿ ಅಂದರೆ ದೆಹಲಿ, ಇಂಧೂರ್, ಮುಂಬೈಯಲ್ಲಿ ನಡೆದ ಅನೇಕ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಕೀರ್ತಿ ಇವರದು. ಕರ್ನಾಟಕದ ಬಹುಶಃ ಎಲ್ಲಾ ಜಿಲ್ಲೆಗಳಲ್ಲೂ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಬಂಧಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಇವರದು. ಇವರ ಲೇಖನಗಳು ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಹಾಗೂ ಅನೇಕ ಸಂಚಿಕೆಗಳಲ್ಲಿಯೂ ಪ್ರಕಟಗೊಂಡಿವೆ.
ಉಡುಪಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾನೂನು ಗೋಷ್ಠ್ಟಿಯಲ್ಲಿ ಪಾಲ್ಗೊಂಡಿದ್ದರು.
ಬೀದರ್ನಲ್ಲಿ ನಡೆದ ಅಖಿಲ ಭಾರತ ಪ್ರಥಮ ಜಾನಪದ ಸಮ್ಮೇಳನದ ಆಹ್ವಾನಿತರಾಗಿ ಹಾಗೂ ‘ಲೋಕಸಿರಿ’ ನೆನಪಿನ ಸಂಚಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ.
ಬೆಳಗಾವಿಯಲ್ಲಿ ನಡೆದ 3ನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಜೀವನಾವರ್ತನ ಗೀತೆಗಳು’ ಎನ್ನುವ ಇವರ ಕೃತಿ ಬಿಡುಗಡೆಯಾಗಿದೆ.
ಸಿರಿಗೆರೆಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸ್ವಾಮೀಜಿಯವರಿಂದ ಸನ್ಮಾನಗೊಂಡಿದ್ದಾರೆ.
ಇವರ ಪ್ರಕಟಿತ ಕೃತಿಗಳು
ಗದ್ಯ ಕೃತಿಗಳು :-
ಮನನ, ಗುರುಮುಖ, ಹಿರಿಮೆಯ ಹಾಸನ, ಹಾಸನ ಜಿಲ್ಲೆಯ ಜಾನಪದ ಕಲಾವಿದರು, ಕದಿರು
ವ್ಯಕ್ತಿ ಪರಿಚಯಗಳು :-
ಮತಿಘಟ್ಟ ಕೃಷ್ಣಮೂರ್ತಿ, ಡಾ|| ಹೆಚ್.ಜೆ ಲಕ್ಕಪ್ಪಗೌಡ, ಡಾ|| ರಾಜೇಗೌಡ ಹೊಸಳ್ಳಿ.
ಸಂಪಾದಿತ ಕೃತಿಗಳು :-
ಜಾನಪದ ತಲೆಮಾರು -4, ಜಾನಪದ ಅಡುಗೆ ಉದ್ಯಮೀಕರಣ, ಜಾನಪದ ಜೀವನಾವರ್ತನ ಗೀತೆಗಳು.
ಇತರರೊಂದಿಗೆ ಸಂಪಾದಿತ ಕೃತಿಗಳು :-
ಜಾನಪದ ಸಮಾಚಾರ, ವಜ್ರಮುಖಿ. ಸಾಹಿತ್ಯ ಮಾರ್ಗ-1, ಸಾಹಿತ್ಯ ಮಾರ್ಗ-2, ಕಾವ್ಯ ಸಂಚಯ-5, ಕಾವ್ಯ ಸಂಚಯ-6, ಆಯ್ದ ಕವನಗಳು, ಸಾಹಿತ್ಯ ಸಂಪದ-1, ಸಾಹಿತ್ಯ ಸಂಪದ-2.
ಸಂಪಾದಿತ ಸಂಚಿಕೆಗಳು :- ಹೇಮಸಿರಿ, ಬೆಳ್ಳಿಬೆಳಕು, ಕಲಾಶ್ರೀ.
ಒಟ್ಟಾರೆ ಹೇಳುವುದಾದರೆ ಸೃಜನಶೀಲವಾದುದರಲ್ಲೆ ಶೋಧವೂ ನಿಹಿತವಿರುತ್ತದೆ-ಅರ್ಥದ ಶೋಧ, ತತ್ವದ ಶೋಧ, ಸತ್ಯದ ಶೋಧ, ಶಾಸ್ತ್ರೀಯ ನೆಲೆಯ ಸಂಶೋಧನೆಗೂ ಇವೇ ಗಮ್ಯವಾಗಿವೆ. ಹುಡುಕುವುದು, ಕಂಡುಹಿಡಿಯುವುದು, ಸೋಸುವುದು, ಶುದ್ಧಿ ಮಾಡುವುದು ಶೋಧನೆಯ ಪ್ರಕ್ರಿಯೆಗಳು. ಸಾಹಿತ್ಯದಲ್ಲಿ ಸಂಸ್ಕøತಿಯ ಶೋಧನೆಯೂ ನಡೆಯುತ್ತದೆ. ಸಾಹಿತ್ಯ ಮತ್ತು ಸಂಶೋಧನೆ ಭಿನ್ನ ಶಿಸ್ತಿನ ವಿಷಯವಾಗಬಹುದಾಗಿಯೂ ಪರಸ್ಪರವಾದವು, ಸೃಜನಶೀಲ ಲೇಖಕರಾದ ಡಾ|| ಹಂಪನಹಳ್ಳಿ ತಿಮ್ಮೇಗೌಡರಲ್ಲಿ ಇವು ಮೇಳೈಸಿವೆ. ಅಭ್ಯಾಸ ಎನ್ನುವುದು ಸವಿನಯ ಅಧ್ಯಯನ, ಶ್ರದ್ಧೆಯ ಮಾತು. ಸತ್ಯಮುಖಿಯಾದವರಿಗೆ ಇಂಥ ವಿನಯ ಅಧ್ಯಯನದಲ್ಲಿ ಸಹಜವಾಗಿರುತ್ತದೆ. ವಿಷಯ, ವಿಶೇಷತೆಗಳನ್ನು ಪರಿಚಯಿಸಿಕೊಳ್ಳುವ ಪರಿಯನ್ನು ಇವರ ಗ್ರಂಥಗಳಲ್ಲಿ ಗಮನಿಸಬಹುದಾಗಿದೆ. ಇವರ ಸಾಹಿತ್ಯ ಸೇವೆ ಹಾಸನಕ್ಕೆ ಮಾತ್ರ ಮೀಸಲಾಗಿರದೆ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೂ ಹರಡಿ ಧೀಮಂತವಾಗಲಿ ಎಂದು ಆಶಿಸುತ್ತೇನೆ.
ಬಹುಮುಖ ಪ್ರತಿಭಾ ಸಾಧಕಿ – ಎಂ.ಆರ್.ಕಮಲ
ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಹಾಸನ ಜಿಲ್ಲೆ ತನ್ನದೆಯಾದ ಅಗಾಧ ಕೊಡುಗೆ ನೀಡುತ್ತಾ ಬಂದಿದೆ. ಕಾವ್ಯ, ಕಥೆ, ಕಾದಂಬರಿ, ನಾಟಕ, ಅನುವಾದ, ಜಾನಪದ, ಪ್ರಬಂಧ ಹೀಗೆ ನಾನಾ ಪ್ರಕಾರಳಲ್ಲಿ ದುಡುದವರು ಸಾಕಷ್ಟು ಜನ ಇಲ್ಲಿದ್ದಾರೆ. ಇಲ್ಲಿ ಪುರುಷರೆಷ್ಟು ಸಾಧಿಸಿದ್ದಾರೋ ಅಷ್ಟೇ ಮಹಿಳಾ ಸಾಹಿತಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಪಾರ್ವತಿ ಕೃ.ನ.ಮೂರ್ತಿ, ಬಿ.ಕೆ.ಸುಬ್ಬಲಕ್ಷ್ಮಿ, ಮಂಗಳಾ ಸತ್ಯನ್, ವಿಜಯಾ ದಬ್ಬೆ, ಬಾನು ಮುಸ್ತಾಕ್, ವೈ.ಸಿ.ಭಾನುಮತಿ ಮುಂತಾದವರು ಕನ್ನಡ ಸಾಹಿತ್ಯದಲ್ಲಿ ಅವರದೇ ಆದ ಛಾಪು ಮೂಡಿಸಿದವರು.ಇವರ ಸಾಲಿಗೆ ಸೇರುವ ಇನ್ನೋರ್ವ ಲೇಖಕಿಯೆಂದರೆ ಎಂ.ಆರ್.ಕಮಲರವರು.
ಇವರು ಕ್ರಿ.ಶ.1959 ಮಾರ್ಚಿ 27 ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮೇಟಿ ಕುರ್ಕೆಯಲ್ಲಿ ಶ್ಯಾನುಭೋಗ ಮನೆತನದ ಶ್ರೀ ಎಂ.ಎಚ್.ರಾಮಸ್ವಾಮಿ ಹಾಗೂ ಶ್ರೀಮತಿ ವಿಶಾಲಾಕ್ಷಿ ದಂಪತಿಗಳ ಪುತ್ರಿಯಾಗಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಾದ ಮೇಟಿ ಕುರ್ಕೆಯಲ್ಲೇ ಮುಗಿಸಿದ ಕಮಲರವರು ಮುಂದಿನ ವಿದ್ಯಾಭ್ಯಾಸವನ್ನು ಬೆಂಗಳೂರಿನ ಎಂ.ಇ.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿ ನಂತರ ಬೆಂಗಳೂರು ವಿಶ್ವ ವಿದ್ಯಾಲಯದಲ್ಲೇ ಸ್ನಾತಕೋತ್ತರ ಹಾಗೂ ಎಲ್.ಎಲ್.ಬಿ ಪದವಿ ಪಡೆದರು.
ಪ್ರಾಥಮಿಕ ಹಂತದಿಂದಲೂ ಸಹಪಠ್ಯ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಸಂಗೀತ, ನೃತ್ಯ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತೊಟಗಿಸಿಕೊಂಡು ಹಂತ ಹಂತವಾಗಿ ಬೆಳೆದು ರಾಜ್ಯಾದ್ಯಂತ ಹೆಸರಾದರು. ಭರತ ನಾಟ್ಯ ಪ್ರವೀಣೆ ಎಂದ ಬಿಂಬಿತವಾದ ಇವರು ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆನ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಹಾಗೆಯೇ ಕಮಲರವರು ಅದ್ಭುತ ವೀಣಾವಾದಕಿಯೂ ಹೌದು.
ಸ್ನಾತಕೋತ್ತರ ಶಿಕ್ಷಣದ ನಂತರ ಇವರು ಬೆಂಗಳೂರಿನ ರಾಜಾಜಿನಗರದಲ್ಲಿರುವ ಶಿವನಹಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಬೋಧನಾ ವೃತ್ತಿಯ ಜೊತೆ-ಜೊತೆಗೆ ಸಂಗೀತ, ನಾಟ್ಯ ಹಾಗೂ ಸಾಹಿತ್ಯ ಕ್ಷೇತ್ರವನ್ನು ಪ್ರವೃತ್ತಿಯಾಗಿಸಿಕೊಂಡು ಬಹುಮುಖ ಪ್ರತಿಭೆಯಾಗಿ ವಿಕಾಸಹೊಂದುತ್ತಾ ಸಾಗಿದರು.
ಮಹಿಳಾ ಸಂವೇದನೆಯ ಅದರಲ್ಲೂ ವರ್ಣಬೇಧದಿಂದ ತತ್ತರಿಸಿದ ಜನಾಂಗದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ದಾಖಲಿಸಿದ್ದಾರೆ. ಆಫ್ರಿಕನ್ ಹಾಗೂ ಅಮೆರಿಕನ್ ಮಹಿಳೆಯರು ಗುಲಾಮ ಗಿರಿಯ ವಿರುದ್ದ ಮಾಡಿದ ಹೋರಾಟಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
‘ಕಪ್ಪು ಹಕ್ಕಿಯ ಬೆಳಕಿನ ಹಾಡು’ ಇವರ ಸುಪ್ರಸಿದ್ಧ ಕೃತಿಯಾಗಿದೆ. ಇದು ಐತಿಹಾಸಿಕವಾಗಿ ಮಹತ್ವ ಪಡೆದಿದೆ. ಗುಲಾಮಗಿರಿಯಲ್ಲಿ ಬೆಂದು ನರಳಿದ ವ್ಯಥೆಗಳನ್ನು ಆಫ್ರಿಕನ್ ಲೇಖಕಿಯರು ದಾಖಲಿಸಿದ್ದನ್ನು ಕನ್ನಡಕ್ಕೆ ತಂದಿದ್ದಾರೆ. ‘ಉತ್ತರ ನಕ್ಷತ್ರ’, ‘ನನ್ನ ಕಥೆ’ ಇತರ ಪ್ರಮುಖ ಕೃತಿಗಳು.
ಇವರು ಹೆಚ್ಚು ಗಮನ ಹರಿಸಿದ್ದು ಅನುವಾದ ಸಾಹಿತ್ಯದೆಡೆಗೆ. ಉರ್ದುವಿನಿಂದ, ಆಂಗ್ಲಭಾಷೆಯಿಂದ, ಬೆಂಗಾಲಿಯಿಂದ ನೂರಾರು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಲ್ಲದೆ ಅನೇಕ ಉರ್ದು ಮತ್ತು ಬೆಂಗಾಲಿ ಕಾವ್ಯ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಅವರ ಅನೇಕ ಕವಿತೆಗಳು ಮರಾಠಿ, ಮಲೆಯಾಳಂ, ಗುಜರಾತಿ, ಬಂಗಾಲಿ ಹಾಗೂ ಆಂಗ್ಲಭಾಷೆಗೆ ಭಾಷಾಂತರಗೊಂಡಿರುವುದು ಇವರ ವಿದ್ವತ್ಗೆ ಹಿಡಿದ ಕನ್ನಡಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
‘ಶಕುಂತಲೋಪಾಖ್ಯಾನ’ ಇವರ ಮೊದಲ ಕಾವ್ಯ ಸಂಗ್ರಹವಾಗಿದೆ. ಇವರ ಇನ್ನೊಂದು ಪ್ರಸಿದ್ಧ ಕವನ ಸಂಕಲನ ‘ಜಾಣೆ ಮತ್ತು ಇತರ ಕವಿತೆಗಳು’. ‘ಕತ್ತಲೆ ಹೂವಿನ ಹಾಡು’ ಎಂ.ಆರ್.ಕಮಲರವರ ಪ್ರಮುಖ ಅನುವಾದ ಕೃತಿಯಾಗಿದೆ. ಹೀಗೆ ಇವರ ಸಾಹಿತ್ಯ ದೀನ-ದಲಿತರ ನೋವುಗಳಿಗೆ ಬೆಳಕಾಯಿತು. ಇವರ ಅನುವಾದ ಎಷ್ಟೋ ಮಹಿಳೆಯರ ಕೂಗು, ಸಂಕಟಗಳನ್ನು ಅನಾವೃಣಗೊಳಿಸಿದವು. ಮಹಿಳಾ ಪರ, ದಮನಿತರ ಪರ ದ್ವನಿಗಳು ಇವರ ಬರವಣಿಗೆಗಳಲ್ಲಿ ಪಲ್ಲವಿಸಿದವು.
ಎಂ.ಆರ್.ಕಮಲರವರು ಒಬ್ಬ ಹೋರಾಟಗಾರ್ತಿಯರಿಗೆ ಬೆಳಕಾಗಿ, ಕವಯತ್ರಿಯಾಗಿ, ಅನುವಾದಕಿಯಾಗಿ, ಭರತನಾಟ್ಯ ಕಲಾವಿದೆಯಾಗಿ, ವೀಣಾ ವಾದಕಿಯಾಗಿ ನಮ್ಮೆದುರಿಗೆ ನಿಲ್ಲುವುದರೊಂದಿಗೆ ಬಹುಮುಖ ಪ್ರತಿಭಾಶಕ್ತಿಯಾಗಿ ಗೋಚರಿಸುತ್ತಾರೆ.
ಇವರ ಸಾಹಿತ್ಯ, ಸಂಗೀತ ಹಾಗೂ ನಾಟ್ಯ ಕಲೆಗೆ ಸಾಕಷ್ಟು ಬಹುಮಾನ, ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಬಿ.ಎಂ.ಶ್ರೀ ಸ್ವರ್ಣ ಪದಕ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿಗಳು ಪ್ರಮುಖವಾಗಿವೆ. ಇವರ ಭಾವಗೀತೆಗಳ ಧ್ವನಿ ಸುರುಳಿಯಾದ ‘ಭಾವ ವೀಣೆ’ ಆಧುನಿಕ ಕವಯತ್ರಿಯರ ಮೊಟ್ಟ ಮೊದಲ ಧ್ವನಿ ಸುರುಳಿ ಎಂಬುದಕ್ಕೆ ಸಾಕ್ಷಿಯಾಗಿದೆ.
ಕನ್ನಡದ ಶ್ರೇಷ್ಠ ಲೇಖಕಿ – ವಿಜಯಾದಬ್ಬೆ
ಕಟ್ಟುಪಾಡು, ಸಂಪ್ರದಾಯ, ಜಾತಿ, ಸಂಬಂಧ ಎಲ್ಲದಕ್ಕೂ ಅತೀತವಾಗಿ ಒಬ್ಬ ಹೆಣ್ಣು ಕುಟುಂಬ ಮತ್ತು ಸಮಾಜಿಕ ಜಂಜಡಗಳನ್ನು ತೂರಿ ಆಚೆ ಬಂದು ತನ್ನದೇ ನಿಲುವು ತಾಳಿ ಬದ್ಧತೆ ಮೆರೆಯುವುದು ಸಾಮಾನ್ಯದ ವಿಷಯವಲ್ಲ. ಅವಳ ತ್ಯಾಗ, ಬಲಿದಾನ, ಚಾರಿತ್ರ್ಯ, ಸಹನೆಗಳು ಸದಾ ಮನುಕುಲಕ್ಕೆ ಸ್ಫೂರ್ತಿಯಾದುದು. ಕಲೆ, ಸಾಹಿತ್ಯ, ಸಂಸ್ಕøತಿಗಳಲ್ಲಿ ಹುಡುಕ ಹೊರಟ ಅವಳ ಅಸ್ಮಿತೆಯ ಹೆಜ್ಜೆಗಳು ಅವಿಸ್ಮರೆಣೀಯ.
ಅಂತಹ ಒಂದು ದಿಟ್ಟ ಮನಸ್ಸಿನ ಕೆಲವೆ ಕೆಲವು ಲೇಖಕಿಯರಲ್ಲಿ ನಮ್ಮ ಹಾಸನ ಜಿಲ್ಲೆಯ ವಿಜಯದಬ್ಬೆಯವರೂ ಒಬ್ಬರೆಂದರೆ ಅತಿಶಯೋಕ್ತಿಯಾಗಲಾರದು. ನೇರ ನಡೆ-ನುಡಿಯ ದಿಟ್ಟ ನಿರ್ಧಾರದ ವ್ಯಕ್ತಿತ್ವದ ಮನೋಧರ್ಮಿಯಾದ ವಿಜಯಾದಬ್ಬೆಯವರು ಎಪ್ಪತ್ತು-ಎಂಬತ್ತರ ದಶಕದಲ್ಲಿ ವೈಚಾರಿಕ ಹಾಗೂ ಸ್ತ್ರೀ ಸಂವೇದಿ ಲೇಖನಗಳ ಮೂಲಕ ಇಡಿ ಕನ್ನಡ ಸಾರಸ್ವತ ಲೋಕವನ್ನು ಹಾಸನ ಜಿಲ್ಲೆಯತ್ತ ಸೆಳೆದವರು. ಕನ್ನಡದ ಮೊದಲ ಸ್ತ್ರೀವಾದಿ ಲೇಖಕಿ ಎಂಬ ಹೆಗ್ಗಳಿಕೆಯೂ ಇವರದು.
ವಿಜಯ ದಬ್ಬೆಯವರು ಕ್ರಿ.ಶ.1951 ಜೂನ್ 1 ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ದಬ್ಬೆ ಗ್ರಾಮದಲ್ಲಿ ಜನಿಸಿದರು. ನಡೆ-ನುಡಿಯಲ್ಲಿ ತೀವ್ರತೆಯಿರುವಂತೆ ಅವರ ಬರವಣಿಗೆಯಲ್ಲಿಯೂ ಹರಿತವಾದ ವಿಚಾರ ಲಹರಿಗಳಿವೆ.
ಕಾವ್ಯ, ಪ್ರವಾಸ ಕಥನ, ಸಂಶೋಧನೆ, ವಿಮರ್ಶಾ ಸಾಹಿತ್ಯ, ಸಂಪಾದನೆ, ಅನುವಾದ ಹೀಗೆ ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಛಾಪು ಮೂಡಿಸಿದ ಕೀರ್ತಿ ವಿಜಯಾದಬ್ಬೆಯವರದು. ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ ಇವರು ಪುಸ್ತಕ ಪ್ರಕಟಣೆ ಸಾಹಿತ್ಯ ಪತ್ರಿಕೆಯ ಸಂಪಾದಕಿಯಾಗಿಯೂ ಕೆಲಸ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ವಿಜಯ ದಬ್ಬೆಯವರನ್ನು ವಿಧಿಯ ಆಟವೆಂಬಂತೆ ಇನ್ನೇನು ಸಾವು ನುಂಗಿಹಾಕಿತು ಅನ್ನುವಷ್ಟರಲ್ಲಿ ದಿಟ್ಟ ಹೆದೆಗಾರಿಕೆಯಿಂದ ಸಾವಿಗೆ ಉತ್ತರಕೊಟ್ಟು ಸಮಾಜಕ್ಕೆ ಮಾದರಿಯಾದರು. ಅವರ ಆತ್ಮ ವಿಶ್ವಾಸ, ಅಚಲ ನಂಬಿಕೆಗಳೇ ಅವರನ್ನು ಪುನಃ ನಮ್ಮೆದುರಿಗೆ ನಿಲ್ಲಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅಂತಹ ಸದೃಢ ಮನಸ್ಸಿನ ಲೇಖಕಿ ವಿಜಯ ದಬ್ಬೆಯವರು.
ಸಾಹಿತ್ಯಿಕ ಕೊಡುಗೆ :
‘ಇರುತ್ತವೆ’ (1975), ‘ನೀರು ಲೋಹದ ಚಿಂತೆ’ (1985), ‘ತಿರುಗಿ ನಿಂತ ಪ್ರಶ್ನೆ’ (1995), ‘ಇತಿಗೀತಿಕೆ’ ಮುಂತಾದ ಕವನ ಸಂಕಲನಗಳು; ‘ಉರಿಯ ಚಿಗುರು ಉತ್ಕಲೆಯಲ್ಲಿ’ - ಪ್ರವಾಸ ಕಥನ ; ‘ನಯಸೇನ’, ‘ನಾಗಚಂದ್ರ ಒಂದು ಅಧ್ಯಯನ’, ‘ಹಿತೈಷಿಯ ಹೆಜ್ಜೆಗಳು’, ‘ಸಾರ ಸರಸ್ವತಿ’, ‘ಶ್ಯಾಮಲಾ ಸಂಚಯ’ ಮುಂತಾದ ಸಂಶೋಧನಾ ಕೃತಿಗಳು; ‘ಸಂಪ್ರತಿ’, ‘ಅನುಪಮಾ ನಿರಂಜನ’, ‘ಮಹಿಳೆ, ಸಾಹಿತ್ಯ, ಸಮಾಜ’, ‘ನಾರಿ ದಾರಿ ದಿಗಂತ’, ‘ಮಹಿಳೆ ಮತ್ತು ಮಾನವತೆ’ ಮುಂತಾದ ವಿಮರ್ಶಾ ಕೃತಿಗಳು; ‘ಮೇರಿ ಮೆಕ್ಲಿಯಾದ್ ಬೆಥೂನೆ’, ‘ವಿಮೋಚನೆಯೆಡೆಗೆ’, ‘ಗುರುಜಾಡ’ ಮುಂತಾದ ಅನುವಾದ ಕೃತಿಗಳು. ಹೀಗೆ ವಿಜಯ ದಬ್ಬೆಯವರು ತಮ್ಮ ದಿಟ್ಟ ಬರವಣಿಗೆಯ ಮೂಲಕ ನಾಡಿನ ಸಾಕ್ಷಿ ಪ್ರಜ್ಞೆಯನ್ನು ಕಲಕಿ ಒಂದು ರೂಪು ನೀಡಿದವರು. ಇವರೊಬ್ಬ ಮಾನವೀಯ ಚಿಂತನೆಗಳ ಪ್ರಗತಿದಾಯಕ ಆಶಾ ಲೇಖಕಿ. ಕಂದಾಚಾರ, ಮೌಢ್ಯಗಳ ವಿರುದ್ದ ಹೋರಾಡುತ್ತಲೇ ಬೆಳೆದವರು.
ಇವರ ಅತ್ಯುಪಯುಕ್ತ ಸಾಹಿತ್ಯಿಕ ಕಾಯಕಕ್ಕಾಗಿ 1979 ರಲ್ಲಿ‘ಉದಯೋನ್ಮುಖ ವರ್ಧಮಾನ ಪ್ರಶಸ್ತಿ’, ಧಾರವಾಡದ ಕರ್ನಾಟಕ ವಿದ್ಯಾ ವರ್ಧಕ ಸಂಘದ 1996 ರ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ನಿಧಿ ಪ್ರಶಸ್ತಿ, 2008 ರಲ್ಲಿ ಕರ್ನಾಟಕ ಸರ್ಕಾರದ ‘ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’, 2008 ರಲ್ಲಿ ಕರ್ನಾಟಕ ಸರ್ಕಾರದ ‘ರಾಜ್ಯೋತ್ಸವ ಪ್ರಶಸ್ತಿ’, ಕರ್ನಾಟಕ ಲೇಖಕಿಯರ ಸಂಘದ ‘ಅನುಪಮ ಪ್ರಶಸ್ತಿ’, ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, 2012 ರಲ್ಲಿ ‘ಡಾ|| ಎಲ್.ಬಸವರಾಜು ಪ್ರಶಸ್ತಿ’ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ದತ್ತಿ ಪ್ರಶಸ್ತಿಗಳು ಸಂದಿವೆ.
ಮಾನವೀಯ ಸಂವೇದನಾ ಬರಹಗಾರ – ಡಾ|| ಎಂ.ಎಸ್.ಶೇಖರ್
ಕಾಲವು ಗತಿಸಿದಂತೆ, ದಶಕಗಳು ಕಳೆದಂತೆ ಜಾಗತಿಕವಾಗಿ ಮತೀಯ ಕೊಳಕು ಭಾವನೆಗಳು, ತಾರ ತಮ್ಯ ಮನೋಭಾವನೆಗಳು ಕ್ಷೀಣಿಸಬೇಕಾಗಿತ್ತು, ಆದರೆ ಇನ್ನೂ ಜಟಲತೆ ಪಡೆಯುತ್ತಿರುವುದು ದುರಂತವೇ ಸರಿ. ಇಂತಹ ಸಾಮಾಜಿಕ ಅಸಮಾನತೆ ವಿರುದ್ದ ಅನೇಕ ಲೇಖಕರು ಮಾನವೀಯ ನೆಲೆಗಟ್ಟಿನಲ್ಲಿ ಆಲೋಚಿಸಿ ಸಾಹಿತ್ಯಿಕ ಕೃಷಿಯಲ್ಲಿ ತೊಡಗಿದ್ದಾರೆ. ಜನಪರ ಚಳವಳಿಗಳ ಮೂಲಕ ಜಾಗೃತೆ ಮೂಡಿಸಲು ಶ್ರಮಿಸುತ್ತಿದ್ದಾರೆ. ಶೋಷಣೆಗೊಳಗಾದವರಿಗೆ ದನಿಯಾಗಿದ್ದಾರೆ.
ದಲಿತ ಸಂವೇದನೆಯನ್ನು ಮನೋಜ್ಞವಾಗಿ, ಸೃಜನಶೀಲವಾಗಿ ಕಟ್ಟಿಕೊಟ್ಟ ಸಂಶೋಧಕ, ಕವಿ, ಬರಹಗಾರ ಡಾ|| ಎಂ.ಎಸ್.ಶೇಖರ್ ಅವರು. ಕ್ರಿ.ಶ 1964 ರಲ್ಲಿ ಹಾಸನ ಜಿಲ್ಲೆ, ಹಾಸನ ತಾಲ್ಲೂಕಿನ ಮಲ್ಲಿಗೆವಾಳು ಗ್ರಾಮದ ಶ್ರೀ ಸಿದ್ದಯ್ಯ ಮತ್ತು ಶ್ರೀಮತಿ ದೇವಮ್ಮ ನವರ ಮಗನಾಗಿ ಜನಿಸಿದ ಇವರು ಆಲೂರು, ಹಾಸನದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೆ ಅಭ್ಯಾಸ ಮಾಡಿದರು. ನಂತರ ಮೈಸೂರು ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ ಪದವಿಯನ್ನು 1988 ರಲ್ಲಿ ಮುಗಿಸಿದರು. 1992 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಅಡಿಯಲ್ಲಿ ಬರುವ ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಇವರು 1994 ರಲ್ಲಿ ಯು.ಜಿ.ಸಿ ಶಿಷ್ಯ ವೇತನದಡಿಯಲ್ಲಿ ಸಂಶೋಧನೆ ನಡೆಸಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಪಿ.ಎಚ್.ಡಿ ಪದವಿ ಪಡೆದರು. 2007 ರವರೆಗೂ ಹೇಮಗಂಗೋತ್ರಿಯಲ್ಲಿ ಕಾರ್ಯನಿರ್ವಹಿಸಿ ನಂತರ ಮಂಡ್ಯದ ಸರ್.ಎಂ.ವಿ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾಗಿ ಹಾಗೂ ಮುಖ್ಯಸ್ಥರಾಗಿ 2010 ರಿಂದ 2012 ರವರೆಗೆ ಕಾರ್ಯನಿರ್ವಹಿಸಿ ಪುನಃ ಹಾಸನದ ಹೇಮಗಂಗೋತ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಲಿತ ಸಾಹಿತ್ಯ ಪರಂಪರೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ಇವರು ಮೊದಲ ತಲೆಮಾರಿನ ದಲಿತ ಸಾಹಿತ್ಯ ಹಾಗೂ ಮೂಲ ಜನಪದ ಸಾಹಿತ್ಯಗಳ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿ ಸಾಹಿತ್ಯದ ರೂಪದಲ್ಲಿ ಹಿಡಿದಿಟ್ಟು ಬೃಹತ್ ಕೃತಿಗಳ ಮೂಲಕ ನಾಡಿನ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ.
ಅಗಾಧ ಸಾಧನೆ ಮಾಡಿದ್ದರೂ ಎಲೆಮರೆ ಕಾಯಿಯಂತೆ ಇಂದಿಗೂ ತಮ್ಮಷ್ಟಕ್ಕೆ ತಾವು ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಸದಾ ಪ್ರಗತಿಪರ ಚಿಂತನ ಮಾಡುವ ಇವರು ಮಾನವೀಯ ನೆಲೆಯಲ್ಲೇ ಬದುಕು ಸಾಗಿಸುತ್ತಿರುವುದು ಸ್ತುತ್ಯಾರ್ಹ.
ಕಾವ್ಯ, ವಿಮರ್ಶೆ, ಜಾನಪದ, ಸಂಶೋಧನೆ, ಸಂಪಾದನೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವ ಇವರು ಇಪ್ಪತ್ತಕ್ಕೂ ಅಧಿಕ ಅಮೂಲ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
1997 ರಲ್ಲಿ ‘ನಾರಾಯಣ ಗುರುವಿನ ನಾಡಿನಲ್ಲಿ’ ಎಂಬ ಪ್ರವಾಸ ಕಥನವನ್ನು ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ ಇವರು ‘ಗ್ರಹಿಕೆ’-1997 (ವಿಮರ್ಶೆ), ‘ನಮ್ಮ ಮುಸ್ಲಿಂ ಹಿನ್ನೆಲೆಯ ಜಾನಪದ ಕಥೆಗಳು’(2001), ‘ಕಣ್ಣು ಕಂಡಷ್ಟು’(ವಿಮರ್ಶೆ-2002), ‘ಜಾನಪದ ಜಾದೂಗಾರ ಸಹೀದ್ ಹುಸೇನ್’(2002), ‘ಶ್ರೀಕೃಷ್ಣ ಆಲನಹಳ್ಳಿ ಅವರ ಸಾಹಿತ್ಯ’(ಸಂಶೋಧನೆ-2002), ‘ಅನಿಕೇತನ’(ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ-ಸಂಪಾದನೆ-2005), ‘ಹೊಯ್ಸಳ ದೀಪ್ತಿ’(ಸಂಪಾದನೆ-2006), ‘ಆಧುನಿಕಸಾಹಿತ್ಯದ ಮೊದಲ ತಲೆಮಾರಿನ ಲೇಖಕರು’(ಸಂಪಾದಿತ-2006), ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಾನವಪರ ಧೋರಣೆಗಳು’(ಸಂಪಾದಿತ-2006), ‘ಹೊಯ್ಸಳ ದರ್ಪಣ’(ಸಂಪಾದಿತ-2006), ‘ಡಿ.ಗೋವಿಂದಾಸ್ ಅವರ ಸಮಗ್ರ ಸಾಹಿತ್ಯ ಸಂಪುಟ’(ಸಂಶೋಧನೆ-2007), ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹಿಳಾಪರ ಕಾಳಜಿಗಳು’(ಸಂಪಾದಿತ-2007), ‘ಕುದ್ಮುಲ್ ರಂಗರಾಯರು’(ಜೀವನ ಚರಿತ್ರೆ-2008), ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜಾನಪದ ಪ್ರಜ್ಞೆ’(ಸಂಪಾದಿತ-2008), ‘ಸಂಸ್ಕøತಿ ಮಹಿಳಾ ಮಾಲಿಕೆ ಃ ಸಂ-2(2008), ‘ಗರಿಕೆ’(ಕಾವ್ಯ-2010) ಮುಂತಾದ ಶೇಷ್ಠ ಕೃತಿ ರತ್ನಗಳನ್ನು ನೀಡಿದ್ದಾರೆ.
ಕನ್ನಡ ಸಮಾಜದ ಸಾಮರಸ್ಯಕ್ಕಾಗಿ ಒಡೆದು ಹೋಗಿರುವ ಪ್ರಗತಿಪರ ಸಂಘಟನೆಗಳು, ಭಾಷಾ ಸಂಘಟನೆಗಳು, ದಲಿತ ಮತ್ತು ಬಂಡಾಯ ಸಾಹಿತಿಗಳೆಲ್ಲಾ ತಂತಮ್ಮ ಪ್ರತಿಷ್ಟೆಗಳನ್ನು ಬಿಟ್ಟು ಸಾರ್ವತ್ರಿಕವಾಗಿ ಸ್ಪಂದಿಸಲೆಂಬುದು ಇವರ ಆಶಯವಾಗಿದೆ. ಅವರೆ ಹೇಳುವಂತೆ “ಸಾಹಿತಿಯಾದವನು ಕೇವಲ ಸಾಹಿತ್ಯದ ಬಗ್ಗೆ ಅಷ್ಟೆ ಸೀಮಿತವಾಗಬಾರದು. ನಮ್ಮ ಬದುಕನ್ನು ರೂಪಿಸುವ ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು ತೆರೆದ ಮನಸ್ಸಿನಿಂದ ನೋಡುವ, ಹೃದಯ ವೈಶಾಲ್ಯತೆಯಿಂದ ಕಾಣುವ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಸಾಹಿತ್ಯ, ಸಂಸ್ಕøತಿ, ಕಲೆ, ವಿಚಾರ, ಧರ್ಮ, ಆಧ್ಯಾತ್ಮ, ಸಂಘಟನೆ, ಆಧುನಿಕತೆ, ವಿಜ್ಞಾನ ಮುಂತಾದವುಗಳ ಬಗೆಗಿನ ಚರ್ಚೆ, ಚಿಂತನೆ ಎಂದರೆ ಅವು ಬೇರೇನು ಅಲ್ಲದೆ ಬದುಕಿನ ಬಗೆಗಿನ ಚರ್ಚೆ, ಚಿಂತನೆ ಎಂಥಲೆ ಅರ್ಥ. ನಿಜವಾದ ಮನುಷ್ಯ ಸಂಬಂಧ ಗಟ್ಟಿಗೊಳ್ಳುವುದು ಪ್ರೀತಿ, ಪ್ರೇಮ, ಪ್ರಾಮಾಣಿಕತೆ ಹಾಗೂ ಉತ್ತಮ ನಡವಳಿಕೆಗಳಿಂದಲೇ ವಿನಃ ಅರ್ಥವಿಲ್ಲದ ಜಾತಿ, ಅಸ್ಪøಶ್ಯತೆ, ಲಿಂಗತಾರತಮ್ಯ, ಮತ, ಧರ್ಮ, ಅಂತಸ್ತು, ಐಶ್ವರ್ಯದಿಂದಲ್ಲ. ಸಾಹಿತ್ಯ ಪ್ರೀತಿಯ ಲೇಖಕ ಕುಟುಂಬದವರಾದ ನಾವೆಲ್ಲರೂ ಈ ನಿಟ್ಟಿನಲ್ಲಿ ಆತ್ಮಸಾಕ್ಷಿಯ ಬದ್ಧತೆಯಿಂದ ಚಿಂತಿಸೋಣ”.- ಅಧ್ಯಕ್ಷೀಯ ಭಾಷಣ, 13 ನೆಯ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.
ಹೀಗೆ ಸದ್ದಿಲ್ಲದೆ ಸಾಮಾಜಿಕ ಕಳಕಳಿಗೆ ಹೋರಾಡುತ್ತಿರುವ ಡಾ|| ಎಂ.ಎಸ್.ಶೇಖರ್ ರವರು 2013 ಮಾರ್ಚಿ 30, 31 ರಂದು ನಡೆದ ಹಾಸನ ಜಿಲ್ಲಾ 13ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅಲ್ಲದೆ ಇವರಿಗೆ 2003 ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿ, 2010 ರಲ್ಲಿ ದಲಿತ ಸಾಹಿತ್ಯ ಪರಿಷತ್ತು ಕಾವ್ಯ ಪ್ರಶಸ್ತಿ, 2012 ರಲ್ಲಿ ಕೆ.ಎಸ್.ನರಸಿಂಹಸ್ವಾಮಿ ಕಾವ್ಯ ಪ್ರಶಸ್ತಿ, 2012 ರಲ್ಲಿ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಸಂದಿವೆ. ಅಲ್ಲದೆ 2005 ರಿಂದ 2008 ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಜಾನಪದ ಜೀವಾಳ ಡಾ|| ರಾಜೇಗೌಡ ಹೊಸಹಳ್ಳಿ
ಕನ್ನಡ ಸಾಹಿತ್ಯದ ಇತಿಹಾಸ ಸಹಸ್ರ ವರ್ಷಗಳಿಗಿಂತಲೂ ಹೆಚ್ಚು ವಿಸ್ತಾರವಾಗಿದೆ. ಸಹಸ್ರಾರು ಕವಿಗಳು ತಮ್ಮ ಕೃತಿಗಳಿಂದ ನಮ್ಮ ಸಾಹಿತ್ಯವನ್ನು ತಮ್ಮ ಕೃತಿಗಳಿಂದ ನಮ್ಮ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಈ ಕೃತಿಗಳು ವಸ್ತು, ರೀತಿಗಳಲ್ಲಿ ವಿಪುಲವಾದ ವೈವಿಧ್ಯತೆಯಿಂದ ಕೂಡಿವೆ. ಆದ್ದರಿಂದ ಈ ಸಾಹಿತ್ಯರಾಶಿಯನ್ನು ಯಾವುದಾದರೊಂದು ಬಗೆಯ ವಿಭಾಗಕ್ಕೆ ಒಳಪಡಿಸಿ, ಅದರ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಹಾಗೆಯೇ ಸಂಬಂಧಿಸಿದ ಸಾಹಿತ್ಯ ಪ್ರಕಾರಗಳ ಬಗ್ಗೆ ಕೂಲಂಕುಷವಾಗಿ ತಿಳಿದುಕೊಳ್ಳಬೇಕಿದೆ. ಈ ಅಕ್ಷರ ಸಾಹಿತ್ಯಕ್ಕಿಂತಲೂ ಪುರಾತನವಾಗಿ ನಮಗೆ ಕಂಡುಬರುವುದು ನಮ್ಮ ಪೂರ್ವಜರು ತಲತಲಾಂತರಗಳಿಂದ ಸಂರಕ್ಷಿಸಿಕೊಂಡುಬಂದ ಜಾನಪದ ಸಾಹಿತ್ಯ. ಗ್ರಾಮೀಣ ಸೊಗಡಿನ ಬದುಕನ್ನು, ವೈವಿಧ್ಯತೆಯನ್ನು, ಸಾಂಸ್ಕøತಿಕ ನೆಲೆಗಟ್ಟುಗಳನ್ನು ಅನಾವರಣಗೊಳಿಸುವುದೇ ಈ ಜಾನಪದ ಸಾಹಿತ್ಯ.
ಇಂತಹ ಜಾನಪದದ ಮೂಲಸೆಲೆಯನ್ನು ಕಳೆದ ನಾಲ್ಕೈದು ದಶಕಗಳಿಂದ ಸಂಶೋಧಿಸುತ್ತಾ, ಬರೆಯುತ್ತಾ, ವಿವಿಧ ಆಯಾಮಗಳಲ್ಲಿ ವಿಮರ್ಶಿಸುತ್ತಾ, ದಾಖಲಿಸುತ್ತಾ ಬಂದವರು ಜಾನಪದ ತಜ್ಞ ಡಾ|| ರಾಜೇಗೌಡ ಹೊಸಳ್ಳಿಯವರು.
ಡಾ|| ರಾಜೇಗೌಡ ಹೊಸಳ್ಳಿಯವರು ಕ್ರಿ.ಶ.1949 ಜುಲೈ 6 ರಂದು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಮರಸು ಹೊಸಳ್ಳಿ ಗ್ರಾಮದ ಶ್ರೀ ರಂಗಪ್ಪ ಹಾಗೂ ಶ್ರೀಮತಿ ರಂಗಮ್ಮ ಅವರ ಗರ್ಭಾಂಬುಧಿಯಲ್ಲಿ ಜನಿಸಿದರು. ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಹೊಸಳ್ಳಿಯಲ್ಲಿ, ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆಲೂರಿನಲ್ಲಿ ಮುಗಿಸಿದ ರಾಜೇಗೌಡರು ಹಾಸನದ ಸರಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು, ಸರಕಾರಿ ಕಲಾ ಕಾಲೇಜಿನಲ್ಲಿ ಪದವಿ ಪಡೆದು ನಂತರ ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ವೃತ್ತಿಯಲ್ಲಿ ಜಿಲ್ಲಾ ರಿಜಿಸ್ಟ್ರಾರ್ ಆಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸದ್ಯ ನಿವೃತ್ತಿ ಜೀವನದಲ್ಲಿರುವ ರಾಜೇಗೌಡರು ಪ್ರವೃತ್ತಿಯಲ್ಲಿ ಸಾಹಿತ್ಯ ಕ್ಷೇತ್ರವನ್ನು ತಮ್ಮ ಜೀವನದ ಒಂದು ಭಾಗವಾಗಿಯೇ ಸ್ವೀಕರಿಸಿದವರೆಂದರೆ ಅತಿಶಯೋಕ್ತಿಯಾಗಲಾರದು.
ಮೂಲತಹಃ ಮಲೆನಾಡ ಸೆರಗಲ್ಲಿ ಹುಟ್ಟಿ ಬೆಳೆದ ರಾಜೇಗೌಡರು ಇಲ್ಲಿ ಜನ ಜೀವನದ ಶೈಲಿ, ಸಂಸ್ಕøತಿ, ಭಾಷೆ, ಆಚಾರ, ವಿಚಾರಗಳ ಮೇಲೆ ತಮ್ಮ ಸತ್ವಯುತ ಬರವಣಿಗೆಯಲ್ಲಿ ಬೆಳಕು ಚೆಲ್ಲಿದ್ದಾರೆ.
1974 ರಲ್ಲಿ ಪ್ರಕಟವಾದ ‘ಸತ್ಯ ಭೋಜರಾಜ’ ಇವರ ಮೊದಲ ಜಾನಪದ ಕೃತಿಯಾಗಿದೆ. ಇದು ಮೂಲ ಜಾನಪದೀಯ ಬದುಕನ್ನು ಅನಾವರಣಗೊಳಿಸಿದೆ. ಈ ಕೃತಿಯ ಬಗ್ಗೆ ಖ್ಯಾತ ಚಿಂತಕ ಹಾಗೂ ಸಾಹಿತಿಗಳಾದ ರಾಗೌ ಅವರು ಈ ರೀತಿ ಹೇಳಿದ್ದಾರೆ “ಪ್ರಸ್ತುತ ಕೃತಿ ;ಸತ್ಯ ಭೋಜರಾಜ’ ಜಾನಪದ ಕ್ಷೇತ್ರಕ್ಕೆ ಒಂದು ಹೊಸ ಸೇರ್ಪಡೆ. ಸರಳ ಆಶಯಗಳಿಂದ ರೂಪುಗೊಂಡಿರುವ ಒಂದು ಸರಳ ಕಥನ. ಇದೇ ಮೊದಲ ಬಾರಿಗೆ ಹೊಸದಾಗಿ ಪ್ರಕಟವಾಗುತ್ತಿರುವ ಗಮನಾರ್ಹ ಲಾವಣಿ... ಇಂತಹ ಗಮನಾರ್ಹ ಕಾವ್ಯವೊಂದನ್ನು ದೊರಕಿಸಿಕೊಟ್ಟು ರಾಜೇಗೌಡರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಜಾನಪದ ಸಂಬಂಧವಾಗಿ ಅವರು ಇರಿಸಿಕೊಂಡಿರುವ ಶ್ರದ್ದಾನುರಕ್ತಿ ಮತ್ತು ಕಾರ್ಯತತ್ಪರತೆಗಳು ಅಭಿನಂದನೀಯವಾಗಿವೆ”.
1989 ರಲ್ಲಿ ಬಂದ ‘ಮಗನ ತಿಂದ ಮಾರಾಯನ ದುರ್ಗ’ ಕೃತಿಯು ಆಲೂರು ತಾಲ್ಲೂಕಿನ ಮಗನ ತಿಂದ ಮಾರಾಯನ ದುರ್ಗದ ಬಗ್ಗೆ ಹಾಗೂ ಆ ರಾಜನ ಗುಣಾವಗುಣಗಳನ್ನು ಭಿತ್ತರಿಸುತ್ತದೆ. 186 ಪುಟಗಳ ಈ ಕೃತಿಗೆ ನಾಡು ಕಂಡ ಖ್ಯಾತ ಜಾನಪದ ಸಾಹಿತಿ ಎಚ್.ಎಲ್.ನಾಗೇಗೌಡರ ಹಾರೈಕೆಯ ನುಡಿಗಳಿವೆ. ಈ ಕೃತಿಯಲ್ಲಿ ಹಾಸನ ಜಿಲ್ಲೆಯ ಜನಪದ ಕಲೆಗಳು-ಒಂದು ಸಮೀಕ್ಷೆ, ತೊಡಕಿನ ಕಲ್ಲು-ಒಂದು ಕಥಾ ವಿಚಾರ, ಯಾರೀ ಸತ್ಹೇಳು ದೇವಪ್ಪ ಹೆಗ್ಗಡೆ?, ಮಗನ ತಿಂದ ಮಾರಾಯನ ದುರ್ಗ, ಚಿಕ್ಕಯ್ಯ ಹೇಳಿದ ಮೂರು ಪುರಾಣ ಕಥೆಗಳು, ಗಾದೆ ಒಗಟುಗಳಲ್ಲಿ ಲೈಂಗಿಕತೆ, ಮಲೆನಾಡಿನ ಪ್ರಾಣಿ ಪಕ್ಷಿಗಳ ಕೆಲವು ಜಾನಪದೀಯ ಅಂಶಗಳು, ಕಣತೂರಮ್ಮ ಒಂದು ಅಧ್ಯಯನ, ಬೇಲೂರು ಅಥವಾ ಕೋವಿಪೇಟೆ ದುರ್ಗಮ್ಮ-ಒಂದು ಅಧ್ಯಯನ, ಜಾನಪದದ ಸಂರಕ್ಷಣೆ ಹೇಗಾಗಬೇಕು? ಕೆಲವು ಅಭಿಪ್ರಾಯಗಳು ಹೀಗೆ ಹತ್ತು ಲೇಖನಗಳು ಕೃತುಯ ಮುಖ್ಯ ಭಾಗದಲ್ಲಿದ್ದರೆ ಹೊಗಳಿಕೆ ಪದಗಳು, ಕಣತೂರಮ್ಮನ ಹಾಡುಗಳು, ಬಿಷ್ಟಮ್ಮ-ಒಂದು ಹಾಡ್ಗತೆ, ದುರ್ಗಮ್ಮನ ಹಾಡುಗಳು, ಬಲ್ಲವರು ನುಡಿದಾರೆ ಎಂಬ ಐದು ಪ್ರತ್ಯೇಕ ಸಂಗ್ರಹ ಪದಗಳು ಅನುಬಂಧ ಎನ್ನುವ ಶೀರ್ಷಿಕೆಯಡಿಯಲ್ಲಿ ಅನಾವರಣಗೊಂಡಿವೆ.
ರಾಜೇಗೌಡರ ಜಾನಪದ ಸಾಹಿತ್ಯಿಕ ಕೃಷಿಯ ಬಗ್ಗೆ ಶ್ರೀ ಎಚ್.ಎಲ್.ನಾಗೇಗೌಡರು ಈ ರೀತಿ ಹೇಳಿದ್ದಾರೆ “ಹಲವಾರು ವರ್ಷಗಳಿಂದ ರಾಜೇಗೌಡರ ಪ್ರವೃತ್ತಿಯನ್ನು ಅವಲೋಕಿಸುತ್ತಾ ಬಂದಿರುವ ನನಗೆ ಇವರ ವೃತ್ತಿಯಿಂದ ತೀರಾಭಿನ್ನವಾದ ಜಾನಪದ ಪ್ರೇಮವನ್ನು ಬೆಳೆಸಿಕೊಂಡು ಬರುತ್ತಿರುವುದು ನನಗೆ ಆಶ್ಚರ್ಯವನ್ನುಂಟುಮಾಡಿದೆ. ಗ್ರಾಮೀಣ ಬದುಕಿನಿಂದ ಬೇರೆಯಾಗಿ ಪಟ್ಟಣವಾಸಿಯಾದರೂ ಹಳ್ಳಿಯ ನಡೆ-ನುಡಿ ನಂಬಿಕೆ, ಐತಿಹ್ಯ ಮುಂತಾದವುಗಳನ್ನು ತೀರಾ ಆಸಕ್ತಿಯಿಂದ ನೋಡಿ ಅವುಗಳನ್ನು ಬರೆಯುವ ಸ್ವಭಾವ ತುಂಬಾ ಮೆಚ್ಚುವಂಥದ್ದು. ಇವರ ಮಾತಿನಲ್ಲಿ ಬರುವ ಕೆಲವು ಪದಗಳು ಬರವಣಿಗೆಯಲ್ಲಿ ಹೇರಳವಾಗಿ ಬರುತ್ತವೆ”.
‘ಮಗನ ತಿಂದ ಮಾರಾಯನ ದುರ್ಗ’ ಕೃತಿಯು ಆಲೂರಿನ ಸಾಂಸ್ಕøತಿಕ ಹಾಗೂ ಸಾಮಾಜಿಕ ಜೀವನದ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಹಾಸನ ಜಿಲ್ಲೆಯ ಜನಪದ ಕಲೆಗಳ ಬಗ್ಗೆ, ಇಲ್ಲಿನ ವಿಶಿಷ್ಠ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತದೆ. ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಅಧ್ಯಯನ ಮಾಡುವವರಿಗೆ ಈ ಕೃತಿಯು ತುಂಬಾ ಪ್ರಯೋಜನಕಾರಿಯಾಗಿದೆ.
ಇವರ ಇತರೆ ಕೃತಿಗಳೆಂದರೆ ‘ಕೋಳಿ ಮತ್ತು ತುಳಸೀಕಟ್ಟೆ’-1995, ‘ಜಾನಪದ ಸಂಕಥನ’-1999, ‘ಅಕ್ಕಯ್ಯಮ್ಮನ ಸಂಸಾರ’-1999, ‘ತಾಳ ಬಂದೋ ತಂಬೂರಿ ಬಂದೋ’ ಮಹಾಪ್ರಬಂಧ-2002, ‘ನೋಂದಣಿ ಕೈಪಿಡಿ’-2006, ‘ಮಲೆನಾಡ ಸೆರಗಲ್ಲಿ ನಿಂತು’-2006, ‘ಉದರದೊಳು ಹಸಿರುಕ್ಕಿ’ ಕಾದಂಬರಿ(ಅಚ್ಚಿನಲ್ಲಿ) ಹೀಗೆ ಹಲವು ಮೌಲಿಕ ಕೃತಿಗಳನ್ನು ನಾಡಿಗೆ ನೀಡಿದ ಕೀರ್ತಿ ರಾಜೇಗೌಡರದ್ದು.
ಇವರ ‘ತಾಳ ಬಂದೋ ತಂಬೂರಿ ಬಂದೋ’ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಬಂದಿದೆ.
ರಾಜೇಗೌಡರ ಇನ್ನೊಂದು ಪ್ರಮುಖ ಕೃತಿಯೆಂದರೆ 2006 ರಲ್ಲಿ ಪ್ರಕಟವಾದ ‘ಮಲೆನಾಡ ಸೆರಗಲ್ಲಿ ನಿಂತು’. 188 ಪುಟಗಳುಳ್ಳ ಈ ಕೃತಿಯನ್ನು ಬೆಂಗಳೂರಿನ ಪ್ರಸ್ತುತ ಪ್ರಕಾಶನವು ಪ್ರಕಟಿಸಿದೆ. ಈ ಕೃತಿಯಲ್ಲಿ ಜಾನಪದ ಗ್ರಹಿಕೆ, ಗ್ರಾಮೀಣ ಸಂಸ್ಕøತಿ : ಇಂದು ಮತ್ತು ನಾಳೆ, ಕುವೆಂಪು : ಜನ ಜೀವನದಲ್ಲಿ ಏಕೆ ಪದೇ ಪದೇ ಪ್ರಸ್ತುತವಾಗುತ್ತಾರೆ?, ಈಡಿಗರು ಮಾತೃ ಮಕ್ಕಳು, ಹಡಪದ ಅಪ್ಪಣ್ಣ-ಹೆಂಡದ ಮಾರಯ್ಯ, ಜಗದಂಬೆ : ಒಂದು ಸಾಂಸ್ಕøತಿಕ ಚರ್ಚೆ, ಆಡುಗಳನ್ನು ನಂಬಿದರೆ ಬೋಳು ಈ ನಾಡು : ಗ್ರಾಮೀಣ ಪರಿಸರದ ಅರಿವು, ಪರಿಸರ-ಸಮಾಜ-ರೋಗ, ದೇವರು ದೆವ್ವ ಗಿವ್ವ-ನಮ್ಮ ಸುತ್ತಮುತ್ತ, ಕಂಡು ಕೇಳಿದ ಕಥೆಗಳ ಸುತ್ತಮುತ್ತ : ನಗರ ಜಾನಪದ, ಕರ್ನಾಟಕದ ಆಚರಣೆಗಳು-ಹಬ್ಬಗಳು, ಬಡಗಿ ವೃತ್ತಿ, ಒಕ್ಕಲಿಗರ ಕುಲಾವಳಿಗಳು, ಒಕ್ಕಲಿಗರ ಮನೆಗಳು, ಅಡ್ಡ ಹೆಸರುಗಳು, ಜನಪದ ಸಾಹಿತ್ಯದಲ್ಲಿ ಹೆಣ್ಣು ಮತ್ತು ಸಮಾನತೆ, ಹಾಸನ ಜಿಲ್ಲೆಯ ಜಾನಪದ ಕೊಡುಗೆ, ಮಹಾತ್ಮ ಗಾಂಧಿ ಕಾಲದವರೊಡನೆ : ಒಂದು ಸಂಸ್ಕøತಿಯ ಅವಲೋಕನ, ಕೃತಿಕಾರ ಮತ್ತು ಅವರ ಕೃತಿಗಳನ್ನು ಕುರಿತು : ಡಾ|| ಚಕ್ಕರೆ ಶಿವಶಂಕರ್ ಹೀಗೆ ವಿಭಿನ್ನ ರೀತಿಯ ಬಿಡಿ ಲೇಖನಗಳಿವೆ.
ಈ ಕೃತಿಯ ಬಗ್ಗೆ ಖ್ಯಾತ ಜಾನಪದ ಚಿಂತಕರಾದ ಡಾ|| ಹಿ.ಶಿ.ರಾಮಚಂದ್ರೇಗೌಡರು ಈ ರೀತಿ ಹೇಳಿದ್ದಾರೆ “ ಗೌಡರಿಗೆ ಮಾತೃ-ಪಿತೃ ಪ್ರಾಧಾನ್ಯತೆಯ ಸಾಂಸ್ಕøಥಿಕ ಹೋರಾಟ ಅವರ ಅಂತರಂಗದ ಸಂಘರ್ಷವಾಗಿಯೇ ಕಾಡುತ್ತಿರುವಂತಿದೆ. ಆ ಮಾಪಿತೃಗಳ ಮಾತು ಇಲ್ಲದೆ ಅವರ ಯಾವುದೇ ಬರಹ ಪೂರ್ಣವಾಗುವುದಿಲ್ಲ. ದಬ್ಬಾಳಿಕೆಯನ್ನು ಒಂದು ಸ್ಥಿತಿಯಾಗಿಯೂ, ಮೌಲ್ಯವಾಗಿಯೂ ಒಪ್ಪಿಕೊಳ್ಳಲು ತಯಾರಿಲ್ಲದ ಮಾತೃಹೃದಯದ ರಾಜೇಗೌಡರು ಪಿತೃಪ್ರಧಾನ ಸಮಾಜದ ಮೌಲ್ಯಗಳ ಇತಿ ವೃತ್ತಾಂತವನ್ನು ಹಿಡಿದು ಜಾಲಾಡುತ್ತಲೆ ಬರೆಯುತ್ತಾರೆ. ‘ಜಗದಂಬೆ-ಒಂದು ಸಾಂಸ್ಕøತಿಕ ಚರ್ಚೆ; ಎಂಬ ಲೇಖನ ಇದಕ್ಕೆ ಉತ್ತಮ ನಿದರ್ಶನ. ‘ಕರ್ನಾಟಕದ ಆಚರಣೆಗಳು-ಹಬ್ಬಗಳು’ ಲೇಖನವನ್ನು ಓದಿ ಪೂರೈಸುವ ಹೊತ್ತಿಗೆ ಲೇಖಕರು ನಮ್ಮನ್ನು ಯಾವ ಜಗತ್ತಿನ ಕಡೆ ಎಳೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಹೋಗುತ್ತದೆ”.
ಡಾ|| ಬಸವರಾಜ ಕಲ್ಗುಡಿ ಅವರು ಹೇಳುವಂತೆ “ಡಾ.ರಾಜೇಗೌಡ ಹೊಸಹಳ್ಳಿ ಇವರ ಚಿಂತನಶೀಲ ಮನಸ್ಸಿನೊಳಗೆ ಸೃಜನಶೀಲ ಬಳ್ಳಿ ಅದೆಷ್ಟು ಚೆನ್ನಾಗಿ ಹಾಸು ಹೊಕ್ಕಾಗಿದೆ! ಜಾನಪದ ಗ್ರಹಿಕೆಯನ್ನು ಇವರಷ್ಟು ನವನವೀನವಾಗಿ, ಹೌದೆಂದು ತಲೆದೂಗುವಂತೆ ವಿಸ್ತರಿಸಿಕೊಂಡ ಬಗೆಯನ್ನು ನಾನು ಈವರೆಗೆ ಕಂಡಿಲ್ಲ. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ನಮ್ಮ ಸಮುದಾಯವು ತನ್ನೆಲ್ಲಾ ಸಂಘರ್ಷಗಳ ನಡುವೆ ಆರೋಗ್ಯಕರ ಮನಃಸ್ವಾಸ್ಥ್ಯವನ್ನು ಗಳಿಸಿಕೊಳ್ಳುವ ಅವಕಾಶದಿಂದ ತಪ್ಪಿಸಿಕೊಂಡಿತೇ? ಈ ಪ್ರಶ್ನೆಯೇ ಇವರ ಚಿಂತನೆಯಾಗಿ, ಜನಪದ ಸತ್ವದ ದ್ರವ್ಯವಾಗಿ ರಾಜೇಗೌಡರ ಇಲ್ಲಿನ ಲೇಖನಗಳಲ್ಲಿ ಶೃತಿಯಾಗಿ ಮಿಡಿದಿದೆ”.
ಹೀಗೆ ಕನ್ನಡ ಜಾನಪದ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ರಾಜೇಗೌಡರಿಗೆ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಗೌರವ ಪುರಸ್ಕಾರ, ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ. 1998 ರಲ್ಲಿ ನಡೆದ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕರ್ನಾಟಕ ಜಾನಪದ ಪರಿಷತ್ತಿನ ಹಾಲಿ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜೇಗೌಡರು ಜಾನಪದ ಕ್ಷೇತ್ರಕ್ಕೆ ಮೀಸಲಾಗಿರುವ “ಜಾನಪದ ಜಗತ್ತು” ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ.
ಧನಾತ್ಮಕ ಚಿಂತನೆಯ ಚುಟುಕು ಸಾಹಿತಿ ಡಾ|| ಕೆ.ಕೆ.ಜಯಚಂದ್ರ ಗುಪ್ತ
ಸಾಹಿತ್ಯ ಸೃಜಿಸುವುದೇ ಸಕಾರಾತ್ಮಕ ಚಿಂತನೆಗಳಿಂದ. ಆದರೂ ಒಮ್ಮೊಮ್ಮೆ ವ್ಯತಿರಿಕ್ತ ಭಾವಗಳು ಸಾಹಿತ್ಯದಲ್ಲಿ ಮೊಳೆಯುವುದೂ ಉಂಟು, ಅವು ಕಡಿಮೆ ಪ್ರಮಾಣವೆನ್ನಬಹುದು. ಎಪ್ಪತ್ತಾರು ವಯೋಮಾನದ ಯುವ ಮನಸ್ಸಿನ ವ್ಯಕ್ತಿ ಡಾ || ಗುಪ್ತರವರು. ಸದಾ ಹೊಸ ಚಿಂತನೆಗಳೊಂದಿಗೆ ಪರಾಮರ್ಶಿಸುವ ಇವರು ನೇರವಾದಿಗಳು. ವೈದ್ಯ ವೃತ್ತಿಯ ಜೊತೆಗೆ ಸಾಹಿತ್ಯ ವಲಯದಲ್ಲೂ ಸಂಚಲನ ಮೂಡಿಸಿದ ಕೀರ್ತಿ ಇವರದು ಎಂದರೆ ಅತಿಶಯೋಕ್ತಿಯಾಗಲಾರದು.
ಶ್ರೀಯುತ ಜಯಚಂದ್ರಗುಪ್ತರವರು ಕ್ರಿ.ಶ.1938 ಮೆ 04 ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ವಾಸಿ ಶ್ರೀ ಕೃಷ್ಣಶೆಟ್ಟಿ ಮತ್ತು ಶ್ರೀಮತಿ ಗಂಗಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕೊಣನೂರು ಹಾಗೂ ಅರಕಲಗೂಡಿನಲ್ಲಿ ಮುಗಿಸಿದರು. ನಂತರ ಇಂಟರ್ಮೀಡಿಯೇಟ್ನ್ನು ಕೊಣನೂರಿನ ಬಿ.ಎಂ.ಶೆಟ್ಟಿ ಕಾಲೇಜಿನಲ್ಲಿ ಮುಗಿಸಿದ ಜಯಚಂದ್ರಗುಪ್ತರವರು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು 1964 ರಲ್ಲಿ ಪೂರೈಸಿ, ನಂತರ ಡಾ|| ಜಯಚಂದ್ರ ಗುಪ್ತರವರು 1965 ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ವೈದ್ಯ ವೃತ್ತಿ ಜೀವನವನ್ನು ಆರಂಭಿಸಿದರು.
ಇಷ್ಟಕ್ಕೆ ಮಿತಿಗೊಳ್ಳದ ಇವರ ಓದಿನ ಆಸಕ್ತಿ ವೃತ್ತಿ ಜೀವನದಲ್ಲೂ ಮುಂದುವರೆಯಿತು. ವೈದ್ಯಕೀಯ ಇಲಾಖೆ ಇವರ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಿದ್ದರ ಫಲವಾಗಿ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ ಪದವಿ(ವೃತ್ತಿ ನಿರತ) ಪೂರೈಸಿದರು. ನಂತರದ ದಿನಗಳಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜ್ನಲ್ಲಿ ಕರ್ತವ್ಯ ನಿರ್ವಹಿಸಿದರು.
ದಾಂಪತ್ಯ ಜೀವನ ಃ 1973 ರಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದ ರಾಜೇಶ್ವರಿಯವರನ್ನು ವರಿಸುವುದರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಾ || ಗುಪ್ತರವರ ಜೀವನದಲ್ಲಿ ಅನುರಾಧ, ಆಶಾರಾಣಿ ಹಾಗೂ ಅಭಿಲಾಷ ಅವರು ವಾಂಶಿಕÀವಾಗಿ ಹೊಸ ಬೆಳಕಾಗಿ ಬಂದರು. ಮೊದಲೆರಡು ಪುತ್ರಿಯರು ಇಂಜಿನಿಯರ್ಗಳಾದರೆ, ಪುತ್ರಿ ಅಭಿಲಾಷ ವೈದ್ಯರು.
ವೈದ್ಯಕೀಯ ಕ್ಷೇತ್ರ ಃ ಡಾ|| ಜಯಚಂದ್ರಗುಪ್ತರವರು 1980 ರಿಂದ 1983 ರ ಅವಧಿಯಲ್ಲಿ ತವರು ಜಿಲ್ಲೆಯಾದ ಹಾಸನದಲ್ಲಿ ಕೆಲಸ ಮಾಡಿದ್ದಾರೆ. 1985 ರಿಂದ 1990 ರ ಅವಧಿಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣಗಳಲ್ಲಿ ಉಪ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಸರ್ಜನ್ ಆಗಿ ಕರ್ತವ್ಯ ನಿರ್ವಹಿಸಿ 1996 ಮೆ ಮಾಹೆಯಲ್ಲಿ ನಿವೃತ್ತಿಯಾದರು.
ಸಾಹಿತ್ಯ ಕ್ಷೇತ್ರ ಃ ಸುಧಾ, ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ಸಾಹಿತ್ಯ ಹಾಗೂ ವಿಮರ್ಶಾತ್ಮಕ ಲೇಖನಗಳನ್ನು ಓದುತ್ತಿದ್ದ ಡಾ || ಗುಪ್ತರವರು ಸಾಹಿತ್ಯ ಕ್ಷೇತ್ರದತ್ತ ಹೊರಳಲು ಕಾರಣವಾಯಿತೆನ್ನಬಹುದು. ಅವರೇ ಹೇಳುವಂತೆ ಕಾಲೇಜು ದಿನಗಳಿಂದಲೂ ಚಿಕ್ಕ ಪುಟ್ಟ ಚುಟುಕುಗಳನ್ನು ಬರೆಯುವ ಹವ್ಯಾಸವಿತ್ತಾದರೂ ಅದು ಪ್ರಖರಗೊಂಡದ್ದು ಹಾಸನದ ಮನೆ ಮನೆ ಕವಿಗೋಷ್ಠಿಯಿಂದ ಹಾಗೂ ಸಾಹಿತ್ಯಿಕ ಸ್ನೇಹಿತರಿಂದ.
2007 ರಲ್ಲಿ ಪ್ರಕಟವಾದ ‘ನೆನಪಿನ ಪುಟಗಳು’ ಇವರ ಚೊಚ್ಚಲ ಕೃತಿಯಾಗಿದೆ. 2010 ರಲ್ಲಿ ಪ್ರಕಟವಾದ ‘ಚುಚ್ಚುಮದ್ದು’ ಚುಟುಕು ಸಂಕಲನ.
ನೆನಪಿನ ಪುಟಗಳು ಃ ಸುಮಾರು 80 ಪುಟಗಳ ಈ ಕೃತಿಯು 1957 ರಲ್ಲಿ ಜಯಚಂದ್ರಗುಪ್ತರವರು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಸೇರಿದ ಆ ಸಾಲಿನ ಗೆಳೆಯರೊಂದಿಗೆ ಅನುಭವಿಸಿದ ಮಧುರ ಕ್ಷಣಗಳ ಹೊತ್ತಿಗೆಯ ಬುತ್ತಿ ಎಂದರೆ ತಪ್ಪಾಗಲಾರದು. ಅಂದಹಾಗೆ ಕೇವಲ ಕಾಲೇಜಿನ ಅನುಭವಗಳು ಮಾತ್ರ ಇದರಲ್ಲಿಲ್ಲ, ಹಾಗೆಯೇ ವೃತ್ತಿ ಜೀವನದ ಅನುಭವಗಳು, ವೈದ್ಯಕೀಯ ಲೇಖನಗಳು, ಬೇರೆ ಬೇರೆ ಸಂದರ್ಭಗಳಲ್ಲಿ ನಡೆದ ಲೇಖಕರ ವೈಯಕ್ತಿಕ ಅನುಭವಗಳು ಈ ಕೃತಿಯಲ್ಲಿ ಸಮ್ಮಿಲನಗೊಂಡಿವೆ.
ಚುಚ್ಚು ಮದ್ದು ಃ 108 ಪುಟಗಳ ಈ ಕೃತಿಯು ಗುಪ್ತ ರವರನ್ನು ನಿಜಕ್ಕೂ ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿದ ಕೃತಿಯೆನ್ನಬಹುದು. ಈ ಕೃತಿಯ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಆರ್.ಕೆ.ನಲ್ಲೂರ್ ಪ್ರಸಾದ್ “ ‘ ಚುಚ್ಚು ಮದ್ದು’ ಡಾ|| ಜಯಚಂದ್ರ ಗುಪ್ತ ಅವರ ವಿಶಿಷ್ಟ ಕೃತಿ. ವೈದ್ಯಕೀಯ ಕ್ಷೇತ್ರದ ಹೆಸರನ್ನು ಹೊತ್ತ ಈ ಕೃತಿ ತನ್ನ ಹೆಸರು ಸಾರ್ಥಕವಾಗುವಂತೆ ಸೃಷ್ಠಿಯಾಗಿದೆ. ಇಲ್ಲಿಯ ಚುಟುಕುಗಳಿಗೆ ಸೂಜಿ ಮೊನಯಿದೆ. ಅಭಿವ್ಯಕ್ತಿಯಲ್ಲಿ ಕಟಕಿ, ವ್ಯಂಗ, ವಿಡಂಬನೆ, ಹಾಸ್ಯ ಸೂಚಿಸಿದರೂ ಆಂತರ್ಯದಲ್ಲಿ ಸಾಮಾಜಿಕ ಕಳಕಳಿಯಿದೆ. ಸಮಾಜದ ಪಿಡುಗನ್ನು ಹೋಗಲಾಡಿಸಿ, ಆರೋಗ್ಯವನ್ನು ಪುನಃ ಸ್ಥಾಪಿಸುವ ವೈದ್ಯ ಕಾಳಜಿ ಎಲ್ಲ ಕವನಗಳಲ್ಲಿಯೂ ಕಂಡು ಬರುತ್ತದೆ” ಎಂದು ಹೇಳಿದ್ದಾರೆ.
ಈ ಕೃತಿಯಲ್ಲಿ ಲೇಖಕರು ಮುಖ್ಯವಾಗಿ ಮೂರು ಭಾಗಗಳನ್ನು ಇಟ್ಟಿದ್ದಾರೆ. ಮೊದಲನೆಯದು ‘ಸಿಹಿ ಗುಳಿಗೆ’ ಇದರಲ್ಲಿ ವೇಷ ದಿಂದ ಬೋಧನೆ ವರೆಗೆ 31 ಚುಟುಕುಗಳಿವೆ. ಎರಡನೆಯದು ‘ಕಹಿ ಗುಳಿಗೆ’ ಇದರಲ್ಲಿ ಶ್ರಮ ದಿಂದ ರಹಸ್ಯ ದವರೆಗೆ 53 ಚುಟುಕುಗಳಿವೆ. ಮೂರನೆಯದು ‘ಚುಚ್ಚುಮದ್ದು’ ಇದರಲ್ಲಿ ಟೆಂಡರ್ ನಿಂದ ಬೆನ್ನು ಎನ್ನುವ ವರೆಗೆ 48 ಚುಟುಕುಗಳಿವೆ. ಒಟ್ಟು 132 ಚುಟುಕುಗಳ ಕಣಜವಾದ ಈ ಕೃತಿಯು ಮೌಲ್ಯಭರಿತವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ನಿವೃತ್ತಿ ಜೀವನ ಃ 1996 ರಲ್ಲಿ ವೃತ್ತಿಯಿಂದ ನಿವೃತ್ತಿಗೊಂಡ ಜಯಚಂದ್ರಗುಪ್ತರವರನ್ನು ಸಮಾಜ ಸುಮ್ಮನೆ ಕೂರಲು ಬಿಡಲಿಲ್ಲ. ನಿವೃತ್ತಿ ಹಂತದಲ್ಲೂ ವೈದ್ಯಕೀಯ ವೃತ್ತಿ ಮಾಡುವಂತೆ ಪ್ರಚೋದಿಸಿತು. ಸದಾ ಕ್ರಿಯಾಶೀಲ ಮನಸ್ಸಿನ ಡಾ||ಗುಪ್ತರವರು ಹಾಸನದ ಸಂಜೀವಿನಿ ಹಾಗೂ ಇತರ ಆಸ್ಪತ್ರೆಗಳಲ್ಲಿ ಸಾಕಷ್ಟು ಕಾಲ ಕಾರ್ಯನಿರ್ವಹಿಸಿ ಕಳೆದ ಐದಾರು ವರ್ಷಗಳಿಂದ ಆರ್.ಸಿ ರಸ್ತೆಯಲ್ಲಿರುವ ಮಿಷನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತದ್ದಾರೆ.
ಗೌರವ, ಪುರಸ್ಕಾರಗಳು ಃ 1996 ರಲ್ಲಿ ಚಿಕ್ಕಮಗಳೂರಿನಲ್ಲಿ ಕಾಯ್ ನಿರ್ವಹಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಲ ಸಂಘವು ಇವರ ಕರ್ತವ್ಯ ನಿಷ್ಠೆ ಪರಿಗಣಿಸಿ ಸನ್ಮಾನಿಸಿ ಗೌರವಿಸಿದೆ.
2001 ರಲ್ಲಿ ಭಾರತೀಯ ವೈದ್ಯ ಶಾಖೆ ಹಾಸನ ಘಟಕವು ಡಾ|| ಗುಪ್ತರವರ ಅನುಪಮ ಸೇವೆಯನ್ನು ಮನಗಂಡು ಸನ್ಮಾನಿಸಿ ಗೌರವಿಸಿದೆ.
2012 ರಲ್ಲಿ ಹಾಸನದಲ್ಲಿ ನಡೆದ ವೈದ್ಯ ತಜ್ಞರ ರಾಜ್ಯ ಸಮ್ಮೇಳನದಲ್ಲಿ ಇವರನ್ನು ಗೌರವಿಸಿ ಪುರಸ್ಕರಿಸಲಾಗಿದೆ.
2014 ರಲ್ಲಿ ಶ್ರೀಭವಾನಿ ಶಂಕರಿ ಚಾರಿಟಬಲ್ ಟ್ರಸ್ಟ್ ಕೊಣನೂರು ಸಂಸ್ಥೆಯು ಡಾ|| ಕೆ.ಕೆ.ಜಯಚಂದ್ರ ಗುಪ್ತ ಅವರ ಜೀವನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದೆ.
ಹೀಗೆ ಡಾ|| ಗುಪ್ತರವರ ವೈದ್ಯಕೀಯ ಹಾಗೂ ಸಾಹಿತ್ಯಿಕ ಬದುಕು ಒಟ್ಟೊಟ್ಟಿಗೆ ಸಾಗುತ್ತಿದೆ. ಇವರ ಸಾಧನೆ ಇನ್ನೂ ಪ್ರಖರವಾಗಲಿ ಎಂದು ಆಶಿಸುತ್ತೇನೆ.
ಸಮ ಸಮಾಜದ ಬರಹಗಾರ – ಚಂದ್ರಕಾಂತ ಪಡೆಸೂರ
ಮೂಲ ಶಿಕ್ಷಣ, ಸ್ವ ಮೌಲ್ಯಮಾಪನ, ಭಾಷಾ ಶಿಕ್ಷಣ, ಲೇಖನ ಕಲೆ, ಕಾವ್ಯ ಪ್ರಭೆ, ವಿಮರ್ಶೆಯ ಸ್ವರೂಪ ಹೀಗೇ ಮುಂತಾದ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿ ಕನ್ನಡ ಸಾಹಿತ್ಯ ಹಾಗೂ ಜೈನ ಸಾಹಿತ್ಯಗಳೆರಡರಲ್ಲಿಯೂ ವಿಶೇಷ ಸಾಧನೆ ಮಾಡಿದ ಕನ್ನಡದ ಪ್ರಬುದ್ಧ ಸಾಹಿತಿ ಮಿರ್ಜಿ ಅಣ್ಣರಾಯರಂತೆ ಪ್ರಸ್ತುತ ಸಂದರ್ಭದಲ್ಲಿ ಇವೆರಡೂ ಕ್ಷೇತ್ರದಲ್ಲಿ ಸದ್ದು-ಗದ್ದಲವಿಲ್ಲದೆ ಕೈಂಕರ್ಯ ಮಾಡುತ್ತಿರುವ ಕಾಯಕಯೋಗಿ ಚಂದ್ರಕಾಂತ ಪಡೆಸೂರರೆಂದರೆ ಅತಿಶಯೋಕ್ತಿಯಾಗಲಾರದು.
ಪ್ರಗತಿಶೀಲ ಸಾಹಿತ್ಯದ ನೆಲೆಗಟ್ಟಿನಲ್ಲಿ ಆಲೋಚಿಸುವ ಇವರು ಸಾಹಿತ್ಯ ನಿಂತ ನೀರಾಗದೇ ಸದಾ ಚಲನಶೀಲವಾಗಿರಬೇಕೆಂಬುದು ಇವರ ಆಶಯ. ಸಾಹಿತ್ಯದಲ್ಲಿ ಬರಿ ಸಂಪ್ರದಾಯ, ನಂಬಿಕೆಗಳು ಇರುವ ಬದಲು ಜನತೆಯ ಮನೋವಿಕಾಸಕ್ಕೆ, ನಾವಿನ್ಯತೆಯ ವಿಚಾರಪರತೆಗೆ ಇಂಬು ಕೊಡಬೇಕೆಂಬುದು ಪಡೆಸೂರರ ತುಡಿತವಾಗಿದೆ. ಸಾಹಿತ್ಯವೆಂಬುದು ಸಂಪ್ರದಾಯದ ನಿಯಮಗಳನ್ನು ಬಿಟ್ಟು ಬದುಕಿನ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮಾನವೀಯ ಮೌಲ್ಯಗಳನ್ನು ಉನ್ನತೀಕರಿಸುವಂತಿರಬೇಕು. ವಿಚಾರ ಕ್ರಾಂತಿಯನ್ನು ಪ್ರತಿಯೊಬ್ಬ ಸಾಹಿತಿಯೂ ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸಾಮಾನ್ಯ ಮನುಷ್ಯನ ಭಾವನೆಗಳಿಗೆ ನಾವು ಸ್ಪಂದಿಸಬಹುದು. ಈ ನೆಲೆಗಟ್ಟಿನಲ್ಲಿಯೇ ಪಡೆಸೂರರು ಬದುಕು ಸಾಗಿಸುತಿದ್ದಾರೆ. ಇಂತಹ ಒಬ್ಬ ಲೇಖಕರು ನಮ್ಮ ನಡುವೆ ಇರುವುದು ಹೆಮ್ಮೆಯ ಸಂಗತಿ.
ಶ್ರೀ ಚಂದ್ರಕಾಂತ ಪಡೆಸೂರರು ಕ್ರಿ.ಶ.1960 ಜುಲೈ 01 ರಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಒಡೆಯರ ಮಲ್ಲಾಪುರ ಗ್ರಾಮದಲ್ಲಿ ಶ್ರೀ ಗಂಗಪ್ಪ ಹಾಗೂ ಶ್ರೀಮತಿ ನಾಗಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು.
ಎಂ.ಎ, ಬಿ.ಇಡಿ ಪದವಿದರರಾದ ಇವರು ಕಳೆದ ಮೂರು ದಶಕಗಳಿಂದ ಹಾಸನದ ಆನಂದ ಭಾರತಿ ಪ್ರೌಢ ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
1984 ರಿಂದ 1987 ರತನಕ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದೆ ಅವಧಿಯಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಕನ್ನಡ-ಕನ್ನಡ ನಿಘಂಟುವಿನ ಸಂಪಾದಕ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
1996 ರಿಂದಲೂ ಹಾಸನ ಜಿಲ್ಲೆಯ ಮನೆ-ಮನೆ ಕವಿಗೋಷ್ಠಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇಂದಿಗೂ ಸಾಹಿತ್ಯಿಕ ಚಟುವಟಿಕೆಗಳನ್ನು ಮಾಡುತ್ತಾ ಬರುತ್ತಿದ್ದಾರೆ.
ಪ್ರೌಢ ಶಾಲಾ ಮುಖ್ಯಸ್ಥರಾಗಿ, ಕವಿಯಾಗಿ, ಗದ್ಯ ಲೇಖಕರಾಗಿ, ವಿಮರ್ಶಕರಾಗಿ, ಎಲ್ಲಕ್ಕಿಂತ ಉತ್ತಮ ಚಾಲಾಕಿತನದ ಸಂಘಟಕರಾಗಿ, ಆಡಳಿತಗಾರರಾಗಿ ಹೆಸರಾಗಿರುವ ಪಡೆಸೂರರು ಸೂಕ್ಷ್ಮ ಸಂವೇದನೆಯ ಬರಹಗಾರರು. ಸಮಾಜದ ತವಕ, ತಲ್ಲಣ, ಆತಂಕಗಳನ್ನು, ಜೈವಿಕ ಪ್ರೀತಿಯ ಎಳೆಗಳನ್ನು ಗೇಯತೆ, ಛಂದಸ್ಸುಗಳಲ್ಲಿ ಸುಂದರವಾಗಿ ಕಟ್ಟಿ ಕೊಟ್ಟಿರುವುದು ಅಪ್ಯಾಯಮಾನವಾದುದು. ಸಾಮಾಜಿಕ ಮೌಢ್ಯತೆ, ಬದುಕಿನ ವಿರೋಧಾಬಾಸಗಳು ಇವರ ಸಾಹಿತ್ಯದಲ್ಲಿ ಮೇಳೈಸಿವೆ.
ಸಾಹಿತ್ಯ ಕ್ಷೇತ್ರ ಃ ‘ಇದಿಮಾಯಿ’ ಇವರ ಚೊಚ್ಚಲ ಸ್ವತಂತ್ರ ಸಾಹಿತ್ಯ ಕೃತಿ. ಈ ನಾಟಕ ಹಲವಾರು ಪ್ರದರ್ಶನಗಳನ್ನು ಕಂಡು ಜನ ಮನ್ನಣೆ ಗಳಿಸಿದೆ. ‘ಭಾವ ದೇಹ’(2013) ಇವರ ಕವನ ಸಂಕಲನ. 50 ಕವಿತೆಗಳ 80 ಪುಟಗಳ ಈ ಕೃತಿಗೆ ಕನ್ನಡದ ಪೂಜಾರಿ ಹಿರೆಮಗಳೂರು ಕಣ್ಣನ್ ಅವರ ಮುನ್ನುಡಿ ಕಳೆಕಟ್ಟಿದೆ. ಪ್ರಸ್ತುತ ಪ್ರಾಪಂಚಿಕ ಮೌಲ್ಯಗಳು ದಮನಿತರ ವ್ಯಥೆಗಳು, ಅಜ್ಞಾನದ ಅಟ್ಟಹಾಸಗಳು ವೈಚಾರಿಕ ನೆಲೆಗಟ್ಟಿನಲ್ಲಿ ಪ್ರತಿಬಿಂಬಿತವಾಗಿರುವುದು ಸ್ತುತ್ಯಾರ್ಹ. ಈ ಕವಿತೆಗಳ ಸಂಕಲನದಲ್ಲಿ ಪ್ರತಿಯೊಂದು ಕವನವನ್ನು ಓದುತ್ತಾ ಹೋದ ಹಾಗೆ ರಸಾನಂದದ ಆಳಕ್ಕೆ ಇಳಿಯುತ್ತಾ ರಸ ಸ್ವಾದದ ಮಧುರತೆಯನ್ನು ಹೆಚ್ಚೆಚ್ಚು ಕಂಡುಕೊಳ್ಳುತ್ತಾ ಹೋಗಬಹುದು.
ಪಡೆಸೂರರ ಕವಿತೆಗಳಲ್ಲಿ ಕಸುವಿದೆ, ಕಾಂತಿಯಿದೆ, ನಾದವಿದೆ, ಬನಿ ತುಂಬಿದೆ, ಭಾಷೆಗೆ ಎದೆ ತುಂಬಿದ ಭಾವದ ಹೆಪ್ಪು ಇದೆ. ಶೈಲಿ ಸರಳ ಆದರೆ ತುಂಬಾ ಪರಿಣಾಮಕಾರಿಯಾಗಿ ಮನಸೂರೆಗೊಳ್ಳುತ್ತದೆ.
‘ಮನದೊಳಗೆ...’(2013) ಇದು ಚಿಂತನ ಬರಹಗಳ ಸಂಕಲನ. 22 ರೇಡಿಯೋ ಚಿಂತನಗಳನ್ನೊಳಗೊಂಡ 80 ಪುಟಗಳ ಈ ಕೃತಿಗೆ ಮೈಸೂರು ವಿಶ್ವ ವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎನ್.ಎಂ.ತಳವಾರರು ಬರೆದ ಮುನ್ನುಡಿ ಸಾರ್ಥಕತೆ ಪಡೆದುಕೊಂಡಿದೆ. ತತ್ತ್ವ, ಪ್ರಾಣೀಯತೆ, ದಯೆ-ಧರ್ಮ, ಜೀವನ-ಮರಣ, ಓಂಕಾರ, ಒಳ್ಳೆಯತನ, ಶುದ್ಧಿ, ತಾಯಿ-ಗುರು, ಚಿಂತೆ-ಚಿಂತನ ಮುಂತಾದ ಮೌಲಿಕ ವಿಷಯಗಳ ಬಗೆಗಿನ ಚಿಂತನಗಳು ಈ ಕೃತಿಯಲ್ಲಿವೆ.
‘ಕಮಲಾಭಿನಂದನ’, ‘ನೆನಪು’, ‘ಕಿಡ್ನಿ ವಿಫಲ ರೋಗಿಗಳ ಕಹಿ ಅನುಭವಗಳು’ ಈ ಮೂರು ಸಂಪಾದಿತ ಕೃತಿಗಳಾಗಿವೆ.
ಅಲ್ಲದೆ ಆಕಾಶವಾಣಿಯಲ್ಲಿ ಹಲವಾರು ಚಿಂತನ, ನಾಟಕಗಳನ್ನು ಪ್ರಸ್ತುತ ಪಡಿಸಿರುವ ಪಡೆಸೂರರು ಸಾವಿರಾರು ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ‘ಇದಿಮಾಯಿ’, ‘ಹೋಳಿ ಕಾಮಣ್ಣ’, ‘ವೀರ ದುರ್ಯೋಧನ’ ಮುಂತಾದ ನಾಟಕಗಳು ಅಪಾರ ಜನಪ್ರಿಯವಾಗಿವೆ. ಅಲ್ಲದೆ ಹಲವಾರು ಪ್ರಶಸ್ತಿಗಳಿಗೂ ಭಾಜನವಾಗಿವೆ. ಪ್ರತಿ ವರ್ಷ ಜಿಲ್ಲಾಡಳಿಯದಿಂದ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯ ದಿನಾಚರಣೆ ಕಾರ್ಯಕ್ರಮಗಳಿಗೆ ಪ್ರಸಿದ್ಧ ರಾಜ ವಂಶಗಳನ್ನು ಕುರಿತ ಬೃಹತ್ ರೂಪಕಗಳನ್ನು ಬರೆದು ನಿರ್ದೇಶನ ಮಾಡುತ್ತಿರುವುದು ಶ್ಲಾಘನೀಯವಾದುದು. ಒಂದೊಂದು ರೂಪಕದಲ್ಲೂ ಸಾವಿರಾರು ಮಕ್ಕಳು ಪಾಲ್ಗೊಂಡು ಅಭಿನಯ ಮಾಡುವುದು ಸಾಮಾನ್ಯದ ವಿಷಯವಲ್ಲ. ಯಾವಾಗಲೂ ನಾವಿನ್ಯತೆಗೆ ಒತ್ತು ನೀಡುವ ಪಡೆಸೂರರು ಹೊಸ ಪರಿಕಲ್ಪನೆಗಳ ಕಡೆಗೆ ತುಡಿಯುತ್ತಿರುತ್ತಾರೆ.
ಸಾಹಿತ್ಯ ಮತ್ತು ಸಾಂಸ್ಕøತಿಕ ಪರಿವ್ರಾಜಕ – ಡಾ|| ನಲ್ಲೂರು ಪ್ರಸಾದ್
ರಂಗಭೂಮಿ, ಜಾನಪದ, ಸಾಹಿತ್ಯ, ಸಂಘಟನೆ ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಬಹುಮುಖವಾಗಿ ತೊಡಗಿಸಿಕೊಂಡು ಸಾಧನೆಯ ಶಿಖರವೇರಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದವರು ಡಾ|| ಆರ್.ಕೆ.ನಲ್ಲೂರ್ ಪ್ರಸಾದ್ರವರು.
ಕನ್ನಡ ಸಾಂಸ್ಕøತಿಕ ಲೋಕದಲ್ಲಿ ಚಿರಪರಿಚಿಯವಾದ ಹೆಸರಿವರದು ಎಂದರೆ ಅತಿಶಯೋಕ್ತಿಯಾಗಲಾರದು. ಎಚ್.ಬಿ.ಜ್ವಾಲನಯ್ಯರವರನ್ನು ಬಿಟ್ಟರೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಕ್ಷತೆಯಿಂದ ಕೆಲಸ ಮಾಡಿ ಹಾಸನ ಜಿಲ್ಲೆಗೆ ಕೀರ್ತಿ ತಂದವರು ಡಾ|| ನಲ್ಲೂರ್ರವರು. ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದಾದ್ಯಂತ ಕನ್ನಡ ಡಿಂಡಿಮ ಬಾರಿಸಿ ಜಾಗೃತೆ ಮೂಡಿಸಿದರು. ಜಿಲ್ಲಾ ಹಾಗೂ ಅಖಿಲ ಭಾರತ ಸಮ್ಮೇಳನಗಳನ್ನು ಯಶಸ್ವೀಯಾಗಿ ನಡೆಸಿ ಕನ್ನಡದ ಹರ್ಷದೊನಲನ್ನು ಹರಿಸಿದವರು ಇವರು.
ಶ್ರೀಯುತ ನಲ್ಲೂರು ಪ್ರಸಾದ್ ಅವರು 1947 ನವಂಬರ್ 26 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು ಗ್ರಾಮದ ಎನ್.ಕೆ.ಸಂಜೀವಯ್ಯ ಹಾಗೂ ಶಾಂತಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಇವರು ಪಕ್ಕಾ ಜನಪದೀಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡು ಬೆಳೆದವರು. ತಂದೆ ಸಂಜೀವಯ್ಯನವರು ಸ್ವಾತಂತ್ರ್ಯ ಹೋರಾಟಗಾರರು ಆದ್ದರಿಂದ ರಕ್ತಗತವೆಂಬಂತೆ ನಲ್ಲೂರರಿಗೆ ಹೋರಾಟವೆಂಬುದು ಬಾಲ್ಯದಿಂದಲೇ ಹಾಸುಹೊಕ್ಕಾಯಿತು. ನಲ್ಲೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಆನೆಕೆರೆಯಲ್ಲಿ ಮಾಧ್ಯಮಿಕ ಶಿಕ್ಷಣ, ಚನ್ನರಾಯಪಟ್ಟಣದಲ್ಲಿ ಪ್ರೌಢ ಶಿಕ್ಷಣ, ಶ್ರವಣಬೆಳಗೊಳದಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಮುಗಿಸಿದ ಇವರು ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು.
ಸ್ನಾತಕೋತ್ತರ ಅಧ್ಯಯನ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ದೇ.ಜ.ಗೌ, ಹಾಮಾನಾ, ಜೀಶಂಪ, ಸಿಪಿಕೆ, ರಾಗೌ, ಎಲ್.ಬಸವರಾಜ್ ಮುಂತಾದವರ ಸಂಪರ್ಕವಾಗಿ ಸಾಹಿತ್ಯದ ಕಡೆ ಪ್ರಬಲವಾಗಿ ಇವರನ್ನು ಸೆಳೆಯಿತು.
ನಯ, ವಿನಯ, ಸಜ್ಜನಿಕೆಗಳಂತಹ ಸದ್ಗುಣಗಳ ಚೇತನವಾದ ಡಾ|| ನಲ್ಲೂರವರು ಕ್ರಿಯಾಶೀಲ ವ್ಯಕ್ತಿ. ನೇರ ನಡೆ-ನುಡಿಯ ದಿಟ್ಟತನ ಸ್ವಭಾವದ ಇವರು ಸತ್ಕಾರ್ಯಗಳಿಗಾಗಿ ಸದಾ ಆತೊರೆಯುತ್ತಾರೆ.
ವೃತ್ತಿ ಃ ಬೆಂಗಳೂರಿನ ವಿ.ವಿ.ಪುರಂನ ನ್ಯಾಷನಲ್ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಗೆ ಪಾದಾರ್ಪಣೆ ಮಾಡಿದರು. ಹಿರಿಯ ಸಂಶೋಧಕರಾದ ಡಾ|| ಹಂಪ ನಾಗರಾಜಯ್ಯರವರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದ “ಕರ್ನಾಟಕದ ಒಕ್ಕಲಿಗರಲ್ಲಿ ಗಂಗಡಿಕಾರರು ಃ ಒಂದು ಅಧ್ಯಯನ” ಎಂಬ ಮಹಾಪ್ರಬಂಧಕ್ಕೆ ಬೆಂಗಳುರು ವಿಶ್ವ ವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ. ಮುಂದೆ ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ರಂಗಭೂಮಿ ನಂಟು ಃ ಮೂಲತಃ ಗ್ರಾಮೀಣ ಪ್ರತಿಭೆಯಾಗಿದ್ದ ನಲ್ಲೂರರಿಗೆ ನಾಟಕ, ರಂಗಕಲೆ ಎಂದರೆ ಎಲ್ಲಿಲ್ಲದ ಇಷ್ಟ. ಬಾಲ್ಯದಿಂದಲೇ ತನ್ನೊಳಗೊಬ್ಬ ನಟನನ್ನು ಕಂಡುಕೊಂಡಿದ್ದ ಇವರು ಮುಂದೆ ಕನ್ನಡ ರಂಗಭೂಮಿಯನ್ನು ತಮ್ಮ ಪ್ರಮುಖ ಕ್ಷೇತ್ರವಾಗಿಸಿಕೊಂಡರು. ಪದವಿ ಹಂತದಲ್ಲಿದ್ದಾಗಲೇ ಸ್ನೇಹಿತರ ತಂಡವೊಂದನ್ನು ಕಟ್ಟಿಕೊಂಡು ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳನ್ನು ರಂಗಸಜ್ಜಿಕೆ ಮೇಲೆ ಪ್ರಯೋಗ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸಂಪೂರ್ಣ ರಾಮಾಯಣ, ದಾನಶೂರ ಕರ್ಣ, ಸ್ಮಶಾನ ಕುರುಕ್ಷೇತ, ಭರತ ಬಾಹುಬಲಿ ಮುಂತಾದ ಪೌರಾಣಿಕ ನಾಟಕಗಳಲ್ಲಿ ರಾಮ, ಅರ್ಜುನ, ಭರತನ ಪಾತ್ರಕ್ಕೆ ಜೀವ ತುಂಬುವುದರೊಂದಿಗೆ ತಮ್ಮ ಮನೋಜ್ಞ ಅಭಿನಯದೊಂದಿಗೆ ಪ್ರೇಕ್ಷಕರ ಮನಗೆದ್ದಿರುವ ಇವರು ಕೇವಲ ನಟನೆಯಲ್ಲದೆ ನಿರ್ದೇಶನ, ಗಾಯನದಲ್ಲೂ ತಮ್ಮ ಛಾಪನ್ನು ಮೂಡಿಸಿದವರು.
ದೀಪಾವಳಿ, ಅಕ್ಕತಂಗಿ, ದೇವದಾಸಿ ಮುಂತಾದ ಸಾಮಾಜಿಕ ನಾಟಕಗಳಲ್ಲಿ ಸೊಗಸಾದ ಅಭಿನಯದೊಂದಿಗೆ ಜನಮಾನಸದಲ್ಲಿ ನೆಲೆಕಂಡವರು ಡಾ|| ನಲ್ಲೂರರು. ‘ದೇವದಾಸಿ’ ನಾಟಕದ ನಾಜೂಕಯ್ಯನ ಪಾತ್ರವು ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು.
ಸಾಹಿತ್ಯ ಕ್ಷೇತ್ರ ಃ ಡಾ|| ನಲ್ಲೂರರು ಬಹುಮುಖ ವ್ಯಕ್ತಿತ್ವವುಳ್ಳವರು. ಕಲೆ, ರಂಗಭೂಮಿಗಷ್ಟೇ ಸೀಮಿತವಾಗದೇ ಸಾಹಿತ್ಯ ಕ್ಷೇತ್ರದಲ್ಲೂ ಅವಿರತವಾಗಿ ದುಡಿದಿದ್ದಾರೆ.
ಕಾವ್ಯ - ‘ನೀನೆಂಬ ನಾನು’, ‘ದಗ್ಧ’, ‘ಸೋನೆ ಮುಗಿಲು’, ‘ರೆಕ್ಕೆ ಬಡಿಯುವ ಮುನ್ನ’, ‘ನಿವೃತ್ತೋಪನಿಷತ್ತು’, ‘ನವಿಲ ಜಾಗರ’ ಮುಂತಾದ ಕವನ ಸಂಕಲನಗಳು;
ಜಾನಪದ – ‘ನಲ್ಲೂರ ದೊರೆಕಾಳಿ’, ‘ನವೋದಯ ಮತ್ತು ಜಾನಪದ’, ‘ರಂಗನ ಕುಣಿತ’ ಮುಂತಾದ ಜಾನಪದ ಕೃತಿಗಳು.
ಸಂಪಾದನೆ – ‘ಜಾನಪದ ಕರ್ನಾಟಕ’, ‘ಜಾನಪದ ಸಂಸ್ಕøತಿ’, ‘ಹೆಜ್ಜೆ ಗುರುತು’, ‘ಜಾನಪದ ಭಾರತಿ’ ಮೊದಲಾದ ಪ್ರಮುಖ ಸಂಪಾದನಾ ಕೃತಿಗಳು.
“ಕನ್ನಡ ಜಾನಪದ ಹೊಸ ಹೊಸ ಜ್ಞಾನ ಶಾಖೆಗಳ ಹಿನ್ನೆಲೆಯಲ್ಲಿ ತನ್ನ ಅಧ್ಯಯನ ವಲಯವನ್ನು ವಿಸ್ತರಿಸಿಕೊಳ್ಳುತ್ತ ಸಾಗಿದೆ. ಅದು ಸಮೀಕ್ಷೆ, ರಸವಿಮರ್ಶೆ, ಪಾಶ್ಚಾತ್ಯ ತತ್ತ್ವಗಳ ಅನುಕರಣೆಯ ಸ್ತರಗಳನ್ನು ದಾಟಿ ದೇಸೀವಾದದತ್ತ ಹೊರಳಿರುವುದು ಜಾನಪದ ಕ್ಷೇತ್ರದ ಬೆಳವಣಿಗೆಗೆ ಪೂರಕ” ಎನ್ನುವ ಡಾ|| ವೈ.ಸಿ.ಭಾನುಮತಿಯವರ ಮಾತು ಈ ಸಂದಂರ್ಭದಲ್ಲಿ ಪ್ರಸ್ತುತವೆನಿಸುತ್ತದೆ. ಡಾ|| ನಲ್ಲೂರು ಪ್ರಸಾದ್ ಅವರಂತಹ ಜಾನಪದ ವಿಧ್ವಾಂಸರು ಈ ಕ್ಷೇತ್ರದ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವುದು ಸ್ತುತ್ಯಾರ್ಹವಾದುದು.
ಜಾನಪದ ಹಾಡುಗಳ ಮೂಲಕ, ಕಥೆಗಳ ಮೂಲಕ, ಲಾವಣಿಗಳ ಮೂಲಕ, ಗಾದೆ, ಒಗಟುಗಳ ಮೂಲಕ ನಮ್ಮ ಪಾರಂಪರಿಕ ಸಂಸ್ಕøತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಆದ್ದರಿಂದಲೇ ಜಾನಪದ ಅಧ್ಯಯನ ಹಾಗೂ ಸಂಗ್ರಹ ಕಾರ್ಯ ಅಗತ್ಯವಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಡಾ|| ನಲ್ಲೂರರು ಒಂದು ಶಿಷ್ಯ ಪಡೆಯನ್ನೇ ಕಟ್ಟಿ ಕಾಯಕ ಮಾಡುತ್ತಿದ್ದಾರೆ.
ಸಂಘಟನೆ ಃ ಇವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಂತರ ಮೊದಲು ಒತ್ತು ಕೊಟ್ಟಿದ್ದೇ ಬಲವಾದ ಸಂಘಟನೆಗೆ. ರಾಜ್ಯದಾದ್ಯಂತ ಸಂಚರಿಸಿ ಕನ್ನಡ ಸಂಘಟನೆಯನ್ನು ಬಲಪಡಿಸುತ್ತ ಹೊಸ ಆಯಾಮವನ್ನು ನೀಡಿದರು.
ಇವರ ಅವಧಿಯಲ್ಲಿ ಅಖಿಲ ಭಾರತ, ವಿಭಾಗೀಯ, ಜಿಲ್ಲಾ ಹಾಗೂ ತಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಮತ್ತು ಮಕ್ಕಳ ಸಾಹಿತ್ಯ ಸಮ್ಮೇಳನ ಹೀಗೆ ನೂರಾರು ಸಮ್ಮೇಳನಗಳನ್ನು ಯಶಸ್ವೀಯಾಗಿ ಮಾಡಿ ಉತ್ಸವಗಳಂತೆ, ಪರಿಷೆಗಳಂತೆ ಜನಪ್ರಿಯಗೊಳಿಸಿದರು. ಅಷ್ಟೇ ಅಲ್ಲದೆ ಘೋಷಣೆಗೊಂಡ ನಿರ್ಣಯಗಳನ್ನು ಸಾಕಾರಗೊಳಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಬೆಂಗಳೂರು ವಿಶ್ವ ವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಡದ ಪ್ರಧಾನ ಕಾರ್ಯದರ್ಶಿಯಾಗಿ, ಶೈಕ್ಷಣೀಕ ಪರಿಷತ್ತಿನ ಸದಸ್ಯರಾಗಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ನುಡಿ’ ಹಾಗೂ ಜಾನಪದ ಅಕಾಡೆಮಿಯ ‘ಜಾನಪದ ಸಮಾಚಾರ’ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ ‘ಅನಿಕೇತನ’ ಪತ್ರಿಕೆಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
2013 ರಲ್ಲಿ ಮೈಸೂರಿನ ಅರಮನೆ ಸಭಾಂಗಣದಲ್ಲಿ ನಡೆದ ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸಂದಂರ್ಭ ನನ್ನದಾಗಿತ್ತು. ಅಂದು ಸಾಹಿತ್ಯಿಕವಾಗಿ ಸಾಕಷ್ಟು ಚರ್ಚೆಯನ್ನೂ ಅವರೊಂದಿಗೆ ಮಾಡಿದ್ದೆ. ಸದಾ ಹಸನ್ಮುಖಿಯಾಗಿರುವ ಇವರು ಹೊಸಬರು ಅಥವಾ ಅಪರಿಚಿತರೆನ್ನದೆ ಪ್ರೀತಿಯಿಂದ ಮಾತನಾಡಿಸುವ ಹಾಗೂ ಮಾರ್ಗದರ್ಶನ ನೀಡುವ ಪರಿ ಶ್ಲಾಘನೀಯವಾದುದು.
ಪ್ರಶಸ್ತಿ-ಪುರಸ್ಕಾರಗಳು ಃ ಸಾಹಿತ್ಯ, ಸಂಘಟನೆ, ಜಾನಪದ, ರಂಗಭೂಮಿ ಹೀಗೆ ನಾನಾ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಕೊಡುಗೆ ನೀಡಿದ ಡಾ|| ನಲ್ಲೂರು ಪ್ರಸಾದ್ ಅವರಿಗೆ ಸಾಕಷ್ಟು ಗೌರವ ಸನ್ಮಾನಗಳು ಸಂದಿವೆ. ಅವುಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಶಿರೋಮಣಿ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಕನ್ನಡ ಕುಲ ತಿಲಕ ಪ್ರಶಸ್ತಿ, ಗೊಮ್ಮಟ ವಿದ್ಯಾಪೀಠ ಪ್ರಶಸ್ತಿ, ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ಜೀಶಂಪ ಜಾನಪದ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಪ್ರಮುಖವಾದವುಗಳು.
2005 ರಲ್ಲಿ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದ ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, 2014 ರಲ್ಲಿ ನಡೆದ ಹಾಸನ ಜಿಲ್ಲಾ ಹದಿನಾಲ್ಕನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನಿವೃತ್ತಿಯ ಜೀವನ ನಡೆಸುತ್ತಾ ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ.
ಸಂಪಾದನೆ ಹಾಗೂ ಸಂಶೋಧನಾ ಕ್ಷೇತ್ರದ ಮೇರು ಲೇಖಕಿ – ಡಾ|| ವೈ.ಸಿ.ಭಾನುಮತಿ
ಕನ್ನಡ ಸಾಹಿತ್ಯದಲ್ಲಿ ಪುರುಷರು ಎಷ್ಟು ಸಾಧನೆ ಮಾಡಿರುವರೋ ಅಷ್ಟೇ ಸಾಧನೆಯನ್ನು ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಮಾಡಿದ್ದಾರೆ. ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಲೇಖಕಿಯರ ದಂಡೇ ಇದೆಯೆನ್ನಬಹುದು. ಪಾರ್ವತಿ ಕೃ.ನ.ಮೂರ್ತಿ, ಮಂಗಳಾ ಸತ್ಯನ್, ಸುಬ್ಬ ಲಕ್ಷ್ಮಿ, ವಿಜಯಾ ದಬ್ಬೆ, ಬಾನು ಮುಸ್ತಾಕ್ ಮುಂತಾದವರು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಹಾಗೆಯೇ ಇತ್ತೀಚಿನ ದಿನಗಳಲ್ಲಿ ಪ್ರಾಚೀನ ಸಾಹಿತ್ಯ, ಜಾನಪದ ಸಾಹಿತ್ಯ, ಜನಾಂಗೀಯ ಅಧ್ಯಯನಗಳÀ ಸಂಶೋಧಕಿಯಾಗಿ, ಅಳಿವಿನ ಅಂಚಿನಲ್ಲಿರುವ ಹಲವಾರು ಕೃತಿಗಳನ್ನು ಸಂಪಾದಿಸಿ ಜೀವ ತುಂಬುವ ಕಾಯಕದಲ್ಲಿ ತೊಡಗಿರುವ ಕನ್ನಡ ಸಾಹಿತ್ಯದ ಪ್ರಭುದ್ದ ಲೇಖಕಿ ಡಾ|| ವೈ.ಸಿ.ಭಾನುಮತಿಯವರು.
ವೈ.ಸಿ.ಭಾನುಮತಿಯವರು ಕ್ರಿ.ಶ. 1953 ಜನವರಿ 14 ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಯಮಸಂಧಿ ಗ್ರಾಮದ ವೈ.ಬಿ.ಚನ್ನೇಗೌಡ ಹಾಗೂ ಶ್ರೀಮತಿ ಎಚ್.ಎಸ್.ಜಯಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದರು.
ಬೇಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಪ್ರೌಢ ಶಾಲೆಯಲ್ಲಿ ಒಂದರಿಂದ ಹತ್ತನೆಯ ತರಗತಿವರೆಗೆ ವ್ಯಾಸಾಂಗ ಮಾಡಿದ ಭಾನುಮತಿಯವರು ಹಾಸನದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ನಂತರ ಮೈಸೂರಿನ ಮಹಾರಾಣಿ ಕಲೇಜಿನಲ್ಲಿ ಬಿ.ಎಸ್.ಸಿ ಪದವಿ ಮುಗಿಸಿದರು. ವಿಜ್ಞಾನ ವಿದ್ಯಾರ್ಥಿಯಾಗಿದ್ದ ಭಾನುಮತಿಯವರಿಗೆ ಸಾಹಿತ್ಯದ ಬಗ್ಗೆ ಅಷ್ಟೊಂದು ಆಸಕ್ತಿಯಿರಲಿಲ್ಲ. ಆ ಸಂದರ್ಭದಲ್ಲಿ ಸ್ನೇಹಿತೆಯೊಬ್ಬಳು ಬರೆದ ಪತ್ರದಿಂದ ಪ್ರಭಾವಿತರಾದ ಇವರು ಕನ್ನಡ ಸಾಹಿತ್ಯದ ಕಡೆಗೆ ಒಲವು ತೋರಿಸಿದರು. ಈ ಕಾಲ ಘಟ್ಟವೇ ಭಾನುಮತಿಯವರನ್ನು ಕನ್ನಡ ಸಾಹಿತ್ಯದತ್ತ ಕರೆದುಕೊಂಡು ಬಂದಿತೆನ್ನಬಹುದು. ತದನಂತರ ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇವರು ಮಂಡಿಸಿದ ‘ಕನ್ನಡದಲ್ಲಿ ವರ್ಧಮಾನ ಸಾಹಿತ್ಯ’ ಮಹಾಪ್ರಬಂಧಕ್ಕೆ ವಿಶ್ವ ವಿದ್ಯಾಲಯವು ಆ.ನೆ.ಉಪಾದ್ಯೆ ಚಿನ್ನದ ಪದಕದೊಂದಿಗೆ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಡಾ|| ವೈ.ಸಿ.ಭಾನುಮತಿಯವರು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗ್ರಂಥ ಸಂಪಾದನಾ ವಿಭಾಗದ ಪ್ರಥಮ ದರ್ಜೆಯ ಸಂಶೋಧನಾ ಸಹಾಯಕಿಯಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಇದೇ ಅವರಿಗೆ ವರದಾನವಾಯಿತೆನ್ನಬಹುದು. ಮೊದಲೇ ಸಾಹಿತ್ಯಿದ ಬಗ್ಗೆ ಆಸಕ್ತಿಯಿದ್ದ ಭಾನುಮತಿಯವರು ಇಲ್ಲಿ ಗ್ರಂಥ ಅಧ್ಯಯನದಲ್ಲಿ ನಿರತರಾಗಿ ಪ್ರಾಚೀನ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯದ ಬಗ್ಗೆ ವಿಶೇಷ ಅಧ್ಯಯನ ಮಾಡಿದರು.
ಡಾ|| ವೈ.ಸಿ.ಭಾನುಮತಿಯವರು ಮೂಲತಃ ವಿಜ್ಞಾನ ವಿದ್ಯಾರ್ಥಿನಿಯಾಗಿದ್ದರೂ ಆಯ್ಕೆಮಾಡಿಕೊಂಡದ್ದು ಸಂಶೋಧನಾ ಕ್ಷೇತ್ರವನ್ನು. ಅಳಿವಿನ ಅಂಚಿನಲ್ಲಿದ್ದ ಹಲವಾರು ಹಳಗನ್ನಡ ಕೃತಿಗಳಿಗೆ ಜೀವ ತುಂಬಿ ಹೊಸ ರೂಪದಲ್ಲಿ ಕನ್ನಡ ಸಾಹಿತ್ಯಾಸಕ್ತರಿಗೆ ನೀಡಿದ್ದಾರೆ.
ಜಾನಪದ ಕಾವ್ಯ ಭಾಷೆಯನ್ನು ಸಮರ್ಥವಾಗಿ ರೂಢಿಸಿಕೊಂಡು ವಸಾಹತುಶಾಹಿ ಅನುಭವದಿಂದಾಗಿ ಕಳೆದು ಹೋಗಿರುವ ದೇಸೀ ವ್ಯಕ್ತಿತ್ವದ ಮೂಲಗಳ ಹುಡುಕಾಟದಲ್ಲಿ ತೊಡಗಿರುವ ಡಾ||ವೈ.ಸಿ.ಭಾನುಮತಿಯವರು ಇಬ್ಬೀಡಿನ ಜನಪದ ಕಥೆಗಳು, ಜಾನಪದ ಭಿತ್ತಿ, ಚಂದ್ರಹಾಸನ ಕಥೆ, ಮಲೆನಾಡ ಶೈವ ಒಕ್ಕಲಿಗರು, ಜಾನಪದೀಯ ಅಧ್ಯಯನ, ಮಕ್ಕಳ ಹಾಡುಗಳು, ಜಾನಪದ ಅಡುಗೆ ಮುಂತಾದ ಹನ್ನೊಂದು ಕೃತಿಗಳನ್ನು ಸಂಶೋಧಿಸಿ, ಸಂಪಾದಿಸಿ ಪ್ರಕಟಿಸಿದ್ದಾರೆ.
ನವ್ಯ ಧೋರಣೆ ಮತ್ತು ಅಭಿವ್ಯಕ್ತಿ ತಂತ್ರವನ್ನು ಜನಪದ ಭಾಷೆಯಾಗಿ ಭಾನುಮತಿಯವರು ಬಳಸಿದ ರೀತಿ ಅದ್ವತೀಯವಾದುದು ಎಂದರೆ ಅತಿಶಯೋಕ್ತಿಯಾಗಲಾರದು. ತರೀಕೆರೆ ಪಾಳೇಗಾರರ ವಿಚಾರವಾಗಿ ತಿಳಿಸುವ ಐತಿಹಾಸಿಕ ವಸತುಗಳನ್ನೊಳಗೊಂಡ ಕೃಷ್ಣಶರ್ಮರವರು ವಿರಚಿತ ‘ಸರಜಾಹನುಮೇಂದ್ರ ಯಶೋವಿಲಾಸಂ’ ; ವೀರಶೈವ ಕವಿಗಳಲ್ಲಿ ಪ್ರಮುಖನಾಗಿದ್ದ ಕುಮಾರ ಚೆನ್ನಬಸವನು ನವೀನ ಹಾಗೂ ಪುರಾಣ ಕಾಲದ ಕುರಿತು ವಾರ್ಧಕ ಷಟ್ಪದಿಯಲ್ಲಿ ಬರೆದ ‘ಪುರಾತನರ ಚರಿತೆ’ ; ಹರದನಹಳ್ಳಿಯ ನಂಜಣಾಚಾರ್ಯ ಕವಿಯು ವಾರ್ಧಕ ಷಟ್ಪದಿಯಲ್ಲಿ ಬರೆದ ‘ಏಕೋ ರಾಮೇಶ್ವರ ಪುರಾಣ’ ; ಜೈನ ಸಾಹಿತ್ಯದ ಕವಿ ಶೃತಕೀರ್ತಿಯು ಸ್ತ್ರೀ ಕುರಿತಾಗಿ ಬರೆದ ಮೊದಲ ಜೈನ ಕೃತಿ ‘ವಿಜಯ ಕುಮಾರಿ ಚರಿತೆ’ ; ಜೈನ ಕವಿ ಆದಿದೇವನು ಸಾಂಗತ್ಯದಲ್ಲಿ ಬರೆದ ‘ಸುಕುಮಾರ ಚರಿತೆ’ ; ಕಳ್ಳತನ ಮಾಡಿಯೇ ಜೀವನ ಸಾಗಿಸುತಿದ್ದ ಚಿಕ್ಕಣ್ಣ ವೈಚಾರಿಕ ಹಾಗೂ ಧಾರ್ಮಿಕ ಹರಿಕಾರ ಜಗಜ್ಯೋತಿ ಬಸವಣ್ಣನವರ ಪ್ರಭಾವದಿಂದ ಕಳ್ಳತನ ತೊರೆದು ಪರಿಶುದ್ದ ಜೀವನ ಸಾಗಿಸಿದ ಪ್ರಸಂಗವನ್ನು ಕುರಿತು ಕುಮಾರಚೆನ್ನಬಸವನು ಬರೆದ ‘ನಿಜಚಿಕ್ಕಲಿಂಗಯ್ಯ ಸಾಂಗತ್ಯ’ ; ಮುಖಬೋಳು ಸಿದ್ದರಾಮ ಬರೆದ ‘ಷಟ್ಸ್ಥಲ ತಿಲಕ’ ; ಹದಿನಾಲ್ಕನೆಯ ತೀರ್ಥಂಕರನಾದ ಅನಂತನಾಥನನ್ನು ಕುರಿತು ಚಿಕ್ಕ ಪದ್ದಣ್ಣಶೆಟ್ಟಿ ಬರೆದ ‘ಅನಂತನಾಥ ಚರಿತೆ’ ; ಮಡಿವಾಳೇಶ್ವರನ ಲಘು ಕೃತಿಗಳು ; ವಿಕ್ರಮ ಸಿಂಹಾಸನದ ಮೆಟ್ಟಿಲುಗಳಲ್ಲಿದ್ದ ಮೂವತ್ತೆರಡು ಗೊಂಬೆಗಳು ಹೇಳುವ ‘ಬತ್ತೀಸ ಪುತ್ಥಳಿ ಕಥೆ’ ; ಕನ್ನಡದ ಶ್ರಾವಕಾಚಾರ ಗ್ರಂಥಗಳು ; ಮಡಿವಾಳೇಶ್ವರ ಕಾವ್ಯ ; ಬಸವ ಮಹತ್ವದ ಸಾಂಗತ್ಯ ; ಸೌಂದರ್ಯ ಕಾವ್ಯ, ಅರಸರ ಚರಿತ್ರೆಗಳು ಹೀಗೆ ಮೂವತ್ತಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಸಂಪಾದಿಸಿ ಜೀವ ತುಂಬಿದ್ದಾರೆ.
ಗ್ರಂಥ ಸಂಪಾದನೆಯ ಕೆಲವು ಅಧ್ಯಯನಗಳು, ಗ್ರಂಥ ಸಂಪಾದನೆಯ ಎಳೆಗಳು, ಆಲಿ ನುಂಗಿದ ನೋಟ, ಸಮಾಗತ ಮುಂತಾದ ಅತ್ಯಮೂಲ್ಯ ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ‘ವಿಕ್ರಮಾದಿತ್ಯನ ಸಿಂಹಾಸನ’ ಎಂಬ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಯನ್ನು ರಚಿಸಿದ್ದಾರೆ.
ಹೀಗೆ ಡಾ|| ವೈ.ಸಿ.ಭಾನುಮತಿಯವರು ಸಂಶೋಧನೆ, ಸಂಪಾದನೆ ಹಾಗೂ ಕೃತಿ ರಚನೆಗಳಲ್ಲಿ ಅವಿಸ್ಮರಣೀಯ ಕಾರ್ಯ ಮಾಡಿದ್ದಾರೆ. ಮೈಸೂರು ವಿಶ್ವ ವಿದ್ಯಾಲಯದ ಜಾನಪದ ವಿಶ್ವಕೋಶದ ಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ ಮತ್ತು ಮೈಸೂರು ವಿಶ್ವ ವಿದ್ಯಾಲಯದ ಕನ್ನಡ ಹಸ್ತ ಪ್ರತಿ ವರ್ಣನಾತ್ಮಕ ಸೂಚಿಯ ಐದು ಸಂಪುಟಗಳಲ್ಲಿ ಕೆಲಸ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೌಲ್ಯಭರಿತ ಕಾಯಕ ಮಾಡುವುದರ ಮೂಲಕ ತವರು ಜಿಲ್ಲೆಯಾದ ಹಾಸನದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕೇವಲ ಕಥೆ, ಕಾದಂಬರಿ, ಕಾವ್ಯ, ನಾಟಕ ಮಾತ್ರ ಸಾಹಿತ್ಯಿಕ ಕೆಲಸವಲ್ಲ . ಅದರಾಚೆಗೂ ಚಾಚಿದ ಸಂಶೋಧನೆ, ಸಂಪಾದನೆ, ಜಾನಪದ ಅದ್ಯಯನ ಮುಂತಾದ ಅಪರೂಪದ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬಹುದೆಂದು ವೈ.ಸಿ.ಭಾನುಮತಿಯವರು ಸಾಧಿಸಿ ತೋರಿಸಿದ್ದಾರೆ.
1984 ರಲ್ಲಿ ‘ಸಹ್ಯಾದ್ರಿ ಖಂಡ’ ಹಾಗೂ 1989 ರಲ್ಲಿ ‘ಬತ್ತೀಸ ಪುತ್ಥಳಿ ಕಥೆ’ ಸಂಪಾದನೆಗಾಗಿ ಆಯಾ ವರ್ಷದ ಶ್ರೇಷ್ಠ ಗ್ರಂಥಗಳೆಂದು ಪರಿಗಣಿಸಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿವೆ. ಇವರ ಸುಪ್ರಸಿದ್ದ ಸಂಶೋಧನಾ ಗ್ರಂಥವಾದ ‘ಮಲೆನಾಡು ಶೈವ ಒಕ್ಕಲಿಗರು’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ ಪ್ರಶಸ್ತಿ’ , ಹಾಗೂ ತಿ.ನಂ.ಶ್ರೀ ಸಂಶೋಧನಾ ಪ್ರಶಸ್ತಿ ದೊರೆತಿದೆ. ಗ್ರಂಥ ಸಂಪಾದನೆಯ ಕೆಲವು ಅದ್ಯಾಯನ ಮತ್ತು ಬತ್ತೀಸ ಪುತ್ಥಳಿ ಕೃತಿಗಳಿಗೆ ಬಿ.ಎಂ.ಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ಸಂಶೋಧನಾ ಪ್ರಶಸ್ತಿ ಹಾಗೂ ತಿ.ನಂ.ಶ್ರೀ ಸಂಶೋಧನಾ ಪ್ರಶಸ್ತಿಗಳು ದೊರೆತಿವೆ. ಇವರ ‘ಪುಟ್ಟ ಮಲ್ಲಿಗೆ ಹಿಡಿತುಂಬ’ ಕೃತಿಗೆ ಕನ್ನಡ ಸಾಹಿತ್ಯದ ದತ್ತಿ ಬಹುಮಾನ ದೊರೆತಿದೆ. ಇವರ ಇನ್ನೊಂದು ಪ್ರಮುಖ ಕೃತಿಯಾದ ‘ಇಬ್ಬೀಡಿನ ಜನಪದ ಕಥೆಗಳು’ ಕೃತಿಗೆ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿಗಳು ದೊರೆತಿವೆ. ಇಷ್ಟೇ ಅಲ್ಲದೆ ಕರ್ನಾಟಕ ವಿದ್ಯಾವರ್ಧಕ ಪ್ರಶಸ್ತಿ, ಫ.ಗು.ಹಳಕಟ್ಟಿ ಸಂಶೋಧನಾ ಪ್ರಶಸ್ತಿ, ಹ.ಕ.ರಾಜೇಗೌಡ ಸಂಪಾದನಾ ಪ್ರಶಸ್ತಿ, ಜೀ.ಶಂ.ಪ ಜಾನಪದ ತಜ್ಞ ಪ್ರಶಸ್ತಿಗಳು ಸೇರಿದಂತೆ ನೂರಾರು ಸಂಘ, ಸಂಸ್ಥೆಗಳು ಭಾನುಮತಿಯವರನ್ನು ಸನ್ಮಾನಿಸಿ ಗೌರವಿಸಿವೆ.
ತವರು ತಾಲ್ಲೂಕಿನ ಹಲ್ಮಿಡಿಯಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವೂ ಇವರ ಸಾಧನೆಗೆ ಸಂದಿರುವುದು ಶ್ಲಾಘನೀಯವಾದುದು.
ವ್ಯಾಪಕ ಅಧ್ಯಾಯನದ ತಲಸ್ಪರ್ಶಿ ಚಿಂತಕ - ಶಂಕರನಾರಾಯಣ ರಾವ್
ವಸ್ತು ನಿಷ್ಠ ವಿಮರ್ಶೆಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಹಾಗೂ ಸಾಹಿತಿಗಳನ್ನು ನಿಷ್ಟುರವಾಗಿ ವಿಮರ್ಶಿಸಿ ಪ್ರಖರತೆ ಬೀರಿದವರು ಎನ್.ಪಿ.ಶಂಕರನಾರಾಯಣ ರಾಯರು. ಆಳವಾದ ಹಾಗೂ ನಿರಂತರ ಅಧ್ಯಯನದಿಂದ ಅಗಾಧ ಜ್ಞಾನ ಸಂಪಾದಿಸಿದ್ದ ಇವರು ಉತ್ತಮ ತಲಸ್ಪರ್ಶಿ ಚಿಂತಕರೂ ಆಗಿದ್ದರು ಎಂಬುದು ವಿಶೇಷವಾದುದು.
ಇವರು ಕ್ರಿ.ಶ.1928 ರ ಆಗಸ್ಟ್ 03 ರಂದು ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ನಿಟ್ಟೂರು ಗ್ರಾಮದ ಶ್ರೀ ಪಟ್ಟಾಬಿರಾಮಯ್ಯ ಹಾಗೂ ಶ್ರೀಮತಿ ಅಚ್ಚಮ್ಮನವರ ಮೂರು ಮಕ್ಕಳಲ್ಲಿ ಮೊದಲ ಗಂಡು ಮಗುವಾಗಿ ಜನಿಸಿದರು. ತಂದೆ ಸಬ್ರಿಜಿಸ್ಟಾರ್ ಕಛೇರಿಯಲ್ಲಿ ಕಾರ್ಯ ಮಾಡುತ್ತಿದ್ದರಿಂದ ಒಂದೆಡೆ ನೆಲೆನಿಲ್ಲದೆ ವರ್ಗಾವಣೆವಾದ ಕಡೆಯಲ್ಲೆಲ್ಲಾ ಶಂಕರನಾರಾಯಣ ರಾಯರ ಶಿಕ್ಷಣವೂ ವರ್ಗಾವಾಗುತ್ತಾ ಸಾಗಿತು.
ಇವರು ಬೆಂಗಳೂರಿನ ಶ್ರೀರಾಂಪುರದಲ್ಲಿ ಕಿರಿಯ ಪ್ರಾಥಮಿಕ ಶಿಕ್ಷಣವನ್ನು, ಕನಕಪುರದ ಕಾನಕಾನಹಳ್ಳಿಯಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಆನೆಕಲ್ ಮತ್ತು ಬಸವನಹಳ್ಳಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಹಾಗೆಯೇ ಮೈಸೂರಿನ ಶಾರದಾ ವಿಲಾಸ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿದರು.
ಹೈಸ್ಕೂಲು ಓದುತ್ತಿದ್ದಾಗಲೇ ಇಡಿ ಭಾರತದಾದ್ಯಾಂತ ಸ್ವಾತಂತ್ರ್ಯ ಚಳವಳಿಯ ಕಾವು ಎಲ್ಲೆಡೆ ಪಸರಿಸಿತ್ತು. ಈ ಬಿಸಿ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪಡೆಯುತ್ತಿದ್ದ ಶಂಕರನಾರಾಯಣರಾಯರನ್ನು ತಟ್ಟಿದ ಪರಿಣಾಮ ಚಳವಳಿಯಲ್ಲಿ ಭಾಗಿಯಾಗಿ ಸೆರೆಮನೆವಾಸವನ್ನೂ ಅನುಭವಿಸುವಂತಾಯಿತು.
ಚಿಕ್ಕಂದಿನಿಂದಲೇ ಅಧ್ಯಯನ ಮತ್ತು ಅಧ್ಯಾಪನಗಳಿಂದ ಹೃದಯ ವೈಶಾಲ್ಯತೆ ಬೆಳೆಸಿಕೊಂಡ ಶಂಕರನಾರಾಯಣ ರಾಯರು ಮೈಸೂರಿನಲ್ಲಿದ್ದಾಗ ಕಮುನಿಸ್ಟ್ ಸಂಘಟಕರೊಬ್ಬರ ಪರಿಚಯದಿಂದ ವೈಚಾರಿಕ ಹಾಗೂ ವೈಜ್ಞಾನಿಕವಾಗಿ ತುಂಬಾ ಆಸಕ್ತರಾಗಿ ತಲಸ್ಪರ್ಶಿ ವಿಶ್ಲೇಷಣೆಯೊಂದಿಗೆ ಸಮಾಜವನ್ನು ತಾರ್ಕಿಕ ಚಿಂತನೆಯಡಿಯಲ್ಲಿ ಅರಿತುಕೊಂಡರು. ಇದೆ ಸಂದರ್ಭದಲ್ಲಿ ‘ಮೈಸೂರು ಸ್ಟೂಡೆಂಟ್ಸ್ ಆರ್ಗನಿಜೇಷನ್’ ಸ್ಥಾಪಿಸಿ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಪರಿಹರಿಸುವುದರ ಜೊತೆಗೆ ದೇಶಭಕ್ತಿ, ದೇಶಭಿಮಾನಗಳನ್ನು ಭಿತ್ತಿದರು. ಶಂಕರನಾರಾಯಣ ರಾಯರಿಗೆ ಈ ಹೋರಾಟ, ಚಳವಳಿಯಿಂದ ಅನೇಕ ದೊಡ್ಡ ವ್ಯಕ್ತಿಗಳ ಪರಿಚಯವಾಯಿತು.
ಬಾಲ್ಯಾವಸ್ಥೆಯಲ್ಲಿಯೇ ತಂದೆಯ ಹಿಂದೆ ವಲಸೆ ಹೋಗುತ್ತಾ ವಿವಿಧ ಊರುಗಳ ಸಂಸ್ಕøತಿ, ಆಚಾರ, ವಿಚಾರಗಳು, ಅಲ್ಲಿಯ ಸಾಂಸ್ಕøತಿಕ ಸಂಗತಿಗಳು ಇವರ ಮೇಲೆ ಬಹಳವೇ ಪರಿಣಾಮ ಬೀರಿದವು. ಆದ್ದರಿಂದಲೇ ಇವರು ಅಲ್ಲಿ ನಡೆಯುವ ರಂಗಭೂಮಿಯ ಕಡೆ ಪ್ರಭಾವಿತರಾದರು. ಸಮಾಜಿಕವಾಗಿ ಮೌಲಿಕತೆ ತುಂಬುವಂತಹ ನಾಟಕ ಹಾಗೂ ಚಲನ ಚಿತ್ರಗಳನ್ನು ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ಭಕ್ತ ಪ್ರಹ್ಲಾದ, ಬಬ್ರುವಾಹನ, ಭಕ್ತಧೃವ, ಸತ್ಯವಾನ್ ಸಾವಿತ್ರಿ ಇವು ಶಂಕರನಾರಾಯಣ ರಾಯರು ಇಷ್ಟ ಪಡುತ್ತಿದ್ದ ಕೆಲವು ಮಹತ್ವದ ಚಲನ ಚಿತ್ರಗಳು.
ಕೇವಲ ಚಲನ ಚಿತ್ರಗಳಲ್ಲದೆ ರಂಗಭೂಮಿಯ ಕಡೆಗೂ ಇವರ ಗಮನ ಹರಿಯಿತು. ಹಳ್ಳಿಯ ಕಡೆ ನಡೆಯುವ ನಾಟಕಗಳನ್ನು ತಪ್ಪದೆ ವೀಕ್ಷಿಸುತ್ತಿದ್ದ ಶಂಕರನಾರಾಯಣ ರಾಯರು ಅವುಗಳಲ್ಲಿನ ಸಾಮಾಜಿಕ ಮೌಲ್ಯಗಳನ್ನು ಗುರುತಿಸಿ ಬರಹಗಳ ಮೂಲಕ ಹೊರ ಜಗತ್ತಿಗೆ ಪರಿಚಯಿಸುತ್ತಿದ್ದರು. ಭೀಷ್ಮ ಪ್ರತಿಜ್ಞೆ, ದಾನಶೂರ ಕರ್ಣ ಇವರ ನೆಚ್ಚಿನ ನಾಟಕಗಳು.
ಓದು, ಬರಹ ಕಲಿಯ ನಂತರ ಪ್ರಪ್ರಥಮವಾಗಿ ಓದಿದ ಪುಸ್ತಕ ಜ್ಞಾನಪೀಠ ಪ್ರಶಸ್ತಿ ಪುರಸ್ಕøರು ಹಾಗೂ ಖ್ಯಾತ ಸಣ್ಣ ಕಥೆಗಾರರಾದ ಮಾಸ್ತಿ ವೆಂಕಟೇಶ್ ಅಯ್ಯಾಂಗಾರರ ‘ಕೆಲವು ಸಣ್ಣ ಕಥೆಗಳು’. ಈ ಕೃತಿಯು ಶಂಕರನಾರಾಯಣ ರಾಯರ ಚಿಂತನಾ ಲಹರಿಯನ್ನೇ ಬದಲಾಯಿಸಿತೆನ್ನಬಹುದು. ಈ ಸಂಕಲನದಲ್ಲಿ ಬರುವ ‘ರಂಗಪ್ಪನ ದೀಪಾವಳಿ’ ಎಂಬ ಕಥೆಯಲ್ಲಿನ ವೆಂಕಟರಾಯನ ಪಿಶಾಚಿ ಇವರನ್ನು ಬಹಳ ದಿನಗಳವರೆಗೆ ಕಾಡಿದ ಭಯಾನಕ ಪಾತ್ರ.
ಮೈಸೂರಿನಲ್ಲಿ ಇಂಟರ್ ಮೀಡಿಯೇಟ್ ಓದುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಕಾರ್ಮಿಕ ವರ್ಗದ ಸಮಸ್ಯೆಗಳ ಮಹಾಪೂರವನ್ನೆ ಕಂಡ ರಾಯರು ಅವರ ಒಳಿತಿಗಾಗಿ ‘ಮೈಸೂರು ಪುರಸಭಾ ಕಾರ್ಮಿಕ ಸಂಘ’ವನ್ನು ಸ್ಥಾಪಿಸಿದರು. ಸಾವಿರಾರು ಕಾರ್ಮಿಕರನ್ನು ಒಗ್ಗೂಡಿಸಿ ಅವರ ತುಟ್ಟಿಭತ್ಯೆ ಹಾಗೂ ಅವರಿಗೆ ನೀಡುತ್ತಿದ್ದ ಕೆಳದರ್ಜೆಯ ಜೋಳ ಮತ್ತು ಅಕ್ಕಿ ಪಡಿತರ ವಿರುದ್ದ ಹೋರಾಟ ನಡೆಸಿದರು.
ದಾವಣಗೆರೆಯ ಗಿರಣಿ ಕಾರ್ಮಿಕರ ಸಂಘ, ಹರಿಹರದ ಕಿರ್ಲೋಸ್ಕರ್ ಸಂಘಗಳೊಡನೆ ನಿಕಟ ಸಂಬಂಧವಿಟ್ಟುಕೊಂಡು ಮೈಸೂರು ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡುತ್ತಿದ್ದರು. ಸಂಘಟನೆಗಳ ಕಡೆ ಹೆಚ್ಚು ಗಮನ ನೀಡಿದ್ದರಿಂದ ಸೀನಿಯರ್ ಇಂಟರ್ಮೀಡಿಯೇಟ್ನಲ್ಲಿ ಅನುತ್ತೀರ್ಣವಾಗಬೇಕಾಯಿತು.
ವೃತ್ತಿ ಃ ಶಂಕರನಾರಾಯಣ ರಾಯರು ಅವರ ಬದುಕನ್ನು ಬಹುತೇಕ ಸಾರ್ವಜನಿಕವಾಗಿಯೇ ತೆರೆದುಕೊಂಡವರು. ಹೋರಾಟ, ಚಳವಳಿಗಳ ಪರಿಣಾಮದಿಂದ ವಿದ್ಯಭ್ಯಾಸ ಮೊಟಕಾದ್ದರಿಂದ ಉದ್ಯೋಗದತ್ತ ಗಮನ ನೀಡಿದರು. ಚಿಕ್ಕಮಗಳೂರಿನ ‘ಪಬ್ಲಿಕ್ ಕನ್ವೆಯನ್ಸ್’ ಎಂಬ ಸಾರಿಗೆ ಸಂಸ್ಥೆಯಲ್ಲಿ ಉಗಾಣ ಗುಮಾಸ್ತರಾಗಿ ವೃತ್ತಿ ಆರಂಭಿಸಿದ ರಾಯರಿಗೆ ಇಲ್ಲಿನ ಪಗಾರ ಸಾಕಾಗಲಿಲ್ಲ! ನಂತರ ಮದರಾಸಿನ ಅಂಚೆ ಮತ್ತು ತಂತಿ ಕಛೇರಿಯಲ್ಲಿ ಉದ್ಯೋಗ ಆರಂಭಿಸಿದರು. ಇಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಮದರಾಸಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಮಿತಿಯಲ್ಲಿ ‘ಹಿಂದಿ ರಾಷ್ಟ್ರಭಾಷಾ’ ಪರೀಕ್ಷೆ ಬರೆದು ಉತ್ತೀರ್ಣರಾದರು. ಇದೆ ಸಮಯದಲ್ಲಿ ಅನುತ್ತೀರ್ಣಗೊಂಡಿದ್ದ ಇಂಟರ್ ಮೀಡಿಯೇಟ್ನ್ನು ಮಧ್ಯಪ್ರದೇಶದ ‘ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್’ ಮುಖಾಂತರ ಉತ್ತೀರ್ಣಗೊಂಡರು. ಓದಿಗಾಗಿಯೇ ಬಹುತೇಕ ಸಮಯವನ್ನು ರಾಯರು ತಮ್ಮ ದಿನಚರಿಯಲ್ಲಿ ನಿಗದಿಪಡಿಸಿಕೊಂಡಿದ್ದರು ಅದಕ್ಕಾಗಿಯೇ ಅವರು ಅಂದು ಕೊಂಡಂತೆ ಶೈಕ್ಷಣಿಕ ಜ್ಞಾನ ಪಡೆಯಲು ಸಹಕಾರಿಯಾಯಿತೆನ್ನಬಹುದು. ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಅಂಚೆತೆರಪಿನ ಶಿಕ್ಷಣದಿಂದ ಬಿ.ಎ ಪದವಿ ಪೂರೈಸಿದರು.
ಮದರಾಸಿನಿಂದ ಪುನಃ ಮರ್ನಾಟಕಕ್ಕೆ ಬಂದ ರಾಯರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಮಾನವ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಭಾರತ ಎಜುಕೇಶನ್ ಸೊಸೈಡಿಯಲ್ಲಿ ಅಧ್ಯಾಪಕರಾಗಿ ಸೇರ್ಪಡೆಗೊಂಡು ಶಿಕ್ಷಣ ಕ್ಷೇತ್ರಕ್ಕೆ ಬಂದರು.
ಅಧ್ಯಾಪಕ ವೃತ್ತಿಯಲ್ಲಿದ್ದಾಗಲೆ ದೆಹಲಿಯ ವಿಶ್ವ ವಿದ್ಯಾನಿಲಯದ ಸಮಾಜ ವಿಜ್ಞಾನ ವಿಭಾಗದ ಸಾಮಾಜಿಕ ವೈಧ್ಯ ಮತ್ತು ಸಮುದಾಯ ಸ್ವಾಸ್ಥ್ಯ ಕೇಂದ್ರಕ್ಕಾಗಿ ಕ್ಷೇತ್ರ ಕಾರ್ಯ ಕೈಗೊಂಡು ‘ಪರಿವರ್ತನೆಯ ಸುಳಿಯಲ್ಲಿ ಕಿರು ಸಮುದಾಯಗಳು’ ಎಂಬ ಸಂಶೋಧನಾ ವರದಿಯನ್ನು ನೀಡಿದರು.
ನಂತರ ಇನ್ವೆಸ್ಟಿಗೇಟರ್ ಆಗಿ ನೇಮಕಗೊಂಡ ರಾಯರು ಎರಡು ವರ್ಷಗಳ ಕಾಲ ಜನಗಣತಿ ಇಲಾಖೆಗೆ ವರ್ಗಗೊಂಡು ಅಧ್ಯಯನ ನಡೆಸಿ ‘ದಿ ಯರವಾಸ್ ಆಫ್ ಕೊಡಗು’, ‘ಪಣಿಯರ ಸಮಾಜ ಮತ್ತು ಜಾನಪದ ಇತಿಹಾಸ’, ‘ಪಂಜಿಯವರ ಸಮಾಜ ಮತ್ತು ಜಾನಪದ ಇತಿಹಾಸ’ ಎಂಬ ಶ್ರೇಷ್ಠ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ರಂಗ ಭೂಮಿ ಮತ್ತು ಚಲನ ಚಿತ್ರ ನಂಟು ಃ ಮದರಾಸಿನಲ್ಲಿದ್ದಾಗ ಇವರಲ್ಲಿ ಜಾಗೃತವಾಗಿದ್ದ ಕಲೆ ಸುಮ್ಮನೆ ಕೂರಲು ಬಿಡಲಿಲ್ಲ. ಅಲ್ಲಿನ ಕರ್ನಾಟಕ ಸಂಘವು ಏರ್ಪಡಿಸುತ್ತಿದ್ದ ನಾಟಕಗಳನ್ನು ವೀಕ್ಷಿಸುತ್ತಾ, ಪರಿಚಯವಾಗಿ ಅಭಿನಯಿಸುತ್ತಾ ಉತ್ತಮ ನಟನೆಂದು ಗುರುತಿಸಿಕೊಂಡರು. ಅಂದು ಕನ್ನಡ ಚಲನ ಚಿತ್ರಗಳು ಬಹುತೇಕ ಮದಾಸಿನಲ್ಲಿಯೇ ನಿರ್ಮಾಣವಾಗುತ್ತಿದ್ದವು. ಈ ಸಂದರ್ಭದಲ್ಲಿ ಇವರ ನಾಟಕ ಅಭಿನಯದ ಛಾಪು ಚಲನ ಚಿತ್ರ ನಿರ್ದೇಶಕ ಆರ್.ನಾಗೇಂದ್ರರಾಯರನ್ನು ಸೆಳೆಯಿತು. ಇವರಿಬ್ಬರ ಪರಿಚಯ ಶಂಕರನಾರಾಯಣ ರಾಯರನ್ನು ಕನ್ನಡ ಚಲನ ಚಿತ್ರರಂಗಕ್ಕೆ ತಂದು ನಿಲ್ಲಿಸಿತು. 1953 ರಲ್ಲಿ ತೆರೆಕಂಡ ‘ಜಾತಕ ಫಲ’ ಇವರ ಚೊಚ್ಚಲ ಸಿನಿಮಾ. 1954 ರಲ್ಲಿ ಬಂದ ‘ಜಲದುರ್ಗಾ’, 1956 ರಲ್ಲಿ ತೆರೆಕಂಡ ‘ಭಕ್ತ ಮಾರ್ಕೇಂಡೇಯ’, ‘ಭಕ್ತ ವಿಜಯ’ ಸಿನಿಮಾಗಳು ಇವರಿಗೆ ಕೀರ್ತಿತಂದುಕೊಟ್ಟವು. 1957 ರಲ್ಲಿ ಬಂದ ‘ಸ್ಕೂಲ್ ಮಾಸ್ಟರ್’ 1960 ರಲ್ಲಿ ತೆರೆಕಂಡ ‘ರಾಣಿ ಹೊನ್ನಮ್ಮ’, ‘ವಿಜಯನಗರ ವೀರ ಪುತ್ರ’, ‘ಕಂಠೀರವ’ ಇವರ ಇತರ ಪ್ರಮುಖ ಚಲನ ಚಿತ್ರಗಳಾಗಿವೆ. ಇಷ್ಟೇ ಅಲ್ಲದ ಆಕಾಶವಾಣಿಗೆ ಅನೇಕ ರೂಪಕಗಳನ್ನು ಬರೆದಿದ್ದಾರೆ.
ಸಾಹಿತ್ಯ ಕ್ಷೇತ್ರ ಃ
‘ಜೀವ ಸೆಳೆದ ಹುಡುಗಿ’ ಇವರ ಚೊಚ್ಚಲ ಪತ್ತೆದಾರಿ ಕಾದಂಬರಿ. ‘ಗಡಿಯಾಚೆಯ ಗುಡಿಗಳು’(1971), ‘ಅವತಿ ನಾಡ ಪ್ರಭುಗಳು’(1971), ಮೈಸೂರು ಹಾಗೂ ಬೆಂಗಳೂರು ವಿಶ್ವ ವಿದ್ಯಾನಿಲಯಗಳಿಗಾಗಿ ಬರೆದ ‘ಭಾರತದ ಪ್ರಚಲಿತ ಸಾಮಾಜಿಕ ಸಮಸ್ಯೆಗಳು’(1972). ‘ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋರಾಟ’(1987).
‘ಭಾರತೀಯ ಅಂಚೆ ಬಂಧು’, ‘ಕೌಸ್ತುಭ’, ‘ಸ್ತೋತ್ರ ಕೌಸ್ತುಭ’- ಸಂಪಾದಿತ ಕೃತಿಗಳು. ಇವರ ‘ಸ್ವಾತಂತ್ರ್ಯ ಹೋರಾಟದ ಸಾವಿರ ತೊರೆಗಳು’ ಕೃತಿಯು ಇಡಿ ಸ್ವಾತಂತ್ರ್ಯ ಚಳವಳಿಯ ವಿವಿಧ ಘಟ್ಟ್ಗಳನ್ನು ವಿಭಿನ್ನವಾಗಿ ತೋರಿಸುವ ಅಮೂಲ್ಯ ಐತಿಹಾಸಿಕ ಗ್ರಂಥವಾಗಿದೆ.
1981 ರಲ್ಲಿ ‘ಕನ್ನಡ ಪ್ರಭ’ ದಿನಪತ್ರಿಕೆಗೆ ಪ್ರಾಚೀನ ಅಮೇರಿಕನ್ ನಾಗರೀಕತೆ, ಭೂಮಿಯ ವೈಶಿಷ್ಟ್ಯಗಳು, ಆಗ್ನೇಯ ಏಷ್ಯಾದಲ್ಲಿ ವ್ಯಾಪಿಸಿರುವ ಭಾರತೀಯ ಸಾಂಸ್ಕøತಿಕ ಪ್ರಭಾವಗಳು ಎಂಬ ವಿಷಯಗಳ ಕುರಿತು ಬರೆದ ‘ವಿಚಾರ ವೇದಿಕೆ’ ಎಂಬ ಅಂಕಣವು ಇವರಿಗೆ ಬಹಳ ಪ್ರಸಿದ್ಧಿ ತಂದುಕೊಟ್ಟಿತು.
ಈ ಮಧ್ಯೆ ಕಾಲಿನ ಕಿರು ಬೆರಳಿಗೆ ಹುಣ್ಣು ತಗುಲಿ ಇಡಿ ಒಂದು ಕಾಲನ್ನೇ ಕತ್ತರಿಸಬೇಕಾಯಿತು. ಆದರೂ ಕಾಲಿಲ್ಲದವ ಎಂಬ ಯಾವುದೇ ಕೀಳಿರಿಮೆಗೆ ಒಳಗಾಗದೇ ಆತ್ಮಸ್ಥೈರ್ಯದಿಂದ ಮೊದಲಿಗಿಂತಲೂ ಚುರುಕಾಗಿ ಸಾಹಿತ್ಯಿಕ ಕೈಂಕರ್ಯ ಮಾಡಿದರು. ಈ ಅಪಘಾತದ ನಂತರ ರಾಯರು ರಚಿಸಿದ ಕೃತಿಗಳು ಬಹಳ ಮಹತ್ವ ಪಡೆದಿವೆ. ಅನುವಾದ ಪ್ರಕಾರಕ್ಕೆ ಸಾಕಷ್ಟು ಕೊಡುಗೆ ನೀಡಿರುವ ರಾಯರು ಬಹುಭಾಷಾ ಪಾರಂಗತರಾಗಿದ್ದರು. ಆಂಗ್ಲಭಾಷೆ, ತೆಲುಗು ತಮಿಳು , ಹಿಂದಿ ಮುಂತಾದ ಭಾಷೆಗಳಿಂದ ಕನ್ನಡಕ್ಕೆ ಸಾಕಷ್ಟು ಕೃತಿಗಳನ್ನು ಅನುವಾದಿಸಿದ್ದಾರೆ. ಅವುಗಳಲ್ಲಿ ‘ಪ್ರಾಚೀನ ಭಾರತ’, ‘ಠಕ್ಕನೊಬ್ಬನ ಆತ್ಮ ಚರಿತ್ರೆ’, ‘ಮಹಾತ್ಮ ಗಾಂಧಿ ಕೃತಿ ಸಂಚಯ’, ‘ನೆಲಕಚ್ಚಿದ ಗುಬ್ಬಚ್ಚಿ’, ‘ಅಪ್ಪುವಿನ ತಾಯಿ’ ಪ್ರಮುಖವಾದ ಕೃತಿಗಳಾಗಿವೆ.
ಇಷ್ಟೆ ಅಲ್ಲದೆ ‘ಅಷ್ಫಾಕ್ ಉಲ್ಲ’, ‘ರಾಮ್ ಪ್ರಸಾದ್ ಬಿಸ್ಮಿಲ್ಲಾ’, ‘ಬಟುಕೇಶ್ವರ ದತ್ತ’ ಮುಂತಾದ ವ್ಯಕ್ತಿ ಪರಿಚಯಗಳನ್ನು ಹೊರತಂದಿದ್ದಾರೆ. ಶ್ರೇಷ್ಠ ವಿಧ್ವಾಂಸರು, ಸಂಶೋಧಕರು, ಹೋರಾಟಗಾರರು, ಪ್ರಗತಿಪರ ಚಿಂತಕರು, ಅಧ್ಯಾಪಕರು, ಅನುವಾದಕರು, ರಂಗಭೂಮಿ ಹಾಗೂ ಚಲನ ಚಿತ್ರ ನಟರಾಗಿದ್ದ ಶಂಕರನಾರಾಯಣ ರಾಯರು 2006 ನವಂಬರ್ 28 ರಂದು ಇಹಲೋಕಗೈದರು.
ಮಾನವೀಯ ಸಂವೇದನೆಯ ಕವಯತ್ರಿ - ಭಾಗೀರಥಿ ಆಲೂರು
ಕನ್ನಡ ಸಾಹಿತ್ಯ ಎರಡು ಸಾವಿರ ವರ್ಷಗಳ ಭವ್ಯ ಪರಂಪರೆಯನ್ನು ಒಳಗೊಂಡಿದ್ದು, ವಿಶಿಷ್ಟ, ವಿಭಿನ್ನ, ವೈವಿಧ್ಯಮಯವಾದ ಆಳ-ವಿಸ್ತಾರಗಳನ್ನು ನಿರಂತರವಾಗಿ ಪ್ರವಹರಿಸುತ್ತಲೇ ಬಂದಿದೆ. ಸದಾ ಮೌಲಿಕವಾದ ಕೃತಿರತ್ನಗಳನ್ನು ತನ್ನ ಒಡಲಿಗೆ ತುಂಬಿ ಕೊಳ್ಳುತ್ತಲೇ ಬಂದಿದೆ. ಸಾಹಿತ್ಯವೆಂಬುದು ನಿರಂತರ ಪ್ರಕ್ರಿಯೆ. ಇದರಲ್ಲಿ ಹಲವು ಪ್ರಕಾರಗಳ ಸಾಹಿತ್ಯಿಕ ಮಜಲುಗಳು ಝಳಪಿಸಿವೆ.
ಇದರಲ್ಲಿ ಓದುಗನ ಹೃದಯವನ್ನು ಬಹು ಬೇಗನೆ ತಟ್ಟುವ ಕಾವ್ಯ ರೋಮಾಂಚನಭರಿತವಾದದ್ದು ಎಂದರೆ ಅತಿಶಯೋಕ್ತಿಯಾಗಲಾರದು. ಕವಿ ತನ್ನ ಅನುಭಾವದ ಪರಾಕಾಷ್ಠೆ ತಲುಪಿದಾಗ ಹೊಮ್ಮಿ ಬರುವ ಭಾವ ಚಿಲುಮೆಗಳೆ ಕಾವ್ಯ ತರಂಗಗಳು. ಅವುಗಳನ್ನು ಅಕ್ಷರ ರೂಪದಲ್ಲಿ ಬಂಧಿಸಿ, ಓದುಗನ ಮುಂದಿಟ್ಟು ಆ ಮೂಲಕ ಅವನ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜೀವಂತಿಕೆ ತುಂಬುವುದೇ ಕವಿಯ ಆಧ್ಯ ಕರ್ತವ್ಯ.
ಇಂತಹ ಅನುಭಾವದ ಮೂಸೆಯಲ್ಲಿ ಕಳೆದ ಎರಡು – ಮೂರು ದಶಕಗಳಿಂದ ಕಾವ್ಯ ರಚನೆಯನ್ನೇ ಒಂದು ವ್ರತದಂತೆ ಸ್ವೀಕರಿಸಿರುವ ಲೇಖಕಿ ಭಾಗೀರಥಿ ಆಲೂರುರವರೆಂದರೆ ಅತಿಶಯೋಕ್ತಿಯಾಗಲಾರದು.
ಗಂಗಾ ಆಲೂರು ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾದ ಶ್ರೀಮತಿ ಎ.ಎಸ್.ಭಾಗೀರಥಿಯವರು ಕ್ರಿ.ಶ.1956 ರ ನವಂಬರ್ 11 ರಂದು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಆಲೂರು ಪಟ್ಟಣದ ಸಿದ್ದಪ್ಪಶೆಟ್ಟಿ ಮತ್ತು ಶ್ರೀಮತಿ ಗಿರಿಜಾ ದಂಪತಿಗಳ ಪುತ್ರಿಯಾಗಿ ಜನಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಾದ ಆಲೂರಿನಲ್ಲೇ ಮುಗಿಸಿದ ಇವರು ಪಿ.ಯು.ಸಿ ನಂತರ ಶಿಕ್ಷಕ ತರಬೇತಿ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಎರಡು ದಶಕಕ್ಕೂ ಹೆಚ್ಚು ಕಾಲ ಸೇವೆಗೈದರು. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾಗಲೇ ಹಿಂದಿ ಬಿ.ಇ.ಡಿ ಮಾಡಿಕೊಂಡು ಪ್ರಾವಢ ಶಾಲಾ ಶಿಕ್ಷಕಿಯಾಗಿ ಬಡ್ತಿ ಪಡೆದರು. ಶಿಕ್ಷಕಿ ವೃತ್ತಿಯ ಜೊತೆಗೆ ಸಾಹಿತ್ಯ, ಸಂಘಟನೆಗಳಲ್ಲಿ ತೊಡಗಿಸಿಕೊಂಡು ಬಹುಮುಖಿಯಾಗಿ ಗುರ್ತಿಸಿಕೊಂಡ ಕೀರ್ತಿ ಭಾಗೀರಥಿಯವರದು.
ಚೇತನ ಬಳಗ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ವಚನ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತು ಹೀಗೆ ಹಲವಾರು ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಶ್ರೇಷ್ಠತೆ ಇವರದು.
ಈ ಊರ್ಮಿಳೆಯ ಸ್ವಗತ ಸಂಕಲನವು 30 ಕವಿತೆಯೊಳಗೊಂಡ 44 ಪುಟಗಳನ್ನು ಒಳಗೊಂಡಿದೆ. ಒಂದು ಗಾಢವಾದ ವೈಚಾರಿಕ ಶ್ರದ್ಧೆಯಿಂದ ಬದುಕಿನ ವ್ಯವಹಾರಗಳನ್ನೆಲ್ಲಾ ಪರಿಭಾವಿಸುವ, ವ್ಯಾಖ್ಯಾನಿಸುವ, ಬೆಲೆ ಕಟ್ಟುವ ಸಾತ್ವಿಕ ಕವಿ ಮನಸ್ಸು ಎ.ಎಸ್.ಭಾಗೀರಥಿಯವರದು. ಕಾವ್ಯದಲ್ಲಿ ತಳೆಯುವ ಅನುಭವಗಳನ್ನು ನಿಯಂತ್ರಿಸುತ್ತಿರುವಂತೆ, ನಿರ್ದೇಶಿಸುತ್ತಿರುವಂತೆ ಬೋಧೆಯಾಗುತ್ತದೆ. ಪರಂಪರಾಗತ ಸಂಸ್ಕøತಿಯ ಜೀವಸತ್ವವನ್ನು, ಅದರ ತಾಳಿಕೆಯ ಗುಣವನ್ನು, ಅದರ ಹರಿಗಡಿಯದ ಸೋಜಿಗವನ್ನು ನಿಷ್ಠುರವಾದ ಭಾಷಿಕ ನೆಲೆಗಟ್ಟಿನಲ್ಲಿ ಕವಯತ್ರಿ ಇಲ್ಲಿ ಭಾವನಾತ್ಮಕವಾಗಿ ಪಲ್ಲವಿಸಿದ್ದಾರೆ.
ಮುಖ್ಯವಾಗಿ ಇಲ್ಲಿ ಮಹಿಳಾ ಸಂವೇದನಾಶೀಲ ಭಾವನೆಗಳು ಪಡಿಮೂಡಿವೆ. ಕವಯತ್ರಿಯ ತುಡಿತ ಮಿಡಿತಗಳು ಸಾಮಾಜಿಕವಾಗಿಯೂ ಅನ್ವಯವಾಗುವಂತಹ ಚಾಕಚಕ್ಯತೆ ಇಲ್ಲಿ ಸೊಗಸಾಗಿ ಮೈದಾಳಿವೆ. ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರ ದ್ರೌಪದಿ. ನಾವೆಲ್ಲಾ ತಿಳಿದ ಹಾಗೆ ಪಂಚ ಪಾಂಡವರ ಸತಿಯಾಗಿದ್ದ ದ್ರೌಪತಿಗೆ ಅದರಾಚೆಗೂ ಸಾಗಿ...
...ಸಾತ್ವಿಕನಾದ ಧರ್ಮರಾಯ
ಹಿರಿಯ ನೆಂದೆನಿಸಿದರೆ,
ಭೀಮನ ದುಡುಕು
ಒರಟೆಂದೆನಿಸಿದರೆ,
ಅರ್ಜುನನ ಚಂಚಲತೆ
ಅಸ್ಥಿರತೆ ಮೂಡಿಸಿದರೆ,
ನಕುಲ-ಸಹದೇವರು
ಎಳೆಸೆಂದೆನಿಸಿದರೆ
ಮಹಾಸತಿಯಾದದ್ದು ಯಾರಿಗೆ ?
ಹೃದಯದ ಮೂಲೆಯಲ್ಲಿ ಇಣುಕುವ
ಧೀರ ಕರ್ಣನ ವ್ಯಕ್ತಿತ್ವ ಕಂಡಾಗ
ಇಂತಹ ವೀರನ ಏಕಪತ್ನಿಯಾಗಬಾರದಿತ್ತೆ
ಎಂಬ ಭಾವನೆ ಬಲವಂತವಾಗಿ ತಳ್ಳಲಿಲ್ಲವೇ ?
ಹೀಗೆ ಅವಳ ಮನಸ್ಸಿನಲ್ಲಿ ಅವಿತಿದ್ದ ಇನ್ನೋರ್ವ ವ್ಯಕ್ತಿ ಕರ್ಣ ಎಂಬುದನ್ನು ಕವಯತ್ರಿ ಇಲ್ಲಿ ಚಿತ್ತಾಕರ್ಷಕವಾಗಿ ಚಿತ್ರಿಸಿದ್ದಾರೆ. ಈ ಹೊಸತನ ಕವಿತ್ವದ ಶಕ್ತಿಯ ಕಾಂತಿಯನ್ನು ಇಮ್ಮಡಿಗೊಳಿಸಿದೆ ಎನ್ನಬಹುದು.
ಇಲ್ಲಿ ಪುರಾಣ ಮಾತನಾಡಿದೆ, ಇತಿಹಾಸ ಇಣುಕಿ ನೋಡಿದೆ, ಪ್ರಚಲಿತ ಚರ್ಚಿತವಾಗಿದೆ. ಸಾಮಾಜಿಕ ಮೌಢ್ಯಗಳು ಖಂಡಿಸಲ್ಪಟ್ಟಿವೆ. ಕವಯತ್ರಿ ಬಳಸಿದ ಭಾಷೆ ಪ್ರೌಢವಾಗಿದೆ. ಮಾನವೀಯ ಸಂಬಂಧಗಳಿಲ್ಲಿ ಮಾತನಾಡಿದಂತೆ ಭಾಸವಾಗುತ್ತದೆ. ಸ್ವ ಅನುಭವದ ಸವಿಯನ್ನು ಕವಯತ್ರಿ ಕಾವ್ಯಮಯವಾಗಿಸಿರುವುದು ಹಾಗೂ ಹೃದಯಮಯವಾಗಿಸಿರುವುದು ಗಟ್ಟಿತನ ಮತ್ತು ಧೀಶಕ್ತಿಗೆ ಸಾಕ್ಷಿಯಾಗಿದೆ.
ಪ್ರೌಢಶಾಲಾ ಹಿಂದಿ ಶಿಕ್ಷಕಿಯಾಗಿರುವ ಎ.ಎಸ್.ಭಾಗೀರಥಿಯವರು ಈಗಾಗಲೇ ಗದ್ಯ ಹಾಗೂ ಪದ್ಯಗಳೆರಡರಲ್ಲೂ ತಮ್ಮನ್ನು ತೊಡಗಿಸಿಕೊಂಡು ಆ ಮೂಲಕ ಸಾಹಿತ್ಯ ಕೃಷಿ ಮಾಡುತ್ತಿರುವ ನಮ್ಮ ನಡುವಿನ ಉದಯೋನ್ಮುಖ ಕವಯತ್ರಿ. ಸೂಕ್ಷ್ಮ ಸಂವೇದನೆಯ ಕಾವ್ಯ ಕೃಷಿಗೆ ಇರಬೇಕಾದ ಎಲ್ಲ ತವಕ, ತಲ್ಲಣ, ಆತಂಕ, ಜೀವ ಪ್ರೀತಿಯ ಲಕ್ಷಣಗಳು ಇಲ್ಲಿನ ಕವಿತೆಗಳಲ್ಲಿ ಎದ್ದು ಕಾಣುತ್ತವೆ.
ಗದ್ಯ ಮಾತನಾಡುತ್ತದೆ, ಕಾವ್ಯ ಹಾಡುತ್ತದೆ ಎಂದು ಫ್ರಾನ್ಸ್ ಕವಿ ಗಿಲ್ವಾರ್ಸೆರ್ ಒಂದು ಕಡೆ ಹೇಳಿದ್ದಾರೆ. ಅಂತೆಯೇ ತಮ್ಮ ಕಥೆಗಳ ಮೂಲಕ ಓದುಗರನ್ನು ತನ್ನತ್ತ ಸೆಳೆದು ಹಾಗೆಯೇ ಪದ್ಯದ ಮೂಲಕ ಮನ ಕರಗಿಸುವ ಮನೋವಾಂಛಲ್ಯ ಹೊಂದಿದ ಕವಿ ಹೃದಯ ಭಾಗಿರಥಿಯವರದು ಎಂದರೆ ಅತಿಶಯೋಕ್ತಿಯಾಗಲಾರದು.
ಚೀಪುವ ಮೊಲೆಯ
ಬೆರಳ ತುದಿಯಲಿ ಬಿಡಿಸಿ
ಮುಂಗುರುಳು ತೀಡಿ ಮುತ್ತಿಟ್ಟು
ತೆರೆದ ತುಟಿಗೆ ನಿಪ್ಪಲ್ ಇಟ್ಟು
ಹೊರಟಿಹಳೀ ತಾಯಿ
ಅವರ ನಿಶೆಗೆ ಕರಗಲು...(ಹೀಗೊಬ್ಬ ತಾಯಿ)
ಯೌವನದ ಹೊಸ್ತಿಲಲ್ಲಿ ತಿಳಿದೋ.. ತಿಳಿಯದೆಯೋ ಮಾಡಿದ ತಪ್ಪಿಗಾಗಿ ಕಾಲುಜಾರಿದ ಫಲವಾಗಿ ಹೆತ್ತ ಮಗುವ ಸಾಕಲು ಅದನ್ನೇ ಕಸುಬಾಗಿಸಿಕೊಂಡವರು ಹಲವರು. ಅಂತಹ ಪರಿಸ್ಥಿತಿಯ ಒಬ್ಬ ಮಹಿಳಾ ಮನೋತುಡಿತವನ್ನು ಈ ಕವಿತೆಯಲ್ಲಿ ಕಾಣಬಹುದು. ಆ ಮಗುವನ್ನು ಸಾಕಲಿಕ್ಕಾಗಿ ಇಷ್ಟವಿಲ್ಲದಿದ್ದರೂ ಹೇಯ ಕೆಲಸಕ್ಕೆ ಇಳಿಯುವ ಧೈರ್ಯ ಮಾಡುವ ತಾಯಿ ಅಲಗಿನ ಮೇಲೆ ನಡೆದಾಡಿದಂತಹ ಸಂಕಟವನ್ನು ಇಲ್ಲಿನ ಸಾಲುಗಳಲ್ಲಿ ಅರ್ಥಮಾಡಿಕೊಳ್ಳಬಹುದು.
ಅಪ್ಪನ ಮೂರೆಕೆರೆ ಹೊಲ
ಪದವಿ ಪತ್ರಕ್ಕಾಗಿ,
ಅವ್ವನ ಅಳಿದುಳಿದ ಚಿನ್ನ
ಡಿ.ಡಿ. ಗಳಿಗಾಗಿ...
ಹಣವಿಲ್ಲದೇ ವಶೀಲಿ ಇಲ್ಲದೆ
ಪದವಿ ಪತ್ರಕ್ಕಿಲ್ಲ ಬೆಲೆ
ನಿರುದ್ಯೋಗಿಗಿಲ್ಲ ನೆಲೆ
ಕನ್ಯಾ ಪಿತೃವು ಕಟ್ಟನು ಬೆಲೆ
ಮಾರಾಟಕ್ಕಿದೆ ಪದವಿ ಪತ್ರ ಕೊಳ್ಳುವಿರಾ ?
( ಪದವಿ ಪತ್ರ ಮಾರಾಟಕ್ಕಿದೆ ಕೊಳ್ಳುವಿರಾ ? )
ಇಲ್ಲಿನ ಕವಿತೆಯಲ್ಲಿ ಪ್ರಸ್ತುತ ಸಂದರ್ಭದ ಸಮಸ್ಯೆ, ಶಿಕ್ಷಣ ವ್ಯವಸ್ಥೆಯ ಅರಾಜಕತೆ, ಅಮೌಲ್ಯಗಳು ಅರಿವಿಗೆ ಬಾರದೆ ಇರವು. ಎಲ್.ಕೆ.ಜಿ, ಯು.ಕೆ.ಜಿ ಹಂತವನ್ನೇ ಓದಿಸಲು ಪೋಷಕರಿಂದು ಹರಸಾಹಸ ಪಡಬೇಕಾಗಿದೆ. ಇಂಜೀನಿಯರ್, ಮೆಡಿಕಲ್ಗಳಿಗೆ ಖರ್ಚು ಮಾಡುವಷ್ಟು ಹಣವನ್ನು ಇಂದು ಪೂರ್ವ ಪ್ರಾಥಮಿಕ ಹಂತಕ್ಕೆ ವ್ಯಯಿಸುತ್ತಿರುವುದು ಬಹು ದೊಡ್ಡ ದುರಂತವೇ ಸರಿ. ಈಗಿನ ಕಾನ್ವೆಂಟ್ಗಳೆಲ್ಲಾ ಹಣವಂತರ ಸ್ವತ್ತಾಗುತ್ತಿವೆ. ಬಡ ಕುಟುಂಬದ ಜನ ಸಮುದಾಯ ಇದನ್ನೆಲ್ಲಾ ಗಮನಿಸಿಯೂ ಅನಿವಾರ್ಯವಾಗಿ ಸರಕಾರಿ ಶಾಲೆಯ ಕಡೆ ಮುಖಮಾಡಿದ್ದರೆ, ಅದರಲ್ಲೂ ಆರ್ಥಿಕವಾಗಿ ಸಬಲರಾದವರೂ ದೂರದ ಕಾನ್ವೆಂಟ್ ಹುಚ್ಚು ಹಿಡಿಸಿಕೊಂಡು ದುಂದು ವೆಚ್ಚ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು ಪೋಷಕರೂ ಓದಿಸಿದರೂ ಮುಂದೆ ಆ ಮಗು ಹಂತ ಹಂತವಾಗಿ ಬಂದ ಅಂಕಪಟ್ಟಿಗಳ ಕಡತ ಮಾಡಿ ಜೋಪಾನವಾಗಿ ಜತನಮಾಡಿದರೂ ನೌಕರಿ ದೊರಕುವುದು ದೂರದ ಮಾತೇ ಸರಿ. ಕೊನೆಗೆ ಆ ಪದವಿ ಪತ್ರಗಳನ್ನು ಮಾರಾಟ ಮಾಡೋಣವೆಂದರೆ ಕೊಳ್ಳುವವರಿಲ್ಲ, ಸಾಲ-ಸೋಲ ಮಾಡಿ ಓದಿದಂತ ವಿದ್ಯಾವಂತನಿಗೆ ತನ್ನ ಓದಿಗೆ ತಕ್ಕ ಬೆಲೆ ಸಿಗದೆ ಹೋದಾಗ ನೈತಿಕತೆ ದೂರಾಗಿ ಬೇರೆಯೇ ಮಾರ್ಗಗಳು ಕಾಣಿಸುದುಂಟು. ಅಂತಹ ಪ್ರಸಂಗವನ್ನು ಕವಯತ್ರಿ ಭಾಗೀರಥಿ ಈ ಕವನದಲ್ಲಿ ಮನ ಮುಟ್ಟುವಂತೆ ಕಟ್ಟಿ ಕೊಟ್ಟಿದ್ದಾರೆ.
ಇದರಲ್ಲಿ ಬರುವ ಇನ್ನೊಂದು ಮಹತ್ವದ ಕವಿತೆಯೆಂದರೆ ‘ನನ್ನ ಹಳೆಯ ಕೌದಿ’. ಇಂದು ನಾವುಗಳೆಲ್ಲಾ ಆಧುನಿಕ ಭರಾಟೆಯಲ್ಲಿ ಕಳೆದುಹೋಗುತ್ತಿದ್ದೇವೆ. ಹಿಂದಿನವರ ಚಿನ್ನದಂತಹ ಬದುಕಿನಿಂದ ದೂರಾಗುತ್ತಿದ್ದೇವೆ. ಗ್ರಾಮೀಣ ಸೊಗಡಿನಿಂದ ದೂರೀಕರಿಸಿ ಪಾಶ್ಚಾತ್ಯ ಸಂಸ್ಕøತಿಯತ್ತ ಮುಖಮಾಡಿ ನಿಂತಿದ್ದೇವೆ. ಇಂತಹ ಸಂದರ್ಭದಲ್ಲಿ ಭಾಗೀರಥಿ ನಮ್ಮನ್ನು ತಾತ ಮುತ್ತಾತಂದಿರ ಬದುಕಿನ ಅರಿವಿನ ಕಡೆಗೆ ಕೊಂಡೊಯ್ಯುತ್ತಾರೆ.
ಅವ್ವನ ಬೆಚ್ಚನೆಯ ಸ್ಪರ್ಶ
ಹಿರಿ ಅಕ್ಕನ ಕೈಗಳ ತಂಪು
ಅಜ್ಜಿಯ ಬಿಸಿ ಉಸಿರು
ನನ್ನ ಹಳೆಯ ಕೌದಿಯಲ್ಲಿದೆ.. (ನನ್ನ ಹಳೆಯ ಕೌದಿ )
ಕೌದಿಯ ಮಹತ್ವ ಅದನ್ನು ಹೊದ್ದು ಮಲಗಿದವರಿಗೆ ಗೊತ್ತು. ಇಂದಿನ ಹೈಟೆಕ್ ಹೊದಿಕೆಗಳಿಗೆ ಅಡಾಪ್ಟ್ ಆಗಿರೋ ಬಹುಸಂಖ್ಯಾತ ಮಂದಿಗಳಿಗೆ ಈ ಹಳೆಯ ಸೀರೆ, ಬಟ್ಟೆಗಳಿಂದ ತಯಾರಿಸಿದ ಕೌದಿಯ ಅರಿವಾದರೂ ಹೇಗೆ ಆದೀತು ಅಲ್ಲವೇ ? ಎಂಥ ಚಳಿಯನ್ನು ದೂರವಿಡುವ ಸಾಮಾಥ್ರ್ಯ ಹೊಂದಿರುವ ಕೌದಿ ಕೇವಲ ಬೆಚ್ಚಗೆ ಮಾತ್ರ ಇಡುವುದಿಲ್ಲ, ಅದು ಅವ್ವ, ಅಕ್ಕ, ಅಜ್ಜಿ-ಅಜ್ಜನ ನೆನಪಿನ ಸಂಕೇತವಾಗಿ ನಮ್ಮೊಡನಿದ್ದು ಆ ಎಲ್ಲಾ ಸುಮಧುರ ನೆನಪುಗಳನ್ನು ತಂದು ಕೊಡುತ್ತದೆ ಎಂಬುದು ಕವಯತ್ರಯ ಆಶಯವಾಗಿದೆ.
ಪ್ರಬುದ್ಧ ಬರವಣಿಗೆಯೊಂದಿಗೆ ಸಂವಾದಿಸುವ ಎ.ಎಸ್.ಭಾಗೀರಥಿಯವರು ಇಲ್ಲಿ ಹೆಣ್ಣಿನ ತಾಯ್ತನ, ಆಸೆ, ಸ್ವಾತಂತ್ಯ್ರ, ಅಭಿವ್ಯಕ್ತಿ, ನೋವು-ಸಂಕಟಗಳ ಬಗ್ಗೆ ವಿಶ್ಲೇಸಿದ್ದಾರೆ. ಅಲ್ಲದೆ ಪ್ರಸ್ತುತ ಸಂದರ್ಭದ ಸಾಮಾಜಿಕ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಿದ್ದಾರೆ. ಇವರ ಆಲೋಚನಾ ರೀತಿ ವಿಭಿನ್ನವಾದದ್ದು, ಬದುಕನ್ನು ಬವಣಿಕೆಯಿಂದ ಮಾತ್ರ ನೋಡದೇ ಒಳಹೊಕ್ಕು ಆವಿಷ್ಕರಿಸುವ ಗುಣ ಇವರದು. ಇವರ ಬರವಣಿಗೆ ಹೀಗೆ ಸದಾ ಪ್ರಗತಿಪರವಾಗಿ ಸಾಗಲಿ, ಇನ್ನೂ ಉತ್ತಮೋತ್ತಮ ಕಾವ್ಯ ಕೃಷಿ ಇವರಿಂದಾಗಲಿ ಎಂದು ಆಶಿಸುತ್ತೇನೆ.
ಕವಿ, ಪ್ರಕಾಶಕ, ಪ್ರಾಧ್ಯಾಪಕ – ಎಂ.ಬಿ.ನಟರಾಜು
ಭಾಷೆಯನ್ನು ಬಳಸುವ ವೈಖರಿಯಲ್ಲೇ ನಮ್ಮ ಕಾಳಜಿಗಳು ಕೂಡ ಇರುವುದು. ಕಾವ್ಯದಂತಹ ತೀವ್ರ ಜೀವನ ಸ್ಪರ್ಶದ ಪ್ರಕ್ರಿಯೆಯಲ್ಲಿ ನಮ್ಮ ಅಂತರಾಳದ ಇಷ್ಟಗಳು ಹೊರಬೀಳುವುದು ಕುತೂಹಲಕರವಾಗಿರುತ್ತದೆ.- ಪಿ.ಲಂಕೇಶ್.
ಕಾವ್ಯದಲ್ಲಿ ಅನುಭವ ಕಾವ್ಯರತಿಯಾಗಿ ಹೊರಹೊಮ್ಮಬೇಕು. ಭಾವಾಭಿವ್ಯಕ್ತಿಗೆ ಕಾವ್ಯಕ್ಷೇತ್ರ ಸುಲಭವೆಂದು ಭಾವಿಸಿ ಅನೇಕರು ಕವಿಗಳಾಗ ಹೊರಟು ಕಾವ್ಯದ ರೂಪ, ರಚನೆ, ಸ್ವರೂಪ ಸ್ಪಷ್ಟವಾಗಿ ಅರ್ಥವಾಗದೆ ಸೋತ ಕವಿಗಳೇ ಹೆಚ್ಚು. ಕಾವ್ಯ ಸಾಹಿತ್ಯವನ್ನು ಸೂತ್ರಿಕರಿಸುವ ಕಾರ್ಯ ಕವಿಯಿಂದಾಗಬಾರದು, ಸಾರ್ವತ್ರಿಕಗೊಳಿಸುವ ಕ್ರಿಯೆಯಾಗಬೇಕು. ಕವಿತೆ ಓದುಗನ, ಜನ ಸಾಮಾನ್ಯನ ಆಸೆ, ಅಭಿರುಚಿ, ಆಕಾಂಕ್ಷೆ ಮನೋಧರ್ಮಗಳಿಗೆ ತಕ್ಕುದ್ದಾಗಿರಬೇಕು.
ಗಿಲ್ವಾರ್ಸೆರ್ ಎಂಬ ಫ್ರಾನ್ಸ್ ಕವಿ ಓಂದು ಕಡೆ ‘ಗದ್ಯ ಮಾತನಾಡುತ್ತದೆ-ಪದ್ಯ ಹಾಡುತ್ತದೆ’ ಎಂದು ಹೇಳಿದ್ದಾರೆ. ಅಂತೆಯೇ ಗದ್ಯ ಹಾಗೂ ಪದ್ಯಗಳೆರಡರ ಮೂಲಕವೂ ಸಮಾಜದೊಂದಿಗೆ ಸಂವಾದಿಸುತ್ತಲೇ ಬಂದು ಸಾಮಾಜವಾದಿ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು ಕಳೆದ ನಾಲ್ಕೈದು ದಶಕಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಕಾವ್ಯ, ಲಲಿತ ಪ್ರಬಂಧ, ಜಾನಪದ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಎಂ.ಬಿ.ನಟರಾಜುರವರು.
ಶ್ರೀಯುತ ಎಂ.ಬಿ.ನಟರಾಜುರವರು ಕ್ರಿ.ಶ.1943 ಅಕ್ಟೋಬರ್ 27 ರಂದು ಹಾಸನ ನಗರದಲ್ಲಿ ಶ್ರೀ ಎಂ.ಬೊಬ್ಬಯ್ಯ ಮತ್ತು ಶ್ರೀಮತಿ ಲಕ್ಷ್ಮೀ ದಂಪತಿಗಳ ಪುತ್ರರಾಗಿ ಜನಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೂ 1949 ರಿಂದ 1967 ರವರೆಗೂ ಹಾಸನದಲ್ಲೇ ಪೂರೈಸಿದ ನಟರಾಜುರವರು 1967 ರಿಂದ 1969 ರವರೆಗೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವು ಮುಗಿಸಿದರು.
ವೃತ್ತಿ ಃ ಕ್ರಿ.ಶ.1969-70 ರಲ್ಲಿ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಒಂದು ವರ್ಷ ಪೂರೈಸಿ 1970 ರಲ್ಲಿ ಶಿವಮೊಗ್ಗದ ಆಚಾರ್ಯ ತುಳಸಿ ನ್ಯಾಷನಲ್ ಕಾಮರ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ 2001 ರವರೆಗೂ ಇಲ್ಲಿಯೇ ಸೇವೆ ಸಲ್ಲಿಸಿ ನವೃತ್ತಿಯಾಗಿದ್ದಾರೆ. ಬೋಧನೆಯ ಜೊತೆ-ಜೊತೆಗೆ ಸಾಹಿತ್ಯ, ವಿಚಾರ ಹಾಗೂ ಸಾಮಾಜಿಕ ತಲ್ಲಣಗಳತ್ತಲೂ ತಮ್ಮ ದೃಷ್ಠಿ ಹಾಯಿಸಿದರು.
ಸಾಹಿತ್ಯ ಕ್ಷೇತ್ರ ಃ ನಸುಕು ಕರಗುವ ಮುನ್ನ-1974(ಕಾವ್ಯ), ನೋಟಕ(ಸಣ್ಣ ಕಥೆಗಳು), ಮಲೆನಾಡಿನ ಕಥೆಗಳು(ಸಂಪಾದಿತ ಕೃತಿ), ಹಾಡಾಕೆ ಬೈಗುಂಟೆ ಬೆಳಕುಂಟೆ(ಸಂಪಾದಿತ ಜನಪದ ಗೀತೆಗಳು).
ಇವರ ‘ನಸುಕು ಕರಗುವ ಮುನ್ನ’ ಮೊದಲ ಕವನ ಸಂಕಲನವು 1974 ರಲ್ಲಿ ಪ್ರಥಮಾವೃತ್ತಿಯಾಗಿ ಸಾಗರದ ಅಕ್ಷರ ಪ್ರಕಾಶನದಿಂದ ಪ್ರಟಗೊಂಡಿತು. 68 ಪುಟಗಳ ಈ ಕೃತಿಯು ಆಗ 5 ರೂಪಾಯಿಗಳ ಮುಖಬೆಲೆ ಹೊಂದಿದೆ. ಡಾ.ಕೆ.ಎಸ್.ನಿಸ್ಸಾರ್ ಅಹಮದ್ ಅವರ ಮುನ್ನುಡಿಯ ತೋರಣ ಈ ಕೃತಿಗೆ ಕಳೆ ಕಟ್ಟಿದೆ.
‘ಸ್ವಗತ’ ಕವಿತೆಯಿಂದ ‘ಚಿತ್ರಗಳು’ ಕವಿತೆಯವರೆಗೆ ಒಟ್ಟು 28 ಕಾವ್ಯ ಕುಸುಮಗಳಿಲ್ಲಿ ಅರಳಿವೆ. ಇವರ ಕವಿತೆಯಲ್ಲಿ ವೈಚಾರಿಕ ಹೊಳವಿದೆ. ಸಾಮಾಜಿಕ ಜಂಜಾಟಗಳ ಆರ್ತನಾದವಿದೆ. ಪರಿಸರದ ಅಗಮ್ಯ ನೋಟವಿದೆ. ವಸ್ತು ಸ್ಥಿತಿಯ ಪರಾಮರ್ಶೆಯಿದೆ. ಬದುಕಿನ ಬವಣೆ ಅನಾವರಣಗೊಂಡಿದೆ. ಹಸಿವಿನ ಆಕ್ರಂದನದ ಕೂಗು ಧ್ವನಿಸಿದೆ. ಮಾನವನ ಸಾರ್ಥಕ ಜೀವನಕ್ಕೆ ಬೇಕಾದ ಮೌಲ್ಯಗಳ ಹುಡುಕಾಟವನ್ನು ಕವಿಯಿಲ್ಲಿ ಮಾಡಿದ್ದಾರೆ.
..ಕತ್ತರಿಸಿದ ಕಬ್ಬು ಕೂಳೆ ನಾನು
ಕರಗಲಾರೆ..
ಕೆಸರಾದರೂ
ದಿನಗಳೆದಂತೆ
ನಾನಿಲ್ಲದಿದ್ದರೂ
ಹೊತ್ತು ಬಂದೀತು ನನ್ನ ತನಿ
ರಸಪುಷ್ಠಿಯಲ್ಲಿ
ಕಂದು ಹಳದಿ ಪಟ್ಟೆ ಪಟ್ಟೆಗಳಲ್ಲಿ
ಗೆಣ್ಣು ಕುಚ್ಚುಗಳಲ್ಲಿ…(ಸ್ವಗತ)
ಕವಿ ತನ್ನಲ್ಲಿರುವ ಆಂತರಿಕ ಶಕ್ತಿ ಚೈತನ್ಯದ ಉತ್ಕøಷ್ಟತೆ ಕುರಿತು ಕಬ್ಬಿನ ರೂಪಕದ ಮೂಲಕ ಸೊಗಸಾಗಿ ಚತ್ರಿಸಿದ್ದಾರೆ. ಇದು ಕೇವಲ ವ್ಯಕ್ತಿಚಿತ್ರಣವನ್ನು ಮಾತ್ರ ಕಟ್ಟಿಕೊಡದೆ ಜೈವಿಕ ಕುಲದ ಸಾರ್ವತ್ರಿಕ ಬದುಕಿನ ಹಿನ್ನೆಲೆಯಲ್ಲಿ ಛಲಗಾರಿಕೆಯನ್ನು ತೋರಿಸುತ್ತದೆ.
ಕನ್ನಡದ ಖ್ಯಾತ ಕವಿ ಡಾ.ಕೆ.ಎಸ್.ನಿಸ್ಸಾರ್ ಅಹಮದ್ ರವರು ‘ನಸುಕು ಕರಗುವ ಮುನ್ನ’ ಕೃತಿಯ ಮುನ್ನುಡಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ “ಸಾಮಾನ್ಯವಾಗಿ ನಟರಾಜುರವರ ಪದ್ಯ ಬೆಳೆಯುವುದು ಚಿತ್ರಗಳಿಂದ. ಹೇಳಿಕೆಗಳೇನಿದ್ದರೂ ಈ ಚಿತ್ರಗಳನ್ನು ಬೆಸೆದು ಏಕತೆಯನ್ನು ಸಾಧಿಸಲು ತುಡಿಯುತ್ತವೆ. ಕೆಲವು ಪದ್ಯಗಳಲ್ಲಿ ಚಿತ್ರಗಳ ಉದ್ದೇಶ ಕೇವಲ ತಮ್ಮ ಪ್ರತ್ಯೇಕ ಮೋಹಕತೆ, ಚೆಲ್ವಿಕೆಗಳಲ್ಲೇ ಮುಗಿಯದೇ ಒಟ್ಟು ಪದ್ಯದ ಬೆಳವಣಿಗೆಗೆ ಶ್ರಮಿಸುವುದರಿಂದ ಅವು ಅರ್ಥಪೂರ್ಣವಾಗುವ ದಾರಿ ಹಿಡಿಯುತ್ತವೆ. ಇಲ್ಲಿನ ಬಹುತೇಕ ಪದ್ಯಗಳಲ್ಲಿ ಮೇಲುನೋಟಕ್ಕೆ ಪರಸ್ಪರ ಸಂಬಂಧವಿಲ್ಲದಂತೆ ಕಾಣುವ ಚಿತ್ರಗಳು, ಕವಿಯ ಅನುಭವದ ಚೌಕಟ್ಟಿನಲ್ಲಿ ಅತಾರ್ಕಿಕ ಸಂಬಂಧವನ್ನು ರೂಢಿಸಿಕೊಂಡು ವಸ್ತುವಿನ ವಿವಿಧ ಹಂತಗಳನ್ನು ಸಂಕೇತಿಸಲು ಪ್ರಯತ್ನಿಸುವ ವಿಧಾನವನ್ನು ಕಾಣುತ್ತೇವೆ. ಇದಕ್ಕಿಂತ ಭಿನ್ನವಾದ ವಿಧಾನವೂ ಉಂಟು. ಒಂದೇ ಚಿತ್ರ ತನ್ನ ಹಲವಾರು ವಿವರಗಳೊಂದಿಗೆ ಪದ್ಯದುದ್ದಕ್ಕೂ ಹರಡಿ ಕವಿಯ ಮನೋಗತಕ್ಕೆ ಉಚಿತ ಪ್ರತೀಕವಾಗುವುದು.
ಉದಾಹರಣೆಗೆ ಗಾಳಿಪಟ, ರೋಗದ ಮಕ್ಕಳು ಈ ಎರಡು ವಿಧಾನ ಹೇಗೆ ಸಾಧಿಸುತ್ತವೆ? ಅವಿಗಳ ಯಶಸ್ಸು, ಅಪಯಶಸ್ಸು ಎಲ್ಲಿ? ಎನ್ನುವುದನ್ನು ಗುರುತಿಸುವುದರಿಂದ ನಟರಾಜರ ಕಾವ್ಯ ಸಾಮಾಥ್ರ್ಯವನ್ನು ನಾವೂ ಪರೋಕ್ಷವಾಗಿ ಅರ್ಥ ಮಾಡಿಕೊಂಡಂತಾಗುದರಿಂದ ಪ್ರಾತಿನಿಧಿಕವಾಗಿ ಅವನ್ನಿಲ್ಲಿ ವಿವೇಚಿಸಬಹುದು”.
ಪ್ರಕಾಶನ ಕ್ಷೇತ್ರ ಃ ಎಂ.ಬಿ.ನಟರಾಜರು ಕೇವಲ ಪಾಠ-ಪ್ರವಚನ, ಕಾವ್ಯ-ಬರಹಕ್ಕೆ ಮಾತ್ರ ಸೀಮಿತಗೊಳ್ಳದೆ ಅವರ ಅಭಿರುಚಿಯನ್ನು ಪ್ರಕಾಶನದತ್ತಲೂ ವಿಸ್ತರಿಸಿಕೊಂಡವರು. ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿಕೊಂಡು 1975 ರಲ್ಲಿ ‘ಪರಿಸರ ಸಾಹಿತ್ಯ ಪ್ರಕಾಶನ’ವನ್ನು ಶಿವಮೊಗ್ಗದಲ್ಲಿ ಆರಂಭಿಸಿ ನಾಡಿನ ಗಣ್ಯ ಸಾಹಿತಿಗಳ ಸಾಕಷ್ಟು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸುವ ಕಾರ್ಯ ಮಾಡಿದರು.
ಶಾಂತಿನಾಥ ದೇಸಾಯಿ, ಕೆ.ಪಿ.ಪೂರ್ಣಚಂದ್ರ ತೇಜಸ್ವೀ, ಡಾ.ಎಲ್.ಬಸವರಾಜು ಮುಂತಾದ ಹಿರಿಯರ 25 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸುವುದರ ಮೂಲಕ ಕನ್ನಡ ಪುಸ್ತಕ ಪ್ರಕಾಶನದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ ಕೀರ್ತಿ ನಟರಾಜುರವರದ್ದು ಎಂದರೆ ಅತಿಶಯೋಕ್ತಿಯಾಗಲಾರದು. ಸಮಾಜವಾದಿ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟಿದ್ದ ಇವರು ಅಂತಹ ತತ್ತ್ವ ಸಿದ್ಧಾಂತಗಳಡಿಯಲ್ಲೇ ಪುಸ್ತಕ ಪ್ರಕಟಣೆ ಮಾಡಿದುದು ಸ್ತುತ್ಯಾರ್ಹವಾದುದು.
ನಿವೃತ್ತಿ ಜೀವನ ಃ 2001 ರಲ್ಲಿ ತಮ್ಮ ಉಪಧ್ಯಾಯ ವೃತ್ತಿಯಿಂದ ನಿವೃತ್ತಿಗೊಂಡನಂತರ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಕೃಷಿ ಹಾಗೂ ತೋಟಗಾರಿಕೆಯತ್ತ ಹೆಚ್ಚು ಗಮನ ನೀಡಿದ್ದಾರೆ. ಸದ್ಯ ಶಿವಮೊಗ್ಗದ ಶರಾವತಿ ನಗರದ ಬಾಲ ಯೇಸು ಚರ್ಚ್ ಹತ್ತಿರವಿರುವ ನಂ-49, ಸ್ನೇಹ ನಿಲಯದಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿರುವ 72 ವಯೋಮಾನದ ಎಂ.ಬಿ.ನಟರಾಜುರವರು ನಮ್ಮೆಲ್ಲರಿಗೂ ಆದರ್ಶಪ್ರಿಯರಾದವರೆಂದರೆ ತಪ್ಪಾಗಲಾರದು. ಅವರ ಸರಳ ನಡೆ ನುಡಿ ಹಿರಿಯ-ಕಿರಿಯರೆನ್ನದೇ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ, ಪ್ರತಿಕ್ರಿಯಿಸುವ ಮನೋಭಾವ ಅಪ್ಯಾಯಮಾನವಾದುದು.
ವಿಚಾರಪೂರಿತ ವಾಗ್ಮಿ, ಕವಯತ್ರಿ,ಲೇಖಕಿ - ಸುಶೀಲಾ ಸೋಮಶೇಖರ್
ಪ್ರತಿಭೆ, ಅಭ್ಯಾಸ, ವ್ಯುತ್ಪತ್ತಿಗಳನ್ನು ನಮ್ಮ ಭಾರತೀಯ ಕಾವ್ಯ ಮೀಮಾಂಸಕರು ಈ ಮೂರನ್ನಷ್ಟೆ ಕಾವ್ಯ ಹೇತು ಎಂದು ಸಾರಿದರು. ಅವುಗಳ ಜೊತೆಗೆ ಪಾಶ್ಚಾತ್ಯರು ಹೇಳುವ ಸ್ಪೂರ್ತಿ ಕೂಡ ಸೇರಬೇಕು. ಸ್ಪೂರ್ತಿ ಇಲ್ಲದಿದ್ದರೆ ಕಾವ್ಯವಲ್ಲ, ಏನನ್ನು ರಚಿಸಲು ಬರುವುದಿಲ್ಲ, ಚಿಂತಿಸಲೂ ಬರುವುದಿಲ್ಲ. ಅದೂ ಮುಖ್ಯ ಕಾವ್ಯ ನಿರ್ಮಿತಿಯಲ್ಲಿ ಈ ನಾಲ್ಕು ತತ್ತ್ವಗಳು ಜೊತೆಗೂಡುವುದು ಪ್ರಶಾಂತ ಪರಿಸರದಲ್ಲಿ ಮಾತ್ರ.
ಶ್ರೀ ಕುವೆಂಪು ಅವರನ್ನು ಸೃಷ್ಠಿಮಾಡಿದ್ದು ಮಲೆನಾಡು. ಮಲೆನಾಡಿನ ನಿಸರ್ಗ ರಮಣೀಯ ಪ್ರಶಾಂತ ಪರಿಸರ; ಶ್ರೀ ರಾಮಕೃಷ್ಣಾಶ್ರಮದ ವಾತಾವರಣ, ಕಾವ್ಯ ಸೃಷ್ಠಿ ಸಂದರ್ಭದಲ್ಲಿ ಪರಿಸರದ್ದು ಗಮನೀಯ ಪಾತ್ರ ಎಂಬುದನ್ನು ಮರೆಯುವಂತಿಲ್ಲ.
ಇಷ್ಟೆಲ್ಲ ಪ್ರವರದ ಹಿನ್ನೆಲೆಯ ಉದ್ದೇಶ ಕವಯತ್ರಿ ಸುಶೀಲಾ ಸೋಮಶೇಖರ ಅವರನ್ನು ಪರಿಚಯಿಸುವುದು. ನನ್ನ ಮೊದಲ ‘ವಚನ ದುಂದುಭಿ’ ಕೃತಿಯಿಂದಲೂ ಇಲ್ಲಿಯವರೆಗೆ ನನ್ನ ಸಾಹಿತ್ಯಕ್ಕೆ ಒತ್ತಾಸೆಯಾಗಿ ನಿಂತಿರುವ ಸಹೋದರಿ ಸುಶೀಲಾ ಸೋಮಶೇಖರ್ ನಾಡಿನ ಕೆಲವೇ ಜನ ವಿಚಾರ ಪೂರಿತ ವಾಗ್ಮಿಗಳಲ್ಲಿ ಒಬ್ಬರು, ಸಾವಿರಾರು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಅಧ್ಯಾಪಕಿ. ಒಳ್ಳೆಯ ಗದ್ಯ ರಚನಕಾರರು. ಅದರಲ್ಲೂ ಮಕ್ಕಳ ಕವಿತೆಗಳ ಬರವಣಿಗೆಯಲ್ಲಿ ಇವರದು ಎತ್ತಿದ ಕೈ ಎಂದರೆ ಅತಿಶಯೋಕ್ತಿಯಾಗಲಾರದು. ಸದಾ ಚಿಂತನ ಶೀಲರಾಗಿರುವ ಇವರಿಂದ ನೂರಾರು ಸಾಮಾಜಿಕ ಕಳಕಳಿಯ ಚಿಂತನಗಳು ಬಾನುಲಿ, ದೂರದರ್ಶನ, ವೃತ್ತ ಪತ್ರಿಕೆ, ವಾರ ಪತ್ರಿಕೆಗಳಲ್ಲಿ, ರಾಜ್ಯದಾದ್ಯಂತ ಪ್ರಕಟಗೊಂಡಿವೆ.
ಇವರು 1956ರ ಜೂನ್ 10 ರಂದು ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ಸಾಲಗಾಮೆ ಹೋಬಳಿ ಯಲಗುಂದ ಗ್ರಾಮದ ಶ್ರೀ ತಮ್ಮಣ್ಣ ಗೌಡ ಮತ್ತು ಶ್ರೀಮತಿ ನಂಜಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದರು.
ಕವಯಿತ್ರಿ ಸುಶೀಲಾ ಸೋಮಶೇಖರ್ ಅವರು ಸುಚಿರ್ಭೂತ ಹೃನ್ಮನಗಳನ್ನು ಹೊಂದುವುದೇ ಬಾಳು-ಬದುಕಿನ ಪರಮಗುರಿ, ಜೀವನ ಸಾರ್ಥಕ್ಕೆ ಎಂದು ನಂಬಿ ನಡೆಯುತ್ತಾ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಗದ್ಯ, ಪದ್ಯಗಳೆರಡರಲ್ಲೂ ಸಮಚಿತ್ತವಾಗಿ ಉತ್ಕøಷ್ಟ ಸಾಹಿತ್ಯ ಸೇವೆಗೈದ ಇವರು ಕನ್ನಡ ಕಣ್ಮಣಿಯಾಗಿದ್ದಾರೆ. ಹಾಸನ ಜಿಲ್ಲೆಯ ಒಳಗೂ, ಹೊರಗೂ ಸುವಿಖ್ಯಾತವಾಗಿರುವ ಇವರು ಇಲ್ಲಿಯವರೆಗೆ ಅನೇಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
‘ನಕ್ಕು ಬಿಡೆ ಗೆಳತಿ’ - 1998, ‘ಅಂಗಳ ಅನಾಥವಲ್ಲ’ -2005, ‘ಮಳೆ ಪುರುಷ’ – 2008, ಸದ್ದಿಲ್ಲದ ನಗು-2015 ಕವನ ಸಂಕಲನಗಳು; ‘ವಚನ ಸಂವಹನ’ - 2006 ಶರಣ ವಚನ ವಿಶ್ಲೇಷÀಣೆ; ‘ಚಿಗುರು’ -2009, ‘ನಗುವ ನಕ್ಷತ್ರಗಳು’ - 2011 ಮಕ್ಕಳ ಕವನ ಸಂಕಲನಗಳು; ‘ನುಡಿ ಜ್ಯೋತಿರ್ಲಿಂಗ’ - 2010 ಚಿಂತನ ಕೃತಿಗಳು ಪ್ರಕಟವಾಗಿವೆ.
‘ಸದ್ದಿಲ್ಲದ ನಗು’ - ಕವನ ಸಂಕಲನ, ‘ನೂರಾರು ಹನಿಗವನಗಳು’ - ಚುಟುಕು ಸಂಕಲನ ಮುದ್ರಣಗೊಂಡು ಬಿಡುಗಡೆಗೆ ಸಿದ್ಧವಾಗಿವೆ.
ಎಂ.ಎ., ಬಿ.ಇ.ಡಿ. ಪದವಿಧರೆಯಾದ ಇವರು ಕಳೆದ ಮೂರ್ನಾಲ್ಕು ದಶಕಗಳಿಂದ, ಸಕಲೇಶಪುರದ ಶ್ರೀ ಚೇತನ ಪ್ರೌಢ ಶಾಲೆಯಲ್ಲಿ ಭಾಷಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆ-ಜೊತೆಗೆ ಅಲ್ಲಿಯ ಸಾಹಿತ್ಯ ದ್ರವ್ಯ ಪಸರಿಸಿ ಜಾಗೃತಿ ಮೂಡಿಸಿದ್ದಾರೆ. ಶಿಕ್ಷಣ, ಸಾಹಿತ್ಯ, ಸಂಘಟನೆಗಳಲ್ಲಿ ಸಮಚಿತ್ತ ಭಾವದಿಂದ ಕಾಯಕಗೈಯುತ್ತ ಬಂದ ಇವರು ಹಾಸನದಲ್ಲಷ್ಟೆ ಅಲ್ಲದೆ ರಾಜ್ಯ ಮಹಿಳಾ ಸಾಹಿತ್ಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ ಕವಯತ್ರಿ.
ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು, ಸಕಲೇಶಪುರದ ಅಕ್ಕನ ಬಳಗ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಮುಂತಾದ ಸಂಘಟನೆಗಳಲ್ಲಿ ಅವಿರತವಾಗಿ ಸ್ವಯಂ ಸೇವಕರಂತೆ ದುಡಿದಿದ್ದಾರೆ. 2007 ರಿಂದ ಹಾಸನ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಪತಿ ಸೋಮಶೇಖರ ರವರು ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಪ್ರೋತ್ಸಾಹದ ನಿರಂತರತೆಯಿಂದ ಸಾಹಿತ್ಯ ದೀವಿಗೆ ಬೆಳಗುತ್ತಿದೆ.
ವಚನ ಸಾಹಿತ್ಯ ಎಂದಾಕ್ಷಣ ತತ್ಕ್ಷಣ ನೆನಪಾಗುವುದು ಸುಶೀಲಾಸೋಮಶೇಖರ ಅವರು. ವಚನಗಳ ವಿಶ್ಲೇಷಣೆ, ಅವುಗಳ ಆಳ-ನಿರಾಳಗಳನ್ನು ಸಮರ್ಥವಾಗಿ, ಸೊಗಸಾಗಿ, ಪ್ರತಿಧ್ವನಿಸುವ ಕಂಚಿನ ಕಂಠ ಇವರದು. ರಾಜ್ಯ, ಅಂತರಾಜ್ಯ ಮಟ್ಟದಲ್ಲಿ ನೂರಾರು ಉಪನ್ಯಾಸಗಳನ್ನು, ಶರಣ ಚಿಂತನೆಗಳನ್ನು ಜನರಿಗೆ ಅರ್ಥಗರ್ಭಿತವಾಗಿ ಉಣಬಡಿಸಿದ ಕೀರ್ತಿ ಇವರದು.
ಹೊಯ್ಸಳ ಮಹೋತ್ಸವ, ಕುವೆಂಪು ಶತಮಾನೋತ್ಸವ, ತಾಲ್ಲೂಕು-ಜಿಲ್ಲಾ ಹಾಗೂ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನಗಳು, ವಿಚಾರಗೋಷ್ಠಿಗಳು, ಕವಿಗೋಷ್ಠಿಗಳು, ಮಾಧ್ಯಮಗೋಷ್ಠಿಗಳು, ದಸರಾ ಕವಿಗೋಷ್ಠಿ ಮುಂತಾದ ಕಡೆಗಳಲ್ಲಿ ತಮ್ಮ ವಿಚಾರ ಪೂರಿತ ವಿಧ್ವತ್ತನ್ನು ಹರಿಯಬಿಟ್ಟಿದ್ದಾರೆ.
ಇವರ ಮಕ್ಕಳ ಕವಿತೆಗಳು, ಚಿಂತನಗಳು, ಲೇಖನಗಳು, ಕಥೆಗಳು ರಾಜ್ಯ ಮಟ್ಟದ ಪತ್ರಿಕೆಗಳಾದ ‘ಸುಧಾ, ಮಯೂರ, ಪ್ರಿಯಾಂಕ, ಶೈನ್, ಮಂಗಳ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಮಹಾಮನೆ, ಸಿದ್ಧಗಂಗಾ ಶ್ರೀ, ಬಸವ ಮಾರ್ಗ, ಮಾನಸ ಹಾಗೂ ಸ್ಥಳೀಯ ಪತ್ರಿಕೆಗಳಾದ ಜನತಾ ಮಾಧ್ಯಮ, ಜನ ಮಿತ್ರ, ಜನ ಹಿತ, ಬಂಡಾಯ, ಜ್ಞಾನ ದೀಪ, ನಾಡ ಸಹ್ಯಾದ್ರಿ, ಹಾಸನ ಮಿತ್ರ, ಕಲ್ಯಾಣ ಕೋಟೆ’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದಿವೆ.
ಇವರ ‘ಅಂಗಳ ಅನಾಥವಲ್ಲ’ ಕವನ ಸಂಕಲನಕ್ಕೆ, 2005 ರಲ್ಲಿ ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ, 2006ರಲ್ಲಿ ನೀಲಗಂಗಾ ದತ್ತಿ ಪ್ರಶಸ್ತಿ, 2006ರಲ್ಲಿ ಪಂಡಿತ ಪುಟ್ಟರಾಜ ಸಾಹಿತ್ಯ ಪ್ರಶಸ್ತಿಗಳು ದೊರಕಿವೆ.
ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗಾಗಿ 2002ರಲ್ಲಿ ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ, 2008ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, 2011ರಲ್ಲಿ ಜಿಲ್ಲಾ ಶಿಕ್ಷಕ ರತ್ನ ಪ್ರಶಸ್ತಿಗಳು ಸಂದಿವೆ. ಇವರ ‘ಮಳೆ ಪುರುಷ’ ಕವನ ಸಂಕಲನಕ್ಕೆ 2010ರಲ್ಲಿ ಕಾವ್ಯ ಶ್ರೀ ಪ್ರಶಸ್ತಿ; ‘ನುಡಿ ಜ್ಯೋತಿರ್ಲಿಂಗ’ ಕೃತಿಗೆ 2010ರ ಅಡ್ವೈಸರ್ ಪ್ರಶಸ್ತಿ ಸಂದಿದೆ. ಇಂತಹ ಘನ ವ್ಯಕ್ತಿತ್ವ ಹೊಂದಿದ ಇವರನ್ನು 26-07-2014ರಂದು ಸಕಲೇಶಪುರದಲ್ಲಿ ನಡೆದ 2ನೆಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಔಚಿತ್ಯಪೂರ್ಣವಾಗಿದೆ.
ವರ್ತಮಾನ ವಿಚಾರವಂತಿಕೆಯ ರತ್ನ ದೀಪ-ಎ.ಜಿ.ರತ್ನ ಕಾಳೇಗೌಡ
ಕನ್ನಡ ಸಾಹಿತ್ಯ ರಾಜಕೀಯ ಸೇವೆ, ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸಂಘಟನೆ, ನಾಡು-ನುಡಿಗಾಗಿ ಹೋರಾಟ ಹೀಗೆ ಅನೇಕ ಸ್ತರಗಳಲ್ಲಿ ಕಳೆದ ಮೂರು ದಶಕಗಳಿಂದ ದುಡಿಯುತಾ ಸಾಧನೆಯ ಮೆಟ್ಟಿಲುಗಳನ್ನು ಹಂತಹಂತವಾಗಿ ಏರಿದ ಎ.ಜಿ.ರತ್ನಕಾಳೇಗೌಡರು ಒಬ್ಬ ದಿಟ್ಟ ನೇರವಾದಿ ಹಾಗೆಯೇ ಹೃದಯ ವೈಶಾಲ್ಯತೆ ಹೊಂದಿರುವ ಸ್ನೇಹ ಜೀವಿ. ಅವರ ಸ್ನೇಹಿತರ ಅಭಿಮಾನಿಗಳ ಪರಿಚಿತ ಸಾಹಿತ್ಯ ಬಂಧುಗಳ ಬಳಗ ರಾಜ್ಯದ ಮೂಲೆಮೂಲೆಯಲ್ಲಿಯೂ ಇದೆ ಎಂದರೆ ಅತಿಶಯೋಕ್ತಿಯಾಗಲಾರದು.
1956 ರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬಿದಿರೆ ಗ್ರಾಮದ ಗೌಡಯ್ಯ ಹಾಗೂ ಜವರಮ್ಮ ದಂಪತಿಗಳ ಪತ್ರಿಯಾಗಿ ಜನಿಸಿದ ರತ್ನಕಾಳೇಗೌಡರು ರತ್ನ ದೀಪ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ದೇಶಾದ್ಯಾಂತ ಹಲವಾರು ಸಭೆ, ಸಮ್ಮೇಳನ, ಕಮ್ಮಟಗಳಲ್ಲಿ ಭಾಗವಹಿಸಿ ಅನುಭವಗಳಿಸಿಕೊಂಡ ಇವರು ಹಲವಾರು ಕಮ್ಮಟಗಳಿಗೆ ಸ್ವತಃ ನಿರ್ದೇಶಕರಾಗಿ ದುಡಿದಿದ್ದಾರೆ.
ದೂರದರ್ಶನ ಚಂದನ ಬೆಳಗು ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದ್ದು, ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜೊತೆಗೆ ಕನ್ನಡ ಪರ ನೆಲ.ಜಲ ನಾಡು-ನುಡಿಯ ಹೋರಾಟಗಳಲ್ಲಿ ನಿರಂತರವಾಗಿ ದುಡಿಯುತ್ತಾ ಬಂದಿದ್ದಾರೆ.
ಸಾಹಿತ್ಯ, ರಾಜಕೀಯ, ಸಂಘಟನೆ ಮೊದಲಾದ ಎಲ್ಲಾ ಮಾಧ್ಯಮಗಳಲ್ಲಿ ಪರಿಣಿತಿ ಪಡೆದಿರುವ ಎ.ಜಿ ರತ್ನಕಾಳೇಗೌಡ ಮೊದಲ ಆಸಕ್ತಿ ಕಥೆ, ನಂತರ ಕಾದಂಬರಿ, ಕಾವ್ಯ ರಚನೆ ಇವರ ಕಥೆಗಳನ್ನು ಓದುತ್ತಾ ಹೋದರೆ, ವಾಸ್ತವದ ನೆಲೆಗಟ್ಟಿನಲ್ಲಿ ವೈಚಾರಿಕತೆಯ ಮೂಸೆಯಲ್ಲಿ ಮಿಂದೇಳುವುದು ಖಂಡಿತ. ಇವರು ಮುಖ್ಯವಾಗಿ ಹೊಲ, ಹರಕೆ, ಪ್ರಾಣಬಿಂದು, ಭರವಸೆಗಳ ನಡುವೆ, ಒಂದು ಪೆಗ್, ಯಾತ್ರೆ, ಮಳೆ ಬರುವ ಹಾಗಿದೆ ಕಥಾ ಸಂಕಲನಗಳಾಗಿವೆ. ಎಂಟು ಕಾದಂಬರಿಗಳು ಇತರೆ ಹತ್ತು ಕೃತಿಗಳು ಹಾಗೂ ಎಂಟು ಕವನ ಸಂಕಲನಗಳನ್ನು ಒಳಗೊಂಡಂತೆ ಸುಮಾರು ನಲವತ್ತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಇವರ ಸಾಹಿತ್ಯ ಪ್ರಕಾರಗಳಲ್ಲಿ ನನಗೆ ಇಷ್ಟವಾದದ್ದು ಹಾಗೂ ಮನ ಕಲಕಿದ್ದು, ನನ್ನನ್ನು ಭಾವುಕನನ್ನಾಗಿ ಮಾಡಿದ್ದು ಇವರ ಕಾವ್ಯ. ಆದ್ದರಿಂದಲೇ ನಾನಿಲ್ಲಿ ಇವರ ಕಾವ್ಯದ ಬಗ್ಗೆ ಮಾತ್ರ ಚರ್ಚಿಸಲು ಇಚ್ಛೆ ಪಡುತ್ತೇನೆ.
ಕವಿ ಅಡಿಗರು ಮಾತಿನೊಳಗೆಯೋ ಮೌನ ಇಲ್ಲದೆ ಹೋದರೆ ಅದರಾಚೆಗೂ ಇದು ಇರುವುದಿಲ್ಲ ಎಂದಿದ್ದಾರೆ. ಕಾವ್ಯದಲ್ಲಿ ಮಾತು ಮೌನದ ಮೂಲಕ, ಮೌನ ಮಾತಿನ ಮೂಲಕ ಪ್ರತೀತಿಗೆ ಬರುತ್ತಿರುತ್ತದೆ. ಪು.ತಿ.ನ ಅವರ ಅನೇಕ ಕವನಗಳಲ್ಲಿ ಮಾತಿನ ಮೂಲಕವೇ ಮೌನ, ಶಾಂತತೆ, ಚಿನ್ಮಾನ ಭಾವಗಮ್ಯವಾಗಿ ಅನುಭವವಾಗುತ್ತದೆ.
ಇವರ ಕಾವ್ಯ ನಿಧಿ ಕವನ ಸಂಕಲನ 19ನೇ ಶತಮಾನದ ಅಂತ್ಯ ಹಾಗೂ 20ನೇ ಶತಮಾನದ ಉದಯಗಳ ನಡುವಿನ ಪರ್ವಕಾಲವೆಂದೇ ಹೇಳಬಹುದು.
ನನ್ನೂರ ಆಲದ ಮರಗಳು
ಮದುವೆ ತಿಥಿ ಅಡುಗೆಗಳಿಗೆ
ಒಂದೊಂದೇ ಮರ ಸೌದೆಯಾದವು (ನನ್ನೂರು)
ಇಲ್ಲಿ ಕವಯತ್ರಿಯ ಗತದ ಬದುಕಿನ, ಪೂರ್ವಜರ ಕರುವಿನ ಬಗೆಗಿನ ಜಾಗ್ರತೆ, ಕಾಳಜಿ ಈಗಿನವರಿಗಿಲ್ಲದಿರುವುದನ್ನು ಈ ಸಾಲುಗಳು ಸ್ತುತಿಸುತ್ತವೆ.
ಹೊಸ ಶತಮಾನದ ಸುಂದರ ಕನಸು
ಮೈ ಪುಳಕಗೊಳಿಸುತ್ತಿದೆ ಅವನಾನದ
ಅಂಚಿನಿಂದ ಪಾರಾಗಿ ಹೊಸಯುಗದ ಮಡಿಲಲಿ
ಜೋಗುಳ ಕೇಳಲು ಬರಲಿ ಹೊಸಗಾಳಿ ಬೆಳಕು...
(ಬರುವ ಶತಮಾನಕ್ಕೆ ಸ್ವಾಗತ)
ನಜಾನಾಯಿ ಶಬ್ದಂ ನಜಾನಾಯಿ ಚಾರ್ಥಂ
ನಜಾನಾಮಿ ಪದ್ಯಂ ನಜಾನಾಮಿ ಗದ್ಯಾಂ
ಚಿದೇತಾ ಷಡಖ್ಯಾ ಹೃದಿದ್ಯೋತತೇಮೋ
ಮುಪಾನ್ನಿಸ್ಸರಂತೆ ಗಿರಾಶ್ವಾಪಿ ಚಿತ್ರಮ್
ನಾನು ಶಬ್ದ ಅರ್ಥ ಪದ್ಯ, ಗದ್ಯಗಳನ್ನು ತಿಳಿದಿಲ್ಲ. ಆದರೆ ನನ್ನ ಅಂತರಂಗದಿಂದ ಅದ್ವಿತೀಯವಾದ ಆರು ಮುಖಗಳ ಜೀವನದ ಜ್ಞಾನ ಜ್ಯೋತಿಯು ಬೆಳಗುತ್ತಿದೆ. ಆ ಪ್ರತಿಭೆಯಿಂದ ನನ್ನ ಮುಖದಿಂದ ಈ ವಾಕ್ಯಗಳು ನುಡಿಯುತ್ತಿವೆ, ಎಂಬ ಸೂಕ್ತಿಯು ಸುಬ್ರಹ್ಮಣ್ಯ ಭುಜಂಗ ಸ್ತೋತ್ರದಿಂದ ಹೇಳಲ್ಪಟ್ಟಿದೆ.
ಪ್ರಸ್ತುತ ಕಾವ್ಯ ಸಂದರ್ಭದಲ್ಲಿ ನಿಂತುಕೊಂಡಿರುವ ಕವಿಯ ರವನೆಗೆ ನೂರಾರು ಮಿತಿಗಳು, ಇತಿಗಳು, ಸಂಕಷ್ಟಗಳು ಕಾಣಿಸಬಹುದು. ಕವಿ ಬರೆದಾಗಲೆಲ್ಲಾ ಎಲ್ಲೋ ಗುಹಾಧ್ವನಿಯಂತೆ ಅನಿಸಿ ಒಮ್ಮೊಮ್ಮೆ ಕೀಳರಿಮೆ ಕಾಡಬಹುದು. ನಿಜವಾಗಿರಲೂ ಹೊಸದನ್ನು ತಡಕಿ ಹುಡುಕುವ, ವಿಶಿಷ್ಟವಾದುದನ್ನು ಬಗೆದು ತೆಗೆಯುವುದು ಪ್ರಯಾಸದ ಮಾತೇ ಸರಿ!
ಈ ಹಿನ್ನಲೆಯಲ್ಲಿ ಎ.ಜಿ.ಕಾಳೇಗೌಡರ ಅನೇಕ ಕವನಗಳಲ್ಲಿ ಸಾಮಾಜಿಕ ಸ್ಥಿತಿಯನ್ನು, ದುರಾಡಳಿತವನ್ನು, ಶೋಷಣೆಯನ್ನು ಜಾತಿಯ ವ್ಯವಸ್ಥೆಯ ಧಿಕ್ಕರಿಸುವ ಮಿಂಚು, ಕಿಡಿ, ಉದ್ವೇಗ, ಆವೇಶ ಹೊಮ್ಮಿ ಬಂದಿದೆ. ಆದ್ದರಿಂದಲೇ ನಾಣು ಇವರನ್ನು ಬಂಡಾಯ ಹಾಗೂ ವೈಚಾರಿಕ ಸಾಹಿತ್ಯ ವಲಯಕ್ಕೆ ಸೇರಿಸಬಯುಸುತ್ತೇನೆ. ಏಕೆಂದರೆ ಪ್ರಸ್ತುತ ಸಂದರ್ಭಗಳಲ್ಲಿ ಈ ರೀತಿಯ ಕಚ್ಚೆದೆಯ ಬರಹಗಳು ವಿರಳ. ಇವು ಅನಗತ್ಯವಾಗಿ ಹೆಚ್ಚಲೆಬೇಕಾಗಿದೆ. ಸಾಮಜಿಕ ಕೊಳೆಯನ್ನು ಶುಭ್ರಗೊಳಿಸುವ ನಿಟ್ಟಿನಲ್ಲಿ ನೇರ ಹಾಗೂ ದಿಟ್ಟ ಸಾಹಿತ್ಯವೆಂದರೆ ಬಂಡಾಯ ಹಾಗೂ ವೈಚಾರಿಕ ಸಾಹಿತ್ಯ.
ಇಂತಹ ನೂರಾರು ವಿಚಾರಗಳು ರತ್ನಕಾಳೆಗೌಡರ ಕವನಗಳು ಸುಔಗತೆಯಿಂದ ಎದ್ದು ಕಾಣುತ್ತವೆ.
ಕವಿ ಅಡಿಗರ ‘ಒಂದು ಹದ್ದಿನ ರೆಕ್ಕೆಯೊಳಗೆ ನೂರಾರಕ್ಕೆ ಹದ್ದು’ ಎಂಬಲ್ಲಿ ಕಾಣುವ ಧೀಮಂತ, ಅನಾಯಾಸ, ಧ್ವನಿಪೂರ್ಣ ಶ್ಲೇಷ ನನಗೆ ಇವರ ಅನೇಕ ಕವನಗಳಲ್ಲಿ ಕಂಡಿತು. ಹೋಲಿಕೆ ತಪ್ಪಿರಬಹುದು ಆದರೆ ಮೌಲಿಕತೆಯ ನಿರ್ಣಯ ನವಿರಾದ ತೌಲನಿಕ ನೆಲೆಯಿಂದಲೇ ಚಿಮ್ಮುತ್ತದೆ.
ಒಂದು ಸಂದರ್ಶನದಲ್ಲಿ ಬೇಂದ್ರೆ ಹೀಗೆ ಹೇಳಿದ್ದಾರೆ. ನನ್ನ ಒಳಗಿನ ವ್ಯಕ್ತಿ ಎಚ್ಚರಗೊಂಡಾಗಲೇ ಕಾವ್ಯ ಒಡಮೂಡಿ ಬರುತ್ತದೆ. ನನ್ನದು ಅವಶ್ಯವಾಗಿ ಹೃದಯದ ಪ್ರತಿಕ್ರಿಯೆ. ನನ್ನ ಭಾವಗಳು ಒಳಗೊಳಗೆ ಮಿಥಿಸುತ್ತಿರುವಂತೆ ಕಾಣುತ್ತದೆ. ಅನಂತರ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಗರ್ಭದಂತೆ ಇನ್ನು ಒಳಗೆ ಉಳಿಯಲಾಗದ ಹೊರಹೊಮ್ಮುತ್ತದೆ. ಇದೇ ರೀತಿ ನಿತ್ಯ ನಡೆಯುವ ಅನೇಕ ಶೋಷಣೆ, ಭ್ರಷ್ಟಾಚಾರ, ಮೂಢನಂಬಿಕೆ ಹಗಲು ದರೋಡೆ ಇವೆಲ್ಲವುಗಳದರ ವಿರುದ್ದ ಬೆಂಕಿಯ ಜ್ವಾಲೆಯಂತೆ ರತ್ನ ಕಾಳೇಗೌಡರ ಕವನಗಳು ಹೊರಹೊಮ್ಮಿವೆ. ಇವರ ಕಾವ್ಯಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಕಾಣಬಹುದು. ಏಕೆಂದರೆ ಕಾವ್ಯವು ಕವಿಯದೇ ಆದ ವಿಶಿಷ್ಟವಾದ ಅನುಭವಗಳ ಅತ್ಯಂತ ವೈಯಕ್ತಿಕವಾದ ಭೀನ್ನಭಾವದ ಅಭಿವ್ಯಕ್ತಿ. ಸಾಮಾಜಿಕ ಪ್ರಜ್ಞೆಯು ಈ ಭಾಷಾ ಶರೀರದ ಪರಿಪೂರ್ಣತೆಗಳಾಗುವ ಅನುಭವ ವಿಶಿಷ್ಟತೆಗಾಗಲೀ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು; ಅಲ್ಲದೇ ರತ್ನಕಾಳೇಗೌಡರು ಕಾವ್ಯ ರಚೆನೆಗೆ ಆರಂಭಿಸಿದ್ದು ಬಂಡಾಯದ ಕಾಲವಾಗಿತ್ತು. ಆ ಸಂದರ್ಭದಲ್ಲಿ ಭ್ರಷ್ಟಾಚಾರ, ಜಾತಿವ್ಯವಸ್ಥೆ, ದುರಾಡಳಿತ, ಸಾಮಾಜಿಕ ಅನಿಷ್ಟಗಳು, ವರದಕ್ಷಿಣೆ, ಬಾಲ್ಯವಿವಾಹ ಹೀಗೆ ಹತ್ತಾರು ಸಾಮಾಜಿಕ ಕಾದಂಬರಿಗಳನ್ನು ಸ್ವ ಅನುಭವಿಸಿ ಬರೆದವರು, ವಿಚಾರವಂತಿಕೆಯ ಉತ್ತುಂಗಕ್ಕೇರಿ ಅನುಭವದ ನೆಲೆಗಟ್ಟಿನಲ್ಲಿ ಲೇಖನಿ ಬಳಸಿದವರೆಂದರೆ ತಪ್ಪಾಗಬಾರದು.
ಹೊಸಗನ್ನಡ ಕಾವ್ಯದ ಮೂಲವನ್ನು ರತ್ನಕಾಳೇಗೌಡು ಕರ್ನಾಟಕದ ಗರತಿಯ ಹಾಡುಗಳಲ್ಲಿ, ಲಾವಣಿಗಳಲ್ಲಿ, ಹನ್ನೇರಡನೇ ಶತಮಾನದ ಶಿವಶರಣರ ವಚನಗಳಲ್ಲಿ ಹರಿದಾಸರ ಕೀರ್ತನೆಗಳಲ್ಲಿ ಕಂಡುಕೊಂಡು ಬಹುಶಃ ಅವರ ಯುಗ ಪ್ರವರ್ತಕ ಪ್ರತಿಭೆಯನ್ನು ಮತ್ತು ನೂತನ ಕಾವ್ಯದ ಮೂಲವನ್ನು ಹುಡುಕಿ ಪಡದಿದ್ದಾರೆ ಎನ್ನಬಹುದು. ಅಲ್ಲದೇ ದಾಸ್ಯರ ನೋವು, ಸ್ವಾತಂತ್ರ್ಯದ ಕನಸು , ಬಡತನದ, ದುರ್ದೈವದ, ಹಸಿವೆಯ, ಅಜ್ಞಾನದ ಶತಮಾನದ ಕೊರಗು, ಕ್ರಾಂತಿಯ ಮುನ್ನೋಟದ ರುದ್ರ ತಾಂಡರ, ಆತ್ಮ ಚಿಂತನ, ಮಾನವ ಧರ್ಮದ ಪುನರುತ್ಥಾನ, ಪ್ರೀತಿ, ಪ್ರಕ್ರಿಯೆ, ವಿರಹ, ವಿಷಾದ, ದಾಂಪತ್ಯ, ಹೆಣ್ಣು-ಗಂಡಿನ ಸಮಸ್ಯೆ, ಕನ್ನಡತೇರು ಮುನ್ನಡೆಸಲು ಆಸೆ. ಉತ್ಸಾಹ, ಕನಸು, ರಾಷ್ಟ್ರಧರ್ಮದ ಭೂತ ಭವಿಷ್ಯ, ವರ್ತಮಾನಗಳ ಸಾಮೀಕರಣದ ಅನ್ವಯದ ಸಾಹಸ, ಮಹಾತೀತ ಅದೃಶ್ಯ ಲೋಕಕ್ಕೆ ದಾಳಿ, ಕನಸುಗಳ ಮಿಂಚುಗಳ ಅನುಸರಣ, ಲೀಲೆ ಹೀಗೆ ರತ್ನಕಾಳೇಗೌಡರಲ್ಲಿ ನುಡಿಯದ ಮಿಡಿಯದ ಭಾವವಿಲ್ಲ. ರೂಪುಗೊಳ್ಳದ ಆಕಾಂಕ್ಷೆಗಳಲ್ಲಿ, ಕಾದುಕೊಳ್ಳುವ ನೋವಿಲ್ಲ, ನಲಿವಿಲ್ಲ, ಎಷ್ಷಡತ್ತ ಕನ್ನಡದ ಆರು ಕೋಟಿ ಚಿತ್ತ ತರಂಗಗಳ ಕ್ಷೀರ ಸಾಗರದಂತೆ ರತ್ನಕಾಳೇಗೌಡರ ಕಾವ್ಯ ಭೋರ್ಗರೆಯುತ್ತಿದೆ”.
ವೇದಗಳ ಕಾಲದಿಂದ ಇಂದಿನವರೆಗೂ ಜಾತಿ ಪದ್ದತಿ ಬದಲಾವಣೆಗಳಿಗೆ ಒಳಪಟ್ಟಿದೆ. ಅದರ ರಚನೆಯಲ್ಲಿ ಬದಲಾವಣೆಗಳಾಗಿವೆ. ಅದರ ಕಾರ್ಯದಲ್ಲಿ ಪರಿವರ್ತನೆಗಳಾಗಿವೆ. ಅನೇಕ ಮಂದಿ ಸಮಾಜ ಸುಧಾರಕರು ಜಾತಿ ಪದ್ದತಿಯ ಸುಧಾರಣೆ ಮಾಡಲು ಸತತವಾಗಿ ಶ್ರಮಿಸಿದ್ದಾರೆ. ಜಾತಿ ಜಾತಿಗಳ ನಡುರಿನ ಅಸಮಾನತೆಯನ್ನು ಕಿತ್ತು ಹಾಕಲು ಹೋರಾಡಿದ್ದಾರೆ. ವಚನಕಾರರು, ಹರಿದಾಸರು, ಶೂದ್ರರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೂ ಇನ್ನೂ ಅನೇಕ ಕಡೆಗಳಲ್ಲಿ ಅಟ್ಟಹಾಸಗಳಡಿಯಲ್ಲಿ ಶೋಷಿತರು ನರಳಾಡುತ್ತಿದ್ದಾರೆ.
ಈ ದಿಸೆಯಲ್ಲಿ ಹಾಸನದ ಹೆಸರಾಂತ ಲೇಖಕಿಯಾದ ಶ್ರೀಮತಿ ರತ್ನಕಾಳೇಗೌಡರು ತಮ್ಮ ಜೀವ ನಕ್ಷತ್ರಗಳು ಕವನ ಸಂಕಲನದಲ್ಲಿ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಶೋಷಿತರು, ಧೀನರು ಹೊರಡಿಸಲಾಗದಂತಹ ಆಕ್ರಂದನಗಳನ್ನು ತಮ್ಮ ಕವಿತೆಗಳಲ್ಲಿ ಧ್ವನಿಸಿದ್ದಾರೆ.
ಬಸಿದ ಬೆವರಿಗೆ
ನೆಣದ ಒಗ್ಗರಣೆ
ಹಸಿಮಾಂಸ ಜಗ್ಗಿ ಚಪ್ಪರಿಸಿ
ತನ್ನುವ ಮಂದಿ
ಬೆವರನ್ನು ಗಟಗಟನೆ ಕುಡಿದು
ಮರಳುಂಟೆ ಕರುಳುಂಟೆ
ರಕ್ತಸಂಬಂಧದ ಕೊಂಡಿಗೆ (ಸುಂಟರಗಾಳಿಗೆ ಸೆಟೆದು ನಿಂತ)
ಕವಿಯತ್ರಿಯ ಸಾಮಾಜಿಕ ಪ್ರಜ್ಞೆ ಇಲ್ಲಿಯ ಸಾಲುಗಳಲ್ಲಿ ಜೀವ ಪಡೆದುಕೊಂಡಿದೆ. ಜಾತಿ, ಸಿರಿವಂತಿಕೆ ಮಾನವ ಕೃತ ವಿಕಲ್ಪ ಎಂಬುದನ್ನು ಮನದಟ್ಟು ಮಾಡುತ್ತಾರೆ. ಬಂಡಾಯದ ಧ್ವನಿಯ ಮೂಲಕವೇ ಉತ್ತರಿಸುವ, ಚಿಂತಿಸುವ, ಮಂಥಿಸುವ ರತ್ನಕಾಳೇಗೌಡರು ಪ್ರತಿಭಟನೆಯ ಕತ್ತಿಯನ್ನು ತಮ್ಮ ಕಾವ್ಯದಲ್ಲಿ ಜಳಪಿಸಿದ್ದಾರೆ. ತಮ್ಮ ಸುತ್ತಲೂ ಸುತ್ತುವ ಭಾನೆಗಳ ತೆಕ್ಕೆಯಿಂದ ಬಿಡಿಸಿಕೊಂಡು ವೈಚಾರಿಕ ಹಾಗೂ ಸಾಮಾಜಿಕ ಪ್ರಜ್ಞೆಯ ಸಂವೇದನೆಗಳು ಬದುಕಿನ ಕುರಿತ ಸೂಕ್ಷ್ಮ ನೋಟಗಳು. ಸತ್ಯದರ್ಶನಗಳು, ಕಳಚಿ ಬಿದ್ದ ಭಾವಗಳನ್ನು ಎತ್ತುವಲ್ಲಿ ಕವಯತ್ರಿ ಸಫಲರಾಗಿದ್ದಾರೆ.
ಹಗಲುಗಳ್ಳರ ಬೇಟೆಯಾಡುವ ನೆಪದಲ್ಲಿ
ಸಂಬಂಧ ಪಟ್ಟ ಇಲಾಖೆಗಳು ಪರ್ಸೆಂಟೇಜು...
***
ಮೌಢ್ಯ ತುಂಬಿದ ಮತಗಳು
ಹೆಂಡದ ಹೊಳೆಯಲ್ಲಿ ಈಜುತ್ತಿವೆ
ಮತಕ್ಕೆ ಇವರ ಇನ್ನಾರದೋ ಹೆಬ್ಬೆಟ್ಟು
ಓಟು ಒತ್ತಿ ಗೆಲ್ಲಿಸಿದ
ಆಶ್ವಾಸನೆಯ ಅಂಗಡಿಯಿಟ್ಟುಕೊಂಡಿದ್ದ
ರಾಜಕಾರಣಿ ಬಡವವರಿಗೆ ಗಗನ ಕುಸುಮವಾಗಿದ್ದಾನೆ...
(ನಾಳೆಯ ಬೆಳಕು ಕತ್ತಲಾಗಿದೆ)
ಪ್ರಸ್ತುತ ಸಂದರ್ಭದ ದುಸ್ಥಿತಿಗೀಡಾದ ನಾಗರೀಕತೆ, ರಾಜಕೀಯ ಸ್ಥಿತಿ, ಮೌಲ್ಯ ಕಳೆದುಕೊಂಡ ಮತದಾರರ ಬಗ್ಗೆ ಕವಯತ್ರಿ ಆಕ್ರೋಶಗೊಳ್ಳುತ್ತಾರೆ. ತಾವೂ ಒಬ್ಬ ರಾಜಕೀಯ ವ್ಯಕ್ತಿಯಾಗಿ ಪ್ರಸ್ತುತ ಸ್ಥಿತಿಯನ್ನು ನಿಭಾಯಿಸುತ್ತಾರೆ, ಹೆಂಡ, ತುಂಡು, ಹಣಕ್ಕಾಗಿ ಓಟು ಹಾಕಿದ ಖರ್ಚು ಮಾಡಿದ ವ್ಯಕ್ತಿ ಆ ಹಣವನ್ನು ಯಾವ ಮೂಲದಿಂದ ಭರಿಸಿಕೊಳ್ಳುತ್ತಾನೆ? ಅನ್ಯ ಮಾರ್ಗವಿಲ್ಲದೇ ಭ್ರಷ್ಟಾಚಾರದ ಹಾದಿಯನ್ನೇ ತುಳಿಯಬೇಕಾಗುತ್ತದೆ. ಇದಕ್ಕೆ ಮತದಾರನೇ ಅಂದರೆ ಸಮುದಾಯವೇ ಮೂಲ ಅಂಶ ಎಂಬ ನಿಲುವಿಗೆ ಕವಯತ್ರಿ ಬಂದು ನಿಲ್ಲುತ್ತಾರೆ.
ಅರ್ಧ ರಾತ್ರಿಯಲ್ಲಿ ಕಣ್ಣು ಬಿಟ್ಟ
ಸ್ವಾತಂತ್ರ್ಯ ಅರೆ ನಿದ್ರೆಯಲ್ಲಿ ಬಿಕ್ಕುತ್ತಿದೆ
ನರಸತ್ತ ಸರ್ಕಾರ ಧನಿಕರ ಕುಣಿಕೆಗೆ ಸಿಕ್ಕಿ
ವಿಷದ ಜ್ವಾಲೆ ಉಗುಳುತ್ತ ಮೀಸೆ ತಿರುವತ್ತಿದೆ
(ಧ್ವನಿಕರ ಕುಣಿಕೆ)
ನಮಗೆ ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನದಂಚಿಗೆ ಬಂದರೂ ಅದಿನ್ನೂ ಪೂರ್ಣ ಕಣ್ತೆರೆದಿಲ್ಲ! ಪ್ರಜಾಪ್ರಭುತ್ವದ ಸೋಗಿನಲ್ಲಿ ಶುರುವಾದ ರಾಜಕಾರಣ ಉಳ್ಳವರ ಪಾಲಾಗಿ ಬಡವರು, ದೀನ ದಲಿತರು ಇನ್ನೂ ಅದೇ ಸ್ಥಿತಿಯಲ್ಲಿದ್ದರೆ ಬಂಡವಾಳಶಾಹಿಗಳು ಮಾತ್ರ ರಾಜಕೀಯ ವ್ಯಕ್ತಿಗಳಿಗೆ ಬಿಸ್ಕೇಟ್ ಹಾಕಿ ಮೇಯಿಸುತ್ತಾ ತಮ್ಮ ಹಿಡಿತದಲ್ಲಿ ಮೂಗುದಾರ ಹಾಕಿ ಇಟ್ಟುಕೊಂಡಿದ್ದಾರೆ. ಪ್ರಸ್ತುತ ಸಮಾಜವನ್ನು ಆಳುತ್ತಿರುವುದು ರಾಜಕಾರಣಿಗಳು ಎನ್ನುವುದಕ್ಕಿಂತಲೂ ಕೆಲವು ಬಂಡವಾಳಶಾಹಿಗಳೆಂದರೆ ತಪ್ಪಾಗಲಾರದು.
ತಲೆಮಾರುಗಳಿಂದ ಬೆಳೆದು ಬೀಗುತ್ತಿದ್ದ
ಅರಣ್ಯ ಸಂಕುಲವೇ ಹಗಲುಗಳ್ಳರ ಪಾಲಾಗಿದೆ
ಬೆಲೆ ತುಟ್ಟಿಯಾಗಿ ಕಾಳಸಂತೆಯಲಿ
ಕುದುರಿತು ವ್ಯಾಪಾರ ಬೀಟೆ, ತೇಗ, ಗಂಧ
ಶ್ರೀಮಂತರ ಮಹಲುಗಳ ಬಾಗಿಲು, ಕಿಟಕಿ
ಸಿಂಹಾಸನಗಳಾಗಿ ರೂಪಾಂತರಗೊಂಡಿವೆ... (ನಾಳೆಯ ಬೆಳಕು ಕತ್ತಲಾಗಿದೆ)
ಜಗತ್ತಿನಾದ್ಯಾಂತ ಚರ್ಚಿತವಾಗುತ್ತಿರುವ ಭೂಮಿಯ ತಾಪ! ಪರಿಸರ ನಾಶ ಇಂದು ಜೀವ ಸಂಕುಲಕ್ಕೆ ಗಂಡಾಂತರ ತಂದಿದೆ ಎಂದರೆ ಅರಿವಾಗದಿರದು. ರತ್ನಕಾಳೇಗೌಡರು ಅವರ ಕವಿತೆಗಳಲ್ಲಿ ಏನೆಲ್ಲಾ ಚಿಂತಿಸಿದ್ದಾರೆ ಎನ್ನುವುದಕ್ಕಿಂತ ಏನನ್ನು ಬಿಟ್ಟಿದ್ದಾರೆ ಎಂದು ತಡಕಬೇಕಾಗಿದೆ. ಅಂದರೆ ಪ್ರಪಂಚದ ಸಾಧ್ಯವಾದಷ್ಟು ಗೋಚರವಾಗುವ ಎಲ್ಲಾ ಸಮಸ್ಯೆಗಳ ಮಧ್ಯೆ ಅವರ ಮನ ತುಡಿದಿದೆ. ಅವರ ಭಾವ ಚಿಲುಮೆ ಹೊಮ್ಮಿದೆ, ಅವು ಪದಗಳಾಗಿ, ಸಾಲುಗಳಾಗಿ, ಕವಿತೆಗಳಾಗಿ ನಮ್ಮೆದರು ನಿಂತಿವೆ.
‘ಬೇಲಿಯೇ ಎದ್ದು ಹೊಲ ಮೇಯ್ದರೆ’ ಎಂಬ ಗಾದೆಯಂತೆ ಅರಣ್ಯ ಕಾವಲುಗಾರರೇ ಅರಣ್ಯವ ನಾಶ ಮಾಡಿ ಅಲ್ಲಿನ ಬೆಲೆ ಬಾಳುವ ಬೀಟೆ, ತೇಗ, ಗಂಧದಂತಹ ಮರಗಳನ್ನು ಕಡಿದು ತಮ್ಮ ಮನೆಗೆ, ನೆಂಟರಿಷ್ಟರ ಮನೆಗೆ, ಮಹಲುಗಳಿಗೆ ಕಿಟಕಿ, ಬಾಗಿಲು, ಬೆಂಚು, ಮಂಚ, ಸೋಫಾ ಇನ್ನಾವುದಕ್ಕೋ ಬಳಸಿ ಸುಪ್ಪತ್ತಿಗೆಯಲ್ಲಿ ಬೀಗುವ ಮಂದಿ ಹಲವರು. ಹೀಗೆ ದೇಶದ ಸ್ಥತಿಯೂ ಹೌದು. ಇಲ್ಲಿ ಕವಯತ್ರಿಯ ಭಾವಗಳು ಅರಣ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ಅದರೆಲ್ಲೆ ದಾಟಿ ಅದರಿಂದಾಚೆಗೆ ನಾವು ಯೋಚಿಸಿದಾಗ ಪ್ರತಿಯೊಂದು ಕ್ಷೇತ್ರಕ್ಕೆ ನೇಮಿಸಿದಂತಹ ಪ್ರಜಾಪ್ರತಿನಿಧಿ ಅವನ ಕಾಯಕ ಮರೆತು ಸ್ವಚ್ಛಂದದಾಟ, ದುರಾಸೆಯಿಂದ ಹಗಲು ದರೋಡೆ ಮಾಡುತ್ತಿದ್ದಾನೆ. ಆದ್ದರಿಂದಲೇ ಭೂಮಂಡಲ ದುಸ್ಥಿತಿಯ ಹೊಸ್ತಿಲಲ್ಲಿ ಬಂದು ನಿಂತಿದೆ. ಇನ್ನಾದರೂ ನಾಗರಿಕರು ಈ ನಿಟ್ಟಿನಲ್ಲಿ ಆಲೋಚಿಸಬೇಕಿದೆ.
ರತ್ನಕಾಳೇಗೌಡರ ಕಾವ್ಯ ಸಮಾಜ ಮುಖಿ ಯಾಗಿ, ಸುತ್ತಣ ಬದುಕಿನ ವಿಷಮತೆ, ನಗರ ಜೀವನದ ಪರಕೀಯ ಪ್ರಜ್ಞೆ, ಮೌಢ್ಯಗಳು, ಸಾಮಾಜಿಕ ಅನಿಷ್ಠಗಳು, ಭ್ರಷ್ಟಾಚಾರ, ಜಾತೀಯತೆ, ಶೋಷಣೆ, ಸಂಕಷ್ಟ, ಸಂಕೀರ್ಣತೆ, ಜಗದ ನಾಶ, ಉಳ್ಳವರ ದಬ್ಬಾಳಿಕೆ ಇವರ ಕವಿ ಚೇತನವನ್ನು ಗಾಢವಾಗಿ ಮೀಟುತ್ತದೆ.
ಪಾತಾಳ ಗರಡಿ, ಸತ್ಯ ಹೇಳಬೇಡಿ ಎಚ್ಚರಿಕೆ!, ಸುಂಟರಗಾಳಿಗೆ ಸೆಟೆದು ನಿಂತ, ಕಾಷ್ಮೋರನಿಗೆ ಬೇಕು ರಕ್ತ, ನಿಮಗೆ ಗೊತ್ತೇ?, ಮುಂತಾದ ಕವಿತೆಗಳಲ್ಲಿ ಸೃಜನಕ್ರಿಯೆಯನ್ನು ಕುರಿತಾದ, ಜಗದ ಉಳಿವಿನ, ನಾಗರಿಕತೆಯ ಬಗೆಗಿನ ಗಂಭೀರ ಚಿಂತನೆಯಿದೆ. ಕಾವ್ಯಾವತಾರದ ನಿಗೂಢತೆಯನ್ನು ಅನ್ವೇಷಿಸುವ ಪ್ರಯತ್ನವನ್ನು ಕವಯತ್ರಿ ನಿಷ್ಠೆಯಿಂದ ಮಾಡಿದ್ದಾರೆ ಎನ್ನಬಹುದು.
ಇನ್ನುಳಿದ ಸಾಹಿತಿಗಳು
ಜ.ನಾ.ತೇಜಶ್ರೀ ಃ ಕನ್ನಡ ಸಾಹಿತ್ಯದ ಹೆಸರಾಂತ ವೈಚಾರಿಕ ಸಾಹಿತಿಯಾದ ಜ.ಹೊ.ನಾರಾಯಣಸ್ವಾಮಿಯವರ ಪುತ್ರಿಯಾದ ತೇಜಶ್ರಿಯವರು ಅಸಾಧಾರಣ ವ್ಯಕ್ತಿತ್ತ್ವವುಳ್ಳವರು. ಆಂಗ್ಲಭಾಷೆಯಲ್ಲಿ ಸ್ನಾತಕೋತ್ತರ ಪಡೆದ ಇವರು ಆಂಗ್ಲಭಾಷಾ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಛಾಪನ್ನು ಮೂಡಿಸಿದ್ದಾರೆ.
ಲಯ (ಕವನ ಸಂಕಲನ, 2003), ತಿಳಿಗೊಳ (ಕವನ ಸಂಕಲನ, 2004), ಚೀನಿ ತತ್ವಶಾಸ್ತ್ರದ ಕತೆ (ಅನುವಾದ, 2005), ಭಾರತ ರಾಷ್ಟ್ರೀಯ ಚಳುವಳಿ (ಅನುವಾದ, 2007), ಕತ್ತಲೆಯ ಬೆಳಗು (ಕವನ ಸಂಕಲನ, 2008), ಕಡಲ ತಡಿಯ ಗುಡಾರ (ಅನುವಾದ, 2009), ಉಸ್ರುಬುಂಡೆ (ಕವನ ಸಂಕಲನ, 2011), ಅವನರಿವಲ್ಲಿ (ಖಂಡಕಾವ್ಯ, 2011) , ಬೆತ್ತಲೆ ಫಕೀರ (ಅನುವಾದ, 2011), ಕವಿ ರವೀಂದ್ರ (ಸಂಪಾದನೆ, 2012), ಸುರಗಿ (ಯು.ಆರ್.ಅನಂತಮೂರ್ತಿ ಅವರ ಆತ್ಮಕತೆಯ ನಿರೂಪಣೆ ಮತ್ತ ಸಂಯೋಜನೆ) 2012, ವೋಲೆ ಶೋಯಿಂಕಾನ ‘ಸಾವು ಮತ್ತು ರಾಜನ ಕುದುರೆಸವಾರ’ ನಾಟಕವನ್ನು ‘ನೀನಾಸಂ’ಗಾಗಿ ಅನುವಾದಿಸಿದ್ದಾರೆ. ಮಾಗಿಕಾಲದ ಸಾಲುಗಳು (ಕವನ ಸಂಕಲನ) 2013, ಇರುವೆ ಮತ್ತು ಪಾರಿವಾಳ (ಟಾಲ್ಸ್ಟಾಯ್ರ ಮಕ್ಕಳ ಕತೆಗಳ ಅನುವಾದ) 2013, ಬೆಟ್ಟದ ಮೇಲಿನ ಬೆಳಕು (ಸಂಪಾದನೆ) 2015 ಮುಂತಾದ ಕೃತಿಗಳನ್ನು ಣಿಡಿದ ಇವರಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಟಿ. ಎಸ್. ರಂಗರಾವ್ ದತ್ತಿ ಬಹುಮಾನ (1998, ಮೈಸೂರು ವಿಶ್ವವಿದ್ಯಾಲಯ), ಪ್ರೊ. ಡಿ.ಸಿ.ಅನಂತಸ್ವಾಮಿ ದತ್ತಿ ಪ್ರಶಸ್ತಿ (2004, ಕನ್ನಡ ಸಾಹಿತ್ಯ ಪರಿಷತ್ತು), ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ (2005, ಕನ್ನಡ ಸಾಹಿತ್ಯ ಪರಿಷತ್ತು), ಸುಶೀಲ ಎಸ್. ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ (2008, ಮುಂಬೈ, ಜಗಜ್ಯೋತಿ ಕಲಾವೃಂದ), ನೀಲಗಂಗಾ ದತ್ತಿ ಪ್ರಶಸ್ತಿ (2008-9, ಕನ್ನಡ ಸಾಹಿತ್ಯ ಪರಿಷತ್ತು), ಸ್ನೇಹ-ಸೇತು ಪ್ರಶಸ್ತಿ (2009, ಸ್ನೇಹ-ಸೇತು ಸಂಸ್ಥೆ, ಬೆಂಗಳೂರು), ಪ್ರೊ.ಎಸ್.ವಿ.ಪರಮೇಶ್ವರಭಟ್ಟ ಅನುವಾದ ಪ್ರಶಸ್ತಿ (2011, ಕರ್ನಾಟಕ ಸಂಘ, ಶಿವಮೊಗ್ಗ), ಬೇಂದ್ರೆ ಗ್ರಂಥ ಬಹುಮಾನ (2011, ಧಾರವಾಡ), ಅಮ್ಮ ಪ್ರಶಸ್ತಿ (2011, ಸೇಡಂ, ಗುಲ್ಬರ್ಗಾ), ಜಿ.ಎಸ್.ಎಸ್. ಕಾವ್ಯಪ್ರಶಸ್ತಿ (2011, ಬೆಂಗಳೂರು), ‘ಶ್ರೀ ವಿಜಯ’ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು (2013) ಪ್ರಮುಖವಾದವುಗಳು.
ರೂಪ ಹಾಸನ ಃ ಪ್ರಸ್ತುತ ಸಂದರ್ಭದಲ್ಲಿ ಹಾಸನ ಜಿಲ್ಲೆಯಿಂದ ಪ್ರಮುಖವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹಲರು ಕೃಷಿ ಮಾಡುತ್ತಿದ್ದಾರೆ ಅವರಲ್ಲಿ ಖ್ಯಾತ ಕವಯತ್ರಿಯಾದ ರೂಪಹಾಸನ ತಮ್ಮ ಕಾವ್ಯದಲ್ಲಿ ಬಂಡಾಯ ಧ್ವನಿ ಮೊಳಗಿಸುತ್ತ ಎಲ್ಲರ ಚಿತ್ತವ ಸೆಳೆದವರು. ಕನ್ನಡ ಹೊಸ ತಲೆಮಾರಿನ ಪ್ರಸಿದ್ಧ ಕವಯತ್ರಿ. ಒಂದಿಷ್ಟು ಹಸಿ ಮಣ್ಣು, ಮಹಿಳೆಗೆ ಹಕ್ಕುಗಳೇನೋ ಇವೆ ಆದರೆ? , ಬಾಗಿಲಾಚೆಯ ಮೌನ, ಲಹರಿ, ಹೇಮೆಯೊಡಲಲ್ಲಿ, ಕಡಲಿಗೆಷ್ಟೊಂದು ಬಾಗಿಲು, ಕಾವ್ಯ ಬಟ್ಟಲ ತಿರುವುಗಳಲ್ಲಿ, ಮಹಿಳೆ ಮತ್ತು ಆಧುನಿಕತೆಯ ಸವಾಲುಗಳು ಮುಂತಾದ ಕೃತಿಗಳನ್ನು ರಚಿಸಿದ ಇವರಿಗೆ ಡಾ.ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ನೀಲಗಂಗಾ ದತ್ತಿ ಪ್ರಶಸ್ತಿ, ಡಿವಿಜಿ ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ.
ಎನ್.ಎಲ್.ಚನ್ನೇಗೌಡ ಃ ಹಾಸನದಲ್ಲಿ ಗಟ್ಟಿಕಾವ್ಯ ಎಂದರೆ ಚನ್ನೇಗೌಡರು. ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿರುವ ಇವರು ಹೇಮತೀರದ ಗುಚ್ಛ, ನವಪಲ್ಲವ, ಬೆಳ್ಳಕ್ಕಿ, ಬೆಳ್ಮುಗಿಲು, ಗೃಹಪ್ರವೇಶ, ಬೆಳ್ಳಿ ಬೆಳದಿಂಗಳು, ಕಳ್ಳುಬಳ್ಳಿ, ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ಹೊತ್ತು ಮೂಡುವ ಮುನ್ನ, ತಲೆಮಾರು ಮುಂತಾದ ಹಲವು ಕೃತಿಗಳನ್ನು ನೀಡಿದ್ದಾರೆ. ಹಾಸನ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರಿಗೆ ಹತ್ತಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಗೊರೂರು ಅನಂತರಾಜು ಃ ನಾಟಕ, ಕಾವ್ಯ, ವ್ಯಕ್ತಿ ಪರಿಚಯ, ಹಾಸ್ಯ ಲೇಖನಗಳಿಂದಲೇ ಪ್ರಸಿದ್ಧಿ ಪಡೆದ ಅನಂತರಾಜುರವರು ಸಮ್ಮಿಲನ, ವಸಂತ, ಮುಖಾಮುಖಿ, ಹಾಸ್ಯ ಸವಿ, ಕಾವೇರಿ ನದಿಯ ದಡದಲ್ಲಿ, ಗೊರೂರು ಹೇಮಾವತಿ ದರ್ಶನ, ಡಾ.ಗೊರೂರು ಬದುಕು ಬರಹ, ವ್ಯವಸ್ಥೆ, ವೀರಪ್ಪನ್ ಭೂತ, ನಾರಿ ಹೆಜ್ಜೆ ನರಿ ಕಣ್ಣು, ಮೂರು ಪ್ರಯೋಗಶೀಲ ನಾಟಕಗಳು, ಅಭಿನಯ ಅಭಿವ್ಯಕ್ತಿ ಹೀಗೆ ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೀರ್ತಿ ಇವರದು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಗೋಷ್ಠಿಗಳಲ್ಲಿ ಭಾಗವಹಿಸಿದಾರೆ. ಇವರ ಸಾಹಿತ್ಯ ಕೃಷಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಎನ್.ಶೈಲಜಾ ಹಾಸನ ಃ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಶೈಲಜಾರವರು ಶಿಕ್ಷಣ, ಕಾವ್ಯ, ಲೇಖನ, ಕಾದಂಬರಿ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಚಿಲ್ಲರೆ ಪುರಾಣ, ಬೊಗಸೆಯೊಳಗಿನ ಬಿಂದು, ಮತ್ತೊಂದು ಅಂಗಳ, ಮಂಥನ, ಮುಸ್ಸಂಜೆಯ ಮಿಂಚು, ಏನು ಮೋಹ ಏನು ದಾಹ, ಶಿಕ್ಷಣದತ್ತ ಒಂದು ನೋಟ ಸೇರಿದಂತೆ ಹಲವಾರು ಮೌಲಿಕ ಕೃತಿಗಳನ್ನು ನೀಡಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಗೌರಿ ರಾಮಯ್ಯ ದತ್ತಿ ಪ್ರಶಸ್ತಿ, ಭಾರತಿ ರಾಜಾರಾವ್ ದತ್ತಿ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ರುಕ್ಮಿಣಿಬಾಯಿ ಸಾಹಿತ್ಯ ಪ್ರಶಸ್ತಿಗಳು ಸಂದಿವೆ.
ಇನ್ನುಳಿದಂತೆ ಹೆಸರಾಂತ ಜಾನಪದ ತಜ್ಞ ಮೇಟಿಕೆರೆ ಹಿರಿಯಣ್ಣ, ಅಪ್ಪಾಜಿ ಗೌಡ, ತಿರುಪತಿಹಳ್ಳಿ ಶಿವಶಂಕರ್, ಚಂದ್ರಶೇಖರ್ ಧೂಳೇಕರ್, ಚಂದ್ರಯ್ಯ ನಾಯ್ಡು, ಚೌಡುವಳ್ಳಿ ಪುಟ್ಟರಾಜು, ಎಂ.ವಿ.ತ್ಯಾಗರಾಜು, ಸಾ.ನಂ.ಬಸವೇಗೌಡ, ಎಸ್.ಎಂ.ದೇವರಾಜೇಗೌಡ, ಭಾರತಿ ಹಾದಿಗೆ, ಶ್ರೀವಿಜಯ ಹಾಸನ, ಶ್ರೀನಿವಾಸ ಡಿ.ಶೆಟ್ಟಿ, ಎಚ್.ಸಿ.ಭವ್ಯನವೀನ್, ಪ್ರಭಾಮಣಿ ನಾಗರಾಜ್, ಬೇಲೂರ್ ರಘುನಂದನ್, ನವಾಬ್ ಬೇಲೂರು, ಗೊರೂರು ಶಿವೇಶ್, ನಾಗರಾಜ್ ಹೆತ್ತೂರ್, ದ್ಯಾವಪ್ಪ ಹಾಸನ್, ಹರಿಹರಪುರ ಶ್ರೀಧರ್, ಕಲಾವತಿ ಮಧುಸೂದನ್, ರಾಜೇಶ್ವರಿ ಹುಲ್ಲೇನಹಳ್ಳಿ, ಲಲಿತ ಎಸ್, ಕೆ.ಟಿ.ಜಯಶ್ರೀ, ಅಹಮದ್ ಹಗರೆ, ಕೆ.ಎಸ್.ರವಿಕುಮಾರ್, ಚಿನ್ನೇನಹಳ್ಳಿ ಸ್ವಾಮಿ, ಸಮುದ್ರವಳ್ಳಿ ವಾಸು, ಪವನ್ ಆಲೂರು, ದ್ಯಾವನೂರ್ ಮಂಜುನಾಥ ಒಳಗೊಂಡಂತೆ ಹಲವಾರು ಸಾಹಿತಿಗಳು ಕೆಲಸ ಮಾಡುತ್ತಿದ್ದಾರೆ. ಹಾಸನದ ಎಲ್ಲಾ ಸಾಹಿತಿಗಳ ಹೆಸರನ್ನು ಇಲ್ಲಿ ಉಲ್ಲೇಖಿಸಲಾಗಿಲ್ಲ ಇನ್ನೂ ಹಲವಾರು ಜನರು ಉಳಿದಿರಬಹುದು. ಅವರೆಲ್ಲರನ್ನಿಲ್ಲಿ ಹೆಸರಿಸಲಾಗದಿದ್ದಕ್ಕೆ ಕ್ಷಮೆ ಕೋರುತ್ತಾ ಈ ಲೇಖನವನ್ನು ಮುಗಿಸುತ್ತಿದ್ದೇನೆ.
ಗ್ರಂಥ ಋಣ
1).ಡಿ.ಗೋವಿಂದಾಸ್ ಸಮಗ್ರ ಸಾಹಿತ್ಯ- ಡಾ|| ಎಂ.ಎಸ್.ಶೇಖರ್.
2). ಕನ್ನಡ ಸಾಹಿತ್ಯ ದಿಗ್ಗಜರು - ಬೇ.ಗೋ.ರಮೇಶ್
3). ಕನ್ನಡ ಸಾಹಿತ್ಯಕ್ಕೆ ಹಾಸನ ಜಿಲ್ಲೆಯ ಕೊಡುಗೆ - ದಿವಂಗತ ಪಂ|| ಸ್ವಾಮಿಗೌಡ
4). ಕನ್ನಡ ಸಾಹಿತ್ಯ ಚರಿತ್ರೆ – ತ.ಸು.ಶಾಮರಾಯ
5). ಬಿತ್ತಿ ಬೆಳೆದವರು – ಡಾ|| ಜಿ.ಆರ್.ತಿಪ್ಪೇಸ್ವಾಮಿ
6). ಸಮಗ್ರ ಸಾಹಿತ್ಯ ಚರಿತ್ರೆ - ಹೊ.ನ.ನೀಲಕಂಠೇ ಗೌಡ
7). ಸಾಹಿತ್ಯ - ಪ್ರೊ. ಎಲ್.ಎಸ್.ಶೇಷಗಿರಿ ರಾವ್
8). ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಆಧುನಿಕ ದಲಿತ ಕಾವ್ಯ – ಡಾ|| ಪಿ.ಮಣಿ
9). ಗೊರೂರು ಮತ್ತು ಇತರ ಲೇಖನಗಳು – ಗೊರೂರು ಅನಂತರಾಜು
10). ಎನ್ಸೈಕ್ಲೋಪಿಡಿಯಾ
11). ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಸ್ಮರಣ ಸಂಚಿಕೆಗಳು
ಕೊಟ್ರೇಶ್ ಎಸ್. ಉಪ್ಪಾರ್ರವರ ಪರಿಚಯ
ಕೊಟ್ರೇಶ್ ಎಸ್. ಉಪ್ಪಾರ್ ರವರು ಮೂಲತಃ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಬಿ.ಓಬಳಾಪುರ ಗ್ರಾಮದವರು. ಇವರು 1980 ಜುಲೈ 22 ರಂದು ಜನಿಸಿದರು. ತಂದೆ ಸಣ್ಣ ಮೂಗಪ್ಪ, ತಾಯಿ ಸಾವಿತ್ರಮ್ಮ. ಪ್ರಸ್ತುತ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ತಾಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಭಾಷಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂ.ಎ; ಬಿ.ಇಡಿ ಪದವೀಧರರಾದ ಇವರು ಕಳೆದ ಒಂದೂವರೆ ದಶಕದಿಂದ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ದುಡಿಯುತ್ತಾ ಬಂದಿದ್ದಾರೆ. ಕಾವ್ಯ, ಕಥೆ, ಪ್ರಬಂಧ ಹಾಗೂ ಶಿಕ್ಷಣ ಕ್ಷೇತ್ರದ ಹಲವಾರು ವಿಚಾರಗಳನ್ನು, ವೈಜ್ಞಾನಿಕ ವಿಷಯಗಳ ಕೌತುಕಗಳನ್ನು, ಪ್ರಗತಿಪರ ಚಿಂತನಗಳನ್ನು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಬರೆದು ರಾಜ್ಯಾದ್ಯಂತ ಅನೇಕ ಓದುಗರನ್ನು ತಲುಪಿದ್ದಾರೆ.
ಗಣ್ಯ ಆಧುನಿಕ ವಚನಕಾರರಾದ ಇವರು- ವಚನ ದುಂಧುಬಿ (2005), ವಚನ ದೀಪಿಕಾ (2009), ವಚನ ಮಾಣಿಕ್ಯ (2013), ವಚನ ಸಾನಿಕಾ(2013), ವಚನ ಲಾವಣ್ಯ(2014) ಎಂಬ ಆಧುನಿಕ ವಚನ ಸಂಕಲಗಳನ್ನು ನೀಡಿದ್ದಾರೆ. ಮುಗಿಲಾಚೆಗಿನ ಮಾತು (2010), ಮೃತ್ಯುವಿನಾಚೆಯ ಬದುಕು (2010), ಮಾತೃ ಮಡಿಲು ಎಂಬ ಕವನ ಸಂಕಲನಗಳು, ವೈಜ್ಞಾನಿಕ ವಿಸ್ಮಯಗಳು (2010), ವಿಶ್ವದ ವೈಚಿತ್ರಗಳು (2010), ವೈಜ್ಞಾನಿಕ ಕೌತುಕಗಳು (2011), ವಿದ್ಯಾರ್ಥಿಗಳಿಗಾಗಿ ವಿಜ್ಞಾನ (2012), ಪರಮಾಣು ಸಂಶೋಧನೆ ಮತ್ತು ವಿಜ್ಞಾನಿಗಳು (2011), ಅನುಗನಾಳಲ್ಲೊಂದು ಔಷಧಿವನ(2011) ಎಂಬ ವಿಜ್ಞಾನ ವಿಚಾರಕ್ಕೆ ಸಂಬಂಧಿಸಿದ ಕೃತಿಗಳು; ಗುಣಾತ್ಮಕ ಶಿಕ್ಷಣದ ಮಜಲುಗಳು(2010), ಶಿಕ್ಷಕ, ಮಗು ಮತ್ತು ಶಿಕ್ಷಣ(2013) ಎಂಬ ಶೈಕ್ಷಣಿಕ ಕೃತಿಗಳು; ಮಂತಣ(2010), ಅವಳ ಮುಖಗಳು(2011), ಮಂಥನ(2012) ವೈಚಾರಿಕ ಕೃತಿಗಳು. ‘ನಿಬಂಧಗಳು’ (2011), ಪರಿಸರ ಪ್ರೇಮಿ ಅನುಗನಾಳು(2011), ಡಾ|| ರಾಜೇಂದ್ರಸಿಂಗ್ ಮತ್ತು ಇತರ ಲೇಖನಗಳು (2013), ಮಹಾಕವಿ ಕುವೆಂಪು ಮತ್ತು ಇತರ ಲೇಖನಗಳು (2013), ಸಮಷ್ಠಿ(2013), ‘ವ್ಯಾಕರಣ ದರ್ಪಣಂ’(2013) ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಇನ್ನೂ ಹತ್ತಾರು ಕೃತಿಗಳು ಅಚ್ಚಿನಲ್ಲಿವೆ. ಕಾವ್ಯ, ಕಥೆ, ಲೇಖನ, ವಚನ ಸಾಹಿತ್ಯ, ವಿಜ್ಞಾನ, ಶಿಕ್ಷಣ, ಸಂಪಾದನೆ ಹೀಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಯಶಕಂಡಿದ್ದಾರೆ. ಸೃಜನಾತ್ಮಕ ಲೇಖಕರಾದ ಇವರು ಕನ್ನಡ ಸಾಹಿತ್ಯ ಪರಿಷತ್, ವಚನ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್, ಭಾರತ ಜ್ಞಾನ ವಿಜ್ಞಾನ ಸಮಿತಿ, ಮನೆ-ಮನೆ ಕವಿಗೋಷ್ಠಿ ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಇವರ ಸಾಹಿತ್ಯ ಸೇವೆಗಾಗಿ ಡಾ|| ಸಿದ್ಧಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿ, ಕರುನಾಡ ಧೃವತಾರೆ ರಾಜ್ಯ ಪ್ರಶಸ್ತಿ, ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ, ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿಗಳು ಸಂದಿವೆ. ಶೈಕ್ಷಣಿಕ ಸೇವೆಗಾಗಿ ಶಿಕ್ಷಣ ಸೇವಾ ರತ್ನ ಪ್ರಶಸ್ತಿ, ರಾಜ್ಯ ಟಿ.ಎಲ್.ಎಂ ಪ್ರಶಸ್ತಿ, ಜಿಲ್ಲಾ ಟಿ.ಎಲ್.ಎಂ ಪ್ರಶಸ್ತಿ ಮುಂತಾದವು ಸಂದಿವೆ.
ದಿನಾಂಕ 05.09.2014 ರಂದು ಹಾಸನದ ಕಲಾಕ್ಷೇತ್ರದಲ್ಲಿ ನಡೆದ ಜಿಲ್ಲಾ ಶಿಕ್ಷಕರ ದಿನಾಚರಣೆಯಂದು 2014 ನೆಯ ಸಾಲಿನ ಜಿಲ್ಲಾ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀಮಾನ್ ಎಚ್.ಡಿ. ದೇವೇಗೌಡರಿಂದ ಸ್ವೀಕರಿಸಿದ್ದಾರೆ.