ಧನಾತ್ಮಕ ಚಿಂತನೆಯ ಚುಟುಕು ಸಾಹಿತಿ ಡಾ|| ಕೆ.ಕೆ.ಜಯಚಂದ್ರ ಗುಪ್ತ
ಸಾಹಿತ್ಯ ಸೃಜಿಸುವುದೇ ಸಕಾರಾತ್ಮಕ ಚಿಂತನೆಗಳಿಂದ. ಆದರೂ ಒಮ್ಮೊಮ್ಮೆ ವ್ಯತಿರಿಕ್ತ ಭಾವಗಳು ಸಾಹಿತ್ಯದಲ್ಲಿ ಮೊಳೆಯುವುದೂ ಉಂಟು, ಅವು ಕಡಿಮೆ ಪ್ರಮಾಣವೆನ್ನಬಹುದು. ಎಪ್ಪತ್ತಾರು ವಯೋಮಾನದ ಯುವ ಮನಸ್ಸಿನ ವ್ಯಕ್ತಿ ಡಾ || ಗುಪ್ತರವರು. ಸದಾ ಹೊಸ ಚಿಂತನೆಗಳೊಂದಿಗೆ ಪರಾಮರ್ಶಿಸುವ ಇವರು ನೇರವಾದಿಗಳು. ವೈದ್ಯ ವೃತ್ತಿಯ ಜೊತೆಗೆ ಸಾಹಿತ್ಯ ವಲಯದಲ್ಲೂ ಸಂಚಲನ ಮೂಡಿಸಿದ ಕೀರ್ತಿ ಇವರದು ಎಂದರೆ ಅತಿಶಯೋಕ್ತಿಯಾಗಲಾರದು.
ಶ್ರೀಯುತ ಜಯಚಂದ್ರಗುಪ್ತರವರು ಕ್ರಿ.ಶ.1938 ಮೆ 04 ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ವಾಸಿ ಶ್ರೀ ಕೃಷ್ಣಶೆಟ್ಟಿ ಮತ್ತು ಶ್ರೀಮತಿ ಗಂಗಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕೊಣನೂರು ಹಾಗೂ ಅರಕಲಗೂಡಿನಲ್ಲಿ ಮುಗಿಸಿದರು. ನಂತರ ಇಂಟರ್ಮೀಡಿಯೇಟ್ನ್ನು ಕೊಣನೂರಿನ ಬಿ.ಎಂ.ಶೆಟ್ಟಿ ಕಾಲೇಜಿನಲ್ಲಿ ಮುಗಿಸಿದ ಜಯಚಂದ್ರಗುಪ್ತರವರು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು 1964 ರಲ್ಲಿ ಪೂರೈಸಿ, ನಂತರ ಡಾ|| ಜಯಚಂದ್ರ ಗುಪ್ತರವರು 1965 ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ವೈದ್ಯ ವೃತ್ತಿ ಜೀವನವನ್ನು ಆರಂಭಿಸಿದರು.
ಇಷ್ಟಕ್ಕೆ ಮಿತಿಗೊಳ್ಳದ ಇವರ ಓದಿನ ಆಸಕ್ತಿ ವೃತ್ತಿ ಜೀವನದಲ್ಲೂ ಮುಂದುವರೆಯಿತು. ವೈದ್ಯಕೀಯ ಇಲಾಖೆ ಇವರ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಿದ್ದರ ಫಲವಾಗಿ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ ಪದವಿ(ವೃತ್ತಿ ನಿರತ) ಪೂರೈಸಿದರು. ನಂತರದ ದಿನಗಳಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜ್ನಲ್ಲಿ ಕರ್ತವ್ಯ ನಿರ್ವಹಿಸಿದರು.
ದಾಂಪತ್ಯ ಜೀವನ ಃ 1973 ರಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದ ರಾಜೇಶ್ವರಿಯವರನ್ನು ವರಿಸುವುದರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಾ || ಗುಪ್ತರವರ ಜೀವನದಲ್ಲಿ ಅನುರಾಧ, ಆಶಾರಾಣಿ ಹಾಗೂ ಅಭಿಷೇಕ ಅವರು ವಾಂಶಿಕÀವಾಗಿ ಹೊಸ ಬೆಳಕಾಗಿ ಬಂದರು. ಮೊದಲೆರಡು ಪುತ್ರಿಯರು ಇಂಜಿನಿಯರ್ಗಳಾದರೆ, ಪುತ್ರ ಅಭಿಷೇಕ್ ವೈದ್ಯರು.
ವೈದ್ಯಕೀಯ ಕ್ಷೇತ್ರ ಃ ಡಾ|| ಜಯಚಂದ್ರಗುಪ್ತರವರು 1980 ರಿಂದ 1983 ರ ಅವಧಿಯಲ್ಲಿ ತವರು ಜಿಲ್ಲೆಯಾದ ಹಾಸನದಲ್ಲಿ ಕೆಲಸ ಮಾಡಿದ್ದಾರೆ. 1985 ರಿಂದ 1990 ರ ಅವಧಿಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣಗಳಲ್ಲಿ ಉಪ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಸರ್ಜನ್ ಆಗಿ ಕರ್ತವ್ಯ ನಿರ್ವಹಿಸಿ 1996 ಮೆ ಮಾಹೆಯಲ್ಲಿ ನಿವೃತ್ತಿಯಾದರು.
ಸಾಹಿತ್ಯ ಕ್ಷೇತ್ರ ಃ ಸುಧಾ, ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ಸಾಹಿತ್ಯ ಹಾಗೂ ವಿಮರ್ಶಾತ್ಮಕ ಲೇಖನಗಳನ್ನು ಓದುತ್ತಿದ್ದ ಡಾ || ಗುಪ್ತರವರು ಸಾಹಿತ್ಯ ಕ್ಷೇತ್ರದತ್ತ ಹೊರಳಲು ಕಾರಣವಾಯಿತೆನ್ನಬಹುದು. ಅವರೇ ಹೇಳುವಂತೆ ಕಾಲೇಜು ದಿನಗಳಿಂದಲೂ ಚಿಕ್ಕ ಪುಟ್ಟ ಚುಟುಕುಗಳನ್ನು ಬರೆಯುವ ಹವ್ಯಾಸವಿತ್ತಾದರೂ ಅದು ಪ್ರಖರಗೊಂಡದ್ದು ಹಾಸನದ ಮನೆ ಮನೆ ಕವಿಗೋಷ್ಠಿಯಿಂದ ಹಾಗೂ ಸಾಹಿತ್ಯಿಕ ಸ್ನೇಹಿತರಿಂದ.
2007 ರಲ್ಲಿ ಪ್ರಕಟವಾದ ‘ನೆನಪಿನ ಪುಟಗಳು’ ಇವರ ಚೊಚ್ಚಲ ಕೃತಿಯಾಗಿದೆ. 2010 ರಲ್ಲಿ ಪ್ರಕಟವಾದ ‘ಚುಚ್ಚುಮದ್ದು’ ಚುಟುಕು ಸಂಕಲನ.
ನೆನಪಿನ ಪುಟಗಳು ಃ ಸುಮಾರು 80 ಪುಟಗಳ ಈ ಕೃತಿಯು 1957 ರಲ್ಲಿ ಜಯಚಂದ್ರಗುಪ್ತರವರು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಸೇರಿದ ಆ ಸಾಲಿನ ಗೆಳೆಯರೊಂದಿಗೆ ಅನುಭವಿಸಿದ ಮಧುರ ಕ್ಷಣಗಳ ಹೊತ್ತಿಗೆಯ ಬುತ್ತಿ ಎಂದರೆ ತಪ್ಪಾಗಲಾರದು. ಅಂದಹಾಗೆ ಕೇವಲ ಕಾಲೇಜಿನ ಅನುಭವಗಳು ಮಾತ್ರ ಇದರಲ್ಲಿಲ್ಲ, ಹಾಗೆಯೇ ವೃತ್ತಿ ಜೀವನದ ಅನುಭವಗಳು, ವೈದ್ಯಕೀಯ ಲೇಖನಗಳು, ಬೇರೆ ಬೇರೆ ಸಂದರ್ಭಗಳಲ್ಲಿ ನಡೆದ ಲೇಖಕರ ವೈಯಕ್ತಿಕ ಅನುಭವಗಳು ಈ ಕೃತಿಯಲ್ಲಿ ಸಮ್ಮಿಲನಗೊಂಡಿವೆ.
ಚುಚ್ಚು ಮದ್ದು ಃ 108 ಪುಟಗಳ ಈ ಕೃತಿಯು ಗುಪ್ತ ರವರನ್ನು ನಿಜಕ್ಕೂ ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿದ ಕೃತಿಯೆನ್ನಬಹುದು. ಈ ಕೃತಿಯ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಆರ್.ಕೆ.ನಲ್ಲೂರ್ ಪ್ರಸಾದ್ “ ‘ ಚುಚ್ಚು ಮದ್ದು’ ಡಾ|| ಜಯಚಂದ್ರ ಗುಪ್ತ ಅವರ ವಿಶಿಷ್ಟ ಕೃತಿ. ವೈದ್ಯಕೀಯ ಕ್ಷೇತ್ರದ ಹೆಸರನ್ನು ಹೊತ್ತ ಈ ಕೃತಿ ತನ್ನ ಹೆಸರು ಸಾರ್ಥಕವಾಗುವಂತೆ ಸೃಷ್ಠಿಯಾಗಿದೆ. ಇಲ್ಲಿಯ ಚುಟುಕುಗಳಿಗೆ ಸೂಜಿ ಮೊನಯಿದೆ. ಅಭಿವ್ಯಕ್ತಿಯಲ್ಲಿ ಕಟಕಿ, ವ್ಯಂಗ, ವಿಡಂಬನೆ, ಹಾಸ್ಯ ಸೂಚಿಸಿದರೂ ಆಂತರ್ಯದಲ್ಲಿ ಸಾಮಾಜಿಕ ಕಳಕಳಿಯಿದೆ. ಸಮಾಜದ ಪಿಡುಗನ್ನು ಹೋಗಲಾಡಿಸಿ, ಆರೋಗ್ಯವನ್ನು ಪುನಃ ಸ್ಥಾಪಿಸುವ ವೈದ್ಯ ಕಾಳಜಿ ಎಲ್ಲ ಕವನಗಳಲ್ಲಿಯೂ ಕಂಡು ಬರುತ್ತದೆ” ಎಂದು ಹೇಳಿದ್ದಾರೆ.
ಈ ಕೃತಿಯಲ್ಲಿ ಲೇಖಕರು ಮುಖ್ಯವಾಗಿ ಮೂರು ಭಾಗಗಳನ್ನು ಇಟ್ಟಿದ್ದಾರೆ. ಮೊದಲನೆಯದು ‘ಸಿಹಿ ಗುಳಿಗೆ’ ಇದರಲ್ಲಿ ವೇಷ ದಿಂದ ಬೋಧನೆ ವರೆಗೆ 31 ಚುಟುಕುಗಳಿವೆ. ಎರಡನೆಯದು ‘ಕಹಿ ಗುಳಿಗೆ’ ಇದರಲ್ಲಿ ಶ್ರಮ ದಿಂದ ರಹಸ್ಯ ದವರೆಗೆ 53 ಚುಟುಕುಗಳಿವೆ. ಮೂರನೆಯದು ‘ಚುಚ್ಚುಮದ್ದು’ ಇದರಲ್ಲಿ ಟೆಂಡರ್ ನಿಂದ ಬೆನ್ನು ಎನ್ನುವ ವರೆಗೆ 48 ಚುಟುಕುಗಳಿವೆ. ಒಟ್ಟು 132 ಚುಟುಕುಗಳ ಕಣಜವಾದ ಈ ಕೃತಿಯು ಮೌಲ್ಯಭರಿತವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ನಿವೃತ್ತಿ ಜೀವನ ಃ 1996 ರಲ್ಲಿ ವೃತ್ತಿಯಿಂದ ನಿವೃತ್ತಿಗೊಂಡ ಜಯಚಂದ್ರಗುಪ್ತರವರನ್ನು ಸಮಾಜ ಸುಮ್ಮನೆ ಕೂರಲು ಬಿಡಲಿಲ್ಲ. ನಿವೃತ್ತಿ ಹಂತದಲ್ಲೂ ವೈದ್ಯಕೀಯ ವೃತ್ತಿ ಮಾಡುವಂತೆ ಪ್ರಚೋದಿಸಿತು. ಸದಾ ಕ್ರಿಯಾಶೀಲ ಮನಸ್ಸಿನ ಡಾ||ಗುಪ್ತರವರು ಹಾಸನದ ಸಂಜೀವಿನಿ ಹಾಗೂ ಇತರ ಆಸ್ಪತ್ರೆಗಳಲ್ಲಿ ಸಾಕಷ್ಟು ಕಾಲ ಕಾರ್ಯನಿರ್ವಹಿಸಿ ಕಳೆದ ಐದಾರು ವರ್ಷಗಳಿಂದ ಆರ್.ಸಿ ರಸ್ತೆಯಲ್ಲಿರುವ ಮಿಷನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತದ್ದಾರೆ.
ಗೌರವ, ಪುರಸ್ಕಾರಗಳು ಃ 1996 ರಲ್ಲಿ ಚಿಕ್ಕಮಗಳೂರಿನಲ್ಲಿ ಕಾಯ್ ನಿರ್ವಹಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಲ ಸಂಘವು ಇವರ ಕರ್ತವ್ಯ ನಿಷ್ಠೆ ಪರಿಗಣಿಸಿ ಸನ್ಮಾನಿಸಿ ಗೌರವಿಸಿದೆ.
2001 ರಲ್ಲಿ ಭಾರತೀಯ ವೈದ್ಯ ಶಾಖೆ ಹಾಸನ ಘಟಕವು ಡಾ|| ಗುಪ್ತರವರ ಅನುಪಮ ಸೇವೆಯನ್ನು ಮನಗಂಡು ಸನ್ಮಾನಿಸಿ ಗೌರವಿಸಿದೆ.
2012 ರಲ್ಲಿ ಹಾಸನದಲ್ಲಿ ನಡೆದ ವೈದ್ಯ ತಜ್ಞರ ರಾಜ್ಯ ಸಮ್ಮೇಳನದಲ್ಲಿ ಇವರನ್ನು ಗೌರವಿಸಿ ಪುರಸ್ಕರಿಸಲಾಗಿದೆ.
2014 ರಲ್ಲಿ ಶ್ರೀಭವಾನಿ ಶಂಕರಿ ಚಾರಿಟಬಲ್ ಟ್ರಸ್ಟ್ ಕೊಣನೂರು ಸಂಸ್ಥೆಯು ಡಾ|| ಕೆ.ಕೆ.ಜಯಚಂದ್ರ ಗುಪ್ತ ಅವರ ಜೀವನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದೆ.
ಹೀಗೆ ಡಾ|| ಗುಪ್ತರವರ ವೈದ್ಯಕೀಯ ಹಾಗೂ ಸಾಹಿತ್ಯಿಕ ಬದುಕು ಒಟ್ಟೊಟ್ಟಿಗೆ ಸಾಗುತ್ತಿದೆ. ಇವರ ಸಾಧನೆ ಇನ್ನೂ ಪ್ರಖರವಾಗಲಿ ಎಂದು ಆಶಿಸುತ್ತೇನೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794, 9739878197
ಸಾಹಿತ್ಯ ಸೃಜಿಸುವುದೇ ಸಕಾರಾತ್ಮಕ ಚಿಂತನೆಗಳಿಂದ. ಆದರೂ ಒಮ್ಮೊಮ್ಮೆ ವ್ಯತಿರಿಕ್ತ ಭಾವಗಳು ಸಾಹಿತ್ಯದಲ್ಲಿ ಮೊಳೆಯುವುದೂ ಉಂಟು, ಅವು ಕಡಿಮೆ ಪ್ರಮಾಣವೆನ್ನಬಹುದು. ಎಪ್ಪತ್ತಾರು ವಯೋಮಾನದ ಯುವ ಮನಸ್ಸಿನ ವ್ಯಕ್ತಿ ಡಾ || ಗುಪ್ತರವರು. ಸದಾ ಹೊಸ ಚಿಂತನೆಗಳೊಂದಿಗೆ ಪರಾಮರ್ಶಿಸುವ ಇವರು ನೇರವಾದಿಗಳು. ವೈದ್ಯ ವೃತ್ತಿಯ ಜೊತೆಗೆ ಸಾಹಿತ್ಯ ವಲಯದಲ್ಲೂ ಸಂಚಲನ ಮೂಡಿಸಿದ ಕೀರ್ತಿ ಇವರದು ಎಂದರೆ ಅತಿಶಯೋಕ್ತಿಯಾಗಲಾರದು.
ಶ್ರೀಯುತ ಜಯಚಂದ್ರಗುಪ್ತರವರು ಕ್ರಿ.ಶ.1938 ಮೆ 04 ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ವಾಸಿ ಶ್ರೀ ಕೃಷ್ಣಶೆಟ್ಟಿ ಮತ್ತು ಶ್ರೀಮತಿ ಗಂಗಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕೊಣನೂರು ಹಾಗೂ ಅರಕಲಗೂಡಿನಲ್ಲಿ ಮುಗಿಸಿದರು. ನಂತರ ಇಂಟರ್ಮೀಡಿಯೇಟ್ನ್ನು ಕೊಣನೂರಿನ ಬಿ.ಎಂ.ಶೆಟ್ಟಿ ಕಾಲೇಜಿನಲ್ಲಿ ಮುಗಿಸಿದ ಜಯಚಂದ್ರಗುಪ್ತರವರು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು 1964 ರಲ್ಲಿ ಪೂರೈಸಿ, ನಂತರ ಡಾ|| ಜಯಚಂದ್ರ ಗುಪ್ತರವರು 1965 ರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ವೈದ್ಯ ವೃತ್ತಿ ಜೀವನವನ್ನು ಆರಂಭಿಸಿದರು.
ಇಷ್ಟಕ್ಕೆ ಮಿತಿಗೊಳ್ಳದ ಇವರ ಓದಿನ ಆಸಕ್ತಿ ವೃತ್ತಿ ಜೀವನದಲ್ಲೂ ಮುಂದುವರೆಯಿತು. ವೈದ್ಯಕೀಯ ಇಲಾಖೆ ಇವರ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಿದ್ದರ ಫಲವಾಗಿ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ ಪದವಿ(ವೃತ್ತಿ ನಿರತ) ಪೂರೈಸಿದರು. ನಂತರದ ದಿನಗಳಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜ್ನಲ್ಲಿ ಕರ್ತವ್ಯ ನಿರ್ವಹಿಸಿದರು.
ದಾಂಪತ್ಯ ಜೀವನ ಃ 1973 ರಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದ ರಾಜೇಶ್ವರಿಯವರನ್ನು ವರಿಸುವುದರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಾ || ಗುಪ್ತರವರ ಜೀವನದಲ್ಲಿ ಅನುರಾಧ, ಆಶಾರಾಣಿ ಹಾಗೂ ಅಭಿಷೇಕ ಅವರು ವಾಂಶಿಕÀವಾಗಿ ಹೊಸ ಬೆಳಕಾಗಿ ಬಂದರು. ಮೊದಲೆರಡು ಪುತ್ರಿಯರು ಇಂಜಿನಿಯರ್ಗಳಾದರೆ, ಪುತ್ರ ಅಭಿಷೇಕ್ ವೈದ್ಯರು.
ವೈದ್ಯಕೀಯ ಕ್ಷೇತ್ರ ಃ ಡಾ|| ಜಯಚಂದ್ರಗುಪ್ತರವರು 1980 ರಿಂದ 1983 ರ ಅವಧಿಯಲ್ಲಿ ತವರು ಜಿಲ್ಲೆಯಾದ ಹಾಸನದಲ್ಲಿ ಕೆಲಸ ಮಾಡಿದ್ದಾರೆ. 1985 ರಿಂದ 1990 ರ ಅವಧಿಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣಗಳಲ್ಲಿ ಉಪ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಸರ್ಜನ್ ಆಗಿ ಕರ್ತವ್ಯ ನಿರ್ವಹಿಸಿ 1996 ಮೆ ಮಾಹೆಯಲ್ಲಿ ನಿವೃತ್ತಿಯಾದರು.
ಸಾಹಿತ್ಯ ಕ್ಷೇತ್ರ ಃ ಸುಧಾ, ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ಸಾಹಿತ್ಯ ಹಾಗೂ ವಿಮರ್ಶಾತ್ಮಕ ಲೇಖನಗಳನ್ನು ಓದುತ್ತಿದ್ದ ಡಾ || ಗುಪ್ತರವರು ಸಾಹಿತ್ಯ ಕ್ಷೇತ್ರದತ್ತ ಹೊರಳಲು ಕಾರಣವಾಯಿತೆನ್ನಬಹುದು. ಅವರೇ ಹೇಳುವಂತೆ ಕಾಲೇಜು ದಿನಗಳಿಂದಲೂ ಚಿಕ್ಕ ಪುಟ್ಟ ಚುಟುಕುಗಳನ್ನು ಬರೆಯುವ ಹವ್ಯಾಸವಿತ್ತಾದರೂ ಅದು ಪ್ರಖರಗೊಂಡದ್ದು ಹಾಸನದ ಮನೆ ಮನೆ ಕವಿಗೋಷ್ಠಿಯಿಂದ ಹಾಗೂ ಸಾಹಿತ್ಯಿಕ ಸ್ನೇಹಿತರಿಂದ.
2007 ರಲ್ಲಿ ಪ್ರಕಟವಾದ ‘ನೆನಪಿನ ಪುಟಗಳು’ ಇವರ ಚೊಚ್ಚಲ ಕೃತಿಯಾಗಿದೆ. 2010 ರಲ್ಲಿ ಪ್ರಕಟವಾದ ‘ಚುಚ್ಚುಮದ್ದು’ ಚುಟುಕು ಸಂಕಲನ.
ನೆನಪಿನ ಪುಟಗಳು ಃ ಸುಮಾರು 80 ಪುಟಗಳ ಈ ಕೃತಿಯು 1957 ರಲ್ಲಿ ಜಯಚಂದ್ರಗುಪ್ತರವರು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಸೇರಿದ ಆ ಸಾಲಿನ ಗೆಳೆಯರೊಂದಿಗೆ ಅನುಭವಿಸಿದ ಮಧುರ ಕ್ಷಣಗಳ ಹೊತ್ತಿಗೆಯ ಬುತ್ತಿ ಎಂದರೆ ತಪ್ಪಾಗಲಾರದು. ಅಂದಹಾಗೆ ಕೇವಲ ಕಾಲೇಜಿನ ಅನುಭವಗಳು ಮಾತ್ರ ಇದರಲ್ಲಿಲ್ಲ, ಹಾಗೆಯೇ ವೃತ್ತಿ ಜೀವನದ ಅನುಭವಗಳು, ವೈದ್ಯಕೀಯ ಲೇಖನಗಳು, ಬೇರೆ ಬೇರೆ ಸಂದರ್ಭಗಳಲ್ಲಿ ನಡೆದ ಲೇಖಕರ ವೈಯಕ್ತಿಕ ಅನುಭವಗಳು ಈ ಕೃತಿಯಲ್ಲಿ ಸಮ್ಮಿಲನಗೊಂಡಿವೆ.
ಚುಚ್ಚು ಮದ್ದು ಃ 108 ಪುಟಗಳ ಈ ಕೃತಿಯು ಗುಪ್ತ ರವರನ್ನು ನಿಜಕ್ಕೂ ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿದ ಕೃತಿಯೆನ್ನಬಹುದು. ಈ ಕೃತಿಯ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಆರ್.ಕೆ.ನಲ್ಲೂರ್ ಪ್ರಸಾದ್ “ ‘ ಚುಚ್ಚು ಮದ್ದು’ ಡಾ|| ಜಯಚಂದ್ರ ಗುಪ್ತ ಅವರ ವಿಶಿಷ್ಟ ಕೃತಿ. ವೈದ್ಯಕೀಯ ಕ್ಷೇತ್ರದ ಹೆಸರನ್ನು ಹೊತ್ತ ಈ ಕೃತಿ ತನ್ನ ಹೆಸರು ಸಾರ್ಥಕವಾಗುವಂತೆ ಸೃಷ್ಠಿಯಾಗಿದೆ. ಇಲ್ಲಿಯ ಚುಟುಕುಗಳಿಗೆ ಸೂಜಿ ಮೊನಯಿದೆ. ಅಭಿವ್ಯಕ್ತಿಯಲ್ಲಿ ಕಟಕಿ, ವ್ಯಂಗ, ವಿಡಂಬನೆ, ಹಾಸ್ಯ ಸೂಚಿಸಿದರೂ ಆಂತರ್ಯದಲ್ಲಿ ಸಾಮಾಜಿಕ ಕಳಕಳಿಯಿದೆ. ಸಮಾಜದ ಪಿಡುಗನ್ನು ಹೋಗಲಾಡಿಸಿ, ಆರೋಗ್ಯವನ್ನು ಪುನಃ ಸ್ಥಾಪಿಸುವ ವೈದ್ಯ ಕಾಳಜಿ ಎಲ್ಲ ಕವನಗಳಲ್ಲಿಯೂ ಕಂಡು ಬರುತ್ತದೆ” ಎಂದು ಹೇಳಿದ್ದಾರೆ.
ಈ ಕೃತಿಯಲ್ಲಿ ಲೇಖಕರು ಮುಖ್ಯವಾಗಿ ಮೂರು ಭಾಗಗಳನ್ನು ಇಟ್ಟಿದ್ದಾರೆ. ಮೊದಲನೆಯದು ‘ಸಿಹಿ ಗುಳಿಗೆ’ ಇದರಲ್ಲಿ ವೇಷ ದಿಂದ ಬೋಧನೆ ವರೆಗೆ 31 ಚುಟುಕುಗಳಿವೆ. ಎರಡನೆಯದು ‘ಕಹಿ ಗುಳಿಗೆ’ ಇದರಲ್ಲಿ ಶ್ರಮ ದಿಂದ ರಹಸ್ಯ ದವರೆಗೆ 53 ಚುಟುಕುಗಳಿವೆ. ಮೂರನೆಯದು ‘ಚುಚ್ಚುಮದ್ದು’ ಇದರಲ್ಲಿ ಟೆಂಡರ್ ನಿಂದ ಬೆನ್ನು ಎನ್ನುವ ವರೆಗೆ 48 ಚುಟುಕುಗಳಿವೆ. ಒಟ್ಟು 132 ಚುಟುಕುಗಳ ಕಣಜವಾದ ಈ ಕೃತಿಯು ಮೌಲ್ಯಭರಿತವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ನಿವೃತ್ತಿ ಜೀವನ ಃ 1996 ರಲ್ಲಿ ವೃತ್ತಿಯಿಂದ ನಿವೃತ್ತಿಗೊಂಡ ಜಯಚಂದ್ರಗುಪ್ತರವರನ್ನು ಸಮಾಜ ಸುಮ್ಮನೆ ಕೂರಲು ಬಿಡಲಿಲ್ಲ. ನಿವೃತ್ತಿ ಹಂತದಲ್ಲೂ ವೈದ್ಯಕೀಯ ವೃತ್ತಿ ಮಾಡುವಂತೆ ಪ್ರಚೋದಿಸಿತು. ಸದಾ ಕ್ರಿಯಾಶೀಲ ಮನಸ್ಸಿನ ಡಾ||ಗುಪ್ತರವರು ಹಾಸನದ ಸಂಜೀವಿನಿ ಹಾಗೂ ಇತರ ಆಸ್ಪತ್ರೆಗಳಲ್ಲಿ ಸಾಕಷ್ಟು ಕಾಲ ಕಾರ್ಯನಿರ್ವಹಿಸಿ ಕಳೆದ ಐದಾರು ವರ್ಷಗಳಿಂದ ಆರ್.ಸಿ ರಸ್ತೆಯಲ್ಲಿರುವ ಮಿಷನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತದ್ದಾರೆ.
ಗೌರವ, ಪುರಸ್ಕಾರಗಳು ಃ 1996 ರಲ್ಲಿ ಚಿಕ್ಕಮಗಳೂರಿನಲ್ಲಿ ಕಾಯ್ ನಿರ್ವಹಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಲ ಸಂಘವು ಇವರ ಕರ್ತವ್ಯ ನಿಷ್ಠೆ ಪರಿಗಣಿಸಿ ಸನ್ಮಾನಿಸಿ ಗೌರವಿಸಿದೆ.
2001 ರಲ್ಲಿ ಭಾರತೀಯ ವೈದ್ಯ ಶಾಖೆ ಹಾಸನ ಘಟಕವು ಡಾ|| ಗುಪ್ತರವರ ಅನುಪಮ ಸೇವೆಯನ್ನು ಮನಗಂಡು ಸನ್ಮಾನಿಸಿ ಗೌರವಿಸಿದೆ.
2012 ರಲ್ಲಿ ಹಾಸನದಲ್ಲಿ ನಡೆದ ವೈದ್ಯ ತಜ್ಞರ ರಾಜ್ಯ ಸಮ್ಮೇಳನದಲ್ಲಿ ಇವರನ್ನು ಗೌರವಿಸಿ ಪುರಸ್ಕರಿಸಲಾಗಿದೆ.
2014 ರಲ್ಲಿ ಶ್ರೀಭವಾನಿ ಶಂಕರಿ ಚಾರಿಟಬಲ್ ಟ್ರಸ್ಟ್ ಕೊಣನೂರು ಸಂಸ್ಥೆಯು ಡಾ|| ಕೆ.ಕೆ.ಜಯಚಂದ್ರ ಗುಪ್ತ ಅವರ ಜೀವನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದೆ.
ಹೀಗೆ ಡಾ|| ಗುಪ್ತರವರ ವೈದ್ಯಕೀಯ ಹಾಗೂ ಸಾಹಿತ್ಯಿಕ ಬದುಕು ಒಟ್ಟೊಟ್ಟಿಗೆ ಸಾಗುತ್ತಿದೆ. ಇವರ ಸಾಧನೆ ಇನ್ನೂ ಪ್ರಖರವಾಗಲಿ ಎಂದು ಆಶಿಸುತ್ತೇನೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿ ನಗರ
ಹಾಸನ-573201
ಮೊ-9483470794, 9739878197