ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ನಾಡಿನ ಅನೇಕ ವಿದ್ವಾಂಸರು, ಕೀತಿಶೇಷರು ಶತ-ಶತಮಾನಗಳುದ್ದಕ್ಕೂ ಬದುಕಿ ಬೆಳಕ ಸೂಸಿದ್ದಾರೆ. ಕನ್ನಡ ಮೂಲತ: ದೇಶೀ ಸೊಗಡಿನ ಜನಿತವಾಗಿದ್ದು, ನಮ್ಮ ಪೂರ್ವಜರ ಬದುಕಿನ ಚಿತ್ರಣವನ್ನು, ಮಾನವೀಯ ಮೌಲ್ಯಗಳನ್ನು, ಸಾಂಸ್ಕೃತಿಕ ನಿಲುವುಗಳನ್ನು ಜನಪದವಾಗಿ ಅನಾವರಣಗೊಳಿಸುತ್ತ ಬಂದಿರುವುದನ್ನು ಕಾಣುತ್ತೇವೆ.
ಜಾನಪದರ ಒಡಲಿನಿಂದ ಬಂದ ಸಂಸ್ಕೃತಿ ಕಡಲನ್ನು ಒಂದೆಡೆ ಹಿಡಿದಿಟ್ಟು, ಸತ್ವಯುತವಾಗಿ ನಿರೂಪಿಸಿ ಸುಲಿದ ಬಾಳೆ ತೆರದಿ ಕನ್ನಡಿಗರಿಗೆ ಉಣಬಡಿಸಿದ ಕೀತರ್ಿ ಜಾನಪದ ಜಂಗಮ ಡಾ|| ಎಸ್.ಕೆ ಕರೀಂ ಖಾನ್ ರಿಗೆ ಸಲ್ಲುತ್ತದೆ.
ಜಾನಪದ ವಿಧ್ವಾಂಸರಾಗಿಯೂ, ಪ್ರಸಿದ್ಧ ಗೀತರಚನಕಾರರಾಗಿಯೂ ಜನಪ್ರಿಯರಾಗಿರುವ ಖಾನ್ ಸಾಹೇಬರು 1901 ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಅಬ್ದುಲ್ ರೆಹಮಾನ್ ಹಾಗೂ ಜಹನಾಬಿ ಅವರ ಎಂಟು ಜನ ಮಕ್ಕಳಲ್ಲಿ ನಾಲ್ಕನೆಯವರಾಗಿ ಜನಿಸಿದರು.
ಡಾ|| ಕರೀಂ ಖಾನ್ ಅವರ ಮೂಲ ವಂಶಸ್ತರು ಅಫ್ಘಾನಿಸ್ಥಾನದವರು ಇವರ ತಂದೆಯವರಾದ ರೆಹಮನ್ ಖಾನ್ ರವರು ಸೇನಾನಿ ಹಾಗೂ ಯುನಾನಿ ವೈಧ್ಯರಾಗಿದ್ದರು. ಅವರು ಬೇರೆ ಬೇರೆ ಕಾರಣಗಳಿಂದ ಭಾರತಕ್ಕೆ ವಲಸೆ ಬಂದು ಹಾಸನದ ಸಕಲೇಶಪುರದಲ್ಲಿ ನೆಲೆನಿಂತರು. ಇವರ ಮಡದಿ ಅರಬ್ ಮೂಲದವರಾದರೂ ವಿರಾಜಪೇಟೆಯ ವಾಸಿಗಳಾಗಿದ್ದರು. ಈ ದಂಪತಿಗಳಿಗೆ ಖಾದರ್ ಖಾನ್, ರಹೀಂ ಖಾನ್, ಅಹಮ್ಮದ್ ಖಾನ್, ಕರೀಂ ಖಾನ್, ಜಬ್ಬರ್ ಖಾನ್, ಹನೀಫಾ ಬೇಗಂ, ರಫೀಕ್ ಖಾನ್ ಹಾಗೂ ಖಲಂದರ್ ಖಾನ್ ಹೀಗೆ ಎಂಟು ಮಕ್ಕಳಾದರು.
ಚಿಕ್ಕ ವಯಸ್ಸಿನಲ್ಲೆ ಪಿತೃವಿಯೋಗ ಹೊಂದಿದ ಕರೀಂ ಖಾನ್ ಹಾಸನದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಅಣ್ಣನ ಆಶ್ರಯದಲ್ಲಿ ಪೂರೈಸಿದರು. ಆಚಂಗಿ ನಾರಾಯಣ ಶಾಸ್ತ್ರಿಗಳು ಇವರ ಗುರುಗಳಾಗಿದ್ದರು.
ಕರೀಂ ಖಾನ್ ಬಾಲಕನಾಗಿದ್ದ ಸಂದರ್ಭ ಹೇಮಾವತಿ ನದಿಯಲ್ಲಿ ಸ್ನಾನ ಮಾಡಿ ಹೊಳೆ ದಾಟಿ ಈಚೆ ಬರುವಾಗ ನಾರಾಯಣ ಶಾಸ್ತ್ರಿಗಳ ತೋಟ ಕಾಣಿಸುತಿತ್ತು. ಅಂದಿನ ದಿನಗಳಲ್ಲಿ ಬ್ರಾಹ್ಮಣರೆಂದರೆ ಸರಸ್ವತಿಯ ಭಂಢಾರದ ಬೀಗಮುದ್ರೆಗಳೇ ಎಂದು ಬಗೆದಿದ್ದ ಕರೀಂ ಖಾನ್ ರು ಕ್ರಮೇಣ ನಾರಾಯಣ ಶಾಸ್ತ್ರಿಗಳ ಸ್ನೇಹ ಸಂಪಾದಿಸಿಕೊಂಡರು. ಒಂದು ದಿನ ಶಾಸ್ತ್ರಿಗಳು ಏನೋ ಕರೀಂ ನಿತ್ಯ ನಮ್ಮ ತೋಟಕ್ಕೆ ಬರ್ತೀಯಲ್ಲ ಏನ್ ಸಮಾಚಾರ? ಎಂದು ಕೇಳಿದರಂತೆ ! ಅದಕ್ಕೆ ಕರೀಂ ಖಾನರು ಅಳುಕುತ್ತಲೇ ಧೀನಭಾವದಿಂದ ಕರಮುಗಿದು ಶಾಸ್ತ್ರಿಗಳೇ ನಾನು ನಿಮ್ಮ ತೋಟಕ್ಕೆ ಬರ್ತಿರೋದು ನಿಮ್ಮ ದರ್ಶನ ಪಡೆಯಲು ಹಾಗೆಯೇ ನಿಮ್ಮಲ್ಲಿನ ಪಾಂಡಿತ್ಯ ಕದಿಯಲು ಅಷ್ಟೇ ಎಂದರಂತೆ! ಶಾಸ್ತ್ರಿಗಳು ದಿಗಿಲಾಗಿ ಅಲೆಲೆಲೆ ಹಿಂದುಗಳಿಗೆ ಬೇಕಿರದ ನನ್ನ ಪಾಂಡಿತ್ಯ ನಿನ್ನಂತಹ ಮುಸ್ಲಿಂ ಫೋರ ಕೊಳ್ಳೆಹೊಡೆಯೋದು ಅಂದರೆ ಆಶ್ಚಯ್ದ ಸಂಗತಿ! ಭಾಷೆ, ಧರ್ಮದ ಸಂಯೋಗದ ಸಂದರ್ಭ ಬಂದೊದಗಿರಬೇಕು, ಆಯ್ತು ನೀನು ಕೊಳ್ಲೆಹೊಡೆಯೋದು ಬೇಡ. ನಿನ್ನಲ್ಲಿರೋ ಜ್ಞಾನದಾಹ ಪಾಂಡಿತ್ಯವನ್ನು ತಾನೇ ಗಳಿಸಿಕೊಡುತ್ತದೆ. ನಿನ್ನಂತಹ ಸಹೃದಯಿ, ಕಲಿಯುವ ಹಂಬಲ, ಮನೋ ಚೈತನ್ಯವನ್ನು ಕಂಡು ನನ್ನ ಪಾಂಡಿತ್ಯ ಬಚ್ಚಿಡೋದು ತರವಲ್ಲ . ಬಾ ಎಂದು ಆಲಂಗಿಸಿ ಮಡಿವಂತಿಕೆ ಮೀರಿ ನಾರಾಯಣ ಶಾಸ್ತ್ರಿಗಳು ಸಂಸ್ಕೃತ ಸಾಹಿತ್ಯ, ಶಾಸ್ತ್ರ, ಪುರಾಣಗಳನ್ನು ಕಲಿಸುತ್ತಾ ಬಂದರು. ಶಿಶ್ಯನೂ ಕೂಡ ಬೆರಳ ತೀರಿದರೆ ಹಸ್ತ ನುಂಗುವ ಪರಿಯಲ್ಲಿ ಸಾಗಿದನು.
ಉದರ್ು ಭಾಷಿಗರಾದರೂ ಕರೀಂಖಾನ್ ರವರಿಗೆ ಕನ್ನಡದಲ್ಲಿ ಎಲ್ಲಿಲ್ಲದ ಆಸಕ್ತಿ. ಅಲ್ಪ ಸ್ವಲ್ಪ ಸಂಸ್ಕೃತ ಬಲ್ಲವರಾಗಿದ್ದ ಇವರು ಇತಿಹಾಸ, ಜಾನಪದ, ಪುರಾಣ, ಮಹಾಕಾವ್ಯಗಳ ಬಗ್ಗೆ ಅಪಾರವಾದ ಪಾಂಡಿತ್ಯ ಗಳಿಸಿದ್ದರು. ಅದರಲ್ಲೂ ಚಾರಿತ್ರಿಕ ವಿಷಯಗಳಲ್ಲಿ ಸಿದ್ಧಹಸ್ತರಾಗಿದ್ದರು. ಪ್ರತಿಭಾವಂತ ಚಿಂತಕರಾದ ಇವರು ಮೂಲತಹ ಇಸ್ಲಾಂ ಧರ್ಮದವರಾದರೂ ಭಗವದ್ಗೀತೆ, ಭಾಗವತ, ಶಿವಪುರಾಣ, ವಿಷ್ಣುಪುರಾಣಗಳನ್ನು ಓದಿ ಕರಗತ ಮಾಡಿಕೊಂಡಿದ್ದರು. ಉದರ್ು ಸಾಹಿತ್ಯದಲ್ಲಿ ಪಾಡಿತ್ಯವನ್ನು ಹೊಂದಿದ್ದ ಖಾನ್ ರವರು ಹಿಂದೂ -ಮುಸ್ಲಿಂ ಐಕ್ಯತೆಯ ಸಂಕೇತವಾಗಿದ್ದಾರೆ. ಇದಕ್ಕೆ ಮೂಲ ನಾರಾಯಣ ಶಾಸ್ತ್ರಿಗಳೇ ಎನ್ನಬಹುದು.
ಮುಂದೆ ಕನ್ನಡ ನಾಡಿನ ಮಹಾನ್ ವಿದ್ವಾಂಸರೆನಿಸಿಕೊಂಡರು. ತೆಲುಗಿನ ಪೋತನನ ಭಾಗವತವನ್ನು ನಾಟಕ ರೂಪಕ್ಕೆ ತರುವಲ್ಲಿ ಪ್ರಯತ್ನಿಸಿದರು. ಉದರ್ು ಸಾಹಿತ್ಯದ ಗಾಲಿಬ್ ಇಕ್ಫಾಲ್ರಂತಹ ಕವಿಗಳ ಪ್ರಭಾವಕ್ಕೂ ಒಳಗಾಗಿದ್ದ ಕರೀಂ ಖಾನ್ ಹಿಂದೂ ಮುಸ್ಲಿಂ ಐಕ್ಯತೆಗೆ ಸಾಕಷ್ಟು ಕಥೆಗಳನ್ನು ರಚಿಸಿದ್ದುಂಟು. ಉದರ್ುವಿನಿಂದ ಕನ್ನಡಕ್ಕೆ ಅನುವಾದಗೊಂಡ 'ನಿವಾರ' ಕಥಾ ಸಂಕಲನ, 'ನೀಹಾರ' ಚಾರಿತ್ರಿಕ ಕಥಾ ಸಂಕಲನ, 'ಸಮೀರ', 'ಬಲಿಗಾನಿ ಹುಸೇನಿ' ಚಾರಿತ್ರಿಕ ಕಾದಂಬರಿ. 'ಮಾತೃ ಶಾಪ' ಪೌರಾಣಿಕ ಕಾದಂಬರಿ. 'ನಿದರ್ೋಷಿ', 'ಮಧುಮೋಹನ್', 'ಹಣವೋ ಗುಣವೋ', 'ಶ್ರೀ ಕೃಣ್ಣಲೀಲ'ೆ ನಾಟಕಗಳು. 'ಹುಮಾಯಾನ್', 'ಅಂಬರನಾಥ', 'ಬೆಂಗಳೂರು ಕೆಂಪೇಗೌಡ', 'ಮಹಾಪ್ರಭು ಮಾಗಡಿ ಕೆಂಪೇಗೌಡ', 'ಲೈಲಾ ಮಜ್ನು'- ಚಾರಿತ್ರಿಕ ನಾಟಕಗಳು ಮುಂತಾದವು ಕರೀಂ ಖಾನ್ರ ಪ್ರಮುಖ ಕೃತಿಗಳಾಗಿವೆ. ಅಲ್ಲದೇ ಅಸಂಖ್ಯಾತ ಗೀಗಿ ಪದಗಳು, ಸೊಬಾನೆ, ಲಾವಣಿಗಳು, ರಾಗಿ ಬೀಸೋ ಹಾಡುಗಳು, ನಾಟಿ ಮಾಡುವಾಗಿನ ಹಾಡುಗಳು ಹೀಗೆ ಹಲವಾರು ಬಗೆಯ ಜಾನಪದ ಕಾವ್ಯಗಳ ಸಂಗ್ರಹವನ್ನು ಮಾಡುತ್ತಾ ತಮ್ಮ ಜ್ಞಾನ ಜೋಳಿಗೆಯನ್ನು ತುಂಬಿಸಿಕೊಂಡು ಪುಸ್ತಕ ರೂಪದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ, ಕನ್ನಡಿಗರಿಗೆ ಉಣಬಡಿಸಿದ್ದಾರೆ.
ಪಕ್ಕ ಗಾಂಧಿವಾದಿಗಳಾಗಿದ್ದ ಕರೀಂ ಖಾನ್ ರು ಗಾಂಧಿ ತತ್ವಗಳನ್ನು ಅಕ್ಷರಶ: ಅಳವಡಿಸಿಕೊಂಡು ಆದರ್ಶಮಯವಾಗಿ ಬದುಕಿದವರು. ಚಲೇಜಾವ್ ಚಳುವಳಿ, ದುಂಡುಮೇಜಿನ ಪರಿಷತ್ತು, ಉಪ್ಪಿನ ಸತ್ಯಾಗ್ರಹ ಸಮಯದಲ್ಲಿ ಗಾಂಧೀಜಿ ತೋರಿದ ಸಹನಾ ಚಳುವಳಿಗೆ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಗಿಯಾದರು.
ಕರೀಂ ಖಾನ್ 1947 ರ ಸ್ವಾತಂತ್ರ್ಯವನ್ನು ಒಂದು ಕಡೆ ಹೀಗೆ ಬಣ್ಣಿಸಿದ್ದಾರೆ ಬ್ರಿಟೀಷರು ಭಾರತ ಬಿಟ್ಟು ತೊಲಗಿದ ದಿನ ಆದಂತಹ ಸಂತೋಷ ತಾಯಿಯ ಎದೆಹಾಲನ್ನು ಮತೊಮ್ಮೆ ಕುಡಿದಷ್ಟೇ ಸಂತೋಷವಾಯಿತು. ಸ್ವಾತಂತ್ರ್ಯೋತ್ತರದ ಸಂದರ್ಭದಲ್ಲಿ ಒಬ್ಬ ಸಂದರ್ಶಕ ಭೇಟಿಯಿತ್ತಾಗ ಇಂದು ಸ್ವಾತಂತ್ರ್ಯ ಹೆಸರಿನಲ್ಲಿ ಸ್ವಾಚ್ಛಾಚಾರ , ಸ್ವಾರ್ಥ, ವಂಚನೆ, ಜಾತಿ ಸಂಘರ್ಷಗಳಿಂದ ಪುನ: ನಾವು ನಮ್ಮವರಿಂದಲೇ ಕ್ರೂರವಾಗಿ ಪರತಂತ್ರರಾಗುತಿದ್ದೇವೆ ಎಂದಿದ್ದಾರೆ.
ಕಂಚಿನ ಕಂಠ ಹೊಂದಿದ್ದ ಖಾನ್ ಸಾಹೇಬರಿಗೆ ನಾಡಿನ ಜನ ಸಾವಿರಾರು ಹಾಡುಗಳ ಸರದಾರ ನೆಂಬ ಬಿರಿದಾಂಕಿತ ಮಾಡಿದ್ದರು. ಸ್ವಾಭಿಮಾನಿಯಾದ ಯಾವುದೇ ಕನ್ನಡಿಗನಿಗೆ ದೇಶ ಮತ್ತು ಭಾಷಾಭಿಮಾನ ಉತ್ಕಟವಾಗಿದ್ದೇಯಿರುತ್ತದೆ. ಅಂತೆಯೇ ಕನರ್ಾಟಕ ಏಕೀಕರಣದ ಸಂದರ್ಭದಲ್ಲಿಯೂ ಕರೀಂ ಖಾನ್ ರು ಮುಂಚೂಣಿ ನಾಯಕರಾದರು. ಕಾವೇರಿಯಿಂದಮಾಗೋದಾವರಿ ವರಮಿರ್ದ ಕನ್ನಡ ನಾಡು ಎಂಬುದನ್ನು ಕವಿರಾಜ ಮಾರ್ಗ, ಶಾಸನಗಳಿಂದ ಅರಿತಿದ್ದ ಖಾನರು ಕನ್ನಡ ನಾಡನ್ನು, ಕನ್ನಡ ಭಾಷೆಯನ್ನು ಮಾತನಾಡುವ , ಕನ್ನಡಿಗರು ವಾಸಿಸುವ ಊರುಗಳನ್ನು ಒಂದಾಗಿಸುವ ನಿಟ್ಟಿನಲ್ಲಿ ಶ್ರಮಿಸಿದರು. ಸೆರೆಮನೆವಾಸವನ್ನು ಅನುಭವಿಸಿದರು. ಇಷ್ಟೇಯಲ್ಲದೇ ಉಡುಪಿಯ 'ಅಂತರಂಗ' ಎಂಬ ಪತ್ರಿಕೆಯ ಮೂಲಕ ಪತ್ರಿಕಾ ರಂಗಕ್ಕೆ ಕಾಲಿಟ್ಟ ಖಾನರು ಪತ್ರಿಕೆಯಲ್ಲಿ ಜಾನಪದ, ಸಾಹಿತ್ಯ, ದೇಶಾಭಿಮಾನ ಮೂಡಿಸುವಂತಹ ಲೇಖನಗಳನ್ನು ಪ್ರಕಟಿಸಿದರು.
1940-41 ರಲ್ಲಿ ಧಾರವಾಡದ ಲೋಕಮಿತ್ರ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದರು. ನಂತರ ಬಾಂಬೆಗೆ ಹೋದ ಖಾನರು ಬಾಂಬೆಯ 'ರಾಯಲ್ ಇಂಡಿಯನ್ ದೇವಿ' ಕಂಪನಿಯಲ್ಲಿ 'ವೈರ್ಲೆಸ್ ಟೆಲಿಗ್ರಾಫರ್' ಆಗಿ ಕೆಲಸ ಮಾಡಿದ್ದಾರೆ. ತದನಂತರ ಡಾ||ಹಡರ್ೇಕರ ಸ್ಥಾಪಿತ ಭಾರತ ಸೇವಾದಲ ಬಲಪಡಿಸುವ ನಿಟ್ಟನಲ್ಲಿ ಶ್ರಮ ವಹಿಸಿದರು. ಇವರ ಕಂಠ ಸಿರಿಯಿಂದ ರಾಘವೇಂದ್ರ ಸ್ವಾಮಿ ಭಕ್ತಿಗೀತೆಗಳು, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತಿಗೀತೆಗಳೆಂಬ ಧ್ವನಿಸುರುಳಿಗಳು ಬಿಡುಗಡೆಯಾಗಿವೆ.
ಅಷ್ಟೊತ್ತಿಗಾಗಲೇ ಪ್ರಸಾದ್ ಮೂವೀಸ್ ನ ದಿವಂಗತ ಆರ್ ನಾಯ್ಡು ಕರೀಂ ಖಾನ್ ರನ್ನು ಮದರಾಸಿಗೆ ಕೈ ಬೀಸಿ ಕರೆದರು. ಅವರಿಗೆ ಸಿನಿಮಾ ರಂಗದ ಅದೃಷ್ಟದ ಬಾಗಿಲು ತೆರೆದುಕೊಂಡಿತು. ಅಲ್ಲಿ ಸುಮಾರು ಹತ್ತು ವರ್ಷ ಹಲವಾರು ಚಿತ್ರಗಳಿಗೆ ಕಥೆ, ಸಂಭಾಷಣೆ, ಹಾಡುಗಳನ್ನು ಬರೆದು, ಸುಮಾರು 300 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದರು. ಸ್ವರ್ಣಗೌರಿ, ಜೀವನ ತರಂಗ, ಬೇವುಬೆಲ್ಲ, ಚಂದ್ರಕುಮಾರ, ದೇವಮಾನವ, ದೊಂಬರ ಕೃಣ್ಣ, ರಾಜೇಶ್ವರಿ, ಪತೀತ ಪಾವನಿ, ಸೂಪರ್ ನೋವ-455 ಮೊದಲಾದ ಹದಿನೈದು ಚಿತ್ರಗಳಿಗೆ ಉತ್ತಮ ಸಾಹಿತ್ಯ ನೀಡಿದ್ದಾರೆ.
ಹೀಗೆ ಬಹುಮುಖ ಪ್ರತಿಭೆಯಾದ ಇವರನ್ನು 1987 ಜುಲೈ 30 ರಂದು ಕನರ್ಾಟಕ ಸಕರ್ಾರ ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಆದರೆ ಅನೇಕ ಜನ ಮೂಗು ಮುರಿದಿದ್ದರಿಂದ ಇದನ್ನು ಗ್ರಹಿಸಿದ ಕರೀಂ ಖಾನ್ರು ನೇಮಾಕಾದೇಶ ಕೈ ಸೇರುವ ಮೊದಲೆ ರಾಜೆನಾಮೆ ಪ್ರಕಟಿಸಿಬಿಟ್ಟರು. ಆದರೂ ಸಕರ್ಾರ ಇವರನ್ನು ಒಪ್ಪಿಸಿ ಅಧಿಕಾರ ಸ್ವೀಕರಿಸುವಂತೆ ಒತ್ತಾಯ ಮಾಡಿದ್ದರಿಂದ ಕಾರ್ಯನಿರ್ವಹಿಸಿದರು.
ಈ ಎಲ್ಲಾ ಜೀವಮಾನವ ಸಾಧನೆಗಾಗಿ 1989 ರಲ್ಲಿ ಗುಲಬಗರ್ಾ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ, 1995 ರಲ್ಲಿ ಕನರ್ಾಟಕ ಸಕರ್ಾರ ಜಾನಪದಶ್ರೀ ಪ್ರಶಸ್ತಿ, , 1995 ರಲ್ಲಿ ಜಿ.ಶಂ. ಪ ಪ್ರಶಸ್ತಿ, 1997 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ `ನಾಡೋಜ ಪ್ರಶಸ್ತಿ', 1998 ರಲ್ಲಿ ಹಂಸರತ್ನ ಪ್ರಶಸ್ತಿ, 1999 ರಲ್ಲಿ ದೇಶಪ್ರೇಮಿಗಳ ಜನಜಾಗೃತಿ ಸಭೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಗೌರವವಾದರೆ, 2000 ರಲ್ಲಿ ಚಿ| ಉದಯಶಂಕರ್ ಪ್ರಶಸ್ತಿ, 2004 ರಲ್ಲಿ ಜಾನಪದ ಜಂಗಮ ಪ್ರಶಸ್ತಿ, 2004 ರಲ್ಲಿ ಚಿತ್ರರಂಗದ ಜೀವಮಾನ ಪ್ರಶಸ್ತಿ, 2004 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಮುಂತಾದ ಗೌರವಗಳಿಗೆ ಕರೀಂ ಖಾನ್ರು ಪಾತ್ರರಾಗಿದ್ದಾರೆ. ಇಂತಹ ಅಭೂತಪೂರ್ವ ಸಾಧಕ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು, ತತ್ತ್ವಗಳು ಸದಾ ಜೀವಂತವಾಗಿವೆ.
ಜಾನಪದರ ಒಡಲಿನಿಂದ ಬಂದ ಸಂಸ್ಕೃತಿ ಕಡಲನ್ನು ಒಂದೆಡೆ ಹಿಡಿದಿಟ್ಟು, ಸತ್ವಯುತವಾಗಿ ನಿರೂಪಿಸಿ ಸುಲಿದ ಬಾಳೆ ತೆರದಿ ಕನ್ನಡಿಗರಿಗೆ ಉಣಬಡಿಸಿದ ಕೀತರ್ಿ ಜಾನಪದ ಜಂಗಮ ಡಾ|| ಎಸ್.ಕೆ ಕರೀಂ ಖಾನ್ ರಿಗೆ ಸಲ್ಲುತ್ತದೆ.
ಜಾನಪದ ವಿಧ್ವಾಂಸರಾಗಿಯೂ, ಪ್ರಸಿದ್ಧ ಗೀತರಚನಕಾರರಾಗಿಯೂ ಜನಪ್ರಿಯರಾಗಿರುವ ಖಾನ್ ಸಾಹೇಬರು 1901 ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಅಬ್ದುಲ್ ರೆಹಮಾನ್ ಹಾಗೂ ಜಹನಾಬಿ ಅವರ ಎಂಟು ಜನ ಮಕ್ಕಳಲ್ಲಿ ನಾಲ್ಕನೆಯವರಾಗಿ ಜನಿಸಿದರು.
ಡಾ|| ಕರೀಂ ಖಾನ್ ಅವರ ಮೂಲ ವಂಶಸ್ತರು ಅಫ್ಘಾನಿಸ್ಥಾನದವರು ಇವರ ತಂದೆಯವರಾದ ರೆಹಮನ್ ಖಾನ್ ರವರು ಸೇನಾನಿ ಹಾಗೂ ಯುನಾನಿ ವೈಧ್ಯರಾಗಿದ್ದರು. ಅವರು ಬೇರೆ ಬೇರೆ ಕಾರಣಗಳಿಂದ ಭಾರತಕ್ಕೆ ವಲಸೆ ಬಂದು ಹಾಸನದ ಸಕಲೇಶಪುರದಲ್ಲಿ ನೆಲೆನಿಂತರು. ಇವರ ಮಡದಿ ಅರಬ್ ಮೂಲದವರಾದರೂ ವಿರಾಜಪೇಟೆಯ ವಾಸಿಗಳಾಗಿದ್ದರು. ಈ ದಂಪತಿಗಳಿಗೆ ಖಾದರ್ ಖಾನ್, ರಹೀಂ ಖಾನ್, ಅಹಮ್ಮದ್ ಖಾನ್, ಕರೀಂ ಖಾನ್, ಜಬ್ಬರ್ ಖಾನ್, ಹನೀಫಾ ಬೇಗಂ, ರಫೀಕ್ ಖಾನ್ ಹಾಗೂ ಖಲಂದರ್ ಖಾನ್ ಹೀಗೆ ಎಂಟು ಮಕ್ಕಳಾದರು.
ಚಿಕ್ಕ ವಯಸ್ಸಿನಲ್ಲೆ ಪಿತೃವಿಯೋಗ ಹೊಂದಿದ ಕರೀಂ ಖಾನ್ ಹಾಸನದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಅಣ್ಣನ ಆಶ್ರಯದಲ್ಲಿ ಪೂರೈಸಿದರು. ಆಚಂಗಿ ನಾರಾಯಣ ಶಾಸ್ತ್ರಿಗಳು ಇವರ ಗುರುಗಳಾಗಿದ್ದರು.
ಕರೀಂ ಖಾನ್ ಬಾಲಕನಾಗಿದ್ದ ಸಂದರ್ಭ ಹೇಮಾವತಿ ನದಿಯಲ್ಲಿ ಸ್ನಾನ ಮಾಡಿ ಹೊಳೆ ದಾಟಿ ಈಚೆ ಬರುವಾಗ ನಾರಾಯಣ ಶಾಸ್ತ್ರಿಗಳ ತೋಟ ಕಾಣಿಸುತಿತ್ತು. ಅಂದಿನ ದಿನಗಳಲ್ಲಿ ಬ್ರಾಹ್ಮಣರೆಂದರೆ ಸರಸ್ವತಿಯ ಭಂಢಾರದ ಬೀಗಮುದ್ರೆಗಳೇ ಎಂದು ಬಗೆದಿದ್ದ ಕರೀಂ ಖಾನ್ ರು ಕ್ರಮೇಣ ನಾರಾಯಣ ಶಾಸ್ತ್ರಿಗಳ ಸ್ನೇಹ ಸಂಪಾದಿಸಿಕೊಂಡರು. ಒಂದು ದಿನ ಶಾಸ್ತ್ರಿಗಳು ಏನೋ ಕರೀಂ ನಿತ್ಯ ನಮ್ಮ ತೋಟಕ್ಕೆ ಬರ್ತೀಯಲ್ಲ ಏನ್ ಸಮಾಚಾರ? ಎಂದು ಕೇಳಿದರಂತೆ ! ಅದಕ್ಕೆ ಕರೀಂ ಖಾನರು ಅಳುಕುತ್ತಲೇ ಧೀನಭಾವದಿಂದ ಕರಮುಗಿದು ಶಾಸ್ತ್ರಿಗಳೇ ನಾನು ನಿಮ್ಮ ತೋಟಕ್ಕೆ ಬರ್ತಿರೋದು ನಿಮ್ಮ ದರ್ಶನ ಪಡೆಯಲು ಹಾಗೆಯೇ ನಿಮ್ಮಲ್ಲಿನ ಪಾಂಡಿತ್ಯ ಕದಿಯಲು ಅಷ್ಟೇ ಎಂದರಂತೆ! ಶಾಸ್ತ್ರಿಗಳು ದಿಗಿಲಾಗಿ ಅಲೆಲೆಲೆ ಹಿಂದುಗಳಿಗೆ ಬೇಕಿರದ ನನ್ನ ಪಾಂಡಿತ್ಯ ನಿನ್ನಂತಹ ಮುಸ್ಲಿಂ ಫೋರ ಕೊಳ್ಳೆಹೊಡೆಯೋದು ಅಂದರೆ ಆಶ್ಚಯ್ದ ಸಂಗತಿ! ಭಾಷೆ, ಧರ್ಮದ ಸಂಯೋಗದ ಸಂದರ್ಭ ಬಂದೊದಗಿರಬೇಕು, ಆಯ್ತು ನೀನು ಕೊಳ್ಲೆಹೊಡೆಯೋದು ಬೇಡ. ನಿನ್ನಲ್ಲಿರೋ ಜ್ಞಾನದಾಹ ಪಾಂಡಿತ್ಯವನ್ನು ತಾನೇ ಗಳಿಸಿಕೊಡುತ್ತದೆ. ನಿನ್ನಂತಹ ಸಹೃದಯಿ, ಕಲಿಯುವ ಹಂಬಲ, ಮನೋ ಚೈತನ್ಯವನ್ನು ಕಂಡು ನನ್ನ ಪಾಂಡಿತ್ಯ ಬಚ್ಚಿಡೋದು ತರವಲ್ಲ . ಬಾ ಎಂದು ಆಲಂಗಿಸಿ ಮಡಿವಂತಿಕೆ ಮೀರಿ ನಾರಾಯಣ ಶಾಸ್ತ್ರಿಗಳು ಸಂಸ್ಕೃತ ಸಾಹಿತ್ಯ, ಶಾಸ್ತ್ರ, ಪುರಾಣಗಳನ್ನು ಕಲಿಸುತ್ತಾ ಬಂದರು. ಶಿಶ್ಯನೂ ಕೂಡ ಬೆರಳ ತೀರಿದರೆ ಹಸ್ತ ನುಂಗುವ ಪರಿಯಲ್ಲಿ ಸಾಗಿದನು.
ಉದರ್ು ಭಾಷಿಗರಾದರೂ ಕರೀಂಖಾನ್ ರವರಿಗೆ ಕನ್ನಡದಲ್ಲಿ ಎಲ್ಲಿಲ್ಲದ ಆಸಕ್ತಿ. ಅಲ್ಪ ಸ್ವಲ್ಪ ಸಂಸ್ಕೃತ ಬಲ್ಲವರಾಗಿದ್ದ ಇವರು ಇತಿಹಾಸ, ಜಾನಪದ, ಪುರಾಣ, ಮಹಾಕಾವ್ಯಗಳ ಬಗ್ಗೆ ಅಪಾರವಾದ ಪಾಂಡಿತ್ಯ ಗಳಿಸಿದ್ದರು. ಅದರಲ್ಲೂ ಚಾರಿತ್ರಿಕ ವಿಷಯಗಳಲ್ಲಿ ಸಿದ್ಧಹಸ್ತರಾಗಿದ್ದರು. ಪ್ರತಿಭಾವಂತ ಚಿಂತಕರಾದ ಇವರು ಮೂಲತಹ ಇಸ್ಲಾಂ ಧರ್ಮದವರಾದರೂ ಭಗವದ್ಗೀತೆ, ಭಾಗವತ, ಶಿವಪುರಾಣ, ವಿಷ್ಣುಪುರಾಣಗಳನ್ನು ಓದಿ ಕರಗತ ಮಾಡಿಕೊಂಡಿದ್ದರು. ಉದರ್ು ಸಾಹಿತ್ಯದಲ್ಲಿ ಪಾಡಿತ್ಯವನ್ನು ಹೊಂದಿದ್ದ ಖಾನ್ ರವರು ಹಿಂದೂ -ಮುಸ್ಲಿಂ ಐಕ್ಯತೆಯ ಸಂಕೇತವಾಗಿದ್ದಾರೆ. ಇದಕ್ಕೆ ಮೂಲ ನಾರಾಯಣ ಶಾಸ್ತ್ರಿಗಳೇ ಎನ್ನಬಹುದು.
ಮುಂದೆ ಕನ್ನಡ ನಾಡಿನ ಮಹಾನ್ ವಿದ್ವಾಂಸರೆನಿಸಿಕೊಂಡರು. ತೆಲುಗಿನ ಪೋತನನ ಭಾಗವತವನ್ನು ನಾಟಕ ರೂಪಕ್ಕೆ ತರುವಲ್ಲಿ ಪ್ರಯತ್ನಿಸಿದರು. ಉದರ್ು ಸಾಹಿತ್ಯದ ಗಾಲಿಬ್ ಇಕ್ಫಾಲ್ರಂತಹ ಕವಿಗಳ ಪ್ರಭಾವಕ್ಕೂ ಒಳಗಾಗಿದ್ದ ಕರೀಂ ಖಾನ್ ಹಿಂದೂ ಮುಸ್ಲಿಂ ಐಕ್ಯತೆಗೆ ಸಾಕಷ್ಟು ಕಥೆಗಳನ್ನು ರಚಿಸಿದ್ದುಂಟು. ಉದರ್ುವಿನಿಂದ ಕನ್ನಡಕ್ಕೆ ಅನುವಾದಗೊಂಡ 'ನಿವಾರ' ಕಥಾ ಸಂಕಲನ, 'ನೀಹಾರ' ಚಾರಿತ್ರಿಕ ಕಥಾ ಸಂಕಲನ, 'ಸಮೀರ', 'ಬಲಿಗಾನಿ ಹುಸೇನಿ' ಚಾರಿತ್ರಿಕ ಕಾದಂಬರಿ. 'ಮಾತೃ ಶಾಪ' ಪೌರಾಣಿಕ ಕಾದಂಬರಿ. 'ನಿದರ್ೋಷಿ', 'ಮಧುಮೋಹನ್', 'ಹಣವೋ ಗುಣವೋ', 'ಶ್ರೀ ಕೃಣ್ಣಲೀಲ'ೆ ನಾಟಕಗಳು. 'ಹುಮಾಯಾನ್', 'ಅಂಬರನಾಥ', 'ಬೆಂಗಳೂರು ಕೆಂಪೇಗೌಡ', 'ಮಹಾಪ್ರಭು ಮಾಗಡಿ ಕೆಂಪೇಗೌಡ', 'ಲೈಲಾ ಮಜ್ನು'- ಚಾರಿತ್ರಿಕ ನಾಟಕಗಳು ಮುಂತಾದವು ಕರೀಂ ಖಾನ್ರ ಪ್ರಮುಖ ಕೃತಿಗಳಾಗಿವೆ. ಅಲ್ಲದೇ ಅಸಂಖ್ಯಾತ ಗೀಗಿ ಪದಗಳು, ಸೊಬಾನೆ, ಲಾವಣಿಗಳು, ರಾಗಿ ಬೀಸೋ ಹಾಡುಗಳು, ನಾಟಿ ಮಾಡುವಾಗಿನ ಹಾಡುಗಳು ಹೀಗೆ ಹಲವಾರು ಬಗೆಯ ಜಾನಪದ ಕಾವ್ಯಗಳ ಸಂಗ್ರಹವನ್ನು ಮಾಡುತ್ತಾ ತಮ್ಮ ಜ್ಞಾನ ಜೋಳಿಗೆಯನ್ನು ತುಂಬಿಸಿಕೊಂಡು ಪುಸ್ತಕ ರೂಪದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ, ಕನ್ನಡಿಗರಿಗೆ ಉಣಬಡಿಸಿದ್ದಾರೆ.
ಪಕ್ಕ ಗಾಂಧಿವಾದಿಗಳಾಗಿದ್ದ ಕರೀಂ ಖಾನ್ ರು ಗಾಂಧಿ ತತ್ವಗಳನ್ನು ಅಕ್ಷರಶ: ಅಳವಡಿಸಿಕೊಂಡು ಆದರ್ಶಮಯವಾಗಿ ಬದುಕಿದವರು. ಚಲೇಜಾವ್ ಚಳುವಳಿ, ದುಂಡುಮೇಜಿನ ಪರಿಷತ್ತು, ಉಪ್ಪಿನ ಸತ್ಯಾಗ್ರಹ ಸಮಯದಲ್ಲಿ ಗಾಂಧೀಜಿ ತೋರಿದ ಸಹನಾ ಚಳುವಳಿಗೆ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಗಿಯಾದರು.
ಕರೀಂ ಖಾನ್ 1947 ರ ಸ್ವಾತಂತ್ರ್ಯವನ್ನು ಒಂದು ಕಡೆ ಹೀಗೆ ಬಣ್ಣಿಸಿದ್ದಾರೆ ಬ್ರಿಟೀಷರು ಭಾರತ ಬಿಟ್ಟು ತೊಲಗಿದ ದಿನ ಆದಂತಹ ಸಂತೋಷ ತಾಯಿಯ ಎದೆಹಾಲನ್ನು ಮತೊಮ್ಮೆ ಕುಡಿದಷ್ಟೇ ಸಂತೋಷವಾಯಿತು. ಸ್ವಾತಂತ್ರ್ಯೋತ್ತರದ ಸಂದರ್ಭದಲ್ಲಿ ಒಬ್ಬ ಸಂದರ್ಶಕ ಭೇಟಿಯಿತ್ತಾಗ ಇಂದು ಸ್ವಾತಂತ್ರ್ಯ ಹೆಸರಿನಲ್ಲಿ ಸ್ವಾಚ್ಛಾಚಾರ , ಸ್ವಾರ್ಥ, ವಂಚನೆ, ಜಾತಿ ಸಂಘರ್ಷಗಳಿಂದ ಪುನ: ನಾವು ನಮ್ಮವರಿಂದಲೇ ಕ್ರೂರವಾಗಿ ಪರತಂತ್ರರಾಗುತಿದ್ದೇವೆ ಎಂದಿದ್ದಾರೆ.
ಕಂಚಿನ ಕಂಠ ಹೊಂದಿದ್ದ ಖಾನ್ ಸಾಹೇಬರಿಗೆ ನಾಡಿನ ಜನ ಸಾವಿರಾರು ಹಾಡುಗಳ ಸರದಾರ ನೆಂಬ ಬಿರಿದಾಂಕಿತ ಮಾಡಿದ್ದರು. ಸ್ವಾಭಿಮಾನಿಯಾದ ಯಾವುದೇ ಕನ್ನಡಿಗನಿಗೆ ದೇಶ ಮತ್ತು ಭಾಷಾಭಿಮಾನ ಉತ್ಕಟವಾಗಿದ್ದೇಯಿರುತ್ತದೆ. ಅಂತೆಯೇ ಕನರ್ಾಟಕ ಏಕೀಕರಣದ ಸಂದರ್ಭದಲ್ಲಿಯೂ ಕರೀಂ ಖಾನ್ ರು ಮುಂಚೂಣಿ ನಾಯಕರಾದರು. ಕಾವೇರಿಯಿಂದಮಾಗೋದಾವರಿ ವರಮಿರ್ದ ಕನ್ನಡ ನಾಡು ಎಂಬುದನ್ನು ಕವಿರಾಜ ಮಾರ್ಗ, ಶಾಸನಗಳಿಂದ ಅರಿತಿದ್ದ ಖಾನರು ಕನ್ನಡ ನಾಡನ್ನು, ಕನ್ನಡ ಭಾಷೆಯನ್ನು ಮಾತನಾಡುವ , ಕನ್ನಡಿಗರು ವಾಸಿಸುವ ಊರುಗಳನ್ನು ಒಂದಾಗಿಸುವ ನಿಟ್ಟಿನಲ್ಲಿ ಶ್ರಮಿಸಿದರು. ಸೆರೆಮನೆವಾಸವನ್ನು ಅನುಭವಿಸಿದರು. ಇಷ್ಟೇಯಲ್ಲದೇ ಉಡುಪಿಯ 'ಅಂತರಂಗ' ಎಂಬ ಪತ್ರಿಕೆಯ ಮೂಲಕ ಪತ್ರಿಕಾ ರಂಗಕ್ಕೆ ಕಾಲಿಟ್ಟ ಖಾನರು ಪತ್ರಿಕೆಯಲ್ಲಿ ಜಾನಪದ, ಸಾಹಿತ್ಯ, ದೇಶಾಭಿಮಾನ ಮೂಡಿಸುವಂತಹ ಲೇಖನಗಳನ್ನು ಪ್ರಕಟಿಸಿದರು.
1940-41 ರಲ್ಲಿ ಧಾರವಾಡದ ಲೋಕಮಿತ್ರ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದರು. ನಂತರ ಬಾಂಬೆಗೆ ಹೋದ ಖಾನರು ಬಾಂಬೆಯ 'ರಾಯಲ್ ಇಂಡಿಯನ್ ದೇವಿ' ಕಂಪನಿಯಲ್ಲಿ 'ವೈರ್ಲೆಸ್ ಟೆಲಿಗ್ರಾಫರ್' ಆಗಿ ಕೆಲಸ ಮಾಡಿದ್ದಾರೆ. ತದನಂತರ ಡಾ||ಹಡರ್ೇಕರ ಸ್ಥಾಪಿತ ಭಾರತ ಸೇವಾದಲ ಬಲಪಡಿಸುವ ನಿಟ್ಟನಲ್ಲಿ ಶ್ರಮ ವಹಿಸಿದರು. ಇವರ ಕಂಠ ಸಿರಿಯಿಂದ ರಾಘವೇಂದ್ರ ಸ್ವಾಮಿ ಭಕ್ತಿಗೀತೆಗಳು, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತಿಗೀತೆಗಳೆಂಬ ಧ್ವನಿಸುರುಳಿಗಳು ಬಿಡುಗಡೆಯಾಗಿವೆ.
ಅಷ್ಟೊತ್ತಿಗಾಗಲೇ ಪ್ರಸಾದ್ ಮೂವೀಸ್ ನ ದಿವಂಗತ ಆರ್ ನಾಯ್ಡು ಕರೀಂ ಖಾನ್ ರನ್ನು ಮದರಾಸಿಗೆ ಕೈ ಬೀಸಿ ಕರೆದರು. ಅವರಿಗೆ ಸಿನಿಮಾ ರಂಗದ ಅದೃಷ್ಟದ ಬಾಗಿಲು ತೆರೆದುಕೊಂಡಿತು. ಅಲ್ಲಿ ಸುಮಾರು ಹತ್ತು ವರ್ಷ ಹಲವಾರು ಚಿತ್ರಗಳಿಗೆ ಕಥೆ, ಸಂಭಾಷಣೆ, ಹಾಡುಗಳನ್ನು ಬರೆದು, ಸುಮಾರು 300 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದರು. ಸ್ವರ್ಣಗೌರಿ, ಜೀವನ ತರಂಗ, ಬೇವುಬೆಲ್ಲ, ಚಂದ್ರಕುಮಾರ, ದೇವಮಾನವ, ದೊಂಬರ ಕೃಣ್ಣ, ರಾಜೇಶ್ವರಿ, ಪತೀತ ಪಾವನಿ, ಸೂಪರ್ ನೋವ-455 ಮೊದಲಾದ ಹದಿನೈದು ಚಿತ್ರಗಳಿಗೆ ಉತ್ತಮ ಸಾಹಿತ್ಯ ನೀಡಿದ್ದಾರೆ.
ಹೀಗೆ ಬಹುಮುಖ ಪ್ರತಿಭೆಯಾದ ಇವರನ್ನು 1987 ಜುಲೈ 30 ರಂದು ಕನರ್ಾಟಕ ಸಕರ್ಾರ ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಆದರೆ ಅನೇಕ ಜನ ಮೂಗು ಮುರಿದಿದ್ದರಿಂದ ಇದನ್ನು ಗ್ರಹಿಸಿದ ಕರೀಂ ಖಾನ್ರು ನೇಮಾಕಾದೇಶ ಕೈ ಸೇರುವ ಮೊದಲೆ ರಾಜೆನಾಮೆ ಪ್ರಕಟಿಸಿಬಿಟ್ಟರು. ಆದರೂ ಸಕರ್ಾರ ಇವರನ್ನು ಒಪ್ಪಿಸಿ ಅಧಿಕಾರ ಸ್ವೀಕರಿಸುವಂತೆ ಒತ್ತಾಯ ಮಾಡಿದ್ದರಿಂದ ಕಾರ್ಯನಿರ್ವಹಿಸಿದರು.
ಈ ಎಲ್ಲಾ ಜೀವಮಾನವ ಸಾಧನೆಗಾಗಿ 1989 ರಲ್ಲಿ ಗುಲಬಗರ್ಾ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ, 1995 ರಲ್ಲಿ ಕನರ್ಾಟಕ ಸಕರ್ಾರ ಜಾನಪದಶ್ರೀ ಪ್ರಶಸ್ತಿ, , 1995 ರಲ್ಲಿ ಜಿ.ಶಂ. ಪ ಪ್ರಶಸ್ತಿ, 1997 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ `ನಾಡೋಜ ಪ್ರಶಸ್ತಿ', 1998 ರಲ್ಲಿ ಹಂಸರತ್ನ ಪ್ರಶಸ್ತಿ, 1999 ರಲ್ಲಿ ದೇಶಪ್ರೇಮಿಗಳ ಜನಜಾಗೃತಿ ಸಭೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಗೌರವವಾದರೆ, 2000 ರಲ್ಲಿ ಚಿ| ಉದಯಶಂಕರ್ ಪ್ರಶಸ್ತಿ, 2004 ರಲ್ಲಿ ಜಾನಪದ ಜಂಗಮ ಪ್ರಶಸ್ತಿ, 2004 ರಲ್ಲಿ ಚಿತ್ರರಂಗದ ಜೀವಮಾನ ಪ್ರಶಸ್ತಿ, 2004 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಮುಂತಾದ ಗೌರವಗಳಿಗೆ ಕರೀಂ ಖಾನ್ರು ಪಾತ್ರರಾಗಿದ್ದಾರೆ. ಇಂತಹ ಅಭೂತಪೂರ್ವ ಸಾಧಕ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು, ತತ್ತ್ವಗಳು ಸದಾ ಜೀವಂತವಾಗಿವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ