ಕಾದಂಬರಿ ಎಂದರೆ ಅರ್ಥಗೊತ್ತೇ? ಕಾದಂಬರಿ ಎಂದರೆ ಹೆಂಡ, ಮದ್ಯ ! ನಿಮಗೆ ದಿಗಿಲಾಗಬಹುದಲ್ಲವೇ, ಆದರೂ ಸತ್ಯ ಕಣ್ರೀ. ಅದರ ಕುಡಿತವು ಹೇಗೆ ಮೈಮರೆಸುತ್ತದೆಯೋ ಹಾಗೆಯೇ ಕಾದಂಬರಿಯೂ ಮೈ ಮರೆಸುವುದರಿಂದ ಈ ಪ್ರಕಾರಕ್ಕೆ ಬಹುಶಃ ಆ ಹೆಸರಿಟ್ಟಿರಬಹುದೇನೋ ಅಲ್ಲವೇ? ಸಂಸ್ಕೃತದಲ್ಲಿರುವ ಬಾಣಭಟ್ಟನ 'ಕಾದಂಬರಿ' ಇದಕ್ಕೊಂದು ತಾಜಾ ಉದಾಹರಣೆ. ಬಹುಶಃ ಈ ಹೆಸರು ಕೇಳದವರಿಲ್ಲವೆನಿಸುತ್ತೆ. ಈ ಕಾದಂಬರಿಯನ್ನು 19ನೆಯ ಶತಮಾನದಲ್ಲಿ ತುರುಮುರಿಯವರು ಕನ್ನಡಕ್ಕೆ 'ಕಾದಂಬರಿ ಕಾವ್ಯದ ಹೊಸಗನ್ನಡ ಗದ್ಯ ರೂಪ' ಎಂಬ ಹೆಸರಿನಲ್ಲಿ ತಂದರು. ಕಥೆ, ನಿರೂಪಣೆ, ವರ್ಣನಾ ಕೌಶಲ್ಯ, ಶೈಲಿ ಮತ್ತು ರಸಾನುಭವದ ದೃಷ್ಠಿಯಿಂದ ಕಾದಂಬರಿ ಪ್ರಕಾರ ಜನಪ್ರಿಯವಾಯಿತು.
ಹೊಸಗನ್ನಡ ಇತಿಹಾಸದಲ್ಲೇ ಅತ್ಯಾಧಿಕ ಶ್ರೇಷ್ಠ ಕಾದಂಬರಿಗಳನ್ನು ನಾಡಿಗೆ ನೀಡಿ ಜಗತ್ತಿನಾದ್ಯಾಂತ ಅಭಿಮಾನಿಗಳ ಮಹಾಸೈನ್ಯವನ್ನು ಕಟ್ಟಿಕೊಂಡವರಾರು ಗೊತ್ತೇ? ಅವರೇ 1999 ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು! ಇನ್ನೂ ಹೊಳೆಯಲಿಲ್ಲವೇ? ಅವರೇ ಕಣ್ರೀ ಆಧುನಿಕ ನವ್ಯ ಕಾದಂಬರಿಯ ಸಾರ್ವಭೌಮ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇ ಶಿವರದ ಭೈರಪ್ಪನವರು.
ಕಾದಂಬರಿ ಜಗತ್ತಿನಲ್ಲಿ ಎಸ್.ಎಲ್. ಭೈರಪ್ಪನೆಂದೇ ಖ್ಯಾತಿವೆತ್ತ ಇವರು 1934ರ ಜುಲೈ 26 ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ.
ಕನ್ನಡ ಕಾದಂಬರಿ ಸಾಹಿತ್ಯ ಲೋಕದಲ್ಲಿ ಹೆಚ್ಚು ಓದುಗರನ್ನು ಸೆಳೆದಿರುವ ಭೈರಪ್ಪನವರು ತಮ್ಮ ಅಪೂರ್ವ ಕೃತಿಗಳ ಮೂಲಕ ಆಳವಾದ ಚಿಂತನೆಯಲ್ಲಿ ಹಳೆಯ ಮತ್ತು ಹೊಸ ಮೌಲ್ಯಗಳ ಸಂಘರ್ಷವನ್ನು ವೈಚಾರಿಕತೆಯ ನೆಲೆಯಲ್ಲಿ ಸೃಜನಾತ್ಮಾಕ ಸಹಜ ಪಾತ್ರಗಳ ವ್ಯಕ್ತಿತ್ವದೊಂದಿಗೆ ಬಿಚ್ಚಿಡುವ ಕೆಲಸವನ್ನು ಇವರ ಕಾದಂಬರಿಗಳಲ್ಲಿ ಕಾಣಬಹುದು. ಪ್ರತಿಯೊಂದು ಕಾದಂಬರಿಯಲ್ಲಿಯೂ ಹಳೆ, ಹೊಸ ಸಂಘರ್ಷದ ಕಥೆ ಹೇರಳವಾಗಿ ಮೂಡಿರುವುದರಿಂದ ವೈವಿಧ್ಯತೆಗಳ ನೆಲೆ ಅಷ್ಟೇನೂ ಇಲ್ಲವೇನೋ ಅನ್ನಿಸಿ ಬಿಡುತ್ತದೆ. ಆಳಕ್ಕಿಳಿದು ಮಾತನಾಡುವಲ್ಲಿ, ಕೃತಿಗಳು ವಿಸ್ತಾರಗೊಳ್ಳುವಲ್ಲಿ ಎಲ್ಲೋ ಮುಗ್ಗರಿಸುತ್ತವೆ ಅನ್ನಿಸದಿರದು. ಆದ್ದರಿಂದಲೇ ಇವರ ಕೃತಿಗಳು ವಿಮರ್ಶಕ ವಲಯದಲ್ಲಿ ವಾದ-ವಿವಾದಗಳಿಗೆ ಕಾರಣವಾಗಿವೆ. ಭಾರತೀಯ ತತ್ತ್ವ ಶಾಸ್ತ್ರದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಭೈರಪ್ಪನವರು ಕನ್ನಡಕ್ಕೆ ಹಲವಾರು ಮೌಲಿಕ ಕಾದಂಬರಿಗಳನ್ನು ನೀಡಿದ್ದಾರೆ. ಹಾಗೆಯೇ ಅವರದೇಯಾದ ಓದುಗ ವಲಯವನ್ನು ಸೃಷ್ಠಿಸಿಕೊಂಡಿದ್ದಾರೆ.
ನವ್ಯ ಮಾರ್ಗದ ಹೊರಗುಳಿದ ಜನಪ್ರಿಯ ಕಾದಂಬರಿಕಾರ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. 1965ರಲ್ಲಿ 'ವಂಶವೃಕ್ಷ' ವೆಂಬ ಕಾದಂಬರಿಯನ್ನು ಪ್ರಕಟಿಸಿ ಅಪಾರ ಕೀತರ್ಿಗಳಿಸಿದರು. ಸಜೀವ ಪಾತ್ರಗಳ ನಿಮರ್ಾಣ, ಕಲಾವಂತಿಕೆ, ಭಾಷೆಯ ವೈವಿಧ್ಯ ಪೂರ್ಣ ಬಳಕೆ ಇಂತಹ ಗುಣಗಳಿಗೆ ಹೆಸರಾದ ಭೈರಪ್ಪನವರು ದಾಟು, ಪರ್ವ, ಸಾಕ್ಷಿ, ಗೃಹಭಂಗ, ಧರ್ಮಶ್ರೀ, ದೂರ ಸರಿದವರು, ಮಂದ್ರ, ವಂಶವೃಕ್ಷ, ಜಲಪಾತ, ತಬ್ಬಲಿ ನೀನಾದೆ ಮಗನೆ, ನಾಯಿನೆರಳು, ಮತದಾನ, ನಿರಾಕರಣ, ಅನ್ವೇಷಣೆ, ಕವಲು, ನೆಲೆ, ಅಂಚು, ತಂತು, ಸಾರ್ಥ, ಆವರಣ ಮೊದಲಾದ ಹಲವು ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಹಲವಾರು ಕಾದಂಬರಿಗಳಲ್ಲಿ ವೈಚಾರಿಕತೆಯ ನೆಳಲನ್ನು ಕಾಣಬಹುದಾಗಿದೆ. ಅವರ ಪ್ರಮುಖ ಪಾತ್ರಗಳು ನಿಖರತೆ ಹೊಂದಿದ್ದು, ಸ್ಪಷ್ಟ ರೀತಿಯ ಜೀವನ ಸಿದ್ಧಾಂತ ಸಾರುತ್ತವೆ. ಉಳ್ಳವರ, ಇಲ್ಲದವರ ನಡುವಿನ, ಮೇಲ್ವರ್ಗದ-ಕೆಳವರ್ಗದ ಸನ್ನಿವೇಶಗಳೇ ಪ್ರಮುಖ. ಹಲವು ಕಾದಂಬರಿಗಳಲ್ಲಿ ದೈಹಿಕ ಸುಖ, ಮಹಿಳಾ ಶೋಷಣೆಯ ನೇರ ಸನ್ನಿವೇಶಗಳು, ಹಳ್ಳಿ ನೈಜ ಘಟನೆಗಳು ಮೇಳೈಸಿರುವುದನ್ನು ಕಾಣಬಹುದು. ಆದರೆ ಭೈರಪ್ಪನವರ ಸೃಜನಶೀಲತೆ ಅವರ ವೈಚಾರಿಕತೆಯೊಂದಿಗೆ ಹೊಂದಾಣಿಕೆಯಾಗದ ಕಾರಣ ಕೆಲವು ಸನ್ನಿವೇಶಗಳಲ್ಲಿ ಹಾಗೆಯೇ ಕೃತಿಗಳಲ್ಲಿಯೂ ಕೂಡ ಸೋಲನ್ನು ಕಾಣಬಹುದು.
ಮತದಾನ, ತಬ್ಬಲಿಯು ನೀನಾದೆ ಮಗುವೆ, ವಂಶವೃಕ್ಷ, ನಾಯಿನೆರಳು ಇವು ಚಲನಚಿತ್ರಗಳಾಗಿ ಯಶ ಕಂಡಿವೆ. 'ಭಿತ್ತಿ' ಆತ್ಮ ವೃತ್ತಾಂತವನ್ನೊಳಗೊಂಡ ಕೃತಿಯಾಗಿದೆ. 'ಸತ್ಯ ಮತ್ತು ಸೌಂದರ್ಯ' ಇವರ ಸಂಶೋಧನಾ ಮಹಾಪ್ರಬಂಧವಾಗಿದೆ. 'ಸಾಹಿತ್ಯ ಮತ್ತು ಪ್ರತೀಕ', 'ಕಥೆ ಮತ್ತು ಕಥಾ ವಸ್ತು', 'ನಾನೇಕೆ ಬರೆಯುತ್ತೇನೆ' ಮೊದಲಾದವುಗಳು ಸಾಹಿತ್ಯ ಚಿಂತನದ ಕೃತಿಗಳಾಗಿದ್ದು ವೈವಿಧ್ಯತೆಯಿಂದ ಕೂಡಿವೆ.
'ಪರ್ವ' ಮಹಾಭಾರತ ಕುರಿತಾದ ಕಥಾವಸ್ತು. 'ಮತದಾನ' ಸಮಕಾಲೀನ ರಾಜಕೀಯ ವ್ಯವಸ್ಥೆ, ಸಮಸ್ಯೆ, ಡೋಂಗಿತನಗಳ ಮೇಲೆ ಬೆಳಕು ಚೆಲ್ಲುತ್ತದೆ. 'ದಾಟು' ಜಾತಿ ಸಮಸ್ಯೆ ಕುರಿತು ವಿಶ್ಲೇಷಣೆ ನೀಡುವ ಕಾದಂಬರಿ, 'ಆವರಣ' ಒಂದು ಐತಿಹಾಸಿಕ ಕಥಾವಸ್ತುವನ್ನು ಹೊಂದಿದ ಕಾದಂಬರಿಯಾದ ಇದು ಸಾಹಿತ್ಯ ವಲಯದಲ್ಲಿ ವಿವಾದಕ್ಕೂ ಕಾರಣವಾಗಿತ್ತು. 'ಸಾರ್ಥ' ಎಂಟನೇ ಶತಮಾನದಲ್ಲಿ ನೆಡದ ವಿದ್ಯಮಾನಗಳನ್ನು ಭಿತ್ತರಿಸುತ್ತದೆ. ಇವರ ಕಾದಂಬರಿಗಳು ಹೆಚ್ಚಾಗಿ ಮರಾಠಿಗೆ ಅನುವಾದಗೊಂಡಿವೆ. ಅಲ್ಲಿನ ಓದುಗರು ಕಂಡಂತೆ ಇವರೊಬ್ಬ ಮಹಾರಾಷ್ಟ್ರದ ಕಾದಂಬರಿಕಾರರೇ ಆಗಿ ಹೋಗಿದ್ದಾರೆ. ಮರಾಠಿಯಲ್ಲದೇ ಹಿಂದಿ, ಇಂಗ್ಲೀಷ್, ಸಂಸ್ಕೃತ, ತೆಲುಗು ಮುಂತಾದ ಭಾಷೆಗಳಿಗೆ ಅನುವಾದ ಕಂಡ ಇವರ ಕಾದಂಬರಿಗಳು ಸಹಜವಾಗಿಯೇ ದೇಶದಾದ್ಯಾಂತ ಜನಪ್ರಿಯತೆ ಗಳಿಸಿವೆ. ಇವರ 'ಗೃಹಭಂಗ' ದೂರದರ್ಶನ ಧಾರಾವಾಹಿಯಾಗಿ ಪ್ರಸಾರವಾಗಿದೆ.
ಭೈರಪ್ಪನವರ ಮೊದಲ ಕಾದಂಬರಿ 'ಧರ್ಮಶ್ರೀ' 1961 ರಲ್ಲಿ ಬಂದಿತು. ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಚಚರ್ೆಯನ್ನು ವೈಚಾರಿಕತೆಯ ಹಿನ್ನಲೆಯೊಂದಿಗೆ ಹೇಳುವ ರೀತಿ ವಿಭಿನ್ನವಾಗಿ ಮೂಡಿ ಬಂದಿದೆ. ಕಾದಂಬರಿಯ ಬೆನ್ನುಡಿಯಲ್ಲಿ ಭಾರತೀಯ ಪರಂಪರೆಯಲ್ಲಿ ಧರ್ಮ ಮತ್ತು ಸಂಸ್ಕೃತಿ ಎರಡೂ ಭಿನ್ನವಾದ ರೂಪಗಳು, ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ 'ಧರ್ಮಶ್ರೀ'ಯ ವಸ್ತುವಾಗಿದೆ ಎಬುದನ್ನು ಕಾಣಬಹುದಾಗಿದೆ. ನಾಯಕ ಸತ್ಯನಾರಾಯಣ ಹಿಂದೂ ಸಂಸ್ಕೃತಿಯ ಪ್ರತಿಬಿಂಬದಂತೆ ಮೂಡಿ ಬಂದು, ಕ್ರೈಸ್ತ ಹುಡುಗಿ ಅಲ್ಲಿಯ ಮೋಹಪಾಶಕ್ಕೆ ಸಿಕ್ಕು ಕ್ರೈಸ್ತನಾಗಿ ಮತ್ತೆ ಹಳೆಯ ವಾಸನೆಯೇ ವಾಸಿ ಎಂದು ಮರಳಿ ಮಣ್ಣಿಗೆ ವಾಪಾಸ್ಸಾಗುತ್ತಾನೆ. ಇಂತಹ ಸನ್ನಿವೇಶ ಭೈರಪ್ಪನವರ ಕಾದಂಬರಿಗಳಲ್ಲಿ ಹಲವಾರು ಕಡೆ ಸಂಭವಿಸುತ್ತದೆ. ಪ್ರಸುತ್ತ ಕೃತಿಯಲ್ಲಿ ಗೊಂದಲದಿಂದ ಕೂಡಿರುವ ಸಾಂಸ್ಕೃತಿಕತೆ ಸತ್ಯಭಾಮೆಯ ಮೂಲಕ ಸಾಗುವ ಪಾತ್ರಗಳು ಕಾದಂಬರಿಯ ವಸ್ತು ಇತಿಹಾಸ ಗೊತ್ತಿಲ್ಲದೆ ಸಮಕಾಲೀನ ಜೀವನದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬ ಸತ್ಯಭಾಮಳ ಮಾತಿಗೆ ಬದ್ಧವಾಗಿರುವಂತೆ ಕಾಣುತ್ತದೆ.
'ದೂರ ಸರಿದವರು' ಕಾದಂಬರಿಯಲ್ಲಿ ಶುದ್ಧ ಪ್ರೇಮದ ಆಲೋಚನಾ ಜಗತ್ತನ್ನು ಆನಂದ ಮತ್ತು ವಿನತೆ, ವಸಂತ ಮತ್ತು ಉಮಾ ಇವರ ಪ್ರೇಮ ಸಂಬಂಧಗಳ ಮೂಲಕ ತೆರೆದು ತೋರಿಸುವ ಭೈರಪ್ಪನವರು ನಮ್ಮನ್ನು ವೈಚಾರಿಕಾ ಜಗತ್ತಿಗೆ ತಳ್ಳಿ ಬಿಡುತ್ತಾರೆ.
ಹೀಗೆ ಒಂದೊಂದು ಕಾದಂಬರಿಯಲ್ಲಿ ಒಂದೊಂದು ರೀತಿಯ ಶೈಲಿಯಲ್ಲಿ ಪಾತ್ರ ಕಥಾವಸ್ತುಗಳನ್ನು ಹೆಣೆಯುತ್ತಾ ವಿಭಿನ್ನ ಬರವಣಿಗೆಯಲ್ಲಿ ತೊಡಗಿದ್ದಾರೆ.
1975ರಲ್ಲಿ ಇವರ 'ದಾಟು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ದಾಟು, ವಂಶವೃಕ್ಷ, ಸಾಕ್ಷಿ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. 'ಭಿತ್ತಿ' ಇವರ ಆತ್ಮಕಥೆ. ಭೈರಪ್ಪನವರಿಗೆ ಮಾಸ್ತಿ ಪ್ರಶಸ್ತಿ, ಕೋಲ್ಕತ್ತಾದ ಭಾರತೀಯ ಭಾಷಾ ಪ್ರಶಸ್ತಿ, ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಹೊಸಗನ್ನಡ ಇತಿಹಾಸದಲ್ಲೇ ಅತ್ಯಾಧಿಕ ಶ್ರೇಷ್ಠ ಕಾದಂಬರಿಗಳನ್ನು ನಾಡಿಗೆ ನೀಡಿ ಜಗತ್ತಿನಾದ್ಯಾಂತ ಅಭಿಮಾನಿಗಳ ಮಹಾಸೈನ್ಯವನ್ನು ಕಟ್ಟಿಕೊಂಡವರಾರು ಗೊತ್ತೇ? ಅವರೇ 1999 ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು! ಇನ್ನೂ ಹೊಳೆಯಲಿಲ್ಲವೇ? ಅವರೇ ಕಣ್ರೀ ಆಧುನಿಕ ನವ್ಯ ಕಾದಂಬರಿಯ ಸಾರ್ವಭೌಮ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇ ಶಿವರದ ಭೈರಪ್ಪನವರು.
ಕಾದಂಬರಿ ಜಗತ್ತಿನಲ್ಲಿ ಎಸ್.ಎಲ್. ಭೈರಪ್ಪನೆಂದೇ ಖ್ಯಾತಿವೆತ್ತ ಇವರು 1934ರ ಜುಲೈ 26 ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ.
ಕನ್ನಡ ಕಾದಂಬರಿ ಸಾಹಿತ್ಯ ಲೋಕದಲ್ಲಿ ಹೆಚ್ಚು ಓದುಗರನ್ನು ಸೆಳೆದಿರುವ ಭೈರಪ್ಪನವರು ತಮ್ಮ ಅಪೂರ್ವ ಕೃತಿಗಳ ಮೂಲಕ ಆಳವಾದ ಚಿಂತನೆಯಲ್ಲಿ ಹಳೆಯ ಮತ್ತು ಹೊಸ ಮೌಲ್ಯಗಳ ಸಂಘರ್ಷವನ್ನು ವೈಚಾರಿಕತೆಯ ನೆಲೆಯಲ್ಲಿ ಸೃಜನಾತ್ಮಾಕ ಸಹಜ ಪಾತ್ರಗಳ ವ್ಯಕ್ತಿತ್ವದೊಂದಿಗೆ ಬಿಚ್ಚಿಡುವ ಕೆಲಸವನ್ನು ಇವರ ಕಾದಂಬರಿಗಳಲ್ಲಿ ಕಾಣಬಹುದು. ಪ್ರತಿಯೊಂದು ಕಾದಂಬರಿಯಲ್ಲಿಯೂ ಹಳೆ, ಹೊಸ ಸಂಘರ್ಷದ ಕಥೆ ಹೇರಳವಾಗಿ ಮೂಡಿರುವುದರಿಂದ ವೈವಿಧ್ಯತೆಗಳ ನೆಲೆ ಅಷ್ಟೇನೂ ಇಲ್ಲವೇನೋ ಅನ್ನಿಸಿ ಬಿಡುತ್ತದೆ. ಆಳಕ್ಕಿಳಿದು ಮಾತನಾಡುವಲ್ಲಿ, ಕೃತಿಗಳು ವಿಸ್ತಾರಗೊಳ್ಳುವಲ್ಲಿ ಎಲ್ಲೋ ಮುಗ್ಗರಿಸುತ್ತವೆ ಅನ್ನಿಸದಿರದು. ಆದ್ದರಿಂದಲೇ ಇವರ ಕೃತಿಗಳು ವಿಮರ್ಶಕ ವಲಯದಲ್ಲಿ ವಾದ-ವಿವಾದಗಳಿಗೆ ಕಾರಣವಾಗಿವೆ. ಭಾರತೀಯ ತತ್ತ್ವ ಶಾಸ್ತ್ರದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಭೈರಪ್ಪನವರು ಕನ್ನಡಕ್ಕೆ ಹಲವಾರು ಮೌಲಿಕ ಕಾದಂಬರಿಗಳನ್ನು ನೀಡಿದ್ದಾರೆ. ಹಾಗೆಯೇ ಅವರದೇಯಾದ ಓದುಗ ವಲಯವನ್ನು ಸೃಷ್ಠಿಸಿಕೊಂಡಿದ್ದಾರೆ.
ನವ್ಯ ಮಾರ್ಗದ ಹೊರಗುಳಿದ ಜನಪ್ರಿಯ ಕಾದಂಬರಿಕಾರ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. 1965ರಲ್ಲಿ 'ವಂಶವೃಕ್ಷ' ವೆಂಬ ಕಾದಂಬರಿಯನ್ನು ಪ್ರಕಟಿಸಿ ಅಪಾರ ಕೀತರ್ಿಗಳಿಸಿದರು. ಸಜೀವ ಪಾತ್ರಗಳ ನಿಮರ್ಾಣ, ಕಲಾವಂತಿಕೆ, ಭಾಷೆಯ ವೈವಿಧ್ಯ ಪೂರ್ಣ ಬಳಕೆ ಇಂತಹ ಗುಣಗಳಿಗೆ ಹೆಸರಾದ ಭೈರಪ್ಪನವರು ದಾಟು, ಪರ್ವ, ಸಾಕ್ಷಿ, ಗೃಹಭಂಗ, ಧರ್ಮಶ್ರೀ, ದೂರ ಸರಿದವರು, ಮಂದ್ರ, ವಂಶವೃಕ್ಷ, ಜಲಪಾತ, ತಬ್ಬಲಿ ನೀನಾದೆ ಮಗನೆ, ನಾಯಿನೆರಳು, ಮತದಾನ, ನಿರಾಕರಣ, ಅನ್ವೇಷಣೆ, ಕವಲು, ನೆಲೆ, ಅಂಚು, ತಂತು, ಸಾರ್ಥ, ಆವರಣ ಮೊದಲಾದ ಹಲವು ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಹಲವಾರು ಕಾದಂಬರಿಗಳಲ್ಲಿ ವೈಚಾರಿಕತೆಯ ನೆಳಲನ್ನು ಕಾಣಬಹುದಾಗಿದೆ. ಅವರ ಪ್ರಮುಖ ಪಾತ್ರಗಳು ನಿಖರತೆ ಹೊಂದಿದ್ದು, ಸ್ಪಷ್ಟ ರೀತಿಯ ಜೀವನ ಸಿದ್ಧಾಂತ ಸಾರುತ್ತವೆ. ಉಳ್ಳವರ, ಇಲ್ಲದವರ ನಡುವಿನ, ಮೇಲ್ವರ್ಗದ-ಕೆಳವರ್ಗದ ಸನ್ನಿವೇಶಗಳೇ ಪ್ರಮುಖ. ಹಲವು ಕಾದಂಬರಿಗಳಲ್ಲಿ ದೈಹಿಕ ಸುಖ, ಮಹಿಳಾ ಶೋಷಣೆಯ ನೇರ ಸನ್ನಿವೇಶಗಳು, ಹಳ್ಳಿ ನೈಜ ಘಟನೆಗಳು ಮೇಳೈಸಿರುವುದನ್ನು ಕಾಣಬಹುದು. ಆದರೆ ಭೈರಪ್ಪನವರ ಸೃಜನಶೀಲತೆ ಅವರ ವೈಚಾರಿಕತೆಯೊಂದಿಗೆ ಹೊಂದಾಣಿಕೆಯಾಗದ ಕಾರಣ ಕೆಲವು ಸನ್ನಿವೇಶಗಳಲ್ಲಿ ಹಾಗೆಯೇ ಕೃತಿಗಳಲ್ಲಿಯೂ ಕೂಡ ಸೋಲನ್ನು ಕಾಣಬಹುದು.
ಮತದಾನ, ತಬ್ಬಲಿಯು ನೀನಾದೆ ಮಗುವೆ, ವಂಶವೃಕ್ಷ, ನಾಯಿನೆರಳು ಇವು ಚಲನಚಿತ್ರಗಳಾಗಿ ಯಶ ಕಂಡಿವೆ. 'ಭಿತ್ತಿ' ಆತ್ಮ ವೃತ್ತಾಂತವನ್ನೊಳಗೊಂಡ ಕೃತಿಯಾಗಿದೆ. 'ಸತ್ಯ ಮತ್ತು ಸೌಂದರ್ಯ' ಇವರ ಸಂಶೋಧನಾ ಮಹಾಪ್ರಬಂಧವಾಗಿದೆ. 'ಸಾಹಿತ್ಯ ಮತ್ತು ಪ್ರತೀಕ', 'ಕಥೆ ಮತ್ತು ಕಥಾ ವಸ್ತು', 'ನಾನೇಕೆ ಬರೆಯುತ್ತೇನೆ' ಮೊದಲಾದವುಗಳು ಸಾಹಿತ್ಯ ಚಿಂತನದ ಕೃತಿಗಳಾಗಿದ್ದು ವೈವಿಧ್ಯತೆಯಿಂದ ಕೂಡಿವೆ.
'ಪರ್ವ' ಮಹಾಭಾರತ ಕುರಿತಾದ ಕಥಾವಸ್ತು. 'ಮತದಾನ' ಸಮಕಾಲೀನ ರಾಜಕೀಯ ವ್ಯವಸ್ಥೆ, ಸಮಸ್ಯೆ, ಡೋಂಗಿತನಗಳ ಮೇಲೆ ಬೆಳಕು ಚೆಲ್ಲುತ್ತದೆ. 'ದಾಟು' ಜಾತಿ ಸಮಸ್ಯೆ ಕುರಿತು ವಿಶ್ಲೇಷಣೆ ನೀಡುವ ಕಾದಂಬರಿ, 'ಆವರಣ' ಒಂದು ಐತಿಹಾಸಿಕ ಕಥಾವಸ್ತುವನ್ನು ಹೊಂದಿದ ಕಾದಂಬರಿಯಾದ ಇದು ಸಾಹಿತ್ಯ ವಲಯದಲ್ಲಿ ವಿವಾದಕ್ಕೂ ಕಾರಣವಾಗಿತ್ತು. 'ಸಾರ್ಥ' ಎಂಟನೇ ಶತಮಾನದಲ್ಲಿ ನೆಡದ ವಿದ್ಯಮಾನಗಳನ್ನು ಭಿತ್ತರಿಸುತ್ತದೆ. ಇವರ ಕಾದಂಬರಿಗಳು ಹೆಚ್ಚಾಗಿ ಮರಾಠಿಗೆ ಅನುವಾದಗೊಂಡಿವೆ. ಅಲ್ಲಿನ ಓದುಗರು ಕಂಡಂತೆ ಇವರೊಬ್ಬ ಮಹಾರಾಷ್ಟ್ರದ ಕಾದಂಬರಿಕಾರರೇ ಆಗಿ ಹೋಗಿದ್ದಾರೆ. ಮರಾಠಿಯಲ್ಲದೇ ಹಿಂದಿ, ಇಂಗ್ಲೀಷ್, ಸಂಸ್ಕೃತ, ತೆಲುಗು ಮುಂತಾದ ಭಾಷೆಗಳಿಗೆ ಅನುವಾದ ಕಂಡ ಇವರ ಕಾದಂಬರಿಗಳು ಸಹಜವಾಗಿಯೇ ದೇಶದಾದ್ಯಾಂತ ಜನಪ್ರಿಯತೆ ಗಳಿಸಿವೆ. ಇವರ 'ಗೃಹಭಂಗ' ದೂರದರ್ಶನ ಧಾರಾವಾಹಿಯಾಗಿ ಪ್ರಸಾರವಾಗಿದೆ.
ಭೈರಪ್ಪನವರ ಮೊದಲ ಕಾದಂಬರಿ 'ಧರ್ಮಶ್ರೀ' 1961 ರಲ್ಲಿ ಬಂದಿತು. ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಚಚರ್ೆಯನ್ನು ವೈಚಾರಿಕತೆಯ ಹಿನ್ನಲೆಯೊಂದಿಗೆ ಹೇಳುವ ರೀತಿ ವಿಭಿನ್ನವಾಗಿ ಮೂಡಿ ಬಂದಿದೆ. ಕಾದಂಬರಿಯ ಬೆನ್ನುಡಿಯಲ್ಲಿ ಭಾರತೀಯ ಪರಂಪರೆಯಲ್ಲಿ ಧರ್ಮ ಮತ್ತು ಸಂಸ್ಕೃತಿ ಎರಡೂ ಭಿನ್ನವಾದ ರೂಪಗಳು, ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ 'ಧರ್ಮಶ್ರೀ'ಯ ವಸ್ತುವಾಗಿದೆ ಎಬುದನ್ನು ಕಾಣಬಹುದಾಗಿದೆ. ನಾಯಕ ಸತ್ಯನಾರಾಯಣ ಹಿಂದೂ ಸಂಸ್ಕೃತಿಯ ಪ್ರತಿಬಿಂಬದಂತೆ ಮೂಡಿ ಬಂದು, ಕ್ರೈಸ್ತ ಹುಡುಗಿ ಅಲ್ಲಿಯ ಮೋಹಪಾಶಕ್ಕೆ ಸಿಕ್ಕು ಕ್ರೈಸ್ತನಾಗಿ ಮತ್ತೆ ಹಳೆಯ ವಾಸನೆಯೇ ವಾಸಿ ಎಂದು ಮರಳಿ ಮಣ್ಣಿಗೆ ವಾಪಾಸ್ಸಾಗುತ್ತಾನೆ. ಇಂತಹ ಸನ್ನಿವೇಶ ಭೈರಪ್ಪನವರ ಕಾದಂಬರಿಗಳಲ್ಲಿ ಹಲವಾರು ಕಡೆ ಸಂಭವಿಸುತ್ತದೆ. ಪ್ರಸುತ್ತ ಕೃತಿಯಲ್ಲಿ ಗೊಂದಲದಿಂದ ಕೂಡಿರುವ ಸಾಂಸ್ಕೃತಿಕತೆ ಸತ್ಯಭಾಮೆಯ ಮೂಲಕ ಸಾಗುವ ಪಾತ್ರಗಳು ಕಾದಂಬರಿಯ ವಸ್ತು ಇತಿಹಾಸ ಗೊತ್ತಿಲ್ಲದೆ ಸಮಕಾಲೀನ ಜೀವನದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬ ಸತ್ಯಭಾಮಳ ಮಾತಿಗೆ ಬದ್ಧವಾಗಿರುವಂತೆ ಕಾಣುತ್ತದೆ.
'ದೂರ ಸರಿದವರು' ಕಾದಂಬರಿಯಲ್ಲಿ ಶುದ್ಧ ಪ್ರೇಮದ ಆಲೋಚನಾ ಜಗತ್ತನ್ನು ಆನಂದ ಮತ್ತು ವಿನತೆ, ವಸಂತ ಮತ್ತು ಉಮಾ ಇವರ ಪ್ರೇಮ ಸಂಬಂಧಗಳ ಮೂಲಕ ತೆರೆದು ತೋರಿಸುವ ಭೈರಪ್ಪನವರು ನಮ್ಮನ್ನು ವೈಚಾರಿಕಾ ಜಗತ್ತಿಗೆ ತಳ್ಳಿ ಬಿಡುತ್ತಾರೆ.
ಹೀಗೆ ಒಂದೊಂದು ಕಾದಂಬರಿಯಲ್ಲಿ ಒಂದೊಂದು ರೀತಿಯ ಶೈಲಿಯಲ್ಲಿ ಪಾತ್ರ ಕಥಾವಸ್ತುಗಳನ್ನು ಹೆಣೆಯುತ್ತಾ ವಿಭಿನ್ನ ಬರವಣಿಗೆಯಲ್ಲಿ ತೊಡಗಿದ್ದಾರೆ.
1975ರಲ್ಲಿ ಇವರ 'ದಾಟು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ದಾಟು, ವಂಶವೃಕ್ಷ, ಸಾಕ್ಷಿ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. 'ಭಿತ್ತಿ' ಇವರ ಆತ್ಮಕಥೆ. ಭೈರಪ್ಪನವರಿಗೆ ಮಾಸ್ತಿ ಪ್ರಶಸ್ತಿ, ಕೋಲ್ಕತ್ತಾದ ಭಾರತೀಯ ಭಾಷಾ ಪ್ರಶಸ್ತಿ, ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ