ಮಂಗಳವಾರ, ಮೇ 27, 2014

ಕಾವ್ಯಾನುಭೂತಿಯ ರಂಗಭೂಮಿ ಸಾಧಕ ಸತ್ಯನಾರಾಯಣರಾವ್ ಅಣತಿ

       ಕನ್ನಡ ನಾಡಿನ ಬಗ್ಗೆ ಮಹಾಕವಿಯೊಬ್ಬ ಹೇಳಿರುವಂತೆ ಫಲಪುಷ್ಪಯುತವಾದ ಇಲ್ಲಿನ ಅಡವಿ ಸೊಕ್ಕಿದಾನೆಯನ್ನು ಬೆಳಸುತ್ತದೆ, ದೇಮಾತೃಕವೆನಿಸಿದ ಹೊಲ ಗಂಧಶಾಳಿ (ಭತ್ತ)ಯನ್ನು ಬೆಳೆಯುತ್ತದೆ. ಮಾವು, ಮಲ್ಲಿಗೆಗಿದು ತೌರು. ಮುಡಿಯಲು ಮಲ್ಲಿಗೆ, ಮೆಲ್ಲಲು ಮಾವಿನ ಹಣ್ಣು ಇದ್ದ ಮೇಲೆ 'ಸಂಸಾರ ಸಾರಸರ್ವಸ್ವ' ವೆಂಬ ಫಲ ಮತ್ತಾವುದು ಬೇಕು? ಎಂದು ಕೇಳುವಂತಹ ರಸಿಕರು ಕನ್ನಡಿಗರು ಈ ಮನೋಭಾವದಲ್ಲಿ ಬಾಳಿಕೊಂಡು ಬಂದ ಕನ್ನಡಿಗರು ಇಹವನ್ನು ದೂರದೆ ಪರಕ್ಕೆ ದೂರರಾಗದೆ ತುಂಬು ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ.
    ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳ ಭವ್ಯ ಪರಂಪರೆಯನ್ನು ಒಳಗೊಂಡು ವಿಶಿಷ್ಟ, ವಿಭಿನ್ನ, ವಿನೂತನ, ವೈವಿಧ್ಯ, ಆಳ-ವಿಸ್ತಾರಗಳನ್ನು ಸದಾಕಾಲವೂ ಪ್ರತಿಬಿಂಬಿಸುತ್ತಾ, ಮೌಲಿಕ ಸಾಹಿತ್ಯ ಕೃತಿಗಳಿಂದ ಪ್ರಜ್ವಲಿಸುತ್ತಾ ಮುನ್ನುಗ್ಗುತ್ತಿದೆ.
     ಪಂಪ ಪೂರ್ವ ಹಾಗೂ ಉತ್ತರಾಧಿಯಾಗಿ ಸಹಸ್ರಾರು ಮಹನೀಯರು ಕನ್ನಡ ಧೀಶಕ್ತಿ ಕಹಳೆ ಮೊಳಗಿಸಿ, ಚಂದನದ ಲೇಪನ ಮಾಡಿ ಸಾಹಿತ್ಯಾಸಕ್ತರಿಗೆ ಉಣಬಡಿಸಿದ್ದರೆ ನಾಡು,ನುಡಿ, ಸಂಸ್ಕೃತಿ ಹೊಳವ್ಹರಿಸಿದ್ದಾರೆ. ಜಾಗತಿಕ ಭಾಷೆಗಳು ನಮ್ಮತ್ತ ಮುಖ ಮಾಡುವಂತೆ ಮಾಡಿದ್ದಾರೆ.
     ಇಂತಹ ಮಹನೀಯರ ಸಾಲಿನಲ್ಲಿ ಅಣತಿಯವರು ಒಬ್ಬರು. ಇವರು ಕ್ರಿ,ಶ.1935 ಡಿಸೆಂಬರ್ 12 ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದ ಎ.ಎನ್. ಮೂತರ್ಿರಾವ್ ಮತ್ತು ಶ್ರೀಮತಿ ರತ್ನಮ್ಮ ದಂಪತಿಗಳ ಜೇಷ್ಠ ಪುತ್ರರಾಗಿ ಜನಿಸಿದರು. ಇವರ ಪೂರ್ಣ ಹೆಸರು ಸತ್ಯನಾರಾಯಣರಾವ್ ಅಣತಿ. ಆದರೆ ಸಾಹಿತ್ಯ  ಲೋಕದಲ್ಲಿ ಅಣತಿಯೆಂದೇ ಪ್ರಸಿದ್ಧಿ ಪಡೆದು ತಮ್ಮ ಹುಟ್ಟೂರನ್ನು ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚಳಿಯದಂತೆ ನೆಲೆಯೂರಿಸಿದ್ದಾರೆ.
ಹುಟ್ಟೂರಾದ ಅಣತಿ, ತಿಪಟೂರು, ಹಾಸನದಲ್ಲಿ ಶಿಕ್ಷಣ ಪಡೆದ ಅಣತಿಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸಕರ್ಾರಿ ಸೇವೆಗೆ ಸೇರಿದರು. ನಂತರ ಧಾರವಾಡ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಇವರು ಶಿವಮೊಗ್ಗ ಡಿ.ವಿ.ಎಸ್. ಕಾಲೇಜ್ನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು. ಹೊನ್ನಾವರ ಮತ್ತು ಶಿವಮೊಗ್ಗದಂತಹ ಹಸಿರ ಸೆರಗಿನ ಚುಮು ಚುಮು ವಾತಾವರಣ ಅಣತಿಯವರಲ್ಲಿ ಕಾವ್ಯದ ಬೀಜ ಮೊಳೆಯುವಂತೆ ಮಾಡಿತು. ಕವಿ ಪುಂಗವರ ಬೀಡೆಂದೇ ಕರೆಯಲ್ಪಡುವ ಶಿವಮೊಗ್ಗ ಅಣತಿಯವರ ಸಾಹಿತ್ಯ ಕಾರ್ಯಕ್ಷೇತ್ರವಾಯಿತು. ಇವರು ಕಾವ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ.
     ರಮ್ಮಿಯಾಟ-1966, ಹಿಪ್ಪೇಮರ-1974, ಭೂಮಿ ಮತ್ತು ಬದುಕಿನ ಗಂಧ-1989, ಕೃಷ್ಣಾ ಕಣ್ಣಿನ ನೋಟ-1995, ಭೂಮಿ ಹುಣ್ಣಿಮೆ-1996, ತೆರಕೊಂಡ ಆಕಾಶ-2003, ಪಾತ್ರಗಳು ಇರಲಿ ಗೆಳೆಯ-2007, ನೀಲಕುರುಂಜಿ-2009 ಮುಂತಾದ ಕಾವ್ಯ ಕೃತಿಗಳನ್ನು ನೀಡಿದ್ದಾರೆ.
       ಕಾವ್ಯದಷ್ಟೇ ಅಣತಿಯವರನ್ನು ರಂಗಭೂಮಿಯೂ ಸೆಳೆದಿತ್ತು. ಶಿವಮೊಗ್ಗವು ರಂಗ ಕರ್ಮಭೂಮಿಯೆಂದೇ ಪ್ರಸಿದ್ಧಿ. ಅಲ್ಲಿನ 'ಯುಗಾಂತರ ರಂಗ' ವೇದಿಕೆಯಿಂದ 1979 ರಲ್ಲಿ ಬರೆದ 'ಚಾವರ್ಾದ' ನಾಟಕದ ಮೂಲಕ ಪ್ರಾರಂಭವಾಗಿ 'ಜೈಸಿದ್ಧ ನಾಯಕ', ತ್ರಿಶಂಕು, ಒಂದು ಆಕೃತಿಯ ಹತ್ಯೆ, ಕತ್ತಲೆ ಬೆಳಕು ಮುಂತಾದ ನಾಟಕಗಳನ್ನು ರಚಿಸಿ ರಂಗ ಪ್ರಯೋಗ ಮಾಡಿದ್ದಾರೆ. ಅದರಲ್ಲೂ ಕಾವ್ಯ ನಾಟಕಗಳಿಗೆ ಅಣತಿಯವರು ಸುಪ್ರಸಿದ್ಧರು. ಇವರನ್ನು ಗೀತ ನಾಟಕಕಾರರೆಂದೆ ಕರೆಯಲಾಗುತ್ತಿದೆ.
ಹಿಂದಿ ಭಾಷೆಗೆ ಅನುವಾದ
     ಕನ್ನಡ ಸಾಹಿತಿಗಳ ಕೃತಿಗಳ ಬೇರೆ ಭಾಷೆಗೆ ಭಾಷಾಂತರಗೊಂಡ ಕೆಲವೇ ಕೆಲವರಲ್ಲಿ ಅಣತಿಯವರೂ ಒಬ್ಬರು. ಇವರ ಹಲವು ಉತ್ತಮ ಕವಿತೆಗಳು ಹಾಗೆಯೇ 'ಜೇತವನ' ಎಂಬ ನಾಟಕ ಹಿಂದಿ ಭಾಷೆಗೆ ಭಾಷಾಂತರಗೊಂಡು ಅಲ್ಲಿನ ಓದುಗರ ಮೆಚ್ಚುಗೆ ಗಳಿಸಿವೆ.
'ಸಂಪನ್ಮೂಲ ವ್ಯಕ್ತಿಯಾಗಿ'
      ವೃತ್ತಿಯಲ್ಲಿ ಆದರ್ಶ ಅಧ್ಯಾಪಕರಾಗಿದ್ದ ಅಣತಿಯವರು ಉತ್ತಮ ವಾಗ್ಮಿಗಳು. ಕಾವ್ಯ ಹಾಗೂ ರಂಗಭೂಮಿಯ ಬಗ್ಗೆ ಆಳವಾದ ಅಧ್ಯಯನ ಮಾಡಿ ವಿಶೇಷ ಪಾಂಡಿತ್ಯ ಸಂಪಾದಿಸಿದ್ದರು. ಹಲವಾರು ಗೋಷ್ಠಿಗಳಲ್ಲಿ ಉಪನ್ಯಾಸ ನೀಡಿದ್ದಲ್ಲದೆ ಕನರ್ಾಟಕ ಸಾಹಿತ್ಯ ಅಕಾಡೆಮಿಯ ಕಾವ್ಯ ನಾಟಕ ರಚನಾ ಶಿಬಿರದ ಸಂನ್ಮೂಲ ವ್ಯಕ್ತಿಯಾಗಿ ಹಾಗೆಯೇ ಮೈಸೂರಿನ ನೀನಾಸಂ ಸಾಹಿತ್ಯ ಅಧ್ಯಯನ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
      ಮಾನವೀಯ ಮೌಲ್ಯ ಸಂವೇದನೆಯ ಕವಿಯಾಗಿ, ಮೂಲ ರಂಗಭೂಮಿ ಕಲಾ ಪೋಷಕರಾಗಿ ಅವಿಸ್ಮರಣೀಯ ಸೇವೆಗೈದ ಅಣತಿಯವರು ಅನೇಕ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಠಿ, ಚಚರ್ಾಗೋಷ್ಠಿ, ಸಾಹಿತ್ಯಿಕ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 'ಸಾಹಿತ್ಯ ಸಂಸ್ಕೃತಿ ಸಂಪುಟ ಪರಂಪರೆ' ಎಂಬ ಬೃಹತ್ ಗ್ರಂಥದ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಕೀತರ್ಿ ಇವರದು. ಇವರ ಬದುಕಿನ ಬಹುಭಾಗ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದುದರಿಂದ ಹೆಚ್ಚಾಗಿ ಹಾಸನ ಜನರಿಗೆ ಪರಿಚಯ ಇಲ್ಲದಿದ್ದರೂ ನಾಡಿನಾದ್ಯಾಂತ ಮನೆ ಮಾತಾಗಿದ್ದಾರೆ.
     2011 ರಲ್ಲಿ ತವರು ಜಿಲ್ಲೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದ ಪ್ರಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿದ್ದ ಅಣತಿಯವರು ನಾಡಿನ ಗಣ್ಯ ಸಾಹಿತಿಯೂ ಹೌದು. ಸದ್ಯ ಪತ್ನಿ 'ಪ್ರಭಾ' ರವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿರುವ ಅಣತಿಯವರು ಸದಾ ಕನ್ನಡ ಸಾಹಿತ್ಯದ ಕ್ರಿಯಾಶೀಲ ಹಣತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ