ಮಂಗಳವಾರ, ಮೇ 27, 2014

ನವೋದಯ ಕಾಲದ ಶ್ರೇಷ್ಠ ಅನುವಾದಕ - ಎಲ್. ಗುಂಡಪ್ಪ

       ಹೊಸಗನ್ನಡ ಸಾಹಿತ್ಯದ ಆರಂಭವನ್ನು ನವೋದಯ ಸಾಹಿತ್ಯವೆಂತಲೂ ಕರೆಯುತ್ತೇವೆ. ವಸಾಹತು ಶಾಹಿಯ ಪ್ರಭಾವದಿಂದ  ಪಡೆದ ಪಾಶ್ಚಾತ್ಯ ಶಿಕ್ಷಣದ ಹೊಸ ಪ್ರೇರಣೆಗಳು ಹಾಗೂ ಆ ಮೂಲಕ ಜಾಗೃತಗೊಂಡ ಪಾರಂಪರಿಕ ಮೌಲ್ಯಗಳ ಬಗೆಗಿನ ಹೊಸ ದೃಷ್ಠಿಕೋನದ ಫಲವಾಗಿ ಈ ಸಾಹಿತ್ಯ ಬೆಳೆಯಿತು. ಈ ನವೋದಯ ಸಾಹಿತ್ಯ ತನ್ನ ಪೂರ್ವದ ಸಾಹಿತ್ಯ ರೂಪಕ್ಕಿಂತ ವಿಭಿನ್ನ ರೀತಿಯಲ್ಲಿ ಅಂದರೆ ಮಾನವ ಬದುಕಿನ ಸಮಕಾಲೀನ ಸಾಮಾಜಿಕ, ರಾಜಕೀಯ, ಆಥರ್ಿಕ ಈ ಎಲ್ಲಾ ಸ್ತರಗಳನ್ನು ಕುರಿತು ಚಿಂತಿಸುವ ಪರಿಸರದಲ್ಲಿ ಬೆಳೆಯಲು ಇದು ತನ್ನ ಹಿಂದಿನ ಸಾಹಿತ್ಯದಂತೆ ಧರ್ಮ ಹಾಗೂ ಪಂಡಿತ ಕೇಂದ್ರಿತ ನೆಲೆಯಲ್ಲಿರದೆ, ಸಮಾಜ ಕೇಂದ್ರಿತ ದೃಷ್ಠಿಕೋನದೊಂದಿಗೆ ಭಿನ್ನ ಭಿನ್ನ ಆಯಾಮಗಳಲ್ಲಿ ಬೆಳೆದು ಬಂದಿತು.
      ಬಿ.ಎಂ. ಶ್ರೀ, ಪಂಜೆ ಮಂಗೇಶರಾಯ, ಗೋವಿಂದ ಪೈ, ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿಯಾದಿಯಾಗಿ ಎಲ್. ಗುಂಡಪ್ಪ, ಕುವೆಂಪು, ಕಾರಂತರು, ರಂ ಶ್ರೀ ಮುಗುಳಿ, ರಂಗಣ್ಣ ಮುಂತಾದವರನ್ನೊಳಗೊಂಡ ಬೃಹತ್ ಸಾಹಿತ್ಯ ಪರಂಪರೆ ಈ ನವೋದಯ ಕಾಲದಲ್ಲಿ ಮೈತಳೆದು ಹೊಸ ತಿರುವನ್ನು ಪಡೆಯಿತೆನ್ನಬಹುದು.
      ನವೋದಯ ಕಾಲಘಟ್ಟದ ಪ್ರಮುಖ ಅನುವಾದಕರೆಂದೇ ಗುರುತಿಸಿಕೊಂಡ ಎಲ್.ಗುಂಡಪ್ಪನವರು ಹಾಸನದ ಹಸಿರು ಹೊದಿಕೆಯಿಂದ ಚಿಮ್ಮಿ ಬಂದವರು. ಹಾಸನ ಜಿಲ್ಲೆಯ ಗೊರೂರು, ರಂಗಣ್ಣನವರ ಸಮಕಾಲೀನರಾಗಿದ್ದ ಗುಂಡಪ್ಪನವರು ಅನುವಾದ ಹಾಗೂ ನಿಘಂಟು ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.
ಎಲ್. ಗುಂಡಪ್ಪನವರು ಹಾಸನ ಜಿಲ್ಲೆಯ ಮಲೆನಾಡು ಸೆರಗಿನ ಬೇಲೂರು ತಾಲ್ಲೂಕು ಮತಿಘಟ್ಟ ಗ್ರಾಮದ ಶ್ರೀ ಲಿಂಗಣ್ಣಯ್ಯ ಹಾಗೂ ಶ್ರೀಮತಿ ಚೆನ್ನಮ್ಮ ದಂಪತಿಗಳ ಮಗನಾಗಿ 1903 ರಲ್ಲಿ ಜನಿಸಿದರು.
     ಮತಿಘಟ್ಟ ಕೃಷ್ಣಮೂತರ್ಿ ಗುಂಡಪ್ಪನವರ ಕಿರಿಯ ಸಹೋದರರು. ಕೃಷ್ಣಮೂತರ್ಿಯವರು ಊರಿನ ಹೆಸರನ್ನು ಪ್ರಜ್ವಲಿಸುವಂತಹ ಸಾಧನೆ ಮಾಡಿದರೆ ಗುಂಡಪ್ಪನವರು ತಂದೆಯ ಹೆಸರು ಪ್ರಕಾಶಿಸುವಂತೆ ಮಾಡಿದರು. ಕನ್ನಡ ಸಾಹಿತ್ಯ ಲೋಕಕ್ಕೆ  ಮತಿಘಟ್ಟ ಲಿಂಗಣ್ಣಯ್ಯರ ಬ್ರಾಹ್ಮಣ ಕುಟುಂಬ ಎರಡು ದೃವ ನಕ್ಷತ್ರಗಳನ್ನು  ನೀಡಿದೆ ಎನ್ನಬಹುದು.
     ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಗುಂಡಪ್ಪನವರು ಅತ್ಯುತ್ತಮ ವಾಗ್ಮಿಗಳಾಗಿದ್ದರು. ವಿದ್ಯಾಥರ್ಿಗಳ ಅಚ್ಚು ಮೆಚ್ಚಿನ ಗುರುಗಳಾಗಿದ್ದರು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದನೆಯಲ್ಲಿ ಹಾಗೆಯೇ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್-ಕನ್ನಡ ನಿಘಂಟು ಸಂಪಾದನೆಯಲ್ಲಿ ಅವಿರತವಾಗಿ ದುಡಿದಿದ್ದಾರೆ. ಇವರ 'ಪತ್ರಿಕಾ ನಿಘಂಟು' ಕನ್ನಡ ಸಾಹಿತ್ಯದ ಒಂದು ಅತ್ಯುಪಯುಕ್ತ ಗ್ರಂಥವಾಗಿದೆ.
ಅನುವಾದ ಸಾಹಿತ್ಯ
     ಮೊದಲೇ ಹೇಳಿದಂತೆ ಅನುವಾದ ಸಾಹಿತ್ಯದಲ್ಲಿ ಗುಂಡಪ್ಪನವರು ಸಿದ್ಧ ಹಸ್ತರು. ಈ ಕ್ಷೇತ್ರದಲ್ಲಿ ತಮ್ಮದೇಯಾದ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಕುಮಾರ ವ್ಯಾಸನ 'ಕಣರ್ಾಟ ಭಾರತ ಕಥಾಮಂಜರಿ'ಯ ಗದ್ಯಾನುವಾದ ಮಾಡಿದ್ದಾರೆ. ರಾಜಾಜಿಯವರ 'ವ್ಯಾಸರ್ ವಿರುಂದು' ಎನ್ನುವ ಹೆಸರಿನ ಮಹಾಭಾರತವನ್ನು ಕನ್ನಡಕ್ಕೆ ಅನುವಾದ ಗೊಳಿಸಿದ್ದಾರೆ ೆ. ತಮಿಳಿನ ತಿರುಕ್ಕುರುಳ್, ಶಿಲಪ್ಪದಿಗಾರಂ ಕೃತಿಗಳನ್ನು ಸಹ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಬಹುಭಾಷಾ ಪಾರಂಗತರಾಗಿದ್ದ ಎಲ್. ಗುಂಡಪ್ಪನವರು ಕನ್ನಡಕ್ಕೆ ಅನುವಾದ ಸಾಹಿತ್ಯದ ಮೂಲಕ ಅಮೋಘ ಸೇವೆ ಸಲ್ಲಿಸಿದ್ದಾರೆ. ಇತರೆ ಭಾಷೆಗಳಲ್ಲಿನ ಶ್ರೇಷ್ಠ ಕೃತಿಗಳನ್ನು ಕನ್ನಡಿಗರೂ ಓದಿ ರಸಾನುಭವ ಹೊಂದಲು ಕಾರಣೀಭೂತರಾಗಿದ್ದಾರೆ.


'ಮಕ್ಕಳ ಸಾಹಿತ್ಯ'
     ಗುಂಡಪ್ಪನವರದು ಬಹುಮುಖ ವ್ಯಕ್ತಿತ್ತ್ವ. ನಿಘಂಟು, ಅನುವಾದ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯಷ್ಟೇ ಮಕ್ಕಳ ಸಾಹಿತ್ಯಕ್ಕೂ ನೀಡಿದ್ದಾರೆ. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ, ಆದರ್ಶಮಯ ನಡವಳಿಕೆಗಳನ್ನು ಬಿಂಬಿಸುವ ದೃಷ್ಠಿಕೋನದಲ್ಲಿ ಮಕ್ಕಳ ಸಾಹಿತ್ಯ ರಚಿಸಿದರು.
   ಗುಂಡಪ್ಪನವರು ಪ್ರಮುಖ ಮಕ್ಕಳ ಸಾಹಿತ್ಯ ಕೃತಿಗಳೆಂದರೆ 'ಕಳ್ಳಮರಿ' 'ಮಕ್ಕಳ ರವೀಂದ್ರ', ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ತ್ವ ಪರಿಚಯ. ರವೀಂದ್ರರ ತತ್ತ್ವಾದರ್ಶಗಳಿಗೆ ಮಾರುಹೋಗಿ ಅಂತೆಯೇ ಬದುಕಬೇಕೆಂದು ಜೀವನ ನಡೆಸಿದ ಗುಂಡಪ್ಪನವರು, ಮುಂದೆ ತಮ್ಮ ಕೃತಿಗಳಲ್ಲಿ ಒಡ ಮೂಡಿಸಿದ್ದಾರೆ.
    ಇಷ್ಟಲ್ಲದೇ ಗುಂಡಪ್ಪನವರು 'ನಾಡಪದಗಳು'-ಜನಪದ, 'ಮುಕುಂದ ಮಾಲಾ', 'ಬಾಸನಾಟಕ', 'ಕನ್ನಡ ವ್ಯಾಕರಣ ಪಾಠಗಳು' ಎಂಬ ವೈವಿಧ್ಯಮಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಒಟ್ಟಾರೆ ಹೇಳುವುದಾದರೆ ನಿಘಂಟು, ಅನುವಾದ , ಮಕ್ಕಳ ಸಾಹಿತ್ಯ, ಜಾನಪದ, ನಾಟಕ, ವ್ಯಾಕರಣ, ಕಾವ್ಯ ಹೀಗೆ ಹಲವು ಪ್ರಕಾರಗಳಲ್ಲಿ ಗುಂಡಪ್ಪನವರು ಅದ್ವಿತೀಯ ಕೃತಿಗಳನ್ನು ನಮಗೆ ನೀಡಿದ್ದಾರೆ.
     ಗುಂಡಪ್ಪನವರ ಅನುಪಮ ಸಾಹಿತ್ಯ ಸೇವೆಗೆ ಮೈಸೂರು ವಿಶವಿದ್ಯಾನಿಲಯದ ಸಿಲ್ವರ್ ಜ್ಯುಬಿಲಿ ಕನ್ನಡ ಸ್ವರ್ಣ ಪದಕ ಪ್ರಶಸ್ತಿ, ತಮಿಳು, ಕನ್ನಡ ಬಾಂಧವ್ಯಕ್ಕಾಗಿ ಶ್ರಮಿಸಿದ್ದಕ್ಕಾಗಿ ನಾಗರ್ ಕೊಯಿಲಿನಲ್ಲಿ ಬಂಗಾರದ ಪದಕ, ದೇವರಾಜು ಬಹಾದ್ದೂರ್ ಬಹುಮಾನ ಹಾಗೂ 1975 ರಲ್ಲಿ ಕನರ್ಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿವೆ. ಇಂತಹ ಮಹೋನ್ನತ ಸಾಹಿತಿ ನಮ್ಮ ಹಾಸನ ಜಿಲ್ಲೆಯವರೆನ್ನುವುದೇ ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ