ಮಂಗಳವಾರ, ಮೇ 27, 2014

ಕನ್ನಡ ಸಾಹಿತ್ಯದ ಪಾಂಡಿತ್ಯ ಪ್ರತಿಭೆ- ಡಾ|| ಮಳಲಿ ವಸಂತ್ ಕುಮಾರ್

ವಿಶ್ವ ಕವಿ ಕುವೆಂಪು ಪರಂಪರೆಯಲ್ಲಿ ಸಾಗಿ ಬಂದಿರುವ ಮಳಲಿಯವರು ಮೌಢ್ಯ ವಿರೋದಿಯೂ ಹೌದು, ವಿಚಾರಪರ ಸಾಧಕರೂ ಹೌದು.- ನಾಡೋಜ ಡಾ|| ದೇ.ಜ.ಗೌ
ಅಕ್ಷರಶ: ದೇ.ಜ.ಗೌ ಅವರ ಮನದಾಳದ ನಲ್ನುಡಿ ಡಾ|| ಮಳಲಿಯವರ ವ್ಯಕ್ತಿತ್ವಕ್ಕಿಡಿದ ಕನ್ನಡಿಯಾಗಿದೆ.ಆಧುನಿಕ ಕನ್ನಡ ಸಾಹಿತ್ಯದ ಆಳ ಪರಂಪರೆ, ಅಧ್ಯಾಯನ ಶೀಲತೆ ಜೊತೆ ಜೊತೆಗೆ ವಾಗ್ಪ್ರೌಢಿಮೆಯನ್ನು, ಪಾಂಡಿತ್ಯ ಸಂಪನ್ನತೆ ಗಳಿಸಿದ, ನಿಭರ್ಿಡತೆಯಿಂದ ಒಳ ಹೊರವುಗಳನ್ನು ಪಠಿಸಬಲ್ಲ ಬೆರಳೆಣಿಕೆಯ ಕಂಚಿನ ಕಂಠಗಳಲ್ಲಿ ಡಾ|| ಮಳಲಿಯವರೂ ಒಬ್ಬರೆಂದರೆ ಅತಿಶಯೋಕ್ತಿಯಾಗಲಾರದು.
1983 ರಲ್ಲಿ ಪ್ರಕಟವಾದ ಮಳಲಿಯವರ ಈಡು ಕಥಾ ಸಂಕಲನ ಓದಿದ ರಾಷ್ಟ್ರಕವಿ ಕುವೆಂಪುರವರು ಈ ರೀತಿ ಹೇಳಿದ್ದಾರೆ ಅಪಥ್ಯ, ಸ್ಥಿತ್ಯಂತರ, ರಿಕ್ತ ಮತ್ತು ಈಡು ಕಥೆಗಳು ನನ್ನ ಮೇಲೆ ತೀವ್ರ ಪರಿಣಾಮ ಉಂಟುಮಾಡಿದವು. ಅದು ಎಷ್ಟರ ಮಟ್ಟಿಗೆಂದರೆ ನಾನೂ ಸಹ ಎರಡು ದಿನ ನಿದ್ರೆ ಮಾಡಲಾಗಲಿಲ್ಲ.
ಕನ್ನಡ ಸಾಹಿತ್ಯದ ಭವ್ಯೋಜ್ವಲ ಇತಿಹಾಸದಲ್ಲಿ ಡಾ|| ಮಳಲಿಯವರಿಗೆ ವಿಶಿಷ್ಟ ಸ್ಥಾನವಿದೆ, ಅವರ ಭಾಷಾ ಪ್ರೌಢಿಮೆ ಅನನ್ಯ ಹಾಗೂ ಅದ್ವಿತೀಯವಾದದ್ದು.
                 20.04.2013 ರ ಶನಿವಾರ ಹಾಸನದ ಹಾಸನಾಂಭ ಕಲಾಕ್ಷೇತ್ರದಲ್ಲಿ ನಡೆದ ಅಖಿಲ ಕನರ್ಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷತೆಯ ರತ್ನ ಮುಕುಟ ಡಾ|| ಮಳಲಿಯವರ ವ್ಯಕ್ತಿತ್ವದ ಹೊಳಪನ್ನು ಇಮ್ಮಡಿಗೊಳಿಸಿದೆ.
ಹಾಸನ ಜಿಲ್ಲೆಯ ಮಳಲಿ ಗ್ರಾಮದ ಶ್ರೀಮತಿ ದೇವಮ್ಮ ಮತ್ತು ಶ್ರೀ ಪಟೇಲ್ ಚಿಕ್ಕೇಗೌಡ ದಂಪತಿಗಳ ಸುಪುತ್ರರಾಗಿ 1945 ಆಗಸ್ಟ್ 6 ರಂದು ಜನಿಸಿದ ವಸಂತ್ ಕುಮಾರ್ರವರು ಹುಟ್ಟೂರಲ್ಲೇ ಪ್ರಾಥಮಿಕ ಹಾಗೂ ಪೌಡ ಶಿಕ್ಷಣವನ್ನು ಮುಗಿಸಿದ ನಂತರ ಇವರ ಮುಂದಿನ ವಿಧ್ಯಭ್ಯಾಸ [ಕುವೆಂಪುರವರು ಕುಪ್ಪಳ್ಳಿಯಿಂದ ಮೈಸೂರಿಗೆ ಬಂದಂತೆ] ಮೈಸೂರಿನಲ್ಲಾಯಿತು. ಬಲ್ಯದಿಂದಲೂ ಕುವೆಂಪುರವರ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮಳಲಿಯವರು ಡಾ|| ಹೆಚ್.ತಿಪ್ಪೆರುದ್ರಸ್ವಾಮಿಯವರ ಮಾರ್ಗದರ್ಶನದಲ್ಲಿ ಕುವೆಂಪುರವರ ನಾಟಕ ಸಾಹಿತ್ಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದರು. ನಂತರ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿ, ಮೈಸೂರು ವಿ ವಿ ನಿಲಯದ ಸ್ನಾತಕೋತ್ತರ ಕೇಂದ್ರಗಳಾದ ಮಂಡ್ಯ ಹಾಗೂ ಹಾಸನದಲ್ಲಿ ಪ್ರಾಧ್ಯಪಕರಾಗಿ ಸೇವೆಸಲ್ಲಿಸಿದ್ದಾರೆ.
ಡಾ||ಮಳಲಿಯವರು ಪ್ರಾಧ್ಯಪಕರಾಗಿ, ಮುಖ್ಯ ಸಂಯೋಜಕರಾಗಿ, ಸಂಘಟಕರಾಗಿ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರವನ್ನು ಪ್ರಜ್ವಲಗೊಳಿಸಿದ್ದಾರೆ. ಈಗಾಗಲೇ ಮುವತ್ತೈದಕ್ಕೂ ಹೆಚ್ಚು ಕೃತಿಗಳನ್ನು ನೀಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಕಾವ್ಯ, ಕಥೆ, ನಾಟಕ, ವಿಮಶರ್ೆ, ಜಾನಪದ, ಪ್ರಬಂಧ, ಸಂಗ್ರಹ, ವಚನ ಸಾಹಿತ್ಯ ಹೀಗೆ ಹತ್ತಾರು ಪ್ರಕಾರಗಳಲ್ಲಿ ಆಳ-ನಿರಾಳತೆಯನ್ನು ಕಂಡುಂಡವರು, ಯಶಕಂಡವರು. ಕನ್ನಡ ಸಾಹಿತ್ಯದ ಅಪ್ರತಿಮ ವಾಗ್ಮಿಗಳು.
ಅಖಿಲ ಕನರ್ಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ತಿ.ರಾ.ಕೃ ರವರ ಪತ್ರಿಕಾ ಹೇಳಿಕೆ ನೋಡಿ , ತಟ್ಟನೇ ಫೋನಾಯಿಸಿ ಡಾ|| ಮಳಲಿಯವರಿಗೆ ಅಭಿನಂದನೆ ಸಲ್ಲಿಸಿದೆ. ಒಂದೆರಡು ದಿನಗಳ ನಂತರ ಶ್ರೀಯುತರ ಸಂದರ್ಶನ ಮಾಡಲೆಂದು ಕರೆಮಾಡಿದಾಗ ನಾಡೋಜ ಡಾ|| ದೇ.ಜ.ಗೌರವರ ಮನೆಯಲ್ಲಿರುವುದಾಗಿ ಅಲ್ಲಿಗೆ ಬರುವಂತೆ ಹೇಳಿದಾಗ ನಿಜಕ್ಕೂ ಹರ್ಷಗೊಂಡು ತೆರಳಿದೆ. ದೇ.ಜ.ಗೌ ವೃತ್ತದಲ್ಲಿಳಿದು ನೇರವಾಗಿ ಅವರ ಕುಟೀರಕ್ಕೆ ಪ್ರವೇಶಿಸಿದೆ. ಅಷ್ಟೊತ್ತಿಗೆ ಯಾವುದೋ ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದ ಅವರನ್ನು ನನ್ನ ಪ್ರವೇಶ ಮೊಟುಕುಗೊಳಿಸಿರಬೇಕು ! 97ರ ಹರೆಯದಲ್ಲೂ ಹಸನ್ಮುಖಿಯಾಗಿ ದೇ.ಜ.ಗೌ ಸ್ವಾಗತಿಸಿದುದ ಕಂಡು ಉಲ್ಲಾಸಗೊಂಡೆ ಹಾಗೆಯೇ ಕನ್ನಡ ಸಾಹಿತ್ಯದ ಈರ್ವ ದಿಗ್ಗಜರ ದರ್ಶನ ಮಾಡಿ ಪಾವನಗೊಂಡೆ, ನಂತರ ಆಧುನಿಕ ಸಾಹಿತ್ಯದ ಒಳ-ಹೊರಗಳ ಸ್ಥಿತ್ಯಂತರದ ಬಗ್ಗೆ ಸುಮಾರು ಒಂದು ಗಂಟೆಗಳ ಕಾಲ ಚಚರ್ಿಸಿದೆವು. ಅವರು ಹೆಚ್ಚಾಗಿ ವೈಚಾರಿಕತೆಯನ್ನೇ ಅಪ್ಪಿಕೊಂಡು ವಿಶ್ಲೇಷಿಸುತ್ತಾ ಸಾಗಿದರು.
   ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಅವರ ವಚನ ವಿಭೂತಿ ಆಧುನಿಕ ವಚನ ಸಂಕಲನದ ಬಗ್ಗೆ ಓದುಗರು, ವಿಮರ್ಷಕರು ತೋರಿದ ಅನನ್ಯ ಪ್ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


            ಆರಂಭದಲ್ಲಿ ಪಂಪ, ಕುಮಾರವ್ಯಾಸ ಹಾಗೆಯೇ ಪ್ರಾಚೀನ ಸಾಹಿತ್ಯದ ಆಳವಾದ ಅಧ್ಯಯನ, ನಂತರ ಜನಸಾಮಾನ್ಯರ ದನಿಯಾದ ವಚನ ಸಾಹಿತ್ಯ ಹಾಗೆಯೇ ಆಧುನಿಕವಾಗಿ ಕುವೆಂಪುರವರ ವಿಶ್ವಮಾನವ ಸಾಹಿತ್ಯ ಇವರ ಪ್ರೇರಕ ಶಕ್ತಿಗಳು .
         ಅವರೇ ಹೇಳುವಂತೆ ವಚನ ಸಾಹಿತ್ಯ ಕೇವಲ ಭಕ್ತಿಗೆ ಸೀಮಿತವಾಗದೇ ಅದೊಂದು ಜಾತ್ಯಾತೀತ ಆಂದೋಲನವಾಯಿತು. ಅದು ಸಮಾಜದ ಎಲ್ಲಾ ವರ್ಗದ , ಎಲ್ಲಾ ಜನಾಂಗದ ಮಿಡಿತವಾಗಿತ್ತು. ಬಸವ, ಅಲ್ಲಮ, ಅಕ್ಕ ಮಹದೇವಿಯವರಂತಹ ಶರಣ ಬಂಧುಗಳು ಈ ಉತ್ಕ್ರಾಂತಿಗೆ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿದರು.
        ವಚನ ಸಾಹಿತ್ಯ ನಿಜವಾದ ದೇಶೀಯ ಸಾಹಿತ್ಯ, ತಮಿಳು ನಾಡಿನ ಸಂಗಂ ಸಾಹಿತ್ಯವನ್ನು ಮೀರಿಸುವಂತದ್ದು, ಇದು ಕಾಯಕದಿಂದಲೇ ಬದುಕಿ ಬಾಳಿದ ಸ್ವಾಭಿಮಾನದ ಪ್ರತೀಕ. ಸರ್ವ ಸಮಾನತೆಯ ಸಾಮಾಜಿಕ ಆಂದೋಲನದ ಪ್ರತಿರೂಪ .
                ಬಹುಮಟ್ಟಿಗೆ ಸಾಂಸ್ಕೃತಿಕತೆ ಮತ್ತು ವೈಚಾರಿಕತೆ ಸಂಲಗ್ನಗೊಂಡ ಸಾಹಿತ್ಯ, ಮೌಢ್ಯ ವಿರೋಧ ಭಾವನೆ, ಸ್ಪಷ್ಟವಾದ ಜಾತ್ಯಾತೀತ ನಿಲುವು ಇವರ ಪ್ರಮುಖ ಧೋರಣೆಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು.
               ಪ್ರಾಚೀನ ವಚನ ಸಾಹಿತ್ಯ ಭಕ್ತಿ ಪ್ರಧಾನವಾದದ್ದು ಮತ್ತು ಆಧ್ಯಾತ್ಮಕತೆ ಸಂಯೋಗ, ಹಾಗೆಯೇ ಸಂಸ್ಕೃತಿಯ ಜೊತೆಗೆ ವೈಚಾರಿಕ ನಿಲುವಾದರೆ, ಆಧುನಿಕ ವಚನ ಸಾಹಿತ್ಯ ವರ್ತಮಾನಗಳ ಆಗು ಹೋಗುಗಳ ಕುರಿತಾದದ್ದು, ಸಾಮಾಜಿಕ ಬದಲಾವಣೆಗೆ ಪ್ರಮುಖ ಅಂಶವಗಿದೆ ಎಂಬುದು ಇವರ ದೃಡ ನಿಲುವಾಗಿದೆ.
ಶ್ರೀಯುತರ ದೃಢ ಸಂಕಲ್ಪದ ನಿಲುವು, ಧೋರಣೆಗಳೇ ಅವರ ಮೌಲ್ಯಭರಿತ ಸಾಹಿತ್ಯಕ್ಕೆ ಹೊಳವುಗಳಾಗಿವೆ. ಮಳಲಿ ಗಿಡ್ಡಮ್ಮ, ಕೋಲು ಪದಗಳು, ಜಾನಪದ ವೈಧ್ಯ, ಜಾನಪದ ನಂಬಿಕೆಗಳು-ಜಾನಪದ ಕೃತಿಗಳು; ಕಡಲಕವಿತೆಗಳು, ಹೃದಯ ಗಂಗೆ, ಕರಾವು-ಕವನ ಸಂಕಲನಗಳು; ಯಮಧರ್ಮ, ಲಂಕೇಶ್ವರ-ನಾಟಕಗಳು; ಈಡು-ಕಥಾಸಂಕಲನ; ಕದಂಬ, ವಿಪಕ್ಷೆ-ವಿಮಶರ್ಾ ಕೃತಿಗಳು; ಕವಿಗಳು ಕಂಡ ಕುವೆಂಪು, ವಜ್ರದೀಪ್ತಿ-ಸಂಪಾದಿತ ಕೃತಿಗಳು; ಕುವೆಂಪುರವರ ನಾಟಕ ಸಮೀಕ್ಷೆ, ಚಿತ್ರಾಂಗದಾ ಸಮೀಕ್ಷೆ, ಚಂದ್ರಹಾಸ ನಾಟಕ ಸಮೀಕ್ಷೆ-ಸಂಶೋಧನಾ ಕೃತಿಗಳು; ಹಾಗೆಯೇ ವಚನ ವಿಭೂತಿ, ವಚನ ವರ್ತಮಾನ-ಆಧುನಿಕ ವಚನ ಸಂಕಲನಗಳು ಹೀಗೆ ಹಲವಾರು ಕೃತಿಗಳನ್ನು ಭುವನೇಶ್ವರಿ ಮಡಿಲಿಗೆ ಸಮಪರ್ಿಸಿದ್ದಾರೆ.
  ಚೀನಾದ ಹಾಂಕಾಂಗ್ ನಲ್ಲಿ ನಡೆದ ಮೂರನೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,ಅಖಿಲ ಕನರ್ಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಕುಟ ಇವರನ್ನಲಂಕರಿಸಿರುವುದು ಔಚಿತ್ಯಪೂರ್ಣವಾದುದಾಗಿದೆ , ಹಾಗೂ ಇತ್ತೀಚೆಗೆ ಗಲ್ಫ್ ಕಂಟ್ರೀಸ್ನ ಅಬುದಾಭಿಯಲ್ಲಿ ನಡೆದ ವಿಶ್ವ ಸಾಹಿತ್ಯ ಸಮ್ಮೇಳನದ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ್ದು ಇವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ತಮ್ಮ ಪಾಂಡಿತ್ಯ ಪ್ರತಿಭೆಗಳಿಂದ ಸಮನ್ವಿತವಾದ ವಾಕ್ಪ್ರವಾಹದಿಂದ ನಾಡಿನ ಜನಮಾನಸದಲ್ಲಿ ನೆಲೆಯೂರಿದ್ದಾರೆ.
ಡಾ|| ಮಳಲಿಯವರ ಸಾಹಿತ್ಯಿಕ ಧೀಮಂತಿಕೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಹೊಯ್ಸಳ ರತ್ನ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಇವರ ಸಾಹಿತ್ಯ ಚಿಲುಮೆ ಇನ್ನೂ ಹೆಚ್ಚಿನ ಉದ್ಗ್ರಂಥಗಳಿಂದ ನಾಡಿನಾದ್ಯಾಂತ, ದೇಶದಾದ್ಯಂತ ವ್ಯಾಪಿಸಿ ಸಕಾರಾತ್ಮಕ ನೆಗಟ್ಟಿನಲ್ಲಿ ಪಸರಿಸಲೆಂದು ಆಶಿಸುತ್ತೇನೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ