ಮಂಗಳವಾರ, ಮೇ 27, 2014

ಯೋಗ ಕಲಾವಲ್ಲಭ -ಎಚ್.ಬಿ.ರಮೇಶ್

        ನಾಡು ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ನಾಡಿಗಾಗಿ ಏನು ಕೊಟ್ಟಿದ್ದೇನೆ? ಎಂಬ ತಾತ್ವ್ತಿಕ ನೆಲೆಗಟ್ಟಿನಲ್ಲಿಯೇ ಸದಾ ಚಿಂತಿಸಿ, ಕಾಯರ್ೋನ್ಮುಖರಾಗಿ ಕಾಯಕಯೋಗಿಯಂತೆ ಕರ್ಮ ಎಸಗುತ್ತಾ ಆರಕ್ಕೇರದೇ ಮೂರಕ್ಕಿಳಿಯದೇ ಪ್ರಾಂಜಲಿ ಮನಸ್ಸಿನಿಂದ, ಸದಾ ಹಸನ್ಮುಖಿಯಾಗಿರುವ ಎಚ್.ಬಿ. ರಮೇಶ್ ಅವರದು ಬಹುಮುಖ ವ್ಯಕ್ತಿತ್ತ್ವ.
       1933 ಜುಲೈ ಒಂದರಂದು ಹಾಸನದ ಪ್ರಖ್ಯಾತ ನೀರುವಾಗಿಲು ಆಂಜನೇಯ ದೇವಸ್ಥಾನದ ಪೂಜಾರಿ ವಂಶಸ್ಥರಾದ ಎಚ್. ಎಸ್. ಬೀಮಯ್ಯ ಹಾಗೂ ಶ್ರೀಮತಿ ಎಚ್. ಎನ್. ಪುಟ್ಟಮ್ಮ ದಂಪತಿಗಳ ಮಗನಾಗಿ ಜನಿಸಿದವರೇ ರಮೇಶ್.
      ತಂದೆ ಭೀಮಯ್ಯ ಪ್ರಸಿದ್ಧ ರಂಗಭೂಮಿ ಕಲಾವಿದರು. ಹಾಗಾಗಿಯೇ ಕಲೆ ಎಂಬುದು ರಮೇಶ್ರವರಿಗೆ ರಕ್ತಗತವಾಗಿಯೇ ಬಂದಿದೆ ಎನ್ನಬಹುದು.
       ಎಲ್ಲದಕ್ಕಿಂತ ಮುಖ್ಯವಾಗಿ ಅತ್ಯುತ್ತಮ ಶಿಕ್ಷಕರು ಹಾಗೆಯೇ ಪ್ರತಿಭಾನ್ವಿತ ಯೋಗಪಟು. ಆಲೂರು, ಸಕಲೇಶಪುರ ಮುಂತಾದ ಸ್ಥಳಗಳಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಇವರಿಗೆ ಸಾವಿರಾರು ಆಪ್ತ ಶಿಷ್ಯರಿದ್ದಾರೆ. ಆದ್ದರಿಂದ ಇವರು ಯೋಗ ಶಿಕ್ಷಕರೆಂದೇ ಪ್ರಸಿದ್ಧಿ. ಸ್ವ ಆಸಕ್ತಿಯಿಂದ ನೂರಾರು ಉಚಿತ ಯೋಗ ತರಬೇತಿಗಳನ್ನು ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟ
ಇವರು ಪ್ರೌಢಶಾಲಾ ಹಂತದಲ್ಲಿದ್ದಾಗ ದೇಶದಾದ್ಯಾಂತ ಸ್ವಾತಂತ್ರ್ಯ ಚಳುವಳಿಯ ಕಾವು ಗಾಂಧಿ ನೇತೃತ್ತ್ವದಲ್ಲಿ ತೀವ್ರ ಸ್ವರೂಪ ಪಡೆದಿತ್ತು. ಅದೆ ಸಮಯಕ್ಕೆ ಮೈಸೂರು ಚಲೋಜಾವ್ ಚಳುವಳಿ ಪ್ರಾರಂಭವಾಗಿತ್ತು. ರಮೇಶ್ರವರ ಆಂತರ್ಯದಲ್ಲಿ ಸುಪ್ತವಾಗಿದ್ದ ದೇಶಭಕ್ತಿ ಸುಮ್ಮನೆ ಕೂರಲು ಬಿಡಲಿಲ್ಲ. ಪರಿಣಾಮ ಚಳುವಳಿಯಲ್ಲಿ  ಪಾಲ್ಗೊಂಡ ಹಾಸನ ಜೈಲಿನಲ್ಲಿ ಏಳು ದಿವಸಗಳ ಕಾಲ ಸೆರೆವಾಸ ಅನುಭವಿಸಿದರು.
      ರಾಷ್ಟ್ರಪತಿ ಗಾಂಧಿ ಹಾಗೂ ಜಾಗತಿಕ ಕ್ರಾಂತಿಕಾರಿ ವಿಚಾರವಾದಿ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಅಕ್ಷರಶಃ ಅಳವಡಿಸಿಕೊಂಡು ಇಂದಿಗೂ ಆದರ್ಶಮಯ ಜೀವನ ಸಾಗಿಸುತ್ತಿದ್ದಾರೆ.
ರಂಗಭೂಮಿ ಪ್ರವೇಶ
      ಆಲೂರು, ಸಕಲೇಶಪುರದಲ್ಲಿ ದೈಹಿಕ ಶಿಕ್ಷಕರಾಗಿದ್ದ ಸಂದರ್ಭದಲ್ಲಿಯೇ ಹವ್ಯಾಸ ತಂಡವೊಂದನ್ನು ಕಟ್ಟಿ 'ಉಂಡಾಡಿ ಗುಂಡ' ದಲ್ಲಿನ 'ಗುಂಡನ' ಪಾತ್ರ, 'ದೇವದಾಸಿ' ನಾಟಕದಲ್ಲಿನ ನಾಜೂಕಯ್ಯನ ಪಾತ್ರದಲ್ಲಿ ಖ್ಯಾತಿಗಳಿಸಿದರು. ಹಾಸನದ ಜಾತ್ರೆಗೆ ನಾಟಕ ಮಂಡಳಿಗಳೊಂದಿಗೆ ಬರುತ್ತಿದ್ದ ಡಾ|| ರಾಜ್ಕುಮಾರ್, ನರಸಿಂಹರಾಜು, ಬಾಲಕೃಷ್ಣರವರೊಂದಿಗೆ ಓಡಾಡಿದ ಕ್ಷಣಗಳನ್ನು, ಹಾಗೆಯೇ ಎಚ್ಚಮ್ಮನಾಯಕದಲ್ಲಿನ ಶಾಸ್ತ್ರಿ ಪಾತ್ರ ನೀಡಿ ಸ್ವತಃ ಡಾ|| ರಾಜ್ರವರೇ ಇವರಿಗೆ ಮೇಕಪ್ ಮಾಡಿದ ಘಳಿಗೆಗಳನ್ನು ನೆನೆಯುತ್ತಾ ರಮೇಶ್ರವರ ಉನ್ಮಾದಗೊಳ್ಳುತ್ತಾರೆ.
ನಟನೆಯ ಜೊತೆಗೆ ನಾಟಕ ರಚನೆಯನ್ನು ಮಾಡಿದ ರಮೇಶ್ರವರು 'ಬಾಡ್ಗೆ ಮನೆ' 'ಚಿರೋಟಿ ದೆವ್ವ', 'ಅಭಿನಯದ ಅಧ್ವಾನ', ಕಲಾತಪಸ್ವಿ, ವರಶಾಪ, ಮಹಾಪರಿವರ್ತನೆ ನಾಟಕಗಳನ್ನು ರಚಿಸಿದ್ದಾರೆ.
         ಅಲ್ಲದೆ ಶ್ರೀ ಹಾಸನಾಂಬ ಚರಿತ್ರೆ, ಬೇಲೂರು ಬೆಡಗಿಯರು, ಅರಸೀಕೆರೆ ಬೆಡಗು, ಹಾಸನ ಜಿಲ್ಲಾ ವಾಸ್ತು ಶಿಲ್ಪ, ಭಗವಾನ್ ಬಾಹುಬಲಿ, ದಾಸರೆಂದರೆ ಪುರಂದರ ದಾಸರಯ್ಯ, ಮುತ್ತು ರತ್ನ, ಜೇನುಕಲ್ಲು ಸಿದ್ದೇಶ್ವರ, ಯೋಗಾಸನ ಮನೋಲ್ಲಾಸ, ಗೊಮ್ಮಟ ವೈಭವ, ಬೇಲೂರು ತಾಲ್ಲೂಕು ದರ್ಶನ, ಉಪಯುಕ್ತ ಯೋಗಾಸನಗಳು, ಕುವೆಂಪು ಕಂಡ ಮಂಥರೆ ಮತ್ತು ಇತರ ನಾಟಕಗಳು, ಹಣತೆ ಹೀಗೆ ಸ್ಥಳ ಪುರಾಣ, ವ್ಯಕ್ತಿ ಚರಿತ್ರೆ, ವಿಮಶರ್ೆ, ಶಿಕ್ಷಣ ಮುಂತಾದ ರೀತಿಯ ಸಾಹಿತ್ಯಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಇವರ ಗುರುತರ ಸೇವೆ ಗುರುತಿಸಿ 1987ರಲ್ಲಿ ಜಿಲ್ಲಾಡಳಿತ ಮತ್ತು ನಗರ ಸಭೆ ಸನ್ಮಾನ ಮಾಡಲು ನಿರ್ಧರಿಸಿದಾಗ ಅದನ್ನು ನಿರಾಕರಿಸಿ, ಬದಲಿಗೆ ಯೋಗ ತರಬೇತಿ ನೀಡಲು ಶಾಶ್ವತ ನೆಲೆಯೊಂದನ್ನು ಕೇಳಿದರು. ಇಲ್ಲಿ ಅವರ ನಿಶ್ವಾರ್ಥ ಸೇವೆ ನಮಗೆ ಅರಿವಾಗದಿರದು. ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಉಪೇಂದ್ರ ತ್ರಿಪಾಠಿ ಹಾಗೂ ನಗರ ಸಭಾಧ್ಯಕ್ಷರಾಗಿದ್ದ ಎಚ್.ಎಸ್.ಕೃಷ್ಣಮೂತರ್ಿಯವರು ಇವರ ಸಾಮಾಜಿಕ ಕಳಕಳಿ ಅರಿತು ಮಹಾರಾಜ ಪಾರ್ಕನಲ್ಲಿ ಯೋಗ ಶಿಕ್ಷಣ ಶಾಲೆ ಪ್ರಾರಂಬಿಸಲು ಅನುಮತಿ ನೀಡಿದರು. ಆಗ ರಮೇಶ್ ರವರು ಅವರ ಆಪ್ತ ಗೆಳೆಯರ ಸಹಕಾರದಿಂದ ಈಗಿನ ವಿವೇಕಾನಂದ ಯೋಗ ಶಾಲೆ ನಿಮರ್ಿಸಿದರು.
ಸಾಹಿತ್ಯ ಪರಿಷತ್ತಿಗೆ ಪಾದಾರ್ಪಣೆ
      ಹಿಂದಿನಿಂದಲೂ  ಇವರನ್ನೂ ಸಾಹಿತ್ಯ ಆವೃತ್ತಗೊಂಡಿತ್ತು. ಹೀಗೆ ಮಾತನಾಡುತ್ತಾ ಅವರನ್ನು ಸಾಹಿತ್ಯ ಕ್ಷೇತ್ರದತ್ತ ಎಳೆದೆ ಕುವೆಂಪು, ತ.ರಾಸು, ಡಿ.ವಿ.ಜಿ, ರಾಜರತ್ನಂ, ಗೊರೂರು, ಎಸ್.ಕೆ. ಕರೀಂಖಾನ್, ಜ್ವಾಲನಯ್ಯ, ಅನಕೃ ಮುಂತಾದವರ ಮಾರ್ಗದರ್ಶನ ಅವರಿಗಿತ್ತು. ಈಗಲೂ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನೆಯುತ್ತ ಆನಂದ ಭಾಷ್ಪದೊಂದಿಗೆ ನಾನೆಂತಹ ಪುಣ್ಯ ವ್ಯಕ್ತಿ ಎಂದು ಉದ್ಗಾರ ತೆಗೆಯುತ್ತಾರೆ. ಖಂಡಿತಾ ಅವರ ಭಾವುಕತೆ ನನ್ನನ್ನೂ ಒಂದು ಕ್ಷಣ ಉನ್ಮಾದಗೊಳಿಸಿತು.
      ಇವರ ಸಾಮಾಜಿಕ ಹಾಗೂ ಸಾಹಿತ್ಯಿಕ ತುಡಿತ ಯೋಗ ಶಾಲೆಯಿಂದ ಭುವನೇಶ್ವರಿ ಗೂಡಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಕರೆತಂದಿತು. ಕ್ರಿಯಾಶೀಲರಾದ ರಮೇಶ್ರವರಿಗೆ ಯೋಗ ಶಿಕ್ಷಕರಾಗಿ ಸಿಕ್ಕಾ ಜನ ಪ್ರಿಯತೆ ಇಲ್ಲಿಯೂ ಮುಂದುವರೆಯಿತು.
      ಇವರ ಅವಧಿಯಲ್ಲಿ ಹೆಸರಾಂತ ಸಾಹಿತಿಗಳಾದ ಕಿ.ರಂ. ನಾಗರಾಜ, ಬಾನುಮುಷ್ತಾಕ್, ಪ್ರತಿಭಾನ್ವಿತ ವಾಗ್ಮಿಗಳಾದ ಎ.ಎಸ್. ಕಾಳೇಗೌಡ ಮುಂತಾದ ಮಹನೀಯರನ್ನು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ತಾಯಿಯ ರಥವನ್ನು ಎಳೆದರು.
      ಅತ್ಯುತ್ತಮ ಸಂಘಟನಾ ಚಾತುರ್ಯ ಹೊಂದಿದ ರಮೇಶ್ ಈಗಿರುವ ಹೊಯ್ಸಳ ಹೆಬ್ಬಾಗಿಲು, ಹೊಯ್ಸಳ ಲಾಂಛನ, ಬಯಲು ರಂಗಮಂದಿರ, ಧ್ವನಿವರ್ಧಕ ವ್ಯವಸ್ಥೆ ಮುಂತಾದ ಮೂಲ ಸೌಕರ್ಯಗಳನ್ನು ಆರು ಲಕ್ಷಕ್ಕೂ ಅಧಿಕ ಮೌಲ್ಯವುಳ್ಳ ಆಸ್ತಿ ಮಾಡಿ ಪರಿಷತ್ತನ್ನು ಸಿರಿವಂತಗೊಳಿಸಿದ್ದಾರೆ.
       ಪ್ರಸ್ತುತ 80 ವರ್ಷದ ನವ ಯುವಕನಂತೆ ಪ್ರತಿನಿತ್ಯ ಮಹಾರಾಜ ಪಾಕರ್ಿನ ವಿವೇಕಾನಂದ ಯೋಗ ಶಾಲೆಯಲ್ಲಿ ಉಚಿತ ಯೋಗ ತರಬೇತಿ ನೀಡುತ್ತಿರುವ ಈ ಹಿರಿಯ ಜೀವ ಸದಾ ಕ್ರಿಯಾಶೀಲ. ಸುಂದರ ಸಮಾಜದ ನಿಮರ್ಾಣ, ನಿಷ್ಕಲ್ಮಷ ಭಾವ ವಿಚಾರಗಳು ಇವರ ಪ್ರಮುಖ ಗುರಿ. ಗಂಭೀರ ವಿಷಯಗಳ ಚಚರ್ೆಗಳಲ್ಲಿಯೂ ಹಾಸ್ಯದ ಹೊನಲನ್ನು ಹರಿಸುವ ಇವರು ಸದಾ ಹಸನ್ಮಖಿಗಳು. ಇವರ ಸೇವೆ ನಾಡಿಗೆ ಇನ್ನಷ್ಟು ಸಿಗಲಿ ಎಂದು ಆಶಿಸುತ್ತೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ