ಕನ್ನಡಿಗರು ಕನರ್ಾಟಕಕ್ಕೆ ಮಾತ್ರ ಸೀಮಿತವಲ್ಲ, ಅದರಾಚೆಗೂ ತಮ್ಮ ಅಂತರ್ಶಕ್ತಿಯನ್ನು ಹರಿಯ ಬಿಟ್ಟವರು. ಪ್ರಾಜ್ಞತೆಯ ದೃಷ್ಠಿ ನೆಟ್ಟು ಜಗ ಬೆಳಗಿದವರು. ಸಾಹಿತ್ಯ, ಕಲೆ, ವಾಸ್ತುಶಿಲ್ಪಕತೆಗೆ ಕರುನಾಡು ಇಡೀ ವಿಶ್ವವನ್ನೇ ತನ್ನೆಡೆಗೆ ಸೆಳೆದಿದ್ದು ನಮಗೆಲ್ಲರಿಗೂ ಗೊತ್ತೇಯಿದೆ. ಅಂತಹ ಒಂದು ಅಭೂತಪೂರ್ವ ಸಾಧನೆ ಮಾಡಿ ಜಾಗತಿಕ ಸಾಹಿತ್ಯದ ಕಾದಂಬರಿ (ನಾವೆಲ್) ಪ್ರಕಾರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೀತರ್ಿ ರಾಜಾರಾಯರಿಗೆ ಸಲ್ಲುತ್ತದೆ. ಇಂಗ್ಲೀಷ್ ಮತ್ತು ಫ್ರೆಂಚ್ ಸಾಹಿತ್ಯದಲ್ಲಿ ಬಿರುಗಾಳಿ ಎಬ್ಬಿಸಿ ಅಲ್ಲಿನ ಓದುಗರ ಮನದಲ್ಲಿ ನೆಲೆನಿಂತ ಇವರು ಕನ್ನಡಿಗರೆನ್ನುವುದರ ಜೊತೆಗೆ ಹಾಸನದವರೆಂಬ ವಿಷಯ ನಮ್ಮನ್ನೆಲ್ಲಾ ಬಿಗುಮಾನದಲ್ಲಿ ತೇಲಿಸುತ್ತದೆ.
1909 ನವಂಬರ್ 21 ರಂದು ಹಾಸನದಲ್ಲಿ ಜನಿಸಿದ ಇವರು ಹಾಸನದ ರಾಜಾರಾವ್ ಎಂದೇ ಪ್ರಸಿದ್ದರು. ಇವರು ಜನಿಸಿದ ದಿನದಂದೇ ಹಾಸನಕ್ಕೆ ಮೈಸೂರಿನ ಮಹಾರಾಜರು ಬೇಟಿಯಿತ್ತದ್ದರಿಂದ ಇವರಿಗೆ ರಾಜಾ ಎಂಬುದು ಸೇರ್ಪಡೆಯಾಯಿತಂತೆ. ಬಾಲ್ಯದಲ್ಲಿಯೇ ಇವರ ಮಾತಾ ಪಿತೃಗಳು ರಾಮಾಯಾಣ, ಮಹಾಭಾರತ, ಪುರಾಣ ಪುಣ್ಯಕಥೆಗಳನ್ನು ಹೇಳುತ್ತಾ ಅದರಲ್ಲಿ ಭಾರತೀಯ ಸಂಸ್ಕೃತಿ ಹೇಗೆ ಮೇಳೈಸಿಕೊಂಡಿದೆ ಎಂಬುದನ್ನು ತಿಳಿಸುತ್ತಾ ಆದರ್ಶ, ಶ್ರದ್ಧೆ, ಹೃದಯ ವೈಶಾಲ್ಯತೆಗಳನ್ನು ಭಿತ್ತಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ವಯೋಮಾನದಲ್ಲಿಯೇ ರಾಜಾರಾಯರ ಮನಸ್ಸಿನ ಮೇಲೆ ಭಾರತೀಯ ಸಾಂಸ್ಕೃತಿಕ ಪರಂಪರೆ ಬಹಳವೇ ಪ್ರಭಾವ ಬೀರಿದ್ದರಿಂದ ಮುಂದೆ ಅವರ ಸಾಹಿತ್ಯ ರಚನೆಯಲ್ಲಿ ಸಹಜವಾಗಿಯೇ ಪ್ರಜ್ವಲಿತಗೊಂಡವು. 1938 ರಲ್ಲಿ ಬಂದ ಇವರ ಕಾಂತಾಪುರ ಎಂಬ ಕಾದಂಬರಿಯು ಇವರಿಗೆ ಜಾಗತಿಕ ಮನ್ನಣೆ ತಂದು ಕೊಟ್ಟಿತೆನ್ನಬಹುದು. ಭಾರತದ ಆಷರ್ೇಯ ಸಂಸ್ಕೃತಿ ಪರಂಪರೆಗಳಲ್ಲಿ ಅಗಾಧವಾದ ಶ್ರದ್ಧೆ, ನಂಬಿಕೆಯಿಟ್ಟುಕೊಂಡಿದ್ದ ಇವರ ಬರವಣಿಗೆಯ ಬದುಕನ್ನು ಒಳಹೊಕ್ಕು ನೋಡುವ ಶೈಲಿ ಅಮೋಘವಾದುದು. ಅವರ ಸಾಹಿತ್ಯದಲ್ಲಿ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾ ಜಾಗತಿಕವಾಗಿ ಬೆಳಗಿಸಿದವರು. ದೀನ ದಲಿತರಲ್ಲಿ ತಾವು ಕಂಡಂತಹ ಅತ್ಯಂತ ಉತ್ಕೃಷ್ಟ ಮಾನವೀಯ ಅಂಶಗಳನ್ನು, ಶ್ರದ್ಧಾಗುಣಗಳನ್ನು ತಮ್ಮ ಬರವಣಿಗೆಯಲ್ಲಿ ಪರಮೋಚ್ಛ ಸ್ಥಾನ ನೀಡಿ ಆದರ್ಶ ಮಯವಾಗಿಸಿಕೊಂಡಿದ್ದಾರೆ.
ಇಂಗ್ಲೀಷ್ ಮತ್ತು ಇತಿಹಾಸಗಳಲ್ಲಿ ವಿಶೇಷ ಆಸಕ್ತಿಯಿದ್ದ ಇವರು ಇವುಗಳಲ್ಲಿಯೇ ಸ್ನಾತಕೋತ್ತರ ಉನ್ನತ ಶಿಕ್ಷಣ ಪಡೆದು ಸಂಶೋಧನೆಗಾಗಿ ಫ್ರಾನ್ಸ್ಗೆ ತೆರಳುತ್ತಾರೆ. ಅಲ್ಲಿ ವಿದ್ಯಾಭ್ಯಾಸಕ್ಕಿಂತ ಸಾಹಿತ್ಯ ಕ್ಷೇತ್ರವೇ ಇವರನ್ನು ಹೆಚ್ಚು ಆಕರ್ಷಣೆ ಮಾಡುತ್ತದೆ. ಇದೇ ಸಂದರ್ಭದಲ್ಲಿ 1931 ರಲ್ಲಿ ಕೆಮಿಲ್ಲೆ ಮೌಲಿ ಎಂಬ ಫ್ರೆಂಚ್ ಮಹಿಳೆಯನ್ನು ವಿವಾಹವಾದರು. ರಾಜಾರಾಯರ ಜೀವನದ ಬಹುಭಾಗ ಪಾಶ್ಚಾತ್ಯ ದೇಶಗಳಲ್ಲಿಯೇ ಕಳೆದು ಹೋಗಿದೆ. ಕನ್ನಡ, ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಪಾರಂಗತರಾದ ರಾಜಾರಾಯರು ಸಾಹಿತ್ಯ ರಚನೆಗೆ ಆಯ್ದುಕೊಂಡದ್ದು ಇಂಗ್ಲೀಷ್ ಮತ್ತು ಫ್ರೆಂಚನ್ನು ಮಾತ್ರ! ಆದರೂ ಇವರ ಸಾಹಿತ್ಯ ಚೇತನ ನಿರಂತರವಾಗಿ ಸ್ಫೂತರ್ಿ ಪಡೆದದ್ದು ಭಾರತೀಯ ಪರಂಪರೆಯಿಂದ. ಭಾರತೀಯ ಪರಂಪರೆಯ ಸಂಪ್ರದಾಯದ ಗರ್ಭದಲ್ಲಿ ಶಾಶ್ವತ ಮಾನವೀಯ ಮೌಲ್ಯಗಳು ಅಡಗಿವೆ ಎಂಬುದು ರಾಜಾರಾಯರ ನಿಲುವು. ಈ ನಿಲುವಿನ ಮುಂಬೆಳಕಲ್ಲಿ ತಮ್ಮ ಸಾಹಿತ್ಯ ತೇರನ್ನು ಎಳೆತಂದರು. ಬರವಣಿಗೆಯನ್ನೇ ಜೀವಿತದ ಅತ್ಯಮೂಲ್ಯ ಕಾಯಕವೆಂದು ಪರಿಗಣಿಸಿದ್ದ ಇವರಿಗೆ ಭಾರತೀಯ ಮೂಲ ಪರಂಪರೆಗಳಲ್ಲೊಂದಾದ ವೇದಾಂತ ತತ್ವಶಾಸ್ತ್ರಗಳೇ ಉಸಿರಾಗಿ ಬೆಸೆದುಕೊಂಡಿದ್ದವೆಂಬುದು ಗಮನಾರ್ಹ. 1965 ರಲ್ಲಿ ಆಸ್ಟಿನ್ನ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿಯೇ ಜೋನ್ಸ್ ಎಂಬುವವರನ್ನು ವಿವಾಹವಾಗುತ್ತಾರೆ. 1960 ರಲ್ಲಿ ಬಂದ ದಿಕ್ಯಾಟ್ ಅಂಡ್ ಷೇಕ್ಸ್ಪಿಯರ್ ಹಾಗೂ 1965ರಲ್ಲಿ ಬಂದ ಎ ಟೇಲ್ ಆಫ್ ಇಂಡಿಯಾ ಎಂಬ ಕಾದಂಬರಿಗಳು ದಾಖಲೆಯ ಮಾರಾಟವಾದವು. ಅಂತೆಯೇ ಉನ್ನತ ಕೀತರ್ಿಯನ್ನು ತಂದುಕೊಟ್ಟವು. ಇಂಗ್ಲೀಷ್ ಸಾಹಿತ್ಯದಲ್ಲಿ ಅದ್ವಿತೀಯ ಸಾಧನೆಗೈದ ಬೆರಳೆಣಿಕೆಯ ಭಾರತೀಯ ಬರಹಗಾರರಲ್ಲಿ ಹಾಸನದ ರಾಜಾರಾಯರು ಒಬ್ಬರೆಂಬುದು ಹೆಮ್ಮೆಯ ಸಂಗತಿ. ಕೇವಲ ಕಾದಂಬರಿಗೆ ಮಾತ್ರ ಸೀಮಿತವಾಗದ ರಾಜಾರಾಯರು ಭಾರತ ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ಅಂದರೆ 1947ರಲ್ಲಿಯೇ ದಿ ಕೌ ಆಫ್ ದಿ ಬ್ಯಾರಿಕೇಡ್ ಅಂಡ್ ಅದರ್ ಸ್ಟೋರಿಸ್ ಎಂಬ ಸಣ್ಣ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಜಾಗತಿಕ ಪ್ರತಿಷ್ಠಿತ ಇಂಗ್ಲೀಷ್ ಪತ್ರಿಕೆಗಳಲ್ಲಿ ಇವರ ಬರಹ ಹಾಗೂ ಕಥೆಗಳು ಪ್ರಕಟಕೊಂಡಿವೆ. 1948ರಲ್ಲಿ ಖ್ಯಾತ ಬರಹಗಾರರಾದ ಇಕ್ಬಾಲ್ ಸಿಂಗ್ರೊಡನೆ ವಿದರ್ ಇಂಡಿಯಾ ಎಂಬ ಗ್ರಂಥವನ್ನು ಪ್ರಕಟಿಸಿದ ಕೀತರ್ಿ ರಾಜಾರಾಯರದು.
ರಾಜಾರಾಯರಿಗೆ ಜಾಗತಿಕ ಮಟ್ಟದಲ್ಲಿ ಉತ್ಕೃಷ್ಟ ಮನ್ನಣೆ ತಂದುಕೊಟ್ಟದ್ದು ಅವರ ಕಾದಂಬರಿಗಳು. ಅದರಲ್ಲೂ ಕಾಂತಾಪುರ ಎಂದರೆ ಅತಿಶಯೋಕ್ತಿಯಾಗಲಾರದು. ಈ ಕಾದಂಬರಿಯು ಜನ್ಮ ತಾಳಲು ಪರೋಕ್ಷವಾಗಿ ಗಾಂಧಿ ಕಾರಣವೆನ್ನಬಹುದು. ಕಾಂತಾಪುರ ಎಂಬುದು ಒಂದು ಚಿಕ್ಕ ಹಳ್ಳಿ. ಗಾಂಧಿಯ ಅಹಿಂಸಾತ್ಮಕ ಚಳುವಳಿ ಹಾಗೂ ಸರ್ವ ಸಮಾನತೆಯ ಘೋಷಣಾ ವಾಕ್ಯವು ಬಹುಶಃ ಈ ಹಳ್ಳಿಯನ್ನು ಶತಮಾನದ ನಿದ್ರೆಯಿಂದ ಎಚ್ಚರಿಸಿ ಸಾಮಾಜಿಕ ಶೋಷಣೆಯಿಂದ ಮೈಕೊಡವಿ ಏಳುವಂತೆ ಮಾಡಿತೆನ್ನಬಹುದು. ಗಾಂಧೀ ತಾತ್ವಿಕತೆಯ ಪ್ರಭಾವದಿಂದ ಇಡೀ ಹಳ್ಳಿಯೇ ಒಗ್ಗಟ್ಟಿನ ರೂಪ ತಾಳುತ್ತದೆ. ಪ್ರಸ್ತುತ ಕಾದಂಬರಿಯಲ್ಲಿ ಮೂತರ್ಿ, ಪಟೇಲ ರಂಗೇಗೌಡ, ಭಟ್ಟ ಮೊದಲಾದ ಪಾತ್ರಗಳು ತಮ್ಮದೇ ನಿಟ್ಟಿನಲ್ಲಿ ಗಮನ ಸೆಳೆಯುತ್ತವೆ. ಇಲ್ಲಿ ಬಹುಮುಖ್ಯವಾಗಿ ನಾವು ಗಮನಿಸಬೇಕಾದುದ್ದು ಹಾಸನದ ಗ್ರಾಮ್ಯ ಸೊಗಡು. ಇಲ್ಲಿನ ಸಂಸ್ಕೃತಿ, ಸಂಪ್ರದಾಯ, ಹೋರಾಟಗಳಿಗೆ ಜಾಗತಿಕ ಮೌಲ್ಯ ತಂದು ಕೊಟ್ಟ ಕೀತರ್ಿ ರಾಜಾರಾಯರಿಗೆ ಸಲ್ಲುತ್ತದೆ. ಕಾಂತಾಪುರದಲ್ಲಿ ಬರುವ ಪ್ರಮುಖ ಆದರ್ಶಮಯವಾದ ಪಾತ್ರ ಮೂತರ್ಿ. ಅದರಲ್ಲಿ ಲೇಖಕರೇ ತನ್ಮಯರಾಗಿರುವುದನ್ನು ಕಾಣಬಹುದಾಗಿದೆ. ಜೊತೆ ಜೊತೆಗೆ ಪಾತ್ರಕ್ಕೂ ಮತ್ತು ಪರಿಸರದ ನಡುವಿನ ಕಂದರವನ್ನು ಗುರುತಿಸಿರುವ ಲೇಖಕರ ಪ್ರಾಮಾಣಿಕತೆಗೆ ಒಂದು ಸಲಾಂ. ಪಾತ್ರಗಳ ಅಂತರಂಗಿಕ ವಿಶ್ಲೇಷಣೆ ಸಂದರ್ಭದಲ್ಲಿ ಲೇಖಕರು ತಮ್ಮ ಭಾವನ ತುಮುಲಗಳನ್ನು ಹೊರಗೆಡವಿದ ರೀತಿ ಅಮೋಘವಾಗಿದೆ. ಇಲ್ಲಿ ನಿವರ್ಿಕಾರವಾಗಿ ಪಾತ್ರಗಳನ್ನು ಕಟ್ಟಿ ಕೊಟ್ಟಿದ್ದಾರೆ. ಮಾನವೀಯ ನೆಲೆಗಳನ್ನು ಎಲ್ಲೆಲ್ಲಿಯೂ ಒಡಮೂಡಿಸಿದ್ದಾರೆ.
ಕಾಂತಾಪುರ ಕಾದಂಬರಿಯು ಸರಳವಾಗಿ ಕಂಡರೂ ಓದುಗರನ್ನು ಆತ್ಯಾಕರ್ಷಕವಾಗಿ ಸೆಳೆಯುತ್ತಾ ಕೌತುಕತೆಯನ್ನು ಕಾಯ್ದುಕೊಂಡು ಸಾಗುತ್ತದೆ. ಇಲ್ಲಿ ಕಥೆಗಿಂತಲೂ ರಾಜಾರಾಯರ ಬೌದ್ಧಿಕ ಶಕ್ತಿಯ ಚಮತ್ಕಾರ ಅನಾವರಣಗೊಂಡಿರುವುದು ವಿಶೇಷ. ಭಾರತೀಯ ಪರಂಪರೆಯ ಧೀ ಶಕ್ತಿಯಂತೆ ತೋರುವ ಈ ಕಾದಂಬರಿಯು ಸಂವೇದನಾ ಹಾಗೂ ಸೃಜನಾತ್ಮಾಕ ಬರವಣಿಗೆಯಿಂದ ಕೂಡ್ಡಿದ್ದು, ಜಗತ್ತಿಗೆ ಭಿನ್ನವಾದ ಸಂಸ್ಕೃತಿಯನ್ನು ಪರಿಚಯಿಸುವಲ್ಲಿ ಸಫಲವಾಗಿದೆ. ಹಾಗೇ ನೋಡಿದರೆ ಇಂತಹ ಸಾಧನೆಗೈದ ಮೊದಲ ಭಾರತೀಯ ರಾಜಾರಾಯರೆನ್ನಬಹುದು.
ಕನ್ನಡ ನುಡಿಯ ಗತ್ತು, ಗಮ್ಮತ್ತು, ಜಾಯಮಾನ, ಏರಿಳಿತಗಳನ್ನು, ತಲ್ಲಣಗಳನ್ನು ಆಶ್ಚರ್ಯವೆನಿಸುವಷ್ಟು ಸಹಜವಾಗಿ ಆಂಗ್ಲ ಭಾಷೆಯಲ್ಲಿ ಪಡಿ ಮೂಡಿಸಿದ್ದಾರೆ. ಆದ್ದರಿಂದಲೇ ಪ್ರಸಿದ್ಧ ಇಂಗ್ಲೀಷ್ ಲೇಖಕರಾದ ಇ.ಎಂ. ಫಾರಸ್ಟರ್ ಕಾಂತಾಪುರ ಕಾದಂಬರಿ ಓದಿ ಒಂದು ಕಡೆ ಹೀಗೆ ಹೇಳಿದ್ದಾರೆ. ಕಾಂತಾಪುರ ಒಂದು ಉತ್ತಮ ಕಾದಂಬರಿ, ಭಾರತೀಯ ಲೇಖಕನೊಬ್ಬನಿಂದ ಇಂಗ್ಲೀಷ್ ಭಾಷೆಯಲ್ಲಿ ಇದುವರೆವಿಗೂ ಇಂಥ ಕೃತಿ ಬಂದೇ ಇಲ್ಲ.
ದಿ ಸಪರ್ೆಂಟ್ ಅಂಡ್ ದಿ ರೋಪ್ ರಾಜಾರಾಯರ ಕಾಂತಾಪುರದ ನಂತರ ಬಂದ ಮಹತ್ವದ ಕಾದಂಬರಿಯೆನ್ನಬಹುದು. ಕಾಂತಾಪುರದಲ್ಲಿನ ಪ್ರಯೋಗಶೀಲತೆ, ವಿಚಾರ ಹೂರಣ, ಒಲವು ನಿಲುವುಗಳನ್ನು ಈ ಕಾದಂಬರಿಯಲ್ಲಿ ಹೆಚ್ಚಿನ ವೈಶಾಲ್ಯತೆಯನ್ನು ಪಡೆದುಕೊಂಡಿವೆ ಎನ್ನಬಹುದು. ಈ ಕಾದಂಬರಿಯು ಭಾರತ ಹಾಗೂ ಫ್ರೆಂಚ್ ಸಂಸ್ಕೃತಿಯನ್ನು ಮೇಳೈಸಿದೆ. ಭಾರತೀಯನಾದ ರಾಮಸ್ವಾಮಿ ಹಾಗೂ ಫ್ರೆಂಚ್ ಮಹಿಳೆಯಾದ ಮ್ಯಾಡಲೀನರ ನಡುವಣ ಕಥಾ ಹಂದರವನ್ನೊಳಗೊಂಡು ಈ ಕಾದಂಬರಿಯು ಪೂರ್ವ ಪಶ್ಚಿಮಗಳ ಮಿಲನವೆನ್ನುವಂತೆ ಮೂಡಿಬಂದಿದೆ. ಹೀಗೆ ರಾಜಾರಾಯರು ಭಾರತೀಯ ಸಂಸ್ಕೃತಿ ಪರಂಪರೆಯ ಜೊತೆ ಜೊತೆಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ಮಿಳಿತಗೊಳಿಸಿ ಪ್ರಾಂಜಲತೆ ಕಂಡವರು.
ರಾಜಾರಾಯರನ್ನು ಕುರಿತಂತೆ, ಇವರ ಸಾಹಿತ್ಯ ಕುರಿತಂತೆ 1972 ರಲ್ಲಿ ಸಿ.ಡಿ. ನರಸಿಂಹಯ್ಯನವರು ರಾಜಾರಾವ್ ಎ ಕ್ರಿಟಿಕಲ್ ಸ್ಟಡಿ ಆಫ್ ಹಿಸ್ ವಕ್ರ್ಸ ಎಂಬ ಪುಸ್ತಕದಲ್ಲಿ ಅದ್ಭುತವಾಗಿ ವಿಮಶರ್ಿಸಿ, ವಿಶ್ಲೇಷಿಸಿದ್ದಾರೆ. ಹಾಗೆಯೇ ಅದೇ ವರ್ಷದಲ್ಲಿ ಬಂದ ಎಂ.ಎಸ್. ನಾಯಕ್ರವರ ರಾಜಾರಾವ್ ಎಂಬ ಪುಸ್ತಕದಲ್ಲಿ ರಾಜಾರಾಯರ ಧೀಮಂತ ವ್ಯಕ್ತಿತ್ವವನ್ನು ಕಾಣುತ್ತೇವೆ.
1964ರಲ್ಲಿ ರಾಜಾರಾಯರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1969ರಲ್ಲಿ ಭಾರತ ಸಕರ್ಾರ ಇವರ ಸೇವೇಗಾಗಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ