ಭೂತಯ್ಯನ ಮಗ ಅಯ್ಯು ಕನ್ನಡ ಚಲನ ಚಿತ್ರವನ್ನು ಬಹುಷಃ ನೋಡದವರೇ ಇಲ್ಲ! ಸ್ಯಾಂಡಲ್ವುಡ್ನಲ್ಲಿ ಅತ್ಯದ್ಭುತ ಮೈಲುಗಲ್ಲನ್ನು ಸ್ಥಾಪಿಸಿ, ನೇರ ಜನರ ಮನಸಿನೊಳಗೆ ನಾಟಿದ ಕಥೆ. ಅಭಿನವ ಭಾರ್ಗವ ಡಾ. ವಿಷ್ಣು ಅವರಿಗೆ ಬ್ರೇಕ್ ಕೊಟ್ಟ ಚಿತ್ರ. ಇದನ್ನು ಯಾರು ತಾನೇ ಮರೆಯಲು ಸಾಧ್ಯ? ಇಂತಹ ಶ್ರೇಷ್ಠ ಕಥೆ ಬರೆದವರು ಹಾಸನ ಸಮೀಪದ ಗೊರೂರಿನವರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್. ಇವರು ನಮ್ಮ `ಮಲೆನಾಡಿನ ಸೆರಗಿಗೆ' ಸೇರಿದವರು ಎಂಬುದೇ ನಮಗೆ ಹೆಮ್ಮೆ.
ಕೆಲವರು ಕಾವ್ಯದಲ್ಲಿ, ಹಲವರು ವಿಮಶರ್ೆಯಲ್ಲಿ, ಇನ್ನೂ ಕೆಲವರು ರಂಗಭೂಮಿಯಲ್ಲಿ ಶ್ರೇಷ್ಠರೆನಿಸಿದಂತೆಯೇ ನಮ್ಮ ಗೊರೂರರು ಅವರದೇ ಆದ ಪ್ರಕಾರದಲ್ಲಿ ಸೈ ಎನಿಸಿಕೊಂಡವರು; ಕನ್ನಡ ಸಾರಸ್ವತ ಲೋಕದಲ್ಲಿ ಮೈಲುಗಲ್ಲೊಂದನ್ನು ಸ್ಥಾಪಿಸಿದವರು. ಆಧುನಿಕ ಕನ್ನಡ ಗದ್ಯ ಸಾಹಿತ್ಯದ ಆಳ, ವಿಸ್ತಾರ, ವೈವಿದ್ಯ, ವೈಶಿಷ್ಟ್ಯಗಳನ್ನು, ಬದುಕಿನ ಸಮಸ್ಯೆಗಳ ಚಿತ್ರಣವನ್ನು ಹಾಸ್ಯದ ಮೂಲಕ ತೆರೆದು ಶಬ್ದ ಚಿತ್ರಗಳನ್ನಾಗಿ ರೂಪಿಸಿದ ಗೊರೂರರು ಕನ್ನಡದ ಪ್ರಸಿದ್ಧ ಲಲಿತ ಪ್ರಬಂಧಕಾರರಲ್ಲದೆ ಗಾಂಧಿವಾದಿಗಳೂ ಆಗಿದ್ದರು. ತಮ್ಮ ಕೃತಿಗಳಲ್ಲಿ ಬದುಕಿನ ಜಟಿಲ ಸಮಸ್ಯೆಗಳನ್ನೂ ಮಾನವೀಯತೆಯ ನೆಲೆಗಟ್ಟಿನ ಮೇಲೆ ನಿಲ್ಲಿಸಿ ಅದಕ್ಕೆ ಹಾಸ್ಯದ ಸ್ಪರ್ಶ ನೀಡಿ ಗಮನ ಸೆಳೆದವರು. ವೈವಿದ್ಯತೆಯಲ್ಲಿ ಏಕತೆ ಸ್ಥಾಪಿಸಿದ ಕೀತರ್ಿ ಇವರದಾಗಿದೆ.
ಡಾ. ಗೊರೂರರ ತಂದೆ ಅದೇ ಗ್ರಾಮದ ಶ್ರೀನಿವಾಸ ಅಯ್ಯಂಗಾರ್ ಹಾಗೂ ತಾಯಿ ಲಕ್ಷ್ಮಮ್ಮ. ಜನನ-1904 ಜುಲೈ 4. ಡಾ. ಗೊರೂರರು ಗ್ರಾಮೀಣ ಪರಿಸರದಲ್ಲಿ ಆಡಿ ಬೆಳೆದವರು. ಮಣ್ಣಿನೊಂದಿಗೆ ಬೆಸೆದವರು. ಆದ್ದರಿಂದಲೇ ಇವರ ಕೃತಿಗಳಲ್ಲಿ ಗ್ರಾಮೀಣ ಸೊಗಡು ದಟ್ಟವಾಗಿದೆ. ಗೊರೂರರು ನಕ್ಕು ನಗಿಸಿದರು. ತಮ್ಮ ಬರವಣಿಗೆಯ ಮೂಲಕ ಹಾಸ್ಯದ ಹೊನಲನ್ನೇ ಹರಿಯಬಿಟ್ಟರು. `ಹಳ್ಳಿಯ ಚಿತ್ರಗಳು', `ನಮ್ಮ ಊರಿನ ರಸಿಕರು' ಇವೆರಡೂ ಓದುಗರನ್ನು ರಸಾಸ್ವಾದದಲ್ಲಿ ಮುಳುಗಿಸಿ ತೇಲಿಸುತ್ತವೆ. `ಶಾಲು ಸಾಬಿ', `ಶೀನಪ್ಪ ನುಂಗಿದ ಇಡ್ಲಿ' ಇಂಥವುಗಳನ್ನೆಲ್ಲಾ ಓದಿಯೇ ಅವುಗಳ ರುಚಿ ಸವಿಯಬೇಕು!
ಜನಪದೀಯ ಹಿನ್ನೆಲೆಯಲ್ಲಿ ಬೆಳೆದ ಗೊರೂರರು ತಮ್ಮ ಒಂದು ಲಲಿತ ಪ್ರಬಂಧದಲ್ಲಿ ತವರೂರಿನ ಬಗ್ಗೆ ಹೀಗೆ ಹೇಳುತ್ತಾರೆ:
`ಅಂದರ್ಕಲಗೂಡು ಚಂದಕೆ ನರಸೀಪುರ
ಚಿತ್ತರದ ಗೊಂಬೆ ಗೊರವೂರು| ಬೀದಿಯ
ಹದಿನಾರು ತೇರು ಹರಿದಾವೆ||
ಈ ತ್ರಿಪದಿಯಲ್ಲಿ ಗ್ರಾಮದ ಸಾಂಸ್ಕೃತಿಕ ಸಿರಿವಂತಿಕೆಯನ್ನು ತೆರೆದಿಟ್ಟಿದ್ದಾರೆ.
1930 ರಲ್ಲಿ ಪ್ರಕಟವಾದ `ಭಾರತ ಸ್ವಾತಂತ್ರ್ಯ' ಇವರ ಮೊದಲ ಕೃತಿ. 1948 ರಲ್ಲಿ ಬಂದ `ಹೇಮಾವತಿ' ಮೊದಲ ಕಾದಂಬರಿ. `ಮೆರವಣಿಗೆ', `ಭೂತಯ್ಯನ ಮಗ ಅಯ್ಯು', `ಪುನರ್ಜನ್ಮ' ಇವರ ಶ್ರೇಷ್ಠ ಕಾದಂಬರಿಗಳು. `ರಾಜನರ್ತಕಿ', `ಕ್ರೌಂಚ ವಧೆ', `ಭಗವಾನ್ ಕೌಟಿಲ್ಯ', `ಮಲೆನಾಡಿನವರು' ಇವು ಪ್ರಮುಖ ಅನುವಾದಿತ ಕಾದಂಬರಿಗಳು. `ಗರುಡಗಂಬದ ದಾಸಯ್ಯ', `ಬೆಟ್ಟದ ಮನೆಯಲ್ಲಿ', `ಬೈಲಹಳ್ಳಿ ಸವರ್ೆ', `ಹಳೆಪಳೆಯ ಮುಖಗಳು', `ಹಳ್ಳಿಯ ಬಾಳು' ಮುಂತಾದವು ಸ್ಮರಣೀಯ ಲಲಿತ ಪ್ರಬಂಧ ಸಂಕಲನಗಳಾಗಿವೆ. ವಯ್ಯಾರಿ, ಉಸುಬು, ಕಮ್ಮಾರವೀರ, ಭದ್ರಾಚಾರಿ, ಗೋಪುರದ ಬಾಗಿಲು, ಬೆಸ್ತರ ಕರಿಯ, ಶಿವರಾತ್ರಿ, ಕನ್ಯಾಕುಮಾರಿ ಮತ್ತು ಇತರ ಕಥೆಗಳು- ಇವು ಉಲ್ಲೇಖಾರ್ಹ ಕಥಾ ಸಂಕಲನಗಳಾಗಿವೆ. `ಸಾಹಿತ್ಯ ರಶ್ಮಿ' ಎಂಬ ವಿಮಶರ್ಾ ಕೃತಿಯಲ್ಲಿ ಸಾಹಿತ್ಯದ ಅನೇಕ ಮಗ್ಗಲು ಮಜಲುಗಳನ್ನು ವಿವರಿಸಿದ್ದಾರೆ. `ಅಮೆರಿಕದಲ್ಲಿ ಗೊರೂರು' ಇವರ ಸುಪ್ರಸಿದ್ಧ ಪ್ರವಾಸ ಕಥನವಾಗಿದೆ. ಇಡೀ ವಿಶ್ವವೇ ಗೊರೂರಿನ ಕಡೆ ಮುಖ ಮಾಡುವಂತೆ ಮಾಡಿದ ಕೀತರ್ಿ ಈ ಲೇಖಕರದು. ಈ ಕೃತಿಗೆ 1980ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರಿಂದ ಪ್ರಶಸ್ತಿಗೇ ಒಂದು ಗೌರವ ಸಿಕ್ಕಂತಾಯಿತು.
ಇವರ `ಹಳ್ಳಿಯ ಹಾಡುಗಳು' ಹಾಸನ ಜಿಲ್ಲೆಯ ಜನಪದೀಯ ಪ್ರಕಾರವಾದ ತ್ರಿಪದಿಗಳ ಸಂಗ್ರಹವಾಗಿದೆ. ಜನಪದರ ನಿಜವಾದ ನಾಡಿ ಮಿಡಿತಗಳು ಇದರಲ್ಲಿ ಸೊಗಸಾಗಿ ಮಿಳಿತಗೊಂಡಿವೆ ಎನ್ನಬಹುದು.
ಧೀಮಂತ ಸ್ವಾತಂತ್ರ್ಯ ಹೋರಾಟಗಾರರೂ, ಬರಹಗಾರರೂ, ಮಾನವೀಯತೆಯ ಅದಮ್ಯ ಚೇತನವಾಗಿದ್ದ ಗೊರೂರರು ಗಾಂಧಿ ತತ್ವಾದರ್ಶಗಳಿಗೆ ಮಾರು ಹೋಗಿದ್ದರು. ಸತ್ಯ, ನ್ಯಾಯ, ಅಹಿಂಸಾ ಧರ್ಮದಲ್ಲಿ ಅಚಲವಾದ ನಂಬಿಕೆಯಿಟ್ಟಿದ್ದರು. ಪ್ರೌಢಶಾಲಾ ಹಂತದಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ಗಾಂಧೀಜಿ ಸಂಪರ್ಕದಿಂದ ಅವರ ಶಿಷ್ಯರಾದರು. ಸೆರೆ ಮನೆ ವಾಸ ಅನುಭವಿಸಿದರು. ಸಾಮಾಜಿಕ ಬದ್ಧತೆಯ ನೆಲೆಗಟ್ಟಿನಲ್ಲಿ ಬದುಕಿ ಬಾಳಿದ ಗೊರೂರರು ಸಾಹಿತ್ಯ, ಸಮಾಜ, ಜನಪದವನ್ನು ಒಟ್ಟೊಟ್ಟಿಗೇ ಕೊಂಡೊಯ್ದ ಮೇರು ಸಾಧಕ ಎಂದೇ ಹೇಳಬಹುದು.
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಒಂದು ಕಡೆ ಹೀಗೆ ಹೇಳುತ್ತಾರೆ: `ಗೊರೂರರು ತಮ್ಮ ಸತ್ವಯುತವಾದ ಕೃತಿಗಳ ಮೂಲಕ ಶಾಶ್ವತವಾದ ಒಂದು ಚಿನ್ನದ ಪಕ್ಷಿಯಾಗಿದ್ದಾರೆ. ನಮ್ಮ ವಿವೇಕ ತೂಕಡಿಸುವಾಗ ಕೂಗಿ ಎಚ್ಚರಿಸುವ ಶಕ್ತಿಯಾಗಿದ್ದಾರೆ'!
ಗೊರೂರರು ಮೂಲತಃ ವೈಚಾರಿಕ ಪ್ರಜ್ಞೆಯ ಮೂಸೆಯಲ್ಲಿ ಬೆಳೆದವರು. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸಿದವರು. ಜ್ಯೋತಿಷವನ್ನು ಕುರಿತು ಒಂದು ಕಡೆ, ``ನನಗೆ ಯಾವತ್ತೂ ಜ್ಯೋತಿಷ ಶಾಸ್ತ್ರದಲ್ಲಿ ನಂಬಿಕೆಯಿಲ್ಲ; ಭಾರತೀಯರು ಅನೇಕ ಶತಮಾನಗಳಿಂದ ಈ ಶಾಸ್ತ್ರವನ್ನು ರಚಿಸಿ, ರೂಪಿಸಿ, ಪ್ರಯೋಗಿಸಿ, ಅನುಭವಿಸಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಆದರೆ ಗ್ರಹಗಳು ತಮ್ಮ ಕೆಲಸ ಬಿಟ್ಟು ಈ ಜಗತ್ತಿನ ಜನರ ಹಿಂದೆ ತಿರುಗುತ್ತಾ ಅವರ ಕಾರ್ಯಗಳಲ್ಲಿ ತೊಡಗುತ್ತಿವೆ ಎಂಬುದು ನನಗೆ ಅಸಂಬದ್ಧವಾಗಿ ತೋರಿದೆ!''
ಅವರ ಬಗ್ಗೆ ಅವರೇ ಒಂದು ಕಡೆ ಹೀಗೆ ಹೇಳುತ್ತಾರೆ: `ನನ್ನ ಬಾಳನ್ನು ನಾನು ಹಿಂತಿರುಗಿ ನೋಡಿದಾಗ ನಾನು ಸಾಹಿತಿಗಿಂತ ಹೆಚ್ಚಾಗಿ ಜನ ಸಾಮಾನ್ಯರ ಮನುಷ್ಯ. ರಾಜಕೀಯದಲ್ಲಿ ಗಾಂಧೀಜಿಯವರ ಅದಮ್ಯ ಚೇತನ ಶಕ್ತಿ, ತ್ಯಾಗ, ಆದರ್ಶಗಳಿಂದ ಪ್ರೇರಿತನಾಗಿ ಈ ಕ್ಷೇತ್ರದಲ್ಲಿ ನನ್ನಿಂದಾದ ಸೇವೆ ಸಲ್ಲಿಸಲು ಹೊರಟವ. ನಮ್ಮ ದೇಶದ ಜನ ಸಾಮಾನ್ಯರ ಜಾನಪದವೆಂದರೆ ನನಗೆ ಅತ್ಯಂತ ಪ್ರೇಮ. ಭಾರತವನ್ನು ಆಧುನಿಕ ನಾಗರಿಕತೆಯ ಸರ್ವನಾಶದಿಂದ ತಪ್ಪಿಸಬಲ್ಲದು ಅದೊಂದೇ ಎಂಬುದು ನನ್ನ ನಂಬಿಕೆ'.
ಹೀಗೆ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ಬೆಳೆದ ಗೊರೂರರಿಗೆ 1974 ರಲ್ಲಿ ಮೈಸೂರು ವಿ.ವಿ. ಗೌರವ ಡಾಕ್ಟರೇಟ್ ನೀಡಿತು. ಶಿಷ್ಯರು, ಸ್ನೇಹಿತರೆಲ್ಲ ಸೇರಿ 1973 ರಲ್ಲಿ `ಗೊರೂರು ಗೌರವ ಗ್ರಂಥ' ಎಂಬ ಅಭಿನಂದನಾ ಗ್ರಂಥ ಸಮಪರ್ಿಸಿದ್ದಾರೆ. 1967ರಲ್ಲಿ ತರೀಕೆರೆಯಲ್ಲಿ ನಡೆದ ಪ್ರಪ್ರಥಮ ಅಖಲಿ ಕನರ್ಾಟಕ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1982ರಲ್ಲಿ ಶಿರಸಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಇಂತಹ ಸಾಹಿತ್ಯ ವಲ್ಲಭ 1991ರ ಸೆಪ್ಟೆಂಬರ್ 28 ರಂದು ಅಜರಾಮರವಾದರು. ಆದರೆ ತ್ರಿಕಾಲಗಳಲ್ಲೂ ಕನ್ನಡ ಸಾರಸ್ವತ ಲೋಕದಲ್ಲಿ, ಕರುನಾಡ ಜನ ಮಾನಸದಲ್ಲಿ ಅಚ್ಚಳಿಯದೆ ನೆಲೆಯೂರಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ