ಮಂಗಳವಾರ, ಮೇ 27, 2014

ವಿಮರ್ಶೆಯ `ವಚನ' ಪಾಲಿಸಿದವರು ಎಸ್ ವಿ ರಂಗಣ್ಣ

            `ರವಿ ಕಾಣದ್ದನ್ನು ಕವಿ ಕಂಡ' ಎಂಬ ನಾಣ್ಣುಡಿಯನ್ನೇ ಮುಂದುವರೆಸಿ, `....ಕವಿ ಕಾಣದ್ದನ್ನು ವಿಮರ್ಶಕ ಕಂಡ' ಎಂಬ ಕೊಂಕು ನುಡಿ ಇಂದಿನ ವಿಮಶರ್ಾ ಪ್ರಕಾರಕ್ಕೆ ಅಂಟಿಕೊಂಡಿದೆ. ವಿಮರ್ಶಕರಿಗೂ ಸಾಹಿತಿಗಳಿಗೂ ಅಷ್ಟಕ್ಕಷ್ಟೆ! ಮೇಲ್ನೋಟಕ್ಕೆ ಸದ್ಭಾವನೆ, ಗೌರವ ತೋರಿದಂತೆ ಕಂಡರೂ ಸಾಹಿತಿಗಳ ಒಳ ಮನಸ್ಸಿನಲ್ಲಿ ಮಾತ್ರ ವಿಮರ್ಶಕರ ಕುರಿತು `ಒಂಥರಾ' ಭಾವನೆ ಇದ್ದದ್ದೇ!! ಆದರೆ ಎಸ್.ವಿ. ರಂಗಣ್ಣ ಅವರಂಥ ಹಳೆ ತಲೆಮಾರಿನ ಹಿರಿಯ ವಿಮರ್ಶಕರಿಗೆ ಇದೆಲ್ಲಾ ಅನ್ವಯಿಸುವುದಿಲ್ಲ ಬಿಡಿ.
`ಆಧುನಿಕ ವಚನಕಾರ' ಹಾಗೂ ಹೊಸಗನ್ನಡ ಸಾಹಿತ್ಯದಲ್ಲಿ `ವಿಮಶರ್ೆಗೆ ಹೊಸ ದೃಷ್ಟಿಕೋನ' ನೀಡಿದ ಎಸ್.ವಿ. ರಂಗಣ್ಣ ಅವರು ನಮ್ಮ ಹಾಸನ ಜಿಲ್ಲೆಯವರೇ ಎಂಬುದು ಹೆಮ್ಮೆಯ ಸಂಗತಿ. 49ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು ಎಂದು ಪ್ರಶ್ನಿಸಿದರೆ ಹಾಸನದ ಅಂಧ ಯುವಕ ಲೋಕೇಶ್ ಥಟ್ಟನೆ ಎಸ್.ವಿ. ರಂಗಣ್ಣ ಎಂದು ಉತ್ತರಿಸುತ್ತಾನೆ! ಮೂಲತಃ ಸಾಲಗಾಮೆಯವರಾಗಿದ್ದ ಅವರ ಜೀವಿತಾವಧಿ ಕಳೆದ ಶತಮಾನಕ್ಕೆ ಸೇರಿದ್ದರೂ ಸಹ ಕೆಲವು ಸಾಹಿತ್ಯಾತ್ಮಕ ವಿಚಾರಗಳಲ್ಲಿ ಇಂದಿಗೂ ಪ್ರಸ್ತುತರಾಗಿ ನಿಲ್ಲುತ್ತಾರೆ!
ಕನ್ನಡ ಸಾಹಿತ್ಯದ ಕಾವ್ಯ ಪರಂಪರೆಯ ವಿಶಿಷ್ಟ ಪ್ರಕಾರಗಳಲ್ಲಿ `ವಚನ'ವೂ ಒಂದು. ಅದು ಅನುಭಾವ ಗಮ್ಯ ಕಾವ್ಯ ವಾಹಿನಿ. ನಮ್ಮ ಸಂಸ್ಕೃತಿಯಲ್ಲಿ ಸಾಮಾಜಿಕ, ಸಾಹಿತ್ಯಿಕ ಹಾಗೂ ಭಾಷಿಕ ಕ್ರಾಂತಿಯನ್ನುಂಟು ಮಾಡಿದ ಯಶಸ್ಸು ಈ ಪ್ರಕಾರಕ್ಕೆ ಸಲ್ಲುತ್ತದೆ. 12ನೇ ಶತಮಾನದಲ್ಲಿ ಅಸಂಖ್ಯಾತ ವಚನಕಾರರು ತಮ್ಮ ಅನುಭವಗಳನ್ನು ಸಾಹಿತ್ಯಾತ್ಮಕ ರೀತಿಯಲ್ಲಿ ಪ್ರಮಾಣೀಕರಿಸಿ ವಚನಗಳ ಮೂಲಕ ದಾಖಲಿಸಿದ್ದಾರೆ. ಕಾಲಾ ನಂತರ 20ನೇ ಶತಮಾನದಲ್ಲಿಯೂ ಕೆಲವರು ಈ ಪ್ರಕಾರವನ್ನು ಮುಂದುವರೆಸಿ `ಆಧುನಿಕ ವಚನಗಳು' ಹೆಸರಿನಿಂದ ಬರೆದಿದ್ದಾರೆ. ವಿಭಿನ್ನ ತೆರನಾದ ಭಾವ, ವಿಡಂಬನೆ ಮತ್ತು ನೀತಿಯನ್ನು ವಚನಗಳಲ್ಲಿ ಒಡಮೂಡಿಸಿದ್ದಾರೆ. ಅಂತಹವರ ಸಾಲಿನಲ್ಲಿ ಹಾಸನದ ಎಸ್.ವಿ. ರಂಗಣ್ಣ ಅವರು ಪ್ರಮುಖರಾಗಿ ನಿಲ್ಲುತ್ತಾರೆ.
ಎಸ್.ವಿ. ರಂಗಣ್ಣನವರು 1898ರ ಡಿಸೆಂಬರ್ 24 ರಂದು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ಜನಿಸಿದರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ನಾಡಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಾ ಆಧುನಿಕ ವಚನಗಳು ಹಾಗೂ ವಿಮಶರ್ಾ ಕ್ಷೇತ್ರದಲ್ಲಿ ಅಗಾಧವಾದ ಸೇವೆಗೈದಿದ್ದಾರೆ. ಇವರ `ರಂಗಭಿನ್ನಪ' ಎಂಬ ಆಧುನಿಕ ವಚನ ಕೃತಿಯಲ್ಲಿನ ಒಂದು ವಚನ ಹೀಗಿದೆ:
`ಹಣ್ಣು ಬಿಡುವ ಹಣ್ಣು ಕೊಡುವ
ಮರ ಗಿಡಗಳಿಂದ ಪಾಠ ಕಲಿತರೆ
ಮನುಷ್ಯನಿಗೆ ಒಳ್ಳೆಯದಯ್ಯಾ
ದಿಟವಾಗಿ ಒಳ್ಳೆಯದು....'

ನಿತ್ಯ ಕಚ್ಚಾಟ, ಜಗಳ, ಅಸೂಯೆಗಳ ಮಧ್ಯೆ ಬದುಕುತ್ತಿರುವ ಮನುಷ್ಯ ಮರ ಗಿಡಗಳ ಸಾಮರಸ್ಯದಿಂದ ಬದುಕನ್ನು ಕಂಡು ಬದಲಾಗಬೇಕೆಂದು ಕರೆ ಕೊಡುತ್ತಾ ಮುಂದುವರೆದು...
`ಒಂದನ್ನು ಕಂಡು ಇನ್ನೊಂದು
ಕರುಬುವುದಿಲ್ಲ ಖಾರ ನುಡಿ ಆಡುವುದಿಲ್ಲ
ಸಣ್ಣದೋ ದೊಡ್ಡದೋ ಅಂತೂ
ತಮ್ಮ ತಮ್ಮ ಕೊಡುಗೆಯ ಕೊಟ್ಟು
ತಣಿಸುತ್ತವೆ ಪ್ರಾಣಿ ಪಕ್ಷಿಗಳನ್ನು
ಅದೇ ರೀತಿ ಸಣ್ಣದೋ ದೊಡ್ಡದೋ ಅಂತೂ
ಪರೋಪಕಾರ ಮನುಜರಿಂದ ಆದರೆ
ಲೇಸಲ್ಲವೇ ರಂಗನಾಥ?

ಎಂದು ಹಲಸಿನ ಮರ, ತೆಂಗಿನ ಮರ, ದ್ರಾಕ್ಷಿ ಬಳ್ಳಿ, ಕವಳಿ ಗಿಡ, ಚದುರಂಗ ಮುಂತಾದವು ಹೇಗೆ ತಮ್ಮ ಕೈಲಾದಷ್ಟು ಹಣ್ಣು ಹಂಪಲುಗಳನ್ನು ನೀಡಿ ಬೇರೆಯವರ ತಣಿಸುತ್ತವೆ; ಆದರೆ ಮಾನವ ಕೂಡಿಡುವ ದುರಾಸೆಯಲ್ಲಿ ಮುಳುಗಿದ್ದಾನೆ. ಈಗಲಾದರೂ ಗಿಡ ಮರಗಳಂತೆ ಪರೋಪಕಾರ ಬುದ್ದಿ ಕಲಿಯಲಿ ಎಂದು ತಮ್ಮ ಆರಾಧ್ಯ ದೈವ ಶ್ರೀ ರಂಗನಾಥನಲ್ಲಿ ಭಿನ್ನವಿಸುತ್ತಾರೆ.
ಅಷ್ಟಕ್ಕೇ ಸೀಮಿತವಾಗದ ರಂಗಣ್ಣನವರು, ಕನ್ನಡ ವಿಮಶರ್ಾ ಕ್ಷೇತ್ರಕ್ಕೆ ಆವರೆಗೂ ಇಲ್ಲದಿದ್ದ ಒಂದು ಹೊಸ ಆಯಾಮ ತಂದುಕೊಟ್ಟರು. ಇವರು ಶೈಲಿಯ ಸ್ವರೂಪದೊಂದಿಗೆ ಮಾಧ್ಯಮ ಶೈಲಿ, ಸಾಧಾರಣ ಶೈಲಿ ಮುಂತಾದ ಪರಿಕಲ್ಪನೆಗಳನ್ನು ಪರಿಚಯಿಸಿ ಕನ್ನಡದ ಪಂಪನಾದಿಯಾಗಿ ಎಲ್ಲಾ ಮುಖ್ಯ ಪ್ರಾಚೀನ ಕವಿಗಳ ಶೈಲಿಯ ಸ್ವರೂಪವನ್ನು ತಮ್ಮ ಕೃತಿಗಳಲ್ಲಿ ಚಚರ್ಿಸಿದರು. 1944, 1968 ಹಾಗೂ 1971 ರಲ್ಲಿ ಈ ಕುರಿತು ಮೂರು ಸಂಪುಟಗಳು ಬಂದವು.
`ಕಾಳಿದಾಸನ ನಾಟಕ ವಿಮಶರ್ೆ', `ಪಾಶ್ಚಾತ್ಯ ಗಂಭೀರ ನಾಟಕಗಳು,' `ಕವಿ ಕಥಾಮೃತ', ರಂಗ ಭಿನ್ನಪ', `ನಾಟುನುಡಿ', `ಪಾಶ್ಚಾತ್ಯ ಸಾಹಿತ್ಯ ವಿಮಶರ್ೆ' ಇವು ಇವರ ಪ್ರಮುಖ ಗ್ರಂಥಗಳಾಗಿವೆ. ಅಲ್ಲದೆ ಆಂಗ್ಲ ಭಾಷೆಯಲ್ಲಿಯೂ ಹಲವು ಕೃತಿಗಳನ್ನು ರಚಿಸಿದ್ದಾರೆ.
ವಿಮಶರ್ೆಯ ಮೇಲಿನ ಹಿಡಿತ, ಇವರ ಬರವಣಿಗೆಯ ಶೈಲಿ ಮೆಚ್ಚುವಂಥವು. 1956 ರಲ್ಲಿ ಬಂದ ಇವರ `ಹೊನ್ನ ಶೂಲ' ಅಗಾಧ ಪ್ರಶಂಸೆಗೆ ಪಾತ್ರವಾಯಿತು. 1960 ರಲ್ಲಿ ಬಂದ `ವಿಕ್ರಮೋರ್ವಶೀಯ ನಾಟಕದ ವಿಮಶರ್ೆ' ಅವರಿಗೆ ಹೆಚ್ಚಿನ ಮೌಲ್ಯ ತಂದುಕೊಟ್ಟಿತು.
ರಂಗಣ್ಣನವರು `ಉತ್ತರ ಕುಮಾರ' ಹಾಗೂ `ಮಹಿಳೆ ಮತ್ತು ಉಂಗುರ' ಎಂಬ ನಾಟಕಗಳನ್ನೂ ಬರೆದಿದ್ದಾರೆ. ಇವರ `ರಂಗ ಭಿನ್ನಪ' ಕೃತಿಗೆ 1965 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದ್ದು, ಸ್ಕೌಟ್ ಸೇವೆಗಾಗಿ `ರಜತಗಜ' ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವ ವಿದ್ಯಾಲಯವು ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ. 1976 ರಲ್ಲಿ ಶಿವಮೊಗ್ಗದಲ್ಲಿ ನಡೆದ 49ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಂಗಣ್ಣನವರು ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದಾಗ ಇವರ ಗೆಳೆಯರು, ಶಿಷ್ಯರೆಲ್ಲ ಸೇರಿ ಅವರಿಗೆ `ಬಾಗಿನ' ಎಂಬ ಅಭಿನಂದನಾ ಗ್ರಂಥ ಅಪರ್ಿಸಿದ್ದಾರೆ.
ಮನುಷ್ಯ ಸಂಬಂಧಗಳನ್ನು ಭಾವನೆಗಳನ್ನು ಬೆಸೆದು, ಅರಳಿಸುವ ಕೆಲಸ ಮಾಡದೇ ಕೆರಳಿಸುವ ಕೆಲಸದಲ್ಲಿ ನಿರಂತರ ತೊಡಗಿ ಯುವ ಜನಾಂಗವನ್ನು ದಿಕ್ಕು ತಪ್ಪಿಸುತ್ತಿರುವ ಪ್ರಸ್ತುತ ಸಂದರ್ಭ ನೆನೆದರೆ ದಿಗಿಲಾಗದಿರದು. ಸ್ವಸ್ಥ ಸಮಾಜದ ಅಗತ್ಯತೆಯ ಜರೂರು ಇದೆ. ಇದಕ್ಕೆಲ್ಲ ಪೂರಕವಾಗಿ ಅಂದು, ಇಂದು, ಮುಂದೂ ಗುರುವಾಗಿ ಸನ್ಮಾರ್ಗಕ್ಕೆ ತರುವಂತಹ ಗುರುತರ ಹೊಣೆ ವಚನ ಸಾಹಿತ್ಯದ ಮೇಲಿದೆ.
1987 ಫೆಬ್ರವರಿ 17 ರಂದು ಅಜರಾಮರವಾದ ಎಸ್.ವಿ. ರಂಗಣ್ಣ ಎಂಬ ಸಾಹಿತ್ಯ ಚೇತನ ಇಂದು, ಮುಂದು, ಎಂದೆಂದೂ ತನ್ನ ವಿವೇಕಯುತ ಸಾಹಿತ್ಯದಿಂದಾಗಿ ಪ್ರಜ್ಞಲಿಸುತ್ತಲೇ ಇರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ