ನೆಲಮೂಲ ಸಂಸ್ಕೃತಿಯ ಬೇರುಗಳನ್ನು ,ಅದರ ರೆಂಬೆ ಕೊಂಬೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಗ್ರಾಮೀಣ ಸಂಸ್ಕೃತಿಯು ಪಸರಿಸುವ ಕಾಯಕದಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಜಾನಪದ ಅಧ್ಯಯನ, ಸಂಗ್ರಹ, ವಿಮಶರ್ೆ, ಜನ ಜೀವನದ ಸ್ಥಿತ್ಯಂತರಗಳು, ಬದುಕಿನ ತಲ್ಲಣಗಳನ್ನು ಆಳವಾಗಿ ಚಿಂತಿಸಿ, ಮಂಥಿಸುತ್ತಾ ಬಂದಿರುವ ಜಾನಪದ ಪರಿಚಾರಕ ಯಾರು ಗೊತ್ತೇ? ಅವರೇ ಜಾನಪದ ಮನೋಧಮರ್ಿ ಹಂಪಾಪುರದ ಲಕ್ಕಪ್ಪಗೌಡರು.
ಎಚ್.ಜೆ. ಲಕ್ಕಪ್ಪಗೌಡರು 1939ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹಂಪಾಪುರದಲ್ಲಿ ಜನಿಸಿದ ಇವರು ಗ್ರಾಮೀಣ ಬದುಕಿನ ಚಿತ್ರಣಗಳ ಜೊತೆಗೆ ಪರೋಪಕಾರ ಬದುಕಿನ ಸಾರ್ಥಕ್ಯವನ್ನು ಕಟ್ಟಿ ಕೊಟ್ಟಿದ್ದಾರೆ. ಕನ್ನಡ ನಾಡು ಕಂಡಂತಹ ಪ್ರತಿಭಾನ್ವಿತ ಧೀಮಂತ ವ್ಯಕ್ತಿತ್ವ ಲಕ್ಕಪ್ಪಗೌಡರು. ಕನ್ನಡ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ತಮ್ಮ ಕಾಯಕದ ಮೂಲಕ ಸ್ಮರಣೀಯ ಹೆಜ್ಜೆ ಗುರುತುಗಳನ್ನು ಮೂಡಿಸಿದರು. ಗ್ರಾಮೀಣ ಬದುಕಿನ ಸೊಗಡನ್ನೇ ಸಾಹಿತ್ಯದ ಆಂತರ್ಯವಾಗಿಸಿಕೊಂಡು ಸೃಜನಾತ್ಮಾಕವಾಗಿ ಲೇಖನಿ ಹರಿಯಬಿಟ್ಟು ದಿಟ್ಟ ಬರಹಗಾರರಾಗಿ ಹೊರಹೊಮ್ಮಿದ ಅಧಮ್ಯ ಚೇತನ ಲಕ್ಕಪ್ಪಗೌಡರು. ಹಳ್ಳಿಯ ಸಂಸ್ಕೃತಿ, ಆಚಾರ-ವಿಚಾರ, ಬದುಕು -ಬವಣೆಗಳೇ ಅವರ ಅಂತಸ್ಸತ್ತ್ವಗಳಾಗಿ ರೂಪು ಕಂಡವು. ಇವರ ಬರಹಗಳಲ್ಲಿ ಸಾಕು ಪ್ರಾಣಿಗಳು, ಪಕ್ಷಿಗಳು, ಗಿಡ-ಮರಗಳು, ಗುಡ್ಡ- ಬೆಟ್ಟಗಳು ಸಂದಭರ್ೋಚಿತವಾಗಿ ಪಾತ್ರಗಳಾಗಿ ಕಣ್ತೆರೆದುಕೊಂಡಿವೆ. ಶೂದ್ರ ಜಗತ್ತಿನ ಬದುಕಿನ ಪಾತ್ರ, ಘಟನೆಗಳನ್ನು ಹೆಣೆದ ಇವರ ಕಥೆಗಳು ಕನ್ನಡ ಕಥಾ ಸಾಹಿತ್ಯ ಕ್ಷೇತ್ರಕ್ಕೆ ಮೈಲುಗಲ್ಲಾಗಿ ನವೀನ ರೀತಿಯಲ್ಲಿ ಸೇರ್ಪಡೆಗೊಂಡವೆಂದು ಹೇಳಬಹುದು.
ಜಾನಪದ ಎಂದರೆ ಮೂಗು ಮುರಿಯುವ ಅನೇಕ ಸಾಹಿತಿಗಳು ನಮ್ನಿಮ್ಮ ಮಧ್ಯೆ ಹಲವರು ಇದ್ದಾರೆ. ಆದರೆ ಕಳೆಗುಂದುತ್ತಿರುವ ಸಮಯದಲ್ಲಿ ಜಾನಪದ ಸಂಗ್ರಹ ಮತ್ತು ಸಂಪಾದನೆಯ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಅದರಂತೆ ಕಾಯರ್ೋನ್ಮುಖರಾಗಿ ಕನ್ನಡ ಜಾನಪದ ಸಾಹಿತ್ಯ ಕಣಜಕ್ಕೆ ಹಸಿವ ನೀಗಿಸಿದರು ಲಕ್ಕಪ್ಪಗೌಡರೆಂದರೆ ಅತಿಶಯೋಕ್ತಿಯಾಗಲಾರದು.
ಗೌಡರು 1971 ರಲ್ಲಿ ಹೊರತಂದ 'ಜನಪದ ಕಥಾವಳಿ' ಹಾಗೂ 1973 ರಲ್ಲಿ ಪ್ರಕಟಿಸಿದ ಒಗಟುಗಳು ಮುಂತಾದ ಕೃತಿಗಳು ಜಾನಪದ ಲೋಕದಲ್ಲಿ ಅದ್ಭುತ ಸಂಚಲನ ಮೂಡಿಸಿದವು. ಆ ಕಾಲ ಘಟ್ಟದಲ್ಲಿ ಬಂದ ಅತ್ಯಾಮೂಲ್ಯ ಜಾನಪದ ಕಥಾ ಸಂಕಲನಗಳಲ್ಲಿ 'ಜನಪದ ಕಥಾವಳಿ' ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಜನಪದ ಮಾತುಗಾರಿಕೆ, ನುಡಿಗಟ್ಟುಗಳು, ಕಾಲಕ್ರಮಣಿಕೆಯ ಘಟನೆಗಳು ಆಕರ್ಷಕವಾಗಿ ಮೂಡಿ ಬಂದಿದೆ. ಪ್ರಸ್ತುತ ಕೃತಿಯು ಓದುಗರಿಗೂ , ವಿದ್ವಾಂಸರಿಗೂ, ವಿಮರ್ಶಕರಿಗೂ, ಅಗತ್ಯವಾಗಿ ಬೇಕಾದ ಕೃತಿಯಾಗಿದ್ದು ಓದುಗನಿಗೆ ಸಂತಸ ನೀಡಿದರೆ, ವಿದ್ವಾಂಸನಿಗೆ ಜ್ಞಾನ ಭಂಡಾರವಾಗಿ ಪರಿಣಮಿಸುತ್ತದೆ. ಸಾಂಸ್ಕೃತಿಕ ಜೀವನದ ಮೇಲೂ ಬೆಳಕು ಬೀರುವುದರಿಂದ ಇದು ಜಾನಪದ ಸಾಹಿತ್ಯಕ್ಕೊಂದು ಆಶಾಕಿರಣವೆನ್ನಬಹುದು.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಇವರು 'ಶ್ರೀ ರಾಮಾಯಣ ದರ್ಶನಂ - ಒಂದು ವಿಮರ್ಶನಾರ್ತಕ ಅಧ್ಯಯನ' ಎಂಬ ಬೃಹತ್ ಗ್ರಂಥವನ್ನು ರಚಿಸಿ ಪಿ. ಎಚ್.ಡಿ ಪದವಿ ಪಡೆದಿದ್ದಾರೆ.
ಲಕ್ಕಪ್ಪಗೌಡರು ಸಾಹಿತ್ಯದ ಕೇವಲ ಒಂದು ಮಗ್ಗುಲಿಗೆ ಅಂಟಿಕೊಳ್ಳದೇ ಕಥೆ, ಕಾವ್ಯ, ನಿಬಂಧ, ವಿಮಶರ್ೆ, ಜಾನಪದ ,ಸಂಗ್ರಹ, ಜೀವನ ಚರಿತ್ರೆ ಹೀಗೆ ಹಲವಾರು ಕವಲುಗಳಲ್ಲಿ ಸಾಗಿ ಗುರಿ ಸಾಧಿಸಿದ ಬಹುಮುಖ ಪ್ರತಿಭೆಯ ಸೃಜನಾತ್ಮಕ ಲೇಖಕರಾಗಿದ್ದಾರೆ. ವಸಂತಗೀತ, ಊರ ಮುಂದಿನ ಬಾವಿ- ಕವನ ಸಂಕಲನಗಳು; ದಲಿತಸೂರ್ಯ, ಸಿದ್ಧರಾಮ- ಜೀವನ ಚರಿತ್ರೆಗಳು; ಸಂಗಮ , ಅಂತರಂಗ- ವಿಮಶರ್ಾ ಕೃತಿಗಳು; ಜಾನಪದ ಕಥಾವಳಿ, ಇಬ್ಬನಿ, ಒಗಟು -ಜಾನಪದ ಕೃತಿಗಳು ; ಪದ್ದು-ಹದ್ದು, ಧೀನ ಬಂದು-ಮಕ್ಕಳ ಕೃತಿಗಳು.
ಹೀಗೆ ಲಕ್ಕಪ್ಪಗೌಡರು ಕನ್ನಡ ಸಾಹಿತ್ಯದ ಅತ್ಯಾಮೂಲ್ಯ ಕವಿ, ವಿಮರ್ಶಕ, ಕಥೆಗಾರ, ಸಂಪಾದನಕಾರರಾಗಿ ನಮ್ಮೆದುರಿಗೆ ನಿಲ್ಲುತ್ತಾರೆ. ವಿಶೇಷವಾಗಿ ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಗೌಡರು ಪ್ರಮುಖರಾಗಿದ್ದಾರೆ.
'ನಾಡು-ನುಡಿಯ' ಹಲವಾರು ಸಂಘಟನೆಗಳಲ್ಲಿ ಸದಸ್ಯರಾಗಿ , ಪದಾಧಿಕಾರಿಯಾಗಿ ಹಗಲಿರುಳೆನ್ನದೇ ದಣಿವರಿಯದೇ ದುಡಿದವರು. ನಾಡಿಗೆ, ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸಂಸ್ಕೃತಿ ಸೇವೆ ಅನನ್ಯವಾದದು. ಹಾಗೆಯೇ ಹಲವಾರು ವಿದ್ಯಾಸಂಸ್ಥೆ , ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತಾತ್ಮಕವಾಗಿ ಸಲ್ಲಿಸಿದ ಇವರ ಸೇವೆ ಅನುಕರಣೀಯ ಹಾಗೂ ಅನುಪಮವಾದುದು. ನಾಡಿನಾದ್ಯಾಂತ ಸುತ್ತಿ ಅನೇಕ ಜಾನಪದ ಪ್ರತಿಭೆಗಳನ್ನು ಅನ್ವೇಷಿಸಿ, ಅವರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿ , ಮುಖ್ಯ ವಾಹಿನಿಗೆ ತಂದ ಕೀತರ್ಿ ಗೌಡರಿಗೆ ಸಲ್ಲುತ್ತದೆ. ಅವರಿಗೆ ಅವರದೇ ಬೃಹತ್ ಶಿಷ್ಯ ವೃಂದ ಬಳಗ, ಅಭಿಮಾನಿಗಳ ಬಳಗ, ಸ್ನೇಹ ಬಳಗವಿದ್ದು ಜಾನಪದ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿವೆ.
ಗೌಡರ ಸಂಪಾದಕತ್ವದಲ್ಲಿ 'ಜಾನಪದ ಗಂಗೋತ್ರಿ' ಹಾಗೂ 'ಜಾನಪದ ಸಮಾಚಾರ' ಎಂಬ ನಿಯತಕಾಲಿಕೆಗಳು ಅದ್ಭುತವಾಗಿ ಮೂಡಿ ಬಂದವು. ವಿದ್ವಾಂಸರಲ್ಲಿ ಬಹುಮುಖ ವ್ಯಕ್ತಿತ್ವ ಗುತರ್ಿಸಿ ಅಂತಹವರ ಪತ್ರಿಕೆಗಾಗಿ ಸಕಾರಾತ್ಮಕವಾಗಿ ದುಡಿಸಿಕೊಂಡರು. ಅಷ್ಟೇ ಗೌರವಯುತವಾಗಿ ನಡೆಸಿಕೊಂಡರು. ಬದಲಾಗುತ್ತಿರುವ ಸಂದರ್ಭಕ್ಕೆ ಹೇಗೆ ಸಾಗಬೇಕೆಂಬುದನ್ನು ಚೆನ್ನಾಗಿ ಅರಿತಿದ್ದ ಲಕ್ಕಪ್ಪಗೌಡರು ಆಧುನಿಕತೆಗೂ ದಕ್ಕೆ ಬಾರದಂತೆ ಪುರಾತನ ಸಂಸ್ಕೃತಿಯ ಪ್ರತೀಕವಾದ ಜಾನಪದವನ್ನು ಸೊಗಸಾಗಿ ಕಟ್ಟಿ ಬೆಳೆಸಿದರು. ಸುಜ್ಞಾನದ ಬೀಜವನ್ನು ಬಿತ್ತಿ ಬೆಳೆದರು.
ಕನ್ನಡ ನಾಡು ನುಡಿಗೆ ತಮ್ಮದೇ ಆದ ಅವಿಸ್ಮರಣೀಯ ಕೊಡುಗೆ ನೀಡಿದ ಲಕ್ಕಪ್ಪಗೌಡರಿಗೆ ದೇವರಾಜ ಬಹದ್ದೂರ್ ಬಹುಮಾನ, ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾದವುಗಳು ಸಂದಿವೆ ಸದ್ಯ ಮೈಸೂರಿನಲ್ಲಿ ತಮ್ಮ ವಿಶ್ರಾಂತಿ ಜೀವನ ನಡೆಸುತ್ತಿರುವ ಇವರ ಉಸಿರು ಜನಪದವೇ ಆಗಿದೆ.
ಎಚ್.ಜೆ. ಲಕ್ಕಪ್ಪಗೌಡರು 1939ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹಂಪಾಪುರದಲ್ಲಿ ಜನಿಸಿದ ಇವರು ಗ್ರಾಮೀಣ ಬದುಕಿನ ಚಿತ್ರಣಗಳ ಜೊತೆಗೆ ಪರೋಪಕಾರ ಬದುಕಿನ ಸಾರ್ಥಕ್ಯವನ್ನು ಕಟ್ಟಿ ಕೊಟ್ಟಿದ್ದಾರೆ. ಕನ್ನಡ ನಾಡು ಕಂಡಂತಹ ಪ್ರತಿಭಾನ್ವಿತ ಧೀಮಂತ ವ್ಯಕ್ತಿತ್ವ ಲಕ್ಕಪ್ಪಗೌಡರು. ಕನ್ನಡ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ತಮ್ಮ ಕಾಯಕದ ಮೂಲಕ ಸ್ಮರಣೀಯ ಹೆಜ್ಜೆ ಗುರುತುಗಳನ್ನು ಮೂಡಿಸಿದರು. ಗ್ರಾಮೀಣ ಬದುಕಿನ ಸೊಗಡನ್ನೇ ಸಾಹಿತ್ಯದ ಆಂತರ್ಯವಾಗಿಸಿಕೊಂಡು ಸೃಜನಾತ್ಮಾಕವಾಗಿ ಲೇಖನಿ ಹರಿಯಬಿಟ್ಟು ದಿಟ್ಟ ಬರಹಗಾರರಾಗಿ ಹೊರಹೊಮ್ಮಿದ ಅಧಮ್ಯ ಚೇತನ ಲಕ್ಕಪ್ಪಗೌಡರು. ಹಳ್ಳಿಯ ಸಂಸ್ಕೃತಿ, ಆಚಾರ-ವಿಚಾರ, ಬದುಕು -ಬವಣೆಗಳೇ ಅವರ ಅಂತಸ್ಸತ್ತ್ವಗಳಾಗಿ ರೂಪು ಕಂಡವು. ಇವರ ಬರಹಗಳಲ್ಲಿ ಸಾಕು ಪ್ರಾಣಿಗಳು, ಪಕ್ಷಿಗಳು, ಗಿಡ-ಮರಗಳು, ಗುಡ್ಡ- ಬೆಟ್ಟಗಳು ಸಂದಭರ್ೋಚಿತವಾಗಿ ಪಾತ್ರಗಳಾಗಿ ಕಣ್ತೆರೆದುಕೊಂಡಿವೆ. ಶೂದ್ರ ಜಗತ್ತಿನ ಬದುಕಿನ ಪಾತ್ರ, ಘಟನೆಗಳನ್ನು ಹೆಣೆದ ಇವರ ಕಥೆಗಳು ಕನ್ನಡ ಕಥಾ ಸಾಹಿತ್ಯ ಕ್ಷೇತ್ರಕ್ಕೆ ಮೈಲುಗಲ್ಲಾಗಿ ನವೀನ ರೀತಿಯಲ್ಲಿ ಸೇರ್ಪಡೆಗೊಂಡವೆಂದು ಹೇಳಬಹುದು.
ಜಾನಪದ ಎಂದರೆ ಮೂಗು ಮುರಿಯುವ ಅನೇಕ ಸಾಹಿತಿಗಳು ನಮ್ನಿಮ್ಮ ಮಧ್ಯೆ ಹಲವರು ಇದ್ದಾರೆ. ಆದರೆ ಕಳೆಗುಂದುತ್ತಿರುವ ಸಮಯದಲ್ಲಿ ಜಾನಪದ ಸಂಗ್ರಹ ಮತ್ತು ಸಂಪಾದನೆಯ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಅದರಂತೆ ಕಾಯರ್ೋನ್ಮುಖರಾಗಿ ಕನ್ನಡ ಜಾನಪದ ಸಾಹಿತ್ಯ ಕಣಜಕ್ಕೆ ಹಸಿವ ನೀಗಿಸಿದರು ಲಕ್ಕಪ್ಪಗೌಡರೆಂದರೆ ಅತಿಶಯೋಕ್ತಿಯಾಗಲಾರದು.
ಗೌಡರು 1971 ರಲ್ಲಿ ಹೊರತಂದ 'ಜನಪದ ಕಥಾವಳಿ' ಹಾಗೂ 1973 ರಲ್ಲಿ ಪ್ರಕಟಿಸಿದ ಒಗಟುಗಳು ಮುಂತಾದ ಕೃತಿಗಳು ಜಾನಪದ ಲೋಕದಲ್ಲಿ ಅದ್ಭುತ ಸಂಚಲನ ಮೂಡಿಸಿದವು. ಆ ಕಾಲ ಘಟ್ಟದಲ್ಲಿ ಬಂದ ಅತ್ಯಾಮೂಲ್ಯ ಜಾನಪದ ಕಥಾ ಸಂಕಲನಗಳಲ್ಲಿ 'ಜನಪದ ಕಥಾವಳಿ' ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಜನಪದ ಮಾತುಗಾರಿಕೆ, ನುಡಿಗಟ್ಟುಗಳು, ಕಾಲಕ್ರಮಣಿಕೆಯ ಘಟನೆಗಳು ಆಕರ್ಷಕವಾಗಿ ಮೂಡಿ ಬಂದಿದೆ. ಪ್ರಸ್ತುತ ಕೃತಿಯು ಓದುಗರಿಗೂ , ವಿದ್ವಾಂಸರಿಗೂ, ವಿಮರ್ಶಕರಿಗೂ, ಅಗತ್ಯವಾಗಿ ಬೇಕಾದ ಕೃತಿಯಾಗಿದ್ದು ಓದುಗನಿಗೆ ಸಂತಸ ನೀಡಿದರೆ, ವಿದ್ವಾಂಸನಿಗೆ ಜ್ಞಾನ ಭಂಡಾರವಾಗಿ ಪರಿಣಮಿಸುತ್ತದೆ. ಸಾಂಸ್ಕೃತಿಕ ಜೀವನದ ಮೇಲೂ ಬೆಳಕು ಬೀರುವುದರಿಂದ ಇದು ಜಾನಪದ ಸಾಹಿತ್ಯಕ್ಕೊಂದು ಆಶಾಕಿರಣವೆನ್ನಬಹುದು.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಇವರು 'ಶ್ರೀ ರಾಮಾಯಣ ದರ್ಶನಂ - ಒಂದು ವಿಮರ್ಶನಾರ್ತಕ ಅಧ್ಯಯನ' ಎಂಬ ಬೃಹತ್ ಗ್ರಂಥವನ್ನು ರಚಿಸಿ ಪಿ. ಎಚ್.ಡಿ ಪದವಿ ಪಡೆದಿದ್ದಾರೆ.
ಲಕ್ಕಪ್ಪಗೌಡರು ಸಾಹಿತ್ಯದ ಕೇವಲ ಒಂದು ಮಗ್ಗುಲಿಗೆ ಅಂಟಿಕೊಳ್ಳದೇ ಕಥೆ, ಕಾವ್ಯ, ನಿಬಂಧ, ವಿಮಶರ್ೆ, ಜಾನಪದ ,ಸಂಗ್ರಹ, ಜೀವನ ಚರಿತ್ರೆ ಹೀಗೆ ಹಲವಾರು ಕವಲುಗಳಲ್ಲಿ ಸಾಗಿ ಗುರಿ ಸಾಧಿಸಿದ ಬಹುಮುಖ ಪ್ರತಿಭೆಯ ಸೃಜನಾತ್ಮಕ ಲೇಖಕರಾಗಿದ್ದಾರೆ. ವಸಂತಗೀತ, ಊರ ಮುಂದಿನ ಬಾವಿ- ಕವನ ಸಂಕಲನಗಳು; ದಲಿತಸೂರ್ಯ, ಸಿದ್ಧರಾಮ- ಜೀವನ ಚರಿತ್ರೆಗಳು; ಸಂಗಮ , ಅಂತರಂಗ- ವಿಮಶರ್ಾ ಕೃತಿಗಳು; ಜಾನಪದ ಕಥಾವಳಿ, ಇಬ್ಬನಿ, ಒಗಟು -ಜಾನಪದ ಕೃತಿಗಳು ; ಪದ್ದು-ಹದ್ದು, ಧೀನ ಬಂದು-ಮಕ್ಕಳ ಕೃತಿಗಳು.
ಹೀಗೆ ಲಕ್ಕಪ್ಪಗೌಡರು ಕನ್ನಡ ಸಾಹಿತ್ಯದ ಅತ್ಯಾಮೂಲ್ಯ ಕವಿ, ವಿಮರ್ಶಕ, ಕಥೆಗಾರ, ಸಂಪಾದನಕಾರರಾಗಿ ನಮ್ಮೆದುರಿಗೆ ನಿಲ್ಲುತ್ತಾರೆ. ವಿಶೇಷವಾಗಿ ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಗೌಡರು ಪ್ರಮುಖರಾಗಿದ್ದಾರೆ.
'ನಾಡು-ನುಡಿಯ' ಹಲವಾರು ಸಂಘಟನೆಗಳಲ್ಲಿ ಸದಸ್ಯರಾಗಿ , ಪದಾಧಿಕಾರಿಯಾಗಿ ಹಗಲಿರುಳೆನ್ನದೇ ದಣಿವರಿಯದೇ ದುಡಿದವರು. ನಾಡಿಗೆ, ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸಂಸ್ಕೃತಿ ಸೇವೆ ಅನನ್ಯವಾದದು. ಹಾಗೆಯೇ ಹಲವಾರು ವಿದ್ಯಾಸಂಸ್ಥೆ , ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತಾತ್ಮಕವಾಗಿ ಸಲ್ಲಿಸಿದ ಇವರ ಸೇವೆ ಅನುಕರಣೀಯ ಹಾಗೂ ಅನುಪಮವಾದುದು. ನಾಡಿನಾದ್ಯಾಂತ ಸುತ್ತಿ ಅನೇಕ ಜಾನಪದ ಪ್ರತಿಭೆಗಳನ್ನು ಅನ್ವೇಷಿಸಿ, ಅವರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿ , ಮುಖ್ಯ ವಾಹಿನಿಗೆ ತಂದ ಕೀತರ್ಿ ಗೌಡರಿಗೆ ಸಲ್ಲುತ್ತದೆ. ಅವರಿಗೆ ಅವರದೇ ಬೃಹತ್ ಶಿಷ್ಯ ವೃಂದ ಬಳಗ, ಅಭಿಮಾನಿಗಳ ಬಳಗ, ಸ್ನೇಹ ಬಳಗವಿದ್ದು ಜಾನಪದ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿವೆ.
ಗೌಡರ ಸಂಪಾದಕತ್ವದಲ್ಲಿ 'ಜಾನಪದ ಗಂಗೋತ್ರಿ' ಹಾಗೂ 'ಜಾನಪದ ಸಮಾಚಾರ' ಎಂಬ ನಿಯತಕಾಲಿಕೆಗಳು ಅದ್ಭುತವಾಗಿ ಮೂಡಿ ಬಂದವು. ವಿದ್ವಾಂಸರಲ್ಲಿ ಬಹುಮುಖ ವ್ಯಕ್ತಿತ್ವ ಗುತರ್ಿಸಿ ಅಂತಹವರ ಪತ್ರಿಕೆಗಾಗಿ ಸಕಾರಾತ್ಮಕವಾಗಿ ದುಡಿಸಿಕೊಂಡರು. ಅಷ್ಟೇ ಗೌರವಯುತವಾಗಿ ನಡೆಸಿಕೊಂಡರು. ಬದಲಾಗುತ್ತಿರುವ ಸಂದರ್ಭಕ್ಕೆ ಹೇಗೆ ಸಾಗಬೇಕೆಂಬುದನ್ನು ಚೆನ್ನಾಗಿ ಅರಿತಿದ್ದ ಲಕ್ಕಪ್ಪಗೌಡರು ಆಧುನಿಕತೆಗೂ ದಕ್ಕೆ ಬಾರದಂತೆ ಪುರಾತನ ಸಂಸ್ಕೃತಿಯ ಪ್ರತೀಕವಾದ ಜಾನಪದವನ್ನು ಸೊಗಸಾಗಿ ಕಟ್ಟಿ ಬೆಳೆಸಿದರು. ಸುಜ್ಞಾನದ ಬೀಜವನ್ನು ಬಿತ್ತಿ ಬೆಳೆದರು.
ಕನ್ನಡ ನಾಡು ನುಡಿಗೆ ತಮ್ಮದೇ ಆದ ಅವಿಸ್ಮರಣೀಯ ಕೊಡುಗೆ ನೀಡಿದ ಲಕ್ಕಪ್ಪಗೌಡರಿಗೆ ದೇವರಾಜ ಬಹದ್ದೂರ್ ಬಹುಮಾನ, ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾದವುಗಳು ಸಂದಿವೆ ಸದ್ಯ ಮೈಸೂರಿನಲ್ಲಿ ತಮ್ಮ ವಿಶ್ರಾಂತಿ ಜೀವನ ನಡೆಸುತ್ತಿರುವ ಇವರ ಉಸಿರು ಜನಪದವೇ ಆಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ