ಗುರುವಾರ, ಮೇ 29, 2014
ಮಂಗಳವಾರ, ಮೇ 27, 2014
ಜಾನಪದ ಖಣಜ ಡಾ|| ಹಂಪನಹಳ್ಳಿ ತಿಮ್ಮೇಗೌಡರು
ಒಂದು ಕಡೆ ಇಂಗ್ಲೀಷ್, ಒಂದು ಕಡೆ ಕನ್ನಡ ಹಾಗೇ ಇನ್ನಿತರ ಭಾಷೆಗಳ ರಮ್ಯ ಸಾಹಿತಿಗಳು ಕಲಾವಿದರು ಒಪ್ಪುವಂತೆ, ಕಲೆ ಜನಸಾಮಾನ್ಯನ ಬಗ್ಗೆ ಇರಬೇಕು. ಮತ್ತೆ ಕಲೆ ಜನ ಸಾಮಾನ್ಯನಿಗೆ ತಿಳಿಯಬೇಕು. ನಿಜ ಅದಕ್ಕೆ ತಕ್ಕಂತೆ ಜನ ಸಾಮಾನ್ಯರೂ ಸಹ ಸ್ಪಂದಿಸಬೇಕು. ಇದು ಕೇವಲ ಆಸ್ಥಾನ ಪಂಡಿತರಿಗೆ ಎನ್ನುವಂತೆ ಮಾತ್ರ ಆಗಬಾರದು. ಆದರೆ ಇನ್ನೊಂದು ಕಡೆ ಕಲೆಯಲ್ಲಿ ನಾವಿನ್ಯತೆ ಇರಬೇಕು. ಈ ನಾವಿನ್ಯತೆ ಕಾರಣವಾಗಿ ಕಲೆ ಕೇವಲ ಪ್ರತಿಷ್ಠಿತರ ಸೊತ್ತಾದರೆ ಅದನ್ನು ಜನ ಸಾಮಾನ್ಯರ ಬಳಿಗೆ ಒಯ್ಯತಕ್ಕಂತ ಆ ಒಂದು ಉದ್ದೇಶ ಎಲ್ಲಿ ಸಾರ್ಥಕವಾಗುತ್ತೆ ? ಇದೇ ಪ್ರಶ್ನೆ ಕಾಡಿದ್ದು ಹಾಸನ ಜಿಲ್ಲೆಯ ಅತ್ಯಂತ ವಿಶಿಷ್ಟವಾದ ಹಾಗೂ ಅತ್ಯಂತ ಶ್ರೇಷ್ಠ ಕೆಲಸ ಮಾಡುತ್ತಿರುವ ಡಾ|| ಹಂಪನಹಳ್ಳಿ ತಿಮ್ಮೇಗೌಡರಿಗೆ.
ನಮ್ಮ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪಾರಂಪರಗತವಾದ ಜ್ಞಾನಿ-ಅಜ್ಞಾನಿಗಳು, ಅಕ್ಷರಸ್ಥರು-ನಿರಕ್ಷರಕುಕ್ಷಿಗಳೂ ಕೂಡ ಸ್ಪಂದಿಸತಕ್ಕಂತಹ ಜಾನಪದ ಕಲೆಯನ್ನು ಸುಧಾರಿಸಿ, ಅದರ ಬಗ್ಗೆ ಒಂದು ಅದ್ಭುತ ಕಲ್ಪನೆ ಮಾಡಿಸಿದ್ದು ತಿಮ್ಮೇಗೌಡರು. ಪ್ರಾಯಶಃ ನನಗೆ ತಿಳಿದ ಹಾಗೆ ಜಿಲ್ಲೆಯಲ್ಲಿ ಮೊಟ್ಟ ಮೊದಲು ಜನಪದ ಕ್ಷೇತ್ರದಲ್ಲಿ ಗ್ರಂಥ ರಚಿಸಿದವರೆಂದರೆ ಜಾನಪದ ಜಂಗಮ ಡಾ|| ಎಸ್.ಕೆ ಕರೀಂಖಾನ್ ಹಾಗೂ ಡಾ|| ರಾಜೇಗೌಡ ಹೊಸಳ್ಳಿ ಇವರ ನಂತರ ಈ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಾ ಜೊತೆ ಜೊತೆಗೆ ಜಾನಪದದ ಸೊಗಡನ್ನ ಉಣಬಡಿಸುವಂತ ಕೃತಿಗಳನ್ನು ರಚಿಸಿದವರೆಂದರೆ ತಿಮ್ಮೇಗೌಡರು. ಇವರು ಜನಿಸಿದ್ದು ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ಹಂಪನಹಳ್ಳಿಯಲ್ಲಿ, 1957 ಮೇ-18 ರಂದು. ಇವರ ತಂದೆ ಮೂಡಲಗಿರಿಗೌಡ, ತಾಯಿ ಶ್ರೀಮತಿ ಚನ್ನಮ್ಮ. ನಿರಕ್ಷರ ಕುಟುಂಬದಲ್ಲಿ ಜನಿಸಿದ ಇವರು ಚಿಕ್ಕಂದಿನಿಂದಲೇ ಹೋರಾಟದ ಬದುಕಿನೊಂದಿಗೆ ಬೆಳೆದು ಬಂದವರು. ಹುಟ್ಟೂರಾದ ಹಂಪನಹಳ್ಳಿಯಲ್ಲಿ ಕಿರಿಯ ಪ್ರಾಥಮಿಕ, ಹೆರಗುನಲ್ಲಿ ಹಿರಿಯ ಪ್ರಾಥಮಿಕ ಹಾಗೂ 12 ಕಿ.ಮೀ ದೂರದಲ್ಲಿದ್ದ ಶಾಂತಿಗ್ರಾಮಕ್ಕೆ ದಿನಾಲೂ ಕಾಲುನಡಿಗೆಯಲ್ಲೇ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ಹಾಸನದ ಕಲಾ ಕಾಲೇಜಿನಲ್ಲಿ ಪಿ.ಯು.ಸಿ ಯಿಂದ ಬಿ.ಎ ಪದವಿ ಪಡೆದು ಮೈಸೂರು ಮಾನಸ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಪಿ.ಹೆಚ್.ಡಿ ಪದವಿ ಪಡೆದರು. ನಂತರ ತಾವು ಓದಿದ ಕಾಲೇಜಿನಲ್ಲೇ ಉಪನ್ಯಾಸಕರಾಗಿ ಸೇವೆ ಆರಂಭಿಸಿದರು. ಇಷ್ಟೇ ಅಲ್ಲದೇ ಜಾನಪದ ಸಾಹಿತ್ಯ, ಸಾಹಿತ್ಯ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.
ಹಾಸನ ಜಿಲ್ಲಾ ಸಾಂಸ್ಕೃತಿಕ ವೇದಿಕೆ ಪ್ರಾರಂಭ ಮಾಡಿದವರಲ್ಲಿ ಅಗ್ರಮಾನ್ಯರಾಗಿದ್ದಾರೆ. ಜೊತೆಗೆ ಈ ಸಂಸ್ಥೆಯ ಪ್ರಧಾನ ಕಾರ್ಯದಶರ್ಿಯಾಗಿ ಎರಡು ವರ್ಷ ಕಾಯರ್ೊನ್ಮುಖಗೊಂಡು ಸುಮಾರು 36 ಅದ್ದೂರಿ ಹಾಗೂ ಅರ್ಥಗಭರ್ಿತ ಸಮಾರಂಭಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ. ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ, ಜಾನಪದ ಅಕಾಡೆಮಿಯಿದೆಯೆಂದು ಇಡೀ ಜಿಲ್ಲೆಗೆ ತೋರಿಸಿ ಕೊಟ್ಟವರೆಂದರೆ ತಿಮ್ಮೇಗೌಡರು. ಮೂಲ ಜಾನಪದ ಸೊಗಡನ್ನು ಬಿಂಬಿಸುವಂತಹ ತಂಬೂರಿ ಕಲಾವಿದರಾದ ಲಕ್ಷ್ಮಯ್ಯ, ಕೀಲು ಕುದುರೆ ಬಂಗಾರಿ, ಅರಸೀಕೆರೆ ಕೊಮಾರಯ್ಯ, ಇಬ್ಬೀಡು ಚನ್ನಪ್ಪ ಇವರುಗಳಿಗೆ ಅಕಾಡೆಮಿಯ ಬೆಳ್ಳಿಹಬ್ಬ ಸಂದರ್ಭದಲ್ಲಿ ಅಕಾಡೆಮಿ ರಾಜ್ಯ ಪ್ರಶಸ್ತಿ ಬರುವಲ್ಲಿ ಶ್ರಮಿಸಿದರು. ಇದೇ ಸಂದರ್ಭದಲ್ಲಿ ಪ್ರತಿ ಜಿಲ್ಲೆಗೆ ಒಬ್ಬ ಕಲಾವಿದ ಮತ್ತು ಒಬ್ಬ ವಿದ್ವಾಂಸರನ್ನು ಗೌರವಿಸುವ ಅವಕಾಶವಿದ್ದಾಗ ಹಾಸನ ಜಿಲ್ಲೆಗೆ ಬೆಳ್ಳಿಹಬ್ಬದ ಪ್ರಶಸ್ತಿಯನ್ನು ಹೆಚ್.ಜೆ. ಲಕ್ಕಪ್ಪಗೌಡ, ಹಿ.ಶಿ ರಾಮಚಂದ್ರೇಗೌಡ, ಡಾ|| ರಾಜೇಗೌಡ ಹೊಸಹಳ್ಳಿ, ಮೇಟಿಕೆರೆ ಹಿರಿಯಣ್ಣ, ಕಬ್ಬಳಿ ವೆಂಕಟರಾಮು ಹಾಗೂ ಶಿವನಗೌಡ ಪಾಟೀಲ್ ಹೀಗೆ ಆರು ಜನರಿಗೆ ಸಂದಲು ಇವರೇ ಕಾರಣಕರ್ತರೆನ್ನುವುದು ಹೆಮ್ಮೆಯ ಸಂಗತಿ.
ದೇಶದಾದ್ಯಂತ ಹಲವಾರು ಸಭೆ, ಸಮ್ಮೇಳನ, ಕಮ್ಮಟಗಳಲ್ಲಿ ಭಾಗವಹಿಸಿ ಅನುಭವಗಳಿಸಿಕೊಂಡ ಇವರು ಹಲವಾರು ಕಮ್ಮಟಗಳಿಗೆ ಸ್ವತಃ ನಿದರ್ೇಶಕರಾಗಿ ದುಡಿದಿದ್ದಾರೆ. ಜಾನಪದ ಸಾಹಿತ್ಯ ಅಕಾಡೆಮಿಯ ಸಹ ಯೋಗದಲ್ಲಿ ಜಾನಪದ ಶಿಬಿರ ಏರ್ಪಡಿಸಿ, ಅದರ ನಿದರ್ೇಶಕರಾಗಿಯೂ ಕೆಲಸ ಮಾಡಿದರು. ನಿಜಕ್ಕೂ ವಿವಿಧ ಅನ್ನಿಸುವ ವಿಷಯಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ, ಭಿನ್ನ ಮಗ್ಗಲುಗಳಿಂದ ವಿವೇಚಿಸಿ, ವಿಶ್ಲೇಷಿಸಿ, ವಿಮಶರ್ಿಸಿ ಸಾರಭೂತವಾಗಿ ಅಡಕಗೊಳಿಸಿ ಬರೆದ ಜಾನಪದ ಸೊಗಡಿನ ಬರಹಗಳು ಸಂಕ್ಷೇಪ ಅನ್ನಿಸಿದರೂ ನಿಕ್ಷೇಪದಂಥವು. ಅದರಲ್ಲಿಯೂ ಅವರ ಗದ್ಯ ಬರವಣಿಗೆ ಶೈಲಿ ಅದ್ಭುತ. ನಿಷ್ಠ್ಟುರ ವ್ಯಕ್ತಿತ್ವ ಹೊಂದಿದ ತಿಮ್ಮೇಗೌಡರು ಒಬ್ಬ ನೇರವಾದಿ. ತಮ್ಮದೇ ಸಿದ್ಧಾಂತ, ತತ್ವಗಳಿಗೆ ಬದ್ಧರಾಗಿ ಬಾಳಿದವರು, ಹಾಗೆಯೇ ಬಾಳುವವರೂ ಸಹ. ಜಾತಿ ವ್ಯವಸ್ಥೆಯ ಬಗ್ಗೆ ಸಿಡಿದೆದ್ದವರು. ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹಗಲಿರುಳು ದುಡಿದವರೆಂದರೆ ಅತಿಶಯೋಕ್ತಿಯಾಗಲಾರದು.
ಸದಾ ವೈಚಾರಿಕ ಚಿಂತನೆ ನಡೆಸುವ ಇವರು ಅದೆಷ್ಟೋ ಎಲೆ-ಮರೆ ಕಾಯಿಗಳನ್ನು ಮುಖ್ಯವಾಹಿನಿಗೆ ತಂದಿದ್ದಾರೆ. ಸಹಸ್ರಾರು ಶಿಷ್ಯ ವೃಂದವನ್ನು ಹೊಂದಿರುವ ಇವರು ಸಾಂಸ್ಕೃತಿಕ ಪರವಾದ ಚಿಂತಕರು. ನೂರಾರು ಕಲಾವಿದರನ್ನು ಮುಂಬೈ, ದೆಹಲಿ ಮುಂತಾದ ಅನೇಕ ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲಿ ಅವಕಾಶಗಳನ್ನು ಕೊಡಿಸುವುದರ ಮೂಲಕ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಜೊತೆ ಜೊತೆಗೆ ನನ್ನಂತಹ ಅನೇಕ ಯುವ ಸಾಹಿತಿಗಳಿಗೂ ಮಾರ್ಗದರ್ಶನ ಕೊಟ್ಟು ಮುನ್ನಡೆಸಿದ್ದಾರೆ. ದೇಶದ ವಿವಿಧೆೆಡೆಯಲ್ಲಿ ಅಂದರೆ ದೆಹಲಿ, ಇಂಧೂರ್, ಮುಂಬೈಯಲ್ಲಿ ನಡೆದ ಅನೇಕ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಕೀತರ್ಿ ಇವರದು. ಕನರ್ಾಟಕದ ಬಹುಶಃ ಎಲ್ಲಾ ಜಿಲ್ಲೆಗಳಲ್ಲೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಬಂಧಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಇವರದು. ಇವರ ಲೇಖನಗಳು ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಹಾಗೂ ಅನೇಕ ಸಂಚಿಕೆಗಳಲ್ಲಿಯೂ ಪ್ರಕಟಗೊಂಡಿವೆ.
್ಡ ಉಡುಪಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾನೂನು ಗೋಷ್ಠ್ಟಿಯಲ್ಲಿ ಪಾಲ್ಗೊಂಡಿದ್ದರು.
್ಡ ಬೀದರ್ನಲ್ಲಿ ನಡೆದ ಅಖಿಲ ಭಾರತ ಪ್ರಥಮ ಜಾನಪದ ಸಮ್ಮೇಳನದ ಆಹ್ವಾನಿತರಾಗಿ ಹಾಗೂ 'ಲೋಕಸಿರಿ' ನೆನಪಿನ ಸಂಚಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ.
್ಡ ಬೆಳಗಾವಿಯಲ್ಲಿ ನಡೆದ 3ನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಜೀವನಾವರ್ತನ ಗೀತೆಗಳು' ಎನ್ನುವ ಇವರ ಕೃತಿ ಬಿಡುಗಡೆಯಾಗಿದೆ.
್ಡ ಸಿರಿಗೆರೆಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸ್ವಾಮೀಜಿಯವರಿಂದ ಸನ್ಮಾನಗೊಂಡಿದ್ದಾರೆ.
ಇವರ ಪ್ರಕಟಿತ ಕೃತಿಗಳು
ಗದ್ಯ ಕೃತಿಗಳು :-
ಮನನ, ಗುರುಮುಖ, ಹಿರಿಮೆಯ ಹಾಸನ, ಹಾಸನ ಜಿಲ್ಲೆಯ ಜಾನಪದ ಕಲಾವಿದರು, ಕದಿರು
ವ್ಯಕ್ತಿ ಪರಿಚಯಗಳು :-
ಮತಿಘಟ್ಟ ಕೃಷ್ಣಮೂತರ್ಿ, ಡಾ|| ಹೆಚ್.ಜೆ ಲಕ್ಕಪ್ಪಗೌಡ, ಡಾ|| ರಾಜೇಗೌಡ ಹೊಸಳ್ಳಿ.
ಸಂಪಾದಿತ ಕೃತಿಗಳು :-
ಜಾನಪದ ತಲೆಮಾರು -4, ಜಾನಪದ ಅಡುಗೆ ಉದ್ಯಮೀಕರಣ, ಜಾನಪದ ಜೀವನಾವರ್ತನ ಗೀತೆಗಳು.
ಇತರರೊಂದಿಗೆ ಸಂಪಾದಿತ ಕೃತಿಗಳು :-
ಜಾನಪದ ಸಮಾಚಾರ, ವಜ್ರಮುಖಿ. ಸಾಹಿತ್ಯ ಮಾರ್ಗ-1, ಸಾಹಿತ್ಯ ಮಾರ್ಗ-2, ಕಾವ್ಯ ಸಂಚಯ-5, ಕಾವ್ಯ ಸಂಚಯ-6, ಆಯ್ದ ಕವನಗಳು, ಸಾಹಿತ್ಯ ಸಂಪದ-1, ಸಾಹಿತ್ಯ ಸಂಪದ-2.
ಸಂಪಾದಿತ ಸಂಚಿಕೆಗಳು :- ಹೇಮಸಿರಿ, ಬೆಳ್ಳಿಬೆಳಕು, ಕಲಾಶ್ರೀ.
ಒಟ್ಟಾರೆ ಹೇಳುವುದಾದರೆ ಸೃಜನಶೀಲವಾದುದರಲ್ಲೆ ಶೋಧವೂ ನಿಹಿತವಿರುತ್ತದೆ-ಅರ್ಥದ ಶೋಧ, ತತ್ವದ ಶೋಧ, ಸತ್ಯದ ಶೋಧ, ಶಾಸ್ತ್ರೀಯ ನೆಲೆಯ ಸಂಶೋಧನೆಗೂ ಇವೇ ಗಮ್ಯವಾಗಿವೆ. ಹುಡುಕುವುದು, ಕಂಡುಹಿಡಿಯುವುದು, ಸೋಸುವುದು, ಶುದ್ಧಿ ಮಾಡುವುದು ಶೋಧನೆಯ ಪ್ರಕ್ರಿಯೆಗಳು. ಸಾಹಿತ್ಯದಲ್ಲಿ ಸಂಸ್ಕೃತಿಯ ಶೋಧನೆಯೂ ನಡೆಯುತ್ತದೆ. ಸಾಹಿತ್ಯ ಮತ್ತು ಸಂಶೋಧನೆ ಭಿನ್ನ ಶಿಸ್ತಿನ ವಿಷಯವಾಗಬಹುದಾಗಿಯೂ ಪರಸ್ಪರವಾದವು, ಸೃಜನಶೀಲ ಲೇಖಕರಾದ ಡಾ|| ಹಂಪನಹಳ್ಳಿ ತಿಮ್ಮೇಗೌಡರಲ್ಲಿ ಇವು ಮೇಳೈಸಿವೆ. ಅಭ್ಯಾಸ ಎನ್ನುವುದು ಸವಿನಯ ಅಧ್ಯಯನ, ಶ್ರದ್ಧೆಯ ಮಾತು. ಸತ್ಯಮುಖಿಯಾದವರಿಗೆ ಇಂಥ ವಿನಯ ಅಧ್ಯಯನದಲ್ಲಿ ಸಹಜವಾಗಿರುತ್ತದೆ. ವಿಷಯ, ವಿಶೇಷತೆಗಳನ್ನು ಪರಿಚಯಿಸಿಕೊಳ್ಳುವ ಪರಿಯನ್ನು ಇವರ ಗ್ರಂಥಗಳಲ್ಲಿ ಗಮನಿಸಬಹುದಾಗಿದೆ. ಇವರ ಸಾಹಿತ್ಯ ಸೇವೆ ಹಾಸನಕ್ಕೆ ಮಾತ್ರ ಮೀಸಲಾಗಿರದೆ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೂ ಹರಡಿ ಧೀಮಂತವಾಗಲಿ ಎಂದು ಆಶಿಸುತ್ತೇನೆ.
ನಮ್ಮ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪಾರಂಪರಗತವಾದ ಜ್ಞಾನಿ-ಅಜ್ಞಾನಿಗಳು, ಅಕ್ಷರಸ್ಥರು-ನಿರಕ್ಷರಕುಕ್ಷಿಗಳೂ ಕೂಡ ಸ್ಪಂದಿಸತಕ್ಕಂತಹ ಜಾನಪದ ಕಲೆಯನ್ನು ಸುಧಾರಿಸಿ, ಅದರ ಬಗ್ಗೆ ಒಂದು ಅದ್ಭುತ ಕಲ್ಪನೆ ಮಾಡಿಸಿದ್ದು ತಿಮ್ಮೇಗೌಡರು. ಪ್ರಾಯಶಃ ನನಗೆ ತಿಳಿದ ಹಾಗೆ ಜಿಲ್ಲೆಯಲ್ಲಿ ಮೊಟ್ಟ ಮೊದಲು ಜನಪದ ಕ್ಷೇತ್ರದಲ್ಲಿ ಗ್ರಂಥ ರಚಿಸಿದವರೆಂದರೆ ಜಾನಪದ ಜಂಗಮ ಡಾ|| ಎಸ್.ಕೆ ಕರೀಂಖಾನ್ ಹಾಗೂ ಡಾ|| ರಾಜೇಗೌಡ ಹೊಸಳ್ಳಿ ಇವರ ನಂತರ ಈ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಾ ಜೊತೆ ಜೊತೆಗೆ ಜಾನಪದದ ಸೊಗಡನ್ನ ಉಣಬಡಿಸುವಂತ ಕೃತಿಗಳನ್ನು ರಚಿಸಿದವರೆಂದರೆ ತಿಮ್ಮೇಗೌಡರು. ಇವರು ಜನಿಸಿದ್ದು ಹಾಸನ ತಾಲ್ಲೂಕಿನ ದುದ್ದ ಹೋಬಳಿಯ ಹಂಪನಹಳ್ಳಿಯಲ್ಲಿ, 1957 ಮೇ-18 ರಂದು. ಇವರ ತಂದೆ ಮೂಡಲಗಿರಿಗೌಡ, ತಾಯಿ ಶ್ರೀಮತಿ ಚನ್ನಮ್ಮ. ನಿರಕ್ಷರ ಕುಟುಂಬದಲ್ಲಿ ಜನಿಸಿದ ಇವರು ಚಿಕ್ಕಂದಿನಿಂದಲೇ ಹೋರಾಟದ ಬದುಕಿನೊಂದಿಗೆ ಬೆಳೆದು ಬಂದವರು. ಹುಟ್ಟೂರಾದ ಹಂಪನಹಳ್ಳಿಯಲ್ಲಿ ಕಿರಿಯ ಪ್ರಾಥಮಿಕ, ಹೆರಗುನಲ್ಲಿ ಹಿರಿಯ ಪ್ರಾಥಮಿಕ ಹಾಗೂ 12 ಕಿ.ಮೀ ದೂರದಲ್ಲಿದ್ದ ಶಾಂತಿಗ್ರಾಮಕ್ಕೆ ದಿನಾಲೂ ಕಾಲುನಡಿಗೆಯಲ್ಲೇ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ಹಾಸನದ ಕಲಾ ಕಾಲೇಜಿನಲ್ಲಿ ಪಿ.ಯು.ಸಿ ಯಿಂದ ಬಿ.ಎ ಪದವಿ ಪಡೆದು ಮೈಸೂರು ಮಾನಸ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಪಿ.ಹೆಚ್.ಡಿ ಪದವಿ ಪಡೆದರು. ನಂತರ ತಾವು ಓದಿದ ಕಾಲೇಜಿನಲ್ಲೇ ಉಪನ್ಯಾಸಕರಾಗಿ ಸೇವೆ ಆರಂಭಿಸಿದರು. ಇಷ್ಟೇ ಅಲ್ಲದೇ ಜಾನಪದ ಸಾಹಿತ್ಯ, ಸಾಹಿತ್ಯ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.
ಹಾಸನ ಜಿಲ್ಲಾ ಸಾಂಸ್ಕೃತಿಕ ವೇದಿಕೆ ಪ್ರಾರಂಭ ಮಾಡಿದವರಲ್ಲಿ ಅಗ್ರಮಾನ್ಯರಾಗಿದ್ದಾರೆ. ಜೊತೆಗೆ ಈ ಸಂಸ್ಥೆಯ ಪ್ರಧಾನ ಕಾರ್ಯದಶರ್ಿಯಾಗಿ ಎರಡು ವರ್ಷ ಕಾಯರ್ೊನ್ಮುಖಗೊಂಡು ಸುಮಾರು 36 ಅದ್ದೂರಿ ಹಾಗೂ ಅರ್ಥಗಭರ್ಿತ ಸಮಾರಂಭಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ. ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ, ಜಾನಪದ ಅಕಾಡೆಮಿಯಿದೆಯೆಂದು ಇಡೀ ಜಿಲ್ಲೆಗೆ ತೋರಿಸಿ ಕೊಟ್ಟವರೆಂದರೆ ತಿಮ್ಮೇಗೌಡರು. ಮೂಲ ಜಾನಪದ ಸೊಗಡನ್ನು ಬಿಂಬಿಸುವಂತಹ ತಂಬೂರಿ ಕಲಾವಿದರಾದ ಲಕ್ಷ್ಮಯ್ಯ, ಕೀಲು ಕುದುರೆ ಬಂಗಾರಿ, ಅರಸೀಕೆರೆ ಕೊಮಾರಯ್ಯ, ಇಬ್ಬೀಡು ಚನ್ನಪ್ಪ ಇವರುಗಳಿಗೆ ಅಕಾಡೆಮಿಯ ಬೆಳ್ಳಿಹಬ್ಬ ಸಂದರ್ಭದಲ್ಲಿ ಅಕಾಡೆಮಿ ರಾಜ್ಯ ಪ್ರಶಸ್ತಿ ಬರುವಲ್ಲಿ ಶ್ರಮಿಸಿದರು. ಇದೇ ಸಂದರ್ಭದಲ್ಲಿ ಪ್ರತಿ ಜಿಲ್ಲೆಗೆ ಒಬ್ಬ ಕಲಾವಿದ ಮತ್ತು ಒಬ್ಬ ವಿದ್ವಾಂಸರನ್ನು ಗೌರವಿಸುವ ಅವಕಾಶವಿದ್ದಾಗ ಹಾಸನ ಜಿಲ್ಲೆಗೆ ಬೆಳ್ಳಿಹಬ್ಬದ ಪ್ರಶಸ್ತಿಯನ್ನು ಹೆಚ್.ಜೆ. ಲಕ್ಕಪ್ಪಗೌಡ, ಹಿ.ಶಿ ರಾಮಚಂದ್ರೇಗೌಡ, ಡಾ|| ರಾಜೇಗೌಡ ಹೊಸಹಳ್ಳಿ, ಮೇಟಿಕೆರೆ ಹಿರಿಯಣ್ಣ, ಕಬ್ಬಳಿ ವೆಂಕಟರಾಮು ಹಾಗೂ ಶಿವನಗೌಡ ಪಾಟೀಲ್ ಹೀಗೆ ಆರು ಜನರಿಗೆ ಸಂದಲು ಇವರೇ ಕಾರಣಕರ್ತರೆನ್ನುವುದು ಹೆಮ್ಮೆಯ ಸಂಗತಿ.
ದೇಶದಾದ್ಯಂತ ಹಲವಾರು ಸಭೆ, ಸಮ್ಮೇಳನ, ಕಮ್ಮಟಗಳಲ್ಲಿ ಭಾಗವಹಿಸಿ ಅನುಭವಗಳಿಸಿಕೊಂಡ ಇವರು ಹಲವಾರು ಕಮ್ಮಟಗಳಿಗೆ ಸ್ವತಃ ನಿದರ್ೇಶಕರಾಗಿ ದುಡಿದಿದ್ದಾರೆ. ಜಾನಪದ ಸಾಹಿತ್ಯ ಅಕಾಡೆಮಿಯ ಸಹ ಯೋಗದಲ್ಲಿ ಜಾನಪದ ಶಿಬಿರ ಏರ್ಪಡಿಸಿ, ಅದರ ನಿದರ್ೇಶಕರಾಗಿಯೂ ಕೆಲಸ ಮಾಡಿದರು. ನಿಜಕ್ಕೂ ವಿವಿಧ ಅನ್ನಿಸುವ ವಿಷಯಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ, ಭಿನ್ನ ಮಗ್ಗಲುಗಳಿಂದ ವಿವೇಚಿಸಿ, ವಿಶ್ಲೇಷಿಸಿ, ವಿಮಶರ್ಿಸಿ ಸಾರಭೂತವಾಗಿ ಅಡಕಗೊಳಿಸಿ ಬರೆದ ಜಾನಪದ ಸೊಗಡಿನ ಬರಹಗಳು ಸಂಕ್ಷೇಪ ಅನ್ನಿಸಿದರೂ ನಿಕ್ಷೇಪದಂಥವು. ಅದರಲ್ಲಿಯೂ ಅವರ ಗದ್ಯ ಬರವಣಿಗೆ ಶೈಲಿ ಅದ್ಭುತ. ನಿಷ್ಠ್ಟುರ ವ್ಯಕ್ತಿತ್ವ ಹೊಂದಿದ ತಿಮ್ಮೇಗೌಡರು ಒಬ್ಬ ನೇರವಾದಿ. ತಮ್ಮದೇ ಸಿದ್ಧಾಂತ, ತತ್ವಗಳಿಗೆ ಬದ್ಧರಾಗಿ ಬಾಳಿದವರು, ಹಾಗೆಯೇ ಬಾಳುವವರೂ ಸಹ. ಜಾತಿ ವ್ಯವಸ್ಥೆಯ ಬಗ್ಗೆ ಸಿಡಿದೆದ್ದವರು. ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹಗಲಿರುಳು ದುಡಿದವರೆಂದರೆ ಅತಿಶಯೋಕ್ತಿಯಾಗಲಾರದು.
ಸದಾ ವೈಚಾರಿಕ ಚಿಂತನೆ ನಡೆಸುವ ಇವರು ಅದೆಷ್ಟೋ ಎಲೆ-ಮರೆ ಕಾಯಿಗಳನ್ನು ಮುಖ್ಯವಾಹಿನಿಗೆ ತಂದಿದ್ದಾರೆ. ಸಹಸ್ರಾರು ಶಿಷ್ಯ ವೃಂದವನ್ನು ಹೊಂದಿರುವ ಇವರು ಸಾಂಸ್ಕೃತಿಕ ಪರವಾದ ಚಿಂತಕರು. ನೂರಾರು ಕಲಾವಿದರನ್ನು ಮುಂಬೈ, ದೆಹಲಿ ಮುಂತಾದ ಅನೇಕ ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲಿ ಅವಕಾಶಗಳನ್ನು ಕೊಡಿಸುವುದರ ಮೂಲಕ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಜೊತೆ ಜೊತೆಗೆ ನನ್ನಂತಹ ಅನೇಕ ಯುವ ಸಾಹಿತಿಗಳಿಗೂ ಮಾರ್ಗದರ್ಶನ ಕೊಟ್ಟು ಮುನ್ನಡೆಸಿದ್ದಾರೆ. ದೇಶದ ವಿವಿಧೆೆಡೆಯಲ್ಲಿ ಅಂದರೆ ದೆಹಲಿ, ಇಂಧೂರ್, ಮುಂಬೈಯಲ್ಲಿ ನಡೆದ ಅನೇಕ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಕೀತರ್ಿ ಇವರದು. ಕನರ್ಾಟಕದ ಬಹುಶಃ ಎಲ್ಲಾ ಜಿಲ್ಲೆಗಳಲ್ಲೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಬಂಧಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಇವರದು. ಇವರ ಲೇಖನಗಳು ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಹಾಗೂ ಅನೇಕ ಸಂಚಿಕೆಗಳಲ್ಲಿಯೂ ಪ್ರಕಟಗೊಂಡಿವೆ.
್ಡ ಉಡುಪಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾನೂನು ಗೋಷ್ಠ್ಟಿಯಲ್ಲಿ ಪಾಲ್ಗೊಂಡಿದ್ದರು.
್ಡ ಬೀದರ್ನಲ್ಲಿ ನಡೆದ ಅಖಿಲ ಭಾರತ ಪ್ರಥಮ ಜಾನಪದ ಸಮ್ಮೇಳನದ ಆಹ್ವಾನಿತರಾಗಿ ಹಾಗೂ 'ಲೋಕಸಿರಿ' ನೆನಪಿನ ಸಂಚಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ.
್ಡ ಬೆಳಗಾವಿಯಲ್ಲಿ ನಡೆದ 3ನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಜೀವನಾವರ್ತನ ಗೀತೆಗಳು' ಎನ್ನುವ ಇವರ ಕೃತಿ ಬಿಡುಗಡೆಯಾಗಿದೆ.
್ಡ ಸಿರಿಗೆರೆಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸ್ವಾಮೀಜಿಯವರಿಂದ ಸನ್ಮಾನಗೊಂಡಿದ್ದಾರೆ.
ಇವರ ಪ್ರಕಟಿತ ಕೃತಿಗಳು
ಗದ್ಯ ಕೃತಿಗಳು :-
ಮನನ, ಗುರುಮುಖ, ಹಿರಿಮೆಯ ಹಾಸನ, ಹಾಸನ ಜಿಲ್ಲೆಯ ಜಾನಪದ ಕಲಾವಿದರು, ಕದಿರು
ವ್ಯಕ್ತಿ ಪರಿಚಯಗಳು :-
ಮತಿಘಟ್ಟ ಕೃಷ್ಣಮೂತರ್ಿ, ಡಾ|| ಹೆಚ್.ಜೆ ಲಕ್ಕಪ್ಪಗೌಡ, ಡಾ|| ರಾಜೇಗೌಡ ಹೊಸಳ್ಳಿ.
ಸಂಪಾದಿತ ಕೃತಿಗಳು :-
ಜಾನಪದ ತಲೆಮಾರು -4, ಜಾನಪದ ಅಡುಗೆ ಉದ್ಯಮೀಕರಣ, ಜಾನಪದ ಜೀವನಾವರ್ತನ ಗೀತೆಗಳು.
ಇತರರೊಂದಿಗೆ ಸಂಪಾದಿತ ಕೃತಿಗಳು :-
ಜಾನಪದ ಸಮಾಚಾರ, ವಜ್ರಮುಖಿ. ಸಾಹಿತ್ಯ ಮಾರ್ಗ-1, ಸಾಹಿತ್ಯ ಮಾರ್ಗ-2, ಕಾವ್ಯ ಸಂಚಯ-5, ಕಾವ್ಯ ಸಂಚಯ-6, ಆಯ್ದ ಕವನಗಳು, ಸಾಹಿತ್ಯ ಸಂಪದ-1, ಸಾಹಿತ್ಯ ಸಂಪದ-2.
ಸಂಪಾದಿತ ಸಂಚಿಕೆಗಳು :- ಹೇಮಸಿರಿ, ಬೆಳ್ಳಿಬೆಳಕು, ಕಲಾಶ್ರೀ.
ಒಟ್ಟಾರೆ ಹೇಳುವುದಾದರೆ ಸೃಜನಶೀಲವಾದುದರಲ್ಲೆ ಶೋಧವೂ ನಿಹಿತವಿರುತ್ತದೆ-ಅರ್ಥದ ಶೋಧ, ತತ್ವದ ಶೋಧ, ಸತ್ಯದ ಶೋಧ, ಶಾಸ್ತ್ರೀಯ ನೆಲೆಯ ಸಂಶೋಧನೆಗೂ ಇವೇ ಗಮ್ಯವಾಗಿವೆ. ಹುಡುಕುವುದು, ಕಂಡುಹಿಡಿಯುವುದು, ಸೋಸುವುದು, ಶುದ್ಧಿ ಮಾಡುವುದು ಶೋಧನೆಯ ಪ್ರಕ್ರಿಯೆಗಳು. ಸಾಹಿತ್ಯದಲ್ಲಿ ಸಂಸ್ಕೃತಿಯ ಶೋಧನೆಯೂ ನಡೆಯುತ್ತದೆ. ಸಾಹಿತ್ಯ ಮತ್ತು ಸಂಶೋಧನೆ ಭಿನ್ನ ಶಿಸ್ತಿನ ವಿಷಯವಾಗಬಹುದಾಗಿಯೂ ಪರಸ್ಪರವಾದವು, ಸೃಜನಶೀಲ ಲೇಖಕರಾದ ಡಾ|| ಹಂಪನಹಳ್ಳಿ ತಿಮ್ಮೇಗೌಡರಲ್ಲಿ ಇವು ಮೇಳೈಸಿವೆ. ಅಭ್ಯಾಸ ಎನ್ನುವುದು ಸವಿನಯ ಅಧ್ಯಯನ, ಶ್ರದ್ಧೆಯ ಮಾತು. ಸತ್ಯಮುಖಿಯಾದವರಿಗೆ ಇಂಥ ವಿನಯ ಅಧ್ಯಯನದಲ್ಲಿ ಸಹಜವಾಗಿರುತ್ತದೆ. ವಿಷಯ, ವಿಶೇಷತೆಗಳನ್ನು ಪರಿಚಯಿಸಿಕೊಳ್ಳುವ ಪರಿಯನ್ನು ಇವರ ಗ್ರಂಥಗಳಲ್ಲಿ ಗಮನಿಸಬಹುದಾಗಿದೆ. ಇವರ ಸಾಹಿತ್ಯ ಸೇವೆ ಹಾಸನಕ್ಕೆ ಮಾತ್ರ ಮೀಸಲಾಗಿರದೆ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೂ ಹರಡಿ ಧೀಮಂತವಾಗಲಿ ಎಂದು ಆಶಿಸುತ್ತೇನೆ.
ಕನ್ನಡ ಸಾಹಿತ್ಯದ ಪಾಂಡಿತ್ಯ ಪ್ರತಿಭೆ- ಡಾ|| ಮಳಲಿ ವಸಂತ್ ಕುಮಾರ್
ವಿಶ್ವ ಕವಿ ಕುವೆಂಪು ಪರಂಪರೆಯಲ್ಲಿ ಸಾಗಿ ಬಂದಿರುವ ಮಳಲಿಯವರು ಮೌಢ್ಯ ವಿರೋದಿಯೂ ಹೌದು, ವಿಚಾರಪರ ಸಾಧಕರೂ ಹೌದು.- ನಾಡೋಜ ಡಾ|| ದೇ.ಜ.ಗೌ
ಅಕ್ಷರಶ: ದೇ.ಜ.ಗೌ ಅವರ ಮನದಾಳದ ನಲ್ನುಡಿ ಡಾ|| ಮಳಲಿಯವರ ವ್ಯಕ್ತಿತ್ವಕ್ಕಿಡಿದ ಕನ್ನಡಿಯಾಗಿದೆ.ಆಧುನಿಕ ಕನ್ನಡ ಸಾಹಿತ್ಯದ ಆಳ ಪರಂಪರೆ, ಅಧ್ಯಾಯನ ಶೀಲತೆ ಜೊತೆ ಜೊತೆಗೆ ವಾಗ್ಪ್ರೌಢಿಮೆಯನ್ನು, ಪಾಂಡಿತ್ಯ ಸಂಪನ್ನತೆ ಗಳಿಸಿದ, ನಿಭರ್ಿಡತೆಯಿಂದ ಒಳ ಹೊರವುಗಳನ್ನು ಪಠಿಸಬಲ್ಲ ಬೆರಳೆಣಿಕೆಯ ಕಂಚಿನ ಕಂಠಗಳಲ್ಲಿ ಡಾ|| ಮಳಲಿಯವರೂ ಒಬ್ಬರೆಂದರೆ ಅತಿಶಯೋಕ್ತಿಯಾಗಲಾರದು.
1983 ರಲ್ಲಿ ಪ್ರಕಟವಾದ ಮಳಲಿಯವರ ಈಡು ಕಥಾ ಸಂಕಲನ ಓದಿದ ರಾಷ್ಟ್ರಕವಿ ಕುವೆಂಪುರವರು ಈ ರೀತಿ ಹೇಳಿದ್ದಾರೆ ಅಪಥ್ಯ, ಸ್ಥಿತ್ಯಂತರ, ರಿಕ್ತ ಮತ್ತು ಈಡು ಕಥೆಗಳು ನನ್ನ ಮೇಲೆ ತೀವ್ರ ಪರಿಣಾಮ ಉಂಟುಮಾಡಿದವು. ಅದು ಎಷ್ಟರ ಮಟ್ಟಿಗೆಂದರೆ ನಾನೂ ಸಹ ಎರಡು ದಿನ ನಿದ್ರೆ ಮಾಡಲಾಗಲಿಲ್ಲ.
ಕನ್ನಡ ಸಾಹಿತ್ಯದ ಭವ್ಯೋಜ್ವಲ ಇತಿಹಾಸದಲ್ಲಿ ಡಾ|| ಮಳಲಿಯವರಿಗೆ ವಿಶಿಷ್ಟ ಸ್ಥಾನವಿದೆ, ಅವರ ಭಾಷಾ ಪ್ರೌಢಿಮೆ ಅನನ್ಯ ಹಾಗೂ ಅದ್ವಿತೀಯವಾದದ್ದು.
20.04.2013 ರ ಶನಿವಾರ ಹಾಸನದ ಹಾಸನಾಂಭ ಕಲಾಕ್ಷೇತ್ರದಲ್ಲಿ ನಡೆದ ಅಖಿಲ ಕನರ್ಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷತೆಯ ರತ್ನ ಮುಕುಟ ಡಾ|| ಮಳಲಿಯವರ ವ್ಯಕ್ತಿತ್ವದ ಹೊಳಪನ್ನು ಇಮ್ಮಡಿಗೊಳಿಸಿದೆ.
ಹಾಸನ ಜಿಲ್ಲೆಯ ಮಳಲಿ ಗ್ರಾಮದ ಶ್ರೀಮತಿ ದೇವಮ್ಮ ಮತ್ತು ಶ್ರೀ ಪಟೇಲ್ ಚಿಕ್ಕೇಗೌಡ ದಂಪತಿಗಳ ಸುಪುತ್ರರಾಗಿ 1945 ಆಗಸ್ಟ್ 6 ರಂದು ಜನಿಸಿದ ವಸಂತ್ ಕುಮಾರ್ರವರು ಹುಟ್ಟೂರಲ್ಲೇ ಪ್ರಾಥಮಿಕ ಹಾಗೂ ಪೌಡ ಶಿಕ್ಷಣವನ್ನು ಮುಗಿಸಿದ ನಂತರ ಇವರ ಮುಂದಿನ ವಿಧ್ಯಭ್ಯಾಸ [ಕುವೆಂಪುರವರು ಕುಪ್ಪಳ್ಳಿಯಿಂದ ಮೈಸೂರಿಗೆ ಬಂದಂತೆ] ಮೈಸೂರಿನಲ್ಲಾಯಿತು. ಬಲ್ಯದಿಂದಲೂ ಕುವೆಂಪುರವರ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮಳಲಿಯವರು ಡಾ|| ಹೆಚ್.ತಿಪ್ಪೆರುದ್ರಸ್ವಾಮಿಯವರ ಮಾರ್ಗದರ್ಶನದಲ್ಲಿ ಕುವೆಂಪುರವರ ನಾಟಕ ಸಾಹಿತ್ಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದರು. ನಂತರ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿ, ಮೈಸೂರು ವಿ ವಿ ನಿಲಯದ ಸ್ನಾತಕೋತ್ತರ ಕೇಂದ್ರಗಳಾದ ಮಂಡ್ಯ ಹಾಗೂ ಹಾಸನದಲ್ಲಿ ಪ್ರಾಧ್ಯಪಕರಾಗಿ ಸೇವೆಸಲ್ಲಿಸಿದ್ದಾರೆ.
ಡಾ||ಮಳಲಿಯವರು ಪ್ರಾಧ್ಯಪಕರಾಗಿ, ಮುಖ್ಯ ಸಂಯೋಜಕರಾಗಿ, ಸಂಘಟಕರಾಗಿ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರವನ್ನು ಪ್ರಜ್ವಲಗೊಳಿಸಿದ್ದಾರೆ. ಈಗಾಗಲೇ ಮುವತ್ತೈದಕ್ಕೂ ಹೆಚ್ಚು ಕೃತಿಗಳನ್ನು ನೀಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಕಾವ್ಯ, ಕಥೆ, ನಾಟಕ, ವಿಮಶರ್ೆ, ಜಾನಪದ, ಪ್ರಬಂಧ, ಸಂಗ್ರಹ, ವಚನ ಸಾಹಿತ್ಯ ಹೀಗೆ ಹತ್ತಾರು ಪ್ರಕಾರಗಳಲ್ಲಿ ಆಳ-ನಿರಾಳತೆಯನ್ನು ಕಂಡುಂಡವರು, ಯಶಕಂಡವರು. ಕನ್ನಡ ಸಾಹಿತ್ಯದ ಅಪ್ರತಿಮ ವಾಗ್ಮಿಗಳು.
ಅಖಿಲ ಕನರ್ಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ತಿ.ರಾ.ಕೃ ರವರ ಪತ್ರಿಕಾ ಹೇಳಿಕೆ ನೋಡಿ , ತಟ್ಟನೇ ಫೋನಾಯಿಸಿ ಡಾ|| ಮಳಲಿಯವರಿಗೆ ಅಭಿನಂದನೆ ಸಲ್ಲಿಸಿದೆ. ಒಂದೆರಡು ದಿನಗಳ ನಂತರ ಶ್ರೀಯುತರ ಸಂದರ್ಶನ ಮಾಡಲೆಂದು ಕರೆಮಾಡಿದಾಗ ನಾಡೋಜ ಡಾ|| ದೇ.ಜ.ಗೌರವರ ಮನೆಯಲ್ಲಿರುವುದಾಗಿ ಅಲ್ಲಿಗೆ ಬರುವಂತೆ ಹೇಳಿದಾಗ ನಿಜಕ್ಕೂ ಹರ್ಷಗೊಂಡು ತೆರಳಿದೆ. ದೇ.ಜ.ಗೌ ವೃತ್ತದಲ್ಲಿಳಿದು ನೇರವಾಗಿ ಅವರ ಕುಟೀರಕ್ಕೆ ಪ್ರವೇಶಿಸಿದೆ. ಅಷ್ಟೊತ್ತಿಗೆ ಯಾವುದೋ ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದ ಅವರನ್ನು ನನ್ನ ಪ್ರವೇಶ ಮೊಟುಕುಗೊಳಿಸಿರಬೇಕು ! 97ರ ಹರೆಯದಲ್ಲೂ ಹಸನ್ಮುಖಿಯಾಗಿ ದೇ.ಜ.ಗೌ ಸ್ವಾಗತಿಸಿದುದ ಕಂಡು ಉಲ್ಲಾಸಗೊಂಡೆ ಹಾಗೆಯೇ ಕನ್ನಡ ಸಾಹಿತ್ಯದ ಈರ್ವ ದಿಗ್ಗಜರ ದರ್ಶನ ಮಾಡಿ ಪಾವನಗೊಂಡೆ, ನಂತರ ಆಧುನಿಕ ಸಾಹಿತ್ಯದ ಒಳ-ಹೊರಗಳ ಸ್ಥಿತ್ಯಂತರದ ಬಗ್ಗೆ ಸುಮಾರು ಒಂದು ಗಂಟೆಗಳ ಕಾಲ ಚಚರ್ಿಸಿದೆವು. ಅವರು ಹೆಚ್ಚಾಗಿ ವೈಚಾರಿಕತೆಯನ್ನೇ ಅಪ್ಪಿಕೊಂಡು ವಿಶ್ಲೇಷಿಸುತ್ತಾ ಸಾಗಿದರು.
ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಅವರ ವಚನ ವಿಭೂತಿ ಆಧುನಿಕ ವಚನ ಸಂಕಲನದ ಬಗ್ಗೆ ಓದುಗರು, ವಿಮರ್ಷಕರು ತೋರಿದ ಅನನ್ಯ ಪ್ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆರಂಭದಲ್ಲಿ ಪಂಪ, ಕುಮಾರವ್ಯಾಸ ಹಾಗೆಯೇ ಪ್ರಾಚೀನ ಸಾಹಿತ್ಯದ ಆಳವಾದ ಅಧ್ಯಯನ, ನಂತರ ಜನಸಾಮಾನ್ಯರ ದನಿಯಾದ ವಚನ ಸಾಹಿತ್ಯ ಹಾಗೆಯೇ ಆಧುನಿಕವಾಗಿ ಕುವೆಂಪುರವರ ವಿಶ್ವಮಾನವ ಸಾಹಿತ್ಯ ಇವರ ಪ್ರೇರಕ ಶಕ್ತಿಗಳು .
ಅವರೇ ಹೇಳುವಂತೆ ವಚನ ಸಾಹಿತ್ಯ ಕೇವಲ ಭಕ್ತಿಗೆ ಸೀಮಿತವಾಗದೇ ಅದೊಂದು ಜಾತ್ಯಾತೀತ ಆಂದೋಲನವಾಯಿತು. ಅದು ಸಮಾಜದ ಎಲ್ಲಾ ವರ್ಗದ , ಎಲ್ಲಾ ಜನಾಂಗದ ಮಿಡಿತವಾಗಿತ್ತು. ಬಸವ, ಅಲ್ಲಮ, ಅಕ್ಕ ಮಹದೇವಿಯವರಂತಹ ಶರಣ ಬಂಧುಗಳು ಈ ಉತ್ಕ್ರಾಂತಿಗೆ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿದರು.
ವಚನ ಸಾಹಿತ್ಯ ನಿಜವಾದ ದೇಶೀಯ ಸಾಹಿತ್ಯ, ತಮಿಳು ನಾಡಿನ ಸಂಗಂ ಸಾಹಿತ್ಯವನ್ನು ಮೀರಿಸುವಂತದ್ದು, ಇದು ಕಾಯಕದಿಂದಲೇ ಬದುಕಿ ಬಾಳಿದ ಸ್ವಾಭಿಮಾನದ ಪ್ರತೀಕ. ಸರ್ವ ಸಮಾನತೆಯ ಸಾಮಾಜಿಕ ಆಂದೋಲನದ ಪ್ರತಿರೂಪ .
ಬಹುಮಟ್ಟಿಗೆ ಸಾಂಸ್ಕೃತಿಕತೆ ಮತ್ತು ವೈಚಾರಿಕತೆ ಸಂಲಗ್ನಗೊಂಡ ಸಾಹಿತ್ಯ, ಮೌಢ್ಯ ವಿರೋಧ ಭಾವನೆ, ಸ್ಪಷ್ಟವಾದ ಜಾತ್ಯಾತೀತ ನಿಲುವು ಇವರ ಪ್ರಮುಖ ಧೋರಣೆಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು.
ಪ್ರಾಚೀನ ವಚನ ಸಾಹಿತ್ಯ ಭಕ್ತಿ ಪ್ರಧಾನವಾದದ್ದು ಮತ್ತು ಆಧ್ಯಾತ್ಮಕತೆ ಸಂಯೋಗ, ಹಾಗೆಯೇ ಸಂಸ್ಕೃತಿಯ ಜೊತೆಗೆ ವೈಚಾರಿಕ ನಿಲುವಾದರೆ, ಆಧುನಿಕ ವಚನ ಸಾಹಿತ್ಯ ವರ್ತಮಾನಗಳ ಆಗು ಹೋಗುಗಳ ಕುರಿತಾದದ್ದು, ಸಾಮಾಜಿಕ ಬದಲಾವಣೆಗೆ ಪ್ರಮುಖ ಅಂಶವಗಿದೆ ಎಂಬುದು ಇವರ ದೃಡ ನಿಲುವಾಗಿದೆ.
ಶ್ರೀಯುತರ ದೃಢ ಸಂಕಲ್ಪದ ನಿಲುವು, ಧೋರಣೆಗಳೇ ಅವರ ಮೌಲ್ಯಭರಿತ ಸಾಹಿತ್ಯಕ್ಕೆ ಹೊಳವುಗಳಾಗಿವೆ. ಮಳಲಿ ಗಿಡ್ಡಮ್ಮ, ಕೋಲು ಪದಗಳು, ಜಾನಪದ ವೈಧ್ಯ, ಜಾನಪದ ನಂಬಿಕೆಗಳು-ಜಾನಪದ ಕೃತಿಗಳು; ಕಡಲಕವಿತೆಗಳು, ಹೃದಯ ಗಂಗೆ, ಕರಾವು-ಕವನ ಸಂಕಲನಗಳು; ಯಮಧರ್ಮ, ಲಂಕೇಶ್ವರ-ನಾಟಕಗಳು; ಈಡು-ಕಥಾಸಂಕಲನ; ಕದಂಬ, ವಿಪಕ್ಷೆ-ವಿಮಶರ್ಾ ಕೃತಿಗಳು; ಕವಿಗಳು ಕಂಡ ಕುವೆಂಪು, ವಜ್ರದೀಪ್ತಿ-ಸಂಪಾದಿತ ಕೃತಿಗಳು; ಕುವೆಂಪುರವರ ನಾಟಕ ಸಮೀಕ್ಷೆ, ಚಿತ್ರಾಂಗದಾ ಸಮೀಕ್ಷೆ, ಚಂದ್ರಹಾಸ ನಾಟಕ ಸಮೀಕ್ಷೆ-ಸಂಶೋಧನಾ ಕೃತಿಗಳು; ಹಾಗೆಯೇ ವಚನ ವಿಭೂತಿ, ವಚನ ವರ್ತಮಾನ-ಆಧುನಿಕ ವಚನ ಸಂಕಲನಗಳು ಹೀಗೆ ಹಲವಾರು ಕೃತಿಗಳನ್ನು ಭುವನೇಶ್ವರಿ ಮಡಿಲಿಗೆ ಸಮಪರ್ಿಸಿದ್ದಾರೆ.
ಚೀನಾದ ಹಾಂಕಾಂಗ್ ನಲ್ಲಿ ನಡೆದ ಮೂರನೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,ಅಖಿಲ ಕನರ್ಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಕುಟ ಇವರನ್ನಲಂಕರಿಸಿರುವುದು ಔಚಿತ್ಯಪೂರ್ಣವಾದುದಾಗಿದೆ , ಹಾಗೂ ಇತ್ತೀಚೆಗೆ ಗಲ್ಫ್ ಕಂಟ್ರೀಸ್ನ ಅಬುದಾಭಿಯಲ್ಲಿ ನಡೆದ ವಿಶ್ವ ಸಾಹಿತ್ಯ ಸಮ್ಮೇಳನದ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ್ದು ಇವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ತಮ್ಮ ಪಾಂಡಿತ್ಯ ಪ್ರತಿಭೆಗಳಿಂದ ಸಮನ್ವಿತವಾದ ವಾಕ್ಪ್ರವಾಹದಿಂದ ನಾಡಿನ ಜನಮಾನಸದಲ್ಲಿ ನೆಲೆಯೂರಿದ್ದಾರೆ.
ಡಾ|| ಮಳಲಿಯವರ ಸಾಹಿತ್ಯಿಕ ಧೀಮಂತಿಕೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಹೊಯ್ಸಳ ರತ್ನ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಇವರ ಸಾಹಿತ್ಯ ಚಿಲುಮೆ ಇನ್ನೂ ಹೆಚ್ಚಿನ ಉದ್ಗ್ರಂಥಗಳಿಂದ ನಾಡಿನಾದ್ಯಾಂತ, ದೇಶದಾದ್ಯಂತ ವ್ಯಾಪಿಸಿ ಸಕಾರಾತ್ಮಕ ನೆಗಟ್ಟಿನಲ್ಲಿ ಪಸರಿಸಲೆಂದು ಆಶಿಸುತ್ತೇನೆ.
ಅಕ್ಷರಶ: ದೇ.ಜ.ಗೌ ಅವರ ಮನದಾಳದ ನಲ್ನುಡಿ ಡಾ|| ಮಳಲಿಯವರ ವ್ಯಕ್ತಿತ್ವಕ್ಕಿಡಿದ ಕನ್ನಡಿಯಾಗಿದೆ.ಆಧುನಿಕ ಕನ್ನಡ ಸಾಹಿತ್ಯದ ಆಳ ಪರಂಪರೆ, ಅಧ್ಯಾಯನ ಶೀಲತೆ ಜೊತೆ ಜೊತೆಗೆ ವಾಗ್ಪ್ರೌಢಿಮೆಯನ್ನು, ಪಾಂಡಿತ್ಯ ಸಂಪನ್ನತೆ ಗಳಿಸಿದ, ನಿಭರ್ಿಡತೆಯಿಂದ ಒಳ ಹೊರವುಗಳನ್ನು ಪಠಿಸಬಲ್ಲ ಬೆರಳೆಣಿಕೆಯ ಕಂಚಿನ ಕಂಠಗಳಲ್ಲಿ ಡಾ|| ಮಳಲಿಯವರೂ ಒಬ್ಬರೆಂದರೆ ಅತಿಶಯೋಕ್ತಿಯಾಗಲಾರದು.
1983 ರಲ್ಲಿ ಪ್ರಕಟವಾದ ಮಳಲಿಯವರ ಈಡು ಕಥಾ ಸಂಕಲನ ಓದಿದ ರಾಷ್ಟ್ರಕವಿ ಕುವೆಂಪುರವರು ಈ ರೀತಿ ಹೇಳಿದ್ದಾರೆ ಅಪಥ್ಯ, ಸ್ಥಿತ್ಯಂತರ, ರಿಕ್ತ ಮತ್ತು ಈಡು ಕಥೆಗಳು ನನ್ನ ಮೇಲೆ ತೀವ್ರ ಪರಿಣಾಮ ಉಂಟುಮಾಡಿದವು. ಅದು ಎಷ್ಟರ ಮಟ್ಟಿಗೆಂದರೆ ನಾನೂ ಸಹ ಎರಡು ದಿನ ನಿದ್ರೆ ಮಾಡಲಾಗಲಿಲ್ಲ.
ಕನ್ನಡ ಸಾಹಿತ್ಯದ ಭವ್ಯೋಜ್ವಲ ಇತಿಹಾಸದಲ್ಲಿ ಡಾ|| ಮಳಲಿಯವರಿಗೆ ವಿಶಿಷ್ಟ ಸ್ಥಾನವಿದೆ, ಅವರ ಭಾಷಾ ಪ್ರೌಢಿಮೆ ಅನನ್ಯ ಹಾಗೂ ಅದ್ವಿತೀಯವಾದದ್ದು.
20.04.2013 ರ ಶನಿವಾರ ಹಾಸನದ ಹಾಸನಾಂಭ ಕಲಾಕ್ಷೇತ್ರದಲ್ಲಿ ನಡೆದ ಅಖಿಲ ಕನರ್ಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷತೆಯ ರತ್ನ ಮುಕುಟ ಡಾ|| ಮಳಲಿಯವರ ವ್ಯಕ್ತಿತ್ವದ ಹೊಳಪನ್ನು ಇಮ್ಮಡಿಗೊಳಿಸಿದೆ.
ಹಾಸನ ಜಿಲ್ಲೆಯ ಮಳಲಿ ಗ್ರಾಮದ ಶ್ರೀಮತಿ ದೇವಮ್ಮ ಮತ್ತು ಶ್ರೀ ಪಟೇಲ್ ಚಿಕ್ಕೇಗೌಡ ದಂಪತಿಗಳ ಸುಪುತ್ರರಾಗಿ 1945 ಆಗಸ್ಟ್ 6 ರಂದು ಜನಿಸಿದ ವಸಂತ್ ಕುಮಾರ್ರವರು ಹುಟ್ಟೂರಲ್ಲೇ ಪ್ರಾಥಮಿಕ ಹಾಗೂ ಪೌಡ ಶಿಕ್ಷಣವನ್ನು ಮುಗಿಸಿದ ನಂತರ ಇವರ ಮುಂದಿನ ವಿಧ್ಯಭ್ಯಾಸ [ಕುವೆಂಪುರವರು ಕುಪ್ಪಳ್ಳಿಯಿಂದ ಮೈಸೂರಿಗೆ ಬಂದಂತೆ] ಮೈಸೂರಿನಲ್ಲಾಯಿತು. ಬಲ್ಯದಿಂದಲೂ ಕುವೆಂಪುರವರ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮಳಲಿಯವರು ಡಾ|| ಹೆಚ್.ತಿಪ್ಪೆರುದ್ರಸ್ವಾಮಿಯವರ ಮಾರ್ಗದರ್ಶನದಲ್ಲಿ ಕುವೆಂಪುರವರ ನಾಟಕ ಸಾಹಿತ್ಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದರು. ನಂತರ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿ, ಮೈಸೂರು ವಿ ವಿ ನಿಲಯದ ಸ್ನಾತಕೋತ್ತರ ಕೇಂದ್ರಗಳಾದ ಮಂಡ್ಯ ಹಾಗೂ ಹಾಸನದಲ್ಲಿ ಪ್ರಾಧ್ಯಪಕರಾಗಿ ಸೇವೆಸಲ್ಲಿಸಿದ್ದಾರೆ.
ಡಾ||ಮಳಲಿಯವರು ಪ್ರಾಧ್ಯಪಕರಾಗಿ, ಮುಖ್ಯ ಸಂಯೋಜಕರಾಗಿ, ಸಂಘಟಕರಾಗಿ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರವನ್ನು ಪ್ರಜ್ವಲಗೊಳಿಸಿದ್ದಾರೆ. ಈಗಾಗಲೇ ಮುವತ್ತೈದಕ್ಕೂ ಹೆಚ್ಚು ಕೃತಿಗಳನ್ನು ನೀಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಕಾವ್ಯ, ಕಥೆ, ನಾಟಕ, ವಿಮಶರ್ೆ, ಜಾನಪದ, ಪ್ರಬಂಧ, ಸಂಗ್ರಹ, ವಚನ ಸಾಹಿತ್ಯ ಹೀಗೆ ಹತ್ತಾರು ಪ್ರಕಾರಗಳಲ್ಲಿ ಆಳ-ನಿರಾಳತೆಯನ್ನು ಕಂಡುಂಡವರು, ಯಶಕಂಡವರು. ಕನ್ನಡ ಸಾಹಿತ್ಯದ ಅಪ್ರತಿಮ ವಾಗ್ಮಿಗಳು.
ಅಖಿಲ ಕನರ್ಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ತಿ.ರಾ.ಕೃ ರವರ ಪತ್ರಿಕಾ ಹೇಳಿಕೆ ನೋಡಿ , ತಟ್ಟನೇ ಫೋನಾಯಿಸಿ ಡಾ|| ಮಳಲಿಯವರಿಗೆ ಅಭಿನಂದನೆ ಸಲ್ಲಿಸಿದೆ. ಒಂದೆರಡು ದಿನಗಳ ನಂತರ ಶ್ರೀಯುತರ ಸಂದರ್ಶನ ಮಾಡಲೆಂದು ಕರೆಮಾಡಿದಾಗ ನಾಡೋಜ ಡಾ|| ದೇ.ಜ.ಗೌರವರ ಮನೆಯಲ್ಲಿರುವುದಾಗಿ ಅಲ್ಲಿಗೆ ಬರುವಂತೆ ಹೇಳಿದಾಗ ನಿಜಕ್ಕೂ ಹರ್ಷಗೊಂಡು ತೆರಳಿದೆ. ದೇ.ಜ.ಗೌ ವೃತ್ತದಲ್ಲಿಳಿದು ನೇರವಾಗಿ ಅವರ ಕುಟೀರಕ್ಕೆ ಪ್ರವೇಶಿಸಿದೆ. ಅಷ್ಟೊತ್ತಿಗೆ ಯಾವುದೋ ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದ ಅವರನ್ನು ನನ್ನ ಪ್ರವೇಶ ಮೊಟುಕುಗೊಳಿಸಿರಬೇಕು ! 97ರ ಹರೆಯದಲ್ಲೂ ಹಸನ್ಮುಖಿಯಾಗಿ ದೇ.ಜ.ಗೌ ಸ್ವಾಗತಿಸಿದುದ ಕಂಡು ಉಲ್ಲಾಸಗೊಂಡೆ ಹಾಗೆಯೇ ಕನ್ನಡ ಸಾಹಿತ್ಯದ ಈರ್ವ ದಿಗ್ಗಜರ ದರ್ಶನ ಮಾಡಿ ಪಾವನಗೊಂಡೆ, ನಂತರ ಆಧುನಿಕ ಸಾಹಿತ್ಯದ ಒಳ-ಹೊರಗಳ ಸ್ಥಿತ್ಯಂತರದ ಬಗ್ಗೆ ಸುಮಾರು ಒಂದು ಗಂಟೆಗಳ ಕಾಲ ಚಚರ್ಿಸಿದೆವು. ಅವರು ಹೆಚ್ಚಾಗಿ ವೈಚಾರಿಕತೆಯನ್ನೇ ಅಪ್ಪಿಕೊಂಡು ವಿಶ್ಲೇಷಿಸುತ್ತಾ ಸಾಗಿದರು.
ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಅವರ ವಚನ ವಿಭೂತಿ ಆಧುನಿಕ ವಚನ ಸಂಕಲನದ ಬಗ್ಗೆ ಓದುಗರು, ವಿಮರ್ಷಕರು ತೋರಿದ ಅನನ್ಯ ಪ್ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆರಂಭದಲ್ಲಿ ಪಂಪ, ಕುಮಾರವ್ಯಾಸ ಹಾಗೆಯೇ ಪ್ರಾಚೀನ ಸಾಹಿತ್ಯದ ಆಳವಾದ ಅಧ್ಯಯನ, ನಂತರ ಜನಸಾಮಾನ್ಯರ ದನಿಯಾದ ವಚನ ಸಾಹಿತ್ಯ ಹಾಗೆಯೇ ಆಧುನಿಕವಾಗಿ ಕುವೆಂಪುರವರ ವಿಶ್ವಮಾನವ ಸಾಹಿತ್ಯ ಇವರ ಪ್ರೇರಕ ಶಕ್ತಿಗಳು .
ಅವರೇ ಹೇಳುವಂತೆ ವಚನ ಸಾಹಿತ್ಯ ಕೇವಲ ಭಕ್ತಿಗೆ ಸೀಮಿತವಾಗದೇ ಅದೊಂದು ಜಾತ್ಯಾತೀತ ಆಂದೋಲನವಾಯಿತು. ಅದು ಸಮಾಜದ ಎಲ್ಲಾ ವರ್ಗದ , ಎಲ್ಲಾ ಜನಾಂಗದ ಮಿಡಿತವಾಗಿತ್ತು. ಬಸವ, ಅಲ್ಲಮ, ಅಕ್ಕ ಮಹದೇವಿಯವರಂತಹ ಶರಣ ಬಂಧುಗಳು ಈ ಉತ್ಕ್ರಾಂತಿಗೆ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿದರು.
ವಚನ ಸಾಹಿತ್ಯ ನಿಜವಾದ ದೇಶೀಯ ಸಾಹಿತ್ಯ, ತಮಿಳು ನಾಡಿನ ಸಂಗಂ ಸಾಹಿತ್ಯವನ್ನು ಮೀರಿಸುವಂತದ್ದು, ಇದು ಕಾಯಕದಿಂದಲೇ ಬದುಕಿ ಬಾಳಿದ ಸ್ವಾಭಿಮಾನದ ಪ್ರತೀಕ. ಸರ್ವ ಸಮಾನತೆಯ ಸಾಮಾಜಿಕ ಆಂದೋಲನದ ಪ್ರತಿರೂಪ .
ಬಹುಮಟ್ಟಿಗೆ ಸಾಂಸ್ಕೃತಿಕತೆ ಮತ್ತು ವೈಚಾರಿಕತೆ ಸಂಲಗ್ನಗೊಂಡ ಸಾಹಿತ್ಯ, ಮೌಢ್ಯ ವಿರೋಧ ಭಾವನೆ, ಸ್ಪಷ್ಟವಾದ ಜಾತ್ಯಾತೀತ ನಿಲುವು ಇವರ ಪ್ರಮುಖ ಧೋರಣೆಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು.
ಪ್ರಾಚೀನ ವಚನ ಸಾಹಿತ್ಯ ಭಕ್ತಿ ಪ್ರಧಾನವಾದದ್ದು ಮತ್ತು ಆಧ್ಯಾತ್ಮಕತೆ ಸಂಯೋಗ, ಹಾಗೆಯೇ ಸಂಸ್ಕೃತಿಯ ಜೊತೆಗೆ ವೈಚಾರಿಕ ನಿಲುವಾದರೆ, ಆಧುನಿಕ ವಚನ ಸಾಹಿತ್ಯ ವರ್ತಮಾನಗಳ ಆಗು ಹೋಗುಗಳ ಕುರಿತಾದದ್ದು, ಸಾಮಾಜಿಕ ಬದಲಾವಣೆಗೆ ಪ್ರಮುಖ ಅಂಶವಗಿದೆ ಎಂಬುದು ಇವರ ದೃಡ ನಿಲುವಾಗಿದೆ.
ಶ್ರೀಯುತರ ದೃಢ ಸಂಕಲ್ಪದ ನಿಲುವು, ಧೋರಣೆಗಳೇ ಅವರ ಮೌಲ್ಯಭರಿತ ಸಾಹಿತ್ಯಕ್ಕೆ ಹೊಳವುಗಳಾಗಿವೆ. ಮಳಲಿ ಗಿಡ್ಡಮ್ಮ, ಕೋಲು ಪದಗಳು, ಜಾನಪದ ವೈಧ್ಯ, ಜಾನಪದ ನಂಬಿಕೆಗಳು-ಜಾನಪದ ಕೃತಿಗಳು; ಕಡಲಕವಿತೆಗಳು, ಹೃದಯ ಗಂಗೆ, ಕರಾವು-ಕವನ ಸಂಕಲನಗಳು; ಯಮಧರ್ಮ, ಲಂಕೇಶ್ವರ-ನಾಟಕಗಳು; ಈಡು-ಕಥಾಸಂಕಲನ; ಕದಂಬ, ವಿಪಕ್ಷೆ-ವಿಮಶರ್ಾ ಕೃತಿಗಳು; ಕವಿಗಳು ಕಂಡ ಕುವೆಂಪು, ವಜ್ರದೀಪ್ತಿ-ಸಂಪಾದಿತ ಕೃತಿಗಳು; ಕುವೆಂಪುರವರ ನಾಟಕ ಸಮೀಕ್ಷೆ, ಚಿತ್ರಾಂಗದಾ ಸಮೀಕ್ಷೆ, ಚಂದ್ರಹಾಸ ನಾಟಕ ಸಮೀಕ್ಷೆ-ಸಂಶೋಧನಾ ಕೃತಿಗಳು; ಹಾಗೆಯೇ ವಚನ ವಿಭೂತಿ, ವಚನ ವರ್ತಮಾನ-ಆಧುನಿಕ ವಚನ ಸಂಕಲನಗಳು ಹೀಗೆ ಹಲವಾರು ಕೃತಿಗಳನ್ನು ಭುವನೇಶ್ವರಿ ಮಡಿಲಿಗೆ ಸಮಪರ್ಿಸಿದ್ದಾರೆ.
ಚೀನಾದ ಹಾಂಕಾಂಗ್ ನಲ್ಲಿ ನಡೆದ ಮೂರನೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,ಅಖಿಲ ಕನರ್ಾಟಕ ಪ್ರಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಕುಟ ಇವರನ್ನಲಂಕರಿಸಿರುವುದು ಔಚಿತ್ಯಪೂರ್ಣವಾದುದಾಗಿದೆ , ಹಾಗೂ ಇತ್ತೀಚೆಗೆ ಗಲ್ಫ್ ಕಂಟ್ರೀಸ್ನ ಅಬುದಾಭಿಯಲ್ಲಿ ನಡೆದ ವಿಶ್ವ ಸಾಹಿತ್ಯ ಸಮ್ಮೇಳನದ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ್ದು ಇವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ತಮ್ಮ ಪಾಂಡಿತ್ಯ ಪ್ರತಿಭೆಗಳಿಂದ ಸಮನ್ವಿತವಾದ ವಾಕ್ಪ್ರವಾಹದಿಂದ ನಾಡಿನ ಜನಮಾನಸದಲ್ಲಿ ನೆಲೆಯೂರಿದ್ದಾರೆ.
ಡಾ|| ಮಳಲಿಯವರ ಸಾಹಿತ್ಯಿಕ ಧೀಮಂತಿಕೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಹೊಯ್ಸಳ ರತ್ನ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಇವರ ಸಾಹಿತ್ಯ ಚಿಲುಮೆ ಇನ್ನೂ ಹೆಚ್ಚಿನ ಉದ್ಗ್ರಂಥಗಳಿಂದ ನಾಡಿನಾದ್ಯಾಂತ, ದೇಶದಾದ್ಯಂತ ವ್ಯಾಪಿಸಿ ಸಕಾರಾತ್ಮಕ ನೆಗಟ್ಟಿನಲ್ಲಿ ಪಸರಿಸಲೆಂದು ಆಶಿಸುತ್ತೇನೆ.
ವೈಚಾರಿಕ ಮನೋಧರ್ಮಿ ಜ.ಹೊ.ನಾರಾಯಣಸ್ವಾಮಿ- ಕೊಟ್ರೇಶ್ ಎಸ್.ಉಪ್ಪಾರ್
ಮಹಾಕವಿ ಕುವೆಂಪುರವರ ಬೆರಳೆಣಿಕೆಯ ಆಪ್ತ ಶಿಷ್ಯ ವೃಂದದಲ್ಲಿ ಜ.ಹೊ.ನಾ ಪ್ರಮುಖರು ಸಾಹಿತ್ಯ ವಲಯದಲ್ಲಿ ಆಲೋಚನೆಯ ದಾರಿದ್ರ್ಯ ಹಿಡಿದು ಸಂಪ್ರದಾಯ ನೇಣುಗಂಬಕ್ಕೆ ತುತ್ತಾದ ಸಂದರ್ಭದಲ್ಲಿ ಜ.ಹೊ.ನಾ ಅದಾರಾಚೆಯ ವೈಚಾರಿಕ ಲೋಕ ದರ್ಶನ ಮಾಡಿಸಿದವರು.
ಅಕ್ಷರಶಃ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಅಂತರ್ಗತಗೊಳಿಸಿಕೊಂಡು, ಕುವೆಂಪುರವರ ಸನ್ಮಾರ್ಗದಲ್ಲಿ ಸಾಗಿ ಸಮಾಜದ ಸಂಪ್ರದಾಯ ಮನಸ್ಸುಗಳನ್ನು ಬಡಿದೆಬ್ಬಿಸಿ ವೈಜ್ಞಾನಿಕ ತಳಹದಿಯಲ್ಲಿ ಚಿಂತಿಸುವಂತೆ ಪ್ರೇರೇಪಿಸಿದವರು.
ಕಾಲ ನಿಂತ ನೀರಲ್ಲ, ಸದಾ ಚಲನಶೀಲ. ಅಂತೆಯೇ ಸಾಹಿತ್ಯಿಕ ಆಲೋಚನೆಗಳು ಆಧುನಿಕತೆಗೆ ತಕ್ಕಂತೆ ವಿಚಾರಕ್ಕೆ ನಿಲುಕುವಂತೆ ತೆರೆದುಕೊಳ್ಳುತ್ತಾ ಸಾಗಬೇಕು. ಸಾಮಾಜಿಕ ಮೌಢ್ಯ ಸಂಪ್ರದಾಯಗಳ ಘೋರಿಯ ಮೇಲೆ ವೈಚಾರಿಕ ಹೂ ಗಿಡಗಳನ್ನು ಬೆಳೆಸುವ ದಿಸೆಯಲ್ಲಿ ಕಳೆದ ಐದಾರು ದಶಕಗಳಿಂದ ಮೂರ್ಖ ಸಂಪ್ರದಾಯಿಗಳ, ಕೋಮುವಾದಿಗಳ, ಜಾತಿವಾದಿಗಳ ವಿರೋಧಗಳ ನಡುವೆಯೂ ಎದೆಗುಂದದೆ ಮುನ್ನುಗ್ಗಿ ಬಂದ ಧೀಶಕ್ತಿ ಸಾಹಿತ್ಯ ಜ.ಹೊ.ನಾ ಅವರದ್ದು ಎಂದರೆ ಅತಿಶಯೋಕ್ತಿಯಾಗಲಾರದು.
'ಮಾನವ ಕುಲಂ ತಾನೋಂದೇ' ವಲಂ ಎನ್ನುವಂತೆ ವೇದ, ಕುರಾನ್ ಆಚೆಗೆ ನಮ್ಮನ್ನೆಲ್ಲಾ ಕೊಂಡೋಯ್ದು ಮಠ, ಮಂದಿರ, ಚಚರ್್, ಮಸೀದಿಗಳ ತೊರೆದು ಹೊರಬಂದು ಮಾನವೀಯ ಮೌಲ್ಯಗಳ ಆವಿರ್ಭವಿಸಿಕೊಳ್ಳುವಂತೆ ಕರೆನೀಡಿದ ಮಾನವತಾವಾದಿ ಜ.ಹೊ.ನಾ.
ಜ.ಹೊ.ನಾ ಎಂದೇ ಪ್ರಸಿದ್ಧಿ ಪಡೆದ ನಾರಾಯಣ ಸ್ವಾಮಿಯವರು 1941 ಜುಲೈ 13 ರಂದು ಹಾಸನ ತಾಲ್ಲೂಕಿನ ಜನಿವಾರ ಗ್ರಾಮದ ಶ್ರೀ ಹೊನ್ನಯ್ಯ ಮತ್ತು ಶ್ರೀಮತಿ ತಿಮ್ಮಮ್ಮ ದಂಪತಿಗಳ ಗಭರ್ಾಂಬುದಿಯಲ್ಲಿ ಜನಿಸಿದರು.
ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣವನ್ನು ಹಾಸನದಲ್ಲಿಯೇ ಪಡೆದ ಇವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋದರು. ಅಲ್ಲಿನ ಸಿಟಿ ಕೋ ಆಪರೇಟೀವ್ ಬ್ಯಾಂಕ್ ಲಿ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ, ಹಾಗೂ ಅರ್ಥಮೂವರ್ಸ್ ಲಿಮಿಟೆಡ್ಗಳಲ್ಲಿ ಸೇವೆ ಮಡುತ್ತಲೇ ಬಿ.ಕಾಂ; ಬಿ.ಎಲ್; ಎಂ.ಎ; ಡಿಪ್ಲಾಮೋ ಇನ್ ಡ್ರಾಮಾ ಪದವಿಗಳನ್ನು ಮುಗಿಸಿದರು. ಅನಂತರ ಪುನಃ ತವರಿಗೆ ಹಿಂದಿರುಗಿ 1977 ರಿಂದ ವಕೀಲಿ ವೃತ್ತಿ ನಡೆಸಿ ನಂತರ ಎರಡು ಅವಧಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ ಕೀರ್ತಿ ಜ.ಹೊ.ನಾ ಅವರದ್ದು.
ಹಾಗೆಯೇ ಇತಿಹಾಸ ಪುಟಗಳನ್ನು ಅವಲೋಕಿಸಿ ಕೊಂಕು, ಅಸಂಬದ್ಧವಾಗಿ ಕಂಡು ಬಂದ ವಿಷಯಗಳನ್ನು ಜಾಲಾಡಿ ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಬುದ್ಧ ಪ್ರಬಂಧಗಳ ರೂಪದಲ್ಲಿ ಸಾಹಿತ್ಯ ನೀಡಿದ್ದಾರೆ. ಎಲ್ಲೋ ಹುದುಗಿದ್ದ ಅಂತರ್ಚಕ್ಷನ್ನು ತೆರೆಸಿದ್ದಾರೆ. ಸಾಮಾಜಿಕ, ಪ್ರಗತಿಪರ ಚಿಂತನೆಗಳೆಡೆಗೆ ಮನ ತೆರೆದುಕೊಳ್ಳುವಂತೆ ಹುರಿದುಂಬಿಸಿದ್ದಾರೆ.
ಹಲವರು ಜ.ಹೊ.ನಾ ಎಡ ಪಂಥೀಯ ಎಂದು ಅಭಿಪ್ರಾಯ ಪಡುವುದುಂಟು, ಆದರೆ ನಾನು ಬಹು ಹತ್ತಿರವಾಗಿ ಗಮನಿಸಿರುವಂತೆ ಅವರು ಯಾವ ಪಂಥಕ್ಕೂ ಮೀಸಲಾಗದೆ ಮಾನವೀಯ ಮೌಲ್ಯಗಳಿಗೆ ಬದ್ಧರಾದರು. ವಿಚಾರವಾದಿಗಳು ಅಂತೆಯೇ ನಿಷ್ಠುರವಾದಿಗಳು. ಜ.ಹೊ.ನಾ ಅವರು ವಿವೇಕಾನಂದರ ಆಚಾರ, ಕುವೆಂಪುರವರ ವಿಚಾರಗಳ ಸಮ್ಮಿಲನವಾಗಿದ್ದಾರೆ.
ಒಂದು ಕಡೆ ವಿಚಾರವಾದಿ ಪೆರಿಯಾರ್ ರಾಮಸ್ವಾಮಿ 'ಬ್ರಾಹ್ಮಣರು ಸಾಮಾಜಿಕವಾಗಿ ಜಾತಿವಾದಿಗಳಾದರೆ, ಶೂದ್ರರು ವೈಯಕ್ತಿಕವಾಗಿ ಜಾತಿವಾದಿಗಳು' ಎಂದಿದ್ದಾರೆ. ಅದು ಅಕ್ಷರ ಸಹ ಸತ್ಯ . ತಮ್ಮ ಕೋಮಿನ ಹಿತಕ್ಕಾಗಿ ಬ್ರಾಹ್ಮಣರು ತ್ಯಾಗ ಮಾಡಿದರೆ, ಸ್ವಂತ ಪ್ರತಿಷ್ಠೆಗಾಗಿ ಶೂದ್ರರು ತಮ್ಮ ಜನಾಂಗವನ್ನು ಬಲಿಕೊಡುತ್ತಾರೆ. ಅಧಿಕಾರದ ಆಸೆ ಆಮಿಷಗಳಿಗೆ ಒಳಗಾದ ಜನರು ಎಂಥ ಪ್ರತಿಗಾಮಿ ಕಾರ್ಯಕ್ಕೂ ಇಳಿಯುತ್ತಾರೆ. ಇದನ್ನೇಕೆ ಇಲ್ಲಿ ಪ್ರಸ್ತಾಪಿಸಿದೆನೆಂದರೆ ಈ ಮೇಲಿನ ಎರಡೂ ಅಂಶಗಳನ್ನು ಹೊರತು ಪಡಿಸಿ ಜ.ಹೊ.ನಾ ಸಾಹಿತ್ಯ ನಮ್ಮೆದುರಿಗೆ ನಿಲ್ಲುತ್ತದೆ.
'ಹರಿಯುವ ನದಿಗಳು ಹೇಗೆ ತಮ್ಮ ಹೆಸರು, ಆಕಾರಗಳನ್ನು ಬಿಟ್ಟು ಸಮುದ್ರದಲ್ಲಿ ಸೇರಿ ಹೋಗುತ್ತವೆಯೋ ಹಾಗೆಯೇ ಜ್ಞಾನಿ ನಾಮ ರೂಪಗಳಿಂದ ಬಿಡುಗಡೆ ಪಡೆದು ಪರಾತ್ಪರನಾದ ದಿವ್ಯ ಪುರುಷನನ್ನು ಹೊಂದುತ್ತಾನೆ' ಎಂದು ಉಪನಿಷತ್ತಿನಲ್ಲಿ ಬರುತ್ತದೆ. ಅಂತೆಯೇ ಮಾನವ ವೈಶಾಲ್ಯತೆಯಡೆಗೆ ಸಾಗಬೇಕು, ವೈಚಾರಿಕ ಪ್ರಗತಿ ಹೊಂದಬೇಕೆಂಬ ಮಹದಾಶಯ ಜ.ಹೊ.ನಾ ಅವರದ್ದು.
ಇವರು ಈಗಾಗಲೇ 25ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವುಗಳಲ್ಲಿ ನನ್ನ ಅತ್ಯಾಕರ್ಷಣೆ ಮಾಡಿದ ಕೃತಿಗಳು ಮೊದಲನೆಯದು 'ಅಧಮ್ಯ'ವಾದರೆ ಎರಡನೆಯದಾಗಿ 'ವಿವೇಕಾನಂದರು ಮತ್ತು ಕ್ರಾಂತಿಕಾರಕ ವಿಚಾರಗಳು'.
ಪ್ರಕೃತಿಯಿಂದಲೇ ಬರುವ ಇಂಥ ಅಪರೂಪದ ಹೃದಯ ವೈಶಾಲ್ಯತೆಯನ್ನು ಕಳೆದುಕೊಳ್ಳದೆ ಉಳಿಸಿಕೊಂಡು ಬೆಳೆಸಿಕೊಳ್ಳುವುದೇ ಜೀವನದ ಪರಮಗಂತವ್ಯ. ಮನೋಹೃದಯ ವೈಶಲ್ಯತೆಯ ಇಂಥ ಅದ್ಭುತ ಚಿತ್ರಣ ಜಗತ್ತಿನ ಬೇರಾವ ಸಾಹಿತ್ಯದಲ್ಲೂ ಲಭ್ಯವಾಗಿಲ್ಲ ಎನ್ನಬಹುದು. ನಾನು ಓದಿದಂತೆ ಅದಮ್ಯ ಕನ್ನಡ ಸಾಹಿತ್ಯದ ಸರ್ವಶ್ರೇಷ್ಠ ಕೃತಿಯಾಗಿದೆ. ಇದು ಪ್ರತಿಯೊಬ್ಬ ವ್ಯಕ್ತಿಯೂ ಓದಲೇ ಬೇಕಾದ ಪುಸ್ತಕ. ಇಲ್ಲಿ ಜ.ಹೊ.ನಾ ಕುವೆಂಪುರವರ ಶಿಷ್ಯರಾದರೂ ಇವರೀರ್ವರಲ್ಲಿನ ಅಜ್ಞಾತ ಶಕ್ತಿ ವಿಶಿಷ್ಠ ಹಾಗೂ ವಿಭಿನ್ನವಾದುದೆನ್ನಿಸಿತು. ಏಕಲವ್ಯನನ್ನು ಕುವೆಂಪು ತಮ್ಮ 'ಬೆರಳ್ಗೆ ಕೊರಳ್' ಕೃತಿಯಲ್ಲಿ ನೋಡಿದ್ದು ಅದ್ಭುತವೆನಿಸಿದ್ದು ನಿಜ. ಅಂತಿಮವಾಗಿ ಏಕಲವ್ಯನ ಉಂಗುಲಿಯ ಬಲಿದಾನ ನಡೆಯುತ್ತದೆ. ಆದರೆ ಜ.ಹೊ.ನಾ ಕುವೆಂಪುರವರಾಚೆಗೂ ಹೋಗಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಪ್ರಾಕೃತಿಕ ಶಾಂತಿ ಬಯಸಿದ್ದು, ಮನಪರಿವತರ್ಿಸಿದ ಬಗೆ ಅತ್ಯದ್ಭುತ ಹಾಗೂ ಅಮೋಘವಾದುದೆಂದರೆ ಅತಿಶಯೋಕ್ತಿಯಾಗಲಾರದು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಜ.ಹೊ.ನಾ ನೀಡಿದ ಅಪೂರ್ವ ಕೊಡುಗೆ ಎನಿಸುತ್ತದೆ. ಇಲ್ಲಿ ವೈಚಾರಿಕ ಪ್ರವಾಹವೇ ಹರಿದಿದೆ ಎನ್ನಬಹುದು. ಈ ರಚನಾ ಸಂದರ್ಭದಲ್ಲಿ ಸಂಯಮ, ವಿವೇಕಗಳು ಜ.ಹೊ.ನಾ ರನ್ನು ಆವಿರ್ಭವಿಸಿಕೊಂಡು ಅಂತರ್ಮುಖಿ ಚಿಂತನೆ ಹರಿಯಬಿಟ್ಟಿವೆ. ಆದ್ದರಿಂದ ಈ ಕೃತಿ ಓದುಗನ ಹೃದಯದಂತರಾಳಕ್ಕಿಳಿದು ಹೊಸ ಜಗತ್ತಿನ ಚಿತ್ರಣವನ್ನು, ಮಾನವೀಯ ಸಂವೇದನೆಯನ್ನು ಪ್ರಜ್ವಲಿಸುತ್ತದೆ.
ಜಾತಿ, ಧರ್ಮ, ದೇವರುಗಳೆಂಬ ಮೌಢ್ಯದಲ್ಲಿ ಸಿಕ್ಕು ಭಾರತ ನಲುಗುತ್ತಿರುವುದನ್ನು ಜ.ಹೊ.ನಾ ತಮ್ಮ ಅನೇಕ ಕೃತಿಗಳಲ್ಲಿ ವೈಚಾರಿಕವಾಗಿ ಮಂಡಿಸಿದ್ದಾರೆ. ಇವರ ಕೃತಿಗಳನ್ನು ಓದುವಾಗಲೆಲ್ಲಾ ಥಟ್ಟನೇ ನಮ್ಮೆದುರಿಗೆ ಬುದ್ಧ, ವಿವೇಕಾನಂದ, ಮಹಾತ್ಮಾ ಪುಲೆ, ಓಶೋ, ಕುವೆಂಪು, ಪೆರಿಯಾರ್, ಲೋಹಿಯ ಮುಂತಾದವರು ಒಂದು ಕ್ಷಣ ಸುಳಿದು ಹೋಗುತ್ತಾರೆ. ಇವರೆಲ್ಲರಾದಿಯಾಗಿ ಭಾರತದಲ್ಲಿ ವೈಚಾರಿಕ ಕ್ರಾಂತಿಯೇ ಹರಿದಿದೆ. ಆದರೂ ಸಮಾಜ ಸಂಪ್ರದಾಯದ ಹೊಲಸಿನಿಂದ ಮುಕ್ತವಾಗುತ್ತಿಲ್ಲ. ಆದ್ದರಿಂದಲೇ ವಿವೇಕಾನಂದರು ಒಂದು ಕಡೆ ...... ಎಲ್ಲಾ ಮೂಢ ನಂಬಿಕೆಗಳನ್ನು ಧ್ವಂಸ ಮಾಡಿ, ಧರ್ಮಗುರುಗಳು, ಧರ್ಮಗ್ರಂಥಗಳು, ದೇವತೆಗಳು ಯಾರು ಇಲ್ಲ. ದೇವಸ್ಥಾನಗಳನ್ನು, ಪೂಜಾರಿಗಳನ್ನು, ದೇವತೆಗಳನ್ನು, ಅವತಾರಗಳನ್ನು ಕೊನೆಗೆ ದೇವರನ್ನೇ ಧ್ವಂಸ ಮಾಡಿ, ನಾನೇ ದೇವರು. ಬೇರೇನೂ ಇಲ್ಲ ತತ್ತ್ವಜ್ಞಾನಿಗಳೇ ಎದ್ದು ನಿಲ್ಲಿ ಭಯಬೇಡ. ದೇವರ ಬಗ್ಗೆ, ಪ್ರಪಂಚದ ಮೌಢ್ಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಸತ್ಯವೇ ಗೆಲ್ಲುವುದು. ಎಲ್ಲಾ ಮೌಢ್ಯಗಳು ಪೊಳ್ಳು ಕಲ್ಪನೆಗಳು... ದೇವರು ಹುಟ್ಟಿದ್ದು ನನ್ನ ಮನಸ್ಸಿನಲ್ಲಿ.... ನಾನೇ ಅವನನ್ನು ನನ್ನ ಮನಸ್ಸಿನಲ್ಲಿ ಸೃಷ್ಠಿಸಿದೆ. ಎಲ್ಲಾ ಮೂಢನಂಬಿಕೆಗಳನ್ನು ತ್ಯಜಿಸಿ... ಎಂದು ಕರೆ ಕೊಟ್ಟಿದ್ದಾರೆ
ಈ ಕರೆಗೆ ಕಿವಿಕೊಟ್ಟು ಕಾರ್ಯತತ್ಪರರಾದವರು ಮಾತ್ರ ಕೇಲವೆ ಕೆಲವರು. ಕುವೆಂಪುರಾದಿಯಾಗಿ ಲೋಹಿಯಾ, ಲಂಕೇಶ್, ಪೆರಿಯಾರ್, ದೇ. ಜ. ಗೌ, ಜ.ಹೊ. ನಾ, ಸಿ.ಪಿ.ಕೆ, ಭಗವಾನ್ ಮುಂತಾದವರು ನಮ್ಮೆದುರಿಗೆ ನಿಲ್ಲುತ್ತಾರೆ.
ಅದರಲ್ಲು ಜ.ಹೊ.ನಾ ತಮ್ಮ ಬದುಕಿನ ಬಹುಭಾಗವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಟ್ಟು ವೈಚಾರಿಕ ಮನೋಧಮರ್ಿಯಾಗಿ ಬಾಳಿದ್ದಾರೆ. ಇವರ ವಿಚಾರ ಲಹರಿಗಳನ್ನು ಅರಿಯಬೇಕಾದರೆ ಇವರ ಕೃತಿಗಳ ಅಧ್ಯಯನ ಮಾಡಲೇಬೇಕು.
ಒಬ್ಬ ವ್ಯಕ್ತಿಯು ಒಂದು ಮಹಾನ್ ಶಕ್ತಿಯಾಗಿ ರೂಪುಗೊಳ್ಳುವುದಕ್ಕೆ ಅನೇಕ ಚೇತನಗಳ ಸ್ಫೂತರ್ಿ ಆದರ್ಶಗಳು ಸಹಕಾರಿಯಾಗಿರುತ್ತದೆ. ಅಂತಹ ಒಂದು ಸ್ಫೂರ್ತಿ ಕುವೆಂಪುರಾದಿಯಾಗಿ ಅನೇಕರ ಸಹಕಾರ ಜ.ಹೊ.ನಾ ರವರಿಗೆ ಸಿಕ್ಕಿದೆ. ಆದ್ದರಿಂದಲೇ ನಮ್ಮೆದುರಿಗೆ ವೈಚಾರಿಕ ಕ್ರಾಂತಿಯ ಮಹಾನ್ ಶಕ್ತಿಯಾಗಿ ಇವರು ಗೋಚರಿಸುತ್ತಾರೆ. ಗುಲಾಮಗಿರಿ, ದೌರ್ಜನ್ಯ, ದಬ್ಬಾಳಿಕೆ, ಬಡತನ, ದಾರಿದ್ರ್ಯ, ಹಿಂಸೆ. ಶೋಷಣೆ, ಹಸಿವು, ಭ್ರಷ್ಟಾಚಾರ ಹೀಗೆ ಹಲವಾರು ಸಾಮಾಜಿಕ ಕಂಟಕಗಳ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಹರಿತವಾದ ಭಾವಲಹರಿ ಮಿಳಿತಗೊಳಿಸಿದ್ದಾರೆ. ಮಾರ್ಗೋಪಾಯ ಸೂಸಿದ್ದಾರೆ. ಮಾನವತ್ತ್ವದ ನೆಲೆ ಕಂಡುಕೊಳ್ಳುವ ಬಗೆಯನ್ನು ತೆರೆದಿಟ್ಟಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಹಾಸನ ಜಿಲ್ಲಾ ಬಿ.ಜಿ.ವಿ.ಎಸ್. ಸಂಸ್ಥಾಪಕ ಅಧ್ಯಕ್ಷರಾಗಿ, ಸಾಕ್ಷರತಾ ಆಂದೋಲನದ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದಶರ್ಿಯಾಗಿ, 'ಸಂವೇದನಾ ಕಲಾವಿದರು' ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಬರಹಗಾರರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಜ.ಹೊ.ನಾ ನಾಡಿನಾದ್ಯಾಂತ ಪ್ರಖ್ಯಾತರಾದವರು, ಇವರ ಅನೇಕ ಕೃತಿಗಳು ವಿವಿಧ ವಿಶ್ವವಿದ್ಯಾನಿಲಯಗಳಿಂದ, ಕನ್ನಡ ಪ್ರಾಧಿಕಾರಗಳಿಂದ ಪ್ರಕಟಗೊಂಡಿವೆ, ರೈತ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಇವರು ಅನೇಕ ಸಮಾಜ ಪರ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸಾಹಿತ್ಯಗೋಷ್ಠಿ, ಕವಿಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕವಿತೆ ವಾಚಿಸಿದ್ದಾರೆ. ಅದ್ಭುತ ನಟ ಹಾಗೂ ನಾಟಕಕಾರರೂ ಆದ ಇವರು ಸಂಕ್ರಾತಿ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೆಯೇ 'ಜೇನುಗೂಡು' ಧಾರವಾಹಿಯಲ್ಲಿ ಅಭಿನಯಿಸಿದ್ದಾರೆ.
ಜಗದ ತೊಟ್ಟಿಲು-ಕವನ ಸಂಕಲನ ; ಬೆಳಕಿನ ದಾರಿ, ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು, ವೇದ ಕುರಾನ್ ಆಚೆಗೆ, ವಿವೇಕಾನಂದ ಮಾನವತೆಗಾಗಿ ಕಾವಿಯೊಳಗೆ ಕುದಿದ ಕೆಂಡ, ಆವರಣ-ಅನಾವರಣ, ಬ್ರಾಹ್ಮಣ್ಯದ ತಂತ್ರಗಳು, ಸಂಪ್ರದಾಯದ ನೇಣುಗಂಬ, ಚೈತನ್ಯದ ಪೂಜೆ ಮುಂತಾದ ವೈಚಾರಿಕ ಕೃತಿಗಳು ; ನರಬಲಿ,-ನಾಟಕ, ; ಅದಮ್ಯ, ಸಿದ್ಧಾರ್ಥ-ಕಾದಂಬರಿಗಳು ; ಸ್ವಾಮಿ ವಿವೇಕಾನಂದ, ಜಯಪ್ರಕಾಶ ನಾರಾಯಣ, ಭಗತ್ ಸಿಂಗ್, ನಿಷ್ಠನ್ಯಾಯವಾದಿ ಹೆಚ್.ಎಸ್.ಎಂ. ; ಕಾರುಗೋಡಿನ ತೊಟ್ಟಿಮನೆ ಕೆ.ಎಂ. ಚಂದ್ರಶೇಖರ್ ಮುಂತಾದ ಜೀವನ ಚರಿತ್ರೆಗಳು ; ಹರ್ಮನ್ಸೇನ್-ವಾಚಿಕೆ; ಶ್ರೀಕುವೆಂಪು-ಸಂಕೀರ್ಣ; ಭಾರತದ ರೈತ-ಅನುವಾದ; ಬೇಲೂರು ಹಳೆಬೀಡು-ನವಸಾಕ್ಷರಿಗಾಗಿ ಬರೆದ ಬರಹಗಳು ಹೀಗೆ ಅನೇಕ ಬಗೆಯ ಕೃತಿಗಳನ್ನು ಜ.ಹೊ.ನಾ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಇವರ 'ವೇದ ಕುರಾನ್ ಆಚೆಗೆ' ಕೃತಿಗೆ ಡಾ|| ಹೆಚ್. ನರಸಿಂಹಯ್ಯ ದತ್ತಿನಿಧಿ ಪ್ರಶಸ್ತಿ, ಬಂದಿದೆ. ಅಲ್ಲದೇ ಅನಿಕೇತನ ಪ್ರಶಸ್ತಿ, ಹಾಸನ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಹಾಗೂ ಹಲವು ಸಂಘಗಳಿಂದ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ. ಇವರ ಸಾಹಿತ್ಯಿಕ ಅಹರ್ನಿಶಿ ಸೇವೆಗಾಗಿ ಹಾಸನ ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷತೆ ಇವರನ್ನಲಂಕರಿಸಿತ್ತು.
ಮೌಢ್ಯದ ಕಂದಾಚಾರದಲ್ಲಿ ಮುಳುಗಿದ್ದ ಅನೇಕ ಮನಸ್ಸುಗಳನ್ನು ಪರಿವರ್ತನೆ ಮಾಡುತ್ತಾ ಯುವ ಬರಗಾರರಿಗೆ ವೈಚಾರಿಕ ತಳಹದಿ ಹಾಕಿಕೊಟ್ಟು ಮಾರ್ಗದರ್ಶನ ನೀಡುತ್ತಿರುವ ಜ.ಹೊ.ನಾ ಕನ್ನಡದ ಪ್ರತಿಭಾನ್ವಿತ ದಿಗ್ಗಜ ಸಾಹಿತ್ಯ ವಲಯದ ಪ್ರಮುಖರು. ನೂರಾರು ಕವಲು ದಾರಿಗಳು ಜ.ಹೊ. ನಾ. ಎಂಬ ಹೆದ್ದಾರಿಯಲ್ಲಿ ಸೇರಬೇಕಿದೆ.
ಅಕ್ಷರಶಃ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಅಂತರ್ಗತಗೊಳಿಸಿಕೊಂಡು, ಕುವೆಂಪುರವರ ಸನ್ಮಾರ್ಗದಲ್ಲಿ ಸಾಗಿ ಸಮಾಜದ ಸಂಪ್ರದಾಯ ಮನಸ್ಸುಗಳನ್ನು ಬಡಿದೆಬ್ಬಿಸಿ ವೈಜ್ಞಾನಿಕ ತಳಹದಿಯಲ್ಲಿ ಚಿಂತಿಸುವಂತೆ ಪ್ರೇರೇಪಿಸಿದವರು.
ಕಾಲ ನಿಂತ ನೀರಲ್ಲ, ಸದಾ ಚಲನಶೀಲ. ಅಂತೆಯೇ ಸಾಹಿತ್ಯಿಕ ಆಲೋಚನೆಗಳು ಆಧುನಿಕತೆಗೆ ತಕ್ಕಂತೆ ವಿಚಾರಕ್ಕೆ ನಿಲುಕುವಂತೆ ತೆರೆದುಕೊಳ್ಳುತ್ತಾ ಸಾಗಬೇಕು. ಸಾಮಾಜಿಕ ಮೌಢ್ಯ ಸಂಪ್ರದಾಯಗಳ ಘೋರಿಯ ಮೇಲೆ ವೈಚಾರಿಕ ಹೂ ಗಿಡಗಳನ್ನು ಬೆಳೆಸುವ ದಿಸೆಯಲ್ಲಿ ಕಳೆದ ಐದಾರು ದಶಕಗಳಿಂದ ಮೂರ್ಖ ಸಂಪ್ರದಾಯಿಗಳ, ಕೋಮುವಾದಿಗಳ, ಜಾತಿವಾದಿಗಳ ವಿರೋಧಗಳ ನಡುವೆಯೂ ಎದೆಗುಂದದೆ ಮುನ್ನುಗ್ಗಿ ಬಂದ ಧೀಶಕ್ತಿ ಸಾಹಿತ್ಯ ಜ.ಹೊ.ನಾ ಅವರದ್ದು ಎಂದರೆ ಅತಿಶಯೋಕ್ತಿಯಾಗಲಾರದು.
'ಮಾನವ ಕುಲಂ ತಾನೋಂದೇ' ವಲಂ ಎನ್ನುವಂತೆ ವೇದ, ಕುರಾನ್ ಆಚೆಗೆ ನಮ್ಮನ್ನೆಲ್ಲಾ ಕೊಂಡೋಯ್ದು ಮಠ, ಮಂದಿರ, ಚಚರ್್, ಮಸೀದಿಗಳ ತೊರೆದು ಹೊರಬಂದು ಮಾನವೀಯ ಮೌಲ್ಯಗಳ ಆವಿರ್ಭವಿಸಿಕೊಳ್ಳುವಂತೆ ಕರೆನೀಡಿದ ಮಾನವತಾವಾದಿ ಜ.ಹೊ.ನಾ.
ಜ.ಹೊ.ನಾ ಎಂದೇ ಪ್ರಸಿದ್ಧಿ ಪಡೆದ ನಾರಾಯಣ ಸ್ವಾಮಿಯವರು 1941 ಜುಲೈ 13 ರಂದು ಹಾಸನ ತಾಲ್ಲೂಕಿನ ಜನಿವಾರ ಗ್ರಾಮದ ಶ್ರೀ ಹೊನ್ನಯ್ಯ ಮತ್ತು ಶ್ರೀಮತಿ ತಿಮ್ಮಮ್ಮ ದಂಪತಿಗಳ ಗಭರ್ಾಂಬುದಿಯಲ್ಲಿ ಜನಿಸಿದರು.
ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣವನ್ನು ಹಾಸನದಲ್ಲಿಯೇ ಪಡೆದ ಇವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋದರು. ಅಲ್ಲಿನ ಸಿಟಿ ಕೋ ಆಪರೇಟೀವ್ ಬ್ಯಾಂಕ್ ಲಿ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ, ಹಾಗೂ ಅರ್ಥಮೂವರ್ಸ್ ಲಿಮಿಟೆಡ್ಗಳಲ್ಲಿ ಸೇವೆ ಮಡುತ್ತಲೇ ಬಿ.ಕಾಂ; ಬಿ.ಎಲ್; ಎಂ.ಎ; ಡಿಪ್ಲಾಮೋ ಇನ್ ಡ್ರಾಮಾ ಪದವಿಗಳನ್ನು ಮುಗಿಸಿದರು. ಅನಂತರ ಪುನಃ ತವರಿಗೆ ಹಿಂದಿರುಗಿ 1977 ರಿಂದ ವಕೀಲಿ ವೃತ್ತಿ ನಡೆಸಿ ನಂತರ ಎರಡು ಅವಧಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ ಕೀರ್ತಿ ಜ.ಹೊ.ನಾ ಅವರದ್ದು.
ಹಾಗೆಯೇ ಇತಿಹಾಸ ಪುಟಗಳನ್ನು ಅವಲೋಕಿಸಿ ಕೊಂಕು, ಅಸಂಬದ್ಧವಾಗಿ ಕಂಡು ಬಂದ ವಿಷಯಗಳನ್ನು ಜಾಲಾಡಿ ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಬುದ್ಧ ಪ್ರಬಂಧಗಳ ರೂಪದಲ್ಲಿ ಸಾಹಿತ್ಯ ನೀಡಿದ್ದಾರೆ. ಎಲ್ಲೋ ಹುದುಗಿದ್ದ ಅಂತರ್ಚಕ್ಷನ್ನು ತೆರೆಸಿದ್ದಾರೆ. ಸಾಮಾಜಿಕ, ಪ್ರಗತಿಪರ ಚಿಂತನೆಗಳೆಡೆಗೆ ಮನ ತೆರೆದುಕೊಳ್ಳುವಂತೆ ಹುರಿದುಂಬಿಸಿದ್ದಾರೆ.
ಹಲವರು ಜ.ಹೊ.ನಾ ಎಡ ಪಂಥೀಯ ಎಂದು ಅಭಿಪ್ರಾಯ ಪಡುವುದುಂಟು, ಆದರೆ ನಾನು ಬಹು ಹತ್ತಿರವಾಗಿ ಗಮನಿಸಿರುವಂತೆ ಅವರು ಯಾವ ಪಂಥಕ್ಕೂ ಮೀಸಲಾಗದೆ ಮಾನವೀಯ ಮೌಲ್ಯಗಳಿಗೆ ಬದ್ಧರಾದರು. ವಿಚಾರವಾದಿಗಳು ಅಂತೆಯೇ ನಿಷ್ಠುರವಾದಿಗಳು. ಜ.ಹೊ.ನಾ ಅವರು ವಿವೇಕಾನಂದರ ಆಚಾರ, ಕುವೆಂಪುರವರ ವಿಚಾರಗಳ ಸಮ್ಮಿಲನವಾಗಿದ್ದಾರೆ.
ಒಂದು ಕಡೆ ವಿಚಾರವಾದಿ ಪೆರಿಯಾರ್ ರಾಮಸ್ವಾಮಿ 'ಬ್ರಾಹ್ಮಣರು ಸಾಮಾಜಿಕವಾಗಿ ಜಾತಿವಾದಿಗಳಾದರೆ, ಶೂದ್ರರು ವೈಯಕ್ತಿಕವಾಗಿ ಜಾತಿವಾದಿಗಳು' ಎಂದಿದ್ದಾರೆ. ಅದು ಅಕ್ಷರ ಸಹ ಸತ್ಯ . ತಮ್ಮ ಕೋಮಿನ ಹಿತಕ್ಕಾಗಿ ಬ್ರಾಹ್ಮಣರು ತ್ಯಾಗ ಮಾಡಿದರೆ, ಸ್ವಂತ ಪ್ರತಿಷ್ಠೆಗಾಗಿ ಶೂದ್ರರು ತಮ್ಮ ಜನಾಂಗವನ್ನು ಬಲಿಕೊಡುತ್ತಾರೆ. ಅಧಿಕಾರದ ಆಸೆ ಆಮಿಷಗಳಿಗೆ ಒಳಗಾದ ಜನರು ಎಂಥ ಪ್ರತಿಗಾಮಿ ಕಾರ್ಯಕ್ಕೂ ಇಳಿಯುತ್ತಾರೆ. ಇದನ್ನೇಕೆ ಇಲ್ಲಿ ಪ್ರಸ್ತಾಪಿಸಿದೆನೆಂದರೆ ಈ ಮೇಲಿನ ಎರಡೂ ಅಂಶಗಳನ್ನು ಹೊರತು ಪಡಿಸಿ ಜ.ಹೊ.ನಾ ಸಾಹಿತ್ಯ ನಮ್ಮೆದುರಿಗೆ ನಿಲ್ಲುತ್ತದೆ.
'ಹರಿಯುವ ನದಿಗಳು ಹೇಗೆ ತಮ್ಮ ಹೆಸರು, ಆಕಾರಗಳನ್ನು ಬಿಟ್ಟು ಸಮುದ್ರದಲ್ಲಿ ಸೇರಿ ಹೋಗುತ್ತವೆಯೋ ಹಾಗೆಯೇ ಜ್ಞಾನಿ ನಾಮ ರೂಪಗಳಿಂದ ಬಿಡುಗಡೆ ಪಡೆದು ಪರಾತ್ಪರನಾದ ದಿವ್ಯ ಪುರುಷನನ್ನು ಹೊಂದುತ್ತಾನೆ' ಎಂದು ಉಪನಿಷತ್ತಿನಲ್ಲಿ ಬರುತ್ತದೆ. ಅಂತೆಯೇ ಮಾನವ ವೈಶಾಲ್ಯತೆಯಡೆಗೆ ಸಾಗಬೇಕು, ವೈಚಾರಿಕ ಪ್ರಗತಿ ಹೊಂದಬೇಕೆಂಬ ಮಹದಾಶಯ ಜ.ಹೊ.ನಾ ಅವರದ್ದು.

ಪ್ರಕೃತಿಯಿಂದಲೇ ಬರುವ ಇಂಥ ಅಪರೂಪದ ಹೃದಯ ವೈಶಾಲ್ಯತೆಯನ್ನು ಕಳೆದುಕೊಳ್ಳದೆ ಉಳಿಸಿಕೊಂಡು ಬೆಳೆಸಿಕೊಳ್ಳುವುದೇ ಜೀವನದ ಪರಮಗಂತವ್ಯ. ಮನೋಹೃದಯ ವೈಶಲ್ಯತೆಯ ಇಂಥ ಅದ್ಭುತ ಚಿತ್ರಣ ಜಗತ್ತಿನ ಬೇರಾವ ಸಾಹಿತ್ಯದಲ್ಲೂ ಲಭ್ಯವಾಗಿಲ್ಲ ಎನ್ನಬಹುದು. ನಾನು ಓದಿದಂತೆ ಅದಮ್ಯ ಕನ್ನಡ ಸಾಹಿತ್ಯದ ಸರ್ವಶ್ರೇಷ್ಠ ಕೃತಿಯಾಗಿದೆ. ಇದು ಪ್ರತಿಯೊಬ್ಬ ವ್ಯಕ್ತಿಯೂ ಓದಲೇ ಬೇಕಾದ ಪುಸ್ತಕ. ಇಲ್ಲಿ ಜ.ಹೊ.ನಾ ಕುವೆಂಪುರವರ ಶಿಷ್ಯರಾದರೂ ಇವರೀರ್ವರಲ್ಲಿನ ಅಜ್ಞಾತ ಶಕ್ತಿ ವಿಶಿಷ್ಠ ಹಾಗೂ ವಿಭಿನ್ನವಾದುದೆನ್ನಿಸಿತು. ಏಕಲವ್ಯನನ್ನು ಕುವೆಂಪು ತಮ್ಮ 'ಬೆರಳ್ಗೆ ಕೊರಳ್' ಕೃತಿಯಲ್ಲಿ ನೋಡಿದ್ದು ಅದ್ಭುತವೆನಿಸಿದ್ದು ನಿಜ. ಅಂತಿಮವಾಗಿ ಏಕಲವ್ಯನ ಉಂಗುಲಿಯ ಬಲಿದಾನ ನಡೆಯುತ್ತದೆ. ಆದರೆ ಜ.ಹೊ.ನಾ ಕುವೆಂಪುರವರಾಚೆಗೂ ಹೋಗಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಪ್ರಾಕೃತಿಕ ಶಾಂತಿ ಬಯಸಿದ್ದು, ಮನಪರಿವತರ್ಿಸಿದ ಬಗೆ ಅತ್ಯದ್ಭುತ ಹಾಗೂ ಅಮೋಘವಾದುದೆಂದರೆ ಅತಿಶಯೋಕ್ತಿಯಾಗಲಾರದು. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಜ.ಹೊ.ನಾ ನೀಡಿದ ಅಪೂರ್ವ ಕೊಡುಗೆ ಎನಿಸುತ್ತದೆ. ಇಲ್ಲಿ ವೈಚಾರಿಕ ಪ್ರವಾಹವೇ ಹರಿದಿದೆ ಎನ್ನಬಹುದು. ಈ ರಚನಾ ಸಂದರ್ಭದಲ್ಲಿ ಸಂಯಮ, ವಿವೇಕಗಳು ಜ.ಹೊ.ನಾ ರನ್ನು ಆವಿರ್ಭವಿಸಿಕೊಂಡು ಅಂತರ್ಮುಖಿ ಚಿಂತನೆ ಹರಿಯಬಿಟ್ಟಿವೆ. ಆದ್ದರಿಂದ ಈ ಕೃತಿ ಓದುಗನ ಹೃದಯದಂತರಾಳಕ್ಕಿಳಿದು ಹೊಸ ಜಗತ್ತಿನ ಚಿತ್ರಣವನ್ನು, ಮಾನವೀಯ ಸಂವೇದನೆಯನ್ನು ಪ್ರಜ್ವಲಿಸುತ್ತದೆ.
ಜಾತಿ, ಧರ್ಮ, ದೇವರುಗಳೆಂಬ ಮೌಢ್ಯದಲ್ಲಿ ಸಿಕ್ಕು ಭಾರತ ನಲುಗುತ್ತಿರುವುದನ್ನು ಜ.ಹೊ.ನಾ ತಮ್ಮ ಅನೇಕ ಕೃತಿಗಳಲ್ಲಿ ವೈಚಾರಿಕವಾಗಿ ಮಂಡಿಸಿದ್ದಾರೆ. ಇವರ ಕೃತಿಗಳನ್ನು ಓದುವಾಗಲೆಲ್ಲಾ ಥಟ್ಟನೇ ನಮ್ಮೆದುರಿಗೆ ಬುದ್ಧ, ವಿವೇಕಾನಂದ, ಮಹಾತ್ಮಾ ಪುಲೆ, ಓಶೋ, ಕುವೆಂಪು, ಪೆರಿಯಾರ್, ಲೋಹಿಯ ಮುಂತಾದವರು ಒಂದು ಕ್ಷಣ ಸುಳಿದು ಹೋಗುತ್ತಾರೆ. ಇವರೆಲ್ಲರಾದಿಯಾಗಿ ಭಾರತದಲ್ಲಿ ವೈಚಾರಿಕ ಕ್ರಾಂತಿಯೇ ಹರಿದಿದೆ. ಆದರೂ ಸಮಾಜ ಸಂಪ್ರದಾಯದ ಹೊಲಸಿನಿಂದ ಮುಕ್ತವಾಗುತ್ತಿಲ್ಲ. ಆದ್ದರಿಂದಲೇ ವಿವೇಕಾನಂದರು ಒಂದು ಕಡೆ ...... ಎಲ್ಲಾ ಮೂಢ ನಂಬಿಕೆಗಳನ್ನು ಧ್ವಂಸ ಮಾಡಿ, ಧರ್ಮಗುರುಗಳು, ಧರ್ಮಗ್ರಂಥಗಳು, ದೇವತೆಗಳು ಯಾರು ಇಲ್ಲ. ದೇವಸ್ಥಾನಗಳನ್ನು, ಪೂಜಾರಿಗಳನ್ನು, ದೇವತೆಗಳನ್ನು, ಅವತಾರಗಳನ್ನು ಕೊನೆಗೆ ದೇವರನ್ನೇ ಧ್ವಂಸ ಮಾಡಿ, ನಾನೇ ದೇವರು. ಬೇರೇನೂ ಇಲ್ಲ ತತ್ತ್ವಜ್ಞಾನಿಗಳೇ ಎದ್ದು ನಿಲ್ಲಿ ಭಯಬೇಡ. ದೇವರ ಬಗ್ಗೆ, ಪ್ರಪಂಚದ ಮೌಢ್ಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಸತ್ಯವೇ ಗೆಲ್ಲುವುದು. ಎಲ್ಲಾ ಮೌಢ್ಯಗಳು ಪೊಳ್ಳು ಕಲ್ಪನೆಗಳು... ದೇವರು ಹುಟ್ಟಿದ್ದು ನನ್ನ ಮನಸ್ಸಿನಲ್ಲಿ.... ನಾನೇ ಅವನನ್ನು ನನ್ನ ಮನಸ್ಸಿನಲ್ಲಿ ಸೃಷ್ಠಿಸಿದೆ. ಎಲ್ಲಾ ಮೂಢನಂಬಿಕೆಗಳನ್ನು ತ್ಯಜಿಸಿ... ಎಂದು ಕರೆ ಕೊಟ್ಟಿದ್ದಾರೆ
ಈ ಕರೆಗೆ ಕಿವಿಕೊಟ್ಟು ಕಾರ್ಯತತ್ಪರರಾದವರು ಮಾತ್ರ ಕೇಲವೆ ಕೆಲವರು. ಕುವೆಂಪುರಾದಿಯಾಗಿ ಲೋಹಿಯಾ, ಲಂಕೇಶ್, ಪೆರಿಯಾರ್, ದೇ. ಜ. ಗೌ, ಜ.ಹೊ. ನಾ, ಸಿ.ಪಿ.ಕೆ, ಭಗವಾನ್ ಮುಂತಾದವರು ನಮ್ಮೆದುರಿಗೆ ನಿಲ್ಲುತ್ತಾರೆ.
ಅದರಲ್ಲು ಜ.ಹೊ.ನಾ ತಮ್ಮ ಬದುಕಿನ ಬಹುಭಾಗವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೀಸಲಿಟ್ಟು ವೈಚಾರಿಕ ಮನೋಧಮರ್ಿಯಾಗಿ ಬಾಳಿದ್ದಾರೆ. ಇವರ ವಿಚಾರ ಲಹರಿಗಳನ್ನು ಅರಿಯಬೇಕಾದರೆ ಇವರ ಕೃತಿಗಳ ಅಧ್ಯಯನ ಮಾಡಲೇಬೇಕು.
ಒಬ್ಬ ವ್ಯಕ್ತಿಯು ಒಂದು ಮಹಾನ್ ಶಕ್ತಿಯಾಗಿ ರೂಪುಗೊಳ್ಳುವುದಕ್ಕೆ ಅನೇಕ ಚೇತನಗಳ ಸ್ಫೂತರ್ಿ ಆದರ್ಶಗಳು ಸಹಕಾರಿಯಾಗಿರುತ್ತದೆ. ಅಂತಹ ಒಂದು ಸ್ಫೂರ್ತಿ ಕುವೆಂಪುರಾದಿಯಾಗಿ ಅನೇಕರ ಸಹಕಾರ ಜ.ಹೊ.ನಾ ರವರಿಗೆ ಸಿಕ್ಕಿದೆ. ಆದ್ದರಿಂದಲೇ ನಮ್ಮೆದುರಿಗೆ ವೈಚಾರಿಕ ಕ್ರಾಂತಿಯ ಮಹಾನ್ ಶಕ್ತಿಯಾಗಿ ಇವರು ಗೋಚರಿಸುತ್ತಾರೆ. ಗುಲಾಮಗಿರಿ, ದೌರ್ಜನ್ಯ, ದಬ್ಬಾಳಿಕೆ, ಬಡತನ, ದಾರಿದ್ರ್ಯ, ಹಿಂಸೆ. ಶೋಷಣೆ, ಹಸಿವು, ಭ್ರಷ್ಟಾಚಾರ ಹೀಗೆ ಹಲವಾರು ಸಾಮಾಜಿಕ ಕಂಟಕಗಳ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಹರಿತವಾದ ಭಾವಲಹರಿ ಮಿಳಿತಗೊಳಿಸಿದ್ದಾರೆ. ಮಾರ್ಗೋಪಾಯ ಸೂಸಿದ್ದಾರೆ. ಮಾನವತ್ತ್ವದ ನೆಲೆ ಕಂಡುಕೊಳ್ಳುವ ಬಗೆಯನ್ನು ತೆರೆದಿಟ್ಟಿದ್ದಾರೆ.

ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸಾಹಿತ್ಯಗೋಷ್ಠಿ, ಕವಿಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕವಿತೆ ವಾಚಿಸಿದ್ದಾರೆ. ಅದ್ಭುತ ನಟ ಹಾಗೂ ನಾಟಕಕಾರರೂ ಆದ ಇವರು ಸಂಕ್ರಾತಿ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೆಯೇ 'ಜೇನುಗೂಡು' ಧಾರವಾಹಿಯಲ್ಲಿ ಅಭಿನಯಿಸಿದ್ದಾರೆ.
ಜಗದ ತೊಟ್ಟಿಲು-ಕವನ ಸಂಕಲನ ; ಬೆಳಕಿನ ದಾರಿ, ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು, ವೇದ ಕುರಾನ್ ಆಚೆಗೆ, ವಿವೇಕಾನಂದ ಮಾನವತೆಗಾಗಿ ಕಾವಿಯೊಳಗೆ ಕುದಿದ ಕೆಂಡ, ಆವರಣ-ಅನಾವರಣ, ಬ್ರಾಹ್ಮಣ್ಯದ ತಂತ್ರಗಳು, ಸಂಪ್ರದಾಯದ ನೇಣುಗಂಬ, ಚೈತನ್ಯದ ಪೂಜೆ ಮುಂತಾದ ವೈಚಾರಿಕ ಕೃತಿಗಳು ; ನರಬಲಿ,-ನಾಟಕ, ; ಅದಮ್ಯ, ಸಿದ್ಧಾರ್ಥ-ಕಾದಂಬರಿಗಳು ; ಸ್ವಾಮಿ ವಿವೇಕಾನಂದ, ಜಯಪ್ರಕಾಶ ನಾರಾಯಣ, ಭಗತ್ ಸಿಂಗ್, ನಿಷ್ಠನ್ಯಾಯವಾದಿ ಹೆಚ್.ಎಸ್.ಎಂ. ; ಕಾರುಗೋಡಿನ ತೊಟ್ಟಿಮನೆ ಕೆ.ಎಂ. ಚಂದ್ರಶೇಖರ್ ಮುಂತಾದ ಜೀವನ ಚರಿತ್ರೆಗಳು ; ಹರ್ಮನ್ಸೇನ್-ವಾಚಿಕೆ; ಶ್ರೀಕುವೆಂಪು-ಸಂಕೀರ್ಣ; ಭಾರತದ ರೈತ-ಅನುವಾದ; ಬೇಲೂರು ಹಳೆಬೀಡು-ನವಸಾಕ್ಷರಿಗಾಗಿ ಬರೆದ ಬರಹಗಳು ಹೀಗೆ ಅನೇಕ ಬಗೆಯ ಕೃತಿಗಳನ್ನು ಜ.ಹೊ.ನಾ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಇವರ 'ವೇದ ಕುರಾನ್ ಆಚೆಗೆ' ಕೃತಿಗೆ ಡಾ|| ಹೆಚ್. ನರಸಿಂಹಯ್ಯ ದತ್ತಿನಿಧಿ ಪ್ರಶಸ್ತಿ, ಬಂದಿದೆ. ಅಲ್ಲದೇ ಅನಿಕೇತನ ಪ್ರಶಸ್ತಿ, ಹಾಸನ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಹಾಗೂ ಹಲವು ಸಂಘಗಳಿಂದ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ. ಇವರ ಸಾಹಿತ್ಯಿಕ ಅಹರ್ನಿಶಿ ಸೇವೆಗಾಗಿ ಹಾಸನ ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷತೆ ಇವರನ್ನಲಂಕರಿಸಿತ್ತು.
ಮೌಢ್ಯದ ಕಂದಾಚಾರದಲ್ಲಿ ಮುಳುಗಿದ್ದ ಅನೇಕ ಮನಸ್ಸುಗಳನ್ನು ಪರಿವರ್ತನೆ ಮಾಡುತ್ತಾ ಯುವ ಬರಗಾರರಿಗೆ ವೈಚಾರಿಕ ತಳಹದಿ ಹಾಕಿಕೊಟ್ಟು ಮಾರ್ಗದರ್ಶನ ನೀಡುತ್ತಿರುವ ಜ.ಹೊ.ನಾ ಕನ್ನಡದ ಪ್ರತಿಭಾನ್ವಿತ ದಿಗ್ಗಜ ಸಾಹಿತ್ಯ ವಲಯದ ಪ್ರಮುಖರು. ನೂರಾರು ಕವಲು ದಾರಿಗಳು ಜ.ಹೊ. ನಾ. ಎಂಬ ಹೆದ್ದಾರಿಯಲ್ಲಿ ಸೇರಬೇಕಿದೆ.
ಕೊಟ್ರೇಶ್ ಎಸ್.ಉಪ್ಪಾರ್.ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಜಾನಪದ ಮನೋಧಮರ್ಿ ಹಂಪಾಪುರದ ಲಕ್ಕಪ್ಪಗೌಡರು.
ನೆಲಮೂಲ ಸಂಸ್ಕೃತಿಯ ಬೇರುಗಳನ್ನು ,ಅದರ ರೆಂಬೆ ಕೊಂಬೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಗ್ರಾಮೀಣ ಸಂಸ್ಕೃತಿಯು ಪಸರಿಸುವ ಕಾಯಕದಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಜಾನಪದ ಅಧ್ಯಯನ, ಸಂಗ್ರಹ, ವಿಮಶರ್ೆ, ಜನ ಜೀವನದ ಸ್ಥಿತ್ಯಂತರಗಳು, ಬದುಕಿನ ತಲ್ಲಣಗಳನ್ನು ಆಳವಾಗಿ ಚಿಂತಿಸಿ, ಮಂಥಿಸುತ್ತಾ ಬಂದಿರುವ ಜಾನಪದ ಪರಿಚಾರಕ ಯಾರು ಗೊತ್ತೇ? ಅವರೇ ಜಾನಪದ ಮನೋಧಮರ್ಿ ಹಂಪಾಪುರದ ಲಕ್ಕಪ್ಪಗೌಡರು.
ಎಚ್.ಜೆ. ಲಕ್ಕಪ್ಪಗೌಡರು 1939ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹಂಪಾಪುರದಲ್ಲಿ ಜನಿಸಿದ ಇವರು ಗ್ರಾಮೀಣ ಬದುಕಿನ ಚಿತ್ರಣಗಳ ಜೊತೆಗೆ ಪರೋಪಕಾರ ಬದುಕಿನ ಸಾರ್ಥಕ್ಯವನ್ನು ಕಟ್ಟಿ ಕೊಟ್ಟಿದ್ದಾರೆ. ಕನ್ನಡ ನಾಡು ಕಂಡಂತಹ ಪ್ರತಿಭಾನ್ವಿತ ಧೀಮಂತ ವ್ಯಕ್ತಿತ್ವ ಲಕ್ಕಪ್ಪಗೌಡರು. ಕನ್ನಡ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ತಮ್ಮ ಕಾಯಕದ ಮೂಲಕ ಸ್ಮರಣೀಯ ಹೆಜ್ಜೆ ಗುರುತುಗಳನ್ನು ಮೂಡಿಸಿದರು. ಗ್ರಾಮೀಣ ಬದುಕಿನ ಸೊಗಡನ್ನೇ ಸಾಹಿತ್ಯದ ಆಂತರ್ಯವಾಗಿಸಿಕೊಂಡು ಸೃಜನಾತ್ಮಾಕವಾಗಿ ಲೇಖನಿ ಹರಿಯಬಿಟ್ಟು ದಿಟ್ಟ ಬರಹಗಾರರಾಗಿ ಹೊರಹೊಮ್ಮಿದ ಅಧಮ್ಯ ಚೇತನ ಲಕ್ಕಪ್ಪಗೌಡರು. ಹಳ್ಳಿಯ ಸಂಸ್ಕೃತಿ, ಆಚಾರ-ವಿಚಾರ, ಬದುಕು -ಬವಣೆಗಳೇ ಅವರ ಅಂತಸ್ಸತ್ತ್ವಗಳಾಗಿ ರೂಪು ಕಂಡವು. ಇವರ ಬರಹಗಳಲ್ಲಿ ಸಾಕು ಪ್ರಾಣಿಗಳು, ಪಕ್ಷಿಗಳು, ಗಿಡ-ಮರಗಳು, ಗುಡ್ಡ- ಬೆಟ್ಟಗಳು ಸಂದಭರ್ೋಚಿತವಾಗಿ ಪಾತ್ರಗಳಾಗಿ ಕಣ್ತೆರೆದುಕೊಂಡಿವೆ. ಶೂದ್ರ ಜಗತ್ತಿನ ಬದುಕಿನ ಪಾತ್ರ, ಘಟನೆಗಳನ್ನು ಹೆಣೆದ ಇವರ ಕಥೆಗಳು ಕನ್ನಡ ಕಥಾ ಸಾಹಿತ್ಯ ಕ್ಷೇತ್ರಕ್ಕೆ ಮೈಲುಗಲ್ಲಾಗಿ ನವೀನ ರೀತಿಯಲ್ಲಿ ಸೇರ್ಪಡೆಗೊಂಡವೆಂದು ಹೇಳಬಹುದು.
ಜಾನಪದ ಎಂದರೆ ಮೂಗು ಮುರಿಯುವ ಅನೇಕ ಸಾಹಿತಿಗಳು ನಮ್ನಿಮ್ಮ ಮಧ್ಯೆ ಹಲವರು ಇದ್ದಾರೆ. ಆದರೆ ಕಳೆಗುಂದುತ್ತಿರುವ ಸಮಯದಲ್ಲಿ ಜಾನಪದ ಸಂಗ್ರಹ ಮತ್ತು ಸಂಪಾದನೆಯ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಅದರಂತೆ ಕಾಯರ್ೋನ್ಮುಖರಾಗಿ ಕನ್ನಡ ಜಾನಪದ ಸಾಹಿತ್ಯ ಕಣಜಕ್ಕೆ ಹಸಿವ ನೀಗಿಸಿದರು ಲಕ್ಕಪ್ಪಗೌಡರೆಂದರೆ ಅತಿಶಯೋಕ್ತಿಯಾಗಲಾರದು.
ಗೌಡರು 1971 ರಲ್ಲಿ ಹೊರತಂದ 'ಜನಪದ ಕಥಾವಳಿ' ಹಾಗೂ 1973 ರಲ್ಲಿ ಪ್ರಕಟಿಸಿದ ಒಗಟುಗಳು ಮುಂತಾದ ಕೃತಿಗಳು ಜಾನಪದ ಲೋಕದಲ್ಲಿ ಅದ್ಭುತ ಸಂಚಲನ ಮೂಡಿಸಿದವು. ಆ ಕಾಲ ಘಟ್ಟದಲ್ಲಿ ಬಂದ ಅತ್ಯಾಮೂಲ್ಯ ಜಾನಪದ ಕಥಾ ಸಂಕಲನಗಳಲ್ಲಿ 'ಜನಪದ ಕಥಾವಳಿ' ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಜನಪದ ಮಾತುಗಾರಿಕೆ, ನುಡಿಗಟ್ಟುಗಳು, ಕಾಲಕ್ರಮಣಿಕೆಯ ಘಟನೆಗಳು ಆಕರ್ಷಕವಾಗಿ ಮೂಡಿ ಬಂದಿದೆ. ಪ್ರಸ್ತುತ ಕೃತಿಯು ಓದುಗರಿಗೂ , ವಿದ್ವಾಂಸರಿಗೂ, ವಿಮರ್ಶಕರಿಗೂ, ಅಗತ್ಯವಾಗಿ ಬೇಕಾದ ಕೃತಿಯಾಗಿದ್ದು ಓದುಗನಿಗೆ ಸಂತಸ ನೀಡಿದರೆ, ವಿದ್ವಾಂಸನಿಗೆ ಜ್ಞಾನ ಭಂಡಾರವಾಗಿ ಪರಿಣಮಿಸುತ್ತದೆ. ಸಾಂಸ್ಕೃತಿಕ ಜೀವನದ ಮೇಲೂ ಬೆಳಕು ಬೀರುವುದರಿಂದ ಇದು ಜಾನಪದ ಸಾಹಿತ್ಯಕ್ಕೊಂದು ಆಶಾಕಿರಣವೆನ್ನಬಹುದು.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಇವರು 'ಶ್ರೀ ರಾಮಾಯಣ ದರ್ಶನಂ - ಒಂದು ವಿಮರ್ಶನಾರ್ತಕ ಅಧ್ಯಯನ' ಎಂಬ ಬೃಹತ್ ಗ್ರಂಥವನ್ನು ರಚಿಸಿ ಪಿ. ಎಚ್.ಡಿ ಪದವಿ ಪಡೆದಿದ್ದಾರೆ.
ಲಕ್ಕಪ್ಪಗೌಡರು ಸಾಹಿತ್ಯದ ಕೇವಲ ಒಂದು ಮಗ್ಗುಲಿಗೆ ಅಂಟಿಕೊಳ್ಳದೇ ಕಥೆ, ಕಾವ್ಯ, ನಿಬಂಧ, ವಿಮಶರ್ೆ, ಜಾನಪದ ,ಸಂಗ್ರಹ, ಜೀವನ ಚರಿತ್ರೆ ಹೀಗೆ ಹಲವಾರು ಕವಲುಗಳಲ್ಲಿ ಸಾಗಿ ಗುರಿ ಸಾಧಿಸಿದ ಬಹುಮುಖ ಪ್ರತಿಭೆಯ ಸೃಜನಾತ್ಮಕ ಲೇಖಕರಾಗಿದ್ದಾರೆ. ವಸಂತಗೀತ, ಊರ ಮುಂದಿನ ಬಾವಿ- ಕವನ ಸಂಕಲನಗಳು; ದಲಿತಸೂರ್ಯ, ಸಿದ್ಧರಾಮ- ಜೀವನ ಚರಿತ್ರೆಗಳು; ಸಂಗಮ , ಅಂತರಂಗ- ವಿಮಶರ್ಾ ಕೃತಿಗಳು; ಜಾನಪದ ಕಥಾವಳಿ, ಇಬ್ಬನಿ, ಒಗಟು -ಜಾನಪದ ಕೃತಿಗಳು ; ಪದ್ದು-ಹದ್ದು, ಧೀನ ಬಂದು-ಮಕ್ಕಳ ಕೃತಿಗಳು.
ಹೀಗೆ ಲಕ್ಕಪ್ಪಗೌಡರು ಕನ್ನಡ ಸಾಹಿತ್ಯದ ಅತ್ಯಾಮೂಲ್ಯ ಕವಿ, ವಿಮರ್ಶಕ, ಕಥೆಗಾರ, ಸಂಪಾದನಕಾರರಾಗಿ ನಮ್ಮೆದುರಿಗೆ ನಿಲ್ಲುತ್ತಾರೆ. ವಿಶೇಷವಾಗಿ ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಗೌಡರು ಪ್ರಮುಖರಾಗಿದ್ದಾರೆ.
'ನಾಡು-ನುಡಿಯ' ಹಲವಾರು ಸಂಘಟನೆಗಳಲ್ಲಿ ಸದಸ್ಯರಾಗಿ , ಪದಾಧಿಕಾರಿಯಾಗಿ ಹಗಲಿರುಳೆನ್ನದೇ ದಣಿವರಿಯದೇ ದುಡಿದವರು. ನಾಡಿಗೆ, ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸಂಸ್ಕೃತಿ ಸೇವೆ ಅನನ್ಯವಾದದು. ಹಾಗೆಯೇ ಹಲವಾರು ವಿದ್ಯಾಸಂಸ್ಥೆ , ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತಾತ್ಮಕವಾಗಿ ಸಲ್ಲಿಸಿದ ಇವರ ಸೇವೆ ಅನುಕರಣೀಯ ಹಾಗೂ ಅನುಪಮವಾದುದು. ನಾಡಿನಾದ್ಯಾಂತ ಸುತ್ತಿ ಅನೇಕ ಜಾನಪದ ಪ್ರತಿಭೆಗಳನ್ನು ಅನ್ವೇಷಿಸಿ, ಅವರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿ , ಮುಖ್ಯ ವಾಹಿನಿಗೆ ತಂದ ಕೀತರ್ಿ ಗೌಡರಿಗೆ ಸಲ್ಲುತ್ತದೆ. ಅವರಿಗೆ ಅವರದೇ ಬೃಹತ್ ಶಿಷ್ಯ ವೃಂದ ಬಳಗ, ಅಭಿಮಾನಿಗಳ ಬಳಗ, ಸ್ನೇಹ ಬಳಗವಿದ್ದು ಜಾನಪದ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿವೆ.
ಗೌಡರ ಸಂಪಾದಕತ್ವದಲ್ಲಿ 'ಜಾನಪದ ಗಂಗೋತ್ರಿ' ಹಾಗೂ 'ಜಾನಪದ ಸಮಾಚಾರ' ಎಂಬ ನಿಯತಕಾಲಿಕೆಗಳು ಅದ್ಭುತವಾಗಿ ಮೂಡಿ ಬಂದವು. ವಿದ್ವಾಂಸರಲ್ಲಿ ಬಹುಮುಖ ವ್ಯಕ್ತಿತ್ವ ಗುತರ್ಿಸಿ ಅಂತಹವರ ಪತ್ರಿಕೆಗಾಗಿ ಸಕಾರಾತ್ಮಕವಾಗಿ ದುಡಿಸಿಕೊಂಡರು. ಅಷ್ಟೇ ಗೌರವಯುತವಾಗಿ ನಡೆಸಿಕೊಂಡರು. ಬದಲಾಗುತ್ತಿರುವ ಸಂದರ್ಭಕ್ಕೆ ಹೇಗೆ ಸಾಗಬೇಕೆಂಬುದನ್ನು ಚೆನ್ನಾಗಿ ಅರಿತಿದ್ದ ಲಕ್ಕಪ್ಪಗೌಡರು ಆಧುನಿಕತೆಗೂ ದಕ್ಕೆ ಬಾರದಂತೆ ಪುರಾತನ ಸಂಸ್ಕೃತಿಯ ಪ್ರತೀಕವಾದ ಜಾನಪದವನ್ನು ಸೊಗಸಾಗಿ ಕಟ್ಟಿ ಬೆಳೆಸಿದರು. ಸುಜ್ಞಾನದ ಬೀಜವನ್ನು ಬಿತ್ತಿ ಬೆಳೆದರು.
ಕನ್ನಡ ನಾಡು ನುಡಿಗೆ ತಮ್ಮದೇ ಆದ ಅವಿಸ್ಮರಣೀಯ ಕೊಡುಗೆ ನೀಡಿದ ಲಕ್ಕಪ್ಪಗೌಡರಿಗೆ ದೇವರಾಜ ಬಹದ್ದೂರ್ ಬಹುಮಾನ, ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾದವುಗಳು ಸಂದಿವೆ ಸದ್ಯ ಮೈಸೂರಿನಲ್ಲಿ ತಮ್ಮ ವಿಶ್ರಾಂತಿ ಜೀವನ ನಡೆಸುತ್ತಿರುವ ಇವರ ಉಸಿರು ಜನಪದವೇ ಆಗಿದೆ.
ಎಚ್.ಜೆ. ಲಕ್ಕಪ್ಪಗೌಡರು 1939ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹಂಪಾಪುರದಲ್ಲಿ ಜನಿಸಿದ ಇವರು ಗ್ರಾಮೀಣ ಬದುಕಿನ ಚಿತ್ರಣಗಳ ಜೊತೆಗೆ ಪರೋಪಕಾರ ಬದುಕಿನ ಸಾರ್ಥಕ್ಯವನ್ನು ಕಟ್ಟಿ ಕೊಟ್ಟಿದ್ದಾರೆ. ಕನ್ನಡ ನಾಡು ಕಂಡಂತಹ ಪ್ರತಿಭಾನ್ವಿತ ಧೀಮಂತ ವ್ಯಕ್ತಿತ್ವ ಲಕ್ಕಪ್ಪಗೌಡರು. ಕನ್ನಡ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ತಮ್ಮ ಕಾಯಕದ ಮೂಲಕ ಸ್ಮರಣೀಯ ಹೆಜ್ಜೆ ಗುರುತುಗಳನ್ನು ಮೂಡಿಸಿದರು. ಗ್ರಾಮೀಣ ಬದುಕಿನ ಸೊಗಡನ್ನೇ ಸಾಹಿತ್ಯದ ಆಂತರ್ಯವಾಗಿಸಿಕೊಂಡು ಸೃಜನಾತ್ಮಾಕವಾಗಿ ಲೇಖನಿ ಹರಿಯಬಿಟ್ಟು ದಿಟ್ಟ ಬರಹಗಾರರಾಗಿ ಹೊರಹೊಮ್ಮಿದ ಅಧಮ್ಯ ಚೇತನ ಲಕ್ಕಪ್ಪಗೌಡರು. ಹಳ್ಳಿಯ ಸಂಸ್ಕೃತಿ, ಆಚಾರ-ವಿಚಾರ, ಬದುಕು -ಬವಣೆಗಳೇ ಅವರ ಅಂತಸ್ಸತ್ತ್ವಗಳಾಗಿ ರೂಪು ಕಂಡವು. ಇವರ ಬರಹಗಳಲ್ಲಿ ಸಾಕು ಪ್ರಾಣಿಗಳು, ಪಕ್ಷಿಗಳು, ಗಿಡ-ಮರಗಳು, ಗುಡ್ಡ- ಬೆಟ್ಟಗಳು ಸಂದಭರ್ೋಚಿತವಾಗಿ ಪಾತ್ರಗಳಾಗಿ ಕಣ್ತೆರೆದುಕೊಂಡಿವೆ. ಶೂದ್ರ ಜಗತ್ತಿನ ಬದುಕಿನ ಪಾತ್ರ, ಘಟನೆಗಳನ್ನು ಹೆಣೆದ ಇವರ ಕಥೆಗಳು ಕನ್ನಡ ಕಥಾ ಸಾಹಿತ್ಯ ಕ್ಷೇತ್ರಕ್ಕೆ ಮೈಲುಗಲ್ಲಾಗಿ ನವೀನ ರೀತಿಯಲ್ಲಿ ಸೇರ್ಪಡೆಗೊಂಡವೆಂದು ಹೇಳಬಹುದು.
ಜಾನಪದ ಎಂದರೆ ಮೂಗು ಮುರಿಯುವ ಅನೇಕ ಸಾಹಿತಿಗಳು ನಮ್ನಿಮ್ಮ ಮಧ್ಯೆ ಹಲವರು ಇದ್ದಾರೆ. ಆದರೆ ಕಳೆಗುಂದುತ್ತಿರುವ ಸಮಯದಲ್ಲಿ ಜಾನಪದ ಸಂಗ್ರಹ ಮತ್ತು ಸಂಪಾದನೆಯ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಅದರಂತೆ ಕಾಯರ್ೋನ್ಮುಖರಾಗಿ ಕನ್ನಡ ಜಾನಪದ ಸಾಹಿತ್ಯ ಕಣಜಕ್ಕೆ ಹಸಿವ ನೀಗಿಸಿದರು ಲಕ್ಕಪ್ಪಗೌಡರೆಂದರೆ ಅತಿಶಯೋಕ್ತಿಯಾಗಲಾರದು.
ಗೌಡರು 1971 ರಲ್ಲಿ ಹೊರತಂದ 'ಜನಪದ ಕಥಾವಳಿ' ಹಾಗೂ 1973 ರಲ್ಲಿ ಪ್ರಕಟಿಸಿದ ಒಗಟುಗಳು ಮುಂತಾದ ಕೃತಿಗಳು ಜಾನಪದ ಲೋಕದಲ್ಲಿ ಅದ್ಭುತ ಸಂಚಲನ ಮೂಡಿಸಿದವು. ಆ ಕಾಲ ಘಟ್ಟದಲ್ಲಿ ಬಂದ ಅತ್ಯಾಮೂಲ್ಯ ಜಾನಪದ ಕಥಾ ಸಂಕಲನಗಳಲ್ಲಿ 'ಜನಪದ ಕಥಾವಳಿ' ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಜನಪದ ಮಾತುಗಾರಿಕೆ, ನುಡಿಗಟ್ಟುಗಳು, ಕಾಲಕ್ರಮಣಿಕೆಯ ಘಟನೆಗಳು ಆಕರ್ಷಕವಾಗಿ ಮೂಡಿ ಬಂದಿದೆ. ಪ್ರಸ್ತುತ ಕೃತಿಯು ಓದುಗರಿಗೂ , ವಿದ್ವಾಂಸರಿಗೂ, ವಿಮರ್ಶಕರಿಗೂ, ಅಗತ್ಯವಾಗಿ ಬೇಕಾದ ಕೃತಿಯಾಗಿದ್ದು ಓದುಗನಿಗೆ ಸಂತಸ ನೀಡಿದರೆ, ವಿದ್ವಾಂಸನಿಗೆ ಜ್ಞಾನ ಭಂಡಾರವಾಗಿ ಪರಿಣಮಿಸುತ್ತದೆ. ಸಾಂಸ್ಕೃತಿಕ ಜೀವನದ ಮೇಲೂ ಬೆಳಕು ಬೀರುವುದರಿಂದ ಇದು ಜಾನಪದ ಸಾಹಿತ್ಯಕ್ಕೊಂದು ಆಶಾಕಿರಣವೆನ್ನಬಹುದು.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ ಇವರು 'ಶ್ರೀ ರಾಮಾಯಣ ದರ್ಶನಂ - ಒಂದು ವಿಮರ್ಶನಾರ್ತಕ ಅಧ್ಯಯನ' ಎಂಬ ಬೃಹತ್ ಗ್ರಂಥವನ್ನು ರಚಿಸಿ ಪಿ. ಎಚ್.ಡಿ ಪದವಿ ಪಡೆದಿದ್ದಾರೆ.
ಲಕ್ಕಪ್ಪಗೌಡರು ಸಾಹಿತ್ಯದ ಕೇವಲ ಒಂದು ಮಗ್ಗುಲಿಗೆ ಅಂಟಿಕೊಳ್ಳದೇ ಕಥೆ, ಕಾವ್ಯ, ನಿಬಂಧ, ವಿಮಶರ್ೆ, ಜಾನಪದ ,ಸಂಗ್ರಹ, ಜೀವನ ಚರಿತ್ರೆ ಹೀಗೆ ಹಲವಾರು ಕವಲುಗಳಲ್ಲಿ ಸಾಗಿ ಗುರಿ ಸಾಧಿಸಿದ ಬಹುಮುಖ ಪ್ರತಿಭೆಯ ಸೃಜನಾತ್ಮಕ ಲೇಖಕರಾಗಿದ್ದಾರೆ. ವಸಂತಗೀತ, ಊರ ಮುಂದಿನ ಬಾವಿ- ಕವನ ಸಂಕಲನಗಳು; ದಲಿತಸೂರ್ಯ, ಸಿದ್ಧರಾಮ- ಜೀವನ ಚರಿತ್ರೆಗಳು; ಸಂಗಮ , ಅಂತರಂಗ- ವಿಮಶರ್ಾ ಕೃತಿಗಳು; ಜಾನಪದ ಕಥಾವಳಿ, ಇಬ್ಬನಿ, ಒಗಟು -ಜಾನಪದ ಕೃತಿಗಳು ; ಪದ್ದು-ಹದ್ದು, ಧೀನ ಬಂದು-ಮಕ್ಕಳ ಕೃತಿಗಳು.
ಹೀಗೆ ಲಕ್ಕಪ್ಪಗೌಡರು ಕನ್ನಡ ಸಾಹಿತ್ಯದ ಅತ್ಯಾಮೂಲ್ಯ ಕವಿ, ವಿಮರ್ಶಕ, ಕಥೆಗಾರ, ಸಂಪಾದನಕಾರರಾಗಿ ನಮ್ಮೆದುರಿಗೆ ನಿಲ್ಲುತ್ತಾರೆ. ವಿಶೇಷವಾಗಿ ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಗೌಡರು ಪ್ರಮುಖರಾಗಿದ್ದಾರೆ.
'ನಾಡು-ನುಡಿಯ' ಹಲವಾರು ಸಂಘಟನೆಗಳಲ್ಲಿ ಸದಸ್ಯರಾಗಿ , ಪದಾಧಿಕಾರಿಯಾಗಿ ಹಗಲಿರುಳೆನ್ನದೇ ದಣಿವರಿಯದೇ ದುಡಿದವರು. ನಾಡಿಗೆ, ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸಂಸ್ಕೃತಿ ಸೇವೆ ಅನನ್ಯವಾದದು. ಹಾಗೆಯೇ ಹಲವಾರು ವಿದ್ಯಾಸಂಸ್ಥೆ , ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತಾತ್ಮಕವಾಗಿ ಸಲ್ಲಿಸಿದ ಇವರ ಸೇವೆ ಅನುಕರಣೀಯ ಹಾಗೂ ಅನುಪಮವಾದುದು. ನಾಡಿನಾದ್ಯಾಂತ ಸುತ್ತಿ ಅನೇಕ ಜಾನಪದ ಪ್ರತಿಭೆಗಳನ್ನು ಅನ್ವೇಷಿಸಿ, ಅವರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿ , ಮುಖ್ಯ ವಾಹಿನಿಗೆ ತಂದ ಕೀತರ್ಿ ಗೌಡರಿಗೆ ಸಲ್ಲುತ್ತದೆ. ಅವರಿಗೆ ಅವರದೇ ಬೃಹತ್ ಶಿಷ್ಯ ವೃಂದ ಬಳಗ, ಅಭಿಮಾನಿಗಳ ಬಳಗ, ಸ್ನೇಹ ಬಳಗವಿದ್ದು ಜಾನಪದ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿವೆ.
ಗೌಡರ ಸಂಪಾದಕತ್ವದಲ್ಲಿ 'ಜಾನಪದ ಗಂಗೋತ್ರಿ' ಹಾಗೂ 'ಜಾನಪದ ಸಮಾಚಾರ' ಎಂಬ ನಿಯತಕಾಲಿಕೆಗಳು ಅದ್ಭುತವಾಗಿ ಮೂಡಿ ಬಂದವು. ವಿದ್ವಾಂಸರಲ್ಲಿ ಬಹುಮುಖ ವ್ಯಕ್ತಿತ್ವ ಗುತರ್ಿಸಿ ಅಂತಹವರ ಪತ್ರಿಕೆಗಾಗಿ ಸಕಾರಾತ್ಮಕವಾಗಿ ದುಡಿಸಿಕೊಂಡರು. ಅಷ್ಟೇ ಗೌರವಯುತವಾಗಿ ನಡೆಸಿಕೊಂಡರು. ಬದಲಾಗುತ್ತಿರುವ ಸಂದರ್ಭಕ್ಕೆ ಹೇಗೆ ಸಾಗಬೇಕೆಂಬುದನ್ನು ಚೆನ್ನಾಗಿ ಅರಿತಿದ್ದ ಲಕ್ಕಪ್ಪಗೌಡರು ಆಧುನಿಕತೆಗೂ ದಕ್ಕೆ ಬಾರದಂತೆ ಪುರಾತನ ಸಂಸ್ಕೃತಿಯ ಪ್ರತೀಕವಾದ ಜಾನಪದವನ್ನು ಸೊಗಸಾಗಿ ಕಟ್ಟಿ ಬೆಳೆಸಿದರು. ಸುಜ್ಞಾನದ ಬೀಜವನ್ನು ಬಿತ್ತಿ ಬೆಳೆದರು.
ಕನ್ನಡ ನಾಡು ನುಡಿಗೆ ತಮ್ಮದೇ ಆದ ಅವಿಸ್ಮರಣೀಯ ಕೊಡುಗೆ ನೀಡಿದ ಲಕ್ಕಪ್ಪಗೌಡರಿಗೆ ದೇವರಾಜ ಬಹದ್ದೂರ್ ಬಹುಮಾನ, ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾದವುಗಳು ಸಂದಿವೆ ಸದ್ಯ ಮೈಸೂರಿನಲ್ಲಿ ತಮ್ಮ ವಿಶ್ರಾಂತಿ ಜೀವನ ನಡೆಸುತ್ತಿರುವ ಇವರ ಉಸಿರು ಜನಪದವೇ ಆಗಿದೆ.
ಕಾವ್ಯಾನುಭೂತಿಯ ರಂಗಭೂಮಿ ಸಾಧಕ ಸತ್ಯನಾರಾಯಣರಾವ್ ಅಣತಿ
ಕನ್ನಡ ನಾಡಿನ ಬಗ್ಗೆ ಮಹಾಕವಿಯೊಬ್ಬ ಹೇಳಿರುವಂತೆ ಫಲಪುಷ್ಪಯುತವಾದ ಇಲ್ಲಿನ ಅಡವಿ ಸೊಕ್ಕಿದಾನೆಯನ್ನು ಬೆಳಸುತ್ತದೆ, ದೇಮಾತೃಕವೆನಿಸಿದ ಹೊಲ ಗಂಧಶಾಳಿ (ಭತ್ತ)ಯನ್ನು ಬೆಳೆಯುತ್ತದೆ. ಮಾವು, ಮಲ್ಲಿಗೆಗಿದು ತೌರು. ಮುಡಿಯಲು ಮಲ್ಲಿಗೆ, ಮೆಲ್ಲಲು ಮಾವಿನ ಹಣ್ಣು ಇದ್ದ ಮೇಲೆ 'ಸಂಸಾರ ಸಾರಸರ್ವಸ್ವ' ವೆಂಬ ಫಲ ಮತ್ತಾವುದು ಬೇಕು? ಎಂದು ಕೇಳುವಂತಹ ರಸಿಕರು ಕನ್ನಡಿಗರು ಈ ಮನೋಭಾವದಲ್ಲಿ ಬಾಳಿಕೊಂಡು ಬಂದ ಕನ್ನಡಿಗರು ಇಹವನ್ನು ದೂರದೆ ಪರಕ್ಕೆ ದೂರರಾಗದೆ ತುಂಬು ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ.
ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳ ಭವ್ಯ ಪರಂಪರೆಯನ್ನು ಒಳಗೊಂಡು ವಿಶಿಷ್ಟ, ವಿಭಿನ್ನ, ವಿನೂತನ, ವೈವಿಧ್ಯ, ಆಳ-ವಿಸ್ತಾರಗಳನ್ನು ಸದಾಕಾಲವೂ ಪ್ರತಿಬಿಂಬಿಸುತ್ತಾ, ಮೌಲಿಕ ಸಾಹಿತ್ಯ ಕೃತಿಗಳಿಂದ ಪ್ರಜ್ವಲಿಸುತ್ತಾ ಮುನ್ನುಗ್ಗುತ್ತಿದೆ.
ಪಂಪ ಪೂರ್ವ ಹಾಗೂ ಉತ್ತರಾಧಿಯಾಗಿ ಸಹಸ್ರಾರು ಮಹನೀಯರು ಕನ್ನಡ ಧೀಶಕ್ತಿ ಕಹಳೆ ಮೊಳಗಿಸಿ, ಚಂದನದ ಲೇಪನ ಮಾಡಿ ಸಾಹಿತ್ಯಾಸಕ್ತರಿಗೆ ಉಣಬಡಿಸಿದ್ದರೆ ನಾಡು,ನುಡಿ, ಸಂಸ್ಕೃತಿ ಹೊಳವ್ಹರಿಸಿದ್ದಾರೆ. ಜಾಗತಿಕ ಭಾಷೆಗಳು ನಮ್ಮತ್ತ ಮುಖ ಮಾಡುವಂತೆ ಮಾಡಿದ್ದಾರೆ.
ಇಂತಹ ಮಹನೀಯರ ಸಾಲಿನಲ್ಲಿ ಅಣತಿಯವರು ಒಬ್ಬರು. ಇವರು ಕ್ರಿ,ಶ.1935 ಡಿಸೆಂಬರ್ 12 ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದ ಎ.ಎನ್. ಮೂತರ್ಿರಾವ್ ಮತ್ತು ಶ್ರೀಮತಿ ರತ್ನಮ್ಮ ದಂಪತಿಗಳ ಜೇಷ್ಠ ಪುತ್ರರಾಗಿ ಜನಿಸಿದರು. ಇವರ ಪೂರ್ಣ ಹೆಸರು ಸತ್ಯನಾರಾಯಣರಾವ್ ಅಣತಿ. ಆದರೆ ಸಾಹಿತ್ಯ ಲೋಕದಲ್ಲಿ ಅಣತಿಯೆಂದೇ ಪ್ರಸಿದ್ಧಿ ಪಡೆದು ತಮ್ಮ ಹುಟ್ಟೂರನ್ನು ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚಳಿಯದಂತೆ ನೆಲೆಯೂರಿಸಿದ್ದಾರೆ.
ಹುಟ್ಟೂರಾದ ಅಣತಿ, ತಿಪಟೂರು, ಹಾಸನದಲ್ಲಿ ಶಿಕ್ಷಣ ಪಡೆದ ಅಣತಿಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸಕರ್ಾರಿ ಸೇವೆಗೆ ಸೇರಿದರು. ನಂತರ ಧಾರವಾಡ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಇವರು ಶಿವಮೊಗ್ಗ ಡಿ.ವಿ.ಎಸ್. ಕಾಲೇಜ್ನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು. ಹೊನ್ನಾವರ ಮತ್ತು ಶಿವಮೊಗ್ಗದಂತಹ ಹಸಿರ ಸೆರಗಿನ ಚುಮು ಚುಮು ವಾತಾವರಣ ಅಣತಿಯವರಲ್ಲಿ ಕಾವ್ಯದ ಬೀಜ ಮೊಳೆಯುವಂತೆ ಮಾಡಿತು. ಕವಿ ಪುಂಗವರ ಬೀಡೆಂದೇ ಕರೆಯಲ್ಪಡುವ ಶಿವಮೊಗ್ಗ ಅಣತಿಯವರ ಸಾಹಿತ್ಯ ಕಾರ್ಯಕ್ಷೇತ್ರವಾಯಿತು. ಇವರು ಕಾವ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ.
ರಮ್ಮಿಯಾಟ-1966, ಹಿಪ್ಪೇಮರ-1974, ಭೂಮಿ ಮತ್ತು ಬದುಕಿನ ಗಂಧ-1989, ಕೃಷ್ಣಾ ಕಣ್ಣಿನ ನೋಟ-1995, ಭೂಮಿ ಹುಣ್ಣಿಮೆ-1996, ತೆರಕೊಂಡ ಆಕಾಶ-2003, ಪಾತ್ರಗಳು ಇರಲಿ ಗೆಳೆಯ-2007, ನೀಲಕುರುಂಜಿ-2009 ಮುಂತಾದ ಕಾವ್ಯ ಕೃತಿಗಳನ್ನು ನೀಡಿದ್ದಾರೆ.
ಕಾವ್ಯದಷ್ಟೇ ಅಣತಿಯವರನ್ನು ರಂಗಭೂಮಿಯೂ ಸೆಳೆದಿತ್ತು. ಶಿವಮೊಗ್ಗವು ರಂಗ ಕರ್ಮಭೂಮಿಯೆಂದೇ ಪ್ರಸಿದ್ಧಿ. ಅಲ್ಲಿನ 'ಯುಗಾಂತರ ರಂಗ' ವೇದಿಕೆಯಿಂದ 1979 ರಲ್ಲಿ ಬರೆದ 'ಚಾವರ್ಾದ' ನಾಟಕದ ಮೂಲಕ ಪ್ರಾರಂಭವಾಗಿ 'ಜೈಸಿದ್ಧ ನಾಯಕ', ತ್ರಿಶಂಕು, ಒಂದು ಆಕೃತಿಯ ಹತ್ಯೆ, ಕತ್ತಲೆ ಬೆಳಕು ಮುಂತಾದ ನಾಟಕಗಳನ್ನು ರಚಿಸಿ ರಂಗ ಪ್ರಯೋಗ ಮಾಡಿದ್ದಾರೆ. ಅದರಲ್ಲೂ ಕಾವ್ಯ ನಾಟಕಗಳಿಗೆ ಅಣತಿಯವರು ಸುಪ್ರಸಿದ್ಧರು. ಇವರನ್ನು ಗೀತ ನಾಟಕಕಾರರೆಂದೆ ಕರೆಯಲಾಗುತ್ತಿದೆ.
ಹಿಂದಿ ಭಾಷೆಗೆ ಅನುವಾದ
ಕನ್ನಡ ಸಾಹಿತಿಗಳ ಕೃತಿಗಳ ಬೇರೆ ಭಾಷೆಗೆ ಭಾಷಾಂತರಗೊಂಡ ಕೆಲವೇ ಕೆಲವರಲ್ಲಿ ಅಣತಿಯವರೂ ಒಬ್ಬರು. ಇವರ ಹಲವು ಉತ್ತಮ ಕವಿತೆಗಳು ಹಾಗೆಯೇ 'ಜೇತವನ' ಎಂಬ ನಾಟಕ ಹಿಂದಿ ಭಾಷೆಗೆ ಭಾಷಾಂತರಗೊಂಡು ಅಲ್ಲಿನ ಓದುಗರ ಮೆಚ್ಚುಗೆ ಗಳಿಸಿವೆ.
'ಸಂಪನ್ಮೂಲ ವ್ಯಕ್ತಿಯಾಗಿ'
ವೃತ್ತಿಯಲ್ಲಿ ಆದರ್ಶ ಅಧ್ಯಾಪಕರಾಗಿದ್ದ ಅಣತಿಯವರು ಉತ್ತಮ ವಾಗ್ಮಿಗಳು. ಕಾವ್ಯ ಹಾಗೂ ರಂಗಭೂಮಿಯ ಬಗ್ಗೆ ಆಳವಾದ ಅಧ್ಯಯನ ಮಾಡಿ ವಿಶೇಷ ಪಾಂಡಿತ್ಯ ಸಂಪಾದಿಸಿದ್ದರು. ಹಲವಾರು ಗೋಷ್ಠಿಗಳಲ್ಲಿ ಉಪನ್ಯಾಸ ನೀಡಿದ್ದಲ್ಲದೆ ಕನರ್ಾಟಕ ಸಾಹಿತ್ಯ ಅಕಾಡೆಮಿಯ ಕಾವ್ಯ ನಾಟಕ ರಚನಾ ಶಿಬಿರದ ಸಂನ್ಮೂಲ ವ್ಯಕ್ತಿಯಾಗಿ ಹಾಗೆಯೇ ಮೈಸೂರಿನ ನೀನಾಸಂ ಸಾಹಿತ್ಯ ಅಧ್ಯಯನ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮಾನವೀಯ ಮೌಲ್ಯ ಸಂವೇದನೆಯ ಕವಿಯಾಗಿ, ಮೂಲ ರಂಗಭೂಮಿ ಕಲಾ ಪೋಷಕರಾಗಿ ಅವಿಸ್ಮರಣೀಯ ಸೇವೆಗೈದ ಅಣತಿಯವರು ಅನೇಕ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಠಿ, ಚಚರ್ಾಗೋಷ್ಠಿ, ಸಾಹಿತ್ಯಿಕ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 'ಸಾಹಿತ್ಯ ಸಂಸ್ಕೃತಿ ಸಂಪುಟ ಪರಂಪರೆ' ಎಂಬ ಬೃಹತ್ ಗ್ರಂಥದ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಕೀತರ್ಿ ಇವರದು. ಇವರ ಬದುಕಿನ ಬಹುಭಾಗ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದುದರಿಂದ ಹೆಚ್ಚಾಗಿ ಹಾಸನ ಜನರಿಗೆ ಪರಿಚಯ ಇಲ್ಲದಿದ್ದರೂ ನಾಡಿನಾದ್ಯಾಂತ ಮನೆ ಮಾತಾಗಿದ್ದಾರೆ.
2011 ರಲ್ಲಿ ತವರು ಜಿಲ್ಲೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದ ಪ್ರಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿದ್ದ ಅಣತಿಯವರು ನಾಡಿನ ಗಣ್ಯ ಸಾಹಿತಿಯೂ ಹೌದು. ಸದ್ಯ ಪತ್ನಿ 'ಪ್ರಭಾ' ರವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿರುವ ಅಣತಿಯವರು ಸದಾ ಕನ್ನಡ ಸಾಹಿತ್ಯದ ಕ್ರಿಯಾಶೀಲ ಹಣತೆ.
ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳ ಭವ್ಯ ಪರಂಪರೆಯನ್ನು ಒಳಗೊಂಡು ವಿಶಿಷ್ಟ, ವಿಭಿನ್ನ, ವಿನೂತನ, ವೈವಿಧ್ಯ, ಆಳ-ವಿಸ್ತಾರಗಳನ್ನು ಸದಾಕಾಲವೂ ಪ್ರತಿಬಿಂಬಿಸುತ್ತಾ, ಮೌಲಿಕ ಸಾಹಿತ್ಯ ಕೃತಿಗಳಿಂದ ಪ್ರಜ್ವಲಿಸುತ್ತಾ ಮುನ್ನುಗ್ಗುತ್ತಿದೆ.
ಪಂಪ ಪೂರ್ವ ಹಾಗೂ ಉತ್ತರಾಧಿಯಾಗಿ ಸಹಸ್ರಾರು ಮಹನೀಯರು ಕನ್ನಡ ಧೀಶಕ್ತಿ ಕಹಳೆ ಮೊಳಗಿಸಿ, ಚಂದನದ ಲೇಪನ ಮಾಡಿ ಸಾಹಿತ್ಯಾಸಕ್ತರಿಗೆ ಉಣಬಡಿಸಿದ್ದರೆ ನಾಡು,ನುಡಿ, ಸಂಸ್ಕೃತಿ ಹೊಳವ್ಹರಿಸಿದ್ದಾರೆ. ಜಾಗತಿಕ ಭಾಷೆಗಳು ನಮ್ಮತ್ತ ಮುಖ ಮಾಡುವಂತೆ ಮಾಡಿದ್ದಾರೆ.
ಇಂತಹ ಮಹನೀಯರ ಸಾಲಿನಲ್ಲಿ ಅಣತಿಯವರು ಒಬ್ಬರು. ಇವರು ಕ್ರಿ,ಶ.1935 ಡಿಸೆಂಬರ್ 12 ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದ ಎ.ಎನ್. ಮೂತರ್ಿರಾವ್ ಮತ್ತು ಶ್ರೀಮತಿ ರತ್ನಮ್ಮ ದಂಪತಿಗಳ ಜೇಷ್ಠ ಪುತ್ರರಾಗಿ ಜನಿಸಿದರು. ಇವರ ಪೂರ್ಣ ಹೆಸರು ಸತ್ಯನಾರಾಯಣರಾವ್ ಅಣತಿ. ಆದರೆ ಸಾಹಿತ್ಯ ಲೋಕದಲ್ಲಿ ಅಣತಿಯೆಂದೇ ಪ್ರಸಿದ್ಧಿ ಪಡೆದು ತಮ್ಮ ಹುಟ್ಟೂರನ್ನು ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚಳಿಯದಂತೆ ನೆಲೆಯೂರಿಸಿದ್ದಾರೆ.
ಹುಟ್ಟೂರಾದ ಅಣತಿ, ತಿಪಟೂರು, ಹಾಸನದಲ್ಲಿ ಶಿಕ್ಷಣ ಪಡೆದ ಅಣತಿಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸಕರ್ಾರಿ ಸೇವೆಗೆ ಸೇರಿದರು. ನಂತರ ಧಾರವಾಡ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಇವರು ಶಿವಮೊಗ್ಗ ಡಿ.ವಿ.ಎಸ್. ಕಾಲೇಜ್ನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು. ಹೊನ್ನಾವರ ಮತ್ತು ಶಿವಮೊಗ್ಗದಂತಹ ಹಸಿರ ಸೆರಗಿನ ಚುಮು ಚುಮು ವಾತಾವರಣ ಅಣತಿಯವರಲ್ಲಿ ಕಾವ್ಯದ ಬೀಜ ಮೊಳೆಯುವಂತೆ ಮಾಡಿತು. ಕವಿ ಪುಂಗವರ ಬೀಡೆಂದೇ ಕರೆಯಲ್ಪಡುವ ಶಿವಮೊಗ್ಗ ಅಣತಿಯವರ ಸಾಹಿತ್ಯ ಕಾರ್ಯಕ್ಷೇತ್ರವಾಯಿತು. ಇವರು ಕಾವ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ.
ರಮ್ಮಿಯಾಟ-1966, ಹಿಪ್ಪೇಮರ-1974, ಭೂಮಿ ಮತ್ತು ಬದುಕಿನ ಗಂಧ-1989, ಕೃಷ್ಣಾ ಕಣ್ಣಿನ ನೋಟ-1995, ಭೂಮಿ ಹುಣ್ಣಿಮೆ-1996, ತೆರಕೊಂಡ ಆಕಾಶ-2003, ಪಾತ್ರಗಳು ಇರಲಿ ಗೆಳೆಯ-2007, ನೀಲಕುರುಂಜಿ-2009 ಮುಂತಾದ ಕಾವ್ಯ ಕೃತಿಗಳನ್ನು ನೀಡಿದ್ದಾರೆ.
ಕಾವ್ಯದಷ್ಟೇ ಅಣತಿಯವರನ್ನು ರಂಗಭೂಮಿಯೂ ಸೆಳೆದಿತ್ತು. ಶಿವಮೊಗ್ಗವು ರಂಗ ಕರ್ಮಭೂಮಿಯೆಂದೇ ಪ್ರಸಿದ್ಧಿ. ಅಲ್ಲಿನ 'ಯುಗಾಂತರ ರಂಗ' ವೇದಿಕೆಯಿಂದ 1979 ರಲ್ಲಿ ಬರೆದ 'ಚಾವರ್ಾದ' ನಾಟಕದ ಮೂಲಕ ಪ್ರಾರಂಭವಾಗಿ 'ಜೈಸಿದ್ಧ ನಾಯಕ', ತ್ರಿಶಂಕು, ಒಂದು ಆಕೃತಿಯ ಹತ್ಯೆ, ಕತ್ತಲೆ ಬೆಳಕು ಮುಂತಾದ ನಾಟಕಗಳನ್ನು ರಚಿಸಿ ರಂಗ ಪ್ರಯೋಗ ಮಾಡಿದ್ದಾರೆ. ಅದರಲ್ಲೂ ಕಾವ್ಯ ನಾಟಕಗಳಿಗೆ ಅಣತಿಯವರು ಸುಪ್ರಸಿದ್ಧರು. ಇವರನ್ನು ಗೀತ ನಾಟಕಕಾರರೆಂದೆ ಕರೆಯಲಾಗುತ್ತಿದೆ.
ಹಿಂದಿ ಭಾಷೆಗೆ ಅನುವಾದ
ಕನ್ನಡ ಸಾಹಿತಿಗಳ ಕೃತಿಗಳ ಬೇರೆ ಭಾಷೆಗೆ ಭಾಷಾಂತರಗೊಂಡ ಕೆಲವೇ ಕೆಲವರಲ್ಲಿ ಅಣತಿಯವರೂ ಒಬ್ಬರು. ಇವರ ಹಲವು ಉತ್ತಮ ಕವಿತೆಗಳು ಹಾಗೆಯೇ 'ಜೇತವನ' ಎಂಬ ನಾಟಕ ಹಿಂದಿ ಭಾಷೆಗೆ ಭಾಷಾಂತರಗೊಂಡು ಅಲ್ಲಿನ ಓದುಗರ ಮೆಚ್ಚುಗೆ ಗಳಿಸಿವೆ.
'ಸಂಪನ್ಮೂಲ ವ್ಯಕ್ತಿಯಾಗಿ'
ವೃತ್ತಿಯಲ್ಲಿ ಆದರ್ಶ ಅಧ್ಯಾಪಕರಾಗಿದ್ದ ಅಣತಿಯವರು ಉತ್ತಮ ವಾಗ್ಮಿಗಳು. ಕಾವ್ಯ ಹಾಗೂ ರಂಗಭೂಮಿಯ ಬಗ್ಗೆ ಆಳವಾದ ಅಧ್ಯಯನ ಮಾಡಿ ವಿಶೇಷ ಪಾಂಡಿತ್ಯ ಸಂಪಾದಿಸಿದ್ದರು. ಹಲವಾರು ಗೋಷ್ಠಿಗಳಲ್ಲಿ ಉಪನ್ಯಾಸ ನೀಡಿದ್ದಲ್ಲದೆ ಕನರ್ಾಟಕ ಸಾಹಿತ್ಯ ಅಕಾಡೆಮಿಯ ಕಾವ್ಯ ನಾಟಕ ರಚನಾ ಶಿಬಿರದ ಸಂನ್ಮೂಲ ವ್ಯಕ್ತಿಯಾಗಿ ಹಾಗೆಯೇ ಮೈಸೂರಿನ ನೀನಾಸಂ ಸಾಹಿತ್ಯ ಅಧ್ಯಯನ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮಾನವೀಯ ಮೌಲ್ಯ ಸಂವೇದನೆಯ ಕವಿಯಾಗಿ, ಮೂಲ ರಂಗಭೂಮಿ ಕಲಾ ಪೋಷಕರಾಗಿ ಅವಿಸ್ಮರಣೀಯ ಸೇವೆಗೈದ ಅಣತಿಯವರು ಅನೇಕ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಠಿ, ಚಚರ್ಾಗೋಷ್ಠಿ, ಸಾಹಿತ್ಯಿಕ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 'ಸಾಹಿತ್ಯ ಸಂಸ್ಕೃತಿ ಸಂಪುಟ ಪರಂಪರೆ' ಎಂಬ ಬೃಹತ್ ಗ್ರಂಥದ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಕೀತರ್ಿ ಇವರದು. ಇವರ ಬದುಕಿನ ಬಹುಭಾಗ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದುದರಿಂದ ಹೆಚ್ಚಾಗಿ ಹಾಸನ ಜನರಿಗೆ ಪರಿಚಯ ಇಲ್ಲದಿದ್ದರೂ ನಾಡಿನಾದ್ಯಾಂತ ಮನೆ ಮಾತಾಗಿದ್ದಾರೆ.
2011 ರಲ್ಲಿ ತವರು ಜಿಲ್ಲೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದ ಪ್ರಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿದ್ದ ಅಣತಿಯವರು ನಾಡಿನ ಗಣ್ಯ ಸಾಹಿತಿಯೂ ಹೌದು. ಸದ್ಯ ಪತ್ನಿ 'ಪ್ರಭಾ' ರವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿರುವ ಅಣತಿಯವರು ಸದಾ ಕನ್ನಡ ಸಾಹಿತ್ಯದ ಕ್ರಿಯಾಶೀಲ ಹಣತೆ.
ಕನ್ನಡ ಕಾದಂಬರಿ ಲೋಕದ ಹಸಿ ನೆಳಲು : ಸಂ.ಲಿಂ. ಭೈರಪ್ಪ
ಕಾದಂಬರಿ ಎಂದರೆ ಅರ್ಥಗೊತ್ತೇ? ಕಾದಂಬರಿ ಎಂದರೆ ಹೆಂಡ, ಮದ್ಯ ! ನಿಮಗೆ ದಿಗಿಲಾಗಬಹುದಲ್ಲವೇ, ಆದರೂ ಸತ್ಯ ಕಣ್ರೀ. ಅದರ ಕುಡಿತವು ಹೇಗೆ ಮೈಮರೆಸುತ್ತದೆಯೋ ಹಾಗೆಯೇ ಕಾದಂಬರಿಯೂ ಮೈ ಮರೆಸುವುದರಿಂದ ಈ ಪ್ರಕಾರಕ್ಕೆ ಬಹುಶಃ ಆ ಹೆಸರಿಟ್ಟಿರಬಹುದೇನೋ ಅಲ್ಲವೇ? ಸಂಸ್ಕೃತದಲ್ಲಿರುವ ಬಾಣಭಟ್ಟನ 'ಕಾದಂಬರಿ' ಇದಕ್ಕೊಂದು ತಾಜಾ ಉದಾಹರಣೆ. ಬಹುಶಃ ಈ ಹೆಸರು ಕೇಳದವರಿಲ್ಲವೆನಿಸುತ್ತೆ. ಈ ಕಾದಂಬರಿಯನ್ನು 19ನೆಯ ಶತಮಾನದಲ್ಲಿ ತುರುಮುರಿಯವರು ಕನ್ನಡಕ್ಕೆ 'ಕಾದಂಬರಿ ಕಾವ್ಯದ ಹೊಸಗನ್ನಡ ಗದ್ಯ ರೂಪ' ಎಂಬ ಹೆಸರಿನಲ್ಲಿ ತಂದರು. ಕಥೆ, ನಿರೂಪಣೆ, ವರ್ಣನಾ ಕೌಶಲ್ಯ, ಶೈಲಿ ಮತ್ತು ರಸಾನುಭವದ ದೃಷ್ಠಿಯಿಂದ ಕಾದಂಬರಿ ಪ್ರಕಾರ ಜನಪ್ರಿಯವಾಯಿತು.
ಹೊಸಗನ್ನಡ ಇತಿಹಾಸದಲ್ಲೇ ಅತ್ಯಾಧಿಕ ಶ್ರೇಷ್ಠ ಕಾದಂಬರಿಗಳನ್ನು ನಾಡಿಗೆ ನೀಡಿ ಜಗತ್ತಿನಾದ್ಯಾಂತ ಅಭಿಮಾನಿಗಳ ಮಹಾಸೈನ್ಯವನ್ನು ಕಟ್ಟಿಕೊಂಡವರಾರು ಗೊತ್ತೇ? ಅವರೇ 1999 ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು! ಇನ್ನೂ ಹೊಳೆಯಲಿಲ್ಲವೇ? ಅವರೇ ಕಣ್ರೀ ಆಧುನಿಕ ನವ್ಯ ಕಾದಂಬರಿಯ ಸಾರ್ವಭೌಮ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇ ಶಿವರದ ಭೈರಪ್ಪನವರು.
ಕಾದಂಬರಿ ಜಗತ್ತಿನಲ್ಲಿ ಎಸ್.ಎಲ್. ಭೈರಪ್ಪನೆಂದೇ ಖ್ಯಾತಿವೆತ್ತ ಇವರು 1934ರ ಜುಲೈ 26 ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ.
ಕನ್ನಡ ಕಾದಂಬರಿ ಸಾಹಿತ್ಯ ಲೋಕದಲ್ಲಿ ಹೆಚ್ಚು ಓದುಗರನ್ನು ಸೆಳೆದಿರುವ ಭೈರಪ್ಪನವರು ತಮ್ಮ ಅಪೂರ್ವ ಕೃತಿಗಳ ಮೂಲಕ ಆಳವಾದ ಚಿಂತನೆಯಲ್ಲಿ ಹಳೆಯ ಮತ್ತು ಹೊಸ ಮೌಲ್ಯಗಳ ಸಂಘರ್ಷವನ್ನು ವೈಚಾರಿಕತೆಯ ನೆಲೆಯಲ್ಲಿ ಸೃಜನಾತ್ಮಾಕ ಸಹಜ ಪಾತ್ರಗಳ ವ್ಯಕ್ತಿತ್ವದೊಂದಿಗೆ ಬಿಚ್ಚಿಡುವ ಕೆಲಸವನ್ನು ಇವರ ಕಾದಂಬರಿಗಳಲ್ಲಿ ಕಾಣಬಹುದು. ಪ್ರತಿಯೊಂದು ಕಾದಂಬರಿಯಲ್ಲಿಯೂ ಹಳೆ, ಹೊಸ ಸಂಘರ್ಷದ ಕಥೆ ಹೇರಳವಾಗಿ ಮೂಡಿರುವುದರಿಂದ ವೈವಿಧ್ಯತೆಗಳ ನೆಲೆ ಅಷ್ಟೇನೂ ಇಲ್ಲವೇನೋ ಅನ್ನಿಸಿ ಬಿಡುತ್ತದೆ. ಆಳಕ್ಕಿಳಿದು ಮಾತನಾಡುವಲ್ಲಿ, ಕೃತಿಗಳು ವಿಸ್ತಾರಗೊಳ್ಳುವಲ್ಲಿ ಎಲ್ಲೋ ಮುಗ್ಗರಿಸುತ್ತವೆ ಅನ್ನಿಸದಿರದು. ಆದ್ದರಿಂದಲೇ ಇವರ ಕೃತಿಗಳು ವಿಮರ್ಶಕ ವಲಯದಲ್ಲಿ ವಾದ-ವಿವಾದಗಳಿಗೆ ಕಾರಣವಾಗಿವೆ. ಭಾರತೀಯ ತತ್ತ್ವ ಶಾಸ್ತ್ರದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಭೈರಪ್ಪನವರು ಕನ್ನಡಕ್ಕೆ ಹಲವಾರು ಮೌಲಿಕ ಕಾದಂಬರಿಗಳನ್ನು ನೀಡಿದ್ದಾರೆ. ಹಾಗೆಯೇ ಅವರದೇಯಾದ ಓದುಗ ವಲಯವನ್ನು ಸೃಷ್ಠಿಸಿಕೊಂಡಿದ್ದಾರೆ.
ನವ್ಯ ಮಾರ್ಗದ ಹೊರಗುಳಿದ ಜನಪ್ರಿಯ ಕಾದಂಬರಿಕಾರ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. 1965ರಲ್ಲಿ 'ವಂಶವೃಕ್ಷ' ವೆಂಬ ಕಾದಂಬರಿಯನ್ನು ಪ್ರಕಟಿಸಿ ಅಪಾರ ಕೀತರ್ಿಗಳಿಸಿದರು. ಸಜೀವ ಪಾತ್ರಗಳ ನಿಮರ್ಾಣ, ಕಲಾವಂತಿಕೆ, ಭಾಷೆಯ ವೈವಿಧ್ಯ ಪೂರ್ಣ ಬಳಕೆ ಇಂತಹ ಗುಣಗಳಿಗೆ ಹೆಸರಾದ ಭೈರಪ್ಪನವರು ದಾಟು, ಪರ್ವ, ಸಾಕ್ಷಿ, ಗೃಹಭಂಗ, ಧರ್ಮಶ್ರೀ, ದೂರ ಸರಿದವರು, ಮಂದ್ರ, ವಂಶವೃಕ್ಷ, ಜಲಪಾತ, ತಬ್ಬಲಿ ನೀನಾದೆ ಮಗನೆ, ನಾಯಿನೆರಳು, ಮತದಾನ, ನಿರಾಕರಣ, ಅನ್ವೇಷಣೆ, ಕವಲು, ನೆಲೆ, ಅಂಚು, ತಂತು, ಸಾರ್ಥ, ಆವರಣ ಮೊದಲಾದ ಹಲವು ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಹಲವಾರು ಕಾದಂಬರಿಗಳಲ್ಲಿ ವೈಚಾರಿಕತೆಯ ನೆಳಲನ್ನು ಕಾಣಬಹುದಾಗಿದೆ. ಅವರ ಪ್ರಮುಖ ಪಾತ್ರಗಳು ನಿಖರತೆ ಹೊಂದಿದ್ದು, ಸ್ಪಷ್ಟ ರೀತಿಯ ಜೀವನ ಸಿದ್ಧಾಂತ ಸಾರುತ್ತವೆ. ಉಳ್ಳವರ, ಇಲ್ಲದವರ ನಡುವಿನ, ಮೇಲ್ವರ್ಗದ-ಕೆಳವರ್ಗದ ಸನ್ನಿವೇಶಗಳೇ ಪ್ರಮುಖ. ಹಲವು ಕಾದಂಬರಿಗಳಲ್ಲಿ ದೈಹಿಕ ಸುಖ, ಮಹಿಳಾ ಶೋಷಣೆಯ ನೇರ ಸನ್ನಿವೇಶಗಳು, ಹಳ್ಳಿ ನೈಜ ಘಟನೆಗಳು ಮೇಳೈಸಿರುವುದನ್ನು ಕಾಣಬಹುದು. ಆದರೆ ಭೈರಪ್ಪನವರ ಸೃಜನಶೀಲತೆ ಅವರ ವೈಚಾರಿಕತೆಯೊಂದಿಗೆ ಹೊಂದಾಣಿಕೆಯಾಗದ ಕಾರಣ ಕೆಲವು ಸನ್ನಿವೇಶಗಳಲ್ಲಿ ಹಾಗೆಯೇ ಕೃತಿಗಳಲ್ಲಿಯೂ ಕೂಡ ಸೋಲನ್ನು ಕಾಣಬಹುದು.
ಮತದಾನ, ತಬ್ಬಲಿಯು ನೀನಾದೆ ಮಗುವೆ, ವಂಶವೃಕ್ಷ, ನಾಯಿನೆರಳು ಇವು ಚಲನಚಿತ್ರಗಳಾಗಿ ಯಶ ಕಂಡಿವೆ. 'ಭಿತ್ತಿ' ಆತ್ಮ ವೃತ್ತಾಂತವನ್ನೊಳಗೊಂಡ ಕೃತಿಯಾಗಿದೆ. 'ಸತ್ಯ ಮತ್ತು ಸೌಂದರ್ಯ' ಇವರ ಸಂಶೋಧನಾ ಮಹಾಪ್ರಬಂಧವಾಗಿದೆ. 'ಸಾಹಿತ್ಯ ಮತ್ತು ಪ್ರತೀಕ', 'ಕಥೆ ಮತ್ತು ಕಥಾ ವಸ್ತು', 'ನಾನೇಕೆ ಬರೆಯುತ್ತೇನೆ' ಮೊದಲಾದವುಗಳು ಸಾಹಿತ್ಯ ಚಿಂತನದ ಕೃತಿಗಳಾಗಿದ್ದು ವೈವಿಧ್ಯತೆಯಿಂದ ಕೂಡಿವೆ.
'ಪರ್ವ' ಮಹಾಭಾರತ ಕುರಿತಾದ ಕಥಾವಸ್ತು. 'ಮತದಾನ' ಸಮಕಾಲೀನ ರಾಜಕೀಯ ವ್ಯವಸ್ಥೆ, ಸಮಸ್ಯೆ, ಡೋಂಗಿತನಗಳ ಮೇಲೆ ಬೆಳಕು ಚೆಲ್ಲುತ್ತದೆ. 'ದಾಟು' ಜಾತಿ ಸಮಸ್ಯೆ ಕುರಿತು ವಿಶ್ಲೇಷಣೆ ನೀಡುವ ಕಾದಂಬರಿ, 'ಆವರಣ' ಒಂದು ಐತಿಹಾಸಿಕ ಕಥಾವಸ್ತುವನ್ನು ಹೊಂದಿದ ಕಾದಂಬರಿಯಾದ ಇದು ಸಾಹಿತ್ಯ ವಲಯದಲ್ಲಿ ವಿವಾದಕ್ಕೂ ಕಾರಣವಾಗಿತ್ತು. 'ಸಾರ್ಥ' ಎಂಟನೇ ಶತಮಾನದಲ್ಲಿ ನೆಡದ ವಿದ್ಯಮಾನಗಳನ್ನು ಭಿತ್ತರಿಸುತ್ತದೆ. ಇವರ ಕಾದಂಬರಿಗಳು ಹೆಚ್ಚಾಗಿ ಮರಾಠಿಗೆ ಅನುವಾದಗೊಂಡಿವೆ. ಅಲ್ಲಿನ ಓದುಗರು ಕಂಡಂತೆ ಇವರೊಬ್ಬ ಮಹಾರಾಷ್ಟ್ರದ ಕಾದಂಬರಿಕಾರರೇ ಆಗಿ ಹೋಗಿದ್ದಾರೆ. ಮರಾಠಿಯಲ್ಲದೇ ಹಿಂದಿ, ಇಂಗ್ಲೀಷ್, ಸಂಸ್ಕೃತ, ತೆಲುಗು ಮುಂತಾದ ಭಾಷೆಗಳಿಗೆ ಅನುವಾದ ಕಂಡ ಇವರ ಕಾದಂಬರಿಗಳು ಸಹಜವಾಗಿಯೇ ದೇಶದಾದ್ಯಾಂತ ಜನಪ್ರಿಯತೆ ಗಳಿಸಿವೆ. ಇವರ 'ಗೃಹಭಂಗ' ದೂರದರ್ಶನ ಧಾರಾವಾಹಿಯಾಗಿ ಪ್ರಸಾರವಾಗಿದೆ.
ಭೈರಪ್ಪನವರ ಮೊದಲ ಕಾದಂಬರಿ 'ಧರ್ಮಶ್ರೀ' 1961 ರಲ್ಲಿ ಬಂದಿತು. ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಚಚರ್ೆಯನ್ನು ವೈಚಾರಿಕತೆಯ ಹಿನ್ನಲೆಯೊಂದಿಗೆ ಹೇಳುವ ರೀತಿ ವಿಭಿನ್ನವಾಗಿ ಮೂಡಿ ಬಂದಿದೆ. ಕಾದಂಬರಿಯ ಬೆನ್ನುಡಿಯಲ್ಲಿ ಭಾರತೀಯ ಪರಂಪರೆಯಲ್ಲಿ ಧರ್ಮ ಮತ್ತು ಸಂಸ್ಕೃತಿ ಎರಡೂ ಭಿನ್ನವಾದ ರೂಪಗಳು, ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ 'ಧರ್ಮಶ್ರೀ'ಯ ವಸ್ತುವಾಗಿದೆ ಎಬುದನ್ನು ಕಾಣಬಹುದಾಗಿದೆ. ನಾಯಕ ಸತ್ಯನಾರಾಯಣ ಹಿಂದೂ ಸಂಸ್ಕೃತಿಯ ಪ್ರತಿಬಿಂಬದಂತೆ ಮೂಡಿ ಬಂದು, ಕ್ರೈಸ್ತ ಹುಡುಗಿ ಅಲ್ಲಿಯ ಮೋಹಪಾಶಕ್ಕೆ ಸಿಕ್ಕು ಕ್ರೈಸ್ತನಾಗಿ ಮತ್ತೆ ಹಳೆಯ ವಾಸನೆಯೇ ವಾಸಿ ಎಂದು ಮರಳಿ ಮಣ್ಣಿಗೆ ವಾಪಾಸ್ಸಾಗುತ್ತಾನೆ. ಇಂತಹ ಸನ್ನಿವೇಶ ಭೈರಪ್ಪನವರ ಕಾದಂಬರಿಗಳಲ್ಲಿ ಹಲವಾರು ಕಡೆ ಸಂಭವಿಸುತ್ತದೆ. ಪ್ರಸುತ್ತ ಕೃತಿಯಲ್ಲಿ ಗೊಂದಲದಿಂದ ಕೂಡಿರುವ ಸಾಂಸ್ಕೃತಿಕತೆ ಸತ್ಯಭಾಮೆಯ ಮೂಲಕ ಸಾಗುವ ಪಾತ್ರಗಳು ಕಾದಂಬರಿಯ ವಸ್ತು ಇತಿಹಾಸ ಗೊತ್ತಿಲ್ಲದೆ ಸಮಕಾಲೀನ ಜೀವನದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬ ಸತ್ಯಭಾಮಳ ಮಾತಿಗೆ ಬದ್ಧವಾಗಿರುವಂತೆ ಕಾಣುತ್ತದೆ.
'ದೂರ ಸರಿದವರು' ಕಾದಂಬರಿಯಲ್ಲಿ ಶುದ್ಧ ಪ್ರೇಮದ ಆಲೋಚನಾ ಜಗತ್ತನ್ನು ಆನಂದ ಮತ್ತು ವಿನತೆ, ವಸಂತ ಮತ್ತು ಉಮಾ ಇವರ ಪ್ರೇಮ ಸಂಬಂಧಗಳ ಮೂಲಕ ತೆರೆದು ತೋರಿಸುವ ಭೈರಪ್ಪನವರು ನಮ್ಮನ್ನು ವೈಚಾರಿಕಾ ಜಗತ್ತಿಗೆ ತಳ್ಳಿ ಬಿಡುತ್ತಾರೆ.
ಹೀಗೆ ಒಂದೊಂದು ಕಾದಂಬರಿಯಲ್ಲಿ ಒಂದೊಂದು ರೀತಿಯ ಶೈಲಿಯಲ್ಲಿ ಪಾತ್ರ ಕಥಾವಸ್ತುಗಳನ್ನು ಹೆಣೆಯುತ್ತಾ ವಿಭಿನ್ನ ಬರವಣಿಗೆಯಲ್ಲಿ ತೊಡಗಿದ್ದಾರೆ.
1975ರಲ್ಲಿ ಇವರ 'ದಾಟು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ದಾಟು, ವಂಶವೃಕ್ಷ, ಸಾಕ್ಷಿ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. 'ಭಿತ್ತಿ' ಇವರ ಆತ್ಮಕಥೆ. ಭೈರಪ್ಪನವರಿಗೆ ಮಾಸ್ತಿ ಪ್ರಶಸ್ತಿ, ಕೋಲ್ಕತ್ತಾದ ಭಾರತೀಯ ಭಾಷಾ ಪ್ರಶಸ್ತಿ, ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಹೊಸಗನ್ನಡ ಇತಿಹಾಸದಲ್ಲೇ ಅತ್ಯಾಧಿಕ ಶ್ರೇಷ್ಠ ಕಾದಂಬರಿಗಳನ್ನು ನಾಡಿಗೆ ನೀಡಿ ಜಗತ್ತಿನಾದ್ಯಾಂತ ಅಭಿಮಾನಿಗಳ ಮಹಾಸೈನ್ಯವನ್ನು ಕಟ್ಟಿಕೊಂಡವರಾರು ಗೊತ್ತೇ? ಅವರೇ 1999 ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು! ಇನ್ನೂ ಹೊಳೆಯಲಿಲ್ಲವೇ? ಅವರೇ ಕಣ್ರೀ ಆಧುನಿಕ ನವ್ಯ ಕಾದಂಬರಿಯ ಸಾರ್ವಭೌಮ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇ ಶಿವರದ ಭೈರಪ್ಪನವರು.
ಕಾದಂಬರಿ ಜಗತ್ತಿನಲ್ಲಿ ಎಸ್.ಎಲ್. ಭೈರಪ್ಪನೆಂದೇ ಖ್ಯಾತಿವೆತ್ತ ಇವರು 1934ರ ಜುಲೈ 26 ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ.
ಕನ್ನಡ ಕಾದಂಬರಿ ಸಾಹಿತ್ಯ ಲೋಕದಲ್ಲಿ ಹೆಚ್ಚು ಓದುಗರನ್ನು ಸೆಳೆದಿರುವ ಭೈರಪ್ಪನವರು ತಮ್ಮ ಅಪೂರ್ವ ಕೃತಿಗಳ ಮೂಲಕ ಆಳವಾದ ಚಿಂತನೆಯಲ್ಲಿ ಹಳೆಯ ಮತ್ತು ಹೊಸ ಮೌಲ್ಯಗಳ ಸಂಘರ್ಷವನ್ನು ವೈಚಾರಿಕತೆಯ ನೆಲೆಯಲ್ಲಿ ಸೃಜನಾತ್ಮಾಕ ಸಹಜ ಪಾತ್ರಗಳ ವ್ಯಕ್ತಿತ್ವದೊಂದಿಗೆ ಬಿಚ್ಚಿಡುವ ಕೆಲಸವನ್ನು ಇವರ ಕಾದಂಬರಿಗಳಲ್ಲಿ ಕಾಣಬಹುದು. ಪ್ರತಿಯೊಂದು ಕಾದಂಬರಿಯಲ್ಲಿಯೂ ಹಳೆ, ಹೊಸ ಸಂಘರ್ಷದ ಕಥೆ ಹೇರಳವಾಗಿ ಮೂಡಿರುವುದರಿಂದ ವೈವಿಧ್ಯತೆಗಳ ನೆಲೆ ಅಷ್ಟೇನೂ ಇಲ್ಲವೇನೋ ಅನ್ನಿಸಿ ಬಿಡುತ್ತದೆ. ಆಳಕ್ಕಿಳಿದು ಮಾತನಾಡುವಲ್ಲಿ, ಕೃತಿಗಳು ವಿಸ್ತಾರಗೊಳ್ಳುವಲ್ಲಿ ಎಲ್ಲೋ ಮುಗ್ಗರಿಸುತ್ತವೆ ಅನ್ನಿಸದಿರದು. ಆದ್ದರಿಂದಲೇ ಇವರ ಕೃತಿಗಳು ವಿಮರ್ಶಕ ವಲಯದಲ್ಲಿ ವಾದ-ವಿವಾದಗಳಿಗೆ ಕಾರಣವಾಗಿವೆ. ಭಾರತೀಯ ತತ್ತ್ವ ಶಾಸ್ತ್ರದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಭೈರಪ್ಪನವರು ಕನ್ನಡಕ್ಕೆ ಹಲವಾರು ಮೌಲಿಕ ಕಾದಂಬರಿಗಳನ್ನು ನೀಡಿದ್ದಾರೆ. ಹಾಗೆಯೇ ಅವರದೇಯಾದ ಓದುಗ ವಲಯವನ್ನು ಸೃಷ್ಠಿಸಿಕೊಂಡಿದ್ದಾರೆ.
ನವ್ಯ ಮಾರ್ಗದ ಹೊರಗುಳಿದ ಜನಪ್ರಿಯ ಕಾದಂಬರಿಕಾರ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. 1965ರಲ್ಲಿ 'ವಂಶವೃಕ್ಷ' ವೆಂಬ ಕಾದಂಬರಿಯನ್ನು ಪ್ರಕಟಿಸಿ ಅಪಾರ ಕೀತರ್ಿಗಳಿಸಿದರು. ಸಜೀವ ಪಾತ್ರಗಳ ನಿಮರ್ಾಣ, ಕಲಾವಂತಿಕೆ, ಭಾಷೆಯ ವೈವಿಧ್ಯ ಪೂರ್ಣ ಬಳಕೆ ಇಂತಹ ಗುಣಗಳಿಗೆ ಹೆಸರಾದ ಭೈರಪ್ಪನವರು ದಾಟು, ಪರ್ವ, ಸಾಕ್ಷಿ, ಗೃಹಭಂಗ, ಧರ್ಮಶ್ರೀ, ದೂರ ಸರಿದವರು, ಮಂದ್ರ, ವಂಶವೃಕ್ಷ, ಜಲಪಾತ, ತಬ್ಬಲಿ ನೀನಾದೆ ಮಗನೆ, ನಾಯಿನೆರಳು, ಮತದಾನ, ನಿರಾಕರಣ, ಅನ್ವೇಷಣೆ, ಕವಲು, ನೆಲೆ, ಅಂಚು, ತಂತು, ಸಾರ್ಥ, ಆವರಣ ಮೊದಲಾದ ಹಲವು ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಹಲವಾರು ಕಾದಂಬರಿಗಳಲ್ಲಿ ವೈಚಾರಿಕತೆಯ ನೆಳಲನ್ನು ಕಾಣಬಹುದಾಗಿದೆ. ಅವರ ಪ್ರಮುಖ ಪಾತ್ರಗಳು ನಿಖರತೆ ಹೊಂದಿದ್ದು, ಸ್ಪಷ್ಟ ರೀತಿಯ ಜೀವನ ಸಿದ್ಧಾಂತ ಸಾರುತ್ತವೆ. ಉಳ್ಳವರ, ಇಲ್ಲದವರ ನಡುವಿನ, ಮೇಲ್ವರ್ಗದ-ಕೆಳವರ್ಗದ ಸನ್ನಿವೇಶಗಳೇ ಪ್ರಮುಖ. ಹಲವು ಕಾದಂಬರಿಗಳಲ್ಲಿ ದೈಹಿಕ ಸುಖ, ಮಹಿಳಾ ಶೋಷಣೆಯ ನೇರ ಸನ್ನಿವೇಶಗಳು, ಹಳ್ಳಿ ನೈಜ ಘಟನೆಗಳು ಮೇಳೈಸಿರುವುದನ್ನು ಕಾಣಬಹುದು. ಆದರೆ ಭೈರಪ್ಪನವರ ಸೃಜನಶೀಲತೆ ಅವರ ವೈಚಾರಿಕತೆಯೊಂದಿಗೆ ಹೊಂದಾಣಿಕೆಯಾಗದ ಕಾರಣ ಕೆಲವು ಸನ್ನಿವೇಶಗಳಲ್ಲಿ ಹಾಗೆಯೇ ಕೃತಿಗಳಲ್ಲಿಯೂ ಕೂಡ ಸೋಲನ್ನು ಕಾಣಬಹುದು.
ಮತದಾನ, ತಬ್ಬಲಿಯು ನೀನಾದೆ ಮಗುವೆ, ವಂಶವೃಕ್ಷ, ನಾಯಿನೆರಳು ಇವು ಚಲನಚಿತ್ರಗಳಾಗಿ ಯಶ ಕಂಡಿವೆ. 'ಭಿತ್ತಿ' ಆತ್ಮ ವೃತ್ತಾಂತವನ್ನೊಳಗೊಂಡ ಕೃತಿಯಾಗಿದೆ. 'ಸತ್ಯ ಮತ್ತು ಸೌಂದರ್ಯ' ಇವರ ಸಂಶೋಧನಾ ಮಹಾಪ್ರಬಂಧವಾಗಿದೆ. 'ಸಾಹಿತ್ಯ ಮತ್ತು ಪ್ರತೀಕ', 'ಕಥೆ ಮತ್ತು ಕಥಾ ವಸ್ತು', 'ನಾನೇಕೆ ಬರೆಯುತ್ತೇನೆ' ಮೊದಲಾದವುಗಳು ಸಾಹಿತ್ಯ ಚಿಂತನದ ಕೃತಿಗಳಾಗಿದ್ದು ವೈವಿಧ್ಯತೆಯಿಂದ ಕೂಡಿವೆ.
'ಪರ್ವ' ಮಹಾಭಾರತ ಕುರಿತಾದ ಕಥಾವಸ್ತು. 'ಮತದಾನ' ಸಮಕಾಲೀನ ರಾಜಕೀಯ ವ್ಯವಸ್ಥೆ, ಸಮಸ್ಯೆ, ಡೋಂಗಿತನಗಳ ಮೇಲೆ ಬೆಳಕು ಚೆಲ್ಲುತ್ತದೆ. 'ದಾಟು' ಜಾತಿ ಸಮಸ್ಯೆ ಕುರಿತು ವಿಶ್ಲೇಷಣೆ ನೀಡುವ ಕಾದಂಬರಿ, 'ಆವರಣ' ಒಂದು ಐತಿಹಾಸಿಕ ಕಥಾವಸ್ತುವನ್ನು ಹೊಂದಿದ ಕಾದಂಬರಿಯಾದ ಇದು ಸಾಹಿತ್ಯ ವಲಯದಲ್ಲಿ ವಿವಾದಕ್ಕೂ ಕಾರಣವಾಗಿತ್ತು. 'ಸಾರ್ಥ' ಎಂಟನೇ ಶತಮಾನದಲ್ಲಿ ನೆಡದ ವಿದ್ಯಮಾನಗಳನ್ನು ಭಿತ್ತರಿಸುತ್ತದೆ. ಇವರ ಕಾದಂಬರಿಗಳು ಹೆಚ್ಚಾಗಿ ಮರಾಠಿಗೆ ಅನುವಾದಗೊಂಡಿವೆ. ಅಲ್ಲಿನ ಓದುಗರು ಕಂಡಂತೆ ಇವರೊಬ್ಬ ಮಹಾರಾಷ್ಟ್ರದ ಕಾದಂಬರಿಕಾರರೇ ಆಗಿ ಹೋಗಿದ್ದಾರೆ. ಮರಾಠಿಯಲ್ಲದೇ ಹಿಂದಿ, ಇಂಗ್ಲೀಷ್, ಸಂಸ್ಕೃತ, ತೆಲುಗು ಮುಂತಾದ ಭಾಷೆಗಳಿಗೆ ಅನುವಾದ ಕಂಡ ಇವರ ಕಾದಂಬರಿಗಳು ಸಹಜವಾಗಿಯೇ ದೇಶದಾದ್ಯಾಂತ ಜನಪ್ರಿಯತೆ ಗಳಿಸಿವೆ. ಇವರ 'ಗೃಹಭಂಗ' ದೂರದರ್ಶನ ಧಾರಾವಾಹಿಯಾಗಿ ಪ್ರಸಾರವಾಗಿದೆ.
ಭೈರಪ್ಪನವರ ಮೊದಲ ಕಾದಂಬರಿ 'ಧರ್ಮಶ್ರೀ' 1961 ರಲ್ಲಿ ಬಂದಿತು. ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಚಚರ್ೆಯನ್ನು ವೈಚಾರಿಕತೆಯ ಹಿನ್ನಲೆಯೊಂದಿಗೆ ಹೇಳುವ ರೀತಿ ವಿಭಿನ್ನವಾಗಿ ಮೂಡಿ ಬಂದಿದೆ. ಕಾದಂಬರಿಯ ಬೆನ್ನುಡಿಯಲ್ಲಿ ಭಾರತೀಯ ಪರಂಪರೆಯಲ್ಲಿ ಧರ್ಮ ಮತ್ತು ಸಂಸ್ಕೃತಿ ಎರಡೂ ಭಿನ್ನವಾದ ರೂಪಗಳು, ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ 'ಧರ್ಮಶ್ರೀ'ಯ ವಸ್ತುವಾಗಿದೆ ಎಬುದನ್ನು ಕಾಣಬಹುದಾಗಿದೆ. ನಾಯಕ ಸತ್ಯನಾರಾಯಣ ಹಿಂದೂ ಸಂಸ್ಕೃತಿಯ ಪ್ರತಿಬಿಂಬದಂತೆ ಮೂಡಿ ಬಂದು, ಕ್ರೈಸ್ತ ಹುಡುಗಿ ಅಲ್ಲಿಯ ಮೋಹಪಾಶಕ್ಕೆ ಸಿಕ್ಕು ಕ್ರೈಸ್ತನಾಗಿ ಮತ್ತೆ ಹಳೆಯ ವಾಸನೆಯೇ ವಾಸಿ ಎಂದು ಮರಳಿ ಮಣ್ಣಿಗೆ ವಾಪಾಸ್ಸಾಗುತ್ತಾನೆ. ಇಂತಹ ಸನ್ನಿವೇಶ ಭೈರಪ್ಪನವರ ಕಾದಂಬರಿಗಳಲ್ಲಿ ಹಲವಾರು ಕಡೆ ಸಂಭವಿಸುತ್ತದೆ. ಪ್ರಸುತ್ತ ಕೃತಿಯಲ್ಲಿ ಗೊಂದಲದಿಂದ ಕೂಡಿರುವ ಸಾಂಸ್ಕೃತಿಕತೆ ಸತ್ಯಭಾಮೆಯ ಮೂಲಕ ಸಾಗುವ ಪಾತ್ರಗಳು ಕಾದಂಬರಿಯ ವಸ್ತು ಇತಿಹಾಸ ಗೊತ್ತಿಲ್ಲದೆ ಸಮಕಾಲೀನ ಜೀವನದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬ ಸತ್ಯಭಾಮಳ ಮಾತಿಗೆ ಬದ್ಧವಾಗಿರುವಂತೆ ಕಾಣುತ್ತದೆ.
'ದೂರ ಸರಿದವರು' ಕಾದಂಬರಿಯಲ್ಲಿ ಶುದ್ಧ ಪ್ರೇಮದ ಆಲೋಚನಾ ಜಗತ್ತನ್ನು ಆನಂದ ಮತ್ತು ವಿನತೆ, ವಸಂತ ಮತ್ತು ಉಮಾ ಇವರ ಪ್ರೇಮ ಸಂಬಂಧಗಳ ಮೂಲಕ ತೆರೆದು ತೋರಿಸುವ ಭೈರಪ್ಪನವರು ನಮ್ಮನ್ನು ವೈಚಾರಿಕಾ ಜಗತ್ತಿಗೆ ತಳ್ಳಿ ಬಿಡುತ್ತಾರೆ.
ಹೀಗೆ ಒಂದೊಂದು ಕಾದಂಬರಿಯಲ್ಲಿ ಒಂದೊಂದು ರೀತಿಯ ಶೈಲಿಯಲ್ಲಿ ಪಾತ್ರ ಕಥಾವಸ್ತುಗಳನ್ನು ಹೆಣೆಯುತ್ತಾ ವಿಭಿನ್ನ ಬರವಣಿಗೆಯಲ್ಲಿ ತೊಡಗಿದ್ದಾರೆ.
1975ರಲ್ಲಿ ಇವರ 'ದಾಟು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ದಾಟು, ವಂಶವೃಕ್ಷ, ಸಾಕ್ಷಿ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. 'ಭಿತ್ತಿ' ಇವರ ಆತ್ಮಕಥೆ. ಭೈರಪ್ಪನವರಿಗೆ ಮಾಸ್ತಿ ಪ್ರಶಸ್ತಿ, ಕೋಲ್ಕತ್ತಾದ ಭಾರತೀಯ ಭಾಷಾ ಪ್ರಶಸ್ತಿ, ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಯೋಗ ಕಲಾವಲ್ಲಭ -ಎಚ್.ಬಿ.ರಮೇಶ್
ನಾಡು ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ನಾಡಿಗಾಗಿ ಏನು ಕೊಟ್ಟಿದ್ದೇನೆ? ಎಂಬ ತಾತ್ವ್ತಿಕ ನೆಲೆಗಟ್ಟಿನಲ್ಲಿಯೇ ಸದಾ ಚಿಂತಿಸಿ, ಕಾಯರ್ೋನ್ಮುಖರಾಗಿ ಕಾಯಕಯೋಗಿಯಂತೆ ಕರ್ಮ ಎಸಗುತ್ತಾ ಆರಕ್ಕೇರದೇ ಮೂರಕ್ಕಿಳಿಯದೇ ಪ್ರಾಂಜಲಿ ಮನಸ್ಸಿನಿಂದ, ಸದಾ ಹಸನ್ಮುಖಿಯಾಗಿರುವ ಎಚ್.ಬಿ. ರಮೇಶ್ ಅವರದು ಬಹುಮುಖ ವ್ಯಕ್ತಿತ್ತ್ವ.
1933 ಜುಲೈ ಒಂದರಂದು ಹಾಸನದ ಪ್ರಖ್ಯಾತ ನೀರುವಾಗಿಲು ಆಂಜನೇಯ ದೇವಸ್ಥಾನದ ಪೂಜಾರಿ ವಂಶಸ್ಥರಾದ ಎಚ್. ಎಸ್. ಬೀಮಯ್ಯ ಹಾಗೂ ಶ್ರೀಮತಿ ಎಚ್. ಎನ್. ಪುಟ್ಟಮ್ಮ ದಂಪತಿಗಳ ಮಗನಾಗಿ ಜನಿಸಿದವರೇ ರಮೇಶ್.
ತಂದೆ ಭೀಮಯ್ಯ ಪ್ರಸಿದ್ಧ ರಂಗಭೂಮಿ ಕಲಾವಿದರು. ಹಾಗಾಗಿಯೇ ಕಲೆ ಎಂಬುದು ರಮೇಶ್ರವರಿಗೆ ರಕ್ತಗತವಾಗಿಯೇ ಬಂದಿದೆ ಎನ್ನಬಹುದು.
ಎಲ್ಲದಕ್ಕಿಂತ ಮುಖ್ಯವಾಗಿ ಅತ್ಯುತ್ತಮ ಶಿಕ್ಷಕರು ಹಾಗೆಯೇ ಪ್ರತಿಭಾನ್ವಿತ ಯೋಗಪಟು. ಆಲೂರು, ಸಕಲೇಶಪುರ ಮುಂತಾದ ಸ್ಥಳಗಳಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಇವರಿಗೆ ಸಾವಿರಾರು ಆಪ್ತ ಶಿಷ್ಯರಿದ್ದಾರೆ. ಆದ್ದರಿಂದ ಇವರು ಯೋಗ ಶಿಕ್ಷಕರೆಂದೇ ಪ್ರಸಿದ್ಧಿ. ಸ್ವ ಆಸಕ್ತಿಯಿಂದ ನೂರಾರು ಉಚಿತ ಯೋಗ ತರಬೇತಿಗಳನ್ನು ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟ
ಇವರು ಪ್ರೌಢಶಾಲಾ ಹಂತದಲ್ಲಿದ್ದಾಗ ದೇಶದಾದ್ಯಾಂತ ಸ್ವಾತಂತ್ರ್ಯ ಚಳುವಳಿಯ ಕಾವು ಗಾಂಧಿ ನೇತೃತ್ತ್ವದಲ್ಲಿ ತೀವ್ರ ಸ್ವರೂಪ ಪಡೆದಿತ್ತು. ಅದೆ ಸಮಯಕ್ಕೆ ಮೈಸೂರು ಚಲೋಜಾವ್ ಚಳುವಳಿ ಪ್ರಾರಂಭವಾಗಿತ್ತು. ರಮೇಶ್ರವರ ಆಂತರ್ಯದಲ್ಲಿ ಸುಪ್ತವಾಗಿದ್ದ ದೇಶಭಕ್ತಿ ಸುಮ್ಮನೆ ಕೂರಲು ಬಿಡಲಿಲ್ಲ. ಪರಿಣಾಮ ಚಳುವಳಿಯಲ್ಲಿ ಪಾಲ್ಗೊಂಡ ಹಾಸನ ಜೈಲಿನಲ್ಲಿ ಏಳು ದಿವಸಗಳ ಕಾಲ ಸೆರೆವಾಸ ಅನುಭವಿಸಿದರು.
ರಾಷ್ಟ್ರಪತಿ ಗಾಂಧಿ ಹಾಗೂ ಜಾಗತಿಕ ಕ್ರಾಂತಿಕಾರಿ ವಿಚಾರವಾದಿ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಅಕ್ಷರಶಃ ಅಳವಡಿಸಿಕೊಂಡು ಇಂದಿಗೂ ಆದರ್ಶಮಯ ಜೀವನ ಸಾಗಿಸುತ್ತಿದ್ದಾರೆ.
ರಂಗಭೂಮಿ ಪ್ರವೇಶ
ಆಲೂರು, ಸಕಲೇಶಪುರದಲ್ಲಿ ದೈಹಿಕ ಶಿಕ್ಷಕರಾಗಿದ್ದ ಸಂದರ್ಭದಲ್ಲಿಯೇ ಹವ್ಯಾಸ ತಂಡವೊಂದನ್ನು ಕಟ್ಟಿ 'ಉಂಡಾಡಿ ಗುಂಡ' ದಲ್ಲಿನ 'ಗುಂಡನ' ಪಾತ್ರ, 'ದೇವದಾಸಿ' ನಾಟಕದಲ್ಲಿನ ನಾಜೂಕಯ್ಯನ ಪಾತ್ರದಲ್ಲಿ ಖ್ಯಾತಿಗಳಿಸಿದರು. ಹಾಸನದ ಜಾತ್ರೆಗೆ ನಾಟಕ ಮಂಡಳಿಗಳೊಂದಿಗೆ ಬರುತ್ತಿದ್ದ ಡಾ|| ರಾಜ್ಕುಮಾರ್, ನರಸಿಂಹರಾಜು, ಬಾಲಕೃಷ್ಣರವರೊಂದಿಗೆ ಓಡಾಡಿದ ಕ್ಷಣಗಳನ್ನು, ಹಾಗೆಯೇ ಎಚ್ಚಮ್ಮನಾಯಕದಲ್ಲಿನ ಶಾಸ್ತ್ರಿ ಪಾತ್ರ ನೀಡಿ ಸ್ವತಃ ಡಾ|| ರಾಜ್ರವರೇ ಇವರಿಗೆ ಮೇಕಪ್ ಮಾಡಿದ ಘಳಿಗೆಗಳನ್ನು ನೆನೆಯುತ್ತಾ ರಮೇಶ್ರವರ ಉನ್ಮಾದಗೊಳ್ಳುತ್ತಾರೆ.
ನಟನೆಯ ಜೊತೆಗೆ ನಾಟಕ ರಚನೆಯನ್ನು ಮಾಡಿದ ರಮೇಶ್ರವರು 'ಬಾಡ್ಗೆ ಮನೆ' 'ಚಿರೋಟಿ ದೆವ್ವ', 'ಅಭಿನಯದ ಅಧ್ವಾನ', ಕಲಾತಪಸ್ವಿ, ವರಶಾಪ, ಮಹಾಪರಿವರ್ತನೆ ನಾಟಕಗಳನ್ನು ರಚಿಸಿದ್ದಾರೆ.
ಅಲ್ಲದೆ ಶ್ರೀ ಹಾಸನಾಂಬ ಚರಿತ್ರೆ, ಬೇಲೂರು ಬೆಡಗಿಯರು, ಅರಸೀಕೆರೆ ಬೆಡಗು, ಹಾಸನ ಜಿಲ್ಲಾ ವಾಸ್ತು ಶಿಲ್ಪ, ಭಗವಾನ್ ಬಾಹುಬಲಿ, ದಾಸರೆಂದರೆ ಪುರಂದರ ದಾಸರಯ್ಯ, ಮುತ್ತು ರತ್ನ, ಜೇನುಕಲ್ಲು ಸಿದ್ದೇಶ್ವರ, ಯೋಗಾಸನ ಮನೋಲ್ಲಾಸ, ಗೊಮ್ಮಟ ವೈಭವ, ಬೇಲೂರು ತಾಲ್ಲೂಕು ದರ್ಶನ, ಉಪಯುಕ್ತ ಯೋಗಾಸನಗಳು, ಕುವೆಂಪು ಕಂಡ ಮಂಥರೆ ಮತ್ತು ಇತರ ನಾಟಕಗಳು, ಹಣತೆ ಹೀಗೆ ಸ್ಥಳ ಪುರಾಣ, ವ್ಯಕ್ತಿ ಚರಿತ್ರೆ, ವಿಮಶರ್ೆ, ಶಿಕ್ಷಣ ಮುಂತಾದ ರೀತಿಯ ಸಾಹಿತ್ಯಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಇವರ ಗುರುತರ ಸೇವೆ ಗುರುತಿಸಿ 1987ರಲ್ಲಿ ಜಿಲ್ಲಾಡಳಿತ ಮತ್ತು ನಗರ ಸಭೆ ಸನ್ಮಾನ ಮಾಡಲು ನಿರ್ಧರಿಸಿದಾಗ ಅದನ್ನು ನಿರಾಕರಿಸಿ, ಬದಲಿಗೆ ಯೋಗ ತರಬೇತಿ ನೀಡಲು ಶಾಶ್ವತ ನೆಲೆಯೊಂದನ್ನು ಕೇಳಿದರು. ಇಲ್ಲಿ ಅವರ ನಿಶ್ವಾರ್ಥ ಸೇವೆ ನಮಗೆ ಅರಿವಾಗದಿರದು. ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಉಪೇಂದ್ರ ತ್ರಿಪಾಠಿ ಹಾಗೂ ನಗರ ಸಭಾಧ್ಯಕ್ಷರಾಗಿದ್ದ ಎಚ್.ಎಸ್.ಕೃಷ್ಣಮೂತರ್ಿಯವರು ಇವರ ಸಾಮಾಜಿಕ ಕಳಕಳಿ ಅರಿತು ಮಹಾರಾಜ ಪಾರ್ಕನಲ್ಲಿ ಯೋಗ ಶಿಕ್ಷಣ ಶಾಲೆ ಪ್ರಾರಂಬಿಸಲು ಅನುಮತಿ ನೀಡಿದರು. ಆಗ ರಮೇಶ್ ರವರು ಅವರ ಆಪ್ತ ಗೆಳೆಯರ ಸಹಕಾರದಿಂದ ಈಗಿನ ವಿವೇಕಾನಂದ ಯೋಗ ಶಾಲೆ ನಿಮರ್ಿಸಿದರು.
ಸಾಹಿತ್ಯ ಪರಿಷತ್ತಿಗೆ ಪಾದಾರ್ಪಣೆ
ಹಿಂದಿನಿಂದಲೂ ಇವರನ್ನೂ ಸಾಹಿತ್ಯ ಆವೃತ್ತಗೊಂಡಿತ್ತು. ಹೀಗೆ ಮಾತನಾಡುತ್ತಾ ಅವರನ್ನು ಸಾಹಿತ್ಯ ಕ್ಷೇತ್ರದತ್ತ ಎಳೆದೆ ಕುವೆಂಪು, ತ.ರಾಸು, ಡಿ.ವಿ.ಜಿ, ರಾಜರತ್ನಂ, ಗೊರೂರು, ಎಸ್.ಕೆ. ಕರೀಂಖಾನ್, ಜ್ವಾಲನಯ್ಯ, ಅನಕೃ ಮುಂತಾದವರ ಮಾರ್ಗದರ್ಶನ ಅವರಿಗಿತ್ತು. ಈಗಲೂ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನೆಯುತ್ತ ಆನಂದ ಭಾಷ್ಪದೊಂದಿಗೆ ನಾನೆಂತಹ ಪುಣ್ಯ ವ್ಯಕ್ತಿ ಎಂದು ಉದ್ಗಾರ ತೆಗೆಯುತ್ತಾರೆ. ಖಂಡಿತಾ ಅವರ ಭಾವುಕತೆ ನನ್ನನ್ನೂ ಒಂದು ಕ್ಷಣ ಉನ್ಮಾದಗೊಳಿಸಿತು.
ಇವರ ಸಾಮಾಜಿಕ ಹಾಗೂ ಸಾಹಿತ್ಯಿಕ ತುಡಿತ ಯೋಗ ಶಾಲೆಯಿಂದ ಭುವನೇಶ್ವರಿ ಗೂಡಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಕರೆತಂದಿತು. ಕ್ರಿಯಾಶೀಲರಾದ ರಮೇಶ್ರವರಿಗೆ ಯೋಗ ಶಿಕ್ಷಕರಾಗಿ ಸಿಕ್ಕಾ ಜನ ಪ್ರಿಯತೆ ಇಲ್ಲಿಯೂ ಮುಂದುವರೆಯಿತು.
ಇವರ ಅವಧಿಯಲ್ಲಿ ಹೆಸರಾಂತ ಸಾಹಿತಿಗಳಾದ ಕಿ.ರಂ. ನಾಗರಾಜ, ಬಾನುಮುಷ್ತಾಕ್, ಪ್ರತಿಭಾನ್ವಿತ ವಾಗ್ಮಿಗಳಾದ ಎ.ಎಸ್. ಕಾಳೇಗೌಡ ಮುಂತಾದ ಮಹನೀಯರನ್ನು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ತಾಯಿಯ ರಥವನ್ನು ಎಳೆದರು.
ಅತ್ಯುತ್ತಮ ಸಂಘಟನಾ ಚಾತುರ್ಯ ಹೊಂದಿದ ರಮೇಶ್ ಈಗಿರುವ ಹೊಯ್ಸಳ ಹೆಬ್ಬಾಗಿಲು, ಹೊಯ್ಸಳ ಲಾಂಛನ, ಬಯಲು ರಂಗಮಂದಿರ, ಧ್ವನಿವರ್ಧಕ ವ್ಯವಸ್ಥೆ ಮುಂತಾದ ಮೂಲ ಸೌಕರ್ಯಗಳನ್ನು ಆರು ಲಕ್ಷಕ್ಕೂ ಅಧಿಕ ಮೌಲ್ಯವುಳ್ಳ ಆಸ್ತಿ ಮಾಡಿ ಪರಿಷತ್ತನ್ನು ಸಿರಿವಂತಗೊಳಿಸಿದ್ದಾರೆ.
ಪ್ರಸ್ತುತ 80 ವರ್ಷದ ನವ ಯುವಕನಂತೆ ಪ್ರತಿನಿತ್ಯ ಮಹಾರಾಜ ಪಾಕರ್ಿನ ವಿವೇಕಾನಂದ ಯೋಗ ಶಾಲೆಯಲ್ಲಿ ಉಚಿತ ಯೋಗ ತರಬೇತಿ ನೀಡುತ್ತಿರುವ ಈ ಹಿರಿಯ ಜೀವ ಸದಾ ಕ್ರಿಯಾಶೀಲ. ಸುಂದರ ಸಮಾಜದ ನಿಮರ್ಾಣ, ನಿಷ್ಕಲ್ಮಷ ಭಾವ ವಿಚಾರಗಳು ಇವರ ಪ್ರಮುಖ ಗುರಿ. ಗಂಭೀರ ವಿಷಯಗಳ ಚಚರ್ೆಗಳಲ್ಲಿಯೂ ಹಾಸ್ಯದ ಹೊನಲನ್ನು ಹರಿಸುವ ಇವರು ಸದಾ ಹಸನ್ಮಖಿಗಳು. ಇವರ ಸೇವೆ ನಾಡಿಗೆ ಇನ್ನಷ್ಟು ಸಿಗಲಿ ಎಂದು ಆಶಿಸುತ್ತೇನೆ.
1933 ಜುಲೈ ಒಂದರಂದು ಹಾಸನದ ಪ್ರಖ್ಯಾತ ನೀರುವಾಗಿಲು ಆಂಜನೇಯ ದೇವಸ್ಥಾನದ ಪೂಜಾರಿ ವಂಶಸ್ಥರಾದ ಎಚ್. ಎಸ್. ಬೀಮಯ್ಯ ಹಾಗೂ ಶ್ರೀಮತಿ ಎಚ್. ಎನ್. ಪುಟ್ಟಮ್ಮ ದಂಪತಿಗಳ ಮಗನಾಗಿ ಜನಿಸಿದವರೇ ರಮೇಶ್.
ತಂದೆ ಭೀಮಯ್ಯ ಪ್ರಸಿದ್ಧ ರಂಗಭೂಮಿ ಕಲಾವಿದರು. ಹಾಗಾಗಿಯೇ ಕಲೆ ಎಂಬುದು ರಮೇಶ್ರವರಿಗೆ ರಕ್ತಗತವಾಗಿಯೇ ಬಂದಿದೆ ಎನ್ನಬಹುದು.
ಎಲ್ಲದಕ್ಕಿಂತ ಮುಖ್ಯವಾಗಿ ಅತ್ಯುತ್ತಮ ಶಿಕ್ಷಕರು ಹಾಗೆಯೇ ಪ್ರತಿಭಾನ್ವಿತ ಯೋಗಪಟು. ಆಲೂರು, ಸಕಲೇಶಪುರ ಮುಂತಾದ ಸ್ಥಳಗಳಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಇವರಿಗೆ ಸಾವಿರಾರು ಆಪ್ತ ಶಿಷ್ಯರಿದ್ದಾರೆ. ಆದ್ದರಿಂದ ಇವರು ಯೋಗ ಶಿಕ್ಷಕರೆಂದೇ ಪ್ರಸಿದ್ಧಿ. ಸ್ವ ಆಸಕ್ತಿಯಿಂದ ನೂರಾರು ಉಚಿತ ಯೋಗ ತರಬೇತಿಗಳನ್ನು ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟ
ಇವರು ಪ್ರೌಢಶಾಲಾ ಹಂತದಲ್ಲಿದ್ದಾಗ ದೇಶದಾದ್ಯಾಂತ ಸ್ವಾತಂತ್ರ್ಯ ಚಳುವಳಿಯ ಕಾವು ಗಾಂಧಿ ನೇತೃತ್ತ್ವದಲ್ಲಿ ತೀವ್ರ ಸ್ವರೂಪ ಪಡೆದಿತ್ತು. ಅದೆ ಸಮಯಕ್ಕೆ ಮೈಸೂರು ಚಲೋಜಾವ್ ಚಳುವಳಿ ಪ್ರಾರಂಭವಾಗಿತ್ತು. ರಮೇಶ್ರವರ ಆಂತರ್ಯದಲ್ಲಿ ಸುಪ್ತವಾಗಿದ್ದ ದೇಶಭಕ್ತಿ ಸುಮ್ಮನೆ ಕೂರಲು ಬಿಡಲಿಲ್ಲ. ಪರಿಣಾಮ ಚಳುವಳಿಯಲ್ಲಿ ಪಾಲ್ಗೊಂಡ ಹಾಸನ ಜೈಲಿನಲ್ಲಿ ಏಳು ದಿವಸಗಳ ಕಾಲ ಸೆರೆವಾಸ ಅನುಭವಿಸಿದರು.
ರಾಷ್ಟ್ರಪತಿ ಗಾಂಧಿ ಹಾಗೂ ಜಾಗತಿಕ ಕ್ರಾಂತಿಕಾರಿ ವಿಚಾರವಾದಿ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಅಕ್ಷರಶಃ ಅಳವಡಿಸಿಕೊಂಡು ಇಂದಿಗೂ ಆದರ್ಶಮಯ ಜೀವನ ಸಾಗಿಸುತ್ತಿದ್ದಾರೆ.
ರಂಗಭೂಮಿ ಪ್ರವೇಶ
ಆಲೂರು, ಸಕಲೇಶಪುರದಲ್ಲಿ ದೈಹಿಕ ಶಿಕ್ಷಕರಾಗಿದ್ದ ಸಂದರ್ಭದಲ್ಲಿಯೇ ಹವ್ಯಾಸ ತಂಡವೊಂದನ್ನು ಕಟ್ಟಿ 'ಉಂಡಾಡಿ ಗುಂಡ' ದಲ್ಲಿನ 'ಗುಂಡನ' ಪಾತ್ರ, 'ದೇವದಾಸಿ' ನಾಟಕದಲ್ಲಿನ ನಾಜೂಕಯ್ಯನ ಪಾತ್ರದಲ್ಲಿ ಖ್ಯಾತಿಗಳಿಸಿದರು. ಹಾಸನದ ಜಾತ್ರೆಗೆ ನಾಟಕ ಮಂಡಳಿಗಳೊಂದಿಗೆ ಬರುತ್ತಿದ್ದ ಡಾ|| ರಾಜ್ಕುಮಾರ್, ನರಸಿಂಹರಾಜು, ಬಾಲಕೃಷ್ಣರವರೊಂದಿಗೆ ಓಡಾಡಿದ ಕ್ಷಣಗಳನ್ನು, ಹಾಗೆಯೇ ಎಚ್ಚಮ್ಮನಾಯಕದಲ್ಲಿನ ಶಾಸ್ತ್ರಿ ಪಾತ್ರ ನೀಡಿ ಸ್ವತಃ ಡಾ|| ರಾಜ್ರವರೇ ಇವರಿಗೆ ಮೇಕಪ್ ಮಾಡಿದ ಘಳಿಗೆಗಳನ್ನು ನೆನೆಯುತ್ತಾ ರಮೇಶ್ರವರ ಉನ್ಮಾದಗೊಳ್ಳುತ್ತಾರೆ.
ನಟನೆಯ ಜೊತೆಗೆ ನಾಟಕ ರಚನೆಯನ್ನು ಮಾಡಿದ ರಮೇಶ್ರವರು 'ಬಾಡ್ಗೆ ಮನೆ' 'ಚಿರೋಟಿ ದೆವ್ವ', 'ಅಭಿನಯದ ಅಧ್ವಾನ', ಕಲಾತಪಸ್ವಿ, ವರಶಾಪ, ಮಹಾಪರಿವರ್ತನೆ ನಾಟಕಗಳನ್ನು ರಚಿಸಿದ್ದಾರೆ.
ಅಲ್ಲದೆ ಶ್ರೀ ಹಾಸನಾಂಬ ಚರಿತ್ರೆ, ಬೇಲೂರು ಬೆಡಗಿಯರು, ಅರಸೀಕೆರೆ ಬೆಡಗು, ಹಾಸನ ಜಿಲ್ಲಾ ವಾಸ್ತು ಶಿಲ್ಪ, ಭಗವಾನ್ ಬಾಹುಬಲಿ, ದಾಸರೆಂದರೆ ಪುರಂದರ ದಾಸರಯ್ಯ, ಮುತ್ತು ರತ್ನ, ಜೇನುಕಲ್ಲು ಸಿದ್ದೇಶ್ವರ, ಯೋಗಾಸನ ಮನೋಲ್ಲಾಸ, ಗೊಮ್ಮಟ ವೈಭವ, ಬೇಲೂರು ತಾಲ್ಲೂಕು ದರ್ಶನ, ಉಪಯುಕ್ತ ಯೋಗಾಸನಗಳು, ಕುವೆಂಪು ಕಂಡ ಮಂಥರೆ ಮತ್ತು ಇತರ ನಾಟಕಗಳು, ಹಣತೆ ಹೀಗೆ ಸ್ಥಳ ಪುರಾಣ, ವ್ಯಕ್ತಿ ಚರಿತ್ರೆ, ವಿಮಶರ್ೆ, ಶಿಕ್ಷಣ ಮುಂತಾದ ರೀತಿಯ ಸಾಹಿತ್ಯಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಇವರ ಗುರುತರ ಸೇವೆ ಗುರುತಿಸಿ 1987ರಲ್ಲಿ ಜಿಲ್ಲಾಡಳಿತ ಮತ್ತು ನಗರ ಸಭೆ ಸನ್ಮಾನ ಮಾಡಲು ನಿರ್ಧರಿಸಿದಾಗ ಅದನ್ನು ನಿರಾಕರಿಸಿ, ಬದಲಿಗೆ ಯೋಗ ತರಬೇತಿ ನೀಡಲು ಶಾಶ್ವತ ನೆಲೆಯೊಂದನ್ನು ಕೇಳಿದರು. ಇಲ್ಲಿ ಅವರ ನಿಶ್ವಾರ್ಥ ಸೇವೆ ನಮಗೆ ಅರಿವಾಗದಿರದು. ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಉಪೇಂದ್ರ ತ್ರಿಪಾಠಿ ಹಾಗೂ ನಗರ ಸಭಾಧ್ಯಕ್ಷರಾಗಿದ್ದ ಎಚ್.ಎಸ್.ಕೃಷ್ಣಮೂತರ್ಿಯವರು ಇವರ ಸಾಮಾಜಿಕ ಕಳಕಳಿ ಅರಿತು ಮಹಾರಾಜ ಪಾರ್ಕನಲ್ಲಿ ಯೋಗ ಶಿಕ್ಷಣ ಶಾಲೆ ಪ್ರಾರಂಬಿಸಲು ಅನುಮತಿ ನೀಡಿದರು. ಆಗ ರಮೇಶ್ ರವರು ಅವರ ಆಪ್ತ ಗೆಳೆಯರ ಸಹಕಾರದಿಂದ ಈಗಿನ ವಿವೇಕಾನಂದ ಯೋಗ ಶಾಲೆ ನಿಮರ್ಿಸಿದರು.
ಸಾಹಿತ್ಯ ಪರಿಷತ್ತಿಗೆ ಪಾದಾರ್ಪಣೆ
ಹಿಂದಿನಿಂದಲೂ ಇವರನ್ನೂ ಸಾಹಿತ್ಯ ಆವೃತ್ತಗೊಂಡಿತ್ತು. ಹೀಗೆ ಮಾತನಾಡುತ್ತಾ ಅವರನ್ನು ಸಾಹಿತ್ಯ ಕ್ಷೇತ್ರದತ್ತ ಎಳೆದೆ ಕುವೆಂಪು, ತ.ರಾಸು, ಡಿ.ವಿ.ಜಿ, ರಾಜರತ್ನಂ, ಗೊರೂರು, ಎಸ್.ಕೆ. ಕರೀಂಖಾನ್, ಜ್ವಾಲನಯ್ಯ, ಅನಕೃ ಮುಂತಾದವರ ಮಾರ್ಗದರ್ಶನ ಅವರಿಗಿತ್ತು. ಈಗಲೂ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನೆಯುತ್ತ ಆನಂದ ಭಾಷ್ಪದೊಂದಿಗೆ ನಾನೆಂತಹ ಪುಣ್ಯ ವ್ಯಕ್ತಿ ಎಂದು ಉದ್ಗಾರ ತೆಗೆಯುತ್ತಾರೆ. ಖಂಡಿತಾ ಅವರ ಭಾವುಕತೆ ನನ್ನನ್ನೂ ಒಂದು ಕ್ಷಣ ಉನ್ಮಾದಗೊಳಿಸಿತು.
ಇವರ ಸಾಮಾಜಿಕ ಹಾಗೂ ಸಾಹಿತ್ಯಿಕ ತುಡಿತ ಯೋಗ ಶಾಲೆಯಿಂದ ಭುವನೇಶ್ವರಿ ಗೂಡಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಕರೆತಂದಿತು. ಕ್ರಿಯಾಶೀಲರಾದ ರಮೇಶ್ರವರಿಗೆ ಯೋಗ ಶಿಕ್ಷಕರಾಗಿ ಸಿಕ್ಕಾ ಜನ ಪ್ರಿಯತೆ ಇಲ್ಲಿಯೂ ಮುಂದುವರೆಯಿತು.
ಇವರ ಅವಧಿಯಲ್ಲಿ ಹೆಸರಾಂತ ಸಾಹಿತಿಗಳಾದ ಕಿ.ರಂ. ನಾಗರಾಜ, ಬಾನುಮುಷ್ತಾಕ್, ಪ್ರತಿಭಾನ್ವಿತ ವಾಗ್ಮಿಗಳಾದ ಎ.ಎಸ್. ಕಾಳೇಗೌಡ ಮುಂತಾದ ಮಹನೀಯರನ್ನು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ತಾಯಿಯ ರಥವನ್ನು ಎಳೆದರು.
ಅತ್ಯುತ್ತಮ ಸಂಘಟನಾ ಚಾತುರ್ಯ ಹೊಂದಿದ ರಮೇಶ್ ಈಗಿರುವ ಹೊಯ್ಸಳ ಹೆಬ್ಬಾಗಿಲು, ಹೊಯ್ಸಳ ಲಾಂಛನ, ಬಯಲು ರಂಗಮಂದಿರ, ಧ್ವನಿವರ್ಧಕ ವ್ಯವಸ್ಥೆ ಮುಂತಾದ ಮೂಲ ಸೌಕರ್ಯಗಳನ್ನು ಆರು ಲಕ್ಷಕ್ಕೂ ಅಧಿಕ ಮೌಲ್ಯವುಳ್ಳ ಆಸ್ತಿ ಮಾಡಿ ಪರಿಷತ್ತನ್ನು ಸಿರಿವಂತಗೊಳಿಸಿದ್ದಾರೆ.
ಪ್ರಸ್ತುತ 80 ವರ್ಷದ ನವ ಯುವಕನಂತೆ ಪ್ರತಿನಿತ್ಯ ಮಹಾರಾಜ ಪಾಕರ್ಿನ ವಿವೇಕಾನಂದ ಯೋಗ ಶಾಲೆಯಲ್ಲಿ ಉಚಿತ ಯೋಗ ತರಬೇತಿ ನೀಡುತ್ತಿರುವ ಈ ಹಿರಿಯ ಜೀವ ಸದಾ ಕ್ರಿಯಾಶೀಲ. ಸುಂದರ ಸಮಾಜದ ನಿಮರ್ಾಣ, ನಿಷ್ಕಲ್ಮಷ ಭಾವ ವಿಚಾರಗಳು ಇವರ ಪ್ರಮುಖ ಗುರಿ. ಗಂಭೀರ ವಿಷಯಗಳ ಚಚರ್ೆಗಳಲ್ಲಿಯೂ ಹಾಸ್ಯದ ಹೊನಲನ್ನು ಹರಿಸುವ ಇವರು ಸದಾ ಹಸನ್ಮಖಿಗಳು. ಇವರ ಸೇವೆ ನಾಡಿಗೆ ಇನ್ನಷ್ಟು ಸಿಗಲಿ ಎಂದು ಆಶಿಸುತ್ತೇನೆ.
ನವೋದಯ ಕಾಲದ ಶ್ರೇಷ್ಠ ಅನುವಾದಕ - ಎಲ್. ಗುಂಡಪ್ಪ
ಹೊಸಗನ್ನಡ ಸಾಹಿತ್ಯದ ಆರಂಭವನ್ನು ನವೋದಯ ಸಾಹಿತ್ಯವೆಂತಲೂ ಕರೆಯುತ್ತೇವೆ. ವಸಾಹತು ಶಾಹಿಯ ಪ್ರಭಾವದಿಂದ ಪಡೆದ ಪಾಶ್ಚಾತ್ಯ ಶಿಕ್ಷಣದ ಹೊಸ ಪ್ರೇರಣೆಗಳು ಹಾಗೂ ಆ ಮೂಲಕ ಜಾಗೃತಗೊಂಡ ಪಾರಂಪರಿಕ ಮೌಲ್ಯಗಳ ಬಗೆಗಿನ ಹೊಸ ದೃಷ್ಠಿಕೋನದ ಫಲವಾಗಿ ಈ ಸಾಹಿತ್ಯ ಬೆಳೆಯಿತು. ಈ ನವೋದಯ ಸಾಹಿತ್ಯ ತನ್ನ ಪೂರ್ವದ ಸಾಹಿತ್ಯ ರೂಪಕ್ಕಿಂತ ವಿಭಿನ್ನ ರೀತಿಯಲ್ಲಿ ಅಂದರೆ ಮಾನವ ಬದುಕಿನ ಸಮಕಾಲೀನ ಸಾಮಾಜಿಕ, ರಾಜಕೀಯ, ಆಥರ್ಿಕ ಈ ಎಲ್ಲಾ ಸ್ತರಗಳನ್ನು ಕುರಿತು ಚಿಂತಿಸುವ ಪರಿಸರದಲ್ಲಿ ಬೆಳೆಯಲು ಇದು ತನ್ನ ಹಿಂದಿನ ಸಾಹಿತ್ಯದಂತೆ ಧರ್ಮ ಹಾಗೂ ಪಂಡಿತ ಕೇಂದ್ರಿತ ನೆಲೆಯಲ್ಲಿರದೆ, ಸಮಾಜ ಕೇಂದ್ರಿತ ದೃಷ್ಠಿಕೋನದೊಂದಿಗೆ ಭಿನ್ನ ಭಿನ್ನ ಆಯಾಮಗಳಲ್ಲಿ ಬೆಳೆದು ಬಂದಿತು.
ಬಿ.ಎಂ. ಶ್ರೀ, ಪಂಜೆ ಮಂಗೇಶರಾಯ, ಗೋವಿಂದ ಪೈ, ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿಯಾದಿಯಾಗಿ ಎಲ್. ಗುಂಡಪ್ಪ, ಕುವೆಂಪು, ಕಾರಂತರು, ರಂ ಶ್ರೀ ಮುಗುಳಿ, ರಂಗಣ್ಣ ಮುಂತಾದವರನ್ನೊಳಗೊಂಡ ಬೃಹತ್ ಸಾಹಿತ್ಯ ಪರಂಪರೆ ಈ ನವೋದಯ ಕಾಲದಲ್ಲಿ ಮೈತಳೆದು ಹೊಸ ತಿರುವನ್ನು ಪಡೆಯಿತೆನ್ನಬಹುದು.
ನವೋದಯ ಕಾಲಘಟ್ಟದ ಪ್ರಮುಖ ಅನುವಾದಕರೆಂದೇ ಗುರುತಿಸಿಕೊಂಡ ಎಲ್.ಗುಂಡಪ್ಪನವರು ಹಾಸನದ ಹಸಿರು ಹೊದಿಕೆಯಿಂದ ಚಿಮ್ಮಿ ಬಂದವರು. ಹಾಸನ ಜಿಲ್ಲೆಯ ಗೊರೂರು, ರಂಗಣ್ಣನವರ ಸಮಕಾಲೀನರಾಗಿದ್ದ ಗುಂಡಪ್ಪನವರು ಅನುವಾದ ಹಾಗೂ ನಿಘಂಟು ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.
ಎಲ್. ಗುಂಡಪ್ಪನವರು ಹಾಸನ ಜಿಲ್ಲೆಯ ಮಲೆನಾಡು ಸೆರಗಿನ ಬೇಲೂರು ತಾಲ್ಲೂಕು ಮತಿಘಟ್ಟ ಗ್ರಾಮದ ಶ್ರೀ ಲಿಂಗಣ್ಣಯ್ಯ ಹಾಗೂ ಶ್ರೀಮತಿ ಚೆನ್ನಮ್ಮ ದಂಪತಿಗಳ ಮಗನಾಗಿ 1903 ರಲ್ಲಿ ಜನಿಸಿದರು.
ಮತಿಘಟ್ಟ ಕೃಷ್ಣಮೂತರ್ಿ ಗುಂಡಪ್ಪನವರ ಕಿರಿಯ ಸಹೋದರರು. ಕೃಷ್ಣಮೂತರ್ಿಯವರು ಊರಿನ ಹೆಸರನ್ನು ಪ್ರಜ್ವಲಿಸುವಂತಹ ಸಾಧನೆ ಮಾಡಿದರೆ ಗುಂಡಪ್ಪನವರು ತಂದೆಯ ಹೆಸರು ಪ್ರಕಾಶಿಸುವಂತೆ ಮಾಡಿದರು. ಕನ್ನಡ ಸಾಹಿತ್ಯ ಲೋಕಕ್ಕೆ ಮತಿಘಟ್ಟ ಲಿಂಗಣ್ಣಯ್ಯರ ಬ್ರಾಹ್ಮಣ ಕುಟುಂಬ ಎರಡು ದೃವ ನಕ್ಷತ್ರಗಳನ್ನು ನೀಡಿದೆ ಎನ್ನಬಹುದು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಗುಂಡಪ್ಪನವರು ಅತ್ಯುತ್ತಮ ವಾಗ್ಮಿಗಳಾಗಿದ್ದರು. ವಿದ್ಯಾಥರ್ಿಗಳ ಅಚ್ಚು ಮೆಚ್ಚಿನ ಗುರುಗಳಾಗಿದ್ದರು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದನೆಯಲ್ಲಿ ಹಾಗೆಯೇ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್-ಕನ್ನಡ ನಿಘಂಟು ಸಂಪಾದನೆಯಲ್ಲಿ ಅವಿರತವಾಗಿ ದುಡಿದಿದ್ದಾರೆ. ಇವರ 'ಪತ್ರಿಕಾ ನಿಘಂಟು' ಕನ್ನಡ ಸಾಹಿತ್ಯದ ಒಂದು ಅತ್ಯುಪಯುಕ್ತ ಗ್ರಂಥವಾಗಿದೆ.
ಅನುವಾದ ಸಾಹಿತ್ಯ
ಮೊದಲೇ ಹೇಳಿದಂತೆ ಅನುವಾದ ಸಾಹಿತ್ಯದಲ್ಲಿ ಗುಂಡಪ್ಪನವರು ಸಿದ್ಧ ಹಸ್ತರು. ಈ ಕ್ಷೇತ್ರದಲ್ಲಿ ತಮ್ಮದೇಯಾದ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಕುಮಾರ ವ್ಯಾಸನ 'ಕಣರ್ಾಟ ಭಾರತ ಕಥಾಮಂಜರಿ'ಯ ಗದ್ಯಾನುವಾದ ಮಾಡಿದ್ದಾರೆ. ರಾಜಾಜಿಯವರ 'ವ್ಯಾಸರ್ ವಿರುಂದು' ಎನ್ನುವ ಹೆಸರಿನ ಮಹಾಭಾರತವನ್ನು ಕನ್ನಡಕ್ಕೆ ಅನುವಾದ ಗೊಳಿಸಿದ್ದಾರೆ ೆ. ತಮಿಳಿನ ತಿರುಕ್ಕುರುಳ್, ಶಿಲಪ್ಪದಿಗಾರಂ ಕೃತಿಗಳನ್ನು ಸಹ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಬಹುಭಾಷಾ ಪಾರಂಗತರಾಗಿದ್ದ ಎಲ್. ಗುಂಡಪ್ಪನವರು ಕನ್ನಡಕ್ಕೆ ಅನುವಾದ ಸಾಹಿತ್ಯದ ಮೂಲಕ ಅಮೋಘ ಸೇವೆ ಸಲ್ಲಿಸಿದ್ದಾರೆ. ಇತರೆ ಭಾಷೆಗಳಲ್ಲಿನ ಶ್ರೇಷ್ಠ ಕೃತಿಗಳನ್ನು ಕನ್ನಡಿಗರೂ ಓದಿ ರಸಾನುಭವ ಹೊಂದಲು ಕಾರಣೀಭೂತರಾಗಿದ್ದಾರೆ.
'ಮಕ್ಕಳ ಸಾಹಿತ್ಯ'
ಗುಂಡಪ್ಪನವರದು ಬಹುಮುಖ ವ್ಯಕ್ತಿತ್ತ್ವ. ನಿಘಂಟು, ಅನುವಾದ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯಷ್ಟೇ ಮಕ್ಕಳ ಸಾಹಿತ್ಯಕ್ಕೂ ನೀಡಿದ್ದಾರೆ. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ, ಆದರ್ಶಮಯ ನಡವಳಿಕೆಗಳನ್ನು ಬಿಂಬಿಸುವ ದೃಷ್ಠಿಕೋನದಲ್ಲಿ ಮಕ್ಕಳ ಸಾಹಿತ್ಯ ರಚಿಸಿದರು.
ಗುಂಡಪ್ಪನವರು ಪ್ರಮುಖ ಮಕ್ಕಳ ಸಾಹಿತ್ಯ ಕೃತಿಗಳೆಂದರೆ 'ಕಳ್ಳಮರಿ' 'ಮಕ್ಕಳ ರವೀಂದ್ರ', ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ತ್ವ ಪರಿಚಯ. ರವೀಂದ್ರರ ತತ್ತ್ವಾದರ್ಶಗಳಿಗೆ ಮಾರುಹೋಗಿ ಅಂತೆಯೇ ಬದುಕಬೇಕೆಂದು ಜೀವನ ನಡೆಸಿದ ಗುಂಡಪ್ಪನವರು, ಮುಂದೆ ತಮ್ಮ ಕೃತಿಗಳಲ್ಲಿ ಒಡ ಮೂಡಿಸಿದ್ದಾರೆ.
ಇಷ್ಟಲ್ಲದೇ ಗುಂಡಪ್ಪನವರು 'ನಾಡಪದಗಳು'-ಜನಪದ, 'ಮುಕುಂದ ಮಾಲಾ', 'ಬಾಸನಾಟಕ', 'ಕನ್ನಡ ವ್ಯಾಕರಣ ಪಾಠಗಳು' ಎಂಬ ವೈವಿಧ್ಯಮಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಒಟ್ಟಾರೆ ಹೇಳುವುದಾದರೆ ನಿಘಂಟು, ಅನುವಾದ , ಮಕ್ಕಳ ಸಾಹಿತ್ಯ, ಜಾನಪದ, ನಾಟಕ, ವ್ಯಾಕರಣ, ಕಾವ್ಯ ಹೀಗೆ ಹಲವು ಪ್ರಕಾರಗಳಲ್ಲಿ ಗುಂಡಪ್ಪನವರು ಅದ್ವಿತೀಯ ಕೃತಿಗಳನ್ನು ನಮಗೆ ನೀಡಿದ್ದಾರೆ.
ಗುಂಡಪ್ಪನವರ ಅನುಪಮ ಸಾಹಿತ್ಯ ಸೇವೆಗೆ ಮೈಸೂರು ವಿಶವಿದ್ಯಾನಿಲಯದ ಸಿಲ್ವರ್ ಜ್ಯುಬಿಲಿ ಕನ್ನಡ ಸ್ವರ್ಣ ಪದಕ ಪ್ರಶಸ್ತಿ, ತಮಿಳು, ಕನ್ನಡ ಬಾಂಧವ್ಯಕ್ಕಾಗಿ ಶ್ರಮಿಸಿದ್ದಕ್ಕಾಗಿ ನಾಗರ್ ಕೊಯಿಲಿನಲ್ಲಿ ಬಂಗಾರದ ಪದಕ, ದೇವರಾಜು ಬಹಾದ್ದೂರ್ ಬಹುಮಾನ ಹಾಗೂ 1975 ರಲ್ಲಿ ಕನರ್ಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿವೆ. ಇಂತಹ ಮಹೋನ್ನತ ಸಾಹಿತಿ ನಮ್ಮ ಹಾಸನ ಜಿಲ್ಲೆಯವರೆನ್ನುವುದೇ ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ.
ಬಿ.ಎಂ. ಶ್ರೀ, ಪಂಜೆ ಮಂಗೇಶರಾಯ, ಗೋವಿಂದ ಪೈ, ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿಯಾದಿಯಾಗಿ ಎಲ್. ಗುಂಡಪ್ಪ, ಕುವೆಂಪು, ಕಾರಂತರು, ರಂ ಶ್ರೀ ಮುಗುಳಿ, ರಂಗಣ್ಣ ಮುಂತಾದವರನ್ನೊಳಗೊಂಡ ಬೃಹತ್ ಸಾಹಿತ್ಯ ಪರಂಪರೆ ಈ ನವೋದಯ ಕಾಲದಲ್ಲಿ ಮೈತಳೆದು ಹೊಸ ತಿರುವನ್ನು ಪಡೆಯಿತೆನ್ನಬಹುದು.
ನವೋದಯ ಕಾಲಘಟ್ಟದ ಪ್ರಮುಖ ಅನುವಾದಕರೆಂದೇ ಗುರುತಿಸಿಕೊಂಡ ಎಲ್.ಗುಂಡಪ್ಪನವರು ಹಾಸನದ ಹಸಿರು ಹೊದಿಕೆಯಿಂದ ಚಿಮ್ಮಿ ಬಂದವರು. ಹಾಸನ ಜಿಲ್ಲೆಯ ಗೊರೂರು, ರಂಗಣ್ಣನವರ ಸಮಕಾಲೀನರಾಗಿದ್ದ ಗುಂಡಪ್ಪನವರು ಅನುವಾದ ಹಾಗೂ ನಿಘಂಟು ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.
ಎಲ್. ಗುಂಡಪ್ಪನವರು ಹಾಸನ ಜಿಲ್ಲೆಯ ಮಲೆನಾಡು ಸೆರಗಿನ ಬೇಲೂರು ತಾಲ್ಲೂಕು ಮತಿಘಟ್ಟ ಗ್ರಾಮದ ಶ್ರೀ ಲಿಂಗಣ್ಣಯ್ಯ ಹಾಗೂ ಶ್ರೀಮತಿ ಚೆನ್ನಮ್ಮ ದಂಪತಿಗಳ ಮಗನಾಗಿ 1903 ರಲ್ಲಿ ಜನಿಸಿದರು.
ಮತಿಘಟ್ಟ ಕೃಷ್ಣಮೂತರ್ಿ ಗುಂಡಪ್ಪನವರ ಕಿರಿಯ ಸಹೋದರರು. ಕೃಷ್ಣಮೂತರ್ಿಯವರು ಊರಿನ ಹೆಸರನ್ನು ಪ್ರಜ್ವಲಿಸುವಂತಹ ಸಾಧನೆ ಮಾಡಿದರೆ ಗುಂಡಪ್ಪನವರು ತಂದೆಯ ಹೆಸರು ಪ್ರಕಾಶಿಸುವಂತೆ ಮಾಡಿದರು. ಕನ್ನಡ ಸಾಹಿತ್ಯ ಲೋಕಕ್ಕೆ ಮತಿಘಟ್ಟ ಲಿಂಗಣ್ಣಯ್ಯರ ಬ್ರಾಹ್ಮಣ ಕುಟುಂಬ ಎರಡು ದೃವ ನಕ್ಷತ್ರಗಳನ್ನು ನೀಡಿದೆ ಎನ್ನಬಹುದು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಗುಂಡಪ್ಪನವರು ಅತ್ಯುತ್ತಮ ವಾಗ್ಮಿಗಳಾಗಿದ್ದರು. ವಿದ್ಯಾಥರ್ಿಗಳ ಅಚ್ಚು ಮೆಚ್ಚಿನ ಗುರುಗಳಾಗಿದ್ದರು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದನೆಯಲ್ಲಿ ಹಾಗೆಯೇ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್-ಕನ್ನಡ ನಿಘಂಟು ಸಂಪಾದನೆಯಲ್ಲಿ ಅವಿರತವಾಗಿ ದುಡಿದಿದ್ದಾರೆ. ಇವರ 'ಪತ್ರಿಕಾ ನಿಘಂಟು' ಕನ್ನಡ ಸಾಹಿತ್ಯದ ಒಂದು ಅತ್ಯುಪಯುಕ್ತ ಗ್ರಂಥವಾಗಿದೆ.
ಅನುವಾದ ಸಾಹಿತ್ಯ
ಮೊದಲೇ ಹೇಳಿದಂತೆ ಅನುವಾದ ಸಾಹಿತ್ಯದಲ್ಲಿ ಗುಂಡಪ್ಪನವರು ಸಿದ್ಧ ಹಸ್ತರು. ಈ ಕ್ಷೇತ್ರದಲ್ಲಿ ತಮ್ಮದೇಯಾದ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಕುಮಾರ ವ್ಯಾಸನ 'ಕಣರ್ಾಟ ಭಾರತ ಕಥಾಮಂಜರಿ'ಯ ಗದ್ಯಾನುವಾದ ಮಾಡಿದ್ದಾರೆ. ರಾಜಾಜಿಯವರ 'ವ್ಯಾಸರ್ ವಿರುಂದು' ಎನ್ನುವ ಹೆಸರಿನ ಮಹಾಭಾರತವನ್ನು ಕನ್ನಡಕ್ಕೆ ಅನುವಾದ ಗೊಳಿಸಿದ್ದಾರೆ ೆ. ತಮಿಳಿನ ತಿರುಕ್ಕುರುಳ್, ಶಿಲಪ್ಪದಿಗಾರಂ ಕೃತಿಗಳನ್ನು ಸಹ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಬಹುಭಾಷಾ ಪಾರಂಗತರಾಗಿದ್ದ ಎಲ್. ಗುಂಡಪ್ಪನವರು ಕನ್ನಡಕ್ಕೆ ಅನುವಾದ ಸಾಹಿತ್ಯದ ಮೂಲಕ ಅಮೋಘ ಸೇವೆ ಸಲ್ಲಿಸಿದ್ದಾರೆ. ಇತರೆ ಭಾಷೆಗಳಲ್ಲಿನ ಶ್ರೇಷ್ಠ ಕೃತಿಗಳನ್ನು ಕನ್ನಡಿಗರೂ ಓದಿ ರಸಾನುಭವ ಹೊಂದಲು ಕಾರಣೀಭೂತರಾಗಿದ್ದಾರೆ.
'ಮಕ್ಕಳ ಸಾಹಿತ್ಯ'
ಗುಂಡಪ್ಪನವರದು ಬಹುಮುಖ ವ್ಯಕ್ತಿತ್ತ್ವ. ನಿಘಂಟು, ಅನುವಾದ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯಷ್ಟೇ ಮಕ್ಕಳ ಸಾಹಿತ್ಯಕ್ಕೂ ನೀಡಿದ್ದಾರೆ. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ, ಆದರ್ಶಮಯ ನಡವಳಿಕೆಗಳನ್ನು ಬಿಂಬಿಸುವ ದೃಷ್ಠಿಕೋನದಲ್ಲಿ ಮಕ್ಕಳ ಸಾಹಿತ್ಯ ರಚಿಸಿದರು.
ಗುಂಡಪ್ಪನವರು ಪ್ರಮುಖ ಮಕ್ಕಳ ಸಾಹಿತ್ಯ ಕೃತಿಗಳೆಂದರೆ 'ಕಳ್ಳಮರಿ' 'ಮಕ್ಕಳ ರವೀಂದ್ರ', ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ತ್ವ ಪರಿಚಯ. ರವೀಂದ್ರರ ತತ್ತ್ವಾದರ್ಶಗಳಿಗೆ ಮಾರುಹೋಗಿ ಅಂತೆಯೇ ಬದುಕಬೇಕೆಂದು ಜೀವನ ನಡೆಸಿದ ಗುಂಡಪ್ಪನವರು, ಮುಂದೆ ತಮ್ಮ ಕೃತಿಗಳಲ್ಲಿ ಒಡ ಮೂಡಿಸಿದ್ದಾರೆ.
ಇಷ್ಟಲ್ಲದೇ ಗುಂಡಪ್ಪನವರು 'ನಾಡಪದಗಳು'-ಜನಪದ, 'ಮುಕುಂದ ಮಾಲಾ', 'ಬಾಸನಾಟಕ', 'ಕನ್ನಡ ವ್ಯಾಕರಣ ಪಾಠಗಳು' ಎಂಬ ವೈವಿಧ್ಯಮಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಒಟ್ಟಾರೆ ಹೇಳುವುದಾದರೆ ನಿಘಂಟು, ಅನುವಾದ , ಮಕ್ಕಳ ಸಾಹಿತ್ಯ, ಜಾನಪದ, ನಾಟಕ, ವ್ಯಾಕರಣ, ಕಾವ್ಯ ಹೀಗೆ ಹಲವು ಪ್ರಕಾರಗಳಲ್ಲಿ ಗುಂಡಪ್ಪನವರು ಅದ್ವಿತೀಯ ಕೃತಿಗಳನ್ನು ನಮಗೆ ನೀಡಿದ್ದಾರೆ.
ಗುಂಡಪ್ಪನವರ ಅನುಪಮ ಸಾಹಿತ್ಯ ಸೇವೆಗೆ ಮೈಸೂರು ವಿಶವಿದ್ಯಾನಿಲಯದ ಸಿಲ್ವರ್ ಜ್ಯುಬಿಲಿ ಕನ್ನಡ ಸ್ವರ್ಣ ಪದಕ ಪ್ರಶಸ್ತಿ, ತಮಿಳು, ಕನ್ನಡ ಬಾಂಧವ್ಯಕ್ಕಾಗಿ ಶ್ರಮಿಸಿದ್ದಕ್ಕಾಗಿ ನಾಗರ್ ಕೊಯಿಲಿನಲ್ಲಿ ಬಂಗಾರದ ಪದಕ, ದೇವರಾಜು ಬಹಾದ್ದೂರ್ ಬಹುಮಾನ ಹಾಗೂ 1975 ರಲ್ಲಿ ಕನರ್ಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿವೆ. ಇಂತಹ ಮಹೋನ್ನತ ಸಾಹಿತಿ ನಮ್ಮ ಹಾಸನ ಜಿಲ್ಲೆಯವರೆನ್ನುವುದೇ ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ.
ಗದ್ಯ ಸಾಹಿತ್ಯದ ಸಿದ್ಧಹಸ್ತರು ಡಾ. ಗೊರೂರು
ಭೂತಯ್ಯನ ಮಗ ಅಯ್ಯು ಕನ್ನಡ ಚಲನ ಚಿತ್ರವನ್ನು ಬಹುಷಃ ನೋಡದವರೇ ಇಲ್ಲ! ಸ್ಯಾಂಡಲ್ವುಡ್ನಲ್ಲಿ ಅತ್ಯದ್ಭುತ ಮೈಲುಗಲ್ಲನ್ನು ಸ್ಥಾಪಿಸಿ, ನೇರ ಜನರ ಮನಸಿನೊಳಗೆ ನಾಟಿದ ಕಥೆ. ಅಭಿನವ ಭಾರ್ಗವ ಡಾ. ವಿಷ್ಣು ಅವರಿಗೆ ಬ್ರೇಕ್ ಕೊಟ್ಟ ಚಿತ್ರ. ಇದನ್ನು ಯಾರು ತಾನೇ ಮರೆಯಲು ಸಾಧ್ಯ? ಇಂತಹ ಶ್ರೇಷ್ಠ ಕಥೆ ಬರೆದವರು ಹಾಸನ ಸಮೀಪದ ಗೊರೂರಿನವರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್. ಇವರು ನಮ್ಮ `ಮಲೆನಾಡಿನ ಸೆರಗಿಗೆ' ಸೇರಿದವರು ಎಂಬುದೇ ನಮಗೆ ಹೆಮ್ಮೆ.
ಕೆಲವರು ಕಾವ್ಯದಲ್ಲಿ, ಹಲವರು ವಿಮಶರ್ೆಯಲ್ಲಿ, ಇನ್ನೂ ಕೆಲವರು ರಂಗಭೂಮಿಯಲ್ಲಿ ಶ್ರೇಷ್ಠರೆನಿಸಿದಂತೆಯೇ ನಮ್ಮ ಗೊರೂರರು ಅವರದೇ ಆದ ಪ್ರಕಾರದಲ್ಲಿ ಸೈ ಎನಿಸಿಕೊಂಡವರು; ಕನ್ನಡ ಸಾರಸ್ವತ ಲೋಕದಲ್ಲಿ ಮೈಲುಗಲ್ಲೊಂದನ್ನು ಸ್ಥಾಪಿಸಿದವರು. ಆಧುನಿಕ ಕನ್ನಡ ಗದ್ಯ ಸಾಹಿತ್ಯದ ಆಳ, ವಿಸ್ತಾರ, ವೈವಿದ್ಯ, ವೈಶಿಷ್ಟ್ಯಗಳನ್ನು, ಬದುಕಿನ ಸಮಸ್ಯೆಗಳ ಚಿತ್ರಣವನ್ನು ಹಾಸ್ಯದ ಮೂಲಕ ತೆರೆದು ಶಬ್ದ ಚಿತ್ರಗಳನ್ನಾಗಿ ರೂಪಿಸಿದ ಗೊರೂರರು ಕನ್ನಡದ ಪ್ರಸಿದ್ಧ ಲಲಿತ ಪ್ರಬಂಧಕಾರರಲ್ಲದೆ ಗಾಂಧಿವಾದಿಗಳೂ ಆಗಿದ್ದರು. ತಮ್ಮ ಕೃತಿಗಳಲ್ಲಿ ಬದುಕಿನ ಜಟಿಲ ಸಮಸ್ಯೆಗಳನ್ನೂ ಮಾನವೀಯತೆಯ ನೆಲೆಗಟ್ಟಿನ ಮೇಲೆ ನಿಲ್ಲಿಸಿ ಅದಕ್ಕೆ ಹಾಸ್ಯದ ಸ್ಪರ್ಶ ನೀಡಿ ಗಮನ ಸೆಳೆದವರು. ವೈವಿದ್ಯತೆಯಲ್ಲಿ ಏಕತೆ ಸ್ಥಾಪಿಸಿದ ಕೀತರ್ಿ ಇವರದಾಗಿದೆ.
ಡಾ. ಗೊರೂರರ ತಂದೆ ಅದೇ ಗ್ರಾಮದ ಶ್ರೀನಿವಾಸ ಅಯ್ಯಂಗಾರ್ ಹಾಗೂ ತಾಯಿ ಲಕ್ಷ್ಮಮ್ಮ. ಜನನ-1904 ಜುಲೈ 4. ಡಾ. ಗೊರೂರರು ಗ್ರಾಮೀಣ ಪರಿಸರದಲ್ಲಿ ಆಡಿ ಬೆಳೆದವರು. ಮಣ್ಣಿನೊಂದಿಗೆ ಬೆಸೆದವರು. ಆದ್ದರಿಂದಲೇ ಇವರ ಕೃತಿಗಳಲ್ಲಿ ಗ್ರಾಮೀಣ ಸೊಗಡು ದಟ್ಟವಾಗಿದೆ. ಗೊರೂರರು ನಕ್ಕು ನಗಿಸಿದರು. ತಮ್ಮ ಬರವಣಿಗೆಯ ಮೂಲಕ ಹಾಸ್ಯದ ಹೊನಲನ್ನೇ ಹರಿಯಬಿಟ್ಟರು. `ಹಳ್ಳಿಯ ಚಿತ್ರಗಳು', `ನಮ್ಮ ಊರಿನ ರಸಿಕರು' ಇವೆರಡೂ ಓದುಗರನ್ನು ರಸಾಸ್ವಾದದಲ್ಲಿ ಮುಳುಗಿಸಿ ತೇಲಿಸುತ್ತವೆ. `ಶಾಲು ಸಾಬಿ', `ಶೀನಪ್ಪ ನುಂಗಿದ ಇಡ್ಲಿ' ಇಂಥವುಗಳನ್ನೆಲ್ಲಾ ಓದಿಯೇ ಅವುಗಳ ರುಚಿ ಸವಿಯಬೇಕು!
ಜನಪದೀಯ ಹಿನ್ನೆಲೆಯಲ್ಲಿ ಬೆಳೆದ ಗೊರೂರರು ತಮ್ಮ ಒಂದು ಲಲಿತ ಪ್ರಬಂಧದಲ್ಲಿ ತವರೂರಿನ ಬಗ್ಗೆ ಹೀಗೆ ಹೇಳುತ್ತಾರೆ:
`ಅಂದರ್ಕಲಗೂಡು ಚಂದಕೆ ನರಸೀಪುರ
ಚಿತ್ತರದ ಗೊಂಬೆ ಗೊರವೂರು| ಬೀದಿಯ
ಹದಿನಾರು ತೇರು ಹರಿದಾವೆ||
ಈ ತ್ರಿಪದಿಯಲ್ಲಿ ಗ್ರಾಮದ ಸಾಂಸ್ಕೃತಿಕ ಸಿರಿವಂತಿಕೆಯನ್ನು ತೆರೆದಿಟ್ಟಿದ್ದಾರೆ.
1930 ರಲ್ಲಿ ಪ್ರಕಟವಾದ `ಭಾರತ ಸ್ವಾತಂತ್ರ್ಯ' ಇವರ ಮೊದಲ ಕೃತಿ. 1948 ರಲ್ಲಿ ಬಂದ `ಹೇಮಾವತಿ' ಮೊದಲ ಕಾದಂಬರಿ. `ಮೆರವಣಿಗೆ', `ಭೂತಯ್ಯನ ಮಗ ಅಯ್ಯು', `ಪುನರ್ಜನ್ಮ' ಇವರ ಶ್ರೇಷ್ಠ ಕಾದಂಬರಿಗಳು. `ರಾಜನರ್ತಕಿ', `ಕ್ರೌಂಚ ವಧೆ', `ಭಗವಾನ್ ಕೌಟಿಲ್ಯ', `ಮಲೆನಾಡಿನವರು' ಇವು ಪ್ರಮುಖ ಅನುವಾದಿತ ಕಾದಂಬರಿಗಳು. `ಗರುಡಗಂಬದ ದಾಸಯ್ಯ', `ಬೆಟ್ಟದ ಮನೆಯಲ್ಲಿ', `ಬೈಲಹಳ್ಳಿ ಸವರ್ೆ', `ಹಳೆಪಳೆಯ ಮುಖಗಳು', `ಹಳ್ಳಿಯ ಬಾಳು' ಮುಂತಾದವು ಸ್ಮರಣೀಯ ಲಲಿತ ಪ್ರಬಂಧ ಸಂಕಲನಗಳಾಗಿವೆ. ವಯ್ಯಾರಿ, ಉಸುಬು, ಕಮ್ಮಾರವೀರ, ಭದ್ರಾಚಾರಿ, ಗೋಪುರದ ಬಾಗಿಲು, ಬೆಸ್ತರ ಕರಿಯ, ಶಿವರಾತ್ರಿ, ಕನ್ಯಾಕುಮಾರಿ ಮತ್ತು ಇತರ ಕಥೆಗಳು- ಇವು ಉಲ್ಲೇಖಾರ್ಹ ಕಥಾ ಸಂಕಲನಗಳಾಗಿವೆ. `ಸಾಹಿತ್ಯ ರಶ್ಮಿ' ಎಂಬ ವಿಮಶರ್ಾ ಕೃತಿಯಲ್ಲಿ ಸಾಹಿತ್ಯದ ಅನೇಕ ಮಗ್ಗಲು ಮಜಲುಗಳನ್ನು ವಿವರಿಸಿದ್ದಾರೆ. `ಅಮೆರಿಕದಲ್ಲಿ ಗೊರೂರು' ಇವರ ಸುಪ್ರಸಿದ್ಧ ಪ್ರವಾಸ ಕಥನವಾಗಿದೆ. ಇಡೀ ವಿಶ್ವವೇ ಗೊರೂರಿನ ಕಡೆ ಮುಖ ಮಾಡುವಂತೆ ಮಾಡಿದ ಕೀತರ್ಿ ಈ ಲೇಖಕರದು. ಈ ಕೃತಿಗೆ 1980ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರಿಂದ ಪ್ರಶಸ್ತಿಗೇ ಒಂದು ಗೌರವ ಸಿಕ್ಕಂತಾಯಿತು.
ಇವರ `ಹಳ್ಳಿಯ ಹಾಡುಗಳು' ಹಾಸನ ಜಿಲ್ಲೆಯ ಜನಪದೀಯ ಪ್ರಕಾರವಾದ ತ್ರಿಪದಿಗಳ ಸಂಗ್ರಹವಾಗಿದೆ. ಜನಪದರ ನಿಜವಾದ ನಾಡಿ ಮಿಡಿತಗಳು ಇದರಲ್ಲಿ ಸೊಗಸಾಗಿ ಮಿಳಿತಗೊಂಡಿವೆ ಎನ್ನಬಹುದು.
ಧೀಮಂತ ಸ್ವಾತಂತ್ರ್ಯ ಹೋರಾಟಗಾರರೂ, ಬರಹಗಾರರೂ, ಮಾನವೀಯತೆಯ ಅದಮ್ಯ ಚೇತನವಾಗಿದ್ದ ಗೊರೂರರು ಗಾಂಧಿ ತತ್ವಾದರ್ಶಗಳಿಗೆ ಮಾರು ಹೋಗಿದ್ದರು. ಸತ್ಯ, ನ್ಯಾಯ, ಅಹಿಂಸಾ ಧರ್ಮದಲ್ಲಿ ಅಚಲವಾದ ನಂಬಿಕೆಯಿಟ್ಟಿದ್ದರು. ಪ್ರೌಢಶಾಲಾ ಹಂತದಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ಗಾಂಧೀಜಿ ಸಂಪರ್ಕದಿಂದ ಅವರ ಶಿಷ್ಯರಾದರು. ಸೆರೆ ಮನೆ ವಾಸ ಅನುಭವಿಸಿದರು. ಸಾಮಾಜಿಕ ಬದ್ಧತೆಯ ನೆಲೆಗಟ್ಟಿನಲ್ಲಿ ಬದುಕಿ ಬಾಳಿದ ಗೊರೂರರು ಸಾಹಿತ್ಯ, ಸಮಾಜ, ಜನಪದವನ್ನು ಒಟ್ಟೊಟ್ಟಿಗೇ ಕೊಂಡೊಯ್ದ ಮೇರು ಸಾಧಕ ಎಂದೇ ಹೇಳಬಹುದು.
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಒಂದು ಕಡೆ ಹೀಗೆ ಹೇಳುತ್ತಾರೆ: `ಗೊರೂರರು ತಮ್ಮ ಸತ್ವಯುತವಾದ ಕೃತಿಗಳ ಮೂಲಕ ಶಾಶ್ವತವಾದ ಒಂದು ಚಿನ್ನದ ಪಕ್ಷಿಯಾಗಿದ್ದಾರೆ. ನಮ್ಮ ವಿವೇಕ ತೂಕಡಿಸುವಾಗ ಕೂಗಿ ಎಚ್ಚರಿಸುವ ಶಕ್ತಿಯಾಗಿದ್ದಾರೆ'!
ಗೊರೂರರು ಮೂಲತಃ ವೈಚಾರಿಕ ಪ್ರಜ್ಞೆಯ ಮೂಸೆಯಲ್ಲಿ ಬೆಳೆದವರು. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸಿದವರು. ಜ್ಯೋತಿಷವನ್ನು ಕುರಿತು ಒಂದು ಕಡೆ, ``ನನಗೆ ಯಾವತ್ತೂ ಜ್ಯೋತಿಷ ಶಾಸ್ತ್ರದಲ್ಲಿ ನಂಬಿಕೆಯಿಲ್ಲ; ಭಾರತೀಯರು ಅನೇಕ ಶತಮಾನಗಳಿಂದ ಈ ಶಾಸ್ತ್ರವನ್ನು ರಚಿಸಿ, ರೂಪಿಸಿ, ಪ್ರಯೋಗಿಸಿ, ಅನುಭವಿಸಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಆದರೆ ಗ್ರಹಗಳು ತಮ್ಮ ಕೆಲಸ ಬಿಟ್ಟು ಈ ಜಗತ್ತಿನ ಜನರ ಹಿಂದೆ ತಿರುಗುತ್ತಾ ಅವರ ಕಾರ್ಯಗಳಲ್ಲಿ ತೊಡಗುತ್ತಿವೆ ಎಂಬುದು ನನಗೆ ಅಸಂಬದ್ಧವಾಗಿ ತೋರಿದೆ!''
ಅವರ ಬಗ್ಗೆ ಅವರೇ ಒಂದು ಕಡೆ ಹೀಗೆ ಹೇಳುತ್ತಾರೆ: `ನನ್ನ ಬಾಳನ್ನು ನಾನು ಹಿಂತಿರುಗಿ ನೋಡಿದಾಗ ನಾನು ಸಾಹಿತಿಗಿಂತ ಹೆಚ್ಚಾಗಿ ಜನ ಸಾಮಾನ್ಯರ ಮನುಷ್ಯ. ರಾಜಕೀಯದಲ್ಲಿ ಗಾಂಧೀಜಿಯವರ ಅದಮ್ಯ ಚೇತನ ಶಕ್ತಿ, ತ್ಯಾಗ, ಆದರ್ಶಗಳಿಂದ ಪ್ರೇರಿತನಾಗಿ ಈ ಕ್ಷೇತ್ರದಲ್ಲಿ ನನ್ನಿಂದಾದ ಸೇವೆ ಸಲ್ಲಿಸಲು ಹೊರಟವ. ನಮ್ಮ ದೇಶದ ಜನ ಸಾಮಾನ್ಯರ ಜಾನಪದವೆಂದರೆ ನನಗೆ ಅತ್ಯಂತ ಪ್ರೇಮ. ಭಾರತವನ್ನು ಆಧುನಿಕ ನಾಗರಿಕತೆಯ ಸರ್ವನಾಶದಿಂದ ತಪ್ಪಿಸಬಲ್ಲದು ಅದೊಂದೇ ಎಂಬುದು ನನ್ನ ನಂಬಿಕೆ'.
ಹೀಗೆ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ಬೆಳೆದ ಗೊರೂರರಿಗೆ 1974 ರಲ್ಲಿ ಮೈಸೂರು ವಿ.ವಿ. ಗೌರವ ಡಾಕ್ಟರೇಟ್ ನೀಡಿತು. ಶಿಷ್ಯರು, ಸ್ನೇಹಿತರೆಲ್ಲ ಸೇರಿ 1973 ರಲ್ಲಿ `ಗೊರೂರು ಗೌರವ ಗ್ರಂಥ' ಎಂಬ ಅಭಿನಂದನಾ ಗ್ರಂಥ ಸಮಪರ್ಿಸಿದ್ದಾರೆ. 1967ರಲ್ಲಿ ತರೀಕೆರೆಯಲ್ಲಿ ನಡೆದ ಪ್ರಪ್ರಥಮ ಅಖಲಿ ಕನರ್ಾಟಕ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1982ರಲ್ಲಿ ಶಿರಸಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಇಂತಹ ಸಾಹಿತ್ಯ ವಲ್ಲಭ 1991ರ ಸೆಪ್ಟೆಂಬರ್ 28 ರಂದು ಅಜರಾಮರವಾದರು. ಆದರೆ ತ್ರಿಕಾಲಗಳಲ್ಲೂ ಕನ್ನಡ ಸಾರಸ್ವತ ಲೋಕದಲ್ಲಿ, ಕರುನಾಡ ಜನ ಮಾನಸದಲ್ಲಿ ಅಚ್ಚಳಿಯದೆ ನೆಲೆಯೂರಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ವಿಮರ್ಶೆಯ `ವಚನ' ಪಾಲಿಸಿದವರು ಎಸ್ ವಿ ರಂಗಣ್ಣ
`ರವಿ ಕಾಣದ್ದನ್ನು ಕವಿ ಕಂಡ' ಎಂಬ ನಾಣ್ಣುಡಿಯನ್ನೇ ಮುಂದುವರೆಸಿ, `....ಕವಿ ಕಾಣದ್ದನ್ನು ವಿಮರ್ಶಕ ಕಂಡ' ಎಂಬ ಕೊಂಕು ನುಡಿ ಇಂದಿನ ವಿಮಶರ್ಾ ಪ್ರಕಾರಕ್ಕೆ ಅಂಟಿಕೊಂಡಿದೆ. ವಿಮರ್ಶಕರಿಗೂ ಸಾಹಿತಿಗಳಿಗೂ ಅಷ್ಟಕ್ಕಷ್ಟೆ! ಮೇಲ್ನೋಟಕ್ಕೆ ಸದ್ಭಾವನೆ, ಗೌರವ ತೋರಿದಂತೆ ಕಂಡರೂ ಸಾಹಿತಿಗಳ ಒಳ ಮನಸ್ಸಿನಲ್ಲಿ ಮಾತ್ರ ವಿಮರ್ಶಕರ ಕುರಿತು `ಒಂಥರಾ' ಭಾವನೆ ಇದ್ದದ್ದೇ!! ಆದರೆ ಎಸ್.ವಿ. ರಂಗಣ್ಣ ಅವರಂಥ ಹಳೆ ತಲೆಮಾರಿನ ಹಿರಿಯ ವಿಮರ್ಶಕರಿಗೆ ಇದೆಲ್ಲಾ ಅನ್ವಯಿಸುವುದಿಲ್ಲ ಬಿಡಿ.
`ಆಧುನಿಕ ವಚನಕಾರ' ಹಾಗೂ ಹೊಸಗನ್ನಡ ಸಾಹಿತ್ಯದಲ್ಲಿ `ವಿಮಶರ್ೆಗೆ ಹೊಸ ದೃಷ್ಟಿಕೋನ' ನೀಡಿದ ಎಸ್.ವಿ. ರಂಗಣ್ಣ ಅವರು ನಮ್ಮ ಹಾಸನ ಜಿಲ್ಲೆಯವರೇ ಎಂಬುದು ಹೆಮ್ಮೆಯ ಸಂಗತಿ. 49ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು ಎಂದು ಪ್ರಶ್ನಿಸಿದರೆ ಹಾಸನದ ಅಂಧ ಯುವಕ ಲೋಕೇಶ್ ಥಟ್ಟನೆ ಎಸ್.ವಿ. ರಂಗಣ್ಣ ಎಂದು ಉತ್ತರಿಸುತ್ತಾನೆ! ಮೂಲತಃ ಸಾಲಗಾಮೆಯವರಾಗಿದ್ದ ಅವರ ಜೀವಿತಾವಧಿ ಕಳೆದ ಶತಮಾನಕ್ಕೆ ಸೇರಿದ್ದರೂ ಸಹ ಕೆಲವು ಸಾಹಿತ್ಯಾತ್ಮಕ ವಿಚಾರಗಳಲ್ಲಿ ಇಂದಿಗೂ ಪ್ರಸ್ತುತರಾಗಿ ನಿಲ್ಲುತ್ತಾರೆ!
ಕನ್ನಡ ಸಾಹಿತ್ಯದ ಕಾವ್ಯ ಪರಂಪರೆಯ ವಿಶಿಷ್ಟ ಪ್ರಕಾರಗಳಲ್ಲಿ `ವಚನ'ವೂ ಒಂದು. ಅದು ಅನುಭಾವ ಗಮ್ಯ ಕಾವ್ಯ ವಾಹಿನಿ. ನಮ್ಮ ಸಂಸ್ಕೃತಿಯಲ್ಲಿ ಸಾಮಾಜಿಕ, ಸಾಹಿತ್ಯಿಕ ಹಾಗೂ ಭಾಷಿಕ ಕ್ರಾಂತಿಯನ್ನುಂಟು ಮಾಡಿದ ಯಶಸ್ಸು ಈ ಪ್ರಕಾರಕ್ಕೆ ಸಲ್ಲುತ್ತದೆ. 12ನೇ ಶತಮಾನದಲ್ಲಿ ಅಸಂಖ್ಯಾತ ವಚನಕಾರರು ತಮ್ಮ ಅನುಭವಗಳನ್ನು ಸಾಹಿತ್ಯಾತ್ಮಕ ರೀತಿಯಲ್ಲಿ ಪ್ರಮಾಣೀಕರಿಸಿ ವಚನಗಳ ಮೂಲಕ ದಾಖಲಿಸಿದ್ದಾರೆ. ಕಾಲಾ ನಂತರ 20ನೇ ಶತಮಾನದಲ್ಲಿಯೂ ಕೆಲವರು ಈ ಪ್ರಕಾರವನ್ನು ಮುಂದುವರೆಸಿ `ಆಧುನಿಕ ವಚನಗಳು' ಹೆಸರಿನಿಂದ ಬರೆದಿದ್ದಾರೆ. ವಿಭಿನ್ನ ತೆರನಾದ ಭಾವ, ವಿಡಂಬನೆ ಮತ್ತು ನೀತಿಯನ್ನು ವಚನಗಳಲ್ಲಿ ಒಡಮೂಡಿಸಿದ್ದಾರೆ. ಅಂತಹವರ ಸಾಲಿನಲ್ಲಿ ಹಾಸನದ ಎಸ್.ವಿ. ರಂಗಣ್ಣ ಅವರು ಪ್ರಮುಖರಾಗಿ ನಿಲ್ಲುತ್ತಾರೆ.
ಎಸ್.ವಿ. ರಂಗಣ್ಣನವರು 1898ರ ಡಿಸೆಂಬರ್ 24 ರಂದು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ಜನಿಸಿದರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ನಾಡಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಾ ಆಧುನಿಕ ವಚನಗಳು ಹಾಗೂ ವಿಮಶರ್ಾ ಕ್ಷೇತ್ರದಲ್ಲಿ ಅಗಾಧವಾದ ಸೇವೆಗೈದಿದ್ದಾರೆ. ಇವರ `ರಂಗಭಿನ್ನಪ' ಎಂಬ ಆಧುನಿಕ ವಚನ ಕೃತಿಯಲ್ಲಿನ ಒಂದು ವಚನ ಹೀಗಿದೆ:
`ಹಣ್ಣು ಬಿಡುವ ಹಣ್ಣು ಕೊಡುವ
ಮರ ಗಿಡಗಳಿಂದ ಪಾಠ ಕಲಿತರೆ
ಮನುಷ್ಯನಿಗೆ ಒಳ್ಳೆಯದಯ್ಯಾ
ದಿಟವಾಗಿ ಒಳ್ಳೆಯದು....'
ನಿತ್ಯ ಕಚ್ಚಾಟ, ಜಗಳ, ಅಸೂಯೆಗಳ ಮಧ್ಯೆ ಬದುಕುತ್ತಿರುವ ಮನುಷ್ಯ ಮರ ಗಿಡಗಳ ಸಾಮರಸ್ಯದಿಂದ ಬದುಕನ್ನು ಕಂಡು ಬದಲಾಗಬೇಕೆಂದು ಕರೆ ಕೊಡುತ್ತಾ ಮುಂದುವರೆದು...
`ಒಂದನ್ನು ಕಂಡು ಇನ್ನೊಂದು
ಕರುಬುವುದಿಲ್ಲ ಖಾರ ನುಡಿ ಆಡುವುದಿಲ್ಲ
ಸಣ್ಣದೋ ದೊಡ್ಡದೋ ಅಂತೂ
ತಮ್ಮ ತಮ್ಮ ಕೊಡುಗೆಯ ಕೊಟ್ಟು
ತಣಿಸುತ್ತವೆ ಪ್ರಾಣಿ ಪಕ್ಷಿಗಳನ್ನು
ಅದೇ ರೀತಿ ಸಣ್ಣದೋ ದೊಡ್ಡದೋ ಅಂತೂ
ಪರೋಪಕಾರ ಮನುಜರಿಂದ ಆದರೆ
ಲೇಸಲ್ಲವೇ ರಂಗನಾಥ?
ಎಂದು ಹಲಸಿನ ಮರ, ತೆಂಗಿನ ಮರ, ದ್ರಾಕ್ಷಿ ಬಳ್ಳಿ, ಕವಳಿ ಗಿಡ, ಚದುರಂಗ ಮುಂತಾದವು ಹೇಗೆ ತಮ್ಮ ಕೈಲಾದಷ್ಟು ಹಣ್ಣು ಹಂಪಲುಗಳನ್ನು ನೀಡಿ ಬೇರೆಯವರ ತಣಿಸುತ್ತವೆ; ಆದರೆ ಮಾನವ ಕೂಡಿಡುವ ದುರಾಸೆಯಲ್ಲಿ ಮುಳುಗಿದ್ದಾನೆ. ಈಗಲಾದರೂ ಗಿಡ ಮರಗಳಂತೆ ಪರೋಪಕಾರ ಬುದ್ದಿ ಕಲಿಯಲಿ ಎಂದು ತಮ್ಮ ಆರಾಧ್ಯ ದೈವ ಶ್ರೀ ರಂಗನಾಥನಲ್ಲಿ ಭಿನ್ನವಿಸುತ್ತಾರೆ.
ಅಷ್ಟಕ್ಕೇ ಸೀಮಿತವಾಗದ ರಂಗಣ್ಣನವರು, ಕನ್ನಡ ವಿಮಶರ್ಾ ಕ್ಷೇತ್ರಕ್ಕೆ ಆವರೆಗೂ ಇಲ್ಲದಿದ್ದ ಒಂದು ಹೊಸ ಆಯಾಮ ತಂದುಕೊಟ್ಟರು. ಇವರು ಶೈಲಿಯ ಸ್ವರೂಪದೊಂದಿಗೆ ಮಾಧ್ಯಮ ಶೈಲಿ, ಸಾಧಾರಣ ಶೈಲಿ ಮುಂತಾದ ಪರಿಕಲ್ಪನೆಗಳನ್ನು ಪರಿಚಯಿಸಿ ಕನ್ನಡದ ಪಂಪನಾದಿಯಾಗಿ ಎಲ್ಲಾ ಮುಖ್ಯ ಪ್ರಾಚೀನ ಕವಿಗಳ ಶೈಲಿಯ ಸ್ವರೂಪವನ್ನು ತಮ್ಮ ಕೃತಿಗಳಲ್ಲಿ ಚಚರ್ಿಸಿದರು. 1944, 1968 ಹಾಗೂ 1971 ರಲ್ಲಿ ಈ ಕುರಿತು ಮೂರು ಸಂಪುಟಗಳು ಬಂದವು.
`ಕಾಳಿದಾಸನ ನಾಟಕ ವಿಮಶರ್ೆ', `ಪಾಶ್ಚಾತ್ಯ ಗಂಭೀರ ನಾಟಕಗಳು,' `ಕವಿ ಕಥಾಮೃತ', ರಂಗ ಭಿನ್ನಪ', `ನಾಟುನುಡಿ', `ಪಾಶ್ಚಾತ್ಯ ಸಾಹಿತ್ಯ ವಿಮಶರ್ೆ' ಇವು ಇವರ ಪ್ರಮುಖ ಗ್ರಂಥಗಳಾಗಿವೆ. ಅಲ್ಲದೆ ಆಂಗ್ಲ ಭಾಷೆಯಲ್ಲಿಯೂ ಹಲವು ಕೃತಿಗಳನ್ನು ರಚಿಸಿದ್ದಾರೆ.
ವಿಮಶರ್ೆಯ ಮೇಲಿನ ಹಿಡಿತ, ಇವರ ಬರವಣಿಗೆಯ ಶೈಲಿ ಮೆಚ್ಚುವಂಥವು. 1956 ರಲ್ಲಿ ಬಂದ ಇವರ `ಹೊನ್ನ ಶೂಲ' ಅಗಾಧ ಪ್ರಶಂಸೆಗೆ ಪಾತ್ರವಾಯಿತು. 1960 ರಲ್ಲಿ ಬಂದ `ವಿಕ್ರಮೋರ್ವಶೀಯ ನಾಟಕದ ವಿಮಶರ್ೆ' ಅವರಿಗೆ ಹೆಚ್ಚಿನ ಮೌಲ್ಯ ತಂದುಕೊಟ್ಟಿತು.
ರಂಗಣ್ಣನವರು `ಉತ್ತರ ಕುಮಾರ' ಹಾಗೂ `ಮಹಿಳೆ ಮತ್ತು ಉಂಗುರ' ಎಂಬ ನಾಟಕಗಳನ್ನೂ ಬರೆದಿದ್ದಾರೆ. ಇವರ `ರಂಗ ಭಿನ್ನಪ' ಕೃತಿಗೆ 1965 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದ್ದು, ಸ್ಕೌಟ್ ಸೇವೆಗಾಗಿ `ರಜತಗಜ' ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವ ವಿದ್ಯಾಲಯವು ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ. 1976 ರಲ್ಲಿ ಶಿವಮೊಗ್ಗದಲ್ಲಿ ನಡೆದ 49ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಂಗಣ್ಣನವರು ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದಾಗ ಇವರ ಗೆಳೆಯರು, ಶಿಷ್ಯರೆಲ್ಲ ಸೇರಿ ಅವರಿಗೆ `ಬಾಗಿನ' ಎಂಬ ಅಭಿನಂದನಾ ಗ್ರಂಥ ಅಪರ್ಿಸಿದ್ದಾರೆ.
ಮನುಷ್ಯ ಸಂಬಂಧಗಳನ್ನು ಭಾವನೆಗಳನ್ನು ಬೆಸೆದು, ಅರಳಿಸುವ ಕೆಲಸ ಮಾಡದೇ ಕೆರಳಿಸುವ ಕೆಲಸದಲ್ಲಿ ನಿರಂತರ ತೊಡಗಿ ಯುವ ಜನಾಂಗವನ್ನು ದಿಕ್ಕು ತಪ್ಪಿಸುತ್ತಿರುವ ಪ್ರಸ್ತುತ ಸಂದರ್ಭ ನೆನೆದರೆ ದಿಗಿಲಾಗದಿರದು. ಸ್ವಸ್ಥ ಸಮಾಜದ ಅಗತ್ಯತೆಯ ಜರೂರು ಇದೆ. ಇದಕ್ಕೆಲ್ಲ ಪೂರಕವಾಗಿ ಅಂದು, ಇಂದು, ಮುಂದೂ ಗುರುವಾಗಿ ಸನ್ಮಾರ್ಗಕ್ಕೆ ತರುವಂತಹ ಗುರುತರ ಹೊಣೆ ವಚನ ಸಾಹಿತ್ಯದ ಮೇಲಿದೆ.
1987 ಫೆಬ್ರವರಿ 17 ರಂದು ಅಜರಾಮರವಾದ ಎಸ್.ವಿ. ರಂಗಣ್ಣ ಎಂಬ ಸಾಹಿತ್ಯ ಚೇತನ ಇಂದು, ಮುಂದು, ಎಂದೆಂದೂ ತನ್ನ ವಿವೇಕಯುತ ಸಾಹಿತ್ಯದಿಂದಾಗಿ ಪ್ರಜ್ಞಲಿಸುತ್ತಲೇ ಇರುತ್ತದೆ.
`ಆಧುನಿಕ ವಚನಕಾರ' ಹಾಗೂ ಹೊಸಗನ್ನಡ ಸಾಹಿತ್ಯದಲ್ಲಿ `ವಿಮಶರ್ೆಗೆ ಹೊಸ ದೃಷ್ಟಿಕೋನ' ನೀಡಿದ ಎಸ್.ವಿ. ರಂಗಣ್ಣ ಅವರು ನಮ್ಮ ಹಾಸನ ಜಿಲ್ಲೆಯವರೇ ಎಂಬುದು ಹೆಮ್ಮೆಯ ಸಂಗತಿ. 49ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು ಎಂದು ಪ್ರಶ್ನಿಸಿದರೆ ಹಾಸನದ ಅಂಧ ಯುವಕ ಲೋಕೇಶ್ ಥಟ್ಟನೆ ಎಸ್.ವಿ. ರಂಗಣ್ಣ ಎಂದು ಉತ್ತರಿಸುತ್ತಾನೆ! ಮೂಲತಃ ಸಾಲಗಾಮೆಯವರಾಗಿದ್ದ ಅವರ ಜೀವಿತಾವಧಿ ಕಳೆದ ಶತಮಾನಕ್ಕೆ ಸೇರಿದ್ದರೂ ಸಹ ಕೆಲವು ಸಾಹಿತ್ಯಾತ್ಮಕ ವಿಚಾರಗಳಲ್ಲಿ ಇಂದಿಗೂ ಪ್ರಸ್ತುತರಾಗಿ ನಿಲ್ಲುತ್ತಾರೆ!
ಕನ್ನಡ ಸಾಹಿತ್ಯದ ಕಾವ್ಯ ಪರಂಪರೆಯ ವಿಶಿಷ್ಟ ಪ್ರಕಾರಗಳಲ್ಲಿ `ವಚನ'ವೂ ಒಂದು. ಅದು ಅನುಭಾವ ಗಮ್ಯ ಕಾವ್ಯ ವಾಹಿನಿ. ನಮ್ಮ ಸಂಸ್ಕೃತಿಯಲ್ಲಿ ಸಾಮಾಜಿಕ, ಸಾಹಿತ್ಯಿಕ ಹಾಗೂ ಭಾಷಿಕ ಕ್ರಾಂತಿಯನ್ನುಂಟು ಮಾಡಿದ ಯಶಸ್ಸು ಈ ಪ್ರಕಾರಕ್ಕೆ ಸಲ್ಲುತ್ತದೆ. 12ನೇ ಶತಮಾನದಲ್ಲಿ ಅಸಂಖ್ಯಾತ ವಚನಕಾರರು ತಮ್ಮ ಅನುಭವಗಳನ್ನು ಸಾಹಿತ್ಯಾತ್ಮಕ ರೀತಿಯಲ್ಲಿ ಪ್ರಮಾಣೀಕರಿಸಿ ವಚನಗಳ ಮೂಲಕ ದಾಖಲಿಸಿದ್ದಾರೆ. ಕಾಲಾ ನಂತರ 20ನೇ ಶತಮಾನದಲ್ಲಿಯೂ ಕೆಲವರು ಈ ಪ್ರಕಾರವನ್ನು ಮುಂದುವರೆಸಿ `ಆಧುನಿಕ ವಚನಗಳು' ಹೆಸರಿನಿಂದ ಬರೆದಿದ್ದಾರೆ. ವಿಭಿನ್ನ ತೆರನಾದ ಭಾವ, ವಿಡಂಬನೆ ಮತ್ತು ನೀತಿಯನ್ನು ವಚನಗಳಲ್ಲಿ ಒಡಮೂಡಿಸಿದ್ದಾರೆ. ಅಂತಹವರ ಸಾಲಿನಲ್ಲಿ ಹಾಸನದ ಎಸ್.ವಿ. ರಂಗಣ್ಣ ಅವರು ಪ್ರಮುಖರಾಗಿ ನಿಲ್ಲುತ್ತಾರೆ.
ಎಸ್.ವಿ. ರಂಗಣ್ಣನವರು 1898ರ ಡಿಸೆಂಬರ್ 24 ರಂದು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ಜನಿಸಿದರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ನಾಡಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಾ ಆಧುನಿಕ ವಚನಗಳು ಹಾಗೂ ವಿಮಶರ್ಾ ಕ್ಷೇತ್ರದಲ್ಲಿ ಅಗಾಧವಾದ ಸೇವೆಗೈದಿದ್ದಾರೆ. ಇವರ `ರಂಗಭಿನ್ನಪ' ಎಂಬ ಆಧುನಿಕ ವಚನ ಕೃತಿಯಲ್ಲಿನ ಒಂದು ವಚನ ಹೀಗಿದೆ:
`ಹಣ್ಣು ಬಿಡುವ ಹಣ್ಣು ಕೊಡುವ
ಮರ ಗಿಡಗಳಿಂದ ಪಾಠ ಕಲಿತರೆ
ಮನುಷ್ಯನಿಗೆ ಒಳ್ಳೆಯದಯ್ಯಾ
ದಿಟವಾಗಿ ಒಳ್ಳೆಯದು....'
ನಿತ್ಯ ಕಚ್ಚಾಟ, ಜಗಳ, ಅಸೂಯೆಗಳ ಮಧ್ಯೆ ಬದುಕುತ್ತಿರುವ ಮನುಷ್ಯ ಮರ ಗಿಡಗಳ ಸಾಮರಸ್ಯದಿಂದ ಬದುಕನ್ನು ಕಂಡು ಬದಲಾಗಬೇಕೆಂದು ಕರೆ ಕೊಡುತ್ತಾ ಮುಂದುವರೆದು...
`ಒಂದನ್ನು ಕಂಡು ಇನ್ನೊಂದು
ಕರುಬುವುದಿಲ್ಲ ಖಾರ ನುಡಿ ಆಡುವುದಿಲ್ಲ
ಸಣ್ಣದೋ ದೊಡ್ಡದೋ ಅಂತೂ
ತಮ್ಮ ತಮ್ಮ ಕೊಡುಗೆಯ ಕೊಟ್ಟು
ತಣಿಸುತ್ತವೆ ಪ್ರಾಣಿ ಪಕ್ಷಿಗಳನ್ನು
ಅದೇ ರೀತಿ ಸಣ್ಣದೋ ದೊಡ್ಡದೋ ಅಂತೂ
ಪರೋಪಕಾರ ಮನುಜರಿಂದ ಆದರೆ
ಲೇಸಲ್ಲವೇ ರಂಗನಾಥ?
ಎಂದು ಹಲಸಿನ ಮರ, ತೆಂಗಿನ ಮರ, ದ್ರಾಕ್ಷಿ ಬಳ್ಳಿ, ಕವಳಿ ಗಿಡ, ಚದುರಂಗ ಮುಂತಾದವು ಹೇಗೆ ತಮ್ಮ ಕೈಲಾದಷ್ಟು ಹಣ್ಣು ಹಂಪಲುಗಳನ್ನು ನೀಡಿ ಬೇರೆಯವರ ತಣಿಸುತ್ತವೆ; ಆದರೆ ಮಾನವ ಕೂಡಿಡುವ ದುರಾಸೆಯಲ್ಲಿ ಮುಳುಗಿದ್ದಾನೆ. ಈಗಲಾದರೂ ಗಿಡ ಮರಗಳಂತೆ ಪರೋಪಕಾರ ಬುದ್ದಿ ಕಲಿಯಲಿ ಎಂದು ತಮ್ಮ ಆರಾಧ್ಯ ದೈವ ಶ್ರೀ ರಂಗನಾಥನಲ್ಲಿ ಭಿನ್ನವಿಸುತ್ತಾರೆ.
ಅಷ್ಟಕ್ಕೇ ಸೀಮಿತವಾಗದ ರಂಗಣ್ಣನವರು, ಕನ್ನಡ ವಿಮಶರ್ಾ ಕ್ಷೇತ್ರಕ್ಕೆ ಆವರೆಗೂ ಇಲ್ಲದಿದ್ದ ಒಂದು ಹೊಸ ಆಯಾಮ ತಂದುಕೊಟ್ಟರು. ಇವರು ಶೈಲಿಯ ಸ್ವರೂಪದೊಂದಿಗೆ ಮಾಧ್ಯಮ ಶೈಲಿ, ಸಾಧಾರಣ ಶೈಲಿ ಮುಂತಾದ ಪರಿಕಲ್ಪನೆಗಳನ್ನು ಪರಿಚಯಿಸಿ ಕನ್ನಡದ ಪಂಪನಾದಿಯಾಗಿ ಎಲ್ಲಾ ಮುಖ್ಯ ಪ್ರಾಚೀನ ಕವಿಗಳ ಶೈಲಿಯ ಸ್ವರೂಪವನ್ನು ತಮ್ಮ ಕೃತಿಗಳಲ್ಲಿ ಚಚರ್ಿಸಿದರು. 1944, 1968 ಹಾಗೂ 1971 ರಲ್ಲಿ ಈ ಕುರಿತು ಮೂರು ಸಂಪುಟಗಳು ಬಂದವು.
`ಕಾಳಿದಾಸನ ನಾಟಕ ವಿಮಶರ್ೆ', `ಪಾಶ್ಚಾತ್ಯ ಗಂಭೀರ ನಾಟಕಗಳು,' `ಕವಿ ಕಥಾಮೃತ', ರಂಗ ಭಿನ್ನಪ', `ನಾಟುನುಡಿ', `ಪಾಶ್ಚಾತ್ಯ ಸಾಹಿತ್ಯ ವಿಮಶರ್ೆ' ಇವು ಇವರ ಪ್ರಮುಖ ಗ್ರಂಥಗಳಾಗಿವೆ. ಅಲ್ಲದೆ ಆಂಗ್ಲ ಭಾಷೆಯಲ್ಲಿಯೂ ಹಲವು ಕೃತಿಗಳನ್ನು ರಚಿಸಿದ್ದಾರೆ.
ವಿಮಶರ್ೆಯ ಮೇಲಿನ ಹಿಡಿತ, ಇವರ ಬರವಣಿಗೆಯ ಶೈಲಿ ಮೆಚ್ಚುವಂಥವು. 1956 ರಲ್ಲಿ ಬಂದ ಇವರ `ಹೊನ್ನ ಶೂಲ' ಅಗಾಧ ಪ್ರಶಂಸೆಗೆ ಪಾತ್ರವಾಯಿತು. 1960 ರಲ್ಲಿ ಬಂದ `ವಿಕ್ರಮೋರ್ವಶೀಯ ನಾಟಕದ ವಿಮಶರ್ೆ' ಅವರಿಗೆ ಹೆಚ್ಚಿನ ಮೌಲ್ಯ ತಂದುಕೊಟ್ಟಿತು.
ರಂಗಣ್ಣನವರು `ಉತ್ತರ ಕುಮಾರ' ಹಾಗೂ `ಮಹಿಳೆ ಮತ್ತು ಉಂಗುರ' ಎಂಬ ನಾಟಕಗಳನ್ನೂ ಬರೆದಿದ್ದಾರೆ. ಇವರ `ರಂಗ ಭಿನ್ನಪ' ಕೃತಿಗೆ 1965 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದ್ದು, ಸ್ಕೌಟ್ ಸೇವೆಗಾಗಿ `ರಜತಗಜ' ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವ ವಿದ್ಯಾಲಯವು ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ. 1976 ರಲ್ಲಿ ಶಿವಮೊಗ್ಗದಲ್ಲಿ ನಡೆದ 49ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ರಂಗಣ್ಣನವರು ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದಾಗ ಇವರ ಗೆಳೆಯರು, ಶಿಷ್ಯರೆಲ್ಲ ಸೇರಿ ಅವರಿಗೆ `ಬಾಗಿನ' ಎಂಬ ಅಭಿನಂದನಾ ಗ್ರಂಥ ಅಪರ್ಿಸಿದ್ದಾರೆ.
ಮನುಷ್ಯ ಸಂಬಂಧಗಳನ್ನು ಭಾವನೆಗಳನ್ನು ಬೆಸೆದು, ಅರಳಿಸುವ ಕೆಲಸ ಮಾಡದೇ ಕೆರಳಿಸುವ ಕೆಲಸದಲ್ಲಿ ನಿರಂತರ ತೊಡಗಿ ಯುವ ಜನಾಂಗವನ್ನು ದಿಕ್ಕು ತಪ್ಪಿಸುತ್ತಿರುವ ಪ್ರಸ್ತುತ ಸಂದರ್ಭ ನೆನೆದರೆ ದಿಗಿಲಾಗದಿರದು. ಸ್ವಸ್ಥ ಸಮಾಜದ ಅಗತ್ಯತೆಯ ಜರೂರು ಇದೆ. ಇದಕ್ಕೆಲ್ಲ ಪೂರಕವಾಗಿ ಅಂದು, ಇಂದು, ಮುಂದೂ ಗುರುವಾಗಿ ಸನ್ಮಾರ್ಗಕ್ಕೆ ತರುವಂತಹ ಗುರುತರ ಹೊಣೆ ವಚನ ಸಾಹಿತ್ಯದ ಮೇಲಿದೆ.
1987 ಫೆಬ್ರವರಿ 17 ರಂದು ಅಜರಾಮರವಾದ ಎಸ್.ವಿ. ರಂಗಣ್ಣ ಎಂಬ ಸಾಹಿತ್ಯ ಚೇತನ ಇಂದು, ಮುಂದು, ಎಂದೆಂದೂ ತನ್ನ ವಿವೇಕಯುತ ಸಾಹಿತ್ಯದಿಂದಾಗಿ ಪ್ರಜ್ಞಲಿಸುತ್ತಲೇ ಇರುತ್ತದೆ.
ಹಿಂದೂ-ಮುಸ್ಲಿಂ ಸಾಹಿತ್ಯ ಸಂಸ್ಕೃತಿಯ ಪ್ರತೀಕ-ಡಾ||ಎಸ್.ಕೆ ಕರೀಂಖಾನ್
ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ನಾಡಿನ ಅನೇಕ ವಿದ್ವಾಂಸರು, ಕೀತಿಶೇಷರು ಶತ-ಶತಮಾನಗಳುದ್ದಕ್ಕೂ ಬದುಕಿ ಬೆಳಕ ಸೂಸಿದ್ದಾರೆ. ಕನ್ನಡ ಮೂಲತ: ದೇಶೀ ಸೊಗಡಿನ ಜನಿತವಾಗಿದ್ದು, ನಮ್ಮ ಪೂರ್ವಜರ ಬದುಕಿನ ಚಿತ್ರಣವನ್ನು, ಮಾನವೀಯ ಮೌಲ್ಯಗಳನ್ನು, ಸಾಂಸ್ಕೃತಿಕ ನಿಲುವುಗಳನ್ನು ಜನಪದವಾಗಿ ಅನಾವರಣಗೊಳಿಸುತ್ತ ಬಂದಿರುವುದನ್ನು ಕಾಣುತ್ತೇವೆ.
ಜಾನಪದರ ಒಡಲಿನಿಂದ ಬಂದ ಸಂಸ್ಕೃತಿ ಕಡಲನ್ನು ಒಂದೆಡೆ ಹಿಡಿದಿಟ್ಟು, ಸತ್ವಯುತವಾಗಿ ನಿರೂಪಿಸಿ ಸುಲಿದ ಬಾಳೆ ತೆರದಿ ಕನ್ನಡಿಗರಿಗೆ ಉಣಬಡಿಸಿದ ಕೀತರ್ಿ ಜಾನಪದ ಜಂಗಮ ಡಾ|| ಎಸ್.ಕೆ ಕರೀಂ ಖಾನ್ ರಿಗೆ ಸಲ್ಲುತ್ತದೆ.
ಜಾನಪದ ವಿಧ್ವಾಂಸರಾಗಿಯೂ, ಪ್ರಸಿದ್ಧ ಗೀತರಚನಕಾರರಾಗಿಯೂ ಜನಪ್ರಿಯರಾಗಿರುವ ಖಾನ್ ಸಾಹೇಬರು 1901 ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಅಬ್ದುಲ್ ರೆಹಮಾನ್ ಹಾಗೂ ಜಹನಾಬಿ ಅವರ ಎಂಟು ಜನ ಮಕ್ಕಳಲ್ಲಿ ನಾಲ್ಕನೆಯವರಾಗಿ ಜನಿಸಿದರು.
ಡಾ|| ಕರೀಂ ಖಾನ್ ಅವರ ಮೂಲ ವಂಶಸ್ತರು ಅಫ್ಘಾನಿಸ್ಥಾನದವರು ಇವರ ತಂದೆಯವರಾದ ರೆಹಮನ್ ಖಾನ್ ರವರು ಸೇನಾನಿ ಹಾಗೂ ಯುನಾನಿ ವೈಧ್ಯರಾಗಿದ್ದರು. ಅವರು ಬೇರೆ ಬೇರೆ ಕಾರಣಗಳಿಂದ ಭಾರತಕ್ಕೆ ವಲಸೆ ಬಂದು ಹಾಸನದ ಸಕಲೇಶಪುರದಲ್ಲಿ ನೆಲೆನಿಂತರು. ಇವರ ಮಡದಿ ಅರಬ್ ಮೂಲದವರಾದರೂ ವಿರಾಜಪೇಟೆಯ ವಾಸಿಗಳಾಗಿದ್ದರು. ಈ ದಂಪತಿಗಳಿಗೆ ಖಾದರ್ ಖಾನ್, ರಹೀಂ ಖಾನ್, ಅಹಮ್ಮದ್ ಖಾನ್, ಕರೀಂ ಖಾನ್, ಜಬ್ಬರ್ ಖಾನ್, ಹನೀಫಾ ಬೇಗಂ, ರಫೀಕ್ ಖಾನ್ ಹಾಗೂ ಖಲಂದರ್ ಖಾನ್ ಹೀಗೆ ಎಂಟು ಮಕ್ಕಳಾದರು.
ಚಿಕ್ಕ ವಯಸ್ಸಿನಲ್ಲೆ ಪಿತೃವಿಯೋಗ ಹೊಂದಿದ ಕರೀಂ ಖಾನ್ ಹಾಸನದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಅಣ್ಣನ ಆಶ್ರಯದಲ್ಲಿ ಪೂರೈಸಿದರು. ಆಚಂಗಿ ನಾರಾಯಣ ಶಾಸ್ತ್ರಿಗಳು ಇವರ ಗುರುಗಳಾಗಿದ್ದರು.
ಕರೀಂ ಖಾನ್ ಬಾಲಕನಾಗಿದ್ದ ಸಂದರ್ಭ ಹೇಮಾವತಿ ನದಿಯಲ್ಲಿ ಸ್ನಾನ ಮಾಡಿ ಹೊಳೆ ದಾಟಿ ಈಚೆ ಬರುವಾಗ ನಾರಾಯಣ ಶಾಸ್ತ್ರಿಗಳ ತೋಟ ಕಾಣಿಸುತಿತ್ತು. ಅಂದಿನ ದಿನಗಳಲ್ಲಿ ಬ್ರಾಹ್ಮಣರೆಂದರೆ ಸರಸ್ವತಿಯ ಭಂಢಾರದ ಬೀಗಮುದ್ರೆಗಳೇ ಎಂದು ಬಗೆದಿದ್ದ ಕರೀಂ ಖಾನ್ ರು ಕ್ರಮೇಣ ನಾರಾಯಣ ಶಾಸ್ತ್ರಿಗಳ ಸ್ನೇಹ ಸಂಪಾದಿಸಿಕೊಂಡರು. ಒಂದು ದಿನ ಶಾಸ್ತ್ರಿಗಳು ಏನೋ ಕರೀಂ ನಿತ್ಯ ನಮ್ಮ ತೋಟಕ್ಕೆ ಬರ್ತೀಯಲ್ಲ ಏನ್ ಸಮಾಚಾರ? ಎಂದು ಕೇಳಿದರಂತೆ ! ಅದಕ್ಕೆ ಕರೀಂ ಖಾನರು ಅಳುಕುತ್ತಲೇ ಧೀನಭಾವದಿಂದ ಕರಮುಗಿದು ಶಾಸ್ತ್ರಿಗಳೇ ನಾನು ನಿಮ್ಮ ತೋಟಕ್ಕೆ ಬರ್ತಿರೋದು ನಿಮ್ಮ ದರ್ಶನ ಪಡೆಯಲು ಹಾಗೆಯೇ ನಿಮ್ಮಲ್ಲಿನ ಪಾಂಡಿತ್ಯ ಕದಿಯಲು ಅಷ್ಟೇ ಎಂದರಂತೆ! ಶಾಸ್ತ್ರಿಗಳು ದಿಗಿಲಾಗಿ ಅಲೆಲೆಲೆ ಹಿಂದುಗಳಿಗೆ ಬೇಕಿರದ ನನ್ನ ಪಾಂಡಿತ್ಯ ನಿನ್ನಂತಹ ಮುಸ್ಲಿಂ ಫೋರ ಕೊಳ್ಳೆಹೊಡೆಯೋದು ಅಂದರೆ ಆಶ್ಚಯ್ದ ಸಂಗತಿ! ಭಾಷೆ, ಧರ್ಮದ ಸಂಯೋಗದ ಸಂದರ್ಭ ಬಂದೊದಗಿರಬೇಕು, ಆಯ್ತು ನೀನು ಕೊಳ್ಲೆಹೊಡೆಯೋದು ಬೇಡ. ನಿನ್ನಲ್ಲಿರೋ ಜ್ಞಾನದಾಹ ಪಾಂಡಿತ್ಯವನ್ನು ತಾನೇ ಗಳಿಸಿಕೊಡುತ್ತದೆ. ನಿನ್ನಂತಹ ಸಹೃದಯಿ, ಕಲಿಯುವ ಹಂಬಲ, ಮನೋ ಚೈತನ್ಯವನ್ನು ಕಂಡು ನನ್ನ ಪಾಂಡಿತ್ಯ ಬಚ್ಚಿಡೋದು ತರವಲ್ಲ . ಬಾ ಎಂದು ಆಲಂಗಿಸಿ ಮಡಿವಂತಿಕೆ ಮೀರಿ ನಾರಾಯಣ ಶಾಸ್ತ್ರಿಗಳು ಸಂಸ್ಕೃತ ಸಾಹಿತ್ಯ, ಶಾಸ್ತ್ರ, ಪುರಾಣಗಳನ್ನು ಕಲಿಸುತ್ತಾ ಬಂದರು. ಶಿಶ್ಯನೂ ಕೂಡ ಬೆರಳ ತೀರಿದರೆ ಹಸ್ತ ನುಂಗುವ ಪರಿಯಲ್ಲಿ ಸಾಗಿದನು.
ಉದರ್ು ಭಾಷಿಗರಾದರೂ ಕರೀಂಖಾನ್ ರವರಿಗೆ ಕನ್ನಡದಲ್ಲಿ ಎಲ್ಲಿಲ್ಲದ ಆಸಕ್ತಿ. ಅಲ್ಪ ಸ್ವಲ್ಪ ಸಂಸ್ಕೃತ ಬಲ್ಲವರಾಗಿದ್ದ ಇವರು ಇತಿಹಾಸ, ಜಾನಪದ, ಪುರಾಣ, ಮಹಾಕಾವ್ಯಗಳ ಬಗ್ಗೆ ಅಪಾರವಾದ ಪಾಂಡಿತ್ಯ ಗಳಿಸಿದ್ದರು. ಅದರಲ್ಲೂ ಚಾರಿತ್ರಿಕ ವಿಷಯಗಳಲ್ಲಿ ಸಿದ್ಧಹಸ್ತರಾಗಿದ್ದರು. ಪ್ರತಿಭಾವಂತ ಚಿಂತಕರಾದ ಇವರು ಮೂಲತಹ ಇಸ್ಲಾಂ ಧರ್ಮದವರಾದರೂ ಭಗವದ್ಗೀತೆ, ಭಾಗವತ, ಶಿವಪುರಾಣ, ವಿಷ್ಣುಪುರಾಣಗಳನ್ನು ಓದಿ ಕರಗತ ಮಾಡಿಕೊಂಡಿದ್ದರು. ಉದರ್ು ಸಾಹಿತ್ಯದಲ್ಲಿ ಪಾಡಿತ್ಯವನ್ನು ಹೊಂದಿದ್ದ ಖಾನ್ ರವರು ಹಿಂದೂ -ಮುಸ್ಲಿಂ ಐಕ್ಯತೆಯ ಸಂಕೇತವಾಗಿದ್ದಾರೆ. ಇದಕ್ಕೆ ಮೂಲ ನಾರಾಯಣ ಶಾಸ್ತ್ರಿಗಳೇ ಎನ್ನಬಹುದು.
ಮುಂದೆ ಕನ್ನಡ ನಾಡಿನ ಮಹಾನ್ ವಿದ್ವಾಂಸರೆನಿಸಿಕೊಂಡರು. ತೆಲುಗಿನ ಪೋತನನ ಭಾಗವತವನ್ನು ನಾಟಕ ರೂಪಕ್ಕೆ ತರುವಲ್ಲಿ ಪ್ರಯತ್ನಿಸಿದರು. ಉದರ್ು ಸಾಹಿತ್ಯದ ಗಾಲಿಬ್ ಇಕ್ಫಾಲ್ರಂತಹ ಕವಿಗಳ ಪ್ರಭಾವಕ್ಕೂ ಒಳಗಾಗಿದ್ದ ಕರೀಂ ಖಾನ್ ಹಿಂದೂ ಮುಸ್ಲಿಂ ಐಕ್ಯತೆಗೆ ಸಾಕಷ್ಟು ಕಥೆಗಳನ್ನು ರಚಿಸಿದ್ದುಂಟು. ಉದರ್ುವಿನಿಂದ ಕನ್ನಡಕ್ಕೆ ಅನುವಾದಗೊಂಡ 'ನಿವಾರ' ಕಥಾ ಸಂಕಲನ, 'ನೀಹಾರ' ಚಾರಿತ್ರಿಕ ಕಥಾ ಸಂಕಲನ, 'ಸಮೀರ', 'ಬಲಿಗಾನಿ ಹುಸೇನಿ' ಚಾರಿತ್ರಿಕ ಕಾದಂಬರಿ. 'ಮಾತೃ ಶಾಪ' ಪೌರಾಣಿಕ ಕಾದಂಬರಿ. 'ನಿದರ್ೋಷಿ', 'ಮಧುಮೋಹನ್', 'ಹಣವೋ ಗುಣವೋ', 'ಶ್ರೀ ಕೃಣ್ಣಲೀಲ'ೆ ನಾಟಕಗಳು. 'ಹುಮಾಯಾನ್', 'ಅಂಬರನಾಥ', 'ಬೆಂಗಳೂರು ಕೆಂಪೇಗೌಡ', 'ಮಹಾಪ್ರಭು ಮಾಗಡಿ ಕೆಂಪೇಗೌಡ', 'ಲೈಲಾ ಮಜ್ನು'- ಚಾರಿತ್ರಿಕ ನಾಟಕಗಳು ಮುಂತಾದವು ಕರೀಂ ಖಾನ್ರ ಪ್ರಮುಖ ಕೃತಿಗಳಾಗಿವೆ. ಅಲ್ಲದೇ ಅಸಂಖ್ಯಾತ ಗೀಗಿ ಪದಗಳು, ಸೊಬಾನೆ, ಲಾವಣಿಗಳು, ರಾಗಿ ಬೀಸೋ ಹಾಡುಗಳು, ನಾಟಿ ಮಾಡುವಾಗಿನ ಹಾಡುಗಳು ಹೀಗೆ ಹಲವಾರು ಬಗೆಯ ಜಾನಪದ ಕಾವ್ಯಗಳ ಸಂಗ್ರಹವನ್ನು ಮಾಡುತ್ತಾ ತಮ್ಮ ಜ್ಞಾನ ಜೋಳಿಗೆಯನ್ನು ತುಂಬಿಸಿಕೊಂಡು ಪುಸ್ತಕ ರೂಪದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ, ಕನ್ನಡಿಗರಿಗೆ ಉಣಬಡಿಸಿದ್ದಾರೆ.
ಪಕ್ಕ ಗಾಂಧಿವಾದಿಗಳಾಗಿದ್ದ ಕರೀಂ ಖಾನ್ ರು ಗಾಂಧಿ ತತ್ವಗಳನ್ನು ಅಕ್ಷರಶ: ಅಳವಡಿಸಿಕೊಂಡು ಆದರ್ಶಮಯವಾಗಿ ಬದುಕಿದವರು. ಚಲೇಜಾವ್ ಚಳುವಳಿ, ದುಂಡುಮೇಜಿನ ಪರಿಷತ್ತು, ಉಪ್ಪಿನ ಸತ್ಯಾಗ್ರಹ ಸಮಯದಲ್ಲಿ ಗಾಂಧೀಜಿ ತೋರಿದ ಸಹನಾ ಚಳುವಳಿಗೆ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಗಿಯಾದರು.
ಕರೀಂ ಖಾನ್ 1947 ರ ಸ್ವಾತಂತ್ರ್ಯವನ್ನು ಒಂದು ಕಡೆ ಹೀಗೆ ಬಣ್ಣಿಸಿದ್ದಾರೆ ಬ್ರಿಟೀಷರು ಭಾರತ ಬಿಟ್ಟು ತೊಲಗಿದ ದಿನ ಆದಂತಹ ಸಂತೋಷ ತಾಯಿಯ ಎದೆಹಾಲನ್ನು ಮತೊಮ್ಮೆ ಕುಡಿದಷ್ಟೇ ಸಂತೋಷವಾಯಿತು. ಸ್ವಾತಂತ್ರ್ಯೋತ್ತರದ ಸಂದರ್ಭದಲ್ಲಿ ಒಬ್ಬ ಸಂದರ್ಶಕ ಭೇಟಿಯಿತ್ತಾಗ ಇಂದು ಸ್ವಾತಂತ್ರ್ಯ ಹೆಸರಿನಲ್ಲಿ ಸ್ವಾಚ್ಛಾಚಾರ , ಸ್ವಾರ್ಥ, ವಂಚನೆ, ಜಾತಿ ಸಂಘರ್ಷಗಳಿಂದ ಪುನ: ನಾವು ನಮ್ಮವರಿಂದಲೇ ಕ್ರೂರವಾಗಿ ಪರತಂತ್ರರಾಗುತಿದ್ದೇವೆ ಎಂದಿದ್ದಾರೆ.
ಕಂಚಿನ ಕಂಠ ಹೊಂದಿದ್ದ ಖಾನ್ ಸಾಹೇಬರಿಗೆ ನಾಡಿನ ಜನ ಸಾವಿರಾರು ಹಾಡುಗಳ ಸರದಾರ ನೆಂಬ ಬಿರಿದಾಂಕಿತ ಮಾಡಿದ್ದರು. ಸ್ವಾಭಿಮಾನಿಯಾದ ಯಾವುದೇ ಕನ್ನಡಿಗನಿಗೆ ದೇಶ ಮತ್ತು ಭಾಷಾಭಿಮಾನ ಉತ್ಕಟವಾಗಿದ್ದೇಯಿರುತ್ತದೆ. ಅಂತೆಯೇ ಕನರ್ಾಟಕ ಏಕೀಕರಣದ ಸಂದರ್ಭದಲ್ಲಿಯೂ ಕರೀಂ ಖಾನ್ ರು ಮುಂಚೂಣಿ ನಾಯಕರಾದರು. ಕಾವೇರಿಯಿಂದಮಾಗೋದಾವರಿ ವರಮಿರ್ದ ಕನ್ನಡ ನಾಡು ಎಂಬುದನ್ನು ಕವಿರಾಜ ಮಾರ್ಗ, ಶಾಸನಗಳಿಂದ ಅರಿತಿದ್ದ ಖಾನರು ಕನ್ನಡ ನಾಡನ್ನು, ಕನ್ನಡ ಭಾಷೆಯನ್ನು ಮಾತನಾಡುವ , ಕನ್ನಡಿಗರು ವಾಸಿಸುವ ಊರುಗಳನ್ನು ಒಂದಾಗಿಸುವ ನಿಟ್ಟಿನಲ್ಲಿ ಶ್ರಮಿಸಿದರು. ಸೆರೆಮನೆವಾಸವನ್ನು ಅನುಭವಿಸಿದರು. ಇಷ್ಟೇಯಲ್ಲದೇ ಉಡುಪಿಯ 'ಅಂತರಂಗ' ಎಂಬ ಪತ್ರಿಕೆಯ ಮೂಲಕ ಪತ್ರಿಕಾ ರಂಗಕ್ಕೆ ಕಾಲಿಟ್ಟ ಖಾನರು ಪತ್ರಿಕೆಯಲ್ಲಿ ಜಾನಪದ, ಸಾಹಿತ್ಯ, ದೇಶಾಭಿಮಾನ ಮೂಡಿಸುವಂತಹ ಲೇಖನಗಳನ್ನು ಪ್ರಕಟಿಸಿದರು.
1940-41 ರಲ್ಲಿ ಧಾರವಾಡದ ಲೋಕಮಿತ್ರ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದರು. ನಂತರ ಬಾಂಬೆಗೆ ಹೋದ ಖಾನರು ಬಾಂಬೆಯ 'ರಾಯಲ್ ಇಂಡಿಯನ್ ದೇವಿ' ಕಂಪನಿಯಲ್ಲಿ 'ವೈರ್ಲೆಸ್ ಟೆಲಿಗ್ರಾಫರ್' ಆಗಿ ಕೆಲಸ ಮಾಡಿದ್ದಾರೆ. ತದನಂತರ ಡಾ||ಹಡರ್ೇಕರ ಸ್ಥಾಪಿತ ಭಾರತ ಸೇವಾದಲ ಬಲಪಡಿಸುವ ನಿಟ್ಟನಲ್ಲಿ ಶ್ರಮ ವಹಿಸಿದರು. ಇವರ ಕಂಠ ಸಿರಿಯಿಂದ ರಾಘವೇಂದ್ರ ಸ್ವಾಮಿ ಭಕ್ತಿಗೀತೆಗಳು, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತಿಗೀತೆಗಳೆಂಬ ಧ್ವನಿಸುರುಳಿಗಳು ಬಿಡುಗಡೆಯಾಗಿವೆ.
ಅಷ್ಟೊತ್ತಿಗಾಗಲೇ ಪ್ರಸಾದ್ ಮೂವೀಸ್ ನ ದಿವಂಗತ ಆರ್ ನಾಯ್ಡು ಕರೀಂ ಖಾನ್ ರನ್ನು ಮದರಾಸಿಗೆ ಕೈ ಬೀಸಿ ಕರೆದರು. ಅವರಿಗೆ ಸಿನಿಮಾ ರಂಗದ ಅದೃಷ್ಟದ ಬಾಗಿಲು ತೆರೆದುಕೊಂಡಿತು. ಅಲ್ಲಿ ಸುಮಾರು ಹತ್ತು ವರ್ಷ ಹಲವಾರು ಚಿತ್ರಗಳಿಗೆ ಕಥೆ, ಸಂಭಾಷಣೆ, ಹಾಡುಗಳನ್ನು ಬರೆದು, ಸುಮಾರು 300 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದರು. ಸ್ವರ್ಣಗೌರಿ, ಜೀವನ ತರಂಗ, ಬೇವುಬೆಲ್ಲ, ಚಂದ್ರಕುಮಾರ, ದೇವಮಾನವ, ದೊಂಬರ ಕೃಣ್ಣ, ರಾಜೇಶ್ವರಿ, ಪತೀತ ಪಾವನಿ, ಸೂಪರ್ ನೋವ-455 ಮೊದಲಾದ ಹದಿನೈದು ಚಿತ್ರಗಳಿಗೆ ಉತ್ತಮ ಸಾಹಿತ್ಯ ನೀಡಿದ್ದಾರೆ.
ಹೀಗೆ ಬಹುಮುಖ ಪ್ರತಿಭೆಯಾದ ಇವರನ್ನು 1987 ಜುಲೈ 30 ರಂದು ಕನರ್ಾಟಕ ಸಕರ್ಾರ ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಆದರೆ ಅನೇಕ ಜನ ಮೂಗು ಮುರಿದಿದ್ದರಿಂದ ಇದನ್ನು ಗ್ರಹಿಸಿದ ಕರೀಂ ಖಾನ್ರು ನೇಮಾಕಾದೇಶ ಕೈ ಸೇರುವ ಮೊದಲೆ ರಾಜೆನಾಮೆ ಪ್ರಕಟಿಸಿಬಿಟ್ಟರು. ಆದರೂ ಸಕರ್ಾರ ಇವರನ್ನು ಒಪ್ಪಿಸಿ ಅಧಿಕಾರ ಸ್ವೀಕರಿಸುವಂತೆ ಒತ್ತಾಯ ಮಾಡಿದ್ದರಿಂದ ಕಾರ್ಯನಿರ್ವಹಿಸಿದರು.
ಈ ಎಲ್ಲಾ ಜೀವಮಾನವ ಸಾಧನೆಗಾಗಿ 1989 ರಲ್ಲಿ ಗುಲಬಗರ್ಾ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ, 1995 ರಲ್ಲಿ ಕನರ್ಾಟಕ ಸಕರ್ಾರ ಜಾನಪದಶ್ರೀ ಪ್ರಶಸ್ತಿ, , 1995 ರಲ್ಲಿ ಜಿ.ಶಂ. ಪ ಪ್ರಶಸ್ತಿ, 1997 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ `ನಾಡೋಜ ಪ್ರಶಸ್ತಿ', 1998 ರಲ್ಲಿ ಹಂಸರತ್ನ ಪ್ರಶಸ್ತಿ, 1999 ರಲ್ಲಿ ದೇಶಪ್ರೇಮಿಗಳ ಜನಜಾಗೃತಿ ಸಭೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಗೌರವವಾದರೆ, 2000 ರಲ್ಲಿ ಚಿ| ಉದಯಶಂಕರ್ ಪ್ರಶಸ್ತಿ, 2004 ರಲ್ಲಿ ಜಾನಪದ ಜಂಗಮ ಪ್ರಶಸ್ತಿ, 2004 ರಲ್ಲಿ ಚಿತ್ರರಂಗದ ಜೀವಮಾನ ಪ್ರಶಸ್ತಿ, 2004 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಮುಂತಾದ ಗೌರವಗಳಿಗೆ ಕರೀಂ ಖಾನ್ರು ಪಾತ್ರರಾಗಿದ್ದಾರೆ. ಇಂತಹ ಅಭೂತಪೂರ್ವ ಸಾಧಕ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು, ತತ್ತ್ವಗಳು ಸದಾ ಜೀವಂತವಾಗಿವೆ.
ಜಾನಪದರ ಒಡಲಿನಿಂದ ಬಂದ ಸಂಸ್ಕೃತಿ ಕಡಲನ್ನು ಒಂದೆಡೆ ಹಿಡಿದಿಟ್ಟು, ಸತ್ವಯುತವಾಗಿ ನಿರೂಪಿಸಿ ಸುಲಿದ ಬಾಳೆ ತೆರದಿ ಕನ್ನಡಿಗರಿಗೆ ಉಣಬಡಿಸಿದ ಕೀತರ್ಿ ಜಾನಪದ ಜಂಗಮ ಡಾ|| ಎಸ್.ಕೆ ಕರೀಂ ಖಾನ್ ರಿಗೆ ಸಲ್ಲುತ್ತದೆ.
ಜಾನಪದ ವಿಧ್ವಾಂಸರಾಗಿಯೂ, ಪ್ರಸಿದ್ಧ ಗೀತರಚನಕಾರರಾಗಿಯೂ ಜನಪ್ರಿಯರಾಗಿರುವ ಖಾನ್ ಸಾಹೇಬರು 1901 ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಅಬ್ದುಲ್ ರೆಹಮಾನ್ ಹಾಗೂ ಜಹನಾಬಿ ಅವರ ಎಂಟು ಜನ ಮಕ್ಕಳಲ್ಲಿ ನಾಲ್ಕನೆಯವರಾಗಿ ಜನಿಸಿದರು.
ಡಾ|| ಕರೀಂ ಖಾನ್ ಅವರ ಮೂಲ ವಂಶಸ್ತರು ಅಫ್ಘಾನಿಸ್ಥಾನದವರು ಇವರ ತಂದೆಯವರಾದ ರೆಹಮನ್ ಖಾನ್ ರವರು ಸೇನಾನಿ ಹಾಗೂ ಯುನಾನಿ ವೈಧ್ಯರಾಗಿದ್ದರು. ಅವರು ಬೇರೆ ಬೇರೆ ಕಾರಣಗಳಿಂದ ಭಾರತಕ್ಕೆ ವಲಸೆ ಬಂದು ಹಾಸನದ ಸಕಲೇಶಪುರದಲ್ಲಿ ನೆಲೆನಿಂತರು. ಇವರ ಮಡದಿ ಅರಬ್ ಮೂಲದವರಾದರೂ ವಿರಾಜಪೇಟೆಯ ವಾಸಿಗಳಾಗಿದ್ದರು. ಈ ದಂಪತಿಗಳಿಗೆ ಖಾದರ್ ಖಾನ್, ರಹೀಂ ಖಾನ್, ಅಹಮ್ಮದ್ ಖಾನ್, ಕರೀಂ ಖಾನ್, ಜಬ್ಬರ್ ಖಾನ್, ಹನೀಫಾ ಬೇಗಂ, ರಫೀಕ್ ಖಾನ್ ಹಾಗೂ ಖಲಂದರ್ ಖಾನ್ ಹೀಗೆ ಎಂಟು ಮಕ್ಕಳಾದರು.
ಚಿಕ್ಕ ವಯಸ್ಸಿನಲ್ಲೆ ಪಿತೃವಿಯೋಗ ಹೊಂದಿದ ಕರೀಂ ಖಾನ್ ಹಾಸನದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಅಣ್ಣನ ಆಶ್ರಯದಲ್ಲಿ ಪೂರೈಸಿದರು. ಆಚಂಗಿ ನಾರಾಯಣ ಶಾಸ್ತ್ರಿಗಳು ಇವರ ಗುರುಗಳಾಗಿದ್ದರು.
ಕರೀಂ ಖಾನ್ ಬಾಲಕನಾಗಿದ್ದ ಸಂದರ್ಭ ಹೇಮಾವತಿ ನದಿಯಲ್ಲಿ ಸ್ನಾನ ಮಾಡಿ ಹೊಳೆ ದಾಟಿ ಈಚೆ ಬರುವಾಗ ನಾರಾಯಣ ಶಾಸ್ತ್ರಿಗಳ ತೋಟ ಕಾಣಿಸುತಿತ್ತು. ಅಂದಿನ ದಿನಗಳಲ್ಲಿ ಬ್ರಾಹ್ಮಣರೆಂದರೆ ಸರಸ್ವತಿಯ ಭಂಢಾರದ ಬೀಗಮುದ್ರೆಗಳೇ ಎಂದು ಬಗೆದಿದ್ದ ಕರೀಂ ಖಾನ್ ರು ಕ್ರಮೇಣ ನಾರಾಯಣ ಶಾಸ್ತ್ರಿಗಳ ಸ್ನೇಹ ಸಂಪಾದಿಸಿಕೊಂಡರು. ಒಂದು ದಿನ ಶಾಸ್ತ್ರಿಗಳು ಏನೋ ಕರೀಂ ನಿತ್ಯ ನಮ್ಮ ತೋಟಕ್ಕೆ ಬರ್ತೀಯಲ್ಲ ಏನ್ ಸಮಾಚಾರ? ಎಂದು ಕೇಳಿದರಂತೆ ! ಅದಕ್ಕೆ ಕರೀಂ ಖಾನರು ಅಳುಕುತ್ತಲೇ ಧೀನಭಾವದಿಂದ ಕರಮುಗಿದು ಶಾಸ್ತ್ರಿಗಳೇ ನಾನು ನಿಮ್ಮ ತೋಟಕ್ಕೆ ಬರ್ತಿರೋದು ನಿಮ್ಮ ದರ್ಶನ ಪಡೆಯಲು ಹಾಗೆಯೇ ನಿಮ್ಮಲ್ಲಿನ ಪಾಂಡಿತ್ಯ ಕದಿಯಲು ಅಷ್ಟೇ ಎಂದರಂತೆ! ಶಾಸ್ತ್ರಿಗಳು ದಿಗಿಲಾಗಿ ಅಲೆಲೆಲೆ ಹಿಂದುಗಳಿಗೆ ಬೇಕಿರದ ನನ್ನ ಪಾಂಡಿತ್ಯ ನಿನ್ನಂತಹ ಮುಸ್ಲಿಂ ಫೋರ ಕೊಳ್ಳೆಹೊಡೆಯೋದು ಅಂದರೆ ಆಶ್ಚಯ್ದ ಸಂಗತಿ! ಭಾಷೆ, ಧರ್ಮದ ಸಂಯೋಗದ ಸಂದರ್ಭ ಬಂದೊದಗಿರಬೇಕು, ಆಯ್ತು ನೀನು ಕೊಳ್ಲೆಹೊಡೆಯೋದು ಬೇಡ. ನಿನ್ನಲ್ಲಿರೋ ಜ್ಞಾನದಾಹ ಪಾಂಡಿತ್ಯವನ್ನು ತಾನೇ ಗಳಿಸಿಕೊಡುತ್ತದೆ. ನಿನ್ನಂತಹ ಸಹೃದಯಿ, ಕಲಿಯುವ ಹಂಬಲ, ಮನೋ ಚೈತನ್ಯವನ್ನು ಕಂಡು ನನ್ನ ಪಾಂಡಿತ್ಯ ಬಚ್ಚಿಡೋದು ತರವಲ್ಲ . ಬಾ ಎಂದು ಆಲಂಗಿಸಿ ಮಡಿವಂತಿಕೆ ಮೀರಿ ನಾರಾಯಣ ಶಾಸ್ತ್ರಿಗಳು ಸಂಸ್ಕೃತ ಸಾಹಿತ್ಯ, ಶಾಸ್ತ್ರ, ಪುರಾಣಗಳನ್ನು ಕಲಿಸುತ್ತಾ ಬಂದರು. ಶಿಶ್ಯನೂ ಕೂಡ ಬೆರಳ ತೀರಿದರೆ ಹಸ್ತ ನುಂಗುವ ಪರಿಯಲ್ಲಿ ಸಾಗಿದನು.
ಉದರ್ು ಭಾಷಿಗರಾದರೂ ಕರೀಂಖಾನ್ ರವರಿಗೆ ಕನ್ನಡದಲ್ಲಿ ಎಲ್ಲಿಲ್ಲದ ಆಸಕ್ತಿ. ಅಲ್ಪ ಸ್ವಲ್ಪ ಸಂಸ್ಕೃತ ಬಲ್ಲವರಾಗಿದ್ದ ಇವರು ಇತಿಹಾಸ, ಜಾನಪದ, ಪುರಾಣ, ಮಹಾಕಾವ್ಯಗಳ ಬಗ್ಗೆ ಅಪಾರವಾದ ಪಾಂಡಿತ್ಯ ಗಳಿಸಿದ್ದರು. ಅದರಲ್ಲೂ ಚಾರಿತ್ರಿಕ ವಿಷಯಗಳಲ್ಲಿ ಸಿದ್ಧಹಸ್ತರಾಗಿದ್ದರು. ಪ್ರತಿಭಾವಂತ ಚಿಂತಕರಾದ ಇವರು ಮೂಲತಹ ಇಸ್ಲಾಂ ಧರ್ಮದವರಾದರೂ ಭಗವದ್ಗೀತೆ, ಭಾಗವತ, ಶಿವಪುರಾಣ, ವಿಷ್ಣುಪುರಾಣಗಳನ್ನು ಓದಿ ಕರಗತ ಮಾಡಿಕೊಂಡಿದ್ದರು. ಉದರ್ು ಸಾಹಿತ್ಯದಲ್ಲಿ ಪಾಡಿತ್ಯವನ್ನು ಹೊಂದಿದ್ದ ಖಾನ್ ರವರು ಹಿಂದೂ -ಮುಸ್ಲಿಂ ಐಕ್ಯತೆಯ ಸಂಕೇತವಾಗಿದ್ದಾರೆ. ಇದಕ್ಕೆ ಮೂಲ ನಾರಾಯಣ ಶಾಸ್ತ್ರಿಗಳೇ ಎನ್ನಬಹುದು.
ಮುಂದೆ ಕನ್ನಡ ನಾಡಿನ ಮಹಾನ್ ವಿದ್ವಾಂಸರೆನಿಸಿಕೊಂಡರು. ತೆಲುಗಿನ ಪೋತನನ ಭಾಗವತವನ್ನು ನಾಟಕ ರೂಪಕ್ಕೆ ತರುವಲ್ಲಿ ಪ್ರಯತ್ನಿಸಿದರು. ಉದರ್ು ಸಾಹಿತ್ಯದ ಗಾಲಿಬ್ ಇಕ್ಫಾಲ್ರಂತಹ ಕವಿಗಳ ಪ್ರಭಾವಕ್ಕೂ ಒಳಗಾಗಿದ್ದ ಕರೀಂ ಖಾನ್ ಹಿಂದೂ ಮುಸ್ಲಿಂ ಐಕ್ಯತೆಗೆ ಸಾಕಷ್ಟು ಕಥೆಗಳನ್ನು ರಚಿಸಿದ್ದುಂಟು. ಉದರ್ುವಿನಿಂದ ಕನ್ನಡಕ್ಕೆ ಅನುವಾದಗೊಂಡ 'ನಿವಾರ' ಕಥಾ ಸಂಕಲನ, 'ನೀಹಾರ' ಚಾರಿತ್ರಿಕ ಕಥಾ ಸಂಕಲನ, 'ಸಮೀರ', 'ಬಲಿಗಾನಿ ಹುಸೇನಿ' ಚಾರಿತ್ರಿಕ ಕಾದಂಬರಿ. 'ಮಾತೃ ಶಾಪ' ಪೌರಾಣಿಕ ಕಾದಂಬರಿ. 'ನಿದರ್ೋಷಿ', 'ಮಧುಮೋಹನ್', 'ಹಣವೋ ಗುಣವೋ', 'ಶ್ರೀ ಕೃಣ್ಣಲೀಲ'ೆ ನಾಟಕಗಳು. 'ಹುಮಾಯಾನ್', 'ಅಂಬರನಾಥ', 'ಬೆಂಗಳೂರು ಕೆಂಪೇಗೌಡ', 'ಮಹಾಪ್ರಭು ಮಾಗಡಿ ಕೆಂಪೇಗೌಡ', 'ಲೈಲಾ ಮಜ್ನು'- ಚಾರಿತ್ರಿಕ ನಾಟಕಗಳು ಮುಂತಾದವು ಕರೀಂ ಖಾನ್ರ ಪ್ರಮುಖ ಕೃತಿಗಳಾಗಿವೆ. ಅಲ್ಲದೇ ಅಸಂಖ್ಯಾತ ಗೀಗಿ ಪದಗಳು, ಸೊಬಾನೆ, ಲಾವಣಿಗಳು, ರಾಗಿ ಬೀಸೋ ಹಾಡುಗಳು, ನಾಟಿ ಮಾಡುವಾಗಿನ ಹಾಡುಗಳು ಹೀಗೆ ಹಲವಾರು ಬಗೆಯ ಜಾನಪದ ಕಾವ್ಯಗಳ ಸಂಗ್ರಹವನ್ನು ಮಾಡುತ್ತಾ ತಮ್ಮ ಜ್ಞಾನ ಜೋಳಿಗೆಯನ್ನು ತುಂಬಿಸಿಕೊಂಡು ಪುಸ್ತಕ ರೂಪದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ, ಕನ್ನಡಿಗರಿಗೆ ಉಣಬಡಿಸಿದ್ದಾರೆ.
ಪಕ್ಕ ಗಾಂಧಿವಾದಿಗಳಾಗಿದ್ದ ಕರೀಂ ಖಾನ್ ರು ಗಾಂಧಿ ತತ್ವಗಳನ್ನು ಅಕ್ಷರಶ: ಅಳವಡಿಸಿಕೊಂಡು ಆದರ್ಶಮಯವಾಗಿ ಬದುಕಿದವರು. ಚಲೇಜಾವ್ ಚಳುವಳಿ, ದುಂಡುಮೇಜಿನ ಪರಿಷತ್ತು, ಉಪ್ಪಿನ ಸತ್ಯಾಗ್ರಹ ಸಮಯದಲ್ಲಿ ಗಾಂಧೀಜಿ ತೋರಿದ ಸಹನಾ ಚಳುವಳಿಗೆ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಗಿಯಾದರು.
ಕರೀಂ ಖಾನ್ 1947 ರ ಸ್ವಾತಂತ್ರ್ಯವನ್ನು ಒಂದು ಕಡೆ ಹೀಗೆ ಬಣ್ಣಿಸಿದ್ದಾರೆ ಬ್ರಿಟೀಷರು ಭಾರತ ಬಿಟ್ಟು ತೊಲಗಿದ ದಿನ ಆದಂತಹ ಸಂತೋಷ ತಾಯಿಯ ಎದೆಹಾಲನ್ನು ಮತೊಮ್ಮೆ ಕುಡಿದಷ್ಟೇ ಸಂತೋಷವಾಯಿತು. ಸ್ವಾತಂತ್ರ್ಯೋತ್ತರದ ಸಂದರ್ಭದಲ್ಲಿ ಒಬ್ಬ ಸಂದರ್ಶಕ ಭೇಟಿಯಿತ್ತಾಗ ಇಂದು ಸ್ವಾತಂತ್ರ್ಯ ಹೆಸರಿನಲ್ಲಿ ಸ್ವಾಚ್ಛಾಚಾರ , ಸ್ವಾರ್ಥ, ವಂಚನೆ, ಜಾತಿ ಸಂಘರ್ಷಗಳಿಂದ ಪುನ: ನಾವು ನಮ್ಮವರಿಂದಲೇ ಕ್ರೂರವಾಗಿ ಪರತಂತ್ರರಾಗುತಿದ್ದೇವೆ ಎಂದಿದ್ದಾರೆ.
ಕಂಚಿನ ಕಂಠ ಹೊಂದಿದ್ದ ಖಾನ್ ಸಾಹೇಬರಿಗೆ ನಾಡಿನ ಜನ ಸಾವಿರಾರು ಹಾಡುಗಳ ಸರದಾರ ನೆಂಬ ಬಿರಿದಾಂಕಿತ ಮಾಡಿದ್ದರು. ಸ್ವಾಭಿಮಾನಿಯಾದ ಯಾವುದೇ ಕನ್ನಡಿಗನಿಗೆ ದೇಶ ಮತ್ತು ಭಾಷಾಭಿಮಾನ ಉತ್ಕಟವಾಗಿದ್ದೇಯಿರುತ್ತದೆ. ಅಂತೆಯೇ ಕನರ್ಾಟಕ ಏಕೀಕರಣದ ಸಂದರ್ಭದಲ್ಲಿಯೂ ಕರೀಂ ಖಾನ್ ರು ಮುಂಚೂಣಿ ನಾಯಕರಾದರು. ಕಾವೇರಿಯಿಂದಮಾಗೋದಾವರಿ ವರಮಿರ್ದ ಕನ್ನಡ ನಾಡು ಎಂಬುದನ್ನು ಕವಿರಾಜ ಮಾರ್ಗ, ಶಾಸನಗಳಿಂದ ಅರಿತಿದ್ದ ಖಾನರು ಕನ್ನಡ ನಾಡನ್ನು, ಕನ್ನಡ ಭಾಷೆಯನ್ನು ಮಾತನಾಡುವ , ಕನ್ನಡಿಗರು ವಾಸಿಸುವ ಊರುಗಳನ್ನು ಒಂದಾಗಿಸುವ ನಿಟ್ಟಿನಲ್ಲಿ ಶ್ರಮಿಸಿದರು. ಸೆರೆಮನೆವಾಸವನ್ನು ಅನುಭವಿಸಿದರು. ಇಷ್ಟೇಯಲ್ಲದೇ ಉಡುಪಿಯ 'ಅಂತರಂಗ' ಎಂಬ ಪತ್ರಿಕೆಯ ಮೂಲಕ ಪತ್ರಿಕಾ ರಂಗಕ್ಕೆ ಕಾಲಿಟ್ಟ ಖಾನರು ಪತ್ರಿಕೆಯಲ್ಲಿ ಜಾನಪದ, ಸಾಹಿತ್ಯ, ದೇಶಾಭಿಮಾನ ಮೂಡಿಸುವಂತಹ ಲೇಖನಗಳನ್ನು ಪ್ರಕಟಿಸಿದರು.
1940-41 ರಲ್ಲಿ ಧಾರವಾಡದ ಲೋಕಮಿತ್ರ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದರು. ನಂತರ ಬಾಂಬೆಗೆ ಹೋದ ಖಾನರು ಬಾಂಬೆಯ 'ರಾಯಲ್ ಇಂಡಿಯನ್ ದೇವಿ' ಕಂಪನಿಯಲ್ಲಿ 'ವೈರ್ಲೆಸ್ ಟೆಲಿಗ್ರಾಫರ್' ಆಗಿ ಕೆಲಸ ಮಾಡಿದ್ದಾರೆ. ತದನಂತರ ಡಾ||ಹಡರ್ೇಕರ ಸ್ಥಾಪಿತ ಭಾರತ ಸೇವಾದಲ ಬಲಪಡಿಸುವ ನಿಟ್ಟನಲ್ಲಿ ಶ್ರಮ ವಹಿಸಿದರು. ಇವರ ಕಂಠ ಸಿರಿಯಿಂದ ರಾಘವೇಂದ್ರ ಸ್ವಾಮಿ ಭಕ್ತಿಗೀತೆಗಳು, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತಿಗೀತೆಗಳೆಂಬ ಧ್ವನಿಸುರುಳಿಗಳು ಬಿಡುಗಡೆಯಾಗಿವೆ.
ಅಷ್ಟೊತ್ತಿಗಾಗಲೇ ಪ್ರಸಾದ್ ಮೂವೀಸ್ ನ ದಿವಂಗತ ಆರ್ ನಾಯ್ಡು ಕರೀಂ ಖಾನ್ ರನ್ನು ಮದರಾಸಿಗೆ ಕೈ ಬೀಸಿ ಕರೆದರು. ಅವರಿಗೆ ಸಿನಿಮಾ ರಂಗದ ಅದೃಷ್ಟದ ಬಾಗಿಲು ತೆರೆದುಕೊಂಡಿತು. ಅಲ್ಲಿ ಸುಮಾರು ಹತ್ತು ವರ್ಷ ಹಲವಾರು ಚಿತ್ರಗಳಿಗೆ ಕಥೆ, ಸಂಭಾಷಣೆ, ಹಾಡುಗಳನ್ನು ಬರೆದು, ಸುಮಾರು 300 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದರು. ಸ್ವರ್ಣಗೌರಿ, ಜೀವನ ತರಂಗ, ಬೇವುಬೆಲ್ಲ, ಚಂದ್ರಕುಮಾರ, ದೇವಮಾನವ, ದೊಂಬರ ಕೃಣ್ಣ, ರಾಜೇಶ್ವರಿ, ಪತೀತ ಪಾವನಿ, ಸೂಪರ್ ನೋವ-455 ಮೊದಲಾದ ಹದಿನೈದು ಚಿತ್ರಗಳಿಗೆ ಉತ್ತಮ ಸಾಹಿತ್ಯ ನೀಡಿದ್ದಾರೆ.
ಹೀಗೆ ಬಹುಮುಖ ಪ್ರತಿಭೆಯಾದ ಇವರನ್ನು 1987 ಜುಲೈ 30 ರಂದು ಕನರ್ಾಟಕ ಸಕರ್ಾರ ಕನರ್ಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಆದರೆ ಅನೇಕ ಜನ ಮೂಗು ಮುರಿದಿದ್ದರಿಂದ ಇದನ್ನು ಗ್ರಹಿಸಿದ ಕರೀಂ ಖಾನ್ರು ನೇಮಾಕಾದೇಶ ಕೈ ಸೇರುವ ಮೊದಲೆ ರಾಜೆನಾಮೆ ಪ್ರಕಟಿಸಿಬಿಟ್ಟರು. ಆದರೂ ಸಕರ್ಾರ ಇವರನ್ನು ಒಪ್ಪಿಸಿ ಅಧಿಕಾರ ಸ್ವೀಕರಿಸುವಂತೆ ಒತ್ತಾಯ ಮಾಡಿದ್ದರಿಂದ ಕಾರ್ಯನಿರ್ವಹಿಸಿದರು.
ಈ ಎಲ್ಲಾ ಜೀವಮಾನವ ಸಾಧನೆಗಾಗಿ 1989 ರಲ್ಲಿ ಗುಲಬಗರ್ಾ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ, 1995 ರಲ್ಲಿ ಕನರ್ಾಟಕ ಸಕರ್ಾರ ಜಾನಪದಶ್ರೀ ಪ್ರಶಸ್ತಿ, , 1995 ರಲ್ಲಿ ಜಿ.ಶಂ. ಪ ಪ್ರಶಸ್ತಿ, 1997 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ `ನಾಡೋಜ ಪ್ರಶಸ್ತಿ', 1998 ರಲ್ಲಿ ಹಂಸರತ್ನ ಪ್ರಶಸ್ತಿ, 1999 ರಲ್ಲಿ ದೇಶಪ್ರೇಮಿಗಳ ಜನಜಾಗೃತಿ ಸಭೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಗೌರವವಾದರೆ, 2000 ರಲ್ಲಿ ಚಿ| ಉದಯಶಂಕರ್ ಪ್ರಶಸ್ತಿ, 2004 ರಲ್ಲಿ ಜಾನಪದ ಜಂಗಮ ಪ್ರಶಸ್ತಿ, 2004 ರಲ್ಲಿ ಚಿತ್ರರಂಗದ ಜೀವಮಾನ ಪ್ರಶಸ್ತಿ, 2004 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಮುಂತಾದ ಗೌರವಗಳಿಗೆ ಕರೀಂ ಖಾನ್ರು ಪಾತ್ರರಾಗಿದ್ದಾರೆ. ಇಂತಹ ಅಭೂತಪೂರ್ವ ಸಾಧಕ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು, ತತ್ತ್ವಗಳು ಸದಾ ಜೀವಂತವಾಗಿವೆ.
ಬಹು ಭಾಷಾ ಸಾಹಿತ್ಯ ವಲ್ಲಭ ರಾಜಾರಾಯರು
ಕನ್ನಡಿಗರು ಕನರ್ಾಟಕಕ್ಕೆ ಮಾತ್ರ ಸೀಮಿತವಲ್ಲ, ಅದರಾಚೆಗೂ ತಮ್ಮ ಅಂತರ್ಶಕ್ತಿಯನ್ನು ಹರಿಯ ಬಿಟ್ಟವರು. ಪ್ರಾಜ್ಞತೆಯ ದೃಷ್ಠಿ ನೆಟ್ಟು ಜಗ ಬೆಳಗಿದವರು. ಸಾಹಿತ್ಯ, ಕಲೆ, ವಾಸ್ತುಶಿಲ್ಪಕತೆಗೆ ಕರುನಾಡು ಇಡೀ ವಿಶ್ವವನ್ನೇ ತನ್ನೆಡೆಗೆ ಸೆಳೆದಿದ್ದು ನಮಗೆಲ್ಲರಿಗೂ ಗೊತ್ತೇಯಿದೆ. ಅಂತಹ ಒಂದು ಅಭೂತಪೂರ್ವ ಸಾಧನೆ ಮಾಡಿ ಜಾಗತಿಕ ಸಾಹಿತ್ಯದ ಕಾದಂಬರಿ (ನಾವೆಲ್) ಪ್ರಕಾರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೀತರ್ಿ ರಾಜಾರಾಯರಿಗೆ ಸಲ್ಲುತ್ತದೆ. ಇಂಗ್ಲೀಷ್ ಮತ್ತು ಫ್ರೆಂಚ್ ಸಾಹಿತ್ಯದಲ್ಲಿ ಬಿರುಗಾಳಿ ಎಬ್ಬಿಸಿ ಅಲ್ಲಿನ ಓದುಗರ ಮನದಲ್ಲಿ ನೆಲೆನಿಂತ ಇವರು ಕನ್ನಡಿಗರೆನ್ನುವುದರ ಜೊತೆಗೆ ಹಾಸನದವರೆಂಬ ವಿಷಯ ನಮ್ಮನ್ನೆಲ್ಲಾ ಬಿಗುಮಾನದಲ್ಲಿ ತೇಲಿಸುತ್ತದೆ.
1909 ನವಂಬರ್ 21 ರಂದು ಹಾಸನದಲ್ಲಿ ಜನಿಸಿದ ಇವರು ಹಾಸನದ ರಾಜಾರಾವ್ ಎಂದೇ ಪ್ರಸಿದ್ದರು. ಇವರು ಜನಿಸಿದ ದಿನದಂದೇ ಹಾಸನಕ್ಕೆ ಮೈಸೂರಿನ ಮಹಾರಾಜರು ಬೇಟಿಯಿತ್ತದ್ದರಿಂದ ಇವರಿಗೆ ರಾಜಾ ಎಂಬುದು ಸೇರ್ಪಡೆಯಾಯಿತಂತೆ. ಬಾಲ್ಯದಲ್ಲಿಯೇ ಇವರ ಮಾತಾ ಪಿತೃಗಳು ರಾಮಾಯಾಣ, ಮಹಾಭಾರತ, ಪುರಾಣ ಪುಣ್ಯಕಥೆಗಳನ್ನು ಹೇಳುತ್ತಾ ಅದರಲ್ಲಿ ಭಾರತೀಯ ಸಂಸ್ಕೃತಿ ಹೇಗೆ ಮೇಳೈಸಿಕೊಂಡಿದೆ ಎಂಬುದನ್ನು ತಿಳಿಸುತ್ತಾ ಆದರ್ಶ, ಶ್ರದ್ಧೆ, ಹೃದಯ ವೈಶಾಲ್ಯತೆಗಳನ್ನು ಭಿತ್ತಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ವಯೋಮಾನದಲ್ಲಿಯೇ ರಾಜಾರಾಯರ ಮನಸ್ಸಿನ ಮೇಲೆ ಭಾರತೀಯ ಸಾಂಸ್ಕೃತಿಕ ಪರಂಪರೆ ಬಹಳವೇ ಪ್ರಭಾವ ಬೀರಿದ್ದರಿಂದ ಮುಂದೆ ಅವರ ಸಾಹಿತ್ಯ ರಚನೆಯಲ್ಲಿ ಸಹಜವಾಗಿಯೇ ಪ್ರಜ್ವಲಿತಗೊಂಡವು. 1938 ರಲ್ಲಿ ಬಂದ ಇವರ ಕಾಂತಾಪುರ ಎಂಬ ಕಾದಂಬರಿಯು ಇವರಿಗೆ ಜಾಗತಿಕ ಮನ್ನಣೆ ತಂದು ಕೊಟ್ಟಿತೆನ್ನಬಹುದು. ಭಾರತದ ಆಷರ್ೇಯ ಸಂಸ್ಕೃತಿ ಪರಂಪರೆಗಳಲ್ಲಿ ಅಗಾಧವಾದ ಶ್ರದ್ಧೆ, ನಂಬಿಕೆಯಿಟ್ಟುಕೊಂಡಿದ್ದ ಇವರ ಬರವಣಿಗೆಯ ಬದುಕನ್ನು ಒಳಹೊಕ್ಕು ನೋಡುವ ಶೈಲಿ ಅಮೋಘವಾದುದು. ಅವರ ಸಾಹಿತ್ಯದಲ್ಲಿ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾ ಜಾಗತಿಕವಾಗಿ ಬೆಳಗಿಸಿದವರು. ದೀನ ದಲಿತರಲ್ಲಿ ತಾವು ಕಂಡಂತಹ ಅತ್ಯಂತ ಉತ್ಕೃಷ್ಟ ಮಾನವೀಯ ಅಂಶಗಳನ್ನು, ಶ್ರದ್ಧಾಗುಣಗಳನ್ನು ತಮ್ಮ ಬರವಣಿಗೆಯಲ್ಲಿ ಪರಮೋಚ್ಛ ಸ್ಥಾನ ನೀಡಿ ಆದರ್ಶ ಮಯವಾಗಿಸಿಕೊಂಡಿದ್ದಾರೆ.
ಇಂಗ್ಲೀಷ್ ಮತ್ತು ಇತಿಹಾಸಗಳಲ್ಲಿ ವಿಶೇಷ ಆಸಕ್ತಿಯಿದ್ದ ಇವರು ಇವುಗಳಲ್ಲಿಯೇ ಸ್ನಾತಕೋತ್ತರ ಉನ್ನತ ಶಿಕ್ಷಣ ಪಡೆದು ಸಂಶೋಧನೆಗಾಗಿ ಫ್ರಾನ್ಸ್ಗೆ ತೆರಳುತ್ತಾರೆ. ಅಲ್ಲಿ ವಿದ್ಯಾಭ್ಯಾಸಕ್ಕಿಂತ ಸಾಹಿತ್ಯ ಕ್ಷೇತ್ರವೇ ಇವರನ್ನು ಹೆಚ್ಚು ಆಕರ್ಷಣೆ ಮಾಡುತ್ತದೆ. ಇದೇ ಸಂದರ್ಭದಲ್ಲಿ 1931 ರಲ್ಲಿ ಕೆಮಿಲ್ಲೆ ಮೌಲಿ ಎಂಬ ಫ್ರೆಂಚ್ ಮಹಿಳೆಯನ್ನು ವಿವಾಹವಾದರು. ರಾಜಾರಾಯರ ಜೀವನದ ಬಹುಭಾಗ ಪಾಶ್ಚಾತ್ಯ ದೇಶಗಳಲ್ಲಿಯೇ ಕಳೆದು ಹೋಗಿದೆ. ಕನ್ನಡ, ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಪಾರಂಗತರಾದ ರಾಜಾರಾಯರು ಸಾಹಿತ್ಯ ರಚನೆಗೆ ಆಯ್ದುಕೊಂಡದ್ದು ಇಂಗ್ಲೀಷ್ ಮತ್ತು ಫ್ರೆಂಚನ್ನು ಮಾತ್ರ! ಆದರೂ ಇವರ ಸಾಹಿತ್ಯ ಚೇತನ ನಿರಂತರವಾಗಿ ಸ್ಫೂತರ್ಿ ಪಡೆದದ್ದು ಭಾರತೀಯ ಪರಂಪರೆಯಿಂದ. ಭಾರತೀಯ ಪರಂಪರೆಯ ಸಂಪ್ರದಾಯದ ಗರ್ಭದಲ್ಲಿ ಶಾಶ್ವತ ಮಾನವೀಯ ಮೌಲ್ಯಗಳು ಅಡಗಿವೆ ಎಂಬುದು ರಾಜಾರಾಯರ ನಿಲುವು. ಈ ನಿಲುವಿನ ಮುಂಬೆಳಕಲ್ಲಿ ತಮ್ಮ ಸಾಹಿತ್ಯ ತೇರನ್ನು ಎಳೆತಂದರು. ಬರವಣಿಗೆಯನ್ನೇ ಜೀವಿತದ ಅತ್ಯಮೂಲ್ಯ ಕಾಯಕವೆಂದು ಪರಿಗಣಿಸಿದ್ದ ಇವರಿಗೆ ಭಾರತೀಯ ಮೂಲ ಪರಂಪರೆಗಳಲ್ಲೊಂದಾದ ವೇದಾಂತ ತತ್ವಶಾಸ್ತ್ರಗಳೇ ಉಸಿರಾಗಿ ಬೆಸೆದುಕೊಂಡಿದ್ದವೆಂಬುದು ಗಮನಾರ್ಹ. 1965 ರಲ್ಲಿ ಆಸ್ಟಿನ್ನ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿಯೇ ಜೋನ್ಸ್ ಎಂಬುವವರನ್ನು ವಿವಾಹವಾಗುತ್ತಾರೆ. 1960 ರಲ್ಲಿ ಬಂದ ದಿಕ್ಯಾಟ್ ಅಂಡ್ ಷೇಕ್ಸ್ಪಿಯರ್ ಹಾಗೂ 1965ರಲ್ಲಿ ಬಂದ ಎ ಟೇಲ್ ಆಫ್ ಇಂಡಿಯಾ ಎಂಬ ಕಾದಂಬರಿಗಳು ದಾಖಲೆಯ ಮಾರಾಟವಾದವು. ಅಂತೆಯೇ ಉನ್ನತ ಕೀತರ್ಿಯನ್ನು ತಂದುಕೊಟ್ಟವು. ಇಂಗ್ಲೀಷ್ ಸಾಹಿತ್ಯದಲ್ಲಿ ಅದ್ವಿತೀಯ ಸಾಧನೆಗೈದ ಬೆರಳೆಣಿಕೆಯ ಭಾರತೀಯ ಬರಹಗಾರರಲ್ಲಿ ಹಾಸನದ ರಾಜಾರಾಯರು ಒಬ್ಬರೆಂಬುದು ಹೆಮ್ಮೆಯ ಸಂಗತಿ. ಕೇವಲ ಕಾದಂಬರಿಗೆ ಮಾತ್ರ ಸೀಮಿತವಾಗದ ರಾಜಾರಾಯರು ಭಾರತ ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ಅಂದರೆ 1947ರಲ್ಲಿಯೇ ದಿ ಕೌ ಆಫ್ ದಿ ಬ್ಯಾರಿಕೇಡ್ ಅಂಡ್ ಅದರ್ ಸ್ಟೋರಿಸ್ ಎಂಬ ಸಣ್ಣ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಜಾಗತಿಕ ಪ್ರತಿಷ್ಠಿತ ಇಂಗ್ಲೀಷ್ ಪತ್ರಿಕೆಗಳಲ್ಲಿ ಇವರ ಬರಹ ಹಾಗೂ ಕಥೆಗಳು ಪ್ರಕಟಕೊಂಡಿವೆ. 1948ರಲ್ಲಿ ಖ್ಯಾತ ಬರಹಗಾರರಾದ ಇಕ್ಬಾಲ್ ಸಿಂಗ್ರೊಡನೆ ವಿದರ್ ಇಂಡಿಯಾ ಎಂಬ ಗ್ರಂಥವನ್ನು ಪ್ರಕಟಿಸಿದ ಕೀತರ್ಿ ರಾಜಾರಾಯರದು.
ರಾಜಾರಾಯರಿಗೆ ಜಾಗತಿಕ ಮಟ್ಟದಲ್ಲಿ ಉತ್ಕೃಷ್ಟ ಮನ್ನಣೆ ತಂದುಕೊಟ್ಟದ್ದು ಅವರ ಕಾದಂಬರಿಗಳು. ಅದರಲ್ಲೂ ಕಾಂತಾಪುರ ಎಂದರೆ ಅತಿಶಯೋಕ್ತಿಯಾಗಲಾರದು. ಈ ಕಾದಂಬರಿಯು ಜನ್ಮ ತಾಳಲು ಪರೋಕ್ಷವಾಗಿ ಗಾಂಧಿ ಕಾರಣವೆನ್ನಬಹುದು. ಕಾಂತಾಪುರ ಎಂಬುದು ಒಂದು ಚಿಕ್ಕ ಹಳ್ಳಿ. ಗಾಂಧಿಯ ಅಹಿಂಸಾತ್ಮಕ ಚಳುವಳಿ ಹಾಗೂ ಸರ್ವ ಸಮಾನತೆಯ ಘೋಷಣಾ ವಾಕ್ಯವು ಬಹುಶಃ ಈ ಹಳ್ಳಿಯನ್ನು ಶತಮಾನದ ನಿದ್ರೆಯಿಂದ ಎಚ್ಚರಿಸಿ ಸಾಮಾಜಿಕ ಶೋಷಣೆಯಿಂದ ಮೈಕೊಡವಿ ಏಳುವಂತೆ ಮಾಡಿತೆನ್ನಬಹುದು. ಗಾಂಧೀ ತಾತ್ವಿಕತೆಯ ಪ್ರಭಾವದಿಂದ ಇಡೀ ಹಳ್ಳಿಯೇ ಒಗ್ಗಟ್ಟಿನ ರೂಪ ತಾಳುತ್ತದೆ. ಪ್ರಸ್ತುತ ಕಾದಂಬರಿಯಲ್ಲಿ ಮೂತರ್ಿ, ಪಟೇಲ ರಂಗೇಗೌಡ, ಭಟ್ಟ ಮೊದಲಾದ ಪಾತ್ರಗಳು ತಮ್ಮದೇ ನಿಟ್ಟಿನಲ್ಲಿ ಗಮನ ಸೆಳೆಯುತ್ತವೆ. ಇಲ್ಲಿ ಬಹುಮುಖ್ಯವಾಗಿ ನಾವು ಗಮನಿಸಬೇಕಾದುದ್ದು ಹಾಸನದ ಗ್ರಾಮ್ಯ ಸೊಗಡು. ಇಲ್ಲಿನ ಸಂಸ್ಕೃತಿ, ಸಂಪ್ರದಾಯ, ಹೋರಾಟಗಳಿಗೆ ಜಾಗತಿಕ ಮೌಲ್ಯ ತಂದು ಕೊಟ್ಟ ಕೀತರ್ಿ ರಾಜಾರಾಯರಿಗೆ ಸಲ್ಲುತ್ತದೆ. ಕಾಂತಾಪುರದಲ್ಲಿ ಬರುವ ಪ್ರಮುಖ ಆದರ್ಶಮಯವಾದ ಪಾತ್ರ ಮೂತರ್ಿ. ಅದರಲ್ಲಿ ಲೇಖಕರೇ ತನ್ಮಯರಾಗಿರುವುದನ್ನು ಕಾಣಬಹುದಾಗಿದೆ. ಜೊತೆ ಜೊತೆಗೆ ಪಾತ್ರಕ್ಕೂ ಮತ್ತು ಪರಿಸರದ ನಡುವಿನ ಕಂದರವನ್ನು ಗುರುತಿಸಿರುವ ಲೇಖಕರ ಪ್ರಾಮಾಣಿಕತೆಗೆ ಒಂದು ಸಲಾಂ. ಪಾತ್ರಗಳ ಅಂತರಂಗಿಕ ವಿಶ್ಲೇಷಣೆ ಸಂದರ್ಭದಲ್ಲಿ ಲೇಖಕರು ತಮ್ಮ ಭಾವನ ತುಮುಲಗಳನ್ನು ಹೊರಗೆಡವಿದ ರೀತಿ ಅಮೋಘವಾಗಿದೆ. ಇಲ್ಲಿ ನಿವರ್ಿಕಾರವಾಗಿ ಪಾತ್ರಗಳನ್ನು ಕಟ್ಟಿ ಕೊಟ್ಟಿದ್ದಾರೆ. ಮಾನವೀಯ ನೆಲೆಗಳನ್ನು ಎಲ್ಲೆಲ್ಲಿಯೂ ಒಡಮೂಡಿಸಿದ್ದಾರೆ.
ಕಾಂತಾಪುರ ಕಾದಂಬರಿಯು ಸರಳವಾಗಿ ಕಂಡರೂ ಓದುಗರನ್ನು ಆತ್ಯಾಕರ್ಷಕವಾಗಿ ಸೆಳೆಯುತ್ತಾ ಕೌತುಕತೆಯನ್ನು ಕಾಯ್ದುಕೊಂಡು ಸಾಗುತ್ತದೆ. ಇಲ್ಲಿ ಕಥೆಗಿಂತಲೂ ರಾಜಾರಾಯರ ಬೌದ್ಧಿಕ ಶಕ್ತಿಯ ಚಮತ್ಕಾರ ಅನಾವರಣಗೊಂಡಿರುವುದು ವಿಶೇಷ. ಭಾರತೀಯ ಪರಂಪರೆಯ ಧೀ ಶಕ್ತಿಯಂತೆ ತೋರುವ ಈ ಕಾದಂಬರಿಯು ಸಂವೇದನಾ ಹಾಗೂ ಸೃಜನಾತ್ಮಾಕ ಬರವಣಿಗೆಯಿಂದ ಕೂಡ್ಡಿದ್ದು, ಜಗತ್ತಿಗೆ ಭಿನ್ನವಾದ ಸಂಸ್ಕೃತಿಯನ್ನು ಪರಿಚಯಿಸುವಲ್ಲಿ ಸಫಲವಾಗಿದೆ. ಹಾಗೇ ನೋಡಿದರೆ ಇಂತಹ ಸಾಧನೆಗೈದ ಮೊದಲ ಭಾರತೀಯ ರಾಜಾರಾಯರೆನ್ನಬಹುದು.
ಕನ್ನಡ ನುಡಿಯ ಗತ್ತು, ಗಮ್ಮತ್ತು, ಜಾಯಮಾನ, ಏರಿಳಿತಗಳನ್ನು, ತಲ್ಲಣಗಳನ್ನು ಆಶ್ಚರ್ಯವೆನಿಸುವಷ್ಟು ಸಹಜವಾಗಿ ಆಂಗ್ಲ ಭಾಷೆಯಲ್ಲಿ ಪಡಿ ಮೂಡಿಸಿದ್ದಾರೆ. ಆದ್ದರಿಂದಲೇ ಪ್ರಸಿದ್ಧ ಇಂಗ್ಲೀಷ್ ಲೇಖಕರಾದ ಇ.ಎಂ. ಫಾರಸ್ಟರ್ ಕಾಂತಾಪುರ ಕಾದಂಬರಿ ಓದಿ ಒಂದು ಕಡೆ ಹೀಗೆ ಹೇಳಿದ್ದಾರೆ. ಕಾಂತಾಪುರ ಒಂದು ಉತ್ತಮ ಕಾದಂಬರಿ, ಭಾರತೀಯ ಲೇಖಕನೊಬ್ಬನಿಂದ ಇಂಗ್ಲೀಷ್ ಭಾಷೆಯಲ್ಲಿ ಇದುವರೆವಿಗೂ ಇಂಥ ಕೃತಿ ಬಂದೇ ಇಲ್ಲ.
ದಿ ಸಪರ್ೆಂಟ್ ಅಂಡ್ ದಿ ರೋಪ್ ರಾಜಾರಾಯರ ಕಾಂತಾಪುರದ ನಂತರ ಬಂದ ಮಹತ್ವದ ಕಾದಂಬರಿಯೆನ್ನಬಹುದು. ಕಾಂತಾಪುರದಲ್ಲಿನ ಪ್ರಯೋಗಶೀಲತೆ, ವಿಚಾರ ಹೂರಣ, ಒಲವು ನಿಲುವುಗಳನ್ನು ಈ ಕಾದಂಬರಿಯಲ್ಲಿ ಹೆಚ್ಚಿನ ವೈಶಾಲ್ಯತೆಯನ್ನು ಪಡೆದುಕೊಂಡಿವೆ ಎನ್ನಬಹುದು. ಈ ಕಾದಂಬರಿಯು ಭಾರತ ಹಾಗೂ ಫ್ರೆಂಚ್ ಸಂಸ್ಕೃತಿಯನ್ನು ಮೇಳೈಸಿದೆ. ಭಾರತೀಯನಾದ ರಾಮಸ್ವಾಮಿ ಹಾಗೂ ಫ್ರೆಂಚ್ ಮಹಿಳೆಯಾದ ಮ್ಯಾಡಲೀನರ ನಡುವಣ ಕಥಾ ಹಂದರವನ್ನೊಳಗೊಂಡು ಈ ಕಾದಂಬರಿಯು ಪೂರ್ವ ಪಶ್ಚಿಮಗಳ ಮಿಲನವೆನ್ನುವಂತೆ ಮೂಡಿಬಂದಿದೆ. ಹೀಗೆ ರಾಜಾರಾಯರು ಭಾರತೀಯ ಸಂಸ್ಕೃತಿ ಪರಂಪರೆಯ ಜೊತೆ ಜೊತೆಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ಮಿಳಿತಗೊಳಿಸಿ ಪ್ರಾಂಜಲತೆ ಕಂಡವರು.
ರಾಜಾರಾಯರನ್ನು ಕುರಿತಂತೆ, ಇವರ ಸಾಹಿತ್ಯ ಕುರಿತಂತೆ 1972 ರಲ್ಲಿ ಸಿ.ಡಿ. ನರಸಿಂಹಯ್ಯನವರು ರಾಜಾರಾವ್ ಎ ಕ್ರಿಟಿಕಲ್ ಸ್ಟಡಿ ಆಫ್ ಹಿಸ್ ವಕ್ರ್ಸ ಎಂಬ ಪುಸ್ತಕದಲ್ಲಿ ಅದ್ಭುತವಾಗಿ ವಿಮಶರ್ಿಸಿ, ವಿಶ್ಲೇಷಿಸಿದ್ದಾರೆ. ಹಾಗೆಯೇ ಅದೇ ವರ್ಷದಲ್ಲಿ ಬಂದ ಎಂ.ಎಸ್. ನಾಯಕ್ರವರ ರಾಜಾರಾವ್ ಎಂಬ ಪುಸ್ತಕದಲ್ಲಿ ರಾಜಾರಾಯರ ಧೀಮಂತ ವ್ಯಕ್ತಿತ್ವವನ್ನು ಕಾಣುತ್ತೇವೆ.
1964ರಲ್ಲಿ ರಾಜಾರಾಯರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1969ರಲ್ಲಿ ಭಾರತ ಸಕರ್ಾರ ಇವರ ಸೇವೇಗಾಗಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ
ಜಾನಪದ ಗಾರುಡಿಗ ಮತಿಘಟ್ಟ ಕೃಷ್ಣಮೂರ್ತಿ
ಹಾಸನ ಜಿಲ್ಲೆ ಬೇಲೂರು ತಾಲೂಕಿಗೆ ಸೇರಿದ್ದು ಮತಿಘಟ್ಟ. 6ಕಿಲೋಮೀಟರ್ ದೂರದಲ್ಲಿರುವ ಹಳೆಬೀಡು ಹಾಗೆಯೇ ಅದಕ್ಕೆ ಹೊಂದಿಕೊಂಡಂತ್ತಿರುವ ಬೇಲೂರು ವಿಶ್ವ ಪ್ರಸಿದ್ಧಿ ಪಡೆದಂತೆ ಈ ಹಳ್ಳಿಯೂ ಸಹ ಕನ್ನಡ ಜಾನಪದ ಕ್ಷೇತ್ರದಲ್ಲಿ ತನ್ನದೇ ಮುದ್ರೆಯೊತ್ತಿದೆ. ಅದರ ರುವಾರಿಗಳೇ ನಮ್ಮ ಕೃಷ್ಣಮೂರ್ತಿಯವರು. ಈ ಹಳ್ಳಿಯಲ್ಲಿ ಕ್ರಿ.ಶ.1912ರ ಜುಲೈ 12ರಂದು ಜನಿಸಿದರು. ತಂದೆ ಲಿಂಗಣಯ್ಯ ತಾಯಿ ಚೆನ್ನಮ್ಮ.
ಬಾಲ್ಯದಿಂದಲೇ ವಿಭಿನ್ನ ವ್ಯಕ್ತಿತ್ವ ರೂಪಿಸಿಕೊಂಡ ಕೃಷ್ಣಮೂರ್ತಿಯವರದು ದೇಶ-ಭಾಷೆ, ನಾಡು-ನುಡಿಗಾಗಿ ಹಾತೊರೆದ ಜೀವ. ಪ್ರಾಥಮಿಕ ಹಂತದಲ್ಲಿದ್ದಾಗಲೇ ಆಗ ಭಾರತದಾದ್ಯಂತ ಸ್ವಾತಂತ್ರ್ಯ ಚಳುವಳಿಗಳ ತೀವ್ರತೆ ಎಲ್ಲೆಂದರಲ್ಲಿ ಹಬ್ಬಿ ಶಾಲಾ-ಕಾಲೇಜು ಮಕ್ಕಳನ್ನು ತನ್ನಡೆಗೆ ಸೆಳೆದಿತ್ತು.
ಕೃಷ್ಣಮೂತರ್ಿಯವರ ಮನಸ್ಸು ಅದರೆಡೆ ಆತೊರೆದಿತ್ತು. ಕೂಲಿಮಠದಲ್ಲಿ ಮರಳಿನ ಮೆಲೆ ಅಕ್ಷರಾಭ್ಯಾಸ ಮಾಡಿ ಶಿಕ್ಷಣ ಪಡೆದರು. ಮತಿಘಟ್ಟ ಓಚೋ ದೊಡ್ಡಯ್ಯನವರು ಕೃಷ್ಣಮೂರ್ತಿಗಳ ಗುರುಗಳು. ಬೆಳವಾಡಿ, ಬೇಲೂರು, ಚಿಕ್ಕಮಗಳೂರಿನಲ್ಲಿ ಹಂತ ಹಂತವಾಗಿ ಶಿಕ್ಷಣ ಪಡೆದರು.
ಬೇಲೂರಿನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆಯುವ ಹಂತದಲ್ಲಿ ಮಹಾತ್ಮಗಾಂಧೀಜಿ ಸ್ವಾತಂತ್ರ್ಯ ಹೋರಾಟ ಚಳವಳಿ ನಿಮಿತ್ತ ಬಂದಾಗ ಅವರನ್ನು ಖುದ್ದಾಗಿ ಭೇಟಿ ಮಾಡಿದರು. ನಂತರ ಅವರ ತತ್ತ್ವಗಳಿಗೆ ಮಾರು ಹೋಗಿ, ಸಾಂಪ್ರದಾಯಿಕ ಶಿಕ್ಷಣದಿಂದ ವಿಮುಖಗೊಂಡು ಹೋರಾಟ ಚಳವಳಿಗಳತ್ತ ಮುಖ ಮಾಡಿದರು. ಖಾದಿ ಧರಿಸಿ ದೇಶಭಕ್ತಿಯ ಬಗ್ಗೆ ಎಲ್ಲರಲ್ಲೂ ಬೀಜ ಬಿತ್ತನೆ ತೊಡಗಿದರು. ಹಳ್ಳಿಗೆ ಹಿಂದಿರುಗಿ ಮರಳಿ ಮೂಲಕಾಯಕವಾದ ವ್ಯವಸಾಯ ಮಾಡುತ್ತಾ ಖಾದಿ ಪ್ರಚಾರ ಮಾಡುತ್ತಾ ಅನಕ್ಷರಸ್ತರಿಗೆ ವಯಸ್ಕರ ಶಿಕ್ಷಣ ನೀಡ ತೊಡಗಿದರು.
1926 ರಲ್ಲಿ ಚಿಕ್ಕಮಗಳೂರಿನಲ್ಲಿ ಇವರು ಪ್ರೌಢಾಶಿಕ್ಷಣ ಪಡೆಯುವ ಸಂಬರ್ಧದಲ್ಲಿ ಅಲ್ಲಿಗೆ ಮಾಸ್ತಿ ಮತ್ತು ಬೇಂದ್ರೆಯವರು ಆಗಮಿಸಿದ್ದರು.
ಅವರೀರ್ವ ಕವಿ ದಿಗ್ಗಜರು ಭಾರತೀಯ ಮೂಲ ಸಂಸ್ಕೃತಿಯ ಪಡಿನೆಳಲಾದ ಗರತಿಯ ಹಾಡು, ಜನಪದ ಹಾಡುಗಳ ಬಗ್ಗೆ ನೀಡಿದ ಜಾಗೃತಿ ಉಪನ್ಯಾಸ ಕೃಷ್ಣಮೂರ್ತಿಯವರ ಮೇಲೆ ತೀವ್ರ ಪ್ರಭಾವ ಬೀರಿತೆನ್ನಬಹುದು.
ಬಾಲ್ಯದಿಂದಲೇ ತನ್ನ ತಾಯಿ ಹೇಳುತ್ತಿದ್ದ ಸಂಪ್ರದಾಯದ ಹಾಡುಗಳನ್ನು ಆಸಕ್ತಿಯಿಂದ ಆಲಿಸುತ್ತಾ ಹಲವಾರು ಪದಗಳನ್ನು ಕಂಠಪಾಠ ಮಾಡಿದ್ದರು ಕೃಷ್ಣಮೂರ್ತಿ ಮಾಸ್ತಿ-ಬೇಂದ್ರೆಯವರ ಮಾತಿನಂತೆ ಒಸಗೆ, ಸೋಬಾನ, ಬೀಸುವ ಕಲ್ಲಿನ ಪದ ಮುಂತಾದ ಪದಗಳನ್ನು ಹಳ್ಳಿ ಮಹಿಳೆಯರಿಂದ ಹಾಡಿಸಿ, ಬರೆದು ದಾಖಲಿಸುತ್ತಾ ಸಂಗ್ರಹ ಮಾಡ ತೊಡಗಿದರು.
ಬೀಸುವ ಕಲ್ಲಿಗೆ ದೇಶಾವ ತಿರುಗ್ಯಾರೇ
ಸಕಲ ಸಂಪನರಾ ಮಗಳಿಗೇ-ರಾಜ ಬಣ್ಣದ ಹಕ್ಕಿ
ಸಕಲ ಸಂಪನರಾ ಮಗಳು ನೀಲವ್ವಾಗೇ
ದೇಶ ತಿರುಗ್ಯಾರೇ ಬಸವಯ್ಯ ರಾಜ ಬಣ್ಣದ ಹಕ್ಕಿ
* * *
ಶಿವನೇ ಗುರುವೆಂದು ಹಿಡಿದೇವು ರಾಗೀಕಲ್ಲಾ
ಶಿವನೇ ಕೊಡು ನಮಗೆ ಮತಿಯ ಸಂಗನ ಬಸವಾ
ಗುರುವೇ ಕೊಡು ನಮಗೆ ಸುಖಗಳ.
* * *
ಬಾಲವ್ವ ಮೈ ನೆರೆತು ಬಾಗಿಲಾದಗೈದಾಳೆ
ದೂರ ಎದ್ದಾವೆ ಮಳಿಮಾಡ-ಅವರಣ್ಣ
ಮುತ್ತಿನ ಡೇರ್ಯಾವ ಹೊಡಿಸ್ಸಾನೆ.
ಹೀಗೆ ಕೃಷ್ಣಮೂರ್ತಿಯವರು ಕನ್ನಡ ನಾಡಿನ ಜನಪದ ಸಂಸ್ಕೃತಿ ಕ್ಷೀಣಿಸುವ ಸಂದರ್ಭದಲ್ಲಿ ನೂರಾರು ಕಿಲೋಮೀಟರ್ಗಳ ಕಾಲುದಾರಿ ಸವೆಸಿ, ಹಳ್ಳಿಗಳನ್ನು ಸುತ್ತಿ.ಹಾಡುಗಾರರನ್ನು ಹುಡುಕಿ ಅವರಿಂದ ಹಾಡಿಸಿ ಬರೆದು ಸಂಗ್ರಹಿಸಿ ನಮಗಿಂದು ಜನಪದ ರಾಶಿಯನ್ನು ನೀಡಿ ಹೋಗಿದ್ದಾರೆ.
1929 ರಿಂದ 31 ರ ವರೆಗೆ ಅಣ್ಣ ಎಲ್. ಗುಂಡಪ್ಪನವರು ಬೆಂಗಳೂರಿನಲ್ಲಿ ಅಧ್ಯಾಪಕರಾಗಿದ್ದ ಸಂದರ್ಭದಲ್ಲಿ ಅಣ್ಣನ ಮನೆಯಲ್ಲೇ ಉಳಿದು ಇಂಟರ್ಮೀಡಿಯೇಟ್ ಮುಗಿಸಿದ ಕೃಷ್ಣಮೂರ್ತಿಯವರಿಗೆ ಪ್ರೊ. ಎಸ್.ವಿ. ಪರಮೇಶ್ವರಭಟ್ಟರು ಸಹಪಾಠಿಯಾಗಿದ್ದರು. ಅವರು ಕಾಲೇಜು ಹಂತದಲ್ಲೇ ಹಲವಾರು ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದರು. ಅಂದೇ ಇವರಿಗೂ ಸಾಹಿತ್ಯದ ಘೀಳು ಅಂಟಿತೆನ್ನಬಹುದು.
ಸೃಜನಾತ್ಮಕ ಮತ್ತು ಸೃಜನೇತರ ಸಾಹಿತ್ಯ ಪ್ರಕಾರಗಳೆರಡರಲ್ಲೂ ತೊಡಗಿಸಿಕೊಂಡು ಕೃಷ್ಣಮೂರ್ತಿಯವರು ಪತ್ರಿಕಾ ರಂಗದಲ್ಲಿಯೂ ಸ್ಮರಣೀಯ ಕಾಯಕ ಮಾಡಿದ್ದಾರೆ. ಎಲ್. ಗುಂಡಪ್ಪನವರ ಮಾರ್ಗದರ್ಶನದಲ್ಲಿ ಮಾಸ್ತಿ, ಬಿ.ಎಂ.ಶ್ರೀ, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮರ ಪ್ರಭಾವಕ್ಕೊಳಗಾದ ಕೃಷ್ಣಾಮೂರ್ತಿ ಜನಪದ ಸಾಹಿತ್ಯದಲ್ಲಿ ಸಕ್ರಿಯರಾಗಿ ಸಂಗ್ರಹ ಕಾರ್ಯದಲ್ಲಿ ಕ್ರಿಯಾಶೀಲರಾದರು. ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಪ್ರಾದೇಶಿಕ ಭಿನ್ನತೆಗನುಗುಣವಾಗಿ ಸಂಗ್ರಹಿಸ ತೊಡಗಿದರು. ಬೆಂಗಳೂರಿನ ತಿರುಮಲೆ ತಾತಾಚಾರ್ಯರ ವಿಶ್ವಕರ್ನಾಟಕ ವಾರಪತ್ರಿಕೆಯಲ್ಲಿ ಕೆಲಸ ಮಾಡಿದರು. ನಂತರ ಜಿ.ವಿ.ದೊಡ್ಡವೀರಪ್ಪನವರ ಮೈಸೂರು ಇನ್ಷೂರೆನ್ಸ್ ಕಂಪನಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದ ಕೃಷ್ಣಮೂತರ್ಿಯವರು 1940ರಲ್ಲಿ ಮಯೂರ ಮಾಸಪತ್ರಿಕೆ ಪ್ರಾರಂಭಿಸಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು.
ಇಷ್ಟಕ್ಕೆ ಸುಮ್ಮನಾಗದ ಇವರು ತಾಯಿನಾಡು, ಕೈಲಾಸ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಜೊತೆಗೆ ತಾವು ಸಂಗ್ರಹಿಸಿದ ಸಂಪ್ರದಾಯದ ಹಾಡುಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದರು.
1944ರಲ್ಲಿ ಪ್ರಕಟಿಸಿದ 'ನಾಡಪದಗಳು' ಕೃತಿ ಜನಮನ್ನಣೆಗಳಿಸಿದ್ದಲ್ಲದೆ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಮೆಚ್ಚುಗೆಯ ಬಹುಮಾನ ಗಳಿಸಿತು. 1948ರಲ್ಲಿ ಪ್ರಕಟವಾದ ಕಳಸಪುರದ ಹುಡುಗರು ಎಂಬ ಮಕ್ಕಳ ಕಾದಂಬರಿಯು ಇವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಭಧ್ರವಾಗಿ ನೆಲೆನಿಲ್ಲುವಂತೆ ಮಾಡಿತೆನ್ನಬಹುದು. ಆದ್ದರಿಂದ ಆಕ್ರತಿಯ ಸುಮಾರು ಒಂಬತ್ತು ಮುದ್ರಣ ಕಂಡಿದೆ.ಹಾಗೆಯೇ ಚಲನ ಚಿತ್ರವಾಗಿದೆ.
ಮರಗಿ,ಸವರ್ೂದಯ ಇತರ ಕಾದಂಬರಿಗಳು; 'ಪಚ್ಚೇತೆನೆ'-ಕಥಾಸಂಕಲನ; 'ಭರತೆಪ್ಪ ಸೊಂಟಕ್ಕೆ ಘಂಟೆ'-ಪೌರಾಣಿಕ ನಾಟಕ; ಗಂಡನ ಪೂಜೆ, ಹೊಂಬಾಳೆ, ಕಲ್ಯಾಣಿ, ಹೊಸಹಳ್ಳಿ-ನಾಟಕಗಳು; 1958ರಲ್ಲಿ ಬಂದ 'ನಮ್ಮ ಹಳ್ಳಿಯ ಹಾಡುಗಳು', 1975ರಲ್ಲಿ ಬಂದ ಸಾವಿರ ಪುಟದ ಜನಪದ, 1981 ರಲ್ಲಿ ಬಂದ 'ಗೃಹಿಣಿ ಗೀತೆಗಳು': 1991ರಲ್ಲಿ ಪ್ರಕಟಿಸಿದ 'ಹೊನ್ನ ಹೊತ್ತಿಗೆ'- ಜನಪದ ಸಂಗ್ರಹಗಳು; 2002ರಲ್ಲಿ ಬಂದ ಹಾಸನ ಜಿಲ್ಲೆಯ ಕೋಲಾಟ ಪದಗಳು ಎಂಬ ಪುಸ್ತಕ ಇಡೀ ಹಾಸನ ಜಿಲ್ಲೆಯ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡುತ್ತದೆ. 'ಏಳುಕೊಳ್ಳದ ಎಲ್ಲಮ್ಮ', 'ಶಕುನದಹಕ್ಕಿ ಮತ್ತು ಇತರ ಜನಪದ ಕಥೆಗಳು', 'ಕೆಲವು ಕಿರುಲಾವಣಿಗಳು', 'ಪಂಚತಂತ್ರದ ಕಥೆಗಳು', 'ನಾಲ್ಕು ಪತ್ರಗಳು', 'ದೇಶಾಂತರದ ನೀತಿ ಕಥೆಗಳು' ಇವು ಕೃಷ್ಣಮೂರ್ತಿಯವರ ಇತರ ಕೃತಿಗಳು.
ಬೇಲೂರು ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೃಷ್ಣಮೂರ್ತಿಯವರಿಗೆ 2002ರಲ್ಲಿ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಅಲ್ಲದೇ 'ಜನಪದ ಭೀಷ್ಮ' 'ಜನಪದ ರತ್ನ' ಬಿರುದುಗಳೂ ಸಹ ಸಂದಿವೆ. ಇವರ 'ಹೊಸಹಳ್ಳಿ' ನಾಟಕಕ್ಕೆ ಕೇಂದ್ರ ಸರ್ಕಾರದ ಬಹುಮಾನವೂ ದೊರೆತಿದೆ.
ಇಡೀ ತಮ್ಮ ಬದುಕನ್ನು ಜನಪದ ಸಾಹಿತ್ಯಕ್ಕಾಗಿ ಮೀಸಲಿಟ್ಟು ಅದಕ್ಕಾಗಿಯೇ ಸಮರ್ಪಿಸಿಕೊಂಡಿದ್ದ ಜನಪದ ಭೀಷ್ಮ ಮತಿಘಟ್ಟ ಕೃಷ್ಣಮೂರ್ತಿಯವರು 2006 ಜುಲೈ 27 ರಂದು ಇನ್ನಿಲ್ಲವಾದರು. ಆದರೆ ಅವರು ಸಂಗ್ರಹಿಸಿ ಕೊಟ್ಟ ರಾಶಿ ರಾಶಿ ಜನಪದ ನಮ್ಮ ಕಣ್ಣೆದುರಿಗೆ ಅರಗಿಸಿಕೊಳ್ಳಲಾಗದಷ್ಟಿದೆ. ಅವರ ತತ್ತ್ವಾದರ್ಶಗಳು ನಮ್ಮೊಟ್ಟಿಗೆ ಸದಾ ಜೀವಂತವಾಗಿರುತ್ತದೆ.
ಬಾಲ್ಯದಿಂದಲೇ ವಿಭಿನ್ನ ವ್ಯಕ್ತಿತ್ವ ರೂಪಿಸಿಕೊಂಡ ಕೃಷ್ಣಮೂರ್ತಿಯವರದು ದೇಶ-ಭಾಷೆ, ನಾಡು-ನುಡಿಗಾಗಿ ಹಾತೊರೆದ ಜೀವ. ಪ್ರಾಥಮಿಕ ಹಂತದಲ್ಲಿದ್ದಾಗಲೇ ಆಗ ಭಾರತದಾದ್ಯಂತ ಸ್ವಾತಂತ್ರ್ಯ ಚಳುವಳಿಗಳ ತೀವ್ರತೆ ಎಲ್ಲೆಂದರಲ್ಲಿ ಹಬ್ಬಿ ಶಾಲಾ-ಕಾಲೇಜು ಮಕ್ಕಳನ್ನು ತನ್ನಡೆಗೆ ಸೆಳೆದಿತ್ತು.
ಕೃಷ್ಣಮೂತರ್ಿಯವರ ಮನಸ್ಸು ಅದರೆಡೆ ಆತೊರೆದಿತ್ತು. ಕೂಲಿಮಠದಲ್ಲಿ ಮರಳಿನ ಮೆಲೆ ಅಕ್ಷರಾಭ್ಯಾಸ ಮಾಡಿ ಶಿಕ್ಷಣ ಪಡೆದರು. ಮತಿಘಟ್ಟ ಓಚೋ ದೊಡ್ಡಯ್ಯನವರು ಕೃಷ್ಣಮೂರ್ತಿಗಳ ಗುರುಗಳು. ಬೆಳವಾಡಿ, ಬೇಲೂರು, ಚಿಕ್ಕಮಗಳೂರಿನಲ್ಲಿ ಹಂತ ಹಂತವಾಗಿ ಶಿಕ್ಷಣ ಪಡೆದರು.
ಬೇಲೂರಿನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆಯುವ ಹಂತದಲ್ಲಿ ಮಹಾತ್ಮಗಾಂಧೀಜಿ ಸ್ವಾತಂತ್ರ್ಯ ಹೋರಾಟ ಚಳವಳಿ ನಿಮಿತ್ತ ಬಂದಾಗ ಅವರನ್ನು ಖುದ್ದಾಗಿ ಭೇಟಿ ಮಾಡಿದರು. ನಂತರ ಅವರ ತತ್ತ್ವಗಳಿಗೆ ಮಾರು ಹೋಗಿ, ಸಾಂಪ್ರದಾಯಿಕ ಶಿಕ್ಷಣದಿಂದ ವಿಮುಖಗೊಂಡು ಹೋರಾಟ ಚಳವಳಿಗಳತ್ತ ಮುಖ ಮಾಡಿದರು. ಖಾದಿ ಧರಿಸಿ ದೇಶಭಕ್ತಿಯ ಬಗ್ಗೆ ಎಲ್ಲರಲ್ಲೂ ಬೀಜ ಬಿತ್ತನೆ ತೊಡಗಿದರು. ಹಳ್ಳಿಗೆ ಹಿಂದಿರುಗಿ ಮರಳಿ ಮೂಲಕಾಯಕವಾದ ವ್ಯವಸಾಯ ಮಾಡುತ್ತಾ ಖಾದಿ ಪ್ರಚಾರ ಮಾಡುತ್ತಾ ಅನಕ್ಷರಸ್ತರಿಗೆ ವಯಸ್ಕರ ಶಿಕ್ಷಣ ನೀಡ ತೊಡಗಿದರು.
1926 ರಲ್ಲಿ ಚಿಕ್ಕಮಗಳೂರಿನಲ್ಲಿ ಇವರು ಪ್ರೌಢಾಶಿಕ್ಷಣ ಪಡೆಯುವ ಸಂಬರ್ಧದಲ್ಲಿ ಅಲ್ಲಿಗೆ ಮಾಸ್ತಿ ಮತ್ತು ಬೇಂದ್ರೆಯವರು ಆಗಮಿಸಿದ್ದರು.
ಅವರೀರ್ವ ಕವಿ ದಿಗ್ಗಜರು ಭಾರತೀಯ ಮೂಲ ಸಂಸ್ಕೃತಿಯ ಪಡಿನೆಳಲಾದ ಗರತಿಯ ಹಾಡು, ಜನಪದ ಹಾಡುಗಳ ಬಗ್ಗೆ ನೀಡಿದ ಜಾಗೃತಿ ಉಪನ್ಯಾಸ ಕೃಷ್ಣಮೂರ್ತಿಯವರ ಮೇಲೆ ತೀವ್ರ ಪ್ರಭಾವ ಬೀರಿತೆನ್ನಬಹುದು.
ಬಾಲ್ಯದಿಂದಲೇ ತನ್ನ ತಾಯಿ ಹೇಳುತ್ತಿದ್ದ ಸಂಪ್ರದಾಯದ ಹಾಡುಗಳನ್ನು ಆಸಕ್ತಿಯಿಂದ ಆಲಿಸುತ್ತಾ ಹಲವಾರು ಪದಗಳನ್ನು ಕಂಠಪಾಠ ಮಾಡಿದ್ದರು ಕೃಷ್ಣಮೂರ್ತಿ ಮಾಸ್ತಿ-ಬೇಂದ್ರೆಯವರ ಮಾತಿನಂತೆ ಒಸಗೆ, ಸೋಬಾನ, ಬೀಸುವ ಕಲ್ಲಿನ ಪದ ಮುಂತಾದ ಪದಗಳನ್ನು ಹಳ್ಳಿ ಮಹಿಳೆಯರಿಂದ ಹಾಡಿಸಿ, ಬರೆದು ದಾಖಲಿಸುತ್ತಾ ಸಂಗ್ರಹ ಮಾಡ ತೊಡಗಿದರು.
ಬೀಸುವ ಕಲ್ಲಿಗೆ ದೇಶಾವ ತಿರುಗ್ಯಾರೇ
ಸಕಲ ಸಂಪನರಾ ಮಗಳಿಗೇ-ರಾಜ ಬಣ್ಣದ ಹಕ್ಕಿ
ಸಕಲ ಸಂಪನರಾ ಮಗಳು ನೀಲವ್ವಾಗೇ
ದೇಶ ತಿರುಗ್ಯಾರೇ ಬಸವಯ್ಯ ರಾಜ ಬಣ್ಣದ ಹಕ್ಕಿ
* * *
ಶಿವನೇ ಗುರುವೆಂದು ಹಿಡಿದೇವು ರಾಗೀಕಲ್ಲಾ
ಶಿವನೇ ಕೊಡು ನಮಗೆ ಮತಿಯ ಸಂಗನ ಬಸವಾ
ಗುರುವೇ ಕೊಡು ನಮಗೆ ಸುಖಗಳ.
* * *
ಬಾಲವ್ವ ಮೈ ನೆರೆತು ಬಾಗಿಲಾದಗೈದಾಳೆ
ದೂರ ಎದ್ದಾವೆ ಮಳಿಮಾಡ-ಅವರಣ್ಣ
ಮುತ್ತಿನ ಡೇರ್ಯಾವ ಹೊಡಿಸ್ಸಾನೆ.
ಹೀಗೆ ಕೃಷ್ಣಮೂರ್ತಿಯವರು ಕನ್ನಡ ನಾಡಿನ ಜನಪದ ಸಂಸ್ಕೃತಿ ಕ್ಷೀಣಿಸುವ ಸಂದರ್ಭದಲ್ಲಿ ನೂರಾರು ಕಿಲೋಮೀಟರ್ಗಳ ಕಾಲುದಾರಿ ಸವೆಸಿ, ಹಳ್ಳಿಗಳನ್ನು ಸುತ್ತಿ.ಹಾಡುಗಾರರನ್ನು ಹುಡುಕಿ ಅವರಿಂದ ಹಾಡಿಸಿ ಬರೆದು ಸಂಗ್ರಹಿಸಿ ನಮಗಿಂದು ಜನಪದ ರಾಶಿಯನ್ನು ನೀಡಿ ಹೋಗಿದ್ದಾರೆ.
1929 ರಿಂದ 31 ರ ವರೆಗೆ ಅಣ್ಣ ಎಲ್. ಗುಂಡಪ್ಪನವರು ಬೆಂಗಳೂರಿನಲ್ಲಿ ಅಧ್ಯಾಪಕರಾಗಿದ್ದ ಸಂದರ್ಭದಲ್ಲಿ ಅಣ್ಣನ ಮನೆಯಲ್ಲೇ ಉಳಿದು ಇಂಟರ್ಮೀಡಿಯೇಟ್ ಮುಗಿಸಿದ ಕೃಷ್ಣಮೂರ್ತಿಯವರಿಗೆ ಪ್ರೊ. ಎಸ್.ವಿ. ಪರಮೇಶ್ವರಭಟ್ಟರು ಸಹಪಾಠಿಯಾಗಿದ್ದರು. ಅವರು ಕಾಲೇಜು ಹಂತದಲ್ಲೇ ಹಲವಾರು ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದರು. ಅಂದೇ ಇವರಿಗೂ ಸಾಹಿತ್ಯದ ಘೀಳು ಅಂಟಿತೆನ್ನಬಹುದು.
ಸೃಜನಾತ್ಮಕ ಮತ್ತು ಸೃಜನೇತರ ಸಾಹಿತ್ಯ ಪ್ರಕಾರಗಳೆರಡರಲ್ಲೂ ತೊಡಗಿಸಿಕೊಂಡು ಕೃಷ್ಣಮೂರ್ತಿಯವರು ಪತ್ರಿಕಾ ರಂಗದಲ್ಲಿಯೂ ಸ್ಮರಣೀಯ ಕಾಯಕ ಮಾಡಿದ್ದಾರೆ. ಎಲ್. ಗುಂಡಪ್ಪನವರ ಮಾರ್ಗದರ್ಶನದಲ್ಲಿ ಮಾಸ್ತಿ, ಬಿ.ಎಂ.ಶ್ರೀ, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮರ ಪ್ರಭಾವಕ್ಕೊಳಗಾದ ಕೃಷ್ಣಾಮೂರ್ತಿ ಜನಪದ ಸಾಹಿತ್ಯದಲ್ಲಿ ಸಕ್ರಿಯರಾಗಿ ಸಂಗ್ರಹ ಕಾರ್ಯದಲ್ಲಿ ಕ್ರಿಯಾಶೀಲರಾದರು. ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಪ್ರಾದೇಶಿಕ ಭಿನ್ನತೆಗನುಗುಣವಾಗಿ ಸಂಗ್ರಹಿಸ ತೊಡಗಿದರು. ಬೆಂಗಳೂರಿನ ತಿರುಮಲೆ ತಾತಾಚಾರ್ಯರ ವಿಶ್ವಕರ್ನಾಟಕ ವಾರಪತ್ರಿಕೆಯಲ್ಲಿ ಕೆಲಸ ಮಾಡಿದರು. ನಂತರ ಜಿ.ವಿ.ದೊಡ್ಡವೀರಪ್ಪನವರ ಮೈಸೂರು ಇನ್ಷೂರೆನ್ಸ್ ಕಂಪನಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದ ಕೃಷ್ಣಮೂತರ್ಿಯವರು 1940ರಲ್ಲಿ ಮಯೂರ ಮಾಸಪತ್ರಿಕೆ ಪ್ರಾರಂಭಿಸಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು.
ಇಷ್ಟಕ್ಕೆ ಸುಮ್ಮನಾಗದ ಇವರು ತಾಯಿನಾಡು, ಕೈಲಾಸ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಜೊತೆಗೆ ತಾವು ಸಂಗ್ರಹಿಸಿದ ಸಂಪ್ರದಾಯದ ಹಾಡುಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದರು.
1944ರಲ್ಲಿ ಪ್ರಕಟಿಸಿದ 'ನಾಡಪದಗಳು' ಕೃತಿ ಜನಮನ್ನಣೆಗಳಿಸಿದ್ದಲ್ಲದೆ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಮೆಚ್ಚುಗೆಯ ಬಹುಮಾನ ಗಳಿಸಿತು. 1948ರಲ್ಲಿ ಪ್ರಕಟವಾದ ಕಳಸಪುರದ ಹುಡುಗರು ಎಂಬ ಮಕ್ಕಳ ಕಾದಂಬರಿಯು ಇವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಭಧ್ರವಾಗಿ ನೆಲೆನಿಲ್ಲುವಂತೆ ಮಾಡಿತೆನ್ನಬಹುದು. ಆದ್ದರಿಂದ ಆಕ್ರತಿಯ ಸುಮಾರು ಒಂಬತ್ತು ಮುದ್ರಣ ಕಂಡಿದೆ.ಹಾಗೆಯೇ ಚಲನ ಚಿತ್ರವಾಗಿದೆ.
ಮರಗಿ,ಸವರ್ೂದಯ ಇತರ ಕಾದಂಬರಿಗಳು; 'ಪಚ್ಚೇತೆನೆ'-ಕಥಾಸಂಕಲನ; 'ಭರತೆಪ್ಪ ಸೊಂಟಕ್ಕೆ ಘಂಟೆ'-ಪೌರಾಣಿಕ ನಾಟಕ; ಗಂಡನ ಪೂಜೆ, ಹೊಂಬಾಳೆ, ಕಲ್ಯಾಣಿ, ಹೊಸಹಳ್ಳಿ-ನಾಟಕಗಳು; 1958ರಲ್ಲಿ ಬಂದ 'ನಮ್ಮ ಹಳ್ಳಿಯ ಹಾಡುಗಳು', 1975ರಲ್ಲಿ ಬಂದ ಸಾವಿರ ಪುಟದ ಜನಪದ, 1981 ರಲ್ಲಿ ಬಂದ 'ಗೃಹಿಣಿ ಗೀತೆಗಳು': 1991ರಲ್ಲಿ ಪ್ರಕಟಿಸಿದ 'ಹೊನ್ನ ಹೊತ್ತಿಗೆ'- ಜನಪದ ಸಂಗ್ರಹಗಳು; 2002ರಲ್ಲಿ ಬಂದ ಹಾಸನ ಜಿಲ್ಲೆಯ ಕೋಲಾಟ ಪದಗಳು ಎಂಬ ಪುಸ್ತಕ ಇಡೀ ಹಾಸನ ಜಿಲ್ಲೆಯ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡುತ್ತದೆ. 'ಏಳುಕೊಳ್ಳದ ಎಲ್ಲಮ್ಮ', 'ಶಕುನದಹಕ್ಕಿ ಮತ್ತು ಇತರ ಜನಪದ ಕಥೆಗಳು', 'ಕೆಲವು ಕಿರುಲಾವಣಿಗಳು', 'ಪಂಚತಂತ್ರದ ಕಥೆಗಳು', 'ನಾಲ್ಕು ಪತ್ರಗಳು', 'ದೇಶಾಂತರದ ನೀತಿ ಕಥೆಗಳು' ಇವು ಕೃಷ್ಣಮೂರ್ತಿಯವರ ಇತರ ಕೃತಿಗಳು.
ಬೇಲೂರು ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೃಷ್ಣಮೂರ್ತಿಯವರಿಗೆ 2002ರಲ್ಲಿ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಅಲ್ಲದೇ 'ಜನಪದ ಭೀಷ್ಮ' 'ಜನಪದ ರತ್ನ' ಬಿರುದುಗಳೂ ಸಹ ಸಂದಿವೆ. ಇವರ 'ಹೊಸಹಳ್ಳಿ' ನಾಟಕಕ್ಕೆ ಕೇಂದ್ರ ಸರ್ಕಾರದ ಬಹುಮಾನವೂ ದೊರೆತಿದೆ.
ಇಡೀ ತಮ್ಮ ಬದುಕನ್ನು ಜನಪದ ಸಾಹಿತ್ಯಕ್ಕಾಗಿ ಮೀಸಲಿಟ್ಟು ಅದಕ್ಕಾಗಿಯೇ ಸಮರ್ಪಿಸಿಕೊಂಡಿದ್ದ ಜನಪದ ಭೀಷ್ಮ ಮತಿಘಟ್ಟ ಕೃಷ್ಣಮೂರ್ತಿಯವರು 2006 ಜುಲೈ 27 ರಂದು ಇನ್ನಿಲ್ಲವಾದರು. ಆದರೆ ಅವರು ಸಂಗ್ರಹಿಸಿ ಕೊಟ್ಟ ರಾಶಿ ರಾಶಿ ಜನಪದ ನಮ್ಮ ಕಣ್ಣೆದುರಿಗೆ ಅರಗಿಸಿಕೊಳ್ಳಲಾಗದಷ್ಟಿದೆ. ಅವರ ತತ್ತ್ವಾದರ್ಶಗಳು ನಮ್ಮೊಟ್ಟಿಗೆ ಸದಾ ಜೀವಂತವಾಗಿರುತ್ತದೆ.
ಹರಿಜನಾಭ್ಯುದಯ ಚೇತನ ಡಿ. ಗೋವಿಂದಾಸ್
ದಲಿತ ಸಾಹಿತ್ಯ ಇಂದು ಭಾರತದ ಹಲವಾರು ಭಾಷೆಗಳಲ್ಲಿ ಪ್ರಖ್ಯಾತಿ ಪಡೆದಿದೆ. ಅವುಗಳಲ್ಲಿ ಕನ್ನಡ ದಲಿತ ಸಾಹಿತ್ಯ ಬಹಳ ಮುಖ್ಯವಾದುದು. ಕನ್ನಡ ದಲಿತ ಸಾಹಿತ್ಯದ ಅಲೆ ಎದ್ದಿದ್ದು ಕಾವ್ಯಗಳ ಮೂಲಕ ಎನ್ನಬಹುದು. ಅವ್ಯಾಹತವಾಗಿ ಹರಿದು ಬಂದ ಕನ್ನಡ ಕಾವ್ಯ ಪರಂಪರೆಯಲ್ಲಿ ಪರಿವರ್ತನೆಯ ಅಲೆಯಾಗಿ ಕಾಣಿಸಿಕೊಂಡಿದ್ದೇ ದಲಿತ ಸಾಹಿತ್ಯ. ಅದರಲ್ಲೂ 20 ನೆಯ ಶತಮಾನದ 60 ರಿಂದ 70 ರ ದಶಕಗಳಲ್ಲಿ ಪರಿಸ್ಥಿತಿಯ ಒತ್ತಡದ ಕಾರಣದಿಂದ ಉದಯಿಸಿದ ಈ ಸಾಹಿತ್ಯ ಜನಪರ ದೃಷ್ಟಿಕೋನವನ್ನು ಹೊಂದಿದೆ. ಬದುಕಿನ ಶೋಧನೆಗೆ ನಿರಂತರವಾಗಿ ಹಂಬಲಿಸುವ, ಯಾವಾಗಲೂ ಶೋಷಿತರ ಪರ ನಿಲ್ಲುವ ದಲಿತ ಸಾಹಿತ್ಯದ ಅಧ್ಯಯನ ಸಾಂಸ್ಕೃತಿಕವಾಗಿ ಮಹತ್ತರವಾದುದೆಂದರೆ ತಪ್ಪಾಗದಿರದು.
ಇದು ಇಂದು ನಿನ್ನೆಯದಲ್ಲ, ಕನ್ನಡ ಸಾಹಿತ್ಯ ಉದಿಸಿದಂದಿನಿಂದ ಅಲ್ಲಲ್ಲಿ ದಲಿತ ಸಾಹಿತ್ಯ ಮೊಳಕೆಯೊಡೆಯುತ್ತಲೇ ಬಂದರೂ ಪಟ್ಟಬದ್ದ ಹಿತಾಸಕ್ತಿಗಳಿಂದ ದಮನಕ್ಕೊಳಗಾಗಿ ಮುಖ್ಯವಾಹಿನಿಗೆ ಬರದೇ ಹೋಯಿತು. ಆದರೆ ಕ್ರಾಂತಿರೂಪ ಪಡೆದುಕೊಂಡದ್ದು ಹನ್ನೇರಡನೆಯ ಶತಮಾನದ ಬಸವಾದಿ ಶರಣರ ಜಾತ್ಯಾತೀತ ಭಾವನೆಗಳಿಂದ ಹೊಮ್ಮಿಬಂದ ವಚನ ಸಾಹಿತ್ಯದಿಂದ ಎನ್ನಬಹುದು.
ಇವುಗಳ ಹೊರತಾಗಿಯೂ 20 ನೆಯ ಶತಮಾನದ ಆದಿಯಲ್ಲಿ ಗೊರೊರು ಸಮಕಾಲೀನರಾಗದ್ದ ಗೋವಿಂದ ದಾಸ್ ಆಧುನಿಕ ಕನ್ನಡ ದಲಿತ ಸಾಹಿತ್ಯದ ಮೊದಲಿಗರಾಗಿ ನಮ್ಮೆದುರಿಗೆ ನಿಲ್ಲುತ್ತಾರೆ. ಕಾವ್ಯ ಹಾಗೂ ಅತ್ಯುತ್ತಮ ನಾಟಕಕಾರರಾಗಿದ್ದ ಇವರು ಅಪ್ಪಟ ಗಾಂಧಿವಾದಿ. ದೇಸೀ ಸೊಗಡಿನ ಗರ್ಭದಲ್ಲಿ ಉದಿಸಿದ ಇವರ ಸಾಹಿತ್ಯ ಶೋಷಿತರ ಧನಿಯಾಗಿ ನೆಲೆನಿಂತಿತು ಎಂದರೆ ಅತಿಶಯೋಕ್ತಿಯಾಗಲಾರದು.
ಹೋರಾಟ ಮನೋಭಾವ ಮೈಗೂಡಿಸಿಕೊಂಡು ಸಾಹಿತ್ಯ ಕ್ರಾಂತಿ ಮಾಡಿದ ಈ ಮಹನ್ ಮೇದಾವಿ ಹಾಸನದವರೆಂಬುದೇ ನಮ್ಮೆಲ್ಲರರಿಗೆ ಹೆಮ್ಮೆ.
ಡಿ. ಗೋವಿಂದದಾಸ್ ಅವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ 'ದಮ್ಮನಿಂಗಳ' ದ ಶ್ರೀ ದಾಸಪ್ಪ ಮತ್ತು ಶ್ರೀಮತಿ ಕೆಂಪಮ್ಮ ದಂಪತಿಗಳ ಮಗನಾಗಿ 1910 ರಲ್ಲಿ ಜನಿಸಿದರು. ಇವರ ತಂದೆ ಚರ್ಮದ ವ್ಯಾಪಾರಿಯಾಗಿದ್ದರು. ಇವರದು ದಾನ, ಧರ್ಮ, ನ್ಯಾಯ ನಿಷ್ಟೆಗೆ ಹೆಸರಾದ ಸಂಪ್ರದಾಯಸ್ಥ ಮನೆತನವಾಗಿತ್ತು, ಆದ್ದರಿಂದಲೇ ಬಾಲ ಗೋವಿಂದನ ವ್ಯಕ್ತಿತ್ತ್ವವೂ ಅಂತೆಯೇ ರೂಪುಗೊಂಡಿತು. ಮುಂದೆ ಇವರು ತಮ್ಮ ಸಾಹಿತ್ಯದಲ್ಲಿ ಬದುಕಿನ ವಸ್ತು ಸ್ಥಿತಿಯನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದರು.
ಸಾಹಿತ್ಯ ಸಮಾಜದ ಕೊರತೆಗಳಿಗೆ ಕನ್ನಡಿ ಹಿಡಿಯಬೇಕು, ಜನರ ಆಶೋತ್ತರಗಳಿಗೆ ಸಂ್ಪದಿಸಬೇಕೆಂಬುದೇ ಗೋವಿಂದದಾಸರ ಪ್ರಮುಖ ನಿಲುವಾಗಿತ್ತು. ಕವಿಯಾದವನಿಗೆ ಸಾಮಾಜಿಕ ಪ್ರಜ್ಞೆ ಇರಬೇಕು. ಅದು ಇದ್ದಾಗ ಮಾತ್ರ ಆತನೊಬ್ಬ ಪ್ರಜ್ಞಾವಂತನಾಗಿ ಬೆಳೆಯಲು ಸಾಧ್ಯ. ನೈಜ ಬದುಕಿನ ಕುರಿತು ಕಾಳಜಿ ಬಂದದ್ದೇ ದಲಿತ ಪಂಥದ ಸಂದರ್ಭದಲ್ಲಿ. ಆಧುನಿಕವಾಗಿ ಇಂಥದ್ದೊಂದು ಮಹತ್ಸಾಧನೆಗೆ ಅಡಿಯಿಟ್ಟವರೇ ಗೋವಿಂದದಾಸ್.
ಶತಶತಮಾನಗಳಿಂದ ಶೋಷಣೆಯ ಬೆನ್ನಲ್ಲೇ ಹುಟ್ಟಿ ಬದುಕಿ ಸಾಯುವ ದಲಿತರು ಬದುಕಿನ ಚಿತ್ರಣಗಳ ವಿರುದ್ದ ಹೋರಾಡಲು ಜನ್ಮತಾಳಿದ್ದು ದಲಿತ ಸಾಹಿತ್ಯ. ಇದು ಪ್ರಮುಖವಾಗಿ ಸಾಮಾಜಿಕ ನೋವುಗಳನ್ನೇ ತನ್ನ ಮೂಲಕ ವಸ್ತುವನ್ನಾಗಿಸಿಕೊಂಡು ಅನೈತಿಕ ಮೌಲ್ಯಗಳ ವಿರುದ್ದ ಪ್ರತಿಭಟನೆ ವ್ಯಕ್ತ ಪಡಿಸುತ್ತಲೇ ಬಂದಿದೆ.
ದೇಶದಲ್ಲಿ ಅಸಮಾನತೆ, ಶೋಷಣೆಗಳಂತಹ ಅವೈಚಾರಿಕ ನೆಲೆಗಳು ಭದ್ರವಾಗುತ್ತಿರುವ ಸಂದರ್ಭದಲ್ಲಿ ಗೋವಿಂದದಾಸರು ತಮ್ಮ ದಿಟ್ಟತನ ಸ್ಥಿತ ಪ್ರಜ್ಞೆಯಿಂದ ಸಮಾಜಪರ ಸಾಹಿತ್ಯದಲ್ಲಿ ತೊಡಗಿದರು. ಆದರೆ ಈ ಹಾಳು ಸಮಾಜ ಅವರನ್ನು ಮುಖ್ಯವಾಹಿನಿಗೆ ತರಲೇಯಿಲ್ಲ. ಇವರು ಕೂಡ ಸಾಹಿತ್ಯ ಶೋಷಣೆಗೆ ತುತ್ತಾದರು. ಬೇರ್ಯಾವುದೇ ಮೇಲ್ವರ್ಗದ ವ್ಯಕ್ತಿ ಗೋವಿಂದಾಸರಷ್ಟು ಸಾಹಿತ್ಯ ಕೈಂಕರ್ಯ ಮಾಡಿದ್ದಿದ್ದರೆ ಹೊಗಳಿ ಅಟ್ಟಕ್ಕೇರಿಸಿ ಕುಣಿದಾಡುತಿತ್ತೇನೋ?
ಗೋವಿಂದಾಸರು ಕೇವಲ ಕವಿ, ನಾಟಕಕಾರ, ಹೋರಾಟಗಾರರಷ್ಟೇ ಅಲ್ಲ, ಅವರೊಬ್ಬ ಸ್ವತಃ ಕೋಲಾಟದ ಕಲಾವಿದರು, ಸೊಗಸಾದ ಹಾಡುಗಾರರೂ ಆಗಿದ್ದರು. ದೇಸೀ ಸಂಸ್ಕೃತಿಯ ಪ್ರತೀಕದಂತಿದ್ದ ಗೋವಿಂದಾಸರು ತನುವಿನ ಪ್ರತಿ ಅಣು ಅಣುವಿನಲ್ಲೂ ಜನಪದ ಸೊಗಡು ಆವರಿಸಿತ್ತು. ಮಾಸ್ತಿ ಹಾಗೂ ಬಿ.ಎಂ ಶ್ರೀ ರವರ ಸಲಹೆ, ಪ್ರೋತ್ಸಾಹಗಳಿಂದ 1937 ರಲ್ಲಿ ಹೊರಬಂದ 'ಹರಿಜನಾಭ್ಯುದಯ' ಕವನ ಸಂಕಲನ ಗೋವಿಂದದಾಸರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮೂಲ ನೆಲೆಯನ್ನು ಒದಗಿಸುತ್ತದೆ
ಹರಿಜನರ ಶೋಷಣೆ ದಮನಕ್ಕೊಳಗಾದ ಪ್ರಸಂಗಗಳು, ಅಭ್ಯುದಯದ ಮಾರ್ಗಗಳನ್ನು ಸೊಗಸಾಗಿ ಬಿಂಬಿಸಿದ್ದಾರೆ. ಈ ಕವನ ಸಂಕಲನದಲ್ಲಿನ ಕವಿತೆಗಳನ್ನು ಪ್ರಮುಖವಾಗಿ ಏಳು ರೀತಿಯಾಗಿ ವಗರ್ೀಕರಿಸಬಹುದು. ಜಾತಿಯತೆ ಅಸ್ಪೃಶ್ಯತೆಗೆ ಸಂಬಂಧಿಸಿದ ಕವಿತೆಗಳು, ನಿಸರ್ಗ ಪರಿಸರಕ್ಕೆ ಸಂಬಂಧಿಸಿದ ಕವಿತೆಗಳು, ವೈಚಾರಿಕತೆಗೆ ಸಂಬಂಧಿಸಿದ ಕವಿತೆಗಳು, ವ್ಯಕ್ತಿ ಚಿತ್ರಣಕ್ಕೆ ಸಂಬಂಧಿಸಿದ ಕವಿತೆಗಳು, ಪ್ರಾದೇಶಿಕ ಹಾಗೂ ಕೌಟುಂಬಿಕ ಹಿನ್ನೆಲೆಗೆ ಸಂಬಂಧಿಸಿದ ಕವಿತೆಗಳಿವೆ. ಇವರ ಸಮಗ್ರ ಕಾವ್ಯವನ್ನು ಅವಲೋಕಿಸಿದರೆ ಸಾಕು ಇವರ ವೈಶಾಲ್ಯ ಮನೋಧೋರಣೆ, ಸಮಾಜಪರ ಕಾಳಜಿಗಳು ಗೋಚರಿಸದೆ ಇರದು. ತಮ್ಮ ಹತ್ತನೆಯ ವಯಸ್ಸಿನಿಂದಲೇ ಕಾವ್ಯ ಬರೆಯಲು ಪ್ರಾರಂಭಿಸಿದ ಗೋಂವಿಂದದಾಸರು 100 ಕ್ಕೂ ಅಧಿಕ ಸಾತ್ತ್ವಿಕ ಚಿಂತನೆಗಳ ಗಟ್ಟಿತನದ ಕಾವ್ಯಗೊಂಚಲನ್ನು ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ.
ಮತಭೇದ ನಿಮಗೆ | ಅತಿಬಾಧೆ ನಮಗೆ
ಹಿತವನು ಬಯಸದಿ | ಗತಿ ಗೆಡುತ್ತೀರಿ
ಎಂಬ ಸಾಲುಗಳಲ್ಲಿ ಗೋವಿಂದ ದಾಸರು ಬ್ರಾತೃತ್ತ್ವ್ವವಷ್ಟೇ ಸಾರಲಿಲ್ಲ. ಇಲ್ಲಿ ಕನ್ನಡ ಸಾಹಿತ್ಯದ ಛಂದೋನಿಯಮಗಳ ಝೆಂಕಾರವನ್ನು ಕಾಣಬಹುದು. ಆದಿಪ್ರಾಸ, ಲಯ, ಮಾತ್ರಗಣಗಳ ಅರಿವಿನಾಲಯದಲ್ಲಿ ಕಾವ್ಯ ರಚನೆಯ ಧೀಶಕ್ತಿ ಗೋವಿಂದ ದಾಸರಿಗೆ ಒಲಿದಿತ್ತು ಎಂಬುದನ್ನು ಗಮನಿಸಬಹುದು.
ತೀರ ಕಡುಕಷ್ಟದಲ್ಲಿಯೆ ಅಕ್ಷರ ಕಲಿತು, ಕ್ರೂರ ಅಸ್ಷೃಶತೆಯ ಅಪಮಾನ ಅನುಭವಿಸುತ್ತಲೆ, ಜಾತಿಯತೆ, ಅಸ್ಪೃತೆಗೆ ಸಂಬಂಧಿಸಿದ ಅನೇಕ ಕವಿತೆಗಳನ್ನು ಬರೆದಿದ್ದಾರೆ.
ಹರಿಜನರೊಳು ಜನ್ಮ ತಳೆಯಲೆಬಾರದು
ತಳೆದರು ವಿದ್ಯೆ ಕಲಿಯಲೆ ಬಾರದು
ವಿದ್ಯೆ ಕಲಿಯೆ ಬುದ್ದಿ ಕಣ್ಣೊಂದು ತೆರೆವುದು
ವಿದ್ಯೆ ಕಲಿಯದಿರೆ ಗೋವಂದದಿ ಇರುವನು
ಮಾನಾಪಮಾನ ಮಾನವಗರಿವಾವುದು
ಜ್ಞಾನವಿಲ್ಲದ ಗೋವಿಗೆ ಸರಿಸಮರು ಅಂತ್ಯಜನರು ಗೋವು ಸರಿಸಮನೆಂದು
ಅಂತಿಹ ಭಾರತೀಯರಯ್ಯಯ್ಯೋ
ವಿದ್ಯಾ ಸಾಗರ ಅಂಬೇಡ್ಕರರು ಹೋರಾಡಿ
ಕಣ್ಮರೆಯಾದ ಹೇ ಭಗವನ್.
ಕವಿ ಇಲ್ಲಿ ಹರಿಜನರ ಬದುಕು ಅದ್ಹೇಗೆ ರೌರವ ನರಕವಾಗಿದೆ ಎಂಬುದನ್ನು ಕರುಳು ಹಿಂಡುವಂತೆ ಚಿತ್ರಿಸಿದ್ದಾರೆ.
ಸೇವಿಸದಿರಿಮದ್ಯಯಿ ಎಂದಿಗೂ
ಸೇವಿಸಿದೊಡೆ ಹಾಳೆಮ್ಮೆಯ ಬಾಳುಬಿಡಿ ಭೇದಗಳೆಮ್ಮೊಳ ಹರಿಜನರೆ |
ಎನ್ನುವ ಮೂಲಕ ಹರಿಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಶ್ರಮಿಸಿದ್ದಾರೆ. 1952 ರಲ್ಲಿ ರಚನೆಯಾದ ಇವರ 'ನಡುನೀರ ಹಡಗು' ಆರು ಅಂಕಗಳನ್ನೊಳಗೊಂಡ ನಾಟಕ ಅಂಬೇಡ್ಕರರ ವ್ಯಕ್ತಿತ್ತ್ವದ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಹರಿಜನರ ನ್ಯಾಯ, ತ್ಯಾಗ, ದೇಶಸೇವೆಯ ಪ್ರಾಮಾಣಿಕ ಪ್ರಯತ್ನವನ್ನು ಪರಿಚಯಿಸುತ್ತದೆ.
ಗೋವಿಂದ ದಾಸರು 'ನನ್ನ ಆತ್ಮ್ಮಚರಿತೆ' ಎಂಬುದರಲ್ಲಿ ಅವರ ಬಾಲ್ಯ, ಬೆಳವಣಿಗೆ ಸಾಗಿಬಂದ ರಹದಾರಿಯನ್ನು ಮನಮುಟ್ಟುವಂತೆ ಚಿತ್ರಸಿದ್ದಾರೆ. ಅಲ್ಲದೇ 'ಕಲಿಯುಗ ಮನು -ಡಾ. ಅಂಬೇಡ್ಕರ್' ಎಂಬ ಅಂಬೇಡ್ಕರ್ ಕುರಿತ ಜೀವನ ಚರಿತ್ರೆ ಬರೆದಿದ್ದಾರೆ.
ಸ್ವಾತಂತ್ರ ಪೂರ್ವದಲ್ಲಿಯೆ ದಮನಿತ ಸಾಹಿತ್ಯಕ್ಕೆ ಒಂದು ನೆಲೆ ತಂದುಕೊಟ್ಟವರೆಂದರೆ ಗೋವಿಂದ ದಾಸ್ರವರು, ಆದ್ದರಿಂದಲೇ ಇವರನ್ನು ಆಧುನಿಕ ಕನ್ನಡ ಸಾಹಿತ್ಯದ ಮೊದಲ ತಲೆಮಾರಿನ ದಲಿತ ಕವಿ ಎಂದು ಕರೆಯುತ್ತೇವೆ. ಕಾವ್ಯ, ನಾಟಕ, ಜೀವನ ಚರಿತ್ರೆ, ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಮರ್ಥ ಸಾಹಿತ್ಯ ಕೊಡುವುದರ ಜೊತೆಗೆ ಮೂಲ ಜಾನಪದ ಸಂರಕ್ಷಣೆಯ ಕಾರ್ಯದಲ್ಲೂ ತೊಡಗಿದ್ದ ಮಹಾನ್ ಚೇತನ ಗೋವಿಂದ ದಾಸ್.
ಡಿ. ಗೋವಿಂದ ದಾಸ್ ರವರ ಸಮಗ್ರ ಸಾಹಿತ್ಯದ ಬದುಕನ್ನು ಅರಿಯ ಬೇಕಾದರೆ ಕನ್ನಡ ವಿವಿ ಹಂಪಿಯ ಪ್ರಸಾರಂಗ ಹೊರತಂದಿರುವ ಡಾ.ಎಂ.ಎಸ್ ಶೇಖರ್ ಸಂಪಾದಕತ್ವದ 'ಡಿ. ಗೋವಿಂದಾಸ್ ಸಮಗ್ರ ಸಾಹಿತ್ಯ' ಎಂಬ ಗ್ರಂಥ ಅತ್ಯುಪಯುಕ್ತವಾಗಬಲ್ಲದು.
ಇದು ಇಂದು ನಿನ್ನೆಯದಲ್ಲ, ಕನ್ನಡ ಸಾಹಿತ್ಯ ಉದಿಸಿದಂದಿನಿಂದ ಅಲ್ಲಲ್ಲಿ ದಲಿತ ಸಾಹಿತ್ಯ ಮೊಳಕೆಯೊಡೆಯುತ್ತಲೇ ಬಂದರೂ ಪಟ್ಟಬದ್ದ ಹಿತಾಸಕ್ತಿಗಳಿಂದ ದಮನಕ್ಕೊಳಗಾಗಿ ಮುಖ್ಯವಾಹಿನಿಗೆ ಬರದೇ ಹೋಯಿತು. ಆದರೆ ಕ್ರಾಂತಿರೂಪ ಪಡೆದುಕೊಂಡದ್ದು ಹನ್ನೇರಡನೆಯ ಶತಮಾನದ ಬಸವಾದಿ ಶರಣರ ಜಾತ್ಯಾತೀತ ಭಾವನೆಗಳಿಂದ ಹೊಮ್ಮಿಬಂದ ವಚನ ಸಾಹಿತ್ಯದಿಂದ ಎನ್ನಬಹುದು.
ಇವುಗಳ ಹೊರತಾಗಿಯೂ 20 ನೆಯ ಶತಮಾನದ ಆದಿಯಲ್ಲಿ ಗೊರೊರು ಸಮಕಾಲೀನರಾಗದ್ದ ಗೋವಿಂದ ದಾಸ್ ಆಧುನಿಕ ಕನ್ನಡ ದಲಿತ ಸಾಹಿತ್ಯದ ಮೊದಲಿಗರಾಗಿ ನಮ್ಮೆದುರಿಗೆ ನಿಲ್ಲುತ್ತಾರೆ. ಕಾವ್ಯ ಹಾಗೂ ಅತ್ಯುತ್ತಮ ನಾಟಕಕಾರರಾಗಿದ್ದ ಇವರು ಅಪ್ಪಟ ಗಾಂಧಿವಾದಿ. ದೇಸೀ ಸೊಗಡಿನ ಗರ್ಭದಲ್ಲಿ ಉದಿಸಿದ ಇವರ ಸಾಹಿತ್ಯ ಶೋಷಿತರ ಧನಿಯಾಗಿ ನೆಲೆನಿಂತಿತು ಎಂದರೆ ಅತಿಶಯೋಕ್ತಿಯಾಗಲಾರದು.
ಹೋರಾಟ ಮನೋಭಾವ ಮೈಗೂಡಿಸಿಕೊಂಡು ಸಾಹಿತ್ಯ ಕ್ರಾಂತಿ ಮಾಡಿದ ಈ ಮಹನ್ ಮೇದಾವಿ ಹಾಸನದವರೆಂಬುದೇ ನಮ್ಮೆಲ್ಲರರಿಗೆ ಹೆಮ್ಮೆ.
ಡಿ. ಗೋವಿಂದದಾಸ್ ಅವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ 'ದಮ್ಮನಿಂಗಳ' ದ ಶ್ರೀ ದಾಸಪ್ಪ ಮತ್ತು ಶ್ರೀಮತಿ ಕೆಂಪಮ್ಮ ದಂಪತಿಗಳ ಮಗನಾಗಿ 1910 ರಲ್ಲಿ ಜನಿಸಿದರು. ಇವರ ತಂದೆ ಚರ್ಮದ ವ್ಯಾಪಾರಿಯಾಗಿದ್ದರು. ಇವರದು ದಾನ, ಧರ್ಮ, ನ್ಯಾಯ ನಿಷ್ಟೆಗೆ ಹೆಸರಾದ ಸಂಪ್ರದಾಯಸ್ಥ ಮನೆತನವಾಗಿತ್ತು, ಆದ್ದರಿಂದಲೇ ಬಾಲ ಗೋವಿಂದನ ವ್ಯಕ್ತಿತ್ತ್ವವೂ ಅಂತೆಯೇ ರೂಪುಗೊಂಡಿತು. ಮುಂದೆ ಇವರು ತಮ್ಮ ಸಾಹಿತ್ಯದಲ್ಲಿ ಬದುಕಿನ ವಸ್ತು ಸ್ಥಿತಿಯನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದರು.
ಸಾಹಿತ್ಯ ಸಮಾಜದ ಕೊರತೆಗಳಿಗೆ ಕನ್ನಡಿ ಹಿಡಿಯಬೇಕು, ಜನರ ಆಶೋತ್ತರಗಳಿಗೆ ಸಂ್ಪದಿಸಬೇಕೆಂಬುದೇ ಗೋವಿಂದದಾಸರ ಪ್ರಮುಖ ನಿಲುವಾಗಿತ್ತು. ಕವಿಯಾದವನಿಗೆ ಸಾಮಾಜಿಕ ಪ್ರಜ್ಞೆ ಇರಬೇಕು. ಅದು ಇದ್ದಾಗ ಮಾತ್ರ ಆತನೊಬ್ಬ ಪ್ರಜ್ಞಾವಂತನಾಗಿ ಬೆಳೆಯಲು ಸಾಧ್ಯ. ನೈಜ ಬದುಕಿನ ಕುರಿತು ಕಾಳಜಿ ಬಂದದ್ದೇ ದಲಿತ ಪಂಥದ ಸಂದರ್ಭದಲ್ಲಿ. ಆಧುನಿಕವಾಗಿ ಇಂಥದ್ದೊಂದು ಮಹತ್ಸಾಧನೆಗೆ ಅಡಿಯಿಟ್ಟವರೇ ಗೋವಿಂದದಾಸ್.
ಶತಶತಮಾನಗಳಿಂದ ಶೋಷಣೆಯ ಬೆನ್ನಲ್ಲೇ ಹುಟ್ಟಿ ಬದುಕಿ ಸಾಯುವ ದಲಿತರು ಬದುಕಿನ ಚಿತ್ರಣಗಳ ವಿರುದ್ದ ಹೋರಾಡಲು ಜನ್ಮತಾಳಿದ್ದು ದಲಿತ ಸಾಹಿತ್ಯ. ಇದು ಪ್ರಮುಖವಾಗಿ ಸಾಮಾಜಿಕ ನೋವುಗಳನ್ನೇ ತನ್ನ ಮೂಲಕ ವಸ್ತುವನ್ನಾಗಿಸಿಕೊಂಡು ಅನೈತಿಕ ಮೌಲ್ಯಗಳ ವಿರುದ್ದ ಪ್ರತಿಭಟನೆ ವ್ಯಕ್ತ ಪಡಿಸುತ್ತಲೇ ಬಂದಿದೆ.
ದೇಶದಲ್ಲಿ ಅಸಮಾನತೆ, ಶೋಷಣೆಗಳಂತಹ ಅವೈಚಾರಿಕ ನೆಲೆಗಳು ಭದ್ರವಾಗುತ್ತಿರುವ ಸಂದರ್ಭದಲ್ಲಿ ಗೋವಿಂದದಾಸರು ತಮ್ಮ ದಿಟ್ಟತನ ಸ್ಥಿತ ಪ್ರಜ್ಞೆಯಿಂದ ಸಮಾಜಪರ ಸಾಹಿತ್ಯದಲ್ಲಿ ತೊಡಗಿದರು. ಆದರೆ ಈ ಹಾಳು ಸಮಾಜ ಅವರನ್ನು ಮುಖ್ಯವಾಹಿನಿಗೆ ತರಲೇಯಿಲ್ಲ. ಇವರು ಕೂಡ ಸಾಹಿತ್ಯ ಶೋಷಣೆಗೆ ತುತ್ತಾದರು. ಬೇರ್ಯಾವುದೇ ಮೇಲ್ವರ್ಗದ ವ್ಯಕ್ತಿ ಗೋವಿಂದಾಸರಷ್ಟು ಸಾಹಿತ್ಯ ಕೈಂಕರ್ಯ ಮಾಡಿದ್ದಿದ್ದರೆ ಹೊಗಳಿ ಅಟ್ಟಕ್ಕೇರಿಸಿ ಕುಣಿದಾಡುತಿತ್ತೇನೋ?
ಗೋವಿಂದಾಸರು ಕೇವಲ ಕವಿ, ನಾಟಕಕಾರ, ಹೋರಾಟಗಾರರಷ್ಟೇ ಅಲ್ಲ, ಅವರೊಬ್ಬ ಸ್ವತಃ ಕೋಲಾಟದ ಕಲಾವಿದರು, ಸೊಗಸಾದ ಹಾಡುಗಾರರೂ ಆಗಿದ್ದರು. ದೇಸೀ ಸಂಸ್ಕೃತಿಯ ಪ್ರತೀಕದಂತಿದ್ದ ಗೋವಿಂದಾಸರು ತನುವಿನ ಪ್ರತಿ ಅಣು ಅಣುವಿನಲ್ಲೂ ಜನಪದ ಸೊಗಡು ಆವರಿಸಿತ್ತು. ಮಾಸ್ತಿ ಹಾಗೂ ಬಿ.ಎಂ ಶ್ರೀ ರವರ ಸಲಹೆ, ಪ್ರೋತ್ಸಾಹಗಳಿಂದ 1937 ರಲ್ಲಿ ಹೊರಬಂದ 'ಹರಿಜನಾಭ್ಯುದಯ' ಕವನ ಸಂಕಲನ ಗೋವಿಂದದಾಸರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮೂಲ ನೆಲೆಯನ್ನು ಒದಗಿಸುತ್ತದೆ
ಹರಿಜನರ ಶೋಷಣೆ ದಮನಕ್ಕೊಳಗಾದ ಪ್ರಸಂಗಗಳು, ಅಭ್ಯುದಯದ ಮಾರ್ಗಗಳನ್ನು ಸೊಗಸಾಗಿ ಬಿಂಬಿಸಿದ್ದಾರೆ. ಈ ಕವನ ಸಂಕಲನದಲ್ಲಿನ ಕವಿತೆಗಳನ್ನು ಪ್ರಮುಖವಾಗಿ ಏಳು ರೀತಿಯಾಗಿ ವಗರ್ೀಕರಿಸಬಹುದು. ಜಾತಿಯತೆ ಅಸ್ಪೃಶ್ಯತೆಗೆ ಸಂಬಂಧಿಸಿದ ಕವಿತೆಗಳು, ನಿಸರ್ಗ ಪರಿಸರಕ್ಕೆ ಸಂಬಂಧಿಸಿದ ಕವಿತೆಗಳು, ವೈಚಾರಿಕತೆಗೆ ಸಂಬಂಧಿಸಿದ ಕವಿತೆಗಳು, ವ್ಯಕ್ತಿ ಚಿತ್ರಣಕ್ಕೆ ಸಂಬಂಧಿಸಿದ ಕವಿತೆಗಳು, ಪ್ರಾದೇಶಿಕ ಹಾಗೂ ಕೌಟುಂಬಿಕ ಹಿನ್ನೆಲೆಗೆ ಸಂಬಂಧಿಸಿದ ಕವಿತೆಗಳಿವೆ. ಇವರ ಸಮಗ್ರ ಕಾವ್ಯವನ್ನು ಅವಲೋಕಿಸಿದರೆ ಸಾಕು ಇವರ ವೈಶಾಲ್ಯ ಮನೋಧೋರಣೆ, ಸಮಾಜಪರ ಕಾಳಜಿಗಳು ಗೋಚರಿಸದೆ ಇರದು. ತಮ್ಮ ಹತ್ತನೆಯ ವಯಸ್ಸಿನಿಂದಲೇ ಕಾವ್ಯ ಬರೆಯಲು ಪ್ರಾರಂಭಿಸಿದ ಗೋಂವಿಂದದಾಸರು 100 ಕ್ಕೂ ಅಧಿಕ ಸಾತ್ತ್ವಿಕ ಚಿಂತನೆಗಳ ಗಟ್ಟಿತನದ ಕಾವ್ಯಗೊಂಚಲನ್ನು ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ.
ಮತಭೇದ ನಿಮಗೆ | ಅತಿಬಾಧೆ ನಮಗೆ
ಹಿತವನು ಬಯಸದಿ | ಗತಿ ಗೆಡುತ್ತೀರಿ
ಎಂಬ ಸಾಲುಗಳಲ್ಲಿ ಗೋವಿಂದ ದಾಸರು ಬ್ರಾತೃತ್ತ್ವ್ವವಷ್ಟೇ ಸಾರಲಿಲ್ಲ. ಇಲ್ಲಿ ಕನ್ನಡ ಸಾಹಿತ್ಯದ ಛಂದೋನಿಯಮಗಳ ಝೆಂಕಾರವನ್ನು ಕಾಣಬಹುದು. ಆದಿಪ್ರಾಸ, ಲಯ, ಮಾತ್ರಗಣಗಳ ಅರಿವಿನಾಲಯದಲ್ಲಿ ಕಾವ್ಯ ರಚನೆಯ ಧೀಶಕ್ತಿ ಗೋವಿಂದ ದಾಸರಿಗೆ ಒಲಿದಿತ್ತು ಎಂಬುದನ್ನು ಗಮನಿಸಬಹುದು.
ತೀರ ಕಡುಕಷ್ಟದಲ್ಲಿಯೆ ಅಕ್ಷರ ಕಲಿತು, ಕ್ರೂರ ಅಸ್ಷೃಶತೆಯ ಅಪಮಾನ ಅನುಭವಿಸುತ್ತಲೆ, ಜಾತಿಯತೆ, ಅಸ್ಪೃತೆಗೆ ಸಂಬಂಧಿಸಿದ ಅನೇಕ ಕವಿತೆಗಳನ್ನು ಬರೆದಿದ್ದಾರೆ.
ಹರಿಜನರೊಳು ಜನ್ಮ ತಳೆಯಲೆಬಾರದು
ತಳೆದರು ವಿದ್ಯೆ ಕಲಿಯಲೆ ಬಾರದು
ವಿದ್ಯೆ ಕಲಿಯೆ ಬುದ್ದಿ ಕಣ್ಣೊಂದು ತೆರೆವುದು
ವಿದ್ಯೆ ಕಲಿಯದಿರೆ ಗೋವಂದದಿ ಇರುವನು
ಮಾನಾಪಮಾನ ಮಾನವಗರಿವಾವುದು
ಜ್ಞಾನವಿಲ್ಲದ ಗೋವಿಗೆ ಸರಿಸಮರು ಅಂತ್ಯಜನರು ಗೋವು ಸರಿಸಮನೆಂದು
ಅಂತಿಹ ಭಾರತೀಯರಯ್ಯಯ್ಯೋ
ವಿದ್ಯಾ ಸಾಗರ ಅಂಬೇಡ್ಕರರು ಹೋರಾಡಿ
ಕಣ್ಮರೆಯಾದ ಹೇ ಭಗವನ್.
ಕವಿ ಇಲ್ಲಿ ಹರಿಜನರ ಬದುಕು ಅದ್ಹೇಗೆ ರೌರವ ನರಕವಾಗಿದೆ ಎಂಬುದನ್ನು ಕರುಳು ಹಿಂಡುವಂತೆ ಚಿತ್ರಿಸಿದ್ದಾರೆ.
ಸೇವಿಸದಿರಿಮದ್ಯಯಿ ಎಂದಿಗೂ
ಸೇವಿಸಿದೊಡೆ ಹಾಳೆಮ್ಮೆಯ ಬಾಳುಬಿಡಿ ಭೇದಗಳೆಮ್ಮೊಳ ಹರಿಜನರೆ |
ಎನ್ನುವ ಮೂಲಕ ಹರಿಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಶ್ರಮಿಸಿದ್ದಾರೆ. 1952 ರಲ್ಲಿ ರಚನೆಯಾದ ಇವರ 'ನಡುನೀರ ಹಡಗು' ಆರು ಅಂಕಗಳನ್ನೊಳಗೊಂಡ ನಾಟಕ ಅಂಬೇಡ್ಕರರ ವ್ಯಕ್ತಿತ್ತ್ವದ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಹರಿಜನರ ನ್ಯಾಯ, ತ್ಯಾಗ, ದೇಶಸೇವೆಯ ಪ್ರಾಮಾಣಿಕ ಪ್ರಯತ್ನವನ್ನು ಪರಿಚಯಿಸುತ್ತದೆ.
ಗೋವಿಂದ ದಾಸರು 'ನನ್ನ ಆತ್ಮ್ಮಚರಿತೆ' ಎಂಬುದರಲ್ಲಿ ಅವರ ಬಾಲ್ಯ, ಬೆಳವಣಿಗೆ ಸಾಗಿಬಂದ ರಹದಾರಿಯನ್ನು ಮನಮುಟ್ಟುವಂತೆ ಚಿತ್ರಸಿದ್ದಾರೆ. ಅಲ್ಲದೇ 'ಕಲಿಯುಗ ಮನು -ಡಾ. ಅಂಬೇಡ್ಕರ್' ಎಂಬ ಅಂಬೇಡ್ಕರ್ ಕುರಿತ ಜೀವನ ಚರಿತ್ರೆ ಬರೆದಿದ್ದಾರೆ.
ಸ್ವಾತಂತ್ರ ಪೂರ್ವದಲ್ಲಿಯೆ ದಮನಿತ ಸಾಹಿತ್ಯಕ್ಕೆ ಒಂದು ನೆಲೆ ತಂದುಕೊಟ್ಟವರೆಂದರೆ ಗೋವಿಂದ ದಾಸ್ರವರು, ಆದ್ದರಿಂದಲೇ ಇವರನ್ನು ಆಧುನಿಕ ಕನ್ನಡ ಸಾಹಿತ್ಯದ ಮೊದಲ ತಲೆಮಾರಿನ ದಲಿತ ಕವಿ ಎಂದು ಕರೆಯುತ್ತೇವೆ. ಕಾವ್ಯ, ನಾಟಕ, ಜೀವನ ಚರಿತ್ರೆ, ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಮರ್ಥ ಸಾಹಿತ್ಯ ಕೊಡುವುದರ ಜೊತೆಗೆ ಮೂಲ ಜಾನಪದ ಸಂರಕ್ಷಣೆಯ ಕಾರ್ಯದಲ್ಲೂ ತೊಡಗಿದ್ದ ಮಹಾನ್ ಚೇತನ ಗೋವಿಂದ ದಾಸ್.
ಡಿ. ಗೋವಿಂದ ದಾಸ್ ರವರ ಸಮಗ್ರ ಸಾಹಿತ್ಯದ ಬದುಕನ್ನು ಅರಿಯ ಬೇಕಾದರೆ ಕನ್ನಡ ವಿವಿ ಹಂಪಿಯ ಪ್ರಸಾರಂಗ ಹೊರತಂದಿರುವ ಡಾ.ಎಂ.ಎಸ್ ಶೇಖರ್ ಸಂಪಾದಕತ್ವದ 'ಡಿ. ಗೋವಿಂದಾಸ್ ಸಮಗ್ರ ಸಾಹಿತ್ಯ' ಎಂಬ ಗ್ರಂಥ ಅತ್ಯುಪಯುಕ್ತವಾಗಬಲ್ಲದು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)