ಆಧುನಿಕ ಕನ್ನಡ ವಚನಕಾರರಲ್ಲಿ ಒಬ್ಬರಾದ ಕವಿ, ವಿಜ್ಞಾನಿ, ಶಿಕ್ಷಕ, ವಿಚಾರಶೀಲ ಸಾಹಿತಿ, ಸತ್ ಚಿಂತಕರಾದ ಕೊಟ್ರೆಶ್ ಎಸ್ ಉಪ್ಪಾರ್ರವರ ವಚನ ರಚನೆಯ ‘ವಚನ ಮಾಣಿಕ್ಯ’ ಕ್ಕಷ್ಟೆ ನನ್ನ ಅನಿಸಿಕೆಯನ್ನು ಸೀಮಿತಗೊಳಿಸಿಕೊಂಡು ಹೇಳುವುದಾದರೆ ಶ್ರೀಯುತರ ರಚನೆಯಲ್ಲಿ ಜಗದಣ್ಣ ಬಸವಣ್ಣನವರ ತುಂಬು ಪ್ರಭಾವ ಆಗಿರುವುದುಂಟು ಆದರೆ ಅದು ‘ಅನುಕರಣ’ (imiಣಚಿಣioಟಿ) ಅಲ್ಲ. ಅಭಿನವ ಗುಪ್ತನು ಹೆಸರಿಸಿ, ವ್ಯಾಖ್ಯಾನಿಸಿದಂತೆ ಅದು ‘ಅನುವ್ಯವಸಾಯ’ ಅಭಿನವ ಗುಪ್ತಾಚಾರ್ಯನು ‘ಪ್ರಕೃತಿ’ ಭಿತ್ತಿ (ಛಿಚಿಟಿvಚಿs)ಯಾದರೆ, ಅದರ ಮೇಲೆ ಕಲಾವಿದ ರಚಿಸಿದ ಚಿತ್ರ. ಈ ಚಿತ್ರ ಪ್ರಕೃತಿಯ ಪ್ರತಿ ರೂಪ ಅಥವಾ ಬಿಂಬ ಅಲ್ಲ. ಅದು ವಚನಕಾರನ ಸ್ವ ಪ್ರಜ್ಞೆ ಸೃಷ್ಟಿ. ಇದರ ಸ್ಪಷ್ಟತೆಗಾಗಿ ಮತ್ತೊಂದು ನಿದರ್ಶನ. ಮಹಾಕವಿ ‘ಶ್ರೀ ಕುವೆಂಪು’ರವರ ಶ್ರೀ ರಾಮಾಯಣ ದರ್ಶನಂ ಮಹಾ ಕಾವ್ಯದಲ್ಲಿ ಮಹರ್ಷಿ ವಾಲ್ಮೀಕಿಯನ್ನು ಕುರಿತು ಕುವೆಂಪು
‘ತನು ನಿನ್ನದಾದೊಡಂ ಚೈತನ್ಯಮೆನ್ನದೆನೆ
ಕಥೆ ನಿನ್ನದಾದೊಡಂ, ನೀನೆ ಮೇಣಾಶೀರ್ವದಿಸಿ
ಮತಿಗೆ ಬೋಧನೆ ವಿತ್ತೊಡಂ, ಕೃತಿ ನನ್ನ ದರ್ಶನಂ
ಮೂರ್ತಿವೆತ್ತೊಂದಮರ ಕಾವ್ಯದಾ ಕೃತಿಯಲ್ತೆ?
ಎಂದು ಹೇಳಿದ್ದಾರೆ.
ಈ ಅರ್ಥದಲ್ಲಿ ಕವಿ ಕೊಟ್ರೇಶ್ರವರ ‘ವಚನ ಮಾಣಿಕ್ಯ’ವೂ ಅವರ ಸ್ವೋಪಜ್ಞ್ಞ ವಚನರಚನಾ ಕೃತಿ. ನಿದರ್ಶನಕ್ಕಾಗಿ ಬಸವಣ್ಣನವರು ನಂಬಿದ್ದ ದೈವದ ಪರಿಕಲ್ಪನೆÉಯ ಬಗೆಗೆ ಕೊಟ್ರೆಶ್ರವರೂ ವಿಚಾರವಾದಿಗಳಾಗಿಯೇ ತಮ್ಮ ತನವನ್ನು ಸ್ಫುರಿಕರಿಸಿದ್ದಾರೆ. ಬಸವಣ್ಣನವರ ಒಂದು ವಚನ ಹಾಗೂ ಅದರ ವಿಶ್ಲೇಷಣೆ ಹೀಗಿದೆ ನೋಡಿ.
“ಬಸವ ಬಾರೈ, ಮತ್ರ್ಯ ಲೋಕದೊಳಗೆ ಭಕ್ತರುಂಟೆ ಹೇಳಯ್ಯ”
“ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯ, ಮತ್ತಾರೂ ಇಲ್ಲಯ್ಯ”
ನಾನೊಬ್ಬನೆ ಭಕ್ತ !
ಮತ್ರ್ಯ ಲೋಕದೊಳಗಣ ಭಕ್ತರೆಲ್ಲರೂ ಜಂಗಮ,
ಲಿಂಗ ನೀನೆ ಅಯ್ಯ” ಕೂಡಲಸಂಗಮದೇವಾ.
(ವಚನ 894)
ಬಸವಣನ್ಣನವರ ವಚನಗಳು, ಸಮಗ್ರ ವಚನ ಸಂಪುಟ -1
ಅಣ್ಣನವರ ಈ ವಚನವನ್ನು ನಾವು ನಾಟಕೀಯವಾಗಿಯೂ ರಚಿಸಬಹುದು. ರಚಿಸಿದರೆ ಅದು ಹೀಗಾಗುತ್ತದೆ.
ಒಂದಿರುಳು ಬಸವಣ್ಣನವರ ಕನಸಿನಲ್ಲಿ ಅವರ ಆರಾಧ್ಯ ದೈವ ಸಂಗಮನಾಥ ಪ್ರತ್ಯಕ್ಷನಾಗಿ.
ಸಂಗಮ- ಬಸವ ಬಾರಯ್ಯ ಈ ಮತ್ರ್ಯ ಲೋಕದಲ್ಲಿ ನನ್ನ ಭಕ್ತರುಂಟೆ ಹೇಳಯ್ಯ?
ಬಸವಣ್ಣ- ಮತ್ತಾರೂ ಇಲ್ಲವಯ್ಯ, ಮತ್ತಾರೂ ಇಲ್ಲವಯ್ಯ, ಮತ್ತಾರೂ ಇಲ್ಲವಯ್ಯ (ಎಂದು ಮೂರು ಬಾರಿ ಉತ್ತರವಿತ್ತರಂತೆ)
(ಬಹುಷ, ಇದನ್ನು ಕೇಳಿ ಸಂಗಮನಾಥ£ಗೆ ಭ್ರಮ ನಿರಸನ ಆಗಿರಬಹುದು . ಜಗತ್ತಿನಲ್ಲಿರುವವರೆಲ್ಲ ತನ್ನ ಭಕ್ತರು ಎಂದು ಭಾವಿಸಿದ್ದೆ. ಆದರೆ ಈ ಬಸವಣ್ಣ ಯಾರೂ ಇಲ್ಲ ಎಂದು ಮೂರು ಬಾರಿ ಹೇಳಿಬಿಟ್ಟನಲ್ಲಾ ಎಂದು ಚಿಂತಿಸಿದ.)
ಸಂಗಮ- ಹಾಗಾದರೆ ಬಸವಣ್ಣ ಈ ಜಗತ್ತಿನಲ್ಲಿ ನನ್ನ ಭಕ್ತರು ಯಾರು ಇಲ್ಲವೇ?
ಬಸವಣ್ಣ- ಇದ್ದಾನೆ ಓರ್ವನು ಮಾತ್ರ.
ಸಂಗಮ- ಯಾರು ! ಅವನಾರು.
ಬಸವಣ್ಣ- ನಾನೋರ್ವನೆ ಭಕ್ತ !
(ಸಂಗಮನಾಥನಿಗೆ ಮತ್ತೆ ಆಶ್ಚರ್ಯವಾಯಿತು. ಏನಿದು ಬಸವಣ್ಣ ಇಡೀ ಜಗತ್ತಿನ ಭಕ್ತಿಯನ್ನೆಲ್ಲ ಗುತ್ತಿಗೆ ತೆಗೆದುಕೊಂಡ ಹಾಗೆ ಹೇಳುತ್ತಿದ್ದಾನಲ್ಲ! ಎಂದು ಕೊಂಡನು.)
ಸಂಗಮ- ‘ಬಸವಣ್ಣ £ೀನೋರ್ವನೆ ಭಕ್ತನಾದರೆ ಉಳಿದವರು?
ಬಸವಣ್ಣ- ಉಳಿದವರೆಲ್ಲರೂ ಲಿಂಗ-ಜಂಗಮರು, ಸಾಕ್ಷಾತ್ ಶಿವಸ್ವರೂಪಿಯಾದ £ೀನೇ ಅಯ್ಯ! (ಅಂದರು.)
ಈ ವಚನ ವೈಶಿಷ್ಟ್ಯ ನೋಡಿ, ಬಸವಣ್ಣ ಪರ ಶಿವನನ್ನು ಕಂಡದ್ದು ಕಲ್ಲಿ ನಲ್ಲಲ್ಲ, ಮಣ್ಣಿ ನಲ್ಲಲ್ಲ್ಲ, ನದಿ-ನದಗಳಲ್ಲಲ್ಲ ಸಮಸ್ತ ಮಾನವರ ಹೃದಯ ಮಂದಿರದಲ್ಲಿ. ಪರಂಜ್ಯೋತಿ ಸ್ವರೂಪನಾದ ಪರಮಾತ್ಮ ಜೀವಾತ್ಮಸ್ವರೂಪಿಯಾಗಿ ಎಲ್ಲರ ಹೃದಯಮಂದಿರದಲ್ಲೂ ಪರಮೇಷ್ಠಿಯಾಗಿ ಪ್ರತಿಷ್ಠಾಪಿತನಾಗಿದ್ದಾನೆ. ಆದ್ದರಿಂದ ಮಾನವರೆಲ್ಲರೂ ಪರಶಿವನ ಶಿವಾಂಶ ಸಂಭೂತರು, ಶಿವನೇ ತಾವಾದರು, ಈ ಅರ್ಥ ವ್ಯಂಜಿಸುವಂತೆ ಬಸವಣ್ಣನವರು ಮಾನವ ಹೃದಯದಲ್ಲಿ ಪರಶಿವನನ್ನು ಸಾಕ್ಷಾತ್ಕರಿಸಿ, ಸಕಲರ ಅರಿವು ಅನುಷ್ಠಾನಗಳಿಗೆ ಅನುವು ಮಾಡಿಕೊಟ್ಟರು.
ಈ ವಿಶಿಷ್ಟಾನುಭೂತಿಯ ದ್ಯುತಿವಡೆದ ದರ್ಶನವನ್ನು ಆಧುನಿಕ ವಚನಕಾರರಾದ ಕೊಟ್ರೇಶ್ರವರು ಒಂದೆರಡು ವಚನಗಳÀಲ್ಲಿ ಅವಿರ್ಭಾವಗೊಳಿಸಿದ್ದಾರೆ. ಇದು ಶ್ರೀಯುತರು ಗೈದ ‘ಅನುವ್ಯವಸಾಯ’ ಪ್ರಕ್ರಿಯೆ ಹೀಗೆವೆ.
ಕಲ್ಲು, ಲೋಹ, ಮರದ ದೈವಕ್ಕೆ
ನಾನು ಬೆಲೆಕೊಡೆÀನಯ್ಯ
ಕುಟ್ಟಿದರೆ ಪುಡಿಯಾಗುವ ಕಲ್ಲು,
ಕಾಸಿದರೆ ದ್ರವವಾಗುವ ಲೋಹ
ಸುಟ್ಟರೆ ಕರುಕಲಾಗುವ ಮರ
(ಇಂತಹ) ನಶಿಸುವ ವಸ್ತುಗಳಲ್ಲಿ ನಿನ್ನನೆಂದೂ ಕಾಣಲಾರೆ ಶ್ರೀಗುರು ಕೊಟ್ಟೂರೇಶ
ಎಂತಲೂ,
ನಿತ್ಯ ಕಣ್ಮುಂದೆ ಕಾಣುವ ಸಾವಿರಾರು ವಯೋವೃದ್ಧರ
ವಿಕಲಾಂಗರ, ಅಸಹಾಯಕರ ಸೇವೆಗೈಯದ ಮಾನವರು
ಎಂದೂ ನಿನ್ನ ಕಾಣದ ಸಿರಿವಂತ
ಕಲ್ಲಿನ ದೇವರೆಂಬ ಮೂರ್ತಿಗಳಿಗೆ
ಕೋಟಿ ಕೋಟಿ ಹಣವ ಸುರಿದು
ಚಿನ್ನಬೆಳ್ಳಿ ಆಭರಣಗಳ ಹಾಕಿ
ಮೌಢ್ಯದ ಉತ್ತುಂಗಕ್ಕೇರುವ
ಅಂಧ ಭಕ್ತರ ಮನವ ತಿದ್ದಿ
ಸಮಾಜವ ಉದ್ಧರಿಸೋ ಪ್ರಭು
ಶ್ರೀ ಗುರು ಕೊಟ್ಟೂರೇಶ!
ಎಂದು ಶ್ರೀಯುತರು ತಮ್ಮ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶನ ಸ£್ನದಿಯಲ್ಲಿ ತಮ್ಮ ಬೇಡಿಕೆ ಸಲ್ಲಿಸಿದ್ದಾರೆ.
ಈ ವಚನಗಳನ್ನು ಶ್ರೀ ಕೊಟ್ರ್ರೇಶ್ರವರು ಬಸವಣ್ಣನವರ ವಚನವೊಂದರಿಂದ ಪ್ರಭಾವಿತರಾಗಿ ಅನುವ್ಯವಸಾಯಗೈದುದು ಮಾತ್ರವಲ್ಲ, ತಮ್ಮ ಸಮಕಾಲೀನ ಪ್ರಜ್ಞೆಯ ಪ್ರಣೀತ ಪ್ರದ್ಯೋತದಿಂದ ಮಾಡಿದವುಗಳಾಗಿವೆ. ಇಂದು ಭಾರತೀಯರಲ್ಲಿ ಗಗನಚುಂಬಿಯಾಗಿದೆ. ಅನಂತ ಪದ್ಮನಾಭನಿಗೆ, ತಿರುಪತಿ ತಿಮ್ಮಪ್ಪನಿಗೆ ಹೊನ್ನಿನ ಹೊಳೆ ಹರಿಸುವ ಮೂಢರನ್ನು ಕಂಡು ನಗಬೇಕೋ ಅಳಬೆಕೋ ಅರಿಯದಾಗಿದೆ. ಇಂದು ಕಲ್ಲು ದೇವರಿಗೆ ಸಲ್ಲುವ ಹೊನ್ನು ವಸ್ತ್ರಗಳ ಪುರಸ್ಕಾರ ಜೀವಂತ ವ್ಯಕ್ತಿಗಳಿಗೆ ಸಿಗದಿರುವುದು ದುರಂತ ! ಕೋಟಿ ಕೋಟಿ ಬೆಲೆ ಬಾಳುವ ಚಿನ್ನ, ವಜ್ರ ವೈಡೂರ್ಯಗಳೆಲ್ಲ ಪಾರು ಪತ್ತೆದಾರರ ಮನೆಗಳನ್ನು, ಅಪ್ಪಟ ಹೊನ್ನು ವಜ್ರಗಳೆಲ್ಲವೂ ಗಿಲೀಟು ಮಾಲುಗಳಾಗಿ ಮಾರ್ಪಟ್ಟಿವೆ. ಇಂದಿನ ಆಷಾಢ ಭಕ್ತರಿಂದ ನಲವತ್ತು ಐವÀತ್ತು ಕೋಟಿ ಬೆಲೆಯ ವಜ್ರ ವೈಡುರ್ಯಗಳ ಕಿರೀಟವನ್ನು ಮಾಡಿಸಿ, ಕಲ್ಲು ದೇವರ ತಲೆಯ ಮೇಲೆರಿಸಿದರೆ ಆ ಕಲ್ಲಿನ ಪ್ರತಿಮೆ ಏನು ತಾನೆ ತೊಟ್ಟು ಆನಂದಿಸಬಹುದು. ಅದರ ಬದಲು ಅಷ್ಟೂ ಹಣವನ್ನು ಒಂದು ನಿಧಿಯಾಗಿರಿಸಿ, ಬೀದಿ ಭಿಕಾರಿಯಾಗಿ ಅಲೆಯುವ ಸಾವಿರಾರು ಅನಾಥ ಮಕ್ಕಳಿಗೆ ಆ ಮೊತ್ತದ ಬಡ್ಡಿ ಹಣದಲ್ಲಿ ಒಂದು ಅನಾಥಾಲಯ ನಿರ್ಮಿಸಿ, ಶಿಕ್ಷಣ ಕೊಡಿಸುವ ಮೂಲಕ ಅವರಿಗೊಂದು ಬದುಕು ಕೊಟ್ಟಿದ್ದರೆ, ಬಾಳ ಬೆಳಕು ನೀಡಿದ್ದರೆ ಕೋಟಿ ಕೋಟಿ ಜೀವಂತ ದೇವರುಗಳನ್ನು ಪೂಜಿಸಿದ ಪುಣ್ಯಪ್ರಾಪ್ತವಾಗುತ್ತಿತ್ತು. ಮೌಢ್ಯ ಮನೆ ಮಾಡಿಕೋಂಡಿರುವ ಈ ಮೂರ್ಖರು ಮಾಡಬಾರದನ್ನು ಮಾಡಿ, ಆ ಪಾಪ ಪರಿಹಾರಕ್ಕಾಗಿ ಕಲ್ಲು ದೇವರಿಗೆ ಲಂಚ ಕೊಡುವ ಸಂಸ್ಕಾರಕ್ಕೆ ಕೈ ಹಾಕುತ್ತಿದ್ದಾರೆ. ಇಂಥವರಿಗೆ ಶ್ರೀ ಗುರು ಕೊಟ್ಟೂರೇಶ ಔದಾರ್ಯದ ಮಜಲು ತೋರಿಸೋ ತಂದೆ ಎಂದು ಬೇಡಿದ್ದಾರೆ.

ಈ ಮುಂದಿನ ವಚನಗಳು ವಿಶೇಷವಾಗಿ ಕೊಟ್ರೇಶ್ ರವರ ಸ್ವಾನುಭಾವದ ಸೃಷ್ಠಿಗಳು. ಅವರಿಗೆ ಇಹಲೋಕದ
ಒಬ್ಬ ರೈತ ತನ್ನ ಹೊಲದ
ಹುಲ್ಲು ಕಿತ್ತು, ಕಲ್ಲು ಹೆಕ್ಕಿ ಹೆಂಟಿ ಹುಡಿಗೈದು
ಹೊಲವ ಹಸನುಗೊಳಿಸುವನಯ್ಯಾ
ಬೀಜ ಬಿತ್ತನೆಗೈದು ಹಸನಾಗಿ ಬೆಳೆ ಬೆಳೆದು
ಧರೆಗೆ ಬೆವರ ಸುರಿಸುವನಯ್ಯಾ
ಬೆಳೆದ ಬೆಳೆಗಳ ಪಾಲಿಗೆ ತಕ್ಕ ಬೆಲೆಗಳು ಸಿಗದೆ
ನೇಣಿಗೆ ಕೊರಳ ಒಡ್ಡುವನಯ್ಯಾ
ಕಷ್ಟವರಿಯದ ಆ ನಿಸ್ವಾರ್ಥ
ಅನ್ನದಾತಂಗೇಕೆ ಈ ಶಿಕ್ಷೆ
ತಂದೆ ಶ್ರೀ ಗುರು ಕೊಟ್ಟೂರೇಶ ! (ವಚನ-74)
ಎಂದು ಕಳಕಳಿಯಿಂದ ತಮ್ಮ ಅಳಲನ್ನು ತಮ್ಮ ಆರಾಧ್ಯದೆದುರಿನಲ್ಲಿ ತೋಡಿಕೊಂಡಿದ್ದಾರೆ.
ನೇಗಿಲ ಯೋಗಿಯ ಕುರಿತು ಮತ್ತೊಂದು ವಚನ ಇದಕ್ಕೆ ಪೂರಕವೂ ಆಗಿದೆ, ಪೋಷಕವೂ ಆಗಿದೆ ಕೇಳಿ..
ನೇಗಿಲ ಯೋಗಿಯ ಸ್ಥಿತಿ
ದಿನೇ ದಿನೇ ಕುಂಟಿತವಾಗುತ್ತಿದೆಯಯ್ಯ
ರೆಕ್ಕೆ ಮುರಿದ ಪಕ್ಷಿ ಅದೆಷ್ಟೂ ದೂರ ಹಾರಬಲ್ಲದಯ್ಯ
ಕಾಲಿಲ್ಲದ ಹೆಳವ ಓಡಿ ಓಡಿ ಅದೆಷ್ಟು ದೂರ ಕ್ರಮಿಸಬಲ್ಲನಯ್ಯ
ಕಣ್ಣಿಲ್ಲದ ಕುರುಡ ಏನನ್ನ ನೋಡುವನಯ್ಯ
ನೇಗಿಲಯೋಗಿಗೆ
ದುಡಿತದ ಪ್ರತಿಫಲವೇ ರೆಕ್ಕೆಗಳಯ್ಯಾ
ಬೆಂಬಲದ ಬೆಳೆಗಳೇ ಅವನಿಗೆ ಕಾಲುಗಳಯ್ಯ
ಕಾಲಕಾಲಕ್ಕಾಗುವ ಮಳೆಯೇ ಅಧೃಷ್ಟದ ವೃಷ್ಟಿಯಯ್ಯಾ
ಇವೆಲ್ಲವನು ಸರಿಯಾದ ರೀತಿಯಲಿ ಹರಸೋ ಪ್ರಭು
ಶ್ರೀ ಗುರು ಕೊಟ್ಟೂರೇಶ (ವಚನ-68)
ಈ ವಚನ ಯಾವ ಬಗೆಯ ವ್ಯಾಖ್ಯಾನವನ್ನು ನಿರೀಕ್ಷಿಸುವುದಿಲ್ಲ. ಏಕೆಂದರೆ ಸಕಲವೂ ಸ್ವಯಂವೇದ್ಯ ಅದ್ಯತನ ಜೀವನ ಅಧೋಗತಿಗಳಿಯುತ್ತಿರುವುದನ್ನು ಕುರಿತು ಕೊಟ್ರೇಶ್...........
ಕ್ರೂರ ಮೃಗಗಳ ಬೀಡಾಯಿತಯ್ಯ
ಎಲ್ಲಿಯೂ ಕರುಣೆ ಕಾಣದಯ್ಯ
ಸ್ವಾರ್ಥವೇ ತುಂಬಿದೆಯಯ್ಯ
ಸಜ್ಜನಿಕೆ ಮಾಯವಾಗಿದೆಯಯ್ಯ
ಮಠಗಳು ಗುರು ಹೀನವಾದವಯ್ಯ
ಮನಗಳಲ್ಲಿ ನೈಚ್ಯತೆ ತುಂಬಿಹುದಯ್ಯ!
ಮಂದಿರ, ಮಸೀದಿ, ಚರ್ಚಗಳಲಿ
ಸ್ವಾರ್ಥ, ಕ್ರೌರ್ಯ, ವಂಚನೆಗಳೇ
ತುಂಬಿ ತುಳುಕುವವಯ್ಯಾ
ಇನ್ನೆಲ್ಲಿ ನೀನು ವಾಸವಾಗಿರುವೆಯಯ್ಯ
ಮತ್ತೆಲ್ಲಿ ಸುಕಾರ್ಯ ನಡೆಸುವುದಯ್ಯ
ಶ್ರೀ ಗುರು ಕೊಟ್ಟೂರೇಶ!
ಈ ಅತೃಪ್ತಿಯ ಬಗೆಗೆ ಕೊಟ್ಟೂರೇಶರಿಗೆ ವೈರಾಗÀ್ಯದಾಕಳಿಕೆ ಬಂದು ನಿದ್ದೆಗೆಡಿಸಿದೆ. ಅಂತಿದ್ದರೂ ಶ್ರೀಯುತರ ಅಂತರಂಗದಲ್ಲಿ ಮಾನವನ ಹುಟ್ಟು ಸಾರ್ಥಕ್ಯ ಪಡೆಯಬೇಕಾದರೆ ನಿನ್ನೆಯನ್ನೇ ನೆನೆದಿರಬೇಕು. ಏಕೆಂದರೆ ನಿನ್ನೆ ಆಗಲೇ ಸತ್ತಿದೆ. ನಾಳೆ ಹುಟ್ಟಿಲ್ಲ. ಹುಟ್ಟದಿರುವ ನಾಳೆ, ಸತ್ತಿರುವ ನಿನ್ನೆಯಷ್ಟೆ ನಿಷ್ಫಲ. ಆದರೂ ಅದ್ಯತನದ ಬದುಕು ಅಂದಂತೇ ತನ್ನ ಶ್ರೇಷ್ಠ ಚಿಂತನೆಯ ಸಾಧ್ಯತೆಗಳನ್ನು ರೂಪಿಸಿಕೊಳ್ಳುತ್ತಾ ಸಾಗಬೇಕು. ಅಂತೆಯೇ
‘ಗುರಿಯೊಂದ ಹಿಡಿದು ಸಾಧಿಸುವ ತವಕ ಕಾಯಕವಾಗಬೇಕು’
ಎಂಬ ಸದ್ಭಾವನೆಯ ಚಿಂತನೆ ವಚನಗಾರರ ಪ್ರಾಂಜಲ ಮನದ ಪಾವಿತ್ರ್ಯತೆಗೆ ಸಾಕ್ಷಿಯಾಗಿದೆ. ಅಂತೆಯೇ ........
ಅಸಮದಲಿ ಸಮತೆಯನು
ಕಾಣಲೆತ್ನಿಸಬೇಕಯ್ಯ
ವಿಷಮದಲ್ಲಿ ಮೈತ್ರಿಯನು
ಬೆಸೆಯಲೆತ್ನಿಸಬೇಕಯ್ಯ
ಅಸಮಂಜಸದಿ ಸಮನ್ವಯದ
ಸೂತ್ರ ಸಾರಬೇಕಯ್ಯ
ಅಂತಾದಾಗ ಮಾತ್ರ ಜಗ ಸದಾ
ಸುಖಿಯಾಗಿರಲು ಸಾಧ್ಯವಯ್ಯ
ತಂದೆ ಶ್ರೀಗುರು ಕೊಟ್ಟೂರೇಶ (ವಚನ 79)
ಎಂಬ ಸ್ತುತ್ಯಾರ್ಹವಾದ ಆಶಯವನ್ನು ಅಭಿವ್ಯಕ್ತಿಸುತ್ತಾ, ಸದಾಕಾಲವೂ ವಿಶ್ವ ವ್ಯಾಪಾರದ ವ್ಯವಹರಣೆಯನ್ನು ವೀಕ್ಷಿಸುವ ಸಾಕ್ಷ್ಯಸ್ವರೂಪನೂ ಮೈಮರೆತವರನ್ನು ಸದಾ ಕಾಲವೂ ಎಚ್ಚರಿಸುವ ಜಾಗೃತ ಶಕ್ತಿ ಸ್ವರೂಪನಾದ ಶ್ರೀಗುರು ಕೊಟ್ಟೂರೇಶನನ್ನು ಒಂದು ಗಡಿಯಾರದ ಪ್ರತಿಮೆಯ(imಚಿge)
ಮೂಲಕ ಸಾಕ್ಷೀಕರಿಸಿದ್ದಾರೆ.
ಆತ್ಮೀಯರೆ, ಕಡೆಯದಾಗಿ ಒಂದು ಮಾತು. ಸನ್ಮಾನ್ಯ ಕೊಟ್ರೇಶ್ ಎಸ್. ಉಪ್ಪಾರ್ ರವರ ಶೈಲಿ ಸುಭಗ, ಸುಂದರ ಅಂತೆಯೇ ಸತ್ವಪೂರ್ಣ, ತುಂಬು ಪರಿಣಾಮಕಾರಿ.
ಶ್ರೀಯುತರ ಆಶಯಗಳು ಅನಂತ, ಆದರೂ ಅವು ಲೋಕಕಲ್ಯಾಣಕಾರಕಗಳು.
ಅವು ಹಣ್ಣಾಗಲಿ ಎಂದು ಆಶಿಸಿ ಆತ್ಮೀಯ ಅನಿಮಿತ್ತ ಬಂಧು ಶ್ರೀ ಕೊಟ್ರೇಶ್ ರವರಿಗೆ ಸಕಲ ಶುಭಗಳನ್ನೂ ಕೋರಿ ವಿರಮಿಸುವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ