ಶನಿವಾರ, ಅಕ್ಟೋಬರ್ 25, 2014

ಬಹುಮುಖ ಪ್ರತಿಭೆಯ ಬರಹಗಾರ- ಡಿ.ಆರ್. ಚನ್ನೇಗೌಡರು - ಕೊಟ್ರೇಶ್ ಎಸ್.ಉಪ್ಪಾರ್


    ‘ದೊರೆ ಚೆನ್ನಿಗರಾಯ’ ಎಂಬ ಕಾವ್ಯನಾಮದಲ್ಲಿ ನೂರಾರು ಉತ್ಕøಷ್ಟ ಕವಿತೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೀರ್ತಿ ಡಿ.ಆರ್.ಚನ್ನೇಗೌಡರದು. ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಪಾಂಡಿತ್ಯ ಪಡೆದಿದ್ದ ಇವರು ಜೀವನ ಚರಿತ್ರೆÉ, ಇತಿಹಾಸ, ಕಾವ್ಯ, ಸಂಪಾದನೆ, ನಿಬಂಧ, ಲೇಖನಗಳು, ಸಂಶೋಧನೆ ಮುಂತಾದ ಸಾಹಿತ್ಯ ವಿಭಾಗಗಳಲ್ಲಿ ಅಗ್ರಗಣ್ಯ ಸೇವೆ ಸಲ್ಲಿಸಿರುವ ಶ್ರೀಯುತ ಡಿ.ಆರ್. ಚನ್ನೇಗೌಡರು ಕ್ರಿ.ಶ 1906 ಜೂನ್ 16 ಹಾಸನ ಜಿಲ್ಲಾ ಬೂವನಹಳ್ಳಿಯ ದೊಂದೇಗೌಡರ ಜೇಷ್ಠ ಪುತ್ರರಾಗಿ ಜನಿಸಿದರು.
     ಚಿಕ್ಕ ವಯಸ್ಸಿನಿಂದಲೇ ಬಹುಮುಖ ಪ್ರತಿಭೆಯ ಗಣಿಯಾಗಿದ್ದ ಚನ್ನೇಗೌಡರು ಸಾಹಿತ್ಯ, ಕಲೆ, ಸಂಶೋಧನೆ ಮುಂತಾದ ಕ್ಷೇತ್ರಗಳತ್ತ ಆಕರ್ಷಣೆಗೊಂಡರು. ಸ್ಥಳಪುರಾಣ, ಇತಿಹಾಸಗಳ ಹಿಂದೆ ಬೆನ್ನಟ್ಟಿದ ಇವರು ಆ ದಿಸೆಯಲ್ಲಿ ಅನೇಕ ಕೃತಿಗಳನ್ನು ನೀಡಿದ್ದಾರೆ. ಆಗಿನ ಮೈಸೂರು ಸರ್ಕಾರದ ಸೆಕ್ರೆಟರಿಯೇಟ್ ನಲ್ಲಿ ರಿಕಾರ್ಡ್‍ಸ್ ಸೂಪರಿಟೆಂಡೆಂಟ್ ಆಗಿ ಕಾರ್ಯನಿರ್ವಹಿಸಿದ್ದಾರೆ.
   ಇವರ ಸಾಹಿತ್ಯ ದೀವಿಗೆಗೆ ಇವರ ಸತಿಯಾದ ಶ್ರೀಮತಿ ಕೌಸಲ್ಯಾದೇವಿ ಯವರು ತೈಲವಾಗಿ ಸದಾ ಸ್ಫೂರ್ತಿ ನೀಡಿದವರು. ಡಿ.ಆರ್.ಸಿ ಯವರು ಕನ್ನಡ ಸಹಿತ್ಯ ರಾಶಿಗೆ ಹಲವಾರು ಗ್ರಂಥಾರ್ಪಣೆ ಮಾಡಿದ್ದಾರೆ. ಅವುಗಳಲ್ಲಿ ಯುವಕರ ಶಕ್ತಿ, ಜೋಸೆÀಫ್ ಆಡಿಸÀನ್, ಅಶೋಕ ಚಕ್ರವರ್ತಿ, ದಿನಚರಿ ಧ್ಯಾನ, ನಮ್ಮ ಮಹಾರಾಜರು, ಕೆಲವು ಪ್ರಬಂಧಗಳು, ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಪರಮಹಂಸ ದೇವ, ಕಾಡು ಕುಸುಮಗಳು, ಗೋಪಾಲಕೃಷ್ಣ ಗೋಖಲೆ, ವಲ್ಲಭಬಾಯಿ ಪಟೇಲ್, ಜೀವನದ ಹಾಳೆಗಳು, ಶಿವಾಜಿ ಮಹಾರಾಜ, ವೀರ ಹನುಮಂತ, ಶ್ರೀಗುರು ವಚನಗಳು, ನೀತಿಕೋಶ, ಕೆ.ಎಚ್. ರಾಮಯ್ಯನವರ ಭಾಷಣ ಮುಂತಾದ ಕೃತಿಗಳು ಪ್ರಮುಖವಾಗಿವೆ. ಇವುಗಳಲ್ಲಿ ‘ದಿನಚರಿ ಧ್ಯಾನ’ ಬಹಳ ಹೆಸರು ಮಾಡಿದ ಕೃತಿಯಾಗಿದೆ. ಇದೊಂದು ಪ್ರಾರ್ಥನಾ ಗೀತೆಗಳ ಸಂಗ್ರಹವಾಗಿದ್ದು. ಜನವರಿ ಒಂದರಿಂದ ಡಿಸೆಂಬರ್ ಮೂವತ್ತೊಂದರವರೆಗೆ ದಿನಕ್ಕೊಂದು ಪ್ರಾರ್ಥನೆಯಂತೆ 366 ದಿನಗಳಿಗೂ ಸಂಬಂಧಿಸಿದವುಗಳಾಗಿವೆ.
     ಈ ಗ್ರಂಥದ ಪ್ರಸ್ತಾವನೆಯಲ್ಲಿ ಲೇಖಕರೇ ಹೇಳುವಂತೆ ‘ಈ ಗ್ರಂಥದಲ್ಲಿರುವ ಭಾವನೆಗಳು ನಾನಾ ದೇಶದ ನಾನಾ ಭಾಷೆಗಳಿಂದ ಸಂಗ್ರಹಿಸಲ್ಪಟ್ಟಿದೆ. ಮಹಾಪುರುಷರು ಯಾವದೇಶದವರೇ ಆಗಿರಲಿ ಅವರು ಯಾವ ಕಾಲಕ್ಕೆ ಸೇರಿದವರೇ ಆಗಿರಲಿ ಅಂತಹರ ಪ್ರೇರಣೆಯಿಂದ ಅವರು ನುಡಿದಿರತಕ್ಕ ವಾಣಿಯು ಕಾಲ ದೇಶಗಳ ಪರಿಮಿತಿಗೆ  ಒಳಪಡೆದೆ ಅಮರತ್ವವನ್ನು ಪಡೆದಿರುವುದು. ಭಾವಾವೇಶದ ಆನಂದ ಲಹರಿಯು ಅದು. ಈ ಗ್ರಂಥದಲ್ಲಿ ವೇದಾಂತದ ಜೊತೆಗೆ ಲೌಕಿಕ ವಿಚಾರಗಳ ವಾಣಿಯೂ ಅಲ್ಲಲ್ಲಿ ಇದೆ.... ಅಮೃತ ವಾಣಿಗಳೆಂಬ ಈ ಆಣಿಮುತ್ತುಗಳಲ್ಲಿ ಕರ್ನಾಟಕ ಬಂಧುಗಳಿಗೆ ಒಂದೆರಡು ನಲ್ನುಡಿಗಳು ದೊರೆತು ಅವರ ಜೀವೀತದ ಒಂದು ಅರೆಗಳಿಗೆಯಾದರೂ ಉಲ್ಲಾಸವಾಗುವುದಾದರೆ ಇದರ ಮನನದಿಂದ ನಮ್ಮೆಲ್ಲರಿಗೂ ನಮ್ಮ ಜನನಿ, ಜನ್ಮಭೂಮಿ, ಜನಾರ್ಧನ ಇವರ ಸೇವೆಯಲ್ಲಿ ಮಮತೆ ಮಾಡುವುದಾದರೆ ಈ ಅಳಿಲ ಮಳಲ ಸೇವೆಯು ಸಾರ್ಥಕವಾಯಿತೆಂದು ನಾನು ಹರ್ಷಿಸುವೆನು. ಈ ಉತ್ತಮ ಗ್ರಂಥವನ್ನು ನಮ್ಮೆಲ್ಲರ ತಾಯಿ ತಂದೆಯಾದ ಜಗದೀಶ್ವರನಿಗೆ ಸಮರ್ಪಣೆ ಮಾಡಿದ್ದೇನೆ’ ಎಂದಿದ್ದಾರೆ.
     ಪಂಡಿತ್ ಸ್ವಾಮಿಗೌಡರು ತಮ್ಮ ‘ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಕೊಡುಗೆ’ ಎಂಬ ಗ್ರಂಥದ ಪು.ಸಂ.90 ರಲ್ಲಿ ಡಿ.ಆರ್. ಚನ್ನೇಗೌಡರ ದಂಪತಿಗಳ ಬಗ್ಗೆ ಈ ರೀತಿ ಉಲ್ಲೇಖಿಸಿದ್ದಾರೆ- ‘ಶ್ರೀಮತಿ ಮತ್ತು ಶ್ರೀಯುತ ಚನ್ನೇಗೌಡರವರು ತಮ್ಮದೇ ಆದ ‘ಜ್ಞಾನವೇ ಜೀವನದ ಜ್ಯೋತಿ’ (ಞಟಿoತಿಟeಜge is ಟiಜಿe’s ಟighಣ) ಎಂಬ ದಿವ್ಯ ಲಾಂಛನನಿಂದ ತಮ್ಮ ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ‘ಶ್ರೀ ರಾಮಕೃಷ್ಣ ಪುಸ್ತಕ ಭಂಡಾರ’ ಎಂಬ ತಮ್ಮ ಪ್ರಕಾಶನದಲ್ಲಿಯೇ ಎಲ್ಲಾ ಗ್ರಂಥಗಳನ್ನೂ ಬೆಳಕಿಗೆ ತಂದು ಯಶೋಮತಿಗಳಾದಿದ್ದಾರೆ. ಈ ದಂಪತಿಗಳಿಂದ ಕನ್ನಡ ಸಾಹಿತ್ಯಶ್ರೀಗೆ ನಾನಾ ಬಗೆಯ ಕಾವ್ಯ ಕುಸುಮಗಳು ಸಮರ್ಪಿಸಲ್ಪಟ್ಟಿವೆ.’
   ‘ನೀತಿಕೋಶ’ ಎಂಬ ಕೃತಿಯನ್ನು ದಂಪತಿಗಳಿಬ್ಬರೂ ಸೇರಿ ಹೊರತಂದಿದ್ದಾರೆ. ಈ ಕೃತಿಯ ಮುನ್ನುಡಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಮಾಸ್ತಿ ವೆಂಕಟೇಶ್ ಅಯ್ಯಂಗರ್ ಅವರು ‘ಈ ಪುಸ್ತಕದ ಲೇಖಕರಾದ ದಂಪತಿಗಳು ಕನ್ನಡಕ್ಕಾಗಿ ಒಂದೇ ಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಈಸೋಪನ ಇತರ ಕಥೆಗಳನ್ನು ಇವರು ಮಕ್ಕಳಿಗಾಗಿ ಮುದ್ರಿಸುವರೆಂದು ನನ್ನ ಆಶೆ, ಹಾಗೆಯೇ ಅವರು ಮಕ್ಕಳಲ್ಲದವರಿಗಾಗಿಯೂ ಪ್ರಕಟಿಸಲೆಂದು ಆಶಿಸುತ್ತೇನೆ’ ಎಂದು ಮನದುಂಬಿ ಹಾರೈಸಿದ್ದಾರೆ.
   ಇವÀರ ‘ಅಶೋಕ ಚಕ್ರವರ್ತಿ’ ಎಂಬ ಕೃತಿಯು ಆಗಿನ ಕಾಲದಲ್ಲಿಯೇ ಉದ್ರಾಸಿನ ಎಸ್.ಎಸ್.ಎಲ್.ಸಿ ಗೆ, ಬೊಂಬಾಯಿ ಹೈಸ್ಕೂಲ್ ತರಗತಿಗೆ ಪಠ್ಯ ವಸ್ತುವಾಗಿ ಆಯ್ಕೆಗೊಂಡದ್ದು ಚನ್ನೇಗೌಡರ ಗಟ್ಟಿತನ ಬರವಣಿಗೆಗೆ ಹಿಡಿದ ಕನ್ನಡಿಯಾಗಿದೆ.
   ಇನ್ನು ಯುವಕರಿಗಾಗಿಯೇ ಜಾಗೃತೆಯ ದೃಷ್ಠಿಕೋನವಿಟ್ಟು ಬರೆದ ಗ್ರಂಥ ‘ಯುವಕರ ಶಕ್ತಿ’ ವಿವೇಕಾನಂದÀರ ದಿಟ್ಟ ಹೆಜ್ಜೆ, ಗಟ್ಟಿ ನಿರ್ಧಾರಗಳು ಈ ಕೃತಿಯಲ್ಲಿ ಪಲ್ಲವಿಸಿವೆ. ಗಾಂಧೀಜಿಯವರ ತತ್ತ್ವ್ವಾದರ್ಶಗಳು, ಕವಿ ರವೀಂದ್ರರ ಕಾವ್ಯ ದೀಮಂತಿಕೆಗಳು ಅರಳಿನಿಂತಿವೆ. ತಾರುಣ್ಯ ಜೀವನದ ಹಲವಾರು ಮಗ್ಗಲುಗಳಿಗೆ ನಿದರ್ಶನವಾಗಿರುವ ಈ ಕೃತಿಯು ಯುವಕರ ಜೀವನ ಸಾಕ್ಷತ್ಕಾರ್ಯಕ್ಕೆ ದಾರಿದೀಪದಂತಿದೆ.
   ಹೀಗೆ ಡಿ.ಆರ್. ಚನ್ನೇಗೌಡರ ಪ್ರತಿಯೊಂದು ಕೃತಿಗಳು ಸಹ ತಮ್ಮದೇಯಾದ ಮೌಲ್ಯಗಳನ್ನೊಳಗೊಂಡಿವೆÉ. ವ್ಯಕ್ತಿಚಿತ್ರಣ, ಕಾವ್ಯ, ಚರಿತ್ರೆ, ಸಂಶೋಧನೆ, ಸಂಪಾದನೆ ಹೀಗೆ ವಿಭಿನ್ನ ರೀತಿಯ ಸಾಹಿತ್ಯ ಕೃಷಿಗೈದು ಧೀಮಂತ ಸಾಹಿತಿ ಚನ್ನೇಗೌಡರು.
   ಇವಲ್ಲದೆ shivಚಿರಿi mಚಿhಚಿಡಿಚಿರಿಚಿ ಮತ್ತು sಡಿi ಟಿಚಿಟಿರಿuಟಿಜಚಿ shಚಿಣಚಿಞಚಿ ಎಂಬ ಆಂಗ್ಲ ಗ್ರಂಥಗಳನ್ನು ನೀಡಿದ್ದಾರೆ. ಪ್ರಬುದ್ದ ಭಾಷಣಕಾರರೂ ಆಗಿದ್ದ ಚನ್ನೇಗೌಡರು ಸಾಹಿತ್ಯವನ್ನು, ಸಮಾಜವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದವರು. ಅಂದುಕೊಂಡಂತೆ ಬಾಳಿ ಬದುಕಿದವರು.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794,9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ