ಗುರುವಾರ, ಅಕ್ಟೋಬರ್ 9, 2014

ಅನಂತರಾಜುರವರ- ಡಾ. ಗೊರೂರು ಮತ್ತು ಇತರ ಲೇಖನಗಳಲ್ಲೊಂದು ಸುತ್ತು -ಕೊಟ್ರೇಶ್ ಎಸ್. ಉಪ್ಪಾರ್


ಅನಂತರಾಜು ತಮ್ಮ ಈ ಕೃತಿಯನ್ನು ನನಗೆ ನೀಡಿ ತುಂಬಾ ದಿನಗಳೇ ಗತಿಸಿಹೋದವು. ಇತ್ತೇಚೆಗೆ ಬಿಡುವು ಮಾಡಿಕೊಂಡು ಅಧ್ಯಯನ ಮಾಡಿದೆ. ಜೊತೆ-ಜೊತೆಗೆ ಕೆಲವು ಅನಿಸಿಕೆಗಳನ್ನು ಟಿಪ್ಪಣಿ ಮಾಡುತ್ತ ಹೋದೆ. ಆ ಸಾರಂಶವನ್ನೇ ಮುಂದೆ ನೀಡುತ್ತಿದ್ದೇನೆ.
ಅನಂತರಾಜು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಲೋಕದಲ್ಲಿ ಈಗಾಗಲೇ ಚಿರಪರಿಚಿತರು. ಯಾವುದೇ ಒಂದು ಪ್ರಬೇಧಕ್ಕೆ ಮೀಸಲಾಗದ ಇವರು ನಾಟಕ, ಕಥೆ, ಲೇಖನ, ವ್ಯಕ್ತಿ ಪರಿಚಯ, ಕಾವ್ಯ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ವ್ಯಕ್ತಿ.
ಈಗಾಗಲೇ ಕನ್ನಡ ಸಾರಸ್ವತ ಲೋಕಕ್ಕೆ ಮೂವತೈದಕ್ಕಿಂತಲೂ ಹೆಚ್ಚಿನ ಕೃತಿಗಳನ್ನು ನೀಡಿರುವ ಇವರು ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ.
ಪ್ರಸ್ತುತ “ಡಾ. ಗೊರೂರು ಮತ್ತು ಇತರೆ ಲೇಖನಗಳು” ಕೃತಿಯು 136+12 ಒಟ್ಟು 148 ಪುಟಗಳೊನ್ನೊಳಗೊಂಡಿದೆ. ಇದರಲ್ಲಿ ಹದಿನೆಂಟು ಲೇಖನಗಳು ಅನಾವರಣಗೊಂಡಿವೆ.
ಸುಧಾಕರ ದರ್ಬೆಯವರ ಚಮತ್ಕಾರದಿಂದ ರೂಪಿತಗೊಂಡ ಗೊರೂರನ್ನೊಳಗೊಂಡ ಮುಖಪುಟ ಸುಂದರವಾಗಿ ಬಂದಿದೆ. ದಿ. ಚಂದ್ರಶೇಖರ ಧೊಳೇಕರರ ಮುನ್ನುಡಿ, ಡಾ. ಎಂ. ಆರ್. ಚಂದ್ರಶೇಖರರ ಆಶಯನುಡಿ ಹಾಗೂ ಜಾನಪದ ತಜ್ಞ ಡಾ. ಹಂಪನಹಳ್ಳಿ ತಿಮ್ಮೇಗೌಡರ ಬೆನ್ನುಡಿಗಳು ಈ ಕೃತಿಗೆ ಕಳೆಕಟ್ಟಿವೆ.
ಮೈಸೂರಿನ ಪದ್ಮಶೇಖರ ಪ್ರಿಂಟರ್ಸನಲ್ಲಿ ಮುದ್ರಣಗೊಂಡ ಈ ಕೃತಿಯನ್ನು ಲೇಖಕರೇ ಸ್ವಂತ ಪ್ರಕಾಶನದಲ್ಲೇ ಹೊರತಂದಿದ್ದಾರೆ. 100 ರೂ ಮುಖ ಬೆಲೆಯ ಈ ಕೃತಿಯು ಮೌಲಿಕವಾಗಿದೆ.
ಒಳ್ಳೆ 18 ಲೇಖನಗಳನ್ನೊಳಗೊಂಡ ಈ ಕೃತಿಯನ್ನು ಕುತೂಹಲಭರಿತವಾಗಿಯೇ ಓದುತ್ತಾ ಹೋದೆ. ಕೊನೆಗೆ ಇವುಗಳಿಗೆ ಲೇಖಕರು ಕ್ರಮಾನುಗತವನ್ನು ನೀಡುವಲ್ಲಿ ಗಮನಹರಿಸಬೇಕಿತ್ತು ಅನ್ನಿಸಿತು. ಆಯಾ ನಿರ್ಧಿಷ್ಟ ವಿಷಯದ ಚೌಕಟ್ಟಿನಲ್ಲಿ ಬರುವ ಲೇಖನಗಳನ್ನು ವಿಭಾಗ ಮಾಡಿ ಕಟ್ಟಿಕೊಟ್ಟರೆ ಓದುಗನಿಗೆ ಗೊಂದಲ ಉಂಟಾಗುವುದಿಲ್ಲ.
ಆದರೂ ನಾನೇ ಇಲ್ಲಿನ ಹದಿನೆಂಟು ಲೇಖನಗಳನ್ನು ಸಂಪೂರ್ಣವಾಗಿ ಓದಿದ ನಂತರ ಈ ಕೆಳಗಿನಂತೆ ವರ್ಗೀಕರಣ ಮಾಡಿಕೊಂಡೆ.
ವ್ಯಕ್ತಿ ಚಿತ್ರಣ
ಗೊರೂರು ಬದುಕು ಬರಹ ಒಂದು ಸಂಕ್ಷೀಪ್ತ ನೋಟ.; ಸುಗಮ ಸಂಗೀತ ಶೈಲಿಯ ಸೃಷ್ಠಿಕರ್ತ-ಪಿ. ಕಾಳಿಂಗರಾವ್; ಕಾರ್ಮಿಕ ದಿನಾಚರಣೆ ಮತ್ತು ಡಾ. ಕೆ. ಎಸ್. ಶರ್ಮ,
ಸಂಸ್ಕ್ರತಿ ಮತ್ತು ಭಾಷೆ:
ಸಂಭ್ರಮದ ಸಂಕಾಂ್ರತಿ, ಯುಗಾದಿ, ಗೌರಿಗಣೇಶ ಮತ್ತು ದೇಪಾವಳಿ ಹಬ್ಬಗಳು; ಭಾಷೆ ಸಂಸ್ಕøತಿ ಮತ್ತು ಸಾಮಾಜಿಕತೆ.; ನಮ್ಮೂರ ಜಾತ್ರೆ ಅಲ್ಲಿಗೆ ದನಗಳ ಯಾತ್ರೆ.; ದೇಶ-ವಿದೇಶಗಳ ಅಪೂರ್ವ ನಾಣ್ಯ-ನೋಟುಗಳ  ಪ್ರದರ್ಶನ ; ಬಾಳ್ ಏಳ್ ಆಳ್ ಕನ್ನಡ ತಾಯ್ .
ಸಾಹಿತ್ಯ, ಸಂಗೀತ ಮತ್ತು ಜನಪದ
ಜನಪದ ಕಲೆ ವೀರಗಾಸೆ.; ಹಾಸನ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇÀಳನಗಳು.;
ಶಿಕ್ಷಣ, ಗ್ರಾಮೀಣ ಬದುಕು ಮತ್ತು ಓದು
ಗ್ರಂಥಾಲಯ ಜ್ಞಾನದೇಗುಲ, ಗ್ರಂಥಗಳು ಜ್ಞಾನ ಭಂಡಾರದ ಬೀಗದ ಕೈ.; ಗ್ರಾಮ ಜೀವನದೊಂದಿಗೆ ಇಂಗಿ ಹೋಗುತ್ತಿರುವ ಕೆರೆಗಳು.; ನವಸಾಕ್ಷರ ಮಹಿಳೆಯರ ಸ್ವಾವಲಂಬನೆಯ ಹಾದಿ.; ಬೆಟ್ಟದ ತಪ್ಪಲಿನಲ್ಲಿ ರಾಜೀವಗಾಂಧಿ ಕನಸಿನ ವಿದ್ಯಾಲಯ.;
ರಂಗಭೂಮಿ ಮತ್ತು ವ್ಯಕ್ತಿತ್ವ ವಿಕಾಸ
ರಂಗಭೂಮಿಗೆ ಹಾಸನ ತಾಲೂಕಿನ ಕೊಡುಗೆ.; ಮನವೆಂಬ ಮರ್ಕಟದ ಬೆನ್ನೇರಿ.; ವ್ಯಕ್ಕಿಯ ವ್ಯಕ್ತಿತ್ವ ವಿಕಸನ ಮತ್ತು ಯುವಜನಾಂಗ.;
ಗೀಜುಗನ ಹಕ್ಕಿಗಳ ನಾಜೂಕಿನ ಗೂಡು.
*
ಪ್ರಥಮ ಭಾಗದಲ್ಲಿ ಬರುವ ಹಲವಾರು ಲೇಖನಗಳು ವ್ಯಕ್ತಿಚಿತ್ರಣಗಳನ್ನು , ಒಳಗೊಂಡಿದೆ. ಪ್ರತಿಯೊಂದು ಲೇಖನಗಳು ತಮ್ಮದೇಯಾದ ಪ್ರಾಮುಖ್ಯತೆ ಹೊಂದಿದೆ.
ಡಾ. ಗೊರೂರರ ಬದುಕು, ಬರಹ ಒಂದು ಸಂಕ್ಷಿಪ್ತ ನೋಟ.
ಈ ಲೇಖನದಲ್ಲಿ ಗೊರೂರಿನ ಇತಿಹಾಸ, ಆಡಳಿತದಿಂದ ಹಿಡಿದು ಆರ್. ನರಸಿಂಹಚಾರ್, ರಾಮಸ್ವಾಮಿ ಅಯ್ಯಂಗಾರ್, ಜಿ. ಎಸ್ ಸಂಪತ್ತಯ್ಯಂಗಾರ್. ಸೋಮಶೇಖರ್ ಮುಂತಾದರ ಕಿರುಪರಿಚಯ ಇದೆ. ಬಹುಮುಖವಾಗಿ ಇಲ್ಲಿ ಲೇಖಕರು ರಾಮಸ್ವಾಮಿ ಅಯ್ಯಂಗಾರ್‍ರ ಜನನ, ಬಾಲ್ಯ, ಬದುಕು, ಬರಹಗಳ ಬಗ್ಗೆ ಸಮಗ್ರವಾಗಿ ಬೆಳಕು ಚೆಲ್ಲಿದ್ದಾರೆ.
ಸುಗಮ ಸಂಗೀತ ಶೈಲಿಯ ಸೃಷ್ಟಿಕರ್ತ ಪಿ. ಕಾಳಿಂಗರಾವ್
ಪ್ರಸ್ತುತ ಲೇಖನದಲ್ಲಿ ಪಿ. ಕಾಳಿಂಗರಾವ್ ಅವರ ಬಾಲ್ಯ, ಶಿಕ್ಷಣ, ಹವ್ಯಾಸ, ರಂಗಭೂಮಿ, ಹಿನ್ನೆಲೆ ಗಾಯನ, ಸಂಗೀತ ಹೀಗೆ ಸಮಗ್ರವಾಗಿ ಚಿತ್ರಿಸಿದ್ದಾರೆ. ಹಾಗೆಯೇ ಸಂಗೀತ ಪ್ರೇಮಕ್ಕೂ ಹಾಸನ ಜಿಲ್ಲೆಯ ಕೂಡುಗೆಯೇನೆಂಬುದನ್ನು ಪ್ರಶ್ನಿಸಿಕೊಂಡು ಸುಮಾರು ಐವತ್ತಕ್ಕೂ ಹೆಚ್ಚು ಕಂಠÀ ಮಾಧುರ್ಯ ಹೊಂದಿದ ವ್ಯಕ್ತಿಗಳನ್ನು ಸ್ಮರಿಸಿಕೊಂಡಿದ್ದಾರೆ.
ಕಾರ್ಮಿಕ ದಿನಾಚರಣೆ ಮತ್ತು ಡಾ. ಕೆ. ಎಸ್. ಶರ್ಮ:-
ಜಾಗತಿಕವಾಗಿ ಪ್ರತಿವರ್ಷ ಮೇ ದಿನಾಚರಣೆಯನ್ನು ಮೇ 1ರಂದು ಕಾರ್ಮಿಕ ದಿನಾಚರಣೆಯಾಗಿ ಆಚರಿಸುತ್ತೇವೆ. ಪ್ರಸ್ತುತ ಲೇಖನದಲ್ಲಿ ಈ ದಿನಾಚರಣೆಯ ಹಿನ್ನಲೆ, ಬೆಳೆದು ಬಂದ ದಾರಿಯ ಜೊತೆಗೆ ಕಾರ್ಮಿಕ ವರ್ಗದಲ್ಲಿ ವಿಶಿಷ್ಠÀವಾಗಿ ಗುರುತಿಸಿಕೊಂಡಿದ್ದ ಡಾ. ಕೆ. ಎಸ್. ಶರ್ಮ ರವರ ಬದುಕು, ಹೋರಾಟ, ಸಾರ್ವಜನಿಕ ಕೊಡುಗೆಗಳ ಬಗ್ಗೆ ಅನಂತರಾಜು ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ.
ಎರಡನೇಯ ಭಾಗದಲ್ಲಿ ಐದು ಲೇಖನಗಳು ಸಂಸ್ಕøತಿ ಮತ್ತು ಭಾಷೆಗೆ ಸಂಬಂಧಿಸಿದವುಗಳು ಮೂಡಿವೆ.
ಸಂಭ್ರಮದ ಸಂಕ್ರಾತಿ, ಯುಗಾದಿ, ಗೌರಿ ಗಣೇಶ ಮತ್ತು ದೀಪಾವಳಿ ಹಬ್ಬಗಳು
ಇಲ್ಲಿ ಹಿಂದೂಗಳ ಪ್ರಮುಖ ಹಬ್ಬಗಳಾದ ಸಂಕ್ರಾತಿ, ಯುಗಾದಿ ಗೌರಿ ಗಣೇಶ ಮತ್ತು ದೀಪಾವಳಿ ಹಬ್ಬಗಳ ಆಚರಣೆ, ನಡೆ-ನುಡಿ, ಸಂಪ್ರದಾಯಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದಾರೆ. ಪ್ರತಿಯೊಂದು ಹಬ್ಬಗಳ ಪ್ರಾಮುಖ್ಯತೆ, ಸಾಮಾಜಿಕ ಒಳಿತುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇಲ್ಲಿ ಸಾಧ್ಯವಿದ್ದಿದ್ದÀರೆ ಬೇರೆ ಧರ್ಮೀಯ ಹಬ್ಬಗಳ ಪರಿಚಯವನ್ನು ಮಾಡಬಹುದಿತ್ತು ಎನ್ನಿಸಿತು.
ಭಾಷೆ, ಸಂಸ್ಕøತಿ ಮತ್ತು ಸಾಮಾಜಿಕತೆ
ಪ್ರಸ್ತುತ ಲೇಖನದಲ್ಲಿ ಭಾಷೆಯ ಸ್ವರೂಪ, ಸಂಸ್ಕøತಿ ವಿಕಾಸ ಹಾಗೂ ಸಾಮಾಜಿಕ ಬೆಳವಣಿಗೆಗಳು ಒಂದಕ್ಕೊಂದು ಹೇಗೆ ಆಂತರಿಕವಾಗಿ ಬೆಸೆದುಕೊಂಡಿವೆ ಎಂಬುದನ್ನು ಅನಂತರಾಜುರವರು ಸೊಗಸಾಗಿ ವಿಶ್ಲೇಷಿಸಿದ್ದಾರೆ.
ನಮ್ಮೂರ ಜಾತ್ರೆ ಅಲ್ಲಿ ಜನಗಳ ಯಾತ್ರೆ
ಈ ಲೇಖನದಲ್ಲಿ ಲೇಖಕರು ಹಾಸನ ಜಿಲ್ಲೆಯಾದ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದ ಜಾತ್ರೆಗಳು ಅದರಲ್ಲೂ ವಿಶೇಷವಾಗಿ ದನಗಳ ಜಾತ್ರೆಗಳ ಬಗ್ಗೆ ಗಮನ ಹರಿಸಿದ್ದಾರೆ. ಹಾಗೆಯೇ ಇಲ್ಲಿನ ಜಾತ್ರೆಗಳಿಗೆ ಬರುತ್ತಿದ್ದ ಜಾನುವಾರು ಪ್ರಿಯರ ಬಗ್ಗೆ ಬರೆಯುತ್ತಾ ಹಾಸನ ದನಗಳ ಜಾತ್ರೆಯ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ.
ದೇಶ ವಿದೇಶಗಳ ಅಪೂರ್ಣ ನಾಣ್ಯ ನೋಟುಗಳ ಪ್ರದರ್ಶನ
ಪ್ರಸ್ತುತ ಲೇಖನದಲ್ಲಿ ಹುಣಸೂರಿನ ದೂರವಾಣಿ ಉದ್ಯೋಗಿ ಪಿ.ಕೆ ಕೇಶವಮೂರ್ತಿ ಅವರ ಅಪೂರ್ವ ನಾಣ್ಯ ಮತ್ತು ನೋಟುಗಳ ಪ್ರದರ್ಶಕರು ಪ್ರದರ್ಶಿಸಿದ್ದ ನೋಟು ಮತ್ತು ನಾಣ್ಯಗಳ ಸಂಗ್ರಹವನ್ನು ವಿಕ್ಷೀಸಿದ ಲೇಖಕರು ಇಂಥ ಪ್ರದರ್ಶನಗಳು ಹೇಗೆ ನಮ್ಮ ಸಂಸ್ಕøತಿಯ ಗತಕಾಲದ ಪರಿಚಯವನ್ನು ಮಾಡುತ್ತವೆ ಎಂಬುದನ್ನು ವಿಶ್ಲೇಷಿಸುತ್ತಿದ್ದಾರೆ. ನೋಟು ಮತ್ತು ನಾಣ್ಯಗಳ ಕಾಲಘಟ್ಟಗಳಲ್ಲಿ ಬಗ್ಗೆ ಚಿಂತಿಸಿದ್ದಾರೆ. ಮಾಹಿತಿ ನೀಡಿದ್ದಾರೆ. ಆದರೆ ಇದೇ ಲೇಖನದಲ್ಲಿ ಸಹ ತಲೆ ಬರಹ ಹೊಂದಿದ ‘ಲಾಟರಿ ಒಂದು ಅವಲೋಕನ’ ಇಲ್ಲಿನ ಸಂಬಂಧವನ್ನು ಕಳಚಿಬಿಡುತ್ತದೆ. ಇದನ್ನು ಇಲ್ಲಿ ಸೇರಿಸುವ ಅವಶ್ಯಕತೆ ಇರಲಿಲ್ಲ. ಇದಕ್ಕೂ ಇಲ್ಲಿನ ಮೂಲ ಲೇಖನಕ್ಕೂ ಯಾವುದೇ ಸಂಬಂಧವಿಲ್ಲ.
ಬಾಳ್, ಏಳ್, ಆಳ್ ಕನ್ನಡ ತಾಯ್
ಈ ಲೇಖನದಲ್ಲಿ ಲೇಖಕರು ಕರ್ನಾಟಕದ ಹಿನ್ನಲೆ ಚರಿತೆಯನ್ನು ವಿವರಿಸುತ್ತಾ, ಆರ್ಯ, ಆಂಗ್ಲ ಭಾಷೆಗಳ ನಡುವೆ ಕನ್ನಡ ಬೆಳೆದು ಬಂದ ದಾರಿಯನ್ನು ತಿಳಿಸಿದ್ದಾರೆ. ಹಾಗೆಯೇ ಕರ್ನಾಟಕ ಏಕೀಕರಣ ಚಳವಳಿ ಸಂದರ್ಭವನ್ನು ವಿಶ್ಲೇಷಿಸಿದ್ದಾರೆ.
ರಾಮಾಯಣ, ಮಹಾಭಾರತ, ಪುರಾಣ ಕಾಲಗಳಿಂದಲೂ ಕನ್ನಡ ನಾಡು ಇತ್ತು ಎನ್ನುವುದಕ್ಕೆ ಪುರಾವೆಗಳ ಸಮೇತ ಸಮರ್ಥಿಸಿಕೊಂಡಿದ್ದಾರೆ.
ಮೂರನೇ ಭಾಗದಲ್ಲಿ ‘ಸಾಹಿತ್ಯ’, ಸಂಗೀತ ಮತ್ತು ಜನಪದಕ್ಕೆ ಸಂಬಂಧಿಸಿದ ಎರಡು ಲೇಖನಗಳಿವೆ.


ಜನಪದ ಕಲೆ ವೀರಗಾಸೆ
ದಕ್ಷಬ್ರಹ್ಮನ ಸಂಹಾರಕ್ಕೆ  ವೀರಭದ್ರ-ಭದ್ರಕಾಳಿಯರ ಅವತಾರದ ಹಿನ್ನೆಲೆಯಲ್ಲಿ ಹುಟ್ಟಿಬಂದ ಕಲೆ ವೀರಗಾಸೆ. ಪ್ರಸ್ತುತ ಲೇಖನದಲ್ಲಿ ಅನಂತರಾಜುರವರು ವೀರಗಾಸೆ ಹುಟ್ಟಿಬಂದ ದಾರಿಯನ್ನು ಪೌರಾಣಿಕವಾಗಿ ಸೊಗಸಾಗಿ ಚಿತ್ರಿಸಿದ್ದಾರೆ. ಹಾಗೆಯೇ ಓದುಗನನ್ನು ತದೇಕಚಿತ್ತದಿಂದ ಈ ಲೇಖನ ಓದಿಸಿಕೊಂಡು ಹೋಗುತ್ತದೆ. ಹಾಗೆಯೇ ವೀರಗಾಸೆಯ ಉಡುಪಿನ ಲಕ್ಷಣಗಳನ್ನು ಎಳೆ ಎಳೆಯಾಗಿ ತಿಳಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು
ಪ್ರಸ್ತುತ ಲೇಖನದಲ್ಲಿ ಹಾಸನದಲ್ಲಿ ನಡೆದ ಜಿಲ್ಲಾ ಸಮ್ಮೇಳನಗಳು ಮತ್ತು ಆಯಾ ತಾಲ್ಲೂಕುಗಳಲ್ಲಿ ನಡೆದ ತಾಲ್ಲೂಕು ಸಮ್ಮೇಳನಗಳು ದಿನಾಂಕ, ವರ್ಷ ಹಾಗೂ ಅಧ್ಯಕ್ಷರುಗಳು ವಿವರಗಳಲ್ಲಿ ಲೇಖಕರು ನೀಡಿದ್ದಾರೆ. ಪ್ರಾರಂಭದಲ್ಲಿ ಕೇಂದ್ರ ಸಾಹಿತ್ಯ ಪರಿಷತ್ತಿನ ಉದಯದ ಬಗ್ಗೆಯೇ ಅರ್ಧ ಲೇಖನ ತಿಂದು ಹಾಕುತ್ತದೆ. ಅದರ ಬದಲಾಗಿ ಶೀರ್ಷಿಕೆಯಂತೆ ಸ್ಥಳೀಯ ಸಮ್ಮೇಳನಗಳ ವಿವರಕ್ಕೆ ಒತ್ತು ನೀಡಬಹುದಾಗಿತ್ತು.
ನಾಲ್ಕನೇ ಭಾಗವಾದ ‘ಶಿಕ್ಷಣ, ಗ್ರಾಮೀಣ ಬದುಕು ಮತ್ತು ಓದು’ ಎಂಬುದರಡಿಯಲ್ಲಿ ಒಟ್ಟು ನಾಲ್ಕು ಲೇಖನಗಳು ಕಂಡುಬರುತ್ತವೆ. ಇವುಗಳಲ್ಲಿ ವಿಭಿನ್ನವಾದ ವಿಷಯಗಳನ್ನು ಲೇಖಕರು ಆರಿಸಿಕೊಂಡಿದ್ದಾರೆ.
1. ಗ್ರಂಥಾಲಯ ಜ್ಞಾನ ದೇಗುಲ, ಗ್ರಂಥಗಳು ಜ್ಞಾನ ಭಂಡಾರದ ಬೀಗದ ಕೈ
ಆಧುನಿಕ  ಯುಗದಲ್ಲಿ ದೇವಾಲಯಗಳಿಗಿಂತ ಗ್ರಂಥಾಲಯಗಳ ಅವಶ್ಯಕತೆಯ ಔಚಿತ್ಯದ ಬಗ್ಗೆ ಲೇಖಕರಿಲ್ಲಿ ವಿಶ್ಲೇಷಿಸಿದ್ದಾರೆ. ಗ್ರಂಥಾಲಯಗಳು ಮನುಷ್ಯನಿಗೆ ಐಹಿಕ ಸುಖಗಳನ್ನು, ಮಾನಸಿಕ ಸಂತೋಷವನ್ನು ಅಲ್ಲದೇ ಆಧ್ಯಾತ್ಮಿಕ ಉಲ್ಲಾಸವನ್ನು ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಾದರಪಡಿಸಿದ್ದಾರೆ. ಹಾಗೆಯೇ ಪ್ರತಿ ವರ್ಷ ಮಾಡುವ ಗ್ರಂಥಾಲಯ ಸಪ್ತಾಹದ ಮಹತ್ವದ ಬಗ್ಗೆಯೂ ತಿಳಿಸಿಕೊಟ್ಟಿದ್ಧಾರೆ.
2. ಗ್ರಾಮ ಜೀವನದೊಂದಿಗೆ ಇಂಗಿ ಹೋಗುತ್ತಿರುವ ಕೆರೆಗಳು
ಪ್ರಸ್ತುತ ಲೇಖನದಲ್ಲಿ ಲೇಖಕ ಅನಂತರಾಜುರವರು ಕೆರೆ-ಕಟ್ಟೆಗಳ ತವರೂರು ಕರ್ನಾಟಕ ಎಂಬುಜದನ್ನು ಕೆಲವು ಪುರಾವೆಗಳನ್ನು ನೀಡುವುದರ ಮೂಲಕ ವಿಶ್ಲೇಷಿಸಿದ್ದಾರೆ. ಹಾಗೆಯೇ ತಮ್ಮ ಊರಿನ ಸುತ್ತ ಇರುವ ತನ್ನ ತಾಯಿಯ ತವರೂರಿನ ಸುತ್ತ-ಮುತ್ತ ಇರುವ ಕೆರೆಗಳ ಚಿತ್ರಗಳನ್ನು ಕಟ್ಟಿಕೊಡುವುದರ ಜೊತೆಗೆ ಅವುಗಳೊಂದಿಗೆ ತಾವು ಕಳೆದ ಬಾಲ್ಯದ ದಿನಗಳನ್ನು ಮೆಲಕು ಹಾಕಿದ್ದಾರೆ. ಅಲ್ಲದೇ ನೀರಾವರಿ ಕಾಲುವೆಗಳ ಸದ್ಭಳಕೆಯ ಬಗ್ಗೆಯು ತಿಳಿಸಿಕೊಟ್ಟಿದ್ದಾರೆ.

3. ನವ ಸಾಕ್ಷರ ಮಹಿಳೆಯ ಸ್ವಾವಲಂಬನೆಯ ಹಾದಿ
ಈ ಲೇಖನವು ಹಾಸನ ಜಿಲ್ಲೆಯಲ್ಲಿ ನಡೆದ ಸಾಕ್ಷರತಾ ಆಂದೋಲನ, ಕನ್ನಡ ನಾಡು ಸಾಕ್ಷರ ನಾಡು ಹಾಗೂ ಸಾಕ್ಷರೋತ್ತರ ಕಾರ್ಯಕ್ರಮಗಳು ನಡೆದ ನಂತರ ದಿನಮಾನಗಳಲ್ಲಿ ಮಹಿಳೆಯ ಸ್ವಾವಲಂಬನೆಯಲ್ಲಾದ ಬದಲಾವಣೆಗಳ ಬಗ್ಗೆ ಹಾಗೆಯೇ ಹಾಸನ ಜಿಲ್ಲೆಯಲ್ಲಿ ಮಹಿಳಾ ಸಂಘಗಳು ಬೆಳೆದು ಬಂದ ರೀತಿಯನ್ನು ಸಾಕ್ಷರತೆಯಿಂದ ಮಾತ್ರ ಸ್ವಾವಲಂಬನೆ ಸಾಧ್ಯ ಎನ್ನುವುದನ್ನು ದಾಖಲೆ ಸಮೇತ ವಿವರಿಸಿದ್ದಾರೆ. ಮಹಿಳಾ ಏಳ್ಗೆಯಲ್ಲಿ ಶಂಕರಿ ಬಳಗದ ಪಾತ್ರದ ಬಗ್ಗೆ ವಿಶ್ಲೇಷಿಸಿದ್ದಾರೆ.
4. ಬೆಟ್ಟದ ತಪ್ಪಲಿನಲ್ಲಿ ರಾಜೀವ್‍ಗಾಂಧಿ ಕನಸಿನ ವಿದ್ಯಾಲಯ
ಪ್ರಸ್ತುತ ಲೇಖನ ವಿಭಾಗದಲ್ಲಿ ಬರುವ ಇನ್ನೊಂದು ಪ್ರಮುಖ ಲೇಖನವಾಗಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಸ್ಥಾಪಿತವಾದ ಈ ರಾಜೀವ್‍ಗಾಂಧಿ ಕನಸಿನ ವಿದ್ಯಾಲಯ ಚಾಮರಾಜನಗರದಿಂದ ಬಿಳಿಗಿರಿ ರಂಗನ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಹೊಂಡರಬಾಳು ಗ್ರಾಮದಿಂದ ಮೂರು ಕೀ.ಮಿ ದೂರದಲ್ಲಿರುವ ಈ ಶಿಕ್ಷಣ ಸಂಸ್ಥೆಯ ಉದ್ದೇಶ, ಶೈಕ್ಷಣಿಕ ಪ್ರಕ್ರಿಯೆ ಸ್ಥಾಪನೆಯ ಹಿನ್ನಲೆಯ ಬಗ್ಗೆ ಲೇಖಕರು ಖುದ್ದಾಗಿ ಸಂದರ್ಶಿಸಿ ಸಾಕಷ್ಟು ವಿವರಣೆ ನೀಡಿದ್ದಾರೆ.
ಈ ಲೇಖನದಲ್ಲಿ ‘ನಮ್ಮೂರಿನಲ್ಲೊಂದು ಮಾದರಿ ಕಾಲೇಜು’ ಉಪಲೇಖನ ಸೇರಿಸುವುದು ಔಚಿತ್ಯ ಪೂರ್ಣವೆನಿಸಲಿಲ್ಲ. ಏಕೆಂದರೆ ಲೇಖನದ ಮುಖ್ಯ ಭಾಗಕ್ಕೂ ಈ ಉಪಭಾಗಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇದೊಂದು ಸ್ವತಂತ್ರ ಲೇಖನ ಪರಿಯಲ್ಲಿದೆ ಆದ್ದರಿಂದ ಈ ಉಪಶೀರ್ಷಿಕೆಯನ್ನು ಪ್ರತ್ಯೇಕ ಮಾಡುವುದು ಒಳ್ಳೆಯದು.
ಈ ಕೃತಿಯಲ್ಲಿ ಬರುವ ಕೊನೆಯ ಭಾಗ ‘ರಂಗ ಭೂಮಿ ಮತ್ತು ವ್ಯಕ್ತಿತ್ವ ವಿಕಾಸ’ ಈ ಭಾಗದಲ್ಲಿ ಪ್ರಮುಖವಾಗಿ ನಾಲ್ಕು ಲೇಖನಗಳಿವೆ.
1. ರಂಗಭೂಮಿಗೆ ಹಾಸನ ತಾಲ್ಲೂಕಿನ ಕೊಡುಗೆ
ಪ್ರಸ್ತುತ ಲೇಖನದಲ್ಲಿ ‘ಕುವೆಂಪು ನಾಟಕಂ ರಮ್ಯಂ’ ಎಂಬಂತೆ ನಾಟಕದ ಮಹತ್ವ, ಗುಣಗಳ ಬಗ್ಗೆ ತಿಳಿಸಿದ್ದಾರೆ. ರಂಗಭೂಮಿಯ ಏಳು-ಬೀಳುಗಳನ್ನು ವಿಶ್ಲೇಷಿಸಿದ್ದಾರೆ. ರಂಗಭೂಮಿಯ ಜೀವಂತಿಕೆಯ ಚೇತನಗಳಾದ ಟಿ.ಪಿ. ಕೈಲಾಸಂ, ಹಿರಣ್ಣಯ್ಯ, ಬಿ.ವಿ ಕಾರಂತ್ ಮುಂತಾದವರ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಅಲ್ಲದೇ ಹಾಸನದ ನಾಟಕ ಸಾಹಿತಿಕಗಳು ಹಾಗೂ ರಂಗಕಲಾವಿದರ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ.
2. ಮನವೆಂಬ ಮರ್ಕಟದ ಬೆನ್ನೇರಿ
“ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ, ಭೂಮಂಡಲವಿದ್ದೂ ನಿಸ್ಸಂಗಿ, ಮಂಡೆ ಬೆಳೆದು ಮನ ಬೋಳಾದ ತಪಸಿಯ, ಕೊಂಡಾಡಲವಳೇ ಚಕ್ರಿಯನು, ಕೊಡಬೇಕು, ಕೊಡುವಲ್ಲಿ ಪಾತ್ರವರಿಯಬೇಕು, ನುಡಿಯಬೇಕು, ಮೌನವು ಬೇಕು, ಬಡವನಂತಿರಬೇಕು, ಪ್ರಭುವಂತನಿರಬೇಕು, ನಡೆಮಿದು ಜಾತಿ ಜಾತಿ-ಕ್ಷತ್ರಿಯರ” ಎಂಬ ವಿವೇಕವಾಣಿಯನ್ನು ಉಲ್ಲೇಖಿಸುವುದರ ಮೂಲಕ ಮನಸ್ಸಿನ ಚಂಚಲತೆಯಿಂದ ಆಗಬಹುದಾದ ಅವಘಡ, ಹಾಗೆಯೇ ಹೇಗೆ ನಿಯಂತ್ರಿಸಬೇಕೆಂಬುದನ್ನು ಲೇಖಕರಿಲ್ಲಿ ವಿವರಿಸಿದ್ದಾರೆ.
3. ವ್ಯಕ್ತಿಯ ವ್ಯಕ್ತಿತ್ವ ವಿಕಸನ ಮತ್ತು ಯುವ ಜನಾಂಗ
ಪ್ರಸ್ತುತ ಲೇಖನದಲ್ಲಿ ಲೇಖಕರು ಇಂದಿನ ಕಾಲಮಾನದಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಸ್ಕøತಿಗೆ ಮಾರು ಹೋಗಿ ಮೌಲ್ಯ ಹೀನರಾಗುತ್ತಿದ್ದಾರೆ. ಸುಸಮಾಜ ನಿರ್ಮಾಣವಾಗಲು ಯುವ ಜನಾಂಗ ಯಾವ ದಿಶೆಯಲ್ಲಿ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಬೇಕೆಂದು ಚೆನ್ನಾಗಿ ತಿಳಿಸಿ ಕೊಟ್ಟಿದ್ದಾರೆ.
4. ಗೀಜುಗನ ಹಕ್ಕಿಗಳ ನಾಜೂಕಿನ ಗೂಡು
ಲೇಖಕರು ಪಕ್ಷಿ ಅಧ್ಯಯನ ಹವ್ಯಾಸಿಗಳಾದ ಡಾ. ಬಿ.ಎಸ್ ರವಿಕುಮಾರ್ ಅವರೊಂದಿಗೆ ಒಮ್ಮೆ ಪಕ್ಷಿ ವೀಕ್ಷಣೆಗೆ ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಂಡ ಗೀಜುಗ ಕಟ್ಟಿದ್ದ ನಾಜೂಕಿಕನ ಗೂಡುಗಳು ಆಕರ್ಷಣೆ ಮಾಡುತ್ತವೆ. ನಂತರ ರವಿಕುಮಾರ್‍ರವರಿಂದ ವಿವರಣೆ ಪಡೆದು ಹಕ್ಕಿಗಳು ಗೂಡು ಕಟ್ಟುವಿಕೆ, ಅವುಗಳ ಜೀವನದ ಬಗ್ಗೆ ಅನಂತರಾಜುವಿಲ್ಲಿ ಬರೆದಿದ್ದಾರೆ.
ಆದರೆ ಈ ಶಿರ್ಷಿಕೆಯಡಿಯಲ್ಲಿ ‘ಹಾವುಗಳ ಮಧುಚಂದ್ರ’ ಎಂಬ ಉಪಶೀರ್ಷಿಕೆಯ ಲೇಖನ ಬೇರೆಯದೇ ಆದ ವಿಷಯವಾಗಿದ್ದು ಇಲ್ಲಿ ಅಪ್ರಸ್ತುತವಾಗಿ ಕಂಡುಬರುತ್ತದೆ. ಪಕ್ಷಿಯ ಶಿರೋನಾಮದಡಿ ಪ್ರಾಣಿಯ ವಿಶ್ಲೇಷಣೆ ಅಭಾಸವೆನಿಸುತ್ತದೆ. ಲೇಖಕರು ಈ ಲೇಖನವನ್ನು ಪ್ರತ್ಯೇಕಿಸಬಹುದಿತ್ತು.
ಒಟ್ಟಾರೆ ಹೇಳುವುದಾದರೆ ಅನಂತರಾಜುರವರ ಡಾ. ಗೊರೂರು ಮತ್ತು ಇತರ ಲೇಖನಗಳು’ ವೈವಿದ್ಯ ಪೂರ್ಣ ವಿಷಯಗಳನ್ನೊಳಗೊಂಡ ಕೃತಿಯಾಗಿದ್ದು, ಓದುಗರಿಗೆ ಹಾಸನ ಜಿಲ್ಲೆಯ ಸಾಂಸ್ಕøತಿಕ ಲೋಕದ ಬಗೆಗಿನ ಹೆಚ್ಚಿನ ಮಾಹಿತಿ ನೀಡುತ್ತದೆ. ಲೇಖಕರು ವಿಷಯಕ್ರಮಣಿಕೆಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಹಾಸನ ಜಿಲ್ಲಾ ಸಾಹಿತ್ಯ ಲೋಕದಲ್ಲಿ ಅನಂತರಾಜುರವರು ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ. ಎಷ್ಟೋ ಎಲೆಮರೆಯ ಪ್ರತಿಭೆಗಳನ್ನು ಅನಾವರಣಗೊಳಿಸಿಕದ ಕೀರ್ತಿ ಇವರದು. ಪ್ರಸ್ತುತ ಕೃತಿ ಪ್ರತಿಯೊಬ್ಬರೂ ಓದಲೇಬೇಕಾದ ಮೌಲಿಕ ಕೃತಿ ಎಂದರೆ ಅತಿಶಯೋಕ್ತಿಯಾಗಲಾರದು. ಇವರ ಸಾಹಿತ್ಯ ದೀವಿಗೆ ಇನ್ನೂ ಪ್ರಜ್ವಲಿಸಲಿ ಎಂದು ಆಶಿಸುತ್ತೆನೆ.

ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197











ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ