ಇವರು ಕ್ರಿ.ಶ 1917 ಜನವರಿ 15 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಗೊಳದಲ್ಲಿ ಜನಿಸಿದರು. ಜೈನ ಧರ್ಮದ ಮೌಲ್ಯಗಳನ್ನು ಅಕ್ಷರಶಃ ದೈನಂದಿನ ಜೀವನದಲ್ಲಿ ರೂಢಿಸಿಕೊಂಡು ಅಂತೆಯೇ ಅಮೂಲ್ಯ ಸಾಹಿತ್ಯ ನೀಡಿದ ಕೀರ್ತಿ ಎಲ್.ಡಿ. ನಾಗೇಂದ್ರ ಶಾಸ್ತ್ರಿ ಯವರಿಗೆ ಸಲ್ಲುತ್ತದೆ.
ಕನ್ನಡ, ಸಂಸ್ಕøತ ಹಾಗೂ ಹಿಂದಿ ವಿಷಯಗಳಲ್ಲಿ ಮೈಸೂರು, ಶ್ರವಣಬೆಳಗುಳ, ಕಾಶಿ ಮುಂತಾದ ಸ್ಥಳಗಳಲ್ಲಿ ವಿದ್ಯಾಭ್ಯಾಸ ಪಡೆದು ಪಾಂಡಿತ್ಯಾಗಳಿಸಿ ತ್ರೈಭಾಷಿಕ ಪಂಡಿತರೆನಿಸಿದರು.
ಕಾವ್ಯ, ಧರ್ಮ,ನ್ಯಾಯ, ವ್ಯಾಕರಣ, ಛಂದಸ್ಸು ಮುಂತಾದ ವಿಷಯಗಳನ್ನು ಕೇಂದ್ರವಾಗಿ ಟ್ಟುಕೊಂಡು ಸಾಹಿತ್ಯ ರಚನೆ ಮಾಡಿದ ನಾಗೇಂದ್ರ ಶಾಸ್ತ್ರಿ ಯವರು ಕನ್ನಡ ಸಾರಸ್ವರ ಲೋಕಕ್ಕೆ ತಮ್ಮದೇ ಆದ ಹಲವಾರು ಅಮೂಲ್ಯವಾದ ಕೃತಿಗಳನ್ನು ನೀಡಿದ್ದಾರೆ.
ಹಾಸನದ ಉತ್ತರ ಬಡಾವಣೆಯ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿರುವ ಇವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಿಗೆ ಸತ್ ಶಿಕ್ಷಣ ನೀಡುವುದರ ಜೊತೆಗೆ ಮೌಲ್ಯ, ಧರ್ಮ, ನ್ಯಾಯಗಳನ್ನು ಬೋಧಿಸುವುದರೊಂದಿಗೆ ಸಾಹಿತ್ಯದ ಮಜಲುಗಳನ್ನು ಪರಿಚಯಿಸಿದರು.
‘ಮಹಾರಾಣಿ ಚೇಳಿಸಿ’, ‘ಸಾದ್ವಿ ಚಂದನಾದೇವಿ’, ‘ಭಗವಾನ್ ಮಹಾವೀರ’, ‘ಶ್ರೀ ಪಾಶ್ರ್ವನಾಥ’, ‘ಜೈನ ಧರ್ಮ ದಿಗ್ದರ್ಶನ’ ಮುಂತಾದ ಕೃತಿ ರತ್ನಗಳನ್ನು ನೀಡಿರುವ ನಾಗೇಂದ್ರ ಶಾಸ್ತ್ರೀಗಳು ತಮ್ಮ ವಿದ್ವತ್ತೆಗೆ ಹೆಸರಾಗಿ ಸಂಸ್ಕøತ ಪಂಡಿತ, ಸಾಹಿತ್ಯಾ ವಿಶಾರದ, ಸಾಹಿತ್ಯ ರತ್ನ, ಸಂಸ್ಕøತ-ಹಿಂದಿ ಸಾಹಿತ್ಯ ಮಣಿ’ ಎಂಬ ಹಲವಾರು ಬಿರುದಾಂಕಿತಗಳಿಂದ ಪ್ರಸಿದ್ಧಾರಾಗಿದ್ದರು.
1958 ರಲ್ಲಿ ಬಂದ ‘ಆತ್ಮಾಬೋಧನ ಹಾಗೂ ಮಹಾರಾಣಿ ಚೇಲನಾದೇವಿ’ ಕೃತಿಯ ಕೀರ್ತಿ ಶೇಷರಾದ ಎಚ್.ಎ. ಪಾಯಣ್ಣ ನವರ ವ್ಯಕ್ತಿತ್ವದ ಬಗ್ಗೆ ಬೆಳಕು ಚಲ್ಲುತ್ತದೆ.
ಈ ಕೃತಿಯನ್ನು ಪಾಯಣ್ಣನವರು ಮಕ್ಕಳಾದ ಎಚ್.ವಿ. ಪಾಶ್ರ್ವನಾಥ್ ಹಾಗೂ ಎಚ್.ವಿ. ಅನಂತ ಪದ್ಮನಾಭ್ ರವರು ಪ್ರಕಾಶನ ಮಾಡಿದ್ದಾರೆ.
1960ರಲ್ಲಿ ಬಂದ ‘ಜೈನ ಧರ್ಮ ದಿಗ್ದರ್ಶನ’ ಕೃತಿಯು ಜೈನ ಧರ್ಮದ ಆದಿಯಿಂದ ಅಂದಿನವರೆಗೂ ಧರ್ಮ ಬೆಳೆದು ಬಂದ ಹಾದಿಯ ಮೇಲೆ ಬೆಳಕು ಚಲ್ಲುತ್ತದೆ. ಈ ಕೃತಿಗೆ ಶ್ರೀ ಪಾಯಣ್ಣ ನವರ ಧರ್ಮಪತ್ನಿಯಾದ ಶ್ರೀಮತಿ ಪದ್ಮಾವತಮ್ಮ ಗ್ರಂಥದಾಸೋಹ ಮಾಡಿದ್ದಾರೆ. ಹೀಗೆ ಕನ್ನಡ ಸಾಹಿತ್ಯದಲ್ಲಿನ ಜೈನ ಧರ್ಮಕುರಿತು, ಮಹಾಪುರುಷರನ್ನು ಕುರಿತು, ಕೀರ್ತಿಶೇಷರನ್ನು ಕುರಿತು ಬೋಧನೆಯ ಜೊತೆ ಜೊತೆಗೆ ನಾಗೇಂದ್ರ ಶಾಸ್ತ್ರಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇಯಾದ ಕೊಡುಗೆಗಳನ್ನು ನೀಡುವುದರ ಮೂಲಕ ಹಾಸನದ ಪ್ರತಿಭಾನ್ವಿತ ಸಾಹಿತಿಯಾಗಿಯೂ ಹೊರ ಹೊಮ್ಮಿದ್ದರು. ಆದರೆÀ ಅವರ ಸ್ಥೂಲ ದೇಹ ನಮ್ಮಿಂದ ದೂರವಾಗಿದ್ದರೂ ಅವರ ಸೂಕ್ಷ್ಮಕಾಯ ಸಾಹಿತ್ಯದ ಮೂಲಕ ಸದಾ ನಮ್ಮೊಂದಿಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ