(ಕನ್ನಡ ನಾಡಿನ ಸುಪ್ರಸಿದ್ಧ ಸಾಹಿತಿ ಪ್ರೊ. ಕೆ. ಎಸ್. ಭಗವಾನ್ರವರ ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ ಕೃತಿ ಕುರಿತು ಒಂದು ವಿಶ್ಲೇಷಣೆ ,)
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಶೂದ್ರ ಸಂಜೀವಿನಿ- ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’
‘
Iಣ shಚಿಟಟ be ಣhe ಜuಣಥಿ oಜಿ eveಡಿಥಿ ಛಿiಣizeಟಿ oಜಿ iಟಿಜiಚಿ ಣo ಜeveಟoಠಿ ಣhe sಛಿieಟಿಣiಜಿiಛಿ ಣemಠಿeಡಿ, humಚಿಟಿism ಚಿಟಿಜ ಣhe sಠಿiಡಿiಣ oಜಿ eಟಿquiಡಿಥಿ ಚಿಟಿಜ ಡಿeಜಿoಡಿm.’
(ಣhe ಛಿoಟಿsಣiಣuಣioಟಿ oಜಿ iಟಿಜiಚಿ, ಠಿಚಿಡಿಣ 4ಚಿ ಜಿuಟಿಜಚಿmeಟಿಣಚಿಟ ಜuಣies, 51ಚಿ/h)
ವೈಜ್ಞಾನಿಕ ಮನೋಭಾವ, ಮಾನವತಾವಾದ, ಶೋಧನಾತ್ಮಕ ಚೈತನ್ಯ ಮತ್ತು ಸುಧಾರಣೆ ಇವುಗಳನ್ನು ಬೆಳೆಸುವುದು ಪ್ರತಿ ಭಾರತೀಯ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ’ ಎಂದು ಸಂವಿಧಾನವೇ ನಿರ್ದೇಶಿಸುತ್ತದೆ.
ಪ್ರತಿಭಟನೆ ಮನುಷ್ಯನ ಜೀವಂತಿಕೆಯ ಸಂಕೇತ. ಜಾತಿ ವ್ಯವಸ್ಥೆ, ಶೋಷಣೆ, ಬಂಡವಾಳ ಶಾಹಿ, ಜಮಿನ್ದಾರ ಪದ್ದತಿ, ಜೀತ ಪದ್ದತಿ, ಭ್ರಷ್ಟ ರಾಜಕೀಯ ವ್ಯವಸ್ಥೆಗಳಂತಹ ಸಾಮಾಜಿಕ ಅನಿಷ್ಟಗಳ ವಿರುದ್ದ ಪ್ರತಿಭಟಿಸುವುದು ಪ್ರತಿಯೊಬ್ಬ ಮಾನವ ಜೀವಿಯ ಆದ್ಯ ಕರ್ತವ್ಯ.
ಶತ-ಶತಮಾನಗಳಿಂದ ಅಟ್ಟಹಾಸ ಮೆರೆಯುತ್ತಾ ಬಂದಿರುವ ಪುರೋಹಿತಶಾಹಿ ಮನಸ್ಸುಗಳು, ಹಾಗೆಯೇ ಅವರು ಸೃಷ್ಟಿಸಿದ ಸಾಹಿತ್ಯಗಳ ಬಗ್ಗೆ ಆಧಾರ ಸಹಿತವಾಗಿ ವಿಮರ್ಶೆಗೈದು ಓದುಗರ ಮುಂದಿಟ್ಟು, ಶೂದ್ರರ ಕಣ್ತೆರೆಸಿದವರು ವೈಜ್ಞಾನಿಕ ಪರಂಪರೆಯ ಮಾನವೀಯ ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್ರವರೆಂದರೆ ಅತಿಶಯೋಕ್ತಿಯಾಗಲಾರದು.
ನಾನು ಮೂಲತಃ ಕೆಲವು ಮಠದ ವ್ಯವಸ್ಥೆಗಳಡಿಯಲ್ಲಿಯೇ ಶಿಕ್ಷಣ ಪಡೆದವನು. ಅಲ್ಲಿನ ಎಷ್ಟೋ ಸಂದರ್ಭಗಳನ್ನು ವೈಚಾರಿಕವಾಗಿ ಆಲೋಚಿಸಿ, ಪ್ರಶ್ನಿಸಿ ಶಿಕ್ಷೆಗೂ ಗುರಿಯಾಗಿದ್ದೆನೆ. ಮಠ ಎಂದರೆ ಶೂದ್ರರೊಳಗೇ ಬರುವ ಮೇಲ್ಪಂಕ್ತಿಯ ಪಂಗಡದ್ದು!

ಇನ್ನೂ ಶತಮಾನಗಳುದ್ದಕ್ಕೂ ಈ ಶೂದ್ರ ಪಂಗಡದ ಹೆಣಗಳ ರಾಶಿಯ ಮೇಲೆ ಸುಪ್ಪತ್ತಿಗೆಯರಮನೆ ನಿರ್ಮಿಸಿಕೊಂಡು ಭೋಗ ಜೀವನಗೈದ ವರ್ಣ ವ್ಯವಸ್ಥೆಯ ಮೇಲುಸ್ತರದವರ ಮನೋಸ್ಥಿತಿಯನ್ನು ಊಹಿಸಲು ಸಾಧ್ಯವೇ?
ಶಂಕರಾಚಾರ್ಯರಂತಹ ಸ್ವಯಂ ಘೋಷಿತ ಯುಗಾವತಾರಿಗಳು ಆಚಾರ್ಯರೆಂದು, ಸಮಾಜ ಸುಧಾರಕರೆಂದು ಬಿಂಬಿತಗೊಂಡು ತಮ್ಮ ಭಾಷ್ಯಗಳಲ್ಲಿ ಜಾತಿ ವ್ಯವಸ್ಥೆಯನ್ನು ಅದ್ಹೇಗೆ ಗಟ್ಟಿಗೊಳಿಸುತ್ತಾ ಸಂಕುಚಿತಮತಿಗಳಾದರು ಎಂಬುದನ್ನು ಸಾಕಷ್ಟು ಪಾರಾಯಣ ಮಾಡಿ, ಸಾಕ್ಷ್ಯಾಧಾರ ಸಮೇತ ಎಳೆ ಎಳೆಯಾಗಿ ವ್ಯಾಘ್ರ ಮುಖವಾಡಗಳನ್ನು ಭಗವಾನ್ ರವರು ಈ ಕೃತಿಯಲ್ಲಿ ಕಳಚಿದ್ದಾರೆ.
ಸಮಾಜಕ್ಕೂ ನಮಗೂ ಸಂಬಂಧವೇ ಇಲ್ಲ. ಸಮಾಜ ಪರಿವರ್ತನೆ ನಮಗ್ಯಾಕೆ ಎಂದುಕೊಂಡು ಎಲ್ಲೋ ಕಳೆದುಹೋಗಿದ್ದ ಶೂದ್ರ ಮನಸ್ಸುಗಳಲ್ಲಿ ಹೊಸ ಚಿಂತನೆ, ಹೊಸ ಸ್ಫೂರ್ತಿ ತುಂಬಿ ಗೊಡ್ಡು ಸಂಪ್ರದಾಯದ ವಿರುದ್ದ ಸಿಡಿದೇಳಲು ಆತ್ಮವಿಶ್ವಾಸ ನೀಡಿದ ಪ್ರೊ. ಕೆ.ಎಸ್ ಭಗವಾನ್ರವರಿಗೆ ಗೌರವಪೂರ್ವಕವಾದ ಸಲಾಂ. ಇತಿಹಾಸದ ಪುಟಗಳಲ್ಲಿ ಹುಡುಕಿ ಹೆಕ್ಕಿ, ಆವಿಷ್ಕರಿಸಿ, ಸಂಗ್ರಹಿಸಿ, ಶೂದ್ರರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಜಾಲಾಡಿ ಸಾಕ್ಷಿ ಸಮೇತವಾಗಿ ಪೌರೋಹಿತ್ಯ ಸಂಚು ಸಾಹಿತ್ಯವನ್ನು ಅನಾವರಣಗೊಳಿಸಿ ಪ್ರಬುದ್ದ ಪ್ರಬಂಧಗಳನ್ನು ಕಟ್ಟಿಕೊಡುವುದರ ಮೂಲಕ ಕೃತಿರೂಪದಲ್ಲಿ ಹೊರತಂದು ಶಂಕರಾಚಾರ್ಯರ ಗೂಂಡಾಗಿರಿ ಪ್ರವೃತ್ತಿಯ ಮುಖವಾಡ ಕಳಚಿ ಬೀಳಿಸುವುದರ ಮೂಲಕ ನವ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ.
‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ ಕೃತಿಯ 1982 ರಲ್ಲಿ ಪ್ರಥಮ ಮುದ್ರಣ ಕಂಡ ಈ ವೈಜ್ಞಾನಿಕ ಕನ್ನಡಿ 2014ರ ಹೊತ್ತಿಗೆ 17 ಮುದ್ರಣಗಳನ್ನು ಕಂಡಿರುವುದು ಇದರ ಶ್ರೇಷ್ಟತೆಯನ್ನು ಸಾರಿ ಹೇಳುತ್ತದೆ. ಈ ಕೃತಿ ಮೊದಲ ಮುದ್ರಣಗೊಂಡಾಗ ಬಹುಷಃ ನಾನು ಎರಡು ವರ್ಷದ ಹಸುಳೆ.
ಆದಿ ಶಂಕರಾಚಾರ್ಯನ ಜನವಿರೋಧಿ ತತ್ವಜ್ಞಾನ, ಶಂಕರಾಚಾರ್ಯನ ಗೂಂಡಾಗಿರಿ ಮತ್ತು ಹಿಂದೂ ಸಂಸ್ಕøತಿ, ಶಂಕರಾಚಾರ್ಯನ ಬಗ್ಗೆ ವಿವೇಕಾನಂದರ ಟೀಕೆ, ದೋಷಯುಕ್ತ ದೃಷ್ಟಿಕೋನ, ಹಿಂದೂ ಧರ್ಮ-ಹಾಗೆಂದರೇನು?, ಮೀಸಲಾತಿ ಮತ್ತು ಜಾತಿ ವಿನಾಶ ಶಾಸನ, ಭಾರತೀಯ ಬದುಕಿನ ಮೇಲೆ ಬ್ರಾಹ್ಮಣರ ಬಿಗಿ ಹಿಡಿತ, ಬ್ರಾಹ್ಮಣರ ಬಲ, ನ್ಯಾಯಾಲಯದಲ್ಲೇ ಅನ್ಯಾಯ! ಮದುವೆಯಲ್ಲಿ ಹೇಳುವ ಅನಿಷ್ಟ ಮಂತ್ರಗಳು, ಸಪ್ತಪದಿ ಎಂದರೇನು?, ವಿವಾಹ ಒಂದು ಮಾದರಿ, ಸರಳ ಮದುವೆಯ ಸೂತ್ರಗಳು, ಪಂಚಾಂಗ ಕೇಳಬೇಡಿ, ಎಚ್ಚರ! ಮಾದರಿ ಸಾಮಾಜಿಕ ಮದುವೆ ಮುಂತಾದ 18 ವಿಚಾರಪೂರಿತ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
ಪ್ರತಿಯೊಂದು ಲೇಖನದ ಹಿಂದೆ ಲೇಖಕರ ಪರಿಶ್ರಮ, ಅವರು ನೀಡುವ ಅಡಿಟಿಪ್ಪಣಿಗಳು, ಮೂಲಗಳು, ಸಾಕ್ಷ್ಯಗಳು ಓದುಗನನ್ನು ದಿಗ್ಬ್ರಮೆಗೊಳಿಸುತ್ತವೆ.
ತನು, ಮನ ಚಿಂತನೆಗಳಲ್ಲಿ ಬುದ್ದ, ಬಸವ, ಪುಲೆ, ವಿವೇಕಾನಂದರನ್ನು ಆವಿರ್ಭವಿಸಿಕೊಂಡು ವೈಚಾರಿಕ ನೆಲೆಗಟ್ಟಿನಲ್ಲಿ ವಿವೇಚಿಸಿ, ಚಿಂತಿಸಿ, ಮಂಥಿಸಿ ಈ ಅಮೂಲ್ಯ ಕೃತಿಯನ್ನು ಹೊರತಂದಾಗ ಅನೇಕ ಪುರೋಹಿತಶಾಹಿಗಳಿಗೆ ಪ್ರೊ. ಕೆ. ಎಸ್ ಭಗವಾನರು ಒಬ್ಬ, ಧರ್ಮವಿರೋಧಿಯಾಗಿ, ಬಂಡಾಯಗಾರನಾಗಿ ಕಂಡುದುದೇ ಅಧಿಕ, ಆದರೆ ಅವರೊಳಗಿನ ಸರ್ವಸಮಾನತೆಯ ಮಾನವೀಯ ತುಮುಲಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದದ್ದು ಮಾತ್ರ ದುರಂತ.
ಇಷ್ಟು ವರ್ಷಗಳುದ್ದಕ್ಕೂ ಗುಲಾಮಗಿರಿ, ದೌರ್ಜನ್ಯ, ದಬ್ಬಾಳಿಕೆ, ಬಡತನ, ದಾರಿದ್ರ್ಯ, ಹಿಂಸೆ, ಶೋಷಣೆ ದಿಕ್ಕುತಪ್ಪಿದ ಅಲೆದಾಟ, ಹಸಿವು, ಹಾಹಾಕಾರ ಇವುಗಳಡಿಯಲ್ಲೇ ಹೇಗೆ ತೊಳಲಾಡಿದೆವು. ಹೀಗಿರಲು ಮೇಲ್ವರ್ಗದಿಂದಾದ ಸಂಚುಕಾರಗಳೇನೆಂಬುದನ್ನು ಲೇಖಕರು ಮನಮುಟ್ಟುವಂತೆ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅಥರ್ವಣವೇದ 12.4.2 ರಲ್ಲಿ ಹೇಳಿರುವಂತೆ “ಪರಮ ಋಷಿಯಾದ ಪರಮಾತ್ಮನ ಮಕ್ಕಳಾದ ಮಾನವರು ಜ್ಞಾನ ಭಿಕ್ಷೆ ಬೇಡುವಾಗ ಅವರಿಗೆ ವೇದವಾಣಿಯನ್ನು ಕೊಡಲು ಯವಾತ ಅಪೇಕ್ಷಿಸುವುದಿಲ್ಲವೋ ಅವನು ಮಕ್ಕಳು ಮರಿಗಳೊಂದಿಗೆ ಪತಿತನಾಗುತ್ತಾನೆ, ಸಕಲ ಭೋಗಭಾಗ್ಯಗಳನ್ನು ಕಳೆದುಕೊಳ್ಳುತ್ತಾನೆ”. ಹೀಗೆ ಮೂಲವೇದಗಳು ಸಾವ್ರರ್ತಿಕವಾಗಿ ಬೆಳಕು ಚೆಲ್ಲಿದರೆ.. ನಂತರದಲ್ಲಿ ಅವು ಹೇಗೆ ತಿರುಚಿಸಲ್ಪಟ್ಟವು ಎಂಬುದನ್ನು ಲೇಖಕರು ಮಾರ್ಮಿಕವಾಗಿ ವಿವರಿಸಿದ್ದಾರೆ.
ಕೃತಿಯ 20ನೆಯ ಪುಟದಲ್ಲಿ ಲೇಖಕರೇ ಈ ರೀತಿ ಹೇಳುತ್ತಾರೆ-‘ಅದ್ವೈತಿಯಾದ ಶಂಕರಾಚಾರ್ಯ ಶೂದ್ರರಿಗೆ ವೇದಾಧ್ಯಯನಕ್ಕೆ ಅಧಿಕಾರವಿಲ್ಲ ಎಂದು ತನ್ನ ಹೊಲಸು ಬುದ್ಧಿಯನ್ನೆಲ್ಲ ಖರ್ಚು ಮಾಡಿ ವಾದಿಸಿದ್ದಾನೆ! ಸನ್ಯಾಸಿಯಾದ ತನಗೆ ಯಾವ ನಷ್ಟವೂ ಆಗುವುದಿಲ್ಲವೆಂದು ತಿಳಿದು ಶಂಕರ ಧೂರ್ತನಾಗಿ ಈ ಮಾತನ್ನು ದಿಕ್ಕರಿಸಿರಬೇಕು. ಅವನು ವೇದ ಪ್ರಾಮಾಣ್ಯವನ್ನು ತಿರಸ್ಕರಿಸಿದ ವೇದ ವಿರೋಧಿ! ಆದರೆ ಅಂಥವರನ್ನೇಕೆ ಬ್ರಾಹ್ಮಣಧರ್ಮ ಖಂಡಿಸಲಿಲ್ಲ ಎಂದರೆ ಅವನು ಬ್ರಾಹ್ಮಣರ ಸರ್ವ ಸಾಮ್ಯತೆಗಾಗಿ ಹೋರಾಡಿದ್ದರಿಂದ, ಇಷ್ಟೇ ಅಲ್ಲದೇ ಅವನು ‘ಭಾವದಲ್ಲಿ ಅದ್ವೈತವಿರಬೇಕು. ಕ್ರಿಯೆಯಲ್ಲಿ ಅಲ್ಲ’ ಎಂದು ಹೇಳಿರುವುದು ಘೋರ ಪಾತಕವಾಗಿದೆ. ನಿಜವಾಗಿ ಸಂತನಾದ ಆಚಾರ್ಯ ಈ ರೀತಿ ಬೇಧಭಾವ ಎಣಿಸುವುದಿಲ್ಲ. ಸ್ಮøತಿಗಿಂತ ಶ್ರುತಿ ಶ್ರೇಷ್ಠ ಎಂಬುದನ್ನು ಅವನು ಬೇಕೆಂದೇ ಮರೆಮಾಚಿ ಬೌದ್ದಿಕ ಅಪ್ರಾಮಾಣಿಕತೆಯನ್ನು ಮೆರೆದಿದ್ದಾನೆ. ಅವನು ಶ್ರುತಿಯನ್ನು ಬೆಂಬಲಿಸುವುದಕ್ಕೆ ಬದಲಾಗಿ ಸ್ಮøತಿಯನ್ನು ಬೆಂಬಲಿಸುವುದು ನಿಜಕ್ಕೂ ದುರಂತಕಾರಿ. ಶೂದ್ರರು ವಿದ್ಯಾವಂತರಾದರೆ ತಮಗೆ ದುಡಿದು ಅನ್ನ ಹಾಕುವವರಿಲ್ಲದೆ, ಅಡ್ಡ ಪಲ್ಲಕ್ಕಿ ಹೊತ್ತು ತಮ್ಮ ಸೇವೆ ಮಾಡುವವರು ಸಿಗದೆ ಹೊಗುತ್ತಾರೆಂಬ ಭಾರೀ ದಿಗಿಲಿನಿಂದ ಸ್ವಾರ್ಥಪರವಾದ ಪಟ್ಟಭದ್ರ ಹಿತಾಸಕ್ತಿಯಿಂದ ಶೂದ್ರರಿಗೆ ವಿದ್ಯಾದಾನ ಮಾಡಲು ಅವನು ಇಷ್ಟ ಪಡಲಿಲ್ಲ. ಹಾಗೂ ತಾನು ಸನ್ಯಾಸಿಯಾದುದರಿಂದ ತನ್ನ ವಂಶ ಎಕ್ಹುಟ್ಟಿ ಹೋಗುವುದಿಲ್ಲವೆಂದೂ ಅವನು ಭಾವಿಸಿರಬೇಕು!”
ತಮ್ಮ ತೀಟೆ ತೀರಿಸಿಕೊಳ್ಳುವುದಕ್ಕಾಗಿ ಇತಿಹಾಸ ತಿರುಚಿದವರೆಷ್ಟೋ ಭ್ರಷ್ಟ ಸಂತರು, ಆಚಾರ್ಯರು, ಸಾಹಿತಿಗಳು ಇದ್ದಾರೆ. ಇವುಗಳೆಲ್ಲವನ್ನವಲೋಕಿಸಿದ ಡಾ. ಬಾಬಾ ಸಾಹೆಬ್ ಅಂಬೇಡ್ಕರರು ತಮ್ಮ ‘ಬರಹಗಳು ಮತ್ತು ಭಾಷಣಗಳು’ ಮೂರನೇ ಸಂಪುಟದ ಪುಟ ಸಂಖ್ಯೆ 151 ರಲ್ಲಿ ಈ ರೀತಿ ಹೇಳಿದ್ದಾರೆ-“ಭಾರತದ ಪ್ರಾಚೀನ ಇತಿಹಾಸದ ಬಹುಭಾಗವು ಇತಿಹಾಸವೇ ಅಲ್ಲ. ಇದರ ಅರ್ಥ ಪ್ರಾಚೀನ ಭಾರತಕ್ಕೆ ಇತಿಹಾಸವಿಲ್ಲ ಎಂಬುದಲ್ಲ. ಬ್ರಾಹ್ಮಣ ಲೇಖಕರು ಉದ್ದೇಶಪೂರ್ವಕವಾಗಿಯೇ ಪ್ರಾಚೀನ ಭಾರತದ ಇತಿಹಾಸವನ್ನು ವಿರೂಪಗೊಳಿಸಿ, ಅದನ್ನು ಮಹಿಳೆಯರು ಮತ್ತು ಮಕ್ಕಳನ್ನು ರಂಜಿಸುವ ಪುರಾಣ ಕಥೆಗಳನ್ನಾಗಿ ಮಾಡಿದ್ದಾರೆ.
ಮೂಲ ವೇದವನ್ನು ತಿರುಚಿ ಬಂದ ‘ಮನುಸ್ಮøತಿ’ಯು ಬ್ರಾಹ್ಮಣರಿಗೆ ವಿದ್ಯೆ, ಆಸ್ತಿ ಮತ್ತು ಅಧಿಕಾರಿಗಳ ಮೇಲೆ ನೂರಕ್ಕೆ ನೂರರಷ್ಟು ಮಿಸಲಾತಿಯನ್ನು ನೀಡಿತು. ಶೂದ್ರರಿಗೆ ವಿದ್ಯೆ, ಆಸ್ತಿ ಮತ್ತು ಅಧಿಕಾರಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದು ಮಾತ್ರ ಮಹಾಜಾತಿವಾದಿ ಕೃತಿಯಾಗಿ ಹೊರಹೊಮ್ಮುತ್ತದೆ.
ಶೂದ್ರನಿಗೆ ವಿದ್ಯೆಯನ್ನು ಅರ್ಜಿಸಬಾರದು ಎಂಬ ಕಟ್ಟಳೆ ಮನುಸ್ಮøತಿಯಲ್ಲಿದೆ. ವೇದವನ್ನು ನೆನಪಿಟ್ಟುಕೊಳ್ಳಲು ಶೂದ್ರನು ಕೇಳಿದ್ದೇ ಆದರೆ ಅವನ ಕಿವಿಗಳಿಗೆ ಸೀಸವನ್ನು, ಅರಗನ್ನು ಕರಗಿಸಿ ಹುಯ್ಯಬೇಕು. ಅವನು ವೇದವನ್ನು ಉಚ್ಛರಿಸಿದರೆ ಅವನ ನಾಲಿಗೆಯನ್ನು ಕತ್ತರಿಸಬೇಕು.
ಶೂದ್ರನು ಸೇವೆಯಲ್ಲದೇ ಬೇರೆ ಏನನ್ನೂ ಮಾಡಕೂಡದು. ದೇವರು ಶೂದ್ರನಿಗೆ ವಹಿಸಿದ ಒಂದೇ ಕರ್ತವ್ಯವೆಂದರೆ, ಅತ್ಯಂತ ವಿನಯದಿಂದ ಇತರ ಮೂರು ವರ್ಣಗಳಿಗೆ ಸೇವೆ ಮಾಡುವುದು. ಶೂದ್ರನು ಸೇವೆ ಮಾಡಲು ತಿರಸ್ಕರಿಸಿದರೆ ಅವನನ್ನು ಬಲಾತ್ಕರಿಸಬೇಕೆಂದು ಮನುಸ್ಮøತಿ ಕಟ್ಟಾಜ್ಞೆ ಮಾಡಿದೆ. ಬ್ರಾಹ್ಮಣನು ಅವಿದ್ಯಾವಂತನಾಗಿದ್ದರೂ ಅವನು ಇಷ್ಟಪಟ್ಟರೆ ನ್ಯಾಯಾಧಿಪತಿಯೂ ಆಗಬಹುದೆಂದು ಸ್ವಘೋಷಿತ ನಿಯಮಾವಳಿಗಳು ಜಾರಿಯಾದವು”.
ಪ್ರೊ. ಕೆ.ಎಸ್ ಭಗವಾನರು ತಮ್ಮ ಈ ಸಂಶೋಧನಾತ್ಮಕ ವೈಚಾರಿಕ ಕೃತಿಯಲ್ಲಿ ರಾಷ್ಟ್ರಕಂಟಕರೂ, ಸಮಾಜದ್ರೋಹಿಗಳು, ಮಹಾಜಾತಿವಾದಿಗಳೂ ಆದ ಗೌತಮ, ಮನು, ಶಂಕರ, ರಾಮಾನುಜ, ಮಧ್ವ ಮುಂತಾದ ಸ್ಮøತಿಕಾರರ ಅವಿವೇಕದ ಅತಿರೇಕಗಳನ್ನು ಬಿಡಿಸಿಟ್ಟಿದ್ದಾರೆ. ಶಂಕರರ ಉದ್ದಟತನವನ್ನು ‘ಬ್ರಹ್ಮ ಸೂತ್ರ ಭಾಷ್ಯ’ ದಲ್ಲಿರುವ ಮಾನವ ವಿರೋಧಿ ಸಂಹಿತೆ ಸೂತ್ರಗಳನ್ನು ವಿಶ್ಲೇಷಿಸಿದ್ದಾರೆ.
ಲೇಖಕರೇ ಪು.ಸಂ. 23, 24 ರಲ್ಲಿ ಉಲ್ಲೇಖಿಸಿರುವಂತೆ “ಶೂದ್ರರಿಗೆ ಜ್ಞಾನ ಪಡೆಯಲು ಹಕ್ಕಿಲ್ಲವೆಂದು ವಾದಿಸಿರುವುದು ಅವನ ಅದ್ವೈತ ತತ್ವಕ್ಕೆ ವಿರುದ್ದವಾಗಿದೆ. ಆದ್ದರಿಂದ ಅವನು ಬಹಳ ಪೊಳ್ಳು ತತ್ವಜ್ಞಾನಿಯಾಗಿ ಕಾಣಿಸುತ್ತಾನೆ. ಅವನದು ಜನವಿರೋಧಿ ತತ್ವಜ್ಞಾನ. ತನಗೆ ಮಾನವೀಯತೆ ಇಲ್ಲವೆಂಬುದನ್ನು ಅವನೇ ಪ್ರಸ್ಥಾಪಿಸಿದ್ದಾನೆ. ಹಿಂದೂ ಧರ್ಮ ಶಾಸ್ತ್ರವಲ್ಲ. ಒಂದು ದೃಷ್ಟಿಯಲ್ಲಿ, ಕ್ರೂರ ಕೋಮುವಾದ ಮತ್ತು ಉಪಯೋಗವಿಲ್ಲದ ವೇದಾಂತ. ಬ್ರಾಹ್ಮಣ ಧರ್ಮ ದೃಷ್ಟಿಗೋಚರವಾದ ಸಾಮಾಜಿಕ ಅಸಮಾನತೆಯನ್ನು ಆಚರಿಸುತ್ತದೆ; ವೇದಾಂತ ಕಣ್ಣಿಗೆ ಕಾಣದ ಆಧ್ಯಾತ್ಮಿಕ ಸಮಾನತೆಯನ್ನು ನಂಬುತ್ತದೆ. ಬ್ರಾಹ್ಮಣ ಧರ್ಮ ಜಾತಿ ಪಾರಮ್ಯವನ್ನು ಹೇಳಿದರೆ ವೇದಾಂತ ದರ್ಶನ ಅಹಂಕಾರ ಮರ್ದನವನ್ನು ತಿಳಿಸುತ್ತದೆ. ಜಾತಿ ವ್ಯವಸ್ಥೆ ಎಂದರೆ ಗುಲಾಮಗಿರಿ. ಇಂಥ ಗುಲಾಮಗಿರಿಯನ್ನು ಒಂದು ಪ್ರತ್ಯಕ್ಷವಾಗಿ ವಿಧಿಸಿದರೆ, ಇನ್ನೊಂದು ಪರೋಕ್ಷವಾಗಿ ಬೋಧಿಸುತ್ತದೆ, ಒಟ್ಟಿನಲ್ಲಿ ಎರಡೂ ಸಾಮಾಜಿಕವಾಗಿ ವ್ಯಕ್ತಿಯನ್ನು ದಮನ ಮಾಡುವ ಸಾಧನಗಳಾಗಿವೆ.”
ಈ ಜಾತಿ ಶೋಷಣೆ ಇಂದು ನಿನ್ನೆಯದಲ್ಲ. ಸನಾತನವಾಗಿ ಬಂದ ಕ್ರೂರ ಪರಂಪರೆ! ಆರ್ಯರ ದುರಾಡಳಿತದಿಂದಾಗಿ ನೀತಿಗೆಟ್ಟು, ಮತಿಗೆಟ್ಟಿದ್ದ ಸಮಾಜಕ್ಕೆ ಚಿಕಿತ್ಸೆ ನೀಡಲು ಒಳಗಿನಿಂದ ಗೌತಮಬುದ್ದ ಉದಿಸಿದನು. ಮನುಷ್ಯ-ಮನುಷ್ಯರ ನಡುವೆ ಭೇದವನ್ನು ಸೃಷ್ಟಿ ಮಾಡಿ, ಅನೀತಿ ಅಧರ್ಮ, ಮೂಢ ನಂಬಿಕೆ, ಯಜ್ಞ-ಯಾಗಾದಿಗಳನ್ನೊಳಗೊಂಡ ಆರ್ಯರ ವೈದಿಕ ವ್ಯವಸ್ಥೆಯ ವಿರುದ್ದ ಪ್ರಥಮ ಬಾರಿಗೆ ಕ್ರಿ.ಪೂ 500 ರಲ್ಲಿ ಗೌತಮ ಬುದ್ಧ ಬಂಡಾಯ ಹೂಡಿದರು.
“ವೈದಿಕ ವ್ಯವಸ್ಥೆಯ ಶೋಷಣೆಯ ಮಾರ್ಗವಾದ ದೇವರು, ಆತ್ಮ, ಪುರೋಹಿತರನ್ನು ದಿಕ್ಕರಿಸಿ” ಎಂದು ಜನರಲ್ಲಿ ಜಾಗೃತಿ ಮೂಡಿಸಿದರು. ಬ್ರಾಹ್ಮಣ ಶಾಹಿ ಸಾಮಾಜಿಕ ವ್ಯವಸ್ಥೆಗೆ ಸಿಲುಕಿ ಜರ್ಜರಿತವಾಗಿದ್ದ ಜನತೆ, ಆರ್ಯರ ಅನೀತಿಯುತ ವ್ಯವಸ್ಥೆಯನ್ನು ಸಾರಾಸಗಟವಾಗಿ ತಿರಸ್ಕರಿಸಿ, ಬೌದ್ದ ಧರ್ಮದ ಅನುಯಾಯಿಗಳಾಗಿ ನೆಮ್ಮದಿ ಹಾಗೂ ಸಂತಸದ ಬದುಕನ್ನು ಕಂಡುಕೊಂಡರು. ಈ ಬೌದ್ದ ಕ್ರಾಂತಿಯ ಪರಿಣಾಮವಾಗಿ ಬ್ರಾಹ್ಮಣಶಾಹಿ ವ್ಯವಸ್ಥೆಯು ಬುಡಮೇಲಾಯಿತು. ಮೌರ್ಯರ ಆಳ್ವಿಕೆಯಲ್ಲಿನ ಯಜ್ಞ-ಯಾಗಗಳ ನಿಷೇಧದಿಂದಾಗಿ ಅದನ್ನೇ ಕಸುಬಾಗಿಸಿಕೊಂಡಿದ್ದ ಬ್ರಾಹ್ಮಣರು ದಿವಾಳಿತನದತ್ತ ಸಾಗಿದರು. ತದನಂತರ ಪುನಃ ತಮ್ಮ ಅಸ್ತಿತ್ವ ಕಂಡುಕೊಳ್ಳುವಲ್ಲಿ ಚಾಣಾಕ್ಷ ಬುದ್ದಿಯನ್ನುಪಯೋಗಿಸಿಕೊಂಡು ಸಫಲರಾಗಿ 6,7,8 ನೆಯ ಶತಮಾನದ ಹೊತ್ತಿಗೆ ಮತ್ತೆ ವಿಜೃಂಭಿಸಿ ಸಾಮಾಜಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವುದನ್ನು ಗಮನಿಸಿದ್ದೇವೆ.
ಲೇಖಕರು ತಮ್ಮ ಕೃತಿಯ 33 ನೆಯ ಪುಟದಲ್ಲಿ ಪ್ರಾಚ್ಯಶಾಸ್ತ್ರ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಎ.ಎಚ್ ಲಾಂಗ್ಹಸ್ಟ್ರ ಒಂದು ಸಂಶೋಧನಾ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಇದು ಲೇಖಕರೇ ಹೇಳುವಂತೆ ಶಂಕರಾಚಾರ್ಯರ ಗುಂಡಾಗಿರಿ ವರ್ತನೆಯನ್ನು ಸಾಬೀತುಪಡಿಸುತ್ತದೆ. ಆ ಹೇಳಿಕೆ ಈ ಕೆಳಗಿನಂತಿದೆ-“ನಾಗಾರ್ಜುನಕೊಂಡದಲ್ಲಿ ಎಲ್ಲಾ ಕಟ್ಟಡಗಳೂ ಕ್ರೂರ ರೀತಿಯಲ್ಲಿ ಧ್ವಂಸವಾಗಿರುವುದನ್ನು ನೋಡಿದರೆ ಎದೆ ನಡುಗುತ್ತದೆ. ಅದು ಕೇವಲ ನಿಧಿ ಅನ್ವೇಷಕರ ಕೆಲಸವೆಂದು ಹೇಳುವಂತಿಲ್ಲ; ಏಕೆಂದರೆ ಬಹುಪಾಲು ಸ್ತಂಭಗಳು, ವಿಗ್ರಹಗಳು ಮತ್ತು ಶಿಲ್ಪಿಗಳನ್ನು ಮನಸೇಚ್ಛೆ ಒಡೆದು ಚೂರು ಚೂರು ಮಾಡಿದ್ದಾರೆ. ಅಮರಾವತಿಯಲ್ಲಿ ಇರುವಂತೆ ಅದರ ಸನಿಹದಲ್ಲಿ ಪಟ್ಟಣ ಇದ್ದಿದ್ದರೆ ಆಧುನಿಕ ನಿರ್ಮಾಪಕರು ಈ ಜಾಗವನ್ನು, ಭಾರತದಲ್ಲಿ ಬಹುತೇಕ ಆಗಿರುವಂತೆ, ಲೂಟಿ ಮಾಡಿದ್ದರೆಂದು ಭಾವಿಸಬಹುದಿತ್ತು. ಆದರೆ ಇದು ನಾಗಾರ್ಜುನಕೊಂಡದಲ್ಲಿ ಎಂದೂ ನಡೆಯಲಿಲ್ಲ; ಏಕೆಂದರೆ, ಅದರ ಆಜುಬಾಜಿನಲ್ಲಿ ಯಾವ ಪಟ್ಟಣಗಳಿಲ್ಲ. ಆ ಕಣಿವೆಯೊಳಕ್ಕೆ ಹೋಗಿ ಬರಲು ಗಾಡಿ ದಾರಿಗಳಿರಲಿಲ್ಲ. ಮಧ್ಯಯುಗದ ಮಹಾ ಹಿಂದೂ ತತ್ವಜ್ಞಾನಿ ಗುರು ಶಂಕರಾಚಾರ್ಯ ತನ್ನ ಹಿಂಬಾಲಕರ ಹಿಂಡಿನೊಡನೆ ಬಂದು ಬೌದ್ಧ ಸ್ಮಾರಕಗಳನ್ನು ನಾಶಪಡಿಸಿದನೆಂದು ಸ್ಥಳೀಯ ಐಹಿತ್ಯ ಹೇಳುತ್ತದೆ. ಇದು ಹಾಗಿರಲಿ; ಹಾಳಾದ ಕಟ್ಟಡಗಳಿರುವ ಈ ಕಣಿವೆಯ ಸಾಗುವಳಿ ಜಮೀನನ್ನು ಶಂಕರಾಚಾರ್ಯನಿಗೆ ಉಂಬಳಿಯಾಗಿ ಕೊಟ್ಟ ವಾಸ್ತವ ಸಂಗತಿ ಇಂದಿಗೂ ಉಳಿದಿದೆ. ಆ ಮಹಾ ಗುರುವಿನ ಅನುಯಾಯಿಗಳ ಧಾರ್ಮಿಕ ಮುಖಂಡನ ಅನುಮತಿಯಿಂದ ನಾನು ಇಲ್ಲಿ ಭೂಶೋಧನೆಗಳನ್ನು ಮಾಡಲು ಸಾಧ್ಯವಾಯಿತು. ಗುಂಟೂರು ಜಿಲ್ಲೆ ಪುಷ್ಪಗಿರಿಯಲ್ಲಿ ವಾಸಿಸುವ ಬ್ರಾಹ್ಮಣ ಜಗದ್ಗುರು ನಲ್ಲಮಲೈನಲ್ಲಿರುವ ಶ್ರೀಶೈಲಂ ದೇವಾಲಯದ ವಾರಸುದಾರನಾಗಿದ್ದಾನೆ. ಮೂಲತಃ ಒಂದು ಬೌದ್ಧ ತಾಣವಾಗಿದ್ದಂತೆ ಕಾಣುವ ಈ ದೇವಸ್ಥಾನವನ್ನು ಅದೇ ರೀತಿಯಲ್ಲಿ ನಿಸ್ಸಂದೇಹವಾಗಿ ವಶಪಡಿಸಿಕೊಳ್ಳಲಾಯಿತು”.
ಈ ಉಲ್ಲೇಖವನ್ನು ವಿಶ್ಲೇಷಿಸಿ ಮಾಡುವ ಅಗತ್ಯವೇಯಿಲ್ಲ. ತಮಗಿಂತ ಯಾರೇ ಪ್ರಬಲರಾದರೂ ಅವರನ್ನೂ ಹೇಗೆ ದಮನಿಸಬೇಕೆಂದು ಪುರೋಹಿತ ಕೊಳಕು ಮನಸ್ಸುಗಳು ಸದಾ ಸಂಚಿನ ಗುಂಗಿನಲ್ಲೇ ತೇಲಾಡಿ ಅದ್ಯಾವುದೇ ಮಾರ್ಗವಾದರೂ ಸರಿ ಸಾಧಿಸಿಬಿಡುತ್ತವೆಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿ ನಿಲ್ಲುತ್ತದೆ. ಇಂತಹ ಅದೆಷ್ಟೋ ಸಾಕ್ಷಾಧಾರಗಳನ್ನು ಪ್ರೊ. ಕೆ.ಎಸ್ ಭಗವಾನ್ ಅವರು ಈ ಕೃತಿಯಲ್ಲಿ ನೀಡಿದ್ದಾರೆ.
ಇದರಲ್ಲಿ ಬರುವ ಮೂರನೆಯ ಅಧ್ಯಾಯ ‘ಶಂಕರಾಚಾರ್ಯನ ಬಗ್ಗೆ ವಿವೇಕಾನಂದರ ಟೀಕೆ’. ಸ್ವಾಮಿ ವಿವೇಕಾನಂದ ದಿವ್ಯ ವಾಣಿ ಕುರಿತು ರಾಷ್ಟ್ರ ಕವಿ ಕುವೆಂಪುರವರು ಹೀಗೆ ಹೇಳಿದ್ದಾರೆ. “.. ಅದು ಒಂದು ವ್ಯಕ್ತಿಯ ವಾಣಿಯಲ್ಲ; ಒಂದು ಕಣ್ಣಿನ ಕಾಂತಿಯಲ್ಲ. ಅನೇಕ ಮಹಾಪುರುಷರ ಜೀವಜ್ಯೋತಿಗಳ ಸೂತ್ರ ಸಮಷ್ಟಿಯಾಗಿದೆ; ಬಹುಜೀವನಗಳ ದರ್ಶನಗಳ ಗೋಷ್ಠಿಯಾಗಿದೆ. ಅದರಲ್ಲಿ ಪ್ರಾಚ್ಯ, ಪಾಶ್ಚಾತ್ಯ, ಹಿಂದೂ, ಕ್ರೈಸ್ತ, ಇಸ್ಲಾಂ, ಬೌದ್ಧ, ಮತ, ತತ್ತ್ವ, ವಿಜ್ಞಾನ, ಕಲಾ, ಇಹ, ಪರ, ದೇಹ, ಆತ್ಮ, ನೂತನ, ಪುರಾತನ ಎಲ್ಲವೂ ಸಮನ್ವಯಗೊಂಡಿದೆ. ಅದು ಯಾವುದೊಂದು ಮತಕ್ಕಾಗಲಿ, ಪಥಕ್ಕಾಗಲಿ ಸೇರಿಲ್ಲ. ಅದು ಒಂದು ಜನಾಂಗದ್ದಲ್ಲ; ಸರ್ವಕಾಲ ದೇಶಗತವಾದುದು.
ಆ ದಿವ್ಯದರ್ಶನದ ಕಾಮನಬಿಲ್ಲಿನಲ್ಲಿ ಉಪನಿಷತ್ತುಗಳಂತೆಯೆ ಯವನ ದಾರ್ಶನಿಕರ ತತ್ತ್ವಜ್ಞಾನವೂ ಒಂದು ಬಣ್ಣವಾಗಿ ಸೇರಿ ರಂಜಿಸುತ್ತಿದೆ. ವೇದದಂತೆಯೆ ಬೈಬಲ್ಲೂ, ಪ್ರಾಚೀನ ಶ್ರದ್ಧೆಯಂತೆಯೆ ಅರ್ವಾಚೀನ ವಿಜ್ಞಾನ ಬುದ್ಧಿಯೂ, ಅದರ ಮನೋಹರತೆಗಳಿಗೆ ಅಂಗಗಳಾಗಿವೆ. ರಾಮಮೋಹನರಾಯ ಮತ್ತು ಕೇಶವಚಂದ್ರಸೇನರ ವ್ಯಕ್ತಿತ್ತ್ವಗಳಂತೆಯೆ ನಾರಾಯಣ ಗುರು ಮತ್ತು ದಯಾನಂದ ಸರಸ್ವತಿಯರ ವ್ಯಕ್ತಿತ್ತ್ವಗಳೂ ವರ್ಣಜಾಲದಲ್ಲಿ ಹಾಸು ಹೊಕ್ಕಾಗಿವೆ. ನ್ಯೂಟನ್, ಡಾರ್ವಿನ್, ಫ್ರಾಯ್ಡ್, ಐನ್ಸ್ಟೈನರುಗಳಂತೆಯೆ ಲೆನಿನ್, ಗಾಂಧಿ, ಟಾಲ್ ಸ್ಟಾಯ್, ಠಾಕೂರರೂ ಅಲ್ಲಿ ಮನೆ ಮಾಡಿದ್ದಾರೆ. ಆ ದರ್ಶನ ನಿರಂಕುಶ ಮತಿಗಳನ್ನು ಸರ್ವದಾ ಆಹ್ವಾನಿಸುತ್ತದೆ. ದಾಸ್ಯ ಬುದ್ಧಿಯಿಂದ ಪಾರಾಗುವ ಮುಕ್ತ ಮತಿಗಳಿಗೆ ಅಲ್ಲಿ ಮಹಾಲಿಂಗನ ಸೌಖ್ಯವಿದೆ. ಅದು ಸ್ವತಂತ್ರಮತಿಗಳ ಧೀರ ಸಾಮ್ರಾಜ್ಯ. ಅಲ್ಲಿ ಸಾಕ್ಷಾತ್ಕಾರವಲ್ಲದೆ ಬಲತ್ಕಾರವಿಲ್ಲ. ಅಲ್ಲಿಯ ಹಾದಿ ಬುದ್ಧಿ; ಅಲ್ಲಿಯ ಗುರಿ ಸಿದ್ಧಿ”
- [ ಸ್ವಾಮಿ ವಿವೇಕಾನಂದ-ಕುವೆಂಪು; ಪು.ಸಂ.243-244]
ಈ ರೀತಿ ಮಹಾನವಮಿಯ ಮೌಲ್ಯಗಳ ಆಗರವಾಗಿರುವ ವಿವೇಕಾನಂದರು ಧರ್ಮಗುರುವೆಂದು ಬಿಂಬಿತವಾಗಿದ್ದ ಶಂಕರಾಚಾರ್ಯರ ತತ್ತ್ವಗಳನ್ನು ದಿಕ್ಕರಿಸಿದ್ದು ಮಾತ್ರ ದಿಗ್ಭ್ರಮೆಯುಂಟುಮಾಡಿದರೂ ಆಶ್ಚರ್ಯವಿಲ್ಲ. ಕುಶಲಮತಿಯಾದ ವಿವೇಕಾನಂದರು ಕಪಟಮತಿಯಾದ ಶಂಕರಾಚಾರ್ಯರ ತತ್ತ್ವಗಳ ಅಧ್ಯಾಯನಗೈದು, ಮಾನವ ವಿರೋಧಿ ನೀತಿಗಳನ್ನು ಹೇಗೆ ಎತ್ತಿ ಹಿಡಿದರೆಂಬುದನ್ನು ಫ್ರೊ.ಕೆ.ಎಸ್.ಭಗವಾನರು ಸಾಕ್ಷಾಧಾರಗಳ ಮೂಲಕ ತೆರೆದಿಟ್ಟಿದ್ದಾರೆ.
ಲೇಖಕರೇ ತಮ್ಮ ಕೃತಿಯ ಪು.ಸಂ.51 ಮತ್ತು 52 ರಲ್ಲಿ ಉಲ್ಲೇಖಿಸಿದಂತೆ-“ಶಂಕರನಿಗೆ ಕ್ಷೌರದ ಕತ್ತಿಯಂತಹ ನಿಶಿತಮತಿಯಿತ್ತು. ಅವನು ಒಳ್ಳೆಯ ವಾದಪಟು ಮತ್ತು ವದ್ವಾಂಸ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅವನಿಗೆ ಔದಾರ್ಯವಿರಲಿಲ್ಲ; ಅವನ ಹೃದಯವೂ ಹಾಗೆಯೇ ಇದ್ದಂತೆ ಕಾಣುತ್ತದೆ. ಜೊತೆಗೆ ಅವನು ತನ್ನ ಬ್ರಾಹ್ಮಣ್ಯದ ಬಗ್ಗೆ ಭಾರಿ ಹೆಮ್ಮೆ ಪಡುತ್ತಿದ್ದನು. ದಕ್ಷಿಣ ಭಾರತದ ಪುರೋಹಿತವರ್ಗದ ಹಾರುವನ ಹಾಗೆ ತುಂಬಾ ಗರ್ವ ಪಡುತ್ತಿದ್ದನು”.-[ ಒಔಓIಇಖ WIಐಐIಂಒS : ಊIಓಆUSIಒ, P-96 ]
ಮುಂದುವರೆದು... “ಬ್ರಾಹ್ಮಣೇತರ ಜಾತಿಯವರಿಗೆ ಬ್ರಹ್ಮಜ್ಞಾನ ಸಿದ್ದಿಸುವುದಿಲ್ಲ ಎಂದು “ವೇದಾಂತ ಸೂತ್ರಗಳ ಭಾಷ್ಯ”ದಲ್ಲಿ ಹೇಗೆ ಸಮರ್ಥಿಸಿಬಿಟ್ಟಿದ್ದಾನೆ! ಎಂಥ ಡಾಂಭಿಕ ವಾದಸರಣಿ! ಹಿಂದಿನ ಜನ್ಮದಲ್ಲಿ ವಿದುರ ಬ್ರಾಹ್ಮಣ ದೇಹವನ್ನು ಧರಿಸಿದ್ದರಿಂದ ಅವನಿಗೆ ಬ್ರಹ್ಮಜ್ಞಾನ ಸಿದ್ದಿಸಿದರೆ, ಅವನು ಹಿಂದೆ ಹಾರುವನಾಗಿ ಹುಟ್ಟಿದ್ದರಿಂದ ಬ್ರಹ್ಮಜ್ಞಾನ ಸಿದ್ದಿಸಿತೆಂಬ ನಿಮ್ಮ ಶಂಕರನವಾದವನ್ನು ನಾವು ಒಪ್ಪಬೇಕಲ್ಲವೇ? ತ್ರೈವರ್ಣಿಕರಲ್ಲಿ ಪ್ರತಿಯೊಬ್ಬನಿಗೂ ವೇದಾಧ್ಯಯನ ಮತ್ತು ಬ್ರಹ್ಮ ಸಾಕ್ಷಾತ್ಕಾರದ ಹಕ್ಕುಂಟು ಎಂದು ವೇದಗಳೇ ಹೇಳುವುದಿಲ್ಲವೇ? ಆದ್ದರಿಂದ ವೇದಕ್ಕೆ ವಿರುದ್ದವಾದ ಈ ವಿಷಯದ ಬಗ್ಗೆ ಶಂಕರ ತನ್ನ ಪಾಂಡಿತ್ಯದ ಒಂದು ವಿಚಿತ್ರ ತುಣುಕನ್ನು ಪ್ರದರ್ಶಿಸುವ ಅಗತ್ಯವೇ ಇರಲಿಲ್ಲ. ಆತನ ಹೃದಯ ಎಂಥಾದ್ದು ಎಂದರೆ ಅಸಂಖ್ಯಾತ ಬೌದ್ಧ ಭಿಕ್ಷುಗಳನ್ನು ಬೆಂಕಿಗೆ ಹಾಕಿ ಸುಟ್ಟುಬಿಟ್ಟನು, ಅವರನ್ನು ವಾದದಲ್ಲಿ ಸೋಲಿಸಿ! ಆ ಬೌದ್ಧರು ಕೂಡ ತಮ್ಮನ್ನೆ ಸುಟ್ಟುಕೊಂಡು ಸಾಯುವಷ್ಟು ಮೂರ್ಖರಾಗಿದ್ದರು, ತಾವು ವಾದದಲ್ಲಿ ಸುಮ್ಮನೆ ಸೋತಿದ್ದರಿಂದ! ಶಂಕರನ ಇಂಥ ಕೆಲಸವನ್ನು ಮತಾಂಧತೆ (ಜಿಚಿಟಿಚಿಣiಛಿism) ಎನ್ನದೇ ಬೇರೇನೆಂದು ಕರೆಯುವುದು?”
sತಿಚಿmi ಗಿiveಞಚಿಟಿಚಿಟಿಜಚಿ: ಣhe ಛಿomಠಿಟeಣe ತಿoಡಿಞs ಸಂ.7 ಪು.116-8
ಲೇಖಕರಾದ ಪ್ರೊ. ಭಗವಾನರು ವಿವೇಕಾನಂದ ಈ ಹೇಳಿಕೆಯನ್ನು ಉದ್ಧರಿಸುವುದರ ಜೊತೆಗೆ ವಿವೇಕಾನಂದರು ಬಳಸಿದ ‘ತ್ರೈವರ್ಣಿಕ’ ಎಂಬ ಶಬ್ದಕ್ಕೆ ಬದಲಾಗಿ ‘ಪ್ರತಿಯೊಂದು ಮಾನವ ಜೀವಿಗೂ ಉಂಟು, ಎಂದು ವಿವೇಕಾನಂದ ಸ್ವಾಮಿಗಳು ಹೇಳಬೇಕಿತ್ತು’ ಎಂದು ವಿವೇಚನೆಯುಕ್ತವಾಗಿ ದಾರ್ಶನಿಕರನ್ನೇ ಪ್ರಶ್ನಿಸಿರುವದು ಲೇಖಕರ ಅಂತಃಪ್ರಜ್ಞೆಯ ದ್ಯೋತಕವಾಗಿದೆ.
ಖ್ಯಾತ ವೈಚಾರಿಕ ಚಿಂತಕರಾದ ಜ.ಹೊ ನಾರಾಯಣ ಸ್ವಾಮಿಯವರು ಒಂದು ಕಡೆ ಹೀಗೆ ಉಲ್ಲೇಖಿಸಿದ್ದಾರೆ- “ನೀಚರು ಕುತಂತ್ರಿಗಳೂ ಆದ ಪುರೋಹಿತರು ಎಲ್ಲಾ ವಿಧದ ಮೂಢನಂಬಿಕೆಗಳನ್ನು ವೇದ ಮತ್ತು ಹಿಂದೂ ಧರ್ಮದಸಾರ ಎಂದು ಬೋಧಿಸುತ್ತಾರೆ. ಈ ಠಕ್ಕುಗಾರರಾದ ಪುರೋಹಿತರಾಗಲಿ ಅಥವಾ ಅವರ ತಾತ ಮುತ್ತಾತಂದಿರಾಗಲೀ ಕಳೆದ ನೂರಾರು ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನು ನೋಡಿಲ್ಲ. ಮೂಢಾಚಾರಗಳನ್ನು ಅನುಸರಿಸಿ ಹೀನ ಸ್ಥಿತಿಗೆ ಬರುತ್ತಾರೆ. ಕಲಿಯುಗದಲ್ಲಿ ಬ್ರಾಹ್ಮಣ ವೇಷದಲ್ಲಿರುವ ಈ ರಾಕ್ಷಸರಿಂದ ಮುಗ್ದ ಜನರನ್ನು ಆ ದೇವರೇ ಕಾಪಾಡಬೇಕು”. (‘ಸಂಪ್ರದಾಯದ ನೇಣುಗಂಬ’ –ಜಹೊನಾ ಪು. ಸಂ. 149, 150)
ವೈಚಾರಿಕ ಚಿಂತಕಿಯಾದ ಶ್ರೀಮತಿ ವಿಜಯ ಮಹೇಶ್ರವರು ಒಂದು ಕಡೆ ಶಂಕರನ ಸಂಕುಲದ ಮನೋಸ್ಥಿತಿಯ ಬಗ್ಗೆ ಹೀಗೆ ಉಲ್ಲೇಖಿಸಿದ್ದಾರೆ. “ಮಹಾನ್ ಮಾನವತಾವಾದಿ, ಬೌದ್ಧಿಕ ಭಿಕ್ಷು ಶಾಂತಿಧೂತ, ಸಂಗೀತ ಚಕ್ರವರ್ತಿ ಸಾಮ್ರಾಟ್ ರಾವಣಾಸುರನನ್ನು, ಧ್ಯಾನಿ ಬುದ್ದ ಕುಂಭಕರ್ಣನನ್ನು, ರಾವಣನ ಮಗನಾದ (ಇಂದ್ರಜೀತ್) ಅವರುಗಳ ‘ಪ್ರಕೃತಿಗಳನ್ನು ಸುಟ್ಟು ರಾಮಲೀಲಾವೆಂಬ ಅನಾಗರಿಕ, ಅಸಹ್ಯ, ಕೀಳು ಅಭಿರುಚಿಯನ್ನು ಜಗಜ್ಜಾಹಿರು ಮಾಡಿಕೊಂಡು ಕುಣಿದಾಡಿದ ಸನಾತನಿಗಳು ಮತ್ತು ಅವರ ಜೊತೆ ಇತಿಹಾಸದ ಪ್ರಜ್ಞೆಯಿಲ್ಲದ ಹಿಂದೂಗಳ ಇತರೆ ಜಾತಿ ಜನಗಳು ಇನ್ನೂ ಎಷ್ಟು ವರ್ಷಗಳ ಕಾಲ ಈ ಆಟಗಳನ್ನು ಆಡುತ್ತಾರೋ ಅದು ಬೇರೆಯದೇ ಮಾತು. ಆದರೆ ಹೀಗೆ ಮಾಡುವ ಮೂಲಕ ಈ ಘನಂದಾರಿಗಳು ಅದೆಂತಹ ಸತ್ಯ, ಎಲ್ಲೆಲ್ಲೂ ತುಂಬಿ ತುಳುಕಾಡುವವಂತಹ ಸಮಾಜ ನಿರ್ಮಾಣ ಮಾಡಿದ್ದಾರೋ ಗೊತ್ತಿಲ್ಲ! ಅದ್ಯಾವ ಊರುಗಳಲ್ಲಿ, ರಾಜ್ಯಗಳಲ್ಲಿ ಹೆಂಗಸರ ಮೇಲಿನ ಅತ್ಯಾಚಾರಗಳು ನಿಂತಿದ್ದಾವೋ ಗೊತ್ತಿಲ್ಲ! ಆದರೆ ರಾವಣ, ಕುಂಭಕರ್ಣ, ಇಂದ್ರಜಿತ್ರ ಪ್ರಕೃತಿಗಳನ್ನು ವರ್ಷ ವರ್ಷವೂ ಸುಟ್ಟು ಬೂದಿ ಮಾಡಿ ವಿಕೃತಿ ಆನಂದ ಪಡೆಯುವ ತೀಟೆಗಳು ಮಾತ್ರ ನಿಂತಿಲ್ಲ! ದುಷ್ಟ ಶಿಕ್ಷಣೆ ಶಿಷ್ಟರಕ್ಷಣೆ ಎಂದು ಹೇಳಿಕೊಂಡು ತಾವೊಬ್ಬರೆ ಶಿಷ್ಟಾಚಾರದ ಪೇಟೆಂಟ್ಗಳನ್ನು ಪಡೆದಿರುವವರು ಎಂದು ಭಾವಿಸಿಕೊಂಡು ರಾವಣ, ಕುಂಭಕರ್ಣ, ಇಂದ್ರಜಿತ್ರನ್ನು ಸುಡುವುದೇ ಜಗತ್ತಿನನಲ್ಲಿ ಮಾಡಬಹುದಾದ ಮಾಹಾನ್ ಕಾರ್ಯ ಎನ್ನುವ ಸನಾತಿಗಳು ಇದಕ್ಕಿಂತ ಕಪಟನಾಟಕ ಢೋಂಗಿ ವೇಷಗಳನ್ನು ಹಾಕಲುಂಟೆ? ಆಡಲುಂಟೆ? ಇವರ ಮೂರ್ಖತನಕ್ಕೆ ಮಿತಿ ಬೇಡವೆ? ಅಸಲು ಸೀತಾ ಅಪಹರಣ ಎಂಬುದೇ ಸುಳ್ಳಿನ ಮೂಟೆ ಆಗಿರುವಾಗ ರಾವಣನನ್ನು ಕೊಲ್ಲುವ ಮಾತು ಎಲ್ಲಿಯದು ಅಂತ? ಬಹುಶಃ ರಾವಣನ ಪ್ರಖರ ಪ್ರತಿಭೆ ದಿವ್ಯ ತೇಜಸ್ಸು ರಾಜಗಾಂಭಿರ್ಯ, ಅವನ ಗುಣ ವಿಶೇಷಗಳು ಆರ್ಯರಿಗೆ ತಡೆಯಲು ಅಸಾಧ್ಯವಾದ ಈರ್ಷೆಯನ್ನು ತುಂಬಿಸಿರÀಬೇಕು! ಈ ಕಾರಣಕ್ಕೇನೆ ಇವರಿಗೆ ರಾವಣನನ್ನು ಮರೆಯಲು ಸಾಧ್ಯವಾಗುತ್ತಿಲ್ಲ! ರಾವಣ ಚಕ್ರವರ್ತಿ ಕೇವಲ ತನ್ನ ತುಟಿಯಂಚಿನ ನಗುವಿನಿಂದಲೇ ಇವರನ್ನು ತಿರಸ್ಕರಿಸಿರÀಬೇಕು! ಈ ಅವಮಾನವನ್ನು ತಡೆಲಾಗದೆಯೇ ರಾವಣನನ್ನು ಚಚ್ಚಿ ಹಾಕುವಂತೆಯೇ, ಸುಟ್ಟುಹಾಕುವಂತಲೋ ಒಟ್ಟಿನಲ್ಲಿ ತಮ್ಮ ಇಂದ್ರಿಯಗಳನ್ನು ತಣಿಸಿಕೊಳ್ಳುತ್ತಿರಬೇಕು! ಇಲ್ಲದಿದ್ದರೆ ಇವರುಗಳು ಅದ್ಯಾಕೆ ರಾವಣ, ಕುಂಭಕರ್ಣರನ್ನು ಮರೆಯಲು ಸಾಧ್ಯವಾಗುತ್ತಿಲ್ಲ? ರಾವಣನೊಬ್ಬನೇ ಅಲ್ಲ, ಇತರ ಅಸುರ ಚಕ್ರವರ್ತಿಗಳಾದ ಬಲಿ, ನರಕಾಸುರ, ಮಹಿಷಾಸುರ, ಗಜಾಸುರ, ಮೂಕಾಸುರ, ಹಿರಣ್ಯ ಕಶಿಪು ಮುಂತಾದವರು ಆರ್ಯರಿಗೆ ಸರಿಯಾದ (!) ಪ್ರತಿರೋಧವನ್ನೇ ಒಡ್ಡಿರಬೇಕು! ಆದ್ದರಿಂದಲೇ ಇವರುಗಳು ಅವರನ್ನು ಸಂಹಾರ ಮಾಡಿದ್ದೇವೆಂದು ಹಬ್ಬದೂಟಗಳನ್ನು ಜಡೆಯುತ್ತಿರಬೇಕು! ಸೇಡನ್ನು ತೀರಿಸಿಕೊಳ್ಳುತ್ತಿರುವ ಪರಿಯಿದು! ಆದರೆ ಇಲ್ಲಿ ನನ್ನ ಪ್ರಶ್ನೆ ಏನೆಂದರೆ ಅದ್ಹೇಗೆ ಅಷ್ಟೊಂದು ಸಿಟ್ಟಿನಿಂದ ರೋಷದಿಂದ ರಾವಣನನ್ನು ಸುಟ್ಟು ಬೂದಿ ಮಾಡಿ ತಮ್ಮ ತಮ್ಮ ಮನೆಗಳಿಗೆ ಇಂತಿರುಗುವಷ್ಟರಲ್ಲಿ ಮತ್ತೆ ರಾವಣ, ಕುಂಭಕರ್ಣ, ಇಂದ್ರಜಿತ್ರುಗಳು ಹುಟ್ಟಿಬಿಡುತ್ತಾರೆ? ಅಂದಮೇಲೆ ವರ್ಷ ವರ್ಷವೂ ರಾವಣ ಸೀತೆಯನ್ನು ಅಪಹರಿಸುತ್ತಾನೆ! ವರ್ಷ ವರ್ಷವೂ ರಾಮನ ಗ್ಯಾಂಗು ಲಂಕಾದೇಶವನ್ನು ಸುಡುತ್ತದೆ!
(ಬಹುಜನ ವಿಚಾರ ಲಹರಿ ಸಂ- ಡಾ. ಕೃಷ್ಣಮೂರ್ತಿ ಚಮರಂ; ಪು.ಸಂ. 106)…
“... ಉಪನಿಷತ್ತಿನ ಮೇಲೆಯೆ ಬೌದ್ಧ ಧರ್ಮ ಬೆಳೆದಿದೆ; ಶಂಕರನ ತತ್ವಶಾಸ್ತ್ರಕ್ಕೂ ಅದೇ ಮೂಲ, ಬುದ್ದನ ಮಹಾದ್ಬುತ ಅನುಕಂಪ ಹೃದಯದ ತಿಲಾಂಶವೂ ಶಂಕರನಿಗೆ ಇರಲಿಲ್ಲ; ಅವನದು ಬರಿಯ ಬುದ್ದಿಯ ಒಣ ಪಾಂಡಿತ್ಯ. ತಂತ್ರಗಳಿಗೆ ಹೆದರಿ, ಜನ ಸಮುದಾಯಕ್ಕೆ ಹೆದರಿ, ಒಂದು ಕುರವನ್ನು ವಾಸಿ ಮಾಡಲು ಹೋಗಿ ಅದಿದ್ದ ತೋಳನ್ನೆ ಕತ್ತರಿಸಿ ಹಾಕಿದನು. ಅವುಗಳನ್ನೆಲ್ಲ ಬರೆಯಲು ಒಂದು ದೊಡ್ಡ ಪುಸ್ತಕವೆ ಬೇಕಾಗುತ್ತದೆ. ಆದರೆ ಅದನ್ನು ಬರೆಯಲು ಬೇಕಾದ ಪಾಂಡಿತ್ಯವಾಗಲೀ ಸಮಯವಾಗಲೀ ನನಗೆ ಇಲ್ಲ”.
(Sತಿಚಿmi viveಞಚಿಟಿಚಿಟಿಜ: ಣhe ಛಿomಠಿಟeಣe ತಿoಡಿಞs ಸಂ -6, ಪು. 223)
ಪ್ರಸ್ತುತ ಲೇಖನದಲ್ಲಿ ಲೇಖಕರು ವಿವೇಕಾನಂದ ವಿಚಾರಧಾರೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಶಂಕರಾಚಾರ್ಯರನ್ನು ವಿಮರ್ಶಿಸಿದ್ದಾರೆ.
ಇದಕ್ಕೆ ಪೂರಕವಾದ ಇತರೆ ಲೇಖಕರ, ವಿಚಾರವಂತರ ಅಭಿಪ್ರಾಯಗಳನ್ನು ನಾನಿಲ್ಲಿ ಉಲ್ಲೇಖಿಸಿದ್ದೇನೆ.
ಇದರಲ್ಲಿನ ನಾಲ್ಕನೇ ಅಧ್ಯಾಯ ‘ದೋಷಯುಕ್ತ ದೃಷ್ಟಿಕೋನ’ ಇಲ್ಲಿ ಪ್ರೊ. ಕೆ.ಎಸ್.ಭಗವಾನ್ರವರ ಲೇಖನಗಳಿಗೆ ಕೆಲ ವಿದ್ವಾಂಸರು ಒಡ್ಡಿದ ಆಕ್ಷೇಪಣೆಗಳಿಗೆ ಸ್ವಾಮಿ ವಿವೇಕಾನಂದರ ಹೆಳಿಕೆಗಳನ್ನೇ ಉಲ್ಲೇಖಿಸುತ್ತಾ ಜವಾಬು ನೀಡಿದ ಪರಿ ಪ್ರಶಂಶನೀಯ. ಇದಕ್ಕೆಲ್ಲ ಕಾರಣವಾದದ್ದು ಇವರು ಬರೆದ ಜಾತಿ, ಭಾಷೆ ಮತ್ತು ಉನ್ನತಿ’ ಎಂಬ ಲೇಖನ.
ಇದಕ್ಕೆ ಪೂರಕವಾದ ಬಾಬಾ ಸಾಹೇಬರ ಒಂದು ಹೇಳಿಕೆ ನೆನಪಿಗೆ ಬರುತ್ತದೆ. “ಇತಿಹಾಸವನ್ನು ಮರೆಯಬೇಡಿ.. ಇತಿಹಾಸವನ್ನು ಮರೆತರೆ ಇತಿಹಾಸವನ್ನು ಸೃಷ್ಟಿಸಲಾಗುವುದಿಲ್ಲ” ಅದರರ್ಥ ಇತಿಹಾಸದೊಳಗೆ ಕಣ್ಣಾಡಿಸಿ.. ಅಲ್ಲೇನೋ ಮಹತ್ಸಂಗತಿ ಅಡಗಿದೆ. ಅಲ್ಲಿ ನನ್ನ ಹೋರಾಟದ ಹೆಜ್ಜೆಗಳಿವೆ.. ಅಲ್ಲಿ ನಮ್ಮ ಪೂರ್ವಿಕರ ಶ್ರಮದ, ತ್ಯಾಗದ, ಬಲಿದಾನದ ನೂರಾರು ಘಟನೆಗಳಿವೆ. ಅವುಗಳಿಂದ ಪಾಠ ಕಲಿಯಿರಿ. ಅದುವೇ ನಿಮ್ಮ ಮುಂದಿನ ಹೆಜ್ಜೆಗೆ ದಾರಿದೀಪ ಎನ್ನುವುದೇ ಆಗಿದೆ. ಯಾವುದೇ ಓರ್ವ ಪ್ರಗತಿಪರನಿಗೆ .. ಸ್ಪಷ್ಟವಾದ ಭೂತ.. ನಿಖರವಾದ ವರ್ತಮಾನ.. ನಿರ್ದಿಷ್ಟ ಭವಿಷ್ಯದ ಗುರಿ ಇರಲೇಬೇಕು. ಹಾಗಿದ್ದಾಗ ಮಾತ್ರ ವ್ಯಕ್ತಿ ಒಂದು ಶಕ್ತಿಯಾಗಲು ಸಾಧ್ಯ”.
ಈ ಬಾಬಾ ಸಾಹೇಬರ ವಾಣಿ ದಮನಿತರಿಗೆ, ಶೋಷಿತರಿಗೆ ಸ್ಪೂರ್ತಿದಾಯಕವಾದರೂ ಬಿಗಿಯಾದ ಜಾತಿ ವ್ಯವಸ್ಥೆ, ರಾಜ್ಯಶಾಹಿ ಅಡ್ಡಿಯಾಗುವುದು ತಪ್ಪುವುದಿಲ್ಲ.
ಲೇಖಕರು ಪ್ರಸ್ತುತ ಲೇಖನದಲ್ಲಿ ಪು.ಸಂ-55ರಲ್ಲಿ ಉಲ್ಲೇಖಿಸಿರುವಂತೆ “ಹಿಂದೂ ಧರ್ಮದಲ್ಲಿ ಸಮಾನತೆಯಿಲ್ಲ, ಅದು ಅಸಮಾನತೆಯ ಮೇಲೆ ನಿಂತಿದೆ. ಜಾತಿ ವ್ಯವಸ್ಥೆಯೇ ಅದರ ತಳಹದಿ. ಈ ವ್ಯವಸ್ಥೆಯಲ್ಲ್ಲಿ ಮನುಷ್ಯನಿಗೆ ಬೆಲೆಯಿಲ್ಲ. ಅವನ ಜಾತಿಯಿಂದ ಅವನ ವ್ಯಕ್ತಿತ್ವ ನಿರ್ಧಾರವಾಗುವ ಪರಿಸ್ಥಿತಿ ಇದೆ”
ಜಾತಿ ಎಂದಾಕ್ಷಣ ಉಚ್ಛ ಕುಲಜರು, ಹೀನ ಕುಲಜರು; ಮಾಂಸಾಹಾರಿ, ಸಸ್ಯಾಹಾರಿಗಳೆಂಬ ಮನೋಧೋರಣೆಗಳು ಸುಳಿದಾಡಿಬಿಡುತ್ತವೆ. ಜಾತಿ ಮತ್ತು ಆಹಾರ ವಿಷಯದಲ್ಲಿ ವಿವೇಕಾನಂದರು ಹೀಗೆ ಹೇಳಿದ್ದಾರೆ.
“ಭಾರತದಲ್ಲಿ ಹಿಂದೆ ದನದ ಮಾಂಸ ತಿನ್ನದ ಬ್ರಾಹ್ಮಣ ಬ್ರಾಹ್ಮಣನಾಗಿ ಉಳಿಯುತ್ತಿರಲಿಲ್ಲ. ಸನ್ಯಾಸಿ, ರಾಜ, ಮಹಾತ್ಮರು ಮನೆಗೆ ಬಂದರೆ ಗೌರವಾರ್ಥವಾಗಿ ಅತ್ಯುತ್ತಮ ಗೂಳಿಯನ್ನು ಕೊಂದು ಅಡುಗೆ ಮಾಡುತ್ತಿದ್ದರು. ಹಿಂದೂ ಧರ್ಮದಲ್ಲಿರುವ ಎಲ್ಲ ಉಚ್ಚವಾದ ಮತ್ತು ಅತ್ಯಂತ ಶ್ಲಾಘನೀಯವಾದ ಮಹದಾಲೋಚನೆಗಳ ಮೂಲ ಕ್ಷತ್ರಿಯರು. ಉಪನಿಷತ್ತುಗಳನ್ನು ಬರೆದವರು ಕ್ರತ್ರೀಯರು. ರಾಮಯಾರು? ಕೃಷ್ಣಯಾರು? ಬುದ್ಧ ಯಾರು? ಜೈನ ಧರ್ಮದ ತೀರ್ಥಂಕರರು ಯಾರು? ಕ್ಷತ್ರಿಯರು!.”
(ಸಂಪ್ರದಾಯದ ನೇಣುಗಂಬ-ಜಹೊನಾ, ಪು.ಸಂ 117)
ಈ ಲೇಖನದಲ್ಲಿ ಪ್ರೊ ಭಗವಾನರು ಕೊಡುವ ಸ್ವಾಮಿ ವಿವೇಕಾಂದರ ಎರಡು ಹೇಳಿಕೆಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು. 1. “ಧೂರ್ತರೂ ಠಕ್ಕರೂ ಆದ ಪುರೋಹಿತರು ಎಲ್ಲಾ ಬಗೆಯ ಮೂಢನಂಬಿಕೆಗಳನ್ನೂ ವೇದ ಮತ್ತು ಹಿಂದೂ ಧರ್ಮದ ಸಾರ ಎಂದು ಜನರಿಗೆ ಬೋಧಿಸುತ್ತಾರೆ.
ಈ ಖದೀಮ ಪುರೋಹಿತರಾಗಲಿ ಅವರ ತಾತ ಮುತ್ತಾತಂದಿರಾಗಲೀ ಕಳೆದ ನೂರಾರು ತಲೆಮಾರುಗಳಿಂದಲೂ ವೇದದ ಒಂದು ಭಾಗವನ್ನೂ ಕೂಡ ನೋಡಿಲ್ಲ. ಅವರು ಮೂಢಾಚಾರಗಳನ್ನು ಅನುಸರಿಸಿ ತಮ್ಮನ್ನೇ ಹೀನ ಸ್ಥಿತಿಗೆ ತಂದು ಕೊಳ್ಳುತ್ತಾರೆ. ಕಲಿಯುಗದಲ್ಲಿ ಬ್ರಾಹ್ಮಣರ ವೇಷದಲ್ಲಿ ಇರುವ ಈ ರಾಕ್ಷಸರಿಂದ ಜನರನ್ನು ಆ ದೇವರೇ ಕಾಪಾಡಬೇಕು”.
2. “ಬನ್ನಿ, ಮನುಷ್ಯರಾಗಿ. ಪುರೋಹಿತರನ್ನು ಒದ್ದೋಡಿಸಿ. ಅವರು ಎಲ್ಲ ಪ್ರಗತಿಗೂ ವಿರೋಧವಾಗಿದ್ದಾರೆ. ಅವರೆಂದೂ ಬದಲಾಗುವುದಿಲ್ಲ. ಅವರ ಹೃದಯವೆಂದೂ ವಿಶಾಲವಾಗುವುದಿಲ್ಲ. ಅವರು ಶತ ಶತಮಾನಗಳ ಮೂಢನಂಬಿಕೆಯ ದಬ್ಬಾಳಿಕೆಯ ಸಂತಾನ. ಮೊದಲು ಪುರೋಹಿತ ಶಾಹಿಯನ್ನು ಮೂಲೋತ್ಪಾಟನೆ ಮಾಡಿ. ಬನ್ನಿ, ಮನುಷ್ಯರಾಗಿ!”
1. (ಖಿhe ಛಿomಟeಣe ತಿoಡಿಞs ಠಿಚಿge ಟಿo-290)
2. (ಖಿhe ಛಿomಠಿಟeಣe ತಿoಡಿಞs ಠಿಚಿge ಟಿo- 11)
ಲೇಖಕರು ಇಲ್ಲಿ ಪ್ರಸ್ತಾಪಿಸಿರುವ ವಿವೇಕಾನಂದರ ಈ ಎರಡು ಹೇಳಿಕೆಗಳೇ ಸಾಕು ಹಾರುವರಿಂದ ಜಾತಿ ವ್ಯವಸ್ಥೆ ಅದೆಷ್ಟು ಬಲಿಷ್ಟಗೊಂಡಿತ್ತೆಂದು ತಿಳಿದುಕೊಳ್ಳಲು ಹೀಗೆ ಹಲವಾರು ನಿದರ್ಶನಗಳ ಮೂಲಕ ಪ್ರೊ. ಭಗವಾನರು ನಮ್ಮಗಳ ಕಣ್ ತೆರೆಸುತ್ತಾರೆ. ಅಧ್ಯಯನಕ್ಕೆ ಸಜ್ಜಾಗುವಂತೆ ಪ್ರೇರೆಪಿಸುತ್ತಾರೆ.
ಇದಕ್ಕೆ ಪೂರಕವಾಗುವಂತೆ ಖ್ಯಾತ ವಿಚಾರವಾದಿ ಜಹೊನಾರವರ ಹೇಳಿಕೆ ನೆನಪಿಗೆ ಬರುತ್ತದೆ. “ಶಂಕರನಿಗೆ ಶ್ವಪಚನ ಮೂಲಕ ಬ್ರಹ್ಮಜ್ಞಾನವಾಯತು ಎಂದು ಹೇಳುವುದು, ಈಶ್ವರ ಶ್ವಪಚನ ರೂಪದಲ್ಲಿ ಬಂದು ಜ್ಞಾನವನ್ನು ಬೋಧಿಸಿದ ಎನ್ನುವುದು ಕಟ್ಟುಕಥೆ. ಒಂದು ಪಕ್ಷ ಶ್ವಪಚನ ಮೂಲಕ ಬ್ರಹ್ಮಜ್ಞಾನವಾದುದೇ ನಿಜವಾದರೆ ಆನಂತರ ಶಂಕರರು ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದು ವೇದ ಕೇಳಿದ ಶೂದ್ರನ ಕಿವಿಗೆ ಕಾದ ಸೀಸ ಸುರಿಯಬೇಕು , ಉಚ್ಚರಿಸಿದರೆ ನಾಲಿಗೆಯನ್ನು ಕತ್ತರಿಸಬೇಕು( ಬ್ರಹ್ಮಸೂತ್ರ ಭಾಷ್ಯ: ಅಧ್ಯಾಯ 1, ಸೂತ್ರ38) ಮುಂತಾದ ಮಾನವ ವಿರೋಧಿಯಾದ ಮಾತುಗಳಿಂದ ಜಾತಿಪ್ರೇಮವನ್ನು ಏಕೆ ಮೆರೆದರು?”
(ಆವರಣ ಅನಾವರಣ-ಜ.ಹೊ. ನಾರಾಯಣಸ್ವಾಮಿ, ಪು.ಸಂ. 72 )
ಹೀಗೆ ಪ್ರೊ.ಕೆ.ಎಸ್.ಭಗವಾನರು ಮಾನವನ ಸರ್ವತೋಮುಖ ಏಳಿಗೆಗಾಗಿ ಚಿಂತಿಸಿ ಮಾನವೀಯ ನೆಲೆಗಟ್ಟಿನಲ್ಲಿ ಆಲೋಚಿಸಿ, ಪರಾಮರ್ಶಿಸಿ, ಅಧ್ಯಾಯನಗೈದು ಕೊಟ್ಟ ಈ ವಿಚಾರಪೂರಿತ ವೈಚಾರಿಕ ಕೃತಿ ಶೂದ್ರರಿಗೆ ಸಂಜೀವಿನಿಯಾಗಿದೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197