ಏಪ್ರಿಲ್ 4 ರಂದು ಆಧ್ಯ ವಚನಕಾರರಾದ ಜೇಡರ ದಾಸಿಮಯ್ಯನವರ ಜಯಂತಿ ಇರುವ ಪ್ರಯುಕ್ತ ಬರೆದ ಲೇಖನ
ಸುಮಾರು ಎಂಟುನೂರು ವರ್ಷಗಳ ಹಿಂದೆ ವಿಶ್ವವೇ ಹಿಂದೆಂದೂ ಕಂಡರಿಯದ ಧಾರ್ಮಿಕ, ಸಾಮಾಜಿಕ, ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಏಕಕಾಲಕ್ಕೆ ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀವ್ರತರ ಚಳುವಳಿ ನಡೆದದ್ದು ಭರತಖಂಡದ ಕಾಯಕಯೋಗಿಸ್ಥಲವಾದ ಕರ್ನಾಟಕ ಮಣ್ಣಿನಲ್ಲಿ ಶರಣರ ಮಹಾಸಂಗಮದೊಂದಿಗೆ.
ಈ ಚಳುವಳಿಯು ಅಂದಿನ ಅನೇಕ ಪ್ರಚಲಿತ ಗಂಭೀರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿತೆನ್ನುವುದು ಕೂಡ ಗಮನಾರ್ಹವಾದ ಸಂಗತಿ. ಶಿವಶರಣರು ವರ್ಣ, ವರ್ಗ, ಲಿಂಗ ಬೇಧಗಳ ಗೋಡೆಯನ್ನು ಬುಡಸಮೇತ ಕಿತ್ತು ಹಾಕಿದರು. ಬಡವ, ಬಲ್ಲಿದ, ಉಚ್ಛ, ನೀಚರೆಂಬ ತಾರತಮ್ಯವನ್ನು ಕನಸಲ್ಲೂ ಸುಳಿಯದಂತೆ ಮಾಡಿದರು. ದೀನದಲಿತರ, ದುರ್ಬಲರ, ಬದುಕಿಗೆ ಬೆಳಕಾಗಿ ನಿಂತವರು ಶರಣರು.
ಇವರಲ್ಲಿ ಪ್ರಮುಖ ಹಾಗೂ ಆದ್ಯ ವಚನಕಾರರಾದ ದೇವರ ದಾಸಿಮಯ್ಯನವರದು ಅಪರೂಪದವರಲ್ಲಿ ಅಪರೂಪ ವ್ಯಕ್ತಿತ್ವ, ನಿಸ್ವಾರ್ಥ ಬುನಾದಿಯ ಮೇಲೆ ಸ್ವಾವಲಂಬನೆಯ ಮನೆಯ ಕಟ್ಟಿ, ಪರೋಪಕಾರವೆಂಬ ಛಾವಣಿ ಹಾಕಿ ಮನೆಯಲ್ಲಿ ‘ಮಾನವೀಯತೆ’ ಎಂಬ ಜ್ಯೋತಿ ಬೆಳಗಿಸಿದವರು. ಮಮತೆ, ಪ್ರೀತಿ, ಗೌರವ, ವಿನಯಗಳಿಂದ ಲೌಕಿಕ-ಅಲೌಕಿಕವನ್ನು ಗೆಲ್ಲಬಹುದೆಂದು ಸಾಧಿಸಿ ತೋರಿಸಿದವರು.
ದಾಸಿಮಯ್ಯನವರು ಹನ್ನೊಂದನೇ ಶತಮಾನದ ಹಾದಿಯಲ್ಲಿ [ಕ್ರಿ.ಶ.1040 ರಿಂದ 1100] ಕಲ್ಬುರ್ಗಿ ಜಿಲ್ಲೆಯ ಮುದನೂರಿನ ವಾಸಿಗಳಾದ ರಾಮಯ್ಯ ಹಾಗೂ ಶಂಕರಮ್ಮ ಎಂಬ ಜೇಡರ ದಂಪತಿಗಳ ಪುಣ್ಯಗರ್ಭಾಂಬುದಿಯಲ್ಲಿ ಜನಿಸುತ್ತಾರೆ. ಬಾಲ್ಯದಿಂದಲೇ ಲಿಂಗಾರ್ಚನೆ, ದಾಸೋಹ, ಜಂಗಮದೆಡೆ ತುಡಿದ ಇವರ ಮನಸ್ಸು ಅದರಲ್ಲಿಯೇ ಕಾಯಕನಿರತರನ್ನಾಗಿಸುತ್ತದೆ. ಮೇಲುವರ್ಗದವರ ಕೆಂಗಣ್ಣಿಗೆ ಗುರಿಯಾದರೂ ಧೈರ್ಯಗುಂದದೇ ಮುದನೂರು ಗ್ರಾಮದ ರಾಮನಾಥ ಲಿಂಗವನ್ನು ಆರಾಧ್ಯವಾಗಿ ಸ್ವೀಕರಿಸಿ ವಚನಾರ್ಪಣೆ ಮಾಡುತ್ತಾ ಸಾಗುತ್ತಾರೆ. ಇವರದು ಬಟ್ಟೆ ನೇಯುವ ಮೂಲ ಪ್ರವೃತ್ತಿಯಾಗಿತ್ತು. ಹೊತ್ತು ಗೊತ್ತಿಲ್ಲದೆ ದೇವಾಲಯಕ್ಕೆ ಬರುವ ದಾಸಿಮಯ್ಯನನ್ನು ಅಲ್ಲಿರುವ ಪೂಜಾರಿಗಳು ಆತನ ಬರುವಿಕೆಯನ್ನು ದೂರದಿಂದ ಕಂಡು ದೇವಾಲಯದ ಬಾಗಿಲುಗಳನ್ನು ಭದ್ರಪಡಿಸಿ ಬೀಗ ಜಡಿಯುತ್ತಾರೆ. ಆದರೆ ಇದಾವುದನ್ನು ಗಮನಿಸದ ದಾಸಿಮಯ್ಯ ಮಂದಿರದ ಹೊರಾಂಗಣದಲ್ಲಿ ನಿಂತು ಭಕ್ತಿಯಿಂದ ರಾಮನಾಥನ ವಚನ ಸ್ಮರಣೆ ಮಾಡಿದೊಡೆ ಬೀಗಗಳೆಲ್ಲವೂ ತನ್ನಿಂದ ತಾನೇ ಮುರಿದು ದೇವಾಲಯಗಳು ತೆರೆದುಕೊಳ್ಳುತ್ತವೆ ಎಂಬ ಪ್ರತೀತಿಗಳಿವೆ.
ಒಲವಿಲ್ಲದ ಭಕ್ತಿ, ಲವಲವಿಕೆ ಇಲ್ಲದ ಪೂಜೆ
ಸಲೆನಿಮ್ಮ ನಂಬಿ ನಂಬದವನ ಬಾಳುವೆ
ಹೊಲೆಯರ ನಾಯಿ ಹುಲು ಸರವಿಯಿಂದ
ಕರಕಷ್ಟ ಕಾಣಾ ರಾಮನಾಥಾ | [ವ.ಸಂ. 770]
ಈ ಮೇಲಿನ ವಚನದಲ್ಲಿ ಭಕ್ತಿಯೆಂದರೆ ಏನು ಎಂಬುದನ್ನು ತಿಳಿಸುತ್ತಾ, ಒಳಗೊಂದು, ಹೊರಗೊಂದು ನೀತಿಯ ಬಗೆಯುವವರನ್ನು ಕುಟುಕಿದ್ದಾರೆ. ಬದುಕಿನಲ್ಲಿ ಮಾತಿಗೆ ಮಹತ್ತರ ಪಾತ್ರವಿದೆ. ಇಲ್ಲಿ ಪರಸ್ಪರ ನಂಬಿಕೆ ಮುಖ್ಯ. ದೈವ ಪ್ರೀತಿ ಮುಖ್ಯ. ಪ್ರೀತಿ, ದಯೆ, ವಾತ್ಸಲ್ಯ, ಶ್ರದ್ಧೆ, ಆಸಕ್ತಿಯಿಲ್ಲದ ಪೂಜೆ ಹೊಲೆಯರ ನಾಯಿಯ ಬೇಟೆಗಿಂತ ಕೀಳೆಂದು ದಾಸಿಮಯ್ಯನವರು ಹೇಳುತ್ತಾರೆ.
“ಉಂಕಿಯ ನಿಗುಚಿ ಸರಿಗೆಯ ಸಮಗೊಳಿಸಿ
ಈ ಸೀರೆಯ ನೆಯ್ದವ ನಾನೋ ನೀನೋ ರಾಮನಾಥ ?”
ಪ್ರಸ್ತುತ ವಚನವು ಕಾಯಕವನ್ನು ಪ್ರಖರವಾಗಿ ಸೂಚಿಸುತ್ತದೆ. ನೇಯುವವ ನಾನಾದರೂ ನೇಯಿಸುವವ ನೀನೇ ಆದ್ದರಿಂದ ಅದರ ಪ್ರತಿಫಲ ನಿನ್ನದೇ ಎಂದು ರಾಮನಾಥನಲ್ಲಿ ಕೇಳುತ್ತಾರೆ.
ಒಮ್ಮೆ ತಾವು ನೇಯ್ದು ಬಟ್ಟೆಯನ್ನು, ಮಾರಲು ಸಿದ್ಧಾಪುರ ಪೇಟೆಗೆ ಹೋದಾಗ ಮಾರುವೇಶದಲ್ಲಿ ಜಂಗಮನಾಗಿ ಶಿವನು ಬರುತ್ತಾನೆ. ದಾಸಿಮಯ್ಯನವರಲ್ಲಿದ್ದ ಅಮೂಲ್ಯವಾದ ರೇಶ್ಮೆ ವಸ್ತ್ರವನ್ನು ದಾನವಾಗಿ ಬೇಡುತ್ತಾನೆ. ಒಂದು ಕ್ಷಣವೂ ಯೋಚಿಸದೇ ತನ್ನಲ್ಲಿದ್ದ ವಸ್ತ್ರವನ್ನು ಜಂಗಮನಿಗೆ ನೀಡುತ್ತಾರೆ. ತಕ್ಷಣ ಜಂಗಮ ಎದುರಲ್ಲೇ ಆ ವಸ್ತ್ರವನ್ನು ತುಂಡು ತುಂಡಾಗಿ ಹರಿದು ಹಾಕುತ್ತಾರೆ. ಕಿಂಚಿತ್ತು ಕೋಪಗೊಳ್ಳದೇ ರಾಮನಾಥನ ಸ್ಮರಣೆ ಮಾಡುತ್ತಾರೆ. ನಿರ್ಮೋಹದ ಸದ್ಭಕ್ತಿ ಕಂಡು ಶಿವ ನಿಜರೂಪ ತೋರಿ ಪ್ರಸನ್ನನಾಗುತ್ತಾನೆ.
ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತೊಡೆ ಒಲ್ಲೆ !
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ ಅರೆಗಳಿಗೆ
ಇತ್ತಡೆ ನಿಮ್ಮ ನಿತ್ಯ ಕಾಣಾ ರಾಮನಾಥಾ | ವ.ಸಂ. 740
ಆನೆಯಕೊಟ್ಟರೆ ಬೇಡ, ಸಂಪತ್ತನ್ನು ಕೊಟ್ಟರೆ ಬೇಡ, ಅರ್ಧ ರಾಜ್ಯ ಕೊಟ್ಟರೂ ಬೇಡ, ಶರಣರ ಒಡಲಿಂದ ಒಂದು ಸತ್ಯನುಡಿ ನೀಡಿದರೆ ನಿಮ್ಮ ನಿತ್ಯ ನೆನೆಯುವೆನು ಎಂದು ರಾಮನಾಥನಲ್ಲಿ ದಾಸಿಮಯ್ಯ ಬೇಡುವ ರೀತಿ ನಿಜಕ್ಕೂ ನಿಷ್ಕಲ್ಮಶವಾದುದು, ಅನುಕರಣೀಯವೆಂದರೆ ಅತಿಶಯೋಕ್ತಿಯಾಗಲಾರದು, ಏಕೆಂದರೆ ಇಂತಹ ಮಹಾನ್ ಶರಣರು ಜನಿಸಿ, ಆದರ್ಶ ತತ್ವಗಳನ್ನು ಬಿತ್ತಿದ ಈ ನಾಡಿನಲ್ಲಿ ಇಂದು ವಿಲೋಮವಾಗಿ ಕಾಣುತ್ತಿದ್ದೇವೆ. ಇಂದಿನ ಆಳ್ವರಸರು, ಆನೆ (ಬಲ) , ಹಣ, ಭೂಮಿಯ ಕಬಳಿಸಿ ನುಂಗಿ ನೀರು ಕುಡಿಯುವುದರಲ್ಲಿಯೇ ತಲ್ಲೀನರಾಗಿರುವುದು ವಿಪರ್ಯಾಸ !
ಇಳೆ ನಿಮ್ಮದಾನ, ಬೆಳೆ ನಿಮ್ಮ ದಾನ
ಸುಳಿದು ಸೂಸುವ ಗಾಳಿ ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳ ನೇನೆಂಬೆ ರಾಮನಾಥ ?
ಮನುಷ್ಯನ ಚಂಚಲ ಮನಸ್ಸಿನ ತಲ್ಲಣಗಳನ್ನು, ಅವಿವೇಕತನಗಳನ್ನು ದಾಸಿಮಯ್ಯನವರು ಇಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ, ಈ ಭೂಮಿ, ಬೆಳೆ, ಗಾಳಿ, ನೀರು ಎಲ್ಲವೂ ನೀಕೊಟ್ಟ ಕಾಣಿಕೆಗಳು ಆದರೆ ಇವನ್ನೆಲ್ಲ ತಿಂದು ತೇಗಿ ಬೇರೆಯವರನ್ನು ನೆನೆಯುವ ಕುನ್ನಿಗಳ ತಿಳಿಗೇಡಿಗಳನ್ನು ಏನೆನ್ನಬೇಕು ಎಂದು ಪ್ರಶ್ನಿಸುತ್ತಾರೆ. ಪ್ರಸ್ತುತ ಬೆಂಗಳೂರು, ಬೆಳಗಾಂ ನಲ್ಲಿ ವಾಸವಿರುವ ತಮಿಳು ಕನ್ನಡಿಗರು, ಮರಾಠಿ ಕನ್ನಡಿಗರು ಹುಟ್ಟಿ, ಬೆಳೆದದ್ದು ಕನ್ನಡ ಮಣ್ಣಿನಲ್ಲೇ ಆದರೂ ಭಾಷಾ ದ್ರೋಹ ಬಗೆಯುತ್ತಿರುವುದು ಅವಿವೇಕತನದ ಪರಮಾವಧಿ ಎನ್ನಬಹುದು. ಬಹುಶಃ ಇಂತಹ ನೀಚ ಮನಗಳನರಿತೇ ದಾಸಿಮಯ್ಯನವರು ಈ ವಚನ ಬರೆದಿರಬಹುದೆನಿಸುತ್ತದೆ.
ದಾಸಿಮಯ್ಯನವರಲ್ಲಿ ಕೇವಲ ಭಕ್ತಿ, ಸಾಮಾಜಿಕ ಪ್ರಜ್ಷೆ ಮಾತ್ರವಿರಲಿಲ್ಲ. ಅವರೊಳಗೊಬ್ಬ ಅನುಭಾವಿ ವಿಜ್ಞಾನಿ ಅಡಗಿದ್ದ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಯೋಚಿಸಿದಂತೆ ಬರೆದು, ಕಾಯಕದಲ್ಲಿ ತೊಡಗಿದ ಮೊದಲ ಕವಿಯೆಂದರೆ ಬಹುಶಃ ದಾಸಿಮಯ್ಯನವರೇ ಮೊದಲಿಗರೆನಿಸುತ್ತದೆ.
ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪದ ಕಂಪಿಲ್ಲದಂತಿರಿಸಿದೆ
ಶರೀರದೊಳಗೆ ಆತ್ಮವನಾರೂ ಕಾಣದಂತಿರಿಸಿದೆ
ನೀನು ಬೆರೆಸಿದ ಭೇದಕ್ಕೆ ಬೆರಗಾದೆನಯ್ಯ ರಾಮನಾಥ |
ಪ್ರಸ್ತುತ ವಚನದಲ್ಲಿ ಸಾಮಾಜಿಕ ನೆಲೆ, ವೈಜ್ಞಾನಿಕ ಆಲೋಚನೆ, ವೈಚಾರಿಕ ಪ್ರಜ್ಞೆಗಳು ಸಮ್ಮಿಳಿತಗೊಂಡಿವೆ. ಮರ-ಮರಗಳು ಪರಸ್ಪರ ಉಜ್ಜುಜ್ಜಿ ಕಾಡ್ಗಿಚ್ಚು ಹಬ್ಬುವ ತನಕ ಅದರಲ್ಲಿರುವ ಬೆಂಕಿಯ ಬಗ್ಗೆ ತಿಳಿಯದು. ಮರದೊಳಗೆ ಅಗ್ನಿ ಇದ್ದರೂ ಮಂದವಾಗಿ, ಕಾಣದಂತೆ ಇರಿಸಿರುವೆ. ಕೆನೆಭರಿತ ಹಾಲಿನೊಳಗೆ ತುಪ್ಪವಿದ್ದರೂ ಗೋಚರಿಸದು, ಕಂಪಸೂಸದು, ಮೊಸರಾಗಿ ಕಡೆದಾಗ ಮಾತ್ರ ಬೆಣ್ಣೆ ಬಂದು, ಶಾಖ ನೀಡಿ ಕಾಯಿಸಿದಾಗ ತುಪ್ಪದ ಕಂಪು ಹೊರ ಸೂಸುತ್ತದೆ. ಅಂತೆಯೇ ಆತ್ಮ ಶರೀರದ ಇಂಥದ್ದೇ ಭಾಗದಲ್ಲಿದೆ ಎಂಬುದನ್ನು ಹೇಳಲಿಕ್ಕಾಗುವುದಿಲ್ಲ. ಇಂದಿಗೂ ಇದು ಯಕ್ಷಪ್ರಶ್ನೆಯಾಗಿದೆ. ಅದನ್ನು ಯಾರಿಗೂ ಕಾಣದಂತಿರಿಸಿ ನೀ ತೋರಿದ ಭೇದಕ್ಕೆ ಬೆರಗಾದೆನೆಂದು ದಾಸಿಮಯ್ಯ ತಮ್ಮ ಆರಾಧ್ಯ ರಾಮನಾಥನಲ್ಲಿ ಕೇಳುತ್ತಾರೆ.
ಮುಂದುವರೆದು ಸಂಸಾರವೆಂದಿಗೂ ಹೇಯವಲ್ಲ ‘ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಸತಿ ಪತಿಗಳೊಂದಾಗದ ಭಕ್ತಿ ಅಮೃತದೊಳು ವಿಷಬೆರೆಸಿದಂತೆ ಎಂದು ಖಚಿತವಾಗಿ ನಂಬಿ ಅಂತಹ ಸಂಸಾರದಿಂದ ಸದ್ಗತಿಯೆಂದು ಸಾಧಿಸಿ ತೋರಿದ ಮಹನೀಯ, ತನ್ನಂತೆಯೇ ಮಡದಿ ‘ದುಗ್ಗಳೆ’ಯನ್ನು ಶರಣತೆಯೆಡೆಗೆ ಮುಖಮಾಡಿಸಿ ಸಾಧನೆಯ ಶಿಖರವೇರಿಸಿದರು ದಾಸಿಮಯ್ಯನವರು. ಇವರೀರ್ವರು ನೇಯ್ಗೆ ಕಾಯಕದಲ್ಲಿ ತೊಡಗಿ ಅದರಿಂದ ಜಂಗಮದಾಸೋಹಗೈದು. ನಂತರ ಬಂದ ಅಲ್ಲಮ, ಬಸವಣ್ಣ, ಮಹಾದೇವಿ, ನಾಗಮ್ಮ, ಸಿದ್ಧರಾಮ ಮುಂತಾದ ಶರಣರಿಗೆ ಮಾದರಿಯಾದರು. ಹೀಗಾಗಿ ಅಲ್ಲಿನ ಜನಸಮೂಹಕ್ಕೆ ಇವರು ಜೀವಂತ ದೇವರಾದರು. ದುಗ್ಗಳೆಯು ಸದಾಚಾರ ಸಂಪನ್ನೆಯಾಗಿ ಪತಿಗೆ ಅನುಕೂಲೆಯಾಗಿ ಪತಿಯ ಸರ್ವಕಾರ್ಯಕ್ಕೂ ಆಸರೆಯಾಗಿ ನಿಂತಳು. ಇದರ ಪ್ರತಿಫಲವಾಗಿಯೇ ದಾಸಿಮಯ್ಯನವರು ಹೆಚ್ಚೆಚ್ಚು ವಚನ ಬರೆಯುತ್ತಾ, ಮಾನವೀಯ ನೆಲೆಯಲ್ಲಿ ಕಾಯಕ, ದಾಸೋಹಗೈಯುತ್ತಾ ಸಾಗಿದರು.
ಒಡಲುಗೊಂಡವ ಹಸಿವ |
ಒಡಲುಗೊಂಡವ ಹುಸಿವ |
ಒಡಲುಗೊಂಡವನೆಂದು ನೀವೆನ್ನ
ಜರಿದೊಮ್ಮೆ ನುಡಿಯದಿರಾ |
ನೀನೆನ್ನಂತೆ ಒಮ್ಮೆ
ಒಡಲುಗೊಂಡು ನೋಡಾ ರಾಮನಾಥ |
ಪ್ರಸ್ತುತ ವಚನದಲ್ಲಿ ದಾಸಿಮಯ್ಯ ಹಸಿವಿನ ಚಿತ್ರಣವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಉದರವನ್ನು ಹೊಂದಿದವನಿಗೆ ಹಸಿವು ಸಾಮಾನ್ಯವಾದುದು ಹಾಗೆಯೇ, ಅನಿವಾರ್ಯವೂ ಕೂಡ. ಈ ಒಡಲುರಿಯ ನೀಗಿಸಿಕೊಳ್ಳಲು ಒಮ್ಮೊಮ್ಮೆ ಹುಸಿ ನುಡಿಯುವುದುಂಟು. ಅಂತಹ ಪ್ರಸಂಗಗಳು ಬರಬಹುದು. ನಂತರ ಆ ಹುಸಿ ನುಡಿಯ ಪಾಪ ಪ್ರಜ್ಞೆ ಅವನಿಗೆ ಕಾಡಲೂಬಹುದು. ಅಷ್ಟಕ್ಕೆ ಅಂತಹವರನ್ನು ಜರಿದು ಅವಮಾನ ಮಾಡಬಹುದೇ? ಹಸಿವೆಯಿಂದ ಅನುಭವಿಸಬಹುದಾದ ಯಾತನೆಯನ್ನು ನೀನೇನು ಬಲ್ಲೆ, ನಿನಗೆ ಅದು ಅರಿವಾಗಬೇಕಾದರೆ ನನ್ನಂತೆ ನೀನು ಒಮ್ಮೆ ಹಸಿದು ನೋಡು ರಾಮನಾಥ ಎಂದು ಕೇಳುವಲ್ಲಿ ಹಸಿವಿನ ಅಳಲು ಮಾರ್ಧನಿಸಿದೆ.
ಈ ಜಗತ್ತಿನ ಸಮಸ್ತ ಜೀವರಾಶಿಗಳೆಲ್ಲವೂ ಲಿಂಗಮಯವೇ. ಲಿಂಗವು ದೇಹದ ಸಂಬಂಧವನ್ನು ಕಳೆದುಕೊಂಡಾಗ ಆ ದೇಹವು ಭಂಗವಾಗುತ್ತದೆ. ಲಿಂಗವೆಂದರೆ ಅದೇ ಜಂಗಮ ಚೇತನ, ಮಾನವೀಯತೆಯ ನೆಲೆಗಟ್ಟು, ಸಮಾನತೆಯ ಸ್ತೂಪ. ಈ ತತ್ತ್ವದ ಆಧಾರದ ಪ್ರಕಾರ ಸಮಸ್ತ ಜೀವರಾಶಿಗಳೆಲ್ಲ ಲಿಂಗವಂತವೇ, ಜಂಗಮವಂತವೇ ಆಗುತ್ತವೆ ಎಂಬ ಆದರ್ಶದಡಿ ತಮ್ಮ ಕಾಯಕದ ಹೊನಲನ್ನು ಹರಿಸಿದ ದಾಸಿಮಯ್ಯನವರು ದೇವರು ಸರ್ವಾಂತರ್ಯಾಮಿ ಎಂದು ಹೆಣ್ಣಿರಲಿ, ಗಂಡಿರಲಿ ಒಳಗಿರುವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲವೆಂದು ಹೇಳಿ ವಚನ ಸಾಹಿತ್ಯಕ್ಕೆ ಅಡಿಪಾಯಹಾಕಿ ಶರಣ ಸಂತತಿಗೆ ಆದಿಯಾಗಿ, ವರ್ಣಾಶ್ರಮಕ್ಕೆ ಅಂತ್ಯ ಹಾಡಿದ ಮಹಾನುಭಾವ ಜೇಡರ ದಾಸಿಮಯ್ಯನವರು ದೈವತ್ವದ ನೆಲೆಕಂಡು ದೇವರ ದಾಸಿಮಯ್ಯನಾದರು.
ಸುಮಾರು ಎಂಟುನೂರು ವರ್ಷಗಳ ಹಿಂದೆ ವಿಶ್ವವೇ ಹಿಂದೆಂದೂ ಕಂಡರಿಯದ ಧಾರ್ಮಿಕ, ಸಾಮಾಜಿಕ, ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಏಕಕಾಲಕ್ಕೆ ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀವ್ರತರ ಚಳುವಳಿ ನಡೆದದ್ದು ಭರತಖಂಡದ ಕಾಯಕಯೋಗಿಸ್ಥಲವಾದ ಕರ್ನಾಟಕ ಮಣ್ಣಿನಲ್ಲಿ ಶರಣರ ಮಹಾಸಂಗಮದೊಂದಿಗೆ.
ಈ ಚಳುವಳಿಯು ಅಂದಿನ ಅನೇಕ ಪ್ರಚಲಿತ ಗಂಭೀರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿತೆನ್ನುವುದು ಕೂಡ ಗಮನಾರ್ಹವಾದ ಸಂಗತಿ. ಶಿವಶರಣರು ವರ್ಣ, ವರ್ಗ, ಲಿಂಗ ಬೇಧಗಳ ಗೋಡೆಯನ್ನು ಬುಡಸಮೇತ ಕಿತ್ತು ಹಾಕಿದರು. ಬಡವ, ಬಲ್ಲಿದ, ಉಚ್ಛ, ನೀಚರೆಂಬ ತಾರತಮ್ಯವನ್ನು ಕನಸಲ್ಲೂ ಸುಳಿಯದಂತೆ ಮಾಡಿದರು. ದೀನದಲಿತರ, ದುರ್ಬಲರ, ಬದುಕಿಗೆ ಬೆಳಕಾಗಿ ನಿಂತವರು ಶರಣರು.
ಇವರಲ್ಲಿ ಪ್ರಮುಖ ಹಾಗೂ ಆದ್ಯ ವಚನಕಾರರಾದ ದೇವರ ದಾಸಿಮಯ್ಯನವರದು ಅಪರೂಪದವರಲ್ಲಿ ಅಪರೂಪ ವ್ಯಕ್ತಿತ್ವ, ನಿಸ್ವಾರ್ಥ ಬುನಾದಿಯ ಮೇಲೆ ಸ್ವಾವಲಂಬನೆಯ ಮನೆಯ ಕಟ್ಟಿ, ಪರೋಪಕಾರವೆಂಬ ಛಾವಣಿ ಹಾಕಿ ಮನೆಯಲ್ಲಿ ‘ಮಾನವೀಯತೆ’ ಎಂಬ ಜ್ಯೋತಿ ಬೆಳಗಿಸಿದವರು. ಮಮತೆ, ಪ್ರೀತಿ, ಗೌರವ, ವಿನಯಗಳಿಂದ ಲೌಕಿಕ-ಅಲೌಕಿಕವನ್ನು ಗೆಲ್ಲಬಹುದೆಂದು ಸಾಧಿಸಿ ತೋರಿಸಿದವರು.
ದಾಸಿಮಯ್ಯನವರು ಹನ್ನೊಂದನೇ ಶತಮಾನದ ಹಾದಿಯಲ್ಲಿ [ಕ್ರಿ.ಶ.1040 ರಿಂದ 1100] ಕಲ್ಬುರ್ಗಿ ಜಿಲ್ಲೆಯ ಮುದನೂರಿನ ವಾಸಿಗಳಾದ ರಾಮಯ್ಯ ಹಾಗೂ ಶಂಕರಮ್ಮ ಎಂಬ ಜೇಡರ ದಂಪತಿಗಳ ಪುಣ್ಯಗರ್ಭಾಂಬುದಿಯಲ್ಲಿ ಜನಿಸುತ್ತಾರೆ. ಬಾಲ್ಯದಿಂದಲೇ ಲಿಂಗಾರ್ಚನೆ, ದಾಸೋಹ, ಜಂಗಮದೆಡೆ ತುಡಿದ ಇವರ ಮನಸ್ಸು ಅದರಲ್ಲಿಯೇ ಕಾಯಕನಿರತರನ್ನಾಗಿಸುತ್ತದೆ. ಮೇಲುವರ್ಗದವರ ಕೆಂಗಣ್ಣಿಗೆ ಗುರಿಯಾದರೂ ಧೈರ್ಯಗುಂದದೇ ಮುದನೂರು ಗ್ರಾಮದ ರಾಮನಾಥ ಲಿಂಗವನ್ನು ಆರಾಧ್ಯವಾಗಿ ಸ್ವೀಕರಿಸಿ ವಚನಾರ್ಪಣೆ ಮಾಡುತ್ತಾ ಸಾಗುತ್ತಾರೆ. ಇವರದು ಬಟ್ಟೆ ನೇಯುವ ಮೂಲ ಪ್ರವೃತ್ತಿಯಾಗಿತ್ತು. ಹೊತ್ತು ಗೊತ್ತಿಲ್ಲದೆ ದೇವಾಲಯಕ್ಕೆ ಬರುವ ದಾಸಿಮಯ್ಯನನ್ನು ಅಲ್ಲಿರುವ ಪೂಜಾರಿಗಳು ಆತನ ಬರುವಿಕೆಯನ್ನು ದೂರದಿಂದ ಕಂಡು ದೇವಾಲಯದ ಬಾಗಿಲುಗಳನ್ನು ಭದ್ರಪಡಿಸಿ ಬೀಗ ಜಡಿಯುತ್ತಾರೆ. ಆದರೆ ಇದಾವುದನ್ನು ಗಮನಿಸದ ದಾಸಿಮಯ್ಯ ಮಂದಿರದ ಹೊರಾಂಗಣದಲ್ಲಿ ನಿಂತು ಭಕ್ತಿಯಿಂದ ರಾಮನಾಥನ ವಚನ ಸ್ಮರಣೆ ಮಾಡಿದೊಡೆ ಬೀಗಗಳೆಲ್ಲವೂ ತನ್ನಿಂದ ತಾನೇ ಮುರಿದು ದೇವಾಲಯಗಳು ತೆರೆದುಕೊಳ್ಳುತ್ತವೆ ಎಂಬ ಪ್ರತೀತಿಗಳಿವೆ.
ಒಲವಿಲ್ಲದ ಭಕ್ತಿ, ಲವಲವಿಕೆ ಇಲ್ಲದ ಪೂಜೆ
ಸಲೆನಿಮ್ಮ ನಂಬಿ ನಂಬದವನ ಬಾಳುವೆ
ಹೊಲೆಯರ ನಾಯಿ ಹುಲು ಸರವಿಯಿಂದ
ಕರಕಷ್ಟ ಕಾಣಾ ರಾಮನಾಥಾ | [ವ.ಸಂ. 770]
ಈ ಮೇಲಿನ ವಚನದಲ್ಲಿ ಭಕ್ತಿಯೆಂದರೆ ಏನು ಎಂಬುದನ್ನು ತಿಳಿಸುತ್ತಾ, ಒಳಗೊಂದು, ಹೊರಗೊಂದು ನೀತಿಯ ಬಗೆಯುವವರನ್ನು ಕುಟುಕಿದ್ದಾರೆ. ಬದುಕಿನಲ್ಲಿ ಮಾತಿಗೆ ಮಹತ್ತರ ಪಾತ್ರವಿದೆ. ಇಲ್ಲಿ ಪರಸ್ಪರ ನಂಬಿಕೆ ಮುಖ್ಯ. ದೈವ ಪ್ರೀತಿ ಮುಖ್ಯ. ಪ್ರೀತಿ, ದಯೆ, ವಾತ್ಸಲ್ಯ, ಶ್ರದ್ಧೆ, ಆಸಕ್ತಿಯಿಲ್ಲದ ಪೂಜೆ ಹೊಲೆಯರ ನಾಯಿಯ ಬೇಟೆಗಿಂತ ಕೀಳೆಂದು ದಾಸಿಮಯ್ಯನವರು ಹೇಳುತ್ತಾರೆ.
“ಉಂಕಿಯ ನಿಗುಚಿ ಸರಿಗೆಯ ಸಮಗೊಳಿಸಿ
ಈ ಸೀರೆಯ ನೆಯ್ದವ ನಾನೋ ನೀನೋ ರಾಮನಾಥ ?”
ಪ್ರಸ್ತುತ ವಚನವು ಕಾಯಕವನ್ನು ಪ್ರಖರವಾಗಿ ಸೂಚಿಸುತ್ತದೆ. ನೇಯುವವ ನಾನಾದರೂ ನೇಯಿಸುವವ ನೀನೇ ಆದ್ದರಿಂದ ಅದರ ಪ್ರತಿಫಲ ನಿನ್ನದೇ ಎಂದು ರಾಮನಾಥನಲ್ಲಿ ಕೇಳುತ್ತಾರೆ.
ಒಮ್ಮೆ ತಾವು ನೇಯ್ದು ಬಟ್ಟೆಯನ್ನು, ಮಾರಲು ಸಿದ್ಧಾಪುರ ಪೇಟೆಗೆ ಹೋದಾಗ ಮಾರುವೇಶದಲ್ಲಿ ಜಂಗಮನಾಗಿ ಶಿವನು ಬರುತ್ತಾನೆ. ದಾಸಿಮಯ್ಯನವರಲ್ಲಿದ್ದ ಅಮೂಲ್ಯವಾದ ರೇಶ್ಮೆ ವಸ್ತ್ರವನ್ನು ದಾನವಾಗಿ ಬೇಡುತ್ತಾನೆ. ಒಂದು ಕ್ಷಣವೂ ಯೋಚಿಸದೇ ತನ್ನಲ್ಲಿದ್ದ ವಸ್ತ್ರವನ್ನು ಜಂಗಮನಿಗೆ ನೀಡುತ್ತಾರೆ. ತಕ್ಷಣ ಜಂಗಮ ಎದುರಲ್ಲೇ ಆ ವಸ್ತ್ರವನ್ನು ತುಂಡು ತುಂಡಾಗಿ ಹರಿದು ಹಾಕುತ್ತಾರೆ. ಕಿಂಚಿತ್ತು ಕೋಪಗೊಳ್ಳದೇ ರಾಮನಾಥನ ಸ್ಮರಣೆ ಮಾಡುತ್ತಾರೆ. ನಿರ್ಮೋಹದ ಸದ್ಭಕ್ತಿ ಕಂಡು ಶಿವ ನಿಜರೂಪ ತೋರಿ ಪ್ರಸನ್ನನಾಗುತ್ತಾನೆ.
ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತೊಡೆ ಒಲ್ಲೆ !
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ ಅರೆಗಳಿಗೆ
ಇತ್ತಡೆ ನಿಮ್ಮ ನಿತ್ಯ ಕಾಣಾ ರಾಮನಾಥಾ | ವ.ಸಂ. 740
ಆನೆಯಕೊಟ್ಟರೆ ಬೇಡ, ಸಂಪತ್ತನ್ನು ಕೊಟ್ಟರೆ ಬೇಡ, ಅರ್ಧ ರಾಜ್ಯ ಕೊಟ್ಟರೂ ಬೇಡ, ಶರಣರ ಒಡಲಿಂದ ಒಂದು ಸತ್ಯನುಡಿ ನೀಡಿದರೆ ನಿಮ್ಮ ನಿತ್ಯ ನೆನೆಯುವೆನು ಎಂದು ರಾಮನಾಥನಲ್ಲಿ ದಾಸಿಮಯ್ಯ ಬೇಡುವ ರೀತಿ ನಿಜಕ್ಕೂ ನಿಷ್ಕಲ್ಮಶವಾದುದು, ಅನುಕರಣೀಯವೆಂದರೆ ಅತಿಶಯೋಕ್ತಿಯಾಗಲಾರದು, ಏಕೆಂದರೆ ಇಂತಹ ಮಹಾನ್ ಶರಣರು ಜನಿಸಿ, ಆದರ್ಶ ತತ್ವಗಳನ್ನು ಬಿತ್ತಿದ ಈ ನಾಡಿನಲ್ಲಿ ಇಂದು ವಿಲೋಮವಾಗಿ ಕಾಣುತ್ತಿದ್ದೇವೆ. ಇಂದಿನ ಆಳ್ವರಸರು, ಆನೆ (ಬಲ) , ಹಣ, ಭೂಮಿಯ ಕಬಳಿಸಿ ನುಂಗಿ ನೀರು ಕುಡಿಯುವುದರಲ್ಲಿಯೇ ತಲ್ಲೀನರಾಗಿರುವುದು ವಿಪರ್ಯಾಸ !
ಇಳೆ ನಿಮ್ಮದಾನ, ಬೆಳೆ ನಿಮ್ಮ ದಾನ
ಸುಳಿದು ಸೂಸುವ ಗಾಳಿ ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳ ನೇನೆಂಬೆ ರಾಮನಾಥ ?
ಮನುಷ್ಯನ ಚಂಚಲ ಮನಸ್ಸಿನ ತಲ್ಲಣಗಳನ್ನು, ಅವಿವೇಕತನಗಳನ್ನು ದಾಸಿಮಯ್ಯನವರು ಇಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ, ಈ ಭೂಮಿ, ಬೆಳೆ, ಗಾಳಿ, ನೀರು ಎಲ್ಲವೂ ನೀಕೊಟ್ಟ ಕಾಣಿಕೆಗಳು ಆದರೆ ಇವನ್ನೆಲ್ಲ ತಿಂದು ತೇಗಿ ಬೇರೆಯವರನ್ನು ನೆನೆಯುವ ಕುನ್ನಿಗಳ ತಿಳಿಗೇಡಿಗಳನ್ನು ಏನೆನ್ನಬೇಕು ಎಂದು ಪ್ರಶ್ನಿಸುತ್ತಾರೆ. ಪ್ರಸ್ತುತ ಬೆಂಗಳೂರು, ಬೆಳಗಾಂ ನಲ್ಲಿ ವಾಸವಿರುವ ತಮಿಳು ಕನ್ನಡಿಗರು, ಮರಾಠಿ ಕನ್ನಡಿಗರು ಹುಟ್ಟಿ, ಬೆಳೆದದ್ದು ಕನ್ನಡ ಮಣ್ಣಿನಲ್ಲೇ ಆದರೂ ಭಾಷಾ ದ್ರೋಹ ಬಗೆಯುತ್ತಿರುವುದು ಅವಿವೇಕತನದ ಪರಮಾವಧಿ ಎನ್ನಬಹುದು. ಬಹುಶಃ ಇಂತಹ ನೀಚ ಮನಗಳನರಿತೇ ದಾಸಿಮಯ್ಯನವರು ಈ ವಚನ ಬರೆದಿರಬಹುದೆನಿಸುತ್ತದೆ.
ದಾಸಿಮಯ್ಯನವರಲ್ಲಿ ಕೇವಲ ಭಕ್ತಿ, ಸಾಮಾಜಿಕ ಪ್ರಜ್ಷೆ ಮಾತ್ರವಿರಲಿಲ್ಲ. ಅವರೊಳಗೊಬ್ಬ ಅನುಭಾವಿ ವಿಜ್ಞಾನಿ ಅಡಗಿದ್ದ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಯೋಚಿಸಿದಂತೆ ಬರೆದು, ಕಾಯಕದಲ್ಲಿ ತೊಡಗಿದ ಮೊದಲ ಕವಿಯೆಂದರೆ ಬಹುಶಃ ದಾಸಿಮಯ್ಯನವರೇ ಮೊದಲಿಗರೆನಿಸುತ್ತದೆ.
ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪದ ಕಂಪಿಲ್ಲದಂತಿರಿಸಿದೆ
ಶರೀರದೊಳಗೆ ಆತ್ಮವನಾರೂ ಕಾಣದಂತಿರಿಸಿದೆ
ನೀನು ಬೆರೆಸಿದ ಭೇದಕ್ಕೆ ಬೆರಗಾದೆನಯ್ಯ ರಾಮನಾಥ |
ಪ್ರಸ್ತುತ ವಚನದಲ್ಲಿ ಸಾಮಾಜಿಕ ನೆಲೆ, ವೈಜ್ಞಾನಿಕ ಆಲೋಚನೆ, ವೈಚಾರಿಕ ಪ್ರಜ್ಞೆಗಳು ಸಮ್ಮಿಳಿತಗೊಂಡಿವೆ. ಮರ-ಮರಗಳು ಪರಸ್ಪರ ಉಜ್ಜುಜ್ಜಿ ಕಾಡ್ಗಿಚ್ಚು ಹಬ್ಬುವ ತನಕ ಅದರಲ್ಲಿರುವ ಬೆಂಕಿಯ ಬಗ್ಗೆ ತಿಳಿಯದು. ಮರದೊಳಗೆ ಅಗ್ನಿ ಇದ್ದರೂ ಮಂದವಾಗಿ, ಕಾಣದಂತೆ ಇರಿಸಿರುವೆ. ಕೆನೆಭರಿತ ಹಾಲಿನೊಳಗೆ ತುಪ್ಪವಿದ್ದರೂ ಗೋಚರಿಸದು, ಕಂಪಸೂಸದು, ಮೊಸರಾಗಿ ಕಡೆದಾಗ ಮಾತ್ರ ಬೆಣ್ಣೆ ಬಂದು, ಶಾಖ ನೀಡಿ ಕಾಯಿಸಿದಾಗ ತುಪ್ಪದ ಕಂಪು ಹೊರ ಸೂಸುತ್ತದೆ. ಅಂತೆಯೇ ಆತ್ಮ ಶರೀರದ ಇಂಥದ್ದೇ ಭಾಗದಲ್ಲಿದೆ ಎಂಬುದನ್ನು ಹೇಳಲಿಕ್ಕಾಗುವುದಿಲ್ಲ. ಇಂದಿಗೂ ಇದು ಯಕ್ಷಪ್ರಶ್ನೆಯಾಗಿದೆ. ಅದನ್ನು ಯಾರಿಗೂ ಕಾಣದಂತಿರಿಸಿ ನೀ ತೋರಿದ ಭೇದಕ್ಕೆ ಬೆರಗಾದೆನೆಂದು ದಾಸಿಮಯ್ಯ ತಮ್ಮ ಆರಾಧ್ಯ ರಾಮನಾಥನಲ್ಲಿ ಕೇಳುತ್ತಾರೆ.
ಮುಂದುವರೆದು ಸಂಸಾರವೆಂದಿಗೂ ಹೇಯವಲ್ಲ ‘ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಸತಿ ಪತಿಗಳೊಂದಾಗದ ಭಕ್ತಿ ಅಮೃತದೊಳು ವಿಷಬೆರೆಸಿದಂತೆ ಎಂದು ಖಚಿತವಾಗಿ ನಂಬಿ ಅಂತಹ ಸಂಸಾರದಿಂದ ಸದ್ಗತಿಯೆಂದು ಸಾಧಿಸಿ ತೋರಿದ ಮಹನೀಯ, ತನ್ನಂತೆಯೇ ಮಡದಿ ‘ದುಗ್ಗಳೆ’ಯನ್ನು ಶರಣತೆಯೆಡೆಗೆ ಮುಖಮಾಡಿಸಿ ಸಾಧನೆಯ ಶಿಖರವೇರಿಸಿದರು ದಾಸಿಮಯ್ಯನವರು. ಇವರೀರ್ವರು ನೇಯ್ಗೆ ಕಾಯಕದಲ್ಲಿ ತೊಡಗಿ ಅದರಿಂದ ಜಂಗಮದಾಸೋಹಗೈದು. ನಂತರ ಬಂದ ಅಲ್ಲಮ, ಬಸವಣ್ಣ, ಮಹಾದೇವಿ, ನಾಗಮ್ಮ, ಸಿದ್ಧರಾಮ ಮುಂತಾದ ಶರಣರಿಗೆ ಮಾದರಿಯಾದರು. ಹೀಗಾಗಿ ಅಲ್ಲಿನ ಜನಸಮೂಹಕ್ಕೆ ಇವರು ಜೀವಂತ ದೇವರಾದರು. ದುಗ್ಗಳೆಯು ಸದಾಚಾರ ಸಂಪನ್ನೆಯಾಗಿ ಪತಿಗೆ ಅನುಕೂಲೆಯಾಗಿ ಪತಿಯ ಸರ್ವಕಾರ್ಯಕ್ಕೂ ಆಸರೆಯಾಗಿ ನಿಂತಳು. ಇದರ ಪ್ರತಿಫಲವಾಗಿಯೇ ದಾಸಿಮಯ್ಯನವರು ಹೆಚ್ಚೆಚ್ಚು ವಚನ ಬರೆಯುತ್ತಾ, ಮಾನವೀಯ ನೆಲೆಯಲ್ಲಿ ಕಾಯಕ, ದಾಸೋಹಗೈಯುತ್ತಾ ಸಾಗಿದರು.
ಒಡಲುಗೊಂಡವ ಹಸಿವ |
ಒಡಲುಗೊಂಡವ ಹುಸಿವ |
ಒಡಲುಗೊಂಡವನೆಂದು ನೀವೆನ್ನ
ಜರಿದೊಮ್ಮೆ ನುಡಿಯದಿರಾ |
ನೀನೆನ್ನಂತೆ ಒಮ್ಮೆ
ಒಡಲುಗೊಂಡು ನೋಡಾ ರಾಮನಾಥ |
ಪ್ರಸ್ತುತ ವಚನದಲ್ಲಿ ದಾಸಿಮಯ್ಯ ಹಸಿವಿನ ಚಿತ್ರಣವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಉದರವನ್ನು ಹೊಂದಿದವನಿಗೆ ಹಸಿವು ಸಾಮಾನ್ಯವಾದುದು ಹಾಗೆಯೇ, ಅನಿವಾರ್ಯವೂ ಕೂಡ. ಈ ಒಡಲುರಿಯ ನೀಗಿಸಿಕೊಳ್ಳಲು ಒಮ್ಮೊಮ್ಮೆ ಹುಸಿ ನುಡಿಯುವುದುಂಟು. ಅಂತಹ ಪ್ರಸಂಗಗಳು ಬರಬಹುದು. ನಂತರ ಆ ಹುಸಿ ನುಡಿಯ ಪಾಪ ಪ್ರಜ್ಞೆ ಅವನಿಗೆ ಕಾಡಲೂಬಹುದು. ಅಷ್ಟಕ್ಕೆ ಅಂತಹವರನ್ನು ಜರಿದು ಅವಮಾನ ಮಾಡಬಹುದೇ? ಹಸಿವೆಯಿಂದ ಅನುಭವಿಸಬಹುದಾದ ಯಾತನೆಯನ್ನು ನೀನೇನು ಬಲ್ಲೆ, ನಿನಗೆ ಅದು ಅರಿವಾಗಬೇಕಾದರೆ ನನ್ನಂತೆ ನೀನು ಒಮ್ಮೆ ಹಸಿದು ನೋಡು ರಾಮನಾಥ ಎಂದು ಕೇಳುವಲ್ಲಿ ಹಸಿವಿನ ಅಳಲು ಮಾರ್ಧನಿಸಿದೆ.
ಈ ಜಗತ್ತಿನ ಸಮಸ್ತ ಜೀವರಾಶಿಗಳೆಲ್ಲವೂ ಲಿಂಗಮಯವೇ. ಲಿಂಗವು ದೇಹದ ಸಂಬಂಧವನ್ನು ಕಳೆದುಕೊಂಡಾಗ ಆ ದೇಹವು ಭಂಗವಾಗುತ್ತದೆ. ಲಿಂಗವೆಂದರೆ ಅದೇ ಜಂಗಮ ಚೇತನ, ಮಾನವೀಯತೆಯ ನೆಲೆಗಟ್ಟು, ಸಮಾನತೆಯ ಸ್ತೂಪ. ಈ ತತ್ತ್ವದ ಆಧಾರದ ಪ್ರಕಾರ ಸಮಸ್ತ ಜೀವರಾಶಿಗಳೆಲ್ಲ ಲಿಂಗವಂತವೇ, ಜಂಗಮವಂತವೇ ಆಗುತ್ತವೆ ಎಂಬ ಆದರ್ಶದಡಿ ತಮ್ಮ ಕಾಯಕದ ಹೊನಲನ್ನು ಹರಿಸಿದ ದಾಸಿಮಯ್ಯನವರು ದೇವರು ಸರ್ವಾಂತರ್ಯಾಮಿ ಎಂದು ಹೆಣ್ಣಿರಲಿ, ಗಂಡಿರಲಿ ಒಳಗಿರುವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲವೆಂದು ಹೇಳಿ ವಚನ ಸಾಹಿತ್ಯಕ್ಕೆ ಅಡಿಪಾಯಹಾಕಿ ಶರಣ ಸಂತತಿಗೆ ಆದಿಯಾಗಿ, ವರ್ಣಾಶ್ರಮಕ್ಕೆ ಅಂತ್ಯ ಹಾಡಿದ ಮಹಾನುಭಾವ ಜೇಡರ ದಾಸಿಮಯ್ಯನವರು ದೈವತ್ವದ ನೆಲೆಕಂಡು ದೇವರ ದಾಸಿಮಯ್ಯನಾದರು.
ಕೊಟ್ರೇಶ್ ಎಸ್.ಉಪ್ಪಾರ್
ಲೇಖಕರು
ತೇಜೂರು ರಸ್ತೆ, ಶಾಂತಿನಗರ, ಹಾಸನ
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ