ಸೋಮವಾರ, ಜೂನ್ 30, 2014

ನರಕದ ಬಾಗಿಲು ಬಡಿಯುವವರು!


ಜೂನ್-26 ನ್ನು ಅಂತರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕಾ ವಿರೋಧಿ ದಿನವಾಗಿ ವಿಶ್ವದಾದ್ಯಾಂತ ಆಚರಿಸಲಾಗುತ್ತಿದೆ.

       ಆಚರಣೆಗಳು ಕೇವಲ ತನ್ನ ದಿನಕ್ಕೆ ಮಾತ್ರ ಸೀಮಿತಗೊಂಡು ಅರ್ಥಕಳೆದುಕೊಳ್ಳುತ್ತಿವೆ, ಆದರೆ ಮಾದಕ ವಸ್ತುಗಳಿಂದ ಇಂದು ಯುವ ಪೀಳಿಗೆ ಹೇಳಲಾಗದಷ್ಟು ಅವನತಿಯತ್ತ ಸಾಗುತ್ತಿದೆ. ಜೀವನ ಮೌಲ್ಯಗಳು ದಿಕ್ಕರಿಸಲ್ಪಟ್ಟು, ಮೋಜು ಮಸ್ತಿಗೆ ಪ್ರಾಶಸ್ತ್ಯ ನೀಡುವ ಇಂದಿನ ದಿನಮಾನಗಳಲ್ಲಿ ಕಾನೂನು ಕಟ್ಟಳೆ, ನಿಬಂಧನೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿವೆ.
      ನಾವು ನಿತ್ಯಾ ಅವಲೋಕಿಸುವಂತೆ ದೇಶವು ಮಾದಕ ವಸ್ತು ವ್ಯಸನಿಗಳಿಂದ ಮತ್ತು ಮಾದಕ ವಸ್ತು ಕಳ್ಳ ಸಾಗಾಣಿಕೆಯಿಂದ ಬರ್ಬರತೆಡೆಗೆ ಸಾಗಿದರೂ ಎಚ್ಚೆತ್ತು ಕೊಳ್ಳುದಿರುವುದು ದುರಂತವೇ ಸರಿ.
    ಧೂಮಪಾನ-ಬೀಡಿ, ಸಿಗರೇಟ್, ಗಾಂಜಾ, ಮಧ್ಯಪಾನ, ಡ್ರಗ್ಸ್, ಚುಚ್ಚುಮದ್ದು ಹೀಗೆ ನಾನಾ ರೀತಿಯ ದುಶ್ಚಟಗಳಿಗೆ ಯುವ ಜನತೆ ದಾಸರಾಗಿ ಹೋಗಿದ್ದಾರೆ, ಸಗ್ಗದ ಮತ್ತಲ್ಲಿ ತೇಲುವ ಭ್ರಮೆಯಲ್ಲಿ ಜೀವನವನ್ನು ಇಲ್ಲದ ರೋಗ ರುಜಿನಗಳಿಗೆ ಅಡಿಯಾಳು ಮಾಡುತ್ತಿದ್ದಾರೆ. ಶೋಕಿ ಜೀವನದ ನೇಪದಲ್ಲಿ ಸಂಪ್ರದಾಯ ತೂರಿ ಪಾಶ್ಚಾತ್ಯ ಸಂಸ್ಕøತಿ ಬೆಂಬತ್ತಿ ಮಾನವೀಯ ಮೌಲ್ಯಗಳನ್ನು ದಿಕ್ಕರಿಸಿ ನರಕದ ಬಾಗಿಲು ಬಡಿಯುತ್ತಿದ್ದಾರೆ.
ಮೆಟ್ರೋಪಾಲಿಟನ್ ಸಿಟಿಗಳಲ್ಲಂತೂ ಇವುಗಳ ಅಬ್ಬರ ಹೇಳತೀರದು. ಹೆಣ್ಣು-ಗಂಡು ಎಂಬ ಲಿಂಗ ತಾರತಮ್ಯದ ಹೆಗ್ಗಿಲ್ಲದೇ ಸಾಗುವ ಈ ಪಿಡುಗಿಗೆ ದೊಡ್ಡ ದೊಡ್ಡ ರಾಜಕಾರಣಿಗಳು, ಉದ್ಯಾಮಿಗಳ ಪ್ರೋತ್ಸಾಹವಿರುವುದು ಶೋಚನೀಯ ಸಂಗತಿಯಾಗಿದೆ. 
ಮಾದಕ ವಸ್ತು ಸೇವನೆ ಜೀವಕ್ಕೆ ಅಪಾಯಕಾರಿ ಎಂದು ತಿಳಿದಿದ್ದರು ಮತ್ತೆ ಅದೇ ಚಟಗಳಿಗೆ ದಾಸರಾಗುವುದು ಇಂದು ಯುವ ಜನಾಂಗ ಅದೋಗತಿಯತ್ತ ಸಾಗುತ್ತಿರುವುದಕ್ಕೆ ಮೂಕ ಸಾಕ್ಷಿಯಾಗಿದೆ. ಒಂದು ದೇಶದ ಪ್ರಗತಿ ಅಲ್ಲಿನ ಯುವಜನಾಂಗದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಯುವಜನಾಂಗಕ್ಕೆ ಮಾದಕ ವಸ್ತುಗಳಿಂದುಂಟಾಗುವ ದುಷ್ಪರಿಣಾಮದ  ಅರಿವಿಲ್ಲದಿರುವುದು ಹಾಗೂ ಅರಿವಾಗುವ ಹೊತ್ತಿಗೆ ಮಿತಿಮೀರುವುದು  ಇನ್ನೂ ಕೆಲವೊಮ್ಮೆ ಗೊತ್ತಿದ್ದರೂ ಸಹ ಅವರಿವರ ಒತ್ತಾಯಕ್ಕೋ, ಸ್ನೇಹಿತರ ಸಹವಾಸಕ್ಕೋ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ದುಶ್ಚಟಗಳಲ್ಲಿ ಸಿಗುವ ತಾತ್ಕಾಲಿಕ ಸುಖಕ್ಕಾಗಿ ಅನಾರೋಗ್ಯಕ್ಕೀಡಾಗಿ ಜೀವನವಿಡೀ ನರಳುವಂತಾಗುವುದನ್ನು ಮರೆಯುವುದು ಕ್ಷೋಭೆಯಲ್ಲ.
        
       ಗಾಂಜಾ, ಭಂಗಿ, ಸಿಗರೇಟು, ಬೀಡಿಗಳಲ್ಲಿರುವ ತಂಬಾಕು ಹಾಗೂ ಅದಕ್ಕೆ 
ಮಿಶ್ರಿತಮಾಗುವ ರಾಸಾಯನಿಕ ವಸ್ತುಗಳು ಜೀವಕ್ಕೆ ಅಪಾಯಕಾರಿ ಎಂಬುದು ಗೊತ್ತಿದ್ದರೂ, ಅದರಲ್ಲಿರುವ ನಿಕೋಟಿನ್ ಎಂಬ ವಿಷ ವಸ್ತು ನಮ್ಮ ಶ್ವಾಸಕೋಶದ ಕಾರ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಗೊತ್ತಿದ್ದರೂ ಅದನ್ನೆ ಬಳಸಿ ದಾಸ್ಯ ಜೀವನಕ್ಕೆ ಶರಣಾಗುವುದು ಎಂಥಾ ದುಸ್ಥಿತಿ.
      ಸರಕಾರವೇ ಈ ಎಲ್ಲಾ ಮಾದಕ ವಸ್ತುಗಳ ತಯಾರಿಕೆ, ಮಾರಾಟಕ್ಕೆ ಪರವಾನಿಗೆ ನೀಡಿ, ಪುನಃ ಕಾನೂನು ಕಟ್ಟಳೆಗಳನ್ನು ಮಾಡಿ ಕಣ್ಣಾ ಮುಚ್ಚಾಲೆ ಆಡುತ್ತಿರುವುದು ವಿಪರ್ಯಾಸ.
   ಭಂಗಿ ಸೊಪ್ಪಿನೋಡನೆ ಬಾದಾಮಿ, ಕಲ್ಲು ಸಕ್ಕರೆ, ಇತ್ಯಾದಿ ವಸ್ತುಗಳನ್ನು ಸೇರಿಸಿ ಕ್ರಮವಾಗಿ ತಯಾರಿಸಿ ರಾಮರಸ ಎಂದು ಕರೆದು ಕೆಲವರು ಸೇವಿಸಿ ಭ್ರಮಾ ಸಗ್ಗದಲ್ಲಿ ತೇಲಾಡುತ್ತಾರೆ. ಗಾಂಜಾ, ಭಂಗಿ, ಚರಸ್ ಇವು ಹೆನಾಬಿಸ್ ಇಂಡಿಕ ಗಿಡದ ವಿವಿಧ ಭಾಗಗಳಿಂದ ತಯಾರಿಸಲಾಗುವ ವಸ್ತುಗಳು. ಇವೆಲ್ಲಾ ಹೃದಯ ಮತ್ತು ಶ್ವಾಸಕೋಶಕ್ಕೆ ಬಹಳ ಅಪಾಯಕಾರಿ ವಸ್ತುಗಳು. ಕೆನಾಬಿಸ್ ಹೆಣ್ಣು ಜಾತಿಯ ಗಿಡದ ಹೂವುಗಳು ಮತ್ತು ಕಾಂಡಗಳನ್ನು ಹದಮಾಡಿ ಉಪಯೋಗಿಸುತ್ತಾರೆ. ಇದು ಕಂದು ಮಿಶ್ರಿತ ಹಸಿರು ಬಣ್ಣವಿರುತ್ತದೆ. ಇದನ್ನು ಹೊಗೆಸೊಪ್ಪಿನ ಜೊತೆ ಸೇರಿಸಿ ಸೇದುವುದುಂಟು. ಭಂಗಿಯನ್ನು ಕೆನಾಬಿಸ್ ಗಿಡದ ಎಲೆಯಿಂದ ತಯಾರಿಸಲಾಗುತ್ತದೆ. ಈ ಎಲೆಯನ್ನು ಇನ್ನಿತರ ವಸ್ತುಗಳ ಜೊತೆ ಮಿಶ್ರಮಾಡಿ ಕುಡಿಯುತ್ತಾರೆ. ಆಗ ಈ ಮಾರಕ ರಾಸಾಯ£ಕಗಳು ನೇರವಾಗಿ ದೇಹ ಪ್ರವೇಶಿಸಿ ರಕ್ತದ ಕಣಗಳಲ್ಲಿ ಬೆರೆತು ವಿವಿಧ ಖಾಯಿಲೆಗೆ ತುತ್ತಗಿಸುತ್ತವೆ.ಮಾದಕ ವಸ್ತು ಸೇವನೆಯಿಂದ ಬಹುಮುಖ್ಯವಾಗಿ ಬರುವ ಖಾಯಿಲೆ ಕ್ಯಾನ್ಸರ್. ಇದರಲ್ಲಿ ಅನೇಕ ರೀತಿಯ ವಿಧಗಳಿವೆ. ಆಯಾ ವ್ಯಾಸನಿಯ ದೇಹದಲ್ಲಿ ಮಾದಕ ವಸ್ತು ಯಾವ ಭಾಗದಲ್ಲಿ ಹೆಚ್ಚು ಪ್ರಭಾವ ಬೀರುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.
      ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮನುಷ್ಯ ಸದಾ ಎಚ್ಚರಿಕೆ ಹೊಂದಿರ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ದೃಶ್ಯಮಾಧ್ಯಮಗಳೂ, ಅನೇಕ ರೀತಿಯ ಎಚ್ಚರಿಕೆಯ ಜಾಹಿರಾತುಗಳನ್ನು ಭಿತ್ತರಿಸುತ್ತಿವೆÉ. ಸದೃಡ ದೇಹದಲ್ಲಿ ಸದೃಡ ಮನಸ್ಸಿರುತ್ತದೆ. ನಾವು ಉತ್ತಮರಾಗಬೇಕಾದರೆ, ರೋಗ ರುಜಿನಗಳಿಂದ ದೂರವಿರಬೇಕಾದರೆ ಮೊದಲು ದುಶ್ಚಟಗಳನ್ನು ದೂರವಿಡಬೇಕು, ಸದಾ ಆರೋಗ್ಯದ ಬಗ್ಗೆ ಕಾಳಜಿ ವಹಿಸ ಬೇಕಾಗುತ್ತದೆ.
ಮಧ್ಯಪಾನ, ಧೂಮಪಾನ, ಮುಂತಾದ ಮಾದಕ ವಸ್ತು ಸೇವನೆಯನ್ನು ನಿರ್ಮೂಲನೆ ಮಾಡಬೇಕಾಗಿದೆ. ಆಗ ಮಾತ್ರ ಸುಂದರ ಸಮಾಜದ ಕಲ್ಪನೆ ಕಾಣಲು ಸಾಧ್ಯ.ಅಂತೆಯೇ ಈ ಮಾದಕ ವಸ್ತುಗಳನ್ನು ಕಳ್ಳ ರೀತಿಯಲ್ಲಿ ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುತ್ತಾರೆ. ಹಲವು  ಸಂದರ್ಭಗಳಲ್ಲಿ ಇಂತಹ ಕೃತ್ಯಗಳಿಗೆ ರಾಜಕಾರಾಣಿಗಳ, ಉದ್ಯಾಮಿಗಳ, ಆಯಾ ಇಲಾಖೆಗಳ ಸಹಕಾರ ಇರುತ್ತದೆ. ಹೀಗೆ ಬೇಲಿಯೇ ಎದ್ದು ಹೊಲ ಮೇಯ್ದರೆ ರಕ್ಷಣೆ ಇನ್ನೆಲ್ಲಿ? ಎಂದು ಪರಿ ತಪಿಸಬೇಕಾಗುತ್ತದೆ. 
      ಕಾನೂನುಗಳು, ವಿರೋಧಿ ಕಾಯಿದೆಗಳು ಕೇವಲ ಪುಸ್ತಕದಲ್ಲಿದ್ದರೆ ಮಾತ್ರ ಸಾಲದು. ಅವು ಕಾರ್ಯ ರೂಪಕ್ಕೆ ಇಳಿಯಬೇಕು. ಏಕೆಂದರೆ ಸರಕಾರವೇ ಈ ಎಲ್ಲಾ ಮಾಧಕ ವಸ್ತುಗಳ  ಮಾರಾಟಕ್ಕೆ ಪರವಾನಿಗೆ ನೀಡಿ ಅದರಿಂದಲೂ ತೆರಿಗೆ ಪಡೆಯುತ್ತಿರುವುದು ನಾವು ನೋಡುತ್ತಿದ್ದೇವೆ ಇಲ್ಲಿ ಗಮನಿಸಬೇಕಾದುದು ಆಚರಣೆಗಳು ಆಯಾ ದಿನಕ್ಕೆ ಸೀಮಿತವಾಗಿ ಮರುದಿನಕ್ಕೆ ಸತ್ತುಹೋಗಿ ಮೌಲ್ಯ ಕಳೆದುಕೊಳ್ಳುತ್ತಿವೆ.
ಇಂಥ ಸಾಮಾಜಕ್ಕೆ ಮಾರಕವಾದ ಮಾಧಕ ವಸ್ತು ಸೇವನೆಯನ್ನು ನಿಯಂತ್ರಿಸುವುದು ಜನ ಸಾಮಾನ್ಯರಲ್ಲಿದೆ, ಯುವ ಜನತೆಯ ಮೇಲೆ ಅವಲಂಬಿತವಾಗಿದೆ.  ಸ್ವಪ್ರೇರಣೆಯಿಂದ, ಆಸಕ್ತಿಯಿಂದ ಇಂಥ ದುಶ್ಚಟಕ್ಕೆ ತಿಲಾಂಜಲಿ ಇಟ್ಟರೆ ಖಂಡಿತಾ ನಿರ್ಮೂಲನೆ ಸಾಧ್ಯ.

-ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ಮೊ-9483470794

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ