ಸೋಮವಾರ, ಜೂನ್ 30, 2014

ಬುದ್ಧ, ಬಸವರ ಕುಂಚಗಳಲ್ಲರಳಿದ ಅಂಬೇಡ್ಕರರು




ಉರುಳುವವು ಗಳಿಗೆಗಳು
ಹೊರಳುವವು ದಿವಸಗಳು
ತುದಿ ಮೊದಲಿರದನಂತತೆಯ ಮರೆಗೆ
ಇಂದುಗಳು, ನಾಳೆಗಳು
ಹಿಂದೆ ಹಿಂದೋಡುವವು
ಎಣಿಕೆಗಳ ನೆನಹುಗಳ ಮರೆಸÀುತ್ತ ಹಿಂದೆ.

ಕವಿಯೋರ್ವರ ಮಾತುಗಳು ಕಾಲ ಗತಿಸುವ ರೀತಿಯನ್ನು ಬಹಳ ಸೊಗಸಾಗಿ ಚಿತ್ರಿಸಿವೆ. ಕಾಲಕಾಲಕ್ಕೆ ಸ್ಮರಣೀಯ ಪುರುಷರ ಅವತಾರವಾಗುತ್ತದೆ ಎಂಬುದಕ್ಕೆ ಈ ಮೇಲಿನ ಮೂವರ ಮಹಾನಾಮಾಂಕಿತಗಳೇ ಸಾಕ್ಷಿ ! ‘ನಿರ್ಮಲ ಕರ್ಮವದು ಸದ್ಗತಿಗೆ ಸಾಧನೆ ನೋಡಾ’ ಎಂಬಂತೆ ಆಸೆಯೇ ದುಃಖಕ್ಕೆ ಮೂಲವೆಂದು ಅರಿತು, ಪಾಲಿಸಿ, ಆದರ್ಶವಾಗಿ, ಬೋಧಿಸಿದವರು ಭಗವಾನ್ ಬುದ್ಧ. ಅವರೇ ಒಂದು ಕಡೆ ಹೇಳಿರುವಂತೆ ಸತ್ಯ, ಸೂರ್ಯ ಮತ್ತು ಚಂದ್ರರನ್ನು ಬಚ್ಚಿಡಲಾಗುವುದಿಲ್ಲ. ಈತನು ಸರಳತೆ, ತ್ಯಾಗ, ಪ್ರಾಮಾಣಿಕತೆ, ಪ್ರೇಮ ಮತ್ತು ಕಾರುಣ್ಯದ ಸಾಕಾರಮೂರ್ತಿಯಾಗಿದ್ದನು. ತನ್ನ ಆಕರ್ಷಕ ವ್ಯಕ್ತಿತ್ವ ಮತ್ತು ಕೃಪಾಪೂರ್ಣ ಮಂದಹಾಸದಿಂದ ಎಂತಹ ವ್ಯಕ್ತಿಯ ಹೃದಯವನ್ನಾದರೂ ಗೆದ್ದುಕೊಳ್ಳುತ್ತಿದ್ದನು. ಏಷ್ಯಾದ ಜ್ಞಾನದ ಬೆಳಕು ಎಂದು ಕರೆಯಲ್ಪಡುವ ಈತನ ಬಗ್ಗೆ ಶ್ರೀಮತಿ ರಿಸ್ ಡೇವಿಡ್ಸ್ ಹೀಗೆ ಹೇಳಿದ್ದಾರೆ - “ಬುದ್ಧನು ಘನ ವ್ಯಕ್ತಿತ್ವದಿಂದ ಜನಮನವನ್ನು ಗೆದ್ದು, ತನ್ನ ಸರಳ ಧರ್ಮವನ್ನು ಪ್ರಸಾರಮಾಡಿ ಜನಪ್ರಿಯಗೊಳಿಸಿದನು.” 
ಬುದ್ಧನು ಪರಿಶುದ್ಧವಾದ ಸರಳ ಜೀವನಕ್ಕೆ ಮಹತ್ವ ಕಲ್ಪಿಸಿದನು. ಈತನು ತೋರಿದ ಅಷ್ಠಾಂಗ ಮಾರ್ಗವು ಅತಿಶಯವಾದ ಭೋಗ ಮತ್ತು ಕಠೋರವಾದ ದೇಹದಂಡನೆಯ ಅತಿರೇಕಗಳನ್ನು ತ್ಯಜಿಸಿದ ಮಧ್ಯಮ ಮಾರ್ಗವಾಗಿತ್ತು. ಬುದ್ಧನು ಬೋಧಿಸಿದ ಸಮಾನತೆಯ ತತ್ವಜ್ಞಾನವಾಗಲೀ, ದುಂದುವೆಚ್ಚದ  ಯಜ್ಞಯಾಗಾದಿ ಮತಾಚರಣೆಗಳಾಗಲೀ, ಮೇಲು-ಕೀಳೆಂಬ ಭಾವನೆಗಳನ್ನು ಪ್ರಚೋದಿಸುವ ಜಾತಿ ಭೇದಗಳಾಗಲೀ, ಜನತೆಯನ್ನು ಶೋಷಣೆಗೆ ಗುರಿಪಡಿಸುವ ಉನ್ನತ ವರ್ಗವಾಗಲೀ ಇರಲಿಲ್ಲ. ಬುದ್ಧನು ಬೋಧಿಸಿದ ಧರ್ಮದಲ್ಲಿ ಸ್ವ-ಪ್ರಯತ್ನದಿಂದ ಸರಳ ಹಾಗೂ ಪರಿಶುದ್ಧ ಜೀವನ ನಡೆಸಿ ಜನನ, ಮರಣ ಚಕ್ರದಿಂದ ಪಾರಾಗಲು ಸರ್ವರಿಗೂ ಅವಕಾಶವಿತ್ತು, ಜನಭಾಷೆಯಲ್ಲಿ ಬೋಧಿಸಲ್ಪಟ್ಟ ಕಾರಣ ಈ ಸರಳ ಧರ್ಮವು ಸಮುದಾಯದ ಮನಗೆದ್ದಿತು.  
ಆದ್ದರಿಂದ ಬುದ್ಧ ಅಂಬೇಡ್ಕರ್‍ರವರ ಮೇಲೆ ಪ್ರಭಾವಿಸಿದ್ದು, ಮುಂದೆ ಹನ್ನೆರಡನೇ ಶತಮಾನದಲ್ಲಿ ಮಹಾಮಾನವ ಚೇತನವಾಗಿ ಬಂದ ಬಸವಣ್ಣನವರು ವಿಶ್ವ ಕಂಡ ಬೆರಳೆಣಿಕೆಯ ಕ್ರಾಂತಿಪುರುಷರಲ್ಲೊಬ್ಬರು. ನಾಡಿನ ನೋವಿಗೆ ಜಾತೀಯತೆ, ಅಸ್ಪøಶ್ಯತೆ, ಅಸಮಾನತೆ, ಬಹುದೇವತಾ ಪೂಜೆ ಮುಂತಾದವುಗಳೇ ಕಾರಣವೆಂದರಿತು ಈ ಶಾಪವನ್ನು ವಿಮೋಚನೆಗೈದು ಸಮಾಜವನ್ನು ಸ್ಥಿತಿಪ್ರಜ್ಞವಾಗಿ ಮಾಡುವಲ್ಲಿ ಅವಿರತವಾಗಿ ದುಡಿದವರು. 
ಇವನಾರವ ? ಇವನಾರವ ? ಇವನಾರವ ? ಎಂದೆನಿಸದಿರಯ್ಯಾ ?
ಇವನಮ್ಮವ, ಇವನಮ್ಮವ, ಇವನಮ್ಮವ, ಎಂದೆನಿಸಯ್ಯಾ
ಕೂಡಲ ಸಂಗನ ಶರಣರ ಮನೆಯ ಮಗನೆಂದೆನಿಸಯ್ಯಾ ?
ಜಾಗತಿಕವಾಗಿ ಸರ್ವಧರ್ಮಗಳ ಸಾರದಂತಿರುವ, ಪ್ರಾಪಂಚಿಕ ಇತಿಹಾಸದಲ್ಲಿ ಮಾನವೀಯ ಸೆಲೆಯಲ್ಲಿ ಪಡಿಮೂಡಿಬಂದ ಈ ವಚನವು ಮಹೋನ್ನತವಾದ ಸ್ಥಾನವನ್ನು ಪಡೆದಿದೆ. ‘ಕಿರಿದರೋಳ್ ಪಿರಿದರ್ಥ’ ಎಂಬಂತೆ ಕೇವಲ ಮೂರೇ ಸಾಲಾದರೂ ‘ಮಾನವ ಕುಲಂ ತಾನೊಂದೇ ವಲಂ’ ಎಂಬುವಂತೆ ವಿಶ್ವ ಬ್ರಾತೃತ್ವವನ್ನು ಸಾರುತ್ತದೆ. ದೀನ, ದಲಿತ, ಹಿಂದುಳಿದ, ಶೋಷಿತರ ಏಳ್ಗೆಗಾಗಿ ಇಡೀ ಬದುಕನ್ನೇ ಮುಡಿಪಾಗಿಟ್ಟು ಪ್ರಯತ್ನಿಸಿದ ರೀತಿ ಅತ್ಯಮೋಘವಾದುದು. ಇಂತಹುದೇ ದೃಷ್ಟಿಕೋನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರೂ ಹೊಂದಿದ್ದರು. ಅಂತ್ಯಜರು ಕಡೆಗಣಿಸಲ್ಪಡದೆ ಇತರರಂತೆ ಅವರೂ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಲ್ಪಡಬೇಕು ಎಂಬಾಶಯ ಹೊಂದಿದ್ದರು.
ಬಸವಣ್ಣನವರು ಅತ್ಯಂತ ಮೇಲ್ವರ್ಗವಾದ ಶೈವ ಬ್ರಾಹ್ಮಣರಾದರೆ, ಬಾಬಾ ಸಾಹೇವರು ಸಮಾಜದಲ್ಲಿ ಅತ್ಯಂತ ಕೀಳುಜಾತಿ ಎನಿಸಿದ ‘ಮಹರ್’ ನಲ್ಲಿ ಜನಿಸಿದವರು, ಆದರೆ ಇವರೀರ್ವರೂ ಬುದ್ಧನ ತತ್ವ ನೀತಿ ಬೋಧೆಯ ಮಾರ್ಗದಲ್ಲಿ ಅನುಸರಿಸಿ ಮಹಾಮಾನವತಾವಾದಿಗಳಾದರು.
ಕಳಬೇಡ, ಕೊಲಬೇಡ, ಹುಸಿಯ ನÀುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ ! ಇದೇ ಬಹಿರಂಗ ಶುದ್ಧಿ !
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ !
ಮನುಷ್ಯ ಶಾಶ್ವತ ಸುಖದೆಡೆಗೆ ಸಾಗಬೇಕಾದರೆ ಬುದ್ಧ ಅಷ್ಟಾಂಗ ಮಾರ್ಗಗಳನ್ನು ಬೋಧಿಸದರೆ, ಬಸವಣ್ಣನವರು ಈ ಮೇಲಿನ ವಚನದಲ್ಲಿ ಪರಿಪೂರ್ಣ ಮಾನವನಾಗಲು ಸಪ್ತ ಸೂಚಕಗಳನ್ನು ನೀಡಿದ್ದಾರೆ. ಅಂತೆಯೇ ಸಮಾನತೆಗೆ ಬಸವಣ್ಣನವರು ಸ್ಥಾಪಿಸಿದ  ಅನುಭವ ಮಂಟಪವೇ ಅತ್ಯುತ್ತಮ ನಿದರ್ಶನವಾಗಿದೆ. ಇಲ್ಲಿ ಸಮಾಜದ ಪ್ರತಿಯೊಂದು ಸ್ಥರದ ಶರಣ ಶರಣೆಯರು ಇದ್ದರು. ಜೇಡರ ದಾಸಿಮಯ್ಯ, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯನುಲಿಯ ಚೆಂದಯ್ಯ, ಅಲ್ಲಮಪ್ರಭು, ಮಡಿಮಾಳ ಮಾಚಯ್ಯ, ಅಕ್ಕ ಮಹಾದೇವಿ, ಡೋಹರ ಕಕ್ಕಯ್ಯ, ಒಕ್ಕಲಿಗರ ಮುದ್ದಣ್ಣ, ದುಗ್ಗಳೆ, ಗಂಗಾಂಬಿಕೆ, ನೀಲಾಂಬಿಕೆ, ಗೊಗ್ಗೆವ್ವೆ, ಸೂಳೆ ಸಂಕವ್ವೆ, ಅಕ್ಕನಾಗಮ್ಮ, ಸಕಲೇಶ ಮಾದರಸ, ಕಾಡಸಿದ್ದೇಶ್ವರ, ಆಯ್ದಕ್ಕಿ ಮಾರಯ್ಯ, ಆಯ್ದಕ್ಕಿ ಲಕ್ಕಮ್ಮ, ಬೊಂತಾದೇವಿ, ಸಿದ್ದಾರಾಮ, ಚೆನ್ನಬಸವಣ್ಣ, ಕಿನ್ನರಿ ಬೊಮ್ಮಣ್ಣ, ಸತ್ಯಕ್ಕ, ಕೊಟ್ಟಣದ ಸೋಮವ್ವೆ, ಮೋಳಿಗೆ ಮಾರಯ್ಯ, ಹರಳಯ್ಯ, ಉಪ್ಪಾರ ಚಿಕ್ಕಣ್ಣ, ಉಪ್ಪಾರ ವೀರಣ್ಣ, ವೀರಗಾರ ವೀರಣ್ಣ ಹೀಗೆ ಜಾತ್ಯಾತೀತವಾಗಿ ಎಲ್ಲರಿಗೂ ಸಮಾನತೆ, ನ್ಯಾಯ, ಸ್ವತಂತ್ರ್ಯತೆಗಳು ಲಭಿಸಿದ್ದವು. ಈ ಪರಿಕಲ್ಪನೆಯೇ ಅಂಬೇಡ್ಕರರ ಮನದ ಮೂಸೆಯಲ್ಲಿ ಮೊಳೆತು ಸ್ವತಂತ್ರ್ಯಭಾರತದ ಸಂವಿಧಾನದಡಿಯ ಮೀಸಲಾತಿ ಸಂಸತ್ತಾಗಿ ರೂಪುತಾಳಿತು. ಜಾತ್ಯಾತೀತ, ಭಾಷಾತೀತ, ಧರ್ಮಾತೀತ ಸಮಾಜ ನಿರ್ಮಾಣಕ್ಕಾಗಿ ಅನೇಕ ಕಾನೂನು, ಕಟ್ಟಲೆ, ನಿಬಂಧನೆಗಳು ಜಾರಿಯಾದವು. ಅನೇಕ ಕಷ್ಟ ಕೋಟಲೆಗಳನ್ನು ಅನುಭವಿಸಿ, ಮೆಟ್ಟಿ ಹೊರಬಂದಿದ್ದ ಬಾಬಾ ಸಾಹೇಬರು ಬುದ್ಧ ಹಾಗೂ ಬಸವ ತತ್ವಗಳನ್ನು ಅಕ್ಷರಶಃ ಕಾನೂನುಗಳಾಗಿ ಮಾರ್ಪಡಿಸಿ ದಮನಿತರ, ಶೋಷಿತರ, ಅಸ್ಪøಶ್ಯರ ಬಾಳಿಗೆ ಬೆಳಕಾದರು.
ಒಮ್ಮೆ ಬಾಬಾ ಸಾಹೇಬ್ ಅಂಬೇಡ್ಕರರು ತಮ್ಮ ಪತ್ನಿ ರಮಾಬಾಯಿಯವರೊಡನೆ ಮರಾಠಿ ನಾಟಕವನ್ನು ವೀಕ್ಷಿಸಲು ಹೋಗಿದ್ದರು. ಆ ನಾಟಕ ಅಸ್ಪøಶ್ಯತೆ ಕುರಿತದ್ದಾಗಿತ್ತು. ಅಸ್ಪøಶ್ಯದ ಪಾತ್ರ ವಹಿಸಿದ್ದ ವ್ಯಕ್ತಿ ನಾಟಕದ ಸಲುವಾಗಿ ಸೊಂಟಕ್ಕೆ ಪೊರಕೆಯನ್ನು ಕುತ್ತಿಗೆಗೆ ತೆಂಗಿನ ಕರಟವನ್ನು ಕಟ್ಟಿಕೊಳ್ಳಬೇಕಾಗಿತ್ತು. ಅದು ಅಸ್ಪøಶ್ಯತೆಯ ಹೀನಾಯ ಸ್ಥಿತಿಯನ್ನು ಬಿಂಬಿಸುವುದಾಗಿತ್ತು. ಆದರೆ ನಾಟಕದಲ್ಲಿನ ಪಾತ್ರದಾರಿ ಆ ವೇಷವನ್ನು ಹಾಕಿಕೊಳ್ಳಲು ಒಪ್ಪಲಿಲ್ಲ. ಕೊನೆಗೆ ಅಲ್ಲಿನ ದೃಶ್ಯವನ್ನು ಬೇರೆಯದೇ ರೀತಿ ಮಾರ್ಪಡಿಸಿ ನಾಟಕವನ್ನು ಮುಗಿಸಿದರು. ನಾಟಕವಾದ ನಂತರ ಬಾಬಾ ಸಾಹೇಬರು ಮುಖ್ಯ ಅತಿಥಿಯಾಗಿ ಮಾತನಾಡುವಾಗ “ಕೇವಲ ವೇಷ ಹಾಕುವುದರಿಂದಲೇ ಅವಮಾನ ಎಂದು ಭಾವಿಸಿದ ಈ ನಟ. ಆದರೆ ಶತ ಶತಮಾನಗಳಿಂದ ನಿಜವಾಗಿಯೂ ಅದೇ ರೀತಿ ಬದುಕುತ್ತಿದ್ದಾರಲ್ಲ ನನ್ನ ಜನ ಅವರಿಗೆ ಈ ಹೀನ ಬದುಕಿನ ಪರಿಣಾಮ ಯಾವಾಗ ಅರಿವಾಗುತ್ತದೆ ಎಂದು ಹೇಳುತ್ತಾ ಕಣ್ಣೊರಿಸಿಕೊಂಡರು.
ಮನೆಗೆ ಕಾರಿನಲ್ಲಿ ಬರುವಾಗ ಪತ್ನಿ ರಮಾಬಾಯಿ ಅಳುತ್ತಿರುವುದನ್ನು ಕಂಡು ಬಾಬಾ ಸಾಹೇಬರು ತಾವೇ ಪತ್ನಿಯ ಕಣ್ಣೊರಿಸಿ ನನ್ನ ಜನಾಂಗದ ಸಮಸ್ಯೆಗಳನ್ನು ನಿನಗೆ ತಿಳಿಸುವ ಸಲುವಾಗಿ ನಾಟಕಕ್ಕೆ ಕರೆದುತಂದೆ ಎಂದಾಗ ರಮಾದೇವಿ “ರಾಮು ನಿನ್ನ ಪಕ್ಕ ನಾನು ಈಗ ಹೇಗಿರುವೆನೋ ಹಾಗೆಯೇ ನನ್ನ ಜನಾಂಗವೂ ಇರಬೇಕು. ಬದುಕಬೇಕೆಂಬುದು ನನ್ನ ಆಸೆ” ಎಂದು ಹೇಳುತ್ತಾ ತಾವೂ ಕಣ್ಣೊರಿಸಿಕೊಂಡರು. 
ಹೀಗೆ ಅಂಬೇಡ್ಕರರು ಎಲ್ಲ ಪ್ರತಿರೋಧಗಳನ್ನು ಎದುರಿಸಿ, ತಮ್ಮ ಅಗಾಧ ಜ್ಞಾನ ದಾಹದಿಂದ ಅಮೇರಿಕಾ, ಲಂಡನ್‍ನಲ್ಲಿ ಉನ್ನತ ವ್ಯಾಸಂಗ ಮಾಡಿ ಅತ್ಯುನ್ನತ ಅಧಿಕಾರಗಳನ್ನು ಪಡೆಯುತ್ತಾರೆ. ಎಷ್ಟೆಲ್ಲಾ ರೀತಿಯ ನೋವು, ಅವಮಾನಗಳಿಂದ ವಿಚಲಿತರಾಗದೆ ದಲಿತರ ಸ್ವಾತಂತ್ರ್ಯಕ್ಕಾಗಿ, ಏಳ್ಗೆಗಾಗಿ, ಉದ್ಧಾರಕ್ಕಾಗಿ, ಅವರ ಉನ್ನತಿಗಾಗಿ ಹಗಲಿರುಳು ಶ್ರಮಿಸಿ ಕಾರ್ಯೋನ್ಮುಖರಾಗುತ್ತಾರೆ. ದೇಶದ ಕಲ್ಯಾಣಕ್ಕಾಗಿ ಪಣ ತೊಡುತ್ತಾರೆ. ತನ್ಮೂಲಕ ಬಸವಣ್ಣನಂತೆ ಇವರೂ ಕಲ್ಯಾಣ ಕ್ರಾಂತಿ ಮಾಡುತ್ತಾರೆ.
ಬಸವಣ್ಣನವರ ಜೀವನದಲ್ಲಿ ತಮ್ಮ ಗುರುಗಳಾದ ಜಾತವೇದಮುನಿಗಳು ಹಾಗೆಯೇ ಪತ್ನಿಯರಾದ ಗಂಗಾಂಬಿಕೆ ಮತ್ತು ನೀಲಾಂಬಿಕೆಯರು ಪ್ರಧಾನ ಪಾತ್ರ ವಹಿಸಿದಂತೆ ಬಾಬಾ ಸಾಹೇಬ್ ಅಂಬೇಡ್ಕರರ ಜೀವನದಲ್ಲಿ  ತಂದೆ ರಾಮ್‍ಜಿ  ಸಕ್ಪಾಲ್ ಹಾಗೂ ಪತ್ನಿ ರಮಾಬಾಯಿಯವರು ಪ್ರಧಾನ ಪಾತ್ರ ವಹಿಸುತ್ತಾರೆ. ಬಸವಣ್ಣನವರು ಅನುಭವದ ಮಂಟಪ ಮುಖೇನ ತಮ್ಮ ವಚನಗಳನ್ನು ಅಸ್ತ್ರವಾಗಿ ಬಳಸಿಕೊಂಡು ಸಮಾಜದ ಜಾಡ್ಯತೆಯನ್ನು ಹೋಗಲಾಡಿಸಿದರೆ ಅಂತೆಯೇ ಅಂಬೇಡ್ಕರರು ಸಂವಿಧಾನದ ಮೂಲಕ ಕಾನೂನುಗಳನ್ನು ಅಸ್ತ್ರವಾಗಿ ಬಳಸಿಕೊಂಡು ದಲಿತ, ಅಸ್ಪøಶ್ಯರ, ದೀನರ, ಬಡವರ ಬಾಳಿಗೆ ಬೆಳಕಾಗುತ್ತಾರೆ.
ಅಂಬೇಡ್ಕರ್ ರವರು ಅಸಾಮಾನ್ಯ ಓದುಗ, ಅದ್ಭುತ ಭಾಷಣಕಾರ, ಲೇಖಕ, ಸಮರ್ಥ ಉಪನ್ಯಾಸಕ, ಕ್ರೀಡಾಭಿಮಾನಿ, ಅತ್ಯಂತ ‘ಖeಟigious’ ರಾಜನೀತಿಜ್ಞ, ತೀಕ್ಷ್ಣಮತಿ, ವಾತ್ಸಲ್ಯಮಯಿ, ತನ್ನ ಮೇಲೆ ತನಗೇನೇ ಅತ್ಯಂತ ಹೆಮ್ಮೆ, ಆತ್ಮ ವಿಶ್ವಾಸವಿದ್ದಂತಹ ವ್ಯಕ್ತಿ, ಬಹುಶಃ ಜಗತ್ತಿನ ಬೆರಳೆಣಿಕೆಯಷ್ಟು ವ್ಯಕ್ತಿಗಳಲ್ಲಿ ಇವರೊಬ್ಬರು.
ಬಾಬಾ ಸಾಹೇಬರು ತಮ್ಮ ಜೀವಿತ ಕಾಲದಲ್ಲಿ ಪ್ರತಿಯೊಂದು ಕ್ಷಣವನ್ನು ಉಪಯುಕ್ತವಾಗಿ ಸಾರ್ಥಕವಾಗಿ ವಿನಿಯೋಗಿಸಿಕೊಂಡ ಒಬ್ಬ ಅತ್ಯಂತ ಉತ್ಕøಷ್ಟ ವ್ಯಕ್ತಿ ಎಂದರೆ ತಪ್ಪಾಗಲಾರದು. ತಾವು ಕೈಗೊಂಡ ಕೆಲಸಗಳೆಲ್ಲವನ್ನು ಜಯಭೇರಿಯೊಡನೆಯೇ ಮುಗಿಸುತ್ತಿದ್ದುದ್ದು ಅವರಿಗೆ ಸದಾಕಾಲ ಶುಭಾಷಯಗಳ ಮಳೆಗರೆಯುತ್ತಿತ್ತು, ಆಗ ಯಾರಾದರೂ ಅಭಿನಂದನೆಗಳನ್ನು ಸಲ್ಲಿಸಲು ಬಂದರೆ  ಅವರು ಹೇಳುತ್ತಿದ್ದುದÀು ಏನು ಗೊತ್ತೇ ? ನಾನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಜಯವಾಗಲೇಬೇಕು. ನನಗೆ ಸೋಲು ಎನ್ನುವ ಮಾತೇ ಇಲ್ಲ. ನಾನು ಬಂದಂತಹ ವಂಶ ಎಂತದು ಎಂದು ಭಾವಿಸಿದ್ದೀರಿ ? ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. “ಆo ಥಿou ಞಟಿoತಿ iಟಿ ತಿhiಛಿh ಛಿಟಚಿಟಿ I beಟoಟಿg ಣo ? ಆo ಥಿou ಞಟಿoತಿ iಟಿ ತಿhiಛಿh ಛಿಟಚಿm I hಚಿve ಛಿome ಜಿಡಿom?” ಅಬ್ಬಾ ! ಎಂಥಾ ಆತ್ಮ ವಿಶ್ವಾಸ ಅಲ್ಲವೇ?
ಬಸವಣ್ಣನವರು ವೇದೋಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿ ವಚನಗಳ ಮೂಲಕ ಸಾರವನ್ನು ಕಟ್ಟಿಕೊಟ್ಟಂತೆ ಬಾಬಾ ಸಾಹೇಬರು ಆಳವಾದ ಅಧ್ಯಯನ ಹಾಗೂ ಪುಸ್ತಕ ಪ್ರೀತಿಯ ಅನ್ಯನ್ಯ ಬಂಧದಿಂದ  ಮಹಾನ್ ಜ್ಞಾನಿಯಾಗಿ ಸಂವಿಧಾನ ಶಿಲ್ಪಿಯಾದರು.
ಆo ಥಿou  ಞಟಿoತಿ ಚಿ ಠಿeಡಿsoಟಿ iಟಿ ಣhe shoಟe ? ಂsiಚಿ ಣhಚಿಣ ತಿho hಚಿs buiಟಣ ಚಿ buಟಿgಚಿಟoತಿ ಣo house his ಟibಡಿಚಿಡಿಥಿ ? ಒಚಿಡಿಞ iಣ, iಣ is ಆಡಿ. ಂmbeಜಞಚಿಡಿ.
ಇದು ಪುಸ್ತಕ ಪ್ರೇಮಿಯೊಬ್ಬರಿಗೆ ಸಂದ ಅತ್ಯುನ್ನತ ಪ್ರಶಂಸೆಯ ಮಾತುಗಳು ಪುಸ್ತುಕಗಳ ಬಗ್ಗೆ ಇದ್ದ ವ್ಯಾಮೋಹ ಇಷ್ಟರಮಟ್ಟದ್ದಾದರೆ, ಇನ್ನು ಓದಿನ ಗೀಳಿನ ಬಗ್ಗೆ ಬಾಬಾಸಾಹೇಬರನ್ನು ಅವರ ಸ್ನೇಹಿತರು ಸದಾ ಛೇಡಿಸುತ್ತಿದ್ದದು ಹೀಗೆ “ಎಲ್ಲರೂ ಒಂದು ಪುಸ್ತಕ ಮುಗಿದ ಮೇಲೆ ಮತ್ತೊಂದು ಪುಸ್ತಕ ಹಿಡಿದರೆ ನೀನು ಲೈಬ್ರರಿ ಲೈಬ್ರರಿಗಳನ್ನೇ ನುಂಗಿ ಹಾಕುತ್ತೀ” ಎಂದು. ಆದ್ದರಿಂದಲೇ ಅವರೊಬ್ಬ ಮೇಧಾವಿಯಾಗಿದ್ದು, ತತ್ವಜ್ಞಾನಿಯಾಗಿದ್ದು ಅಲ್ಲವೇ? 
ಬುದ್ಧ, ಬಸವ, ಅಂಬೇಡ್ಕರರು ಜಾತಿ ಬೇಡವೆಂದು ಇಡೀ ಬದುಕನ್ನು ಮಾನವೀಯತೆಗೆ ಮೀಸಲಿಟ್ಟು, ಕಲ್ಯಾಣ ಪ್ರಗತಿಯನ್ನು ಬಯಸಿ ವಿಶ್ವ ಮಾನವರೆನಿಸಿಕೊಂಡರು. ಈ ಮೂವರ ಕಾಲಘಟ್ಟಗಳು ಬೇರೆ ಬೇರೆಯಾದರೂ ಹಿಡಿದ ಗುರಿಯೊಂದೇಯಾಗಿತ್ತು. ತತ್ವವೊಂದೇಯಾಗಿತ್ತು. ದುರಂತವೆಂದರೆ ಕೆಲವರು ತಮ್ಮ ತಮ್ಮ ಜಾತಿಗಳಿಗಂಟಿಸಿಕೊಂಡು ಈ ಮಹಾನುಭಾವರನ್ನು ದಿವ್ಯ ಚೇತನಗಳನ್ನು, ಆದರ್ಶವ್ಯಕ್ತಿಗಳನ್ನು, ವಿಶ್ವ ಮಾನವರಾದವರನ್ನು ಅಲ್ಪಮಾನವರನ್ನಾಗಿಸುತ್ತಿರುವುದು ಬಹುದೊಡ್ಡ ದುರಂತ !
ವಿಶ್ವ ಪ್ರಜ್ವಲಿಪ ಹಣತೆಗಳೇ
ಜಾತಿ ಎಂಬ ಬತ್ತಿಗೆ ಬೆಂಕಿಯಿಟ್ಟು
ಸಮಾನತೆಯ ಬೆಳಗಿದ ಜ್ಯೋತಿಗಳೇ
ಜಗದ ಶ್ರೀಸಾಮಾನ್ಯರ ಹೃದಯ ಸ್ಥಂಭಗಳೇ
ಅನುಭಾವದಿ ಮನಬೆಳಗಿದ ದಿವ್ಯತೇಜಸ್ಸುಗಳೇ
ಮನದ ಕೊಳಕ ನೀಗಿ, ಜ್ಞಾನದ ಪುಳಕ ನೀಡಿದ
ಮಹಾ ಮಾನವತ ಪರಂಜ್ಯೋತಿಗಳೇ
ಕಾಯ, ವಾಚಾ, ಮನಸ ಆದರ್ಶವಾಗಿ ಬಾಳಿ
ಲಿಂಗತೆ ಮೆರೆದ ಲಿಂಗಮೂರ್ತಿಗಳೇ
ಕೆಳಸ್ತರಕ್ಕೆ ನೂಕಲ್ಪಟ್ಟವರೆದೆಯಲ್ಲಿ
ಅರಿವಿನಗರಬತ್ತಿಯ ಹಚ್ಚಿ ಬಡಿದೆಚ್ಚರಿಸಿದ 
ಮಾನವ ಕುಲದ ಹೊಂಬೆಳಕುಗಳೇ
ನಿಮಗಿದೋ ಶರಣು, ಶರಣು, ಶರಣು . . . .

ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ, 
ಹಾಸನ
ಮೊ. 9483470794, 9739878194

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ