ಸೋಮವಾರ, ಜೂನ್ 30, 2014

‘ದೈವತ್ವದ ನೆಲೆಕಂಡ ಜೇಡರ ದಾಸಿಮಯ್ಯ’

ಏಪ್ರಿಲ್ 4 ರಂದು ಆಧ್ಯ ವಚನಕಾರರಾದ ಜೇಡರ ದಾಸಿಮಯ್ಯನವರ ಜಯಂತಿ ಇರುವ ಪ್ರಯುಕ್ತ ಬರೆದ ಲೇಖನ 

ಸುಮಾರು ಎಂಟುನೂರು ವರ್ಷಗಳ ಹಿಂದೆ ವಿಶ್ವವೇ ಹಿಂದೆಂದೂ ಕಂಡರಿಯದ ಧಾರ್ಮಿಕ, ಸಾಮಾಜಿಕ, ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಏಕಕಾಲಕ್ಕೆ ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀವ್ರತರ ಚಳುವಳಿ ನಡೆದದ್ದು ಭರತಖಂಡದ ಕಾಯಕಯೋಗಿಸ್ಥಲವಾದ ಕರ್ನಾಟಕ ಮಣ್ಣಿನಲ್ಲಿ ಶರಣರ ಮಹಾಸಂಗಮದೊಂದಿಗೆ.
ಈ ಚಳುವಳಿಯು ಅಂದಿನ ಅನೇಕ ಪ್ರಚಲಿತ ಗಂಭೀರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿತೆನ್ನುವುದು ಕೂಡ ಗಮನಾರ್ಹವಾದ ಸಂಗತಿ.  ಶಿವಶರಣರು ವರ್ಣ, ವರ್ಗ, ಲಿಂಗ ಬೇಧಗಳ ಗೋಡೆಯನ್ನು ಬುಡಸಮೇತ ಕಿತ್ತು ಹಾಕಿದರು.  ಬಡವ, ಬಲ್ಲಿದ, ಉಚ್ಛ, ನೀಚರೆಂಬ ತಾರತಮ್ಯವನ್ನು ಕನಸಲ್ಲೂ ಸುಳಿಯದಂತೆ ಮಾಡಿದರು.  ದೀನದಲಿತರ, ದುರ್ಬಲರ, ಬದುಕಿಗೆ ಬೆಳಕಾಗಿ ನಿಂತವರು ಶರಣರು.
ಇವರಲ್ಲಿ ಪ್ರಮುಖ ಹಾಗೂ ಆದ್ಯ ವಚನಕಾರರಾದ ದೇವರ ದಾಸಿಮಯ್ಯನವರದು ಅಪರೂಪದವರಲ್ಲಿ ಅಪರೂಪ ವ್ಯಕ್ತಿತ್ವ, ನಿಸ್ವಾರ್ಥ ಬುನಾದಿಯ ಮೇಲೆ ಸ್ವಾವಲಂಬನೆಯ ಮನೆಯ ಕಟ್ಟಿ, ಪರೋಪಕಾರವೆಂಬ ಛಾವಣಿ ಹಾಕಿ ಮನೆಯಲ್ಲಿ ‘ಮಾನವೀಯತೆ’ ಎಂಬ ಜ್ಯೋತಿ ಬೆಳಗಿಸಿದವರು.  ಮಮತೆ, ಪ್ರೀತಿ, ಗೌರವ, ವಿನಯಗಳಿಂದ ಲೌಕಿಕ-ಅಲೌಕಿಕವನ್ನು ಗೆಲ್ಲಬಹುದೆಂದು ಸಾಧಿಸಿ ತೋರಿಸಿದವರು.
ದಾಸಿಮಯ್ಯನವರು ಹನ್ನೊಂದನೇ ಶತಮಾನದ ಹಾದಿಯಲ್ಲಿ [ಕ್ರಿ.ಶ.1040 ರಿಂದ 1100] ಕಲ್ಬುರ್ಗಿ ಜಿಲ್ಲೆಯ ಮುದನೂರಿನ ವಾಸಿಗಳಾದ ರಾಮಯ್ಯ ಹಾಗೂ ಶಂಕರಮ್ಮ ಎಂಬ ಜೇಡರ ದಂಪತಿಗಳ ಪುಣ್ಯಗರ್ಭಾಂಬುದಿಯಲ್ಲಿ ಜನಿಸುತ್ತಾರೆ.  ಬಾಲ್ಯದಿಂದಲೇ ಲಿಂಗಾರ್ಚನೆ, ದಾಸೋಹ, ಜಂಗಮದೆಡೆ ತುಡಿದ ಇವರ ಮನಸ್ಸು ಅದರಲ್ಲಿಯೇ ಕಾಯಕನಿರತರನ್ನಾಗಿಸುತ್ತದೆ.  ಮೇಲುವರ್ಗದವರ ಕೆಂಗಣ್ಣಿಗೆ ಗುರಿಯಾದರೂ ಧೈರ್ಯಗುಂದದೇ ಮುದನೂರು ಗ್ರಾಮದ ರಾಮನಾಥ ಲಿಂಗವನ್ನು ಆರಾಧ್ಯವಾಗಿ ಸ್ವೀಕರಿಸಿ ವಚನಾರ್ಪಣೆ ಮಾಡುತ್ತಾ ಸಾಗುತ್ತಾರೆ.  ಇವರದು ಬಟ್ಟೆ ನೇಯುವ ಮೂಲ ಪ್ರವೃತ್ತಿಯಾಗಿತ್ತು.  ಹೊತ್ತು ಗೊತ್ತಿಲ್ಲದೆ ದೇವಾಲಯಕ್ಕೆ ಬರುವ ದಾಸಿಮಯ್ಯನನ್ನು ಅಲ್ಲಿರುವ ಪೂಜಾರಿಗಳು ಆತನ ಬರುವಿಕೆಯನ್ನು ದೂರದಿಂದ ಕಂಡು ದೇವಾಲಯದ ಬಾಗಿಲುಗಳನ್ನು ಭದ್ರಪಡಿಸಿ ಬೀಗ ಜಡಿಯುತ್ತಾರೆ.  ಆದರೆ ಇದಾವುದನ್ನು ಗಮನಿಸದ ದಾಸಿಮಯ್ಯ ಮಂದಿರದ ಹೊರಾಂಗಣದಲ್ಲಿ ನಿಂತು ಭಕ್ತಿಯಿಂದ ರಾಮನಾಥನ ವಚನ ಸ್ಮರಣೆ ಮಾಡಿದೊಡೆ ಬೀಗಗಳೆಲ್ಲವೂ ತನ್ನಿಂದ ತಾನೇ ಮುರಿದು ದೇವಾಲಯಗಳು ತೆರೆದುಕೊಳ್ಳುತ್ತವೆ ಎಂಬ ಪ್ರತೀತಿಗಳಿವೆ.
ಒಲವಿಲ್ಲದ ಭಕ್ತಿ, ಲವಲವಿಕೆ ಇಲ್ಲದ ಪೂಜೆ
ಸಲೆನಿಮ್ಮ ನಂಬಿ ನಂಬದವನ ಬಾಳುವೆ
ಹೊಲೆಯರ ನಾಯಿ ಹುಲು ಸರವಿಯಿಂದ
ಕರಕಷ್ಟ ಕಾಣಾ ರಾಮನಾಥಾ | [ವ.ಸಂ. 770]
ಈ ಮೇಲಿನ ವಚನದಲ್ಲಿ ಭಕ್ತಿಯೆಂದರೆ ಏನು ಎಂಬುದನ್ನು ತಿಳಿಸುತ್ತಾ, ಒಳಗೊಂದು, ಹೊರಗೊಂದು ನೀತಿಯ ಬಗೆಯುವವರನ್ನು ಕುಟುಕಿದ್ದಾರೆ.  ಬದುಕಿನಲ್ಲಿ ಮಾತಿಗೆ ಮಹತ್ತರ ಪಾತ್ರವಿದೆ.  ಇಲ್ಲಿ ಪರಸ್ಪರ ನಂಬಿಕೆ ಮುಖ್ಯ.  ದೈವ ಪ್ರೀತಿ ಮುಖ್ಯ.  ಪ್ರೀತಿ, ದಯೆ, ವಾತ್ಸಲ್ಯ, ಶ್ರದ್ಧೆ, ಆಸಕ್ತಿಯಿಲ್ಲದ ಪೂಜೆ ಹೊಲೆಯರ ನಾಯಿಯ ಬೇಟೆಗಿಂತ ಕೀಳೆಂದು ದಾಸಿಮಯ್ಯನವರು ಹೇಳುತ್ತಾರೆ.
“ಉಂಕಿಯ ನಿಗುಚಿ ಸರಿಗೆಯ ಸಮಗೊಳಿಸಿ
ಈ ಸೀರೆಯ ನೆಯ್ದವ ನಾನೋ ನೀನೋ ರಾಮನಾಥ ?”
ಪ್ರಸ್ತುತ ವಚನವು ಕಾಯಕವನ್ನು ಪ್ರಖರವಾಗಿ ಸೂಚಿಸುತ್ತದೆ.  ನೇಯುವವ ನಾನಾದರೂ ನೇಯಿಸುವವ ನೀನೇ ಆದ್ದರಿಂದ ಅದರ ಪ್ರತಿಫಲ ನಿನ್ನದೇ ಎಂದು ರಾಮನಾಥನಲ್ಲಿ ಕೇಳುತ್ತಾರೆ.
ಒಮ್ಮೆ ತಾವು ನೇಯ್ದು ಬಟ್ಟೆಯನ್ನು, ಮಾರಲು ಸಿದ್ಧಾಪುರ ಪೇಟೆಗೆ ಹೋದಾಗ ಮಾರುವೇಶದಲ್ಲಿ ಜಂಗಮನಾಗಿ ಶಿವನು ಬರುತ್ತಾನೆ.  ದಾಸಿಮಯ್ಯನವರಲ್ಲಿದ್ದ ಅಮೂಲ್ಯವಾದ ರೇಶ್ಮೆ ವಸ್ತ್ರವನ್ನು ದಾನವಾಗಿ ಬೇಡುತ್ತಾನೆ.  ಒಂದು ಕ್ಷಣವೂ ಯೋಚಿಸದೇ ತನ್ನಲ್ಲಿದ್ದ ವಸ್ತ್ರವನ್ನು ಜಂಗಮನಿಗೆ ನೀಡುತ್ತಾರೆ.  ತಕ್ಷಣ ಜಂಗಮ ಎದುರಲ್ಲೇ ಆ ವಸ್ತ್ರವನ್ನು ತುಂಡು ತುಂಡಾಗಿ ಹರಿದು ಹಾಕುತ್ತಾರೆ.  ಕಿಂಚಿತ್ತು ಕೋಪಗೊಳ್ಳದೇ ರಾಮನಾಥನ ಸ್ಮರಣೆ ಮಾಡುತ್ತಾರೆ.  ನಿರ್ಮೋಹದ ಸದ್ಭಕ್ತಿ ಕಂಡು ಶಿವ ನಿಜರೂಪ ತೋರಿ ಪ್ರಸನ್ನನಾಗುತ್ತಾನೆ.
ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತೊಡೆ ಒಲ್ಲೆ !
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ ಅರೆಗಳಿಗೆ
ಇತ್ತಡೆ ನಿಮ್ಮ ನಿತ್ಯ ಕಾಣಾ ರಾಮನಾಥಾ | ವ.ಸಂ. 740
ಆನೆಯಕೊಟ್ಟರೆ ಬೇಡ, ಸಂಪತ್ತನ್ನು ಕೊಟ್ಟರೆ ಬೇಡ, ಅರ್ಧ ರಾಜ್ಯ ಕೊಟ್ಟರೂ ಬೇಡ, ಶರಣರ ಒಡಲಿಂದ ಒಂದು ಸತ್ಯನುಡಿ ನೀಡಿದರೆ ನಿಮ್ಮ ನಿತ್ಯ ನೆನೆಯುವೆನು ಎಂದು ರಾಮನಾಥನಲ್ಲಿ ದಾಸಿಮಯ್ಯ ಬೇಡುವ ರೀತಿ ನಿಜಕ್ಕೂ ನಿಷ್ಕಲ್ಮಶವಾದುದು, ಅನುಕರಣೀಯವೆಂದರೆ ಅತಿಶಯೋಕ್ತಿಯಾಗಲಾರದು, ಏಕೆಂದರೆ ಇಂತಹ ಮಹಾನ್ ಶರಣರು ಜನಿಸಿ, ಆದರ್ಶ ತತ್ವಗಳನ್ನು ಬಿತ್ತಿದ ಈ ನಾಡಿನಲ್ಲಿ ಇಂದು ವಿಲೋಮವಾಗಿ ಕಾಣುತ್ತಿದ್ದೇವೆ.  ಇಂದಿನ ಆಳ್ವರಸರು, ಆನೆ (ಬಲ) , ಹಣ, ಭೂಮಿಯ ಕಬಳಿಸಿ ನುಂಗಿ ನೀರು ಕುಡಿಯುವುದರಲ್ಲಿಯೇ ತಲ್ಲೀನರಾಗಿರುವುದು ವಿಪರ್ಯಾಸ !
ಇಳೆ ನಿಮ್ಮದಾನ, ಬೆಳೆ ನಿಮ್ಮ ದಾನ
ಸುಳಿದು ಸೂಸುವ ಗಾಳಿ ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳ ನೇನೆಂಬೆ  ರಾಮನಾಥ ?
ಮನುಷ್ಯನ ಚಂಚಲ ಮನಸ್ಸಿನ ತಲ್ಲಣಗಳನ್ನು, ಅವಿವೇಕತನಗಳನ್ನು ದಾಸಿಮಯ್ಯನವರು ಇಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ, ಈ ಭೂಮಿ, ಬೆಳೆ, ಗಾಳಿ, ನೀರು ಎಲ್ಲವೂ ನೀಕೊಟ್ಟ ಕಾಣಿಕೆಗಳು ಆದರೆ ಇವನ್ನೆಲ್ಲ ತಿಂದು ತೇಗಿ ಬೇರೆಯವರನ್ನು ನೆನೆಯುವ ಕುನ್ನಿಗಳ ತಿಳಿಗೇಡಿಗಳನ್ನು ಏನೆನ್ನಬೇಕು ಎಂದು ಪ್ರಶ್ನಿಸುತ್ತಾರೆ.  ಪ್ರಸ್ತುತ ಬೆಂಗಳೂರು, ಬೆಳಗಾಂ ನಲ್ಲಿ ವಾಸವಿರುವ ತಮಿಳು ಕನ್ನಡಿಗರು, ಮರಾಠಿ ಕನ್ನಡಿಗರು ಹುಟ್ಟಿ, ಬೆಳೆದದ್ದು ಕನ್ನಡ ಮಣ್ಣಿನಲ್ಲೇ ಆದರೂ ಭಾಷಾ ದ್ರೋಹ ಬಗೆಯುತ್ತಿರುವುದು ಅವಿವೇಕತನದ ಪರಮಾವಧಿ ಎನ್ನಬಹುದು.  ಬಹುಶಃ ಇಂತಹ ನೀಚ ಮನಗಳನರಿತೇ ದಾಸಿಮಯ್ಯನವರು ಈ ವಚನ ಬರೆದಿರಬಹುದೆನಿಸುತ್ತದೆ.
ದಾಸಿಮಯ್ಯನವರಲ್ಲಿ ಕೇವಲ ಭಕ್ತಿ, ಸಾಮಾಜಿಕ ಪ್ರಜ್ಷೆ ಮಾತ್ರವಿರಲಿಲ್ಲ.  ಅವರೊಳಗೊಬ್ಬ ಅನುಭಾವಿ ವಿಜ್ಞಾನಿ ಅಡಗಿದ್ದ.  ವೈಜ್ಞಾನಿಕ ನೆಲೆಗಟ್ಟಿನಲ್ಲಿ ಯೋಚಿಸಿದಂತೆ ಬರೆದು, ಕಾಯಕದಲ್ಲಿ ತೊಡಗಿದ ಮೊದಲ ಕವಿಯೆಂದರೆ ಬಹುಶಃ ದಾಸಿಮಯ್ಯನವರೇ ಮೊದಲಿಗರೆನಿಸುತ್ತದೆ.
ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪದ ಕಂಪಿಲ್ಲದಂತಿರಿಸಿದೆ
ಶರೀರದೊಳಗೆ ಆತ್ಮವನಾರೂ ಕಾಣದಂತಿರಿಸಿದೆ
ನೀನು ಬೆರೆಸಿದ ಭೇದಕ್ಕೆ ಬೆರಗಾದೆನಯ್ಯ ರಾಮನಾಥ |
ಪ್ರಸ್ತುತ ವಚನದಲ್ಲಿ ಸಾಮಾಜಿಕ ನೆಲೆ, ವೈಜ್ಞಾನಿಕ ಆಲೋಚನೆ, ವೈಚಾರಿಕ ಪ್ರಜ್ಞೆಗಳು ಸಮ್ಮಿಳಿತಗೊಂಡಿವೆ. ಮರ-ಮರಗಳು ಪರಸ್ಪರ ಉಜ್ಜುಜ್ಜಿ ಕಾಡ್ಗಿಚ್ಚು ಹಬ್ಬುವ ತನಕ ಅದರಲ್ಲಿರುವ ಬೆಂಕಿಯ ಬಗ್ಗೆ ತಿಳಿಯದು.  ಮರದೊಳಗೆ ಅಗ್ನಿ ಇದ್ದರೂ ಮಂದವಾಗಿ, ಕಾಣದಂತೆ ಇರಿಸಿರುವೆ.  ಕೆನೆಭರಿತ ಹಾಲಿನೊಳಗೆ ತುಪ್ಪವಿದ್ದರೂ ಗೋಚರಿಸದು, ಕಂಪಸೂಸದು, ಮೊಸರಾಗಿ ಕಡೆದಾಗ ಮಾತ್ರ ಬೆಣ್ಣೆ ಬಂದು, ಶಾಖ ನೀಡಿ ಕಾಯಿಸಿದಾಗ ತುಪ್ಪದ ಕಂಪು ಹೊರ ಸೂಸುತ್ತದೆ.  ಅಂತೆಯೇ ಆತ್ಮ ಶರೀರದ ಇಂಥದ್ದೇ ಭಾಗದಲ್ಲಿದೆ ಎಂಬುದನ್ನು ಹೇಳಲಿಕ್ಕಾಗುವುದಿಲ್ಲ.  ಇಂದಿಗೂ ಇದು ಯಕ್ಷಪ್ರಶ್ನೆಯಾಗಿದೆ.  ಅದನ್ನು ಯಾರಿಗೂ ಕಾಣದಂತಿರಿಸಿ ನೀ ತೋರಿದ ಭೇದಕ್ಕೆ ಬೆರಗಾದೆನೆಂದು ದಾಸಿಮಯ್ಯ ತಮ್ಮ ಆರಾಧ್ಯ ರಾಮನಾಥನಲ್ಲಿ ಕೇಳುತ್ತಾರೆ.
ಮುಂದುವರೆದು ಸಂಸಾರವೆಂದಿಗೂ ಹೇಯವಲ್ಲ ‘ಸತಿ ಪತಿಗಳೊಂದಾದ  ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಸತಿ ಪತಿಗಳೊಂದಾಗದ ಭಕ್ತಿ ಅಮೃತದೊಳು ವಿಷಬೆರೆಸಿದಂತೆ ಎಂದು ಖಚಿತವಾಗಿ ನಂಬಿ ಅಂತಹ ಸಂಸಾರದಿಂದ  ಸದ್ಗತಿಯೆಂದು ಸಾಧಿಸಿ ತೋರಿದ ಮಹನೀಯ, ತನ್ನಂತೆಯೇ ಮಡದಿ ‘ದುಗ್ಗಳೆ’ಯನ್ನು ಶರಣತೆಯೆಡೆಗೆ  ಮುಖಮಾಡಿಸಿ ಸಾಧನೆಯ ಶಿಖರವೇರಿಸಿದರು ದಾಸಿಮಯ್ಯನವರು.  ಇವರೀರ್ವರು ನೇಯ್ಗೆ ಕಾಯಕದಲ್ಲಿ ತೊಡಗಿ ಅದರಿಂದ ಜಂಗಮದಾಸೋಹಗೈದು.  ನಂತರ ಬಂದ ಅಲ್ಲಮ, ಬಸವಣ್ಣ, ಮಹಾದೇವಿ, ನಾಗಮ್ಮ, ಸಿದ್ಧರಾಮ ಮುಂತಾದ ಶರಣರಿಗೆ ಮಾದರಿಯಾದರು.  ಹೀಗಾಗಿ ಅಲ್ಲಿನ ಜನಸಮೂಹಕ್ಕೆ ಇವರು ಜೀವಂತ ದೇವರಾದರು.  ದುಗ್ಗಳೆಯು ಸದಾಚಾರ ಸಂಪನ್ನೆಯಾಗಿ ಪತಿಗೆ ಅನುಕೂಲೆಯಾಗಿ ಪತಿಯ ಸರ್ವಕಾರ್ಯಕ್ಕೂ ಆಸರೆಯಾಗಿ ನಿಂತಳು.  ಇದರ ಪ್ರತಿಫಲವಾಗಿಯೇ ದಾಸಿಮಯ್ಯನವರು ಹೆಚ್ಚೆಚ್ಚು ವಚನ ಬರೆಯುತ್ತಾ, ಮಾನವೀಯ ನೆಲೆಯಲ್ಲಿ ಕಾಯಕ, ದಾಸೋಹಗೈಯುತ್ತಾ ಸಾಗಿದರು.
ಒಡಲುಗೊಂಡವ ಹಸಿವ |
ಒಡಲುಗೊಂಡವ ಹುಸಿವ |
ಒಡಲುಗೊಂಡವನೆಂದು ನೀವೆನ್ನ
ಜರಿದೊಮ್ಮೆ ನುಡಿಯದಿರಾ |
ನೀನೆನ್ನಂತೆ  ಒಮ್ಮೆ
ಒಡಲುಗೊಂಡು ನೋಡಾ ರಾಮನಾಥ |
ಪ್ರಸ್ತುತ ವಚನದಲ್ಲಿ ದಾಸಿಮಯ್ಯ ಹಸಿವಿನ ಚಿತ್ರಣವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.  ಉದರವನ್ನು ಹೊಂದಿದವನಿಗೆ ಹಸಿವು ಸಾಮಾನ್ಯವಾದುದು ಹಾಗೆಯೇ, ಅನಿವಾರ್ಯವೂ ಕೂಡ.  ಈ ಒಡಲುರಿಯ ನೀಗಿಸಿಕೊಳ್ಳಲು ಒಮ್ಮೊಮ್ಮೆ ಹುಸಿ ನುಡಿಯುವುದುಂಟು.  ಅಂತಹ ಪ್ರಸಂಗಗಳು ಬರಬಹುದು.  ನಂತರ ಆ ಹುಸಿ ನುಡಿಯ ಪಾಪ ಪ್ರಜ್ಞೆ ಅವನಿಗೆ ಕಾಡಲೂಬಹುದು.  ಅಷ್ಟಕ್ಕೆ ಅಂತಹವರನ್ನು ಜರಿದು ಅವಮಾನ ಮಾಡಬಹುದೇ? ಹಸಿವೆಯಿಂದ ಅನುಭವಿಸಬಹುದಾದ ಯಾತನೆಯನ್ನು ನೀನೇನು ಬಲ್ಲೆ, ನಿನಗೆ ಅದು ಅರಿವಾಗಬೇಕಾದರೆ ನನ್ನಂತೆ ನೀನು ಒಮ್ಮೆ ಹಸಿದು ನೋಡು ರಾಮನಾಥ ಎಂದು ಕೇಳುವಲ್ಲಿ ಹಸಿವಿನ ಅಳಲು ಮಾರ್ಧನಿಸಿದೆ.
ಈ ಜಗತ್ತಿನ ಸಮಸ್ತ ಜೀವರಾಶಿಗಳೆಲ್ಲವೂ ಲಿಂಗಮಯವೇ.  ಲಿಂಗವು ದೇಹದ  ಸಂಬಂಧವನ್ನು ಕಳೆದುಕೊಂಡಾಗ ಆ ದೇಹವು ಭಂಗವಾಗುತ್ತದೆ.  ಲಿಂಗವೆಂದರೆ ಅದೇ ಜಂಗಮ ಚೇತನ, ಮಾನವೀಯತೆಯ ನೆಲೆಗಟ್ಟು, ಸಮಾನತೆಯ ಸ್ತೂಪ.  ಈ ತತ್ತ್ವದ ಆಧಾರದ ಪ್ರಕಾರ ಸಮಸ್ತ ಜೀವರಾಶಿಗಳೆಲ್ಲ ಲಿಂಗವಂತವೇ, ಜಂಗಮವಂತವೇ  ಆಗುತ್ತವೆ ಎಂಬ ಆದರ್ಶದಡಿ ತಮ್ಮ ಕಾಯಕದ ಹೊನಲನ್ನು ಹರಿಸಿದ ದಾಸಿಮಯ್ಯನವರು ದೇವರು ಸರ್ವಾಂತರ್ಯಾಮಿ ಎಂದು ಹೆಣ್ಣಿರಲಿ, ಗಂಡಿರಲಿ ಒಳಗಿರುವ  ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲವೆಂದು ಹೇಳಿ ವಚನ ಸಾಹಿತ್ಯಕ್ಕೆ ಅಡಿಪಾಯಹಾಕಿ ಶರಣ ಸಂತತಿಗೆ ಆದಿಯಾಗಿ, ವರ್ಣಾಶ್ರಮಕ್ಕೆ ಅಂತ್ಯ ಹಾಡಿದ ಮಹಾನುಭಾವ ಜೇಡರ ದಾಸಿಮಯ್ಯನವರು ದೈವತ್ವದ ನೆಲೆಕಂಡು ದೇವರ ದಾಸಿಮಯ್ಯನಾದರು.

ಕೊಟ್ರೇಶ್ ಎಸ್.ಉಪ್ಪಾರ್
ಲೇಖಕರು
ತೇಜೂರು ರಸ್ತೆ, ಶಾಂತಿನಗರ, ಹಾಸನ
ಮೊ-9483470794, 9739878197


ಬುದ್ಧ, ಬಸವರ ಕುಂಚಗಳಲ್ಲರಳಿದ ಅಂಬೇಡ್ಕರರು




ಉರುಳುವವು ಗಳಿಗೆಗಳು
ಹೊರಳುವವು ದಿವಸಗಳು
ತುದಿ ಮೊದಲಿರದನಂತತೆಯ ಮರೆಗೆ
ಇಂದುಗಳು, ನಾಳೆಗಳು
ಹಿಂದೆ ಹಿಂದೋಡುವವು
ಎಣಿಕೆಗಳ ನೆನಹುಗಳ ಮರೆಸÀುತ್ತ ಹಿಂದೆ.

ಕವಿಯೋರ್ವರ ಮಾತುಗಳು ಕಾಲ ಗತಿಸುವ ರೀತಿಯನ್ನು ಬಹಳ ಸೊಗಸಾಗಿ ಚಿತ್ರಿಸಿವೆ. ಕಾಲಕಾಲಕ್ಕೆ ಸ್ಮರಣೀಯ ಪುರುಷರ ಅವತಾರವಾಗುತ್ತದೆ ಎಂಬುದಕ್ಕೆ ಈ ಮೇಲಿನ ಮೂವರ ಮಹಾನಾಮಾಂಕಿತಗಳೇ ಸಾಕ್ಷಿ ! ‘ನಿರ್ಮಲ ಕರ್ಮವದು ಸದ್ಗತಿಗೆ ಸಾಧನೆ ನೋಡಾ’ ಎಂಬಂತೆ ಆಸೆಯೇ ದುಃಖಕ್ಕೆ ಮೂಲವೆಂದು ಅರಿತು, ಪಾಲಿಸಿ, ಆದರ್ಶವಾಗಿ, ಬೋಧಿಸಿದವರು ಭಗವಾನ್ ಬುದ್ಧ. ಅವರೇ ಒಂದು ಕಡೆ ಹೇಳಿರುವಂತೆ ಸತ್ಯ, ಸೂರ್ಯ ಮತ್ತು ಚಂದ್ರರನ್ನು ಬಚ್ಚಿಡಲಾಗುವುದಿಲ್ಲ. ಈತನು ಸರಳತೆ, ತ್ಯಾಗ, ಪ್ರಾಮಾಣಿಕತೆ, ಪ್ರೇಮ ಮತ್ತು ಕಾರುಣ್ಯದ ಸಾಕಾರಮೂರ್ತಿಯಾಗಿದ್ದನು. ತನ್ನ ಆಕರ್ಷಕ ವ್ಯಕ್ತಿತ್ವ ಮತ್ತು ಕೃಪಾಪೂರ್ಣ ಮಂದಹಾಸದಿಂದ ಎಂತಹ ವ್ಯಕ್ತಿಯ ಹೃದಯವನ್ನಾದರೂ ಗೆದ್ದುಕೊಳ್ಳುತ್ತಿದ್ದನು. ಏಷ್ಯಾದ ಜ್ಞಾನದ ಬೆಳಕು ಎಂದು ಕರೆಯಲ್ಪಡುವ ಈತನ ಬಗ್ಗೆ ಶ್ರೀಮತಿ ರಿಸ್ ಡೇವಿಡ್ಸ್ ಹೀಗೆ ಹೇಳಿದ್ದಾರೆ - “ಬುದ್ಧನು ಘನ ವ್ಯಕ್ತಿತ್ವದಿಂದ ಜನಮನವನ್ನು ಗೆದ್ದು, ತನ್ನ ಸರಳ ಧರ್ಮವನ್ನು ಪ್ರಸಾರಮಾಡಿ ಜನಪ್ರಿಯಗೊಳಿಸಿದನು.” 
ಬುದ್ಧನು ಪರಿಶುದ್ಧವಾದ ಸರಳ ಜೀವನಕ್ಕೆ ಮಹತ್ವ ಕಲ್ಪಿಸಿದನು. ಈತನು ತೋರಿದ ಅಷ್ಠಾಂಗ ಮಾರ್ಗವು ಅತಿಶಯವಾದ ಭೋಗ ಮತ್ತು ಕಠೋರವಾದ ದೇಹದಂಡನೆಯ ಅತಿರೇಕಗಳನ್ನು ತ್ಯಜಿಸಿದ ಮಧ್ಯಮ ಮಾರ್ಗವಾಗಿತ್ತು. ಬುದ್ಧನು ಬೋಧಿಸಿದ ಸಮಾನತೆಯ ತತ್ವಜ್ಞಾನವಾಗಲೀ, ದುಂದುವೆಚ್ಚದ  ಯಜ್ಞಯಾಗಾದಿ ಮತಾಚರಣೆಗಳಾಗಲೀ, ಮೇಲು-ಕೀಳೆಂಬ ಭಾವನೆಗಳನ್ನು ಪ್ರಚೋದಿಸುವ ಜಾತಿ ಭೇದಗಳಾಗಲೀ, ಜನತೆಯನ್ನು ಶೋಷಣೆಗೆ ಗುರಿಪಡಿಸುವ ಉನ್ನತ ವರ್ಗವಾಗಲೀ ಇರಲಿಲ್ಲ. ಬುದ್ಧನು ಬೋಧಿಸಿದ ಧರ್ಮದಲ್ಲಿ ಸ್ವ-ಪ್ರಯತ್ನದಿಂದ ಸರಳ ಹಾಗೂ ಪರಿಶುದ್ಧ ಜೀವನ ನಡೆಸಿ ಜನನ, ಮರಣ ಚಕ್ರದಿಂದ ಪಾರಾಗಲು ಸರ್ವರಿಗೂ ಅವಕಾಶವಿತ್ತು, ಜನಭಾಷೆಯಲ್ಲಿ ಬೋಧಿಸಲ್ಪಟ್ಟ ಕಾರಣ ಈ ಸರಳ ಧರ್ಮವು ಸಮುದಾಯದ ಮನಗೆದ್ದಿತು.  
ಆದ್ದರಿಂದ ಬುದ್ಧ ಅಂಬೇಡ್ಕರ್‍ರವರ ಮೇಲೆ ಪ್ರಭಾವಿಸಿದ್ದು, ಮುಂದೆ ಹನ್ನೆರಡನೇ ಶತಮಾನದಲ್ಲಿ ಮಹಾಮಾನವ ಚೇತನವಾಗಿ ಬಂದ ಬಸವಣ್ಣನವರು ವಿಶ್ವ ಕಂಡ ಬೆರಳೆಣಿಕೆಯ ಕ್ರಾಂತಿಪುರುಷರಲ್ಲೊಬ್ಬರು. ನಾಡಿನ ನೋವಿಗೆ ಜಾತೀಯತೆ, ಅಸ್ಪøಶ್ಯತೆ, ಅಸಮಾನತೆ, ಬಹುದೇವತಾ ಪೂಜೆ ಮುಂತಾದವುಗಳೇ ಕಾರಣವೆಂದರಿತು ಈ ಶಾಪವನ್ನು ವಿಮೋಚನೆಗೈದು ಸಮಾಜವನ್ನು ಸ್ಥಿತಿಪ್ರಜ್ಞವಾಗಿ ಮಾಡುವಲ್ಲಿ ಅವಿರತವಾಗಿ ದುಡಿದವರು. 
ಇವನಾರವ ? ಇವನಾರವ ? ಇವನಾರವ ? ಎಂದೆನಿಸದಿರಯ್ಯಾ ?
ಇವನಮ್ಮವ, ಇವನಮ್ಮವ, ಇವನಮ್ಮವ, ಎಂದೆನಿಸಯ್ಯಾ
ಕೂಡಲ ಸಂಗನ ಶರಣರ ಮನೆಯ ಮಗನೆಂದೆನಿಸಯ್ಯಾ ?
ಜಾಗತಿಕವಾಗಿ ಸರ್ವಧರ್ಮಗಳ ಸಾರದಂತಿರುವ, ಪ್ರಾಪಂಚಿಕ ಇತಿಹಾಸದಲ್ಲಿ ಮಾನವೀಯ ಸೆಲೆಯಲ್ಲಿ ಪಡಿಮೂಡಿಬಂದ ಈ ವಚನವು ಮಹೋನ್ನತವಾದ ಸ್ಥಾನವನ್ನು ಪಡೆದಿದೆ. ‘ಕಿರಿದರೋಳ್ ಪಿರಿದರ್ಥ’ ಎಂಬಂತೆ ಕೇವಲ ಮೂರೇ ಸಾಲಾದರೂ ‘ಮಾನವ ಕುಲಂ ತಾನೊಂದೇ ವಲಂ’ ಎಂಬುವಂತೆ ವಿಶ್ವ ಬ್ರಾತೃತ್ವವನ್ನು ಸಾರುತ್ತದೆ. ದೀನ, ದಲಿತ, ಹಿಂದುಳಿದ, ಶೋಷಿತರ ಏಳ್ಗೆಗಾಗಿ ಇಡೀ ಬದುಕನ್ನೇ ಮುಡಿಪಾಗಿಟ್ಟು ಪ್ರಯತ್ನಿಸಿದ ರೀತಿ ಅತ್ಯಮೋಘವಾದುದು. ಇಂತಹುದೇ ದೃಷ್ಟಿಕೋನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರೂ ಹೊಂದಿದ್ದರು. ಅಂತ್ಯಜರು ಕಡೆಗಣಿಸಲ್ಪಡದೆ ಇತರರಂತೆ ಅವರೂ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಲ್ಪಡಬೇಕು ಎಂಬಾಶಯ ಹೊಂದಿದ್ದರು.
ಬಸವಣ್ಣನವರು ಅತ್ಯಂತ ಮೇಲ್ವರ್ಗವಾದ ಶೈವ ಬ್ರಾಹ್ಮಣರಾದರೆ, ಬಾಬಾ ಸಾಹೇವರು ಸಮಾಜದಲ್ಲಿ ಅತ್ಯಂತ ಕೀಳುಜಾತಿ ಎನಿಸಿದ ‘ಮಹರ್’ ನಲ್ಲಿ ಜನಿಸಿದವರು, ಆದರೆ ಇವರೀರ್ವರೂ ಬುದ್ಧನ ತತ್ವ ನೀತಿ ಬೋಧೆಯ ಮಾರ್ಗದಲ್ಲಿ ಅನುಸರಿಸಿ ಮಹಾಮಾನವತಾವಾದಿಗಳಾದರು.
ಕಳಬೇಡ, ಕೊಲಬೇಡ, ಹುಸಿಯ ನÀುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ ! ಇದೇ ಬಹಿರಂಗ ಶುದ್ಧಿ !
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ !
ಮನುಷ್ಯ ಶಾಶ್ವತ ಸುಖದೆಡೆಗೆ ಸಾಗಬೇಕಾದರೆ ಬುದ್ಧ ಅಷ್ಟಾಂಗ ಮಾರ್ಗಗಳನ್ನು ಬೋಧಿಸದರೆ, ಬಸವಣ್ಣನವರು ಈ ಮೇಲಿನ ವಚನದಲ್ಲಿ ಪರಿಪೂರ್ಣ ಮಾನವನಾಗಲು ಸಪ್ತ ಸೂಚಕಗಳನ್ನು ನೀಡಿದ್ದಾರೆ. ಅಂತೆಯೇ ಸಮಾನತೆಗೆ ಬಸವಣ್ಣನವರು ಸ್ಥಾಪಿಸಿದ  ಅನುಭವ ಮಂಟಪವೇ ಅತ್ಯುತ್ತಮ ನಿದರ್ಶನವಾಗಿದೆ. ಇಲ್ಲಿ ಸಮಾಜದ ಪ್ರತಿಯೊಂದು ಸ್ಥರದ ಶರಣ ಶರಣೆಯರು ಇದ್ದರು. ಜೇಡರ ದಾಸಿಮಯ್ಯ, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯನುಲಿಯ ಚೆಂದಯ್ಯ, ಅಲ್ಲಮಪ್ರಭು, ಮಡಿಮಾಳ ಮಾಚಯ್ಯ, ಅಕ್ಕ ಮಹಾದೇವಿ, ಡೋಹರ ಕಕ್ಕಯ್ಯ, ಒಕ್ಕಲಿಗರ ಮುದ್ದಣ್ಣ, ದುಗ್ಗಳೆ, ಗಂಗಾಂಬಿಕೆ, ನೀಲಾಂಬಿಕೆ, ಗೊಗ್ಗೆವ್ವೆ, ಸೂಳೆ ಸಂಕವ್ವೆ, ಅಕ್ಕನಾಗಮ್ಮ, ಸಕಲೇಶ ಮಾದರಸ, ಕಾಡಸಿದ್ದೇಶ್ವರ, ಆಯ್ದಕ್ಕಿ ಮಾರಯ್ಯ, ಆಯ್ದಕ್ಕಿ ಲಕ್ಕಮ್ಮ, ಬೊಂತಾದೇವಿ, ಸಿದ್ದಾರಾಮ, ಚೆನ್ನಬಸವಣ್ಣ, ಕಿನ್ನರಿ ಬೊಮ್ಮಣ್ಣ, ಸತ್ಯಕ್ಕ, ಕೊಟ್ಟಣದ ಸೋಮವ್ವೆ, ಮೋಳಿಗೆ ಮಾರಯ್ಯ, ಹರಳಯ್ಯ, ಉಪ್ಪಾರ ಚಿಕ್ಕಣ್ಣ, ಉಪ್ಪಾರ ವೀರಣ್ಣ, ವೀರಗಾರ ವೀರಣ್ಣ ಹೀಗೆ ಜಾತ್ಯಾತೀತವಾಗಿ ಎಲ್ಲರಿಗೂ ಸಮಾನತೆ, ನ್ಯಾಯ, ಸ್ವತಂತ್ರ್ಯತೆಗಳು ಲಭಿಸಿದ್ದವು. ಈ ಪರಿಕಲ್ಪನೆಯೇ ಅಂಬೇಡ್ಕರರ ಮನದ ಮೂಸೆಯಲ್ಲಿ ಮೊಳೆತು ಸ್ವತಂತ್ರ್ಯಭಾರತದ ಸಂವಿಧಾನದಡಿಯ ಮೀಸಲಾತಿ ಸಂಸತ್ತಾಗಿ ರೂಪುತಾಳಿತು. ಜಾತ್ಯಾತೀತ, ಭಾಷಾತೀತ, ಧರ್ಮಾತೀತ ಸಮಾಜ ನಿರ್ಮಾಣಕ್ಕಾಗಿ ಅನೇಕ ಕಾನೂನು, ಕಟ್ಟಲೆ, ನಿಬಂಧನೆಗಳು ಜಾರಿಯಾದವು. ಅನೇಕ ಕಷ್ಟ ಕೋಟಲೆಗಳನ್ನು ಅನುಭವಿಸಿ, ಮೆಟ್ಟಿ ಹೊರಬಂದಿದ್ದ ಬಾಬಾ ಸಾಹೇಬರು ಬುದ್ಧ ಹಾಗೂ ಬಸವ ತತ್ವಗಳನ್ನು ಅಕ್ಷರಶಃ ಕಾನೂನುಗಳಾಗಿ ಮಾರ್ಪಡಿಸಿ ದಮನಿತರ, ಶೋಷಿತರ, ಅಸ್ಪøಶ್ಯರ ಬಾಳಿಗೆ ಬೆಳಕಾದರು.
ಒಮ್ಮೆ ಬಾಬಾ ಸಾಹೇಬ್ ಅಂಬೇಡ್ಕರರು ತಮ್ಮ ಪತ್ನಿ ರಮಾಬಾಯಿಯವರೊಡನೆ ಮರಾಠಿ ನಾಟಕವನ್ನು ವೀಕ್ಷಿಸಲು ಹೋಗಿದ್ದರು. ಆ ನಾಟಕ ಅಸ್ಪøಶ್ಯತೆ ಕುರಿತದ್ದಾಗಿತ್ತು. ಅಸ್ಪøಶ್ಯದ ಪಾತ್ರ ವಹಿಸಿದ್ದ ವ್ಯಕ್ತಿ ನಾಟಕದ ಸಲುವಾಗಿ ಸೊಂಟಕ್ಕೆ ಪೊರಕೆಯನ್ನು ಕುತ್ತಿಗೆಗೆ ತೆಂಗಿನ ಕರಟವನ್ನು ಕಟ್ಟಿಕೊಳ್ಳಬೇಕಾಗಿತ್ತು. ಅದು ಅಸ್ಪøಶ್ಯತೆಯ ಹೀನಾಯ ಸ್ಥಿತಿಯನ್ನು ಬಿಂಬಿಸುವುದಾಗಿತ್ತು. ಆದರೆ ನಾಟಕದಲ್ಲಿನ ಪಾತ್ರದಾರಿ ಆ ವೇಷವನ್ನು ಹಾಕಿಕೊಳ್ಳಲು ಒಪ್ಪಲಿಲ್ಲ. ಕೊನೆಗೆ ಅಲ್ಲಿನ ದೃಶ್ಯವನ್ನು ಬೇರೆಯದೇ ರೀತಿ ಮಾರ್ಪಡಿಸಿ ನಾಟಕವನ್ನು ಮುಗಿಸಿದರು. ನಾಟಕವಾದ ನಂತರ ಬಾಬಾ ಸಾಹೇಬರು ಮುಖ್ಯ ಅತಿಥಿಯಾಗಿ ಮಾತನಾಡುವಾಗ “ಕೇವಲ ವೇಷ ಹಾಕುವುದರಿಂದಲೇ ಅವಮಾನ ಎಂದು ಭಾವಿಸಿದ ಈ ನಟ. ಆದರೆ ಶತ ಶತಮಾನಗಳಿಂದ ನಿಜವಾಗಿಯೂ ಅದೇ ರೀತಿ ಬದುಕುತ್ತಿದ್ದಾರಲ್ಲ ನನ್ನ ಜನ ಅವರಿಗೆ ಈ ಹೀನ ಬದುಕಿನ ಪರಿಣಾಮ ಯಾವಾಗ ಅರಿವಾಗುತ್ತದೆ ಎಂದು ಹೇಳುತ್ತಾ ಕಣ್ಣೊರಿಸಿಕೊಂಡರು.
ಮನೆಗೆ ಕಾರಿನಲ್ಲಿ ಬರುವಾಗ ಪತ್ನಿ ರಮಾಬಾಯಿ ಅಳುತ್ತಿರುವುದನ್ನು ಕಂಡು ಬಾಬಾ ಸಾಹೇಬರು ತಾವೇ ಪತ್ನಿಯ ಕಣ್ಣೊರಿಸಿ ನನ್ನ ಜನಾಂಗದ ಸಮಸ್ಯೆಗಳನ್ನು ನಿನಗೆ ತಿಳಿಸುವ ಸಲುವಾಗಿ ನಾಟಕಕ್ಕೆ ಕರೆದುತಂದೆ ಎಂದಾಗ ರಮಾದೇವಿ “ರಾಮು ನಿನ್ನ ಪಕ್ಕ ನಾನು ಈಗ ಹೇಗಿರುವೆನೋ ಹಾಗೆಯೇ ನನ್ನ ಜನಾಂಗವೂ ಇರಬೇಕು. ಬದುಕಬೇಕೆಂಬುದು ನನ್ನ ಆಸೆ” ಎಂದು ಹೇಳುತ್ತಾ ತಾವೂ ಕಣ್ಣೊರಿಸಿಕೊಂಡರು. 
ಹೀಗೆ ಅಂಬೇಡ್ಕರರು ಎಲ್ಲ ಪ್ರತಿರೋಧಗಳನ್ನು ಎದುರಿಸಿ, ತಮ್ಮ ಅಗಾಧ ಜ್ಞಾನ ದಾಹದಿಂದ ಅಮೇರಿಕಾ, ಲಂಡನ್‍ನಲ್ಲಿ ಉನ್ನತ ವ್ಯಾಸಂಗ ಮಾಡಿ ಅತ್ಯುನ್ನತ ಅಧಿಕಾರಗಳನ್ನು ಪಡೆಯುತ್ತಾರೆ. ಎಷ್ಟೆಲ್ಲಾ ರೀತಿಯ ನೋವು, ಅವಮಾನಗಳಿಂದ ವಿಚಲಿತರಾಗದೆ ದಲಿತರ ಸ್ವಾತಂತ್ರ್ಯಕ್ಕಾಗಿ, ಏಳ್ಗೆಗಾಗಿ, ಉದ್ಧಾರಕ್ಕಾಗಿ, ಅವರ ಉನ್ನತಿಗಾಗಿ ಹಗಲಿರುಳು ಶ್ರಮಿಸಿ ಕಾರ್ಯೋನ್ಮುಖರಾಗುತ್ತಾರೆ. ದೇಶದ ಕಲ್ಯಾಣಕ್ಕಾಗಿ ಪಣ ತೊಡುತ್ತಾರೆ. ತನ್ಮೂಲಕ ಬಸವಣ್ಣನಂತೆ ಇವರೂ ಕಲ್ಯಾಣ ಕ್ರಾಂತಿ ಮಾಡುತ್ತಾರೆ.
ಬಸವಣ್ಣನವರ ಜೀವನದಲ್ಲಿ ತಮ್ಮ ಗುರುಗಳಾದ ಜಾತವೇದಮುನಿಗಳು ಹಾಗೆಯೇ ಪತ್ನಿಯರಾದ ಗಂಗಾಂಬಿಕೆ ಮತ್ತು ನೀಲಾಂಬಿಕೆಯರು ಪ್ರಧಾನ ಪಾತ್ರ ವಹಿಸಿದಂತೆ ಬಾಬಾ ಸಾಹೇಬ್ ಅಂಬೇಡ್ಕರರ ಜೀವನದಲ್ಲಿ  ತಂದೆ ರಾಮ್‍ಜಿ  ಸಕ್ಪಾಲ್ ಹಾಗೂ ಪತ್ನಿ ರಮಾಬಾಯಿಯವರು ಪ್ರಧಾನ ಪಾತ್ರ ವಹಿಸುತ್ತಾರೆ. ಬಸವಣ್ಣನವರು ಅನುಭವದ ಮಂಟಪ ಮುಖೇನ ತಮ್ಮ ವಚನಗಳನ್ನು ಅಸ್ತ್ರವಾಗಿ ಬಳಸಿಕೊಂಡು ಸಮಾಜದ ಜಾಡ್ಯತೆಯನ್ನು ಹೋಗಲಾಡಿಸಿದರೆ ಅಂತೆಯೇ ಅಂಬೇಡ್ಕರರು ಸಂವಿಧಾನದ ಮೂಲಕ ಕಾನೂನುಗಳನ್ನು ಅಸ್ತ್ರವಾಗಿ ಬಳಸಿಕೊಂಡು ದಲಿತ, ಅಸ್ಪøಶ್ಯರ, ದೀನರ, ಬಡವರ ಬಾಳಿಗೆ ಬೆಳಕಾಗುತ್ತಾರೆ.
ಅಂಬೇಡ್ಕರ್ ರವರು ಅಸಾಮಾನ್ಯ ಓದುಗ, ಅದ್ಭುತ ಭಾಷಣಕಾರ, ಲೇಖಕ, ಸಮರ್ಥ ಉಪನ್ಯಾಸಕ, ಕ್ರೀಡಾಭಿಮಾನಿ, ಅತ್ಯಂತ ‘ಖeಟigious’ ರಾಜನೀತಿಜ್ಞ, ತೀಕ್ಷ್ಣಮತಿ, ವಾತ್ಸಲ್ಯಮಯಿ, ತನ್ನ ಮೇಲೆ ತನಗೇನೇ ಅತ್ಯಂತ ಹೆಮ್ಮೆ, ಆತ್ಮ ವಿಶ್ವಾಸವಿದ್ದಂತಹ ವ್ಯಕ್ತಿ, ಬಹುಶಃ ಜಗತ್ತಿನ ಬೆರಳೆಣಿಕೆಯಷ್ಟು ವ್ಯಕ್ತಿಗಳಲ್ಲಿ ಇವರೊಬ್ಬರು.
ಬಾಬಾ ಸಾಹೇಬರು ತಮ್ಮ ಜೀವಿತ ಕಾಲದಲ್ಲಿ ಪ್ರತಿಯೊಂದು ಕ್ಷಣವನ್ನು ಉಪಯುಕ್ತವಾಗಿ ಸಾರ್ಥಕವಾಗಿ ವಿನಿಯೋಗಿಸಿಕೊಂಡ ಒಬ್ಬ ಅತ್ಯಂತ ಉತ್ಕøಷ್ಟ ವ್ಯಕ್ತಿ ಎಂದರೆ ತಪ್ಪಾಗಲಾರದು. ತಾವು ಕೈಗೊಂಡ ಕೆಲಸಗಳೆಲ್ಲವನ್ನು ಜಯಭೇರಿಯೊಡನೆಯೇ ಮುಗಿಸುತ್ತಿದ್ದುದ್ದು ಅವರಿಗೆ ಸದಾಕಾಲ ಶುಭಾಷಯಗಳ ಮಳೆಗರೆಯುತ್ತಿತ್ತು, ಆಗ ಯಾರಾದರೂ ಅಭಿನಂದನೆಗಳನ್ನು ಸಲ್ಲಿಸಲು ಬಂದರೆ  ಅವರು ಹೇಳುತ್ತಿದ್ದುದÀು ಏನು ಗೊತ್ತೇ ? ನಾನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಜಯವಾಗಲೇಬೇಕು. ನನಗೆ ಸೋಲು ಎನ್ನುವ ಮಾತೇ ಇಲ್ಲ. ನಾನು ಬಂದಂತಹ ವಂಶ ಎಂತದು ಎಂದು ಭಾವಿಸಿದ್ದೀರಿ ? ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. “ಆo ಥಿou ಞಟಿoತಿ iಟಿ ತಿhiಛಿh ಛಿಟಚಿಟಿ I beಟoಟಿg ಣo ? ಆo ಥಿou ಞಟಿoತಿ iಟಿ ತಿhiಛಿh ಛಿಟಚಿm I hಚಿve ಛಿome ಜಿಡಿom?” ಅಬ್ಬಾ ! ಎಂಥಾ ಆತ್ಮ ವಿಶ್ವಾಸ ಅಲ್ಲವೇ?
ಬಸವಣ್ಣನವರು ವೇದೋಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿ ವಚನಗಳ ಮೂಲಕ ಸಾರವನ್ನು ಕಟ್ಟಿಕೊಟ್ಟಂತೆ ಬಾಬಾ ಸಾಹೇಬರು ಆಳವಾದ ಅಧ್ಯಯನ ಹಾಗೂ ಪುಸ್ತಕ ಪ್ರೀತಿಯ ಅನ್ಯನ್ಯ ಬಂಧದಿಂದ  ಮಹಾನ್ ಜ್ಞಾನಿಯಾಗಿ ಸಂವಿಧಾನ ಶಿಲ್ಪಿಯಾದರು.
ಆo ಥಿou  ಞಟಿoತಿ ಚಿ ಠಿeಡಿsoಟಿ iಟಿ ಣhe shoಟe ? ಂsiಚಿ ಣhಚಿಣ ತಿho hಚಿs buiಟಣ ಚಿ buಟಿgಚಿಟoತಿ ಣo house his ಟibಡಿಚಿಡಿಥಿ ? ಒಚಿಡಿಞ iಣ, iಣ is ಆಡಿ. ಂmbeಜಞಚಿಡಿ.
ಇದು ಪುಸ್ತಕ ಪ್ರೇಮಿಯೊಬ್ಬರಿಗೆ ಸಂದ ಅತ್ಯುನ್ನತ ಪ್ರಶಂಸೆಯ ಮಾತುಗಳು ಪುಸ್ತುಕಗಳ ಬಗ್ಗೆ ಇದ್ದ ವ್ಯಾಮೋಹ ಇಷ್ಟರಮಟ್ಟದ್ದಾದರೆ, ಇನ್ನು ಓದಿನ ಗೀಳಿನ ಬಗ್ಗೆ ಬಾಬಾಸಾಹೇಬರನ್ನು ಅವರ ಸ್ನೇಹಿತರು ಸದಾ ಛೇಡಿಸುತ್ತಿದ್ದದು ಹೀಗೆ “ಎಲ್ಲರೂ ಒಂದು ಪುಸ್ತಕ ಮುಗಿದ ಮೇಲೆ ಮತ್ತೊಂದು ಪುಸ್ತಕ ಹಿಡಿದರೆ ನೀನು ಲೈಬ್ರರಿ ಲೈಬ್ರರಿಗಳನ್ನೇ ನುಂಗಿ ಹಾಕುತ್ತೀ” ಎಂದು. ಆದ್ದರಿಂದಲೇ ಅವರೊಬ್ಬ ಮೇಧಾವಿಯಾಗಿದ್ದು, ತತ್ವಜ್ಞಾನಿಯಾಗಿದ್ದು ಅಲ್ಲವೇ? 
ಬುದ್ಧ, ಬಸವ, ಅಂಬೇಡ್ಕರರು ಜಾತಿ ಬೇಡವೆಂದು ಇಡೀ ಬದುಕನ್ನು ಮಾನವೀಯತೆಗೆ ಮೀಸಲಿಟ್ಟು, ಕಲ್ಯಾಣ ಪ್ರಗತಿಯನ್ನು ಬಯಸಿ ವಿಶ್ವ ಮಾನವರೆನಿಸಿಕೊಂಡರು. ಈ ಮೂವರ ಕಾಲಘಟ್ಟಗಳು ಬೇರೆ ಬೇರೆಯಾದರೂ ಹಿಡಿದ ಗುರಿಯೊಂದೇಯಾಗಿತ್ತು. ತತ್ವವೊಂದೇಯಾಗಿತ್ತು. ದುರಂತವೆಂದರೆ ಕೆಲವರು ತಮ್ಮ ತಮ್ಮ ಜಾತಿಗಳಿಗಂಟಿಸಿಕೊಂಡು ಈ ಮಹಾನುಭಾವರನ್ನು ದಿವ್ಯ ಚೇತನಗಳನ್ನು, ಆದರ್ಶವ್ಯಕ್ತಿಗಳನ್ನು, ವಿಶ್ವ ಮಾನವರಾದವರನ್ನು ಅಲ್ಪಮಾನವರನ್ನಾಗಿಸುತ್ತಿರುವುದು ಬಹುದೊಡ್ಡ ದುರಂತ !
ವಿಶ್ವ ಪ್ರಜ್ವಲಿಪ ಹಣತೆಗಳೇ
ಜಾತಿ ಎಂಬ ಬತ್ತಿಗೆ ಬೆಂಕಿಯಿಟ್ಟು
ಸಮಾನತೆಯ ಬೆಳಗಿದ ಜ್ಯೋತಿಗಳೇ
ಜಗದ ಶ್ರೀಸಾಮಾನ್ಯರ ಹೃದಯ ಸ್ಥಂಭಗಳೇ
ಅನುಭಾವದಿ ಮನಬೆಳಗಿದ ದಿವ್ಯತೇಜಸ್ಸುಗಳೇ
ಮನದ ಕೊಳಕ ನೀಗಿ, ಜ್ಞಾನದ ಪುಳಕ ನೀಡಿದ
ಮಹಾ ಮಾನವತ ಪರಂಜ್ಯೋತಿಗಳೇ
ಕಾಯ, ವಾಚಾ, ಮನಸ ಆದರ್ಶವಾಗಿ ಬಾಳಿ
ಲಿಂಗತೆ ಮೆರೆದ ಲಿಂಗಮೂರ್ತಿಗಳೇ
ಕೆಳಸ್ತರಕ್ಕೆ ನೂಕಲ್ಪಟ್ಟವರೆದೆಯಲ್ಲಿ
ಅರಿವಿನಗರಬತ್ತಿಯ ಹಚ್ಚಿ ಬಡಿದೆಚ್ಚರಿಸಿದ 
ಮಾನವ ಕುಲದ ಹೊಂಬೆಳಕುಗಳೇ
ನಿಮಗಿದೋ ಶರಣು, ಶರಣು, ಶರಣು . . . .

ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ, 
ಹಾಸನ
ಮೊ. 9483470794, 9739878194

ಬಹುಮುಖ ಪ್ರತಿಭೆಯ ಕಲಾತ್ಮಕ ಶಿಕ್ಷಕಿ ಹಂತನಮನೆ ವೇದಾವತಿ


ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲುದು, ಇದು ಹಳೆಯ ಮಾತಾಯಿತು.  ಪ್ರಸ್ತುತ ಮಹಿಳೆಯು ಸರ್ವಾಂಗೀಣ ಕ್ಷೇತ್ರದಲ್ಲಿ ಐತಿಹಾಸಿಕ ಕುರುಹುಗಳನ್ನು ಒಡಮೂಡಿಸುತ್ತಿದ್ದಾಳೆ.  ‘ಧೈರ್ಯಂ ಸರ್ವತ್ರ ಸಾಧನಂ” ಎಂಬಂತೆ ತನ್ನ ಸುತ್ತ ಹೆಣೆದಿದ್ದ ಮೌಢ್ಯದ ಜಾಲವನ್ನು ಕಿತ್ತೆಸೆದು ಸಾಧನೆಯ ಅದೆಷ್ಟೋ ಮೈಲುಗಲ್ಲುಗಳನ್ನು ಧಾಟಿ ಯಶಸ್ವೀ ಬಾಳುವೆ ಸಾಗಿಸುತ್ತಿದ್ದಾಳೆ.  ಬೆರಳೆಣಿಕೆಯಷ್ಟಿದ್ದ ಇಂಥ ಸಾಧಕಿಯರ ಸಂಖ್ಯೆ ಸಹಸ್ರಾರು ದಾಟಿದೆ.
ಇಂತಹ ಸಾಲಿನಲ್ಲಿ ಆಲೂರಿನ ಎಚ್. ವೇದಾವತಿಯೂ ಒಬ್ಬರೆಂದರೆ ಅತಿಶಯೋಕ್ತಿಯಾಗಲಾರದು.  ಸಂಗೀತ, ರಂಗಭೂಮಿ, ಸಾಹಿತ್ಯ, ಹೀಗೆ ಹಲವಾರು ಪ್ರವೃತ್ತಿಗಳನ್ನು ಮೈಗೂಡಿಸಿಕೊಂಡು ಸಾಧನಾ ಶಿಖರವೇರಿ ಪ್ರವೃತ್ತಿಯಲ್ಲಿ ಆಲೂರು ತಾಲ್ಲೂಕಿನ ಮರಸು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆದರ್ಶ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆಲೂರು ತಾಲ್ಲೂಕಿನ ಹಂತನಮನೆ ಗ್ರಾಮದ ಶ್ರೀ ಹನುಮಯ್ಯ ಹಾಗೂ ಶ್ರೀಮತಿ ರಂಗಮ್ಮನವರ ಪುಣ್ಯ ಗರ್ಭಾಂಬುಧಿಯಲ್ಲಿ ಆರು ಜನ ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದರು.  ಮೂವರು ಸಹೋದರರು, ಇಬ್ಬರು ಸಹೋದರಿಯರನ್ನು ಹೊಂದಿದ ಇವರು ಚಿಕ್ಕ ವಯಸ್ಸಿನಿಂದಲೇ ಬಹುಮುಖ ಪ್ರತಿಭೆ.
ಮಹಿಳೆ ಹೊರಗಡೆ ಬರಲು ಹೆದರುವ, ಅಂಜುವ ಸಂದರ್ಭದಲ್ಲಿ ಧೈರ್ಯ, ಶ್ರದ್ಧೆ, ಏಕಾಗ್ರತೆ, ಸಾಮಾಜಿಕ ತುಡಿತ, ಕಲೆಯ ಆರಾಧನೆ, ಇವೆಲ್ಲವೂ ಇಂದು ಸಮಾಜದಲ್ಲಿ ಇವರಿಗೆ ಉತ್ತಮ ಸ್ಥಾನ ಹೊರಕಿಸಿಕೊಟ್ಟಿವೆ.  ತಾಯಿಯ ಕಂಠಸಿರಿಯನ್ನು  ಬಳುವಳಿಯಾಗಿ ಪಡೆದ ಇವರು ಜಾನಪದ, ಸೋಬಾನೆ ಪದ, ಭಾವಗೀತೆ, ಭಕ್ತಿಗೀತೆ, ಸಿನಿಮಾ ಹಾಡುಗಳು, ಶಿಶುಗೀತೆಗಳು, ಕ್ರಾಂತಿಗೀತೆಗಳು, ನಾಡಗೀತೆಗಳು ಹೀಗೆ ಹಲವಾರು ಪ್ರಕಾರದ ಹಾಡುಗಳನ್ನು ರಾಗ, ತಾಳ, ಲಯಬದ್ಧವಾಗಿ ಹಾಡುವ ಇವರು ಸ್ಥಳೀಯ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟಗಳಲ್ಲಿ ನೂರಾರುಕಾರ್ಯಕ್ರಮಗಳನ್ನು ನೀಡಿದ್ದಾರೆ.  ಇಪ್ಪತ್ತಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ಹಾಸನದ ಆಕಾಶವಾಣಿಯಲ್ಲಿ ನಡೆಸಿಕೊಟ್ಟಿದ್ದಾರೆ.  ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಜಾನಪದ ಗೀತೆಗಾಯನ ಹಾಗೂ ಜಾನಪದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ರಸಗ್ರಹಣ ಕಾರ್ಯಕ್ರಮ, ಜಾನಪದ ಗೀತಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.  ತನ್ನಂತೆಯೇ ಶಾಲಾ ಮಕ್ಕಳಿಗೂ ಸಂಗೀತ ಕಲಿಸಿ ಹಾಡುಗಾರಿಕೆಯಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟಗಳಲ್ಲಿ ಸ್ಪರ್ಧಿಸುವಂತೆ ಮಾಡಿದ ಕೀರ್ತಿ ಇವರದು.  ಅಷ್ಟೇ ಅಲ್ಲದೆ ವಚನಗಾಯನ, ತತ್ವಪದಗಳು, ಜೋಗುಳ ಹಾಡುಗಳು, ಹಲವಾರು ಪ್ರಕಾರದ ಹಾಡುಗಳನ್ನು ಇವರ ಸುಮಧುರ ಕಂಠ ಹಾಡಿದೆ. ಈ ಟಿವಿ ಹಾಗೂ ಉದಯ ದೂರದರ್ಶನ ಚಾನೆಲ್‍ಗಳಲ್ಲಿಯೂ ಹಾಡುಗಾರಿಕೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ರಂಗಗೀತೆಗಳನ್ನು ಹಾಡುವುದರ ಜೊತೆಗೆ ಹಲವಾರು ರಂಗಪ್ರಯೋಗಗಳಿಗೆ ತನ್ನ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.  ಭಾರತೀಯ ರಂಗಭೂಮಿ ವಿನಾಶದ ಅಂಚಿಗೆ ಸರಿಯುತ್ತಿದೆ ಎನ್ನುವ ಘಳಿಗೆಯಲ್ಲಿ ಅದರ ಉದ್ಧಾರಕ್ಕೆ ಟೊಂಕ ಕಟ್ಟಿ ನಿಂತ ಪ್ರತಿಭಾನ್ವಿತ ಕಲಾವಿದೆ ವೇದಾವತಿಯವರು.  ಇವರ ಅನೇಕ ಪಾತ್ರಗಳನ್ನು ನಾನು ನೋಡಿದ್ದೇನೆ.  ಅದರಲ್ಲಿಯೂ ಕುಂತಿ, ಚಾಮುಂಡಿ, ದೇವಿ, ಗಾಂಧಾರಿ, ಕಯಾದು, ಮುಂತಾದ ಪಾತ್ರಗಳಲ್ಲಿ ಇವರ ಕಲಾತ್ಮಕ ಅಭಿನಯ ಅಪೂರ್ವವಾದುದು.
ವೇದಾವತಿಯವರು ಸಂಗೀತ, ಕಲೆ, ರಂಗಭೂಮಿಗಷ್ಟೇ ಸೀಮಿತವಾಗದೇ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ.  ಅನೇಕ ಕವಿತೆಗಳನ್ನು ರಚಿಸಿದ ಇವರು ಸ್ಥಳೀಯ ಹಾಗೂ ತಾಲ್ಲೂಕು ಸಮ್ಮೇಳನಗಳ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ್ದಾರೆ.
ಸ್ಥಳೀಯ ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಚೇತನ ಬಳಗದಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಚಿಣ್ಣರ ಬೇಸಿಗೆ ಶಿಬಿರ, ವೈದ್ಯಕೀಯ ಶಿಬಿರಗಳು ಹೀಗೆ ಹಲವಾರು ಕಾರ್ಯಕ್ರಮಗಳ ಯಶಸ್ಸಿಗೆ ದುಡಿಯುತ್ತಾ ಸಮಾಜಸೇವಾ ಕ್ಷೇತ್ರದಲ್ಲಿಯೂ ಸಾಧನೆಯ ಮೈಲುಗಲ್ಲನ್ನು ನೆಟ್ಟಿದ್ದಾರೆ.  ಇವರ ಈ ಎಲ್ಲಾ ಸಾಧನೆಗೆ ಪತಿ ಶಿವಣ್ಣನವರ ಪ್ರೋತ್ಸಾಹ, ಪ್ರೇರಣೆಯೇ ಕಾರಣ.  ಇವರ ಈ ಎಲ್ಲಾ ಸಾಧನೆಗೆ ‘ಕರ್ನಾಟಕ ಧೃವತಾರೆ’, ರಾಜ್ಯ ಪ್ರಶಸ್ತಿ, ಉತ್ತಮ ಗಾಯಕಿ ಪ್ರಶಸ್ತಿ, ಹಾಸನ ಜಿಲ್ಲಾ ಶಿಕ್ಷಕ ರತ್ನ ಪ್ರಶಸ್ತಿ, ಮುಂತಾದ ಪ್ರಶಸ್ತಿಗಳು ಸಂದಿವೆ.  ಶಿಕ್ಷಣ ಕ್ಷೇತ್ರದಲ್ಲೊಂದು ಇಂತಹ ಬಹುಮುಖ ಪ್ರತಿಭೆಯಿರುವುದು ನಮ್ಮೆ ನಿಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.  ಇವರ ಪ್ರತಿಭೆ ಇನ್ನಷ್ಟು ಅರಳಿ ಜಗದ ಸೊಬಗನ್ನು ಹೆಚ್ಚಿಸಲಿ ಎಂದು ಆಶಿಸುತ್ತೇನೆ.
ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ, ಹಾಸನ.

ಅತಿರೇಕದ ಹೇಳಿಕೆ ನೀಡುವ ಅವಿವೇಕಿ ರಾಜಕಾರಣಿಗಳು!


ಯಾವುದೇ ಒಂದು ಪಕ್ಷಕ್ಕೆ ಮತದಾರ ತನ್ನ ಮತ ಹಾಕುವುದು ಅವನ ಸ್ವ 
ವಿವೇಚನೆಗೆ ಬಿಟ್ಟ ವಿಚಾರ. ನಮ್ಮದು ಪ್ರಜಾಪ್ರಭುತ್ವ ಹೊಂದಿದ ದೇಶ. ಇಲ್ಲಿ ಪ್ರತಿಯೊಬ್ಬರಿಗೂ ಸ್ವತಂತ್ರ್ಯತೆ ಇದೆ. ಆದರೆ ಕೆಲವು ರಾಜಕಾರಣಿಗಳ ಎಲುಬಿಲ್ಲದ ನಾಲಿಗೆಗಳಿಂದ ಬೇಕಾಬಿಟ್ಟಿಯಾಗಿ ಭಯೋತ್ಪಾದಕರನ್ನು ಮೀರಿಸುವಂತಹ, ಕೋಮುಗಲಭೆಗೆ ಕಿಚ್ಚೆಬ್ಬಿಸುವ ಬೇಜವಾಬ್ದಾರಿ ಹೇಳಿಕೆಗಳು ಹೊರಬೀಳುತ್ತಲೇ ಇವೆ. ಆದರೆ ಇದಕ್ಕೆ ನಿಯಂತ್ರಣ ಎಂಬ ಪಾಶ ಬೀಳುವುದು ಯಾವಾಗ?
ರಾಜಕಾರಣಿಗಳ ಮೆದುಳು-ಮನಸಲ್ಲಿ  ದೇಶಭಕ್ತಿ, ಭಾವೈಕ್ಯತೆ, ನೆಲೆಯೂರುವ ಬದಲು ಗೂಂಡಾಗಳಂತೆ ದೇಶದ್ರೋಹ, ಕೋಮುಗಲಭೆ, ಎಬ್ಬಿಸುವಂತಹ ಹಾಗೆಯೇ ಕತ್ತರಿಸಿ ಹಾಕುತ್ತೇನೆ. ಇಂಥವರು ಪ್ರಧಾನಿಯಾದರೆ ದೇಶಬಿಟ್ಟು ಹೋಗುತ್ತೇನೆ. ಎಂಬ ಕ್ರೂರ ಹೇಳಿಕೆಗಳು ಜನಸಾಮಾನ್ಯರ ನೆಮ್ಮದಿಗಳನ್ನು ಕೆಡಿಸುತ್ತಿವೆ.
ನಿಜಕ್ಕೂ ಹೇಳಬೇಕೆಂದರೆ ರಾಜಕಾರಣಿಗಳೇ ಭಾರತಕ್ಕಿಂದು ನಿಜವಾದ ಭಯೋತ್ಪಾದಕರಾಗಿದ್ದಾರೆ ಎಂದರೆ ತಪ್ಪಾಗಲಾರದೇನೋ, ಇಂತಹ ಅವಘಡಗಳಿಗೆ ಯಾವುದೇ ಪಕ್ಷ ಹೊರತಾಗಿಲ್ಲ! ನಿನ್ನೆ ಕೇಂದ್ರ ಸಚಿವ ಫಾರುಕ್ ಅಬ್ದುಲ್ಲಾ ‘ಮೋದಿಗೆ ಮತ ಹಾಕುವವರನ್ನು ಸಮುದ್ರಕ್ಕೆ ಎಸೆಯಬೇಕು’ ಎಂಬ ಜನಾಂಗೀಯ ಕಲಹ ಎಬ್ಬಿಸುವಂತಹ ಕ್ರೌರ್ಯ ಮಾತುಗಳನ್ನಾಡಿ ದೇಶದಾದ್ಯಂತ ಕೋಮುಗಲಭೆಗೆ ಪ್ರೇರೇಪಿಸಿದ್ದಾರೆ.
ಇಂಥವರಿಗೆ ಓಟು ಹಾಕಿ, ಇಂಥವರಿಗೆ ಬೇಡ ಅನ್ನಲಿಕ್ಕೆ ಇವರ್ಯಾರು? ಸಮುದ್ರಕ್ಕೆ ಎಸೆಯಲು ಇವನ್ಯಾರು? ಅದು ಪ್ರತಿ ಮತದಾರನ ವೈಯಕ್ತಿಕ ವಿವೇಚನೆ. ಇತ್ತ ವಿಶ್ವ ಹಿಂದೂ ಪರಿಷತ್ತಿನ ನಾಯಕ ಪ್ರವೀಣ್ ತೊಗಾಡಿಯ ನೀಡಿದ ಹೇಳಿಕೆಯೊಂದನ್ನು ಗಮನಿಸೋಣ ‘ಮೋದಿಗೆ ಮತ ಹಾಕದವರನ್ನು ಪಾಕಿಸ್ಥಾನಕ್ಕೆ ಅಟಿ’್ಟ ಇಡೀ ಭಾರತ ತೊಗಾಡಿಯ ಅಥವಾ ಫಾರುಖ್ ಅಬ್ದುಲ್ಲನಂಥವರ ಸ್ವಂತ ಸ್ವತ್ತೇ? ಬಾಬಾ ರಾಮ್‍ದೇವ್ ನೀಡಿದಂತಹ ದಲಿತ ವಿರೀದ ಹೇಳಿಕೆ ಈಗಾಗಲೇ ರಾಷ್ಟ್ರದಾದ್ಯಂತ ಚರ್ಚೆಯಾಗಿತಿದೆ. ಈ ಮೂರ್ಖರಿಗೆ ವಿಶಾಲ ಮನೋಭಾವವೇಕೆ ಮೂಡುತ್ತಿಲ್ಲ ನಿಜವಾಗಿಯೂ ಜನಸಾಮಾನ್ಯರ ನೆಮ್ಮದಿ ಕದಡಿ, ಕತ್ತಿ, ಚಾಕು, ಬಂದೂಕುಗಳನ್ನು ಕೊಟ್ಟು ರಕ್ತಹರಿಸಿ ತಾವು ಗದ್ದುಗೆಯಲಿ ಕೇಕೆ ಹಾಕುತ್ತಿರಬೇಕು ಎನ್ನುವ ನರಿಗುಣದ ರಾಜಕಾರಣಿಗಳೇ ಇಂದು ದೇಶಕ್ಕೆ  ನಿಜವಾದ ಶತೃಗಳು.
ನಿಂತ ನೀರಿನಲ್ಲಿ ಕಲ್ಲನೆಸೆದು ಸೇಡಿನ ಅಲೆಗಳನೆಬ್ಬಿಸಿ ಆಟವಾಡುವ ಇಂಥಹ ಕೆಲ ರಾಜಕಾರಣಿಗಳಿಗೆ ಬುದ್ಧಿ ಕಲಿಸುವರ್ಯಾರು? ನಮ್ಮ ಸಂವಿಧಾನದಲ್ಲಿ ಇಂಥವರಿಗೆ ಶಿಕ್ಷೆಯಿಲ್ಲವೇ? ಜನಸಾಮಾನ್ಯರ ಸಣ್ಣ ಪುಟ್ಟ ತಪ್ಪುಗಳಿಗೂ ದೊಡ್ಡ ದೊಡ್ಡ ಶಿಕ್ಷೆ ನೀಡುವ ನ್ಯಾಯಾಂಗ ಇಂತಹ ದೇಶದ್ರೋಹಿ ಹೇಳಿಕೆ ನೀಡುವವರಿಗೆ ಯಾಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ? ಇದು  ವಿಪರ್ಯಾಸವೇ ಸರಿ.
ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನನಿರಲಿ ಅಥವಾ ಪಾರ್ಸಿಯಿರಲಿ ಅವನು ಭಾರತದಲ್ಲಿ ವಾಸ ಮಾಡುತ್ತಿದ್ದನೆಂದರೆ. ಇಲ್ಲಿನ ಪ್ರಜಾಪ್ರಭುತ್ವ ಪಡೆದವನಾಗಿದ್ದರೆ ಅವನನ್ನೇಕೆ ಯಾವುದೇ ಒಂದು ಧರ್ಮ- ಜಾತಿಗೆ ಹೋಲಿಸುವುದು? ಅದರ ಬದಲಿಗೆ ಅವನೊಬ್ಬ ಭಾರತೀಯನೆಂದರಿತು, ಅವನಿಗೂ ತನ್ನದೇಯಾದ ಸ್ವತಂತ್ರ್ಯವಿದೆ ಎಂದು ಈ ಅವಿವೇಕಿಗಳಿಗೇಕೆ ಅರ್ಥವಾಗುತ್ತಿಲ್ಲ ತಿಳಿಯದು.
ರಾಷ್ಟ್ರೀಯ ಪಕ್ಷಗಳಿರಲಿ ಅಥವಾ ಸ್ಥಳೀಯ ಪಕ್ಷಗಳಿರಲಿ ಇನ್ನೊಬ್ಬರನ್ನು ಟೀಕಿಸುವ, ತೆಗಳುವುದರಲ್ಲೇ ಕಾಲಕಳೆಯುತ್ತಿವೆ. ತಾವು ಏನು ಮಾಡುತ್ತೇವೆ ಎನ್ನುವುದನ್ನು ಹೇಳುವ ಬದಲು ವಿರೋಧ ಪಕ್ಷದವರು ಏನು ಮಾಡಿದ್ದಾರೆ. ಅವರ ಹಗರಣಗಳ ಬಗೆಗೆ ಕೆದಕುವುದು, ಅವರು ಅಧಿಕಾರಕ್ಕೆ ಬಂದಾಗ ಇವರ ಹಗರಣಗಳ ಬಗೆಗೆ ಕೆದಕುವುದು. ಇವೇ ಇವರ ನಿತ್ಯದ ಕೆಲಸಗಳಾಗಿ ಹೋಗಿವೆ. ಆ ಧರ್ಮವನ್ನು ಬೈಯುವುದು, ಈ ಜಾತಿಯನ್ನು ಬೈಯುವುದು ಇದನ್ನೇ ದೊಡ್ಡ ಸುದ್ದಿಯಾಗಿಸಿ ಸದಾ ಸುದ್ದಿ ವಾಹಿನಿಗಳಲ್ಲಿ ಹರಿದಾಡ ಬಯಸುತ್ತಾರೆ. ನೂರು ಜನ ಭಯೋತ್ಪಾದಕರಿಗಿಂತ ಒಬ್ಬ ಕೋಮುವಾದಿ ರಾಜಕಾರಣಿ ದೇಶಕ್ಕೆ ಕಂಟಕವಾಗುತ್ತಾನೆ. ಅಂತೆಯೇ ದೇಶದಾದ್ಯಂತ ಅನೇಕ ರಾಜಕಾರಣಿಗಳು ತಮ್ಮ ನಾಲಿಗೆಗಳನ್ನು ಹದ್ದು ಬಸ್ತಿನಲ್ಲಿಟ್ಟುಕೊಳ್ಳದೇ ಬೇಕಾಬಿಟ್ಟಿ ಹರಿಯಬಿಟ್ಟು ಛೀ...ಥೂ... ಎಂದು ನಿತ್ಯ ಉಗುಳಿಸಿಕೊಳ್ಳತ್ತಿದ್ದಾರೆ. ಇದೊಂದು ವಿಪರ್ಯಾಸವೆನಿಸುತ್ತಿದೆ. ಇದಕ್ಕೆ ಇಡೀ ಸಮುದಾಯ ಎಚ್ಚೆತ್ತುಕೊಳ್ಳಬೇಕಾಗಿದೆ. ಪ್ರತಿಯೊಬ್ಬ ಪ್ರಜೆಯೂ ಚಿಂತಿಸಿ ಮುನ್ನಡೆಯಬೇಕಿದೆ.
ಕೊಟ್ರೇಶ್ ಎಸ್.ಉಪ್ಪಾರ್
ಹಾಸನ

ವಾತ್ಸಲ್ಯದ ಒಡಲು-ಅಮ್ಮ ಎಂಬ ಕಡಲು

ಮೇ 11 ರ ವಿಶ್ವ ಮಾತೆಯರ ದಿನಾಚರಣೆ ಅಂಗವಾಗಿ ಬರೆದ ಲೇಖನ

ವಿಶ್ವ ಮಾತೆಯರೇ ನಿಮಗಿದೋ ವಂದನೇ.....
ಪ್ರೇಮ, ಪ್ರೀತಿ, ಮಮತೆ, ವಾತ್ಸಲ್ಯ, ತ್ಯಾಗ, ಅನುರಾಗ, ಅಪ್ಯಾಯತೆಗೆ ಪ್ರತಿರೂಪವೇ ಅಮ್ಮಾ. . . ಒಂಬತ್ತು ತಿಂಗಳು ಹೊತ್ತು ಕರುಳ ಕುಡಿಗೆ ಜನ್ಮ ನೀಡುವುದೆಂದರೆ ಅದು ಎಂಥ ಸಾಹಸ ಎಂಬುದು ಗೊತ್ತಿದ್ದರೂ ಅದಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧವಾಗುವ ತ್ಯಾಗಮೂರ್ತಿ ಜನನಿ.
ಮನುಷ್ಯನಿಗೆ ಸ್ವಲ್ಪ ನೋವಾದರೂ ಅವನ ಬಾಯಿಂದ ಮೊದಲು ಹೊರಬರುವ ಮಾತೇ ‘ಅಮ್ಮಾ’. ತಾನು ಹೆತ್ತ ಮುದ್ದು ಮಗುವಿನಿಂದ ಬರುವ ಅಮ್ಮ ಎಂಬ ಕರೆಗಾಗಿಯೇ ಪ್ರತಿ ತಾಯಿಯೂ ಕಾತುರದಿಂದ ಕಾಯುತ್ತಿರುತ್ತಾಳೆ. ಆ ಒಂದು ಕರೆಯಿಂದ ಸಾವಿರ ಜನ್ಮಕ್ಕಾಗುವಷ್ಟು ಆನಂದಾನುಭೂತಿಯನ್ನು ತನ್ನದಾಗಿಸಿಕೊಳ್ಳುತ್ತಾಳೆ.
ಮಾತು ಬಾರದ ಹಸುಗೂಸಿಗೆ ಏನು ಬೇಕು ಎಂಬುದನ್ನು ಗ್ರಹಿಸಿ, ಅದನ್ನು ನೀಡುವ ಸಂದರ್ಭದಲ್ಲಿ ತಾಯಿ ಒಬ್ಬ ಮಾನಸಿಕ ತಜ್ಞಳಂತೆ ಕೆಲಸ ಮಾಡುತ್ತಾಳೆ. ಅಳುವ ಕಂದನ ತಲೆ ನೇವರಿಸುತ್ತಾ ಅಭಯ ಪ್ರದಾಯಿಣಿಯಾಗಿ ನೋವನ್ನು ಹೇಳಿಕೊಳ್ಳಲಾಗದ ಮಗುವಿನ ಸಂಕಟವನ್ನು ಅರ್ಥಮಾಡಿಕೊಂಡು ಅದನ್ನು ಪರಿಹರಿಸುವ ಒಬ್ಬ ವೈದ್ಯೆಯಾಗಿ, ಪಕ್ಕದ ಮನೆಯ ಮಗುವಿನೊಂದಿಗೆ ಕಿತ್ತಾಡಿಕೊಂಡು ಜಗಳವನ್ನು ಮನೆಬಾಗಿಲಿಗೆ ತಂದಾಗ ತನ್ನ ಮಗುವಿನ ಪರ ವಕಾಲತ್ತು ವಹಿಸುವ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸುವಳು ಅಮ್ಮ ಮಾತ್ರ. ಜೊತೆಗೆ ಮಗುವಿನ ತಪ್ಪು-ಸರಿಗಳ ಬಗ್ಗೆ ವಿಶ್ಲೇಷಿಸಿ ಸರಿದಾರಿಗೆ ತರುವ ಮಾರ್ಗದರ್ಶಕಿ.
ತನ್ನ ಮಗುವಿನ ಯಾವ ಅಪಾಯ ಒದಗದಂತೆ ಕಾಪಾಡುವ ಒಬ್ಬ ಸೈನಿಕಳಂತೆ, ಉಜ್ವಲ ಭವಿಷ್ಯವನ್ನು ತನ್ನ ಮಗುವಿಗೆ ದಯಪಾಲಿಸು ಎಂದು ದೇವರ ಬಳಿ ಮೊರೆಯಿಡುವವಳು ತಾಯಿ. ಪ್ರಪಂಚ ಜ್ಞಾನ ಬಂದ ತಕ್ಷಣದಿಂದ ಪ್ರಥಮ ಗುರುವಾಗಿ, ಪ್ರೀತಿ ವಾತ್ಸಲ್ಯವನ್ನು ಒಂದಾಗಿ ಬೆರೆಸಿ ಕೈ ತುತ್ತನ್ನು ತಿನ್ನಿಸುವವಳು ತಾಯಿ ಮಾತ್ರ. ಈ ಅಪೂರ್ವ ತಾಯಿ ಪ್ರೀತಿಯ ಭಾಗ್ಯ ಎಷ್ಟು ಜನರಿಗೆ ಸಿಗುತ್ತದೆ? ತಾಯಿಯ ಪ್ರೀತಿಯನ್ನೇ ಕಾಣದ ನಿರ್ಭಾಗ್ಯರೆಷ್ಟೋ ಮಂದಿ.
ನಮಗೆ ಜನ್ಮ ನೀಡುವುದರ ಜೊತೆಗೆ ಪ್ರೇಮಾನುರಾಗಗಳನ್ನು ಧಾರೆಯೆರೆಯುವ ಆ ತ್ಯಾಗಮೂರ್ತಿಗೆ ಋಣವನ್ನು ಯಾವುದರಿಂದ  ತೀರಿಸಲು ಸಾಧ್ಯ? ಅಂತಹ ಮಹೋನ್ನತ ಮಾತೃಪ್ರೇಮ ಮೂರ್ತಿಗೆ ಪ್ರತಿನಿತ್ಯ ಗೌರವಾಂಜಲಿ ನೀಡುವುದರ ಹೊರತಾಗಿ, ನಮ್ಮ ಕೈಯಿಂದ ಬೇರೇನು ನೀಡಲು ಸಾಧ್ಯ?
ಯೌವನಕ್ಕೆ ಕಾಲಿಟ್ಟಾಗ ಗೆಳತಿಯಾಗಿ, ಸಂಕಷ್ಠಕ್ಕೆ ಸಿಲುಕಿದಾಗ ಆಪ್ತಳಾಗಿ, ಸಂತೋಷದ ಸಮಯದಲ್ಲಿ ವಿದೂಷಿಯಾಗಿ, ಮಮತೆ, ಅನುರಾಗಗಳನ್ನು ಹಂಚುವ ಮಹಾ ಮನುಷ್ಯಳಾಗಿ ಕಾಣಿಸಿಕೊಳ್ಳುತ್ತಾಳೆ. ತಾನು ನೀಡುವ ಸಹಾಯ, ತೋರುವ ಸಹನೆ ಮತ್ತು ಔದಾರ್ಯದಿಂದ ನಮ್ಮನ್ನು ನಾವು ಮನುಷ್ಯರನ್ನಾಗಿಸಿಕೊಳ್ಳಲು ಹೂವಿನ ಹಾದಿಗಳನ್ನು ಆಕೆ ಸೃಷ್ಠಿಸುತ್ತಾಳೆ.
ಮದುವೆ ಸಮಯದಲ್ಲಿ ಮಕ್ಕಳ ಇಷ್ಟಕ್ಕೆ ಪ್ರಾಮುಖ್ಯತೆ ನೀಡುವುದು ತಾಯಿ ಮಾತ್ರ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಿಗೆ ಏನುಬೇಕು ? ಯಾವುದು ಬೇಡ, ಯಾವುದರಿಂದ ಒಳ್ಳೆಯದಾಗುತ್ತದೆ. ಅಥವಾ ಕೆಟ್ಟದ್ದಾಗುತ್ತದೆ ಎಂದು ಮೊದಲೇ ತಿಳಿದು ಸಲಹೆ ನೀಡುವ ಆಪ್ತ ಸಲಹೆಗಾರಳು. ಪ್ರತಿಕ್ಷಣ ತನ್ನ ಮಗುವಿನ ಅಭಿವೃದ್ಧಿಗಾಗಿ ಪರಿತಪಿಸುವ ತಪಸ್ವಿ ಅವಳು. ಈ ರೀತಿಯಲ್ಲಿ ನಮಗಾಗಿ ತನ್ನ ಬದುಕನ್ನೇ ಕರಗಿಸಿಕೊಳ್ಳುತ್ತ ಮೇಣದ ಬತ್ತಿಯ ಹಾಗೆ ಮಕ್ಕಳ ಬಾಳಿಗೆ ಬೆಳಕನ್ನು ತುಂಬುವ ದಿವ್ಯ ತೇಜಸ್ವಿನಿ ತಾಯಿ. ಇಂಥ ತ್ಯಾಗಮೂರ್ತಿಗೆ ಕೃತಜ್ಞತೆ ಸಮರ್ಪಿಸಿ ಕೊಳ್ಳುವುದಕ್ಕೆ ಪ್ರತಿ ವರ್ಷ ತಾಯಿಯರ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಮದರ್ಸ್ ಡೇ ಸಂಪ್ರದಾಯ ವಿದೇಶದಲ್ಲಿ ಪ್ರಾರಂಭವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ರೂಢಿಗೆ ಬರುತ್ತಿದೆ. ಈ ದಿನಾಚರಣೆಯನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಪ್ರತಿವರ್ಷ ಮೇ ಎರಡನೇ ಭಾನುವಾರ ಮದರ್ಸ್ ಡೇ ಆಚರಿಸುವುದು ಬೆಳೆದು ಬಂದ ರೂಢಿಯಾಗಿದೆ.
ವಿದೇಶಗಳಲ್ಲಿ ಆಚರಣೆ
 ಈ ದಿನಾಚರಣೆಯನ್ನು ವಿದೇಶಿ ನೆಲದಲ್ಲಿ ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ. ಏಷ್ಯಾ ಮೈನ್ಮಾರ್ ಪ್ರದೇಶಗಳಲ್ಲಿ ವಾಸಿಸುವ ಪ್ರಾಂತಿಯರ ಆರಾಧ್ಯ ದೈವ ‘ಸಿಬೆಲೆ’. ಆಕೆ ಆಕಾಶ ಮತ್ತು ಭೂಮಿಗೆ ಹುಟ್ಟಿದ ಮಗುವೆಂಬ ನಂಬಿಕೆ ಅವರದ್ದು.
‘ಸಿಬಿಲೆ’ ದೇವತೆ ವಿಶ್ವದಲ್ಲಿನ ಎಲ್ಲಾ ದೇವತೆಗೂ ತಾಯಿ ಎಂದು ಅವರು ಗಾಢವಾಗಿ ನಂಬಿದ್ದಾರೆ. ಆದ್ದರಿಂದಲೇ ಆ ತಾಯಿ ಹುಟ್ಟಿದ ದಿನವನ್ನು ಮದರ್ಸ್ ಡೇ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಗ್ರೀಕ್ ದೇಶದಲ್ಲಿ ‘ರಿಯಾ’ ದೇವತೆ; ರೋಮ್‍ನಲ್ಲಿ ‘ಮಗ್ನಾ ಮಾಥಾರ್’ ಅಥವಾ ‘ಗ್ರೇಟ್ ಮದರ್’ ಎಂದು ಕರೆಯಲಾಗುವ ಆ ತಾಯಿಗೆ ಅಲ್ಲಿನ ಪರ್ವತವೊಂದರ ಮೇಲೆ ಪ್ರತ್ಯೇಕ ದೇವಾಲಯ ನಿರ್ಮಿಸಿದ್ದಾರೆ.
ಪ್ರತಿವರ್ಷ ಮಾರ್ಚ್ 15 ರಿಂದ ಮೂರು ದಿನಗಳ ಕಾಲ ಅತ್ಯಂತ ವೈಭವಯುತ ಉತ್ಸವ ನಡೆಸುತ್ತಾರೆ. ಇದಕ್ಕೆ ‘ಹಿಲೇರಿಯಾ’ ಹಬ್ಬವೆಂದು ಕರೆಯುತ್ತಾರೆ. ಅಮೇರಿಕಾದಲ್ಲಿ ಪ್ರತಿವರ್ಷ ಫೆಬ್ರವರಿ ಆ ಎರಡನೇ ಭಾನುವಾರ ಲೆಬಲ್‍ನಲ್ಲಿ ವಸಂತ ಋತುವಿನ ಪ್ರಾರಂಭದ ದಿನದಂದು, ದಕ್ಷಿಣಾ ಆಫ್ರಿಕಾದಲ್ಲಿ ಮೇ ಮೊದಲನೇ ಭಾನುವಾರದಂದು ‘ಮದರ್ಸ್ ಡೇ’ ಆಚರಿಸುತ್ತಾರೆ. ಮೇ ತಿಂಗಳ ಕೊನೆಯ ಭಾನುವಾರ ಈ ಹಬ್ಬ ಆಚರಿಸುವ ಫ್ರಾನ್ಸ್ ದೇಶದವರು ಇದನ್ನು ತಮ್ಮ ಕುಟುಂಬದ ಹುಟ್ಟಿದ ದಿನವನ್ನಾಗಿ ಆಚರಿಸಿಕೊಳ್ಳುತ್ತಾರೆ. ಜಪಾನ್ ಮತ್ತು ಭಾರತದಲ್ಲಿ ಮೇ ತಿಂಗಳ ಎರಡನೇ ಭಾನುವಾರ ಈ ಸಂಭ್ರಮ ನಡೆಯುತ್ತದೆ.
ಮಾತೃ ದೇವತೆಗಳ ನಡುವೆ ಶಾಂತಿ ಸ್ನೇಹಗಳನ್ನು ವಿಕಸಿತಗೊಳಿಸಲು 19ನೆಯ ಶತಮಾನದಂಚಿನಲ್ಲಿ ಅಮೇರಿಕಾದ ಫಿಲಿಡೆಲ್ಘಿಯಲ್ಲಿನ ತಾಯಿಯೊಬ್ಬರು ಮುಂದೆ ಬಂದರು. ಅಂತರ್ಯುದ್ಧದಲ್ಲಿ ನೊಂದವರನ್ನೆಲ್ಲಾ ಒಂದೆಡೆ ಸೇರಿಸಿ ಅವರನ್ನು ಸಂತೈಸುವ ಪ್ರಯತ್ನ ಮಾಡಿದರು. ಈ ಪ್ರಯತ್ನ ನಡೆಸಿದ ಕೆಲ ದಿನಗಳಲ್ಲಿ ಆಕೆ ಇಹಲೋಕ ತ್ಯಜಿಸಿದಳು. ಕ್ರಮೇಣ ಆಕೆಯನ್ನು ಎಲ್ಲರೂ ಮರೆತು ಹೋದರು.
ಆದರೆ ಆಕೆಯ ಮಹೋನ್ನತ ಪ್ರೀತಿಯಾದರಗಳನ್ನು ಆಕೆಯ ಮಗಳು ‘ಅನ್ನಾಜಾರ್ವಿಸ್’ ಮಾತ್ರ ಮರೆಯಲಿಲ್ಲ. ತನ್ನ ತಾಯಿ ಸತ್ತ ಎರಡು ವರ್ಷಗಳ ನಂತರ ವೆಸ್ಟ್ ವರ್ಜಿನಿಯಾದಲ್ಲಿನ ಗ್ರಾಪ್ಟನ್ನಿನಲ್ಲಿ ಆಕೆ ಸಂಸ್ಕರಣೆ ಕಾರ್ಯಕ್ರಮವೊಂದನ್ನು ನಿರ್ವಹಿಸಿದರು. ಅಲ್ಲೇ ತಾಯಿಯರನ್ನು ಗೌರವಿಸುವುದಕ್ಕಾಗಿ ಅವರ ನೆನಪಿನ ದಿನವನ್ನಾಗಿ ಆಚರಿಸಲು ಸರ್ಕಾರ ಒಂದು ದಿನ ರಜಾ ಘೋಷಿಸಬೇಕೆಂದು ಮನವಿ ಮಾಡಿದರು.
ಅವರ ಪ್ರಯತ್ನದ ಫಲವಾಗಿ 1901ರಲ್ಲಿ ಪ್ರಪ್ರಥಮ ಬಾರಿಗೆ ‘ಮದರ್ಸ್ ಡೇ’ ಅಂಗೀಕರಿಸಿರುವುದಾಗಿ ವೆಸ್ಟ್ ವರ್ಜಿನಿಯಾ ಸರ್ಕಾರ ಪ್ರಕಟಿಸಿತು. ಮರು ವರ್ಷವೇ ಅಮೇರಿಕದ ಎಲ್ಲಾ ರಾಷ್ಟ್ರಗಳು ‘ಮದರ್ಸ್ ಡೇ’ಯನ್ನು ಅಧಿಕೃತವಾಗಿ ಒಪ್ಪಿಕೊಂಡು ಆ ದಿನವನ್ನು ರಜಾ ದಿನವನ್ನಾಗಿ ಘೋಷಿಸಿದರು.
1914 ರಲ್ಲಿ ಅಮೇರಿಕ ಸರ್ಕಾರ ಇದಕ್ಕೆ ಮನ್ನಣೆ ನೀಡಿತು. ಅಮೇರಿಕದ ಅಂದಿನ ಅಧ್ಯಕ್ಷ ವುಡೋ ವಿಲ್ಸನ್ ಮೇ ಎರಡನೇ ಭಾನುವಾರವನ್ನು ಅಧಿಕೃತ ರಜಾದಿನವನ್ನಾಗಿ ಘೋಷಿಸಿದರು. ಅದಕ್ಕಾಗಿ ಅನ್ನಾ ಜಾರ್ವಿಸ್ ಸಂತೋಷಪಟ್ಟರು.
ಆ ಸಂತೋಷ ಹೆಚ್ಚು ದಿನ ನಿಲ್ಲಲಿಲ್ಲ. ಕೆಲವು ಮಂದಿ ಮದರ್ಸ್ ಡೇಯನ್ನು ವಾಣಿಜ್ಯ ಪ್ರಯೋಜನಗಳಿಗಾಗಿ ಬಳಸಿಕೊಳ್ಳ ತೊಡಗಿದರು. ಇದನ್ನು ಸಹಿಸದ ಅವರು 1923 ರಲ್ಲಿ ‘ಮದರ್ಸ್ ಡೇ’ ಉತ್ಸವ ನಿಲ್ಲಿಸಿ ಬಿಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅದೇ ವರ್ಷ ಯಾವುದೇ ಒಂದು ಹಬ್ಬದ ಆಚರಣೆಯ ಸಮಯದಲ್ಲಿ ಒಬ್ಬ ಮಹಿಳೆ ‘ಮಾತೃದೇವೋಭವ’ ಚಿಹ್ನೆಯನ್ನು ಬಳಸಿಕೊಂಡು ಗುಲಾಭಿ ಗಿಡ ಮತ್ತು ಹೂಗಳನ್ನು ಮಾರುತಿದ್ದುದನ್ನು ತಡೆಯಲು ಹೋಗಿ ಪೋಲಿಸರಿಂದ ಬಂಧನಕ್ಕೊಳಗಾದರು!
“ನಾನು ಆಶಿಸಿದ್ದು ಇದನ್ನಲ್ಲ. ಮದರ್ಸ್ ಡೇ ಎಂದರೆ ಆ ದಿನ ತಾಯಂದಿರ ವಾತ್ಸಲ್ಯಭರಿತ ಮನೋಭಾವನೆಗಳಿಗೆ ದರ್ಪಣವಾಗಿ ನಿಲ್ಲಬೇಕು. ಅದರ ಹೆಸರಿನಲ್ಲಿ ಹಣ ಗಳಿಸುವುದನ್ನು ನಾನು ಸಹಿಸುವುದಿಲ್ಲ” ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. 1948 ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ಅನ್ನಾಜಾರ್ವಿಸ್ ಮರಣ ಹೊಂದಿದರು.
ಮದರ್ಸ್ ಡೇ ಆಚರಣೆಗಾಗಿ ಅನ್ನಾ ಹೋರಾಡಿ ಗೆದ್ದು ಸಾಧನೆ ಮಾಡಿದರು. ಆಕೆ ಮಾತ್ರ ಕೊನೆಯವರೆಗೂ ತಾಯಿ ಎಂದು ಕರೆಸಿಕೊಳ್ಳಲೇ ಇಲ್ಲ. ಮಕ್ಕಳಿಲ್ಲದ ಕೊರಗು ಮತ್ತು ಮದರ್ಸ್ ಡೇಯನ್ನು ವಾಣಿಜ್ಯ ಮೂಲಗಳಿಗೆ ಬಳಸಿಕೊಳ್ಳುವವರ ವಿರುದ್ಧ ಹೋರಾಡಿ ಕೃಶರಾಗಿದ್ದರು ಜಾರ್ವಿಸ್. ತಮ್ಮ ಮರಣಕ್ಕೆ ಕೆಲವು ದಿನಗಳ ಮುನ್ನ ನರ್ಸಿಂಗ್ ಹೋಂನ ಕೋಣೆಯೊಂದರಲ್ಲಿ “ನಾನು ಈ ಮದರ್ಸ್ ಡೇ ದಿನವನ್ನು ಜಾರಿಗೆ ತಂದು ತಪ್ಪು ಮಾಡಿದೆನೇನೋ ಎಂದೆನಿಸುತ್ತಿದೆ” ಎಂದು ಪತ್ರಿಕಾ ಪ್ರತಿನಿಧಿಯೊಬ್ಬರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಆದರೆ ಈಗ ಪ್ರತಿವರ್ಷ ಮದರ್ಸ್ ಡೇ ದಿನ ಅನ್ನಾ ಜಾರ್ವಿಸ್ ಮರಣಿಸಿದ ನರ್ಸಿಂಗ್ ಹೋಂನ ಆ ಕೋಣೆ ವಿಶ್ವದ ಮೂಲೆ ಮೂಲೆಗಳಿಂದ ಬರುವ ಶುಭಾಷಯ ಪತ್ರ, ಪುಷ್ಟ ಗುಚ್ಛಗಳೊಂದಿಗೆ ತುಂಬಿ ತುಳುಕುತ್ತಿರುತ್ತದೆ. ಅಮ್ಮಾ ಎಂಬ ಕಡಲಿನ ವಾತ್ಸಲ್ಯದ ಒಡಲನ್ನು ಜಗತ್ತಿಗೆ ತೋರಿಸಿಕೊಟ್ಟ ಜಾರ್ವಿಸ್ ಚಿರಸ್ಮರಣೀಯರು.
                                       
 ಕೊಟ್ರೇಶ್ ಎಸ್. ಉಪ್ಪಾರ್. ಆಲೂರು
                                          ಮೊ-9483470794

ನರಕದ ಬಾಗಿಲು ಬಡಿಯುವವರು!


ಜೂನ್-26 ನ್ನು ಅಂತರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕಾ ವಿರೋಧಿ ದಿನವಾಗಿ ವಿಶ್ವದಾದ್ಯಾಂತ ಆಚರಿಸಲಾಗುತ್ತಿದೆ.

       ಆಚರಣೆಗಳು ಕೇವಲ ತನ್ನ ದಿನಕ್ಕೆ ಮಾತ್ರ ಸೀಮಿತಗೊಂಡು ಅರ್ಥಕಳೆದುಕೊಳ್ಳುತ್ತಿವೆ, ಆದರೆ ಮಾದಕ ವಸ್ತುಗಳಿಂದ ಇಂದು ಯುವ ಪೀಳಿಗೆ ಹೇಳಲಾಗದಷ್ಟು ಅವನತಿಯತ್ತ ಸಾಗುತ್ತಿದೆ. ಜೀವನ ಮೌಲ್ಯಗಳು ದಿಕ್ಕರಿಸಲ್ಪಟ್ಟು, ಮೋಜು ಮಸ್ತಿಗೆ ಪ್ರಾಶಸ್ತ್ಯ ನೀಡುವ ಇಂದಿನ ದಿನಮಾನಗಳಲ್ಲಿ ಕಾನೂನು ಕಟ್ಟಳೆ, ನಿಬಂಧನೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿವೆ.
      ನಾವು ನಿತ್ಯಾ ಅವಲೋಕಿಸುವಂತೆ ದೇಶವು ಮಾದಕ ವಸ್ತು ವ್ಯಸನಿಗಳಿಂದ ಮತ್ತು ಮಾದಕ ವಸ್ತು ಕಳ್ಳ ಸಾಗಾಣಿಕೆಯಿಂದ ಬರ್ಬರತೆಡೆಗೆ ಸಾಗಿದರೂ ಎಚ್ಚೆತ್ತು ಕೊಳ್ಳುದಿರುವುದು ದುರಂತವೇ ಸರಿ.
    ಧೂಮಪಾನ-ಬೀಡಿ, ಸಿಗರೇಟ್, ಗಾಂಜಾ, ಮಧ್ಯಪಾನ, ಡ್ರಗ್ಸ್, ಚುಚ್ಚುಮದ್ದು ಹೀಗೆ ನಾನಾ ರೀತಿಯ ದುಶ್ಚಟಗಳಿಗೆ ಯುವ ಜನತೆ ದಾಸರಾಗಿ ಹೋಗಿದ್ದಾರೆ, ಸಗ್ಗದ ಮತ್ತಲ್ಲಿ ತೇಲುವ ಭ್ರಮೆಯಲ್ಲಿ ಜೀವನವನ್ನು ಇಲ್ಲದ ರೋಗ ರುಜಿನಗಳಿಗೆ ಅಡಿಯಾಳು ಮಾಡುತ್ತಿದ್ದಾರೆ. ಶೋಕಿ ಜೀವನದ ನೇಪದಲ್ಲಿ ಸಂಪ್ರದಾಯ ತೂರಿ ಪಾಶ್ಚಾತ್ಯ ಸಂಸ್ಕøತಿ ಬೆಂಬತ್ತಿ ಮಾನವೀಯ ಮೌಲ್ಯಗಳನ್ನು ದಿಕ್ಕರಿಸಿ ನರಕದ ಬಾಗಿಲು ಬಡಿಯುತ್ತಿದ್ದಾರೆ.
ಮೆಟ್ರೋಪಾಲಿಟನ್ ಸಿಟಿಗಳಲ್ಲಂತೂ ಇವುಗಳ ಅಬ್ಬರ ಹೇಳತೀರದು. ಹೆಣ್ಣು-ಗಂಡು ಎಂಬ ಲಿಂಗ ತಾರತಮ್ಯದ ಹೆಗ್ಗಿಲ್ಲದೇ ಸಾಗುವ ಈ ಪಿಡುಗಿಗೆ ದೊಡ್ಡ ದೊಡ್ಡ ರಾಜಕಾರಣಿಗಳು, ಉದ್ಯಾಮಿಗಳ ಪ್ರೋತ್ಸಾಹವಿರುವುದು ಶೋಚನೀಯ ಸಂಗತಿಯಾಗಿದೆ. 
ಮಾದಕ ವಸ್ತು ಸೇವನೆ ಜೀವಕ್ಕೆ ಅಪಾಯಕಾರಿ ಎಂದು ತಿಳಿದಿದ್ದರು ಮತ್ತೆ ಅದೇ ಚಟಗಳಿಗೆ ದಾಸರಾಗುವುದು ಇಂದು ಯುವ ಜನಾಂಗ ಅದೋಗತಿಯತ್ತ ಸಾಗುತ್ತಿರುವುದಕ್ಕೆ ಮೂಕ ಸಾಕ್ಷಿಯಾಗಿದೆ. ಒಂದು ದೇಶದ ಪ್ರಗತಿ ಅಲ್ಲಿನ ಯುವಜನಾಂಗದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಯುವಜನಾಂಗಕ್ಕೆ ಮಾದಕ ವಸ್ತುಗಳಿಂದುಂಟಾಗುವ ದುಷ್ಪರಿಣಾಮದ  ಅರಿವಿಲ್ಲದಿರುವುದು ಹಾಗೂ ಅರಿವಾಗುವ ಹೊತ್ತಿಗೆ ಮಿತಿಮೀರುವುದು  ಇನ್ನೂ ಕೆಲವೊಮ್ಮೆ ಗೊತ್ತಿದ್ದರೂ ಸಹ ಅವರಿವರ ಒತ್ತಾಯಕ್ಕೋ, ಸ್ನೇಹಿತರ ಸಹವಾಸಕ್ಕೋ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ದುಶ್ಚಟಗಳಲ್ಲಿ ಸಿಗುವ ತಾತ್ಕಾಲಿಕ ಸುಖಕ್ಕಾಗಿ ಅನಾರೋಗ್ಯಕ್ಕೀಡಾಗಿ ಜೀವನವಿಡೀ ನರಳುವಂತಾಗುವುದನ್ನು ಮರೆಯುವುದು ಕ್ಷೋಭೆಯಲ್ಲ.
        
       ಗಾಂಜಾ, ಭಂಗಿ, ಸಿಗರೇಟು, ಬೀಡಿಗಳಲ್ಲಿರುವ ತಂಬಾಕು ಹಾಗೂ ಅದಕ್ಕೆ 
ಮಿಶ್ರಿತಮಾಗುವ ರಾಸಾಯನಿಕ ವಸ್ತುಗಳು ಜೀವಕ್ಕೆ ಅಪಾಯಕಾರಿ ಎಂಬುದು ಗೊತ್ತಿದ್ದರೂ, ಅದರಲ್ಲಿರುವ ನಿಕೋಟಿನ್ ಎಂಬ ವಿಷ ವಸ್ತು ನಮ್ಮ ಶ್ವಾಸಕೋಶದ ಕಾರ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಗೊತ್ತಿದ್ದರೂ ಅದನ್ನೆ ಬಳಸಿ ದಾಸ್ಯ ಜೀವನಕ್ಕೆ ಶರಣಾಗುವುದು ಎಂಥಾ ದುಸ್ಥಿತಿ.
      ಸರಕಾರವೇ ಈ ಎಲ್ಲಾ ಮಾದಕ ವಸ್ತುಗಳ ತಯಾರಿಕೆ, ಮಾರಾಟಕ್ಕೆ ಪರವಾನಿಗೆ ನೀಡಿ, ಪುನಃ ಕಾನೂನು ಕಟ್ಟಳೆಗಳನ್ನು ಮಾಡಿ ಕಣ್ಣಾ ಮುಚ್ಚಾಲೆ ಆಡುತ್ತಿರುವುದು ವಿಪರ್ಯಾಸ.
   ಭಂಗಿ ಸೊಪ್ಪಿನೋಡನೆ ಬಾದಾಮಿ, ಕಲ್ಲು ಸಕ್ಕರೆ, ಇತ್ಯಾದಿ ವಸ್ತುಗಳನ್ನು ಸೇರಿಸಿ ಕ್ರಮವಾಗಿ ತಯಾರಿಸಿ ರಾಮರಸ ಎಂದು ಕರೆದು ಕೆಲವರು ಸೇವಿಸಿ ಭ್ರಮಾ ಸಗ್ಗದಲ್ಲಿ ತೇಲಾಡುತ್ತಾರೆ. ಗಾಂಜಾ, ಭಂಗಿ, ಚರಸ್ ಇವು ಹೆನಾಬಿಸ್ ಇಂಡಿಕ ಗಿಡದ ವಿವಿಧ ಭಾಗಗಳಿಂದ ತಯಾರಿಸಲಾಗುವ ವಸ್ತುಗಳು. ಇವೆಲ್ಲಾ ಹೃದಯ ಮತ್ತು ಶ್ವಾಸಕೋಶಕ್ಕೆ ಬಹಳ ಅಪಾಯಕಾರಿ ವಸ್ತುಗಳು. ಕೆನಾಬಿಸ್ ಹೆಣ್ಣು ಜಾತಿಯ ಗಿಡದ ಹೂವುಗಳು ಮತ್ತು ಕಾಂಡಗಳನ್ನು ಹದಮಾಡಿ ಉಪಯೋಗಿಸುತ್ತಾರೆ. ಇದು ಕಂದು ಮಿಶ್ರಿತ ಹಸಿರು ಬಣ್ಣವಿರುತ್ತದೆ. ಇದನ್ನು ಹೊಗೆಸೊಪ್ಪಿನ ಜೊತೆ ಸೇರಿಸಿ ಸೇದುವುದುಂಟು. ಭಂಗಿಯನ್ನು ಕೆನಾಬಿಸ್ ಗಿಡದ ಎಲೆಯಿಂದ ತಯಾರಿಸಲಾಗುತ್ತದೆ. ಈ ಎಲೆಯನ್ನು ಇನ್ನಿತರ ವಸ್ತುಗಳ ಜೊತೆ ಮಿಶ್ರಮಾಡಿ ಕುಡಿಯುತ್ತಾರೆ. ಆಗ ಈ ಮಾರಕ ರಾಸಾಯ£ಕಗಳು ನೇರವಾಗಿ ದೇಹ ಪ್ರವೇಶಿಸಿ ರಕ್ತದ ಕಣಗಳಲ್ಲಿ ಬೆರೆತು ವಿವಿಧ ಖಾಯಿಲೆಗೆ ತುತ್ತಗಿಸುತ್ತವೆ.ಮಾದಕ ವಸ್ತು ಸೇವನೆಯಿಂದ ಬಹುಮುಖ್ಯವಾಗಿ ಬರುವ ಖಾಯಿಲೆ ಕ್ಯಾನ್ಸರ್. ಇದರಲ್ಲಿ ಅನೇಕ ರೀತಿಯ ವಿಧಗಳಿವೆ. ಆಯಾ ವ್ಯಾಸನಿಯ ದೇಹದಲ್ಲಿ ಮಾದಕ ವಸ್ತು ಯಾವ ಭಾಗದಲ್ಲಿ ಹೆಚ್ಚು ಪ್ರಭಾವ ಬೀರುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.
      ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮನುಷ್ಯ ಸದಾ ಎಚ್ಚರಿಕೆ ಹೊಂದಿರ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ದೃಶ್ಯಮಾಧ್ಯಮಗಳೂ, ಅನೇಕ ರೀತಿಯ ಎಚ್ಚರಿಕೆಯ ಜಾಹಿರಾತುಗಳನ್ನು ಭಿತ್ತರಿಸುತ್ತಿವೆÉ. ಸದೃಡ ದೇಹದಲ್ಲಿ ಸದೃಡ ಮನಸ್ಸಿರುತ್ತದೆ. ನಾವು ಉತ್ತಮರಾಗಬೇಕಾದರೆ, ರೋಗ ರುಜಿನಗಳಿಂದ ದೂರವಿರಬೇಕಾದರೆ ಮೊದಲು ದುಶ್ಚಟಗಳನ್ನು ದೂರವಿಡಬೇಕು, ಸದಾ ಆರೋಗ್ಯದ ಬಗ್ಗೆ ಕಾಳಜಿ ವಹಿಸ ಬೇಕಾಗುತ್ತದೆ.
ಮಧ್ಯಪಾನ, ಧೂಮಪಾನ, ಮುಂತಾದ ಮಾದಕ ವಸ್ತು ಸೇವನೆಯನ್ನು ನಿರ್ಮೂಲನೆ ಮಾಡಬೇಕಾಗಿದೆ. ಆಗ ಮಾತ್ರ ಸುಂದರ ಸಮಾಜದ ಕಲ್ಪನೆ ಕಾಣಲು ಸಾಧ್ಯ.ಅಂತೆಯೇ ಈ ಮಾದಕ ವಸ್ತುಗಳನ್ನು ಕಳ್ಳ ರೀತಿಯಲ್ಲಿ ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುತ್ತಾರೆ. ಹಲವು  ಸಂದರ್ಭಗಳಲ್ಲಿ ಇಂತಹ ಕೃತ್ಯಗಳಿಗೆ ರಾಜಕಾರಾಣಿಗಳ, ಉದ್ಯಾಮಿಗಳ, ಆಯಾ ಇಲಾಖೆಗಳ ಸಹಕಾರ ಇರುತ್ತದೆ. ಹೀಗೆ ಬೇಲಿಯೇ ಎದ್ದು ಹೊಲ ಮೇಯ್ದರೆ ರಕ್ಷಣೆ ಇನ್ನೆಲ್ಲಿ? ಎಂದು ಪರಿ ತಪಿಸಬೇಕಾಗುತ್ತದೆ. 
      ಕಾನೂನುಗಳು, ವಿರೋಧಿ ಕಾಯಿದೆಗಳು ಕೇವಲ ಪುಸ್ತಕದಲ್ಲಿದ್ದರೆ ಮಾತ್ರ ಸಾಲದು. ಅವು ಕಾರ್ಯ ರೂಪಕ್ಕೆ ಇಳಿಯಬೇಕು. ಏಕೆಂದರೆ ಸರಕಾರವೇ ಈ ಎಲ್ಲಾ ಮಾಧಕ ವಸ್ತುಗಳ  ಮಾರಾಟಕ್ಕೆ ಪರವಾನಿಗೆ ನೀಡಿ ಅದರಿಂದಲೂ ತೆರಿಗೆ ಪಡೆಯುತ್ತಿರುವುದು ನಾವು ನೋಡುತ್ತಿದ್ದೇವೆ ಇಲ್ಲಿ ಗಮನಿಸಬೇಕಾದುದು ಆಚರಣೆಗಳು ಆಯಾ ದಿನಕ್ಕೆ ಸೀಮಿತವಾಗಿ ಮರುದಿನಕ್ಕೆ ಸತ್ತುಹೋಗಿ ಮೌಲ್ಯ ಕಳೆದುಕೊಳ್ಳುತ್ತಿವೆ.
ಇಂಥ ಸಾಮಾಜಕ್ಕೆ ಮಾರಕವಾದ ಮಾಧಕ ವಸ್ತು ಸೇವನೆಯನ್ನು ನಿಯಂತ್ರಿಸುವುದು ಜನ ಸಾಮಾನ್ಯರಲ್ಲಿದೆ, ಯುವ ಜನತೆಯ ಮೇಲೆ ಅವಲಂಬಿತವಾಗಿದೆ.  ಸ್ವಪ್ರೇರಣೆಯಿಂದ, ಆಸಕ್ತಿಯಿಂದ ಇಂಥ ದುಶ್ಚಟಕ್ಕೆ ತಿಲಾಂಜಲಿ ಇಟ್ಟರೆ ಖಂಡಿತಾ ನಿರ್ಮೂಲನೆ ಸಾಧ್ಯ.

-ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ಮೊ-9483470794

ನಾಡು ನುಡಿಯ ದಿಟ್ಟ ಹೋರಾಟಗಾರ ಕೈಯ್ಯಾರ ಕಿಞ್ಞಣ್ಣ ರೈ

ಶತಾಯುಷಿ ಕೈಯ್ಯಾರ ಕಿಞ್ಞಣ್ಣ ರೈ ರವರ ಜನುಮದಿನ ಜೂನ್-8

     ಕನ್ನಡ ನಾಡಿನ ನೆಲ, ಜಲ, ಭಾಷೆಗಾಗಿ ಇಡೀ ಬದುಕನ್ನು ಮುಡಿಪಾಗಿಟ್ಟ ಕನ್ನಡ ಸಾಹಿತ್ಯದ ಮೇರು ಕವಿ ಕೈಯ್ಯಾರ ಕಿಞ್ಞಣ್ಣ ರೈ. ಬಹುಭಾಷಾ ವಿಧ್ವಾಂಸರು, ಸಾಹಿತಿಯೂ ಆದ ರೈರವರು ಸ್ವಾತಂತ್ರ್ಯ ಹೋರಾಟಗಾರರೂ, ಕರ್ನಾಟಕ ಏಕೀಕರಣ ಚಳವಳಿಯ ಮುಂಚೂಣಿ ಪ್ರಮುಖ ನಾಯಕರೂ ಹೌದು.
ಕಾಸರಗೋಡಿನ ಭಾಗದಲ್ಲಿ ಕನ್ನಡದ ಹಣತೆಯನ್ನು ನಿರಂತರವಾಗಿ ಪ್ರಜ್ವಲಿಸಲು ಕಾರಣೀಭೂತರಾದವರು. ಕನ್ನಡ ನುಡಿಯನ್ನೆ ಉಸಿರಾಗಿಸಿಕೊಂಡು ಬದುಕುತ್ತಿರುವ ಕಾಯಕ ಯೋಗಿ ಕೈಯ್ಯಾರರು ಎಂದರೆ ಅತಿಶಯೋಕ್ತಿಯಾಗಲಾರದು.
ಇವರು ಕೇರಳ ರಾಜ್ಯದ ಕಾಸರಗೋಡು ತಾಲ್ಲೂಕಿನ ‘ಪೆರಡಾಲ’ ಗ್ರಾಮದಲ್ಲಿ 1915 ಜೂನ್ 08 ರಂದು ಶ್ರೀ ದುಗ್ಗಪ್ಪ ರೈ ಹಾಗೂ ಶ್ರೀಮಂತ ದೈಯಕ್ಕೆ ದಂಪತಿಗಳ ಮಗನಾಗಿ ಜನಿಸಿದರು.
ಮುಂದೆ ಕೈಯ್ಯಾರರು ಉಞ್ಞಕ್ಕ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ ತುಂಬು ಕುಟುಂಬದ ಬದುಕಿನ ಸವಿಯುಂಡರು. ಆರು ಜನ ಗಂಡು ಮಕ್ಕಳು ಇಬ್ಬರು ಪುತ್ರಿಯರನ್ನು ಹೊಂದಿದ ಇವರು ಬದಿಯಡ್ಕ ಪೆರಡಾಲದ ಕವಿತಾ ಕುಟೀರದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಕೈಯ್ಯಾರರದು ತುಳು ಮಾತೃಭಾಷಾ ಕುಟುಂಬವಾದರೂ ‘ಕನ್ನಡ’ದ  ಕಸ್ತೂರಿಯನ್ನು ಅಪ್ಪಿಕೊಂಡಿಯೇ ಬೆಳೆದವರು. ಕನ್ನಡ ಮಾತೃಭಾಷಿಕರು ಕೊಡಲಾಗದ ಅಮೂಲ್ಯ ಕೊಡುಗೆಯನ್ನು ಕೈಯ್ಯಾರರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿ ಸಿರಿವಂತಗೊಳಿಸಿದ್ದಾರೆ. ಅದರಲ್ಲಿಯೂ ಗಡಿನಾಡ ಭಾಗದಲ್ಲಿ ಭಾಷೆಯ ಉಳಿವು-ಬೆಳವಣಿಗೆಗೆ ಸತತ ಹೋರಾಟ ಮಾಡುತ್ತ ಗಟ್ಟಿತನ ತಂದುಕೊಡುವಲ್ಲಿ ಅವಿರತವಾಗಿ ಹಿಂದಿನಿಂದಲೂ ದುಡಿಯುತ್ತಾ ಬಂದಿದ್ದಾರೆ.
ಕೈಯ್ಯಾರರು ಸಂಸ್ಕøತ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದರು. ಬಿ.ಎ. ಪದವಿ ನಂತರ ಶಿಕ್ಷಕ ತರಬೇತಿ ಪಡೆದು ರೈರವರು ತದನಂತರ ಸ್ನಾತಕೊತ್ತರ ಪದವಿ ಪಡೆದು ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಹರಿಜನ ಸೇವಕ ಸಂಘಟನೆಯಲ್ಲಿ ಹಗಲಿರುಳು ದುಡಿದು ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹುಟ್ಟು ಸ್ವಾತಂತ್ರ್ಯ ಹೋರಾಟಗಾರರಾದ ಕೈಯ್ಯಾರರು ಸದಾ ಸಾಮಾಜಿಕ ಕಳಕಳಿಯ ಚಳವಳಿಗಳಲ್ಲಿ ಪಾಲ್ಗೊಂಡು ಸಮುದಾಯದ ಉನ್ನತಿಗಾಗಿ ದುಡಿಯುತ್ತಾ ಬಂದಿದ್ದಾರೆ.
ಸ್ಥಳೀಯ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೈಯ್ಯಾರರು ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ದೀನ-ದಲಿತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ. ಕೇರಳ ರಾಜ್ಯದ ಸಂಗೀತ ಅಕಾಡೇಮಿಯ ಸದಸ್ಯರೂ ಆಗಿದ್ದ ರೈರವರು ಸಾಹಿತ್ಯವಷ್ಟೇ ಅಲ್ಲದೇ ಸಂಗೀತ ಕ್ಷೇತ್ರದ ಬೆಳವಣಿಗೆಗೂ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಕೈಯ್ಯಾರÀರು ಕಾಸರಗೋಡು ತಾಲ್ಲೂಕನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಅತಿರಥ ಹೋರಾಟ ಮಾಡುತ್ತಾ ಬಂದಿದ್ದಾರೆ. ಅವರ ತಾಯ್ನುಡಿ ತುಳುವಾದರೂ ‘ಕನ್ನಡ’ ಅವರ ಉಸಿರು.
ಕನ್ನಡ ಸಾಹಿತ್ಯದ ಮಡಿಲಿಗೆ ‘ಶ್ರೀಮುಖ’, ‘ಐಕ್ಯಗಾನ’, ‘ಪುನರ್ನವ’, ‘ಚೇತನ’, ‘ಕೊರಗ’, ‘ಶತಮಾನದ ಗಾನ’, ‘ಗಂಧವತಿ’, ‘ಪ್ರತಿಭಾ ಪಯಸ್ವಿನಿ’ ಮುಂತಾದ ಅಮೂಲ್ಯ ಕವನ ಸಂಕಲನಗಳನ್ನು ನೀಡಿದ್ದಾರೆ. ಅಲ್ಲದೇ ಒಂದು ತುಳು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಪರಿವು ಕುಟ್ಟಾಜಿ, ರಟ್ಟೆ ಕಣ್ಣ್‍ಡ್, ಸಾರೋ ಎಸೆಳ್ದ ತಾಮರೆ, ಲೆಪ್ಪುನ್ಯೇರ್?, ಬತ್ತನೋ ಈ ಬರ್ಪನೋ ಮುಂತಾದವು ರೈರವರ ಪ್ರಮುಖ ತುಳು ಕವಿತೆಗಳು.
ಕಾರ್ನಾಡ ಸದಾಶಿವರಾವ, ರತ್ನರಾಜಿ, ಎ.ಬಿ.ಶೆಟ್ಟಿ ಮೊದಲಾದವರ ಜೀವನ ಚರಿತ್ರೆಗಳನ್ನು, ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ.
ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ಅವರ ಕುರಿತಾಗಿ ಮೂರು ಕೃತಿಗಳನ್ನು ಹೊರತಂದಿದ್ದಾರೆ. ಪಂಚಮಿ ಮತ್ತು ಆಶಾನ್ ಇವು ಇವರ ಅನುವಾದಿತ ಖಂಡ ಕಾವ್ಯ ಕೃತಿಗಳಾಗಿವೆ. ‘ಸಾಹಿತ್ಯ ಧೃಷ್ಟಿ’ ಎನ್ನುವ ಇವರ ಲೇಖನ ಸಂಗ್ರಹ ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ‘ಪದ್ಯಮಂಜರಿ’ ಇವರ ಮಕ್ಕಳ ಕವನ ಸಂಕಲನವಾಗಿದೆ. ‘ಭಾರತ ಭಾರತಿ’ ಪುಸ್ತಕ ಸಂಪದ ಮಾಲೆಯಲ್ಲಿ ಎಳೆಯರಿಗಾಗಿ ‘ಪರಶುರಾಮ’ ಎಂಬ ಕಥಾ ಪ್ರಸಂಗವನ್ನು ಮನಮುಟ್ಟುವಂತೆ ಬರೆದುಕೊಟ್ಟಿದ್ದಾರೆ. 
ಮಕ್ಕಳ ಸಾಹಿತ್ಯಕ್ಕೆ ಕೈಯ್ಯಾರರ ಕೊಡುಗೆ ಅಪಾರ. ವಿದ್ಯಾರ್ಥಿಗಳಿಗಾಗಿ ನವೋದಯ, ವಾಚನಮಾಲೆ, ಶಿರ್ಷೀಕೆಯಡಿಯಲ್ಲಿ ಎಂಟು ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ. ಅಲ್ಲದೆ ವ್ಯಾಕರಣ ಮತ್ತು ಪ್ರಭಂದ ಶೀರ್ಷೀಕೆಯಡಿಯಲ್ಲಿ ನಾಲ್ಕು ಕೃತಿಗಳನ್ನು ಹೊರತಂದಿದ್ದಾರೆ. ಕೈಯ್ಯಾರರು ಕಾವ್ಯ, ವ್ಯಕ್ತಿ ಚಿತ್ರಣ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯಕ್ಕಷ್ಟೇ ಸೀಮಿತವಾಗದೇ ನಾಟಕ ಕ್ಷೇತ್ರದಲ್ಲಿಯೂ ವಿಸ್ತರಿಸಿಕೊಂಡು ‘ವಿರಾಗಿಣಿ’ ಎಂಬ ನಾಟಕ ಬರೆದಿದ್ದಾರೆ. ಅಲ್ಲದೇ ‘ದುಡಿತವೆ ನನ್ನ ದೇವರು’ ಎನ್ನುವ ಆತ್ಮಕಥನವನ್ನು ಬರೆದಿದ್ದಾರೆ.
ಇವರು ಕನ್ನಡ ಸಾಹಿತ್ಯ, ಜಾಗೃತಿ ಕುರಿತಾಗಿ ಇದುವರೆಗೂ ಸುಮಾರು ಐದು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ವಿವಿಧ ಪತ್ರಿಕೆಗಳಿಗೆ ಬರೆದಿದ್ದಾರೆ. ಸಾಹಿತಿಯಾಗಿ ಎಷ್ಟು ಪರಿಚಿತರೋ ಕೈಯ್ಯಾರರು ಪತ್ರಿಕಾ ಮಾಧ್ಯಮದಲ್ಲೂ ಅಷ್ಟೇ ಪ್ರಸಿದ್ಧರು. ರೈರವರು ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ದಿನ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕೈಯ್ಯಾರರು ಸಾಹಿತಿಯಾಗಿ, ಪತ್ರಿಕಾ ಸಂಪಾದಕರಾಗಿ, ಕನ್ನಡ ನಾಡು, ನುಡಿಗಾಗಿ ಬೆಟ್ಟದಷ್ಟು ಕೊಡುಗೆ ನೀಡಿದ್ದಾರೆ. ಇವರ ಕನ್ನಡ ಕೈಂಕರ್ಯಕ್ಕಾಗಿ ಹಲವಾರು ಗೌರವ ಪ್ರಶಸ್ತಿಗಳು ರೈ ಅವರನ್ನು ್ಧಲಂಕೃತಗೊಂಡಿವೆ.
 1969 ರಲ್ಲಿ ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ, 1969 ರಲ್ಲಿ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, 1985 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2006 ರಲ್ಲಿ ಹಂಪಿ ವಿವಿಯಿಂದ ನಾಡೋಜ ಪ್ರಶಸ್ತಿ, ಕರ್ನಾಟಕ ಸರ್ಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, 2013 ರಲ್ಲಿ ಪಂಪ ಪ್ರಶಸ್ತಿ ಸಂದಿವೆ.
ಕೈಯ್ಯಾರರಿಗೆ 2005 ರಲ್ಲಿ ಮಂಗಳೂರು ವಿ.ವಿ.ಯು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ರೈರವರು 1997 ರಲ್ಲಿ ಮಂಗಳೂರಿನಲ್ಲಿ ನಡೆದ 66ನೆಯ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಕನ್ನಡ ತುಳು ಸಾಂಸ್ಕøತಿಕ ಬದುಕಿನ ಭಾವೈಕ್ಯತೆಯ ಪ್ರತಿಬಿಂಬವಾದ ಕೈಯ್ಯಾರರಿಗೆ 2014 ಜೂನ್ 8ಕ್ಕೆ ನೂರು ವರ್ಷ ತುಂಬಿತು. ಈ ಶತಾಯುಷಿ ಸಾಹಿತಿಯು ಇನ್ನೂ ನಮ್ಮೆಲ್ಲರಿಗೂ ಆದರ್ಶಮಯವಾಗಿರುವುದೇ ನಮ್ಮೇಲ್ಲರ ಭಾಗ್ಯ.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9739878197

ಭಾನುವಾರ, ಜೂನ್ 29, 2014

ಭರವಸೆಯ ಹಾಡುಗಾರ್ತಿ ಭವಿತ ಮನೋಹರ

      ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ, ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ. ‘ಕಲೆ’ ಎಂದರೆ ಸಾಕು ಅಭಿನಯ, ನೃತ್ಯ, ಮಾತುಗಾರಿಕೆ, ಸಂಗೀತ ಇತ್ಯಾದಿಗಳು ಗರ್ಭೀಕರಿಸಿಕೊಂಡು ಬಿಡುತ್ತವೆ.
      ಇವುಗಳಲ್ಲೊಂದಾದ ಹಾಡುಗಾರಿಕೆ ಅದ್ಹೇಗೆ ಇವಳನ್ನು ಸೆಳೆಯಿತೋ, ಆದರೆ ಪ್ರಸ್ತುತ ಅದ್ಭುತ ಹಾಡುಗಾರ್ತಿಯಾಗಿ ಕುಮಾರಿ ಭವಿತ ಮನೋಹರ ಜಿಲ್ಲೆಯಲ್ಲಿ ಮನೆಮಾತಾಗುತ್ತಿದ್ದಾಳೆ.
      1989 ಫೆಬ್ರವರಿ 22ರಂದು ಪ್ರಕಾಶ ಹಾಗೂ ಶ್ರೀಮತಿ ರತ್ನಕುಮಾರಿ ದಂಪತಿಗಳ ಮೂರು ಜನ ಪುತ್ರಿಯರಲ್ಲಿ ಜೇಷ್ಠಳಾಗಿ ಜನಿಸಿದ ಭವಿತ ಚಿಕ್ಕ ವಯಸ್ಸಿನಿಂದಲೇ ಸಂಗೀತ, ಹಾಡುಗಾರಿಕೆ ಅಂದರೆ ಅದೇನೋ ಆಕರ್ಷಣೆ, ಅತಿಯಾಗಿ ವೀಕ್ಷಿಸುವುದು, ಅನುಕರಣೆ ಮಾಡುವುದು. ಈ ಎಡಬಿಡದ ಹವ್ಯಾಸವೇ ಇಂದು ಇವಳನ್ನು ಉತ್ತಮ ಹಾಡುಗಾರ್ತಿಯನ್ನಾಗಿ ಮಾಡಿದೆ.
      ಹಾಸನದ ಪೆನ್‍ಷನ್ ಮೊಹಲ್ಲಾ ರಾಮಮಂದಿರ ರಸ್ತೆಯಲ್ಲಿ ವಾಸವಾಗಿರುವ ಕುಮಾರಿ ಭವಿತ ಪಿ.ಯು.ಸಿ. ಓದಿದ ವಿದ್ಯಾರ್ಥಿನಿ. ಆರ್ಕೆಸ್ಟ್ರಾಗಳಲ್ಲಿ ಕೈಯಲ್ಲಿ ಮೈಕ್ ಹಿಡಿದು ಹಾಡುವುದೆಂದರೆ ಇವಳಿಗೆ ಎಲ್ಲಿಲ್ಲದ ಉತ್ಸಾಹ. ಪ್ರೇಕ್ಷಕರನ್ನು ಉನ್ಮಾದದಲ್ಲಿ ತೇಲಿಸಿ ಬಿಡುತ್ತಾಳೆ. ಹುಚ್ಚೆದ್ದು ಕುಣಿಸಿ ಬಿಡುತ್ತಾಳೆ. ಇಲ್ಲಿವರೆಗೂ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ 500ಕ್ಕೂ ಹೆಚ್ಚು ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ನೀಡಿದ್ದಾಳೆ.
       ಉದಯ ಟಿ.ವಿ. ಅಕ್ಷರ ಮಾಲೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ. ಬೆಂಗಳೂರಿನಲ್ಲಿ ನಡೆದ ಫ್ರೆಶ್ ವಾಯ್ಸ್ ಆಫ್ ಕರ್ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾಳೆ. ಆಕಾಶವಾಣಿಯಲ್ಲಿ ಹಲವಾರು ಬಾರಿ ಕಾರ್ಯಕ್ರಮ ನೀಡಿದ್ದಾಳೆ. ಸಕಲೇಶಪುರದಲ್ಲಿ ನಡೆದ ಮಲೆನಾಡು ಕೋಗಿಲೆ ಕಾರ್ಯಕ್ರಮದಲ್ಲಿ ಬಹುಮಾನ ಪಡೆದಿದ್ದಾಳೆ.
      ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳಲ್ಲಿ 80ಕ್ಕೂ ಹೆಚ್ಚು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾಳೆ. ಅಲ್ಲದೇ ಅನೇಕ ಶಾಲಾ ಕಾಲೇಜು ಕಾರ್ಯಕ್ರಮ, ವಾರ್ಷಿಕೋತ್ಸವಗಳನ್ನು ತನ್ನ ಸುಮಧುರ ಕಂಠದಿಂದ ರಂಜಿಸಿದ್ದಾಳೆ.
        ಭವಿತಾಳ ಕಿರು ವಯಸ್ಸಿನ ಹಿರಿ ಸಾಧನೆಗೆ ಹಾಸನದ ಕನ್ನಡ ಸಾಹಿತ್ಯ ಪರಿಷತ್ತು ‘ಪ್ರತಿಭಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಸಕಲೇಶಪುರದ ಮಲೆನಾಡು ಪ್ರತಿಭಾ ಕಲಾ ಸಂಘ ‘ಮಲೆನಾಡು ಕೋಗಿಲೆ ಪ್ರಶಸ್ತಿ’ ನೀಡಿ ಗೌರವಿಸಿದೆ. ಕನ್ನಡ ಸಂಸ್ಕøತಿ ಇಲಾಖೆ ಹಾಸನದ ಕಲಾಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಉತ್ತಮ ಗಾಯಕಿ ಪ್ರಶಸ್ತಿ’ ನೀಡಿ ಗೌರವಿಸಿದೆ. ಹಾಸನ ಜಿಲ್ಲಾ ವಚನ ಸಾಹಿತ್ಯ ಅಕಾಡೆಮಿಯು ‘ಸಂಗೀತ ರತ್ನ’ ಹಾಗೂ ‘ಕಲಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.
      ಹಾಡುಗಾರಿಕೆಯಲ್ಲಿ ತನ್ನ ಜೀವಿತದ ಉಸಿರಾಗಿಸಿಕೊಂಡಿರುವ ಭವಿತ ಭವಿಷ್ಯದಲ್ಲಿ ಉತ್ತಮ ಗಾಯಕಿಯಾಗುವ ಮಹತ್ತ್ವಾಕಾಂಕ್ಷೆ ಹೊಂದಿದ್ದಾಳೆ. ಅವಳ ಆಸೆ ಸಾಕಾರಗೊಳ್ಳಲಿ ಎಂದು ಆಶಿಸುತ್ತೇನೆ. ಇಂತಹ ಅದ್ಭುತ ಕಂಠದ ಭವಿತಾಳನ್ನು ತಾವೂ ಪೋನಾಯಿಸಿ (9738454166) ಅಭಿನಂದಿಸಿ. ನಿಮ್ಮಗಳ ಹಾರೈಕೆಯಿಂದ ಇನ್ನೂ ಪ್ರಜ್ವಲಿಸಬಲ್ಲಳು.
                             
- ಕೊಟ್ರೇಶ್ ಎಸ್. ಉಪ್ಪಾರ್, ಆಲೂರು.


ಶಿಕ್ಷಣ ಕ್ಷೇತ್ರದಲ್ಲಿ ಡೊನೇಶನ್ ಹಾವಳಿ

    ಶಿಕ್ಷಣವೆಂಬುದು ಕೇವಲ ಮೂರಕ್ಷರದ ಪದವಲ್ಲ. ಅದೊಂದು ಮಾನವ ಜೀವನದ ಅವಿಭಾಜ್ಯ ಅಂಗ. ಇಂದಿನ ಪ್ರಸ್ತುತ ಸಮಯ ಶಿಕ್ಷಣ ಕೇಂದ್ರೀಕೃತವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. “ಶಿಕ್ಷಣವು ಮಗುವಿನಲ್ಲಿ ಅಡಗಿರುವ ಸುಪ್ತ ಚೇತನವನ್ನು ವಿಕಸಿಸುವಂತೆ ಮಾಡುವುದು” ಎಂದು ಗಾಂಧೀಜಿಯವರು ಹೇಳಿದ್ದಾರೆ . “ಶಿಕ್ಷಣವು ಮಗುವಿನಲ್ಲಿ ಅಂತರ್ಗತವಾಗಿರುವ ಆಧ್ಯಾತ್ಮವನ್ನು ಹೊರಗೆಳೆಯುತ್ತದೆ” ಎಂದು ವಿವೇಕಾನಂದರು ಹೇಳಿದ್ದಾರೆ. ನಮ್ಮ ಭಾರತ ಸರ್ಕಾರವು ಪ್ರಾಥಮಿಕ ಶಿಕ್ಷಣವನ್ನು 2002ರಲ್ಲಿ ‘ಮಕ್ಕಳ ಮೂಲಭೂತ ಹಕ್ಕು ಎಂದು ಪರಿಗಣಿಸಿತು. ಇಷ್ಟು ಮಹಾನ್ ವ್ಯಾಪ್ತಿಯುಳ್ಳ ಶಿಕ್ಷಣವನ್ನು ಕೊಡಿಸಲು ಇಂದು ತಾಯ್ತಂದೆಯರು, ಪೋಷಕರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. “ತಮ್ಮ ಕಂದ ಒಳ್ಳೆಯ ಶಿಕ್ಷಣ ಪಡೆದು, ಮುಂದೆ ಉತ್ತಮ ವೃತ್ತಿಗಿಟ್ಟಿಸಿ, ಸಮಾಜದ ಸತ್ಪ್ರಜೆಯಾಗಿ ನೆಮ್ಮದಿಯ ಜೀವನ ಸಾಗಿಸಲಿ” ಎಂಬ ಹೆಬ್ಬಯಕೆ ಅವರದು. ಆದರೆ ಈ ಹೆಬ್ಬಯಕೆ ತಡೆಯಾಗಿ ನಿಂತಿರುವ ಹೆಬ್ಬಂಡೆ ‘ಡೊನೇಶನ್’ ಎಂಬ ಶನಿ ! ಎಂಸಿಎ, ಎಂಬಿಎ,ಮೆಡಿಕಲ್, ಇಂಜೀನಿಯರ್, ಕಂಪ್ಯೂಟರ್ ಕೋರ್ಸ್‍ಗಳಿಗೆ ಲಕ್ಷಗಟ್ಟಲೇ ತೆರಬೇಕಾಗಿದೆ. ಅಲ್ಲದೇ ಸರಕಾರಿ ಕೋಟಾದ ಸಂಸ್ಥೆಗಳಲ್ಲಿ ಸೀಟುಗಳ ದರ ನಿಗದಿಯಾಗಿರುದು ಶೋಚನೀಯ ಸಂಗತಿಯಾಗಿದೆÉ. ಡೊನೇಶನ್‍ಗೆ ಜೀವ ಕೊಟ್ಟವರು ನಾವೇ. ನಮ್ಮ ಮಕ್ಕಳು ಹೆಸರಾಂತ ಶಾಲೆ, ಕಾಲೇಜ್‍ಗಳಲ್ಲಿ ಓದಬೇಕೆಂದು ಎಷ್ಟಾದರೂ ಡೊನೇಶನ್ ಕೊಡುತ್ತೇವೆ. ಡೊನೇಶನ್ ಕೊಟ್ಟು ಖಾಸಗಿ ಶಾಲೆಯಲ್ಲಿ ಓದಿದವರಿಗೆ ಮಾತ್ರ ವಿದ್ಯೇ ಒಲಿಯುತ್ತದೆಯೆ? ಸರ್ಕಾರಿ ಶಾಲೆಗಳಲ್ಲಿ ಓದಿದ ಅನೇಕರು ಉನ್ನತ ಹುದ್ದೆಯಲ್ಲಿಲ್ಲವೆ? ಡೊನೇಶನ್ ಹಾವಳಿಯ ನಿರ್ಮೂಲನೆ ಸಾಧ್ಯವಿಲ್ಲದಿದ್ದರೂ ಅದನ್ನು ಒಂದು ಹತೋಟಿಗಾದರೂ ತರುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಘ- ಸಂಸ್ಥೆಗಳು ಕೆಲಸ ಮಾಡಬೇಕಿದೆ. ಡೊನೇಶನ್ ಕೊಟ್ಟರೆ ಶಿಕ್ಷಣ ಎಂಬ ಫಲಕವಿಲ್ಲದಿರುವುದೊಂದನ್ನು ಬಿಟ್ಟರೆ, ಈಗಿನ ಶಿಕ್ಷಣ ಪದ್ಧತಿ ಡೊನೇಶನ್ ಆಧಾರಿತವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೆ ವೇತನ ನೀಡಲು ಸೌಲಭ್ಯಗಳನ್ನು ಹೆಚ್ಚಿಸಲು ಡೊನೇಶನ್ ಅನಿವಾರ್ಯವಾಗುತ್ತದೆ. ಸರಕಾರ ಪೂರ್ಣ ಪ್ರಮಾಣದ ಅನುದಾನ ನೀಡಿದರೆ ಡೊನೇಶನ್ ಎಂಬ ಪ್ರಶ್ನೆ ಉದ್ಭವಿಸುವುದು ಕ್ಷೀಣಿಸುವುದೇನೋ ಅನಿಸುತ್ತದೆ. ಆದರೆ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಧನ ಸಹಾಯ ಮಾಡ ಬೇಕೆಂದರೆ ಬೊಕ್ಕಸವೇ ಸಾಲದಾಗಬಹುದು. ಈ ಪದ್ಧತಿ ಯಾರ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಇದಕ್ಕೆ ಕಾರಣಗಳೇನು? ಇದರ ಪರಿಣಾಮಗಳೇನು? ಎಂಬುದರ ಬಗ್ಗೆ ಗಮನಹರಿಸೋಣ.
ಡೊನೇಶನ್ ಮತ್ತು ಬಡವರು, ವiಧ್ಯಮ ವರ್ಗದವರು
      ಡೊನೇಶನ್ ಪಿಡುಗು ಇಂದು ಶೀಕ್ಷಣವನ್ನು ಆಳುತ್ತಿದೆ. ಹಣ, ಆಸ್ತಿ ಇದ್ದರೆ ಶಿಕ್ಷಣವೆಂಬ ಮನಃಸ್ಥಿತಿ ಜನರಲ್ಲಿ ಬೇರೂರುತ್ತದೆ. ಅದರಲ್ಲೂ ಬಡವರು, ದಲಿತರು, ಮಧ್ಯಮ ವರ್ಗದವರು ಈ ಪಿಡುಗಿಗೆ ಬಲಿಯಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಣ ಕೊಟ್ಟರೆ ಶಿಕ್ಷಣವಂತರಾಗಬಹುದೆಂದು ಎಣಿಸಿ ತಮ್ಮಲ್ಲಿರುವ ಅಲ್ಪ ಸ್ವಲ್ಪ ಆಸ್ತಿಯನ್ನು ಮಾರಿ, ಜೀವನವನ್ನೇ ಬರಿದು ಮಾಡಿಕೊಳ್ಳುತ್ತಿದ್ದಾರೆ. ಸಾಲದ ಶೂಲಕ್ಕೆ ಸಿಲುಕಿ, ಆತ್ಮಹತ್ಯೆಯಲ್ಲಿ ಪರ್ಯವಸನಗೊಂಡಿರುವುದನ್ನು ನೋಡುತ್ತಲೇ ಇದ್ದೇವೆ. ಆದ್ದರಿಂದ ಈ ಜನರಿಗೆ ಶಿಕ್ಷಣ ಗಗನ ಕುಸುಮವಾಗಿದೆ. ಡೊನೇಶನ್ ಎಂಬ ಪಿಡುಗು ಪೋಷಕರಿಗಿಂದು ಒತ್ತಡ ತಂದಿದೆ. ಅವರ ಆಸೆ, ಆಕಾಂಕ್ಷೆಗಳಿಗೆ ಭಂಗ ತರಿಸಿದೆ. ಮಗುವಿಗೆ ಶಿಕ್ಷಣ ಕೊಡಿಸಲು ತಮ್ಮ ಶಕ್ತಿಮೀರಿ ಪ್ರಯತ್ನಿಸಿ, ಹತಾಶರಾಗುವಂತೆ ಮಾಡಿದೆ. ಶಿಕ್ಷಣ ಎಂಬ ಪದ ವ್ಯಕ್ತಿಯ ಜ್ಞಾನ ವಿಕಾಸ ಮಾಡುವ ಬದಲು ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟು ಶೋಷಣೆ ಮಾಡುವ ಸಂಗತಿಯಾಗಿ ಬೆಳವಣಿಗೆ ಕಾಣುತ್ತಿರುವುದು ವಿಷಾದನೀಯ. ಇಂದು ಮುಗ್ಧ ಮಕ್ಕಳ ಭವಿಷ್ಯ ಡೊನೇಶನ್ ಎಂಬ  ಬುಲ್ಡೋಜರ್ ಅಡಿಗೆ ಸಿಲುಕಿ ಅಪ್ಪಚ್ಚಿಯಾಗಿ ಕಮರಿ ಹೋಗಿದೆ. ಇವರು ಭವ್ಯ ಭಾರತದ ಸತ್ಪ್ರಜೆಯಾಗುವ ಬದಲಾಗಿ ಸತ್ತ ಪ್ರಜೆಗಳಾಗಿ ಬಳಲಿ ಬೆಂಡಾಗಿದ್ದಾರೆ. ಈ ಪಿಡುಗಿನಿಂದ ಒಂದು ಕುಟುಂಬ ಮಾತ್ರವಲ್ಲ, ಇಡೀ ಸಮಾಜವೇ ನುಜ್ಜು ಗುಜ್ಜಾಗುತ್ತಿದೆ. ಶಿಕ್ಷಣವು ಉಳ್ಳವರ ಸ್ವತ್ತಾಗಿರುವುದು ಬಡವರ ಆಸೆಗಳನ್ನೆಲ್ಲಾ ಕಮರಿಸಿದೆ.
ಡೊನೇಶನ್ ಮತ್ತು ಹಳ್ಳಿಗರು :
     ಹಳ್ಳಿಗರು ತಮ್ಮ ಮಕ್ಕಳನ್ನು ಜ್ಞಾನವಂತರಾಗಿ, ಉತ್ತಮ ಶಿಕ್ಷಿತರನ್ನಾಗಿ ಮಾಡಲು  ಆಶಾಭಾವನೆ ತುಂಬಿಕೊಂಡಿರುತ್ತಾರೆ. ಆದರೆ ಇಂದಿನ ಪರಿಸ್ಥಿತಿ ನೋಡಿದರೆ ತಮ್ಮ ಆಸೆಗಳಿಗೆ ತಣ್ಣಿರೆರಚಿಕೊಂಡು ಹಳ್ಳಿಗಳಲ್ಲೇ ಕೊನೆಯುಸಿರೆಳೆಯಬೇಕಾಗುತ್ತದೆ. ಆದರೂ ಶಕ್ತಿ ಮೀರಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕಾದರೆ ತಮಗಿರುವ ಗದ್ದೆ, ಜಮೀನು, ಮನೆ, ಹೆಂಡತಿಯ ಆಭರಣಗಳನ್ನೋ ಅಥವಾ ತಾಳಿ, ಕಾಲುಂಗುರ, ಒಡವೆಗಳನ್ನು ಅಡವಿಟ್ಟು ಅಥವಾ ಮಾರಿಯೋ ಒಂದು ದಾರಿ ತೋರಬೇಕಿದೆ. ಇದರಿಂದ ಹಳ್ಳಿಗರ ಆಸಕ್ತಿ ಕುಂದಿ, ಹಿಂದುಳಿಯಲು ಖಾಸಗಿ ಶಿಕ್ಷಣ ಸಂಸ್ಥೆಗಳು ನೇರವಾಗಿ ಹೊಣೆಯಾಗಿವೆ.
ಡೊನೇಶನ್ ಹಾಗೂ ಸರ್ಕಾರಿ ಶಾಲೆಗಳು :
      ಡೊನೇಶನ್ ಎಂಬ ಪಿಡುಗು ಖಾಸಗಿ ಸಂಸ್ಥೆಗಳಿಗೆ ಸಂಬಂಧಪಟ್ಟರೂ, ಸರ್ಕಾರಿ ಶಾಲೆಗಳ ಮೇಲೂ ತನ್ನ ಪ್ರಭಾವ ಬೀರಿದೆ. ಉತ್ತಮ ಶಿಕ್ಷಣ, ಹೆಸರಾಂತ ಶಾಲಾ ಕಾಲೇಜ್‍ಗಳಲ್ಲಿ ಮಾತ್ರ ! ಎಂಬ ಮೌಢ್ಯತೆಗೆ ಶರಣಾದ ನಮ್ಮಂತಹ ಪೋಷಕ ವರ್ಗ ಡೊನೇಶನ್ ಎಂಬ ಸಂಸ್ಥೆಗಳ ಶಿಕ್ಷಣಕ್ಕೆ ಮಾರು ಹೋಗಿದ್ದೇವÉ. ಸರ್ಕಾರಿ ಶಾಲೆ ಬಗ್ಗೆ ಕೀಳರಿಮೆ ಬೆಳೆದುಬಿಟ್ಟಿದೆ. ಇದರಿಂದ ಸರ್ಕಾರಿ ಶಾಲೆಯ ಶಿಕ್ಷಕರು ಮಾನಸಿಕವಾಗಿ ಬೆಂದು ಹೋಗಿರುವುದಲ್ಲದೇ, ಅವರ ಆತ್ಮವನ್ನು ಕುಗ್ಗಿಸಿದೆ. ಆದರೆ ಕೊನೆಗೂ ಸರ್ಕಾರಿ ಶಾಲೆಗಳೇ ಬಡವರ, ಹಳ್ಳಿಗರ ನಿಜವಾದ ವಿದ್ಯಾ ಮಂದಿರಗಳಾಗಿವೆ ಎನ್ನಬಹುದು.
ಡೊನೇಶನ್ ಪಿಡುಗಿಗೆ ಕಾರಣಗಳು :
    ಡೊನೇಶನ್ ಎಂಬ ಪಿಡುಗು ಜನ್ಮತಾಳಿ ಸಮಾಜವನ್ನೇ ಜೀವಸಹಿತ ಸುಡುವ ಜ್ವಾಲೆಯಾಗಿದೆ. ಈ ಜ್ವಾಲೆ ಉದ್ಭವಿಸಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.
ಧನದಾಹಿ ಖಾಸಗಿ ಶಿಕ್ಷಣ ಸಂಸ್ಥೆಗಳು :
    ಹಣವಿಲ್ಲದೇ ಇಂದು ಯಾವ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರವೇಶ ನೀಡುತ್ತಿಲ್ಲ. ಎಲ್‍ಕೆಜಿಯಿಂದ ಬಿ.ಎಡ್. ವರೆಗೂ ಹಾಗೂ ವೈದ್ಯಕೀಯ, ಎಂಜಿನಿಯರಿಂಗ್, ಸ್ನಾತಕೋತ್ತರ ಶಿಕ್ಷಣದವರೆಗೂ ಕಿತ್ತು ತಿನ್ನುವ ಬಕಪಕ್ಷಿಗಳೇ ಅಧಿಕವಾಗಿವೆ. ವಿದ್ಯಾರ್ಥಿ, ಬುದ್ದಿವಂತನೋ, ಬಡವನೋ, ಬಲ್ಲ್ಲಿದನೋ ಎಂದು ಪರಾಮರ್ಶಿಸದೇ ಇಲ್ಲಿ ಹಣವೇ ಸಿಂಹಾಸನದ ಮೇಲಿರುವ ಅಗ್ರಜ ! ಕೆಲವೊಂದು ಗುಣಾತ್ಮಕ ಶಿಕ್ಷಣ ನೀಡುತ್ತವಾದರೂ ಇದನ್ನೇ ಪ್ರಚಾರವಾಗಿರಿಸಿಕೊಂಡು ಅಗಾದ  ಹಣವನ್ನು ಸಂಗ್ರಹಿಸುವ ಪ್ರವೃತ್ತಿ ಬೆಳೆಸಿಕೊಂಡಿವೆ.
ಪೋಷಕರ ಅಂತಸ್ತಿನ ತೋರ್ಪಡಿಕೆ :
    ಪೋಷಕರು ಸಿರಿವಂತ ಮನೆತನದಿಂದ ಬಂದವರಾಗಿದ್ದರೆ ತಮ್ಮ ಮಕ್ಕಳನ್ನು ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಸಲು ಹಾತೊರೆಯುತ್ತಾರೆ. ಅಧಿಕ ಡೊನೇಶನ್ ಎಲ್ಲಿರುವುದೋ ಅಲ್ಲಿ ಸೇರಿಸುವುದು ಇವರಿಗೆ ಬಹಳ ಹೆಮ್ಮೆಯ ಸಂಗತಿಯಾಗಿದೆ. ಸಮಾಜದಲ್ಲಿ ತಮ್ಮ ಅಂತಸ್ತನ್ನು ಜನರು ನೋಡಿ ಕೊಂಡಾಡಲಿ ಎಂಬ ಒಣ ಹೆಮ್ಮೆಯಿಂದ ಜಂಬದ ಕೋಳಿಯಂತಹ ಸಿರಿವಂತ ಪೋಷಕರು ಡೊನೇಶನ್ ನೀಡುತ್ತಾರೆ.

ಮಕ್ಕಳಿಂದ ಅತಿಯಾದ ಜ್ಞಾನ ಭರವಸೆಯ ನಿರೀಕ್ಷೆ ಃ
    ಪೋಷಕರು ತಮ್ಮ ಮಕ್ಕಳು ಬೇರೆಯವರ ಮಕ್ಕಳಿಗಿಂತ ಭಿನ್ನವಾಗಿರಬೇಕು, ಅಧಿಕ ಜಾಣರಿರಬೇಕು, ಹೆಚ್ಚು ಅಂಕ ಗಳಿಸಬೇಕು ಎಂದು ಅಭಿಲಾಷೆ ಹೊಂದಿರುತ್ತಾರೆ. ಆದಕಾರಣ ಹೆಸರಾಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಎಷ್ಟೇ ಹಣವಾದರೂ ಸೀಟು ಕೊಡಿಸಲು ಕೈಮೀರಿ ಪ್ರಯತ್ನ ಪಡುತ್ತಾರೆ. ಸಾಲವೋ ಸೋಲವೋ ಮಾಡಿ ಕೇಳಿದಷ್ಟು ಹಣ ನೀಡಿ ಸ್ವರ್ಗದ ಬಾಗಿಲೇರಿದಂತೆ ಬಾಸಹೊಂದುತ್ತಾರೆ.
ಸರ್ಕಾರಿ  ಶಾಲೆಗಳ ದುರಾಡಳಿತ :
    ಖಾಸಗಿ ಶಾಲೆಗಳೊಂದಿಗೆ ನಮ್ಮ ಕೆಲವು ಸರ್ಕಾರಿ ಶಾಲೆಗಳನ್ನು ಹೋಲಿಸಲು ಪ್ರಯತ್ನಸಿದಾಗ ಅಲ್ಲಿ ಸೌಲಭ್ಯಗಳ ಕೊರತೆ ಗೋಚರವಾಗುತ್ತದೆ. ಜೊತೆಗೆ ಅಶಿಸ್ತು, ಬೇಜವಾಬ್ದಾರಿತನ ತಾಂಡವವಾಡುತ್ತದೆ. ಗ್ರಂಥಾಲಯ, ವಾಚನಾಲಯ, ಪ್ರಯೋಗಾಲಯ, ಶೌಚಾಲಯ ಹೀಗೆ ಅನೇಕ ರೀತಿಯ ಸಮಸ್ಯೆಗಳು ಕಾಣ ಸಿಗುತ್ತವೆ. ಇವೆಲ್ಲಾ ಕಾರಣಗಳಿಂದ ಪೋಷಕರಿಗೆ ಸರ್ಕಾರಿ ಶಾಲೆಗಳ ಮೇಲೆ ತಾತ್ಸಾರ ಮನೋಭಾವನೆ ಮೂಡಲು ಎಡೆಮಾಡಿಕೊಡುತ್ತದೆ. ಕೆಲವೊಂದು ಶಾಲೆಗಳು ಇದರ ಹೊರತಾಗಿಯೂ ಅತ್ಯಾಕರ್ಷಣೆಯಾಗಿವೆ. ಆದರೆ ಬಹುತೇಕರುÀ ಎಷ್ಟೇ ಹಣವಾದರೂ ಸರಿ, ಡೊನೇಶನ್ ನೀಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸಲು ಪ್ರಯತ್ನಿಸುತ್ತಾರೆ. ಈ ತೆರನಾಗಿ ಹಲವಾರು ಕಾರಣಗಳನ್ನು ಡೊನೇಶನ್ ಪದ್ಧತಿಯಲ್ಲಿ ದಿನನಿತ್ಯ ಕಾಣುತ್ತೇವೆ. ಇದರಿಂದ ಪೋಷಕರು, ವಿದ್ಯಾರ್ಥಿಗಳು ಹಳ್ಳಿಗರು, ಬಡವರು, ದಲಿತ ಸಮುದಾಯಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅಸಮಾನತೆ ಅಧಿಕ ಅಂತರವನ್ನು ಪಡೆಯುತ್ತದೆ.
ನಿವಾರಣಾ ಕ್ರಮಗಳು :
     ಈ ಡೊನೇಶನ್ ಎಂಬ ಭೀಕರ ರೋಗವನ್ನು ಬೇರುಸಹಿತ ಕಿತ್ತು ಹಾಕುವ ಶಕ್ತಿ ಸರ್ಕಾರಕ್ಕಿದೆ. ಖಾಸಗಿ ಶಾಲಾ ಕಾಲೇಜಿನ ಆಡಳಿತ ಕ್ರಮವನ್ನು ಸೂಕ್ಷ್ಮವಾಗಿ ಅವಲೋಕಿಸಿ, ಡೊನೇಶನ್ ತೆಗೆದುಕೊಂಡು ಪ್ರವೇಶ ನೀಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಯಾವುದೇ ರೀತಿಯಲ್ಲಿ ಸರ್ಕಾರ ಅನುಕೂಲಕರ ಸಹಾಯವನ್ನು ಕಡಿತಗೊಳಿಸಬೇಕು. ಸಾಧ್ಯವಾದರೆ ಮಾನ್ಯತೆಯನ್ನು ರದ್ದುಗೊಳಿಸಬೇಕು. ಆದರೆ ಸಮಾಜಪರ ಚಿಂತನೆಗಳನ್ಹೊಂದಿದ ಸಂಸ್ಥೆಗಳಿಗೆ ಅಗತ್ಯ ಸಹಾಯವನ್ನೂ ಮಾಡಬೇಕಾಗುತ್ತದೆ. ಈ ಡೊನೇಶನ್ ರೋಗವನ್ನು ಪರಿಶೀಲಿಸಲು ರಾಜ್ಯಮಟ್ಟದಲ್ಲಿ ತನಿಖಾ ದಳಗಳನ್ನು ರೂಪಿಸಿ, ರಾಜ್ಯಾದ್ಯಂತ ಶಿಷ್ಟಾಚಾರದಿಂದ ಕರ್ತವ್ಯ ನಿರ್ವಹಿಸಲಿ. ಜೊತೆಗೆ ಸರ್ಕಾರ ತನ್ನ ಸರ್ಕಾರಿ ಶಾಲೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಸೌಲಭ್ಯಗಳನ್ನು ದೊರಕಿಸಬೇಕು.
ಪೋಷಕರ ಪಾತ್ರ :
     ಕೊಡುವವರು ಅಧಿಕಗೊಂಡಾಗ ಸ್ವೀಕರಿಸುವವರು ಬೆಲೆ ಹೆಚ್ಚಿಸುತ್ತಾ ಸಾಗುತ್ತಾರೆ. ಪೋಷಕರೆಲ್ಲಾ ಪ್ರವೇಶಗಳು ಮನೆಬಾಗಿಲಿಗೆ ಬರುತ್ತವೆ. ಸಿರಿವಂತರು ತಮ್ಮ ಅಂತಸ್ಥನ್ನು ತೊರೆದು ಸರ್ಕಾರಿ ಶಾಲೆಗಳ ಕಡೆಗೆ ಗಮನಹರಿಸಿದರೆ ಡೊನೇಶನ್ ಎಂಬ ಪಿಡುಗು ತಾನಾಗಿಯೇ ನಾಶದತ್ತ ಸಾಗುವುದರಲ್ಲಿ ಎರಡು ಮಾತಿಲ್ಲ ! ಇದರ ಹಿನ್ನಲೆಯಲ್ಲಿ ಪೋಷಕ ಸಮುದಾಯ ಇಂತಹ ಶಿಕ್ಷಣ ಸಂಸ್ಥೆಗಳ ಮೇಲೆ ರೊಚ್ಚಿಗೆದ್ದು ಡೊನೇಶನ್ ಪದ್ಧತಿ ರದ್ದುಗೊಳಿಸುವಂತೆ ಸರ್ಕಾರದ ವಿರುದ್ಧ ಹೋರಾಡಬೇಕಿದೆ.
ಸರ್ಕಾರಿ ಶಾಲಾ ಶಿಕ್ಷಕರ ಪಾತ್ರ :
     ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಇಷ್ಟರಮಟ್ಟಗೆ ತಲೆಯತ್ತಿ ನಿಲ್ಲಲು ಒಂದು ರೀತಿಯಲ್ಲಿ ಸರ್ಕಾರಿ ಶಾಲೆಗಳು ಮತ್ತು ಶಿಕ್ಷಕರು ನೇರವಾಗಿ ಹೊಣೆಯಾಗುತ್ತಾರೆ. ಏಕೆಂದರೆ ಸರ್ಕಾರ ಕೋಟಿಗಟ್ಟಲೇ ಹಣ ಸುರಿದು ತರಬೇತಿಗಳನ್ನು ಇನ್ನಿತರ ಸೌಲಭ್ಯಗಳನ್ನು ಒದಗಿಸಿದರೂ ಶಿಕ್ಷಕರು ದಕ್ಷತೆಯಿಂದ ಕಾರ್ಯ ನಿರ್ವಹಿಸದಿರುವುದು ಶೋಚನೀಯ ಸಂಗತಿಯಾಗಿದೆ. ಪ್ರಾಮಾಣಿಕತೆ, ಆಸಕ್ತಿ, ಆಕರ್ಷಣೀಯ ಬೋಧನೆಗಳು ಇಲ್ಲವಾಗಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕನು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕನು ಈ ಮೇಲಿನ ಅಂಶಗಳನ್ನು ಮೈಗೂಡಿಸಿಕೊಂಡು ಕರ್ತವ್ಯ ನಿರ್ವಹಿಸಿದ್ದೇ ಆದರೆ ಮತ್ತೆ ಸರ್ಕಾರಿ ಶಾಲೆಗಳು ಉನ್ನತ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಲು ಸಂದೇಹವೇ ಇಲ್ಲ. ಆಗ ಮಾತ್ರ ಖಂಡಿತ ಡೊನೇಶನ್ ಎಂಬ ಪೀಡೆಯನ್ನು ಓಡಿಸಲು ಸಾಧ್ಯವಾಗುತ್ತದೆ.


ಕೊಟ್ರೇಶ್ ಎಸ್. ಉಪ್ಪಾರ್,ಆಲೂರು.
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9739878197












ದಯವೇ -ಧರ್ಮವನ್ನಾಗಿಸಿದ, ಆತ್ಮವೇ-ವಿಶ್ವಾಸವನ್ನಾಗಿಸಿದ ಬಸವಣ್ಣನವರು

ದಯವೇ -ಧರ್ಮವನ್ನಾಗಿಸಿದ, ಆತ್ಮವೇ-ವಿಶ್ವಾಸವನ್ನಾಗಿಸಿದ ಬಸವಣ್ಣನವರು ಆಡಿಕೊಂಡಿಹರೆಂದು ಅಂಜಲದೇಕಯ್ಯಾ ನಾಸ್ತಿಕವಾಡಿಹರೆಂದು ನಾಚಲದೇಕಯ್ಯಾ ಆರಾದಡಾಗಲೀ ಶ್ರೀ ಮಹಾದೇವಂಗೆ ಶರಣೆನ್ನಿ ಏನೂ ಅರಿಯೆನೆಂದು ಮೌನಗೊಂಡಿರಬೇಡ ಲಿಂಗದೇವನ ಮುಂದೆ ದಂದಣವೆನ್ನಿ, ದತ್ತಣವೆನ್ನಿ . . . . ನಾವು ಯಾವುದಾದರೂ ಕಾರ್ಯ ಮಾಡಲು ತೊಡಗಿದರೆ ಹಿಂದೇಟು ಹಾಕಬಾರದು ಏಕೆಂದರೆ ಹಿಂಜರಿಕೆ ಎಂಬುದು ಮನುಷ್ಯನ ಒಂದು ದೌರ್ಬಲ್ಯ. ದೌರ್ಬಲ್ಯಗಳನ್ನು ನಾವು ಮೆಟ್ಟಿ ನಿಲ್ಲಬೇಕು. ಇಲ್ಲವಾದರೆ ಅತಿಯಾದ ಹಿಂಜರಿಕೆಯು ವ್ಯಕ್ತಿಯ ವ್ಯಕ್ತಿತ್ವವನ್ನೇ ಹಾಳು ಮಾಡುತ್ತದೆ. ಜ್ಞಾನಿಗಳಾದರೂ, ಪ್ರತಿಭಾವಂತರಾದರೂ ಅವರಲ್ಲಿ ಅಳುಕುತನ, ಹಿಂಜರಿಕೆ ಇದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಇಂತಹ ಸೂಕ್ಷ್ಮ ವಿಷಯ ಇಡೀ ಜೀವನದ ಮುನ್ನಡೆಗೆ ತಡೆಯೊಡ್ಡುವುದು. ಆದ್ದರಿಂದ ಪ್ರತಿಭೆಯ ಜೊತೆಗೆ ಮಾನಸಿಕ ಸ್ಥಿರತೆ ಬಹಳ ಮುಖ್ಯ. ಇನ್ನೊಬ್ಬರ ಸೇವೆ, ಸಮಾಜಪರ ಕಾರ್ಯಗಳನ್ನು ಮಾಡುವಾಗ ಸ್ಥಿರತೆ ಬೇಕೇ ಬೇಕು. ಮನುಷ್ಯನ ಏಳಿಗೆಗೆ ದಕ್ಕೆ ಯಾಗುವ ಹಲವಾರು ವಿಷಯಗಳ ಬಗ್ಗೆ ಬಸವಣ್ಣನವರು ತಮ್ಮ ವಚನಗಳಲ್ಲಿ ಬೆಳಕನ್ನು ಚೆಲ್ಲುವುದರ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ. ನಡೆಯ ಕಲಿಸಿದ ಬಸವ, ನುಡಿಯ ಕಲಿಸಿದ ಬಸವ ಎಂದು ಹರಿಹರ ಕವಿ ಬಸವಣ್ಣನನ್ನು ಹಾಡಿ ಹೊಗಳಿದ್ದಾರೆ. ಬಸವಣ್ಣನವರು ನಡೆ, ನುಡಿ, ಆಚಾರ, ವಿಚಾರ ಎಲ್ಲವನ್ನೂ ಕಲಿಸಿಕೊಟ್ಟರು. ಅವರಲ್ಲೊಬ್ಬ ಶ್ರೇಷ್ಠ ಮನಶಾಸ್ತ್ರಜ್ಞನಿದ್ದ. ಅವರಲ್ಲೊಬ್ಬ ಶ್ರೇಷ್ಠ ಚಿಂತ್ಸಕನಿದ್ದ. ಏಕೆಂದರೆ ಅವರು ಮನುಷ್ಯನ ಮನಸ್ಸಿನ ದೌರ್ಬಲ್ಯಗಳನ್ನು ಬಹಳ ಬೇಗನೇ ಗುರುತಿಸಿ ಅವುಗಳಿಗೆ ಸೂಕ್ತವಾದ ಪರಿಹಾರವನ್ನು ಕೊಡುವುದರ ಮೂಲಕ ಮನಸಿನ ದುಗುಡಗಳನ್ನು ದೂರ ಮಾಡುತ್ತಿದ್ದರು. ಅನ್ಯರ ಮನಸ್ಸಿನ ಅತೀ ಸೂಕ್ಷ್ಮ ರೀತಿಯ ಗುಣಗಳನ್ನು, ಹೊಯ್ದಾಟಗಳನ್ನು ಗುರುತಿಸಿ ಅಂತಹ ಮನವನ್ನು ಘನ ಮನವನ್ನಾಗಿ ಮಾಡಿ ವ್ಯಕ್ತಿಯಿಂದ ಉನ್ನತವಾದ ಪ್ರತಿಭೆ ಹೊರಹೊಮ್ಮುವಂತೆ ಮಾಡಿ ಹೊಸ ಬೆಳಕನ್ನು ನೀಡುತ್ತಿದ್ದರು. ಅಯ್ಯಾ ನಿಮ್ಮ ವಂಶಾವಳಿಯೊಳು ಒಬ್ಬ ತೊತ್ತಿನ ಮಗ ಹುಟ್ಟಿದ ಆತನ ತೊತ್ತಿನ ಮಗ ನಾನಯ್ಯಾ ಬಳಿದೊತ್ತು, ಬಳಗದೊತ್ತು, ವಂಶದೊತ್ತು ನಾನಯ್ಯಾ ನಿಮ್ಮ ಒಡೆತನಕ್ಕೆ ಕೇಡಿಲ್ಲವಯ್ಯ ಎನ್ನ ತೊತ್ತು ತನಕ್ಕೆ ಕೇಡಿಲ್ಲವಯ್ಯಾ . ಬಸವಣ್ಣನವರು ಈ ವಚನದಲ್ಲಿ ನಿನ್ನ ವಂಶದಲ್ಲೇ ಹುಟ್ಟಿನ ಆಳಿನ ಮಗ ನಾನು ಎಂದು ಪರಮಾತ್ಮನಿಗೆ ಹೇಳುತ್ತ, ಅತ್ಯಂತ ಕಿಂಕಿರತೆಯಿಂದ ಒಂದು ಮಹತ್ವದ ಸಂದೇಶವನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಈ ವಚನದಲ್ಲಿ ಧನ್ಯ, ಶರಣಾಗತಿಯ ಭಾವ, ನೊಂದ ಮನಕ್ಕೆ ಹೃದಯತುಂಬಿ ಚೇತರಿಕೆ ನೀಡುವ ಜೊತೆಗೆ ನನ್ನ ಯಜಮಾನ ನೀನೇ ಆಗಿರಲು ನನಗಿನ್ನೇನು ಕೊರತೆ ? ಆಳಿನ ಕೆಲಸ ನಾನು ನಿಷ್ಠೆಯಿಂದ ಮಾಡ್ತಾ ಹೋಗ್ತೀನಿ, ನನಗೆ ಅದ್ಹೇಗೆ ಕೆಡಕಾಗಲಿಕ್ಕೆ ಸಾಧ್ಯ ಎಂಬ ಆತ್ಮವಿಶ್ವಾಸ ತುಂಬುವ ಕಳಕಳಿಯಿದೆ. ಕೇವಲ ತಂದೆ, ತಾಯಿ, ಬಂಧು ಮಿತ್ರರು ಇಲ್ಲದಿದ್ದವರು ಮಾತ್ರ ಅನಾಥರಲ್ಲ. ದೇವರ ಕಾರುಣ್ಯವನ್ನು ಪಡೆಯದಿದ್ದವರು ಕೂಡ ನಿಜಕ್ಕೂ ಅನಾಥರು. ಶರಣರ ಸಂಗವನ್ನು ಪಡೆಯದಿದ್ದವರು, ಆತ್ಮೀಯರ ಪ್ರೀತಿ, ವಿಶ್ವಾಸಾಧಾರಗಳನ್ನು ಉಳಿಸಿಕೊಳ್ಳದಿದ್ದವರೂ ಕೂಡ ಒಂದು ರೀತಿಯಲ್ಲಿ ಅನಾಥರ ಸಾಲಿನಲ್ಲಿಯೇ ನಿಲ್ಲುತ್ತಾರೆ. ಪರಮಾತ್ಮ ಎಲ್ಲರನ್ನು ಒಂದು ರೀತಿಯ ಅನಾಥಪ್ರಜ್ಞೆ ಕಾಡುವಂತೆಯೆ ಲೀಲೆಯಾಡಿಸುತ್ತಾನೆ. ದುಡ್ಡಿಲ್ಲದ ಅನಾಥರು ಒಂದು ಕಡೆಯಾದರೆ, ದುಡ್ಡಿದ್ದು ಅನುಭವಿಸಲಾಗದಿರುವ ಅನಾಥರು ಮತ್ತೊಂದೆಡೆ ! ಕರುಣೆ, ಪ್ರೇಮ, ವಾತ್ಸಲ್ಯದ ಮಹಾಪೂರವೇ ಹರಿಯುತ್ತಿದ್ದರೂ ಅದನ್ನು ಸ್ವೀಕರಿಸಲಾರದ ಅನಾಥರು. ಮತ್ತವುಗಳನ್ನು ಕೊಡಲಾಗದ ಅನಾಥರು ಹೀಗೆ ಒಂದೇ, ಎರಡೇ ಎಲ್ಲವೂ ಅನಾಥಮಯ., ಮಾಯಮಯ. ಭ್ರಾಂತಿಯ ತೆಕ್ಕೆಯಲ್ಲಿ ಸಿಲುಕಿಕೊಂಡು ಬಿಡಿಸಿಕೊಳ್ಳಲಾಗದ ಅಜ್ಞಾನಿಗಳೆಲ್ಲಾ ಅನಾಥರೇ ! ಎಲ್ಲಿಯವರೆಗೆ ಮಾಯೆಯ ಮುಸುಕಿನಿಂದ ಹೊರಬರಲಾಗುವುದಿಲ್ಲವೋ ಅಲ್ಲಿಯವರೆಗೆ ಪರಮಾತ್ಮನ ಇರುವಿಕೆಯ ಅರಿವು ಜೀವಾತ್ಮರಿಗಾಗುವುದಿಲ್ಲ. ಕೆಲವರಿಗೆ ಎಲ್ಲವೂ ಗೊತ್ತು, ಏನು ಮಾಡಬೇಕೆಂದೂ ಗೊತ್ತು, ಆದರೂ ಏನನ್ನು ಮಾಡಲಾಗುವುದಿಲ್ಲ. ಕೆಲವರಿಗೆ ಬಹುಶ: ಕಾಲ ಪಕ್ವವಾಗಿಲ್ಲವೇನೋ? ಅಥವಾ ಇಚ್ಛಾ ಶಕ್ತಿಯ ಕೊರೆತೆಯೇನೋ ಎಂಬ ಭಾವನೆ ಮೂಡುವುದು ಸಹಜ. ದಯವಿಲ್ಲದ ಧರ್ಮವು ಯಾವುದಯ್ಯಾ ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿ ದಯವೇ ಧರ್ಮದ ಮೂಲವಯ್ಯಾ ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯಾ. ಬಸವಣ್ಣನವರ ಮಹಾಮನೆಯಲ್ಲಿ ನಿತ್ಯ ಪಠಿಸುವ ಈ ವಚನ ಕಲ್ಯಾಣದ ಶರಣರ ಮನೆಯಲ್ಲೆಲ್ಲಾ ಅನುಕರಣಿಸುತ್ತದೆ. ಕಾಯ, ವಾಚ, ಮನಸಾ ಎಂದೂ ಯಾರನ್ನೂ ನೋಯಿಸಿದವರಲ್ಲ. ಹಿಂಸೆಗೊಳಗಾದವರ ಬಳಿ ತಾವೇ ಧಾವಿಸಿ, ಅವರ ಕಂಬನಿಗಳನ್ನು ತೊಡೆದು, ನೋವಿಗೆ ಸಾಂತ್ವಾನದ, ಪ್ರೀತಿಯ ಔಷಧಲೇಪನ ಮಾಡುತ್ತಾರೆ. ಬಸವಣ್ಣನವರಿಗೆ ಮನುಜರ ಸೇವೆಯಲ್ಲಿಯೇ ಮಹಾದೇವನ ಸೇವೆಯನ್ನು ಕಂಡುಂಡಷ್ಟು ತೃಪ್ತಿ. ಮನುಜರಷ್ಟೇ ಅಲ್ಲ, ಸಕಲ ಜೀವಾತ್ಮಗಳ ನೋವನ್ನು ಕಂಡು ಮರುಗುತ್ತಾರೆ. ತಾವು ಒರ್ವ ಸಾಮ್ರಾಜ್ಯವೊಂದರ ಸಚಿವರೆಂದು ಮರೆತು, ತಾವೊಂದು ಚಳುವಳಿಯ ನಾಯಕ ಎಂಬುದನ್ನು ಬದಿಗಿರಿಸಿ ಆ ನೊಂದ ಜೀವಿಗಳ ಸೇವೆಯನ್ನು ಕೇವಲ ಶರಣ ಮನಸ್ಕ ಸಾಮಾನ್ಯ ಮನುಷ್ಯರಾಗಿ ಮಡುವ ಮಾನವೀಯ ಸಾರ್ವಕಾಲಿಕವಾಗಿ ಉಳಿಯಬಲ್ಲ ವಿಶ್ವಮಾನವರಾಗಿದ್ದಾರೆ. ಜಾತಿ ಕಂತೆಗಳಿಂದ ಹೊರಬಂದು ಜಗವನ್ನು ಶ್ರೇಷ್ಟ ಕಾಯಕದಿಂದ ತಮ್ಮತ್ತ ಸೆಳೆದವರು. ಜನಮಾನಸದಲ್ಲಿ ಉಳಿದವರು ಸತ್ಯವಂತರ, ನೀತಿವಂತರ ಹೃದಯಂಗಮದಲ್ಲಿ ನೆಲೆನಿಂತವರು. ಅವರ ವಚನಗಳಲ್ಲಿ ಸ್ತುತಿಸಿದ ಆತ್ಮ-ವಿಶ್ವಾಸ, ಧಯೆಗಳು ಪ್ರತಿಯೊಬ್ಬರೂ ಅನುಸರಿಸಲೇ ಬೇಕಾದ ವ್ಯಕ್ತ್ತಿತ್ವ ರತ್ನಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಕೊಟ್ರೇಶ್ ಎಸ್. ಉಪ್ಪಾರ್, ಆಲೂರು ??-9739878197

ದೇವದಾಸಿ ಪದ್ದತಿಯ ತವರು ಮನೆ ವಿಜಯ ನಗರ ಸಾಮ್ರಾಜ್ಯ - ಕೊಟ್ರೇಶ್ ಎಸ್.ಉಪ್ಪಾರ್






ಹಾಸ್ಯ ಸಾಹಿತಿ ಆಲೂರು ನಾಗರಾಜು - ಕೊಟ್ರೇಶ್ ಎಸ್.ಉಪ್ಪಾರ್



ಕಾಡು ಕವಿ ದುದ್ದಶ್ರೀ - ಕೊಟ್ರೇಶ್ ಎಸ್ ಉಪ್ಪಾರ್