ಶನಿವಾರ, ಸೆಪ್ಟೆಂಬರ್ 20, 2014

ಗೊರೂರರ’ ನಂತರ ಗೊರೂರನ್ನು ಪ್ರತಿನಿಧಿಸಿದ ಸೋಮಶೇಖರ್- ಕೊಟ್ರೇಶ್ ಎಸ್.ಉಪ್ಪಾರ್, ಆಲೂರು


       ಗೊರೂರು ಎಂದಾಕ್ಷಣ ನಮ್ಮೆದುರಿಗೆ ಧಟ್ಟಂತ ಬಂದೆದುರಿಗೆ ನಿಲ್ಲುವವರು ಗೊರೂರು ರಾಮಸ್ವಮಿ ಅಯ್ಯಂಗಾರ್. ಅವರಿಂದಲೇ ಬಹುಶಃ ಹಾಸನದ ಈ ಗೊರೂರು ಊರು ಜಗತ್ಪ್ರಸಿದ್ಧಿ ಪಡೆದಿದ್ದು. ಅಂದಿನಿಂದಲೂ ಇಂದಿಗೂ ಅಲ್ಲಿಂದ ಅನೇಕ ಸಾಹಿತಿಗಳ ಹೊರಹೊಮ್ಮಿದ್ದಾರೆ. ಅಂಥವರಲ್ಲಿ ಶ್ರೀ ಗೋರೂರು ಸೋಮ ಶೇಖರ್ ರವಸದರೂ ಒಬ್ಬರು.
    ರಾಮಸ್ವಾಮಿ ಅಯ್ಯಂಗಾರರಿಗೆ ಗೊರೂರು, ಹೇಮಾವತಿ ನದಿ, ತೀರ ಮುಂತಾದ ಗ್ರಾವೀಣ ಬದುಕು, ಬವಣೆಗಳೇ ಸಾಹಿತ್ಯಾದ ಪ್ರತೀಕವಾಗಿದ್ದವು. ಅಂತೆಯೇ ಗೊರೂರು ಸೋಮಶೇಖರ್ ರವಸದರೂ ಸಹ ಗೊರೂರಿನ ಅನೇಕ ಘಟನೆಗಳನ್ನು ರಾಮಸ್ವಾಮಿ ಅಯ್ಯಂಗಾರ್, ಮುಂತಾದ ವಿಷಯಗಳ ಸುತ್ತಲೇ ಸಾಕಷ್ಟು ಬರೆದಿದ್ದಾರೆ.
ಶ್ರೀಯುತ ಗೊರೂರು ಸೋಮಶೇಖರ್ ರವರು 1934 ರ ಜೂನ್ 05 ರಂದು ಗೊರೂರಿನ ಶ್ರೀ ಅಪ್ಪಯ್ಯ ಶೆಟ್ಟಿ ಮತ್ತು ಶ್ರೀಮತಿ ಶಂಕರಮ್ಮ ದಂಪತಿಗಳ   ಪುತ್ರರಾಗಿ ಜನಿಸಿದರು.
       ಚಿಕ್ಕಂದಿನಿಂದಲೇ ರಮಸ್ವಾಮಿ ಅಯ್ಯಂಗರರಂಥ ಮರು ಸಾಹಿತಿಗಳ ಒಡನಾಡಿಯಾಗಿ, ಶಿಷ್ಯರಾಗಿ, ಆತ್ಮೀಯರಾಗಿ ಬೆಳೆದ ಸೋಮಶೇಖರ್ ರವರು, ಅವರ ಹಲವಾರು ಅನುಭವದ ರಸವತ್ತಾದ ಪ್ರಸಂಗಗಳನ್ನು ‘ಗೊರೂರು..........ನೆನಪುಗಳು’ ಪುಸ್ತಕದಲ್ಲಿ ಬರೆದಿದ್ದಾರೆ. ಗೊರೂರುರಂತೆ ಇವರೂ ತನ್ನೂರಿನ ಜನರು ಊರಿನ ಬಗೆಗೆ, ಬದುಕಿನ ವಿವಿಧ ಮೂಲಗಳನ್ನು ಹಾಸ್ಯಮಯವಾಗಿ ವಿಡಂಬಿಸಿದ್ದಾರೆ. ಈ ಕೃತಿಯಲ್ಲಿ ರಾಮಸ್ವಾಮಿ ಅಯ್ಯಂಗಾರ್ ಚಿತ್ರಣ, ಗೊರೂರು ಶಾಸನಗಳೂ, ಗೊರೂರಿನಲ್ಲಿನ ಅವರ ಬಾಲ್ಯ, ಅಲ್ಲಿ ನಡೆಯುತ್ತಿದ್ದ ಬಯಲಾಟಗಳು, ಜಾತ್ರೆ ಉತ್ಸವಗಳು, ದೇವರುಗಳು,ಮದುವೆ-ಆಚಾರ ವಿಚಾರಗಳು, ಹೇಮಾವತಿ ನದಿ ತೀರದ ಪ್ರಸಂಗಗಳು ಹೀಗೆ ಹಲವಾರು ವಿಷಯಗಳನ್ನೊಳಗೊಂಡತೆ ಇಡೀ ಗೊರೂರಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಗೊರೂರು ಸೋಮಶೇಖರ್ ರವರು ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಅಮೂಲ್ಯ ಕೃತಿರತ್ನಗಳನ್ನು ನೀಡಿದ್ದಾರೆ. ಸಂಪಾದಿತವೂ ಒಂದು ಸಾಹಿತ್ಯದ ಶ್ರೇಷ್ಠ ಪ್ರಕಾರವೆಂದೇ ಹೇಳಬಹುದು. ‘ಹೇಮಾವತಿ ಜಲಾಶಯ’ ‘ಹೇಮಕೂಟ’ ಜಾಗೃತಿ-ಸಂಪಾದಿತ ಕೃತಿಗಳು; ‘ರಂಗ.....ಹುಷಾರ್(ನಾಟಕ): ‘ಗೊರೂರು......ನೆನಪುಗಳು’ ಇದು 2003 ಹಾಗೂ 2006 ರಲ್ಲಿ ದ್ವಿಮುದ್ರಣ ಕಂಡಿದೆ. ‘ಬಸವಣ್ಣನ ಪುರಾತದಾಸಿಮಯ್ಯ’-2014(ವೈಚಾರಿಕ ಲೇಖನಗಳು).
       ಚಿಕ್ಕವಯಸ್ಸಿನಿಂದಲೇ ಬಯಲಾಟ, ರಂಗಭೂಮಿಯನ್ನು ಹವ್ಯಾಸಮಾಡಿಕೊಂಡ ಸೋಮಶೆಖರ್ ರವರು ಹಲವರು ನಾಟಕಗಳಲ್ಲಿ ಅಭಿನಯಿಸಿದ್ದಾರೆ, ನಿರ್ದೇಶನ ಮಾಡಿದ್ದಾರೆ. ಪತ್ರಿಕಾ ವರದಿಗಾರರಾಗಿಯೂಆ ಕೆಲ ದಿನಗಳು ದುಡಿದ ಇವರು , ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಮ್ಮಿಕೊಂಡಿದ್ದ ‘ಆಡಳಿತದಲ್ಲಿ ಕನ್ನಡ’ ಎಂಬ ವಿಷಯದಡಿಯಲ್ಲಿ ಹಲವಾರು ಇಂಜಿನಿಯರ್ಗಳಿಗೆ, ಲೆಕ್ಕಿಗರಿಗೆ ತರಬೇತಿ ನೀಡಿದ ಕೀರ್ತಿ ಇವರದು.
      ಸಾಹಿತ್ಯ, ರಂಗಭೂಮಿ, ಸಾಮಾಜಿಕವಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಇವರು ನೇಕಾರ ರಾಷ್ಟ್ರೀಯ ವಿಶ್ವಸಂಸ್ಥೆ ಮಂಡಳಿಯ ಸಂಸ್ಥಾಪಕ ಗೌರವಾಧ್ಯಕ್ಷರಾಗಿ, ನಾಗರೀಕ ಸೇವಾ ಸಮಿತಿ, ಜೆ.ಪಿ. ನಗರದ ಹಾಲಿ ಗೌರವಾಧ್ಯಕ್ಷರಾಗಿ, ದೇವಾಂಗ ಮಹಾ ಮಂಡಲದ ಸಂಸ್ಥಾಪಕರಾಗಿ, ದೇವಾಂಗ ಸೇವಾ ಸಮಾಜದ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಗೊರೂರು ಸೋಮಶೇಖರ್ ರವರು ವೃತ್ತಿಯಲ್ಲಿ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸುಚಿತ್ತದಿಂದ ದುಡಿಯುತ್ತಿರುವ ಬಹುಮುಖ ಕಲಾ ಪ್ರತಿಭೆ ಎಂದರೆ ಅತಿಶಯೋಕ್ತಿಯಾಗಲಾರದು. ವಸ್ತವತೆಯ ನೆಲೆಗಟ್ಟಿನಲ್ಲಿ ಬರೆದ ಇವರ ಸಾಹಿತ್ಯ ಓದುಗರನ್ನು ಬಹುಬೇಗ ಆಕರ್ಷಿಸುವಂಥದ್ದು. ಹಲವು ಬದುಕುಗಳು ಇವರ ಬರವಣೆಗೆಯಲ್ಲಿ ಜೀವ ಪಡೆದು ಕೊಂಡಿದೆ. ಹಾಸನ ಜಿಲ್ಲೆ ಕಂಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಸೋಮಶೇಖರ್ ರವರು ಪರಿಷತ್ತಿನ ಹಲವಾರು ಕಾರ್ಯಕ್ರಮಗಳ್ನು ಸುಸಂಘಟಿತವಗಿ ನಿರ್ವಹಿಸಿ ಯಶಸ್ವಿಗೊಳಿಸಿದ್ದಾರೆ.
      ಇಳಿ ವಯಸ್ಸಿನಲ್ಲಿಯೂ ಬಹುಮುಖಿ, ಜನಪರ ಚಟುವಟಿಗಳ ಜೊತೆಗೆ ಬರಹಗಳ ಮೂಲಕ ಬಡವರ್ಗಗಳ ದನಿಯಾಗುವ ಆಶಯ ಹೊಂದಿರುವ ಇವರು ಸದಾ ಕ್ರಿಯಾಶೀಲವಾದ ವ್ಯಕ್ತಿ.ಪ್ರಸ್ತುತ ಬೆಂಗಳೂರಿನ ಜೆ.ಪಿ.ನಗರದ 8ನೇ ಮೇನ್, 3ನೇ ಕ್ರಾಸ್ ಮ.ನಂ. 885 ರಲ್ಲಿ ವಾಸವಾಗಿರುವ ಇವರು ವೃತ್ತಿಯಿಂದ ವಿಶ್ರಾಂತ ಜೀವನ ನಡೆಸುತ್ತಿದ್ದರೂ, ಪ್ರವೃತ್ತಿಯಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ, ಹಾಸನ
ಮೊ-9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ