ಕನ್ನಡ ಸಾಹಿತ್ಯದ ಗದ್ಯ ಶಿಲ್ಪಿ- ನಾಡೋಜ ದೇಜಗೌ
ಕನ್ನಡ ಸಾಹಿತ್ಯದಲ್ಲಾದ ನವೊದಯ ಕ್ರಾಂತಿ ನಮಗೆ ನಿಚ್ಚಳವಾಗಿ ಕಾಣುವುದು ಇಪ್ಪತ್ತೇಳನೆಯ ಶತಮಾನದ ಆದಿಭಾಗದಿಂದ. ಈ ಕ್ರಾಂತಿ ಹನ್ನೆರಡನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಿಂದ ಸಂಪೂರ್ಣವಾಗಿ ಭಿನ್ನವಾದುದು. ಅಂದಿನ ಕ್ರಾಂತಿ ಬಹುಮುಖ್ಯವಾಗಿ ಧರ್ಮಮೂಲವಾದುದಾಗಿದ್ದರೆ ಇಲ್ಲಿ ನಡೆದದ್ದು ವಿಶ್ವ ವಿಶಾಲವಾದ ಲೌಕಿಕ ಜ್ಞಾನ ಸಾಧನೆಯನ್ನು ಹೆಗ್ಗುರಿಯಾಗಿಟ್ಟುಕೊಂಡಿತು. ಇಲ್ಲಿಯ ಮುಖ್ಯ ಲಕ್ಷಣ ವೈಜ್ಞಾನಿಕ ಮನೋಭಾವನೆ. ಈ ಮನೋಭಾವನೆಗೆ ಬೀಜ ಭೂತವಾದುದು ಸ್ವತಂತ್ರ ವಿವೇಚನೆ. ಬುದ್ಧಿಗೆ ಇಲ್ಲಿ ಪ್ರಾಧಾನ್ಯ. ಮತಸೂಚಕ ಭಾವನೆಗಳಿಗೆ ಪ್ರಾಧಾನ್ಯತೆ ತಗ್ಗಿ ವಿಶಾಲ ಭಾವನೆಗಳಿಗೆ ಇಂಬು ದೊರಕಿತು.
ಕುವೆಂಪುರಾದಿಯಾಗಿ ಅವರ ಪರಂಪರೆಯಲ್ಲಿಯೇ ಬೆಳೆದು ಬಂದ ಜಿ.ಎಸ್.ಎಸ್, ಹಾ.ಮ. ನಾಯಕ, ಸಿದ್ಧಯ್ಯ ಪುರಾಣಿಕ, ದೇ.ಜ. ಗೌ, ಡಾ. ಸಿ.ಪಿ.ಕೆ, ಜ.ಹೊ.ನಾ, ಡಾ. ಮಳಲಿ ಮುಂತದ ಹಲವಾರು ಸಾಹಿತ್ಯ ದಿಗ್ಗಜರು ವೈಚಾರಿಕತೆಯ ಹರಿಕಾರರಾಗಿ ವಿಶ್ವ ಮಾನವೀಯ ನೆಲೆಯಲ್ಲಿ ಚಿಂತನಾಶೀಲರಾಗಿ ಸಾಹಿತ್ಯ ಕಾಯಕಯೋಗಿಗಳಾಗಿದ್ದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನೇ ಸೃಷ್ಟಿಸಿತೆನ್ನಬಹುದು.
ಅದರಲ್ಲೂ ದೇ.ಜವರೇಗೌಡರು ಕುವೆಂಪು ಕಂಡ ಅನೇಕ ಕನಸುಗಳನ್ನು ನನಸು ಮಾಡಿದ ಅಪೂರ್ವ ವ್ಯಕ್ತಿ. ನೂರಾರು ವಿಭಿನ್ನ ರೀತಿಯ ಸಾಹಿತ್ಯ ರತ್ನಗಳು ನಾಡು ನುಡಿಗೆ ನೀಡುವುದರ ಜೊತೆಗೆ ‘ಗೋಕಾಕ ಚಳುವಳಿ’, ಗಡಿವಿವಾದ ಚಳುವಳಿ, ಕಾವೇರಿ ಚಳುವಳಿ ಹೀಗೆ ಹತ್ತು ಹಲವು ಭಾಷಾ ಸಂಘಟನೆಗಾಗಿ ತನು ಮನವರ್ಪಿಸಿದ ಧೀಮಂತ ವ್ಯಕ್ತಿತ್ವ ದೇ.ಜ.ಗೌ ಅವರದು. ಇವರು 1918 ಜುಲೈ 6ರಂದು ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆ ಗ್ರಾಮದಲ್ಲಿ ಜನಿಸಿದರು. ತಂದೆ ದೇವೇಗೌಡ ತಾಯಿ ಚೆನ್ನಮ್ಮ. ಕಡು ಬಡತನದಲ್ಲಿ ಬೆಳೆದು ಬಂದ ದೇ.ಜ.ಗೌ ತಮ್ಮಲ್ಲಿಯ ಉತ್ಸಾಹ, ಕ್ರೀಯಾಶಿಲತೆ, ಕಲ್ಪನಾ ಶಕ್ತಿಗಳಿಂದ ಒಂದೊಂದೆ ಮೆಟ್ಟಿಲುಗಳನ್ನು ಏರಿ ಉನ್ನತ ಸ್ಥಾನವನ್ನು ಪಡೆದುಕೊಂಡವರು. ಕನ್ನಡದ ಬೆಳವಣಿಗೆಗಾಗಿ ಇವರು ನಡೆಸಿದ ಪ್ರಯತ್ನಗಳು, ರೂಪಿಸಿದ ಯೋಜನೆಗಳು ಇವರಿಗೆ ಕನ್ನಡ ನಾಡಿನಾದ್ಯಂತ ಒಳ್ಳೆಯ ಕೀರ್ತಿ, ಗೌರವಗಳನ್ನು ತಂದು ಕೊಟ್ಟವು.
ದೇಜಗೌ ಸ್ನಾತಕೊತ್ತರ ಕನ್ನಡ ಪದವಿ ಪಡೆದ ನಂತರ ಮೂರು ವರ್ಷ ಸೆಕ್ರೆಟರಿಯೆಟ್ನಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿ ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಉಪನ್ಯಾಸ ವೃತ್ತಿ ಮಾಡಿ, 1949ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿ, 1955ರಲ್ಲಿ ಉಪಪ್ರಾಧ್ಯಾಪಕರಾದರು. 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪರೀಕ್ಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, 1960ರಲ್ಲಿ ಶಿವಮೊಗ್ಗ ಸಹ್ಯಾದ್ರಿ ಕಾಲೇಜ್ ಪ್ರಾಂಶುಪಾಲರಾದರು. 1964ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿದರು. 1966ರಲ್ಲಿ ಕುವೆಂಪುರಂತಹ ಮಹಾನ್ ಚೇತನಗಳೊಂದಿಗೆ ಕನ್ನಡ ಅಧ್ಯಯನ ಸಂಸ್ಥೆಯ ಸ್ಥಾಪನೆಗೆ ಕಾರಣರಾದರು.
1969ರ ನವೆಂಬರ್ 1ರಂದು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಆಯ್ಕೆಯಾದ ಇವರು ವಿಶ್ವ ವಿದ್ಯಾನಿಲಯವನ್ನು ಜಾಗತಿಕವಾಗಿ ಹೆಸರಾಗುವಂತೆ ಮಾಡಿದರು. 1994ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಗೆ ‘ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ’ ಎಂದು ಪುನರ್ ನಾಮಕರಣ ಮಾಡಿದರು.
ಜಾಗತಿಕ ಮಹಾನ್ ಲೇಖಕರಾದ ಟಾಲ್ಸ್ಟಾಯ್ ಅವರ ‘ವಾರ್ ಅಂಡ್ ಪೀಸ್’ ಎಂಬ ಕೃತಿಯನ್ನು ‘ಯುದ್ಧ ಮತ್ತು ಶಾಂತಿ’ ರೂಪದಲ್ಲಿ ಕನ್ನಡಕ್ಕೆ ತಂದು ಕೊಟ್ಟ ಕೀರ್ತಿ ದೇ.ಜ.ಗೌ ಅವರಿಗೆ ಸಲ್ಲುತ್ತದೆ. ಹಾಗೆಯೇ ಕನ್ನಡ ಜಾನಪದ ಅಧ್ಯಯನ ಬೆಳವಣಿಗೆಯಲ್ಲಿ ಹೊಸ ಆಯಾಮವನ್ನು ಸೃಷ್ಠಿಸಿದವರಲ್ಲಿ ಇವರು ಪ್ರಮುಖರು.
ಅದರಲ್ಲೂ ಸ್ನಾತಕೋತ್ತರ ಹಂತದಲ್ಲಿ ಜಾನಪದವನ್ನು ಕಲಿಯಲು ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದರು. ಕರ್ನಾಟಕ ಜಾನಪದ ಪರಿಷತ್ತು, ಜಾನಪದ ವಸ್ತು ಸಂಗ್ರಹಾಲಯ ಇವುಗಳ ಹುಟ್ಟಿಗೂ ಕಾರಣರಾಗಿ ಪರಂಪರೆಯ ಮಹೋನ್ನತಿಯನ್ನು ಬಯಸಿದ, ಶ್ರಮಿಸಿದ ಅಪ್ರತಿಮ ವ್ಯಕ್ತಿತ್ವ ದೇಜಗೌ ಅವರದು.
ಕನ್ನಡ ಜಾನಪದ ಸಾಹಿತ್ಯ ಸಾರಸ್ವತ ಲೋಕಕ್ಕೆ ‘ಜಾನಪದ ಅಧ್ಯಯನ’, ‘ಜಾನಪದ ಸೌಂದರ್ಯ’, ‘ಜಾನಪದ ವಾಹಿನಿ’ ಮುಂತಾದ ಮಹತ್ವದ ಕೃತಿ ರತ್ನಗಳನ್ನು ನೀಡಿದ್ದಾರೆ. ಜಾನಪದ ವ್ಯಾಪಕತೆ, ಸಂಗ್ರಹ, ಸಂಪಾದನೆ, ವೈಜ್ಞಾನಿಕ ದೃಷ್ಠಿ ಮುಂತಾದ ನಿಟ್ಟಿನಲ್ಲಿ ಕಾಯಕಗೈದು ಈ ಕ್ಷೇತ್ರಕ್ಕೆ ನವ ಚೈತನ್ಯವನ್ನುಂಟು ಮಾಡಿದರು.
ತಮ್ಮ ಗುರುಗಳಾದ ಕುವೆಂಪುರವರು ಕಟ್ಟಿಕೊಂಡ ಕನಸುಗಳನ್ನು ನನಸು ಮಾಡಿ ವಿಶ್ವದಲ್ಲೇ ಉನ್ನತ ವಿಶ್ವವಿದ್ಯಾಲಯವೆಂದು ಖ್ಯಾತಿ ಗಳಿಸುವಂತೆ ಮೈಸೂರು ವಿಶ್ವವಿದ್ಯಾಲಯವನ್ನು ರೂಪಿಸಿದ ಕೀರ್ತಿ ದೇಜಗೌ ಅವರದು. ವಿಚಾರ, ವಿಮರ್ಶೆ, ಸಂಪಾದನೆ, ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕೃಷಿಗೈದ ಇವರು ‘ಹೋರಾಟದ ಬದುಕು’ ಎಂಬ ವಿಶಿಷ್ಟ ರೀತಿಯ ಆತ್ಮ ಕಥನವನ್ನು ಬರೆದಿದ್ದಾರೆ. ಆದ್ದರಿಂದಲೇ ಇವರನ್ನು ಖ್ಯಾತ ವಿಮರ್ಶಕ, ಸಂಶೋಧಕರಾದ ಡಾ.ಜಿ.ಆರ್. ತಿಪ್ಪೇಸ್ವಾಮಿಯವರು ‘ಪರಂಪರೆಯ ಪ್ರತಿನಿಧಿ’ ಎಂದು ಮನದುಂಬಿ ಹಾಡಿ ಹೊಗಳಿದ್ದಾರೆ.
ಗದ್ಯ ಶೈಲಿ, ಗದುಗಿನ ಭಾರತ, ನಂಜುಂಡಕವಿ, ಕುವೆಂಪು ಕೆಲವು ಅಧ್ಯಯನಗಳು, ನೂರೆಂಟು ಪುಸ್ತಕಗಳು, ಬೆರೆಕೆ ಸೊಪ್ಪುಗಳು, ಮುನ್ನುಡಿಗಳು, ಶರಣಪಥ, ಷಡಕ್ಷರದೇವ, ಸಾಹಿತಿಗಳ ಸಂಗದಲ್ಲಿ, ನಿರಂತರ, ಸಾಹಿತ್ಯ ಮಾರ್ಗ, ಭಾಷಾಂತರ ಕಲೆ, ಜಾನಪದ ಸೌಂದರ್ಯ, ಕುವೆಂಪು ದರ್ಶನ ಮತ್ತು ಸಂದೇಶ, ಜಾನಪದ ಅಧ್ಯಯನ, ‘ಆಂಡಯ್ಯ ಕವಿ’ ಮುಂತಾದ ವಿಚಾರ ವಿಮರ್ಶೆ ಕೃತಿರತ್ನಗಳನ್ನು ಕನ್ನಡ ಸಾಹಿತ್ಯದೊಡಲಿಗೆ ನೀಡಿದ್ದಾರೆ.
ದೇಜಗೌರವರು ಆಕರ್ಷಣೆಯ ಬರವಣಿಗೆಯ ಮಹತ್ವದ ಗದ್ಯ ಶಿಲ್ಪಿ. ಆದ್ದರಿಂದಲೇ ಕುವೆಂಪುರವರ ‘ಶ್ರೀ ರಾಮಾಯಣದರ್ಶನಂ’ ಮಹಾಕಾವ್ಯವನ್ನು ‘ವಚನ ಚಂದ್ರಿಕೆ’ ಎಂಬ ಗದ್ಯ ರೂಪದ ಕೃತಿಗೆ ಇಳಿಸಿದರು. ಟಾಲ್ಸ್ಟಾಯ್ನ ‘ರೆನಾಸೆನ್ಸ್’ ಕೃತಿಯನ್ನೂ ‘ಪುನರುತ್ಥಾನ’ ಎಂಬುದಾಗಿಯೂ ಜೆನ್ ಆಸ್ಟಿನ್ರವರ ‘ಪ್ರೈಡ್ ಎಂಡ್ ಪ್ರೆಜುಡಿಸ್’ ಕೃತಿಯನ್ನು ‘ಹಮ್ಮು ಬಿಮ್ಮು’ ಎಂಬ ಹೆಸರಿನಿಂದ ಕನ್ನಡಕ್ಕೆ ತಂದ ಕೀರ್ತಿ ಇವರದು. ರಾಷ್ಟ್ರ ಕವಿ ಕುವೆಂಪು, ಅಂಬೇಡ್ಕರ್, ಗೋಖಲೆ, ನಂಜುಂಡ ಕವಿ, ಮೇರಿ ಕ್ಯೂರಿ, ಋಷಿಕವಿ ರವಿಂದ್ರರು, ಕರ್ನಾಟಕದ ರೂವಾರಿ, ಕನ್ನಡ ನಾಡಿನ ಕಲಿ, ನಾರಾಯಣ ಗುರು ಮುಂತಾದ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ವಿದೇಶದಲ್ಲಿ ನಾಲ್ಕು ವಾರ, ಪ್ರವಾಸಿಯ ದಿನಚರಿ, ಆಫ್ರಿಕಾ ಯಾತ್ರೆ ಮುಂತಾದ ಅತ್ಯುತ್ತಮ ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.
ಸೃಜನಶೀಲ ಹಾಗೂ ಸೃಜನೇತರ ಸಾಹಿತ್ಯಗಳೆರಡರಲ್ಲಿಯೂ ಸಿದ್ಧಿ ಪಡೆದಿದ್ದ ದೇ.ಜ.ಗೌ ರವರು ‘ಅಜಿತ ತೀರ್ಥಂಕರ ಪುರಾಣ ತಿಲಕಂ’, ಕಬ್ಬಿಗರ ಕಾವ್ಯಂ, ಗಿರಿಜಾ ಕಲ್ಯಾಣ, ಲಿಲಾವತಿ ಪ್ರಬಂಧಂ, ಜೈಮಿನಿ ಭಾರತ ಸಂಗ್ರಹ, ಧರ್ಮಾಮೃತ ಸಂಗ್ರಹ, ಬಸವ ಸಂಹಿತೆ ಮುಂತಾದ ಸಂಪಾದಿತ ಕೃತಿಗಳನ್ನು ನೀಡುವುದರ ಮೂಲಕ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿಯೂ ಅನೇಕ ಉತ್ತಮೋತ್ತಮ ಕೃತಿಗಳನ್ನು ಸಂಪಾದಿಸಿದ್ದಾರೆ.
ಇವರು ಉಪಕುಲಪತಿಗಳಾಗಿದ್ದ ಕಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ‘ಜಾನಪದ ವಸ್ತು ಸಂಗ್ರಹಾಲಯ’ ವನ್ನು ಸ್ಥಾಪಿಸಿ ಸಾವಿರಾರು ಸಂಶೋಧಕ ವಿದ್ಯಾರ್ಥಿಗಳಿಗೆ ಬೆಳಕಾದರು. ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಸ್ಥಾಪಿಸಿ ಮಕ್ಕಳಿಗಾಗಿ ಶಾಲೆ ಸ್ಥಾಪಿಸಿ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ. ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರಾಗಿ ಶಿಶು ಸಾಹಿತಿಗಳಿಗೆ ಪ್ರೇರಕರಾಗಿ ಮಾರ್ಗದರ್ಶನ ನೀಡುತ್ತಾ ಸಾಹಿತ್ಯ ಪೋಷಕರಾಗಿದ್ದಾರೆ.
ದೇಹಕ್ಕೆ ಮಾತ್ರ ವಯಸ್ಸು ಮನಸ್ಸಿಗಲ್ಲ ಎಂಬಂತೆ ಶತಮಾನದ ಹೊಸ್ತಿಲಲ್ಲಿರುವ ಇವರು ಇಂದಿಗೂ ಸತತವಾಗಿ ಬರವಣಿಗೆ, ಕನ್ನಡ ಸಮಸ್ಯೆಗಳಿಗೆ ಸ್ಪಂದಿಸುವುದು, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕಾಗಿ ಹೋರಾಟ, ಕಾವೇರಿ ವಿವಾದ, ಬೆಳಗಾವಿ ಗಡಿ ವಿವಾದ ಹೀಗೆ ಹತ್ತು ಹಲವು ಚಳವಳಿಗಳಲ್ಲಿ ಭಾಗಿಯಾಗಿ ನವಯುವಕರಂತೆ ಕಾಯಕಯೋಗಿಗಳಾಗಿರುವುದು ಅನುಕರಣೀಯ ಹಾಗೂ ಶ್ಲಾಘನೀಯವಾದುದು.
ಕನ್ನಡದ ಪುರೋಭಿವೃದ್ಧಿಗಾಗಿ ದುಡಿದ ದೇಜೆಗೌ ಅವರ ಪರಿಶ್ರಮವನ್ನು ಮತ್ತು ಅಪಾರ ಸಂಖ್ಯೆಯ ಅಮೂಲ್ಯ ಕೃತಿಗಳನ್ನು, ಕಾರ್ಯಕ್ಷಮತೆಯನ್ನು ಮೆಚ್ಚಿ 1970ರಲ್ಲಿ ಬೆಂಗಳೂರಿನಲ್ಲಿ ನಡೆದ 42ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷಗಿರಿ ಪಟ್ಟ ಅಲಂಕರಿಸಿತ್ತು.
ಕನ್ನಡದ ಕಟ್ಟಾಳುವೆಂದೇ ಹೆಸರಾದ ಇವರಿಗೆ ನೂರಾರು ಗೌರವಾದರ ಪ್ರಶಸ್ತಿಗಳು, ಪುರಸ್ಕಾರಗಳು ಸಂದಿವೆ.
* 1975 -ಗೌರವ ಡಾಕ್ಟರೇಟ್- ಕರ್ನಾಟಕ ವಿಶ್ವವಿದ್ಯಾಲಯ
* 1998 -ಪಂಪ ಪ್ರಶಸ್ತಿ- ಸಮಗ್ರ ಸಾಹಿತ್ಯ
ಸೇರಿದಂತೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ರತ್ನ, ಕನಕ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ಪ್ರಶಸ್ತಿ ಮುಂತಾದ ಪ್ರಶಸ್ತಿ ಸಲ್ಲುವುದರ ಮೂಲಕ ಈ ಪ್ರಶಸ್ತಿಗಳು ದೇಜಗೌರವರಿಗೆ ಮುಡಿಪಾಗುವುದರ ಮೂಲಕ ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ ಎಂದರೆ ಅತಿಶಯೋಕ್ತಿಯಾಗಲಾರದು.
ಕನ್ನಡ ಭಾಷೆಯ ಹಿತಚಿಂತಕರಾದ ಇವರು ಕುವೆಂಪು ಅವರ ವಿಚಾರ ಧಾರೆಯನ್ನು ಕರಗತ ಮಾಡಿಕೊಂಡು ಕನ್ನಡತ್ವದ ನೆಲೆಯಲ್ಲಿ ಜೀವಿಸುತ್ತಿದ್ದಾರೆ.
ಕನ್ನಡ ಸಾಹಿತ್ಯದಲ್ಲಾದ ನವೊದಯ ಕ್ರಾಂತಿ ನಮಗೆ ನಿಚ್ಚಳವಾಗಿ ಕಾಣುವುದು ಇಪ್ಪತ್ತೇಳನೆಯ ಶತಮಾನದ ಆದಿಭಾಗದಿಂದ. ಈ ಕ್ರಾಂತಿ ಹನ್ನೆರಡನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಿಂದ ಸಂಪೂರ್ಣವಾಗಿ ಭಿನ್ನವಾದುದು. ಅಂದಿನ ಕ್ರಾಂತಿ ಬಹುಮುಖ್ಯವಾಗಿ ಧರ್ಮಮೂಲವಾದುದಾಗಿದ್ದರೆ ಇಲ್ಲಿ ನಡೆದದ್ದು ವಿಶ್ವ ವಿಶಾಲವಾದ ಲೌಕಿಕ ಜ್ಞಾನ ಸಾಧನೆಯನ್ನು ಹೆಗ್ಗುರಿಯಾಗಿಟ್ಟುಕೊಂಡಿತು. ಇಲ್ಲಿಯ ಮುಖ್ಯ ಲಕ್ಷಣ ವೈಜ್ಞಾನಿಕ ಮನೋಭಾವನೆ. ಈ ಮನೋಭಾವನೆಗೆ ಬೀಜ ಭೂತವಾದುದು ಸ್ವತಂತ್ರ ವಿವೇಚನೆ. ಬುದ್ಧಿಗೆ ಇಲ್ಲಿ ಪ್ರಾಧಾನ್ಯ. ಮತಸೂಚಕ ಭಾವನೆಗಳಿಗೆ ಪ್ರಾಧಾನ್ಯತೆ ತಗ್ಗಿ ವಿಶಾಲ ಭಾವನೆಗಳಿಗೆ ಇಂಬು ದೊರಕಿತು.

ಅದರಲ್ಲೂ ದೇ.ಜವರೇಗೌಡರು ಕುವೆಂಪು ಕಂಡ ಅನೇಕ ಕನಸುಗಳನ್ನು ನನಸು ಮಾಡಿದ ಅಪೂರ್ವ ವ್ಯಕ್ತಿ. ನೂರಾರು ವಿಭಿನ್ನ ರೀತಿಯ ಸಾಹಿತ್ಯ ರತ್ನಗಳು ನಾಡು ನುಡಿಗೆ ನೀಡುವುದರ ಜೊತೆಗೆ ‘ಗೋಕಾಕ ಚಳುವಳಿ’, ಗಡಿವಿವಾದ ಚಳುವಳಿ, ಕಾವೇರಿ ಚಳುವಳಿ ಹೀಗೆ ಹತ್ತು ಹಲವು ಭಾಷಾ ಸಂಘಟನೆಗಾಗಿ ತನು ಮನವರ್ಪಿಸಿದ ಧೀಮಂತ ವ್ಯಕ್ತಿತ್ವ ದೇ.ಜ.ಗೌ ಅವರದು. ಇವರು 1918 ಜುಲೈ 6ರಂದು ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆ ಗ್ರಾಮದಲ್ಲಿ ಜನಿಸಿದರು. ತಂದೆ ದೇವೇಗೌಡ ತಾಯಿ ಚೆನ್ನಮ್ಮ. ಕಡು ಬಡತನದಲ್ಲಿ ಬೆಳೆದು ಬಂದ ದೇ.ಜ.ಗೌ ತಮ್ಮಲ್ಲಿಯ ಉತ್ಸಾಹ, ಕ್ರೀಯಾಶಿಲತೆ, ಕಲ್ಪನಾ ಶಕ್ತಿಗಳಿಂದ ಒಂದೊಂದೆ ಮೆಟ್ಟಿಲುಗಳನ್ನು ಏರಿ ಉನ್ನತ ಸ್ಥಾನವನ್ನು ಪಡೆದುಕೊಂಡವರು. ಕನ್ನಡದ ಬೆಳವಣಿಗೆಗಾಗಿ ಇವರು ನಡೆಸಿದ ಪ್ರಯತ್ನಗಳು, ರೂಪಿಸಿದ ಯೋಜನೆಗಳು ಇವರಿಗೆ ಕನ್ನಡ ನಾಡಿನಾದ್ಯಂತ ಒಳ್ಳೆಯ ಕೀರ್ತಿ, ಗೌರವಗಳನ್ನು ತಂದು ಕೊಟ್ಟವು.
ದೇಜಗೌ ಸ್ನಾತಕೊತ್ತರ ಕನ್ನಡ ಪದವಿ ಪಡೆದ ನಂತರ ಮೂರು ವರ್ಷ ಸೆಕ್ರೆಟರಿಯೆಟ್ನಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿ ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಉಪನ್ಯಾಸ ವೃತ್ತಿ ಮಾಡಿ, 1949ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿ, 1955ರಲ್ಲಿ ಉಪಪ್ರಾಧ್ಯಾಪಕರಾದರು. 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪರೀಕ್ಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, 1960ರಲ್ಲಿ ಶಿವಮೊಗ್ಗ ಸಹ್ಯಾದ್ರಿ ಕಾಲೇಜ್ ಪ್ರಾಂಶುಪಾಲರಾದರು. 1964ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿದರು. 1966ರಲ್ಲಿ ಕುವೆಂಪುರಂತಹ ಮಹಾನ್ ಚೇತನಗಳೊಂದಿಗೆ ಕನ್ನಡ ಅಧ್ಯಯನ ಸಂಸ್ಥೆಯ ಸ್ಥಾಪನೆಗೆ ಕಾರಣರಾದರು.
1969ರ ನವೆಂಬರ್ 1ರಂದು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಆಯ್ಕೆಯಾದ ಇವರು ವಿಶ್ವ ವಿದ್ಯಾನಿಲಯವನ್ನು ಜಾಗತಿಕವಾಗಿ ಹೆಸರಾಗುವಂತೆ ಮಾಡಿದರು. 1994ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಗೆ ‘ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ’ ಎಂದು ಪುನರ್ ನಾಮಕರಣ ಮಾಡಿದರು.
ಜಾಗತಿಕ ಮಹಾನ್ ಲೇಖಕರಾದ ಟಾಲ್ಸ್ಟಾಯ್ ಅವರ ‘ವಾರ್ ಅಂಡ್ ಪೀಸ್’ ಎಂಬ ಕೃತಿಯನ್ನು ‘ಯುದ್ಧ ಮತ್ತು ಶಾಂತಿ’ ರೂಪದಲ್ಲಿ ಕನ್ನಡಕ್ಕೆ ತಂದು ಕೊಟ್ಟ ಕೀರ್ತಿ ದೇ.ಜ.ಗೌ ಅವರಿಗೆ ಸಲ್ಲುತ್ತದೆ. ಹಾಗೆಯೇ ಕನ್ನಡ ಜಾನಪದ ಅಧ್ಯಯನ ಬೆಳವಣಿಗೆಯಲ್ಲಿ ಹೊಸ ಆಯಾಮವನ್ನು ಸೃಷ್ಠಿಸಿದವರಲ್ಲಿ ಇವರು ಪ್ರಮುಖರು.
ಅದರಲ್ಲೂ ಸ್ನಾತಕೋತ್ತರ ಹಂತದಲ್ಲಿ ಜಾನಪದವನ್ನು ಕಲಿಯಲು ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದರು. ಕರ್ನಾಟಕ ಜಾನಪದ ಪರಿಷತ್ತು, ಜಾನಪದ ವಸ್ತು ಸಂಗ್ರಹಾಲಯ ಇವುಗಳ ಹುಟ್ಟಿಗೂ ಕಾರಣರಾಗಿ ಪರಂಪರೆಯ ಮಹೋನ್ನತಿಯನ್ನು ಬಯಸಿದ, ಶ್ರಮಿಸಿದ ಅಪ್ರತಿಮ ವ್ಯಕ್ತಿತ್ವ ದೇಜಗೌ ಅವರದು.
ಕನ್ನಡ ಜಾನಪದ ಸಾಹಿತ್ಯ ಸಾರಸ್ವತ ಲೋಕಕ್ಕೆ ‘ಜಾನಪದ ಅಧ್ಯಯನ’, ‘ಜಾನಪದ ಸೌಂದರ್ಯ’, ‘ಜಾನಪದ ವಾಹಿನಿ’ ಮುಂತಾದ ಮಹತ್ವದ ಕೃತಿ ರತ್ನಗಳನ್ನು ನೀಡಿದ್ದಾರೆ. ಜಾನಪದ ವ್ಯಾಪಕತೆ, ಸಂಗ್ರಹ, ಸಂಪಾದನೆ, ವೈಜ್ಞಾನಿಕ ದೃಷ್ಠಿ ಮುಂತಾದ ನಿಟ್ಟಿನಲ್ಲಿ ಕಾಯಕಗೈದು ಈ ಕ್ಷೇತ್ರಕ್ಕೆ ನವ ಚೈತನ್ಯವನ್ನುಂಟು ಮಾಡಿದರು.
ತಮ್ಮ ಗುರುಗಳಾದ ಕುವೆಂಪುರವರು ಕಟ್ಟಿಕೊಂಡ ಕನಸುಗಳನ್ನು ನನಸು ಮಾಡಿ ವಿಶ್ವದಲ್ಲೇ ಉನ್ನತ ವಿಶ್ವವಿದ್ಯಾಲಯವೆಂದು ಖ್ಯಾತಿ ಗಳಿಸುವಂತೆ ಮೈಸೂರು ವಿಶ್ವವಿದ್ಯಾಲಯವನ್ನು ರೂಪಿಸಿದ ಕೀರ್ತಿ ದೇಜಗೌ ಅವರದು. ವಿಚಾರ, ವಿಮರ್ಶೆ, ಸಂಪಾದನೆ, ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕೃಷಿಗೈದ ಇವರು ‘ಹೋರಾಟದ ಬದುಕು’ ಎಂಬ ವಿಶಿಷ್ಟ ರೀತಿಯ ಆತ್ಮ ಕಥನವನ್ನು ಬರೆದಿದ್ದಾರೆ. ಆದ್ದರಿಂದಲೇ ಇವರನ್ನು ಖ್ಯಾತ ವಿಮರ್ಶಕ, ಸಂಶೋಧಕರಾದ ಡಾ.ಜಿ.ಆರ್. ತಿಪ್ಪೇಸ್ವಾಮಿಯವರು ‘ಪರಂಪರೆಯ ಪ್ರತಿನಿಧಿ’ ಎಂದು ಮನದುಂಬಿ ಹಾಡಿ ಹೊಗಳಿದ್ದಾರೆ.
ಗದ್ಯ ಶೈಲಿ, ಗದುಗಿನ ಭಾರತ, ನಂಜುಂಡಕವಿ, ಕುವೆಂಪು ಕೆಲವು ಅಧ್ಯಯನಗಳು, ನೂರೆಂಟು ಪುಸ್ತಕಗಳು, ಬೆರೆಕೆ ಸೊಪ್ಪುಗಳು, ಮುನ್ನುಡಿಗಳು, ಶರಣಪಥ, ಷಡಕ್ಷರದೇವ, ಸಾಹಿತಿಗಳ ಸಂಗದಲ್ಲಿ, ನಿರಂತರ, ಸಾಹಿತ್ಯ ಮಾರ್ಗ, ಭಾಷಾಂತರ ಕಲೆ, ಜಾನಪದ ಸೌಂದರ್ಯ, ಕುವೆಂಪು ದರ್ಶನ ಮತ್ತು ಸಂದೇಶ, ಜಾನಪದ ಅಧ್ಯಯನ, ‘ಆಂಡಯ್ಯ ಕವಿ’ ಮುಂತಾದ ವಿಚಾರ ವಿಮರ್ಶೆ ಕೃತಿರತ್ನಗಳನ್ನು ಕನ್ನಡ ಸಾಹಿತ್ಯದೊಡಲಿಗೆ ನೀಡಿದ್ದಾರೆ.
ದೇಜಗೌರವರು ಆಕರ್ಷಣೆಯ ಬರವಣಿಗೆಯ ಮಹತ್ವದ ಗದ್ಯ ಶಿಲ್ಪಿ. ಆದ್ದರಿಂದಲೇ ಕುವೆಂಪುರವರ ‘ಶ್ರೀ ರಾಮಾಯಣದರ್ಶನಂ’ ಮಹಾಕಾವ್ಯವನ್ನು ‘ವಚನ ಚಂದ್ರಿಕೆ’ ಎಂಬ ಗದ್ಯ ರೂಪದ ಕೃತಿಗೆ ಇಳಿಸಿದರು. ಟಾಲ್ಸ್ಟಾಯ್ನ ‘ರೆನಾಸೆನ್ಸ್’ ಕೃತಿಯನ್ನೂ ‘ಪುನರುತ್ಥಾನ’ ಎಂಬುದಾಗಿಯೂ ಜೆನ್ ಆಸ್ಟಿನ್ರವರ ‘ಪ್ರೈಡ್ ಎಂಡ್ ಪ್ರೆಜುಡಿಸ್’ ಕೃತಿಯನ್ನು ‘ಹಮ್ಮು ಬಿಮ್ಮು’ ಎಂಬ ಹೆಸರಿನಿಂದ ಕನ್ನಡಕ್ಕೆ ತಂದ ಕೀರ್ತಿ ಇವರದು. ರಾಷ್ಟ್ರ ಕವಿ ಕುವೆಂಪು, ಅಂಬೇಡ್ಕರ್, ಗೋಖಲೆ, ನಂಜುಂಡ ಕವಿ, ಮೇರಿ ಕ್ಯೂರಿ, ಋಷಿಕವಿ ರವಿಂದ್ರರು, ಕರ್ನಾಟಕದ ರೂವಾರಿ, ಕನ್ನಡ ನಾಡಿನ ಕಲಿ, ನಾರಾಯಣ ಗುರು ಮುಂತಾದ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ವಿದೇಶದಲ್ಲಿ ನಾಲ್ಕು ವಾರ, ಪ್ರವಾಸಿಯ ದಿನಚರಿ, ಆಫ್ರಿಕಾ ಯಾತ್ರೆ ಮುಂತಾದ ಅತ್ಯುತ್ತಮ ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.
ಸೃಜನಶೀಲ ಹಾಗೂ ಸೃಜನೇತರ ಸಾಹಿತ್ಯಗಳೆರಡರಲ್ಲಿಯೂ ಸಿದ್ಧಿ ಪಡೆದಿದ್ದ ದೇ.ಜ.ಗೌ ರವರು ‘ಅಜಿತ ತೀರ್ಥಂಕರ ಪುರಾಣ ತಿಲಕಂ’, ಕಬ್ಬಿಗರ ಕಾವ್ಯಂ, ಗಿರಿಜಾ ಕಲ್ಯಾಣ, ಲಿಲಾವತಿ ಪ್ರಬಂಧಂ, ಜೈಮಿನಿ ಭಾರತ ಸಂಗ್ರಹ, ಧರ್ಮಾಮೃತ ಸಂಗ್ರಹ, ಬಸವ ಸಂಹಿತೆ ಮುಂತಾದ ಸಂಪಾದಿತ ಕೃತಿಗಳನ್ನು ನೀಡುವುದರ ಮೂಲಕ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿಯೂ ಅನೇಕ ಉತ್ತಮೋತ್ತಮ ಕೃತಿಗಳನ್ನು ಸಂಪಾದಿಸಿದ್ದಾರೆ.
ಇವರು ಉಪಕುಲಪತಿಗಳಾಗಿದ್ದ ಕಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ‘ಜಾನಪದ ವಸ್ತು ಸಂಗ್ರಹಾಲಯ’ ವನ್ನು ಸ್ಥಾಪಿಸಿ ಸಾವಿರಾರು ಸಂಶೋಧಕ ವಿದ್ಯಾರ್ಥಿಗಳಿಗೆ ಬೆಳಕಾದರು. ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಸ್ಥಾಪಿಸಿ ಮಕ್ಕಳಿಗಾಗಿ ಶಾಲೆ ಸ್ಥಾಪಿಸಿ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ. ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರಾಗಿ ಶಿಶು ಸಾಹಿತಿಗಳಿಗೆ ಪ್ರೇರಕರಾಗಿ ಮಾರ್ಗದರ್ಶನ ನೀಡುತ್ತಾ ಸಾಹಿತ್ಯ ಪೋಷಕರಾಗಿದ್ದಾರೆ.
ದೇಹಕ್ಕೆ ಮಾತ್ರ ವಯಸ್ಸು ಮನಸ್ಸಿಗಲ್ಲ ಎಂಬಂತೆ ಶತಮಾನದ ಹೊಸ್ತಿಲಲ್ಲಿರುವ ಇವರು ಇಂದಿಗೂ ಸತತವಾಗಿ ಬರವಣಿಗೆ, ಕನ್ನಡ ಸಮಸ್ಯೆಗಳಿಗೆ ಸ್ಪಂದಿಸುವುದು, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕಾಗಿ ಹೋರಾಟ, ಕಾವೇರಿ ವಿವಾದ, ಬೆಳಗಾವಿ ಗಡಿ ವಿವಾದ ಹೀಗೆ ಹತ್ತು ಹಲವು ಚಳವಳಿಗಳಲ್ಲಿ ಭಾಗಿಯಾಗಿ ನವಯುವಕರಂತೆ ಕಾಯಕಯೋಗಿಗಳಾಗಿರುವುದು ಅನುಕರಣೀಯ ಹಾಗೂ ಶ್ಲಾಘನೀಯವಾದುದು.
ಕನ್ನಡದ ಪುರೋಭಿವೃದ್ಧಿಗಾಗಿ ದುಡಿದ ದೇಜೆಗೌ ಅವರ ಪರಿಶ್ರಮವನ್ನು ಮತ್ತು ಅಪಾರ ಸಂಖ್ಯೆಯ ಅಮೂಲ್ಯ ಕೃತಿಗಳನ್ನು, ಕಾರ್ಯಕ್ಷಮತೆಯನ್ನು ಮೆಚ್ಚಿ 1970ರಲ್ಲಿ ಬೆಂಗಳೂರಿನಲ್ಲಿ ನಡೆದ 42ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷಗಿರಿ ಪಟ್ಟ ಅಲಂಕರಿಸಿತ್ತು.
ಕನ್ನಡದ ಕಟ್ಟಾಳುವೆಂದೇ ಹೆಸರಾದ ಇವರಿಗೆ ನೂರಾರು ಗೌರವಾದರ ಪ್ರಶಸ್ತಿಗಳು, ಪುರಸ್ಕಾರಗಳು ಸಂದಿವೆ.
* 1975 -ಗೌರವ ಡಾಕ್ಟರೇಟ್- ಕರ್ನಾಟಕ ವಿಶ್ವವಿದ್ಯಾಲಯ
* 1998 -ಪಂಪ ಪ್ರಶಸ್ತಿ- ಸಮಗ್ರ ಸಾಹಿತ್ಯ
ಸೇರಿದಂತೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ರತ್ನ, ಕನಕ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ಪ್ರಶಸ್ತಿ ಮುಂತಾದ ಪ್ರಶಸ್ತಿ ಸಲ್ಲುವುದರ ಮೂಲಕ ಈ ಪ್ರಶಸ್ತಿಗಳು ದೇಜಗೌರವರಿಗೆ ಮುಡಿಪಾಗುವುದರ ಮೂಲಕ ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ ಎಂದರೆ ಅತಿಶಯೋಕ್ತಿಯಾಗಲಾರದು.
ಕನ್ನಡ ಭಾಷೆಯ ಹಿತಚಿಂತಕರಾದ ಇವರು ಕುವೆಂಪು ಅವರ ವಿಚಾರ ಧಾರೆಯನ್ನು ಕರಗತ ಮಾಡಿಕೊಂಡು ಕನ್ನಡತ್ವದ ನೆಲೆಯಲ್ಲಿ ಜೀವಿಸುತ್ತಿದ್ದಾರೆ.
ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201, ಮೊ-9483470794
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ