ಹಾಸನ ಪರಿಸರ ಹಸಿರು ಸಿರಿಯೊಂದಿಗೆ ಸಾಂಸ್ಕøತಿಕ ಹಾಗೂ ಸಾಹಿತ್ಯಕ್ಕೆ ಹೆಸರಾದುದು. ಸಾಹಿತ್ಯ ಎಂದಾಕ್ಷಣ ಕಥೆ, ಕವನ, ನಾಟಕ, ಲಲಿತ ಪ್ರಬಂಧ, ಕಾದಂಬರಿ ಮುಂತಾದ ಪ್ರಕಾರಗಳು ಪ್ರಮುಖವೆ£ಸುತ್ತವೆ. ಅದರಲ್ಲೂ ಕಾದಂಬರಿ ಪ್ರಕಾರಕ್ಕೆ ಹಾಸನ ಕೊಡುಗೆ ಅಪಾರವಾದುದು. ಕಥೆ, ಕಾದಂಬರಿ ಅನುವಾದ ಶಿಶು ಸಾಹಿತ್ಯ ಹೀಗೆ ಅನೇಕ ಪ್ರಕಾರದಲ್ಲಿ ಅಸಮಾನ್ಯ ಸಾಧನೆ ಮಾಡುತ್ತಿರುವ ಹಿರಿಯ ಜೀವ ಪಾರ್ವತಿ ಕೃ.ನ.ಮೂರ್ತಿಯವರು ಎಂದರೆ ಅತಿಶಯೋಕ್ತಿ ಯಾಗಲಾರದು.
ಕೆ.ಎನ್.ನಂಜಪ್ಪ ಮತ್ತು ಸಾವಿತ್ರಮ್ಮ ಬ್ರಾಹ್ಮಣ ದಂಪತಿಗಳ ಸುಪುತ್ರಿಯಾಗಿ ತುಮಕೂರಿನಲ್ಲಿ 1934 ಜನವರಿ 20 ರಂದು ಜ£ಸಿದರು. ಇಂಟರ್ ಮೀಡಿಯಟ್ ಉತ್ತೀರ್ಣಗೊಂಡು ರಾಷ್ಟ್ರಭಾಷಾ ವಿಚಾರದಲ್ಲಿ ಪದವಿ ಪಡೆದ ಇವರು ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಪ್ರಬುದ್ದತೆ ಬೆಳೆಸಿಕೊಂಡರು.
ಮುಂದೆ ಹಾಸನದ ಹೆಸರಾಂತ ಪತ್ರಿಕೆಯಾದ ‘ಜನಮಿತ್ರ’ ಸಂಸ್ಥಾಪಕರಾದ ಕೃ.ನ. ಮೂರ್ತಿಯವರೊಂದಿಗೆ ಬಾಳಿನ ದೀವಿಗೆ ಹಂಚಿಕೊಂಡ ಇವರು ಪತಿಯ ಪ್ರೋತ್ಸಾಹದಿಂದ ಸಾಹಿತ್ಯದ ವಿವಿಧ ಮಜಲುಗಳಲ್ಲಿ ಕಾರ್ಯಪ್ರವೃತ್ತವಾಗುತ್ತಾ ಸಾಗಿದರು. ಖ್ಯಾತ ಕಾದಂಬರಿಕಾರ ಸಂ.ಲಿಂ.ಭೈರಪ್ಪನವರ ಮೊದಲ ಕೃತಿ ‘ಬೆಳಕು ಮೂಡಿತು’
ಕೃ.ನ. ಮೂರ್ತಿಯವರ ಪ್ರಕಾಶನ ದಿಂದ ಬೆಳಕು ಕಂಡಿತು.
ಈ ಸಮಯದಲ್ಲಿ ಮುದ್ರಣ ದೋಷಗಳನ್ನು ಸರಿಪಡಿಸುವ ಹೊಣೆಗಾರಿಕೆ ಪಾರ್ವತಿ ಯವರದು. ಆದ್ದರಿಂದಲೇ ಸಾಹಿತ್ಯ ದಿಗ್ಗಜರ £ಕಟ ಸಂಪರ್ಕ, ಮಾರ್ಗದರ್ಶನ ದೊರೆತದ್ದರಿಂದ ಇವರಲ್ಲಿದ್ದ ಸಾಹಿತ್ಯ ಚಿಗುರೊಡೆದು ಪಕ್ವಗೊಂಡಿತು.. ಪತಿಯ ಸಹಕಾರ, ಪ್ರೋತ್ಸಾಹದಿಂದ ಅವರದೇ ಪ್ರಕಾಶನವಾದ್ದರಿಂದ ಕೃತಿ ಹೊರಬರಲು ಕಷ್ಟವೆ£ಸಲಿಲ್ಲ.
‘ಸೆಳವಿನ ಸುಳಿ’ ‘ಬಿಡುಗಡೆಯ ಬಂಧನ’, ‘ಭಾವನ’ ಮುಂತಾದ ಕಾದಂಬರಿಗಳು, ‘ಮೂವರ ಕಥೆಗಳು-ಕಥಾಸಂಕಲನ’ ‘ಹ್ಯಾಮ್ಲೆಟ್’-ಶಿಶು ಸಾಹಿತ್ಯ, ‘ಗೃಹದೇವಿ’-ಅನುವಾದಿತ ಕೃತಿ ಹೀಗೆ ಹಲವಾರು ಕೃತಿಗಳ ಕರ್ತೃ ಪಾರ್ವತಿಯವರು.
ಕೇವಲ ಸಾಹಿತ್ಯಕ್ಕಷ್ಟೇ ಮೀಸಲಾಗಿರದ ಇವರು ಪೂರ್ಣಿಮಾ ಸಾಹಿತ್ಯ ಮಂದಿರ, ಕಲಾವಾರ ಪತ್ರಿಕೆ, ನಗೆಹೊಗೆ, ಹಾಸ್ಯಪತ್ರಿಕೆ, ಜನಮಿತ್ರ ಪ್ರಕಾಶನ ಹೀಗೆ ಸಂಘಟನೆ, ಪತ್ರಿಕಾರಂಗ, ಪ್ರಕಾಶನ, ಸಮಾಜಪರ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿದಿದ್ದಾರೆ, ದುಡಿಯುತ್ತಿದ್ದಾರೆ.
ಹಾಸನ ಹಾಗೂ ಬೆಂಗಳೂರು ಆಕಾಶವಾಣಿಯಲ್ಲಿ ಇವರ ಹಲವಾರು ಚಿಂತನ, ನಾಟಕ, ರೂಪಕ, ಲೇಖನ, ಕಥೆಗಳು ಭಿತ್ತರಗೊಂಡು ಜನಮನ್ನಣೆ ಗಳಿಸಿವೆ.
ಇವರಿಗೆ ನಾಗೇಶ್ ಹಾಗೂ ಆನಂದ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಸ್ತ್ರೀಯರಿಗೆ ಸ್ಥಾನಮಾನ ಸಿಗದ ಸಂದರ್ಭದಲ್ಲಿ ಕೆಚ್ಚೆದೆಯಿಂದ ಸಾಧಿಸಿ ತೋರಿಸಿದವರು ಪಾರ್ವತಿಯವರು. ಇವರ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದ ಅನುಪಮ ಸೇವೆಗಾಗಿ ಶ್ರೀ ಶರತ್ಚಂದ್ರ ಶತಮಾನೋತ್ಸವ ಸಮಾರಂಭದ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿ, ಇನ್ನೂ ಹಲವು ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. 1998ರಲ್ಲಿ ರಾಮನಾಥಪುರದಲ್ಲಿ ನಡೆದ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ತವರಿನ ಕಾಣಿಕೆ ಎಂದು ಈಗಲೂ ನೆನೆಯುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಇಂದಿಗೂ ಸಹ ಸೃಜನಶೀಲರಾಗಿ ಕಾರ್ಯೋನ್ಮುಖ ರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಾಸನದ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಪಸರಿಸುವಂತೆ ಮಾಡಿದವರಲ್ಲಿ ಪಾರ್ವತಿ ಕೃ.ನ.ಮೂರ್ತಿಯವರ ಪಾತ್ರವೂ ಹಿರಿದು.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ, ಹಾಸನ
ಮೊ-9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ