ಹಾಸನ ಸಾಹಿತ್ಯ, ಸಾಂಸ್ಕøತಿಕ, ರಂಗಭೂಮಿ, ಕ್ರೀಡೆ, ರಾಜಕಾರಣ ಹೀಗೆ ಹಲವಾರು ವಿಷಯಗಳಲ್ಲಿ ಉತ್ಕøಷ್ಟತೆ ಮೆರೆದ ಜಲ್ಲೆ. ಇವೆಲ್ಲವುಗಳಂತೆ ಕನ್ನಡ ಚಲನಚಿತ್ರ ರಂಗದಲ್ಲೂ ತನ್ನದೆಯಾದ ದಾಪುಗಾಲಿರಿಸಿದೆ. ಗೊರೂರು, ಕರೀಂಖಾನ್, ಜ್ವಾಲನಯ್ಯ ಮುಂತಾದವರ ಸಾಹಿತ್ಯ ಚಿತ್ರಕಥೆಗಳಾದರೆ, ನಿರ್ಮಾಣದ ಜವಾಬ್ದಾರಿ ಹೊತ್ತು, ಕಥೆ, ನಿರ್ದೇಶನ ಇತ್ಯಾದಿ ವಿಭಾಗಗಳಲ್ಲಿಯೂ ಪ್ರಭಾವ ಬೀರಿ ಕನ್ನಡ ಚಲನಚಿತ್ರ ಕ್ಷೇತ್ರವನ್ನು ನಿತ್ಯ ಚಲನಶೀಲವಾಗಿಟ್ಟ ಕೀರ್ತಿ ಡಿ.ವಿ.ಬಸವೇಗೌಡರಿಗೆ ಸಲ್ಲುತ್ತದೆ.

ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರ
ಹಾಸನ ಜಿಲ್ಲಾ ಗ್ರಾಮೋದ್ಯೋಗ ಸಂಘದ ಅಧ್ಯಕ್ಷರಾಗಿ, ರೈತ ಮತ್ತು ಕಾರ್ಮಿಕ ಸಂಘದ ಅಧ್ಯಕ್ಷರಾಗಿ, ಯುವ ಜನ ಸೇವಾ ಮಂಡಳಿಯ ಸದಸ್ಯರಾಗಿ, ಸ್ಕೌಟ್ಸ್ ಕಮಿಷನರ್ ಆಗಿ, ಯಗಚಿ ವಿದ್ಯಾಪೀಠ ಉಪಾಧ್ಯಕ್ಷರಾಗಿ, ವಕೀಲರ ಸಂಘದ ಕಾರ್ಯದರ್ಶಿಯಾಗಿ, ಅಂಧ ಸಂಸ್ಥೆಯ ಸದಸ್ಯರಾಗಿ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿ, ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾಗಿ, ಮೈಸೂರು ವಿಭಾಗೀಯ ಮಾರುಕಟ್ಟೆ ಸಲಹಾ ಸಮಿತಿಯ ಸದಸ್ಯರಾಗಿ ತಮ್ಮ ತನು, ಮನ, ಧನವನರ್ಪಿಸಿ ಸಮಾಜದ ಏಳ್ಗೆಗಾಗಿ ಶ್ರಮಿಸಿದ್ದಾರೆ.
ನಂತರ ಇವರನ್ನು ಕೈಬೀಸಿ ಕರೆದದ್ದು ಕನ್ನಡ ಚಲನಚಿತ್ರರಂಗ. ಬೆಂಗಳೂರಿಗೆ ಹೋದನಂತರ ಅಲ್ಲಿಯೂ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕಾಯಕಗೈಯುತ್ತಾ ಸಾಗಿದರು.
ಬೆಂಗಳೂರಿನ ಸ್ವರ್ಣಭಾರತಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸದಸ್ಯರಾಗಿ, ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಸದಸ್ಯರಾಗಿ, ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳದ ಸದಸ್ಯರಾಗಿ, ರಾಜ್ಯ ಕಾರ್ಮಿಕ ವಿಮೋಚನಾ ಜಾಗೃತಿ ಸಮಿತಿಯ ಸದಸ್ಯರಾಗಿ, ರಾಜ್ಯ ಕಿಸಾನ್ ಸೆಲ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ರಾಜ್ಯ ಪ್ಲೇಯಿಂಗ್ ಶಿಕ್ಷಣ ಶಾಲೆ ಜಕ್ಕೂರು ಏರೋಡ್ರೊಮ್ಮಿನ ನೇಮಕಾತಿ ಸಮಿತಿಯ ಸದಸ್ಯರಾಗಿ, ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿಯ ಛೇರ್ಮನ್ರಾಗಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ, ರಾಜ್ಯ ಆಶಕ್ತ ಕಲಾವಿದರ ಕಲ್ಯಾಣ ಸಂಘದ ಕಾರ್ಯಾಧ್ಯಕ್ಷರಾಗಿ, ರಾಜ್ಯ ಕೇಂದ್ರ ಸಹಕಾರಿ ತೆಂಗಿನ ನಾರಿನ ಉತ್ಪಾದನಾ ಮಾರಾಟ ಅಭಿವೃದ್ಧಿ ನಿಗಮದ ಛೇರ್ಮನ್ರಾಗಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಮಾಪಕ ವಲಯದ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಹರಿಜನ ಸೇವಾ ಸಂಘದ ಬೆಂಗಳೂರು ಪ್ರದೇಶ ಸಮಿತಿಯ ಸದಸ್ಯರಾಗಿ, ಕೇರಳ ರಾಜ್ಯದ ಕೊಚ್ಚಿನ್ನಲ್ಲಿರುವ ತೆಂಗಿನ ನಾರಿನ ಮಂಡಳಿಯ ಸದಸ್ಯರಾಗಿ, ಕೇಂದ್ರ ಸೆನ್ಸಾರ್ ಬೋರ್ಡ್ನ ಅಂಗಸಂಸ್ಥೆಯಾದ ಬೆಂಗಳೂರಿನ ಪ್ರಾದೇಶಿಕ ಸೆನ್ಸಾರ್ ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಚಲನಚಿತ್ರ ರಂಗ
ಇವರು ಹುಟ್ಟು ಕಲಾವಿದರಾಗಿದ್ದು ಬಾಲ್ಯದಿಂದಲೇ ರಂಗಭೂಮಿ, ನಟನೆ, ನಿರ್ದೇಶನ ಎಂದರೆ ಎಲ್ಲಿಲ್ಲದ ಆಸಕ್ತಿ. ಹಾಗೆಯೇ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಹಲವು ಕನ್ನಡದಿಂದ ತಮಿಳು, ತೆಲುಗು, ಹಿಂದಿ ಮುಂತಾದ ಭಾಷೆಗಳಿಗೆ ಭಾಷಾಂತರಗೊಂಡಿವೆ. ಹಾಗೆಯೇ ಹಲವಾರು ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವುದಲ್ಲದೇ, ಕೆಲವು ಸಾಕ್ಷ್ಯ ಚಿತ್ರಗಳಿಗೆ ನಿರೂಪಣೆ ನೀಡಿದ ಕೀರ್ತಿ ಇವರದು.
ಸಾಹಿತ್ಯ ಕ್ಷೇತ್ರ
ಬಸವೇಗೌಡರು ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ, ಚಲನಚಿತ್ರ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗದೇ ಸಾಹಿತ್ಯ ಕ್ಷೇತ್ರದಲ್ಲೂ ದುಡಿದಿದ್ದಾರೆ.
1985 ರಲ್ಲಿ ‘ನಾ ಕಂಡ ಪುಟ್ಟಣ್ಣ ಕಣಗಾಲ್’ ಎಂಬ ಬೃಹತ್ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದರು. ಈ ಕೃತಿಯು ಮುಂದೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಪರಿಷತ್ ಪ್ರಶಸ್ತಿಗೆ ಭಾಜನವಾಯಿತು.
ನಂತರ ‘ನೀವೇಕೆ ನಗಬಾರದು?’ ಎಂಬ ಹಾಸ್ಯ ನಾಟಕವನ್ನೂ ಬರೆದು ರಂಗ ಪ್ರಯೋಗ ಮಾಡಿದರು. ನಂತರ ಈ ಕನ್ನಡ ನಾಟಕವನ್ನು ಸ್ವತಃ ಬಸವೇಗೌಡರೇ Whಥಿ ಅಚಿಟಿ’ಣ ಙou ಐಚಿugh? ಎಂಬ ಇಂಗ್ಲೀಷ್ ನಾಟಕವಾಗಿ ಭಾಷಾಂತರಗೊಳಿಸಿದ್ದು ವಿಶೇಷ.
2001 ರಲ್ಲಿ ಬಂದ ಇವರ ‘ಬೆಳ್ಳಿತೆರೆಯ ಭಾವಶಿಲ್ಪಿ’ ಎಂಬ ಸಂಶೋಧನಾ ಗ್ರಂಥ ಕನ್ನಡ ಚಲನಚಿತ್ರರಂಗದ ನಿರ್ದೇಶನದ ದಿಗ್ಗಜರೆಂದೇ ಗುರ್ತಿಸಿಕೊಂಡ ಪುಟ್ಟಣ್ಣ ಕಣಗಾಲ್ ಅವರನ್ನು ಕುರಿತದ್ದಾಗಿದ್ದು ಮುಂದೆ ಇದು ಗೊರೂರು ಪ್ರತಿಷ್ಠಾನ ಪ್ರಶಸ್ತಿಯನ್ನು ಪಡೆಯಿತು.2008ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಮಂಡಿಸಿದ “ಕನ್ನಡ ಚಲನಚಿತ್ರಗಳಲ್ಲಿ ಹಲವು ನಿರೂಪಣಾ ಮಾದರಿಗಳು” ಎಂಬ ಮಹಾಪ್ರಬಂಧ ಇವರಿಗೆ ಡಾಕ್ಟರೇಟ್ ಪದವಿಯನ್ನು ತಂದುಕೊಟ್ಟಿತು. ಇದು ಇವರ 74ನೆಯ ವಯಸ್ಸಿನಲ್ಲಿ ಸಿಕ್ಕ ಗೌರವ.
ಇದಲ್ಲದೇ ಪುಟ್ಟಣ್ಣ ಕಣಗಾಲರು 1968ರಲ್ಲಿ ನಿರ್ದೇಶಿಸಲು ಪ್ರಾರಂಭಿಸಿ ಅರ್ಧಕ್ಕೆ ನಿಂತು ಹೋಗಿದ್ದ ‘ಸಾವಿರ ಮೆಟ್ಟಿಲು’ ಕನ್ನಡ ಚಲನಚಿತ್ರವನ್ನು 38 ವರ್ಷಗಳ ಮೇಲೆ 2006ನೆಯ ಸಾಲಿನಲ್ಲಿ ನಿರ್ಮಿಸಿ, ನಿರ್ದೇಶಿಸಿ, ಪೂರ್ಣಗೊಳಿಸಿ ಬಿಡುಗಡೆ ಮಾಡಿ ವಿಶ್ವದಾಖಲೆ ಸ್ಥಾಪಿಸಿದ ಕೀರ್ತಿ ಡಾ. ಡಿ.ಬಿ.ಬಸವೇಗೌಡರಿಗೆ ಸಲ್ಲುತ್ತದೆ.
ಹಲವಾರು ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಬಹುಮುಖ ಪ್ರತಿಭೆ ಡಿ.ಬಿ.ಬಸವೇಗೌಡರೆಂದರೆ ಅತಿಶಯೋಕ್ತಿಯಾಗಲಾರದು. ಕಲೆ, ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಸಾಮಾಜಿಕ. ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಅಧಿಪಥ್ಯ ಸ್ಥಾಪಿಸುವುದು ಸುಲಭದ ಮಾತೇನಲ್ಲ. ಇಂಥ ವ್ಯಕ್ತಿಗಳ ಹುಟ್ಟಿಗೆ ಕಾರಣವಾದ ಹಾಸನ ಮಣ್ಣಿನ ಗುಣ ಸರ್ವಶ್ರೇಷ್ಠವಾದುದು. 80ರ ಗಡಿ ದಾಟಿದರೂ ಯುವಕರಂತೆ ಕಾರ್ಯನಿರ್ವಹಿಸುವ ಇವರ ಮನೋವಾಂಛಲ್ಯ ಅಮೋಘವಾದುದು.
ಕೊಟ್ರೇಶ್ ಎಸ್ ಉಪ್ಪಾರ್ , ಆಲೂರು
ಮೊ-9483470794
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ