ಕನ್ನಡ ಸಾಹಿತ್ಯ ರಾಜಕೀಯ ಸೇವೆ, ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸಂಘಟನೆ, ನಾಡು-ನುಡಿಗಾಗಿ ಹೋರಾಟ ಹೀಗೆ ಅನೇಕ ಸ್ತರಗಳಲ್ಲಿ ಕಳೆದ ಮೂರು ದಶಕಗಳಿಂದ ದುಡಿಯುತಾ ಸಾಧನೆಯ ಮೆಟ್ಟಿಲುಗಳನ್ನು ಹಂತಹಂತವಾಗಿ ಏರಿದ ಎ.ಜಿ.ರತ್ನಕಾಳೇಗೌಡರು ಒಬ್ಬ ದಿಟ್ಟ ನೇರವಾದಿ ಹಾಗೆಯೇ ಹೃದಯ ವೈಶಾಲ್ಯತೆ ಹೊಂದಿರುವ ಸ್ನೇಹ ಜೀವಿ. ಅವರ ಸ್ನೇಹಿತರ ಅಭಿಮಾನಿಗಳ ಪರಿಚಿತ ಸಾಹಿತ್ಯ ಬಂಧುಗಳ ಬಳಗ ರಾಜ್ಯದ ಮೂಲೆಮೂಲೆಯಲ್ಲಿಯೂ ಇದೆ ಎಂದರೆ ಅತಿಶಯೋಕ್ತಿಯಾಗಲಾರದು.
1956 ರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬಿದಿರೆ ಗ್ರಾಮದ ಗೌಡಯ್ಯ ಹಾಗೂ ಜವರಮ್ಮ ದಂಪತಿಗಳ ಪತ್ರಿಯಾಗಿ ಜನಿಸಿದ ರತ್ನಕಾಳೇಗೌಡರು ರತ್ನ ದೀಪ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ದೇಶಾದ್ಯಾಂತ ಹಲವಾರು ಸಭೆ, ಸಮ್ಮೇಳನ, ಕಮ್ಮಟಗಳಲ್ಲಿ ಭಾಗವಹಿಸಿ ಅನುಭವಗಳಿಸಿಕೊಂಡ ಇವರು ಹಲವಾರು ಕಮ್ಮಟಗಳಿಗೆ ಸ್ವತಃ ನಿರ್ದೇಶಕರಾಗಿ ದುಡಿದಿದ್ದಾರೆ.
ದೂರದರ್ಶನ ಚಂದನ ಬೆಳಗು ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದ್ದು, ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜೊತೆಗೆ ಕನ್ನಡ ಪರ ನೆಲ.ಜಲ ನಾಡು-ನುಡಿಯ ಹೋರಾಟಗಳಲ್ಲಿ ನಿರಂತರವಾಗಿ ದುಡಿಯುತ್ತಾ ಬಂದಿದ್ದಾರೆ.
ಸಾಹಿತ್ಯ, ರಾಜಕೀಯ, ಸಂಘಟನೆ ಮೊದಲಾದ ಎಲ್ಲಾ ಮಾಧ್ಯಮಗಳಲ್ಲಿ ಪರಿಣಿತಿ ಪಡೆದಿರುವ ಎ.ಜಿ ರತ್ನಕಾಳೇಗೌಡ ಮೊದಲ ಆಸಕ್ತಿ ಕಥೆ, ನಂತರ ಕಾದಂಬರಿ, ಕಾವ್ಯ ರಚನೆ ಇವರ ಕಥೆಗಳನ್ನು ಓದುತ್ತಾ ಹೋದರೆ, ವಾಸ್ತವದ ನೆಲೆಗಟ್ಟಿನಲ್ಲಿ ವೈಚಾರಿಕತೆಯ ಮೂಸೆಯಲ್ಲಿ ಮಿಂದೇಳುವುದು ಖಂಡಿತ. ಇವರು ಮುಖ್ಯವಾಗಿ ಹೊಲ, ಹರಕೆ, ಪ್ರಾಣಬಿಂದು, ಭರವಸೆಗಳ ನಡುವೆ, ಒಂದು ಪೆಗ್, ಯಾತ್ರೆ, ಮಳೆ ಬರುವ ಹಾಗಿದೆ ಕಥಾ ಸಂಕಲನಗಳಾಗಿವೆ. ಎಂಟು ಕಾದಂಬರಿಗಳು ಇತರೆ ಹತ್ತು ಕೃತಿಗಳು ಹಾಗೂ ಎಂಟು ಕವನ ಸಂಕಲನಗಳನ್ನು ಒಳಗೊಂಡಂತೆ ಸುಮಾರು ನಲವತ್ತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಇವರ ಸಾಹಿತ್ಯ ಪ್ರಕಾರಗಳಲ್ಲಿ ನನಗೆ ಇಷ್ಟವಾದದ್ದು ಹಾಗೂ ಮನ ಕಲಕಿದ್ದು, ನನ್ನನ್ನು ಭಾವುಕನನ್ನಾಗಿ ಮಾಡಿದ್ದು ಇವರ ಕಾವ್ಯ. ಆದ್ದರಿಂದಲೇ ನಾನಿಲ್ಲಿ ಇವರ ಕಾವ್ಯದ ಬಗ್ಗೆ ಮಾತ್ರ ಚರ್ಚಿಸಲು ಇಚ್ಛೆ ಪಡುತ್ತೇನೆ.
ಕವಿ ಅಡಿಗರು ಮಾತಿನೊಳಗೆಯೋ ಮೌನ ಇಲ್ಲದೆ ಹೋದರೆ ಅದರಾಚೆಗೂ ಇದು ಇರುವುದಿಲ್ಲ ಎಂದಿದ್ದಾರೆ. ಕಾವ್ಯದಲ್ಲಿ ಮಾತು ಮೌನದ ಮೂಲಕ, ಮೌನ ಮಾತಿನ ಮೂಲಕ ಪ್ರತೀತಿಗೆ ಬರುತ್ತಿರುತ್ತದೆ. ಪು.ತಿ.ನ ಅವರ ಅನೇಕ ಕವನಗಳಲ್ಲಿ ಮಾತಿನ ಮೂಲಕವೇ ಮೌನ, ಶಾಂತತೆ, ಚಿನ್ಮಾನ ಭಾವಗಮ್ಯವಾಗಿ ಅನುಭವವಾಗುತ್ತದೆ.
ಇವರ ಕಾವ್ಯ ನಿಧಿ ಕವನ ಸಂಕಲನ 19ನೇ ಶತಮಾನದ ಅಂತ್ಯ ಹಾಗೂ 20ನೇ ಶತಮಾನದ ಉದಯಗಳ ನಡುವಿನ ಪರ್ವಕಾಲವೆಂದೇ ಹೇಳಬಹುದು.
ನನ್ನೂರ ಆಲದ ಮರಗಳು
ಮದುವೆ ತಿಥಿ ಅಡುಗೆಗಳಿಗೆ
ಒಂದೊಂದೇ ಮರ ಸೌದೆಯಾದವು (ನನ್ನೂರು)
ಇಲ್ಲಿ ಕವಯತ್ರಿಯ ಗತದ ಬದುಕಿನ, ಪೂರ್ವಜರ ಕರುವಿನ ಬಗೆಗಿನ ಜಾಗ್ರತೆ, ಕಾಳಜಿ ಈಗಿನವರಿಗಿಲ್ಲದಿರುವುದನ್ನು ಈ ಸಾಲುಗಳು ಸ್ತುತಿಸುತ್ತವೆ.
ಹೊಸ ಶತಮಾನದ ಸುಂದರ ಕನಸು
ಮೈ ಪುಳಕಗೊಳಿಸುತ್ತಿದೆ ಅವನಾನದ
ಅಂಚಿನಿಂದ ಪಾರಾಗಿ ಹೊಸಯುಗದ ಮಡಿಲಲಿ
ಜೋಗುಳ ಕೇಳಲು ಬರಲಿ ಹೊಸಗಾಳಿ ಬೆಳಕು...
(ಬರುವ ಶತಮಾನಕ್ಕೆ ಸ್ವಾಗತ)
ನಜಾನಾಯಿ ಶಬ್ದಂ ನಜಾನಾಯಿ ಚಾರ್ಥಂ
ನಜಾನಾಮಿ ಪದ್ಯಂ ನಜಾನಾಮಿ ಗದ್ಯಾಂ
ಚಿದೇತಾ ಷಡಖ್ಯಾ ಹೃದಿದ್ಯೋತತೇಮೋ
ಮುಪಾನ್ನಿಸ್ಸರಂತೆ ಗಿರಾಶ್ವಾಪಿ ಚಿತ್ರಮ್
ನಾನು ಶಬ್ದ ಅರ್ಥ ಪದ್ಯ, ಗದ್ಯಗಳನ್ನು ತಿಳಿದಿಲ್ಲ. ಆದರೆ ನನ್ನ ಅಂತರಂಗದಿಂದ ಅದ್ವಿತೀಯವಾದ ಆರು ಮುಖಗಳ ಜೀವನದ ಜ್ಞಾನ ಜ್ಯೋತಿಯು ಬೆಳಗುತ್ತಿದೆ. ಆ ಪ್ರತಿಭೆಯಿಂದ ನನ್ನ ಮುಖದಿಂದ ಈ ವಾಕ್ಯಗಳು ನುಡಿಯುತ್ತಿವೆ, ಎಂಬ ಸೂಕ್ತಿಯು ಸುಬ್ರಹ್ಮಣ್ಯ ಭುಜಂಗ ಸ್ತೋತ್ರದಿಂದ ಹೇಳಲ್ಪಟ್ಟಿದೆ.
ಪ್ರಸ್ತುತ ಕಾವ್ಯ ಸಂದರ್ಭದಲ್ಲಿ ನಿಂತುಕೊಂಡಿರುವ ಕವಿಯ ರವನೆಗೆ ನೂರಾರು ಮಿತಿಗಳು, ಇತಿಗಳು, ಸಂಕಷ್ಟಗಳು ಕಾಣಿಸಬಹುದು. ಕವಿ ಬರೆದಾಗಲೆಲ್ಲಾ ಎಲ್ಲೋ ಗುಹಾಧ್ವನಿಯಂತೆ ಅನಿಸಿ ಒಮ್ಮೊಮ್ಮೆ ಕೀಳರಿಮೆ ಕಾಡಬಹುದು. ನಿಜವಾಗಿರಲೂ ಹೊಸದನ್ನು ತಡಕಿ ಹುಡುಕುವ, ವಿಶಿಷ್ಟವಾದುದನ್ನು ಬಗೆದು ತೆಗೆಯುವುದು ಪ್ರಯಾಸದ ಮಾತೇ ಸರಿ!
ಈ ಹಿನ್ನಲೆಯಲ್ಲಿ ಎ.ಜಿ.ಕಾಳೇಗೌಡರ ಅನೇಕ ಕವನಗಳಲ್ಲಿ ಸಾಮಾಜಿಕ ಸ್ಥಿತಿಯನ್ನು, ದುರಾಡಳಿತವನ್ನು, ಶೋಷಣೆಯನ್ನು ಜಾತಿಯ ವ್ಯವಸ್ಥೆಯ ಧಿಕ್ಕರಿಸುವ ಮಿಂಚು, ಕಿಡಿ, ಉದ್ವೇಗ, ಆವೇಶ ಹೊಮ್ಮಿ ಬಂದಿದೆ. ಆದ್ದರಿಂದಲೇ ನಾಣು ಇವರನ್ನು ಬಂಡಾಯ ಹಾಗೂ ವೈಚಾರಿಕ ಸಾಹಿತ್ಯ ವಲಯಕ್ಕೆ ಸೇರಿಸಬಯುಸುತ್ತೇನೆ. ಏಕೆಂದರೆ ಪ್ರಸ್ತುತ ಸಂದರ್ಭಗಳಲ್ಲಿ ಈ ರೀತಿಯ ಕಚ್ಚೆದೆಯ ಬರಹಗಳು ವಿರಳ. ಇವು ಅನಗತ್ಯವಾಗಿ ಹೆಚ್ಚಲೆಬೇಕಾಗಿದೆ. ಸಾಮಜಿಕ ಕೊಳೆಯನ್ನು ಶುಭ್ರಗೊಳಿಸುವ ನಿಟ್ಟಿನಲ್ಲಿ ನೇರ ಹಾಗೂ ದಿಟ್ಟ ಸಾಹಿತ್ಯವೆಂದರೆ ಬಂಡಾಯ ಹಾಗೂ ವೈಚಾರಿಕ ಸಾಹಿತ್ಯ.
ಇಂತಹ ನೂರಾರು ವಿಚಾರಗಳು ರತ್ನಕಾಳೆಗೌಡರ ಕವನಗಳು ಸುಔಗತೆಯಿಂದ ಎದ್ದು ಕಾಣುತ್ತವೆ.
ಕವಿ ಅಡಿಗರ ‘ಒಂದು ಹದ್ದಿನ ರೆಕ್ಕೆಯೊಳಗೆ ನೂರಾರಕ್ಕೆ ಹದ್ದು’ ಎಂಬಲ್ಲಿ ಕಾಣುವ ಧೀಮಂತ, ಅನಾಯಾಸ, ಧ್ವನಿಪೂರ್ಣ ಶ್ಲೇಷ ನನಗೆ ಇವರ ಅನೇಕ ಕವನಗಳಲ್ಲಿ ಕಂಡಿತು. ಹೋಲಿಕೆ ತಪ್ಪಿರಬಹುದು ಆದರೆ ಮೌಲಿಕತೆಯ ನಿರ್ಣಯ ನವಿರಾದ ತೌಲನಿಕ ನೆಲೆಯಿಂದಲೇ ಚಿಮ್ಮುತ್ತದೆ.
ಒಂದು ಸಂದರ್ಶನದಲ್ಲಿ ಬೇಂದ್ರೆ ಹೀಗೆ ಹೇಳಿದ್ದಾರೆ. ನನ್ನ ಒಳಗಿನ ವ್ಯಕ್ತಿ ಎಚ್ಚರಗೊಂಡಾಗಲೇ ಕಾವ್ಯ ಒಡಮೂಡಿ ಬರುತ್ತದೆ. ನನ್ನದು ಅವಶ್ಯವಾಗಿ ಹೃದಯದ ಪ್ರತಿಕ್ರಿಯೆ. ನನ್ನ ಭಾವಗಳು ಒಳಗೊಳಗೆ ಮಿಥಿಸುತ್ತಿರುವಂತೆ ಕಾಣುತ್ತದೆ. ಅನಂತರ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಗರ್ಭದಂತೆ ಇನ್ನು ಒಳಗೆ ಉಳಿಯಲಾಗದ ಹೊರಹೊಮ್ಮುತ್ತದೆ. ಇದೇ ರೀತಿ ನಿತ್ಯ ನಡೆಯುವ ಅನೇಕ ಶೋಷಣೆ, ಭ್ರಷ್ಟಾಚಾರ, ಮೂಢನಂಬಿಕೆ ಹಗಲು ದರೋಡೆ ಇವೆಲ್ಲವುಗಳದರ ವಿರುದ್ದ ಬೆಂಕಿಯ ಜ್ವಾಲೆಯಂತೆ ರತ್ನ ಕಾಳೇಗೌಡರ ಕವನಗಳು ಹೊರಹೊಮ್ಮಿವೆ. ಇವರ ಕಾವ್ಯಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಕಾಣಬಹುದು. ಏಕೆಂದರೆ ಕಾವ್ಯವು ಕವಿಯದೇ ಆದ ವಿಶಿಷ್ಟವಾದ ಅನುಭವಗಳ ಅತ್ಯಂತ ವೈಯಕ್ತಿಕವಾದ ಭೀನ್ನಭಾವದ ಅಭಿವ್ಯಕ್ತಿ. ಸಾಮಾಜಿಕ ಪ್ರಜ್ಞೆಯು ಈ ಭಾಷಾ ಶರೀರದ ಪರಿಪೂರ್ಣತೆಗಳಾಗುವ ಅನುಭವ ವಿಶಿಷ್ಟತೆಗಾಗಲೀ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು; ಅಲ್ಲದೇ ರತ್ನಕಾಳೇಗೌಡರು ಕಾವ್ಯ ರಚೆನೆಗೆ ಆರಂಭಿಸಿದ್ದು ಬಂಡಾಯದ ಕಾಲವಾಗಿತ್ತು. ಆ ಸಂದರ್ಭದಲ್ಲಿ ಭ್ರಷ್ಟಾಚಾರ, ಜಾತಿವ್ಯವಸ್ಥೆ, ದುರಾಡಳಿತ, ಸಾಮಾಜಿಕ ಅನಿಷ್ಟಗಳು, ವರದಕ್ಷಿಣೆ, ಬಾಲ್ಯವಿವಾಹ ಹೀಗೆ ಹತ್ತಾರು ಸಾಮಾಜಿಕ ಕಾದಂಬರಿಗಳನ್ನು ಸ್ವ ಅನುಭವಿಸಿ ಬರೆದವರು, ವಿಚಾರವಂತಿಕೆಯ ಉತ್ತುಂಗಕ್ಕೇರಿ ಅನುಭವದ ನೆಲೆಗಟ್ಟಿನಲ್ಲಿ ಲೇಖನಿ ಬಳಸಿದವರೆಂದರೆ ತಪ್ಪಾಗಬಾರದು.
ಹೊಸಗನ್ನಡ ಕಾವ್ಯದ ಮೂಲವನ್ನು ರತ್ನಕಾಳೇಗೌಡು ಕರ್ನಾಟಕದ ಗರತಿಯ ಹಾಡುಗಳಲ್ಲಿ, ಲಾವಣಿಗಳಲ್ಲಿ, ಹನ್ನೇರಡನೇ ಶತಮಾನದ ಶಿವಶರಣರ ವಚನಗಳಲ್ಲಿ ಹರಿದಾಸರ ಕೀರ್ತನೆಗಳಲ್ಲಿ ಕಂಡುಕೊಂಡು ಬಹುಶಃ ಅವರ ಯುಗ ಪ್ರವರ್ತಕ ಪ್ರತಿಭೆಯನ್ನು ಮತ್ತು ನೂತನ ಕಾವ್ಯದ ಮೂಲವನ್ನು ಹುಡುಕಿ ಪಡದಿದ್ದಾರೆ ಎನ್ನಬಹುದು. ಅಲ್ಲದೇ ದಾಸ್ಯರ ನೋವು, ಸ್ವಾತಂತ್ರ್ಯದ ಕನಸು , ಬಡತನದ, ದುರ್ದೈವದ, ಹಸಿವೆಯ, ಅಜ್ಞಾನದ ಶತಮಾನದ ಕೊರಗು, ಕ್ರಾಂತಿಯ ಮುನ್ನೋಟದ ರುದ್ರ ತಾಂಡರ, ಆತ್ಮ ಚಿಂತನ, ಮಾನವ ಧರ್ಮದ ಪುನರುತ್ಥಾನ, ಪ್ರೀತಿ, ಪ್ರಕ್ರಿಯೆ, ವಿರಹ, ವಿಷಾದ, ದಾಂಪತ್ಯ, ಹೆಣ್ಣು-ಗಂಡಿನ ಸಮಸ್ಯೆ, ಕನ್ನಡತೇರು ಮುನ್ನಡೆಸಲು ಆಸೆ. ಉತ್ಸಾಹ, ಕನಸು, ರಾಷ್ಟ್ರಧರ್ಮದ ಭೂತ ಭವಿಷ್ಯ, ವರ್ತಮಾನಗಳ ಸಾಮೀಕರಣದ ಅನ್ವಯದ ಸಾಹಸ, ಮಹಾತೀತ ಅದೃಶ್ಯ ಲೋಕಕ್ಕೆ ದಾಳಿ, ಕನಸುಗಳ ಮಿಂಚುಗಳ ಅನುಸರಣ, ಲೀಲೆ ಹೀಗೆ ರತ್ನಕಾಳೇಗೌಡರಲ್ಲಿ ನುಡಿಯದ ಮಿಡಿಯದ ಭಾವವಿಲ್ಲ. ರೂಪುಗೊಳ್ಳದ ಆಕಾಂಕ್ಷೆಗಳಲ್ಲಿ, ಕಾದುಕೊಳ್ಳುವ ನೋವಿಲ್ಲ, ನಲಿವಿಲ್ಲ, ಎಷ್ಷಡತ್ತ ಕನ್ನಡದ ಆರು ಕೋಟಿ ಚಿತ್ತ ತರಂಗಗಳ ಕ್ಷೀರ ಸಾಗರದಂತೆ ರತ್ನಕಾಳೇಗೌಡರ ಕಾವ್ಯ ಭೋರ್ಗರೆಯುತ್ತಿದೆ”.
ವೇದಗಳ ಕಾಲದಿಂದ ಇಂದಿನವರೆಗೂ ಜಾತಿ ಪದ್ದತಿ ಬದಲಾವಣೆಗಳಿಗೆ ಒಳಪಟ್ಟಿದೆ. ಅದರ ರಚನೆಯಲ್ಲಿ ಬದಲಾವಣೆಗಳಾಗಿವೆ. ಅದರ ಕಾರ್ಯದಲ್ಲಿ ಪರಿವರ್ತನೆಗಳಾಗಿವೆ. ಅನೇಕ ಮಂದಿ ಸಮಾಜ ಸುಧಾರಕರು ಜಾತಿ ಪದ್ದತಿಯ ಸುಧಾರಣೆ ಮಾಡಲು ಸತತವಾಗಿ ಶ್ರಮಿಸಿದ್ದಾರೆ. ಜಾತಿ ಜಾತಿಗಳ ನಡುರಿನ ಅಸಮಾನತೆಯನ್ನು ಕಿತ್ತು ಹಾಕಲು ಹೋರಾಡಿದ್ದಾರೆ. ವಚನಕಾರರು, ಹರಿದಾಸರು, ಶೂದ್ರರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೂ ಇನ್ನೂ ಅನೇಕ ಕಡೆಗಳಲ್ಲಿ ಅಟ್ಟಹಾಸಗಳಡಿಯಲ್ಲಿ ಶೋಷಿತರು ನರಳಾಡುತ್ತಿದ್ದಾರೆ.
ಈ ದಿಸೆಯಲ್ಲಿ ಹಾಸನದ ಹೆಸರಾಂತ ಲೇಖಕಿಯಾದ ಶ್ರೀಮತಿ ರತ್ನಕಾಳೇಗೌಡರು ತಮ್ಮ ಜೀವ ನಕ್ಷತ್ರಗಳು ಕವನ ಸಂಕಲನದಲ್ಲಿ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಶೋಷಿತರು, ಧೀನರು ಹೊರಡಿಸಲಾಗದಂತಹ ಆಕ್ರಂದನಗಳನ್ನು ತಮ್ಮ ಕವಿತೆಗಳಲ್ಲಿ ಧ್ವನಿಸಿದ್ದಾರೆ.
ಬಸಿದ ಬೆವರಿಗೆ
ನೆಣದ ಒಗ್ಗರಣೆ
ಹಸಿಮಾಂಸ ಜಗ್ಗಿ ಚಪ್ಪರಿಸಿ
ತನ್ನುವ ಮಂದಿ
ಬೆವರನ್ನು ಗಟಗಟನೆ ಕುಡಿದು
ಮರಳುಂಟೆ ಕರುಳುಂಟೆ
ರಕ್ತಸಂಬಂಧದ ಕೊಂಡಿಗೆ (ಸುಂಟರಗಾಳಿಗೆ ಸೆಟೆದು ನಿಂತ)
ಕವಿಯತ್ರಿಯ ಸಾಮಾಜಿಕ ಪ್ರಜ್ಞೆ ಇಲ್ಲಿಯ ಸಾಲುಗಳಲ್ಲಿ ಜೀವ ಪಡೆದುಕೊಂಡಿದೆ. ಜಾತಿ, ಸಿರಿವಂತಿಕೆ ಮಾನವ ಕೃತ ವಿಕಲ್ಪ ಎಂಬುದನ್ನು ಮನದಟ್ಟು ಮಾಡುತ್ತಾರೆ. ಬಂಡಾಯದ ಧ್ವನಿಯ ಮೂಲಕವೇ ಉತ್ತರಿಸುವ, ಚಿಂತಿಸುವ, ಮಂಥಿಸುವ ರತ್ನಕಾಳೇಗೌಡರು ಪ್ರತಿಭಟನೆಯ ಕತ್ತಿಯನ್ನು ತಮ್ಮ ಕಾವ್ಯದಲ್ಲಿ ಜಳಪಿಸಿದ್ದಾರೆ. ತಮ್ಮ ಸುತ್ತಲೂ ಸುತ್ತುವ ಭಾನೆಗಳ ತೆಕ್ಕೆಯಿಂದ ಬಿಡಿಸಿಕೊಂಡು ವೈಚಾರಿಕ ಹಾಗೂ ಸಾಮಾಜಿಕ ಪ್ರಜ್ಞೆಯ ಸಂವೇದನೆಗಳು ಬದುಕಿನ ಕುರಿತ ಸೂಕ್ಷ್ಮ ನೋಟಗಳು. ಸತ್ಯದರ್ಶನಗಳು, ಕಳಚಿ ಬಿದ್ದ ಭಾವಗಳನ್ನು ಎತ್ತುವಲ್ಲಿ ಕವಯತ್ರಿ ಸಫಲರಾಗಿದ್ದಾರೆ.
ಹಗಲುಗಳ್ಳರ ಬೇಟೆಯಾಡುವ ನೆಪದಲ್ಲಿ
ಸಂಬಂಧ ಪಟ್ಟ ಇಲಾಖೆಗಳು ಪರ್ಸೆಂಟೇಜು...
***
ಮೌಢ್ಯ ತುಂಬಿದ ಮತಗಳು
ಹೆಂಡದ ಹೊಳೆಯಲ್ಲಿ ಈಜುತ್ತಿವೆ
ಮತಕ್ಕೆ ಇವರ ಇನ್ನಾರದೋ ಹೆಬ್ಬೆಟ್ಟು
ಓಟು ಒತ್ತಿ ಗೆಲ್ಲಿಸಿದ
ಆಶ್ವಾಸನೆಯ ಅಂಗಡಿಯಿಟ್ಟುಕೊಂಡಿದ್ದ
ರಾಜಕಾರಣಿ ಬಡವವರಿಗೆ ಗಗನ ಕುಸುಮವಾಗಿದ್ದಾನೆ...
(ನಾಳೆಯ ಬೆಳಕು ಕತ್ತಲಾಗಿದೆ)
ಪ್ರಸ್ತುತ ಸಂದರ್ಭದ ದುಸ್ಥಿತಿಗೀಡಾದ ನಾಗರೀಕತೆ, ರಾಜಕೀಯ ಸ್ಥಿತಿ, ಮೌಲ್ಯ ಕಳೆದುಕೊಂಡ ಮತದಾರರ ಬಗ್ಗೆ ಕವಯತ್ರಿ ಆಕ್ರೋಶಗೊಳ್ಳುತ್ತಾರೆ. ತಾವೂ ಒಬ್ಬ ರಾಜಕೀಯ ವ್ಯಕ್ತಿಯಾಗಿ ಪ್ರಸ್ತುತ ಸ್ಥಿತಿಯನ್ನು ನಿಭಾಯಿಸುತ್ತಾರೆ, ಹೆಂಡ, ತುಂಡು, ಹಣಕ್ಕಾಗಿ ಓಟು ಹಾಕಿದ ಖರ್ಚು ಮಾಡಿದ ವ್ಯಕ್ತಿ ಆ ಹಣವನ್ನು ಯಾವ ಮೂಲದಿಂದ ಭರಿಸಿಕೊಳ್ಳುತ್ತಾನೆ? ಅನ್ಯ ಮಾರ್ಗವಿಲ್ಲದೇ ಭ್ರಷ್ಟಾಚಾರದ ಹಾದಿಯನ್ನೇ ತುಳಿಯಬೇಕಾಗುತ್ತದೆ. ಇದಕ್ಕೆ ಮತದಾರನೇ ಅಂದರೆ ಸಮುದಾಯವೇ ಮೂಲ ಅಂಶ ಎಂಬ ನಿಲುವಿಗೆ ಕವಯತ್ರಿ ಬಂದು ನಿಲ್ಲುತ್ತಾರೆ.
ಅರ್ಧ ರಾತ್ರಿಯಲ್ಲಿ ಕಣ್ಣು ಬಿಟ್ಟ
ಸ್ವಾತಂತ್ರ್ಯ ಅರೆ ನಿದ್ರೆಯಲ್ಲಿ ಬಿಕ್ಕುತ್ತಿದೆ
ನರಸತ್ತ ಸರ್ಕಾರ ಧನಿಕರ ಕುಣಿಕೆಗೆ ಸಿಕ್ಕಿ
ವಿಷದ ಜ್ವಾಲೆ ಉಗುಳುತ್ತ ಮೀಸೆ ತಿರುವತ್ತಿದೆ
(ಧ್ವನಿಕರ ಕುಣಿಕೆ)
ನಮಗೆ ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನದಂಚಿಗೆ ಬಂದರೂ ಅದಿನ್ನೂ ಪೂರ್ಣ ಕಣ್ತೆರೆದಿಲ್ಲ! ಪ್ರಜಾಪ್ರಭುತ್ವದ ಸೋಗಿನಲ್ಲಿ ಶುರುವಾದ ರಾಜಕಾರಣ ಉಳ್ಳವರ ಪಾಲಾಗಿ ಬಡವರು, ದೀನ ದಲಿತರು ಇನ್ನೂ ಅದೇ ಸ್ಥಿತಿಯಲ್ಲಿದ್ದರೆ ಬಂಡವಾಳಶಾಹಿಗಳು ಮಾತ್ರ ರಾಜಕೀಯ ವ್ಯಕ್ತಿಗಳಿಗೆ ಬಿಸ್ಕೇಟ್ ಹಾಕಿ ಮೇಯಿಸುತ್ತಾ ತಮ್ಮ ಹಿಡಿತದಲ್ಲಿ ಮೂಗುದಾರ ಹಾಕಿ ಇಟ್ಟುಕೊಂಡಿದ್ದಾರೆ. ಪ್ರಸ್ತುತ ಸಮಾಜವನ್ನು ಆಳುತ್ತಿರುವುದು ರಾಜಕಾರಣಿಗಳು ಎನ್ನುವುದಕ್ಕಿಂತಲೂ ಕೆಲವು ಬಂಡವಾಳಶಾಹಿಗಳೆಂದರೆ ತಪ್ಪಾಗಲಾರದು.
ತಲೆಮಾರುಗಳಿಂದ ಬೆಳೆದು ಬೀಗುತ್ತಿದ್ದ
ಅರಣ್ಯ ಸಂಕುಲವೇ ಹಗಲುಗಳ್ಳರ ಪಾಲಾಗಿದೆ
ಬೆಲೆ ತುಟ್ಟಿಯಾಗಿ ಕಾಳಸಂತೆಯಲಿ
ಕುದುರಿತು ವ್ಯಾಪಾರ ಬೀಟೆ, ತೇಗ, ಗಂಧ
ಶ್ರೀಮಂತರ ಮಹಲುಗಳ ಬಾಗಿಲು, ಕಿಟಕಿ
ಸಿಂಹಾಸನಗಳಾಗಿ ರೂಪಾಂತರಗೊಂಡಿವೆ... (ನಾಳೆಯ ಬೆಳಕು ಕತ್ತಲಾಗಿದೆ)
ಜಗತ್ತಿನಾದ್ಯಾಂತ ಚರ್ಚಿತವಾಗುತ್ತಿರುವ ಭೂಮಿಯ ತಾಪ! ಪರಿಸರ ನಾಶ ಇಂದು ಜೀವ ಸಂಕುಲಕ್ಕೆ ಗಂಡಾಂತರ ತಂದಿದೆ ಎಂದರೆ ಅರಿವಾಗದಿರದು. ರತ್ನಕಾಳೇಗೌಡರು ಅವರ ಕವಿತೆಗಳಲ್ಲಿ ಏನೆಲ್ಲಾ ಚಿಂತಿಸಿದ್ದಾರೆ ಎನ್ನುವುದಕ್ಕಿಂತ ಏನನ್ನು ಬಿಟ್ಟಿದ್ದಾರೆ ಎಂದು ತಡಕಬೇಕಾಗಿದೆ. ಅಂದರೆ ಪ್ರಪಂಚದ ಸಾಧ್ಯವಾದಷ್ಟು ಗೋಚರವಾಗುವ ಎಲ್ಲಾ ಸಮಸ್ಯೆಗಳ ಮಧ್ಯೆ ಅವರ ಮನ ತುಡಿದಿದೆ. ಅವರ ಭಾವ ಚಿಲುಮೆ ಹೊಮ್ಮಿದೆ, ಅವು ಪದಗಳಾಗಿ, ಸಾಲುಗಳಾಗಿ, ಕವಿತೆಗಳಾಗಿ ನಮ್ಮೆದರು ನಿಂತಿವೆ.
‘ಬೇಲಿಯೇ ಎದ್ದು ಹೊಲ ಮೇಯ್ದರೆ’ ಎಂಬ ಗಾದೆಯಂತೆ ಅರಣ್ಯ ಕಾವಲುಗಾರರೇ ಅರಣ್ಯವ ನಾಶ ಮಾಡಿ ಅಲ್ಲಿನ ಬೆಲೆ ಬಾಳುವ ಬೀಟೆ, ತೇಗ, ಗಂಧದಂತಹ ಮರಗಳನ್ನು ಕಡಿದು ತಮ್ಮ ಮನೆಗೆ, ನೆಂಟರಿಷ್ಟರ ಮನೆಗೆ, ಮಹಲುಗಳಿಗೆ ಕಿಟಕಿ, ಬಾಗಿಲು, ಬೆಂಚು, ಮಂಚ, ಸೋಫಾ ಇನ್ನಾವುದಕ್ಕೋ ಬಳಸಿ ಸುಪ್ಪತ್ತಿಗೆಯಲ್ಲಿ ಬೀಗುವ ಮಂದಿ ಹಲವರು. ಹೀಗೆ ದೇಶದ ಸ್ಥತಿಯೂ ಹೌದು. ಇಲ್ಲಿ ಕವಯತ್ರಿಯ ಭಾವಗಳು ಅರಣ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ಅದರೆಲ್ಲೆ ದಾಟಿ ಅದರಿಂದಾಚೆಗೆ ನಾವು ಯೋಚಿಸಿದಾಗ ಪ್ರತಿಯೊಂದು ಕ್ಷೇತ್ರಕ್ಕೆ ನೇಮಿಸಿದಂತಹ ಪ್ರಜಾಪ್ರತಿನಿಧಿ ಅವನ ಕಾಯಕ ಮರೆತು ಸ್ವಚ್ಛಂದದಾಟ, ದುರಾಸೆಯಿಂದ ಹಗಲು ದರೋಡೆ ಮಾಡುತ್ತಿದ್ದಾನೆ. ಆದ್ದರಿಂದಲೇ ಭೂಮಂಡಲ ದುಸ್ಥಿತಿಯ ಹೊಸ್ತಿಲಲ್ಲಿ ಬಂದು ನಿಂತಿದೆ. ಇನ್ನಾದರೂ ನಾಗರಿಕರು ಈ ನಿಟ್ಟಿನಲ್ಲಿ ಆಲೋಚಿಸಬೇಕಿದೆ.
ರತ್ನಕಾಳೇಗೌಡರ ಕಾವ್ಯ ಸಮಾಜ ಮುಖಿ ಯಾಗಿ, ಸುತ್ತಣ ಬದುಕಿನ ವಿಷಮತೆ, ನಗರ ಜೀವನದ ಪರಕೀಯ ಪ್ರಜ್ಞೆ, ಮೌಢ್ಯಗಳು, ಸಾಮಾಜಿಕ ಅನಿಷ್ಠಗಳು, ಭ್ರಷ್ಟಾಚಾರ, ಜಾತೀಯತೆ, ಶೋಷಣೆ, ಸಂಕಷ್ಟ, ಸಂಕೀರ್ಣತೆ, ಜಗದ ನಾಶ, ಉಳ್ಳವರ ದಬ್ಬಾಳಿಕೆ ಇವರ ಕವಿ ಚೇತನವನ್ನು ಗಾಢವಾಗಿ ಮೀಟುತ್ತದೆ.
ಪಾತಾಳ ಗರಡಿ, ಸತ್ಯ ಹೇಳಬೇಡಿ ಎಚ್ಚರಿಕೆ!, ಸುಂಟರಗಾಳಿಗೆ ಸೆಟೆದು ನಿಂತ, ಕಾಷ್ಮೋರನಿಗೆ ಬೇಕು ರಕ್ತ, ನಿಮಗೆ ಗೊತ್ತೇ?, ಮುಂತಾದ ಕವಿತೆಗಳಲ್ಲಿ ಸೃಜನಕ್ರಿಯೆಯನ್ನು ಕುರಿತಾದ, ಜಗದ ಉಳಿವಿನ, ನಾಗರಿಕತೆಯ ಬಗೆಗಿನ ಗಂಭೀರ ಚಿಂತನೆಯಿದೆ. ಕಾವ್ಯಾವತಾರದ ನಿಗೂಢತೆಯನ್ನು ಅನ್ವೇಷಿಸುವ ಪ್ರಯತ್ನವನ್ನು ಕವಯತ್ರಿ ನಿಷ್ಠೆಯಿಂದ ಮಾಡಿದ್ದಾರೆ ಎನ್ನಬಹುದು.
ಇವರ ಸಾಹಿತ್ಯ ಕೃಷಿಯ ತೇರು ನಿರಂತರವಾಗಿ ಸಾಗಲಿ, ಇನ್ನೂ ಅನೇಕ ಕೃತಿ ರೂಪದ ಭಾವುಟಗಳನ್ನು ಇವರ ಸಾಹಿತ್ಯ ರಥ ಹೊಂದಲಿ ಎಂದು ಆಶಿಸುತ್ತೇನೆ.
1956 ರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬಿದಿರೆ ಗ್ರಾಮದ ಗೌಡಯ್ಯ ಹಾಗೂ ಜವರಮ್ಮ ದಂಪತಿಗಳ ಪತ್ರಿಯಾಗಿ ಜನಿಸಿದ ರತ್ನಕಾಳೇಗೌಡರು ರತ್ನ ದೀಪ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ದೇಶಾದ್ಯಾಂತ ಹಲವಾರು ಸಭೆ, ಸಮ್ಮೇಳನ, ಕಮ್ಮಟಗಳಲ್ಲಿ ಭಾಗವಹಿಸಿ ಅನುಭವಗಳಿಸಿಕೊಂಡ ಇವರು ಹಲವಾರು ಕಮ್ಮಟಗಳಿಗೆ ಸ್ವತಃ ನಿರ್ದೇಶಕರಾಗಿ ದುಡಿದಿದ್ದಾರೆ.
ದೂರದರ್ಶನ ಚಂದನ ಬೆಳಗು ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದ್ದು, ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜೊತೆಗೆ ಕನ್ನಡ ಪರ ನೆಲ.ಜಲ ನಾಡು-ನುಡಿಯ ಹೋರಾಟಗಳಲ್ಲಿ ನಿರಂತರವಾಗಿ ದುಡಿಯುತ್ತಾ ಬಂದಿದ್ದಾರೆ.
ಸಾಹಿತ್ಯ, ರಾಜಕೀಯ, ಸಂಘಟನೆ ಮೊದಲಾದ ಎಲ್ಲಾ ಮಾಧ್ಯಮಗಳಲ್ಲಿ ಪರಿಣಿತಿ ಪಡೆದಿರುವ ಎ.ಜಿ ರತ್ನಕಾಳೇಗೌಡ ಮೊದಲ ಆಸಕ್ತಿ ಕಥೆ, ನಂತರ ಕಾದಂಬರಿ, ಕಾವ್ಯ ರಚನೆ ಇವರ ಕಥೆಗಳನ್ನು ಓದುತ್ತಾ ಹೋದರೆ, ವಾಸ್ತವದ ನೆಲೆಗಟ್ಟಿನಲ್ಲಿ ವೈಚಾರಿಕತೆಯ ಮೂಸೆಯಲ್ಲಿ ಮಿಂದೇಳುವುದು ಖಂಡಿತ. ಇವರು ಮುಖ್ಯವಾಗಿ ಹೊಲ, ಹರಕೆ, ಪ್ರಾಣಬಿಂದು, ಭರವಸೆಗಳ ನಡುವೆ, ಒಂದು ಪೆಗ್, ಯಾತ್ರೆ, ಮಳೆ ಬರುವ ಹಾಗಿದೆ ಕಥಾ ಸಂಕಲನಗಳಾಗಿವೆ. ಎಂಟು ಕಾದಂಬರಿಗಳು ಇತರೆ ಹತ್ತು ಕೃತಿಗಳು ಹಾಗೂ ಎಂಟು ಕವನ ಸಂಕಲನಗಳನ್ನು ಒಳಗೊಂಡಂತೆ ಸುಮಾರು ನಲವತ್ತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಇವರ ಸಾಹಿತ್ಯ ಪ್ರಕಾರಗಳಲ್ಲಿ ನನಗೆ ಇಷ್ಟವಾದದ್ದು ಹಾಗೂ ಮನ ಕಲಕಿದ್ದು, ನನ್ನನ್ನು ಭಾವುಕನನ್ನಾಗಿ ಮಾಡಿದ್ದು ಇವರ ಕಾವ್ಯ. ಆದ್ದರಿಂದಲೇ ನಾನಿಲ್ಲಿ ಇವರ ಕಾವ್ಯದ ಬಗ್ಗೆ ಮಾತ್ರ ಚರ್ಚಿಸಲು ಇಚ್ಛೆ ಪಡುತ್ತೇನೆ.
ಕವಿ ಅಡಿಗರು ಮಾತಿನೊಳಗೆಯೋ ಮೌನ ಇಲ್ಲದೆ ಹೋದರೆ ಅದರಾಚೆಗೂ ಇದು ಇರುವುದಿಲ್ಲ ಎಂದಿದ್ದಾರೆ. ಕಾವ್ಯದಲ್ಲಿ ಮಾತು ಮೌನದ ಮೂಲಕ, ಮೌನ ಮಾತಿನ ಮೂಲಕ ಪ್ರತೀತಿಗೆ ಬರುತ್ತಿರುತ್ತದೆ. ಪು.ತಿ.ನ ಅವರ ಅನೇಕ ಕವನಗಳಲ್ಲಿ ಮಾತಿನ ಮೂಲಕವೇ ಮೌನ, ಶಾಂತತೆ, ಚಿನ್ಮಾನ ಭಾವಗಮ್ಯವಾಗಿ ಅನುಭವವಾಗುತ್ತದೆ.
ಇವರ ಕಾವ್ಯ ನಿಧಿ ಕವನ ಸಂಕಲನ 19ನೇ ಶತಮಾನದ ಅಂತ್ಯ ಹಾಗೂ 20ನೇ ಶತಮಾನದ ಉದಯಗಳ ನಡುವಿನ ಪರ್ವಕಾಲವೆಂದೇ ಹೇಳಬಹುದು.
ನನ್ನೂರ ಆಲದ ಮರಗಳು

ಒಂದೊಂದೇ ಮರ ಸೌದೆಯಾದವು (ನನ್ನೂರು)
ಇಲ್ಲಿ ಕವಯತ್ರಿಯ ಗತದ ಬದುಕಿನ, ಪೂರ್ವಜರ ಕರುವಿನ ಬಗೆಗಿನ ಜಾಗ್ರತೆ, ಕಾಳಜಿ ಈಗಿನವರಿಗಿಲ್ಲದಿರುವುದನ್ನು ಈ ಸಾಲುಗಳು ಸ್ತುತಿಸುತ್ತವೆ.
ಹೊಸ ಶತಮಾನದ ಸುಂದರ ಕನಸು
ಮೈ ಪುಳಕಗೊಳಿಸುತ್ತಿದೆ ಅವನಾನದ
ಅಂಚಿನಿಂದ ಪಾರಾಗಿ ಹೊಸಯುಗದ ಮಡಿಲಲಿ
ಜೋಗುಳ ಕೇಳಲು ಬರಲಿ ಹೊಸಗಾಳಿ ಬೆಳಕು...
(ಬರುವ ಶತಮಾನಕ್ಕೆ ಸ್ವಾಗತ)
ನಜಾನಾಯಿ ಶಬ್ದಂ ನಜಾನಾಯಿ ಚಾರ್ಥಂ
ನಜಾನಾಮಿ ಪದ್ಯಂ ನಜಾನಾಮಿ ಗದ್ಯಾಂ
ಚಿದೇತಾ ಷಡಖ್ಯಾ ಹೃದಿದ್ಯೋತತೇಮೋ
ಮುಪಾನ್ನಿಸ್ಸರಂತೆ ಗಿರಾಶ್ವಾಪಿ ಚಿತ್ರಮ್
ನಾನು ಶಬ್ದ ಅರ್ಥ ಪದ್ಯ, ಗದ್ಯಗಳನ್ನು ತಿಳಿದಿಲ್ಲ. ಆದರೆ ನನ್ನ ಅಂತರಂಗದಿಂದ ಅದ್ವಿತೀಯವಾದ ಆರು ಮುಖಗಳ ಜೀವನದ ಜ್ಞಾನ ಜ್ಯೋತಿಯು ಬೆಳಗುತ್ತಿದೆ. ಆ ಪ್ರತಿಭೆಯಿಂದ ನನ್ನ ಮುಖದಿಂದ ಈ ವಾಕ್ಯಗಳು ನುಡಿಯುತ್ತಿವೆ, ಎಂಬ ಸೂಕ್ತಿಯು ಸುಬ್ರಹ್ಮಣ್ಯ ಭುಜಂಗ ಸ್ತೋತ್ರದಿಂದ ಹೇಳಲ್ಪಟ್ಟಿದೆ.
ಪ್ರಸ್ತುತ ಕಾವ್ಯ ಸಂದರ್ಭದಲ್ಲಿ ನಿಂತುಕೊಂಡಿರುವ ಕವಿಯ ರವನೆಗೆ ನೂರಾರು ಮಿತಿಗಳು, ಇತಿಗಳು, ಸಂಕಷ್ಟಗಳು ಕಾಣಿಸಬಹುದು. ಕವಿ ಬರೆದಾಗಲೆಲ್ಲಾ ಎಲ್ಲೋ ಗುಹಾಧ್ವನಿಯಂತೆ ಅನಿಸಿ ಒಮ್ಮೊಮ್ಮೆ ಕೀಳರಿಮೆ ಕಾಡಬಹುದು. ನಿಜವಾಗಿರಲೂ ಹೊಸದನ್ನು ತಡಕಿ ಹುಡುಕುವ, ವಿಶಿಷ್ಟವಾದುದನ್ನು ಬಗೆದು ತೆಗೆಯುವುದು ಪ್ರಯಾಸದ ಮಾತೇ ಸರಿ!
ಈ ಹಿನ್ನಲೆಯಲ್ಲಿ ಎ.ಜಿ.ಕಾಳೇಗೌಡರ ಅನೇಕ ಕವನಗಳಲ್ಲಿ ಸಾಮಾಜಿಕ ಸ್ಥಿತಿಯನ್ನು, ದುರಾಡಳಿತವನ್ನು, ಶೋಷಣೆಯನ್ನು ಜಾತಿಯ ವ್ಯವಸ್ಥೆಯ ಧಿಕ್ಕರಿಸುವ ಮಿಂಚು, ಕಿಡಿ, ಉದ್ವೇಗ, ಆವೇಶ ಹೊಮ್ಮಿ ಬಂದಿದೆ. ಆದ್ದರಿಂದಲೇ ನಾಣು ಇವರನ್ನು ಬಂಡಾಯ ಹಾಗೂ ವೈಚಾರಿಕ ಸಾಹಿತ್ಯ ವಲಯಕ್ಕೆ ಸೇರಿಸಬಯುಸುತ್ತೇನೆ. ಏಕೆಂದರೆ ಪ್ರಸ್ತುತ ಸಂದರ್ಭಗಳಲ್ಲಿ ಈ ರೀತಿಯ ಕಚ್ಚೆದೆಯ ಬರಹಗಳು ವಿರಳ. ಇವು ಅನಗತ್ಯವಾಗಿ ಹೆಚ್ಚಲೆಬೇಕಾಗಿದೆ. ಸಾಮಜಿಕ ಕೊಳೆಯನ್ನು ಶುಭ್ರಗೊಳಿಸುವ ನಿಟ್ಟಿನಲ್ಲಿ ನೇರ ಹಾಗೂ ದಿಟ್ಟ ಸಾಹಿತ್ಯವೆಂದರೆ ಬಂಡಾಯ ಹಾಗೂ ವೈಚಾರಿಕ ಸಾಹಿತ್ಯ.
ಇಂತಹ ನೂರಾರು ವಿಚಾರಗಳು ರತ್ನಕಾಳೆಗೌಡರ ಕವನಗಳು ಸುಔಗತೆಯಿಂದ ಎದ್ದು ಕಾಣುತ್ತವೆ.
ಕವಿ ಅಡಿಗರ ‘ಒಂದು ಹದ್ದಿನ ರೆಕ್ಕೆಯೊಳಗೆ ನೂರಾರಕ್ಕೆ ಹದ್ದು’ ಎಂಬಲ್ಲಿ ಕಾಣುವ ಧೀಮಂತ, ಅನಾಯಾಸ, ಧ್ವನಿಪೂರ್ಣ ಶ್ಲೇಷ ನನಗೆ ಇವರ ಅನೇಕ ಕವನಗಳಲ್ಲಿ ಕಂಡಿತು. ಹೋಲಿಕೆ ತಪ್ಪಿರಬಹುದು ಆದರೆ ಮೌಲಿಕತೆಯ ನಿರ್ಣಯ ನವಿರಾದ ತೌಲನಿಕ ನೆಲೆಯಿಂದಲೇ ಚಿಮ್ಮುತ್ತದೆ.
ಒಂದು ಸಂದರ್ಶನದಲ್ಲಿ ಬೇಂದ್ರೆ ಹೀಗೆ ಹೇಳಿದ್ದಾರೆ. ನನ್ನ ಒಳಗಿನ ವ್ಯಕ್ತಿ ಎಚ್ಚರಗೊಂಡಾಗಲೇ ಕಾವ್ಯ ಒಡಮೂಡಿ ಬರುತ್ತದೆ. ನನ್ನದು ಅವಶ್ಯವಾಗಿ ಹೃದಯದ ಪ್ರತಿಕ್ರಿಯೆ. ನನ್ನ ಭಾವಗಳು ಒಳಗೊಳಗೆ ಮಿಥಿಸುತ್ತಿರುವಂತೆ ಕಾಣುತ್ತದೆ. ಅನಂತರ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಗರ್ಭದಂತೆ ಇನ್ನು ಒಳಗೆ ಉಳಿಯಲಾಗದ ಹೊರಹೊಮ್ಮುತ್ತದೆ. ಇದೇ ರೀತಿ ನಿತ್ಯ ನಡೆಯುವ ಅನೇಕ ಶೋಷಣೆ, ಭ್ರಷ್ಟಾಚಾರ, ಮೂಢನಂಬಿಕೆ ಹಗಲು ದರೋಡೆ ಇವೆಲ್ಲವುಗಳದರ ವಿರುದ್ದ ಬೆಂಕಿಯ ಜ್ವಾಲೆಯಂತೆ ರತ್ನ ಕಾಳೇಗೌಡರ ಕವನಗಳು ಹೊರಹೊಮ್ಮಿವೆ. ಇವರ ಕಾವ್ಯಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಕಾಣಬಹುದು. ಏಕೆಂದರೆ ಕಾವ್ಯವು ಕವಿಯದೇ ಆದ ವಿಶಿಷ್ಟವಾದ ಅನುಭವಗಳ ಅತ್ಯಂತ ವೈಯಕ್ತಿಕವಾದ ಭೀನ್ನಭಾವದ ಅಭಿವ್ಯಕ್ತಿ. ಸಾಮಾಜಿಕ ಪ್ರಜ್ಞೆಯು ಈ ಭಾಷಾ ಶರೀರದ ಪರಿಪೂರ್ಣತೆಗಳಾಗುವ ಅನುಭವ ವಿಶಿಷ್ಟತೆಗಾಗಲೀ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು; ಅಲ್ಲದೇ ರತ್ನಕಾಳೇಗೌಡರು ಕಾವ್ಯ ರಚೆನೆಗೆ ಆರಂಭಿಸಿದ್ದು ಬಂಡಾಯದ ಕಾಲವಾಗಿತ್ತು. ಆ ಸಂದರ್ಭದಲ್ಲಿ ಭ್ರಷ್ಟಾಚಾರ, ಜಾತಿವ್ಯವಸ್ಥೆ, ದುರಾಡಳಿತ, ಸಾಮಾಜಿಕ ಅನಿಷ್ಟಗಳು, ವರದಕ್ಷಿಣೆ, ಬಾಲ್ಯವಿವಾಹ ಹೀಗೆ ಹತ್ತಾರು ಸಾಮಾಜಿಕ ಕಾದಂಬರಿಗಳನ್ನು ಸ್ವ ಅನುಭವಿಸಿ ಬರೆದವರು, ವಿಚಾರವಂತಿಕೆಯ ಉತ್ತುಂಗಕ್ಕೇರಿ ಅನುಭವದ ನೆಲೆಗಟ್ಟಿನಲ್ಲಿ ಲೇಖನಿ ಬಳಸಿದವರೆಂದರೆ ತಪ್ಪಾಗಬಾರದು.
ಹೊಸಗನ್ನಡ ಕಾವ್ಯದ ಮೂಲವನ್ನು ರತ್ನಕಾಳೇಗೌಡು ಕರ್ನಾಟಕದ ಗರತಿಯ ಹಾಡುಗಳಲ್ಲಿ, ಲಾವಣಿಗಳಲ್ಲಿ, ಹನ್ನೇರಡನೇ ಶತಮಾನದ ಶಿವಶರಣರ ವಚನಗಳಲ್ಲಿ ಹರಿದಾಸರ ಕೀರ್ತನೆಗಳಲ್ಲಿ ಕಂಡುಕೊಂಡು ಬಹುಶಃ ಅವರ ಯುಗ ಪ್ರವರ್ತಕ ಪ್ರತಿಭೆಯನ್ನು ಮತ್ತು ನೂತನ ಕಾವ್ಯದ ಮೂಲವನ್ನು ಹುಡುಕಿ ಪಡದಿದ್ದಾರೆ ಎನ್ನಬಹುದು. ಅಲ್ಲದೇ ದಾಸ್ಯರ ನೋವು, ಸ್ವಾತಂತ್ರ್ಯದ ಕನಸು , ಬಡತನದ, ದುರ್ದೈವದ, ಹಸಿವೆಯ, ಅಜ್ಞಾನದ ಶತಮಾನದ ಕೊರಗು, ಕ್ರಾಂತಿಯ ಮುನ್ನೋಟದ ರುದ್ರ ತಾಂಡರ, ಆತ್ಮ ಚಿಂತನ, ಮಾನವ ಧರ್ಮದ ಪುನರುತ್ಥಾನ, ಪ್ರೀತಿ, ಪ್ರಕ್ರಿಯೆ, ವಿರಹ, ವಿಷಾದ, ದಾಂಪತ್ಯ, ಹೆಣ್ಣು-ಗಂಡಿನ ಸಮಸ್ಯೆ, ಕನ್ನಡತೇರು ಮುನ್ನಡೆಸಲು ಆಸೆ. ಉತ್ಸಾಹ, ಕನಸು, ರಾಷ್ಟ್ರಧರ್ಮದ ಭೂತ ಭವಿಷ್ಯ, ವರ್ತಮಾನಗಳ ಸಾಮೀಕರಣದ ಅನ್ವಯದ ಸಾಹಸ, ಮಹಾತೀತ ಅದೃಶ್ಯ ಲೋಕಕ್ಕೆ ದಾಳಿ, ಕನಸುಗಳ ಮಿಂಚುಗಳ ಅನುಸರಣ, ಲೀಲೆ ಹೀಗೆ ರತ್ನಕಾಳೇಗೌಡರಲ್ಲಿ ನುಡಿಯದ ಮಿಡಿಯದ ಭಾವವಿಲ್ಲ. ರೂಪುಗೊಳ್ಳದ ಆಕಾಂಕ್ಷೆಗಳಲ್ಲಿ, ಕಾದುಕೊಳ್ಳುವ ನೋವಿಲ್ಲ, ನಲಿವಿಲ್ಲ, ಎಷ್ಷಡತ್ತ ಕನ್ನಡದ ಆರು ಕೋಟಿ ಚಿತ್ತ ತರಂಗಗಳ ಕ್ಷೀರ ಸಾಗರದಂತೆ ರತ್ನಕಾಳೇಗೌಡರ ಕಾವ್ಯ ಭೋರ್ಗರೆಯುತ್ತಿದೆ”.
ವೇದಗಳ ಕಾಲದಿಂದ ಇಂದಿನವರೆಗೂ ಜಾತಿ ಪದ್ದತಿ ಬದಲಾವಣೆಗಳಿಗೆ ಒಳಪಟ್ಟಿದೆ. ಅದರ ರಚನೆಯಲ್ಲಿ ಬದಲಾವಣೆಗಳಾಗಿವೆ. ಅದರ ಕಾರ್ಯದಲ್ಲಿ ಪರಿವರ್ತನೆಗಳಾಗಿವೆ. ಅನೇಕ ಮಂದಿ ಸಮಾಜ ಸುಧಾರಕರು ಜಾತಿ ಪದ್ದತಿಯ ಸುಧಾರಣೆ ಮಾಡಲು ಸತತವಾಗಿ ಶ್ರಮಿಸಿದ್ದಾರೆ. ಜಾತಿ ಜಾತಿಗಳ ನಡುರಿನ ಅಸಮಾನತೆಯನ್ನು ಕಿತ್ತು ಹಾಕಲು ಹೋರಾಡಿದ್ದಾರೆ. ವಚನಕಾರರು, ಹರಿದಾಸರು, ಶೂದ್ರರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೂ ಇನ್ನೂ ಅನೇಕ ಕಡೆಗಳಲ್ಲಿ ಅಟ್ಟಹಾಸಗಳಡಿಯಲ್ಲಿ ಶೋಷಿತರು ನರಳಾಡುತ್ತಿದ್ದಾರೆ.
ಈ ದಿಸೆಯಲ್ಲಿ ಹಾಸನದ ಹೆಸರಾಂತ ಲೇಖಕಿಯಾದ ಶ್ರೀಮತಿ ರತ್ನಕಾಳೇಗೌಡರು ತಮ್ಮ ಜೀವ ನಕ್ಷತ್ರಗಳು ಕವನ ಸಂಕಲನದಲ್ಲಿ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಶೋಷಿತರು, ಧೀನರು ಹೊರಡಿಸಲಾಗದಂತಹ ಆಕ್ರಂದನಗಳನ್ನು ತಮ್ಮ ಕವಿತೆಗಳಲ್ಲಿ ಧ್ವನಿಸಿದ್ದಾರೆ.
ಬಸಿದ ಬೆವರಿಗೆ
ನೆಣದ ಒಗ್ಗರಣೆ
ಹಸಿಮಾಂಸ ಜಗ್ಗಿ ಚಪ್ಪರಿಸಿ
ತನ್ನುವ ಮಂದಿ
ಬೆವರನ್ನು ಗಟಗಟನೆ ಕುಡಿದು
ಮರಳುಂಟೆ ಕರುಳುಂಟೆ
ರಕ್ತಸಂಬಂಧದ ಕೊಂಡಿಗೆ (ಸುಂಟರಗಾಳಿಗೆ ಸೆಟೆದು ನಿಂತ)
ಕವಿಯತ್ರಿಯ ಸಾಮಾಜಿಕ ಪ್ರಜ್ಞೆ ಇಲ್ಲಿಯ ಸಾಲುಗಳಲ್ಲಿ ಜೀವ ಪಡೆದುಕೊಂಡಿದೆ. ಜಾತಿ, ಸಿರಿವಂತಿಕೆ ಮಾನವ ಕೃತ ವಿಕಲ್ಪ ಎಂಬುದನ್ನು ಮನದಟ್ಟು ಮಾಡುತ್ತಾರೆ. ಬಂಡಾಯದ ಧ್ವನಿಯ ಮೂಲಕವೇ ಉತ್ತರಿಸುವ, ಚಿಂತಿಸುವ, ಮಂಥಿಸುವ ರತ್ನಕಾಳೇಗೌಡರು ಪ್ರತಿಭಟನೆಯ ಕತ್ತಿಯನ್ನು ತಮ್ಮ ಕಾವ್ಯದಲ್ಲಿ ಜಳಪಿಸಿದ್ದಾರೆ. ತಮ್ಮ ಸುತ್ತಲೂ ಸುತ್ತುವ ಭಾನೆಗಳ ತೆಕ್ಕೆಯಿಂದ ಬಿಡಿಸಿಕೊಂಡು ವೈಚಾರಿಕ ಹಾಗೂ ಸಾಮಾಜಿಕ ಪ್ರಜ್ಞೆಯ ಸಂವೇದನೆಗಳು ಬದುಕಿನ ಕುರಿತ ಸೂಕ್ಷ್ಮ ನೋಟಗಳು. ಸತ್ಯದರ್ಶನಗಳು, ಕಳಚಿ ಬಿದ್ದ ಭಾವಗಳನ್ನು ಎತ್ತುವಲ್ಲಿ ಕವಯತ್ರಿ ಸಫಲರಾಗಿದ್ದಾರೆ.
ಹಗಲುಗಳ್ಳರ ಬೇಟೆಯಾಡುವ ನೆಪದಲ್ಲಿ
ಸಂಬಂಧ ಪಟ್ಟ ಇಲಾಖೆಗಳು ಪರ್ಸೆಂಟೇಜು...
***
ಮೌಢ್ಯ ತುಂಬಿದ ಮತಗಳು
ಹೆಂಡದ ಹೊಳೆಯಲ್ಲಿ ಈಜುತ್ತಿವೆ
ಮತಕ್ಕೆ ಇವರ ಇನ್ನಾರದೋ ಹೆಬ್ಬೆಟ್ಟು
ಓಟು ಒತ್ತಿ ಗೆಲ್ಲಿಸಿದ
ಆಶ್ವಾಸನೆಯ ಅಂಗಡಿಯಿಟ್ಟುಕೊಂಡಿದ್ದ
ರಾಜಕಾರಣಿ ಬಡವವರಿಗೆ ಗಗನ ಕುಸುಮವಾಗಿದ್ದಾನೆ...
(ನಾಳೆಯ ಬೆಳಕು ಕತ್ತಲಾಗಿದೆ)
ಪ್ರಸ್ತುತ ಸಂದರ್ಭದ ದುಸ್ಥಿತಿಗೀಡಾದ ನಾಗರೀಕತೆ, ರಾಜಕೀಯ ಸ್ಥಿತಿ, ಮೌಲ್ಯ ಕಳೆದುಕೊಂಡ ಮತದಾರರ ಬಗ್ಗೆ ಕವಯತ್ರಿ ಆಕ್ರೋಶಗೊಳ್ಳುತ್ತಾರೆ. ತಾವೂ ಒಬ್ಬ ರಾಜಕೀಯ ವ್ಯಕ್ತಿಯಾಗಿ ಪ್ರಸ್ತುತ ಸ್ಥಿತಿಯನ್ನು ನಿಭಾಯಿಸುತ್ತಾರೆ, ಹೆಂಡ, ತುಂಡು, ಹಣಕ್ಕಾಗಿ ಓಟು ಹಾಕಿದ ಖರ್ಚು ಮಾಡಿದ ವ್ಯಕ್ತಿ ಆ ಹಣವನ್ನು ಯಾವ ಮೂಲದಿಂದ ಭರಿಸಿಕೊಳ್ಳುತ್ತಾನೆ? ಅನ್ಯ ಮಾರ್ಗವಿಲ್ಲದೇ ಭ್ರಷ್ಟಾಚಾರದ ಹಾದಿಯನ್ನೇ ತುಳಿಯಬೇಕಾಗುತ್ತದೆ. ಇದಕ್ಕೆ ಮತದಾರನೇ ಅಂದರೆ ಸಮುದಾಯವೇ ಮೂಲ ಅಂಶ ಎಂಬ ನಿಲುವಿಗೆ ಕವಯತ್ರಿ ಬಂದು ನಿಲ್ಲುತ್ತಾರೆ.
ಅರ್ಧ ರಾತ್ರಿಯಲ್ಲಿ ಕಣ್ಣು ಬಿಟ್ಟ
ಸ್ವಾತಂತ್ರ್ಯ ಅರೆ ನಿದ್ರೆಯಲ್ಲಿ ಬಿಕ್ಕುತ್ತಿದೆ
ನರಸತ್ತ ಸರ್ಕಾರ ಧನಿಕರ ಕುಣಿಕೆಗೆ ಸಿಕ್ಕಿ
ವಿಷದ ಜ್ವಾಲೆ ಉಗುಳುತ್ತ ಮೀಸೆ ತಿರುವತ್ತಿದೆ
(ಧ್ವನಿಕರ ಕುಣಿಕೆ)
ನಮಗೆ ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನದಂಚಿಗೆ ಬಂದರೂ ಅದಿನ್ನೂ ಪೂರ್ಣ ಕಣ್ತೆರೆದಿಲ್ಲ! ಪ್ರಜಾಪ್ರಭುತ್ವದ ಸೋಗಿನಲ್ಲಿ ಶುರುವಾದ ರಾಜಕಾರಣ ಉಳ್ಳವರ ಪಾಲಾಗಿ ಬಡವರು, ದೀನ ದಲಿತರು ಇನ್ನೂ ಅದೇ ಸ್ಥಿತಿಯಲ್ಲಿದ್ದರೆ ಬಂಡವಾಳಶಾಹಿಗಳು ಮಾತ್ರ ರಾಜಕೀಯ ವ್ಯಕ್ತಿಗಳಿಗೆ ಬಿಸ್ಕೇಟ್ ಹಾಕಿ ಮೇಯಿಸುತ್ತಾ ತಮ್ಮ ಹಿಡಿತದಲ್ಲಿ ಮೂಗುದಾರ ಹಾಕಿ ಇಟ್ಟುಕೊಂಡಿದ್ದಾರೆ. ಪ್ರಸ್ತುತ ಸಮಾಜವನ್ನು ಆಳುತ್ತಿರುವುದು ರಾಜಕಾರಣಿಗಳು ಎನ್ನುವುದಕ್ಕಿಂತಲೂ ಕೆಲವು ಬಂಡವಾಳಶಾಹಿಗಳೆಂದರೆ ತಪ್ಪಾಗಲಾರದು.
ತಲೆಮಾರುಗಳಿಂದ ಬೆಳೆದು ಬೀಗುತ್ತಿದ್ದ
ಅರಣ್ಯ ಸಂಕುಲವೇ ಹಗಲುಗಳ್ಳರ ಪಾಲಾಗಿದೆ
ಬೆಲೆ ತುಟ್ಟಿಯಾಗಿ ಕಾಳಸಂತೆಯಲಿ
ಕುದುರಿತು ವ್ಯಾಪಾರ ಬೀಟೆ, ತೇಗ, ಗಂಧ
ಶ್ರೀಮಂತರ ಮಹಲುಗಳ ಬಾಗಿಲು, ಕಿಟಕಿ
ಸಿಂಹಾಸನಗಳಾಗಿ ರೂಪಾಂತರಗೊಂಡಿವೆ... (ನಾಳೆಯ ಬೆಳಕು ಕತ್ತಲಾಗಿದೆ)
ಜಗತ್ತಿನಾದ್ಯಾಂತ ಚರ್ಚಿತವಾಗುತ್ತಿರುವ ಭೂಮಿಯ ತಾಪ! ಪರಿಸರ ನಾಶ ಇಂದು ಜೀವ ಸಂಕುಲಕ್ಕೆ ಗಂಡಾಂತರ ತಂದಿದೆ ಎಂದರೆ ಅರಿವಾಗದಿರದು. ರತ್ನಕಾಳೇಗೌಡರು ಅವರ ಕವಿತೆಗಳಲ್ಲಿ ಏನೆಲ್ಲಾ ಚಿಂತಿಸಿದ್ದಾರೆ ಎನ್ನುವುದಕ್ಕಿಂತ ಏನನ್ನು ಬಿಟ್ಟಿದ್ದಾರೆ ಎಂದು ತಡಕಬೇಕಾಗಿದೆ. ಅಂದರೆ ಪ್ರಪಂಚದ ಸಾಧ್ಯವಾದಷ್ಟು ಗೋಚರವಾಗುವ ಎಲ್ಲಾ ಸಮಸ್ಯೆಗಳ ಮಧ್ಯೆ ಅವರ ಮನ ತುಡಿದಿದೆ. ಅವರ ಭಾವ ಚಿಲುಮೆ ಹೊಮ್ಮಿದೆ, ಅವು ಪದಗಳಾಗಿ, ಸಾಲುಗಳಾಗಿ, ಕವಿತೆಗಳಾಗಿ ನಮ್ಮೆದರು ನಿಂತಿವೆ.
‘ಬೇಲಿಯೇ ಎದ್ದು ಹೊಲ ಮೇಯ್ದರೆ’ ಎಂಬ ಗಾದೆಯಂತೆ ಅರಣ್ಯ ಕಾವಲುಗಾರರೇ ಅರಣ್ಯವ ನಾಶ ಮಾಡಿ ಅಲ್ಲಿನ ಬೆಲೆ ಬಾಳುವ ಬೀಟೆ, ತೇಗ, ಗಂಧದಂತಹ ಮರಗಳನ್ನು ಕಡಿದು ತಮ್ಮ ಮನೆಗೆ, ನೆಂಟರಿಷ್ಟರ ಮನೆಗೆ, ಮಹಲುಗಳಿಗೆ ಕಿಟಕಿ, ಬಾಗಿಲು, ಬೆಂಚು, ಮಂಚ, ಸೋಫಾ ಇನ್ನಾವುದಕ್ಕೋ ಬಳಸಿ ಸುಪ್ಪತ್ತಿಗೆಯಲ್ಲಿ ಬೀಗುವ ಮಂದಿ ಹಲವರು. ಹೀಗೆ ದೇಶದ ಸ್ಥತಿಯೂ ಹೌದು. ಇಲ್ಲಿ ಕವಯತ್ರಿಯ ಭಾವಗಳು ಅರಣ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ಅದರೆಲ್ಲೆ ದಾಟಿ ಅದರಿಂದಾಚೆಗೆ ನಾವು ಯೋಚಿಸಿದಾಗ ಪ್ರತಿಯೊಂದು ಕ್ಷೇತ್ರಕ್ಕೆ ನೇಮಿಸಿದಂತಹ ಪ್ರಜಾಪ್ರತಿನಿಧಿ ಅವನ ಕಾಯಕ ಮರೆತು ಸ್ವಚ್ಛಂದದಾಟ, ದುರಾಸೆಯಿಂದ ಹಗಲು ದರೋಡೆ ಮಾಡುತ್ತಿದ್ದಾನೆ. ಆದ್ದರಿಂದಲೇ ಭೂಮಂಡಲ ದುಸ್ಥಿತಿಯ ಹೊಸ್ತಿಲಲ್ಲಿ ಬಂದು ನಿಂತಿದೆ. ಇನ್ನಾದರೂ ನಾಗರಿಕರು ಈ ನಿಟ್ಟಿನಲ್ಲಿ ಆಲೋಚಿಸಬೇಕಿದೆ.
ರತ್ನಕಾಳೇಗೌಡರ ಕಾವ್ಯ ಸಮಾಜ ಮುಖಿ ಯಾಗಿ, ಸುತ್ತಣ ಬದುಕಿನ ವಿಷಮತೆ, ನಗರ ಜೀವನದ ಪರಕೀಯ ಪ್ರಜ್ಞೆ, ಮೌಢ್ಯಗಳು, ಸಾಮಾಜಿಕ ಅನಿಷ್ಠಗಳು, ಭ್ರಷ್ಟಾಚಾರ, ಜಾತೀಯತೆ, ಶೋಷಣೆ, ಸಂಕಷ್ಟ, ಸಂಕೀರ್ಣತೆ, ಜಗದ ನಾಶ, ಉಳ್ಳವರ ದಬ್ಬಾಳಿಕೆ ಇವರ ಕವಿ ಚೇತನವನ್ನು ಗಾಢವಾಗಿ ಮೀಟುತ್ತದೆ.
ಪಾತಾಳ ಗರಡಿ, ಸತ್ಯ ಹೇಳಬೇಡಿ ಎಚ್ಚರಿಕೆ!, ಸುಂಟರಗಾಳಿಗೆ ಸೆಟೆದು ನಿಂತ, ಕಾಷ್ಮೋರನಿಗೆ ಬೇಕು ರಕ್ತ, ನಿಮಗೆ ಗೊತ್ತೇ?, ಮುಂತಾದ ಕವಿತೆಗಳಲ್ಲಿ ಸೃಜನಕ್ರಿಯೆಯನ್ನು ಕುರಿತಾದ, ಜಗದ ಉಳಿವಿನ, ನಾಗರಿಕತೆಯ ಬಗೆಗಿನ ಗಂಭೀರ ಚಿಂತನೆಯಿದೆ. ಕಾವ್ಯಾವತಾರದ ನಿಗೂಢತೆಯನ್ನು ಅನ್ವೇಷಿಸುವ ಪ್ರಯತ್ನವನ್ನು ಕವಯತ್ರಿ ನಿಷ್ಠೆಯಿಂದ ಮಾಡಿದ್ದಾರೆ ಎನ್ನಬಹುದು.
ಇವರ ಸಾಹಿತ್ಯ ಕೃಷಿಯ ತೇರು ನಿರಂತರವಾಗಿ ಸಾಗಲಿ, ಇನ್ನೂ ಅನೇಕ ಕೃತಿ ರೂಪದ ಭಾವುಟಗಳನ್ನು ಇವರ ಸಾಹಿತ್ಯ ರಥ ಹೊಂದಲಿ ಎಂದು ಆಶಿಸುತ್ತೇನೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ಮೊ-9483470794